ಮಂಗಳವಾರ, ಏಪ್ರಿಲ್ 17, 2018

ಆಂದೋಲನವೋ ಅಥವ #ಷಡ್ಯಂತ್ರವೋ

 #ಬಂದಿದ್ದು_ಸುಪ್ರೀಂ_ಕೋರ್ಟಿನ_ಆದೇಶ ಆದರೆ ತಿರಿಗಿಬಿದ್ದಿದ್ದು ಮಾತ್ರ ಪ್ರಧಾನಿ #ಮೋದಿಯ ವಿರುದ್ಧ!! #ಆಂದೋಲನವೋ ಅಥವ #ಷಡ್ಯಂತ್ರವೋ?
ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ
ಕೆಲ ತಿಂಗಳ ಹಿಂದೆ ಸಂಸತ್ತಿನಲ್ಲಿ ಮಾತನಾಡುತ್ತ ಕಾಂಗ್ರೆಸ್ಸಿನ‌ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ರವರು ಒಂದು ಮಾತನ್ನ ಹೇಳಿದ್ದರು “ಸಂವಿಧಾನದ ತಂಟೆಗೆ ಬಂದರೆ ದೇಶದಲ್ಲಿ ರಕ್ತಪಾತ ನಡೆದುಹೋಗುತ್ತೆ ಹುಷಾರ್..!!” ಎಂದಿದ್ದರು.
ಅದನ್ನ ಈಗ ದುಷ್ಟ ಶಕ್ತಿಗಳು ನಿಜ ಮಾಡಿ ತೋರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೇನೋ ಅನಿಸುತ್ತಿದೆ.
ರಾಜಕಾರಣದಲ್ಲಿ ಪಳಗಿರುವ ನಾಯಕನಾಗಿರುವ ಮಲ್ಲಿಕಾರ್ಜುನ ಖರ್ಗೆ ದೇಶದಲ್ಲಿ ಶಾಂತಿ ನೆಲೆಸುವ ಕುರಿತಾಗಿ ಮಾತನಾಡುವ ಬದಲಾಗಿ ದೇಶದಲ್ಲಿ ರಕ್ತಪಾತವಾಗುವುದರ ಬಗ್ಗೆ ಅದ್ಯಾಕೋ ಬಹಳ ಉತ್ಸುಕತೆಯಿಂದ ಹೇಳಿಕೆ ನೀಡಿ ದೇಶದಲ್ಲಿ ಬೆಂಕಿ ಹೊತ್ತಿಕೊಳ್ಳುವಂತೆ ಪ್ರೋತ್ಸಾಹಿಸಿದ್ದರ ಪರಿಣಾಮವೋ ಅಥವ ಮಹಾರಾಷ್ಟ್ರದಲ್ಲಿ ದಲಿತರ ಮರಾಠರ ನಡುವೆ ಬೆಂಕಿಯಿಟ್ಟು ತಮಾಷೆ ನೋಡಿದ್ದ ಜಿಗ್ನೇಶ್ ಮೇವಾನಿಯಂಥವನ ಕುತಂತ್ರದಿಂದಲೋ ದೇಶ ಮತ್ತೆ ಹೊತ್ತಿ ಧಗ ಧಗ ಉರಿಯುವಂತಾಗಿದೆ.
ಮೊನ್ನೆ ಅಂದರೆ ಏಪ್ರಿಲ್ 2 ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿತ್ತು. ಅದಕ್ಕೆ ಕಾರಣ ಸುಪ್ರೀಂಕೋರ್ಟಿನ ಆದೇಶವಾಗಿತ್ತು. ಅಷ್ಟಕ್ಕೂ ಸಂವಿಧಾನಕ್ಕೆ ನಾವು ಅಪಾರ ಗೌರವ ನೀಡಿತ್ತೇವೆ, ಸಂವಿಧಾನವೇ ನಮಗೆ ಶ್ರೇಷ್ಟ ಗ್ರಂಥ, ಅಂಬೇಡ್ಕರರೇ ನಮಗೆ ದೇವರು ಅಂತ ಹೇಳಿಕೊಳ್ಳುವವರೇ ಭಾರತದ ಕೆಲ ರಾಜ್ಯಗಳನ್ನ ರಣಾಂಗಣವಾಗಿ ಮಾರ್ಪಡಿಸಿಬಿಟ್ಟರು.
