ಮಂಗಳವಾರ, ಫೆಬ್ರವರಿ 28, 2017

History of Brahamin

ಬ್ರಾಹ್ಮಣರ ಇತಿಹಾಸ-------- .

ದ್ರೋಣಾಚಾರ್ಯರ ಅನುಮತಿಯಿಲ್ಲದೇ ಅವರನ್ನು ಗುರು ಎಂದು ಭಾವಿಸಿ ವಿಧ್ಯೆ ಕಲಿತರೂ ಆ ಸ್ಥಳದಿಂದ ಹೋಗದೇ ರಾಜಕುಮಾರರ ನಾಯಿಯ ಮೇಲೆ ಶಬ್ಧವೇಧೀ ವಿಧ್ಯೆಯನ್ನು ಪ್ರಯೋಗ ಮಾಡಿದ್ದು ಬುದ್ಧಿ ಜೀವಿಗಳ ಪ್ರಕಾರ ತಪ್ಪಲ್ಲ.

ಹಾಗೆ ಮಾಡಿ ದ್ರೋಣಾಚಾರ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಏಕಲವ್ಯನೇ ಅಲ್ಲವೇ? !!!!!!

ಇಷ್ಟಕ್ಕೂ ಏಕಲವ್ಯನೇ ಬೆರಳು ಹೋದ ಬಗ್ಗೆ ನೊಂದುಕೊಂಡ ಯಾವುದೇ ದಾಖಲೆಗಳೂ ಇಲ್ಲ.

ಕೆಲವು ಜಾತಿಯ ಜನರು ಏಕಲವ್ಯನನ್ನು ತಮ್ಮ ಸಮುದಾಯದವನು ಎಂದು ತಿಳಿದಿದ್ದಾರೆ. ಆದರೆ ಆಗಿದ್ದ ಬೇಡನು ಈಗ ಯಾವ ಜಾತಿಯವನು ಎಂದು ಹೇಳುವುದು ಕಷ್ಟ. ವ್ಯವಸಾಯ ಈಗಿನಂತೆ ಅಭಿವೃದ್ಧಿಯಾಗಿಲ್ಲದ ಕಾಲದಲ್ಲಿ ಬಹುತೇಕ ಇತರರು ಆಹಾರಕ್ಕಾಗಿ ಬೇಟೆಯಾಡುತ್ತಿದ್ದರು.

ಏಕಲವ್ಯನೇನು ಓದುಬರಹ ಕಲಿಸಿ ಎಂದು ದ್ರೋಣಾಚಾರ್ಯರನ್ನು ಕೇಳಲಿಲ್ಲ. ಅವನು ಕೇಳಿದ್ದು ರಾಜರು ಮತ್ತು ಸೈನಿಕರಿಗೆ ಮಾತ್ರ ಮೀಸಲಾಗಿದ್ದ ಯುದ್ದವಿಧ್ಯೆಯನ್ನು.

ಈಗ ತಾನೇ ಸಾಮಾನ್ಯ ಜನರಿಗೆ ಸೈನಿಕ ತರಬೇತಿಯನ್ನು ನೀಡುತ್ತಾರೆಯೇ?????!!

ಬ್ರಾಹ್ಮಣರು ಶ್ರೇಷ್ಠರೆಂದು ಬ್ರಾಹ್ಮಣರೆಂದೂ ಹೇಳಿಕೊಂಡಿಲ್ಲ. "ತನ್ನ ಬಣ್ಣಿಸಬೇಡ", ಎಂದು ಯಾರಾದರೂ ಹೇಳುವ ಸಾವಿರಾರು ವರ್ಷಗಳ ಮೊದಲಿನಿಂದಲೇ ಅದನ್ನು ಪಾಲಿಸಿಕೊಂಡು ಬಂದಿದ್ದಾರೆ.

ಆದರೆ ಈಗ ಬ್ರಾಹ್ಮಣರನ್ನು ಅಕಾರಣವಾಗಿ ಖಳನಾಯಕರಂತೆ ಚಿತ್ರಿಸುವ ಮತ್ತು ಅದರಿಂದಲೇ ಪ್ರಶಸ್ತಿ ಹಾಗೂ ವಿದೇಶಿ ಕಳ್ಳ ಹಣವನ್ನು ಪಡೆದು ತಮ್ಮ ಹೊಟ್ಟೆಯನ್ನು ಸಾಕಿಕೊಳ್ಳುವ ಸುಳ್ಳುಗಾರರ ಕುತಂತ್ರವನ್ನು ತಪ್ಪಿಸಲು ಅನಿವಾರ್ಯವಾಗಿ ಬ್ರಾಹ್ಮಣರು ತಮ್ಮನ್ನು ತಾವು ಸಮಥಿ೯ಸಿಕೊಳ್ಳಲೇಬೇಕಾಗಿದೆ.

ಆದರೆ ನಾವು ಜನಸಾಮಾನ್ಯರನ್ನು ಗಮನಿಸಿದಾಗ ತಿಳಿಯುವುದೇನೆಂದರೆ ಎಡಪಂಥೀಯರು ಮತ್ತು ಬುದ್ಧಿ ಜೀವಿಗಳು ಬ್ರಾಹ್ಮಣರನ್ನು ಎಷ್ಟೇ ಕೆಟ್ಟವರನ್ನಾಗಿ ಮಾಡಲು ಪ್ರಯತ್ನಿಸದರೂ ಜನಸಾಮಾನ್ಯರು ಬ್ರಾಹ್ಮಣ ಬಗ್ಗೆ ಗೌರವವನ್ನು ಉಳಿಸಿಕೊಂಡಿದ್ದಾರೆ.

ಬ್ರಾಹ್ಮಣರು ಶೂದ್ರರನ್ನು ಶೋಷಣೆ ಮಾಡಿದ್ದಾರೆ ಎಂದು ಬುದ್ಧಿಜೀವಿಗಳು ಹತ್ತಾರು ವರ್ಷಗಳಿಂದ ಬಾಯಿ ಬಡಿದುಕೊಳ್ಳತ್ತಿದ್ದಾರೆ. ಆದರೆ ಈ ವಿಷಯದಲ್ಲಿ ಯಾವುದಾದರೂ ಸಮೀಕ್ಷೆಮಾಡಿದ್ದಾರೆಯೇ????

ಯಾವುದಾದರೂ ಸಾಕ್ಷ್ಯವಿದೆಯೇ??

ಇವರು ಹಳ್ಳಿಗಳಿಗೆ ಭೇಟಿ ಕೊಟ್ಟು ಈಗಲೋ ಆಗಲೋ ಸಾಯುವ ಸ್ಥಿತಿಯಲ್ಲಿರುವ ಅತ್ಯಂತ ಹೆಚ್ಚು ವಯಸ್ಸಿನ ಶೂದ್ರ ವೃದ್ಧರನ್ನು ಕೇಳಿ ನೋಡಲಿ. ಆಗ ತಿಳಿಯುತ್ತದೆ ನಿಜವಾದ ವಿಷಯವೇನು ಎಂದು!!!!!

" ಇಲ್ಲಾ ಸ್ವಾಮೀ, ಬ್ರಾಹ್ಮಣರು ನಮಗೇನೂ ಶೋಷಣೆ ಮಾಡಿಲ್ಲ. - - - - - - - ಐನೋರು......, ಅಂತಾ ಬರಗಾಲದಾಗೂ ನಮಗೆ ಕೂಲಿ ಕೊಟ್ಟು, ಅಷ್ಟೋ ಇಷ್ಟೋ ದವಸ, ದಾನ್ಯ ಕೊಟ್ಟು ನಮ್ಮನ್ನು ಸಾಕವ್ರೆ ಸ್ವಾಮಿ - - - - - - ಸುಳ್ಳು ಯಾಕೇಳನಾ??? " ಅನ್ನುತ್ತಾರೆ ನಿಯತ್ತಿನ ಶೂದ್ರರು. ಈಗಿನ ಹೊಸ ತಲೆಮಾರಿನವರಿಗೆ ಈ ವಿಷಯ ತಿಳಿಯದೇ ಇರಬಹುದು. ಬುದ್ಧಿಜೀವಿಗಳು ಹೇಳುವುದೇ ನಿಜ ಎಂದುಕೊಳ್ಳಬಹುದು.

ಅಷ್ಟೇ ಏಕೆ, ಈಗಲೇ ಒಂದು ಸಮೀಕ್ಷೆ ನೆಡೆಯಲಿ!!!

ಭಾರತದಲ್ಲಿರುವ ಎಲ್ಲಾ ಪೋಲಿಸ್ ಠಾಣೆಗಳ ದಾಖಲೆಗಳನ್ನು ಪರಿಶೀಲಿಸಲಿ. - - - - - - ಬ್ರಾಹ್ಮಣರ ಮೇಲೆ ಯಾವ ಯಾವ ಪ್ರಕರಣಗಳು ದಾಖಲಾಗಿವೆ ಎಂದು.------- ಬ್ರಾಹ್ಮಣರ ಜನಸಂಖ್ಯೆ ಮತ್ತು ಶೇಕಡಾವಾರು ಅಪರಾಧಗಳು ಮತ್ತು ಇತರರ ಜನಸಂಖ್ಯೆ ಮತ್ತು ಶೇಕಡಾವಾರು ಅಪರಾಧ ಪ್ರಕರಣಗಳನ್ನು ಹೋಲಿಸಿ ನೋಡಲಿ!!

ಆಗ ತಿಳಿಯುತ್ತದೆ ಯಾರು ಸಭ್ಯರು ಮತ್ತು ಯಾರು ದುಷ್ಟರು ಎಂದು!!!!!

ನೀವು ಬೇಕಾದರೆ ಸುದ್ದಿವಾಹಿನಿಗಳ ಕೆಳಭಾಗದಲ್ಲಿ ಸ್ಕ್ರೋಲ್ ಆಗುತ್ತಿರುವ ವಿವಿಧ ಅಪರಾಧ ಪ್ರಕರಣಗಳು ಮತ್ತು ಬಂಧಿತರಾದ ಆರೋಪಿಗಳ ಹೆಸರುಗಳನ್ನು ಗಮನಿಸಿರಿ.

ನೀವು ತಿಂಗಳುಗಟ್ಟಲೇ ಕಾದರೂ ಒಬ್ಬ ಬ್ರಾಹ್ಮಣ ಅಪರಾಧಿಯ ಹೆಸರು ಕಂಡು ಬರುವುದಿಲ್ಲ.

ಕೊಲೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಕಳ್ಳತನ, ದರೋಡೆ ಮುಂತಾದ ಪ್ರಕರಣಗಳನ್ನು ಮಾಡುವವರ ಹೆಚ್ಚು ಹೆಸರುಗಳು ಯಾವ ಜಾತಿಯವು ಹೆಚ್ಚಾಗಿ ಕಂಡು ಬರುತ್ತವೆ????

ಇಡೀ ದೇಶದ ವಿವಿಧ ಭಾಗಗಳ ಅಪರಾಧ ಪ್ರಕರಣಗಳ ಕುರಿತು ಮಾಹಿತಿ ಕಲೆ ಹಾಕಿದರೆ ಬ್ರಾಹ್ಮಣರಂತಹ ಒಳ್ಳೆಯ ಜನ ಇಡೀ ಜಗತ್ತಿನಲ್ಲಿಯೇ ಸಿಗುವುದಿಲ್ಲ ಎಂಬುದು ಸಾಬೀತಾಗುತ್ತದೆ.

ಲೋಕಾಯುಕ್ತ ದಾಳಿಗೆ ಒಳಗಾಗಿ, ಕೋಟ್ಯಂತರ ರೂಪಾಯಿ ಹಣ, ಚಿನ್ನಾಭರಣ ಮತ್ತು ದಾಖಲೆಗಳೊಂದಿಗೆ ಸಿಕ್ಕಿ ಬೀಳುವ ವ್ಯಕ್ತಿಗಳನ್ನು ಗಮನಿಸಿದ್ದೀರಾ???

ಎಲ್ಲರೂ ಬೇರೆಯವರೇ ಇರುತ್ತಾರೆ. ಬ್ರಷ್ಟರ ಪಟ್ಟಿಯಲ್ಲಿ ಬ್ರಾಹ್ಮಣರ ಹೆಸರು ಇರುವುದು ತುಂಬಾ ಅಪರೂಪ.

ಹಿಂದಿನ ಕಾಲದಿಂದಲೂ ಯಾವುದೇ ಕೆಟ್ಟ ಮಾರ್ಗದ ಮೂಲಕ ಸಂಪಾದನೆ ಮಾಡದಿದ್ದರೂ ಬ್ರಾಹ್ಮಣರಲ್ಲಿ ಹೆಚ್ಚಿನವರು ಅನುಕೂಲವಾಗಿ ಇದ್ದದ್ದಕ್ಕೆ ಕಾರಣಗಳಿವೆ.

ಅದೇ ಜೀವನ ಶೈಲಿಯ ವ್ಯತ್ಯಾಸ!!!!!

ಇತರ ಕೆಲವು ಜಾತಿಗಳ ಜನರು ಬಡತನ ಅನುಭವಿಸುವುದಕ್ಕೆಮುಖ್ಯವಾದ ಕಾರಣ - - - - - ಅತಿಯಾದ ಕುಡಿತ ಮತ್ತು ಅತಿಯಾದ ಮಾಂಸಾಹಾರ ಸೇವನೆ.

ಒಬ್ಬರು ಕುಡಿಯಲು ಬೇಕಾಗುವ ಹಣದಿಂದ ಮನೆಮಂದಿಯೆಲ್ಲಾ ಊಟ ಮಾಡಬಹುದು. ಒಂದು ದಿನ ಮಾಂಸದ ಅಡುಗೆ ಮಾಡಲು ಖರ್ಚಾಗುವ ಹಣದಿಂದ ವಾರಪೂರ್ತಿ ಸಸ್ಯಾಹಾರದ ಅಡುಗೆ ಮಾಡಬಹುದು.

ಕೆಲವರು ಮಾರೀಜಾತ್ರೆಯ ದಿನ ಮಾಡುವ ಖರ್ಚಿನಿಂದ ಬ್ರಾಹ್ಮಣರು 6 ತಿಂಗಳು ಜೀವನ ಮಾಡಬಹುದು.

ಹೆಚ್ಚಿನ ಸಂಖ್ಯೆಯ ಬ್ರಾಹ್ಮಣರು ಯಾವುದೇ ರೀತಿಯ ದುಶ್ಚಟಗಳಿಲ್ಲದೇ ಹಣ ಉಳಿತಾಯ ಮಾಡಿ ಜಮೀನುಗಳನ್ನು ಉಳಿಸಿಕೊಂಡು, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸ್ವಲ್ಪ ಬೇರೆಯವರು ಅಸೂಯೆ ಪಡುವ ರೀತಿಯಲ್ಲಿ ಮೊದಲಿನಿಂದಲೂ ಇದ್ದಾರೆ.

ಬ್ರಾಹ್ಮಣರಲ್ಲಿಯೂ ಕೆಲವು ಕುಡುಕರನ್ನು ಗಮನಿಸಿ!!! ಅವರ ಪರಿಸ್ಥಿತಿ ಹೇಗಿದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲಾ ರೀತಿಯಲ್ಲೂ ಕೆಳಮಟ್ಟದಲ್ಲಿರುತ್ತಾರೆ.

ಬ್ರಾಹ್ಮಣರೂ ಕೂಡಾ ಇವರಂತೆ ಯಾವಾಗಲೂ ಕುಡಿದು, ಅವರು ತಿನ್ನುವುದನ್ನೇ ತಿಂದು ದುಡಿದದ್ದನ್ನೆಲ್ಲಾ ಕಳೆದುಕೊಂಡು, ಸಾಲ ಮಾಡಿ ಹಾಳಾಗಿ ಹೋಗಿದ್ದರೆ ಯಾರೂ ಅಸೂಯೆ ಪಡುತ್ತಿರಲಿಲ್ಲ. ಶೋಷಕರೆಂದೂ ಕರೆಯುತ್ತಿರಲಿಲ್ಲ.

ಇಷ್ಟಕ್ಕೂ ಬ್ರಾಹ್ಮಣರು ಒಂದು ವೇಳೆ ಯಾರನ್ನಾದರೂ ಶೋಷಣೆ ಮಾಡಿದ್ದರೂ ಅದು ಸಿವಿಲ್ ಶೋಷಣೆ - : ಕ್ರಿಮಿನಲ್ ಶೋಷಣೆಯಲ್ಲ.

 ಬ್ರಾಹ್ಮಣರು ಮಾಡಿದ್ದರೆ ಕೆಲವರನ್ನು ಯಾವುದಾದರೂ ವಿಷಯದಲ್ಲಿ ಅವಕಾಶ ವಂಚಿತರನ್ನಾಗಿ ಮಾಡಿರಬಹುದು. ಅದು ಬಿಟ್ಟು ಬ್ರಾಹ್ಮಣರು ಶೂದ್ರರನ್ನು ಮೈಮುಟ್ಟಿ ಮಾಡುವ ಯಾವುದೇ ರೀತಿಯ ಶೋಷಣೆಯನ್ನು ಮಾಡಿಲ್ಲ. ಅದಕ್ಕೆ ಸಾಕ್ಷಿ ಅಸ್ಪೃಶ್ಯತೆ!!!

