ಮಂಗಳವಾರ, ಜನವರಿ 31, 2017

ಧಾರ್ಮಿಕ ಸತ್ಯ

👍🏼 *100 Advices*
----
ವಿಶ್ವಾದ್ಯಂತ ವಾರ್ತಾ ಮಾದ್ಯಮಗಳು ಇಸ್ಲಾಂ ಮತ್ತು ಕುರಾನ್ ಬಗ್ಗೆ ಬೇಕಾದಷ್ಟು ಇಲ್ಲ ಸಲ್ಲದ ಅಪಪ್ರಚಾರ ನಡೆಸುತ್ತಿರುವುದು ಕಾಣುತ್ತಿರುವಾಗ ಅದರ ನೈಜ ಸಂದೇಶವನ್ನು ತಿಳಿಸುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ , ದಯವಿಟ್ಟು ತಾವೆಲ್ಲರೂ ಒಮ್ಮ ಓದಿರಿ , ಅನ್ವೇಷಣೆ ನಡೆಸಿರಿ ಮತ್ತು ತಮ್ಮ ತಪ್ಪು ಕಲ್ಪನೆಗಳನ್ನು ನಿವಾರಿಸಿರಿ :

ಕುರ್ ಆನ್ ಮಾತುಗಳು:-
1. ಸತ್ಯದೊಂದಿಗೆ ಸುಳ್ಳನ್ನು ಸೇರಿಸ ಬೇಡಿ. (2:42)
2. ತಾವು ಸ್ವತಹ ಪ್ರಾಮಾಣಿಕತೆಯನ್ನು ಅಳವಡಿಸಿ ಕೊಂಡ ಮೇಲೆ ಇತರರಿಗೆ ಪ್ರಾಮಾಣಿಕತೆಯನ್ನು ಅಳವಡಿಸಿ ಕೊಳ್ಳಲು ಹೇಳಿ. (2:44)
3. ಭೂಮಿಯ ಮೇಲೆ ದೂಷಣೆ/ಕ್ಷೋಭೆ ಎಸಗದಿರಿ. (2:60)
4. ಜನರನ್ನು ಪ್ರಾರ್ಥನಾಲಯಗಳಿಂದ ತಡೆಯ ಬೇಡಿ. (2:114)
5. ಯಾರನ್ನು ಹಿಂದುಮುಂದೆ ವಿಚಾರಿಸದೆ ಕಣ್ಣು ಮುಚ್ಚಿ ಅನುಸರಿಸ ಬೇಡಿ. (2:170)
6. ಕೊಟ್ಟ ಮಾತು/ವಾಗ್ದಾನವನ್ನು ಉಲ್ಲಂಘಿಸ ಬೇಡಿ (2:177)
7. ಲಂಚಗಾರಿಕೆಯಲ್ಲಿ ಶಾಮೀಲಾಗ ಬೇಡಿರಿ. (2:188)
8. ನಿಮ್ಮೊಂದಿಗೆ ಸೆಣಸುವವರೊಂದಿಗೆ ಮಾತ್ರ ಹೋರಾಡಿ. (2:190)
9. ಯುದ್ಧದ ಶಿಷ್ಟಾಚಾರ/ನಿಯಮಗಳನ್ನು ಪಾಲಿಸಿ. (2:191)
10. ತಬ್ಬಲಿಗಳನ್ನು ಸಂರಕ್ಷಿಸಿ. (2:220)
11. ಮುಟ್ಟಿನ ಕಾಲಾವಧಿಯಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗ ಬೇಡಿ. (2:222)
12. ನಿಮ್ಮ ಮಕ್ಕಳಿಗೆ ಎರಡು ವರ್ಷ ಪೂರ್ತಿ ಸ್ತನಪಾನ ಮಾಡಿಸಿ. (2:233)
13. ಆಳುವವರನ್ನು ಅವರ ಅರ್ಹತೆ ಆಧಾರದಲ್ಲೇ ಆರಿಸಿರಿ. (2:247)
14. ಧರ್ಮದಲ್ಲಿ ಯಾವುದೇ ಬಲತ್ಕಾರವಿಲ್ಲ. (2:256)
15. ನೆನಪಿನಲ್ಲಿದ್ದೂ ದಾನಧರ್ಮಗಳನ್ನು ರದ್ದು ಮಾಡ ಬೇಡಿ. (2:264)
16. ಅರ್ಹರನ್ನು ಹುಡುಕಿ ಸಹಾಯ ಒದಗಿಸಿ. (2;273)
17. "ಬಡ್ಡಿ"ಯನ್ನು ಸ್ವೀಕರಿಸ ಬೇಡಿ. (2:275)
18. ಸಾಲ ಪಡೆದವರು ಅಸಹಾಯಕ ಪರಿಸ್ಥಿತಿಯಲ್ಲಿದ್ದರೆ ಅವರಿಗೆ ಹೆಚ್ಚು ಕಾಲಾವಕಾಶ ಕೊಡಿ. (2:280)
19. ಕೊಟ್ಟ ಸಾಲವನ್ನು ಬರವಣಿಗೆಯಲ್ಲಿ ಇಡಿ. (2:282)
20. ವಿಶ್ವಾಸ/ಭರವಸೆ/ನಂಬಿಗೆ ಇಡಿ. (2:283)
21. ಗೂಢಾಚಾರಿಕೆ/ಬೇಹುಗಾರಿಕೆ ಮತ್ತು ಚಾಡಿ ಹೇಳುವುದು ಮಾಡ ಬೇಡಿ. (2:283)
22. ಎಲ್ಲಾ ಕಾಲದ ಪ್ರವಾದಿಗಳಲ್ಲಿ ವಿಶ್ವಾಸ ಇರಿಸಿ. (2:285)
23. ಒಬ್ಬರನ್ನು ಅವರ ಸಾಮರ್ಥ್ಯಕ್ಕಿಂತ ಅಧಿಕ ಪೀಡಿಸ ಬೇಡಿ. (2:286)
24. ಒಕ್ಕಟ್ಟನ್ನು ಮುರಿದು ಬೇರ್ಪಡ ಬೇಡಿ. (3:103)
25. ಕೋಪ/ಆಕ್ರೋಶವನ್ನು ನಿಗ್ರಹುಸಿ. (3:134)
26. ಮಾತಿನಲ್ಲಿ ಉದ್ಧಟತನ ತೋರದಿರಿ. (3:159)
27. ಈ ಭುವನ ಸೃಷ್ಟಿಯಲ್ಲಿ ಅಡಕವಾಗಿರುವ ವಿಸ್ಮಯಗಳನ್ನು ಆಳವಾಗಿ ಅರಿಯಿರಿ. (3:191)
28. ಪುರುಷರು ಮತ್ತು ಮಹಿಳೆಯರಿಗೂ ಸಮಾನ ಪ್ರತಿಫಲಗಳಿವೆ. (3:195)
29. ಮರಣ ಹೊಂದಿದವರ ಸಂಪತ್ತನ್ನು ಅವರ ಕುಟುಂಬದವರಲ್ಲಿ ಹಂಚಲ್ಪಡ ಬೇಕು. (4:7)
30. ಮಹಿಳೆಗೂ ಪೂರ್ವಜರ ಆಸ್ತಿಯಲ್ಲಿ ಉತ್ತರಧಿಕಾರವಿದೆದೆ. (4:7)
31. ತಬ್ಬಲಿಗಳ ಹಕ್ಕನ್ನು ಕಬಳಿಸ ಬೇಡಿ. (4:10)
32. ತನ್ನ ರಕ್ತ ಸಂಬಂಧಿಗಳನ್ನು ವರಿಸ ಬೇಡಿ. (4:23)
33. ಬೇರೆಯವರ ಸ್ವತ್ತನ್ನು ಅನ್ಯಾಯವಾಗಿ ಕಬಳಿಸ ಬೇಡಿ. (4:29)
34. ಪುರುಷನು ಕುಟುಂಬದ ಯಜಮಾನನು. (4:34)
35. ಪರರೊಂದಿಗೆ ಎಂದೂ ಹಿತವಂತರಾಗಿರಿ. (4:36)
36. ಜಿಪುಣರಾಗ ಬೇಡಿ. (4:37)
37. ಹೊಟ್ಟೆಕಿಚ್ಚು ಪಡಬೇಡಿ. (4:54)
38. ಜನರ ನಡುವೆ ನ್ಯಾಯವಂತಿಕೆಯಿಂದ ನಿರ್ಣಯ ಕೊಡಿ. (4:58)
39. ಒಬ್ಬರನ್ನೊಬ್ಬರು ಕೊಲ್ಲ ಬೇಡಿ. (4:92)
40. ಮೋಸ/ವಂಚನೆಯ ವಕಾಲತ್ತು ವಹಿಸ ಬೇಡಿ. (4:105)
41. ನ್ಯಾಯದಲ್ಲಿ ಧೃಢವಾಗಿ ನಿಲ್ಲಿ. (4:135)
42. ಒಳಿತಿನಲ್ಲಿ ಒಬ್ಬರಿಗೊಬ್ಬರು ಸಹಕರಿಸಿ. (5:2)
43. ಪಾಪ/ಕಳಂಕ/ದುಶ್ಕರ್ಮ ಮತ್ತು ಆಕ್ರಮಣಗಳಲ್ಲಿ ಸಹಕರಿಸದಿರಿ. (5:2)
44. ಮೃತ ಪ್ರಾಣಿಗಳು, ರಕ್ತ ಮತ್ತು ಹಂದಿ ಮಾಂಸ ನಿಷಿದ್ಧಗೊಳಿಸಲಾಗಿದೆ. (5:3)
45. ನ್ಯಾಯವನ್ನು ಪ್ರತಿಪಾದಿಸಿ. (5:8)
46. ಪಾಠದಾಯಕವಾಗಿರುವಂತೆ ಅಪರಾಧಿಗಳನ್ನು ಶಿಕ್ಷಿಸಿ. (5:38)
47. ಪಾಪ ಕೃತ್ಯ ಮತ್ತು ಅನ್ಯಾಯದ ವಿರುದ್ಧ ಸದಾ ಹೋರಾಡಿ. (5:63)
48. ಶರಾಬು ಮತ್ತು ಅಮಲು ಬರಿಸುವ ವಸ್ತುಗಳನ್ನು ವರ್ಜಿಸಿ. (5:90)
49. ಜೂಜಾಡ ಬೇಡಿ. (5:90)
