ಗರೀಬಿ ಹಟಾವೋ ಎಂದು ಹೇಳಿ - ಮಾಡಿದ್ದು ಬಡವರ ಸೃಷ್ಟಿ
ಭಾರತದ ರಾಜಕಾರಣದಲ್ಲಿ ದೊಡ್ಡದಾಗಿ ಕೇಳಿ ಬರುತ್ತಿದ್ದುದು 'ಬಡವರು` ಎಂಬ ಪ್ರಬಲ ವಿಚಾರ. ಯಾವುದೇ ಒಂದು ಯೋಚನೆ ಯೋಚನೆ ರಾಜಕೀಯ ಪಕ್ಷಗಳಲ್ಲಿನಡೆಯುತ್ತಿದ್ದರೆ ಅದರ ಮೂಲದಲ್ಲಿ 'ಬಡವ` ಎಂಬುದೆ ಆಗಿರುತ್ತದೆ,. ಚುನಾವಣೆಗಳು ಬಂದಾಗ ಈ ಚಟುವಟಿಕೆಗಳಿಗೆ ಚುರುಕು ಬರುತ್ತದೆ. ದೇಶಕ್ಕೆ ಸ್ವಾತಂತ್ರ ಬಂದು ಅರವತ್ತೇಳು ವರ್ಷ ಕಳೆದಿದೆ. ಆದರೆ ದೇಶ ಇನ್ನೂ ಹೇಳುತ್ತಿದೆ ನಮ್ಮದ ಬಡರಾಷ್ಟ್ರ ಎಂದು. ಆದರೆ ನಮ್ಮವರ ಹಣ ಸ್ವಿಸ್ ಬ್ಯಾಂಕ್ ಗಳಲ್ಲಿ ಇರುವ ಒಂದು ಅಂದಾಜು ೭೦,೦೦,೦೦೦ ಕೋಟಿ. ಹಾಗೆಯೇ ೩,೬೫೨ಕೋಟಿ ವಾರಿಸುದಾರರಿಲ್ಲದೆ ಬಿದ್ದಿರುವ ಹಣ ಇದೆ. ಒಂದು ಕಡೆಯಲ್ಲಿ ಊಟಕ್ಕೆ, ಜೀವನಕ್ಕೆ ಹೋರಾಟ ಮಾಡಬೇಕಾದ ಪರಿಸ್ತಿತಿಯಲ್ಲಿ ಬದುಕುತ್ತಿರುವ ಜನ. ಇನ್ನೊಂದು ಕಡೆಯಲ್ಲಿ ಹಣವನ್ನು ಗೋಣಿ ಚೀಲಗಳಲ್ಲಿ ತುಂಬಿ ಗೋಡನ್ ಗಳಲ್ಲಿ ಇರಿಸಿಕೊಂಡಿರುವ ನಮ್ಮ ಜನ. ಹಣಚಲಾವಣೆಯಲ್ಲಿದ್ದರೆ ಮಾತ್ರ ಬೆಲೆ. ಇಲ್ಲದಿದ್ದರೆ ಅದು ಕೇವಲ ಕಾಗದ ಚೂರು.
