ತಾರತಮ್ಯದಲ್ಲಿ 5ನೇ ಕಕ್ಷೆಯಲ್ಲಿ ಬರುವ ದೇವನು ರುದ್ರ ದೇವನು. ಎಲ್ಲಾ ವೈಷ್ಣವರು ಅವಶ್ಯವಾಗಿ ಪೂಜಿಸಲೇ ಬೇಕಾದ ವೈಷ್ಣವೋತ್ತಮ ದೇವನೀತನು.
*ವೈಷ್ಣವಾನಾಂ ಯಥಾ ಶಂಭುಃ*
ಎಂದು ಹೇಳಿದಂತೆ ವೈಷ್ಣವರಲ್ಲಿ ಭಗವಂತನ ವಿಭೂತಿರೂಪವು ರುದ್ರನಲ್ಲಿ ಅತಿಶಯವಾಗಿದೆ.
ಆದ್ದರಿಂದ ರುದ್ರನು ಅತ್ಯಂತ ಪ್ರಸನ್ನನಾಗಿರುವ ಶಿವರಾತ್ರಿಯಂದು ರುದ್ರನ ವಿಶೇಷ ಪೂಜೆಯನ್ನು ನಾವೆಲ್ಲರೂ ಮಾಡಬೇಕು.
ರಾತ್ರಿ ಶಬ್ದವು ಅಜ್ಞಾನಕ್ಕೆ ದ್ಯೋತಕ. ಯಾಕೆಂದರೆ ಕತ್ತಲಿನಲ್ಲಿ ಯಾವುದೇ ವಸ್ತುವಿನ ಜ್ಞಾನ ಬರಲಾರದು.
ಆದ್ದರಿಂದ ಅಜ್ಞಾನವೆಂಬ ಕತ್ತಲನ್ನು ಓಡಿಸಿ ಭಗವಜ್ಜ್ಞಾನವೆಂಬ ಬೆಳಕನ್ನು ನೀಡುವ ದೇವತೆ ಶಿವ.
ಆದ್ದರಿಂದ ಈ ದಿನವು #ಶಿವರಾತ್ರಿ ಎಂದು ಪ್ರಸಿದ್ಧ.
ಭಗವಾನ್ ಶಿವನು ಲಿಂಗರೂಪಿಯಾಗಿ ಉದಿಸಿದ
ದಿನವು ಶಿವರಾತ್ರಿ ಎಂದು ಪ್ರಸಿದ್ಧವಾಗಿದೆ.
ದಿನವು ಶಿವರಾತ್ರಿ ಎಂದು ಪ್ರಸಿದ್ಧವಾಗಿದೆ.
ರುದ್ರನು ಲಿಂಗರೂಪಿಯಾಗಿ ಉದಿಸಿದನು ಎಂದರೆ ಏನರ್ಥ?
*ಲೀನಂ ಗಮಯತೀತಿ ಲಿಂಗಃ* ಎಂದು ಇರುವಂತೆ ತನ್ನಲ್ಲಿ ಲೀನವಾಗಿರುವ ಭಗವಂತನನ್ನು ತೋರಿಸಿಕೊಡುವ ರೂಪವೇ ಲಿಂಗ.
*ಲೀನಂ ಗಮಯತೀತಿ ಲಿಂಗಃ* ಎಂದು ಇರುವಂತೆ ತನ್ನಲ್ಲಿ ಲೀನವಾಗಿರುವ ಭಗವಂತನನ್ನು ತೋರಿಸಿಕೊಡುವ ರೂಪವೇ ಲಿಂಗ.
ಆದ್ದರಿಂದ ರುದ್ರನು ಈ ರೂಪದಿಂದ ಉದಿಸಿ ಅಜ್ಞರಿಗೆ ಮೋಹವನ್ನು ಕೊಟ್ಟು ಮುಮುಕ್ಷುಗಳಿಗೆ ಭಗವಂತನನ್ನು ತೋರಿಸಿ ಕೊಟ್ಟ ದಿನ ಶಿವರಾತ್ರಿ.