50. ಬೇರೆಯವರ ದೇವರನ್ನು ತೆಗಳ/ಹೀಯಾಳಿಸ ಬೇಡಿ. (6:108)
51. ಒಂದು ವಿಷಯದಲ್ಲಿ ಬಹುಸಂಖ್ಯಾತರಾಗಿರುವುದು ಸತ್ಯಕ್ಕೆ ಪುರಾವೆ/ಧೃಡೀಕರಣ ಅಲ್ಲ. (6:116)
52. ತೂಕ ಮತ್ತು ಅಳತೆಯಲ್ಲಿ ಕಡಿತಗೊಳಿಸಿ ಜನರನ್ನು ವಂಚಿಸದಿರಿ. (6:152)
53. ಅಹಂಕಾರಿಗಳಾಗಿ ಇರ ಬೇಡಿ. (7:13)
54. ತಿನ್ನಿರಿ, ಕುಡಿಯಿರಿ ಆದರೆ ದುಂದುಗಾರಿಕೆ ಎಸೆಯದಿರಿ. (7:31)
55. ಪ್ರಾರ್ಥನೆಯ ವೇಳೆಯಲ್ಲಿ ಒಳ್ಳೆಯ ಶುಭ್ರ ಬಟ್ಟೆಗಳನ್ನು ಉಡಿರಿ. (7:31)
56. ಇತರರ ತಪ್ಪುಗಳನ್ನು ಕ್ಷಮಿಸಿ/ಮನ್ನಿಸಿರಿ. (7:199)
57. ಯುದ್ಧಗಳಲ್ಲಿ ಬೆನ್ನು ತೋರಿಸುವ ಹೇಡಿಗಳಾಗದಿರಿ. (8:15)
58. ಸಹಾಯ ಯಾಚಿಸಿದವರಿಗೆ ಸಹಾಯ ಮಾಡಿ ಅವರನ್ನು ಸಂರಕ್ಷಿಸಿರಿ. (9:6)
59. ಶುಚಿತ್ವ/ಸ್ವಚ್ಛತೆ ಪಾಲಿಸಿ. (9:108)
60. ಅಲ್ಲಾಹನ ಕೃಪೆಯಿಂದ ಎಂದೂ ನಿರಾಶರಾಗದಿರಿ. (12:87)
61. ತಿಳುವಳಿಕೆಯ ಕೊರತೆಯಿಂದ ಮಾಡಿದ ತಪ್ಪನ್ನು ಅಲ್ಲಾಹನು ಕ್ಷಮಿಸುವನು. (16:119)
62. ದೇವಮಾರ್ಗದ ಆಮಂತ್ರಣವನ್ನು ಒಳ್ಳೆಯ ಬೋಧನೆ ಮತ್ತು ಜಾಣತನದಿಂದ ಮಾಡಿ. (16:125)
63. ಒಬ್ಬರ ಪಾಪದ ಬಾಧ್ಯತೆ ಇನ್ನೊಬ್ಬರಿಗಿಲ್ಲ. (17:15)
64. ಪೋಷಕ/ಮಾತಾಪಿತರೊಂದಿಗೆ ಕರ್ತವ್ಯತತ್ಪರರಾಗಿರಿ. (17:23)
65. ಮಾತಾ ಪಿತರೊಂದಿಗೆ ಎಂದೂ ಅಗೌರವ/ಅವಮಾನದ ವರ್ತನೆ ತೋರದಿರಿ. (17:23)
66. ಎಂದೂ ಹಣದ ದುಂದು ವೆಚ್ಚ ಮಾಡ ಬೇಡಿ. (17:29)
67. ಬಡತನದ ಭಯದಿಂದ ಎಂದೂ ತನ್ನ ಮಕ್ಕಳನ್ನು ಕೊಲ್ಲ ಬೇಡಿ. (17:31)
68. ಎಂದೂ ವ್ಯಭಿಚಾರದತ್ತ ಸುಳಿಯ ಬೇಡಿ. (17:32)
69. ಎಂದೂ ತನಗೆ ತಿಳಿಯದಿರುವ ವಿಷಯದ ಕುರಿತು ಬೆನ್ನು ಹತ್ತಿ ಹೋಗ ಬೇಡಿ. (17:36)
70. ಎಂದೂ ಜನರೊಂದಿಗೆ ಸೌಮ್ಯತೆಯಿಂದ ಮಾತನಾಡಿ. (20:44)
71. ಹುರುಳಿಲ್ಲದ/ನಿರರ್ಥಕ/ನಿಶ್ಪ್ರಯೋಜಕ/ಪೊಳ್ಳು ವಿಷಯಗಳಿಂದ ದೂರ ಇರಿ. (23:3)
72. ಅನುಮತಿ ಇಲ್ಲದೇ ಇತರರ ಮನೆಗಳನ್ನು ಪ್ರವೇಶಿಸ ಬೇಡಿ. (24:27)
73. ಯಾರು ಕೇವಲ ಅಲ್ಲಾಹನಲ್ಲಿ ರಕ್ಷಣೆ ಯಾಚಿಸುತ್ತಾರೋ ಅಲ್ಲಾಹನು ಅವರಿಗೆ ರಕ್ಷಣೆಯನ್ನೀಯುವನು. (24:55)
74. ಎಂದೂ ಪೋಷಕರ ಕೊಠಡಿಯನ್ನು ಅವರ ಅನುಮತಿ ಪಡೆಯದೇ ಪ್ರವೇಶಿಸ ಬೇಡಿ. (24:58)
75. ಭೂಮಿಯಲ್ಲಿ ನಮ್ರತೆಯಿಂದ ನಡೆದಾಡಿ. (25:63
76. ಈ ಭೂಮಿಯಲ್ಲಿ ನಿಮ್ಮ ಪಾಲನ್ನು ಉಪೇಕ್ಷಿಸ ಬೇಡಿ. (28:77)
77. ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಗಳನ್ನಾಗಿಸದಿರಿ. (28:88)
78. ಸಲಿಂಗ ಕಾಮದಲ್ಲಿ ತೊಡಗ ಬೇಡಿ. (29:29)
79. ಸರಿಯನ್ನು ಪ್ರತಿಪಾದಿಸಿ, ತಪ್ಪನ್ನು ನಿಷೇಧಿಸಿ. (31:17)
80. ಭೂಮಿಯಲ್ಲಿ ದರ್ಪದಿಂದ ನಡೆದಾಡದಿರಿ. (31:18)
81. ಧ್ವನಿಯನ್ನು ತಗ್ಗಿಸಿ ಮಾತನಾಡಿ. (31:19)
82. ಮಹಿಳೆಯರು ತಮ್ಮ ಶೃಂಗಾರವನ್ನು ಪ್ರಕಟಿಸ/ತೋರ್ಪಡಿಸಬಾರದು. (33:33)
83. ಅಲ್ಲಾಹನು ಎಲ್ಲಾ ಪಾಪಗಳನ್ನು ಕ್ಷಮಿಸುವವನಾಗಿದ್ದಾನೆ. (39:53)
84. ಅಲ್ಲಾಹನ ಕರುಣೆಯಿಂದ ಎದೆಗುಂದದಿರಿ. (39:53)
85. ಕೆಡುಕನ್ನು ಒಳಿತಿನ ಮೂಲಕ ಹೆಮ್ಮೆಟ್ಟಿಸಿ. (41:34)
86. ವಿಷಯ/ಸಂಗತಿಗಳನ್ನು ಜನರೊಂದಿಗೆ ಚರ್ಚಿಸಿ ಇತ್ಯರ್ಥ ಪಡಿಸಿ. (42:38)
87. ಜನರ ಮಧ್ಯೆ ವಿಷಯಗಳನ್ನು ಇತ್ಯರ್ಥ ಗೊಳಿಸಲು ಪ್ರಯತ್ನಿಸಿ. (49:9)
88. ಇತರರನ್ನು ಮೂದಲಿಸಿ ಅಪಹಾಸ್ಯ ಗೈಯದಿರಿ. (49:11)
89. ಅನುಮಾನ/ಸಂದೇಹಗಳನ್ನು ನಿವಾರಿಸಿ. (49:12)
90. ಬೇಹುಗಾರಿಕೆ ಮತ್ತು ಚಾಡಿ ಮಾಡದಿರಿ. (49:12)
91. ನಿಮ್ಮಲ್ಲಿ ಅತೀ ಧರ್ಮಶೀಲನಾಗಿರುವವನೇ ಅತೀ ಉತ್ತಮನು. (49:13)
92. ಅತಿಥಿಗಳನ್ನು ಗೌರವಿಸಿ. (51:26)
93. ಸಂಪತ್ತನ್ನು ದಾನದಲ್ಲಿ ವ್ಯಯಿಸಿ. (57:7)
94. ಒಬ್ಬ ಅಮಾಯಕನ್ನು ಕೊಂದರೆ ಇಡಿ ಮನುಷತ್ವ ವನ್ನು ಕೊಂದಹಾಗೆ.
95. ಸತ್ಯ ವಿಶ್ವಾಸ ಮತ್ತು ಜ್ನಾನವುಳ್ಳವರಿಗೆ ಅಲ್ಲಾಹನು ಉನ್ನತ ಪದವಿಗಳನ್ನು ದಯಪಾಲಿಸುವನು. (58:11)
96. ಮುಸ್ಲಿಮೇತರರನ್ನು ಕರುಣೆ ಮತ್ತು ನ್ಯಾಯಯುತವಾಗಿ ನಡೆಸಿಕೊಳ್ಳಿ. (60:8)
97. ಮನಸ್ಸಿನ ಸಂಕುಚಿತತೆಯಿಂದ ಸುರಕ್ಷಿತರಾಗಿರುವವರು ಮಾತ್ರ ಎಶಸ್ವಿಗಳು. (64:16)
98. ಅಲ್ಲಾಹನಿಂದ ಕ್ಷಮೆ ಕೋರಿ, ಅವನು ಕ್ಷಮಿಸುವವನು ಮತ್ತು ಕರುಣಾಮಯಿ ಆಗಿದ್ದಾನೆ. (73:20)
99. ಪ್ರಶ್ನಿಸುವವರನ್ನು/ಕೇಳುವವರನ್ನು ಹಿಮ್ಮೆಟ್ಟಿಸ ಬೇಡಿ. (93:10)
100. ಬಡವರಿಗೆ ಉಣಿಸುವವರನ್ನು ಹುರಿದಿಂಬಿಸಿ. (107:3)
🌴🌱🌿