ಒಂದು ಕಡೆಯಿಂದ ಭಾರತದ ಜನ ಜೀವನಕ್ಕೆ ಹರಸಾಹಸ ಪಡುವ ಪರಿಸ್ಥಿತಿಯಲ್ಲಿರುವಂತಹ ಪರಿಸ್ತಿತಿ ಇದ್ದರೆ . ಇನ್ನು ಕೆಲವರು ಭಾರತದ ಆರ್ಥಿಕ ಸಂಪತ್ತನ್ನು ಕೊಳ್ಳೆ ಹೊಡೆದು ಅಲ್ಲಿ ಇಲ್ಲಿ ಶೇಖರಿಸಿ ಇಟ್ಟಿರುವುದು ನೋಡಿದರೆ ನಮ್ಮ ದೇಶದ ಆಡಳಿತಾತ್ಮಕ ವ್ಯವಸ್ಥೆ ಹೇಗಿತ್ತು ಎಂಬುದಕ್ಕೆ ಸಾಕ್ಷಿ. ಸರಕಾರಿ ನೌಕರರಿಗೆ, ಬ್ಯಾಂಕ್ ಗಳಲ್ಲಿ ಇರುವವರಿಗೆ, ಐಟಿ ೦- ಬಿಟಿ ಕಂಪೆನಿಗಳಲ್ಲಿ ದುಡಿಯುತ್ತಿರುವವರಿಗೆ ಯಾವುದೇ ತೊಂದರೆ ಇಲ್ಲ. ಅವರು ಜೀವನ ಸಾಗಿಸುವದರೊಂದಿಗೆ ತಮ್ಮದೇ ಆದ ಸ್ವಂತ ಮನೆ ಕಾರು ಈ ಮೊದಲಾದ ಸವಲತ್ತುಗಳನ್ನು ಹೊಂದಿಕೊಳ್ಳಲು ಬೇಕಾದ ಆದಾಯವಿದೆ. ಆದರೆ ಕಷ್ಟ ಏನೆಂದರೆ ಖಾಸಗೀ ಸಂಸ್ಥೆಗಳಲ್ಲಿ ದುಡಿಯುವ ಗಾರ್ಮೆಂಟ್ ಗಳಲ್ಲಿ ನೌಕರಿ ಮಾಡುವ ಮುದ್ರಣಾಲಯಗಳಲ್ಲಿ ದುಡಿಯುವ, ಗ್ಯಾರೇಜುಗಳಲ್ಲಿ, ಈ ಮೊದಲಾದ ಅಸಂಘಟಿತ ಕಾರ್ಮಿಕರ ಪರಿಸ್ಥಿತಿಯೂ ಯಾವ ರೀತಿಯಲ್ಲಿಯೂ ಚೆನ್ನಾಗಿಲ್ಲ. ಅದರಲ್ಲೂ ಕಟ್ಟಡ ಕೂಲಿ ಕಾರ್ಮಿರು ''ಇಷ್ಟು ಕೊಟ್ಟರೆ ಬರುತ್ತೇನೆ ಇಲ್ಲದಿದ್ದರೆ ಇಲ್ಲ'' ಎಂಬ ನೀತಿಯಿಂದಾಗಿ ಆರ್ಥಿಕವಾಗಿ ದುರ್ಬಲರೂ ಅಲ್ಲ - ಸಬಲರೂ ಅಲ್ಲ ಎಂದು ಹೇಳಬಹುದಾದರೂ ಅವರ ಜೀವನದಲ್ಲಿ ಒಂದು ನಿಗದಿತ ವಯಸ್ಸಿನ ನಂತರ ಅವರ ಸ್ತಿತಿಯೂ ಅತ್ಯಂತ ಹೀನಾಯವಾಗುವ ಪರಿಸ್ಥಿತಿ ಇದೆ.
ಅಂದರೆ ನಾವು ಹೇಳಿರುವುದು ಸಮತಾ ವಾದ - ಸಮಾಜ ವಾದ. ಆದರೆ ಆಗಿರುವುದು ಅಸಮಾನತೆಯ ಅಂತರ ನಂಬಲಿಕ್ಕೆ ಸಾಧ್ಯವಿಲ್ಲದಷ್ಟೂ ಹೆಚ್ಛಾಗಿದೆ. ಲೋಕಾಯುಕ್ತ ದಾಳಿಗೆ ಒಳಗಾಗಿ ಅನಧಿಕೃತ ಕೋಟ್ಯಾಂತರ ಹಣ ಸಂಗ್ರಹಿಸಿರುವವರನ್ನು ಹಿಡಿದು ಹಾಕಿರುವುದೂ ಕೂಡಾ 'ನಾನು' ಬದುಕ ಬೇಕು. ನಾನು ಹಣ ಸಂಪಾದಿಸಬೇಕು. ನಾನು ಸುಖವಾಗಿರಬೇಕು ಎಂಬ ಭ್ರಮೆಯಲ್ಲಿ ದೇಶವನ್ನು ಕೊಳ್ಳೆ ಹೊಡೆದಿರುವ ಅರ್ಥವೇ ಬಡತನವನ್ನು ಹಂಚಿರುವುದು ಅಥವಾ ಬಡವರನ್ನು ಸೃಷ್ಟಿಸಿರುವುದು. ಈ ಧನಾಧಿಪತಿಗಳ ಕೊಡುಗೆಯೇ?
