ಬುಧವಾರ, ಜೂನ್ 21, 2023

|| ದರ್ಭೆಯ ಬಗ್ಗೆ ಮಾಹಿತಿ ॥

॥ ದರ್ಭೆಯ ಬಗ್ಗೆ ಮಾಹಿತಿ ॥ ಗರುಡ ರಾಜನು ತನ್ನ ತಾಯಿಯನ್ನು ದಾಸ್ಯದಿಂದ ಮುಕ್ತ ಗೊಳಿಸುವ ಸಲುವಾಗಿ ನಾಗ ಕುಲದ ಕುದ್ರುವಿನ ಪರಿವಾರಕ್ಕೆ ಸಹಾಯ ಮಾಡಲು ದೇವಲೋಕಕ್ಕೆ ಹೋಗಿ ಅಮೃತ ಕಲಶವನ್ನು ತಂದು ನಾಗ ಮಾತೆಯಾದ ಕದ್ರುವಿನ ಕೈಗೆ ಒಪ್ಪಿಸುತ್ತಾನೆ..... ಆಗ ಆ ಕಳಶವನ್ನು ದರ್ಭೆ ಮೇಲಿಟ್ಟು ತನ್ನ ಮಕ್ಕಳನ್ನು ಕರೆತರಲು ಹೋಗುತ್ತಾಳೆ ಕದ್ರುವು. ಆಗ ಇಂದ್ರನು ಧಾವಿಸಿ ಬಂದು ಅಮೃತ ಕಲಶವನ್ನು ಅಪಹರಿಸಿ ದೇವಲೋಕಕ್ಕೆ ಒಯ್ದುನು. ಹಾಗೆ ಕಳಸವನ್ನು ಒಯ್ಯುತ್ತಿದ್ದಾಗ ಅಮೃತದ ಕೆಲವು ಬಿಂದುಗಳು ತುಳುಕಿ ದರ್ಭೆ ಹುಲ್ಲಿನ ಮೇಲೆ ಬಿದ್ದವು ನಂತರ ಬಂದ ಸರ್ಪಗಳು ದರ್ಭೆಯ ಮೇಲೆ ಬಿದ್ದಿದ್ದ ಅಮೃತ ಬಿಂದುಗಳನ್ನು ನೆಕ್ಕಲು ಹೋಗಿ ತಮ್ಮ ನಾಲಗೆಗಳನ್ನು ಸೀಳಿಕೊಂಡವು . ಈ ಕಾರಣದಿಂದ ಸರ್ಪಗಳಿಗೆ ಸೀಳಿದ ನಾಲಿಗೆಗಳಾಗಿ ದ್ವಿಜಿಹ (ಎರಡು )ಎಂಬ ಹೆಸರನ್ನು ಪಡೆದವು ಅಮೃತ ಬಿಂದುಗಳು ತುಳುಕಿ ಈ ರೀತಿ ಧರ್ಭೆಗಳ ಮೇಲೆ ಬಿದ್ದಾಗ ಅವು ಅಮೃತತ್ವವನ್ನು ಪಡೆದು ಪವಿತ್ರಿ ಎಂಬ ಹೆಸರನ್ನು ಪಡೆದು ದರ್ಭೆಗಳು ಒಂದೇ ರೀತಿಯ ಹುಲ್ಲಾಗಿದ್ದು ಅವು ಹಿಂದೂಗಳಿಗೆ ಪರಮ ಪವಿತ್ರವಾಗಿವೆ. ಇವುಗಳಲ್ಲಿ ಅನೇಕ ವಿಧಗಳಿವೆ ದರ್ಭೆ .ಕುಶ. ಕಾಶವೆಂಬ ವಿಶ್ವಾಮಿತ್ರ ದರ್ಭೆ . ಯಮವೆಂಬ ಧ್ಯಾನದ ಎಲೆ. ಭತ್ತದ ಗರಿ .ಜೊಂಡು .ಬಿಳಿ ಕಮಲ ಮುಂತಾದವುಗಳು ದೇವತಾ ಕಾರ್ಯವಿರಲಿ ಪಿತೃ ಕಾರ್ಯಗಳಲ್ಲಿ ದರ್ಭೆ ಇಲ್ಲದೆ ಮಾಡುವಂತಿಲ್ಲ ಅಲ್ಲದೆ ಈ ಸಂದರ್ಭದಲ್ಲಿ ದರ್ಭೆಯಿಂದ ಮಾಡಿದ ಪವಿತ್ರವನ್ನು ಬಲಗೈ ಉಂಗುರದ ಬೆರಳಿಗೆ ಧರಿಸಬೇಕು ಗ್ರಹಣ ಕಾಲದಲ್ಲಿ ಸಂಭವಿಸಬಹುದಾದ ದುಷ್ಟ ಪರಿಣಾಮಗಳನ್ನು ತಡೆಯಲು ದರ್ಭೆಗಳನ್ನು ನೀರು ತಿಂಡಿ ತಿನಿಸುಗಳು ಮುಂತಾದವುಗಳ ಮೇಲೆ ಹರಡುತ್ತಾರೆ ದರ್ಬೆಯ ಆಗ್ರದಲ್ಲಿ ಶಿವನು ಮಧ್ಯದಲ್ಲಿ ವಿಷ್ಣುವು ಬುಡದಲ್ಲಿ ಬ್ರಹ್ಮನು ಉಪಸ್ಥಿತರಿರುತ್ತಾರೆ ಎಂದು ನಂಬಲಾಗಿದೆ ಪೂರ್ವದಲ್ಲಿ ಮಾನವರು ಬಹುವಿಧವಾದ ದಾನಗಳನ್ನು ಮಾಡಿದರು ಆಗ ದೈತ್ಯರು ಈ ದಾನಗಳ ಫಲವನ್ನು ತಾವೇ ಪಡೆದರು ಈ ಬಗ್ಗೆ ಚಿಂತಿಸಿದ ಬ್ರಹ್ಮದೇವನು ಒಂದು ನಿಯಮವನ್ನು ಮಾಡಿದನು ಇನ್ನು ಮುಂದೆ ದೇವತಾ ಕಾರ್ಯಗಳಲ್ಲಿ ದರ್ಭೆ ಅಕ್ಷತೆ ಮತ್ತು ಜಲವನ್ನು ಉಪಯೋಗಿಸಬೇಕು ಹಾಗೆಯೆ ಪಿತೃ ಕಾರ್ಯಗಳಲ್ಲಿ ದರ್ಭೆ ಅಕ್ಷತೆ ಮತ್ತು ತಿಲಗಳನ್ನು ಬಳಸಬೇಕು ಇವುಗಳು ಯಜ್ಞಾಂಗಗಳಾಗಿ ಇರುವುದರಿಂದ ದೈತ್ಯರು ಅವುಗಳ ಹತ್ತಿರ ಬರಲಾಗುವುದಿಲ್ಲ ಈ ರೀತಿ ದೇವತಾ ಪಿತೃ ಕಾರ್ಯಗಳನ್ನು ರಕ್ಷಿಸಲು ಪರಮಾತ್ಮನು ದರ್ಬೆ ಮತ್ತು ತಿಲಗಳನ್ನು ಸೃಷ್ಟಿಸಿದನು ಧರ್ಭೆಗಳ ಸೃಷ್ಟಿಯ ಬಗ್ಗೆ ಪುರಾಣದಲ್ಲಿ ಒಂದು ಕಥೆಯಿದೆ ವಿಷ್ಣುವು ವರಾಹ ಅವತಾರ ತಾಳಿದಾಗ ಅವನು ಒಮ್ಮೆ ಭೂಮಿಯ ಮೇಲೆ ನಿಂತು ಮೈ ಕೆಡವಿದಾಗ ಅವನ ಶರೀರದ ಕೆಲವು ರೋಮಗಳು ಬಿದ್ದು ಧರ್ಭೆಗಳಾದವು ಎಂದು ಹೇಳಲಾಗಿದೆ ರೋಮಗಳು ಬಿದ್ದ ಸ್ಥಳವು ಬಹ್ಮಿಷ್ಮತಿ ( ದರ್ಭೆಗಳ ಪ್ರದೇಶ ) ಎಂದು ಖ್ಯಾತವಾಯಿತು ಅಲ್ಲದೆ ಅದು ಸ್ವಾಯಂಭುವ ಮನುವಿನ ರಾಜಧಾನಿಯಾಗಿತು, ಈಗ ದರ್ಭೆಯನ್ನು ಅನಾದಿ ಕಾಲದಿಂದಲೂ ಪೂಜಾಕೈಂಕಾರ್ಯಗಳಲ್ಲಿ ಯಾಕೆ ಉಪಯೋಗಿಸಲಾಗುತ್ತದೆ ಅನ್ನೋದನ್ನು ನೋಡೋಣ.👇 ದರ್ಭೆಯನ್ನು ವೇದಗಳ ಕಾಲದಿಂದಲೂ ದೇವರ ಆಸನ ಗ್ರಹಣಕ್ಕೆ ಮುನ್ನ ಆ ಜಾಗದಲ್ಲಿ ಇರಿಸಲಾಗುತ್ತಿತ್ತು.ಸ್ವಯಂ ಶ್ರೀ ಕೃಷ್ಣ ಪರಮಾತ್ಮನಿಂದ ಭಗವದ್ಗೀತೆಯಲ್ಲಿ ದರ್ಭೆಯನ್ನು ಧ್ಯಾನಾಸನಗಳ ಭಾಗವಾಗಿದೆ ಎಂದು ಉಪದೇಶಿಸಲಾಗಿದೆ.ಧ್ಯಾನದ ಸಮಯದಲ್ಲಿ ನಮ್ಮ ಶರೀರದಿಂದ ಮುಖ್ಯವಾಗಿ ಕಾಲು ಹಾಗೂ ಕಾಲಿನ ಬೆರಳಿನಂದ ಹೊರಹೋಗುವ ಶಕ್ತಿಯನ್ನು ತಡೆಗಟ್ಟುವುದರಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ.‍ಹೋಮ ಹವನಾದಿಗಳಲ್ಲಿ ದರ್ಭೆಯನ್ನು ಹೋಮ ಕುಂಡದ ಸುತ್ತಲೂ 4 ಬದಿಯಲ್ಲೂ ಹಾಕಲಾಗುವುದು ಇದನ್ನು ಪರಿಸ್ಥರಣ ಅನ್ನುತ್ತಾರೆ. ಅಂದರೆ ಇದು ದೇವರ ಆಸನವಾಗಿದೆ. ಹಿಂದೆ ಸಮುದ್ರ ಮಥನದ ಸಂದರ್ಭದಲ್ಲಿ ಮಹಾವಿಷ್ಣು ಮಂದರ ಪರ್ವತಕ್ಕೆ ಆಸರೆಯಾಗಲು ಕೂರ್ಮಾವತಾರ ತಾಳಿದಾಗ ಆಮೆಯ ಮೈಯ ಕೆಲವು ರೋಮಗಳು ಮಂಥನದ ಘರ್ಷಣೆಯಿಂದ ಉದುರಿ ಸಮುದ್ರದಲ್ಲಿ ಬೀಳುತ್ತವಂತೆ.ಇವುಗಳೇ ಕ್ರಮೇಣ ಕುಶ ಆಗಿ ಕರೆಯಲ್ಪಡುತ್ತವೆ. ದರ್ಭೆಯಿಂದ ಮಾಡುವ ಪವಿತ್ರವನ್ನು ಪುರುಷನು ತನ್ನ ಬಲಕೈ ಯ ಉಂಗುರದ ಬೆರಳಿಗೆ ಧರಿಸುತ್ತಾನೆ.ಅಶುಭ ಸಂದರ್ಭಗಳಾದ ಸಾವು ಮೊದಲಾದ ಸಂದರ್ಭಗಳಲ್ಲಿ ಒಂದೇ ಎಳೆಯ ದರ್ಭೆಯನ್ನೂ,ನಿತ್ಯ ಪೂಜೆ ಹಾಗೂ ಶುಭ ಸಂದರ್ಭಗಳಲ್ಲಿ ಎರಡು ಎಳೆಯ ದರ್ಭೆಯನ್ನೂ,ಅಮಾವಾಸ್ಯೆ ಹಾಗೂ ಶ್ರಾದ್ಧ ಕರ್ಮಾದಿಗಳಲ್ಲಿ 3 ಎಳೆಯ ದರ್ಭೆಯನ್ನೂ ಮತ್ತೂ ದೇವಸ್ಥಾನಗಳಲ್ಲಿ ಮಾಡಲಾಗುವ ಪೂಜೆಗಳಲ್ಲಿ 4 ಎಳೆಯ ದರ್ಭೆಯನ್ನೂ ಪವಿತ್ರವಾಗಿ ನಮ್ಮ ಬಲಗೈ ಉಂಗುರದ ಬೆರಳಲ್ಲಿ ಧರಿಸಲಾಗುತ್ತದೆ. ಮನೆಯಲ್ಲಿ ನಾವು ಮಾಡುವ ಯಾವುದೇ ಕಾರ್ಯಕ್ರಮದ ಮೊದಲಿಗೆ “ಪುಣ್ಯಾಹವಾಚನ”ಎಂಬುದಾಗಿ ಮಾಡುತ್ತಾರೆ;ಅಂದರೆ ಕಾರ್ಯಕ್ರಮ ನಡೆಯುವ ಜಾಗದ ಶುದ್ದೀಕರಣ.ಇಲ್ಲಿ ದರ್ಭೆಯ ಒಂದು ಗೊಂಚಲನ್ನು ಹಿಡಿದು ಅದರ ತುದಿಯಿಂದ ಎಲ್ಲ ಪೂಜಾ ಸಾಮಗ್ರಿಗಳ ಮೇಲೂ,ಆ ಜಾಗದ ಪ್ರತೀ ಮೂಲೆಗಳಲ್ಲೂ,ಹಾಗೂ ಅಲ್ಲಿರುವವರ ಮೇಲೂ ನೀರನ್ನು ಪ್ರೋಕ್ಷಣೆ ಮಾಡಲಾಗುತ್ತದೆ. ದರ್ಭೆಯ ತುದಿಯಲ್ಲಿ ಧ್ವನಿ ಸಂವೇದನಾ ಕಂಪನಗಳನ್ನುಂಟು ಮಾಡುವ ಶಕ್ತಿಯು ಇದೆ ಎಂದು ಹೇಳಲಾಗುತ್ತದೆ. ದರ್ಭೆಯಲ್ಲಿರುವ ಕಂಪನಾ ಶಕ್ತಿಯನ್ನು ಪಾತ್ರದಲ್ಲಿರುವ ನೀರು ಹೀರಿಕೊಳ್ಳುತ್ತದೆ.ಈ ನೀರು ಎಲ್ಲೆಲ್ಲಿ ಪ್ರೋಕ್ಷಣೆಯಾಗುತ್ತೋ ಅಲ್ಲಲ್ಲಿ ಶಕ್ತಿಯ ಸಂಚಲನ ಉಂಟಾಗುತ್ತದೆ ಎಂದು ಅದಕ್ಕಾಗಿ ಅನಾದಿ ಕಾಲದಿಂದಲೂ ನಮ್ಮ ಹಿಂದೂ ಧರ್ಮದಲ್ಲಿ ಈ ಸಂಪ್ರದಾಯವು ನಡೆದುಕೊಂಡು ಬರುತ್ತಿದೆ. ಹೀಗಾಗಿ ತುದಿಗಳಿಲ್ಲದ ದರ್ಭೆಯನ್ನು ಉಪಯೋಗಿಸುವಂತಿಲ್ಲ, ಯಾಕಂದ್ರೆ ಇದರಲ್ಲಿ ಪ್ರವಹನಾ ಶಕ್ತಿಯು ನಷ್ಟವಾಗಿರುತ್ತದೆ. ಧಾರ್ಮಿಕ ಪರಂಪರೆಯ ಪ್ರಕಾರ ದರ್ಭೆಯನ್ನು ಎಲ್ಲ ದಿನಗಳಲ್ಲೂ ಕೀಳುವಂತಿಲ್ಲ ಹಾಗೂ ತುಂಡರಿಸುವಂತಿಲ್ಲ.ಇದನ್ನು ಕೇವಲ ಹುಣ್ಣಿಮೆಯ ಮರುದಿನ ಬರುವ ಕೃಷ್ಣ ಪಕ್ಷದ ಪಾಡ್ಯದಂದು ಮಾತ್ರ ಕೀಳಲಾಗುತ್ತದೆ. ಕೆಲವೊಂದು ಸಂಶೋಧನೆ ಯಿಂದ ಈ ದರ್ಭೆಯನ್ನು ಅಂಗೈಯಲ್ಲಿಟ್ಟು ‍ಎಕ್ಸ್ ರೇ ಸಹಾಯದೊಂದಿಗೆ ಪರೀಕ್ಷಿಸಿದಾಗ ಇದು ಎಕ್ಸ್ ರೇಯ 60% ಕಿರಣವನ್ನು ಹೀರಿಕೊಳ್ಳುತ್ತದೆ ಎಂದು ತಿಳಿದುಬಂತು.ಇಂತಹ ಪ್ರಭಾವಶಾಲಿ ಎಕ್ಸ್ ರೇ ಕಿರಣಗಳನ್ನೆ ಈ ದರ್ಭೆಯು ಹೀರಿಕೊಳ್ಳುವಾಗ ಪ್ರಕೃತಿಯಲ್ಲಿನ ಕೆಟ್ಟ ನಕಾರತ್ಮಕ ವ್ಯಾಧಿಗ್ರಸ್ಥ ಕಿರಣಗಳನ್ನು ಇವು ಹೀರಲಾರವೆ? ಅನೇಕ ವರುಷಗಳಿಂದಲೂ ಮನೆಯ ಹಿರಿಯರು ಚಂದ್ರ ಹಾಗೂ ಸೂರ್ಯ ಗ್ರಹಣ ದ ಸಂದರ್ಭದಲ್ಲಿ ಗ್ರಹಣ ದಿಂದ ಬರುವ ಅಲ್ಟ್ರ ವೈಲೆಟ್ ಕಿರಣಗಳಿಂದ ನೀರು ಹಾಗೂ ಆಹಾರ ಸಾಮಾಗ್ರಿಗಳನ್ನುರಕ್ಷಿಸಲು ಇವುಗಳ ಮೇಲೆ ಈ ದರ್ಭೆಯನ್ನು ಇಡುತ್ತಿದ್ದರು.