ಭಾನುವಾರ, ಆಗಸ್ಟ್ 27, 2017

ಗಣಪತಿ ವ್ರತ

ಗಣಪತಿ ವ್ರತ ಮತ್ತು ಕೆಲವು ವಿಷಯಗಳು...

೧. ಎಲ್ಲಾ ವ್ರತಗಳಿಗಿಂತ ಅಗ್ರಗಣ್ಯವಾಗಿರುವ ಪೂಜೆ.., 
ಪ್ರಾಯಶ್ಚಿತ್ತ ಸಂಕಲ್ಪದಿಂದ ಪ್ರಾರಂಭ ಮಾಡಿ.., ಸಂಕಲ್ಪಕ್ಕೆ ಮುಂಚೆ..

೨. ಗಣಪತಿಯು ಆದಷ್ಟೂ ಬೆಳ್ಳಿ ಅಥವ ಮಣ್ಣಿನ ಗಣಪತಿ ತುಂಬಾ ಶ್ರೇಷ್ಟ..
ದೂರ್ವಾ ಸಗಣಿ ಗಣಪತಿ ಮಹಾಶ್ರೇಷ್ಟ...

೩. ಮನೆಯ ಹಿರಿಯರ ಆಶೀರ್ವಾದದೊಂದಿಗೆ ವ್ರತಾರಂಭ ಮಾಡಿ..

೪. ಗಣಪತಿಯು ರಕ್ತಾಂಭರದಾರಿ ಎನಿಸುವುದರಿಂದ, ಗಣಪತಿಗೆ ಅರ್ಪಿಸುವ ವಸ್ತ್ರವನ್ನು, ಕುಂಕುಮದಿಂದ ಕೆಂಪಾಗಿಸಿದ, ವಸ್ತ್ರದ್ವಯವನ್ನೇ ಅರ್ಪಿಸಬೇಕು...

೫. ಗಣಪತಿಗೆ ತುಲಸೀ ಪೂಜೆ ಮಾಡಬಾರದು, ಎಂಬ ನಿಯಮ ಇದೆ..
ಆದರೆ ವ್ರತಗಳಲ್ಲಿ ಖಂಡಿತಾ ಮಾಡಬಹುದು, ನಿಷೇಧ ಇಲ್ಲ....

೬. ವಾಯನದಾನಕ್ಕೆ ಎರಡು ತೆಂಗಿನಕಾಯಿ, ಐದು ವೀಳ್ಯದೆಲೆ, ಐದು ಅಡಿಕೆ, ಅರ್ಧ ಸೇರು ಅಕ್ಕಿ, ಹಣ್ಣು ಮತ್ತು ಭಕ್ಷ್ಯಗಳ ಜೊತೆಗೆ ಇಟ್ಟು, ಎರಡು ಬಾಳೆ ಎಲೆ ಮುಚ್ಚಿ, ಬ್ರಾಹ್ಮಣರನ್ನು ಪೂರ್ವಕ್ಕೆ ಕೂಡಿಸಿ,  ದಾನಿಯು ಉತ್ತರಕ್ಕೆ ಮುಖ ಮಾಡಿ, ಸಂಕಲ್ಪ ಮಾಡಿ ದಾನ ಮಾಡಬೇಕು ...

೭. ಆಚಮನವನ್ನು ಮಾಡುವಾಗ ಪ್ರತಿಯೊಂದು ಸಾರಿಯೂ ಒಂದೊಂದು ನಾಮಕ್ಕೂ, ನಮ್ಮ ದೇಹದ ವಿವಿಧ ಅಂಗವನ್ನು ಸ್ಪರ್ಶಿಸಬೇಕು.., ನಮ್ಮ ಶರೀರದ ಪ್ರತಿಯೊಂದು ಅಂಗಾಂಗದಲ್ಲೂ ಪರಮಾತ್ಮನು ನೆಲೆಸಿದ್ದಾನೆ ಎಂದು ಸೂಚಿಸುವ ಉದಾತ್ತ ತತ್ವವೇ ಆಚಮನ...
ಕೆಲವರು ವ್ರತ ಪ್ರಾರಂಭದಲ್ಲಿ ಮಾತ್ರ ಮಾಡಿ, ನಂತರ ಸುಮ್ಮನೆ ಮಂತ್ರ ಹೇಳಿಕೊಳ್ಳುತ್ತಾರೆ, ಇದು ತಪ್ಪು....

೮. ಮನೆಯಲ್ಲಿ ವ್ರತದ ದಿನ, ಹಗಲಿನಲ್ಲಿ ಮಲಗಬಾರದು, (ಅನಾರೋಗ್ಯಸ್ಥರೂ ಮತ್ತು ವಯಸ್ಸಾದವರು ಮಲಗಬಹುದು)..

೯. ಹಸೀ ಹಾಲನ್ನೇ ಪೂಜೆಗೆ ಬಳಸಬೇಕು..

೧೦. ನುಚ್ಚಿಲ್ಲದ ಅಕ್ಕಿಯಿಂದ ಅಕ್ಷತೆಯನ್ನು ಮಾಡಿಟ್ಟುಕೊಳ್ಳಿ...

೧೧. ಗಣಪತಿಗೆ..
ಬೆಲ್ಲದ ಅಚ್ಚು / ಪಂಚಕಜ್ಜಾಯ/ ಮೋದಕ/ ಲಾಡು / ಕರಿಗಡುಬು/  
ನೇರಳೆಹಣ್ಣು, ಬೇಲದ ಹಣ್ಣು, ಸೀಬೆಹಣ್ಣು, ಒಣದ್ರಾಕ್ಷಿ, ಖರ್ಜೂರ, ಚಿಗಳಿ, ತೆಂಬಿಟ್ಟು, ಕಜ್ಜಾಯ, .....
...... ಇತ್ಯಾದಿ ..
ತುಂಬಾ ಇಷ್ಟ ಮತ್ತು ಶ್ರೇಷ್ಠ..! 

೧೨.ಬೆಳ್ಳಿಗಣಪತಿಯನ್ನು ಮೊದಲು ನೀರಿಗೆ ಚೂರು ಗೋವು ಮೂತ್ರ ಹಾಕಿ ಶುದ್ಧ ಮಾಡಿ, ನಂತರ ಅರಿಸಿನದ ನೀರಿನಿಂದ ಶುದ್ಧ ಮಾಡಿ, ಪೂಜೆಗೆ ಇಟ್ಟುಕೊಳ್ಳಿ...

೧೩. ೨೧ ಗರಿಕೆಯ, ೨೧ ಕಟ್ಟುಗಳುಳ್ಳ, ಹರಿಸಿನ ಅಥವ ಗಂಧ ಹಚ್ಚಿದ ದಾರದಿಂದ, ಹಾರ ಮಾಡಿ, ಹಾಕಿದರೆ ತುಂಬಾ ವಿಶೇಷ ಫಲ..
ಸಾಧ್ಯವಾಗದವರು ೩೩ ಗರಿಕೆಗಳನ್ನು ಕೈಯಲ್ಲಿ ಹಿಡಿದು..
ಶುಕ್ಲಾಂಭರದರಂ.....................
.................
..............ವಿಘ್ನೋಪ ಶಾಂತಯೇ||
ಈ ಶ್ಲೋಕ ೩೩ ಸಾರಿ ಹೇಳಿ ಗಣಪತಿಗೆ ಅರ್ಪಿಸಿ, ತುಂಬಾ ವಿಶೇಷ...

೧೪. ಪತ್ರೆಗಳು : 
a. ಗರಿಕೆ : ಇಷ್ಟಾರ್ಥ ಸಿದ್ಧಿ, ಪೂಜೆಯ ನಂತರ ಗರಿಕೆಯನ್ನು ಹಣವಿಡುವ ಜಾಗದಲ್ಲಿ ಇಡಿ, ಮತ್ತು 9 ಗರಿಕೆಯನ್ನು ಕುಡಿಯೋ ನೀರಿಗೆ ಹಾಕಿ...
ಶನೇಶ್ವರ ದೋಷ, ಸಾಡೇಸಾತ್ ನಡೆಯುತ್ತಿರೋರು, ಗರಿಕೆಯಿಂದ ಪೂಜೆ ಮಾಡಿ..

೨. ದವನ ಪತ್ರೆ : ಸಕಲ ಕಾರ್ಯ ಸಿದ್ಧಿ, ಕೆಲಸದಲ್ಲಿ ಯಾವ ತೊಂದರೆ ಬರದೇ, ಅಧಿಕ ಲಾಭವಾಗುತ್ತದೆ ..

೩. ಬಿಲ್ವಪತ್ರೆ : ಋಣಭಾದೆ ರೋಗಭಾದೆ ನಿವಾರಣೆಯಾಗುತ್ತದೆ ..

೪. ಶಮೀ ಪತ್ರೆ : ಸಾಡೇಸಾತ್, ಅಷ್ಟಮ, ಪಂಚಮ, ಇತ್ಯಾದಿ ಶನಿದೋಷಗಳು ನಿವಾರಣೆಯಾಗುತ್ತದೆ ..
೫. ಅರಳೀ ಪತ್ರೆ : ಸಂತಾನವಾಗದವರಿಗೆ ಸಂತಾನ ಭಾಗ್ಯ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..,

೬. ಉತ್ತರಾಣಿ ಪತ್ರೆ : ವಿದ್ಯಾರ್ಥಿಗಳಿಗೆ ಅತ್ಯಂತ ಶುಭ, ಸಕಲ ವಿದ್ಯಾ ಬುದ್ದಿ ಯೋಗ..

೭. ದರ್ಬೆ : ಸಕಲ ಕೇತು ದೋಷ, ನಕ್ಷತ್ರ ದೋಷ ನಿವಾರಣೆಯಾಗುತ್ತದೆ ..
......... ಇತ್ಯಾದಿ....

೧೭. ಹೂವುಗಳು...
ಬಿಳಿ ಎಕ್ಕದ ಹೂವು : ಸಮಸ್ತ ರೋಗ ನಿವಾರಣೆ, ಆರೋಗ್ಯ ಭಾಗ್ಯ..

ದ್ರೋಣ ಪುಷ್ಪ : ಶತ್ರು ನಾಷ ಮತ್ತು ನೆಮ್ಮದಿ..