ಅಷ್ಟಕ್ಕೂ ದಲಿತರ ಹೆಸರ ಮೇಲೆ ರಾಜಕೀಯ, ಗೂಂಡಾಗಿರಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ, ಕೊಲೆ, ದಂಗೆ ನಡೆಸುವುದು ಎಷ್ಟು ಸರಿ? ಇದರ ಹಿಂದಿರುವವರಾದರೂ ಯಾರು?
ಅಷ್ಟಕ್ಕೂ ಆದ ಘಟನೆಯೇನು?
SC/ST ಆ್ಯಕ್ಟ್ ಕುರಿತಾಗಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ವಿರುದ್ಧವೋ ದೇಶವಿರೋಧಿ ಜನರು ದೇಶದಲ್ಲಿ ದಂಗೆಯನ್ನ ಎಬ್ಬಿಸಿಬಿಟ್ಟಿದ್ದರು. ರಾಜಕೀಯ ಪಕ್ಷಗಳ ಜೊತೆ ಜೊತೆಗೆ ಕೆಲ ದಲಿತ ಸಂಘಟನೆಗಳು ಸುಪ್ರೀಂಕೋರ್ಟಿನ ಆದೇಶದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ದೇಶದ ಹಲವಾರು ರಾಜ್ಯಗಳಲ್ಲಿ‌ದಲಿತ ಸಂಘಟನೆಗಳು ಏಪ್ರಿಲ್ 2 ರಂದು ಭಾರತ್ ಬಂದ್ ಗೆ ಕರೆ ನೀಡಿದ್ದವು.
ಆದರೆ ಹೆಸರಿಗೆ ಮಾತ್ರ ಇದು ಭಾರತ್ ಬಂದ್ ಆಗಿತ್ತು ಆದರೆ ಭಾರತ್ ಬಂದ್ ಹೆಸರ ಮೇಲೆ ಕಂಡ ಕಂಡಲ್ಲಿ ಹಿಂಸಾಚಾರ, ರೇಲ್ವೆ ಹಳಿಗಳನ್ನ ಕಿತ್ತೆಸೆದಿದ್ದು, ಬಸ್ ಗಳನ್ನ ಸುಟ್ಟು ಹಾಕಿದ್ದು, ಆ್ಯಂಬುಲೆನ್ಸ್ ಗಳನ್ನ ತಡೆದು ರೋಗಿಗಳ ಪ್ರಾಣಹರಣ ಮಾಡಿದ್ದು, ಕೈಯಲ್ಲಿ ಶಸ್ತ್ರ ಹಿಡಿದುಕೊಂಡು ಬೀದಿಗಳಲ್ಲಿ ಓಡಾಡಿದ್ದು, ಮನೆಯಿಂದ ಗನ್ ಗಳನ್ನ ತಂದು ಅಮಾಯಕರ ಮೇಲೆ ಗುಂಡು ಹಾರಿಸಿದ್ದು, ಪೋಲಿಸ್ ಸ್ಟೇಷನ್ ಗಳಿಗೆ ಬೆಂಕಿಯಿಟ್ಟಿದ್ದು, ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಸ್ ಗಳನ್ನ ಚೇಸ್ ಮಾಡಿ ಸುಡಲು ಯತ್ನಿಸಿದ್ದು ಮೊನ್ನೆಯ ಭಾರತ್ ಬಂದ್ ನಲ್ಲಿ ಕಂಡು ಬಂದ ದೃಶ್ಯಗಳಾಗಿದ್ದವು.
ಅಷ್ಟಕ್ಕೂ ತೀರ್ಪು ನೀಡಿದ್ದು ಸುಪ್ರೀಂಕೋರ್ಟ್ ಆದರೆ ಈ ಭಾರತ್ ಬಂದ್ ಪ್ರಧಾನಿ ಮೋದಿಯವರ ವಿರುದ್ಧ ತಿರುಗಿದ್ಯಾಕೆ? ಭಾರತದ ರಾಜ್ಯಗಳಲ್ಲಿ ಭಾರತ್ ಬಂದ್ ಹೆಸರ ಮೇಲೆ ದೇಶಕ್ಕೆ ಬೆಂಕಿಯಿಟ್ಟ ಜನರೇ SC/SC ಆ್ಯಕ್ಟ್ ನ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಪ್ರಧಾನಿ ಮೋದಿ ವಿರುದ್ಧ ಇಷ್ಟೆಲ್ಲಾ ದಂಗೆ ನಡೆಸುವ ಉದ್ದೇಶವಾದರೂ ಏನಿತ್ತು? ಸುಪ್ರೀಂಕೋರ್ಟಿನ ನ ನಿರ್ಧಾರಕ್ಕೂ ಮೋದಿ ಸರ್ಕಾರಕ್ಕೂ ಸಂಬಂಧವೇನ್ರಯ್ಯಾ?
ಸುಪ್ರೀಂಕೋರ್ಟ್ ವಿರುದ್ಧ ಭಾರತ್ ಬಂದ್ ಮಾಡಿ ಹಿಂಸಾಚಾರವೆಸಗಿದ ದೇಶವಿರೋಧಿಗಳೇ ನಿಮ್ಮ ಆಂದೋಲನದಲ್ಲಿ ಮೋದಿ ವಿರೋಧಿ ಘೋಷಣೆಗಳು ಕೇಳಿಬಂದಿದ್ಯಾಕೆ? ಪೋಲಿಸರ ವಿರುದ್ಧವೇ ಬಙದೂಕಿನಿಂದ ಗುಂಡು ಹಾರಿಸಿದ್ಯಾಕೆ? ಹಾಗಾದರೆ ಸುಪ್ರೀಂಕೋರ್ಟಿನ ತೀರ್ಪನ್ನ ಸಾರಾಸಗಟಾಗಿ ಧಿಕ್ಕರಿಸಿ ನೀಚು ಅದ್ಯಾವ ಸಂವಿಧಾನದ ರಕ್ಷಣೆ ಮಾಡೋಕೆ ಮುಂದಾಗಿದೀರ?
ಆಂದೋಲನ, ಪ್ರತಿಭಟನೆಯೆಂದರೆ ರೇಲ್ವೆ ಹಳಿಗಳನ್ನ ಕಿತ್ತಾಕೋದು, ಗೋಲಿಬಾರ್ ನಡೆಸೋದು, ಅಮಾಯಕರನ್ನ ಕೊಲ್ಲೋದು ಆಂದೋಲನ ಅಥವ ಪ್ರತಿಭಟನೆಯಾ ಅಂತ ದೇಶದ ಜನತೆ ಕೇಳಲಿಚ್ಛಿಸಿದ್ದಾರೆ.