ಭಾನುವಾರ, ಜನವರಿ 29, 2017

"ಗೋ - ವೃಕ್ಷ" ಮಾನವನ ಉಸಿರು

"ಗೋ ಸಂಪತ್ತು"  ಎಂಬು ಶಬ್ದದ  ಅರ್ಥವೈಶಾಲ್ಯತೆಯು ಅರಿವಾಗ ಬೇಕಾದರೆ ಬಹಳ ಕಷ್ಟ. ನಮ್ಮ ಹಿರಿಯರ ಕಾಲದಲ್ಲಿ ಎರಡು ದನ ಸಾಕಿ ಆ ಮೂಲಕ ಸುಖ ಸಂತೋಷದಿಂದ  ಜೀವನ ಮಾಡುತ್ತಿದ್ದರು. ಮಕ್ಕಳು  ಅವರ ವಿದ್ಯಾಭ್ಯಾಸ ಮದುವೆ ಆಭರಣ ಇವೆಲ್ಲವೂ ದನ ಸಾಕುವುದರ ಮೂಲಕ ಸಾಧ್ಯವಾಗುತ್ತಿತ್ತು. ಗೋಗಳು ಮನೆಯವರಿಗೆ ಮಕ್ಕಳು ಇದ್ದಹಾಗೆ.  ಈ ಸತ್ಯ ಈಗಿನವರಿಗೆ ಗೊತ್ತಿಲ್ಲ. ಈಗಿನವರಿಗೆ ದನದಿಂದ ಹಾಲು ಸಿಗುತ್ತದೆ ಎಂಬುದು ಮಾತ್ರ ತಿಳಿದಿದೆ.

'ಗೋ' ಭೂಮಿ ಮತ್ತು ಮನುಷ್ಯನಿಗೆ  ಉಸಿರು ಇದ್ದ ಹಾಗೆ. ಈ ಬಗ್ಗೆ  ಒಂದು ಚಿಂತನಾತ್ಮಕ ಆಲೆಯ ಅವಶ್ಯಕತೆ ಇತ್ತು. ಆ ಕೆಲಸವನ್ನು  ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಯವರು ಬಹಳ ಆಸಕ್ತಿ ಯಿಂದ ಮಾಡಿರುವರು. ಅವರದು ಅದ್ಭುತ ಸಾಧನೆಯಿಂದ  ಸಮಾಜದಲ್ಲಿ ಒಂದು  ಸಂಚಲನ ಮೂಡಿರುವುದು ಅವರ ಸಾಧನೆಯ ಸಾರ್ಥಕತೆ. ಇದು ಹೀಗೇ ಮುಂದುವರಿದು ನಿರಂತರವಾಗಿ ಸಮಾಜದಲ್ಲಿ  ಪ್ರಜ್ವಲಿಸುವ ಅಗತ್ಯವಿದೆ. ಹಾಗಾದರೆ ಮಾತ್ರ ಈ ಸಾಧನೆ ಮುಂದಿನ ತಲೆಮಾರಿಗೆ ಆರ್ಥಿಕ, ಸಾಮಾಜಿಕ  ಮತ್ತು  ಸಾಂಸ್ಕೃತಿಕ  ಹಾಗೂ ಆರೋಗ್ಯ ಬದುಕಿನ ಬುನಾದಿ ಆಗಿರುವುದು ಸತ್ಯ. ಈ ದೃಷ್ಟಿಯಿಂದ ಇದೊಂದು  ಇತಿಹಾಸದಲ್ಲಿ  ಸೇರಬಹುದಾದ ಅದ್ಭುತ ಸೇವೆ.