ಇಂದಿಗೂ ಈ ಪ್ರತೀತಿ ಜಾರಿಯಲ್ಲಿದೆ. ಅಯುರ್ವೇದದಲ್ಲಿ ಇದಕ್ಕೆ ತನ್ನದೇ ಆದ ಮಹತ್ವ ಇದೆ.ಅನೇಕ ಸಂದರ್ಭಗಳಲ್ಲಿ ವಿಶೇಷವಾಗಿ ಭೇದಿ,ಋತುಸ್ರಾವ ಹಾಗೂ ಮೂತ್ರ ಸಂಬಂಧಿ ದೋಷ ಮೊದಲಾದವುಗಳಲ್ಲಿ ಇವು ಚಿಕಿತ್ಸಾತ್ಮಕ ಶಕ್ತಿಯಾಗಿಯೂ ಪರಿಣಮಿಸುತ್ತದೆ. ಹಿಂದೆ ಭಗವಂತನು ದೇವತೆಗಳಿಗೆ ಹಾಗೂ ಮನುಷ್ಯರಿಗೆ ಮಾಧ್ಯಮವಾಗಿ ಯಜ್ಞವನ್ನು ಸೃಷ್ಟಿಸಿದನು. ಆದರೆ ಆ ಯಜ್ಞದ ಆಹುತಿ ದೇವತೆಗಳಿಗೆ ತಲುಪುತ್ತಿರಲಿಲ್ಲ. ಅದರಂತೆ ಮನುಷ್ಯನು ಮಾಡಿದ ಶ್ರಾದ್ಧವೂ ಪಿತೃದೇವತೆಗಳಿಗೆ ತಲುಪುತ್ತಿರಲಿಲ್ಲ. ಯಾಕೆಂದರೆ ಯಜ್ಞವನ್ನು ಹಾಗೂ ಶ್ರಾದ್ಧವನ್ನು ರಾಕ್ಷಸರು ಮುಟ್ಟಿ ಅದನ್ನು ಅಶುಚಿ ಮಾಡುತ್ತಿದ್ದರು. ಆಗ ದೇವತೆಗಳು ಮತ್ತು ಪಿತೃಗಳು ಭಗವಂತನನ್ನು ಪ್ರಾರ್ಥಿಸಲು ಭಗವಂತನು ವರಾಹ ರೂಪಿಯಾಗಿ ಬಂದು ತನ್ನ ರೋಮದಿಂದ ದರ್ಭೆಯನ್ನು ಸೃಷ್ಟಿಸಿ ಅದನ್ನು ಯಜ್ಞ ಹಾಗೂ ಶ್ರಾದ್ಧದ ರಕ್ಷಣೆಗೆ ನೀಡಿದನು. ಅಂದಿನಿಂದ ದರ್ಭೆಯ ಸ್ಪರ್ಶವಾದರೆ ದೈತ್ಯರು ಓಡಿಹೋಗುತ್ತಾರೆ. ಆದ್ದರಿಂದ ದರ್ಭೆಯಿಲ್ಲದೆ ಯಜ್ಞವನ್ನು ಹಾಗೂ ಶ್ರಾದ್ಧವನ್ನು ಮಾಡಲೇ ಬಾರದು. "ಕುಶಮೂಲೇ ಸ್ಥಿತೋ ಬ್ರಹ್ಮಾ ಕುಶಮಧ್ಯೇ ತು ಕೇಶವಃ ಕುಶಾಗ್ರೇ ಶಂಕರಂ ವಿದ್ಯಾತ್ ಸರ್ವದೇವಾಃ ಸಮಂತತಃ।। (ದೇವಲ) ದರ್ಭೆಗಳು ಏಳು ವಿಧವಾಗಿದೆ. ವಿಶ್ವಾಮಿತ್ರಾಃಕುಶಾಃಕಾಶಾಃದೂರ್ವಾ ವ್ರೀಹಯ ಏವ ಚ ಬಲ್ವಲಾಶ್ಚ ಯವಾಶ್ಚೈವ ಸಪ್ತದರ್ಭಾಃ ಪ್ರಕೀರ್ತಿತಾಃ।। ಇದರಲ್ಲಿ ರುದ್ರಸಂಬಂಧ ಹಾಗೂ ಆಭಿಚಾರ ಕೃತ್ಯದಲ್ಲಿ ಕಾಶ ಎಂಬ ದರ್ಭೆಯನ್ನು, ಶ್ರೌತ ಸ್ಮಾರ್ತ ಕರ್ಮಗಳಲ್ಲಿ ಕುಶವನ್ನೂ, ಋಷಿ ಪೂಜಾಗಳಲ್ಲಿ ದೂರ್ವಾವನ್ನೂ, ವೈಷ್ಣವ ಸಂಬಂಧಿ ಕಾರ್ಯದಲ್ಲಿ ವಿಶ್ವಾಮಿತ್ರ ದರ್ಭೆಯನ್ನು ಉಪಯೋಗಿಸಬೇಕೆಂದು ಶಾಸ್ತ್ರವು ತಿಳಿಸುತ್ತದೆ. ‌ "ಕಾಶಂ ತು ರೌದ್ರಂಮಾಖ್ಯಾತಂ ಕುಶಂ ಬ್ರಾಹ್ಮಂ ತಥಾ ಸ್ಮೃತಮ್ ದೂರ್ವಾತ್ವಾರ್ಷಂ ಸಮಾಖ್ಯಾತಂ ವಿಶ್ವಾಮಿತ್ರಂ ತು ವೈಷ್ಣವಮ್ ।। (ಹಾರೀತ) ಕುಶಂ ತು ಸರ್ವಕಾರ್ಯೇಷು ಪವಿತ್ರಂ ಸ್ಮೃತಮ್ ಎಂಬ ವಾಕ್ಯದಂತೆ ಇದು ಯಾವುದೇ ಇಲ್ಲದಿದ್ದರೆ ಕುಶ ಎಂಬ ದರ್ಭೆಯನ್ನು ಎಲ್ಲಾ ಕಾರ್ಯಗಳಲ್ಲಿಯೂ ಉಪಯೋಗಿಸಬಹುದು. ‌ ದರ್ಭೆಯನ್ನು ಯಾವಾಗ ಆಹರಣ ಮಾಡಬೇಕು ? "ಮಾಸೇ ನಭಸ್ಯಮಾವಾಸ್ಯಾ ತಸ್ಯಾಂ ದರ್ಭೋಚ್ಚಯೋ ಮತಃ ಅಯಾತಯಾಮಾಸ್ತೇ ದರ್ಭಾಃ ನಿಯೋಜ್ಯಾಃ ಸ್ಯುಃ ಪುನಃ ಪುನಃ ।।(ಹಾರೀತ) 🍁ಶ್ರಾವಣ ಮಾಸದ ಅಮಾವಾಸ್ಯೆಯಂದು ಕತ್ತರಿಸಿ ತಂದ ದರ್ಭೆಯು ಯಾತಯಾಮವಾಗದೇ ಯಾವತ್ತೂ ಕಾರ್ಯಗಳಿಗೆ ಬಳಸಬಹುದು. 🍁ಬೇರೆ ಅಮಾವಾಸ್ಯೆಯಂದು ತಂದ ದರ್ಭೆಯನ್ನು ಒಂದು ತಿಂಗಳು ಮಾತ್ರ ಬಳಸಬೇಕು. 🍁ಹುಣ್ಣಿಮೆಯಂದು ತಂದ ದರ್ಭೆಯು 15 ದಿನಗಳ ಕಾಲ ಶುದ್ಧ. 🍁ಮಹಾಲಯ ಅಮಾವಾಸ್ಯೆಯಂದು ತಂದ ದರ್ಭೆಯು 6 ತಿಂಗಳು ಶುದ್ಧ. 🍁ಭಾನುವಾರ ತಂದರೆ 1 ವಾರ. 🍁ಆಯಾಯ ದಿನ ತಂದರೆ ಆಯಾಯ ದಿನ ಮಾತ್ರ ಶುದ್ಧ. ‌ ಶ್ರಾವಣ ಅಮಾವಾಸ್ಯೆಯಂದು ಕತ್ತರಿಸಿ ತಂದ ದರ್ಭೆಯ ಜೊತೆಗೆ ಉಳಿದದ್ದನ್ನು ಸೇರಿಸಿದರೆ ಎಲ್ಲವೂ ಶುದ್ಧವಾಗಿ ಯಾವಾಗಲೂ ಬಳಸಬಹುದು. ‌ ದರ್ಭೆಯ ಬಗ್ಗೆ ಇನ್ನೂ ಕೆಲವು ಚಿಂತನೆಗಳು "ಅಗ್ರಸ್ಥೂಲಂ ಭವೇನ್ನಾರೀ ಮೂಲಸ್ಥೂಲಂ ನಪುಂಸಕಂ ಮೂಲಾದಗ್ರಸಮಂ ಪುಂಸಾಂ ದರ್ಭಾಣಾಂ ಚೈವ ಲಕ್ಷಣಮ್ ।। " ಹೀಗೆ ದರ್ಭೆಯಲ್ಲಿ ಸ್ತ್ರೀ, ಪುಂ, ನಪುಂಸಕ ಎಂದು ಮೂರು ವಿಧವಾಗಿದೆ. ಯಾವ ಯಾವ ಕಾರ್ಯಗಳಿಗೆ ಯಾವ ಯಾವ ದರ್ಭೆಯನ್ನು ಬಳಸಬೇಕು? ವಿವಾಹೇ ಚೈವ ಪುಂದರ್ಭಾಃ ಸ್ತ್ರೀದರ್ಭಾಃ ಚೈವ ಪುಂಸುವೇ ಅನ್ಯಕರ್ಮಸು ಷಂಡಾಃಸ್ಯುಃ ದರ್ಭಾಣಾಂ ಚೈವ ಲಕ್ಷಣಮ್ ।। ವಿವಾಹಾದಿ ಪುರುಷ ಸಂಸ್ಕಾರದಲ್ಲಿ ಪುಂದರ್ಭೆಯನ್ನೂ, ಪುಂಸವನಾದಿ ಸ್ತ್ರೀಸಂಸ್ಕಾರಗಳಲ್ಲಿ ಸ್ತ್ರೀದರ್ಭೆಯನ್ನೂ, ಇತರ ಕರ್ಮಗಳಿಗೆ ನಪುಂಸಕ ದರ್ಭೆಯನ್ನು ಬಳಸಬೇಕು. ಪ್ರಾದೇಶಮಾತ್ರದ ಎರಡು ದರ್ಭೆಯು ಪವಿತ್ರ ಎನಿಸಿಕೊಳ್ಳುತ್ತದೆ. (ಅನಖಚ್ಛೇದಿತ, ಸಮೌ, ಸಾಗ್ರೌ, ತುಲ್ಯೌ ಪವಿತ್ರಾರ್ಥಂ ಗೃಹೀತ್ವಾ ಎಂದು ಅಗ್ನಿಮುಖದಲ್ಲಿ ಹೇಳಿದ ಪವಿತ್ರ ಇದೇ) "ವಿಚ್ಛಿನ್ನಾಗ್ರಂ ತೃಣಂ ಪ್ರೋಕ್ತಂ ಅವಿಚ್ಛಿನ್ನಂ ಪವಿತ್ರಕಮ್ ಪ್ರಾದೇಶಮಾತ್ರಂ ದರ್ಭಾಶ್ಚ.......... ಸಂಗ್ರಹಿಸಿದ ಮಾಹಿತಿ.... ******** ದರ್ಬೆ ಹುಲ್ಲಿನ ಉಂಗುರದ ಮಹತ್ವ ಈ ಪವಿತ್ರ ಉಂಗುರ ದರಿಸುವುದು, ಯಾವುದೇ ಪೂಜಾ, ಯಜ್ಞ, ಹೋಮ, ಹವನಗಳಲ್ಲಿ ನಡೆದುಕೊಂಡು ಬಂದ ಒಂದು ಸುಂದರ ಪುರಾತನ ಸಂಪ್ರದಾಯ. ಸಾಮಾನ್ಯವಾಗಿ ಬ್ರಾಹ್ಮಣರು ಮತ್ತು ಶ್ರೀವೈಷ್ಣವರು ನಿರ್ದಿಷ್ಟವಾಗಿ ಮಂಗಳಕರವಾಗಿರಲಿ ಅಥವಾ ಅಶುಭ ಕಾರ್ಯಕ್ರಮಗಳಗಳನ್ನು ನಿರ್ವಹಿಸುವ ವ್ಯಕ್ತಿ ದರ್ಬೆ ಹುಲ್ಲನ್ನು ನಿರ್ದಿಸ್ಟ್ ವಾದ ರೀತಿಯಲ್ಲಿ ಉಂಗುರ ಮಾಡಿ ಬಲ ಕೈಯ ಉಂಗುರ ಬೆರಳಿಗೆ ಹಾಕುತ್ತಾರೆ. ನಾವು ಯಾವ ವೃತವಾಗಲಿ ಯಜ್ಞ ಯಾಗಾದಿಗಳಾಗಲಿ ಪೂಜಾದಿಗಳಾಗಲಿ ಇದನ್ನು ಆಚರಿಸುವಾಗ ಭಗವಂತನ ಶಕ್ತಿಯ ಜೊತೆಗೆ ದುಷ್ಟ ಶಕ್ತಿಯೂ ಇರುತ್ತವೆ. ಆಗ ನಮ್ಮ ಕೈಯಲ್ಲಿರುವ ದರ್ಭೆಯ ದರ್ಶನ ಮಾತ್ರದಿಂದ ದುಷ್ಟ ಶಕ್ತಿಯು ಅಲ್ಲಿಂದ ಓಡಿ ಹೋಗುತ್ತವೆ. ಇದು ಇಂದ್ರನ ವಜ್ರಾಯುಧವಿದ್ದಂತೆ. ಆದ್ದರಿಂದ ದರ್ಭೆಯನ್ನು ಬಳಸುತ್ತೇವೆ. ಈ ಧರ್ಭೆಯು ದೇವಲೋಕದಿಂದ ಯಜ್ಞ ಯಾಗಾದಿಗಳಿಗೆಂದೆ ಭೂ ಲೋಕಕ್ಕೆ ಭಗವಂತನು ಕಳಿಸಿರುತ್ತಾನೆ. ಬ್ರಹ್ಮ ದೇವನು ಸೃಷ್ಠಿಯನ್ನು ಮಾಡುವವನು, ವಿಷ್ಣುವು ಸ್ಥಿತಿಕರ್ತನು, ಶಿವನು ಲಯಕರ್ತನು. ಒಮ್ಮೆ ಶಿವನಿಗೆ ತಾನೇ ಎಲ್ಲರಿಗೂ ಮೇಲೆಂದು ಅಹಂಕಾರ ಬಂದಿತು. ಆ ಕಡೆ ಸೃಷ್ಠಿಕರ್ತ ಬ್ರಹ್ಮನಿಗೂ ತಾನೇ ಮೇಲೆಂದು ಅಹಂಕಾರ ಬಂದಾಗ ಇಬ್ಬರ ವಾದ-ವಿವಾದದಲ್ಲಿ ಶಿವನು ಬ್ರಹ್ಮನ ನಾಲ್ಕನೇ ತಲೆಯನ್ನು ತನ್ನ ಕೈಯಿಂದ ಕಿತ್ತು ತೆಗೆದಾಗ ಬ್ರಹ್ಮಹತ್ಯಾದೆ ದೋಷ ಬಂದಿತು ಹಾಗೂ ಜಗತ್ತೂ ದೋಷಯುಕ್ತವಾಯಿತು. ಯಜ್ಞ-ಯಾಗಾದಿಗಳನ್ನು ಮಾಡುವುದು ಕಠಿಣವಾಯಿತು. ಆಗ ಎಲ್ಲಾ ದೇವತೆಗಳು ಮತ್ತು ಋಷಿಮುನಿಗಳು ಸೇರಿ ಈ ಎಲ್ಲಾ ದೋಷ ನಿವಾರಣೆಗೆ ದರ್ಭೆಯನ್ನು ಭೂಲೋಕಕ್ಕೆ ತರಬೇಕಾಯಿತು ಮತ್ತು ಶಿವನು ತನ್ನ ಹೆಬ್ಬೆರಳು ಮತ್ತು ಉಂಗುರ ಬೆರಳಿನಿಂದ ಬ್ರಹ್ಮನ ಶಿರವನ್ನು ತೆಗೆದುದರಿಂದ ಶುದ್ಧಿಗಾಗಿ ಪೂಜಾ ಅಧಿಕಾರ ಪ್ರಾಪ್ತಿಗಾಗಿ ದರ್ಭೆಯ ಪವಿತ್ರ ಉಂಗುರ ಧರಿಸಬೇಕೆಂದು ನಿಯಮಿಸಲಾಯಿತು. ಇದು ದರ್ಭೆಯ ಮಹತ್ವ. ಸಾಮಾನ್ಯ ಎಲ್ಲಾ ಕಾರ್ಯಗಳಲ್ಲಿ ೨ ಅಥವಾ ೪ ದರ್ಭೆಯಿಂದ ಮಾಡಿದ ಪವಿತ್ರವನ್ನು ಯಾಗಾದಿಗಳಲ್ಲಿ ೫ ದರ್ಭೆಯಿಂದ ಮಾಡಿದ ಪವಿತ್ರವನ್ನು ಪಿತೃಕಾರ್ಯಗಳಲ್ಲಿ ೩ ದರ್ಭೆಯಿಂದ ಮಾಡಿದ ಪವಿತ್ರವನ್ನು ಧರಿಸಬೇಕು. ದರ್ಬೆ ಹುಲ್ಲು ಮೇಲ್ನೋಟಕ್ಕೆ ದರ್ಬೆ ವ್ಯರ್ಥವಾಗಿ ಬೆಳೆಯುವ ಹುಲ್ಲು . ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೆಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ದರ್ಬೆಯನ್ನು ಇಡುತ್ತಾರೆ. ಮುಂದುವರೆಯುವುದು ವಾಟ್ಸ್ಆಪ್ ಕೃಪೆ

ಶುಕ್ರವಾರ, ಫೆಬ್ರವರಿ 4, 2022

 ಅಖಿಲ ಕರ್ನಾಟಕ ಬ್ರಾಹ್ಮಣ ಯುವ ಸಂಘ ನ ಆಪ್ ಬಂದಿದೆ.