ಸುಪ್ರೀಂಕೋರ್ಟಿನ ತೀರ್ಪಿನ ವಿರುದ್ಧ ರಸ್ತೆಗಿಳಿದು ಸ್ಕೂಲ್ ಬಸ್ ಗಳಿಗೆ ಬೆಂಕಿಯಿಡೋಕೆ ಪ್ರಯತ್ನಿಸುವುದು, ಗಾಡಿಗಳನ್ನ ಸುಟ್ಟು ಹಾಕೋದು, ಪೋಲಿಸ್ ಠಾಣೆ, ಚೌಕಿಗಳಲ್ಲಿ ಬೆಂಕಿಯಿಡೋದು, ಗ್ವಾಲಿಯರ್ ನಲ್ಲಿ ಜೈ ಭೀಮ್ ಘೋಷಣೆ ಕೂಗುತ್ತ ರಿವಾಲ್ವರ್ ನಿಂದ ಪೋಲಿಸರ ಮೇಲೆ ಗುಂಡು ಹಾರಿಸೋದು, ಫಿರೋಜಾಬಾದ್ ನಲ್ಲಿ ಪೋಲಿಸರ ಮೇಲೆಯೇ ಹಲ್ಲೆ ನಡೆಸೋದು, ಆಟೋದಲ್ಲಿ ತೆರಳುತ್ತಿದ್ದ ಮಹಿಳೆಯರ ಮಕ್ಕಳ ಮೇಲೆ ಹಲ್ಲೆ ನಡೆಸೋದೂ ಆಂದೋಲನವಾ ಪ್ರತಿಭಟನೆಯಾ? ಯಾವ ದೇಶದ ಅನ್ನ ತಿಂತಿದೀರೋ, ಯಾವ ದೇಶದಲ್ಲಿ ಬದುಕುತ್ರಿದ್ದೀರೋ ಅದೇ ದೇಶದಲ್ಲಿ ಬೆಂಕಿಯಿಡೋದೂ ಒಂದು ಪ್ರತಿಭಟನೆಯಾ? ಅಂತ ದೇಶದ ಜನತೆ ಈ ಭಯೋತ್ಪಾದಕರಿಗೆ ಕೇಳುತ್ತಿದ್ದಾರೆ.
ಇಂದು ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಜೈ ಭೀಮ್ ಘೋಷಣೆಗಳನ್ನ ಕೂಗುತ್ತ ನರೇಂದ್ರ ಮೋದಿ ಮುರ್ದಾಬಾದ್ ಅಂತ ನೀವು ಮಾಡಿದ ನಂಗಾನಾಚ್ ಗಳನ್ನ ದೇಶದ ಜನತೆ ಇವರು ತಮ್ಮ‌ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿಲ್ಲ ಬದಲಾಗಿ ರಾಜಕೀಯ ಪಕ್ಷಗಳ ಚೇಲಾಗಳಾಗಿ ವರ್ತಿಸುತ್ತಿದ್ದಾರೆ ಅನ್ನೋದು ಅರ್ಥವಾಗಿದೆ.
ಇದು ಆಂದೋಲನವಲ್ಲ ಇದು 2019 ರಲ್ಲಿ ಪ್ರಧಾನಿ ಮೋದಿಯನ್ನ ಅಧಿಕಾರದಿಂದ ಇಳಿಸಲು ನಡೆಯುತ್ತಿರುವ ಪೂರ್ವಭಾವಿ ತಯಾರಿ ಅನ್ನೋದು ಪ್ರತಿಯೊಬ್ಬ ದೇಶಭಕ್ತನಿಗೂ ಅರ್ಥವಾಗಿದೆ‌. ಈ ಹಿಂಸಾಚಾರದ ಪರದೆಯ ಹಿಂದೆ ಮೋದಿ ವಿರೋಧಿಗಳ ದಂಡೇ ನಿಂತಿವೆ ಅನ್ನೋದಕ್ಕೆ ಖರ್ಗೆ ಅಂದು ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯೊಂದೇ ಅಲ್ಲ ಮೊನ್ನೆ ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಟ್ವೀಟ್ ಮಾಡಿ ದೇಶದಲ್ಲಿ ಹಿಂಸಾಚಾರವೆಬ್ಬಿಸುತ್ತಿರುವ ನಾಲಾಯಕರಿಗೆ ಸಲಾಂ ಮಾಡುತ್ತಿದ್ದ.
