ಭಾನುವಾರ, ಏಪ್ರಿಲ್ 12, 2020

ತಬ್ಲೀಘಿ ಜಮಾತ್.

*ಡೌಟೇ ಬೇಡ, ಇದು ಹೊಸ "Bio-ತ್ಪಾದನೆ"!*
- ರೋಹಿತ್ ಚಕ್ರತೀರ್ಥ | ಹೊಸ ದಿಗಂತ 4 ಏಪ್ರಿಲ್ 2020

ತಬ್ಲೀಘಿ ಜಮಾತ್. ಆ ಹೆಸರನ್ನು ನಿನ್ನೆ ಮೊನ್ನೆಯವರೆಗೆ ಯಾರೂ ಕೇಳಿರಲಿಲ್ಲ. ಆದರೆ ಒಂದೇ ದಿನದಲ್ಲಿ ಈ ಸಂಘಟನೆ ದೇಶದ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದೆ. ದೇಶದ ಎಲ್ಲ ಸುದ್ದಿವಾಹಿನಿಗಳ ಪ್ರೈಮ್ ಟೈಮ್ ನ್ಯೂಸುಗಳ ಪ್ರಮುಖ ಸುದ್ದಿಯಾಗಿ ಮಿಂಚಿದೆ. ಏನಿದು, ಯಾಕಿದು, ಯಾರಿದು, ಹೇಗಿದು ಎಂದು ಒಂದಷ್ಟು ಕುತೂಹಲಿಗಳು ತಬ್ಲೀಘಿಯ ಇತಿಹಾಸ ಜಾಲಾಡುತ್ತಿದ್ದಾರೆ. ಮಿಕ್ಕಂತೆ ಮೇಲುಮೇಲಕ್ಕೆ ಟಿವಿಸುದ್ದಿಗಳನ್ನು ನೋಡುವ, ಹೆಡ್ಡಿಂಗುಗಳ ಮೇಲಷ್ಟೇ ಕಣ್ಣಾಡಿಸಿ ಪೇಪರೋದಿ ಮುಗಿಸುವ ಮಂದಿಗೆ "ಅದ್ಯಾವುದೋ ಡೆಲ್ಲಿಯ ಮಸೀದಿಯಂತೆ. ಅಲ್ಲಿ ನಾಲ್ಕು ದಿನ ಏನೋ ಅವರದ್ದು ಕಾರ್ಯಕ್ರಮ ಇತ್ತಂತೆ. ಅದಕ್ಕೆ ಬೇರೆ ಬೇರೆ ರಾಜ್ಯಗಳಿಂದ ಒಂದಷ್ಟು ಮಂದಿ ಸಾಬ್ರು ಹೋಗಿದ್ದರಂತೆ. ವಾಪಸು ಬರುವಾಗ ಅವರಲ್ಲಿ ಕೆಲವರಿಗೆ ಕೊರೋನಾ ಇತ್ತಂತೆ" ಎಂಬ ಯಃಕಶ್ಚಿತ್ ಸುದ್ದಿ. ಆದರೆ ಇದು ಇಷ್ಟೆಯೇ? ಇದು ನಮ್ಮ ಕಣ್ಣಿಗೆ ಕಾಣಿಸುತ್ತಿರುವಷ್ಟೇ ತಿಳಿಯಾಗಿದೆಯೆ, ಇಲ್ಲ ಆಳವಿದೆಯೆ? ಕೊರೋನಾ ವೈರಸ್ಸು ಅವರ ಇವರ ನಿಮ್ಮ ನಮ್ಮ ಯಾರ ಮನೆಬಾಗಿಲನ್ನೂ ಯಾವ ಸಮಯದಲ್ಲಾದರೂ ತಟ್ಟಬಹುದೆಂಬ ಸನ್ನಿವೇಶ ಇರುವಾಗ ತಬ್ಲೀಘಿಗಳ ಬಗ್ಗೆ ಸ್ವಲ್ಪ ಡೀಟೇಲಾಗಿ ತಿಳಿಯಲೇಬೇಕಲ್ಲವೆ?