ಎಲ್ಲಾ ಸದಸ್ಯರು ತಕ್ಷಣವೇ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಸದಸ್ಯರ ಗುರುತಿನ ಚೀಟಿಯನ್ನು ಪಡೆಯಿರಿ --Powered by Kutumb App

https://kutumb.app/akhila-karnataka-brahmana-yuva-sangha?ref=HX99Q

ಮಹರ್ಷಿ ಕಣ್ವರು

 ಮಹರ್ಷಿ ಕಣ್ವರು

ಋಗ್ವೇದದ ಮಂತ್ರ ದಾಷ್ಠಾರಂ, ಯಾಜ್ಞವಲ್ಕ್ಯ ಸ್ಯಾದಿ ಶಿಷ್ಯಂ, ಜ್ಞಾನ ನಿಧಿಂ ಕಣ್ವ ಮುನಿಯಂ ತಂ ವಂದೇ ಭಕ್ತಿ ಪೂರ್ವಕಂ, ಸಮಸ್ತ ದೋಷದುರಾಯ ಮೋಕ್ಷಮಾರ್ಗೈಕ ಗುರವೇ, ವಿದ್ಯಾವಾರೀಧಿ ಕಣ್ವಾಯ ವೇದಬೋದಾಯತೇ ನಮಃ, 

ಋಗ್ವೇದಕ್ಕೆ  ಮಂತ್ರ ಕೊಟ್ಟವರು, ಯಾಜ್ಞವಲ್ಕ್ಯ ರ ಶಿಷ್ಯರು, ಜ್ಞಾನದ ನಿಧಿಯು, ಸಮಸ್ತ ದೋಷವನ್ನು ಸ್ಮರಣೆ ಮಾತ್ರದಿಂದಲೇ ಪರಿಹರಿಸುವವರು,

ವಿದ್ಯೆಯ ಸಾಗರವಾಗಿರುವವರು, ವೇದ ಭೋದಿಸಿದ ಮುನಿಗೆ ನಮ್ಮ ಭಕ್ತಿ ಪೂರ್ವಕ ನಮಸ್ಕಾರ.

 ಶ್ರೀ ಕಣ್ವರು ಘೋರಮಹರ್ಷಿ ಮತ್ತು ಕೇಶಿನಿ ದಂಪತಿಗಳ ಸುಪುತ್ರರು,

ಶ್ರೀ ಕಣ್ವರು ಶ್ರೀ ಯಾಜ್ಞವಲ್ಕ್ಯ ರ ಶಿಷ್ಯರು ಬೋಧಾಯನರ ತಂದೆಯವರು,

ಶ್ರೀ ಕಣ್ವರು ಅವರು ಶಿಷ್ಯರು ಮತ್ತು ಮಕ್ಕಳು ಸೇರಿ ಋಗ್ವೇದದ ೧೧೦೦ಕ್ಕು ಹೆಚ್ಚು ಮಂತ್ರ ದಾಷ್ಠಾರರಾದರು,

ಕಣ್ವ ಶಾಖಾಪ್ರವರ್ತಕರು,

ಕಣ್ವಾಶ್ರಮಂ, ತತೋ ಗಚ್ಚೇಚ್ಛ್ರೇಜುಷ್ಟುಂ ಲೋಕಪೂಜಿತ್, ಧರ್ಮಾರಣ್ಯಂ ಹಿ ತತ್ಪುಣ್ಯಮಾದ್ಯಂ ಚ ಭರತರ್ಷಭ, ಯತ್ರಪ್ರವಿಷ್ಟಮಾತ್ರೋ ವೈ ಸರ್ವಪಾಪೈಃ ಪ್ರಮುಚ್ಯತೇ,

ಕಣ್ವಾಶ್ರಮವು ಅನಾದಿಯಾದುದು, ಕಣ್ವ ಮಹರ್ಷಿಗಳ ಸಂಪರ್ಕದಿಂದ ಆ ಆಶ್ರಮ ವಿರುವ ಅರಣ್ಯವೆಂದೆ ಹೆಸರಾಗಿದೆ,  ಕಣ್ವ ಆಶ್ರಮ ದರ್ಶನದಿಂದಲೆ ಮಾನವನು ಸಕಲಪಾಪಗಳಿಂದ ವಿಮುಕ್ತನಾಗುತ್ತಾನೆ ಯೆಂದು ಮಹಾಭಾರತ ವರ್ಣಿಸುತ್ತದೆ.

ಕಣ್ವರ ಶ್ರಮದಲ್ಲಿ ಆಹಾರ ನಿಯಮದಿಂದ ಇದ್ಸು ಜಿತೇಂದ್ರಿಯನಾಗಿ ಪಿತೃಗಳ-ದೇವತೆಗಳ ಅರ್ಚನೆ ಮಾಡುವವರಿಗೆ ಇಷ್ಟಾರ್ಥ ಸಿದ್ದಿಸುವುದು,

ಕಣ್ವ ಆಶ್ರಯ ಸಂದರ್ಶನಮಾತ್ರತದಲ್ಲೆ ಹಲವು ಯಾಗ ಮಾಡಿದ ಫಲ ವಾಗುವುದೆಂದು ಮಹಾಭಾರತ ವನಪರ್ವದಲ್ಲಿ ಉಲ್ಲೇಖ ಇದೆ,

ಮಾಹಾತ್ಮರಾದ ಕಣ್ವರು ಯಾಜ್ಞವಲ್ಕ್ಯರ ಪ್ರಥಮ ಶಿಷ್ಯರು, ಭೋದಾಯನರ ತಂದೆಯವರೂ ಆಗಿದ್ದಾರೆ.

ವರ್ಷಗಳಕಾಲ ಅಖಂಡ ತಪಾಚರಣೆ ಮಾಡುತ್ತಿದ್ದರು,

ಒಮ್ಮೆ ಪಾಂಡವರು ಒಂದು ನೇರಳೆಹಣ್ಣನ್ನು ತಂದಾಗ ಭಗವಾನ್ ಕೃಷ್ಣನು ಇದು ಮಾಹಾಮಹಿಮರಾದ  ಮಹರ್ಷಿ ಕಣ್ವರ ಫಲ ಅವರು ಒಂದು ವರ್ಷಕ್ಕೆ ಒಂದು ಫಲಸ್ವೀಕರಿಸಿ ತಪಸ್ಸನ್ನು ಆಚಾರಿಸುವರೆಂದು ಹೇಳುತ್ತಾನೆ,

ನಮ್ಮ ದೇಶಕ್ಕೆ ಭಾರತ ಎಂದು ಹೇಸರು ಬರಲು ಕಾರಣವಾದ ಭರತ ಕಣ್ವರ ಆಶ್ರಮದಲ್ಲಿ ಜನಿಸಿದ್ದು,

ಅವರ ತಪ್ಪಸ್ಸಿನ ಪ್ರಭಾವ ಅಲ್ಲಿ ಸಮಸ್ತ ಅರಣ್ಯಕ್ಕೆ ವ್ಯಪಿಸಿತ್ತು, ಪರಸ್ಪರ ವಿರೋದ ವಿರುವ ಪ್ರಾಣಿಗಳು ಅಲ್ಲಿ ಸ್ನೇಹ ದಿಂದ ಇರುತ್ತಿದ್ದವು,

ವಸಂತ ಪಂಚಮಿಯಂದೆ ಶ್ರೀ ಯಾಜ್ಞವಲ್ಕ್ಯರು ಜನಕರಾಜರ ಆಸ್ಥಾನದಲ್ಲಿ ನಡೆದ ಪ್ರಮುಖ ಋಷಿಗಳು, ಪಂಡಿತರ ಸಬೆಯಲ್ಲಿ ಯಾಜ್ಞವಲ್ಕ್ಯ ರನ್ನು ಬ್ರಹ್ಮೃಷಿಗಳೆಂದು, ಸರ್ವಜ್ಞ ರೆಂದು ಸರ್ವಾನುಮತದಿಂದ ಘೋಷಿಸಿತು,

ಇದೆ ದಿನದಂದು ಶ್ರೀ ಮಾಧವತೀರ್ಥಶ್ರೀಪಾದಂಗಳವರು ಉಡುಪಿಯಲ್ಲಿ ಯತ್ಯಾಶ್ರಮ ಸ್ವೀಕರಿಸಿದರು,

ಕಣ್ವರ ಆಶ್ರಮ ಗಳು ಭಾರತದದಾದ್ಯಂತ ಇವೆ

ಕರ್ನಾಟಕದ ಸೊಗಲ, ಕಣ್ಣಕುಪ್ಪೆ, ಶಿವಗಂಗೆ, ಅಬ್ಬುರು, ದೊಡ್ಡಮಳುರು, ಕುಡಲುರು, ಕಣ್ಣುರು ಮತ್ತು ತೆಲೆಂಗಾಣದ 

ಬಿಚುಪಲ್ಲಿ, ಆಂದ್ರಪ್ರದೇಶದ ಕೊನಮಲ್ಲೆಶ್ವೆ, ಮದನಪಲ್ಲಿ, ಪಂಚಕೋನ

 ಕೆರಳದ ಕಣ್ವತೀರ್ಥ, ವರ್ಕಲ, 

ಮಹಾರಾಷ್ಟ್ರದ ನಾಸಿಕ, ಕನಳಾದ ಟಿಟವಾಳ,ಉತ್ತರಖಂಡದ ಮಾಲಿನಿದಿ ತಟದಲ್ಲಿರುವ ಕಣ್ವ ಘಾಟದಲ್ಲಿ ಸೆರಿದಂತೆ ಭಾರತದ ಮುಲೆಮುಎ ಯಲ್ಲಿ ಇದೆ.

: ೪ ವೇದಗಳಲ್ಲಿ ಸಹಸ್ರಾರು ಶಾಖೆ ಗಳಿದ್ದರು ಲಕ್ಷಾಂತರ ವರ್ಷಗಳನಂತರ ಉಳಿದ ಕೇಲವೆ ಶಾಖೆಗಳಲ್ಲಿ ನಮ್ಮದು ಒಂದು ಅದಕ್ಕೆ ಶ್ರೀ ಯಾಜ್ಞವಲ್ಕ್ಯ ರ ಹಾಗು ಶ್ರೀ ಕಣ್ವರ ತಪ್ಪಸ್ಸಿನ ಫಲವೆ ಕಾರಣ,

ಯಲ್ಲ ಮಠೀಯರು ತಮ್ಮ ಶಾಖೆ ಸೂತ್ರಕಾರರ ವೇದಗಳ ಮಾಹಿತಿ ಮರೆತಾಗು ನಾವು ಕಣ್ವರು ಲಕ್ಷೋಪಲಕ್ಷ ವರ್ಷಗಳಕಾಲ ಸತ್ ಸಂಪ್ರದಾಯ ಉಳಿಸಿಕೊಂಡ ಹೆಮ್ಮೆ ನಮ್ಮದು ಕಾರಣ ಗರ್ವದಿಂದ ಹೇಳಿ ನಾವುಕಣ್ವರು.

ತಾಪಸ ಕಣ್ವರು

ಒಮ್ಮೆ ಕಣ್ವ ಮಹರ್ಷಿಗಳು ಆಳವಾದ ತಪ್ಪಸ್ಸು ಮಾಡುವಾಗ ಅವರಮೆಲೆ ವಾಲ್ಮೀಕ ಬೇಳೆದು ಕಣ್ವರ ಶಿರದಲ್ಲಿ ಬೇಳೆದ ಬಿದಿರನ್ನು ನೊಡಿ ಅದನ್ನು ವಿಶ್ವಕರ್ಮನಿಗೆ ಕೊಟ್ಟು ಪಿನಾಕ, ಶಾರ್ಜ್ಗಿ ಮತ್ತು ಗಾಂಢೀವ ಎಂಬ ಅಪರೂಪದ ೩ ಬಿಲ್ಲುಗಳನ್ನು ಮಾಡಿದನು ಬಳಿಕ ಬ್ರಹ್ಮನು ಅವುಗಳನ್ನು ಶಿವನಿಗೆ ಕೊಟ್ಟನು ಶಿವನು ಶ್ರೀ ಕೃಷ್ಣನ ತಪಸ್ಸಿಗೆ ಮೆಚ್ಚಿ ಶಾರ್ಜ್ಗವನ್ನುಬಕೃಷ್ಣನಿಗೆ ಘಾಂಡಿವ ವನ್ನು ಅರ್ಜುನನಿಗೆ ಕೊಟ್ಟು ೭ ಹೆಡೆಗಳ್ಳುಳ್ಳ ಆಕಾರದ ಸಕಲ ಜೀವರಾಶಿಗಳನ್ನು ರಕ್ಷಿಸುವ ಪಿನಾಕ ವನ್ನು ತಾನೆ ಧರಿಸಿ ಪಿನಾಕಿ ಎಂದು ಕರೆಸಿಕೊಂಡನು‌.

ಕಣ್ವರ ಮಹಿಮೆಯು ಸ್ಕಂದ, ಶೈವ,ಕೂರ್ಮ,ಆದಿತ್ಯ,ಭವಿಷ್ಯೊತ್ತರ,ಮಾಹಾಭಾರತ ಹೀಗೆ ವೇದವ್ಯಾಸರನ್ನು ಹೊರತು ಪಡಿಸಿದರೆ ಅತೀಹೆಚ್ಚು ಪುರಾಣಗಳಲ್ಲಿ ಇರುವವರು ಶ್ರೀ ಯಾಜ್ಞವಲ್ಕ್ಯರು ಮತ್ತು ಕಣ್ವರು ಮಾತ್ರ,

ಅಂಗೀಅರಸ ಗಣದಲ್ಲಿ ಕಣ್ವ ಗೋತ್ರಕ್ಕೆ ಮೂಲ ಪುರುಷ ಕಣ್ವ ಮಹರ್ಷಿಗಳು.

ತೆಲಗು ಭಾಷೆಗೆ ವ್ಯಕರಣ ಕೊಟ್ಟವರು ಕಣ್ವರು

ಬಹಳಷ್ಟು ಬ್ರಾಹ್ಮಣರು ಶಾಖಾ/ ವೇದ ಬ್ರಷ್ಟರಾಗಿರಲು ನಾವು ಇನ್ನು ವೇದ ಶಾಖೆ ಸೂತ್ರಕಾರನ್ನು ಗೌರವಿಸುವ ಹೆಮ್ಮೆ ಇಂದ ಹೇಳುವ ಸಂಪ್ರದಾಯ ಉಳಿಸಿದ್ದಕ್ಕಾಗಿ ಮಹರ್ಷಿಗಳಿಗೆ, ಹೀರಿಯರಿಗೆ ಋಣಿಗಳಾಗಬೇಕಾಗಿದೆ.

ಯಾವುದೆ ಸನಾತನ( ಹಳೆಯದೊ) ಯಾವುದು ಅವಿಚ್ಚಿನ್ನ( ನಿರಂತರ ) ವಾಗಿರುವುದೊ ಅದೇ ಶ್ರೇಷ್ಠ ಎಂಬ ಹಿದೂತ್ವದ ನಂಬಿಕೆ ಯಂತೆ, ಸನಾತನ ಪರಂಪರೆ ಸನಾತನ ಮಹರ್ಷಿಗಳನ್ನ ವೇಧ ಶಾಖಾ ಪರಂಪರೆ ಉಳಿಸಿ ಗೌರವಿಸುವ ಹೊಣೆ ಪ್ರತಿ ಧರ್ಮಾಭಿಮಾನಿಗಳಮೆಲೆ ಇದೆ.