ತುಂಬೆ ಹೂವು : ದೈವಭಲ ಜಾಸ್ತಿಯಾಗುತ್ತದೆ, ಭಕ್ತಿ ಜಾಸ್ತಿ..

ಮಲ್ಲಿಗೆ ಹೂವು : ಸಮಸ್ತವಾದ ದೈಹಿಕ ಹಾಗೂ ಮಾನಸಿಕ ರೋಗ ನಿವಾರಣೆಯಾಗುತ್ತದೆ...

ಪಾರಿಜಾತ : ಸರ್ಪದೋಷ ನಿವಾರಣೆ ಮಾಡುತ್ತೆ..

ರುದ್ರಾಕ್ಷಿ ಹೂವು : ಎಷ್ಟೇ ಕಷ್ಟ ಬಂದರು ಜಯ ನಿಮ್ಮದಾಗುತ್ತೆ..

ಕಣಗಲೆ ಹೂವು : ಭಯ ಭೀತಿ ನಿವಾರಣೆ, ಮಾಂತ್ರಿಕ ಭಾದೆ ನಿವಾರಣೆ, ಹಾಗೂ ವಿದ್ಯಾಪ್ರಾಪ್ತಿ..

ಸೂರ್ಯಕಾಂತಿ : ಅಷ್ಟೈಶ್ವರ್ಯ ಪ್ರಾಪ್ತಿ, ಉದ್ಯೋಗ ಭಾಧೆ ನಿವಾರಣೆ..ಇತ್ಯಾದಿ..
( ತುಂಬಾ ಇವೆ ಬರೆಯಲು ಸಾಧ್ಯವಾದಾಗ ತಿಳಿಸುತ್ತೇನೆ) 

ಹಣ್ಣುಗಳು : 
ಬಾಳೆಹಣ್ಣು : ಇಷ್ಟಾರ್ಥ ಸಿದ್ಧಿ,
ಯಾಲಕ್ಕಿ ಬಾಳೆಹಣ್ಣು : ನಿಂತು ಹೋದ ಕಾರ್ಯಗಳು ಮುಂದುವರಿಯುತ್ತದೆ,  ಶೀಘ್ರವಾಗಿ ನೆರವೇರುತ್ತದೆ ...

ಬಾಳೆಹಣ್ಣು ರಸಾಯನ : ಸಾಲದ ಭಾದೆ ನಿವಾರಣೆ, ಬರಬೇಕಾದ ಹಣ ಬರುತ್ತದೆ,
ಶುಭ ಕಾರ್ಯಕ್ಕೆ ಬೇಕಾದ ಹಣ ಮಂಜೂರ್ ಆಗಿ ಸಿಗುತ್ತದೆ ..

ಪೂರ್ಣಫಲ/ ತೆಂಗಿನಕಾಯಿ : ಕೆಲಸ ಕಾರ್ಯಗಳು ನಿಮ್ಮ ಮನಸ್ಸಿನಂತೆಯೇ ನೆರವೇರುತ್ತದೆ.., ಬಹಳ ಸುಲಭವಾಗಿ ಆಗುತ್ತದೆ, ಸಕಲ ಕಾರ್ಯ ದಿಗ್ವಿಜಯವಾಗುತ್ತದೆ..

೫. ಅಂಜೂರ : ಆರೋಗ್ಯಭಾಗ್ಯ, B.P,  ನಾರ್ಮಲ್ ಆಗುತ್ತದೆ.., 

ನೇರಳೆ ಹಣ್ಣು ; ಬೆನ್ನು ನೋವು, ಮಂಡೀ ನೋವು, ಸೊಂಟದ ನೋವು ವಾಸಿಯಾಗುತ್ತದೆ, ಶನಿಕಾಟ ನಿವಾರಣೆಯಾಗುತ್ತದೆ ..

ಸೀಬೆಹಣ್ಣು : ಎಲ್ಲರಿಂದಲೂ ರಾಜಗೌರವ, ಸತ್ಕಾರ ಸಿಗುತ್ತದೆ, ಉದರವ್ಯಾಧಿ ನಿವಾರಣೆಯಾಗುತ್ತದೆ ..
ವಿವಾಹ ಭಾಗ್ಯವಾಗುತ್ತದೆ..,
ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಧಿಕ ಲಾಭವಾಗುತ್ತದೆ ...
.......ಇತ್ಯಾದಿ ..

ಭಕ್ಷ್ಯಗಳು ; 
ಮೋದಕ : ಇಷ್ಟಾರ್ಥ ಸಿದ್ಧಿ ಮತ್ತು ಸಾಕ್ಷಾತ್ ಗಣಪತಿಯೇ ನಮ್ಮ ಮನೆಯನ್ನು ಕಾಯುತ್ತಾನೆ.., ಜಾತಕ ದೋಷಗಳು ನಿವಾರಣೆಯಾಗುತ್ತದೆ ...

ಲಾಡು : ಮನೆಯಲ್ಲಿ ಮಂಗಳ ಕಾರ್ಯಗಳು ಹೆಚ್ಚಾಗಿ ನಡೆಯುತ್ತದೆ,  ವಿವಾಹ ಭಾಗ್ಯವಾಗುತ್ತದೆ ...

ಕರಿಗಡುಬು : ಸರ್ವರಿಗೂ ಆರೋಗ್ಯ ಭಾಗ್ಯ , ಮತ್ತು ಲಕ್ಷ್ಮೀ ಪ್ರಾಪ್ತಿ..

ಅಪ್ಪಂ ಅಥವಾ ಕಜ್ಜಾಯ : ಹಿರಿಯರ ಶಾಪ ನಿವಾರಣೆ, 

ಒಬ್ಬಟ್ಟು : ಕುಜದೋಷ ನಿವಾರಣೆಯಾಗುತ್ತದೆ,  ವಿವಾಹದ ದೋಷಗಳು ನಿವಾರಣೆಯಾಗುತ್ತದೆ ...

ಬೆಲ್ಲದ ಅಚ್ಚು ; ಕುಲದೇವರ ಬಲ, ದಾರಿದ್ರ್ಯ ನಿವಾರಣೆ, ಇಷ್ಟಾರ್ಥ ಸಿದ್ಧಿ, ಶುಗರ್ control, ಆಗುತ್ತೆ, ಅಧಿಕ ಲಾಭವಾಗುತ್ತೆ, ಅಪಮೃತ್ಯು ನಿವಾರಣೆಯಾಗುತ್ತದೆ ..

ಪಂಚಕಜ್ಜಾಯ : ಸಕಲ ಗ್ರಹ ಕಾಟ ನಿವಾರಣೆ, ಉದ್ಯೋಗ ಭಾಗ್ಯ,
ಇಷ್ಟಾರ್ಥ ಸಿದ್ಧಿ,
ಶನಿ ದೋಷ, ರಾಹು ದೋಷ ನಿವಾರಣೆ, .. ಸರ್ವತಾ ಅಭಿವೃದ್ಧಿ..
....

ಚಿಗಳಿ : ಮನೆಯಲ್ಲಿ ಸ್ತ್ರೀಯರ  ಸಮಸ್ಯೆಗಳು ದೂರವಾಗುತ್ತವೆ, ಮುಟ್ಟಿನ ದೋಷಗಳು ನಿವಾರಣೆಯಾಗುತ್ತದೆ..

ಸಜ್ಜಿಗೆ : ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ, ಶುಭಸಮಾಚಾರ ಕೇಳಿ ಬರುತ್ತದೆ.

ಚಕ್ಕುಲಿ : ವ್ಯಾಪಾರಿಗಳಿಗೆ ಅಧಿಕವಾದ ವ್ಯಾಪಾರವಾಗಿ ಧನಲಾಭವಾಗುತ್ತದೆ.., ಕಬ್ಬಿಣಕ್ಕೆ ಸಂಭಂದಿಸಿದ ವ್ಯಾಪಾರಸ್ಥರಿಗೆ ಅತ್ಯತ್ತಮವಾಗಿರುತ್ತದೆ..
by Girish Sharma
Whatsapp collection
ಗಣಪತಿ ವ್ರತ ಮತ್ತು ಕೆಲವು ವಿಷಯಗಳು...

೧. ಎಲ್ಲಾ ವ್ರತಗಳಿಗಿಂತ ಅಗ್ರಗಣ್ಯವಾಗಿರುವ ಪೂಜೆ.., 
ಪ್ರಾಯಶ್ಚಿತ್ತ ಸಂಕಲ್ಪದಿಂದ ಪ್ರಾರಂಭ ಮಾಡಿ.., ಸಂಕಲ್ಪಕ್ಕೆ ಮುಂಚೆ..

೨. ಗಣಪತಿಯು ಆದಷ್ಟೂ ಬೆಳ್ಳಿ ಅಥವ ಮಣ್ಣಿನ ಗಣಪತಿ ತುಂಬಾ ಶ್ರೇಷ್ಟ..
ದೂರ್ವಾ ಸಗಣಿ ಗಣಪತಿ ಮಹಾಶ್ರೇಷ್ಟ...

೩. ಮನೆಯ ಹಿರಿಯರ ಆಶೀರ್ವಾದದೊಂದಿಗೆ ವ್ರತಾರಂಭ ಮಾಡಿ..

೪. ಗಣಪತಿಯು ರಕ್ತಾಂಭರದಾರಿ ಎನಿಸುವುದರಿಂದ, ಗಣಪತಿಗೆ ಅರ್ಪಿಸುವ ವಸ್ತ್ರವನ್ನು, ಕುಂಕುಮದಿಂದ ಕೆಂಪಾಗಿಸಿದ, ವಸ್ತ್ರದ್ವಯವನ್ನೇ ಅರ್ಪಿಸಬೇಕು...

೫. ಗಣಪತಿಗೆ ತುಲಸೀ ಪೂಜೆ ಮಾಡಬಾರದು, ಎಂಬ ನಿಯಮ ಇದೆ..
ಆದರೆ ವ್ರತಗಳಲ್ಲಿ ಖಂಡಿತಾ ಮಾಡಬಹುದು, ನಿಷೇಧ ಇಲ್ಲ....