ನಿಮಗೆ ಗೊತ್ತಿರಲಿ, ಇದು ಕೇವಲ ಒಂದು ಮಸೀದಿ ಅಲ್ಲ. ಅಥವಾ ಕೇವಲ ದೆಹಲಿಗೆ ಮೀಸಲಾಗಿರುವ ಒಂದು ಸ್ಥಳೀಯ ಸಂಸ್ಥೆಯೂ ಅಲ್ಲ. ಇದೊಂದು ಸಮುದಾಯ. ಇಂಗ್ಲೀಷಿನಲ್ಲಿ ಹೇಳಬೇಕೆಂದರೆ "ಕಲ್ಟ್". ತಮ್ಮದೇ ಆದ ಸಂವಿಧಾನ, ಸಿದ್ಧಾಂತ, ಆಚರಣೆ, ಸಂಪ್ರದಾಯ, ಯೋಚನೆಗಳನ್ನಿಟ್ಟುಕೊಂಡ ಒಂದಷ್ಟು ಮಂದಿಯ ಗುಂಪು. ಒಂದಷ್ಟು - ಎಂದರೆ ನೂರಿನ್ನೂರು ಅಲ್ಲ. ಲಕ್ಷಾಂತರ ಸಂಖ್ಯೆಯಲ್ಲಿ ಸದಸ್ಯರಿರುವ ದೊಡ್ಡ ಸಮುದಾಯವೇ! ಮತ್ತು ಇದು ಕೇವಲ ದೆಹಲಿಯ ಒಂದು ಗಲ್ಲಿಗೆ ಸೀಮಿತವಾಗಿರುವ ಸಮುದಾಯವಲ್ಲ. ಇದರ ಬೇರು, ಬಿಳಲುಗಳು ಅಮೆರಿಕಾದಿಂದ ಕೊರಿಯಾವರೆಗೆ ಎಲ್ಲೆಡೆ ಹಬ್ಬಿವೆ. ಫ್ರಾನ್ಸ್‍ನ ಸರಕಾರ "ಮೂಲಭೂತವಾದಿಗಳು/ಉಗ್ರರು" ಎಂದು ಪಟ್ಟಿಮಾಡಿರುವ ಮಂದಿಯಲ್ಲಿ 80%ರಷ್ಟು, ಈ ಗುಂಪಿಗೆ ಸೇರಿದವರು. ಅಮೆರಿಕಾದಲ್ಲೂ ದೊಡ್ಡ ಸಂಖ್ಯೆಯಲ್ಲಿ ತಬ್ಲೀಘಿ ಜಮಾತ್ ಸದಸ್ಯರಿದ್ದಾರೆ. "ಇವರೆಲ್ಲ ನಮಗೆ ದೊಡ್ಡ ತಲೆನೋವಾಗಿದ್ದಾರೆ" ಎಂದು ಅಲ್ಲಿನ ಎಫ್‍ಬಿಐನ ಡೆಪ್ಯುಟಿ, ಈಗಲ್ಲ, 2003ರಲ್ಲಿ ಹೇಳಿಬಿಟ್ಟಿದ್ದ. ಅಲ್‍ಖೈದಾ ಗೊತ್ತಲ್ಲ? ಅದಕ್ಕೆ ಸದಸ್ಯರನ್ನು ಆರಿಸಿ ಕಳಿಸುತ್ತಿದ್ದ ರಿಕ್ರ್ಯೂಟ್‍ಮೆಂಟ್ ವಿಂಗ್ ಇದೇ ತಬ್ಲೀಘಿ. ಅರ್ಥವಾಯಿತಾ ವಿಷಯದ ಗಂಭೀರತೆ?

ಭಯೋತ್ಪಾದಕ ಸಂಘಟನೆಗಳಿಗೆ ಮುಖ್ಯವಾಗಿ ಮೂರು ಮುಖಗಳಿರುತ್ತವೆ. ಒಂದು - ಅವುಗಳ ಕೋರ್ ಗ್ರೂಪ್. ಅಂದರೆ ಸ್ವತಃ ಉಗ್ರರು. ಇವರು ದಿನನಿತ್ಯ ಬಂದೂಕಿನ ಜೊತೆ ಸಮರಾಭ್ಯಾಸ ನಿರತರು. ಮೈಗೆ ಬಾಂಬು ಕಟ್ಟಿಕೊಂಡವರು. ಉಗ್ರಕೃತ್ಯಗಳ ನೀಲನಕ್ಷೆ ತಯಾರಿಸುವವರು. ಉಗ್ರಕೃತ್ಯಗಳನ್ನು ಕಾರ್ಯರೂಪಕ್ಕಿಳಿಸುವವರು. ಪೊಲೀಸರ, ತನಿಖಾದಳಗಳ "ಮೋಸ್ಟ್ ವಾಂಟೆಡ್" ಪಟ್ಟಿಯಲ್ಲಿರುವವರು. ಇನ್ನು ಎರಡು - ಬುದ್ಧಿಜೀವಿಗಳು. ಸಮಾಜದಲ್ಲಿ ಸಭ್ಯರು. ಅರ್ಥಾತ್ ಸಭ್ಯರೆಂದೂ ಬುದ್ಧಿವಂತರೆಂದೂ ನಾಗರಿಕರೆಂದೂ ಬಿಂಬಿಸಿಕೊಂಡವರು. ಉಗ್ರರ ಯಾವುದೇ ಕೃತ್ಯವನ್ನು ಸಮರ್ಥಿಸಿಕೊಳ್ಳುವವರು. ಟಿವಿಯಲ್ಲಿ, ಪತ್ರಿಕೆಗಳಲ್ಲಿ ಉಗ್ರರ ಪರವಾಗಿ ವಾದಿಸುವವರು. ಉಗ್ರನೊಬ್ಬ ಸೈನಿಕರ ಗುಂಡಿಗೆ ಹೆಣವಾದಾಗ "ಪಾಪ, ಸ್ಕೂಲ್ ಟೀಚರ್ ಮಗ ಕರುಣೆಯಿಲ್ಲದ ಸೈನಿಕರ ಗುಂಡಿಗೆ ಸತ್ತುಬಿದ್ದ" ಎಂದು ಬರೆಯುವ ಪ್ರೆಸ್ಟಿಟ್ಯೂಟುಗಳು. ಒಂದಿಪ್ಪತ್ತು ವರ್ಷಗಳ ಹಿಂದಾದರೆ ಇಂಥವರು ಸರಕಾರದ ಪದ್ಮಪ್ರಶಸ್ತಿಗಳನ್ನು ಪಡೆದು, ಮಾಕ್‍ಟೇಲ್ ಪಾರ್ಟಿಗಳಲ್ಲಿ ಕುಡಿದು ತಿಂದು, ರಾಜಕಾರಣಿಗಳ ಜೊತೆ ಮಲಗಿ, ತಮ್ಮ ಜೀವನವನ್ನು ಸುಖವಾಗಿ ಕಳೆದುಹೋಗುತ್ತಿದ್ದರು. ಈಗ ಇಂಥವರು, ಥ್ಯಾಂಕ್ಸ್ ಟು ಸೋಶಿಯಲ್ ಮೀಡಿಯಾ!, ಸಮಾಜದ ಮುಂದೆ ಸ್ವಲ್ಪಮಟ್ಟಿಗೆ ಬೆತ್ತಲಾಗಿದ್ದಾರೆ. ಆದರೂ ಇಂದಿಗೂ ಉಗ್ರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಹೀಗೆ ಕಾರ್ಯ ನಿರ್ವಹಿಸುವವರು ಬೇಕಾದಷ್ಟಿದ್ದಾರೆ. ದೇಶದಲ್ಲೂ ನಮ್ಮ ರಾಜ್ಯದಲ್ಲೂ. ಇನ್ನು ಮೂರನೆಯ ಭಾಗ - ಯಾವ ರೀತಿಯಲ್ಲೂ ಉಗ್ರರ ಜೊತೆ ಸಂಪರ್ಕ ಇದೆಯೆಂಬುದನ್ನು ತೋರಿಸಿಕೊಳ್ಳದ ಸ್ಲೀಪಿಂಗ್ ಸೆಲ್. ಈ ಗುಂಪು, ಸಾಮಾಜಿಕ ಸಂಸ್ಥೆಯ ರೂಪದಲ್ಲೋ ಧಾರ್ಮಿಕ ಸಂಘಟನೆಯ ರೂಪದಲ್ಲೋ ಕಾರ್ಯ ನಿರ್ವಹಿಸುತ್ತಿರುತ್ತದೆ. ಆಗಾಗ ದೊಡ್ಡ ಸಮ್ಮೇಳನಗಳನ್ನು ನಡೆಸುತ್ತದೆ. ನಿರಂತರವಾಗಿ ಯುವಕರಿಗೆ ಗಾಳ ಹಾಕುತ್ತದೆ. ಯುವಕರನ್ನು ವಾರ ವಾರ ಕೂರಿಸಿ ಉಪನ್ಯಾಸ ಕೊಟ್ಟು ತಲೆಗೆಡಿಸುತ್ತದೆ. ಅವರ ತಲೆಯೊಳಗೆ ಮೂಲಭೂತವಾದದ ಸ್ಲೋ ಪಾಯಿಸನ್ ಹರಡುತ್ತದೆ. ಯಾವ ವ್ಯಕ್ತಿ ಸಂಪೂರ್ಣವಾಗಿ ತನಗೆ ವಶವಾಗಿದ್ದಾನೆ ಎಂಬುದನ್ನು ಗುರುತಿಸಿ, ಅವರನ್ನು ಉಳಿದವರಿಂದ ಪ್ರತ್ಯೇಕಿಸಿ, ಉಗ್ರಸಂಘಟನೆಗಳ ಬಾಗಿಲಿಗೆ ತಳ್ಳುವ ಕೆಲಸವನ್ನು ಮಾಡುತ್ತದೆ. ತಬ್ಲೀಘಿ ಜಮಾತ್ ಈ ಮೂರನೆಯ ವರ್ಗದ್ದು.

ಈ ಸಮುದಾಯದ ಮಂದಿ ತಮ್ಮದೇ ಮಸೀದಿಗಳನ್ನು ನಡೆಸುತ್ತಾರೆ. ಅಥವಾ ಯಾವ ಊರಿಗೆ ಹೋಗುತ್ತಾರೋ ಅಲ್ಲಿಯ ಮಂದಿಯನ್ನೂ ಮಸೀದಿಯನ್ನೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ತಮ್ಮ ಮಸೀದಿಗಳಲ್ಲಿ, ಮದ್ರಸಾಗಳಲ್ಲಿ ಮೂಲಭೂತವಾದಕ್ಕೆ ಹೆಚ್ಚು ಹೆಚ್ಚು ವಾಲುತ್ತಿರುವ ಮಂದಿಯನ್ನು ಸೂಕ್ಷ್ಮವಾಗಿ ಗಮನಿಸಿ, ಅವರ ಬಗ್ಗೆ ಮತ್ತಷ್ಟು ವಿಶೇಷ ಕಾಳಜಿ ತೋರುತ್ತಾರೆ. ಅಂಥವರ ಕೈಗೆ ಇವರಿಡುವುದು ಪುಸ್ತಕ, ಮೊಬೈಲು. ಮೊಬೈಲಿನಲ್ಲಿ ಮತ್ತಷ್ಟು ಮನಸ್ಸು ಕೆರಳಿಸುವ ಧಾರ್ಮಿಕ ಭಾಷಣಗಳು (ನೆನಪಿಡಿ: ವಹಾಬಿ ಝಾಕಿರ್ ನಾಯ್ಕ್ ಕೂಡ ಇದೇ ತಬ್ಲೀಘಿ ಬಳಗದ ಸ್ಟಾರ್ ಪರ್ಫಾರ್ಮರ್!). ಅಥವಾ ತಮ್ಮವರನ್ನು ಅನ್ಯರು ತುಳಿಯುವ, ಹೊಡೆಯುವ ಚಿತ್ರಗಳು. ಒಟ್ಟಾರೆ ತಪ್ಪಿದ ದಾರಿ ಮತ್ತೆಂದೂ ಸರಿಯಾಗದಂತೆ ಪೂರ್ತಿ ತಪ್ಪಿಯೇ ಹೋಗಬೇಕು. ಅದಕ್ಕೆ ಬೇಕಾದ ವಿಷ ಊಡುವ ಕೆಲಸ ಇಂಥ ಕೇಂದ್ರಗಳಲ್ಲಾಗುತ್ತದೆ. ತಬ್ಲೀಘಿಯ ಕಾರಸ್ಥಾನ ಪಾಕಿಸ್ತಾನದ ಲಾಹೋರಿನಲ್ಲಿರುವ ರಾಯ್ವಿಂಡ್. ಪ್ರಪಂಚದಲ್ಲಿ ಯಾರನ್ನೆಲ್ಲ ಕಟ್ಟರ್ ಮೂಲಭೂತವಾದಿ ಹುಡುಗರು ಎಂದು ಗುರುತಿಸಲಾಗಿದೆಯೋ ಅವರನ್ನೆಲ್ಲ ಪುಸಲಾಯಿಸಿ ಈ ಸಂಸ್ಥೆ, ರಾಯ್ವಿಂಡಿಗೆ ಕರೆಸಿಕೊಳ್ಳುತ್ತದೆ. ಅಲ್ಲಿ 4 ತಿಂಗಳ ಉಗ್ರ ತರಬೇತಿ. ಮಿಲಿಟರಿ ಅಭ್ಯಾಸ. ಪ್ರತಿದಿನವೂ ಭಯೋತ್ಪಾದಕರ ನಿತ್ಯನಿರಂತರ ಬ್ರೇನ್ ವಾಷ್. ಹಗಲೆಲ್ಲ ಬಂದೂಕಿನ, ಬಾಂಬಿನ ಸಾಹಚರ್ಯ. ಆ ನಾಲ್ಕು ತಿಂಗಳ ಅವಧಿ ಮುಗಿವಷ್ಟರಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಮಂದಿ, ತಮ್ಮ ಬದುಕೇನಿದ್ದರೂ ಭಯೋತ್ಪಾದನೆಗೇ ಮುಡಿಪು ಎಂಬ ಮನಸ್ಥಿತಿಗೆ ತಲುಪುವವರೇ.

ಭಾರತಕ್ಕೆ ಕಳೆದ ನಲವತ್ತು ವರ್ಷಗಳಿಂದ ತಲೆನೋವಾಗಿ ಕಾಡುತ್ತಿರುವ ಹರ್ಕತ್ ಉಲ್ ಮುಜಾಹಿದೀನ್ (ಪ್ರಾರಂಭದ ಹೆಸರು: ಹರ್ಕತ್ ಉಲ್ ಅನ್ಸಾರ್) ಎಂಬ ಉಗ್ರ ಸಂಘಟನೆ ಜನ್ಮತಳೆದದ್ದು 1980ರಲ್ಲಿ, ಇದೇ ರಾಯ್ವಿಂಡಿನಲ್ಲಿ. ಅದು ಕಣ್ಣುಬಿಟ್ಟಾಗ ಅದರಲ್ಲಿದ್ದ ಎಲ್ಲಾ ಸದಸ್ಯರೂ ತಬ್ಲೀಘಿಯವರೇ! ಅರ್ಥಾತ್, ತಬ್ಲೀಘಿ ಜಮಾತ್‍ನ ಒಂದು ಅಂಗಸಂಸ್ಥೆಯಾಗಿ ಜನ್ಮತಳೆದ್ದು ಮುಜಾಹಿದೀನ್ ಉಗ್ರಕೂಟ. 1999ರ ಡಿಸೆಂಬರ್‍ನಲ್ಲಿ, ಕ್ರಿಸ್‍ಮಸ್‍ಗೆ ಒಂದು ದಿನ ಮೊದಲು, ನಮ್ಮ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿ ಕಂದಹಾರ್'ಗೆ ತೆಗೆದುಕೊಂಡ ಹೋದ ಉಗ್ರರು ಇವರೇ. 2002ರ ಮೇ 8ರಂದು ಪಾಕಿಸ್ತಾನದ ಕರಾಚಿಯಲ್ಲಿ 11 ಫ್ರೆಂಚ್ ಇಂಜಿನಿಯರುಗಳನ್ನು ಒಳಗೊಂಡು ಒಟ್ಟು 14 ಮಂದಿಯನ್ನು, ಅವರೆಲ್ಲ ಬಸ್‍ನಲ್ಲಿ ಹೋಗುತ್ತಿದ್ದಾಗ, ಬಾಂಬಿಟ್ಟು ಸ್ಫೋಟಿಸಿದ ಹುಚ್ಚರೂ ಇವರೇ. ಹುಚ್ಚರು ಯಾಕೆಂದರೆ ಆ ಫ್ರೆಂಚ್ ಇಂಜಿನಿಯರುಗಳು ಪಾಕಿಸ್ತಾನದಲ್ಲಿದ್ದದ್ದು ಆ ದೇಶಕ್ಕೆ ಒಂದು ಸಬ್‍ಮೆರಿನ್ ತಯಾರಿಸಿಕೊಡುವುದಕ್ಕಾಗಿ! ಈ ಸ್ಫೋಟದಲ್ಲಿ 40 ಮಂದಿ ತೀವ್ರವಾಗಿ ಗಾಯಗೊಂಡರು ಕೂಡ. ವರ್ಷಗಳುದ್ದಕ್ಕೂ ಈ ಹರ್ಕಟ್ ಸಂಘಟನೆಗೆ ಭಯೋತ್ಪಾದಕರನ್ನು ನಿರಂತರವಾಗಿ ಸಪ್ಲೈ ಮಾಡುವ ಹೊಣೆ ಹೊತ್ತದ್ದು ತಬ್ಲೀಘಿ ಜಮಾತ್. 1980ರಿಂದ ಮುಂದಿನ 20 ವರ್ಷಗಳಲ್ಲಿ ಹರ್ಕತ್ ಉಲ್ ಮುಜಾಹಿದೀನ್ ಉಗ್ರಕ್ಯಾಂಪ್‍ಗಳಲ್ಲಿ ಭಾಗವಹಿಸಿ ಟ್ರೇನಿಂಗ್ ಪಡೆದು ಉಗ್ರರಾದ ತಬ್ಲೀಘಿಗಳ ಸಂಖ್ಯೆ 6000ಕ್ಕೂ ಹೆಚ್ಚು. ಇವರಲ್ಲಿ ಮುಂದೆ ಅನೇಕರು ಅಲ್‍ಖೈದಾ ಸೇರಿದರು. ಅಫಘಾನಿಸ್ತಾನದಲ್ಲಿ ಅಮೆರಿಕದ ವಿರುದ್ಧ ಬಂದೂಕು ಹಿಡಿದರು. ಒಸಾಮನ ಬಲಗೈ ಎಡಗೈಗಳಾಗಿ ಕೆಲಸ ಮಾಡಿದರು. ಅಲ್‍ಖೈದಾ ಸಂಘಟನೆಗೆ ತಬ್ಲೀಘಿ ನೇರವಾಗಿ ಉಗ್ರರನ್ನು ಸಪ್ಲೈ ಮಾಡುವ ಫ್ಯಾಕ್ಟರಿಯಾಗಿ ಕೆಲಸ ಮಾಡತೊಡಗಿತು.