ಕೃಪೆ 

ಶ್ರೀ ಸತ್ಯನಾರಾಯಣರಾವ್ ಮುಜುಮದಾರ್ ರಾಯಚೂರು  ಇವರ ಮಹರ್ಷಿ ಕಣ್ವರ ಪುಸ್ತಕದಿಂದ ಆಯ್ದ ಭಾಗಗಳು.

ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಯುವ ಸಂಘ ಸೇರಲು, ಇಲ್ಲಿ ಕ್ಲಿಕ್ ಮಾಡಿ

https://kutumbapp.page.link/RRtkpgimboMZFFey9?ref=HX99Q

ಆಸಕ್ತರಿಗೆ

 ಅಂತರ್ಜಾಲದಲ್ಲಿ… ಆಧುನಿಕತೆಗೆ ಅನುಗುಣವಾಗಿ

ರಾಷ್ಟ್ರ 

ಧರ್ಮ 

ಬದುಕು

ಜಾನಪದ

ವಿಜ್ಞಾನ 

ವೈದಿಕ ವಿಜ್ಞಾನ  

ತಂತ್ರಜ್ಞಾನ 

ಆರೋಗ್ಯ 

ಈ ಮೊದಲಾದ ವಿಷಯಗಳಲ್ಲಿ ಅವರವರದೇ ಆದ ಚಿಂತನೆಗಳನ್ನು ಮಂಡಿಸಲು ಮತ್ತು ಜನಾಭಿಪ್ರಾ ಮೂಡಿಸಲು ಅನುಗುಣವಾದ ವೇದಿಕೆ.

ಆಸಕ್ತರು ನೊಂದಾಯಿಸ ಬಹುದು.

http://sirilaxmi.com

ಸೋಮವಾರ, ಏಪ್ರಿಲ್ 13, 2020

ತಬ್ಲೀಘಿನದ್ದು ವೈರಸ್ ಜಿಹಾದಾ...?

ತಬ್ಲೀಘಿನದ್ದು  ವೈರಸ್ ಜಿಹಾದಾ...?
(From  Facebook)

ವಿಶ್ವಸಂಸ್ಥೆ ಮುಖ್ಯಸ್ಥರ ಕೊರೋನಾ ಬಯೋ ಟೆರರಿಸಂ ವಾರ್ನಿಂಗ್ ಬಳಿಕ ಸಂಶಯ ದಟ್ಟವಾಗುತ್ತಿದೆ...

ಇಸ್ಲಾಮಿಕ್  ಮೂಲಭೂತವಾದಿಗಳ ಕೈಯಲ್ಲಿ  ಕೊರೋನಾದಂಥಾ ಅಪಾಯಕಾರೀ ವೈರಾಣು ಕೂಡಾ ಒಂದು ಅಸ್ತ್ರವಾಯಿತೇ?  ಎಂಬ ಪ್ರಶ್ನೆಯನ್ನು ನಾನು ಕಳೆದ ಬಾರಿಯ ಲೇಖನದಲ್ಲಿ ಮುಂದಿಟ್ಟಿದ್ದೆ. ಹೌದು, ಈ ಪ್ರಶ್ನೆ ಇವತ್ತಿನ ಸಂದರ್ಭದಲ್ಲಿ  ನನ್ನನ್ನೂ ಸೇರಿಸಿ ಭಾರತದ ಅಸಂಖ್ಯಾತ ಮಂದಿಗೆ, ಕೊರೋನಾ ಮಹಾಮಾರಿಯ ವಿರುದ್ಧದ ಈ ಭಾರೀ ಹೋರಾಟದಲ್ಲಿ ಹಗಲಿರುಳು ದುಡಿಯುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ, ಆರಕ್ಷಕ ಸಿಬ್ಬಂದಿಗಳಿಗೆ, ಭಾರತದ ಬಹುತೇಕ ಮಾಧ್ಯಮಗಳ ಮಂದಿಗೆ, ಅಷ್ಟೇ ಅಲ್ಲ... ದೇಶದಲ್ಲಾಗುತ್ತಿರುವ ಪ್ರತಿಯೊಂದೂ ಬೆಳವಣಿಗೆಗಳನ್ನು ಗಮನಿಸುತ್ತಿರುವ ಪ್ರತಿಯೊಬ್ಬ ದೇಶಾಭಿಮಾನೀ ಭಾರತೀಯ ಪ್ರಜೆಗೂ  ಕಾಡುತ್ತಿದೆ. ಕೊರೋನಾ ಜಿಹಾದ್, ವೈರಸ್ ಜಿಹಾದ್ ಎಂಬ ಹೆಸರಿನಲ್ಲಿ ಒಂದು ರಹಸ್ಯ ಮತ್ತು ಸಂಘಟಿತ ವಿಧ್ವಂಸಕ ಕೃತ್ಯವೊಂದು ಸದ್ದಿಲ್ಲದೆಯೇ ಪ್ರಪಂಚದಾದ್ಯಂತ ನಡೆಯುತ್ತಿದೆಯೇ ಎಂಬ ಸಕಾರಣ ಸಂಶಯ ಬಹುತೇಕಎಲ್ಲರಲ್ಲಿಯೂ ಮನೆಮಾಡಿದೆ.

ದೇವರ ಹೆಸರಿನಲ್ಲಿ, ಧರ್ಮದ (ಮತದ) ಹೆಸರಿನಲ್ಲಿ ಪ್ರಪಂಚಾದಾದ್ಯಂತ ಭಯೋತ್ಪಾದನಾ ಕೃತ್ಯಗಳನ್ನೆಸಗಿ ಅಸಂಖ್ಯಾತ ನಿಷ್ಪಾಪಿ ಅಮಾಯಕ ಜನರ ಸಾವಿಗೆ ಕಾರಣವಾದ ಇಸ್ಲಾಮಿಕ್ ಜಿಹಾದ್ ಈಗ ಮನುಕುಲಕ್ಕೇ ಬಂದೊದಗಿರುವ ಸಂಕಷ್ಟದ ಸಮಯದಲ್ಲಿ, ಜಗತ್ತಿನ ಜನರೆಲ್ಲಾ ಕೊರೋನಾ ಎಂಬ ವೈರಾಣುವಿಗೆ ತುತ್ತಾಗಿ ಸಾಯುತ್ತಿರುವ ಸಮಯದಲ್ಲಿ, ಆ ವೈರಾಣು ಸೋಂಕನ್ನೇ ಆಯುಧವಾಗಿ ಉಪಯೋಗಿಸುತ್ತಿದೆ... ಈ ಸಾಂಕ್ರಾಮಿಕ ಖಾಯಿಲೆಯನ್ನು ಹರಡಲು ತನ್ನ  ವೈರಾಣು ಸೋಂಕಿತ ಜಿಹಾದೀ ಮನಃಸ್ಥಿತಿಯ ಕಾರ್ಯಕರ್ತರನ್ನೇ ಮಾನವ ಬಾಂಬ್ ಆಗಿ, ಆತ್ಮಾಹುತಿ ದಾಳಿಕೋರರಾಗಿ ಬಳಸುತ್ತಿದೆ...ಎಂಬ ದಟ್ಟ ಸಂಶಯ...  ಭಾರತದಲ್ಲಿ ಇಂಥದ್ದೊಂದು ಷಡ್ಯಂತ್ರವನ್ನು ತಬ್ಲೀಘಿ ಜಮಾತ್ ಎಂಬ ಸಂಘಟನೆ ಸದ್ದಿಲ್ಲದೆಯೇ ಮಾಡಿದೆಯೇ...? ಅದರ ಪರಿಣಾಮವಾಗಿಯೇ ಸರಕಾರದ ಕಠಿಣ ಕ್ರಮಗಳಿಂದ ಮತ್ತು ದೇಶದ ಪ್ರಜೆಗಳ ಅಭೂತಪೂರ್ವಸಂಘಟಿತ ಪ್ರಯತ್ನ ಮತ್ತು ಸಹಕಾರದಿಂದ ಇನ್ನೇನು ಸಂಪೂರ್ಣವಾಗಿ ಸೋಂಕು ಹತೋಟಿಗೆ ಬಂದು, ಏರುತ್ತಿದ್ದ ಕೊರೋನಾ ಸೋಂಕಿನ ಅಟ್ಟಹಾಸಕ್ಕೆ ಭಾರತ ಸಮರ್ಥವಾಗಿ ಅಂಕುಶ ಹಾಕಿ ಸಮಸ್ಥಿತಿಗೆ ತರುತ್ತಿದೆ ಅನ್ನುವಷ್ಟರಲ್ಲಿ  ತಬ್ಲೀಘಿ ಜಮಾತ್ ನ ತಲೆಕೆಟ್ಟ ಜಿಹಾದೀ ಕಾರ್ಯಕರ್ತರು ಸೋಂಕನ್ನು ಅನಿಯಂತ್ರಿತವಾಗಿ ಹರಡುವಂತೆ ಮಾಡುವಲ್ಲಿ ಸಫಲರಾದರೇ ?

ಇದನ್ನು ಸಾಬೀತುಪಡಿಸುವ ಅಂಕಿ ಅಂಶಗಳೆಲ್ಲಾ ಕಣ್ಣೆದುರೇ ಇದ್ದು, ದೇಶದ ಮುಖ್ಯ ವಾಹಿನಿಯ ಮಾಧ್ಯಮಗಳೂ ಇದನ್ನೇ ವಿಶ್ಲೇಷಿಸಿ ವರದಿಗಳನ್ನೂ ಮಾಡಿದವು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ತಾರ್ಕಿಕ ಚರ್ಚೆಗಳಾದವು... ಎಲ್ಲವೂ ನಿಜವೇ ಎನ್ನುವಂತೆ ಹಲವಾರು ಹೊಸ ಸಾಕ್ಷಿಗಳು ಕೂಡಾ ಬೆಳಕಿಗೆ ಬಂದು ವೈರಸ್ ಜಿಹಾದ್ ಎಂಬುದು ಕೇವಲ ಕಪೋಲ ಕಲ್ಪಿತವಲ್ಲ... ಬದಲಿಗೆ ನಿಷ್ಠುರ ಸತ್ಯ ಎಂಬುದು ಮೇಲ್ನೋಟಕ್ಕೇ ಸಾಬೀತಾಗುವಂಥ ಸಂಗತಿ ಎಂಬುದು  ಆದರೆ... ವಾಡಿಕೆಯಂತೆ ಇಸ್ಲಾಮ್ ಜಿಹಾದಿಗಳಿಗೆ ತಳಸ್ಪರ್ಶಿ ಬೆಂಬಲ ನೀಡುವ ಬುದ್ಧಿ ಅಡವಿಟ್ಟ ಲದ್ಧಿಜೀವಿಗಳು, ತಥಾಕಥಿತ ಪ್ರಗತಿಪರ ಪರಾವಲಂಬಿಗಳು, ಸಿಕ್ಯುಲರ್ ಸೋಗಲಾಡಿಗಳು,  ಕೆಂಪಂಗಿಯ ಕಮಂಗಿಗಳು, ಎಡಬಿಡಂಗಿ ಪತ್ರಕರ್ತರು ಕೂಡಲೇ ಮೈಕೊಡವಿ ಎದ್ದುನಿಂತರು. ದೇಶದಲ್ಲಿ ಸೋಂಕು ಹರಡಲು ದೊಡ್ಡಮಟ್ಟದಲ್ಲಿ ಕಾರಣವಾದ  ತಬ್ಲೀಘಿಗಳ  ರಕ್ಷಣೆಗೆ ನಿಂತು ಬಿಟ್ಟರು. ತಬ್ಲೀಘಿಗಳು ಮುಗ್ದ ಧರ್ಮಭೀರುಗಳು, ತಬ್ಲೀಘಿ ಜಮಾತ್ ಎಂಬುದು ಇಸ್ಲಾಮಿನ ಶಾಂತಿ(?)ಯನ್ನು ಪ್ರಪಂಚಕ್ಕೆ ಹಂಚುವ ಪುಣ್ಯಕೋಟಿ,  ಹಿಂದೂ ಮತೀಯವಾದೀ ಭಾರತ ಸರಕಾರ ಮತ್ತದರ ಬಲಪಂಥೀಯ ಉಗ್ರ ಬೆಂಬಲಿಗರು ಕೊರೋನಾ ತಡೆಗಟ್ಟುವಲ್ಲಿ ವಿಫಲವಾದ ಸರಕಾರದ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಅಮಾಯಕ ಮುಸ್ಲಿಮರ ಮೇಲೆ ಗೂಬೆ ಕೂರಿಸುತ್ತಿದ್ದಾರೆ...

ಭಾರತದ ಅಲ್ಪಸಂಖ್ಯಾಕ ಮುಸ್ಲಿಮರನ್ನು ಕೊರೋನಾ ಹೆಸರಲ್ಲಿ ಬಲಿಕೊಡಲು ಸಂಘ ಪರಿವಾರದ ಷಡ್ಯಂತ್ರವಿದು ಅನ್ನೋ ರೀತಿಯ ಪುಂಖಾನುಪುಂಖ ಸುದ್ದಿಗಳು, ವರದಿಗಳು  ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಎಡಚ ಮಾಧ್ಯಮಗಳಲ್ಲಿ ಬರತೊಡಗಿದವು. ಅದರಲ್ಲೂ ಕೆಲವು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ, ವಿದೇಶೀ ಪತ್ರಿಕೆಗಳಲ್ಲಿ ಭಾರತೀಯ ಮೂಲದ ಪತ್ರಕರ್ತರೇ ಭಾರತದ ಮಾನ ಕಳೆಯುವಂಥ ಸುಳ್ಳು ವರದಿ ಬರೆದರು. ಜಾಗತಿಕ ಮಟ್ಟದಲ್ಲಿ ಭಾರತದ ಸರಕಾರ ಮತ್ತು ಇಲ್ಲಿನ ಬಹುಸಂಖ್ಯಾಕ ಹಿಂದೂಗಳು ಟೀಕೆಗೊಳಗಾದರು.

ಇಂಥಾ ವರದಿಗಳಿಂದ ಭಾರತದ ಮೇಲೆ ಜಾಗತಿಕವಾಗಿ ಒತ್ತಡವೂ ಬಿತ್ತು. ಈ ಒತ್ತಡಕ್ಕೆ ನಮ್ಮ ದೇಶದ ವ್ಯವಸ್ಥೆಯೂ ಮಣಿದಂತೆ ತೋರಿತು. ಕೊರೋನಾ ಜಿಹಾದ್, ವೈರಸ್ ಜಿಹಾದ್ ಎಂಬುದೆಲ್ಲಾ ಸುಳ್ಳು, ದೇಶದಲ್ಲಿ ವೈರಾಣು ಸೋಂಕು ಹಬ್ಬುವ ಹಿಂದೆ ಯಾವುದೇ ಇಸ್ಲಾಮಿಕ್ ಭಯೋತ್ಪಾದನೆಯ ಷಡ್ಯಂತ್ರ ಇಲ್ಲ. ವೈರಾಣು ಸೋಂಕನ್ನು ಯಾವುದೇ ಧರ್ಮದ ತಲೆಗೆ ಕಟ್ಟುವುದು ಸರಿಯಲ್ಲ. ಕೊರೋನಾ ಮಹಾಮಾರಿಗೆ ಧರ್ಮದ ಲೇಪನ ತಪ್ಪು ಅಂತ ಅಧಿಕೃತವಾದ ಹೇಳಿಕೆಗಳೇ ಹೊರಬಿದ್ದವು! ಭಾರತದಲ್ಲಿ ಕೊರೋನಾ ವೈರಾಣು ಸೋಂಕನ್ನು ವ್ಯಾಪಕವಾಗಿ ಹರಡುವಲ್ಲಿ  ತಬ್ಲೀಘಿ ಜಮಾತಿನ ಸದಸ್ಯರ ಸಂಚು ಇದೆ ಅಂತ ಆಧಾರ ಸಮೇತ ಉಲ್ಲೇಖಿಸಿದವರನ್ನೆಲ್ಲಾ ಕೋಮುವಾದಿಗಳು ಅಂತ ಪಟ್ಟಕಟ್ಟಿ ತೆಪ್ಪಗೆ ಕೂರಿಸುವ ಮಾಮೂಲು ಪ್ರಯತ್ನ ಇಂಥಾ ಕರಾಳ ಪರಿಸ್ಥಿತಿಯಲ್ಲೂ ಕೂಡಾ ನಡೆದುಹೋಯಿತು. ಆ ಮೂಲಕ ಒಂದು ಕಠೋರ ಸತ್ಯವನ್ನು ಹೊಸಕಿಹಾಕಲು ಸತ್ಯವಂತರೆಂದೆನಿಸಿಕೊಂಡವರೂ ಉತ್ಸಾಹ ತೋರಿ ತಮ್ಮ ಇಮೇಜು ಉಳಿಸಿಕೊಳ್ಳುವಲ್ಲಿ  ಆಸಕ್ತಿ  ತೋರಿದರೋ ಎಂಬ ಸಂಶಯ ಬರುವಂತಾಯಿತು.