ಹೌದು! ಬ್ರಾಹ್ಮಣರು ಇತರರನ್ನು ಮುಟ್ಟುತ್ತಲೇ ಇರಲಿಲ್ಲವಾದ್ದರಿಂದ ತಾನೇ ಅಸ್ಪೃಶ್ಯತೆ ಆಚರಣೆ ಇದ್ದದ್ದು.

ಮುಟ್ಟಿಲ್ಲ ಅಂದ ಮೇಲೆ ಮುಟ್ಟಿ ಮಾಡುವ ಯಾವುದೇ ರೀತಿಯ ಶೋಷಣೆಯನ್ನೂ ಬ್ರಾಹ್ಮಣರು ಮಾಡಿಲ್ಲ. - - - - - - ಅಸ್ಪೃಶ್ಯತೆ ಮತ್ತು ಶೋಷಣೆಗಳು, ಎರಡೂ ಒಂದೇ ಸಮಯದಲ್ಲಿ ಇರಲು ಸಾಧ್ಯವಿಲ್ಲ.

ನಿಜವಾದ ಶೋಷಕರ ಎದುರು ದಲಿತರು ಈಗಲೂ ಅಸಹಾಯಕರೇ!!!

ಹೌದು!!! ದಲಿತರ ಮೇಲಿನ ದೌರ್ಜನ್ಯ, ಮಯಾ೯ದಾ ಹತ್ಯೆ, ಬೆಂಕಿ ಹಚ್ಚಿ ಸಾಯಿಸುವುದು, ಮುಂತಾದ ಅಮಾನುಷವಾದ ದೈಹಿಕ ಶೋಷಣೆ ಮಾಡುವ ಜಾತಿಗಳ ಜನರ ವಿರುದ್ಧ ದನಿಯೆತ್ತಲೂ ದಲಿತರಿಂದ ಸಾಧ್ಯವಾಗಿಲ್ಲ. ಏಕೆಂದರೆ ಬ್ರಾಹ್ಮಣರನ್ನು ಟೀಕಿಸಿದರೆ, ಅವಹೇಳನ ಮಾಡಿದರೆ ಅಹಿಂಸಾವಾದಿಗಳಾದ ಬ್ರಾಹ್ಮಣರು ಏನೂ ಮಾಡುವುದಿಲ್ಲ.

ಆದರೆ ದಲಿತರ ನಿಜವಾದ ಶೋಷಕರಾದ ಮತ್ತು ದಲಿತರ ಮೇಲೆ ಕ್ರಿಮಿನಲ್ ಶೋಷಣೆ ಮಾಡುವ ಮಧ್ಯಮ ಶೂದ್ರರು ಅತಿಯಾಗಿ ಸಂಘಟಿತರಾಗಿದ್ದಾರೆ----------. ಅವರ ಭಯ ಎಷ್ಟಿದೆಯೆಂದರೆ ಬುದ್ಧಿ ಜೀವಿಗಳು ಮತ್ತು ದಲಿತರು ಅವರ ವಿರುದ್ಧ ಹೋರಾಟ ನಡೆಸುವುದಿರಲಿ ಒಂದು ಟೀಕೆಯ ಮಾತನ್ನೂ ಆಡಲು ಹೆದರುತ್ತಾರೆ.

 ಅದರಿಂದಲೇ ಲಕ್ಷಾಂತರ ವರ್ಷಗಳಿಂದ ದೇಶವನ್ನು ಮತ್ತು ದುರ್ಬಲರನ್ನು ಮುಂದುವರಿಸಲು ಶ್ರಮಿಸಿದ ಮತ್ತು ಯಾವುದೇ ಟೀಕೆ ಮಾಡಿದರೂ ಏನೂ ಮಾಡದ ಬ್ರಾಹ್ಮಣರನ್ನು ಟೀಕಿಸಿ ಬೇರೆಯವರಿಂದ ತಮಗಾದ ಅನ್ಯಾಯವನ್ನು ಹೊರಹಾಕಿ ಸಮಾದಾನ ಪಟ್ಟುಕೊಳ್ಳುತ್ತಾರೆ.

ಬೇಕಾದರೆ ಪೊಲೀಸ್ ಇಲಾಖೆಯ ದಾಖಲೆಗಳನ್ನು ತೆಗೆಸಿ ನೋಡಲಿ.------- ಯಾವ ಜಾತಿಗಳ ಜನರ ಮೇಲೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚು ದಾಖಲಾಗಿವೆ ಎಂದು ತಿಳಿಯುತ್ತದೆ.

 ಆ ವಿಷಯ ತಿಳಿದರೂ ಸಹ ಭಾರತದ ಯಾವುದೇ ಬುದ್ಧಿ ಜೀವಿಗೂ ಕೂಡಾ ಆ ಮಧ್ಯಮ ಶೂದ್ರರನ್ನು ಶೋಷಕರು ಎಂದು ಒಂದು ಬಹಿರಂಗವಾಗಿ ಪತ್ರಿಕಾ ಹೇಳಿಕೆಯನ್ನು ನೀಡಲು ಧೈರ್ಯ ಬರುವುದಿಲ್ಲ.

 ಏಕೆಂದರೆ ಭಾರತದಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದ ಯಾವ ಜಾತಿಯನ್ನು ನಿಂದಿಸಿದರೂ ಆಗುವ ಪರಿಣಾಮವೇ ಬೇರೆ!!!

ಮನೆಯಲ್ಲಿ ಕೂಡಾ ಬ್ರಾಹ್ಮಣರು ಮತ್ತು ಇತರರ ನಡವಳಿಕೆಗಳ ನಡುವೆ ತುಂಬಾ ವ್ಯತ್ಯಾಸವಿದೆ.MALE CHAUVINISM ಬ್ರಾಹ್ಮಣರಲ್ಲಿ ತುಂಬಾ ಕಡಿಮೆ. ಕುಡಿದು ಬಂದು ಹೆಂಡತಿಯನ್ನು ಒದೆಯುವುದು, ವರದಕ್ಷಿಣೆ ಹತ್ಯೆ ಮಾಡುವುದು ಇವು ಬ್ರಾಹ್ಮಣರ ಮನೆಗಳಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ಬೇರೆಯವರಿಗೆ ಹೋಲಿಸಿದರೆ ಮನೆಯಲ್ಲಿ ಹೆಚ್ಚು ಕೆಲಸ ಮಾಡುವವರು ಬ್ರಾಹ್ಮಣ ಪುರುಷರೇ.
ತರಕಾರಿ ಹೆಚ್ಚಿಕೊಡುವುದು, ಒಮ್ಮೊಮ್ಮೆ ಅಡಿಗೆ ಮಾಡುವುದು, ಮುಂತಾದ ಸಹಾಯಗಳನ್ನು ತಾಯಿಗೆ ಅಥವಾ ಹೆಂಡತಿಗೆ ಮಾಡುವುದು ಬ್ರಾಹ್ಮಣರು ಮಾತ್ರ.

  ಆದ್ದರಿಂದ ನಾವೊಂದು ತೀರ್ಮಾನಕ್ಕೆ ಬರಬಹುದು. ಅದೇನೆಂದರೆ ಬ್ರಾಹ್ಮಣರೆಂದರೆ ಸಂಪೂರ್ಣವಾದ ನಾಗರಿಕರು.

ಇನ್ನು ಕೆಲವರು ಬ್ರಾಹ್ಮಣರು ಭಾರತದಲ್ಲಿ ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿದರು ಎಂದು ದೂರುತ್ತಾರೆ. ಆದರೆ ಇದರಂತಹ ತಪ್ಪು ಕಲ್ಪನೆ ಮತ್ಯಾವುದೂ ಇಲ್ಲ.

ಬ್ರಾಹ್ಮಣರು ಜಾತಿಪದ್ಧತಿಯನ್ನು ಹುಟ್ಟುಹಾಕಿಲ್ಲ.

ಜಾತಿಗಳನ್ನು ಯಾರಾದರಾಗಲೀ ಸೃಷ್ಟಿಸಲು ಅಥವಾ ನಾಶ ಮಾಡಲು ಸಾಧ್ಯವಿಲ್ಲ. ಜಾತಿಗಳನ್ನು ಬ್ರಾಹ್ಮಣರು ಸೃಷ್ಟಿಸಿರಬಹುದು ಎಂದು ಹೇಳಿದರೆ-------ಉಪಜಾತಿಗಳನ್ನು ಯಾರು ಸೃಷ್ಟಿಸಿದರು???

ಲಿಂಗಾಯತ, ಒಕ್ಕಲಿಗ, ದಲಿತ, ಕುರುಬ ಮುಂತಾದ ಜಾತಿಗಳಲ್ಲಿ ನೂರಾರು ಉಪಜಾತಿಗಳಿವೆಯಲ್ಲಾ, ಅವನ್ನೂ ಬ್ರಾಹ್ಮಣರೇ ಮಾಡಿದರೇ???

ಕ್ರೈಸ್ತರಲ್ಲಿ ಕ್ಯಾಥೊಲಿಕ್, ಪ್ರೊಟೆಸ್ಟಂಟ್ ಮುಂತಾದ ಜಾತಿಗಳನ್ನು ಹುಟ್ಟು ಹಾಕಿದವರೂ ಸಹ ಬ್ರಾಹ್ಮಣರಾ???

ಮುಸಲ್ಮಾನರಲ್ಲಿ ಶಿಯಾ, ಸುನ್ನಿ, ಪಠಾಣ್ ಮುಂತಾದ ಜಾತಿಗಳನ್ನು ಬ್ರಾಹ್ಮಣರೇ ವಿಭಾಗ ಮಾಡಿರುವರೇ?????!!!

ಕ್ರೈಸ್ತ ಮತ್ತು ಮುಸಲ್ಮಾನರಲ್ಲಿ ಯಾರು ಜಾತಿಗಳನ್ನು ಮಾಡಿದರು?????

ಅವನ್ನೆಲ್ಲಾ ಸೃಷ್ಟಿಸಲು ಬ್ರಾಹ್ಮಣರಿಗೇನು ಮಾಡಲು ಬೇರೆ ಕೆಲಸವಿರಲಿಲ್ಲವೇ!!! ಯಾವಾಗಲೂ ಪೂಜೆ, ಪುನಸ್ಕಾರ, ಜಪ, ತಪ ಎಂದು ಭಗವಂತನ ಧ್ಯಾನದಲ್ಲಿದ್ದ ಬ್ರಾಹ್ಮಣರು ಎಲ್ಲರನ್ನೂ ಜನಗಣತಿ ಮಾಡಿ ವಿಭಜನೆ ಮಾಡಿದರೇ????

ಜಾತಿಗಳನ್ನು ಮಾಡಿದರು ಎಂದು ಬ್ರಾಹ್ಮಣರನ್ನು ಟೀಕಿಸುವ ಕಚಡಾ ಮೂರ್ಖರಿಗೆ ಮಾಡಲು ಬೇರೆ ಕೆಲಸವಿಲ್ಲ.

ಜಾತಿಗಳು ತಾವಾಗಿಯೇ ಹುಟ್ಟಿಕೊಳ್ಳುತ್ತವೆ.

ಆದರೆ ತಾವಾಗಿಯೇ ನಾಶವಾಗುವುದಿಲ್ಲ ಮತ್ತು ಯಾರ ಪ್ರಯತ್ನದಿಂದಲೂ ನಾಶವಾಗುವುದಿಲ್ಲ.

ಪ್ರಪಂಚ ಪ್ರಳಯವಾದರೆ ಮಾತ್ರ ಜಾತಿಗಳು ನಾಶವಾಗುತ್ತವೆ.

ಈ ಲೇಖನವನ್ನು ಎಲ್ಲಾ ಬ್ರಾಹ್ಮಣರ ವಾಟ್ಸಪ್ಪಿನಲ್ಲಿ ಶೇರ್ ಮಾಡಿ ಎಲ್ಲಾ ಬ್ರಾಹ್ಮಣರಿಗೂ ತಲುಪಿಸಿ.

ಈ ಲೇಖನವನ್ನು ಎಲ್ಲಾ ಭಾಷೆಗಳಿಗೂ ಭಾಷಾಂತರ ಮಾಡಿ ಪೋಸ್ಟ್ ಮಾಡಲು ಪ್ರಯತ್ನಿಸಿರಿ.

ಶನಿವಾರ, ಫೆಬ್ರವರಿ 18, 2017

1857ರ

ಖರ್ಗೆ ಸಾಹೇಬ್ರೇ, 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್‌ನ ಎಷ್ಟು ನಾಯಿಗಳು ಸತ್ತಿದ್ದವು?

ದಯವಿಟ್ಟು ಕ್ಷಮಿಸಿ, ಸಭ್ಯತೆಯ ಗೆರೆ ಮೀರಿ ಹೀಗೆ ಪ್ರಶ್ನಿಸುತ್ತಿರುವುದಕ್ಕೆ. ಮನಸ್ಸು ಒಲ್ಲೆ ಎನ್ನುತ್ತಿದ್ದರೂ ಏಕೆ ಹೀಗೆ ಕೇಳಬೇಕಾಗಿದೆಯೆಂದರೆ ನಮ್ಮ ಮಹಾನ್ ನೇತಾರ ಮಲ್ಲಿಕಾರ್ಜುನ ಖರ್ಗೆ ಹಾಗೂ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಆರೆಸ್ಸೆಸ್ ಬ್ರಿಟಿಷರ ಜತೆ ಕೈಜೋಡಿಸಿತ್ತು ಎಂಬ ಅವಿವೇಕದ ಹೇಳಿಕೆಯನ್ನು ಆಗಾಗ್ಗೆ ಕೊಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಅರ್ಥವಾಗುವುದು ಇದೇ ಭಾಷೆ! ಸಾಮಾನ್ಯವಾಗಿ ಮಲ್ಲಿಕಾರ್ಜುನ ಖರ್ಗೆಯವರು ಮಾತಿಗೆ ನಿಂತರೆ ಅದು ಲೋಕಸಭೆ ಇರಬಹುದು, ಸಾರ್ವಜನಿಕ ಸಭೆಗಳಿರಬಹುದು, ಪ್ರಧಾನಿಯನ್ನು ಕುಟುಕದೆ, ಆರೆಸ್ಸೆಸ್ಸನ್ನು ಎಳೆದು ತಂದು ಹೀಗಳೆಯದೇ ಅವರ ಮಾತು ಪೂರ್ಣಗೊಳ್ಳುವುದೇ ಇಲ್ಲ.

ಫೆಬ್ರವರಿ 1ರಂದು ಬಜೆಟ್ ಮಂಡನೆಯಾಯಿತು. ಒಂದು ದಿನ ಕಳೆದ ನಂತರ ರಾಷ್ಟ್ರಪತಿ ಭಾಷಣದ ಮೇಲೆ ಲೋಕಸಭೆಯಲ್ಲಿ ಚರ್ಚೆ ಆರಂಭವಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ನಿರರ್ಗಳವಾಗಿ ಮಾತನಾಡಿದ ಖರ್ಗೆಯವರು, ನಮ್ಮ ಪಕ್ಷ ಸ್ವಾತಂತ್ರ್ಯಕ್ಕಾಗಿ ಇಂದಿರಾಗಾಂಧಿ, ರಾಜೀವ್ ಗಾಂಧಿಯವರನ್ನು ಬಲಿದಾನ ಮಾಡಿದೆ, ನಿಮ್ಮ ಬಿಜೆಪಿ, ಆರೆಸ್ಸೆಸ್ಸಿನ ಒಂದು ನಾಯಿಯೂ ಸತ್ತಿಲ್ಲ ಎಂದು ಬಿಟ್ಟರು. ತಕ್ಷಣ ಪ್ರತಿಭಟನೆ ಮಾಡಿದ ಬಿಜೆಪಿ ಸಂಸದರು, ಕಾಶ್ಮೀರಕ್ಕಾಗಿ ನಾವು ಶಾಮ ಪ್ರಸಾದ ಮುಖರ್ಜಿಯವರನ್ನು, ದೇಶಕ್ಕಾಗಿ ದೀನ ದಯಾಳ ಉಪಾಧ್ಯಾಯರನ್ನು ಕಳೆದುಕೊಂಡಿದ್ದೇವೆ. ಮಾತನ್ನು ವಾಪಸ್ಸು ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.

ಪಕ್ಕದಲ್ಲೇ ಇದ್ದ ಸೋನಿಯಾ ಗಾಂಧಿಯವರನ್ನು ಮೆಚ್ಚಿಸುವುಕ್ಕಾಗಿ ಸ್ವಾತಂತ್ರ್ಯಾನಂತರ ಯಾವ್ಯಾವುದೋ ಕಾರಣಕ್ಕೆ ಹತ್ಯೆಯಾದ ಇಂದಿರಾ, ರಾಜೀವ್‌ರನ್ನು ದೇಶಕ್ಕಾಗಿ ಬಲಿದಾನ ಮಾಡಿದರು ಎಂದು ಖರ್ಗೆಯವರು ಮಾತಿನ ಭರಾಟೆಯಲ್ಲಿ ಹೇಳಿರಬಹುದೆಂದು, ವಾಪಸ್ಸು ಪಡೆಯುತ್ತಾರೆಂದು ಎಲ್ಲರೂ ಭಾವಿಸಿದರು. ಉಹೂಃ, ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಖರ್ಗೆ ಮತ್ತೆ ವೀರಾವೇಶದಿಂದ ಕೂಗಾಡಿದರು. ಇಷ್ಟೆಲ್ಲಾ ದಾರ್ಷ್ಟ್ಯದಿಂದ ಮಾತನಾಡುತ್ತಿರುವ ಖರ್ಗೆಯವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕೋ ಬೇಡವೋ, ನೀವೇ ಹೇಳಿ? ಸ್ವಾತಂತ್ರ್ಯಕ್ಕಾಗಿ ಬಿಜೆಪಿ, ಆರೆಸ್ಸೆಸ್‌ನ ಒಂದು ನಾಯಿಯೂ ಸತ್ತಿಲ್ಲ ಎನ್ನುತ್ತೀರಲ್ಲಾ ಖರ್ಗೆಯವರೇ, 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿಮ್ಮ ಕಾಂಗ್ರೆಸ್‌ನ ಎಷ್ಟು ನಾಯಿಗಳು ಸತ್ತಿದ್ದವು?!