ನಮ್ಮಲ್ಲಿ ಬಡವ ಎಂದರೆ ಯಾರು? ಎಷ್ಟು ಹಣ ಇದ್ದರೆ ಅವನು ಶ್ರೀಮಂತ ? ಎಂದು ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಮನುಷ್ಯನಿಗೆ ಎಲ್ಲಿಯ ವರೆಗೆ ತೃಪ್ತಿ ಇರುವುದಿಲ್ಲವೋ ಅಲ್ಲಿಯ ವರೆಗೆ ಅವನಿಗೆ ಹಣ ಸಂಗ್ರಹಿಸುವ ಹುಚ್ಚು ಇರುತ್ತದೆ ಮತ್ತು ಅಲ್ಲಿಯ ವರೆಗೆ ಅವನು ಬಡವನೇ?
ಈ ಎಲ್ಲಾ ಆಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸುವುದಾದರೆ. ನಾವು ಪಾಲಿಸಿಕೊಂಡು ಬಂದಿರುವ ಆರ್ಥಿಕ ನೀತಿಯಿಂದಾಗಿಯೆ ದೇಶದಲ್ಲಿ ಬಡವರ ಸರಕಾರ ಎಂದು ಹೇಳಿ ಬಡವರನ್ನೇ ಸೃಷ್ಟಿಸಿದ ಮಹಾನ್ ರಾಜಕೀಯ ನಮ್ಮದು. ದುಡಿಯುವ ದುಡಿಯತ್ತಲೇ ಇರುತ್ತಾನೆ ಅದೂ ಅವನ ಉಸಿರಿರುವ ವರೆಗೆ - "ಹಿಂದೂ ಫಿಲೋಸಫಿಯ ಪ್ರಕಾರ ಅದು ಅವನ ಕರ್ಮ" ಎಂದು ಹೇಳುವುದಾದರೆ. ನಮ್ಮನ್ನಲ್ಲಾ ನಿಯಂತ್ರಿಸುವ ಸರಕಾರ ಯಾಕೆ? ಸಂವಿದಾನ ಏಕೆ? ನಾನು ಸಂಪಾದಿಸುತ್ತೇನೆ ಅದು ನನ್ನಿಂದ ಸಾಧ್ಯ ... ನಿನ್ನಿಂದ ಸಾಧ್ಯವಾದರೆ ನೀನೂ ಸಂಪಾದಿಸು ಎಂದು ವಾದವನ್ನು ಆವಾಗಾವಾಗ ನಾವು ಸಮಾಜದಲ್ಲಿ ಕೇಳುತ್ತೇವೆ. ಆದರೆ ಸಂಪಾದನೆ ಎಂಬುದು ಪ್ರಾಮಾಣಿಕ ವಾಗಿರಬೇಕು. ಇಲ್ಲವಾದರೆ ಅದು ಲೂಟಿ, ಕೊಳ್ಳೆ ಹೊಡೆದಂತೆ...
ಈಗಿನ ಮೋದಿ ಸರಕಾರ ಹೇಳಿಕೊಳ್ಳುವಂತೆ - ನಾವು ಗಣಿ ಹರಾಜಿನಲ್ಲಿ ಮತ್ತು ಜಿ ತರಂಗ ಹರಾಜಿನಲ್ಲಿ ಖಜಾನೆ ತುಂಬಿಸಿದ್ದೇವೆ... ಎಂಬ ಸತ್ಯವನ್ನು ಮುಂದಿರುವಾಗ ಹಿಂದಿನ ಕಾಂಗ್ರೆಸ್ ಸರಕಾರ ಎಡವಿರುವುದು ಮತ್ತು ಆವರ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸುಳ್ಳೇನಲ್ಲ. ಈ ಹಗರಣದಲ್ಲಿ ಅಲ್ಲಿ ಇಲ್ಲಿ ಹಸ್ತಾಂತರ ಗೊಂಡ ಹಣವೆಲ್ಲವೂ ಏನಾಯಿತು? ಅಲ್ಲದೆ ಬಡತನ ಸೃಷ್ಟಿಗೆ ನೀಡಿದ ಕೊಡುಗೆಯಲ್ಲವೇ?