ಈ ದಿನ ರುದ್ರನು ವಿಷಪಾನವನ್ನು ಮಾಡಿದ ದಿನವೆಂದೂ ಹೇಳುತ್ತಾರೆ.
ಅಂದು ರುದ್ರನು ವಿಷಪಾನವನ್ನು ಮಾಡಿ ಅದರ ನಂಜು ಏರದಿರಲು ಉಪವಾಸವಿದ್ದು ರಾತ್ರಿ ಎಲ್ಲಾ ಜಾಗರಣೆ ಮಾಡಿದನು.
ಆದ್ದರಿಂದ ಎಲ್ಲಾ ಭಕ್ತರು ಅಂದು ಉಪವಾಸ ಇದ್ದು ಜಾಗರಣೆ ಮಾಡಬೇಕು ಎಂದು ಹೇಳುತ್ತಾರೆ.
ರುದ್ರನು ಸ್ವತಃ ಎಲ್ಲರ ನಂಜನ್ನು ಪರಿಹರಿಸುವವನಾದ್ದರಿಂದ ಅವನಿಗೆ ನಂಜು ಏರಲು ಸಾಧ್ಯವಿಲ್ಲ. ಅಲ್ಲದೆ ಪದ್ಮಪುರಾಣದಲ್ಲಿ ಸ್ವತಃ ತಾನೇ ಹೇಳಿಕೊಂಡಿದ್ದಾನೆ.
ಎಲ್ಲಾ ದೇವತೆಗಳೂ ಹಾಲಾಹಲವಿಷ ಬಂದಾಗ ಅದರ ಉರಿ ತಾಳಲಾರದೆ ಓಡಲು ಶುರುಮಾಡುತ್ತಾರೆ.
ಆಗ ರುದ್ರ ದೇವರು ದೇವತೆಗಳಿಗೆ ಹೀಗೆ ಹೇಳುತ್ತಾರೆ.
*ಅಹಮಾಹಾರಯಿಷ್ಯಾಮಿ ಕಾಲಕೂಟಂ
ಮಹಾವಿಷಮ್।ಇತ್ಯುಕ್ತಾಸ್ತೇ ಮಯಾ ಸರ್ವೇ ದೇವಾ ಇಂದ್ರಪುರೋಗಮಾಃ॥*
ಮಹಾವಿಷಮ್।ಇತ್ಯುಕ್ತಾಸ್ತೇ ಮಯಾ ಸರ್ವೇ ದೇವಾ ಇಂದ್ರಪುರೋಗಮಾಃ॥*
ಎಂದು ನಾನು ಈ ವಿಷವನ್ನು ಪಾನಮಾಡುತ್ತೇನೆ.
ನನಗೆ ಈ ವಿಷವು ಏನೂ ಮಾಡಲಾರದು.
ಯಾಕೆಂದರೆ ನಾನು ಹೃದಯದಲ್ಲಿ ನಾರಾಯಣನನ್ನು ಧ್ಯಾನ ಮಾಡುತ್ತಾ *ಅಚ್ಯುತಾನಂತಗೋವಿಂದ* ಎಂಬ ನಾಮತ್ರಯ ಮಂತ್ರವನ್ನು ಉಚ್ಚರಿಸುತ್ತಾ ಈ ವಿಷವನ್ನು ಪಾನಮಾಡುತ್ತೇನೆ.