ಇಂದು ಇಟಲಿ ಮೂಲದ ಸೋನಿಯಾ ಗಾಂಧಿ ಕೈಯಲ್ಲಿರುವ ಕಾಂಗ್ರೆಸ್, ಎ.ಓ. ಹ್ಯೂಮ್ ಎಂಬ ಬ್ರಿಟಿಷನಿಂದ ಅಂದು ಸ್ಥಾಪನೆಯಾಗಿದ್ದು 1885ರಲ್ಲಿ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು 1857ರಲ್ಲಿ. ಹುಟ್ಟುವುದಕ್ಕಿಂತ ಮೊದಲೇ ನಡೆದ ಹೋರಾಟದಲ್ಲಿ ಏಕೆ ಸಾಯಲಿಲ್ಲ ಎಂದು ನಾವು ಕಾಂಗ್ರೆಸನ್ನು ಕೇಳಿದರೆ ಎಷ್ಟು ಅಸಂಬದ್ಧವಾಗುತ್ತದೋ 1951ರಲ್ಲಿ ಜನಿಸಿದ ಜನ ಸಂಘವೇಕೆ 1947ರಲ್ಲಿ ಅಂತ್ಯವಾದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಲಿಲ್ಲ, ಬಲಿದಾನ ಮಾಡಲಿಲ್ಲ ಎಂದು ಕೇಳಿದರೂ ಅಷ್ಟೇ ಅವಿವೇಕವಾಗುತ್ತದೆ ಅಲ್ಲವೆ? ಇನ್ನು 1925ರಲ್ಲಿ ಡಾ. ಹೆಡಗೆವಾರರು ಆರೆಸ್ಸೆಸ್ಸನ್ನು ಸ್ಥಾಪನೆ ಮಾಡಿದಾಗ ಭಾರತಕ್ಕೆ ಸ್ವಾತಂತ್ರ್ಯ ಬರುವುದು ಖಚಿತವಾಗಿತ್ತು, ಅದೇ ವೇಳೆಯಲ್ಲಿ ಧರ್ಮದ ಆಧಾರದ ಮೇಲೆ ದೇಶ ಒಡೆಯುವ ಶಕ್ತಿಗಳೂ ರಾರಾಜಿಸುತ್ತಿದ್ದವು.

ಅವುಗಳು ಒಡ್ಡಿದ್ದ ಆತಂಕ ತೀವ್ರವಾಗಿತ್ತು. ಹಾಗಾಗಿ ಸ್ವಾತಂತ್ರ್ಯ ಬಂದ ಮೇಲೆ ಅದನ್ನು ರಕ್ಷಣೆ ಮಾಡಿಕೊಳ್ಳಬೇಕಲ್ಲಾ, ಅದೇ ಆರೆಸ್ಸೆಸ್ ಸ್ಥಾಪನೆಯ ಹಿಂದಿರುವ ಉದ್ದೇಶ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದರು. ಇಷ್ಟಾಗಿಯೂ ಆರೆಸ್ಸೆಸ್ಸನ್ನು ಏಕೆ ವಿನಾಕಾರಣ ಟೀಕಿಸುತ್ತೀರಿ? ಅದಿರಲಿ, ಸ್ವಾತಂತ್ರ್ಯ ಹೋರಾಟ, ಬಲಿದಾನ ಎಂದ ಕೂಡಲೇ ನೆಹರು, ಇಂದಿರಾ, ರಾಜೀವ್ ಗಾಂಧಿಯವರನ್ನು ಬಿಟ್ಟರೆ ಬೇರಾರ ಹೆಸರೂ ನಿಮ್ಮ ಬಾಯಿಂದ ಏಕೆ ಬರುವುದಿಲ್ಲ? ವಿದೇಶಿ ನೆಲದಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ ಮದನ್ ಲಾಲ್ ಧಿಂಗ್ರಾ, ಬ್ರಿಟಿಷರ ಲಾಠಿ ಏಟು ತಿಂದು ತೀರಿಕೊಂಡ ಲಾಲಾ ಲಜಪತರಾಯ್, ಭಗತ್ ಸಿಂಗ್, ರಾಜಗುರು, ಸುಖದೇವ್, ಆಶ್ಫಾಕುಲ್ಲಾ ಖಾನ್, ಚಂದ್ರಶೇಖರ ಆಝಾದ್, ನಿಗೂಢವಾಗಿ ಕಣ್ಮರೆಯಾದ ಸುಭಾಷ್‌ಚಂದ್ರ ಬೋಸ್ ಹೆಸರು ನಿಮಗೆ ನೆನಪಾಗುವುದೇ ಇಲ್ಲ ಏಕೆ ಖರ್ಗೆಯವರೇ? ಬಾಲಗಂಗಾಧರ ತಿಲಕರ ಮರಣದ ನಂತರ ಕಾಂಗ್ರೆಸ್‌ನಲ್ಲೂ ಎರಡು ಬಣಗಳಿದ್ದವು. ಗಾಂಧಿಯವರ ಸೌಮ್ಯವಾದಿ ಬಣ, ಬ್ರಿಟಿಷರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕೆಂಬ ಕ್ರಾಂತಿಕಾರಿಗಳ ಬಣ.

ಅಹಿಂಸೆಯಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ ಎಂದವರನ್ನು ಮೂಲೆಗುಂಪು ಮಾಡಲು ಕಾಂಗ್ರೆಸ್‌ನಲ್ಲೇ ಪ್ರಯತ್ನ ನಡೆದಾಗ ಅಲ್ಲಿಂದ ಹೊರಹೋದವರೇ ಮುಂದೆ ದೇಶಕ್ಕಾಗಿ ಹೆಚ್ಚಾಗಿ ಬಲಿದಾನ ಮಾಡಿದವರು ಎಂಬುದು ನಿಮ್ಮ ನೆನಪಿನಲ್ಲಿರಲಿ. ಮತ್ತೊಂದು ಪ್ರಶ್ನೆ: ನಿಮ್ಮ ರಾಹುಲ್ ಗಾಂಧಿಯವರು ಆರೆಸ್ಸೆಸ್ ಬ್ರಿಟಿಷರ ಜತೆ ಕೈಜೋಡಿಸಿತ್ತು ಎಂದು ಜರಿಯುತ್ತಾರಲ್ಲಾ, ಅವರ ಮುತ್ತಜ್ಜ ನೆಹರು ವಿರುದ್ಧ ಬ್ರಿಟಿಷರು ಒಂದು ಹುಲ್ಲುಕಡ್ಡಿಯನ್ನೂ ಎತ್ತಲಿಲ್ಲವಲ್ಲಾ ಏಕೆ?! ಭಾರತವನ್ನು ಆಳಲು ಬಂದಿದ್ದ ವೈಸರಾಯ್ ಬಗ್ಗೆ ಇಡೀ ದೇಶವಾಸಿಗಳಿಗೆ ಭಯವಿತ್ತು. ಆದರೆ ನಿಮ್ಮ ನೆಹರು ವೈಸರಾಯ್ ಪತ್ನಿಯ ಸಿಗಾರ್‌ಗೆ ಬೆಂಕಿಕಡ್ಡಿ ಗೀರುವಷ್ಟು ನಿರಾಳವಾಗಿದ್ದರಲ್ಲಾ ಹೇಗೆ ಸ್ವಾಮಿ?! ನಿಮಗೆ ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಬೇಕು.

ಅಸಹಕಾರ ಚಳವಳಿಕಾರರ ಮೇಲೆ ದೌರ್ಜನ್ಯ ಎಸಗಿದರೆಂಬ ಕಾರಣಕ್ಕೆ ಗೋರಖ್‌ಪುರ ಜಿಲ್ಲೆಯ ಚೌರಿ ಚೌರಾ ಎಂಬಲ್ಲಿ ಠಾಣೆಯನ್ನು ಸುಟ್ಟು 22 ಪೊಲೀಸರು ಸತ್ತಿದ್ದು ಗೊತ್ತಲ್ಲವೆ? ಅದರಲ್ಲಿ 170ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿದ ಬ್ರಿಟಿಷರು, ತಪ್ಪಿತಸ್ಥರೆಂದು ಗಲ್ಲುಶಿಕ್ಷೆ ವಿಧಿಸಿದರು. ಆ ಕಾಲಕ್ಕೆ ನಿಮ್ಮ ಜವಾಹರಲಾಲ್ ನೆಹರು, ಅವರಪ್ಪ ಮೋತಿಲಾಲ್ ನೆಹರು, ಅಷ್ಟೇಕೆ ಗಾಂಧೀಜಿ ಕೂಡಾ ಪ್ರಸಿದ್ಧ ವಕೀಲರೇ ಆಗಿದ್ದರಲ್ಲವೆ? ಅವತ್ತು ಈ 170 ನಿಸ್ವಾರ್ಥ ಸ್ವಾಾತಂತ್ರ್ಯ ಹೋರಾಟಗಾರರನ್ನು ಗಲ್ಲು ಶಿಕ್ಷೆಯಿಂದ ತಪ್ಪಿಸಲು ನಿಮ್ಮ ನೆಹರು ಮತ್ತು ಅವರಪ್ಪ ಏಕೆ ಕರಿಕೋಟು ಹಾಕಿ ಕೋರ್ಟಿಗೆ ಬರಲಿಲ್ಲ? ಭಗತ್ ಸಿಂಗ್, ರಾಜಗುರು, ಸುಖದೇವರಿಗೆ ಮರಣದಂಡನೆ ವಿಧಿಸಿದಾಗ ಇಡೀ ದೇಶವೇ ದುಃಖದ ಮಡುವಿನಲ್ಲಿತ್ತು. ಗಲ್ಲುಶಿಕ್ಷೆ ತಪ್ಪಿಸಲು ನೆಹರು ಏಕೆ ಕೋರ್ಟಿಗೆ ಬಂದು ವಾದ ಮಾಡಲಿಲ್ಲ. ಚೌರಿಚೌರಾದಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ 170 ಜನರಲ್ಲಿ 155ರನ್ನು ನಿರ್ದೋಷಿಗಳೆಂದು ಸಾಬೀತು ಮಾಡಿದ್ದು, 15 ಜನರ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿದ್ದು ವಕೀಲಿಕೆ ಬಿಟ್ಟು ಮನೆಯಲ್ಲಿದ್ದ ಪಂಡಿತ ಮದನ ಮೋಹನ ಮಾಳವೀಯರೇ ಹೊರತು, ನಿಮ್ಮ ನೆಹರು ಗಾಂಧಿಯರಲ್ಲ!

ಖರ್ಗೆ ಸಾಹೇಬ್ರೇ, ನೀವು ಎಷ್ಟೇ ಜೋರಾಗಿ ನೆಹರು, ಇಂದಿರಾ, ರಾಜೀವ್ ಗಾಂಧಿ ಎಂದು ಬೊಬ್ಬೆ ಹಾಕಿದರೂ ಈಗಿನ ಯುವ ಜನತೆಗೆ ಇತಿಹಾಸದ ಪುಟಗಳು ಸಲೀಸಾಗಿ ಸಿಕ್ಕಿ ಯಾರ್ಯಾಾರು ಏನೇನು ಎಂಬುದು ತಿಳಿದು ಬಿಟ್ಟಿದೆ. ಅಲ್ಲಾ ಸ್ವಾಮಿ, ಇಂದಿರಾ ಗಾಂಧಿಯವರನ್ನು ಭಜಿಸುತ್ತೀರಲ್ಲಾ, ನಮ್ಮ ದೇಶದ ಇತಿಹಾಸದಲ್ಲೇ ನ್ಯಾಯಾಲಯದಿಂದ ದೋಷಿ ಎಂದು ಘೋಷಣೆಯಾದ ಹಾಗೂ ಜೈಲಿಗೆ ಹೋದ ಮೊದಲ ಪ್ರಧಾನಿ ಯಾರು?! ನ್ಯಾಯಾಲಯದಿಂದ ದೋಷಿಯೆಂದು ಘೋಷಣೆಯಾಗಿರುವ ಆಕೆಯ ಹೆಸರಿನಲ್ಲೂ ಯೋಜನೆಗಳನ್ನೂ ಆರಂಭಿಸುತ್ತೀರಲ್ಲಾ ನಿಮಗೆ ಏನೆನ್ನಬೇಕು? ಯುಪಿಎನ 10 ವರ್ಷಗಳ ಆಡಳಿತದಲ್ಲಿ 256 ಯೋಜನೆಗಳನ್ನು ನೆಹರು, ಇಂದಿರಾ, ರಾಜೀವ್ ಗಾಂಧಿಯವರ ಹೆಸರಿನಲ್ಲಿ ಘೋಷಣೆ ಮಾಡಿದರಲ್ಲಾ ನಿಮಗೆ ಕಾಂಗ್ರೆಸ್‌ನ ಉಳಿದ ಯಾವ ಮಹಾನ್ ನಾಯಕರ ಹೆಸರೂ ನೆನಪಾಗಲಿಲ್ಲವೆ? ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಶಾಸ್ತ್ರಿ, ತಿಲಕ್, ಲಜಪತರಾಯ್ ಕೂಡಾ ಕಾಂಗ್ರೆಸ್ಸಿನ ನಾಯಕರೇ ಆಗಿದ್ದರಲ್ಲವೆ? ಅವರ ಹೆಸರಲ್ಲಿ ಯಾವ್ಯಾವ ಯೋಜನೆಗಳನ್ನು ಘೋಷಣೆ ಮಾಡಿದ್ದೀರಿ ದಯವಿಟ್ಟು ಹೇಳಿ? ಖರ್ಗೆ ಸಾರ್, ನಿಮಗೆ ವಂದೇ ಮಾತರಂ ಹಾಗೂ ಗಾಂಧೀಜಿಯವರ ಅಚ್ಚುಮೆಚ್ಚಿನ ರಘುಪತಿ ರಾಘವ ರಾಜಾರಾಂ ಗೀತೆಗಳು ನೆನಪಿವೆಯೇ? ಅದು 1923, ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಅಧಿವೇಶನ ನಡೆಯುತ್ತಿತ್ತು.

ಆಗ ಪ್ರತಿ ಅಧಿವೇಶನದಲ್ಲಿ ವಂದೇ ಮಾತರಂ ಹಾಡುವ ಸಂಪ್ರದಾಯ ಬೆಳೆದು ಬಂದಿತ್ತು.  ಪಂಡಿತ್ ವಿಷ್ಣು ದಿಗಂಬರ ಫಲುಸ್ಕರ್ ಪ್ರತಿ ವರ್ಷದಂತೆ ವಂದೇ ಮಾತರಂ ಹಾಡ ಹೊರಟಾಗ ಆಗಿನ ಕಾಂಗ್ರೆಸ್ ಅಧ್ಯಕ್ಷ (ಮುಸ್ಲಿಂ ಲೀಗ್‌ನ ಸ್ಥಾಪಕರಲ್ಲೊಬ್ಬರಾದ) ಮೌಲಾನ ಅಹಮದ್ ಅಲಿ ಮತ್ತು ಆತನ ಸಹೋದರ ಶೌಕತ್ ಅಲಿ ತಡೆದರು. ಇಸ್ಲಾಂನ ಕಾನೂನಿನಂತೆ ಸಂಗೀತ ನಿಷಿದ್ಧ ಎಂಬುದು ಅವರು ಕೊಟ್ಟ ಕಾರಣವಾಗಿತ್ತು. ಹಠಾತ್ ಬೆಳವಣಿಗೆಯಿಂದ ಕೆಂಡಾ ಮಂಡಲರಾದ ಫಲುಸ್ಕರ್ ಇದು ಕಾಂಗ್ರೆಸ್‌ನ ಅಧಿವೇಶನ, ಒಂದು ಧರ್ಮದ ಸಭೆಯಲ್ಲ.. ಮುಸ್ಲಿಮರ ದರ್ಗಾ, ಮಸೀದಿಯೂ ಅಲ್ಲ.. ಈ ರಾಷ್ಟ್ರೀಯ ವೇದಿಕೆ ಮೇಲೆ ವಂದೇ ಮಾತರಂಗೆ ಅಡ್ಡಿಪಡಿಸಲು ನಿಮಗೇನು ಅಧಿಕಾರವಿದೆ? ಅಧಿವೇಶನ ಪ್ರಾರಂಭವಾಗುವ ಮೊದಲು ಅಧ್ಯಕ್ಷೀಯ ಮೆರವಣಿಗೆಯಲ್ಲಿ ವಿಜೃಂಭಣೆಯ ಸಂಗೀತ ವಾದ್ಯಗಳೊಂದಿಗೆ ಬರುವಾಗ ನಿಮಗೆ ಹಿಡಿಸಿತೇ?! ವಂದೇ ಮಾತರಂಗೆ ವಿರೋಧ ಇರುವವರು ಧಾರಾಳವಾಗಿ ಹೊರ ನಡೆಯಬಹುದು ಎಂದು ಅಲಿ ಸಹೋದರರನ್ನು ಜಾಡಿಸಿದರು. ನಂತರ ವಂದೇ ಮಾತರಂ ಅನ್ನು ಪೂರ್ತಿಯಾಗಿ ಹಾಡಿ ವಂದಿಸಿ ಕೆಳಗಿಳಿದಿದ್ದರು!