ಇದೆಲ್ಲಾ ಇಲ್ಲಿಯವರೆಗೆ ನಡೆದು ಬಂದಿರುವುದು. ಆದರೆ ಇನ್ನು ಮುಂದಾದರೂ ಇದನ್ನು ಸರಿಮಾಡುವುದು ಸಾಧ್ಯವಿಲ್ಲ ಎಂದೇನಲ್ಲ. ಭಾರತದ ಪ್ರತಿಯೊಬ್ಬ ಪ್ರಜೆಯನ್ನೂ ಆಧಾಯ ತೆರಿಗೆ ವ್ಯಾಪತಿಗೆ ತರಲೇಬೇಕು. ಅವನ ಪ್ರತಿಯೊಂದು ವ್ಯವಹಾರ, ಬ್ಯಾಂಕ್ ಖಾತೆಯಿಂದಲೇ ನಡೆಯಲೇ ಬೇಕು ಅದೆಲ್ಲವೂ ಸ್ವಯಂಚಾಲಿತ ತತ್ರಾಂಶಗಳನ್ನು ರಚಿಸಿ ಅವುಗಳ ಮೂಲಕ ಪ್ರತಿಯೊಬ್ಬನ ಆದಾಯ ನಿಗದಿಗೊಳಿಸುವುದು ಅತೀ ಮುಖ್ಯ. ಈ ರೀತಿಯಾಗಿ ನಡೆಯದ ಯಾವುದೇ ವ್ಯವಹಾರವು ಅಥವಾ ಅವನು ಸಂಗ್ರಹಿಸದ ಸ್ಥಿರ ಚರ ಸೊತ್ತುಗಳು ಒಂದು ನಿಗದಿತ ಪ್ರಮಾಣದ ನಂತರ ಅವನದೇ ಅಲ್ಲ ಎನ್ನುವ ರೀತಿಯಲ್ಲಿ ಕಾನೂನುಗಳನ್ನು ರಚಿಸುವುದು ಅತಿ ಅಗತ್ಯ. ಎಲ್ಲದಕ್ಕಿಂತಲೂ ಅಗತ್ಯವಾಗಿ ಆಗಬೇಕಾದುದು ೬೦ ವರ್ಷಗಳಿಗೂ ಹೆಚ್ಚು ವರ್ಷ ದುಡಿದು ಹೆಂಡತಿ ಮಕ್ಕಳ ವಿದ್ಯಾಭ್ಯಾಸ ಮದುವೆ ಎಂದೆಲ್ಲಾ ಖರ್ಚು ಮಾಡಿರುವ ಪರಿಸ್ಥಿತಿಯಲ್ಲಿ ಇನ್ನೂ ದುಡಿದು ತನ್ನನ್ನು ತಾನು ಸಾಕಿ ಕೊಳ್ಳ ಬೇಕಾದ ಪರಿಸ್ಥಿತಿಯಲ್ಲಿ ಇರುವ ಎಷ್ಟೂ ಬಡವರಿಗೆ ಸರಕಾರ ತಿಂಗಳಿಗೆ ಜೀವನಕ್ಕೆ ಸಾಕಾಗುವಷ್ಟು ಧನವನ್ನು ಪಿಂಚಣಿ ರೂಪದಲ್ಲಿ ಕೊಡುವಂತಾಗ ಬೇಕು. ಅದೂ ಅವನ ಸಂಪೂರ್ಣ ಆದಾಯವನ್ನು ತೂಗಿ ಅಳೆದು. ಅವನು ನಿಜವಾಗಿಯೂ ಜೀವನದಲ್ಲಿ ದುಃಸ್ತಿತಿಯಲ್ಲಿ ಇದ್ದಾನೆ ಎಂದಾದರೆ ಖಂಡಿತಾ ಆಗಲೇ ಬೇಕಾದ ಕೆಲಸ ಎಂಬುದು ನಮ್ಮ ಸರಕಾರಗಳು ಮನಗಾಣಲೇ ಬೇಕು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