ಆದ್ರೆ ಮೊನ್ನೆಯ ದಿನ ನಡೆದ ಸಂಗತಿಯೊಂದು ಇಡೀ ಪ್ರಕರಣಕ್ಕೊಂದು ಹೊಸದಾದ ತಿರುವು ನೀಡಿತು.  "ಕೊರೋನಾ ಜಿಹಾದ್, ವೈರಸ್ ಜಿಹಾದ್ ಎಂಬುದೆಲ್ಲಾ ಸುಳ್ಳು, ದೇಶದಲ್ಲಿ ವೈರಾಣು ಸೋಂಕು ಹಬ್ಬುವ ಹಿಂದೆ ಯಾವುದೇ ಇಸ್ಲಾಮಿಕ್ ಭಯೋತ್ಪಾದನೆಯ ಷಡ್ಯಂತ್ರ ಇಲ್ಲ. ವೈರಾಣು ಸೋಂಕನ್ನು ಯಾವುದೇ ಧರ್ಮದ ತಲೆಗೆ ಕಟ್ಟುವುದು ಸರಿಯಲ್ಲ. ಕೊರೋನಾ ಮಹಾಮಾರಿಗೆ ಧರ್ಮದ ಲೇಪನ ತಪ್ಪು..."ಅಂತ ಹೇಳಿದವರಿಗೆ ಸರಿಯಾದ ತಪರಾಕಿಯೇ ಬಿತ್ತು ..! ಸತ್ಯವನ್ನು ಮಡಚಿ ಮೂಲೆಗಿಟ್ಟು ಮೆಟ್ಟಿ ಅಡಗಿಸಲು ಪ್ರಯತ್ನಿಸಿದವರೆಲ್ಲರಿಗೂ ಮುಖದ ಮೇಲಿನ ನೀರಿಳಿಸುವಂಥಾ ಹೇಳಿಕೆಯೊಂದು ಸಾಕ್ಷಾತ್ತು.

ವಿಶ್ವಸಂಸ್ಥೆಯ ಮುಖ್ಯಸ್ಥರಿಂದಲೇ ಹೊರಬಿತ್ತು...!  ಡೊಮಿನಿಕನ್ ರಿಪಬ್ಲಿಕ್ ನ ಅಧ್ಯಕ್ಷತೆಯಲ್ಲಿ ಮೊನ್ನೆ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯ  ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ "ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಬಯೋ ಟೆರರಿಸ್ಟ್ (ಜೈವಿಕ ಭಯೋತ್ಪಾದನಾ)ದಾಳಿಗಳು ಅನಾವರಣಗೊಳ್ಳಲಿದ್ದು, ಇದಕ್ಕೆ ಈ ಕೊರೋನಾ ಸಾಂಕ್ರಾಮಿಕ ಸೋಂಕೇ ಕಾರಣವಾಗಲಿದೆ.... ಈ ವೈರಾಣುವೇ ಭಯೋತ್ಪಾದಕ ಸಂಘಟನೆಗಳ ಕೈಯಲ್ಲಿ ಅಸ್ಟ್ರವಾಗಿ ಪರಿಣಮಿಸಿ ಜಗತ್ತಿನಾದ್ಯಂತ ಸಾಮಾಜಿಕವಾಗಿ ಭಾರೀ ಮಟ್ಟದ ವಿನಾಶ ಸಂಭವಿಸುವ ಸಾಧ್ಯತೆ ಇದೆ..." ಅಂತ ಬಲವಾದ ಎಚ್ಚರಿಕೆಯನ್ನು ನೀಡಿದರು..!  ಭದ್ರತಾ ಮಂಡಳಿಯನ್ನುದ್ದೇಶಿಸಿ  ವಿಶ್ವಸಂಸ್ಥೆಯ  ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ನೀಡಿದ ಹೇಳಿಕೆಯ ಐದನೆಯ ಮತ್ತು ಆರನೆಯ ಅಂಶವನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ...

"Fifth, the threat of terrorism remains alive. Terrorist groups

may see a window of opportunity to strike while the attention

of most governments is turned towards the pandemic.  The

situation in the Sahel, where people face the double scourge

of the virus and escalating terrorism, is of particular concern.

Sixth, the weaknesses and lack of preparedness exposed by

this pandemic provide a window onto how a bio terrorist

attack might unfold – and may increase its risks. Non-state

groups could gain access to virulent strains that could pose

similar devastation to societies around the globe."

ನನ್ನಂಥ ಅನೇಕ ಸಮಾನಮನಸ್ಕರು  ತಬ್ಲೀಘಿ ಜಮಾತಿನ ದೆಹಲಿಯ ಮರ್ಕಜ್ ಪ್ರಕರಣದ ಹಿಂದಿನ ಕಾರಣವನ್ನು, ಇದರ ಹಿಂದಿರಬಹುದಾದ ಇಸ್ಲಾಮಿಕ್ ವಿಧ್ವಂಸಕ ಕೃತ್ಯಗಳ ಸಂಚನ್ನು,  ತಬ್ಲೀಘಿ ಜಮಾತಿನ ಅಸಲೀ ಮುಖವನ್ನು ಸಾಕ್ಷ್ಯಾಧಾರ  ಸಮೇತ ಬಯಲಿಗೆಳೆದು ವಿಶ್ಲೇಷಣೆ ನಡೆಸುವ ಪ್ರಯತ್ನ ಮಾಡಿದಾಗ ಅದನ್ನು ಹೀಗಳೆದು, "ಅಂಥದ್ದೆಲ್ಲಾ ಏನೂ ಇಲ್ಲ ....ಇದೆಲ್ಲಾ ಬರೀ ಭ್ರಮೆ" ಅಂತ ತಿಪ್ಪೆ ಸಾರಿಸಲು ಪ್ರಯತ್ನಿಸಿದವರಿಗೆಲ್ಲಾ  ವಿಶ್ವಸಂಸ್ಥೆಯ  ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ರ ಹೇಳಿಕೆ ಮುಖಕ್ಕೇ ಹೊಡೆದ ಹಾಗಿದೆ!

ನೆಲ ಹಸನು ಮಾಡಿ, ಉತ್ತಿ ಬಿತ್ತಿ ಸಸಿಗಳನ್ನು  ತಯಾರು ಮಾಡುವುದೇ ಈ ತಬ್ಲೀಘಿ ಜಮಾತಿನ ಕೆಲಸ. ಇದೊಂಥರಾ ನರ್ಸರಿ ಇದ್ದಹಾಗೆ. ಆಯ್ಕೆ ಮಾಡಿಕೊಂಡೇ ಒಳ್ಳೆಯ ಬೀಜಗಳನ್ನು ಬಿತ್ತಿ ನೀರು ಗೊಬ್ಬರ ನೀಡಿ ಮೊಳಕೆಯೊಡೆಸಿ ಸಸಿಗಳನ್ನು ಜೋಪಾನವಾಗಿ ಬೆಳೆಸುವ ಕೆಲಸ. ಜಗತ್ತಿಡೀ ಇರುವ ಮುಸ್ಲಿಮರ ಮನೆಮನೆಯನ್ನೂ ಸಂಪರ್ಕಿಸಿ ಧಾರ್ಮಿಕ ಶಿಕ್ಷಣ, ಧರ್ಮ ಚರ್ಯೆಯ ಅರಿವು ಮೂಡಿಸುವ ನೆಪದಲ್ಲಿ ಅವರನ್ನು ಮಸೀದಿಗಳಿಗೆ ಬರುವಂತೆ ಮಾಡಿ, ಅವರ ಮೆದುಳು ತೊಳೆದು ಅವರಿಗೆ ಇಸ್ಲಾಮ್ ಮೂಲಭೂತವಾದದ ವಿಷ ಉಣ್ಣಿಸಿ ಸಜ್ಜುಗೊಳಿಸುವುದೇ  ತಬ್ಲೀಘಿ ಜಮಾತಿನ ಕೆಲಸ. ಒಮ್ಮೆ ತಬ್ಲೀಘಿನ ಹಿಡಿತಕ್ಕೆ ಸಿಕ್ಕಿದ ಮೇಲೆ ಯಾರೇ ಆದರೂ ಸಂಪೂರ್ಣವಾಗಿ ಇಸ್ಲಾಮಿಕ್ಮೂಲಭೂತವಾದಕ್ಕೆ ಶರಣಾಗುತ್ತಾರೆ.

ಹೀಗೆ ಒಮ್ಮೆ ಮೂಲಭೂತವಾದದ ಅಮಲುಹಿಡಿದರೆ ಮತ್ತೆ ಆತನ ಭವಿಷ್ಯ ಯಾವುದಾದರೂ ಭಯೋತ್ಪಾದಕ ಸಂಘಟನೆಗಳಲ್ಲೇ ಖಾಯಮ್ಮು. ಹೀಗಾಗಿ  ತಬ್ಲೀಘಿನ ಸದಸ್ಯನಾಗಿ ಧರ್ಮ ಶಿಕ್ಷಣ ಪಡೆದವರನ್ನೇ ಈ ಭಯೋತ್ಪಾದಕ ಸಂಘಟನೆಗಳು ಸುಲಭವಾಗಿ ರಿಕ್ರೂಟ್ ಮಾಡಿಕೊಳ್ಳುತ್ತವೆ. ಆದುದರಿಂದ ಎಲ್ಲಾ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳಿಗೂ  ತಬ್ಲೀಘಿ ಜಮಾತ್ ಅಂದರೆ ಅಚ್ಚುಮೆಚ್ಚು. ಯಾಕೆಂದರೆ ಅದೊಂಥರಾ ಬ್ರೀಡಿಂಗ್ ಗ್ರೌಂಡ್ ಇದ್ದ ಹಾಗೆ. ತಬ್ಲೀಘಿ ಜಮಾತಿನ ಇನ್ನೊಂದು ವಿಶೇಷ ಎಂದರೆ ಜಗತ್ತಿನಾದ್ಯಂತ ಅದೆಲ್ಲೂ  ತನ್ನ ಸದಸ್ಯರ ಯಾವುದೇ ದಾಖಲೆಗಳನ್ನೂ ಇಟ್ಟುಕೊಳ್ಳುವುದಿಲ್ಲ . ಹಾಗಾಗಿ ಯಾರಾದರೊಬ್ಬ  ತಬ್ಲೀಘಿ ಜಮಾತಿನಲ್ಲಿ ಇದ್ದ ಎಂಬುದಕ್ಕೆ, ಅಲ್ಲಿ ತರಬೇತಿ ಪಡೆದಿದ್ದ ಎಂಬುದಕ್ಕೆ ಹೆಚ್ಚಿನವೇಳೆ ನೇರ ಸಾಕ್ಷಿಗಳಿರುವುದಿಲ್ಲ.

ಇಲ್ಲಿ ತರಬೇತಿ ಪಡೆದವರು ಬಹುತೇಕ ಬೇರೊಂದು ಉಗ್ರ ಸಂಘಟನೆಗೆ ಇಲ್ಲಿಂದಲೇ ವಲಸೆ ಹೋಗುತ್ತಾರೆ. ಆದರೂ  ತಬ್ಲೀಘಿನಲ್ಲಿ ಅವರ ಬಗ್ಗೆ ದಾಖಲೆಗಳೇನೂ ಇರುವುದಿಲ್ಲ. ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಹಲವಾರು ಉಗ್ರ ಸಂಘಟನೆಗಳವರು ಬೇರೆ ದೇಶಗಳಿಗೆ ತೆರಳಲು ವೀಸಾಕ್ಕಾಗಿ  ತಬ್ಲೀಘಿ ಜಮಾತಿನಲ್ಲಿನ ತಮ್ಮ ಸಂಪರ್ಕವನ್ನು ಬಳಸಿಕೊಳ್ಳುತ್ತಾರೆ. ಭಾರತದಲ್ಲಿ ಪ್ರಾರಂಭವಾಗಿ ಈಗ ಪ್ರಪಂಚದಾದ್ಯಂತ ಹಬ್ಬಿರುವ ಜಗತ್ತಿನ ಅತೀ ದೊಡ್ಡ ಇಸ್ಲಾಮಿಕ್ ಸಂಘಟನೆಗಳಲ್ಲೊಂದಾಗಿರುವ  ತಬ್ಲೀಘಿ ಜಮಾತ್ ವರ್ಷಕ್ಕೊಮ್ಮೆ ಇಜ್ತಿಮಾ ಹೆಸರಿನಲ್ಲಿ ಬೃಹತ್ ವಾರ್ಷಿಕ ಸಮ್ಮೇಳನ ನಡೆಸುತ್ತದೆ.

೧೯೪೯ರಲ್ಲಿ ಮಧ್ಯಪ್ರದೇಶದ ಭೋಪಾಲದಲ್ಲಿ ಪ್ರಪ್ರಥಮ ಇಜ್ತೆಮಾ ನಡೆಯಿತು. ಅದಾದ ಬಳಿಕ ಸತತವಾಗಿ ಭೋಪಾಲದಲ್ಲೇ ತಬ್ಲೀಘಿನ ವಾರ್ಷಿಕ ಸಮ್ಮೇಳನಗಳು  ನಡೆಯತೊಡಗಿದವು. ಅದೇ ವೇಳೆ ಪಾಕಿಸ್ತಾನದ ರಾಯ್ ವಿಂಡ್ ನಲ್ಲಿನ  ತಬ್ಲೀಘಿ ಜಮಾತಿನ ಘಟಕ ಬಲಿಷ್ಠವಾಗಿ ಬೆಳೆಯುತ್ತಾ ಸಾಗಿದಂತೆ ಅಲ್ಲಿಯೂ  ಇಜ್ತೆಮಾ ಗಳು ನಡೆಯತೊಡಗಿದವು. ಈ ಸಮಾವೇಶಗಳಿಗೆ ಅದೆಷ್ಟೊಂದು ಜನ ಬರುತ್ತಿದ್ದರೆಂದರೆ ಇಸ್ಲಾಮಿಕ್ ಜಗತ್ತಿನಲ್ಲಿ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಡೆಯುವ ಹಜ್ ಯಾತ್ರೆ ಬಿಟ್ಟರೆ ಅತ್ಯಂತ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಸೇರುತ್ತಿದ್ದುದೇ ಈ ಇಜ್ತೆಮಾದಲ್ಲಿ ಅಂತ ಅಂದರೆ  ಈ ತಬ್ಲೀಘಿ ಜಮಾತ್ ಎಂಬ ಸಂಘಟನೆಯ ಶಕ್ತಿ ಅಂದಾಜು ಮಾಡಬಹುದು.

ಮುಂದುವರೆಯುವುದು...

#ಅನಂತಕುಮಾರಹೆಗಡೆ

Link : https://anantkumarhegde.com/site/Thoughts.php?post_id=859

ಭಾನುವಾರ, ಏಪ್ರಿಲ್ 12, 2020

ತಬ್ಲೀಘಿ ಜಮಾತ್.

*ಡೌಟೇ ಬೇಡ, ಇದು ಹೊಸ "Bio-ತ್ಪಾದನೆ"!*
- ರೋಹಿತ್ ಚಕ್ರತೀರ್ಥ | ಹೊಸ ದಿಗಂತ 4 ಏಪ್ರಿಲ್ 2020

ತಬ್ಲೀಘಿ ಜಮಾತ್. ಆ ಹೆಸರನ್ನು ನಿನ್ನೆ ಮೊನ್ನೆಯವರೆಗೆ ಯಾರೂ ಕೇಳಿರಲಿಲ್ಲ. ಆದರೆ ಒಂದೇ ದಿನದಲ್ಲಿ ಈ ಸಂಘಟನೆ ದೇಶದ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದೆ. ದೇಶದ ಎಲ್ಲ ಸುದ್ದಿವಾಹಿನಿಗಳ ಪ್ರೈಮ್ ಟೈಮ್ ನ್ಯೂಸುಗಳ ಪ್ರಮುಖ ಸುದ್ದಿಯಾಗಿ ಮಿಂಚಿದೆ. ಏನಿದು, ಯಾಕಿದು, ಯಾರಿದು, ಹೇಗಿದು ಎಂದು ಒಂದಷ್ಟು ಕುತೂಹಲಿಗಳು ತಬ್ಲೀಘಿಯ ಇತಿಹಾಸ ಜಾಲಾಡುತ್ತಿದ್ದಾರೆ. ಮಿಕ್ಕಂತೆ ಮೇಲುಮೇಲಕ್ಕೆ ಟಿವಿಸುದ್ದಿಗಳನ್ನು ನೋಡುವ, ಹೆಡ್ಡಿಂಗುಗಳ ಮೇಲಷ್ಟೇ ಕಣ್ಣಾಡಿಸಿ ಪೇಪರೋದಿ ಮುಗಿಸುವ ಮಂದಿಗೆ "ಅದ್ಯಾವುದೋ ಡೆಲ್ಲಿಯ ಮಸೀದಿಯಂತೆ. ಅಲ್ಲಿ ನಾಲ್ಕು ದಿನ ಏನೋ ಅವರದ್ದು ಕಾರ್ಯಕ್ರಮ ಇತ್ತಂತೆ. ಅದಕ್ಕೆ ಬೇರೆ ಬೇರೆ ರಾಜ್ಯಗಳಿಂದ ಒಂದಷ್ಟು ಮಂದಿ ಸಾಬ್ರು ಹೋಗಿದ್ದರಂತೆ. ವಾಪಸು ಬರುವಾಗ ಅವರಲ್ಲಿ ಕೆಲವರಿಗೆ ಕೊರೋನಾ ಇತ್ತಂತೆ" ಎಂಬ ಯಃಕಶ್ಚಿತ್ ಸುದ್ದಿ. ಆದರೆ ಇದು ಇಷ್ಟೆಯೇ? ಇದು ನಮ್ಮ ಕಣ್ಣಿಗೆ ಕಾಣಿಸುತ್ತಿರುವಷ್ಟೇ ತಿಳಿಯಾಗಿದೆಯೆ, ಇಲ್ಲ ಆಳವಿದೆಯೆ? ಕೊರೋನಾ ವೈರಸ್ಸು ಅವರ ಇವರ ನಿಮ್ಮ ನಮ್ಮ ಯಾರ ಮನೆಬಾಗಿಲನ್ನೂ ಯಾವ ಸಮಯದಲ್ಲಾದರೂ ತಟ್ಟಬಹುದೆಂಬ ಸನ್ನಿವೇಶ ಇರುವಾಗ ತಬ್ಲೀಘಿಗಳ ಬಗ್ಗೆ ಸ್ವಲ್ಪ ಡೀಟೇಲಾಗಿ ತಿಳಿಯಲೇಬೇಕಲ್ಲವೆ?