ಅಂದಿನ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕ್ರಾಂತಿ ಗೀತೆಯಾಗಿ ಜನರನ್ನು ಉತ್ತೇಜಿಸಿದ್ದು ಇದೇ ವಂದೇ ಮಾತರಂ.. 1905ರಲ್ಲಿ ಬಂಗಾಳ ವಿಭಜನೆ ಮಾಡಲು ಹೊರಟ ಸಂದರ್ಭದಲ್ಲಿ ವಂಗಭಂಗ ಚಳವಳಿಗೆ ಇದೇ ವಂದೇ ಮಾತರಂ ಸ್ಫೂರ್ತಿ. ತಿಲಕರ ನೇತೃತ್ವದಲ್ಲಿ ನಡೆದ ಈ ಚಳವಳಿಯಲ್ಲಿ ಹಿಂದೂ ಮುಸ್ಲಿಮರೆಲ್ಲರೂ ಭಾಗವಹಿಸಿ ವಂದೇ ಮಾತರಂ ಅನ್ನು ಸಾರ್ವಜನಿಕವಾಗಿ ಹಾಡಿ ಚಳವಳಿಯ ಕಿಚ್ಚು ಹೆಚ್ಚಿಸಿದ್ದರು. ಇದೇ ಕಿಚ್ಚು ಆಗ ಬಂಗಾಳ ವಿಭಜನೆಯನ್ನು ತಡೆದು ಯಶಸ್ವಿಯಾಗಿತ್ತು. ಅಂದಿನಿಂದ 1947 ರ ಸ್ವಾತಂತ್ರ್ಯ ಸಿಗುವವರೆಗೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿ ಗೀತೆಯಾಗಿ ವಿರಾಜಮಾನವಾದದ್ದು ಇದೇ ವಂದೇ ಮಾತರಂ. ಇಂತಹ ವಂದೇ ಮಾತರಂ… ಹಾಗೂ ಗಾಂಧೀಜಿಯವರ ಮೆಚ್ಚಿನ ರಘುಪತಿ ರಾಘವ ರಾಜಾರಾಂ.. ಪತಿತ ಪಾವನ ಸೀತಾರಾಂಗಳನ್ನು ಬಹಳ ಸುಶ್ರಾವ್ಯವಾಗಿ ಕಾಂಗ್ರೆಸ್ಸಿನ ಸಭೆ- ಸಮಾರಂಭಗಳಲ್ಲಿ, ಅಧಿವೇಶನಗಳಲ್ಲಿ ಹೇಳಿಕೊಡುತ್ತಿದ್ದರಲ್ಲಾ ಅವೆಲ್ಲ ಕಾಂಗ್ರೆಸಿಗರ ಬಾಯಿಂದ ಹೊರಡುವುದೇ ಇಲ್ಲವಲ್ಲಾ ಈಗ, ಏಕೆ ಸಾರ್?! ಯಾವಾಗ ಕಾಂಗ್ರೆಸ್ ನೆಹರು ಕುಟುಂಬದ ದಾಸ್ಯಕ್ಕೆ ಬಿತ್ತೋ, ಅಂದೇ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಜತೆ ಅದು ಸಂಬಂಧ ಕಡಿದುಕೊಂಡಿದೆ!

ಸ್ವಾತಂತ್ರ್ಯ ಬಂದ ಕೂಡಲೇ ಕಾಂಗ್ರೆಸನ್ನು ವಿಸರ್ಜನೆ ಮಾಡಿ ಎಂದು ಗಾಂಧೀಜಿ ಹೇಳಿದ್ದು ಏಕೆ? ಸ್ವಾತಂತ್ರ್ಯ ಕೊಡಿಸಿದ್ದು ನಾವೇ, ನಾವೇ ಎನ್ನುತ್ತಾ ದೇಶ ಲೂಟಿ ಮಾಡುತ್ತಾರೆ ಎಂಬ ಭಯದಿಂದಲೇ. ಒಂದು ಮಾತು ನೆನಪಿರಲಿ, ಸ್ವಾತಂತ್ರ್ಯ ಬಂದಾಗ ಬಿಜೆಪಿ ಜನಿಸಿಲ್ಲದಿರಬಹುದು. ಆದರೆ ಸ್ವಾತಂತ್ರ್ಯ ತಂದುಕೊಟ್ಟ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪೆಯಿಂದ ಹಿಡಿದು, ತಿಲಕ್, ಲಜಪತರಾಯ್, ಸಾವರ್ಕರ್, ಸುಭಾಷ್, ಭಗತ್, ಆಜಾದ್, ಧಿಂಗ್ರಾ, ಪಟೇಲ್, ಶಾಸ್ತ್ರಿಯವರನ್ನು ಅವರು ಹುಟ್ಟಿದ ದಿನ, ಅಗಲಿದ ದಿನ ಇಂದಿಗೂ ಶ್ರದ್ಧೆಯಿಂದ, ಭಕ್ತಿಯಿಂದ, ಧನ್ಯತೆಯಿಂದ ನೆನಪಿಸಿಕೊಳ್ಳುವುದು ಬಿಜೆಪಿ ಕಚೇರಿಗಳಲ್ಲೇ. ವಂದೇ ಮಾತರಂ ಸುಶ್ರಾವ್ಯವಾಗಿ, ರೋಮಾಂಚನಗೊಳ್ಳುವಂತೆ ಮೊಳಗುವುದು ಆರೆಸ್ಸೆೆಸ್ ಹಾಗೂ ಬಿಜೆಪಿ ಸಭೆಗಳಲ್ಲೇ. ನಿಮ್ಮದೇನಿದ್ದರೂ ನೆಹರು ಕುಟುಂಬದ ಭಜನೆ!

ಒಮ್ಮೆ ಪಾರ್ವತಿ ಪರಮೇಶ್ವರರು ತಮ್ಮ ಮಕ್ಕಳಾದ ಗಣಪತಿ, ಸುಬ್ರಹ್ಮಣ್ಯರಿಗೆ ಯಾರು ಮೊದಲು ತ್ರಿಲೋಕ ಸಂಚರಿಸಿ, ಜನರ ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತೀರಿ ನೋಡೋಣ ಎಂದು ಸ್ಪರ್ಧೆ ಇಟ್ಟರು. ಸುಬ್ರಹ್ಮಣ್ಯ ನವಿಲು ಏರಿ ತ್ರಿಲೋಕ ಸಂಚಾರಕ್ಕೆ ಹೊರಟೇ ಬಿಟ್ಟ. ಆದರೆ ಎಷ್ಟು ಹೊತ್ತಾದರೂ ಗಣೇಶ ಮಾತ್ರ ಕುಂತಲ್ಲೇ ಇದ್ದ! ಪಾರ್ವತಿ ಪರಮೇಶ್ವರರಿಗೇ ಆಶ್ಚರ್ಯವಾಗಿ, ನೀನೇಕೆ ಇನ್ನೂ ಹೋಗಿಲ್ಲ ಎಂದು ಕೇಳಿದರು. ಮೇಲೆದ್ದ ಗಣೇಶ, ತ್ರಿಲೋಕವನ್ನು ಬಲ್ಲ ನೀವೇ ಇಲ್ಲಿದ್ದೀರಲ್ಲಾ ಎಂದು ಪಾರ್ವತಿ ಪರಮೇಶ್ವರರಿಗೇ ಮೂರು ಸುತ್ತು ಹಾಕಿ ಕುಳಿತ!!

ನಮ್ಮ ಖರ್ಗೆಯವರ ಕಥೆಯೂ ಹೀಗೆ. ಕಲಬುರ್ಗಿಯಲ್ಲಿ 1300 ಕೋಟಿ ಇಎಸ್‌ಐ ದುಡ್ಡಿನಲ್ಲಿ ‘ಖರ್ಗೆ ಗುಂಬಝ್’ ಕಟ್ಟಿರುವ ಅವರಿಗೆ, ನೆಹರು ಕುಟುಂಬವೇ ಬ್ರಹ್ಮಾಂಡ! ಸೋನಿಯಾ ಗಾಂಧಿಯವರ ಸುತ್ತ ಸುತ್ತಿದರೆ ತನಗೆ ಸ್ವತ್ತು, ಸವಲತ್ತು, ಮಗನಿಗೆ ಮಂತ್ರಿಗಿರಿ ಸಿಗುತ್ತದೆ ಎಂದು ಚೆನ್ನಾಗಿ ತಿಳಿದಿದೆ! ಸ್ವಾಮಿ ಖರ್ಗೆಯವರೇ, ರಾಜೀವ್ ಗಾಂಧಿಯವರ ‘ಮಗಳ’ ಹೆಸರನ್ನು ‘ಮಗ’ನಿಗೆ(ಪ್ರಿಯಾಂಕ) ಇಟ್ಟಿರುವ ನಿಮ್ಮ ಮಾನಸಿಕ ದಾಸ್ಯ ಯಾವ ಮಟ್ಟದ್ದು ಅಂತ ನಮಗೆ ಗೊತ್ತು, ನಿಮ್ಮ ಮಾತುಗಳಲ್ಲಿ ತೂಕವಿರಲಿ.

ಶುಕ್ರವಾರ, ಫೆಬ್ರವರಿ 10, 2017

ChampCash

🚨How To Start the *ChampCash Business*
 How To Join 👇🏻
◽Do your registration   Right Now For Free
●Without Investment
▪NO REGISTRATION Fees / HIDDEN CHARGES
♻Open this link👇🏻👇🏻👇🏻

https://play.google.com/store/apps/details?id=com.cash.champ

🔷Install ChampCash Application
🔷After Compliting installation
 open it
🔷click on sign-up
🔷fill your details (Name, email I'd etc , Password etc)
🔷Now its Time To fill
♻Sponser I'd fill
✳12354391✳
🔷sponsr I'd- 12354391
🔷After Compliting Sign Up Procedure You Need To Activate Your I'd To activate Your You Must need To Install 8-9 Application Will Be Given As Challenge
complete the challenge properly by watching this video👇🏻
🔵Only One Time to Complete The Challenge In Life That Is  Also To Activate Your Account After activate Your I'd You will be get 1$=62rs As bonous Points In Champ Cash Account
✅Then send your refer id  by WhatsApp 9945454163

Our executives will revert with you

🙏🏻Thank You🙏🏻

Namma Sinikatana

"ನೋಡಿ! ಪ್ರಧಾನಿ ಭಾಷಣ ಮಾಡಿದ ಮೂರು ಗಂಟೆಯೊಳಗೆ ನಿಮ್ಮ ದುಡ್ಡೆಲ್ಲ ಕೇವಲ ಪೇಪರ್ ಆಗಿ ಬೆಲೆ ಕಳೆದುಕೊಂಡುಬಿಟ್ಟಿತು!" ಎನ್ನುತ್ತಾನೆ ಸಂಜಯ್ ಝಾ. ಆ ದುಡ್ಡಿಗೆ ಡಿಸೆಂಬರ್ 31ರವರೆಗೂ ಮೌಲ್ಯವಿದೆ ಎಂಬ ಸತ್ಯವನ್ನು ಬೇಕೆಂದೇ ಮರೆಮಾಚುತ್ತಾನೆ.

ಎಟಿಎಂನಲ್ಲಿ ದುಡ್ಡು ತೆಗೆಯಲೆಂದು ಸರತಿಯಲ್ಲಿ ನಿಂತು ಕುಸಿದುಬಿದ್ದು ಸತ್ತರು - ಎಂಬ ಸುದ್ದಿಯನ್ನು ವ್ಯಾಪಕವಾಗಿ ಹರಡಲಾಗುತ್ತದೆ. "ಪತ್ರಿಕೆ ಹೇಳಿರುವ ಜಾಗದಲ್ಲಿ ನಮ್ಮ ಬ್ಯಾಂಕಿನ ಬ್ರಾಂಚ್ ಆಗಲೀ ಎಟಿಎಂ ಆಗಲೀ ಇಲ್ಲ" ಎಂದು ಬ್ಯಾಂಕ್ ಸ್ಪಷ್ಟೀಕರಣ ಕೊಡುತ್ತದೆ.

ಬ್ಯಾಂಕ್ ಮುಂದೆ ನಿಂತ ಕ್ಯೂನಲ್ಲಿದ್ದವರು ಸತ್ತರೆಂದು ಯಾರೋ ಹುಯಿಲೆಬ್ಬಿಸುತ್ತಾರೆ. ಇಲ್ಲ, ಅದೊಂದು ಸಹಜ ಸಾವಾಗಿತ್ತು; ಸತ್ತವರು ಬ್ಯಾಂಕ್ ಕ್ಯೂನಲ್ಲಿ ನಿಂತವರಲ್ಲ ಎಂಬ ಸುದ್ದಿ ಆಮೇಲೆ ಬರುತ್ತದೆ.

"ಹಹ್ಹ! ನಿನ್ನೆಯಷ್ಟೇ ಚಲಾವಣೆಗೆ ಬಂದ ನೋಟಿನ ಖೋಟಾನೋಟು ನಮ್ಮಲ್ಲಿ ಸಿಕ್ಕಿದೆ" ಎಂದೊಬ್ಬ ಹುಚ್ಚೆದ್ದು ಕುಣಿಯುತ್ತಾನೆ. ಅದು ಖೋಟಾನೋಟಲ್ಲ; ಕಿಡಿಗೇಡಿಗಳು ತೆಗೆದ ನೋಟಿನ ಕಲರ್ ಝೆರಾಕ್ಸ್ ಎಂದು ನಂತರ ಪತ್ತೆಯಾಗುತ್ತದೆ.

ಹೆಂಗಸೊಬ್ಬರು ತನ್ನ ಜೀವಮಾನದ ಉಳಿತಾಯವನ್ನೆಲ್ಲ ಸಾವಿರ ರುಪಾಯಿಯ ನೋಟಿಗೆ ಪರಿವರ್ತಿಸಿ ಎರಡು ನೋಟು ಹಿಡಿದು ಬ್ಯಾಂಕಿಗೆ ಬರುತ್ತಿದ್ದರು; ಅಷ್ಟರಲ್ಲಿ ಸಾವಿರ ರುಪಾಯಿಯ ನೋಟು ಬೆಲೆ ಕಳೆದುಕೊಂಡದ್ದು ಕೇಳಿ ಕುಸಿದು ಬಿದ್ದು ತೀರಿಕೊಂಡರು - ಎಂದು ಪತ್ರಿಕೆಯೊಂದು ಬರೆಯುತ್ತದೆ. ನಂತರ ಆ ಇಡೀ ಸುದ್ದಿಯನ್ನು ಕೃತಕವಾಗಿ ಸೃಷ್ಟಿಸಲಾಗಿತ್ತೆಂಬುದು ಗೊತ್ತಾಗುತ್ತದೆ.

ಕ್ಯಾನ್ಸರ್ ಪೀಡಿತ ತಾಯಿಗೆ ಔಷಧಿ ತರಲೆಂದು ದುಡ್ಡು ತೆಗೆಯಲು ಹೋದರೆ ಮಗನಿಗೆ, ಬ್ಯಾಂಕಲ್ಲಿ ಸಿಕ್ಕಿದ್ದು ಎರಡು ಸಾವಿರ ರುಪಾಯಿ; ಅದೂ 1 ರುಪಾಯಿ ನಾಣ್ಯಗಳ ರೂಪದಲ್ಲಿ - ಎನ್ನುತ್ತದೆ ಮತ್ತೊಂದು ಪತ್ರಿಕಾ ಸುದ್ದಿ. "ನಾವು ಯಾರಿಗೂ ನಾಣ್ಯಗಳಲ್ಲಿ ದುಡ್ಡು ಕೊಡುತ್ತ ಕೂತಿಲ್ಲ" ಎಂದು ನಂತರ ಬ್ಯಾಂಕ್ ಮ್ಯಾನೇಜರ್ ಹೇಳಿಕೆ ಕೊಡುತ್ತಾರೆ.