ಇದೇ ರೀತಿ ಆಗ ಬೇಕಾದ  ಇನ್ನೊಂದು ಕಾರ್ಯ ಇದೆ. ವೃಕ್ಷ ಸಂತತಿ ಬೆಳಸ ಬೇಕಾಗಿದೆ. ಭೂಮಿ ಮತ್ತು ಜೀವರಾಶಿ ಉಳಿಯ ಬೇಕಾದರೆ ಮತ್ತು ಮಾನವ ಸುಖ ಸಂಪತ್ತು ಆರೋಗ್ಯದಿಂದ ಬದುಕ ಬೇಕಾದರೆ ಇದು ಆಗಲೇ ಬೇಕು. ಸಾಮಾನ್ಯವಾಗಿ ಕಾಡು ಅಂದರೆ ಮರಗಿಡಗಳ  ಸಮೂಹ ಕಲ್ಪಿಸುವ ನಮಗೆ ಅದರ ಮಹತ್ವ ಗೂತ್ತಿಲ್ಲ. ಕಾಡು - ಅರಣ್ಯ ಮಾನವನ ಬದುಕಿನಲ್ಲಿ ಹಾಸು ಹೂಕ್ಕಾಗಿ ಬೆಸೆದು ಕೂಂಡಿದೆ. ನಮ್ಮಲ್ಲಿ  ಇರುವ ಖಾಲಿ ಇರುವ ಉಪಯೋಗಿಸದೇ ಇರುವ ಜಾಗಗಳಲ್ಲಿ ಕಾಡು ಬೆಳೆಸಲೇ ಬೇಕು. ಈ ಕ್ರಿಯೆಯೂ ನಮಗೆ ತಪಸ್ಸಾಗ ಬೇಕು. ಕಾಡುತ್ಪತ್ತಿಯಿಂದ ಆರ್ಥಿಕ ಸಮೃದ್ಧಿ ಹೂಂದುವುದು ಸಾಧ್ಯ.  ಮಾನವಪ ಬದುಕಿಗೆ ಪೂರಕವಾದ ಸಸ್ಯ ಸಂಪತ್ತುಗಳು  ಹಾಗೂ ನಶಿಸಿ ಹೋಗುತ್ತಿರುವ ( ಹೊನ್ನೆ  ರೆಂಜೆ,  ಹೆಬ್ಬಲಸು, ಇತ್ಯಾದಿ ) ಗಿಡ ಮರಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿಯೂ ಈ ಮೂಲಕ ಸಾಕಾರಗೊಳಿಸುವ ಅಗತ್ಯವಿದೆ.  ಶ್ರೀ  ರಾಘವೇಶ್ವರಭಾರತೀ ಸ್ವಾಮೀಜಿಯವರು  ಮಾಡಿದ ಸಾಧನೆಯ  ಮಾದರಿಯಲ್ಲೇ  ಆದರೆ  ಖಂಡಿತ ಸಾಧ್ಯವಿದೆ. ಸಮಾಜ ಮತ್ತು ಶೃದ್ಧಾ ಕೇಂದ್ರ ಗಳು ಈ ಬಗ್ಗೆ ನಿಸ್ವಾರ್ಥ ಸೇವೆಗೆ ಮುಂದಾಗಬೇಕು.

ಶನಿವಾರ, ಜನವರಿ 28, 2017

ಹಳ್ಳಿ ಮದ್ದು

*ವೈದ್ಯಕೀಯಕ್ಕೆ ಸವಾಲ್*

ತಪ್ಪದೇ ಓದಿ...

ನನ್ನ ಹೆಸರು ರವಿ, ನನ್ನ ಮೊಬೈಲ್ ನಂಬರ್ +1 (929)3148217. ನನ್ನ ತಂದೆಯವರ ಪಿತ್ತಕೋಶದಲ್ಲಿ ಕಲ್ಲಾಗಿತ್ತು. ವೈದ್ಯರು ಪಿತ್ತಕೋಶವನ್ನೇ ತೆಗೆಯಬೇಕು, 40-50 ಸಾವಿರ ಖರ್ಚಾಗುತ್ತದೆ ಎಂದರು. ನನ್ನ ಪರಿಚಯದ ನಾಟಿ ವೈದ್ಯರ ನನ್ನ ತಂದೆಯ ಸಮಸ್ಯೆಯನ್ನು ವಿವರಿಸಿದೆ, ಅವರು ಔಷಧಿ ನೀಡಿದರು. ಬರೀ 15-20 ದಿನಗಳಲ್ಲೇ ಪಿತ್ತಕೋಶದ ಕಲ್ಲುಗಳು ನೀರಾಗಿ ಹೋದವು.  40-50 ಸಾವಿರ ರೂಪಾಯಿ ಉಳಿಸಿದಕ್ಕಿಂತ ಬರೀ 1600 ರೂ.ಗಳಲ್ಲಿ ಶಸ್ತ್ರಚಿಕಿತ್ಸೆ  ಇಲ್ಲದೆ ನನ್ನ ತಂದೆಯವರು ಗುಣಮುಖಗೊಂಡಿದ್ದು ಬಹಳ ಸಂತಸದ ವಿಷಯ.

ದಾರಿ:​​  ಮಂಗಳೂರು - ಉಡುಪಿ ಮಾರ್ಗ(NH-66)ದಲ್ಲಿ ಹೊರಟರೆ ಮೂಲ್ಕಿ ಎಂಬ ಪಟ್ಟಣ ಸಿಗುತ್ತದೆ, ಅಲ್ಲಿಂದ ಮೂಡಬಿದ್ರೆ ರಸ್ತೆ(SH-70)ಯಲ್ಲಿ ಹೊರಟರೆ ಕಿನ್ನಿಗೋಳಿ ಸಿಗುತ್ತದೆ. ಕಿನ್ನಿಗೋಳಿ ಬಸ್ ನಿಲ್ದಾಣದ ಹಿಂದುಗಡೆ ಇರುವ ರಸ್ತೆಯಲ್ಲಿ ನೇರವಾಗಿ 1.5km ಕ್ರಮಿಸಿದರೆ ತಾಳಿಪಾಡಿಗುತ್ತು ಸಿಗುತ್ತದೆ, ಅಲ್ಲಿಂದ ಎಡಕ್ಕೆ ತಿರುಗಿ ಮತ್ತೆ 1km ಕ್ರಮಿಸಿದರೆ ಕಲ್ಕರೆ ಸಿಗುತ್ತದೆ. ಅಲ್ಲೇ ರಸ್ತೆಯ ಬಲಬದಿಗೆ ಹೊಳೆಯ ಪಕ್ಕದಲ್ಲೇ ನಾಟಿಮದ್ದು ನೀಡುವ ಮನೆ ಇದೆ.

ವಿಳಾಸ: ಕಲ್ಕರೆ ಮನೆ, ಎಳತ್ತೂರು ಗ್ರಾಮ, ಕಿನ್ನಿಗೋಳಿ, ಮಂಗಳೂರು

ಔಷಧಿ: ವಿವಿಧ ಮರದ ತೊಗಟೆ & ಬೇರುಗಳ ಎಣ್ಣೆ

ಯಾವ ರೋಗಿಗಳಿಗೆ?:
​​ಮೂಲವ್ಯಾಧಿ - Piles​​
​​ಮೂತ್ರಕೋಶದಲ್ಲಿ ಕಲ್ಲು - Kidney Stone​​
​​ಪಿತ್ತಕೋಶದಲ್ಲಿ ಕಲ್ಲು - Gall bladder Stone​​
​​ಪಿತ್ತ ಕೋಶ ಸಂಬಂಧಿ ಕಾಯಿಲೆಗಳು - Gall Bladder diseases​​
​​ಬಿಳಿ ಹೋಗುವುದು​​

*ಔಷಧಿ ಕೊಡುವ ದಿನ:* *ಪ್ರತಿದಿನ*
*ಬೆಳಗ್ಗೆ 7am ನಿಂದ ಮಧ್ಯಾಹ್ನ 2pm.*

​ಹೆಚ್ಚಿನ ಮಾಹಿತಿಗಾಗಿ:​​
📞8722266599
(ಮಾತನಾಡುವ ಸಮಯ: ಬೆಳಿಗ್ಗೆ 7ರಿಂದ ಮಧ್ಯಾಹ್ನ 2ವರೆಗೆ)