ಇದಿಷ್ಟೇ ಸಾಲದು ಎಂಬಂತೆ ಇದೇ ತಬ್ಲೀಘಿ, 1984ರಲ್ಲಿ ಮತ್ತೊಂದು ಉಗ್ರಪುತ್ರನಿಗೆ ಜನ್ಮವಿತ್ತಿತು. ಹೊಸ ಸಂಘಟನೆಯ ಹೆಸರು ಹರ್ಕತ್ ಉಲ್ ಜಿಹಾದ್ ಇ ಇಸ್ಲಾಮಿ. ಇದು ಹುಟ್ಟಿದ್ದು ಅಫಘಾನಿಸ್ತಾನದ ಯುದ್ಧದ ನಂತರ. ಇದು ಕಾರ್ಯಪ್ರವೃತ್ತವಾದದ್ದು ಭಾರತದ ಜಮ್ಮುಕಾಶ್ಮೀರದಲ್ಲಿ. ಮಾತ್ರವಲ್ಲ ದೂರದ ಗುಜರಾತಿನಲ್ಲೂ ಕೂಡ. ಗುಜರಾತ್‍ನಲ್ಲಿ ಹಿಂದೆ ಬರೇಲ್ವಿ ಮುಸ್ಲಿಮರ ಕೈಯಲ್ಲಿದ್ದ ಮಸೀದಿಗಳಲ್ಲಿ ನೂರಕ್ಕೆ ಎಂಬತ್ತರಷ್ಟು ಮಸೀದಿಗಳು ಇಂದು ತಬ್ಲೀಘಿಯ ನಿಯಂತ್ರಣದಲ್ಲಿವೆ (ತಬ್ಲೀಘಿಯ ಕಾರ್ಯತಂತ್ರದ ಒಂದು ಭಾಗ, ಹಳ್ಳಿಹಳ್ಳಿಗಳಲ್ಲಿ ಆವರಿಸಿಕೊಂಡು ಅಲ್ಲಿನ ಮಸೀದಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು. ಇನ್ನೊಂದು ಭಾಗ: ಹಳ್ಳಿಹಳ್ಳಿಗಳಲ್ಲೂ ದಾವಾ ಹೆಸರಲ್ಲಿ ಸಾವಿರಾರು ಮಂದಿಯನ್ನು ಜಮಾಯಿಸಿ ಸಮಾವೇಶ ಮಾಡಿ, ಅಲ್ಲಿ ಧಾರ್ಮಿಕ ಉಡುಗೆಯಲ್ಲಿರುವ ಉಗ್ರ ಮೂಲಭೂತವಾದಿಗಳಿಂದ ಉಪನ್ಯಾಸ ಮಾಡಿಸುವುದು). ಈ ಹರ್ಕಟ್ ಸಂಘಟನೆ ಭಾರತವಲ್ಲದೆ ಬಾಂಗ್ಲಾದೇಶ, ಯುನೈಟೆಡ್ ಕಿಂಗ್‍ಡಂ, ಅಮೆರಿಕಾ ಸಂಯುಕ್ತ ಸಂಸ್ಥಾನ, ನ್ಯೂಜಿಲೆಂಡ್‍ಗಳಲ್ಲಿ; ಮಾತ್ರವಲ್ಲ ಇಸ್ರೇಲ್‍ನಲ್ಲೂ ಸಕ್ರಿಯವಾಗಿದೆ ಎಂದರೆ ನಂಬುತ್ತೀರಾ? 2011ರಲ್ಲಿ ಈ ಜಿಹಾದಿ ಸಂಘಟನೆಯ ಉಗ್ರರು ಇಟ್ಟ ಬಾಂಬ್‍ನಿಂದ ದೆಹಲಿಯಲ್ಲಿ ನಡೆದ ದುರ್ಘಟನೆಯಲ್ಲಿ 14 ಮಂದಿ ಸತ್ತರು, 94 ಮಂದಿ ಪ್ರಾಣಾಂತಿಕ ಅಪಾಯಗಳಿಗೆ ತುತ್ತಾದರು. 2006ರ ಮಾರ್ಚ್‍ನಲ್ಲಿ ವಾರಾಣಸಿಯ ಸಂಕಟಮೋಚನ ಮಂದಿರದಲ್ಲಿ ಬಾಂಬ್ ಸ್ಫೋಟ ನಡೆಸಿದ್ದು ಇದೇ ಸಂಘಟನೆ. ಈ ಹುಚ್ಚರು ಬಾಂಗ್ಲಾದೇಶದ ಕವಿ ಶಂಸೂರ್ ರಹ್ಮಾನ್, ಗುಜರಾತಿನ ಗೃಹಸಚಿವರಾಗಿದ್ದ ಹರೇನ್ ಪಾಂಡ್ಯಾ ಸೇರಿದಂತೆ ಜಗತ್ತಿನ ಹತ್ತುಹಲವು ಪ್ರಮುಖರ ಮೇಲೆ ಕೊಲೆಯತ್ನ, ಆತ್ಮಾಹುತಿ ದಾಳಿ ನಡೆಸಿದ್ದಾರೆ. ಬೇರೆಲ್ಲ ಬಿಡಿ, ಮೆಕ್ಕಾದ ಮಸೀದಿಗೇ ಬಾಂಬ್ ಇಡಲು ಹೋದವರು ಈ ಸಂಘಟನೆಯ ಉಗ್ರರು!