ನೋಟಿನ ಬಣ್ಣ ಬಿಡುತ್ತದೆ ಎಂಬುದನ್ನು ಪ್ರೂವ್ ಮಾಡಲು ಕೆಲವರು ಅದನ್ನು ಉಜ್ಜಿ, ಜಜ್ಜಿ, ವಾಷಿಂಗ್ ಮೆಷಿನಲ್ಲಿ ಹಾಕಿ, ಕೊತಕೊತ ನೀರಲ್ಲಿ ಕುದಿಸಿ ಏನೆಲ್ಲ ಸರ್ಕಸ್ ಮಾಡುತ್ತಿದ್ದಾರೆ. ಲಿಪ್ ಸ್ಟಿಕ್ ಮರೆತುಬಂದರೆ ನೋಟಿಗೆ ಮುತ್ತಿಕ್ಕಬಹುದು ಎಂದು ನಟೀಮಣಿಯೊಬ್ಬರು ಹೇಳಿಕೆ ಕೊಡುತ್ತಾರೆ.
.
ಸೂಕ್ಷ್ಮವಾಗಿ ಗಮನಿಸಿ. ನಮ್ಮಲ್ಲಿ ನಿಜಕ್ಕೂ ನಡೆಯಬೇಕಿದ್ದ ಚರ್ಚೆ ಯಾವುದು? ಪ್ರಧಾನಿಗಳ ನಡೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಇಂಪ್ಲಿಮೆಂಟ್ ಮಾಡುವುದು ಹೇಗೆ? ಕಪ್ಪುಹಣದ ಚಲಾವಣೆ ಆಗದೇ ಇರುವಂತೆ ತಡೆಯುವುದು ಹೇಗೆ? ಹೇಗೂ ಒಂದು ಹೆಜ್ಜೆ ಇಟ್ಟಿದ್ದೇವೆ; ಮುಂದೆ ಹೇಗೆ ನಡೆದರೆ ದೇಶಕ್ಕೆ ಒಳ್ಳೆಯದು? ಪ್ರಧಾನಿಗಳ ನಿರ್ಣಯವನ್ನು ದೇಶದ ಕಟ್ಟಕಡೆಯ ವ್ಯಕ್ತಿಗೆ ಸರಿಯಾದ ರೀತಿಯಲ್ಲಿ ತಲುಪಿಸುವುದು ಹೇಗೆ? ದೇಶದ ಉತ್ಪನ್ನ ಹೆಚ್ಚುವಂತೆ, ಕಪ್ಪುಹಣ ಮತ್ತು ಖೋಟಾನೋಟಿನ ಹಾವಳಿ ನಿಲ್ಲುವಂತೆ ನಾವೆಲ್ಲ ಏನು ಮಾಡಬಹುದು? - ಈ ವಿಷಯಗಳ ಸುತ್ತ ನಮ್ಮ ದೇಶದಲ್ಲಿ ಡಿಬೇಟ್ ಆಗಬೇಕಿತ್ತು. ರಾಜಕೀಯ ಪಕ್ಷಗಳೆಲ್ಲ ಇಂಥ ಉನ್ನತ ಚಿಂತನೆಗಳನ್ನು ಇಟ್ಟುಕೊಂಡು ಕಾರ್ಯಪ್ರವೃತ್ತವಾಗಬೇಕಿತ್ತು. ಆದರೆ ಈಗ ಆಗಿರುವುದೇನು? ದೇಶದ ಕಪ್ಪುಹಣದ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಚರ್ಚೆ ಮಾಡುತ್ತಿರುವವರು ದೇಶದ ಜನಸಾಮಾನ್ಯ ಜನ! ಕೆಲಸಕ್ಕೆ ಬಾರದ ವಿಷಯಗಳನ್ನು ಚರ್ಚಿಸುತ್ತ ಕಾಲಹರಣ ಮಾಡುತ್ತಿರುವುದು ಮಾತ್ರ ಪ್ರತಿದಿನ ನಾವು ಕಟ್ಟುವ ತೆರಿಗೆಯಿಂದ ಲಕ್ಷಾಂತರ ರುಪಾಯಿಗಳನ್ನು ಸಂಬಳ, ಭತ್ಯೆ ಎಂದು ಪಡೆಯುತ್ತ ಮಜಾ ಮಾಡುತ್ತಿರುವ ರಾಜಕಾರಣಿಗಳು ಮತ್ತು ಅವರನ್ನು ಸಾಕಿಕೊಂಡಿರುವ ನಾಲಾಯಕ್ ರಾಜಕೀಯ ಪಕ್ಷಗಳು!

"ಇನ್ನಷ್ಟು ಕಾಲಾವಕಾಶ ಕೊಡಬೇಕಿತ್ತು" ಎನ್ನುತ್ತಾರೆ ನಮ್ಮ ಮುಖ್ಯಮಂತ್ರಿಗಳು! ಇವರಿಗಿಂತ ಬೀದಿ ಬದಿ ಬೆಂಡೇಕಾಯಿ ಮಾರುವವನ ಜ್ಞಾನ ಸ್ವಲ್ಪ ಉತ್ತಮವಾಗಿರುತ್ತದೆ ಎಂದು ಹೇಳಬಹುದು. ಒಬ್ಬ ಮೋದಿಯನ್ನು ಕೆಳಗಿಳಿಸಲು; ವಿಫಲಗೊಳಿಸಲು ನಮ್ಮ ರಾಜಕಾರಣಿಗಳು ಅದೆಂಥಾ ಮಟ್ಟಕ್ಕೆ ಇಳಿದಿದ್ದಾರಲ್ಲಾ ಎಂದು ಯೋಚಿಸಿದರೆ ನಿಜಕ್ಕೂ ಹೇಸಿಗೆಯಾಗುತ್ತದೆ. ನಾವೇ ಕಳಿಸಿದ ಮಂದಿಯಾದ್ದರಿಂದ ಈ ಪ್ರಜಾಪ್ರಭುತ್ವವೆನ್ನುವುದು ನಮ್ಮದೇ - ಅಂದರೆ, ದೇಶದ ಜನರ ಮನಸ್ಥಿತಿಯ ಪ್ರತಿಬಿಂಬವಂತೆ. ನಿಜಕ್ಕೂ ನಮ್ಮ ಜನರ ಮನಸ್ಥಿತಿಗಳು ಇಷ್ಟು ಕೊಳಕಾಗಿ ಕಿಲುಬೆದ್ದು ಹೋಗಿದೆಯಾ?! ಪ್ರಜಾಪ್ರಭುತ್ವ ಎಂಬ ವ್ಯವಸ್ಥೆ ಇಷ್ಟು ಬೇಗ ಫೇಲ್ಯೂರ್ ಆಯಿತಾ??

By Rohith Chakratirtha

ಶನಿವಾರ, ಫೆಬ್ರವರಿ 4, 2017

ಪ್ರತಾಪ್ ಸಸಿಂಹ ಅಂಕಣದಿಂದ

Posted In : ಅಂಕಣಗಳು, ಬೆತ್ತಲೆ ಜಗತ್ತು

ಒಬ್ಬ ಮನೆಗೆಲಸದಾಕೆಯ ಮಗನಾಗಿ ಹುಟ್ಟಿದ ಮೋದಿಯವರಿಗೆ ನಿಮ್ಮ ಕಷ್ಟ ಗೊತ್ತು. ಭ್ರಷ್ಟ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಕುಳಗಳು, ಹೆಂಡದ ದೊರೆಗಳು, ಬಡ್ಡಿದಾರರು, ಗೋಲ್ಡ್ ವ್ಯಾಪಾರದ ಹೆಸರಲ್ಲಿ ರಾಜಕಾರಣಿಗಳ ಕಳ್ಳ ದುಡ್ಡನ್ನು ಮೇನೇಜ್ ಮಾಡುವವರ ಆರ್ಭಟವನ್ನು ನೋಡಿ ನಿಮಗೆ ಸಿಟ್ಟು ಬರುತ್ತಿತ್ತೋ ಇಲ್ಲವೋ? ಇವರ ಬಳಿ ಇದ್ದ 500, 1000 ನೋಟು ಕಸಿದುಕೊಂಡಿರುವ ಮೋದಿ ನಿಮ್ಮ ಪರವಾಗಿ ಸೇಡು ತೀರಿಸಿಕೊಂಡಿದ್ದಾರೆ ಎಂಬುದನ್ನು ಮರೆಯಬೇಡಿ!

 ಎರಡು ವರ್ಷ ಕಳೆಯಿತು, ನಮಗೇನು ದೊರೆಯಿತು? ಈ ಪ್ರಶ್ನೆ ಕೆಲ ತಿಂಗಳ ಹಿಂದೆ ನಿಮ್ಮನ್ನು ಕಾಡಿತ್ತು, ಅದರ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಯಿತು, ನಿಮಗೂ ಸಮಾಧಾನವಾಯಿತು. ಅದಾಗಿ ಕೆಲವೇ ತಿಂಗಳಲ್ಲಿ 500, 1000 ರುಪಾಯಿ ನೋಟನ್ನು ರದ್ದು ಮಾಡಿದ್ದಾರೆ ಮೋದಿ, ಕೆಲವರಿಗೆ ಒಳಗೊಳಗೇ ಬೇಗುದಿ, ಮುಂದೇನು ಕಾದಿದೆ ಎಂಬ ಆತಂಕ. ಇನ್ನು ನೋಟು ರದ್ದು ಮಾಡಿದ್ದೇನೋ ಸರಿ, ಆದರೆ ನಮಗೇನು ಸಿಗುತ್ತೇರೀ? ಎಂಬ ಪ್ರಶ್ನೆ ಮತ್ತೆ ಕೆಲವರನ್ನು, ಅಂದರೆ ನಮ್ಮನ್ನು ನಿಮ್ಮನ್ನು ಕಾಡುತ್ತಿದೆ ಅಲ್ಲವೆ?  ಖಂಡಿತ ತಪ್ಪಲ್ಲ!

14.94 ಲಕ್ಷ ಕೋಟಿಯ 500, 1000 ರುಪಾಯಿ ನೋಟು ಏಕಾಏಕಿ ರದ್ದು. 712,465,787 ಡೆಬಿಟ್ ಕಾರ್ಡುಗಳು, 26,378,940 ಕ್ರೆಡಿಟ್ ಕಾರ್ಡುಗಳು, 125 ಕೋಟಿ ಜನಸಂಖ್ಯೆೆ. ಆದರೆ ಇದ್ದಿದ್ದು ಕೇವಲ 1,25,857 ಬ್ಯಾಂಕ್ ಬ್ರಾಂಚುಗಳು, 2,02,201 ಎಟಿಎಂ! ಜಗತ್ತಿನ ಮುಂದುವರಿದ ದೇಶಗಳಲ್ಲಿ 1 ಲಕ್ಷ ಜನರಿಗೆ 43.9 ಎಟಿಎಂಗಳಿದ್ದರೆ, ನಮ್ಮಲ್ಲಿರುವುದು ಕೇವಲ 18! ಅವುಗಳಲ್ಲೂ ಸರಿಯಾಗಿ ದುಡ್ಡಿಲ್ಲ, 25 ದಿನ ಕಳೆದರೂ! ಆದರೂ ತಾಳ್ಮೆಯಿಂದ ಎಟಿಎಂ, ಬ್ಯಾಂಕ್ ಬ್ರಾಂಚುಗಳ ಮುಂದೆಯೇ ನಿಂತಿದ್ದೀರಿ, ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು!! ಈ ನಡುವೆ ನೋಟು ರದ್ದತಿ ವಿರುದ್ಧ ಕರ್ನಾಟಕದ ಸನ್ಮಾನ್ಯ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಮೋದಿ ದುಡ್ಡು ಕೊಡುತ್ತೇವೆ ಎಂದು ಬೆಳಗಾವಿಯ ಕೊಳಗೇರಿಗಳಿಂದ ಮಹಿಳೆಯರನ್ನು ಕರೆದುಕೊಂಡು ಬಂದು ಮೋಸ ಮಾಡಿದ ಘಟನೆಯನ್ನು ನೀವೆಲ್ಲ ಟೀವಿಯಲ್ಲಿ ನೋಡಿರುತ್ತೀರಿ. ಕಾಂಗ್ರೆಸ್‌ನಿಂದ ಮೋಸಹೋಗಿದ್ದ ಮಹಿಳೆಯನ್ನು ನೋಟು ರದ್ದತಿಯಿಂದ ನಿಮಗೆ ತೊಂದರೆಯಾಗುತ್ತಿದೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿದರೆ, ಇಷ್ಟು ವರ್ಷಗಳನ್ನು ಅರೆಹೊಟ್ಟೆಯಲ್ಲೇ ಕಳೆದಿದ್ದೇವೆ, ಇನ್ನೊಂದು ತಿಂಗಳು ಕಾಯುತ್ತೇವೆ, ಮೋದಿ ಚಲೋ ಮಾಡಿದ್ದಾರೆ ಎಂದು ಆಕೆ ಕೂಡಾ ಹೊಗಳುತ್ತಾಳೆ!

ಇನ್ನೊಂದೆಡೆ ಮಮತಾ, ಜಯಲಲಿತಾ, ಮಾಯಾವತಿ, ಕೇಜ್ರಿವಾಲ್, ರಾಹುಲ್ ಗಾಂಧಿ. ಇವರಷ್ಟೇ ಅಲ್ಲ, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಥಾಕೂರ್ ಕೂಡ ಪುಢಾರಿಯಂತೆ ಮಾತನಾಡಿದರು! ರಸ್ತೆ ರಸ್ತೆಗಳಲ್ಲಿ ದಂಗೆಯಾದೀತು ಎಂದ ಅವರ ಮಾತು, ಸರಕಾರದ ನೀತಿಯ ಬಗ್ಗೆ ಟಿಪ್ಪಣಿ ಮಾಡಿದರೋ ಅಥವಾ ಸರಕಾರದ ವಿರುದ್ಧ ದಂಗೆಗೆ ಚಿತಾವಣೆ ನೀಡುತ್ತಿದ್ದಾರೋ ಎಂಬ ಅನುಮಾನ ಸೃಷ್ಟಿ ಮಾಡಿತು! ದೇಶದಲ್ಲೇ ಅತಿ ಹೆಚ್ಚು ಪ್ರಸಾರ ಸಂಖ್ಯೆ ಹೊದಿರುವ ಇಂಗ್ಲಿಷ್ ದಿನಪತ್ರಿಕೆಯೊಂದಂತೂ ಯಾವ ಮಟ್ಟಕ್ಕೆ ಇಳಿಯಿತೆಂದರೆ 73 ವರ್ಷದ ವ್ಯಕ್ತಿಯೊಬ್ಬರು ಬ್ಯಾಂಕ್ ಮುಂದೆ ಬಿಸಿಲಿನಲ್ಲಿ ನಿಂತು ಸಾವಿಗೀಡಾದ ಎಂದು ಬರೆಯಿತು. ಆದರೆ ವ್ಯಕ್ತಿ ಬಳಿ ಬ್ಯಾಂಕ್ ಖಾತೆಯೇ ಇದ್ದಿರಲಿಲ್ಲ ಎಂಬ ಸತ್ಯ ಗೊತ್ತಾದ ಕೂಡಲೇ ಸ್ಪಷ್ಟೀಕರಣವನ್ನು ಸಣ್ಣದಾಗಿ ಪ್ರಕಟಿಸಿತು! ಅಷ್ಟು ಮಾತ್ರವಲ್ಲ, ‘Demonetisation breaks young bride’s dream wedding in Delhi’ ಎಂಬ ಶೀರ್ಷಿಕೆಯಡಿ ಭಾರೀ ವರದಕ್ಷಿಣೆ ಕೊಟ್ಟು ಮಾಡಲಿದ್ದ ಮದುವೆಯನ್ನೂ ವೈಭವೀಕರಿಸಿ ಬರೆಯಿತು ಆ ಲಜ್ಜೆಗೆಟ್ಟ ಪತ್ರಿಕೆ.

ಆದರೂ…
ನೀವ್ಯಾರೂ ತಾಳ್ಮೆ ಕಳೆದುಕೊಳ್ಳಲಿಲ್ಲ, ನಿಮ್ಮ ವಿಶ್ವಾಸ ಕರಗಲಿಲ್ಲ, ದಂಗೆ ಆರಂಭವಾಗಲಿಲ್ಲ. ಅಷ್ಟೇಕೆ, ದಂಗೆ ಎಬ್ಬಿಸಲು ಭಾರತ್ ಬಂದ್‌ಗೆ ಕರೆ ಕೊಟ್ಟಿದ್ದವರೇ ಎಲ್ಲಿ ಗೂಸಾ ತಿನ್ನಬೇಕಾಗುತ್ತದೋ ಎಂಬ ಭಯದಿಂದ ಬಂದ್ ಹಿಂತೆಗೆದುಕೊಂಡರು. ಆ ಒಬ್ಬ ವ್ಯಕ್ತಿಯ(ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿ) ಮೇಲೆ ನೀವಿಟ್ಟಿರುವ ವಿಶ್ವಾಸಕ್ಕೆ ಯಾವ ಬಳುವಳಿ ಕೊಟ್ಟರೂ ಸಾಲದು ಬಿಡಿ. ಅದಕ್ಕಾಗಿಯೇ ಘೋಷಣೆಯಾಗಿದೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ. ಈ ದುಡ್ಡಪ್ಪಗಳು ಒಂದು ಕೋಟಿ ಖಾತೆಗೆ ಜಮಾ ಮಾಡಿದರೆ, ನಾವು ಸಂಸತ್ತಿನಲ್ಲಿ ಮೂರು ದಿನಗಳ ಹಿಂದೆ ಪಾಸು ಮಾಡಿರುವ ಹೊಸ ಆದಾಯ ತೆರಿಗೆ ಕಾಯಿದೆ ಪ್ರಕಾರ 50 ಪರ್ಸೆಂಟ್ ಟ್ಯಾಕ್ಸ್ (30% ಟ್ಯಾಕ್ಸ್, ಅದರ ಮೇಲೆ 33 ಪರ್ಸೆಂಟ್ ಸರ್ಚಾರ್ಜ್, ಅದು 10 ಪರ್ಸೆಂಟ್ ಆಗುತ್ತದೆ, 10 ಪರ್ಸೆಂಟ್ ದಂಡ) ಉಳಿದ 25 ಲಕ್ಷವನ್ನು ಕೂಡಲೇ ಬಿಡಿಸಿಕೊಳ್ಳಬಹುದು, ಮಿಕ್ಕಿದ 25 ಲಕ್ಷವನ್ನು 4 ವರ್ಷದವರೆಗೂ ಬಿಡಿಸಿಕೊಳ್ಳಲು ಸಾಧ್ಯವಿಲ್ಲ, ನಂತರ ಬಡ್ಡಿರಹಿತವಾಗಿ ಸರಕಾರ ಹಿಂದಿರುಗಿಸುತ್ತದೆ.