*​ತಪ್ಪದೇ ಶೇರ್ ಮಾಡಿ, ಅವಶ್ಯಕತೆ ಇರುವವರಿಗೆ ತಿಳಿಸಿ.​*

ಬುಧವಾರ, ಜನವರಿ 25, 2017

ಭೋಜನ ಮತ್ತು ದೇವರ ದರ್ಶನ

ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು
ಅವುಗಳ ಭಗವದ್ರೂಪಗಳ ಪರಿಚಯ.
ಬಡಿಸುವ ಕ್ರಮಾನುಸಾರವಾಗಿ ಭಗವಂತನ ೨೪ ನಾಮಗಳನ್ನು
ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು
ಸಾಮಾನ್ಯವಾಗಿ ಅನುಸರಿಸಲಾಗುತ್ತದೆ.
1 ಉಪ್ಪು (ಸೌಗಂಧಿ ಸಹಿತ ಜನಾರ್ಧನ)
2 ಚಟ್ನಿ, ಕೋಸಂಬರಿ, ಮುಂತಾದುವು (ಸತ್ಯ ಸಹಿತ
ಪ್ರದ್ಯುಮ್ನ)
3 ಕೊಬ್ಬರಿ ಬಳಸಿರುವ ಪಲ್ಯ (ಬುದ್ಧಿಸಹಿತ ಪದ್ಮನಾಭ)
4 ಸೊಪ್ಪು ಬಳಸಿರುವ ಪಲ್ಯಗಳು (ಮಂಗಳಾದೇವಿ ಸಹಿತ
ಹೃಶೀಕೇಷ)
5 ಹುಳಿರಹಿತ ಪದಾರ್ಥಗಳು (ಹರಿಣಿ ಸಹಿತ ಸಂಕರ್ಷಣ)
6 ಕಟು ಅಥವಾ ಕಹಿ ಪದಾರ್ಥಗಳು (ನಿತ್ಯ ಸಹಿತ ಅನಿರುದ್ಧ)
7 ಹುಳಿ ಪದಾರ್ಥಗಳು (ಇಂದಿರಾ ಸಹಿತ ದಾಮೋದರ)
8 ಭಕ್ಷ್ಯ ಅಥವಾ ಸಿಹಿ ಪದಾರ್ಥಗಳು (ಕಮಲಾ ಸಹಿತ ಯಾಧವ)
9 ಹೋಳಿಗೆ (ಕಮಲಾಲಯ ಮಧುಸೂದನ)
10 ಗೊಜ್ಜು ಮತ್ತು ಕರಿದ ಪದಾರ್ಥಗಳು (ಸದಾಶ್ರಯ
ಆಧೊಷಜ)
11 ಜಹಾಂಗೀರು, ವಡೆ ಮುಂತಾದ ಉದ್ದು ಬಳಸಿರುವ
ಪದಾರ್ಥಗಳು (ಸಖಾದೇವಿ ಸಹಿತ ಆಚ್ಯುತ)
12 ಕುಂಬಳಕಾಯಿ, ಎಳ್ಳು, ಉದ್ದಿನ ಪದಾರ್ಥಗಳು-ಹಪ್ಪಳ
ಸಂಡಿಗೆ ಮುಂತಾದುವು (ಲಕ್ಷ್ಮೀ ಸರಸಿಂಹ)
13 ಹಣ್ಣು ಮತ್ತು ಪಾನಕಗಳು (ಸುಂದರಿ ಸಹಿತ ಉಪೇಂದ್ರ)
14 ತೊವ್ವೆ (ಧಾನ್ಯ ಸಹಿತ ಶ್ರೀಧರ)
15 ಪರಮಾನ್ನ -ಪಾಯಸ (ಲಕ್ಷ್ಮೀ ಸಹಿತ ನಾರಾಯಣ)
16 ಅನ್ನ (ಶ್ರೀಕೇಶವ)
17 ತುಪ್ಪ (ಪದ್ಮಾ ಸಹಿತ ಗೋವಿಂದ)
18 ಬೆಣ್ಣೆ (ರಮಾ ಸಹಿತ ತ್ರಿವಿಕ್ರಮ)
19 ಹಾಲು / ಕ್ಷೀರ (ಪದ್ಮಿನೀ ಸಹಿತ ಗೋವಿಂದ)
20 ಮೊಸರು (ವೃಕ್ಷಾಕಪಿ ಸಹಿತ ವಾಮನ)
21 ಕುಡಿಯುವ ನೀರು (ಶ್ರೀಕೃಷ್ಣ)
22 ಸಕ್ಕರೆ, ಬೇಳೆ (ದಕ್ಷಿಣಾ ಸಹಿತ ವಾಸುದೇವ)
23 ಶ್ಯಾವಿಗೆ, ಇಂಗು, ಏಲಕ್ಕಿ, ಕೇಸರಿ, ಕರ್ಪೂರ, ಜೀರಿಗೆ,
ಮುಂತಾದುವು (ಆನಂದ ಸಹಿತ ಪುರುಷೋತ್ತಮ)
24 ವೀಳ್ಯದೆಲೆ (ಶ್ರೀಹರಿ)
25 ಪಾನಕ - ನಿಂಬೆ (ವಿಶ್ವ)
ವಿಷಯಸೂಚಿ :
1. ಕೆಲವು ಸಂಪ್ರದಾಯಗಳಲ್ಲಿ ತುಪ್ಪವನ್ನು
ಭೋಜನಾರಂಭಕ್ಕೆ ಮುಂಚಿತವಾಗಿ ಬಡಿಸುವುದು
ರೂಢಿಯಲ್ಲಿದೆ. ಈ ಕ್ರಮವನ್ನು ಪಾತ್ರಾಭಿಗಾರ ಎನ್ನುತ್ತಾರೆ.
2. ಬಡಿಸುವವರು ಭೋಜನ ಮಾಡುವವರ ಎದುರಿನಿಂದ
ಬಡಿಸಬೇಕು.

Use able note

😴😀 SOMETHING YOU
           MIGHT HAVE NOT
           KNOWN And NEED
           TO KNOW !!

🐜  Ants Problem:
       Ants hate Cucumbers.
       "KEEP the skin of
        Cucumbers near the
        Place where they are
        or at Ant Hole.  

 🎆  To make the Mirror
        Shine:
        "Clean with Sprite"

  💨 To remove Chewing
        Gum from Clothes:
        "Keep the Cloth in
        the Freezer for One
        Hour"

💭   To Whiten White
        Clothes:
        "Soak White Clothes
        in hot water with a
        Slice of Lemon for 10
        Minutes"

 🙇  To give a Shine to
        your Hair:
        "Add one Teaspoon
        of Vinegar to Hair,
        then wash Hair"

 🍋  To get maximum
        Juice out of Lemons:
        "Soak Lemons in Hot
        Water for One Hour,
        and then juice them"

🍞  To avoid smell of
       Cabbage while
       cooking:
       "Keep a piece of
        Bread on the
        Cabbage in the
        Vessel while cooking"

👕  To remove Ink from
       Clothes:
       "Put Toothpaste 🍥
       on the Ink Spots
       generously and let it
       dry completely, then
       wash"

🐀  To get rid of Mice or
       Rats:
       "Sprinkle Black
       Pepper in places
       where you find Mice &
       Rats. They will run
       away"

 🍸 Take Water Before
       Bedtime..
       "About 90% of Heart
       Attacks occur Early in
       the Morning & it can
       be reduced if one
       takes a Glass or two
       of Water before going
       to bed at Night"

 💐 We Know Water is
       important but never
       knew about the
       Special Times one
       has to drink it.. !!

       Did you  ???

 💦 Drinking Water at the
       Right Time ⏰
       Maximizes its
       effectiveness on the
       Human Body;

       1⃣  1 Glass of Water
              after waking up -
             🕕⛅ helps to
              activate internal
              organs..

       2⃣  1 Glass of Water
              30 Minutes  🕧
              before a Meal -
              helps digestion..

       3⃣ 1 Glass of Water
              before taking a
              Bath 🚿 - helps
              lower your blood
              pressure.

       4⃣ 1 Glass of Water
              before going to
              Bed - 🕙 avoids
              Stroke  or Heart
              Attack.

🃏 Indian Proverb Says:
      'When someone
       shares something of
       value with you and
       you benefit from  it,
       You have a moral
       obligation to share it
       with others too.'