ತಬ್ಲೀಘಿ ಜಮಾತ್, ಆಗಲೇ ಹೇಳಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಸಕ್ರಿಯ. ಅಲ್ಜೀರಿಯಾದಲ್ಲಿ "ಇಸ್ಲಾಮಿಕ್ ಸಾಲ್ವೇಶನ್ ಫ್ರಂಟ್" ಅನ್ನು ಸ್ಥಾಪಿಸಿದ ನಾಲ್ಕು ಸಂಘಟನೆಗಳ ಪೈಕಿ ಈ ತಬ್ಲೀಘಿಯೂ ಒಂದು ಸದಸ್ಯ. ಮೊರೊಕ್ಕೋ ದೇಶದಲ್ಲಿ ಕಾಸಾಬ್ಲಾಂಕಾ ಸಿನೆಗಾಗ್ (ಯಹೂದ್ಯರ ಪ್ರಾರ್ಥನಾ ಮಂದಿರ) ಮೇಲೆ 2003ರಲ್ಲಿ ಬಾಂಬ್ ದಾಳಿ ನಡೆಸಿದ್ದು ಇದೇ ತಬ್ಲೀಘಿಯ ಅಂಗಸಂಸ್ಥೆಯಾದ ದಾವಾ ವ ತಬ್ಲೀಘ್. ಡಚ್ ಸಿನೆಮಾ ನಿರ್ದೇಶಕ ಥಿಯೋ ವ್ಯಾನ್‍ಗೋನನ್ನು ಕೊಂದವರು ಇದೇ ತಬ್ಲೀಘಿಯ ಸದಸ್ಯರು ಎಂದು ಡಚ್ ಪೊಲೀಸರ ತನಿಖಾವರದಿಗಳು ಹೇಳುತ್ತಿವೆ. 2002! 2002! ಗೋಧ್ರಾ! ಗೋಧ್ರಾ! ಎಂದು ನಮ್ಮ ಬುದ್ಧಿಜೀವಿಗಳು ಸಾರಿ ಸಾರಿ ನೂರು ಸಾವಿರ ಸಾರಿ ಕೂಗಿ ಹೇಳುವುದನ್ನು ಕೇಳಿಯೇ ಇದ್ದೇವೆ ತಾನೆ? ಈ ಗೋಧ್ರಾ ಘಟನೆ ನಡೆಯುವುದಕ್ಕೆ ಕಾರಣವಾದ "ಹಿಂದೂ ಕಾರ್ಯಕರ್ತರನ್ನು ರೈಲುಬೋಗಿಯಲ್ಲಿ ಜೀವಂತ ಸುಟ್ಟ ಪ್ರಕರಣ" ಸುತ್ತಿಕೊಂಡಿರುವುದು ಮೌಲಾನಾ ಉಮರ್‍ಜಿ ಎಂಬಾತನ ಕೊರಳನ್ನು. ಈತ ತಬ್ಲೀಘಿ ಜಮಾತ್‍ನ ಸದಸ್ಯ ಮಾತ್ರವಲ್ಲ ಅತ್ಯಂತ ಪ್ರಭಾವಶಾಲಿ ನಾಯಕ ಕೂಡ. ಅರ್ಥಾತ್, ಗುಜರಾತಿನಲ್ಲಿ ಗೋಧ್ರಾ ಹತ್ಯಾಕಾಂಡ ಎಂಬ ಕರಾಳ ಅಧ್ಯಾಯ ಬರೆಯಲ್ಪಡುವುದಕ್ಕೆ ಮೂಲ ಕಾರಣವೇ ತಬ್ಲೀಘಿ ಜಮಾತ್. 2003ರ ಮೇ ತಿಂಗಳಲ್ಲಿ 40 ಮಂದಿಯ ಜೀವ ತೆಗೆದ ಕಾಸಾಬ್ಲಾಂಕ ಭಯೋತ್ಪಾದನಾ ದಾಳಿಯ ಪ್ರಮುಖ ರೂವಾರಿ ಯೂಸಫ್ ಫಿಕ್ರಿ, ತಬ್ಲೀಘಿಯ ಮತ್ತೊಂದು ಅಂಗಸಂಸ್ಥೆ ಅತ್-ತಕ್‍ಫೀರ್ ವಲ್-ಹಿಜ್ರಾ ಎಂಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ. ಬಹುಶಃ ಮ್ಯಾಕ್ ಡೊನಾಲ್ಡ್ ಜಗತ್ತಿನಲ್ಲಿ ತೆರೆದಿರುವ ಬರ್ಗರ್ ಅಂಗಡಿಗಳ ಸಂಖ್ಯೆಗಿಂತ ಈ ತಬ್ಲೀಘಿ ಹುಟ್ಟುಹಾಕಿರುವ ಭಯೋತ್ಪಾದನಾ ಸಂಸ್ಥೆಗಳ ಸಂಖ್ಯೆಯೇ ಹೆಚ್ಚೋ ಏನೋ!