೬. ವಾಯನದಾನಕ್ಕೆ ಎರಡು ತೆಂಗಿನಕಾಯಿ, ಐದು ವೀಳ್ಯದೆಲೆ, ಐದು ಅಡಿಕೆ, ಅರ್ಧ ಸೇರು ಅಕ್ಕಿ, ಹಣ್ಣು ಮತ್ತು ಭಕ್ಷ್ಯಗಳ ಜೊತೆಗೆ ಇಟ್ಟು, ಎರಡು ಬಾಳೆ ಎಲೆ ಮುಚ್ಚಿ, ಬ್ರಾಹ್ಮಣರನ್ನು ಪೂರ್ವಕ್ಕೆ ಕೂಡಿಸಿ,  ದಾನಿಯು ಉತ್ತರಕ್ಕೆ ಮುಖ ಮಾಡಿ, ಸಂಕಲ್ಪ ಮಾಡಿ ದಾನ ಮಾಡಬೇಕು ...

೭. ಆಚಮನವನ್ನು ಮಾಡುವಾಗ ಪ್ರತಿಯೊಂದು ಸಾರಿಯೂ ಒಂದೊಂದು ನಾಮಕ್ಕೂ, ನಮ್ಮ ದೇಹದ ವಿವಿಧ ಅಂಗವನ್ನು ಸ್ಪರ್ಶಿಸಬೇಕು.., ನಮ್ಮ ಶರೀರದ ಪ್ರತಿಯೊಂದು ಅಂಗಾಂಗದಲ್ಲೂ ಪರಮಾತ್ಮನು ನೆಲೆಸಿದ್ದಾನೆ ಎಂದು ಸೂಚಿಸುವ ಉದಾತ್ತ ತತ್ವವೇ ಆಚಮನ...
ಕೆಲವರು ವ್ರತ ಪ್ರಾರಂಭದಲ್ಲಿ ಮಾತ್ರ ಮಾಡಿ, ನಂತರ ಸುಮ್ಮನೆ ಮಂತ್ರ ಹೇಳಿಕೊಳ್ಳುತ್ತಾರೆ, ಇದು ತಪ್ಪು....

೮. ಮನೆಯಲ್ಲಿ ವ್ರತದ ದಿನ, ಹಗಲಿನಲ್ಲಿ ಮಲಗಬಾರದು, (ಅನಾರೋಗ್ಯಸ್ಥರೂ ಮತ್ತು ವಯಸ್ಸಾದವರು ಮಲಗಬಹುದು)..

೯. ಹಸೀ ಹಾಲನ್ನೇ ಪೂಜೆಗೆ ಬಳಸಬೇಕು..

೧೦. ನುಚ್ಚಿಲ್ಲದ ಅಕ್ಕಿಯಿಂದ ಅಕ್ಷತೆಯನ್ನು ಮಾಡಿಟ್ಟುಕೊಳ್ಳಿ...

೧೧. ಗಣಪತಿಗೆ..
ಬೆಲ್ಲದ ಅಚ್ಚು / ಪಂಚಕಜ್ಜಾಯ/ ಮೋದಕ/ ಲಾಡು / ಕರಿಗಡುಬು/  
ನೇರಳೆಹಣ್ಣು, ಬೇಲದ ಹಣ್ಣು, ಸೀಬೆಹಣ್ಣು, ಒಣದ್ರಾಕ್ಷಿ, ಖರ್ಜೂರ, ಚಿಗಳಿ, ತೆಂಬಿಟ್ಟು, ಕಜ್ಜಾಯ, .....
...... ಇತ್ಯಾದಿ ..
ತುಂಬಾ ಇಷ್ಟ ಮತ್ತು ಶ್ರೇಷ್ಠ..! 

೧೨.ಬೆಳ್ಳಿಗಣಪತಿಯನ್ನು ಮೊದಲು ನೀರಿಗೆ ಚೂರು ಗೋವು ಮೂತ್ರ ಹಾಕಿ ಶುದ್ಧ ಮಾಡಿ, ನಂತರ ಅರಿಸಿನದ ನೀರಿನಿಂದ ಶುದ್ಧ ಮಾಡಿ, ಪೂಜೆಗೆ ಇಟ್ಟುಕೊಳ್ಳಿ...

೧೩. ೨೧ ಗರಿಕೆಯ, ೨೧ ಕಟ್ಟುಗಳುಳ್ಳ, ಹರಿಸಿನ ಅಥವ ಗಂಧ ಹಚ್ಚಿದ ದಾರದಿಂದ, ಹಾರ ಮಾಡಿ, ಹಾಕಿದರೆ ತುಂಬಾ ವಿಶೇಷ ಫಲ..
ಸಾಧ್ಯವಾಗದವರು ೩೩ ಗರಿಕೆಗಳನ್ನು ಕೈಯಲ್ಲಿ ಹಿಡಿದು..
ಶುಕ್ಲಾಂಭರದರಂ.....................
.................
..............ವಿಘ್ನೋಪ ಶಾಂತಯೇ||
ಈ ಶ್ಲೋಕ ೩೩ ಸಾರಿ ಹೇಳಿ ಗಣಪತಿಗೆ ಅರ್ಪಿಸಿ, ತುಂಬಾ ವಿಶೇಷ...

೧೪. ಪತ್ರೆಗಳು : 
a. ಗರಿಕೆ : ಇಷ್ಟಾರ್ಥ ಸಿದ್ಧಿ, ಪೂಜೆಯ ನಂತರ ಗರಿಕೆಯನ್ನು ಹಣವಿಡುವ ಜಾಗದಲ್ಲಿ ಇಡಿ, ಮತ್ತು 9 ಗರಿಕೆಯನ್ನು ಕುಡಿಯೋ ನೀರಿಗೆ ಹಾಕಿ...
ಶನೇಶ್ವರ ದೋಷ, ಸಾಡೇಸಾತ್ ನಡೆಯುತ್ತಿರೋರು, ಗರಿಕೆಯಿಂದ ಪೂಜೆ ಮಾಡಿ..

೨. ದವನ ಪತ್ರೆ : ಸಕಲ ಕಾರ್ಯ ಸಿದ್ಧಿ, ಕೆಲಸದಲ್ಲಿ ಯಾವ ತೊಂದರೆ ಬರದೇ, ಅಧಿಕ ಲಾಭವಾಗುತ್ತದೆ ..

೩. ಬಿಲ್ವಪತ್ರೆ : ಋಣಭಾದೆ ರೋಗಭಾದೆ ನಿವಾರಣೆಯಾಗುತ್ತದೆ ..

೪. ಶಮೀ ಪತ್ರೆ : ಸಾಡೇಸಾತ್, ಅಷ್ಟಮ, ಪಂಚಮ, ಇತ್ಯಾದಿ ಶನಿದೋಷಗಳು ನಿವಾರಣೆಯಾಗುತ್ತದೆ ..
 
೫. ಅರಳೀ ಪತ್ರೆ : ಸಂತಾನವಾಗದವರಿಗೆ ಸಂತಾನ ಭಾಗ್ಯ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..,

೬. ಉತ್ತರಾಣಿ ಪತ್ರೆ : ವಿದ್ಯಾರ್ಥಿಗಳಿಗೆ ಅತ್ಯಂತ ಶುಭ, ಸಕಲ ವಿದ್ಯಾ ಬುದ್ದಿ ಯೋಗ..

೭. ದರ್ಬೆ : ಸಕಲ ಕೇತು ದೋಷ, ನಕ್ಷತ್ರ ದೋಷ ನಿವಾರಣೆಯಾಗುತ್ತದೆ ..
......... ಇತ್ಯಾದಿ....

೧೭. ಹೂವುಗಳು...
ಬಿಳಿ ಎಕ್ಕದ ಹೂವು : ಸಮಸ್ತ ರೋಗ ನಿವಾರಣೆ, ಆರೋಗ್ಯ ಭಾಗ್ಯ..

ದ್ರೋಣ ಪುಷ್ಪ : ಶತ್ರು ನಾಷ ಮತ್ತು ನೆಮ್ಮದಿ..

ತುಂಬೆ ಹೂವು : ದೈವಭಲ ಜಾಸ್ತಿಯಾಗುತ್ತದೆ, ಭಕ್ತಿ ಜಾಸ್ತಿ..

ಮಲ್ಲಿಗೆ ಹೂವು : ಸಮಸ್ತವಾದ ದೈಹಿಕ ಹಾಗೂ ಮಾನಸಿಕ ರೋಗ ನಿವಾರಣೆಯಾಗುತ್ತದೆ...

ಪಾರಿಜಾತ : ಸರ್ಪದೋಷ ನಿವಾರಣೆ ಮಾಡುತ್ತೆ..

ರುದ್ರಾಕ್ಷಿ ಹೂವು : ಎಷ್ಟೇ ಕಷ್ಟ ಬಂದರು ಜಯ ನಿಮ್ಮದಾಗುತ್ತೆ..

ಕಣಗಲೆ ಹೂವು : ಭಯ ಭೀತಿ ನಿವಾರಣೆ, ಮಾಂತ್ರಿಕ ಭಾದೆ ನಿವಾರಣೆ, ಹಾಗೂ ವಿದ್ಯಾಪ್ರಾಪ್ತಿ..

ಸೂರ್ಯಕಾಂತಿ : ಅಷ್ಟೈಶ್ವರ್ಯ ಪ್ರಾಪ್ತಿ, ಉದ್ಯೋಗ ಭಾಧೆ ನಿವಾರಣೆ..
..... ಇತ್ಯಾದಿ..
( ತುಂಬಾ ಇವೆ ಬರೆಯಲು ಸಾಧ್ಯವಾದಾಗ ತಿಳಿಸುತ್ತೇನೆ) 

ಹಣ್ಣುಗಳು : 
ಬಾಳೆಹಣ್ಣು : ಇಷ್ಟಾರ್ಥ ಸಿದ್ಧಿ,
ಯಾಲಕ್ಕಿ ಬಾಳೆಹಣ್ಣು : ನಿಂತು ಹೋದ ಕಾರ್ಯಗಳು ಮುಂದುವರಿಯುತ್ತದೆ,  ಶೀಘ್ರವಾಗಿ ನೆರವೇರುತ್ತದೆ ...

ಬಾಳೆಹಣ್ಣು ರಸಾಯನ : ಸಾಲದ ಭಾದೆ ನಿವಾರಣೆ, ಬರಬೇಕಾದ ಹಣ ಬರುತ್ತದೆ,
ಶುಭ ಕಾರ್ಯಕ್ಕೆ ಬೇಕಾದ ಹಣ ಮಂಜೂರ್ ಆಗಿ ಸಿಗುತ್ತದೆ ..