ಅದುವರೆಗೂ ಆ 25 ಲಕ್ಷ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ ವಿನಿಯೋಗವಾಗುತ್ತದೆ! 2022ಕ್ಕೆ ನಮಗೆ ಸ್ವಾತಂತ್ರ್ಯ ಬಂದು 75 ವರ್ಷವಾಗುತ್ತದೆ, ಅಷ್ಟರೊಳಗೆ ಪ್ರತಿಯೊಂದು ಕುಟುಂಬಕ್ಕೂ ಮನೆಕೊಡುತ್ತೇನೆ ಎಂದು ಇತ್ತೀಚೆಗೆ ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯನ್ನು ಮೋದಿಯವರು ಘೋಷಣೆ ಮಾಡಿದರಲ್ಲಾ ಅದರ ಸಾಕಾರಕ್ಕೆ ಬಳಕೆಯಾಗುತ್ತದೆ. 50 ಪರ್ಸೆಂಟ್ ತೆರಿಗೆ ಕಟ್ಟಿಸಿಕೊಂಡಿದ್ದಲ್ಲದೆ, ಕನಿಷ್ಟ 25 ಪರ್ಸೆಂಟ್ ದುಡ್ಡನ್ನು ಬಡ್ಡಿಯಿಲ್ಲದೆ 4 ವರ್ಷ ಬಡವರ ಕಲ್ಯಾಣಕ್ಕೆ ಕೊಟ್ಟು ಪಾಪ ತೊಳೆದುಕೊಳ್ಳಿ ಎಂಬ ಸಂದೇಶವನ್ನು ಕೊಟ್ಟಿದ್ದಾರೆ ಮೋದಿ!

ಇನ್ನು ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ ಎಂಬ 30 ರು. ಕೊಟ್ಟರೆ ಕುಟುಂಬವೊಂದಕ್ಕೆ 30 ಸಾವಿರ ಆರೋಗ್ಯ ವಿಮೆ ನೀಡುವ ಯೋಜನೆ ಇತ್ತು. ಆದರೆ ಅದರ ಅನುಷ್ಠಾನ ಯಾವತ್ತೂ 25-30 ಪರ್ಸೆಂಟ್ ದಾಟುತ್ತಿರಲಿಲ್ಲ. ಇಂದು ಜನದನ್ ಯೋಜನೆ ಮೂಲಕ 25.5 ಕೋಟಿ ಬ್ಯಾಂಕ್ ಖಾತೆಗಳನ್ನು ಕುಟುಂಬಕ್ಕೊಂದರಂತೆ ತೆರೆದಿದ್ದಾರೆ. ಇಂತಹ ಒಂದೊಂದು ಕುಟುಂಬಕ್ಕೂ ಯಾವುದೇ ಶುಲ್ಕವಿಲ್ಲದೆ 1 ಲಕ್ಷ ರೂಪಾಯಿ ವಿಮೆ ಕೊಡಲು ಮೋದಿ ತಯಾರಿ ನಡೆಸುತ್ತಿದ್ದಾರೆ! ಇನ್ನು ಕೆಲವೇ ತಿಂಗಳಲ್ಲಿ ದೇಶದ ಪ್ರತಿ ಪಂಚಾಯಿತಿಗೂ ಒಂದೊಂದು ಬ್ಯಾಂಕ್, ಪೋಸ್ಟ್ ಆಫೀಸು, ಅವುಗಳಿಗೆ ಇಂಟರ್‌ನೆಟ್ ಸೌಲಭ್ಯ ನೀಡುವ ಕೆಲಸ ಮುಗಿಯಲಿದೆ. ಪ್ರತಿಯೊಂದು ಸೇವೆಯೂ ಆನ್‌ಲೈನ್ ಮೂಲಕವೇ ದೊರೆಯುವಂತಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹೊರಟಿದ್ದಾರೆ.

ನಿಮಗೆ ಸರಕಾರದಿಂದ ಸಿಗುವ ಪಿಂಚಣಿ, ಗ್ಯಾಸ್ ಸಬ್ಸಿಡಿ ನೇರವಾಗಿ ಖಾತೆಗೆ ತುಂಬಿದ್ದರಿಂದಾಗಿ 36 ಸಾವಿರ ಕೋಟಿ ಉಳಿತಾಯವಾಗಿರುವುದು ಮಾತ್ರವಲ್ಲ, ತಂದುಕೊಟ್ಟವನ ಕೈಬಿಸಿ ಮಾಡಬೇಕಾದ ಅನಿವಾರ್ಯ ನಿಮ್ಮಿಂದ ದೂರವಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ದೇಶದ ಪ್ರತಿಯೊಂದು ಕುಟುಂಬಕ್ಕೂ ಉಚಿತ ಗ್ಯಾಸ್ ಸಂಪರ್ಕ ದೊರೆಯಲಿದೆ. ಒಬ್ಬ ಮನೆಗೆಲಸದಾಕೆಯ ಮಗನಾಗಿ ಹುಟ್ಟಿದ ಮೋದಿಯವರಿಗೆ ನಿಮ್ಮ ಕಷ್ಟ ಗೊತ್ತು. ಭ್ರಷ್ಟ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಕುಳಗಳು, ಹೆಂಡದ ದೊರೆಗಳು, ಬಡ್ಡಿದಾರರು, ಗೋಲ್ಡ್ ವ್ಯಾಪಾರದ ಹೆಸರಲ್ಲಿ ರಾಜಕಾರಣಿಗಳ ಕಳ್ಳ ದುಡ್ಡನ್ನು ಮೇನೇಜ್ ಮಾಡುವವರ ಆರ್ಭಟವನ್ನು ನೋಡಿ ನಿಮಗೆ ಸಿಟ್ಟು ಬರುತ್ತಿತ್ತೋ ಇಲ್ಲವೋ? ಇವರ ಬಳಿ ಇದ್ದ 500, 1000 ನೋಟು ಕಸಿದುಕೊಂಡಿರುವ ಮೋದಿ ನಿಮ್ಮ ಪರವಾಗಿ ಸೇಡು ತೀರಿಸಿಕೊಂಡಿದ್ದಾರೆ ಎಂಬುದನ್ನು ಮರೆಯಬೇಡಿ!

ಇನ್ನು, ಎರಡು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಮತ್ತೊಂದು ಸುದ್ದಿ ಪ್ರಕಟವಾಯಿತು. ಹೌಸಿಂಗ್ ಲೋನ್ ಅಥವಾ ಗೃಹ ಸಾಲದ ಮೇಲಿನ ಬಡ್ಡಿ 6 ಅಥವಾ 7 ಪರ್ಸೆಂಟ್‌ಗೆ ಇಳಿಯಲಿದೆ ಅಂತ! ಹದಿನಾರು ವರ್ಷದ ಹಿಂದೆ ಮನೆ ಕಟ್ಟುವುದಕ್ಕೆ, ಫ್ಲಾಟ್ ಅಥವಾ ಸೈಟ್ ಖರೀದಿಗೆ 6 ಪರ್ಸೆಂಟ್ ಬಡ್ಡಿಯಲ್ಲಿ ಸಾಲ ಕೊಡುವಂತೆ ಮಾಡಿ ಹೌಸಿಂಗ್ ಸೆಕ್ಟರ್‌ಗೆ ದೊಡ್ಡ ಒತ್ತು ನೀಡಿದ್ದು ಅಟಲ್ ಬಿಹಾರಿ ವಾಜಪೇಯಿ. ಆದರೆ ಇತ್ತೀಚೆಗೆ ಎಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು? ಒಬ್ಬ ಸಾಮಾನ್ಯ ನೌಕರ ಬೆಂಗಳೂರಿನಲ್ಲಿ ಸೈಟ್ ಖರೀದಿ ಮಾಡಬೇಕೆಂದರೆ ಬಿಡದಿ, ನೆಲಮಂಗಲ ಅಥವಾ ದೇವನಹಳ್ಳಿಯನ್ನು ದಾಟಿ ಹೋಗಬೇಕಿತ್ತು. ನೋಟು ರದ್ದತಿಯಿಂದ ರಿಯಲ್ ಎಸ್ಟೇಟ್ ಹಾಗೂ ರಾಜಕಾರಣಿಗಳ ಆರ್ಭಟವೇ ನಿಂತುಹೋದಂತಾಗಿದೆ. ಸೈಟು ಬೆಲೆ ಕನಿಷ್ಟ 25-30 ಪರ್ಸೆಂಟ್ ಬೀಳುತ್ತದೆಂದು ಅಂದಾಜು ಮಾಡಲಾಗಿದೆ. ಅದರ ಜತೆಗೆ ಮತ್ತೆ 6-7 ಪರ್ಸೆಂಟ್‌ಗೆ ಹೌಸಿಂಗ್ ಲೋನ್ ಸಿಕ್ಕಿದರೆ ಎಲ್ಲರಿಗೂ ಲಾಭ ತಾನೇ? ಜತೆಗೆ ಲೋಡು ಮರಳಿಗೆ 50-60 ಸಾವಿರ ಹೇಳುತ್ತಿದ್ದರಲ್ಲಾ ಇನ್ನು ಮುಂದೆ ನಡೆಯುವುದಿಲ್ಲ ದಂಧೆ. ನೀವು ಜೀವ ತೇದು ಮಕ್ಕಳನ್ನು ಓದಿಸಿದ್ದೀರಿ. ಕನಿಷ್ಠ ಅವರಾದರೂ ಸ್ವಂತ ಮನೆ ಕಟ್ಟಿಕೊಂಡು ಬದುಕುವಂಥ ಭವ್ಯ ಭಾರತವನ್ನು, ಕಲ್ಯಾಣ ರಾಜ್ಯವನ್ನು ಕಟ್ಟಲು ಮೋದಿ ಇಷ್ಟೆಲ್ಲಾ ರಿಸ್ಕ್ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಮರೆಯದಿರಿ.

ಕಷ್ಟಪಟ್ಟು ದುಡಿದದ್ದಕ್ಕೆ ಬಂದ ಸಂಬಳಕ್ಕೆ ತೆರಿಗೆ ಕಟ್ಟುತ್ತಿದ್ದ ಉದ್ಯೋಗಿಗಳ ಕೂಗಿಗೆ ಮೋದಿ ಸ್ಪಂದಿಸಿದ್ದಾರೆ. ಇನ್ನು ಮುಂದೆ ವ್ಯಯಕ್ತಿಯ ಆದಾಯ ತೆರಿಗೆಯ ಮಿತಿ ಹೆಚ್ಚಾಗುವುದು ಮಾತ್ರವಲ್ಲ, ನೋಟು ರದ್ದತಿಯಿಂದ ಕುಸಿಯುವ ಮನೆ, ಸೈಟಿನ ಲಾಭವೂ ಅವರಿಗೆ ದೊರೆಯಲಿದೆ. ಬಹಳಷ್ಟು ಜನ ಅರ್ಥವ್ಯವಸ್ಥೆಯ ವೇಗ ಕಡಿಮೆಯಾಗಲಿದೆ, ಷೇರು ಮಾರುಕಟ್ಟೆ ಕುಸಿಯಲಿದೆ ಎಂದೆಲ್ಲ ಬೊಬ್ಬೆಹಾಕುತ್ತಿದ್ದರು. ನರೇಂದ್ರ ಮೋದಿಯವರು ಹೆಚ್ಚು ಮಾಡಲು ಹೊರಟಿರುವುದು ಕೆಲವೇ ಕಂಪನಿಗಳ ಆದಾಯದ ಏರಿಳಿತವನ್ನು ತೋರುವ ಷೇರು ಮಾರುಕಟ್ಟೆ ಸೂಚ್ಯಂಕವನ್ನಲ್ಲ, ಬಡವರ ಜೀವನಮಟ್ಟವನ್ನ!

ಈ ನಡುವೆ, ನೋಟು ರದ್ದತಿ ಬಗ್ಗೆ ಮೊದಲೇ ಮಾಹಿತಿ ಕೊಡಬೇಕಿತ್ತು ಎಂದು ಆಲವತ್ತುಕೊಳ್ಳುತ್ತಿದ್ದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿರುವ ಚಿಕ್ಕರಂಗಪ್ಪ ಮತ್ತು ಜಯಚಂದ್ರ ಎಂಬ ಇಬ್ಬರು ಅಧಿಕಾರಿಗಳಿಂದ ಇನ್ಕಮ್ ಟ್ಯಾಕ್ಸ್‌ನವರು 4 ಕೋಟಿ ರೂ. ಹೊಸ ನೋಟನ್ನೇ ವಶಪಡಿಸಿಕೊಂಡಿದ್ದಾರೆ! ಅಯ್ಯೋ, ಈ ಕಳ್ಳರು ಯಾವುದಾದರೊಂದು ಮಾರ್ಗವನ್ನು ಕಂಡುಹುಡುಕಿಕೊಳ್ಳುತ್ತಾರೆ, ಮೋದಿ ಚಾಪೆ ಕೆಳಗೆ ನುಸುಳಿದರೆ, ಇವರು ರಂಗೋಲಿ ಕೆಳಗೆ ನುಸುಳುತ್ತಾರೆ, 2000 ನೋಟು ಮತ್ತೆ ಬ್ಲ್ಯಾಕ್‌ಮನಿ ಸೃಷ್ಟಿಗೆ ಕಾರಣವಾಗುತ್ತದೆ ಎಂಬ ಆತಂಕಕ್ಕೆ ಇದು ಮತ್ತಷ್ಟು ಇಂಬುಕೊಟ್ಟಿದೆ. ನಿಮ್ಮ ಅನುಮಾನ ನಿಜ ಕೂಡ ಹೌದು. ಆದರೆ ಒಮ್ಮೆ ಆಧಾರ್ ಕಾರ್ಡ್‌ನ ಜನಕ ನಂದನ್ ನಿಲೇಕಣಿಯವರು ಮೂರು ದಿನಗಳ ಹಿಂದೆ ಎನ್‌ಡಿ ಟಿವಿಗೆ ಕೊಟ್ಟಿರುವ ಸಂದರ್ಶನವನ್ನು ನೋಡಿ. ಅವರೀಗ ಮೋದಿ ಟೀಮನ್ನೂ ಸೇರಿದ್ದಾರೆ. ಅವರು ಪ್ರತಿಪಾದಿಸಿದ ಹಾಗೂ ಮೋದಿಯವರು ಹೇಳುತ್ತಿರುವ ಪ್ಲಾಸ್ಟಿಕ್ ಮನಿ, ಡಿಜಿಟಲ್ ಅಥವಾ ಅನ್‌ಲೈನ್ ವ್ಯವಹಾರದ ಬಗ್ಗೆ ಹೇಳುವ ಮೊದಲು 2000 ನೋಟಿನ ಬಗ್ಗೆ ಸ್ವಲ್ಪ ಕೇಳಿ. 500 ರು. ನೋಟನ್ನು ಮುದ್ರಿಸಲು ಆರಂಭಿಸಿದ್ದು ಮೋದಿಯವರು 500, 1000 ರದ್ದು ಮಾಡಿದ ಮೂರ್ನಾಲ್ಕು ದಿನಗಳ ನಂತರ. ಒಂದು ವೇಳೆ ಹೊಸರೂಪದ 500 ರು. ನೋಟುಗಳುನ್ನು ಮೊದಲೇ ಮುದ್ರಿಸಿದ್ದರೆ ಈ ಕಳ್ಳಕಾಕರಿಗೆ ನೋಟು ರದ್ದಾಗುವ ಸುಳಿವು ಸಿಗುತ್ತಿತ್ತು!