ಈ ಆಂದೋಲನಕ್ಕಿಟ್ಟಿದ್ದ ಹೆಸರು “ಭಾರತ್ ಬಂದ್” ಆದರೆ ಲೂಟಿ, ದಂಗೆ, ಕೊಲೆ, ಹಿಂಸಾಚಾರ ಮಾಡಿ ಬೀದಿಗಿಳಿದು ಹೋರಾಟ ಮಾಡಿದ್ದು ಮಾತ್ರ ಬಿಜೆಪಿ ಸರ್ಕಾರವಿರೋ ರಾಜ್ಯಗಳಾದ ಉತ್ತರಪ್ರದೇಶ, ಝಾರ್ಖಂಡ್, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಗಳಂತಹ ರಾಜ್ಯಗಳಲ್ಲಿ. ಹಾಗಾದರೆ ಈ ರಾಜ್ಯಗಳಷ್ಟೇ ಭಾರತದಲ್ಲುವೆಯಾ? ಬೇರೆ ರಾಜ್ಯಗಳಲ್ಲಿ ಆಗದ ಗಲಭೆಗಳು ಕೇವಲ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಷ್ಟೇ ಯಾಕೆ?
ಅಷ್ಟಕ್ಕೂ ದೇಶದಲ್ಲಿ ಬೆಂಕಿ ಹಚ್ಚಿದ ಈ ದ್ರೋಹಿಗಳಿಗೆ ಸುಪ್ರೀಂಕೋರ್ಟ್ ನ ಅದ್ಯಾವ ತೀರ್ಪು ರೊಚ್ಚಿಗೆಬ್ಬಿಸಿದ್ದು ಗೊತ್ತಾ?
1989 ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಲ್ಲಿ ತಿದ್ದುಪಡಿ ತರುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಬಂದ್ ನಡೆಯುತ್ತಿದ್ದು, ಪಂಜಾಬಿನ ಲುಧಿಯಾನಾ, ಬಿಹಾರದ ಪಾಟ್ನಾ, ಉತ್ತರ ಪ್ರದೇಶದ ಆಗ್ರಾ, ಮಧ್ಯಪ್ರದೇಶ, ಜಾರ್ಖಂಡ್, ರಾಜಸ್ಥಾನದ ಹಲವು ಸ್ಥಳಗಳಲ್ಲಿ ಗಲಭೆ ಎಬ್ಬಿಸಿವೆ.
ಈ ಕಾಯ್ದೆಯನ್ವಯ ಎಸ್ಸಿ ಮತ್ತು ಎಸ್ಟಿ ಪಂಗಡಗಳ ಮೇಲೆ ಯಾವುದೇ ರೀತಿಯ ದೌರ್ಜನ್ಯದ ದೂರು ಬಂದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಈ ಕಾಯ್ದೆ ದುರುಪಯೋಗವಾಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ಸುಪ್ರೀಂ ಕೋರ್ಟ್, ಯಾವುದೇ ದೂರು ಬಂದರೂ ಪ್ರಾಥಮಿಕ ಡಿಎಸ್ ಪಿ ತನಿಖೆಯ ನಂತರವೇ ಕ್ರಮ ಕೈಗೊಳ್ಳುವಂತೆ ತೀರ್ಪು ನೀಡಿತ್ತು.
ಈ ತೀರ್ಪಿನಿಂದ ಎಸ್ಟಿ, ಎಸ್ಟಿಗಳ ಹಕ್ಕನ್ನು ಕಸಿದಂತಾಗುತ್ತದೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತವೆ ಎಂದು ದೂರಿ ವಿವಿಧ ದಲಿತಪರ ಸಂಘಟನೆಗಳು ಏ.2 ರಂದು ಭಾರತ್ ಬಂದ್ ಗೆ ಕರೆ ನೀಡಿ ದೇಶಾದ್ಯಂತ ಬೆಂಕಿ ಹಚ್ಚಿ ಇಲ್ಲಿಯವರೆಗೂ 10 ಜನರ ಪ್ರಾಣವನ್ನ ಬಲಿ ತೆಗೆದುಕೊಳ್ಳಲಾಗಿದೆ.
ಇದು ಸಂವಿಧಾನವನ್ನ ಗೌರವಿಸುವ ಪರಿಯೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