ನಿಮಗೆ ಗೊತ್ತಿರಲಿ, ಇದು ಕೇವಲ ಒಂದು ಮಸೀದಿ ಅಲ್ಲ. ಅಥವಾ ಕೇವಲ ದೆಹಲಿಗೆ ಮೀಸಲಾಗಿರುವ ಒಂದು ಸ್ಥಳೀಯ ಸಂಸ್ಥೆಯೂ ಅಲ್ಲ. ಇದೊಂದು ಸಮುದಾಯ. ಇಂಗ್ಲೀಷಿನಲ್ಲಿ ಹೇಳಬೇಕೆಂದರೆ "ಕಲ್ಟ್". ತಮ್ಮದೇ ಆದ ಸಂವಿಧಾನ, ಸಿದ್ಧಾಂತ, ಆಚರಣೆ, ಸಂಪ್ರದಾಯ, ಯೋಚನೆಗಳನ್ನಿಟ್ಟುಕೊಂಡ ಒಂದಷ್ಟು ಮಂದಿಯ ಗುಂಪು. ಒಂದಷ್ಟು - ಎಂದರೆ ನೂರಿನ್ನೂರು ಅಲ್ಲ. ಲಕ್ಷಾಂತರ ಸಂಖ್ಯೆಯಲ್ಲಿ ಸದಸ್ಯರಿರುವ ದೊಡ್ಡ ಸಮುದಾಯವೇ! ಮತ್ತು ಇದು ಕೇವಲ ದೆಹಲಿಯ ಒಂದು ಗಲ್ಲಿಗೆ ಸೀಮಿತವಾಗಿರುವ ಸಮುದಾಯವಲ್ಲ. ಇದರ ಬೇರು, ಬಿಳಲುಗಳು ಅಮೆರಿಕಾದಿಂದ ಕೊರಿಯಾವರೆಗೆ ಎಲ್ಲೆಡೆ ಹಬ್ಬಿವೆ. ಫ್ರಾನ್ಸ್‍ನ ಸರಕಾರ "ಮೂಲಭೂತವಾದಿಗಳು/ಉಗ್ರರು" ಎಂದು ಪಟ್ಟಿಮಾಡಿರುವ ಮಂದಿಯಲ್ಲಿ 80%ರಷ್ಟು, ಈ ಗುಂಪಿಗೆ ಸೇರಿದವರು. ಅಮೆರಿಕಾದಲ್ಲೂ ದೊಡ್ಡ ಸಂಖ್ಯೆಯಲ್ಲಿ ತಬ್ಲೀಘಿ ಜಮಾತ್ ಸದಸ್ಯರಿದ್ದಾರೆ. "ಇವರೆಲ್ಲ ನಮಗೆ ದೊಡ್ಡ ತಲೆನೋವಾಗಿದ್ದಾರೆ" ಎಂದು ಅಲ್ಲಿನ ಎಫ್‍ಬಿಐನ ಡೆಪ್ಯುಟಿ, ಈಗಲ್ಲ, 2003ರಲ್ಲಿ ಹೇಳಿಬಿಟ್ಟಿದ್ದ. ಅಲ್‍ಖೈದಾ ಗೊತ್ತಲ್ಲ? ಅದಕ್ಕೆ ಸದಸ್ಯರನ್ನು ಆರಿಸಿ ಕಳಿಸುತ್ತಿದ್ದ ರಿಕ್ರ್ಯೂಟ್‍ಮೆಂಟ್ ವಿಂಗ್ ಇದೇ ತಬ್ಲೀಘಿ. ಅರ್ಥವಾಯಿತಾ ವಿಷಯದ ಗಂಭೀರತೆ?

ಭಯೋತ್ಪಾದಕ ಸಂಘಟನೆಗಳಿಗೆ ಮುಖ್ಯವಾಗಿ ಮೂರು ಮುಖಗಳಿರುತ್ತವೆ. ಒಂದು - ಅವುಗಳ ಕೋರ್ ಗ್ರೂಪ್. ಅಂದರೆ ಸ್ವತಃ ಉಗ್ರರು. ಇವರು ದಿನನಿತ್ಯ ಬಂದೂಕಿನ ಜೊತೆ ಸಮರಾಭ್ಯಾಸ ನಿರತರು. ಮೈಗೆ ಬಾಂಬು ಕಟ್ಟಿಕೊಂಡವರು. ಉಗ್ರಕೃತ್ಯಗಳ ನೀಲನಕ್ಷೆ ತಯಾರಿಸುವವರು. ಉಗ್ರಕೃತ್ಯಗಳನ್ನು ಕಾರ್ಯರೂಪಕ್ಕಿಳಿಸುವವರು. ಪೊಲೀಸರ, ತನಿಖಾದಳಗಳ "ಮೋಸ್ಟ್ ವಾಂಟೆಡ್" ಪಟ್ಟಿಯಲ್ಲಿರುವವರು. ಇನ್ನು ಎರಡು - ಬುದ್ಧಿಜೀವಿಗಳು. ಸಮಾಜದಲ್ಲಿ ಸಭ್ಯರು. ಅರ್ಥಾತ್ ಸಭ್ಯರೆಂದೂ ಬುದ್ಧಿವಂತರೆಂದೂ ನಾಗರಿಕರೆಂದೂ ಬಿಂಬಿಸಿಕೊಂಡವರು. ಉಗ್ರರ ಯಾವುದೇ ಕೃತ್ಯವನ್ನು ಸಮರ್ಥಿಸಿಕೊಳ್ಳುವವರು. ಟಿವಿಯಲ್ಲಿ, ಪತ್ರಿಕೆಗಳಲ್ಲಿ ಉಗ್ರರ ಪರವಾಗಿ ವಾದಿಸುವವರು. ಉಗ್ರನೊಬ್ಬ ಸೈನಿಕರ ಗುಂಡಿಗೆ ಹೆಣವಾದಾಗ "ಪಾಪ, ಸ್ಕೂಲ್ ಟೀಚರ್ ಮಗ ಕರುಣೆಯಿಲ್ಲದ ಸೈನಿಕರ ಗುಂಡಿಗೆ ಸತ್ತುಬಿದ್ದ" ಎಂದು ಬರೆಯುವ ಪ್ರೆಸ್ಟಿಟ್ಯೂಟುಗಳು. ಒಂದಿಪ್ಪತ್ತು ವರ್ಷಗಳ ಹಿಂದಾದರೆ ಇಂಥವರು ಸರಕಾರದ ಪದ್ಮಪ್ರಶಸ್ತಿಗಳನ್ನು ಪಡೆದು, ಮಾಕ್‍ಟೇಲ್ ಪಾರ್ಟಿಗಳಲ್ಲಿ ಕುಡಿದು ತಿಂದು, ರಾಜಕಾರಣಿಗಳ ಜೊತೆ ಮಲಗಿ, ತಮ್ಮ ಜೀವನವನ್ನು ಸುಖವಾಗಿ ಕಳೆದುಹೋಗುತ್ತಿದ್ದರು. ಈಗ ಇಂಥವರು, ಥ್ಯಾಂಕ್ಸ್ ಟು ಸೋಶಿಯಲ್ ಮೀಡಿಯಾ!, ಸಮಾಜದ ಮುಂದೆ ಸ್ವಲ್ಪಮಟ್ಟಿಗೆ ಬೆತ್ತಲಾಗಿದ್ದಾರೆ. ಆದರೂ ಇಂದಿಗೂ ಉಗ್ರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಹೀಗೆ ಕಾರ್ಯ ನಿರ್ವಹಿಸುವವರು ಬೇಕಾದಷ್ಟಿದ್ದಾರೆ. ದೇಶದಲ್ಲೂ ನಮ್ಮ ರಾಜ್ಯದಲ್ಲೂ. ಇನ್ನು ಮೂರನೆಯ ಭಾಗ - ಯಾವ ರೀತಿಯಲ್ಲೂ ಉಗ್ರರ ಜೊತೆ ಸಂಪರ್ಕ ಇದೆಯೆಂಬುದನ್ನು ತೋರಿಸಿಕೊಳ್ಳದ ಸ್ಲೀಪಿಂಗ್ ಸೆಲ್. ಈ ಗುಂಪು, ಸಾಮಾಜಿಕ ಸಂಸ್ಥೆಯ ರೂಪದಲ್ಲೋ ಧಾರ್ಮಿಕ ಸಂಘಟನೆಯ ರೂಪದಲ್ಲೋ ಕಾರ್ಯ ನಿರ್ವಹಿಸುತ್ತಿರುತ್ತದೆ. ಆಗಾಗ ದೊಡ್ಡ ಸಮ್ಮೇಳನಗಳನ್ನು ನಡೆಸುತ್ತದೆ. ನಿರಂತರವಾಗಿ ಯುವಕರಿಗೆ ಗಾಳ ಹಾಕುತ್ತದೆ. ಯುವಕರನ್ನು ವಾರ ವಾರ ಕೂರಿಸಿ ಉಪನ್ಯಾಸ ಕೊಟ್ಟು ತಲೆಗೆಡಿಸುತ್ತದೆ. ಅವರ ತಲೆಯೊಳಗೆ ಮೂಲಭೂತವಾದದ ಸ್ಲೋ ಪಾಯಿಸನ್ ಹರಡುತ್ತದೆ. ಯಾವ ವ್ಯಕ್ತಿ ಸಂಪೂರ್ಣವಾಗಿ ತನಗೆ ವಶವಾಗಿದ್ದಾನೆ ಎಂಬುದನ್ನು ಗುರುತಿಸಿ, ಅವರನ್ನು ಉಳಿದವರಿಂದ ಪ್ರತ್ಯೇಕಿಸಿ, ಉಗ್ರಸಂಘಟನೆಗಳ ಬಾಗಿಲಿಗೆ ತಳ್ಳುವ ಕೆಲಸವನ್ನು ಮಾಡುತ್ತದೆ. ತಬ್ಲೀಘಿ ಜಮಾತ್ ಈ ಮೂರನೆಯ ವರ್ಗದ್ದು.

ಈ ಸಮುದಾಯದ ಮಂದಿ ತಮ್ಮದೇ ಮಸೀದಿಗಳನ್ನು ನಡೆಸುತ್ತಾರೆ. ಅಥವಾ ಯಾವ ಊರಿಗೆ ಹೋಗುತ್ತಾರೋ ಅಲ್ಲಿಯ ಮಂದಿಯನ್ನೂ ಮಸೀದಿಯನ್ನೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ತಮ್ಮ ಮಸೀದಿಗಳಲ್ಲಿ, ಮದ್ರಸಾಗಳಲ್ಲಿ ಮೂಲಭೂತವಾದಕ್ಕೆ ಹೆಚ್ಚು ಹೆಚ್ಚು ವಾಲುತ್ತಿರುವ ಮಂದಿಯನ್ನು ಸೂಕ್ಷ್ಮವಾಗಿ ಗಮನಿಸಿ, ಅವರ ಬಗ್ಗೆ ಮತ್ತಷ್ಟು ವಿಶೇಷ ಕಾಳಜಿ ತೋರುತ್ತಾರೆ. ಅಂಥವರ ಕೈಗೆ ಇವರಿಡುವುದು ಪುಸ್ತಕ, ಮೊಬೈಲು. ಮೊಬೈಲಿನಲ್ಲಿ ಮತ್ತಷ್ಟು ಮನಸ್ಸು ಕೆರಳಿಸುವ ಧಾರ್ಮಿಕ ಭಾಷಣಗಳು (ನೆನಪಿಡಿ: ವಹಾಬಿ ಝಾಕಿರ್ ನಾಯ್ಕ್ ಕೂಡ ಇದೇ ತಬ್ಲೀಘಿ ಬಳಗದ ಸ್ಟಾರ್ ಪರ್ಫಾರ್ಮರ್!). ಅಥವಾ ತಮ್ಮವರನ್ನು ಅನ್ಯರು ತುಳಿಯುವ, ಹೊಡೆಯುವ ಚಿತ್ರಗಳು. ಒಟ್ಟಾರೆ ತಪ್ಪಿದ ದಾರಿ ಮತ್ತೆಂದೂ ಸರಿಯಾಗದಂತೆ ಪೂರ್ತಿ ತಪ್ಪಿಯೇ ಹೋಗಬೇಕು. ಅದಕ್ಕೆ ಬೇಕಾದ ವಿಷ ಊಡುವ ಕೆಲಸ ಇಂಥ ಕೇಂದ್ರಗಳಲ್ಲಾಗುತ್ತದೆ. ತಬ್ಲೀಘಿಯ ಕಾರಸ್ಥಾನ ಪಾಕಿಸ್ತಾನದ ಲಾಹೋರಿನಲ್ಲಿರುವ ರಾಯ್ವಿಂಡ್. ಪ್ರಪಂಚದಲ್ಲಿ ಯಾರನ್ನೆಲ್ಲ ಕಟ್ಟರ್ ಮೂಲಭೂತವಾದಿ ಹುಡುಗರು ಎಂದು ಗುರುತಿಸಲಾಗಿದೆಯೋ ಅವರನ್ನೆಲ್ಲ ಪುಸಲಾಯಿಸಿ ಈ ಸಂಸ್ಥೆ, ರಾಯ್ವಿಂಡಿಗೆ ಕರೆಸಿಕೊಳ್ಳುತ್ತದೆ. ಅಲ್ಲಿ 4 ತಿಂಗಳ ಉಗ್ರ ತರಬೇತಿ. ಮಿಲಿಟರಿ ಅಭ್ಯಾಸ. ಪ್ರತಿದಿನವೂ ಭಯೋತ್ಪಾದಕರ ನಿತ್ಯನಿರಂತರ ಬ್ರೇನ್ ವಾಷ್. ಹಗಲೆಲ್ಲ ಬಂದೂಕಿನ, ಬಾಂಬಿನ ಸಾಹಚರ್ಯ. ಆ ನಾಲ್ಕು ತಿಂಗಳ ಅವಧಿ ಮುಗಿವಷ್ಟರಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಮಂದಿ, ತಮ್ಮ ಬದುಕೇನಿದ್ದರೂ ಭಯೋತ್ಪಾದನೆಗೇ ಮುಡಿಪು ಎಂಬ ಮನಸ್ಥಿತಿಗೆ ತಲುಪುವವರೇ.