ಸರಕಾರ ಹೊಸ ಮೊತ್ತದ ನೋಟು ಬಿಡುಗಡೆ ಮಾಡಲಿದೆ ಎಂಬ ತಪ್ಪು ಕಲ್ಪನೆಯನ್ನು ಮೂಡಿಸುವುದಕ್ಕಾಗಿಯೇ 2000 ರೂ. ನೋಟನ್ನು ಮುದ್ರಿಸಲಾಯಿತು. ಇದು ತಾತ್ಕಾಲಿಕ ತಂತ್ರವಷ್ಟೇ. 500, 1000 ರು. ಗತಿಯೇ 2000ರ ನೋಟಿಗೆ ಬರುವುದರಲ್ಲಿ ಅನುಮಾನವಿಲ್ಲ. ಈ ಮಧ್ಯೆ, ಕೆಎಸ್‌ಆರ್‌ಟಿಸಿ, ಕೆಎಂಎಫ್, ಕೆಪಿಟಿಸಿಎಲ್, ಸರಕಾರಿ ಹೆಂಡದಂಗಡಿ ಇವುಗಳಲ್ಲೆಲ್ಲ ಬರುವ ಹಳೆಯ 50-,100 ರು, ಹೊಸದಾದ 2000 ರು. ನೋಟುಗಳನ್ನು ಕೆಲವರು ಮತ್ತೆ ಸಂಗ್ರಹಿಸುತ್ತಿದ್ದಾರೆ. ಅವುಗಳ ಮಾಹಿತಿಯನ್ನು ಮೋದಿ ಸರಕಾರ ಕಲೆ ಹಾಕುತ್ತಿದೆ, ಡಿಸೆಂಬರ್ 30ರ ನಂತರ ದೇಶಾದ್ಯಂತ ವ್ಯಾಪಕ ದಾಳಿಗಳೂ ಆಗಲಿವೆ. ನಮ್ಮ ಫಟಿಂಗ ರಾಜಕಾರಣಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ದೇಶಾದ್ಯಂತ ಇರುವ 367 ಡಿಸಿಸಿ ಬ್ಯಾಂಕು ಹಾಗೂ ಅಸಂಖ್ಯ ಸಹಕಾರಿ ಬ್ಯಾಂಕುಗಳಿಗೆ ನೋಟು ಬದಲಾವಣೆ ಹಕ್ಕು ಕೊಟ್ಟಿರಲಿಲ್ಲ ಮೋದಿ. ಏಕೆಂದರೆ ಇಷ್ಟೂ ಡಿಸಿಸಿ ಹಾಗೂ ಕೋಪರೇಟವಿವ್ ಬ್ಯಾಂಕುಗಳು ಇರುವುದು ರಾಜಕಾರಣಿಗಳ ಕೈಯಲ್ಲೇ. ನವೆಂಬರ್ 8ರ ನೋಟು ರದ್ದತಿಯ ನಂತರ ಕೆಲವು ರಾಜಕಾರಣಿಗಳು ಹಳೇ ಡೇಟ್ ಹಾಕಿ ಕೋಪರೇಟಿವ್ ಬ್ಯಾಂಕುಗಳಲ್ಲಿ ದೊಡ್ಡ ಠೇವಣಿ ಇಟ್ಟಿದ್ದಾರೆ ಎಂಬ ಬಲವಾದ ಗುಮಾನಿ ಇದೆ, ಅವರನ್ನೂ ಮೋದಿ ಬಿಡುವುದಿಲ್ಲ, ನೋಡ್ತಾ ಇರಿ!

ಭ್ರಷ್ಟ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಕುಳಗಳು, ಹೆಂಡದ ದೊರೆಗಳು, ಬಡ್ಡಿದಾರರು, ದೊಡ್ಡ ದೊಡ್ಡ ಗೋಲ್ಡ್ ವ್ಯಾಪಾರಿಗಳ ಕಪಿಮುಷ್ಠಿಯಿಂದ ವ್ಯವಸ್ಥೆಯನ್ನು ವಿಮುಕ್ತಿಗೊಳಿಸಿ ಕಪ್ಪುಹಣ ಸೃಷ್ಟಿಗೆ ತಡೆಹಾಕಬೇಕೆಂದರೆ ಮೋದಿಯವರು ಹೇಳುತ್ತಿರುವ ಹಾಗೂ ನಂದನ್ ನಿಲೇಕಣಿಯವರು ತಮ್ಮ ಸಂದರ್ಶನದಲ್ಲಿ ಪ್ರತಿಪಾದಿಸಿರುವ ಡಿಜಿಟಲೈಜೇಶನ್‌ಗೆ ನೀವೆಲ್ಲ ತೆರೆದುಕೊಳ್ಳಲೇಬೇಕು ಹಾಗೂ ಅಂತಹ ಅನಿವಾರ್ಯವನ್ನು ಮೋದಿ ಸೃಷ್ಟಿಸುತ್ತಾರೆ. ಇಲ್ಲವಾದರೆ ಇನ್ನೈದು ವರ್ಷಗಳಲ್ಲಿ ಮತ್ತದೇ ಸ್ಥಿತಿ ನಿರ್ಮಾಣವಾಗುತ್ತದೆ. ನಮ್ಮ ಮಕ್ಕಳಿಗಾದರೂ ಒಳ್ಳೆಯ ಭವಿಷ್ಯವನ್ನು ಸೃಷ್ಟಿಸಿಕೊಡುವ ಹಾಗೂ ನಮ್ಮ ಇನ್ನುಳಿದ ಬದುಕಿನಲ್ಲಿ ಒಳ್ಳೆಯ ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿ ನೀವು ಸ್ವಲ್ಪ ಕಷ್ಟವನ್ನು ಅನುಭವಿಸಿ. ಬಹುಶಃ ಇನ್ನು ಮುಂದೆ 50 ಸಾವಿರವೋ ಅಥವಾ ಒಂದು ಲಕ್ಷಕ್ಕಿಂತಲೋ ಹೆಚ್ಚಿನ ಹಣವನ್ನು ಬ್ಯಾಂಕಿನಿಂದ ಬಿಡಿಸಿಕೊಳ್ಳುವುದಕ್ಕೇ ಸರಕಾರ ಕಡಿವಾಣ ಹಾಕಬಹುದು! ಅದರಿಂದ ಖಂಡಿತ ತೊಂದರೆಯಾಗುವುದಿಲ್ಲ. ನಿಮ್ಮ ಮಗಳ ಮದುವೆಯ ಶಾಮಿಯಾನದವನಿಗೆ, ಕೇಟರಿಂಗ್‌ನವನಿಗೆ, ಅಲಂಕಾರದವನಿಗೆ, ಒಡವೆ-ವಸ್ತ್ರಗಳ ಖರೀದಿಗೆ ಡೆಬಿಟ್ ಕಾರ್ಡ್ ಬಳಸಿ ಅಥವಾ ಚೆಕ್ ಕೊಡಿ, ಸಮಸ್ಯೆಯೇ ಇಲ್ಲ. ರಸಗೊಬ್ಬರ, ಭಿತ್ತನೆ ಬೀಜ, ಔಷಧಿ ಎಲ್ಲಾ ಕಡೆಯೂ ಕಾರ್ಡ್ ಬಳಸಿದರೆ ಕಾಳಧನ ಸೃಷ್ಟಿಯಾಗುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಸೈಟ್ ಖರೀದಿ ಮಾಡುವಾಗಲೂ ಸಂಪೂರ್ಣ ಹಣವನ್ನು ಚೆಕ್ ಅಥವಾ ಡಿಡಿಯಲ್ಲಿ ಕೊಡಿ. ವ್ಯವಹಾರ ನೈತಿಕವಾಗಿ ನಡೆಯುತ್ತದೆ, ಸರಕಾರಕ್ಕೆ ಆದಾಯ ಹೆಚ್ಚಾಗುತ್ತದೆ, ಅದು ದೇಶದ ಒಳಿತಿಗೇ ವಿನಿಯೋಗವಾಗುತ್ತದೆ.

ಪ್ರಸ್ತುತ ಸಂಸತ್ತಿನ ಅಧಿವೇಶನ ನಡೆಯುತ್ತಿದೆ. ಇದಾದ ಬಳಿಕ ಕರ್ನಾಟಕದ ಪ್ರತಿಯೊಂದು ಹೋಬಳಿ, ತಾಲೂಕು ಹಾಗೂ ಜಿಲ್ಲೆಗಳಲ್ಲಿ ಚಿಕ್ಕಪುಟ್ಟ ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರಿಗೆ ಡಿಜಿಟಲ್ ಟ್ರ್ಯಾನ್‌ಸ್ಯಾಕ್ಸನ್ ಬಗ್ಗೆ, ಎ-ವ್ಯಾಲೆಟ್ ಬಗ್ಗೆ ಬಿಜೆಪಿ ಯುವಮೋರ್ಚಾದಿಂದ ನಾವು ಕಾರ್ಯಾಗಾರ ಮಾಡಲಿದ್ದೇವೆ, ಸುಲಭ ಹಾಗೂ ಸರಳವಾಗಿ ನೋಟಿಲ್ಲದೆ ಮಾರಾಟ, ಖರೀದಿ ಮಾಡುವ ವಿಧಾನವನ್ನು ಮನವರಿಕೆ ಮಾಡಿಕೊಡಲಿದ್ದೇವೆ ಇನ್ನು ಕೆಲವೇ ದಿನಗಳಲ್ಲಿ.

ಇದರ ಇನ್ನೊಂದು ಲಾಭವೇನು ಗೊತ್ತೆ? ನೋಟಿನ ಚಲಾವಣೆಯನ್ನು ತೀವ್ರತರವಾಗಿ ಕಡಿಮೆ ಮಾಡಿ ಎಲ್ಲವನ್ನೂ ಡಿಜಿಟಲೈಸ್ ಮಾಡಿದರೆ ಹಳೆ ಚಪ್ಲಿ, ಹರಕಲು ಬಟ್ಟೆ ಹಾಕಿ, ಮನೆಯಲ್ಲಿ ಹೆಂಡತಿ ಮಕ್ಕಳನ್ನೂ ಉಪವಾಸ ಕೆಡವಿದರೂ ರೇಸ್‌ಕೋರ್ಸ್‌ಗೆ ಹೋಗಿ ಕುದುರೆ ಬಾಲಕ್ಕೆ ಕಟ್ಟಿ ಕಳೆದುಕೊಂಡ ಮೇಲೆ ಕ್ವಾಟರ್ ಏರಿಸಿಕೊಂಡು ಮನೆಗೆ ಬರುತ್ತಿದ್ದ ಗಂಡಸರೂ ತಮ್ಮ ಪ್ರವೃತ್ತಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ! ಕ್ರಿಕೆಟ್ ಮ್ಯಾಚ್ ಶುರುವಾಯಿತೆಂದರೆ, ಐಪಿಎಲ್ ಆರಂಭವಾದ ಕೂಡಲೇ ಊರೂರಲ್ಲಿ ಬೆಟ್ಟಿಂಗ್ ಕಟ್ಟಿ ಲಕ್ಷಾಂತರ ರು. ಸಾಲಕ್ಕೊಳಗಾಗಿ, ಕೊನೆಗೆ ನೇಣಿಗೂ ಶರಣಾಗಿದ್ದ ಪಡ್ಡೆ ಹುಡುಗರ ದಂಧೆಗೂ ಕಡಿವಾಣ ಹಾಕಬಹುದು!! ವಾರಕ್ಕೊಮ್ಮೆ ನಡೆಯುವ ಬಟವಾಡೆ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆಯಾದರೆ, ಸಂಜೆ ಕೆಲಸ ಮುಗಿದ ಕೂಡಲೇ ಸಿಗುತ್ತಿದ್ದ ದಿನಗೂಲಿ ಬಾಟ್ಲಿಗೆ ಬಾಯಿಡದೆ ಮನೆಗೆ ಹೋಗಲು ಬಹುತೇಕ ಗಂಡಸರನ್ನು ಬಿಡುತ್ತಿರಲಿಲ್ಲ ತಾನೆ? ಅದಕ್ಕೂ ಬರಲಿದೆ ಕಷ್ಟಕಾಲ!!

ಇನ್ನೂ ಸಾಕಷ್ಟು ವಿಚಾರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಕಳೆದ ವಾರ ನೋಟು ರದ್ದತಿಯ ಬಗ್ಗೆ ಸಾರ್ವಜನಿಕರಲ್ಲಿ ಯಾವ ಅಭಿಪ್ರಾಯವಿದೆ, ಯಾವ ಅನಾನುಕೂಲವನ್ನು ಎದುರಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಕರ್ನಾಟಕದ ಎಲ್ಲ ಸಂಸದರನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಕರೆದಿದ್ದರು. ಅಭಿಪ್ರಾಯ ಪಡೆದುಕೊಂಡ ನಂತರ, 5 ನಿಮಿಷ ನಮ್ಮನ್ನುದ್ದೇಶಿಸಿ ಮಾತನಾಡಿದರು. ನಾವು ಏಕೆ ಇಂತಹ ರಿಸ್ಕ್ ತೆಗೆದುಕೊಂಡಿದ್ದೇವೆ ಅಂತ ಅಂದುಕೊಂಡಿದ್ದೀರಿ. ನಾವಿಲ್ಲಿರುವುದು ಅಧಿಕಾರವನ್ನು ಚಲಾಯಿಸುವುದಕ್ಕಲ್ಲ, ದೇಶವನ್ನು ಮುನ್ನಡೆಸುವುದಕ್ಕೆ. 1951ರಲ್ಲಿ ನಮ್ಮ ಪಕ್ಷವನ್ನು ಸ್ಥಾಪಿಸಿದಾಗ ಅಧಿಕಾರ ಹಿಡಿಯುವ ಕಲ್ಪನೆಯನ್ನು ಇಟ್ಟುಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ. ಆದರೂ ಏಕೆ ಪಕ್ಷವನ್ನು ಆರಂಭಿಸಿದೆವೆಂದರೆ ಸತ್ತಾ ಚಲಾನೇಕೇಲಿಯೇ ನಹೀ, ದೇಶ್ ಬಡಾನೇ ಕೇಲಿಯೇ! ಕಳೆದ 12 ವರ್ಷಗಳ ಕೇಂದ್ರದ ಬಜೆಟ್ ನೋಡಿ. ಘೋಷಣೆ ಮಾಡಿರುವುದು ಎಷ್ಟೇ ಲಕ್ಷ ಕೋಟಿಯಾದರೂ ಖರ್ಚು ಮಾಡಿರುವ ಸರಾಸರಿ ಮೊತ್ತ 4.19 ಲಕ್ಷದಿಂದ 4.70 ಲಕ್ಷ ಕೋಟಿಯಷ್ಟೇ. ಈ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ತಂದು ನಿಲ್ಲಿಸಬೇಕಾದರೆ ಕನಿಷ್ಟ 10-15 ಲಕ್ಷ ಕೋಟಿ ರು.ಗಳನ್ನು ವಾರ್ಷಿಕವಾಗಿ ಖರ್ಚು ಮಾಡಬೇಕು. ಕೆರೆ, ಕಟ್ಟೆ, ರಸ್ತೆ, ಹೆದ್ದಾರಿ, ರೈಲು ಮಾರ್ಗ ನಿರ್ಮಾಣವಾಗಬೇಕು.

ಬಡವರಿಗೆ ಸೂರು, ಅವರ ಮಕ್ಕಳಿಗೆ ಉತ್ತಮ ಶಿಕ್ಷಣ, ಕಲಿತ ಮೇಲೆ ಯೋಗ್ಯ ಕೆಲಸ ದೊರೆಯಬೇಕು. ನಮ್ಮ ದೇಶದ ಯಾವುದೇ ಕಂಪನಿಗಳಿರಬಹುದು, ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಆಗಿರಬಹುದು. ಪ್ರತಿಯೊಂದೂ ಕಂಪನಿಗಳು ಮಾಡುತ್ತಿರುವುದು ಮಜ್ದೂರಿ(ಕೂಲಿ). ಇಂಟೆಲೆಕ್ಚುವಲ್ ಪಾಪರ್ಟಿ(ಬೌದ್ಧಿಕ ಆಸ್ತಿ) ಹೊಂದಿರುವವರಿಗೆ ಆದಾಯ ಹೋಗುತ್ತಿದೆ. ನಾವು ದೇಶಾದ್ಯಂತ ಕನಿಷ್ಠ 50 ಅಭಿವೃದ್ಧಿ ಮತ್ತು ಸಂಶೋಧನೆ(ಆರ್ ಆ್ಯಂಡ್ ಡಿ) ಕ್ಲಸ್ಟರ್‌ಗಳು ಸ್ಥಾಪನೆ ಮಾಡಬೇಕು. ಒಂದೊಂದಕ್ಕೂ ಸರಕಾರ 5-10 ಸಾವಿರ ಕೋಟಿ ನೀಡಿ ಅಷ್ಟೇ ಪ್ರಮಾಣದ ಹಣಹಾಕಿ ಸಂಶೋಧನೆಯಲ್ಲಿ ನಮ್ಮ ಯುವಕರನ್ನು ತೊಡಗಿಸಿ ಎಂದು ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಇನ್ನು ಮುಂತಾದ ಕಂಪನಿಗಳಿಗೆ ಜವಾಬ್ದಾರಿ ಕೊಡಬೇಕು. ಅಮೆರಿಕ, ಬ್ರಿಟನ್‌ನಲ್ಲಿರುವ ನಮ್ಮ ವಿಜ್ಞಾನಿಗಳು ಇಲ್ಲಿಗೆ ವಾಪಸ್ಸಾಗಬೇಕು. ನಮ್ಮದು ಜಗತ್ತಿನ ಅತಿದೊಡ್ಡ ದೊಡ್ಡ ಸೇನೆ ಮಾತ್ರವಲ್ಲ, ಅತ್ಯಂತ ಬಲಿಷ್ಠ ಸೇನೆ, ಅತ್ಯಂತ ಮಾರಕ ಅಸ್ತ್ರಗಳನ್ನು ಹೊಂದಿರುವ ಸೇನೆಯೂ ಆಗಬೇಕು, ನಾವು ಹಾರಿಸಿದ ಕ್ಷಿಪಣಿ ನ್ಯೂಯಾರ್ಕನ್ನು ತಲುಪುವಂತಿರಬೇಕು. ಇದು ನರೇಂದ್ರ ಭಾಯಿ ಯೋಚಿಸುವ ಪರಿ ಎಂದರು.