ಆದ್ದರಿಂದ ನನಗೆ ಈ ವಿಷವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
*ಧ್ಯಾತ್ವಾ ನಾರಾಯಣಂ ದೇವಂ ಹೃದಯೇ ಗರುಡಧ್ವಜಂ।ಉದಯಾದಿತ್ಯಸಂಕಾಶಂ ಶಂಖಚಕ್ರಗದಾಧರಮ್॥ಏಕಾಗ್ರಮನಸಾ ಧ್ಯಾತ್ವಾ ಸರ್ವದುಃಖಹರಂ ಪ್ರಭುಮ್।ನಾಮತ್ರಯಂ ಮಹಾಮಂತ್ರಂ ಜಪನ್ ಭಕ್ತ್ಯಾ ಸಮನ್ವಿತಃ॥ತದ್ವಿಷಂ ಪೀತವಾನ್ ಘೋರಂ ಆದ್ಯಂ ಸರ್ವಭಯಂಕರಮ್।ನಾಮತ್ರಯಪ್ರಭಾವಾಚ್ಚ ವಿಷ್ಣೋಃ ಸರ್ವಗತಸ್ಯ ವೈ।ವಿಷಂ ತದಭವಚ್ಚೀರ್ಣಂ ಲೋಕಸಂಹಾರಕಾರಕಂ ॥*
ಎಂದು. ಹೀಗೆ ರುದ್ರ ದೇವರು ತಮ್ಮ ವಿಷದ ನಂಜು ಪರಿಹಾರವಾಗಲು ರಾತ್ರಿಯಿಡೀ ಜಾಗರಣೆ ಮಾಡಿ ನಾಮತ್ರಯ ಮಂತ್ರವನ್ನು ಜಪ ಮಾಡಿದರು.
ಅದರಿಂದ ತಮ್ಮ ಸಕಲ ವಿಪಪಾನದ ತೊಂದರೆಯನ್ನು ಪರಿಹರಿಸಿಕೊಂಡರು.
ಇದನ್ನು ಅವರೇ ಪಾರ್ವತೀ ದೇವಿಯಲ್ಲಿ ಹೇಳಿಕೊಂಡಿದ್ದಾರೆ.
*ಅಚ್ಯುತಾನಂತಗೋವಿಂದ ಇತಿ ನಾಮತ್ರಯಂ ಹರೇಃ।ಯೋ ಜಪೇತ್ ಪ್ರಯತೋ ಭಕ್ತ್ಯಾ ಪ್ರಣವಾದ್ಯಂ ನಮೋಂತಕಮ್॥ತಸ್ಯಮೃತ್ಯು ಭಯಂ ನಾಸ್ತಿ ವಿಷರೋಗಾಗ್ನಿಗಂ ಮಹತ್॥ನಾಮತ್ರಯಂ ಮಹಾಮಂತ್ರಂ ಜಪೇದ್ಯಃಪ್ರಯತಾತ್ಮವಾನ್।ಕಾಲಮೃತ್ಯು ಭಯಂ ಚಾಪಿ ತಸ್ಯ ನಾಸ್ತಿ ಕಿಮನ್ಯತಃ॥ಇತಿ ನಾಮತ್ರಯೇಣೈವ ಪೀತಂ ದೇವಿ ಮಯಾ ವಿಷಮ್॥*
ಎಂದು. ಆದ್ದರಿಂದ ಶಿವರಾತ್ರಿಯಂದು ಮಹಾಪ್ರದೋಷಸಮಯವಾಗಿರುವುದರಿಂದ ಅಂದು ಶಿವನ ಅನುಗ್ರಹಕ್ಕಾಗಿ ರುದ್ರ ಪಾರಾಯಣ, ಶಿವಸ್ತುತಿ ಪಾರಾಯಣ ಮಾಡುವುದರ ಜೊತೆಗೆ ವಿಶೇಷವಾಗಿ ನಾಮತ್ರಯ ಮಂತ್ರದ ಜಪವನ್ನೂ ಮಾಡಬೇಕು.
ಪ್ರತಿನಿತ್ಯ ರುದ್ರನು ಪ್ರದೋಷಸಮಯವಾದ ಮುಸ್ಸಂಜೆಯಂದು ತನ್ನ ಗಣಗಳೊಂದಿಗೆ ಸ್ಮಶಾನದಿಂದ ಹೊರಗೆ ಬಂದು ಎಲ್ಲಾ ಭಕ್ತರ ಸಂಕಟವನ್ನು ಪರಿಹರಿಸಿದರೆ ಶಿವರಾತ್ರಿಯೆಂಬ ಮಹಾಪ್ರದೋಷದಂದು ವಿಶೇಷವಾಗಿ ನಮ್ಮ ಸಂಕಟಪರಿಹರಿಸಿ ಅನುಗ್ರಹಿಸುವನು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