ಭಾರತಕ್ಕೆ ಕಳೆದ ನಲವತ್ತು ವರ್ಷಗಳಿಂದ ತಲೆನೋವಾಗಿ ಕಾಡುತ್ತಿರುವ ಹರ್ಕತ್ ಉಲ್ ಮುಜಾಹಿದೀನ್ (ಪ್ರಾರಂಭದ ಹೆಸರು: ಹರ್ಕತ್ ಉಲ್ ಅನ್ಸಾರ್) ಎಂಬ ಉಗ್ರ ಸಂಘಟನೆ ಜನ್ಮತಳೆದದ್ದು 1980ರಲ್ಲಿ, ಇದೇ ರಾಯ್ವಿಂಡಿನಲ್ಲಿ. ಅದು ಕಣ್ಣುಬಿಟ್ಟಾಗ ಅದರಲ್ಲಿದ್ದ ಎಲ್ಲಾ ಸದಸ್ಯರೂ ತಬ್ಲೀಘಿಯವರೇ! ಅರ್ಥಾತ್, ತಬ್ಲೀಘಿ ಜಮಾತ್‍ನ ಒಂದು ಅಂಗಸಂಸ್ಥೆಯಾಗಿ ಜನ್ಮತಳೆದ್ದು ಮುಜಾಹಿದೀನ್ ಉಗ್ರಕೂಟ. 1999ರ ಡಿಸೆಂಬರ್‍ನಲ್ಲಿ, ಕ್ರಿಸ್‍ಮಸ್‍ಗೆ ಒಂದು ದಿನ ಮೊದಲು, ನಮ್ಮ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿ ಕಂದಹಾರ್'ಗೆ ತೆಗೆದುಕೊಂಡ ಹೋದ ಉಗ್ರರು ಇವರೇ. 2002ರ ಮೇ 8ರಂದು ಪಾಕಿಸ್ತಾನದ ಕರಾಚಿಯಲ್ಲಿ 11 ಫ್ರೆಂಚ್ ಇಂಜಿನಿಯರುಗಳನ್ನು ಒಳಗೊಂಡು ಒಟ್ಟು 14 ಮಂದಿಯನ್ನು, ಅವರೆಲ್ಲ ಬಸ್‍ನಲ್ಲಿ ಹೋಗುತ್ತಿದ್ದಾಗ, ಬಾಂಬಿಟ್ಟು ಸ್ಫೋಟಿಸಿದ ಹುಚ್ಚರೂ ಇವರೇ. ಹುಚ್ಚರು ಯಾಕೆಂದರೆ ಆ ಫ್ರೆಂಚ್ ಇಂಜಿನಿಯರುಗಳು ಪಾಕಿಸ್ತಾನದಲ್ಲಿದ್ದದ್ದು ಆ ದೇಶಕ್ಕೆ ಒಂದು ಸಬ್‍ಮೆರಿನ್ ತಯಾರಿಸಿಕೊಡುವುದಕ್ಕಾಗಿ! ಈ ಸ್ಫೋಟದಲ್ಲಿ 40 ಮಂದಿ ತೀವ್ರವಾಗಿ ಗಾಯಗೊಂಡರು ಕೂಡ. ವರ್ಷಗಳುದ್ದಕ್ಕೂ ಈ ಹರ್ಕಟ್ ಸಂಘಟನೆಗೆ ಭಯೋತ್ಪಾದಕರನ್ನು ನಿರಂತರವಾಗಿ ಸಪ್ಲೈ ಮಾಡುವ ಹೊಣೆ ಹೊತ್ತದ್ದು ತಬ್ಲೀಘಿ ಜಮಾತ್. 1980ರಿಂದ ಮುಂದಿನ 20 ವರ್ಷಗಳಲ್ಲಿ ಹರ್ಕತ್ ಉಲ್ ಮುಜಾಹಿದೀನ್ ಉಗ್ರಕ್ಯಾಂಪ್‍ಗಳಲ್ಲಿ ಭಾಗವಹಿಸಿ ಟ್ರೇನಿಂಗ್ ಪಡೆದು ಉಗ್ರರಾದ ತಬ್ಲೀಘಿಗಳ ಸಂಖ್ಯೆ 6000ಕ್ಕೂ ಹೆಚ್ಚು. ಇವರಲ್ಲಿ ಮುಂದೆ ಅನೇಕರು ಅಲ್‍ಖೈದಾ ಸೇರಿದರು. ಅಫಘಾನಿಸ್ತಾನದಲ್ಲಿ ಅಮೆರಿಕದ ವಿರುದ್ಧ ಬಂದೂಕು ಹಿಡಿದರು. ಒಸಾಮನ ಬಲಗೈ ಎಡಗೈಗಳಾಗಿ ಕೆಲಸ ಮಾಡಿದರು. ಅಲ್‍ಖೈದಾ ಸಂಘಟನೆಗೆ ತಬ್ಲೀಘಿ ನೇರವಾಗಿ ಉಗ್ರರನ್ನು ಸಪ್ಲೈ ಮಾಡುವ ಫ್ಯಾಕ್ಟರಿಯಾಗಿ ಕೆಲಸ ಮಾಡತೊಡಗಿತು.

ಇದಿಷ್ಟೇ ಸಾಲದು ಎಂಬಂತೆ ಇದೇ ತಬ್ಲೀಘಿ, 1984ರಲ್ಲಿ ಮತ್ತೊಂದು ಉಗ್ರಪುತ್ರನಿಗೆ ಜನ್ಮವಿತ್ತಿತು. ಹೊಸ ಸಂಘಟನೆಯ ಹೆಸರು ಹರ್ಕತ್ ಉಲ್ ಜಿಹಾದ್ ಇ ಇಸ್ಲಾಮಿ. ಇದು ಹುಟ್ಟಿದ್ದು ಅಫಘಾನಿಸ್ತಾನದ ಯುದ್ಧದ ನಂತರ. ಇದು ಕಾರ್ಯಪ್ರವೃತ್ತವಾದದ್ದು ಭಾರತದ ಜಮ್ಮುಕಾಶ್ಮೀರದಲ್ಲಿ. ಮಾತ್ರವಲ್ಲ ದೂರದ ಗುಜರಾತಿನಲ್ಲೂ ಕೂಡ. ಗುಜರಾತ್‍ನಲ್ಲಿ ಹಿಂದೆ ಬರೇಲ್ವಿ ಮುಸ್ಲಿಮರ ಕೈಯಲ್ಲಿದ್ದ ಮಸೀದಿಗಳಲ್ಲಿ ನೂರಕ್ಕೆ ಎಂಬತ್ತರಷ್ಟು ಮಸೀದಿಗಳು ಇಂದು ತಬ್ಲೀಘಿಯ ನಿಯಂತ್ರಣದಲ್ಲಿವೆ (ತಬ್ಲೀಘಿಯ ಕಾರ್ಯತಂತ್ರದ ಒಂದು ಭಾಗ, ಹಳ್ಳಿಹಳ್ಳಿಗಳಲ್ಲಿ ಆವರಿಸಿಕೊಂಡು ಅಲ್ಲಿನ ಮಸೀದಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು. ಇನ್ನೊಂದು ಭಾಗ: ಹಳ್ಳಿಹಳ್ಳಿಗಳಲ್ಲೂ ದಾವಾ ಹೆಸರಲ್ಲಿ ಸಾವಿರಾರು ಮಂದಿಯನ್ನು ಜಮಾಯಿಸಿ ಸಮಾವೇಶ ಮಾಡಿ, ಅಲ್ಲಿ ಧಾರ್ಮಿಕ ಉಡುಗೆಯಲ್ಲಿರುವ ಉಗ್ರ ಮೂಲಭೂತವಾದಿಗಳಿಂದ ಉಪನ್ಯಾಸ ಮಾಡಿಸುವುದು). ಈ ಹರ್ಕಟ್ ಸಂಘಟನೆ ಭಾರತವಲ್ಲದೆ ಬಾಂಗ್ಲಾದೇಶ, ಯುನೈಟೆಡ್ ಕಿಂಗ್‍ಡಂ, ಅಮೆರಿಕಾ ಸಂಯುಕ್ತ ಸಂಸ್ಥಾನ, ನ್ಯೂಜಿಲೆಂಡ್‍ಗಳಲ್ಲಿ; ಮಾತ್ರವಲ್ಲ ಇಸ್ರೇಲ್‍ನಲ್ಲೂ ಸಕ್ರಿಯವಾಗಿದೆ ಎಂದರೆ ನಂಬುತ್ತೀರಾ? 2011ರಲ್ಲಿ ಈ ಜಿಹಾದಿ ಸಂಘಟನೆಯ ಉಗ್ರರು ಇಟ್ಟ ಬಾಂಬ್‍ನಿಂದ ದೆಹಲಿಯಲ್ಲಿ ನಡೆದ ದುರ್ಘಟನೆಯಲ್ಲಿ 14 ಮಂದಿ ಸತ್ತರು, 94 ಮಂದಿ ಪ್ರಾಣಾಂತಿಕ ಅಪಾಯಗಳಿಗೆ ತುತ್ತಾದರು. 2006ರ ಮಾರ್ಚ್‍ನಲ್ಲಿ ವಾರಾಣಸಿಯ ಸಂಕಟಮೋಚನ ಮಂದಿರದಲ್ಲಿ ಬಾಂಬ್ ಸ್ಫೋಟ ನಡೆಸಿದ್ದು ಇದೇ ಸಂಘಟನೆ. ಈ ಹುಚ್ಚರು ಬಾಂಗ್ಲಾದೇಶದ ಕವಿ ಶಂಸೂರ್ ರಹ್ಮಾನ್, ಗುಜರಾತಿನ ಗೃಹಸಚಿವರಾಗಿದ್ದ ಹರೇನ್ ಪಾಂಡ್ಯಾ ಸೇರಿದಂತೆ ಜಗತ್ತಿನ ಹತ್ತುಹಲವು ಪ್ರಮುಖರ ಮೇಲೆ ಕೊಲೆಯತ್ನ, ಆತ್ಮಾಹುತಿ ದಾಳಿ ನಡೆಸಿದ್ದಾರೆ. ಬೇರೆಲ್ಲ ಬಿಡಿ, ಮೆಕ್ಕಾದ ಮಸೀದಿಗೇ ಬಾಂಬ್ ಇಡಲು ಹೋದವರು ಈ ಸಂಘಟನೆಯ ಉಗ್ರರು!

ತಬ್ಲೀಘಿ ಜಮಾತ್, ಆಗಲೇ ಹೇಳಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಸಕ್ರಿಯ. ಅಲ್ಜೀರಿಯಾದಲ್ಲಿ "ಇಸ್ಲಾಮಿಕ್ ಸಾಲ್ವೇಶನ್ ಫ್ರಂಟ್" ಅನ್ನು ಸ್ಥಾಪಿಸಿದ ನಾಲ್ಕು ಸಂಘಟನೆಗಳ ಪೈಕಿ ಈ ತಬ್ಲೀಘಿಯೂ ಒಂದು ಸದಸ್ಯ. ಮೊರೊಕ್ಕೋ ದೇಶದಲ್ಲಿ ಕಾಸಾಬ್ಲಾಂಕಾ ಸಿನೆಗಾಗ್ (ಯಹೂದ್ಯರ ಪ್ರಾರ್ಥನಾ ಮಂದಿರ) ಮೇಲೆ 2003ರಲ್ಲಿ ಬಾಂಬ್ ದಾಳಿ ನಡೆಸಿದ್ದು ಇದೇ ತಬ್ಲೀಘಿಯ ಅಂಗಸಂಸ್ಥೆಯಾದ ದಾವಾ ವ ತಬ್ಲೀಘ್. ಡಚ್ ಸಿನೆಮಾ ನಿರ್ದೇಶಕ ಥಿಯೋ ವ್ಯಾನ್‍ಗೋನನ್ನು ಕೊಂದವರು ಇದೇ ತಬ್ಲೀಘಿಯ ಸದಸ್ಯರು ಎಂದು ಡಚ್ ಪೊಲೀಸರ ತನಿಖಾವರದಿಗಳು ಹೇಳುತ್ತಿವೆ. 2002! 2002! ಗೋಧ್ರಾ! ಗೋಧ್ರಾ! ಎಂದು ನಮ್ಮ ಬುದ್ಧಿಜೀವಿಗಳು ಸಾರಿ ಸಾರಿ ನೂರು ಸಾವಿರ ಸಾರಿ ಕೂಗಿ ಹೇಳುವುದನ್ನು ಕೇಳಿಯೇ ಇದ್ದೇವೆ ತಾನೆ? ಈ ಗೋಧ್ರಾ ಘಟನೆ ನಡೆಯುವುದಕ್ಕೆ ಕಾರಣವಾದ "ಹಿಂದೂ ಕಾರ್ಯಕರ್ತರನ್ನು ರೈಲುಬೋಗಿಯಲ್ಲಿ ಜೀವಂತ ಸುಟ್ಟ ಪ್ರಕರಣ" ಸುತ್ತಿಕೊಂಡಿರುವುದು ಮೌಲಾನಾ ಉಮರ್‍ಜಿ ಎಂಬಾತನ ಕೊರಳನ್ನು. ಈತ ತಬ್ಲೀಘಿ ಜಮಾತ್‍ನ ಸದಸ್ಯ ಮಾತ್ರವಲ್ಲ ಅತ್ಯಂತ ಪ್ರಭಾವಶಾಲಿ ನಾಯಕ ಕೂಡ. ಅರ್ಥಾತ್, ಗುಜರಾತಿನಲ್ಲಿ ಗೋಧ್ರಾ ಹತ್ಯಾಕಾಂಡ ಎಂಬ ಕರಾಳ ಅಧ್ಯಾಯ ಬರೆಯಲ್ಪಡುವುದಕ್ಕೆ ಮೂಲ ಕಾರಣವೇ ತಬ್ಲೀಘಿ ಜಮಾತ್. 2003ರ ಮೇ ತಿಂಗಳಲ್ಲಿ 40 ಮಂದಿಯ ಜೀವ ತೆಗೆದ ಕಾಸಾಬ್ಲಾಂಕ ಭಯೋತ್ಪಾದನಾ ದಾಳಿಯ ಪ್ರಮುಖ ರೂವಾರಿ ಯೂಸಫ್ ಫಿಕ್ರಿ, ತಬ್ಲೀಘಿಯ ಮತ್ತೊಂದು ಅಂಗಸಂಸ್ಥೆ ಅತ್-ತಕ್‍ಫೀರ್ ವಲ್-ಹಿಜ್ರಾ ಎಂಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ. ಬಹುಶಃ ಮ್ಯಾಕ್ ಡೊನಾಲ್ಡ್ ಜಗತ್ತಿನಲ್ಲಿ ತೆರೆದಿರುವ ಬರ್ಗರ್ ಅಂಗಡಿಗಳ ಸಂಖ್ಯೆಗಿಂತ ಈ ತಬ್ಲೀಘಿ ಹುಟ್ಟುಹಾಕಿರುವ ಭಯೋತ್ಪಾದನಾ ಸಂಸ್ಥೆಗಳ ಸಂಖ್ಯೆಯೇ ಹೆಚ್ಚೋ ಏನೋ!

ಇಷ್ಟಕ್ಕೂ ಈ ಸಂಘಟನೆ ನೇರವಾಗಿ ಭಯೋತ್ಪಾದನಾ ಕೇಂದ್ರಗಳಿಗೆ ಯುವಕರನ್ನು ಸಪ್ಲೈ ಮಾಡಿದ್ದಕ್ಕೆ ದಾಖಲೆಗಳಿಲ್ಲ. ಆದರೆ ಫಿಲಿಪ್ಪೈನ್ಸ್‍ನಲ್ಲಿ ಈ ಸಂಘಟನೆ ಸೌದಿಯ ದುಡ್ಡಲ್ಲಿ 11,000 ಸದಸ್ಯರ ಬೃಹದ್ ವೃಕ್ಷವಾಗಿ ಬೆಳೆದಿದೆ; ದೇಶದಲ್ಲಿ ಮೂಲಭೂತವಾದ ಹರಡುತ್ತಿರಲು ತಬ್ಲೀಘಿ ಮತ್ತು ಅದು ಬಳಸುತ್ತಿರುವ ಸೌದಿ ದುಡ್ಡೇ ಕಾರಣ ಎಂದು ಅಲ್ಲಿನ ಸರಕಾರವೇ ಕೆಂಡ ಕಾರಿದೆ. 1999ರ ಒಂದೇ ವರ್ಷದಲ್ಲಿ ಉಜ್ಬೆಕಿಸ್ತಾನದಿಂದ 400 ಉಜ್ಬೆಕ್‍ಗಳು ಈ ಸಂಘಟನೆಯ ಭಯೋತ್ಪಾದನಾ ತರಬೇತಿ ಕ್ಯಾಂಪುಗಳಲ್ಲಿ ತರಬೇತಿ ಪಡೆಯಲು ಸೇರಿದ್ದರೆಂಬುದಕ್ಕೆ ದಾಖಲೆ ಇದೆ. 1998ರ ಒಂದೇ ವರ್ಷದಲ್ಲಿ, ಇಂಗ್ಲೆಂಡಿಂದ ಈ ಸಂಘಟನೆಯ ಕ್ಯಾಂಪುಗಳಲ್ಲಿರಲೆಂದು ಬಂದವರು 2000 ಯುವಕರು! ಫ್ರೆಂಚ್ ಸರಕಾರದ ತನಿಖಾ ದಳ ಹೇಳುವಂತೆ ಫ್ರಾನ್ಸಿನಿಂದ ಬಂದು ಅಲ್‍ಖೈದಾ ಸೇರಿದ 100 ಯುವಕರನ್ನು ಹಾಗೆ ಸೆಳೆದುತರುವ ಕೆಲಸ ಮಾಡಿದ್ದು ಇದೇ ತಬ್ಲೀಘಿ. ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ಈ ಸಂಘಟನೆ, ವರ್ಷದಿಂದ ವರ್ಷಕ್ಕೆ ತನ್ನ ಸಮಾವೇಶದ ಗಾತ್ರವನ್ನು ದೊಡ್ಡದು ಮಾಡುತ್ತಲೇ ಇದೆ. ಮೊನ್ನೆ ಮಾರ್ಚ್ ಎರಡನೇ ವಾರದಲ್ಲಿ ನಮ್ಮ ದೆಹಲಿಯಲ್ಲಿ ಈ ತಬ್ಲೀಘಿಗಳ ಸಮಾವೇಶ ಆಯ್ತಲ್ಲ? ಅದೇ ಸಮಯದಲ್ಲಿ ಅವರ ಅಂತಾರಾಷ್ಟ್ರೀಯ ಮುಖ್ಯ ಕಚೇರಿಯಾದ (ಪಾಕಿಸ್ತಾನದ) ರಾಯ್ವಿಂಡಿನಲ್ಲಿ ಕೂಡ ಬೃಹತ್ ಸಮಾವೇಶ ಆಯಿತು (ಇದಕ್ಕೆ ಇಜ್ತಿಮಾಹ್ ಎಂದು ಹೆಸರು). ಭಾಗವಹಿಸಿದ ಜನ ಎಷ್ಟು ಗೊತ್ತೆ? ಎರಡೂವರೆ ಲಕ್ಷ! ಬಂದವರು ಅಕ್ಷರಶಃ ಇಲ್ಲಿ ದೆಹಲಿಯಲ್ಲಿ ಮಾಡಿದಂತೆಯೇ ವರ್ತಿಸಿದ್ದಾರೆ. ರೋಗವನ್ನು ಉದ್ದೇಶಪೂರ್ವಕ ಪಾಕಿಸ್ತಾನದ ಮೂಲೆಮೂಲೆಗೆ ಒಯ್ದಿದ್ದಾರೆ.