ಇಷ್ಟಕ್ಕೂ ಈ ಸಂಘಟನೆ ನೇರವಾಗಿ ಭಯೋತ್ಪಾದನಾ ಕೇಂದ್ರಗಳಿಗೆ ಯುವಕರನ್ನು ಸಪ್ಲೈ ಮಾಡಿದ್ದಕ್ಕೆ ದಾಖಲೆಗಳಿಲ್ಲ. ಆದರೆ ಫಿಲಿಪ್ಪೈನ್ಸ್‍ನಲ್ಲಿ ಈ ಸಂಘಟನೆ ಸೌದಿಯ ದುಡ್ಡಲ್ಲಿ 11,000 ಸದಸ್ಯರ ಬೃಹದ್ ವೃಕ್ಷವಾಗಿ ಬೆಳೆದಿದೆ; ದೇಶದಲ್ಲಿ ಮೂಲಭೂತವಾದ ಹರಡುತ್ತಿರಲು ತಬ್ಲೀಘಿ ಮತ್ತು ಅದು ಬಳಸುತ್ತಿರುವ ಸೌದಿ ದುಡ್ಡೇ ಕಾರಣ ಎಂದು ಅಲ್ಲಿನ ಸರಕಾರವೇ ಕೆಂಡ ಕಾರಿದೆ. 1999ರ ಒಂದೇ ವರ್ಷದಲ್ಲಿ ಉಜ್ಬೆಕಿಸ್ತಾನದಿಂದ 400 ಉಜ್ಬೆಕ್‍ಗಳು ಈ ಸಂಘಟನೆಯ ಭಯೋತ್ಪಾದನಾ ತರಬೇತಿ ಕ್ಯಾಂಪುಗಳಲ್ಲಿ ತರಬೇತಿ ಪಡೆಯಲು ಸೇರಿದ್ದರೆಂಬುದಕ್ಕೆ ದಾಖಲೆ ಇದೆ. 1998ರ ಒಂದೇ ವರ್ಷದಲ್ಲಿ, ಇಂಗ್ಲೆಂಡಿಂದ ಈ ಸಂಘಟನೆಯ ಕ್ಯಾಂಪುಗಳಲ್ಲಿರಲೆಂದು ಬಂದವರು 2000 ಯುವಕರು! ಫ್ರೆಂಚ್ ಸರಕಾರದ ತನಿಖಾ ದಳ ಹೇಳುವಂತೆ ಫ್ರಾನ್ಸಿನಿಂದ ಬಂದು ಅಲ್‍ಖೈದಾ ಸೇರಿದ 100 ಯುವಕರನ್ನು ಹಾಗೆ ಸೆಳೆದುತರುವ ಕೆಲಸ ಮಾಡಿದ್ದು ಇದೇ ತಬ್ಲೀಘಿ. ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ಈ ಸಂಘಟನೆ, ವರ್ಷದಿಂದ ವರ್ಷಕ್ಕೆ ತನ್ನ ಸಮಾವೇಶದ ಗಾತ್ರವನ್ನು ದೊಡ್ಡದು ಮಾಡುತ್ತಲೇ ಇದೆ. ಮೊನ್ನೆ ಮಾರ್ಚ್ ಎರಡನೇ ವಾರದಲ್ಲಿ ನಮ್ಮ ದೆಹಲಿಯಲ್ಲಿ ಈ ತಬ್ಲೀಘಿಗಳ ಸಮಾವೇಶ ಆಯ್ತಲ್ಲ? ಅದೇ ಸಮಯದಲ್ಲಿ ಅವರ ಅಂತಾರಾಷ್ಟ್ರೀಯ ಮುಖ್ಯ ಕಚೇರಿಯಾದ (ಪಾಕಿಸ್ತಾನದ) ರಾಯ್ವಿಂಡಿನಲ್ಲಿ ಕೂಡ ಬೃಹತ್ ಸಮಾವೇಶ ಆಯಿತು (ಇದಕ್ಕೆ ಇಜ್ತಿಮಾಹ್ ಎಂದು ಹೆಸರು). ಭಾಗವಹಿಸಿದ ಜನ ಎಷ್ಟು ಗೊತ್ತೆ? ಎರಡೂವರೆ ಲಕ್ಷ! ಬಂದವರು ಅಕ್ಷರಶಃ ಇಲ್ಲಿ ದೆಹಲಿಯಲ್ಲಿ ಮಾಡಿದಂತೆಯೇ ವರ್ತಿಸಿದ್ದಾರೆ. ರೋಗವನ್ನು ಉದ್ದೇಶಪೂರ್ವಕ ಪಾಕಿಸ್ತಾನದ ಮೂಲೆಮೂಲೆಗೆ ಒಯ್ದಿದ್ದಾರೆ.