ಪೂರ್ಣಫಲ/ ತೆಂಗಿನಕಾಯಿ : ಕೆಲಸ ಕಾರ್ಯಗಳು ನಿಮ್ಮ ಮನಸ್ಸಿನಂತೆಯೇ ನೆರವೇರುತ್ತದೆ.., ಬಹಳ ಸುಲಭವಾಗಿ ಆಗುತ್ತದೆ, ಸಕಲ ಕಾರ್ಯ ದಿಗ್ವಿಜಯವಾಗುತ್ತದೆ..

೫. ಅಂಜೂರ : ಆರೋಗ್ಯಭಾಗ್ಯ, B.P,  ನಾರ್ಮಲ್ ಆಗುತ್ತದೆ.., 

ನೇರಳೆ ಹಣ್ಣು ; ಬೆನ್ನು ನೋವು, ಮಂಡೀ ನೋವು, ಸೊಂಟದ ನೋವು ವಾಸಿಯಾಗುತ್ತದೆ, ಶನಿಕಾಟ ನಿವಾರಣೆಯಾಗುತ್ತದೆ ..

ಸೀಬೆಹಣ್ಣು : ಎಲ್ಲರಿಂದಲೂ ರಾಜಗೌರವ, ಸತ್ಕಾರ ಸಿಗುತ್ತದೆ, ಉದರವ್ಯಾಧಿ ನಿವಾರಣೆಯಾಗುತ್ತದೆ ..
ವಿವಾಹ ಭಾಗ್ಯವಾಗುತ್ತದೆ..,
ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಧಿಕ ಲಾಭವಾಗುತ್ತದೆ ...
.......ಇತ್ಯಾದಿ ..

ಭಕ್ಷ್ಯಗಳು ; 
ಮೋದಕ : ಇಷ್ಟಾರ್ಥ ಸಿದ್ಧಿ ಮತ್ತು ಸಾಕ್ಷಾತ್ ಗಣಪತಿಯೇ ನಮ್ಮ ಮನೆಯನ್ನು ಕಾಯುತ್ತಾನೆ.., ಜಾತಕ ದೋಷಗಳು ನಿವಾರಣೆಯಾಗುತ್ತದೆ ...

ಲಾಡು : ಮನೆಯಲ್ಲಿ ಮಂಗಳ ಕಾರ್ಯಗಳು ಹೆಚ್ಚಾಗಿ ನಡೆಯುತ್ತದೆ,  ವಿವಾಹ ಭಾಗ್ಯವಾಗುತ್ತದೆ ...

ಕರಿಗಡುಬು : ಸರ್ವರಿಗೂ ಆರೋಗ್ಯ ಭಾಗ್ಯ , ಮತ್ತು ಲಕ್ಷ್ಮೀ ಪ್ರಾಪ್ತಿ..

ಅಪ್ಪಂ ಅಥವಾ ಕಜ್ಜಾಯ : ಹಿರಿಯರ ಶಾಪ ನಿವಾರಣೆ, 

ಒಬ್ಬಟ್ಟು : ಕುಜದೋಷ ನಿವಾರಣೆಯಾಗುತ್ತದೆ,  ವಿವಾಹದ ದೋಷಗಳು ನಿವಾರಣೆಯಾಗುತ್ತದೆ ...

ಬೆಲ್ಲದ ಅಚ್ಚು ; ಕುಲದೇವರ ಬಲ, ದಾರಿದ್ರ್ಯ ನಿವಾರಣೆ, ಇಷ್ಟಾರ್ಥ ಸಿದ್ಧಿ, ಶುಗರ್ control, ಆಗುತ್ತೆ, ಅಧಿಕ ಲಾಭವಾಗುತ್ತೆ, ಅಪಮೃತ್ಯು ನಿವಾರಣೆಯಾಗುತ್ತದೆ ..

ಪಂಚಕಜ್ಜಾಯ : ಸಕಲ ಗ್ರಹ ಕಾಟ ನಿವಾರಣೆ, ಉದ್ಯೋಗ ಭಾಗ್ಯ,
ಇಷ್ಟಾರ್ಥ ಸಿದ್ಧಿ,
ಶನಿ ದೋಷ, ರಾಹು ದೋಷ ನಿವಾರಣೆ, .. ಸರ್ವತಾ ಅಭಿವೃದ್ಧಿ..
....

ಚಿಗಳಿ : ಮನೆಯಲ್ಲಿ ಸ್ತ್ರೀಯರ  ಸಮಸ್ಯೆಗಳು ದೂರವಾಗುತ್ತವೆ, ಮುಟ್ಟಿನ ದೋಷಗಳು ನಿವಾರಣೆಯಾಗುತ್ತದೆ..

ಸಜ್ಜಿಗೆ : ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ, ಶುಭಸಮಾಚಾರ ಕೇಳಿ ಬರುತ್ತದೆ.

ಚಕ್ಕುಲಿ : ವ್ಯಾಪಾರಿಗಳಿಗೆ ಅಧಿಕವಾದ ವ್ಯಾಪಾರವಾಗಿ ಧನಲಾಭವಾಗುತ್ತದೆ.., ಕಬ್ಬಿಣಕ್ಕೆ ಸಂಭಂದಿಸಿದ ವ್ಯಾಪಾರಸ್ಥರಿಗೆ ಅತ್ಯತ್ತಮವಾಗಿರುತ್ತದೆ..