ಹೌದು, ಇಂತಹ ಯೋಚನೆಯನ್ನು ಇಟ್ಟುಕೊಂಡಿರುವುದರಿಂದಲೇ ನರೇಂದ್ರ ಮೋದಿಯವರು ತಮ್ಮ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು, ಸ್ವಂತ ಜೀವವನ್ನೂ ಅಪಾಯಕ್ಕೆ ತಳ್ಳಿ ನೋಟು ರದ್ದತಿ ಮಾಡಿದ್ದಾರೆ. ಹೀಗೆ ಎಲ್ಲರ ಬಗ್ಗೆಯೂ ಯೋಚನೆ ಮಾಡುವ ಎಷ್ಟು ಜನರು ರಾಜಕಾರಣದಲ್ಲಿದ್ದಾರೆ ಹೇಳಿ? ಒಬ್ಬ ಎಂಎಲ್‌ಎ, ಎಂಪಿ ಆದ ಕೂಡಲೇ ಮೊದಲು ಯೋಚಿಸುವುದು ಅವನ ಕುಟುಂಬದ ಬಗ್ಗೆ, ಮಕ್ಕಳು ಮರಿಗಳ ಬಗ್ಗೆ. ಅವರ ಭವಿಷ್ಯಕ್ಕೆ ಕಾಮಧೇನುವಿನಂತೆ ಸದಾ ಆದಾಯ ಕೊಡುವ ಪೆಟ್ರೋಲ್ ಬಂಕು, ಗ್ಯಾಸ್ ಏಜೆನ್ಸಿ, ಲಾಡ್ಜು-ಹೋಟೆಲ್ಲು, ಚೇಲಾಗಳ ಹೆಸರಿನಲ್ಲಿ ಕಾಂಟ್ರ್ಯಾಕ್ಟು, ರಿಯಲ್ ಎಸ್ಟೇಟು, ಮೈನಿಂಗು, ಮರಳುಗಾರಿಕೆ ಮತ್ತು ಕಾರ್ಯಕರ್ತರಿಗೆ ಟೊಳ್ಳು ಭಾಷಣ, ಇದೇ ತಾನೇ? ಯಾರೂ ಕದಿಯಲಾಗದ, ಲಪಟಾಯಿಸಲಾಗದ ನಿಮ್ಮ ದುಡ್ಡನ್ನು ಬ್ಯಾಂಕು, ಎಟಿಎಂನಲ್ಲಿ ಬಿಡಿಸಿಕೊಳ್ಳುವುದಕ್ಕೇ ತಾಳ್ಮೆ ಇಲ್ಲವೆಂದಾದರೆ, ನಿಮ್ಮನ್ನು ಲೂಟಿ ಮಾಡುತ್ತಿದ್ದವರನ್ನು 70 ವರ್ಷಗಳಿಂದ ಹೇಗೆ ಸಹಿಸಿಕೊಂಡು ಸುಮ್ಮನಿದ್ದಿರಿ ಸ್ವಾಮಿ?! ನೀವು ತಾಳ್ಮೆ ಕಳೆದುಕೊಳ್ಳಬೇಕಾಗಿರುವುದು ಯಾರ ವಿರುದ್ಧ ಅಂತ ಈಗಲಾದರೂ ಗೊತ್ತಾಯಿತು ತಾನೇ?

ಜೈ ಹಿಂದ್!

-ಪ್ರತಾಪ್ ಸಿಂಹ

ಶುಕ್ರವಾರ, ಫೆಬ್ರವರಿ 3, 2017

ರಥಸಪ್ತಮಿ

🌞 *ರಥಸಪ್ತಮಿ* 🌞      ‌                                                  
=========================                                                                                              
🌞ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು *ಸೂರ್ಯನ ಜನ್ಮದಿನ*.                                          ‌                ‌                                                                              
 🌞ಅಲ್ಲದೇ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯನೇ ಆಗಿರುವುದರಿಂದ,
 *ಇದೇ ಫೆಬ್ರವರಿ ೩ ಶುಕ್ರವಾರ ದಂದು ಸೂರ್ಯ ಆರಾಧನೆಯ ರಥಸಪ್ತಮಿ* ದಿನವೆಂದು ಆಚರಿಸಲಾಗುತ್ತದೆ.       ‌                                                                                     ‌                                                                                                               🌞ನಿಯಮಬದ್ಧವಾದ ಉದಯ ಹಾಗೂ ಅಸ್ತಗಳ ಮೂಲಕ ನಮಗೆ ಶಿಸ್ತು ಬದ್ಧವಾದ ಕರ್ತವ್ಯ ಪ್ರಜ್ಞೆಯನ್ನು, ಚೈತನ್ಯವನ್ನು ತುಂಬುವ ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆಯಾಗಿದೆ. ಈ ದಿನದಲ್ಲಿ ನಡೆಯುವ ಕೆಲಸ ಕಾರ್ಯಗಳು, ಕೋರಿಕೆಗಳು ಫಲಪ್ರದವಾಗಿರುತ್ತವೆ. ಸೂರ್ಯನ ಪ್ರಕಾಶ ಹೆಚ್ಚುತ್ತಿರುವುದರಿಂದ ಚಳಿಗಾಲದ ಚಳಿ ಮುದುಡಿಕೊಂಡು ಮೈಯಲ್ಲಿ ನವಚೇತನ ತುಂಬಿದಂತೆನಿಸುತ್ತದೆ. ಅಂಗಾಂಗಗಳಲ್ಲಿ ಕಾರ್ಯಕ್ಷಮವಾಗುತ್ತಿವೆ. ಈ ಉಪಕಾರಕ್ಕಾಗಿ ಸೂರ್ಯನನ್ನು ಪೂಜಿಸುವುದು ರೂಡಿಯಲ್ಲಿದೆ.         ‌                                                                  
🌞ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿ ಹೇಳಿದೆ. ವೈವಸ್ವತ ಮನ್ವಂತರದ ಆರಂಭದ ದಿನ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಟ ದಿನ.
‌‌                                            
 🌞 *ರಥಸಪ್ತಮಿ* ದಿವಸ ರೋಗ ನಿವಾರಣೆಯನ್ನು, ದೇಹದಾರ್ಢ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಹೊಂದುತ್ತಾರೆ.     ‌                      ‌     ‌                                                                                    

 🌞ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ *ಸೂರ್ಯ ನಮಸ್ಕಾರ*ಕ್ಕೆ ನೀಡಬಹುದು. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿವೆ. ಸೂರ್ಯನಿಲ್ಲದೆ ಜೀವನ ಅಸ್ತಿತ್ವ ಇರಲು ಸಾಧ್ಯವಿಲ್ಲ.   ‌            ‌   ‌  ‌   ‌   ‌                                                                                                                              
🌞 *ರಥಸಪ್ತಮಿ* ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ *ಮಾಘಸ್ನಾನ* ತುಂಬಾ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯಸಂಪತ್ತು ಲಭಿಸುವುದಲ್ಲದೇ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣದಲ್ಲಿದೆ.    ‌            ‌   ‌   ‌   ‌   ‌      ‌                                                                                                              
🌞 ಸೂರ್ಯನ ಆರಾಧನೆ ಋಗ್ವೇದದ ಕಾಲದಿಂದಲೂ ಪ್ರಚಲಿತದಲ್ಲಿದೆ. ಪ್ರಾಚೀನ ವೈದಿಕ ಧರ್ಮದಲ್ಲಿ ಸೂರ್ಯನಿಗೆ ಅತ್ಯಂತ ಪ್ರಾಮುಖ್ಯತೆ ಇತ್ತು. ಆತನ ಆರಾಧನೆಯಿಂದಲೇ ಸೌರ ಪಂಥ ಹುಟ್ಟಿದ್ದು. ಕಾಲ ಗಣನೆಯಲ್ಲಿ ಸೌರಮಾನ ಎಣಿಕೆ ಇಂದಿಗೂ ಇದೆ. ಗಾಯತ್ರಿ ಮಂತ್ರದಲ್ಲಿನ ಪ್ರತಿಶಬ್ದವು ಸೂರ್ಯನ ಸಾಮರ್ಥ್ಯಗಳನ್ನು ಕೊಂಡಾಡುವ ಉದ್ದೇಶದಿಂದಲೇ ಬಳಸಲಾಗಿದೆ.            ‌                          ‌                                                                                            
 🌞 ದ್ವಾಪರಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗನು ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ವಿವರ ಪಡೆದು ಸಂಚಿತ ಕರ್ಮದಿಂದ ಬಂದಿರುವ ಈ ಖಾಯಿಲೆಗೆ ರಥಸಪ್ತಮಿ ವ್ರತ ಆಚರಿಸಲು ಹೇಳಿದ್ದರು. ಅದರಂತೆ ರಥಸಪ್ತಮಿಯ ದಿನ ಸೂರ್ಯಾರಾಧನೆ ಮಾಡಲಾಗಿ ರಾಜಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯು ಆದನು. ಅಲ್ಲದೇ ಪಾಂಡವರು ವನವಾಸದ ಅವಧಿಯಲ್ಲಿ ಕೃಷ್ಣನ ಆದೇಶದಂತೆ *ಸೂರ್ಯಾರಾಧನೆ* ಮಾಡಿ ಸೂರ್ಯನಿಂದ ಅಕ್ಷಯ ಪಾತ್ರೆ ಪಡೆದಿದ್ದರು. ಅಲ್ಲದೆ ರಾವಣನನ್ನು ಗೆಲ್ಲಬೇಕಾದರೆ ಶ್ರೀರಾಮನೂ ಕೂಡ ಅಗಸ್ತ್ಯರ ಉಪದೇಶದಂತೆ *ಆದಿತ್ಯ ಹೃದಯ*ದ ಮೂಲಕ ಸೂರ್ಯನ ಆರಾಧನೆ ಮಾಡಿದನೆಂದು ರಾಮಾಯಣದಲ್ಲಿ ಹೇಳಿದೆ. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಶಮಂತಕ ಮಣಿ ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿ ಬಂದಿದೆ. ಮಯೂರನೆಂಬ ಕವಿ ಶಿಸೂರ್ಯಶತಕಷಿವೆಂಬ ಗ್ರಂಥ ಬರೆದು ಕಳೆದುಕೊಂಡ ಕಣ್ಣನ್ನು ಮತ್ತೆ ಪಡೆದನೆಂದು ಹೇಳುತ್ತಾರೆ.      ‌                                                       🌞 ಶ್ರೀರಾಮ ಸೂರ್ಯವಂಶದವನಾದರೆ, ಕರ್ಣ, ಸುಗ್ರೀವ, ನವಗ್ರಹಗಳಲ್ಲಿ ಶನಿ ಹಾಗೂ ಅಷ್ಟದಿಕ್ಪಾಲಕರಲ್ಲಿ ಯಮ ಸೂರ್ಯನ ಪುತ್ರರಾಗಿದ್ದಾರೆ.                ‌                                                                                                                                                                🌞 ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ      ಸೂರ್ಯನು ಬಲಹೀನನಾಗಿದ್ದರೆ ಅಥವಾ ಷಡ್ಬಲವಿರದಿದ್ದರೆ ರಥಸಪ್ತಮಿಯಂದು ಸೂರ್ಯಾರಾಧನೆ ಮಾಡಿದರೆ ದೋಷ ಪರಿಹಾರವಾಗುತ್ತದೆ. ಮಾಣಿಕ್ಯದ ಹರಳು ಧರಿಸಲು ಶುಭ ದಿನವಾಗಿದೆ. ಈ ಸೂರ್ಯರಾಧನೆ ಮುಖ್ಯವಾಗಿ ಭಾರತ, ಮಧ್ಯ ಆಫ್ರಿಕಾ, ಈಜಿಪ್ತ್, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಆಚರಿಸಲಾಗುತ್ತಿದೆ.

 🌞 *ರಥ ಸಪ್ತಮಿ*ಯು ಯಾವಾಗಲೂ ಅರುಣುದೋಯ ವ್ಯಾಪಿನಿಯಾಗಿರುವುದರಿಂದ ಸರಿಯಾಗಿ ಸೂರ್ಯೋದಯಕ್ಕೆ ಆಚರಣೆ ಮಾಡಬೇಕು. *ರಥಸಪ್ತಮಿ*ಯಂದು ಸೂರ್ಯೋದಯ ಕಾಲಕ್ಕೆ ಸ್ನಾನ ಮಾಡಬೇಕು. ಏಳು ಎಕ್ಕೆಯ ಎಲೆಯನ್ನು ತಲೆ, ಹೆಗಲು, ಮೊಣಕಾಲು ಮತ್ತು ಪಾದಗಳ ಮೇಲೆ ಇಟ್ಟುಕೊಂಡು ಸ್ನಾನಮಾಡುವುದು ವಿಶೇಷ.
                                                           
🌞 *ಸ್ನಾನಕಾಲಕ್ಕೆ ಪಠಿಸಬೇಕಾದ ಮಂತ್ರಗಳು* -
 ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ || ೧||

ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ||೨|                                                           ‌                               ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ |
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮೀ || ೩ ||

ಹೀಗೆ ಯಾರು ಈ ಮೂರು ಮಂತ್ರೋಚ್ಚಾರಣ ಪೂರಕ ಸ್ನಾನ ಮಾಡಿ ಸೂರ್ಯ ಮತ್ತು ಕೇಶವನ ದರ್ಶನವನ್ನು ಮಾಡುತ್ತಾರೋ, ಅವರು ಕ್ಷಣಮಾತ್ರದಲ್ಲಿ ಪಾಪಗಳಿಂದ ಮುಕ್ತರಾಗುವರು. (ನಿರ್ಣಯ ಸಿಂಧು)

  🌞 *ಸ್ನಾನಾನಂತರ ಸೂರ್ಯ ಮತ್ತು ಸಪ್ತಮಿ ತಿಥಿಗೆ ಅರ್ಘ್ಯ* -
ಒಂದು ತಾಮ್ರದ ಕಲಶದಲ್ಲಿ (ತಂಬಿಗೆ) ಶುದ್ಧವಾದ ಜಲ, ಅಕ್ಷತೆ, ಚಂದನ, ಬಿಳಿಬಣ್ಣದ ಹೂವುಗಳು, ಗರಿಕೆ, ಎಕ್ಕೆಯ ಎಲೆಗಳನ್ನು ತುಂಬಿಸಿ, ಮುಂದಿನ ಮಂತ್ರಗಳಿಂದ ಸೂರ್ಯ ಮತ್ತು ಸೂರ್ಯ ಜನನೀಯಾದ ಸಪ್ತಮಿ ತಿಥಿಗೂ ಸಹ ಅರ್ಘ್ಯವನ್ನು ಕೊಡಬೇಕು.

🌞 *ಸೂರ್ಯಾರ್ಘ್ಯ ಮಂತ್ರ* -
ಸಪ್ತಸಪ್ತಿವಹ ಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ ||
ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು.


🌞 *ಸಪ್ತಮಿ ಅರ್ಘ್ಯಮಂತ್ರ* -
ಜನನೀ ಸರ್ವಲೋಕಾನಾಂ ಸಪ್ತಮೀ ಸಪ್ತಸಪ್ತಿಕೇ |
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯಮಂಡಲೇ ||
ಎಂದು ಸಪ್ತಮೀತಿಥಿಯ ಕುರಿತು ಅರ್ಘ್ಯ ಕೊಡಬೇಕು.   ‌                                                                  
🌞 *ರಥಸಪ್ತಮಿ*ಯ ಪರ್ವ ಎಲ್ಲಾ ರಾಶಿಯವರಿಗೂ ವಿಶೇಷ ಫಲಪ್ರದ. ಸೂರ್ಯನು ಯಾವುದೇ ಜಾತಕದಲ್ಲಿ ಆತ್ಮರೂಪಿಯಾಗಿ ಇರುತ್ತಾನೆ, ಆದ್ದರಿಂದ ಅವನ ಪ್ರೀತ್ಯರ್ಥ ಪೂಜಾಕಾರ್ಯ ಆರೋಗ್ಯ, ಸಂಪತ್ತು ಮತ್ತು ಆನಂದಪ್ರದ.

🌞 *ಇದು ರಥಸಪ್ತಮಿ ಮಾತ್ರವಲ್ಲ: ಆರೋಗ್ಯಸಪ್ತಮಿ* 🌞

🌞🌞🚩🌅🙏🏿 🌞🌞
*ಸೂರ್ಯ ನಮಸ್ಕಾರ*
ಸರ್ವಪಾಪ ನಿವಾರಕ ಮತ್ತು
ಸರ್ವವ್ಯಾಧಿ ನಿವಾರಕ...                   ‌      ಕೃಪೆ : ಸನಾತನ ಗ್ರಂಥಗಳು