ಪ್ರತಿ ದಿನ, ಪ್ರತಿ ಕ್ಷಣ ಹೊಸ ವರದಿಗಳು ಬರುತ್ತಿವೆ. ನೋಟುಗಳಲ್ಲಿ ಸಿಂಬಳ ಒರೆಸಿ ಕೊಡುತ್ತಿರುವ ಉಗ್ರ, ಕ್ವಾರಂಟೈನ್ ಮಾಡಲು ಕರೆದೊಯ್ಯುವಾಗ ಬಸ್ಸಿಂದ ಸಿಕ್ಕಸಿಕ್ಕವರ ಮೇಲೆ ಉಗುಳುತ್ತ ತೆರಳಿದ ಉಗ್ರ, ಆಸ್ಪತ್ರೆಯಲ್ಲಿ ಮತ್ತೆ ಎಲ್ಲರೂ ಒಟ್ಟಾಗಿ ಮೈಗೆ ಮೈ ತಾಗಿಸಿಕೊಂಡು ನಮಾಜಿಗೆ ಕುಳಿತ ದೃಶ್ಯ, ಮೋದಿಯಲ್ಲ ಅವನಪ್ಪ ಬಂದರೂ ಬಗ್ಗುವುದಿಲ್ಲ ಎನ್ನುತ್ತ ಯಾವ ಪರೀಕ್ಷೆಗೂ ಬರೆನು ಎಂದು ಮೊಂಡುಕೂತಿರುವ ಉಗ್ರರು, ಸಾಯುವುದೇ ಆದರೆ ಸಾಯುತ್ತೇವೆ ಆದರೆ ಸಾಯುವ ಮುನ್ನ ನೂರು ಮಂದಿಗೆ ರೋಗ ಹಬ್ಬಿಸಿ ಸಾಯುತ್ತೇವೆ ಎನ್ನುತ್ತ ಊರು ಊರು ಕೇರಿ ಕೇರಿ ತಿರುಗುತ್ತಿರುವ ತಬ್ಲೀಘಿ ಉಗ್ರರು... ಇದನ್ನೆಲ್ಲ ನೋಡಿದರೆ ಏನನ್ನಿಸುತ್ತದೆ? ಇವರ ಉದ್ದೇಶ ಏನು? ಇದನ್ನು ಬರೆಯುತ್ತಿರುವ ಹೊತ್ತಿಗೆ ಗಾಜಿಯಾಬಾದಿನಲ್ಲಿ ಆಸ್ಪತ್ರೆಯಲ್ಲಿ ದಾದಿಯರ ಮುಂದೆ ನಗ್ನರಾಗಿ ತಿರುಗುತ್ತಿರುವ, ಅಶ್ಲೀಲ ಹಾಡುಗಳನ್ನು ಜೋರುದನಿಯಲ್ಲಿ ಹಾಡುತ್ತಿರುವ, ಸಿಗರೇಟಿಗಾಗಿ ಪೀಡಿಸುತ್ತಿರುವ ಉಗ್ರರ ಸುದ್ದಿಯೂ ಬರುತ್ತಿದೆ. ಇವರ್ಯಾರೂ "ರೋಗಿ"ಗಳಲ್ಲ, "ಸೋಂಕಿತರ"ಲ್ಲ, ಬದಲಾಗಿ "ಉಗ್ರರು" ಅಷ್ಟೆ. ಇವರನ್ನು ರೋಗಿಗಳೆಂದೋ ಸೋಂಕಿತರೆಂದೋ ಕಾಯಿಲೆಯ ಶಂಕಿತರೆಂದೋ ಬ್ರೆಡ್ಡು, ಹಾಲು, ವೆಂಟಿಲೇಟರು ಕೊಟ್ಟು ಸಾಕುವ ಬದಲಿಗೆ ಜೈಲಿನಲ್ಲಿ ಹಾಕಬೇಕು. ದೂರದಲ್ಲಿ ನಿಲ್ಲಿಸಿ ಶೂಟ್ ಮಾಡಿದರೂ ಸರಿಯೇ. ಕ್ಯಾನ್ಸರ್ ಕೋಶಗಳನ್ನು ಹೇಗೆ ನಿರ್ದಾಕ್ಷಿಣ್ಯವಾಗಿ ಕಿತ್ತು ತೆಗೆದು ಜೀವ ಉಳಿಸಿಕೊಳ್ಳುವ ಕೆಲಸ ಮಾಡಬೇಕೋ ಹಾಗೆ, ಈ ತಬ್ಲೀಘಿ ಜಮಾತ್ ಉಗ್ರರನ್ನು ನಿರ್ಧಾಕ್ಷಿಣ್ಯವಾಗಿ ಹದ್ದುಬಸ್ತಿನಲ್ಲಿಟ್ಟು ದೇಶವನ್ನು ರೋಗದಿಂದ ಕಾಪಾಡುವ ಕೆಲಸ ಮಾಡಬೇಕಾಗಿದೆ. ಕ್ಯಾನ್ಸರ್ ಬಂದಾಗ ಬ್ಯಾಂಡೇಜ್ ಹಾಕಿ, ಮುಲಾಮು ಹಚ್ಚಿ, ಗುಣವಾಗುತ್ತೋ ಏನೋ ಎಂದು ಕಾದರೆ ಏನಾಗುತ್ತದೋ ಹಾಗೆಯೇ ಆದೀತು ಈ ಉಗ್ರರನ್ನು ಊರೆಲ್ಲ ತಿರುಗಾಡಲು ಬಿಟ್ಟು ನಾವು ಸೋಶಿಯಲ್ ಡಿಸ್ಟೆನ್ಸಿಂಗ್ ಜಪ ಮಾಡುತ್ತ ಕೂತರೆ!

ಅರ್ಥ ಮಾಡಿಕೊಳ್ಳಿ, ಇದು ಉಗ್ರರ ಹೊಸ ವರಸೆ. ಹೊಸ ಬಗೆಯ ಭಯೋತ್ಪಾದನೆ. Bio-ತ್ಪಾದನೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