ಬುಧವಾರ, ಆಗಸ್ಟ್ 2, 2017

ಬ್ರಾಹ್ಮಣ, ಮುಸ್ಲೀಂ ಉಗ್ರವಾದ

ಬ್ರಾಹ್ಮಣ, ಮುಸ್ಲೀಂ ಉಗ್ರವಾದ , ಬುದ್ಧಿಜೀವಿಗಳು, ಸೂಕ್ಷ್ಮ   ಸಂವೇದನೆಗಳು.....
ಇದು ರವಿಬೆಳಗೆರೆ ಅವರು ಬರೆದ ಲೇಖನ
ಅಂತ ವಾಟ್ಸಪ್ನಲ್ಲಿ ಬಂದಿದ್ದು.ಯತಾವತ್ತಾಗಿ ದಾಖಲಿಸಿದೆ.
ಒಬ್ಬ ಬ್ರಾಹ್ಮಣ ಮತ್ತು ಒಂದು ನಾಗರಹಾವು ಏಕಕಾಲಕ್ಕೆ ಎದುರಿಗೆ ಬಂದರೆ ಮೊದಲು ಬ್ರಾಹ್ಮಣನನ್ನು ಕೊಲ್ಲು ಅಂದರು ಮಹಾನ್‌ ನಾಸ್ತಿಕ ಹೋರಾಟಗಾರ ಪೆರಿಯಾರ್‌!’ಅಂತ ಬರೆದ ಕನ್ನಡ ಲೇಖಕನ ಹೆಗಲ ಮೇಲೆ ಕೈಹಾಕಿ ಮುಗುಳ್ನಗುತ್ತಾ, ‘ಎಂಥ ಬ್ರೆೃಟ್‌ ರೈಟಿಂಗ್‌ ಕಣಯ್ಯಾ ನಿಂದೂ.. ! ಎಷ್ಟೊಂದು ಓದಿಕೊಂಡಿದೀಯಾ.. ’ ಅಂದರು. ಹಾಗಂದವರು ಬ್ರಾಹ್ಮಣರೂ ಆಗಿದ್ದರು!‘ಪುರೋಹಿತಶಾಹಿ ಮನಸ್ಥಿತಿ ನಿರ್ನಾಮವಾಗಬೇಕು! ಇವತ್ತಿನ ಸಮಾಜದ ಎಲ್ಲ ದುಷ್ಟತನ, ದೌರ್ಜನ್ಯ,ಶ್ರೇಣೀಕೃತ ವ್ಯವಸ್ಥೆಗೆ ಬ್ರಾಹ್ಮಣರೇ ಕಾರಣ! ಶತಶತಮಾನಗಳಿಂದ ಬ್ರಾಹ್ಮಣರು ನಮ್ಮನ್ನು ಶೋಷಿಸುತ್ತ ಬಂದಿದ್ದಾರೆ.. ’ ಅಂದರು. ಕೇಳಿಸಿಕೊಂಡವರು ಚಪ್ಪಾಳೆ ಹೊಡೆದರು.‘ಬ್ರಾಹ್ಮಣರು ಮಾಂಸ ತಿನ್ನೋಕೆ ಶುರುವಾದಾಗಿನಿಂದಲೇ ಮಾಂಸದ ರೇಟು ಜಾಸ್ತಿಯಾಯಿತು’ ಅಂದರು.ಬ್ರಾಹ್ಮಣರನ್ನು ಹೀಯಾಳಿಸಿ ನಾಟಕ ಬರೆದರು. ಸಿನಿಮಾ ತೆಗೆದರು. ಉತ್ತರ ದೇಶದಲ್ಲಿ ತಿಥಿ ಮಾಡಿಸುವ ಬ್ರಾಹ್ಮಣರನ್ನು ‘ಪಂಡ’ ಎನ್ನುತ್ತಾರೆ. ಹಾಗನ್ನುವುದಕ್ಕೆ ಮೂಲ ಕಾರಣ ‘ಷಂಡ’ ಎಂಬುದು ಅಂದರು. ಬ್ರಾಹ್ಮಣನ ಬುದ್ಧಿವಂತಿಕೆ ಅಂದರೆ, ಅದು ಕುತಂತ್ರ ಅಂದರು. ಆಚಾರಿ,ಪೂಜಾರಿ, ಭಟ್ಟ, ಶಾಸ್ತ್ರೀ, ಅಯ್ಯಂಗಾರಿ, ಪುಳಿಚಾರು -ಇವೆಲ್ಲವೂ ಲೇವಡಿಯ ,ಗೇಲಿಯ, ಅಪಹಾಸ್ಯದ ಶಬ್ದಗಳಾದವು.‘ಈ ನಾಡಿನ ದಲಿತ, ಹಿಂದುಳಿದ, ಅಲ್ಪಸಂಖ್ಯಾತರೆಲ್ಲ ಒಂದಾಗಬೇಕು’ ಅಂದರು.ಬ್ರಾಹ್ಮಣರಲ್ಲಿರುವ ಸ್ಮಾರ್ತ, ವೈಷ್ಣವ, ಶ್ರೀವೈಷ್ಣವರು ಒಂದು ಕಡೆ ಸೇರಿ ‘ಬ್ರಾಹ್ಮಣ ಸಭಾ’ ಕಾರ್ಯಕ್ರಮ ಮಾಡುತ್ತೇವೆ ಅಂದರೆ -‘ದುಷ್ಟರೆಲ್ಲ ಒಂದಾಗಿ ಬಿಟ್ಟಿರಿ’ ಅಂದರು. ಬ್ರಾಹ್ಮಣ ಮತ್ತು ಬ್ರಾಹ್ಮಣ್ಯಗಳೆರಡೂ ನಮ್ಮ ಕ್ರಾಂತಿಕಾರಿಗಳ ಕಣ್ಣಿಗೆ ಎಲ್ಲ ಶತಮಾನಗಳಲ್ಲೂ ಅಪಾಯಕಾರಿಗಳಾಗಿ, ಶೋಷಣೆ ಮಾಡುವವರಾಗಿ, ಯಾವತ್ತೂ ಕೈಗೆ ಸಿಕ್ಕರೂ ಒದೆಯ ಬೇಕಾದವರಾಗಿ ಕಾಣಿಸಿದರು.‘ನೀವು ಶತಶತಮಾನಗಳಿಂದ ಮಾಡುತ್ತ ಬಂದಿದ್ದ ಶೋಷಣೆಗೆ ಇವತ್ತು ನಿಮ್ಮ ತಲೆಮಾರು ಕಂದಾಯ ಕಟ್ಟಲೇ ಬೇಕು ’ ಅಂದರು. ‘ಇಕ್ರಲಾ’ ಅಂದರು. ‘ಒದೀರಲಾ’ಅಂದರು!ಫೈನ್‌. ಅವೆಲ್ಲವೂ ಕ್ರಾಂತಿಕಾರಿಯಾಗಿ ಕಾಣಿಸಿದವು.ಒಬ್ಬ ಮುಸಲ್ಮಾನನನ್ನು ನಿಲ್ಲಿಸಿ?ಕವಿ ಕೆ.ಎಸ್‌.ನಿಸಾರ್‌ ಅಹಮದ್‌ರೊಬ್ಬರನ್ನು ಬಿಟ್ಟರೆ,ಕನ್ನಡದಲ್ಲಿ(ಅದೂ ಕರಾವಳಿಯಲ್ಲಿ) ಯಾವುದೇ ಮುಸ್ಲಿಂ ಗಂಡು ಅಥವಾ ಹೆಣ್ಣು ಪದ್ಯ ಬರೆದರೆ, ಕತೆ, ಕಾದಂಬರಿ ಬರೆದರೆ ‘ಅವರದು ಮುಸ್ಲಿಂ ಸಂವೇದನೆಯಿರುವ ಕ್ರಿಯಾಶೀಲತೆ ’ ಅಂದರು. ಅಪ್ಪಿ ತಪ್ಪಿ ಕೂಡ ಹಿಂದೂ ಸಂವೇದನೆಯನ್ನು ಇವರು ಗೌರವಿಸಿ ಮಾತನಾಡಲಿಲ್ಲ.ಬ್ರಾಹ್ಮಣ ಲೇಖಕ ಜಾತಿ ಬಿಟ್ಟು ಮದುವೆಯಾದರೆ, ಮಾಂಸ ತಿನ್ನುವುದನ್ನು ರೂಢಿಸಿಕೊಂಡರೆ, ತನ್ನದೇ ಮನೆಯಲ್ಲಿ ಜಾತ್ಯಂತರ ವಿವಾಹ ನಡೆಸಿಕೊಟ್ಟರೆ ಅದನ್ನು ‘ಲಿಬರೇಟೆಡ್‌ ಮೈಂಡ್‌’ ಅಂದರು. ‘ಜಾತಿ ವಿನಾಶವಾಗಿ ಸಮಸಮಾಜ ಬರಬೇಕಾದರೆ ಮೇಲ್ಜಾತಿಯವರು ಕೆಳಜಾತಿಯವರನ್ನು ಮದುವೆಯಾಗಬೇಕು’ ಅಂದರು. ಹಿಂದೂ ಹುಡುಗಿ, ಒಬ್ಬ ಮುಸ್ಲಿಂ ಯುವಕನೊಂದಿಗೆ ಓಡಿ ಹೋದರೆ ‘ಅದು ಕ್ರಾಂತಿಕಾರಿ ಘಟನೆ’ ಅಂದರು.ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿ ತನ್ನೊಂದಿಗೆ ಬರಲು ಒಪ್ಪದಿದ್ದಾಗ ಅವಳನ್ನು ಕೊಂದು ಹಾಕಿದರೆ‘ಯಾರೋ ಒಬ್ಬ ಮುಸಲ್ಮಾನ ತಪ್ಪು ಮಾಡಿದನೆಂದು,ನೀವು ಎಲ್ಲಾ ಮುಸಲ್ಮಾನರನ್ನೂ ದ್ವೇಷಿಸಿದರೆ ಹೇಗೆ?ನಿಮ್ಮದು ಮನು ಪೀಡಿತ ಮನಸ್ಸು ’ ಅಂದರು. ಮದರಸಾಗಳಿಂದ ಎದ್ದು ಹೋದ ಪಾನ್‌ ಇಸ್ಲಾಮಿಕ್‌ ಪ್ರೇರಿತ ಯುವಕರು ಸೆಂಟ್ರಲ್‌ ಮಾರ್ಕೆಟ್ಟಿನಲ್ಲಿ ಬಾಂಬು ಸಿಡಿಸಿ ಹಿಂದೂ-ಮುಸ್ಲಿಂರೆನ್ನದೆ ನೂರಾರು ಜನರನ್ನು ಕೊಂದು ಹಾಕಾದಾಗ, ‘ಅವರು ವಿದ್ಯೆಯಿಂದ ವಂಚಿತರಾದ ಅಮಾಯಕರು. ಅವರನ್ನು ದ್ವೇಷಿಸುವುದಕ್ಕಿಂತ, ಅವರು ಹಿಂದೂ ಬಹುಸಂಖ್ಯಾತರ ಮಧ್ಯೆ ಅನುಭವಿಸುತ್ತಿರುವ ಅಭದ್ರತೆಯನ್ನ, ಇನ್‌ಸೆಕ್ಯೂರಿಟಿಯನ್ನ ನಾವು ಅರ್ಥಮಾಡಿಕೊಳ್ಳಬೇಕು!’ ಅಂದರು.