ಮಂಗಳವಾರ, ಏಪ್ರಿಲ್ 17, 2018

ಪೂಜೆಯಲ್ಲಿ ಶಂಖದ ಅವಶ್ಯಕತೆಯೇನು

 *ಪೂಜೆಯಲ್ಲಿ ಶಂಖದ ಅವಶ್ಯಕತೆಯೇನು? ಪೂಜೆಗೆ ಏಕೆ ಬಳಸುತ್ತಾರೆ?*
ಶಂಖವು ನಮ್ಮ ಆಧ್ಯಾತ್ಮಿಕ ಸಾಮ್ರಾಜ್ಯದಲ್ಲಿ ವಿಶೇಷವಾದ ಸ್ಥಾನವನ್ನು ಪಡೆದಿದೆ. ಪ್ರಕೃತಿದತ್ತವಾಗಿ ಸಿಗುವ ಸಮುದ್ರದ ಒಂದು ಜೀವಿಯ ರಕ್ಷಾಕವಚವೇ ಈ ಶಂಖ. ಈ ಶಂಖದಲ್ಲಿ ಒಂದು ವಿಶೇಷತೆಯಿದೆ. ಪ್ರಕೃತಿಯ ಮೂಲ ಶಕ್ತಿಯಾದ ನಾದ ಅಥವಾ ಓಂಕಾರ ಈ ಶಂಖದಿಂದ ಅನಾಯಾಸವಾಗಿ ಹೊರಡಿಸಲು ಸಾಧ್ಯವಿದೆ. ಹಾಗಾಗಿ ಆಧ್ಯಾತ್ಮ ಜಗತ್ತಿನಲ್ಲಿ ಓಂಕಾರವೇ ಸರ್ವಸ್ವ ಎಂದು ತಿಳಿದ ದಾರ್ಶನಿಕರು ಈ ಚೈತನ್ಯದ ಮೂಲವಾದ ಈ ಪಳೆಯುಳಿಕೆಯನ್ನು ವಿಶೇಷವಾದ ಸ್ಥಾನ ಮಾನ ಕೊಟ್ಟು ಪೂಜಾದಿಗಳಲ್ಲಿ ಬಳಸುವ ಚಾಲ್ತಿ ತಂದರು. ಅಭಿಷೇಕಕ್ಕೆ ಶಂಖ ಮಾತ್ರವಲ್ಲದೆ ಶೃಂಗ, ಧಾರಾಪಾತ್ರೆ, ಕೊಂಬಿನ ಗಿಂಡಿ, ಗೋಮುಖ ಪಾತ್ರೆ ಇತ್ಯಾದಿ ಅಭಿಷೇಕ ಸೌಲಭ್ಯ ದೃಷ್ಟಿಯಿಂದ ಬಳಸುವುದು ರೂಢಿಯಲ್ಲಿದೆ. ಅದರಲ್ಲಿ ಶಂಖ ಉತ್ತಮ. ಏಕೆಂದರೆ ಸಮುದ್ರಜೀವಿಯ ಮೂಲದ ಈ ಚಿಪ್ಪು ಕ್ಯಾಲ್ಸಿಯಂನಿಂದ ಒಳಗೊಂಡಿರುವುದರಿಂದ ಅಭಿಷೇಕದ ನೀರನ್ನು ಶುದ್ಧಿಮಾಡುವುದರೊಂದಿಗೆ ತೀರ್ಥವನ್ನು ಉತ್ತಮ ಔಷಧಿಯಾಗಿ ಪರಿವರ್ತಿಸಬಲ್ಲದು. ಅದಕ್ಕಾಗಿ ಶಂಖವು ಅಭಿಷೇಕಕ್ಕೆ ವಿಶೇಷತೆಯನ್ನು ಪಡೆಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