ಭಾನುವಾರ, ಜನವರಿ 29, 2017

"ಗೋ - ವೃಕ್ಷ" ಮಾನವನ ಉಸಿರು

"ಗೋ ಸಂಪತ್ತು"  ಎಂಬು ಶಬ್ದದ  ಅರ್ಥವೈಶಾಲ್ಯತೆಯು ಅರಿವಾಗ ಬೇಕಾದರೆ ಬಹಳ ಕಷ್ಟ. ನಮ್ಮ ಹಿರಿಯರ ಕಾಲದಲ್ಲಿ ಎರಡು ದನ ಸಾಕಿ ಆ ಮೂಲಕ ಸುಖ ಸಂತೋಷದಿಂದ  ಜೀವನ ಮಾಡುತ್ತಿದ್ದರು. ಮಕ್ಕಳು  ಅವರ ವಿದ್ಯಾಭ್ಯಾಸ ಮದುವೆ ಆಭರಣ ಇವೆಲ್ಲವೂ ದನ ಸಾಕುವುದರ ಮೂಲಕ ಸಾಧ್ಯವಾಗುತ್ತಿತ್ತು. ಗೋಗಳು ಮನೆಯವರಿಗೆ ಮಕ್ಕಳು ಇದ್ದಹಾಗೆ.  ಈ ಸತ್ಯ ಈಗಿನವರಿಗೆ ಗೊತ್ತಿಲ್ಲ. ಈಗಿನವರಿಗೆ ದನದಿಂದ ಹಾಲು ಸಿಗುತ್ತದೆ ಎಂಬುದು ಮಾತ್ರ ತಿಳಿದಿದೆ.

'ಗೋ' ಭೂಮಿ ಮತ್ತು ಮನುಷ್ಯನಿಗೆ  ಉಸಿರು ಇದ್ದ ಹಾಗೆ. ಈ ಬಗ್ಗೆ  ಒಂದು ಚಿಂತನಾತ್ಮಕ ಆಲೆಯ ಅವಶ್ಯಕತೆ ಇತ್ತು. ಆ ಕೆಲಸವನ್ನು  ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಯವರು ಬಹಳ ಆಸಕ್ತಿ ಯಿಂದ ಮಾಡಿರುವರು. ಅವರದು ಅದ್ಭುತ ಸಾಧನೆಯಿಂದ  ಸಮಾಜದಲ್ಲಿ ಒಂದು  ಸಂಚಲನ ಮೂಡಿರುವುದು ಅವರ ಸಾಧನೆಯ ಸಾರ್ಥಕತೆ. ಇದು ಹೀಗೇ ಮುಂದುವರಿದು ನಿರಂತರವಾಗಿ ಸಮಾಜದಲ್ಲಿ  ಪ್ರಜ್ವಲಿಸುವ ಅಗತ್ಯವಿದೆ. ಹಾಗಾದರೆ ಮಾತ್ರ ಈ ಸಾಧನೆ ಮುಂದಿನ ತಲೆಮಾರಿಗೆ ಆರ್ಥಿಕ, ಸಾಮಾಜಿಕ  ಮತ್ತು  ಸಾಂಸ್ಕೃತಿಕ  ಹಾಗೂ ಆರೋಗ್ಯ ಬದುಕಿನ ಬುನಾದಿ ಆಗಿರುವುದು ಸತ್ಯ. ಈ ದೃಷ್ಟಿಯಿಂದ ಇದೊಂದು  ಇತಿಹಾಸದಲ್ಲಿ  ಸೇರಬಹುದಾದ ಅದ್ಭುತ ಸೇವೆ.

ಇದೇ ರೀತಿ ಆಗ ಬೇಕಾದ  ಇನ್ನೊಂದು ಕಾರ್ಯ ಇದೆ. ವೃಕ್ಷ ಸಂತತಿ ಬೆಳಸ ಬೇಕಾಗಿದೆ. ಭೂಮಿ ಮತ್ತು ಜೀವರಾಶಿ ಉಳಿಯ ಬೇಕಾದರೆ ಮತ್ತು ಮಾನವ ಸುಖ ಸಂಪತ್ತು ಆರೋಗ್ಯದಿಂದ ಬದುಕ ಬೇಕಾದರೆ ಇದು ಆಗಲೇ ಬೇಕು. ಸಾಮಾನ್ಯವಾಗಿ ಕಾಡು ಅಂದರೆ ಮರಗಿಡಗಳ  ಸಮೂಹ ಕಲ್ಪಿಸುವ ನಮಗೆ ಅದರ ಮಹತ್ವ ಗೂತ್ತಿಲ್ಲ. ಕಾಡು - ಅರಣ್ಯ ಮಾನವನ ಬದುಕಿನಲ್ಲಿ ಹಾಸು ಹೂಕ್ಕಾಗಿ ಬೆಸೆದು ಕೂಂಡಿದೆ. ನಮ್ಮಲ್ಲಿ  ಇರುವ ಖಾಲಿ ಇರುವ ಉಪಯೋಗಿಸದೇ ಇರುವ ಜಾಗಗಳಲ್ಲಿ ಕಾಡು ಬೆಳೆಸಲೇ ಬೇಕು. ಈ ಕ್ರಿಯೆಯೂ ನಮಗೆ ತಪಸ್ಸಾಗ ಬೇಕು. ಕಾಡುತ್ಪತ್ತಿಯಿಂದ ಆರ್ಥಿಕ ಸಮೃದ್ಧಿ ಹೂಂದುವುದು ಸಾಧ್ಯ.  ಮಾನವಪ ಬದುಕಿಗೆ ಪೂರಕವಾದ ಸಸ್ಯ ಸಂಪತ್ತುಗಳು  ಹಾಗೂ ನಶಿಸಿ ಹೋಗುತ್ತಿರುವ ( ಹೊನ್ನೆ  ರೆಂಜೆ,  ಹೆಬ್ಬಲಸು, ಇತ್ಯಾದಿ ) ಗಿಡ ಮರಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿಯೂ ಈ ಮೂಲಕ ಸಾಕಾರಗೊಳಿಸುವ ಅಗತ್ಯವಿದೆ.  ಶ್ರೀ  ರಾಘವೇಶ್ವರಭಾರತೀ ಸ್ವಾಮೀಜಿಯವರು  ಮಾಡಿದ ಸಾಧನೆಯ  ಮಾದರಿಯಲ್ಲೇ  ಆದರೆ  ಖಂಡಿತ ಸಾಧ್ಯವಿದೆ. ಸಮಾಜ ಮತ್ತು ಶೃದ್ಧಾ ಕೇಂದ್ರ ಗಳು ಈ ಬಗ್ಗೆ ನಿಸ್ವಾರ್ಥ ಸೇವೆಗೆ ಮುಂದಾಗಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