ಇವತ್ತಿನ ತನಕ ಚಂದ್ರಶೇಖರ ಪಾಟೀಲ, ಲಂಕೇಶ್‌,ಅನಂತಮೂರ್ತಿ, ದೇವನೂರ ಮಹಾದೇವ, ಸಿದ್ಲಿಂಗಯ್ಯ ಅಥವಾ ಮತ್ಯಾವುದೇ ಹೆಸರಾಂತ ಕನ್ನಡ ಲೇಖಕನೂ ಮುಸ್ಲಿಂರ ಪೈಕಿ ಒಬ್ಬೇ ಒಬ್ಬ ಮುಸಲ್ಮಾನನ್ನು ನಿಲ್ಲಿಸಿ, ‘ನೀನು ನಿನ್ನ ಜಾತಿಯ ನಿರ್ಗತಿಕರನ್ನು ಶೋಷಣೆ ಮಾಡ್ತಿದೀಯ. ಕಾಂಡೋಮ್ನ ಬಳಸಬೇಡಿ ಅಂತ ಬೋಧಿಸಿ ಬಡತನ ಹೆಚ್ಚಿಸುತ್ತಿದ್ದೀಯ. ಸೈನ್ಸ್‌ ಓದಿಕೊಳ್ಳಲು ಬಿಡದೆ ನಿನ್ನ ಮಕ್ಕಳಿಗೆ ಅರಬ್ಬಿ-ಫಾರ್ಸಿ ಕಲಿಸುತ್ತಿದ್ದೀಯ. ನೀನೊಬ್ಬ ಶೋಷಕ. ಬ್ರಾಹ್ಮಣರ ಜುಟ್ಟಿನಂತೆಯೇ ನಿನ್ನ ಗಡ್ಡ ಕೂಡ ಶೋಷಕ ಧರ್ಮದ ಸಂಕೇತ!’ ಅಂತ ಹೇಳಿಲ್ಲ.ಒಂದು ಕಡೆಯಿಂದ ಲೆಕ್ಕ ಹಾಕುತ್ತ ಬಂದರೆ, ಜಾತಿ ನಾಶದ ಪ್ರಯತ್ನ-ಕ್ರಾಂತಿಕಾರಿ ನಿಲುವುಗಳು, ಸಮಸಮಾಜದ ನಿರ್ಮಾಣ ಪ್ರಯತ್ನ, ಪುರೋಹಿತ ಶಾಹಿ ವಿರೋಧಿ ಹೋರಾಟ, ಉಳಿದವರಿಗಿಂತ ಮೊದಲು ನಾವು-ನಾವು ನಮ್ಮ ಜಾತಿಗಳನ್ನು ಕಳೆದುಕೊಳ್ಳಬೇಕು ಎಂಬ ಉದಾತ್ತ ಚಡಪಡಿಕೆ -ಇವೆಲ್ಲ ಆರಂಭವಾಗಿ ನಲವತ್ತು ವರ್ಷಗಳೇ ಆದವು. ನೂರಾರು, ಸಾವಿರಾರು ಬ್ರಾಹ್ಮಣರು ಜಾತಿ ಧಿಕ್ಕರಿಸಿ ಲಿಬರೇಟ್‌ ಆದರು. ಮಾಂಸ ತಿಂದರು. ಜಾತ್ಯಂತರ ವಿವಾಹಗಳಾದರು. ತಮ್ಮದೇ ಜಾತಿಯ ಮಡಿ ಹೆಂಗಸರನ್ನು ಧಿಕ್ಕರಿಸಿದರು. ಅವಹೇಳನ ಮಾಡಿ ಬರೆದರು.ಹಂದಿ ತಿಂದರಾ?ಇಷ್ಟಾಯಿತಲ್ಲ? ಈ ನಲವತ್ತು ವರ್ಷದ ಕ್ರಾಂತಿ ಪಥದಲ್ಲಿ,ಬದಲಾವಣೆಯಲ್ಲಿ, ಸಂಕ್ರಮಣದಲ್ಲಿ ಒಬ್ಬೇ ಒಬ್ಬ ಮುಲ್ಲಾ ಅಥವಾ ಒಬ್ಬೇ ಒಬ್ಬ ಮುಸಲ್ಮಾನ ಕುರಾನದ ವಿರುದ್ಧ,ಸುನ್ನಿ ಅಥವಾ ಷಿಯಾ ಸಂಪ್ರದಾಯಗಳ ವಿರುದ್ಧ ಮಾತಾಡಿದುದನ್ನು ಕೇಳಿದ್ದೀರಾ? ಒಬ್ಬ ಕ್ರಾಂತಿಕಾರಿ ಮುಸಲ್ಮಾನ ತನ್ನ ಮನೆಯಲ್ಲಿ ಜಾತ್ಯಂತರ ವಿವಾಹ ಮಾಡಿಸಿದುದನ್ನು ನೋಡಿದ್ದೀರಾ? ಒಬ್ಬೇ ಒಬ್ಬ ಲಿಬರಲ್‌ ಮುಸಲ್ಮಾನ ಹಂದಿ ತಿನ್ನುವುದಾಗಿ ಘೋಷಿಸಿದುದು ನಿಮ್ಮ ಗಮನಕ್ಕೆ ಬಂದಿದೆಯೇ?ಬ್ರಾಹ್ಮಣರಲ್ಲಿ, ಹಿಂದೂ ದೇಶದ ಮತ್ಯಾವುದೇ ಮೇಲು ಜಾತಿಗಳಲ್ಲಿ ಆದ ಯಾವ ಬದಲಾವಣೆಯೂ ಮುಸ್ಲಿಮ್‌ ಪುರೋಹಿತಶಾಹಿಯಲ್ಲಿ ಆಗಿಲ್ಲ. ಅಟ್‌ ಲೀಸ್ಟ್‌, ನಿಮ ಸಾಹಿತ್ಯ-ಭಾಷಣಗಳಿಂದಾಗಿ ಆಗಿಲ್ಲ. ಅಲ್ಲಿ ಬಂಡಾಯದ ಬಾವುಟ ಏಳಲಿಲ್ಲ.ಗಮನಿಸಿ ನೋಡಿದರೆ, ಉಳಿದ ಮಡಿವಂತರಿಗಿಂತ ತೀವ್ರವಾಗಿ, ಭಯಂಕರವಾಗಿ ಮುಸ್ಲಿಮರಲ್ಲಿ ಅನೇಕರು ಆತಂಕಕಾರಿ ಉಗ್ರ ಇಸ್ಲಾಮಿಕ್‌ ಚಳವಳಿಯ ಕಡೆಗೆ ಆಕರ್ಷಿತರಾದರು. ಬ್ರಾಹ್ಮಣರಿಗಿಂತ, ಲಿಂಗಾಯಿತರಿಗಿಂತ,ವಕ್ಕಲಿಗರಿಗಿಂತ ಹೆಚ್ಚು ಉತ್ಸಾಹದಿಂದ ತಮ್ಮ ಧಾರ್ಮಿಕ ಮೂಲವನ್ನು ಅಸರ್ಟೈನ್‌ ಮಾಡಿಕೊಂಡರು. ಒಸಾಮಾ ಬಿನ್‌ ಲ್ಯಾಡೆನ್‌ ಮಾಡಿದ್ದು ಸರಿಯೆಂದರು, ಅವನ ಪರವಾಗಿ ಬೀದಿಗಳಿದರು.ಇವತ್ತು ಇಡೀ ಪ್ರಪಂಚಕ್ಕೆ ತಲೆ ನೋವಾಗಿರುವುದು ಪಾಕ್‌ ಇಸ್ಲಾಮಿಕ್‌ ಉಗ್ರವಾದವೇ ಹೊರತು ಬ್ರಾಹ್ಮಣರಲ್ಲ,ಆರೆಸ್ಸೆಸ್ಸಲ್ಲ, ಹಿಂದೂ ಐಕಮತ್ಯವಲ್ಲ, ಬಿಜೆಪಿ ಅಲ್ಲವೇ ಅಲ್ಲ. ಆದರೆ ಯಾರೂ ಕೂಡ ಮುಸ್ಲಿಂ ಉಗ್ರವಾದವನ್ನು ಬೆಂಬಲಿಸುವ ಮುಲ್ಲಾನನ್ನು ನಿಲ್ಲಿಸಿ ‘ಏನ್ರಯ್ಯಾ ನೀವು ಮಾಡ್ತಿರೋದು .. ’ ಅಂತ ಗದರಿಸಿ ಕೇಳಲಿಲ್ಲ.`ಏನೋ ಬ್ರಾಹ್ಮಣಾ.. ಪುಳಿಚಾರೂ! ಅಂದವರು ಒಂದೇ ಒಂದು ಸಲ ಮುಸ್ಲಿಮರ ಗಡ್ಡದ ಬಗ್ಗೆ, ತುಂಡರಿಸಿದ ಅಂಗದ ಬಗ್ಗೆ, ಮುಸ್ಲಿಂ ಮೌಢ್ಯದ ಬಗ್ಗೆ ಮಾತನಾಡಿದ್ದಿದ್ದರೆ ಇಷ್ಟೆಲ್ಲ ರಗಳೆಯಾಗುತ್ತಿರಲಿಲ್ಲ. ಜಾತಿ ನಾಶಬಯಸುವವರು ಎಲ್ಲ ಜಾತಿಗಳ ನಾಶವನ್ನೂ ಬಯಸಬೇಕು.ನಿಜ ಹೇಳಬೇಕೆಂದರೆ, ಮುಸ್ಲಿಮರು ಭಾರತದ ಮೇಲೆ ದಂಡೆತ್ತಿ ಬಂದು ನಾನಾ ನಗರ, ಊರು, ದೇಗುಲ, ವ್ಯಕ್ತಿಗಳ ಮೇಲೆ ಅನಾಚಾರ ಮತ್ತು ಅತ್ಯಾಚಾರ ಮಾಡಿದರು ಅಂದ ಇವತ್ತು ಅವರನ್ನು ಖಂಡಿಸಬೇಕಾಗಿಲ್ಲ. ಅದಕ್ಕೋಸ್ಕರ ಎಸ್.ಎಲ್.ಭೈರಪ್ಪ ಇಷ್ಟೆಲ್ಲ ಸಾಕ್ಷಿ ಹುಡುಕಿ `ಮುಸ್ಲಿಂ ಅತಿರೇಕವನ್ನು ಓದುಗರಿಗೆ ಸಾಬೀತು ಮಾಡಬೇಕಿಲ್ಲ.ಇತಿಹಾಸದಿಂದ ಅವರು ಒಂದೇ ಒಂದು ಗರಿ ಎತ್ತಿಕೊಂಡು ಬರಬೇಕಿರಲಿಲ್ಲ. ಇವತ್ತು ಮುಸ್ಲಿಂ ಭಯೋತ್ಪಾದನೆ, ಇವತ್ತು ವಿಜ್ಞಾನದೆಡೆಗೆ ಮುಸ್ಲಿಂ ಕರ್ಮಠರ ನಿಲುವು, ಇವತ್ತು ಮುಸ್ಲಿಂ ರಾಷ್ಟ್ರಗಳು ಇತರರೆಡೆಗೆ ತಳೆದಿರುವ ರಾಜಕೀಯ ನಿಲುವುಗಳು, ಇವತ್ತು ಮುಲ್ಲಾಗಳು ಬೋಧಿಸುವ ಮಡಿವಂತ ಇಸ್ಲಾಂ-ಹೇಗಿದೆಯೆಂದು ವಿಶ್ಲೇಷಿಸಿದ್ದರೆ ಸಾಕಿತ್ತು.ಜಾತಿಗಳನ್ನು ಧಿಕ್ಕರಿಸುವುದೇ ನಿಮ್ಮ ನಿಲುವಾಗಿದ್ದರೆ ಮುಸ್ಲಿಂ ಮಡಿವಂತಿಕೆಯನ್ನೂ ಧಿಕ್ಕರಿಸಿ. ಇಕ್ರಲಾ ಅನ್ನಿ,ವದೀರಲಾ ಅನ್ನಿ. ನಮ್ಮ ಹಂದೀನ ಮನೆಯೊಳಕ್ಕೆ ಬಿಟ್ಕಂಡು, ಅದರ ತಲೆ ನೇವರಿಸರಪ್ಪಾ ಅನ್ನಿ!