ಪ್ರತಿ ದಿನ, ಪ್ರತಿ ಕ್ಷಣ ಹೊಸ ವರದಿಗಳು ಬರುತ್ತಿವೆ. ನೋಟುಗಳಲ್ಲಿ ಸಿಂಬಳ ಒರೆಸಿ ಕೊಡುತ್ತಿರುವ ಉಗ್ರ, ಕ್ವಾರಂಟೈನ್ ಮಾಡಲು ಕರೆದೊಯ್ಯುವಾಗ ಬಸ್ಸಿಂದ ಸಿಕ್ಕಸಿಕ್ಕವರ ಮೇಲೆ ಉಗುಳುತ್ತ ತೆರಳಿದ ಉಗ್ರ, ಆಸ್ಪತ್ರೆಯಲ್ಲಿ ಮತ್ತೆ ಎಲ್ಲರೂ ಒಟ್ಟಾಗಿ ಮೈಗೆ ಮೈ ತಾಗಿಸಿಕೊಂಡು ನಮಾಜಿಗೆ ಕುಳಿತ ದೃಶ್ಯ, ಮೋದಿಯಲ್ಲ ಅವನಪ್ಪ ಬಂದರೂ ಬಗ್ಗುವುದಿಲ್ಲ ಎನ್ನುತ್ತ ಯಾವ ಪರೀಕ್ಷೆಗೂ ಬರೆನು ಎಂದು ಮೊಂಡುಕೂತಿರುವ ಉಗ್ರರು, ಸಾಯುವುದೇ ಆದರೆ ಸಾಯುತ್ತೇವೆ ಆದರೆ ಸಾಯುವ ಮುನ್ನ ನೂರು ಮಂದಿಗೆ ರೋಗ ಹಬ್ಬಿಸಿ ಸಾಯುತ್ತೇವೆ ಎನ್ನುತ್ತ ಊರು ಊರು ಕೇರಿ ಕೇರಿ ತಿರುಗುತ್ತಿರುವ ತಬ್ಲೀಘಿ ಉಗ್ರರು... ಇದನ್ನೆಲ್ಲ ನೋಡಿದರೆ ಏನನ್ನಿಸುತ್ತದೆ? ಇವರ ಉದ್ದೇಶ ಏನು? ಇದನ್ನು ಬರೆಯುತ್ತಿರುವ ಹೊತ್ತಿಗೆ ಗಾಜಿಯಾಬಾದಿನಲ್ಲಿ ಆಸ್ಪತ್ರೆಯಲ್ಲಿ ದಾದಿಯರ ಮುಂದೆ ನಗ್ನರಾಗಿ ತಿರುಗುತ್ತಿರುವ, ಅಶ್ಲೀಲ ಹಾಡುಗಳನ್ನು ಜೋರುದನಿಯಲ್ಲಿ ಹಾಡುತ್ತಿರುವ, ಸಿಗರೇಟಿಗಾಗಿ ಪೀಡಿಸುತ್ತಿರುವ ಉಗ್ರರ ಸುದ್ದಿಯೂ ಬರುತ್ತಿದೆ. ಇವರ್ಯಾರೂ "ರೋಗಿ"ಗಳಲ್ಲ, "ಸೋಂಕಿತರ"ಲ್ಲ, ಬದಲಾಗಿ "ಉಗ್ರರು" ಅಷ್ಟೆ. ಇವರನ್ನು ರೋಗಿಗಳೆಂದೋ ಸೋಂಕಿತರೆಂದೋ ಕಾಯಿಲೆಯ ಶಂಕಿತರೆಂದೋ ಬ್ರೆಡ್ಡು, ಹಾಲು, ವೆಂಟಿಲೇಟರು ಕೊಟ್ಟು ಸಾಕುವ ಬದಲಿಗೆ ಜೈಲಿನಲ್ಲಿ ಹಾಕಬೇಕು. ದೂರದಲ್ಲಿ ನಿಲ್ಲಿಸಿ ಶೂಟ್ ಮಾಡಿದರೂ ಸರಿಯೇ. ಕ್ಯಾನ್ಸರ್ ಕೋಶಗಳನ್ನು ಹೇಗೆ ನಿರ್ದಾಕ್ಷಿಣ್ಯವಾಗಿ ಕಿತ್ತು ತೆಗೆದು ಜೀವ ಉಳಿಸಿಕೊಳ್ಳುವ ಕೆಲಸ ಮಾಡಬೇಕೋ ಹಾಗೆ, ಈ ತಬ್ಲೀಘಿ ಜಮಾತ್ ಉಗ್ರರನ್ನು ನಿರ್ಧಾಕ್ಷಿಣ್ಯವಾಗಿ ಹದ್ದುಬಸ್ತಿನಲ್ಲಿಟ್ಟು ದೇಶವನ್ನು ರೋಗದಿಂದ ಕಾಪಾಡುವ ಕೆಲಸ ಮಾಡಬೇಕಾಗಿದೆ. ಕ್ಯಾನ್ಸರ್ ಬಂದಾಗ ಬ್ಯಾಂಡೇಜ್ ಹಾಕಿ, ಮುಲಾಮು ಹಚ್ಚಿ, ಗುಣವಾಗುತ್ತೋ ಏನೋ ಎಂದು ಕಾದರೆ ಏನಾಗುತ್ತದೋ ಹಾಗೆಯೇ ಆದೀತು ಈ ಉಗ್ರರನ್ನು ಊರೆಲ್ಲ ತಿರುಗಾಡಲು ಬಿಟ್ಟು ನಾವು ಸೋಶಿಯಲ್ ಡಿಸ್ಟೆನ್ಸಿಂಗ್ ಜಪ ಮಾಡುತ್ತ ಕೂತರೆ!

ಅರ್ಥ ಮಾಡಿಕೊಳ್ಳಿ, ಇದು ಉಗ್ರರ ಹೊಸ ವರಸೆ. ಹೊಸ ಬಗೆಯ ಭಯೋತ್ಪಾದನೆ. Bio-ತ್ಪಾದನೆ!

ಮಂಗಳವಾರ, ಏಪ್ರಿಲ್ 17, 2018

*ವೈಷ್ಣವಾನಾಂ ಯಥಾ ಶಂಭುಃ*

ತಾರತಮ್ಯದಲ್ಲಿ 5ನೇ ಕಕ್ಷೆಯಲ್ಲಿ ಬರುವ ದೇವನು ರುದ್ರ ದೇವನು. ಎಲ್ಲಾ ವೈಷ್ಣವರು ಅವಶ್ಯವಾಗಿ ಪೂಜಿಸಲೇ ಬೇಕಾದ ವೈಷ್ಣವೋತ್ತಮ ದೇವನೀತನು.
*ವೈಷ್ಣವಾನಾಂ ಯಥಾ ಶಂಭುಃ* 
ಎಂದು ಹೇಳಿದಂತೆ ವೈಷ್ಣವರಲ್ಲಿ ಭಗವಂತನ ವಿಭೂತಿರೂಪವು ರುದ್ರನಲ್ಲಿ ಅತಿಶಯವಾಗಿದೆ.
ಆದ್ದರಿಂದ ರುದ್ರನು ಅತ್ಯಂತ ಪ್ರಸನ್ನನಾಗಿರುವ ಶಿವರಾತ್ರಿಯಂದು ರುದ್ರನ ವಿಶೇಷ ಪೂಜೆಯನ್ನು ನಾವೆಲ್ಲರೂ ಮಾಡಬೇಕು.
ರಾತ್ರಿ ಶಬ್ದವು ಅಜ್ಞಾನಕ್ಕೆ ದ್ಯೋತಕ. ಯಾಕೆಂದರೆ ಕತ್ತಲಿನಲ್ಲಿ ಯಾವುದೇ ವಸ್ತುವಿನ ಜ್ಞಾನ ಬರಲಾರದು.
ಆದ್ದರಿಂದ ಅಜ್ಞಾನವೆಂಬ ಕತ್ತಲನ್ನು ಓಡಿಸಿ ಭಗವಜ್ಜ್ಞಾನವೆಂಬ ಬೆಳಕನ್ನು ನೀಡುವ ದೇವತೆ ಶಿವ.
ಆದ್ದರಿಂದ ಈ ದಿನವು #ಶಿವರಾತ್ರಿ ಎಂದು ಪ್ರಸಿದ್ಧ.
ಭಗವಾನ್ ಶಿವನು ಲಿಂಗರೂಪಿಯಾಗಿ ಉದಿಸಿದ
ದಿನವು ಶಿವರಾತ್ರಿ ಎಂದು ಪ್ರಸಿದ್ಧವಾಗಿದೆ.
ರುದ್ರನು ಲಿಂಗರೂಪಿಯಾಗಿ ಉದಿಸಿದನು ಎಂದರೆ ಏನರ್ಥ?
*ಲೀನಂ ಗಮಯತೀತಿ ಲಿಂಗಃ* ಎಂದು ಇರುವಂತೆ ತನ್ನಲ್ಲಿ ಲೀನವಾಗಿರುವ ಭಗವಂತನನ್ನು ತೋರಿಸಿಕೊಡುವ ರೂಪವೇ ಲಿಂಗ.
ಆದ್ದರಿಂದ ರುದ್ರನು ಈ ರೂಪದಿಂದ ಉದಿಸಿ ಅಜ್ಞರಿಗೆ   ಮೋಹವನ್ನು ಕೊಟ್ಟು ಮುಮುಕ್ಷುಗಳಿಗೆ ಭಗವಂತನನ್ನು ತೋರಿಸಿ ಕೊಟ್ಟ ದಿನ ಶಿವರಾತ್ರಿ.
ಈ ದಿನ ರುದ್ರನು ವಿಷಪಾನವನ್ನು ಮಾಡಿದ ದಿನವೆಂದೂ ಹೇಳುತ್ತಾರೆ.
ಅಂದು ರುದ್ರನು ವಿಷಪಾನವನ್ನು ಮಾಡಿ ಅದರ ನಂಜು ಏರದಿರಲು ಉಪವಾಸವಿದ್ದು ರಾತ್ರಿ ಎಲ್ಲಾ ಜಾಗರಣೆ ಮಾಡಿದನು.
ಆದ್ದರಿಂದ ಎಲ್ಲಾ ಭಕ್ತರು ಅಂದು ಉಪವಾಸ ಇದ್ದು ಜಾಗರಣೆ ಮಾಡಬೇಕು ಎಂದು ಹೇಳುತ್ತಾರೆ.
ರುದ್ರನು ಸ್ವತಃ ಎಲ್ಲರ ನಂಜನ್ನು ಪರಿಹರಿಸುವವನಾದ್ದರಿಂದ ಅವನಿಗೆ ನಂಜು ಏರಲು ಸಾಧ್ಯವಿಲ್ಲ. ಅಲ್ಲದೆ ಪದ್ಮಪುರಾಣದಲ್ಲಿ ಸ್ವತಃ ತಾನೇ ಹೇಳಿಕೊಂಡಿದ್ದಾನೆ.
ಎಲ್ಲಾ ದೇವತೆಗಳೂ ಹಾಲಾಹಲವಿಷ ಬಂದಾಗ ಅದರ ಉರಿ ತಾಳಲಾರದೆ ಓಡಲು ಶುರುಮಾಡುತ್ತಾರೆ.
ಆಗ ರುದ್ರ ದೇವರು ದೇವತೆಗಳಿಗೆ ಹೀಗೆ ಹೇಳುತ್ತಾರೆ.
*ಅಹಮಾಹಾರಯಿಷ್ಯಾಮಿ ಕಾಲಕೂಟಂ
ಮಹಾವಿಷಮ್।ಇತ್ಯುಕ್ತಾಸ್ತೇ ಮಯಾ ಸರ್ವೇ ದೇವಾ ಇಂದ್ರಪುರೋಗಮಾಃ॥*
ಎಂದು ನಾನು ಈ ವಿಷವನ್ನು ಪಾನಮಾಡುತ್ತೇನೆ.
ನನಗೆ ಈ ವಿಷವು ಏನೂ ಮಾಡಲಾರದು.
ಯಾಕೆಂದರೆ ನಾನು ಹೃದಯದಲ್ಲಿ ನಾರಾಯಣನನ್ನು ಧ್ಯಾನ ಮಾಡುತ್ತಾ *ಅಚ್ಯುತಾನಂತಗೋವಿಂದ* ಎಂಬ ನಾಮತ್ರಯ ಮಂತ್ರವನ್ನು ಉಚ್ಚರಿಸುತ್ತಾ ಈ ವಿಷವನ್ನು ಪಾನಮಾಡುತ್ತೇನೆ.
ಆದ್ದರಿಂದ ನನಗೆ ಈ ವಿಷವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
*ಧ್ಯಾತ್ವಾ ನಾರಾಯಣಂ ದೇವಂ ಹೃದಯೇ ಗರುಡಧ್ವಜಂ।ಉದಯಾದಿತ್ಯಸಂಕಾಶಂ ಶಂಖಚಕ್ರಗದಾಧರಮ್॥ಏಕಾಗ್ರಮನಸಾ ಧ್ಯಾತ್ವಾ ಸರ್ವದುಃಖಹರಂ ಪ್ರಭುಮ್।ನಾಮತ್ರಯಂ ಮಹಾಮಂತ್ರಂ ಜಪನ್ ಭಕ್ತ್ಯಾ ಸಮನ್ವಿತಃ॥ತದ್ವಿಷಂ ಪೀತವಾನ್ ಘೋರಂ ಆದ್ಯಂ ಸರ್ವಭಯಂಕರಮ್।ನಾಮತ್ರಯಪ್ರಭಾವಾಚ್ಚ ವಿಷ್ಣೋಃ ಸರ್ವಗತಸ್ಯ ವೈ।ವಿಷಂ ತದಭವಚ್ಚೀರ್ಣಂ ಲೋಕಸಂಹಾರಕಾರಕಂ ॥*
ಎಂದು. ಹೀಗೆ ರುದ್ರ ದೇವರು ತಮ್ಮ ವಿಷದ ನಂಜು ಪರಿಹಾರವಾಗಲು ರಾತ್ರಿಯಿಡೀ ಜಾಗರಣೆ ಮಾಡಿ ನಾಮತ್ರಯ ಮಂತ್ರವನ್ನು ಜಪ ಮಾಡಿದರು.
ಅದರಿಂದ ತಮ್ಮ ಸಕಲ ವಿಪಪಾನದ ತೊಂದರೆಯನ್ನು ಪರಿಹರಿಸಿಕೊಂಡರು.
ಇದನ್ನು ಅವರೇ ಪಾರ್ವತೀ ದೇವಿಯಲ್ಲಿ ಹೇಳಿಕೊಂಡಿದ್ದಾರೆ.
*ಅಚ್ಯುತಾನಂತಗೋವಿಂದ ಇತಿ ನಾಮತ್ರಯಂ ಹರೇಃ।ಯೋ ಜಪೇತ್ ಪ್ರಯತೋ ಭಕ್ತ್ಯಾ ಪ್ರಣವಾದ್ಯಂ ನಮೋಂತಕಮ್॥ತಸ್ಯಮೃತ್ಯು ಭಯಂ ನಾಸ್ತಿ ವಿಷರೋಗಾಗ್ನಿಗಂ ಮಹತ್॥ನಾಮತ್ರಯಂ ಮಹಾಮಂತ್ರಂ ಜಪೇದ್ಯಃಪ್ರಯತಾತ್ಮವಾನ್।ಕಾಲಮೃತ್ಯುಭಯಂ ಚಾಪಿ ತಸ್ಯ ನಾಸ್ತಿ ಕಿಮನ್ಯತಃ॥ಇತಿ ನಾಮತ್ರಯೇಣೈವ ಪೀತಂ ದೇವಿ ಮಯಾ ವಿಷಮ್॥*
ಎಂದು. ಆದ್ದರಿಂದ ಶಿವರಾತ್ರಿಯಂದು ಮಹಾಪ್ರದೋಷಸಮಯವಾಗಿರುವುದರಿಂದ ಅಂದು ಶಿವನ ಅನುಗ್ರಹಕ್ಕಾಗಿ ರುದ್ರ ಪಾರಾಯಣ, ಶಿವಸ್ತುತಿ ಪಾರಾಯಣ ಮಾಡುವುದರ ಜೊತೆಗೆ ವಿಶೇಷವಾಗಿ ನಾಮತ್ರಯ ಮಂತ್ರದ ಜಪವನ್ನೂ ಮಾಡಬೇಕು.
ಪ್ರತಿನಿತ್ಯ ರುದ್ರನು ಪ್ರದೋಷಸಮಯವಾದ ಮುಸ್ಸಂಜೆಯಂದು ತನ್ನ ಗಣಗಳೊಂದಿಗೆ ಸ್ಮಶಾನದಿಂದ ಹೊರಗೆ ಬಂದು ಎಲ್ಲಾ ಭಕ್ತರ ಸಂಕಟವನ್ನು ಪರಿಹರಿಸಿದರೆ ಶಿವರಾತ್ರಿಯೆಂಬ ಮಹಾಪ್ರದೋಷದಂದು ವಿಶೇಷವಾಗಿ ನಮ್ಮ ಸಂಕಟಪರಿಹರಿಸಿ ಅನುಗ್ರಹಿಸುವನು