I have done mine...😄
 🏁___🐎______________🐢...
send this to three groups and see the  magic.the tortoise will pass the horse

ಸಂಸ್ಥೆಗಳ ಧ್ಯೇಯ ವಾಕ್ಯಗಳು

*ಸಂಸ್ಥೆಗಳು ಮತ್ತು ಅದರ ಧ್ಯೇಯವಾಕ್ಯಗಳು
______________________________________
★ಭಾರತ ಸರಕಾರ – *ಸತ್ಯಮೇವ ಜಯತೇ* – ಸತ್ಯವೇ ಜಯಿಸುತ್ತದೆ.
★ಲೋಕಸಭೆ – *ಧರ್ಮಚಕ್ರ ಪ್ರವರ್ತನಾಯ*  –ಧರ್ಮಚಕ್ರವನ್ನು ಪರಿಪಾಲಿಸಲು
★ಸರ್ವೋಚ್ಛ ನ್ಯಾಯಾಲಯ – *ಯತೋ ಧರ್ಮಸ್ತತೋ ಜಯಃ* – ಎಲ್ಲಿ ಧರ್ಮವಿರುತ್ತದೋ
ಅಲ್ಲಿ ಜಯವಿರುತ್ತದೆ.
★ಆಲ್ ಇಂಡಿಯಾ ರೇಡಿಯೋ – *ಬಹುಜನ ಹಿತಾಯ ಬಹುಜನ ಸುಖಾಯ* – ಎಲ್ಲರ ಹಿತಕ್ಕೆ , ಎಲ್ಲರ ಸುಖಕ್ಕೆ.
★ದೂರದರ್ಶನ – *ಸತ್ಯಂ ಶಿವಂ ಸುಂದರಂ*
★ಗೋವಾರಾಜ್ಯ – *ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್* – ಎಲ್ಲರೂ ಸುಖವಾಗಿರಲಿ , ಯಾರಿಗೂ ದುಃಖದಲ್ಲಿರುವುದು ಬೇಡ.
★ಭಾರತೀಯ ಜೀವ ವಿಮಾ ನಿಗಮ –  *ಯೋಗಕ್ಷೇಮಂ ವಹಾಮ್ಯಹಮ್* – ನಿಮ್ಮೆಲ್ಲರ
ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ.
★ಅಂಚೆ ಇಲಾಖೆ – *ಅಹರ್ನಿಶಂ ಸೇವಾಮಹೇ* – ಹಗಲು ರಾತ್ರಿ ನಿಮ್ಮ ಸೇವೆಗಾಗಿ.
★ಕಾರ್ಮಿಕರ ಸಂಸ್ಥೆ – *ಶ್ರಮ ಮೇವ ಜಯತೇ* – ಶ್ರಮವೇ ಜಯಿಸುತ್ತದೆ.
★ಭಾರತೀಯ ಸಂಖ್ಯಾ ಸಂಸ್ಥೆ – *ಭಿನ್ನೇಷ್ವೇಕಸ್ಯ ದರ್ಶನಮ್* – ವಿವಿಧತೆಯಲ್ಲಿ ಏಕತೆ.
★ಭೂಸೇನೆ – *ಸೇವಾ ಅಸ್ಮಾಕಂ ಧರ್ಮಃ* – ಸೇವೆಯೇ ನಮ್ಮ ಧರ್ಮ.
★ವಾಯು ಸೇನೆ – *ನಭಸ್ಪೃಶಂ ದೀಪ್ತಮ್* – ಆಕಾಶವೇ ದೀಪ.
★ಜಲಸೇನೆ – *ಶಂ ನೋ ವರುಣಃ* – ವರುಣನಿಗೆ
ನಮಸ್ಕಾರ.
★ಮುಂಬಯಿ ಪೋಲಿಸ್ – *ಸದ್ರಕ್ಷಣಾಯ ಖಲನಿಗ್ರಹಣಾಯ* – ಒಳ್ಳೆಯವರ ರಕ್ಷಣೆ , ದುಷ್ಟರ ನಿಗ್ರಹ.
★ಹಿಂದಿ ಅಕಾಡೆಮಿ – *ಅಹಮ್ ರಾಷ್ಟ್ರೀ ಸಂಗಮನೀ
ವಸೂನಾಮ್* – ನಾನು ರಾಷ್ಟ್ರದಲ್ಲಿ ಸಂಘಜೀವಿಯಾಗಿ ಬದುಕುತ್ತೇನೆ.
★ಭಾರತೀಯ ರಾಷ್ತ್ರೀಯ ವಿಜ್ಞಾನ ಸಂಸ್ಥೆ – *ಹವ್ಯಭಿರ್ಭಗಃ ಸವುತುರ್ವರೆಣ್ಯಂ*
★ಭಾರತೀಯ ಪ್ರಬಂಧಕರ ಸೇವಾ ಸಂಸ್ಥೆ – *ಯೋಗಃ ಕರ್ಮಸು ಕೌಶಲಮ್* – ಕರ್ಮಗಳಲ್ಲಿ ಯೋಗವೇ ಶ್ರೇಷ್ಠ.
★ವಿಶ್ವವಿದ್ಯಾಲಯ ಅನುದಾನ ಆಯೋಗ –
*ಜ್ಞಾನವಿಜ್ಞಾನಂ ವಿಮುಕ್ತಯೇ*
★ಭಾರತೀಯ ಶಿಕ್ಷಕರ ತರಬೇತಿ ಸಂಸ್ಥೆ – *ಗುರುಃ
ಗುರುತಮೋ ಧಾಮಃ* – ಗುರುಗಳಲ್ಲಿ ಗುರುತಮವೇ ಇರಬೇಕು.
★ಗುರುಕುಲ ಕಾಂಗಡಿ ವಿಶ್ವವಿದ್ಯಾಲಯ –
*ಬ್ರಹ್ಮಚರ್ಯೆಣ ತಪಸಾ ದೇವಾ ಮೃತ್ಯುಮುಪಾಘ್ನತ* –
ಬ್ರಹ್ಮಚರ್ಯ ಮತ್ತು ತಪಸ್ಸಿನಿಂದ ದೇವರುಗಳು ಮೃತ್ಯುವನ್ನೇ ಗೆದ್ದಿದ್ದಾರೆ.
★ಇಂದ್ರಪ್ರಸ್ಥ ವಿಶ್ವವಿದ್ಯಾಲಯ – *ಜ್ಯೋತಿರ್ವೃಣೀತ ತಮಸೋ ವಿಜಾನನ – ಜ್ಯೋತಿ ಬೆಳಗಲಿ ಕತ್ತಲೆ ದೂರವಾಗಲಿ.
★ಕಾಶಿ ಹಿಂದೂ ವಿಶ್ವವಿದ್ಯಾಲಯ – *ವಿದ್ಯಯಾ
ಅಮೃತಮಶ್ನುತೇ* – ವಿದ್ಯೆಯಿಂದ ಅಮೃತ ಸಿಗುತ್ತದೆ.
★ಆಂಧ್ರ ವಿಶ್ವವಿದ್ಯಾಲಯ – *ತೇಜಸ್ವಿನಾವಧೀತಮಸ್ತು* - ನಾವೆಲ್ಲರೂ ತೇಜಸ್ವಿಗಳಾಗೋಣ.
★ಬಂಗಾಳ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ – *ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ ನಿಬೋಧತ* – ಏಳಿ , ಎಚ್ಚರಗೊಳ್ಳಿ , ನಿಮ್ಮ ಗುರಿಸಾಧನೆಯಾಗುವವರೆಗೂ
ನಿಲ್ಲದಿರಿ.
★ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ – *ಆ ನೋ ಭದ್ರಾಃ ಕೃತವೋ ಯಂತು ವಿಶ್ವತಃ* – ಜಗತ್ತಿನ ಎಲ್ಲಾ ಶ್ರೇಷ್ಠ ವಿಚಾರಗಳೂ ನಮ್ಮತ್ತ ಬರಲಿ.
★ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – *ಶ್ರುತಂ ಮೇ ಗೋಪಾಯ* – ಶ್ರುತಿಗಳು ನಮ್ಮನ್ನು ರಕ್ಷಿಸಲಿ.
★ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ – *ಜ್ಞಾನಂ
ಸಮ್ಯಗ್ ವೇಕ್ಷಣಮ್* – ಜ್ಞಾನವೇ ಸರಿಯಾದ ಕಣ್ಣು.
★ಕಾಲಿಕಟ್ ವಿಶ್ವವಿದ್ಯಾಲಯ – *ನಿರ್ಮಯ ಕರ್ಮಣಾ
ಶ್ರೀಃ* – ಶ್ರಮದಿಂದ ಸಂಪತ್ತು ಸಿಗುತ್ತದೆ.
★ದೆಹಲಿ ವಿಶ್ವವಿದ್ಯಾಲಯ – *ನಿಷ್ಠಾ ಧೃತಿಃ ಸತ್ಯಮ್* –
ನಂಬಿಕೆ , ಬುದ್ಧಿ , ಸತ್ಯ
★ಕೇರಳ ವಿಶ್ವವಿದ್ಯಾಲಯ – *ಕರ್ಮಣಿ ವ್ಯಜ್ಯತೆ ಪ್ರಜ್ಞಾ* – ಕರ್ಮಗಳಿಂದ ಬುದ್ಧಿ ಹೆಚ್ಚುತ್ತದೆ.
★ರಾಜಸ್ಥಾನ ವಿಶ್ವವಿದ್ಯಾಲಯ – *ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ* – ಜಗತ್ತಿನ ಪ್ರತಿಷ್ಟಾಪನೆಯನ್ನು ಧರ್ಮವೇ ಮಾಡುತ್ತದೆ..
★ಪಶ್ಚಿಮಬಂಗಾಳ ರಾಷ್ಟ್ರೀಯ ನ್ಯಾಯ ಹಾಗೂ ವಿಜ್ಞಾನ ವಿಶ್ವವಿದ್ಯಾಲಯ – *ಯುಕ್ತಿಹೀನಃ ವಿಚಾರೇ ತು ಧರ್ಮಹೀನಃ ಪ್ರಜಾಯತೇ* – ಮನುಷ್ಯ ಯುಕ್ತಿಹೀನ ವಿಚಾರಗಳಿಂದ ಧರ್ಮಹೀನನೆನಿಸಿಕೊಳ್ಳುತ್ತಾನೆ
★ವನಸ್ಥಲೀ ವಿದ್ಯಾಪೀಠ – *ಸಾ ವಿದ್ಯಾ ಯಾ ವಿಮುಕ್ತಯೆ* – ಯಾವ ವಿದ್ಯೆ ನಮ್ಮನ್ನು ಬಂಧನದಿಂದ ವಿಮುಕ್ತಗೊಳಿಸುತ್ತೋ ಅದೇ ನಿಜವಾದ ವಿದ್ಯೆ.
★ಎನ್.ಸಿ.ಇ.ಆರ್.ಟಿ – *ವಿದ್ಯಯಾ ಅಮೃತಮಶ್ನುತೇ*
★ಕೇಂದ್ರೀಯ ವಿದ್ಯಾಲಯ – *ತತ್ ತ್ವಂ ಪೂಷನ್ ಅಪಾವೃಣು*
★ಸಿ.ಬಿ,ಎಸ್.ಇ – *ಅಸತೋ ಮಾ ಸದ್ಗಮಯ* – ಕತ್ತಲಿನಿಂದ ಬೆಳಕಿನೆಡೆಗೆ.
★ತಾಂತ್ರಿಕ ಮಹಾವಿದ್ಯಾಲಯ ತ್ರಿವೇಂಡ್ರಮ್ – *ಕರ್ಮ ಜ್ಯಾಯೋ ಹಿ ಅಕರ್ಮಣಃ* – ಕರ್ಮವನ್ನು ಬಿಟ್ಟವನು ಅಕರ್ಮಣನೆನಿಸಿಕೊಳ್ಳುತ್ತಾನೆ.
★ದೇವಿ ಅಹಲ್ಯಾ ವಿಶ್ವವಿದ್ಯಾಲಯ ಇಂದೋರ್ – *ಧಿಯೋ ಯೋನಃ ಪ್ರಚೋದಯಾತ್* –
ಸದ್ಬುದ್ಧಿ ನಮ್ಮನ್ನು ಪ್ರಚೋದಿಸಲಿ.
★ಮದನ್ ಮೋಹನ ಮಾಲವೀಯ ತಾಂತ್ರಿಕ
ಮಹಾವಿದ್ಯಾಲಯ – *ಯೋಗಃ ಕರ್ಮಸು ಕೌಶಲಮ್*
★ಭಾರತೀಯ ಪ್ರಬಂಧಕ ಮತ್ತು ಕಾರ್ಮಿಕರ ಮಹಾವಿದ್ಯಾಲಯ ಹೈದರಾಬಾದ್ – *ಸಂಗಚ್ಛಧ್ವಂ ಸಂವದಧ್ವಮ್* - ಒಟ್ಟಿಗೇ ನಡೆಯೋಣ , ಒಟ್ಟಿಗೇ ಮಾತಾಡೋಣ.
★ರಾಷ್ಟ್ರೀಯ ಕಾನೂನು ವಿದ್ಯಾಲಯ – *ಧರ್ಮೋ ರಕ್ಷತಿ ರಕ್ಷಿತಃ* – ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.
_________