ಗೀತೇ ನೀನು ಹೇತೆ!ಉಹುಂ, ಯಾವ ಕ್ರಾಂತಿಕಾರಿಯೂ ಅನ್ನುವುದಿಲ್ಲ.`ಭಗವದ್ಗೀತೇ, ನೀನು ಭಾರತದ ತುಂಬ ಹೇತೆ ಅಂತ ಪದ್ಯ ಬರೆದವರಿದ್ದಾರೆ. ಸೀತೆ ಹೋಗಿ ಲಕ್ಷ್ಮಣನ ಜೊತೆಗೆ ಮಲಗಬಯಸಿದ್ದಳು ಅಂತ ಬರೆದವರಿದ್ದಾರೆ. ಮಡಿವಂತ ಪ್ರಾಣೇಶಾಚಾರ್ಯರನ್ನು ಹೆಂಡತಿ ಸಾಯುತ್ತಿರುವ ಘಳಿಗೆಯಲ್ಲಿ ಶೂದ್ರ ಚಂದ್ರಿಯೊಂದಿಗೆ ಮಲಗಿಸಿದವರಿದ್ದಾರೆ.ಹಾಡಹಗಲೇ ಭಗವಂತನ ಫೋಟೋಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದವರಿದ್ದಾರೆ. ಶಂಕರಾಚಾರ್ಯರನ್ನು ರೌಡಿ ಷೀಟರ್ ಎಂಬಂತೆ ಚಿತ್ರಿಸಿದವರಿದ್ದಾರೆ. ಒಬ್ಬೇ ಒಬ್ಬ ಕ್ರಾಂತಿಕಾರಿ ತನ್ನ ಕೃತಿಯಲ್ಲಿ, ಕತೆಯಲ್ಲಿ, ಕವಿತೆಯಲ್ಲಿ ಭಗವದ್ಗೀತೆಗೆ ಅಂಥ ಮಾತುಗಳನ್ನ, ಪುರೋಹಿತನಿಗೆ ಬೈದ ಬೈಗುಳವನ್ನು,ಆರೆಸ್ಸೆಸ್ಸಿಗೆ ಮಾಡಿದ ಅವಹೇಳನವನ್ನು -ಕುರಾನ್‌ಗೆ,ಮುಲ್ಲಾಗೆ ಮತ್ತು ಜಮಾತ್-ಎ-ಇಸ್ಲಾಂಗೆ ಮಾಡಿದುದನ್ನು ತೋರಿಸುತ್ತೀರಾ?ಇವು ಪ್ರಶ್ನೆಗಳು.ಗೋಡ್ಸೆ ಎಂಬ ಹೆಸರುಇವತ್ತು ನಾವು ಕೇಳದಿದ್ದರೂ, ಸಾವಿರ ವರ್ಷಗಳ ನಂತರ ಇತಿಹಾಸ ಓದುತ್ತಾ ಕುಳಿತವನೊಬ್ಬ ಎದ್ದು ಹೋಗಿ ಅವರಪ್ಪನನ್ನು ಕೇಳುವ ಪ್ರಶ್ನೆಗಳು ಸಾಕಷ್ಟಿವೆ. ಜಗತ್ತಿನ ಯಾವುದೋ ಮೂಲೆಯಲ್ಲಿ ಆಗುವ ಅತಿಚಿಕ್ಕ ಕದಲಿಕೆಯನ್ನೂ ಅರ್ಥಮಾಡಿಕೊಳ್ಳಬಲ್ಲ, ವಿಶ್ಲೇಷಿಸಬಲ್ಲ ನಮ್ಮ ಬುದ್ಧಿಜೀವಿಗಳು, ಕ್ರಾಂತಿಕಾರಿಗಳು -ಮುಸ್ಲಿಂ ಉಗ್ರವಾದದ ವಿಷಯಕ್ಕೆ ಬಂದ ಕೂಡಲೇ ಸುಮ್ಮನಾಗಿಬಿಡುತ್ತಾರೆ. ಕ್ರೈಸ್ತ, ಬೌದ್ಧ, ಜೈನ, ಸಿಖ್, ಇಸ್ಲಾಂ -ಎಲ್ಲ ಧರ್ಮಗಳೂ ಸರಿ. ಹಿಂದೂ ಧರ್ಮವೊಂದು ಮಾತ್ರ ಸರಿಯಿಲ್ಲ ಎಂಬಂತೆ ಮಾತನಾಡುತ್ತಾರೆ.ಶಂಭೂಕನಂತಹ ವಿದ್ಯಾವಂತ, ಶ್ರದ್ಧಾವಂತನನ್ನು ಕೊಂದದ್ದಕ್ಕೆ ಅವತ್ತಿನ ಕ್ಷತ್ರಿಯ ರಾಮನು ಕಾರಣನಾದರೂ,ಇವತ್ತಿನ ಬೈಗುಳ ತಿನ್ನಬೇಕಾದವನು ಆರೆಸ್ಸೆಸ್ಸಿಗ ಮತ್ತು ಬ್ರಾಹ್ಮಣ. ಆದರೆ ಕೆಲವೇ ನೂರು ವರ್ಷಗಳ ಹಿಂದೆ ಸೋಮಾನಾಥ ದೇಗುಲದ ಮೇಲೆ ದಾಳಿ ಮಾಡಿದ,ಹಿಂದೂ ರಾಣಿಯರನ್ನು ಹೊತ್ತೊಯ್ದು ಮದುವೆಯಾದ ಮುಸ್ಲಿಮ? ಅವನನ್ನು ಚರ್ಚೆಗೆ ಎಳೆಯುವಂತಿಲ್ಲ! ಅವನು ಅಲ್ಪಸಂಖ್ಯಾತ. ಅವನು ಶೋಷಿತ. ಹೇಳಿಕೊಂಡರೆ ಒದ್ದುಗಿದ್ದಾರು ಅಂತ ಹೆದರಿ,ತನಗೆ ಯಾವ ತಲೆಮಾರಿನಲ್ಲಿ ರಕ್ತ ಸಂಬಂಧಿಯಲ್ಲದಿದ್ದರೂ, `ಗೋಡ್ಸೆ ಎಂಬ ಸರ್‌ನೇಮ್(ಅಡ್ಡ ಹೆಸರನ್ನು )ಬದಲಾಯಿಸಿಕೊಂಡ ಲಕ್ಷಾಂತರ ಚಿತ್ಪಾವನರಿದ್ದಾರೆ. ಅರವತ್ತು ವರ್ಷಗಳ ಹಿಂದೆ ಮಹಾತ್ಮಾ ಗಾಂಧಿಯನ್ನು ಕೊಂದ ನಾಥೂರಾಮನಿಗೂ ಅವರಿಗೂ ಸಂಬಂಧವೇ ಇಲ್ಲ. ಆದರೂ ಅವರು `ಗೋಡ್ಸೆ ಎಂಬ ತಮ್ಮ ಸರ್‌ನೇಮ್ ಧರಿಸಲೊಲ್ಲರು.ಹೀಗೆ ಹೆದರಿಕೊಂಡ ಒಬ್ಬೆ ಒಬ್ಬ ಮುಸ್ಲಿಮನನ್ನು ತೋರಿಸುತ್ತೀರಾ?ಮುಸ್ಲಿಂ ಸಂವೇದನೆಮಹ್ಮದ್ ಘಜ್ನಿಯ ಮಾತು ಬಿಟ್ಟು ಬಿಡಿ, ಮೊನ್ನೆ ಮೊನ್ನೆ ಭಾರತದ ವಿಮಾನ ಎತ್ತಿಕೊಂಡು ಹೋದದ್ದಕ್ಕೆ,ಕಾಶ್ಮೀರದಲ್ಲಿ ಮಕ್ಕಳನ್ನು ಕೊಂದದ್ದಕ್ಕೆ, ಪಂಡಿತರ ಹೆಂಗಸರನ್ನು ದೋಚಿದ್ದಕ್ಕೆ, ಪಾರ್ಲಿಮೆಂಟಿಗೆ ನುಗ್ಗಿ ಕೊಂದದ್ದಕ್ಕೆ, ಹೈದರಾಬಾದಿನಲ್ಲಿ ಬಾಂಬು ಸಿಡಿಸಿದ್ದಕ್ಕೆ -ಅವಮಾನದಿಂದ, ನೋವಿನಿಂದ, ಅದೆಲ್ಲ ಜವಾಬ್ದಾರಿಯನ್ನು ನನ್ನವರ ಪರವಾಗಿ ನಾನು ಹೊರುತ್ತೇನೆ ಅಂತ ತಲೆ ತಗ್ಗಿಸಿ ನಿಂತ ಒಬ್ಬ ಲಿಬರೇಟೆಡ್ ಮುಸ್ಲಿಮನನ್ನು ನನಗೆ ತೋರಿಸುತ್ತೀರಾ?`ನಿನ್ನ ತಾತ-ಮುತ್ತಾತ-ಎಂಟು ನೂರು ಸಾವಿರ ವರ್ಷಗಳ ಹಿಂದೆ ಬದುಕಿದ್ದ ನಿನ್ನ ತಾತನ ಮುತ್ತಾತನ ಮರಿತಾತ ಮಾಡಿದ ತಪ್ಪಿಗೆ, ಇವತ್ತು ನೀನು ಕಂದಾಯ ಕಟ್ಟಲೇ ಬೇಕು. ಹಾವು ಮತ್ತು ನೀನು ಒಟ್ಟಿಗೆ ಬಂದರೆ, ನಿನ್ನನ್ನು ಮೊದಲು ಕೊಂದು ಆನಂತರ ಹಾವನ್ನು ಕೊಲ್ಲುತ್ತೇವೆ : ಅಂಥ ನೀಚ ನೀನು ಎಂಬ ಮಾತನ್ನು ಅನ್ನಿಸಿಕೊಂಡವರು, `ಆಹಾ ಅವರದು ಮುಸ್ಲಿಂ ಸಂವೇದನೆಯಿರುವ ಮನಸ್ಸು ಅಂತ ಹೊಗಳಿಸಿಕೊಳ್ಳುವುದನ್ನು ನೋಡಿದಾಗ ಸುಮ್ಮನೆ ಇರುವುದು ಕಷ್ಟವಾಗುತ್ತದೆ. ಅಷ್ಟೆ!`ಏನೋ ಬ್ರಾಹ್ಮಣಾ.. ಪುಳಿಚಾರೂ! ಅಂದವರು ಒಂದೇ ಒಂದು ಸಲ ಮುಸ್ಲಿಮರ ಗಡ್ಡದ ಬಗ್ಗೆ, ತುಂಡರಿಸಿದ ಅಂಗದ ಬಗ್ಗೆ, ಮುಸ್ಲಿಂ ಮೌಢ್ಯದ ಬಗ್ಗೆ ಮಾತನಾಡಿದ್ದಿದ್ದರೆ ಇಷ್ಟೆಲ್ಲ ರಗಳೆಯಾಗುತ್ತಿರಲಿಲ್ಲ. ಜಾತಿ ನಾಶಬಯಸುವವರು ಎಲ್ಲ ಜಾತಿಗಳ ನಾಶವನ್ನೂ ಬಯಸಬೇಕು.ಕರ್ನಾಟಕದ ಮಟ್ಟಿಗೆ ಅದು ಆಗಲಿಲ್ಲ.
ಲೇಖಕರು : ರವಿ ಬೆಳೆಗೆರೆ