ಸೋಮವಾರ, ಜನವರಿ 23, 2017

ಬೆಲ್ಲದ ಮಹತ್ವ

*ನಮ್ಮ ಹಿರಿಯರು ಊಟ ಮುಗಿಸಿ ಬೆಲ್ಲ ಬಾಯಿಗಿಡುವುದು ಸುಮ್ಮನಲ್ಲ!*

ಸಾಮಾನ್ಯವಾಗಿ ಜನರು ಊಟವಾದ ಮೇಲೆ ಬೆಲ್ಲ ತಿನ್ನುತ್ತಾರೆ. ಆದರೆ ಅದೇಕೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಚಳಿಗಾಲದಲ್ಲಿ ಬೆಲ್ಲ ತಿಂದರೆ ವಿಟಮಿನ್ ಗಳು ಮತ್ತು ಲವಣಗಳು ಹೊಟ್ಟೆ ಸೇರುತ್ತವೆ. ಜೊತೆಯಲ್ಲಿಯೇ ನಿರೋಧಕ ಶಕ್ತಿಯನ್ನು ಸೃಷ್ಟಿಸಿ ದೇಹವನ್ನು ಬೆಚ್ಚಗಿಡುತ್ತದೆ. ಶೀತ ಮತ್ತು ಕೆಮ್ಮು ಇದ್ದರೆ ನಿವಾರಿಸುವುದಲ್ಲದೆ, ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದೇ ಕಾರಣದಿಂದ ಈ ಸಹಜ ಸಿಹಿ ಭಾರತದಲ್ಲಿ ಅತೀ ಜನಪ್ರಿಯ. ಇಲ್ಲಿ ಬೆಲ್ಲದ 15 ಲಾಭಗಳನ್ನು ವಿವರಿಸಿದ್ದೇವೆ.

*1. ಮಲಬದ್ಧತೆಯಿಂದ ರಕ್ಷಣೆ:* ಬೆಲ್ಲ ದೇಹದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಎನ್‌ಜೈಮ್‌ಗಳನ್ನು ಸಕ್ರಿಯಗೊಳಿಸುತ್ತದೆ. ಜಠರದ ಚಲನೆಗೆ ನೆರವಾಗಿ ಮಲಬದ್ಧತೆಯಿಂದ ರಕ್ಷಿಸುತ್ತದೆ.

*2. ಮೂತ್ರಪಿಂಡಕ್ಕೆ ನೆರವು:* ಬೆಲ್ಲವು ಮೂತ್ರಪಿಂಡದಲ್ಲಿರುವ ವಿಷಕಾರಿ ರಾಸಾಯನಿಕಗಳನ್ನು ಹೊರ ಹಾಕಲು ನೆರವಾಗುತ್ತದೆ. ದೇಹದಿಂದ ಪರಿಣಾಮಕಾರಿಯಾಗಿ ವಿಷನಿವಾರಿಸಬೇಕೆಂದಲ್ಲಿ ಬೆಲ್ಲ ತಿನ್ನಿ.

*3. ಜ್ವರದ ಚಿಹ್ನೆಗಳಿಗೆ ಚಿಕಿತ್ಸೆ:* ಶೀತ ಮತ್ತು ಕಫ ಇದ್ದಾಗ ಬೆಲ್ಲ ತಿನ್ನಬೇಕು. ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ ಅಥವಾ ಚಹಾಗೆ ಸಕ್ಕರೆ ಬದಲು ಬೆಲ್ಲ ಹಾಕಬಹುದು.

*4. ರಕ್ತ ಶುದ್ಧೀಕರಣ:* ಬೆಲ್ಲದ ಅತೀ ಪ್ರಸಿದ್ಧ ಲಾಭವೆಂದರೆ ರಕ್ತ ಶುದ್ಧೀಕರಣ. ನಿತ್ಯವೂ ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತ ಶುದ್ಧವಾಗಿ ದೇಹವನ್ನು ಆರೋಗ್ಯವಾಗಿಡುತ್ತದೆ.

*5. ನಿರೋಧಕ ಶಕ್ತಿಗೆ ಒತ್ತು:* ಬೆಲ್ಲದಲ್ಲಿ ಹಲವು ಆಂಟಿ ಆಕ್ಸಿಡಂಟ್‌ಗಳು ಮತ್ತು ಲವಣಗಳಾದ ಸತು ಮತ್ತು ಸೆಲೆನಿಯಂ ಇವೆ. ಇವು ಸ್ವತಂತ್ರ ಕಣಗಳಿಗೆ ಹಾನಿಯಾಗದಂತೆ ನೆರವಾಗುತ್ತದೆ. ಸೋಂಕುಗಳ ವಿರುದ್ಧವೂ ನೆರವಾಗುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಏರಿಸಲೂ ಬೆಲ್ಲ ನೆರವಾಗುತ್ತದೆ.

*6. ದೇಹ ಸ್ವಚ್ಛಗೊಳಿಸುವುದು:* ಬೆಲ್ಲ ಒಂದು ಅತೀ ಸಹಜವಾದ ದೇಹ ಸ್ವಚ್ಛಗೊಳಿಸುವ ಸಾಧನ. ಹೀಗಾಗಿ ಬೆಲ್ಲ ಸೇವಿಸುವುದು ದೇಹದಿಂದ ಅನಗತ್ಯ ಕಣಗಳನ್ನು ನಿವಾರಿಸುತ್ತದೆ. ಶ್ವಾಸಕೋಶ, ಶ್ವಾಸನಾಳ, ಕರುಳು, ಹೊಟ್ಟೆ ಮತ್ತು ಅನ್ನನಾಳವನ್ನು ಸ್ವಚ್ಛಗೊಳಿಸುತ್ತದೆ. ಅತೀ ಮಾಲಿನ್ಯವಿರುವ ಜಾಗದಲ್ಲಿ ಕೆಲಸ ಮಾಡುವವರು ಬೆಲ್ಲ ತಿನ್ನುವುದು ಉತ್ತಮ.

*7. ಋತುಸ್ರಾವದ ನೋವು:* ಬೆಲ್ಲ ತಿನ್ನುವುದರಿಂದ ಹಲವು ಪೌಷ್ಠಿಕಾಂಶಗಳನ್ನು ದೇಹಕ್ಕೆ ನೀಡುವ ಕಾರಣ ಋತುಸ್ರಾವದ ನೋವಿಗೆ ಇದು ಉಪಶಮನ. ಋತುಸ್ರಾವದ ಸಮಯದಲ್ಲಿ ಮನೋಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದ್ದಲ್ಲಿ ಬೆಲ್ಲ ತಿನ್ನಿ. ಇದು ಪಿಎಂಎಸ್ ಚಿಹ್ನೆಗಳ ಜೊತೆಗೆ ಹೋರಾಡಿ ಎಂಡೋರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಎಂಡೋರ್ಫಿನ್‌ಗಳು ದೇಹಕ್ಕೆ ಆರಾಮ ಕೊಡುತ್ತದೆ.

*8. ಅನೀಮಿಯದಿಂದ ರಕ್ಷಣೆ:* ಬೆಲ್ಲದಲ್ಲಿ ಕಬ್ಬಿಣ ಮತ್ತು ಫೊಲೇಟ್ ಇರುವ ಕಾರಣ ರಕ್ತದ ಕೋಶಗಳ ಪ್ರಮಾಣವನ್ನು ಸಾಮಾನ್ಯ ಸ್ಥಿತಿಯಲ್ಲಿ ಇಡುತ್ತದೆ. ಗರ್ಭಿಣಿ ಮಹಿಳೆಯರಿಗೆ ಉತ್ತಮ.

*9. ಕರುಳಿನ ಆರೋಗ್ಯ:* ಬೆಲ್ಲದಲ್ಲಿ ಮೆಗ್ನೇಶಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ. 10 ಗ್ರಾಂ ಬೆಲ್ಲದಲ್ಲಿ 16 ಮಿಲಿಗ್ರಾಂ ಮೆಗ್ನೇಶಿಯಂ ಇರುತ್ತದೆ.

*10. ಹೊಟ್ಟೆಗೆ ತಂಪು :* ಬೆಲ್ಲ ಸಾಮಾನ್ಯ ದೇಹದ ಉಷ್ಣತೆ ಕಾಪಿಡಲು ನೆರವಾಗುತ್ತದೆ. ಬೆಲ್ಲದ ತಂಪು ನೀರು ಕುಡಿಯುವುದು ಬೇಸಿಗೆಗೆ ಉತ್ತಮ.

*11. ರಕ್ತದೊತ್ತಡ ನಿಯಂತ್ರಣ:* ಬೆಲ್ಲದಲ್ಲಿ ಪೊಟಾಶಿಯಂ ಮತ್ತು ಸೋಡಿಯಂ ಇರುವ ಕಾರಣ ದೇಹದಲ್ಲಿ ಆಮ್ಲೀಯ ತತ್ವಗಳನ್ನು ನಿಭಾಯಿಸುತ್ತದೆ. ಹೀಗಾಗಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

*12. ಶ್ವಾಸಕೋಶದ ಸಮಸ್ಯೆ:* ಬೆಲ್ಲವನ್ನು ನಿತ್ಯವೂ ಸೇವಿಸುವುದರಿಂದ ಆಸ್ತಮಾ, ಬ್ರೋನ್ಷಿಟಿಸ್ ಸಮಸ್ಯೆ ನಿವಾರಣೆಯಾಗಲಿದೆ. ಎಳ್ಳು ಬೆರೆಸಿ ಜೊತೆಗೆ ಸೇವಿಸಿದರೆ ಶ್ವಾಸಕೋಶಕ್ಕೆ ಉತ್ತಮ.

*13. ಸಂಧಿ ನೋವು:* ನಿಮಗೆ ಸಂಧಿ ನೋವಿದ್ದರೆ ಬೆಲ್ಲ ಉತ್ತಮ ನೋವು ನಿವಾರಕ. ಶುಂಠಿ ಜೊತೆ ಸೇವಿಸಿ ಬೆಲ್ಲ ತಿನ್ನಬಹುದು. ಮೂಳೆಗಳಿಗೂ ಇದು ಉತ್ತಮ.

*14. ತೂಕ ನಷ್ಟ:* ತೂಕ ಇಳಿಸಲು ಬೆಲ್ಲ ಉತ್ತಮ ಹಾದಿ. ಪೊಟಾಶಿಯಂ ಹೆಚ್ಚಾಗಿರುವ ಕಾರಣ ಎಲೆಕ್ಟ್ರೊಲೈಟ್ ಗಳನ್ನು ಸಮತೋಲನ ಮಾಡಿ ಚಯಾಪಚಯ ಚೆನ್ನಾಗಿರಲು ಬೆಲ್ಲ ನೆರವಾಗುತ್ತದೆ. ಹೀಗಾಗಿ ತೂಕ ಇಳಿಸುವಲ್ಲಿ ಉತ್ತಮ.

*15. ಶಕ್ತಿಯ ಮೂಲ:* ಸಕ್ಕರೆ ಕಾರ್ಬೋಹೈಡ್ರೇಟ್ ದೇಹಕ್ಕೆ ಕೊಟ್ಟರೆ, ಬೆಲ್ಲ ದೇಹಕ್ಕೆ ಧೀರ್ಘ ಕಾಲದ ಶಕ್ತಿ ಕೊಡುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಸುವುದಿಲ್ಲ. ಸುಸ್ತು ಮತ್ತು ನಿಶ್ಶಕ್ತಿ ಇರುವವರಿಗೂ ಉತ್ತಮ.

#####################
*ಸಂಗ್ರಹ