ಬಿ.ಎನ್. ರಾವ್"

PROUD TO BE BRAHMIN
ನಿಮಗೆ, ನಮಗೆ ಬಿ.ಆರ್. ಅಂಬೇಡ್ಕರ್ ಗೊತ್ತು. ಆದರೆ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತೊಬ್ಬ ವ್ಯಕ್ತಿ  "ಬಿ.ಎನ್. ರಾವ್" ರವರ ಬಗ್ಗೆ ಗೊತ್ತೆ? ಬಹುಶಃ ಗೊತ್ತಿರಲಿಕ್ಕಿಲ್ಲ. ನಿಮ್ಮ ಮನೆಯಲ್ಲಿ, ಕಚೇರಿಯಲ್ಲಿ, ಮಾರುಕಟ್ಟೆಯಲ್ಲಿ, ಹೊಟೆಲುಗಳಲ್ಲಿ ಅಥವಾ ಇನ್ನಾವುದೇ ಸ್ಥಳಗಳಲ್ಲಿ, ಯಾರನ್ನು ಬೇಕಾದರೂ ಕೇಳಿ; ಯಾರಿಗೂ ಈ ಹೆಸರಿನ ವ್ಯಕ್ತಿಯ ಪರಿಚಯ ಇಲ್ಲ. ಇವರ ಬಗ್ಗೆ ಅವರೆಲ್ಲೂ ಓದಿಲ್ಲವೆಂದು ಧೈರ್ಯದಿಂದ ಷರತ್ತನ್ನೂ ಕಟ್ಟಬಹುದು ! ಈಗ ಅವರ ಬಗ್ಗೆ  ಕೇಳಿ.
ಇವರ ಹೆಸರಿನ, ಎನ್ ಎಂದರೆ ನರಸಿಂಗ; ಬಿ ಎಂದರೆ ಬೆನಗಲ್ ಎಂದು.  ಬೆನಗಲ್, ಕಾರ್ಕಳ ಮಂಗಳೂರುಗಳ ಮಧ್ಯೆ ಇರುವ ಪುಟ್ಟದೊಂದು ಹಳ್ಳಿ. ಈ ಹಳ್ಳಿಯ ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಮನೆತನದಲ್ಲಿ ೧೮೮೭ರ ಫೆಬ್ರವರಿ ೨೬ರಂದು ಹುಟ್ಟಿದ ಮಗು, ನರಸಿಂಗ.
ಈ ವಂಶದ ಜನ ಪಾರ್ಸಿಗಳಿಗಿಂತಲೂ ಅಲ್ಪಸಂಖ್ಯಾತರು. ಇಡೀ ಜಗತ್ತಿನಲ್ಲಿ 30 ಸಾವಿರ ಚಿತ್ರಾಪುರ ಬ್ರಾಹ್ಮಣರಿದ್ದರೆ ಹೆಚ್ಚು. ಆದರೆ ಜಗತ್ತಿನಲ್ಲಿ ಬಹಳ ಹೆಸರು ಮಾಡಿದ ಇದೇ ಪಂಗಡದ ಮಹಾಮಹಿಮರನ್ನು ಪರಿಚಯಿಸಿಕೊಳ್ಳೋಣ : ದೇಶಭಕ್ತ ಕಾರ್ನಾಡ್ ಸದಾಶಿವರಾಯರು, ಕುದ್ಮುಲ್ ರಂಗರಾವ್, ಸಹಕಾರ ಕ್ರಾಂತಿಯ ಮೊಳಹಳ್ಳಿ ಶಿವರಾಯರು, ಪಂಜೆ ಮಂಗೇಶರಾಯರು, ಕಮಲಾದೇವಿ ಚಟ್ಟೋಪಾಧ್ಯಾಯ, ಗೌರೀಶ ಕಾಯ್ಕಿಣಿ, ಜಯಂತ್ ಕಾಯ್ಕಿಣಿ, ಪ್ರಕಾಶ್ ಪಡುಕೋಣೆ, ಸಂತೋಷ ಕುಮಾರ ಗುಲ್ವಾಡಿ, ಗಿರೀಶ ಕಾರ್ನಾಡ್.
ನರಸಿಂಗರಾವರ ತಂದೆ ರಾಘವೇಂದ್ರ ರಾಯರು ಸುತ್ತಮುತ್ತಲಿನ ಹಳ್ಳಿಗೆಲ್ಲ ಪ್ರಸಿದ್ಧ ವೈದ್ಯರು. ನರಸಿಂಗರಾಯರು ಮಂಗಳೂರಿನ ಕೆನರಾ ಶಾಲೆಯಲ್ಲಿ ಕಲಿಯುತ್ತಿದ್ದವರು ೧೯೦೧ರಲ್ಲಿ ನಡೆದ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಇಡೀ ಮದ್ರಾಸ್ ಪ್ರಾಂತ್ಯಕ್ಕೇ ಮೊದಲ ಸ್ಥಾನ ಪಡೆದು ಬಿಟ್ಟರು. ಅಲ್ಲಿಂದ ಮದ್ರಾಸಿಗೆ ಹೋಗಿ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜು ಸೇರಿದ್ದಾಯಿತು. ಅಲ್ಲಿ ಇಂಗ್ಲೀಷ್, ಸಂಸ್ಕೃತ ಮತ್ತು ಗಣಿತ ವಿಷಯಗಳನ್ನು ಅಭ್ಯಾಸ ಮಾಡಿ ಎಫ್ಎ ಪರೀಕ್ಷೆಯಲ್ಲಿ ಮತ್ತೆ ಇಡೀ ಪ್ರಾಂತ್ಯಕ್ಕೆ ಪ್ರಥಮ ಸ್ಥಾನ ಪಡೆದದ್ದೂ ಆಯಿತು. ವಿದ್ಯಾರ್ಥಿ ವೇತನ ಸಿಕ್ಕಿದ್ದರಿಂದ ನರಸಿಂಗ ರಾಯರು ಇಂಗ್ಲೆಂಡಿಗೆ ಹೋದರು. ಅಲ್ಲಿ ಟ್ರಿನಿಟಿ ಕಾಲೇಜಿನಲ್ಲಿ ಮೂರು ವರ್ಷ ಪದವಿ ವ್ಯಾಸಂಗ ಮಾಡಿ ೧೯೦೯ರಲ್ಲಿ ಟ್ರೈಪೋಸ್ ಪಾಸು ಮಾಡಿದರು. ಅದೇ ವರ್ಷ ಭಾರತೀಯ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದು ಅದನ್ನೂ ಪಾಸು ಮಾಡಿಕೊಂಡು ಆಗಿನ ಬ್ರಿಟಿಷ್ ಭಾರತದ ರಾಜಧಾನಿ ಕಲ್ಕತ್ತಕ್ಕೆ ನ್ಯಾಯಾಧೀಶನಾಗಿ ಆಯ್ಕೆಯಾಗಿ ಬಂದ ನರಸಿಂಗರಾಯರು ಆ ಕಾಲದಲ್ಲಿ ಮಾಡಿದ ಬಹು ದೊಡ್ಡ ಕೆಲಸವೆಂದರೆ ಭಾರತದ ಕಾನೂನು ಸಂಹಿತೆಯನ್ನು ಹೊಸದಾಗಿ ಬರೆದದ್ದು. ಬ್ರಿಟಿಷ್ ಸರಕಾರ ವಹಿಸಿದ್ದ ಈ ಕೆಲಸವನ್ನು ದಾಖಲೆಯ ಎರಡು ವರ್ಷದಲ್ಲಿ ಮುಗಿಸಿದ್ದಕ್ಕಾಗಿ ರಾಯರಿಗೆ ನೈಟ್-ಹುಡ್ ಬಿರುದು ಕೊಡಲಾಯಿತು. ಹೆಸರಿನ ಹಿಂದೆ ಸರ್ ಎಂಬ ಉಪಾಧಿ ಸೇರಿ ಕೊಂಡಿತು. ನಂತರ ಬ್ರಿಟಿಷ್ ಸರಕಾರವು ರಾಯರನ್ನು ಸಿಂಧ್ ಪ್ರಾಂತ್ಯಕ್ಕೆ ಕರೆಸಿಕೊಂಡಿತು. ಅಲ್ಲಿನ ನಗರ-ಹಳ್ಳಿಗಳಿಗೆ ನದಿ ನೀರಿನ ಹಂಚಿಕೆಯನ್ನು ಯಾವ ರೀತಿಯಲ್ಲಿ ಮಾಡಬೇಕೆಂಬುದಕ್ಕೆ ಅಧ್ಯಯನ ಮಾಡಿ ವರದಿ ನೀಡಬೇಕೆಂದು ಕೇಳಿಕೊಂಡಿತು. ನರಸಿಂಗರಾಯರು ಅದನ್ನೂ ಅತ್ಯಂತ ಶ್ರದ್ಧೆಯಿಂದ ಮಾಡಿ ವರದಿ ಒಪ್ಪಿಸಿದರು. ಗಣಿತದಲ್ಲಿ ಅಪ್ರತಿಮ ಪಂಡಿತರಾಗಿದ್ದ ಅವರು ಸುಮಾರು ಇಪ್ಪತ್ತು- ಮೂವತ್ತು ವರ್ಷಗಳ ಎಲ್ಲಾ ಅಂಕಿ-ಅಂಶಗಳನ್ನು ಒಟ್ಟು ಹಾಕಿ ಆಳವಾದ ಅಧ್ಯಯನ ಮಾಡಿ ಬರೆದ ಆ ವರದಿಯ ಆಧಾರದಲ್ಲೇ ಇಂದಿಗೂ ಭಾರತ-ಪಾಕಿಸ್ತಾನಗಳ ನಡುವೆ ನೀರಿನ ಹಂಚಿಕೆ ನಡೆಯುತ್ತಿದೆ. ಸದಾ ಬೆಂಕಿಯುಗುಳುವ ದೇಶಗಳ ಮಧ್ಯೆ ಕಳೆದ ಎಪ್ಪತ್ತು ವರ್ಷಗಳಲ್ಲಿ ನೀರಿನ ಹಂಚಿಕೆಯ ವಿಷಯದಲ್ಲಿ ಸಮಸ್ಯೆ ಉದ್ಭವವಾಗಿಲ್ಲವೆಂದರೆ ಅದಕ್ಕೆ ಕಾರಣ ನರಸಿಂಗ ರಾಯರ ದೂರದೃಷ್ಟಿ ಎನ್ನಲೇಬೇಕು.
ನದಿನೀರಿನ ವರದಿ ಕೊಟ್ಟ ಮೇಲೆ ಸರಕಾರ ಅವರನ್ನು ಮತ್ತೆ ಕಲ್ಕತ್ತಕ್ಕೆ ಕರೆಸಿ ಸುಪ್ರೀ೦ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿತು. ೧೯೪೪ರಲ್ಲಿ ಅವರು ಆ ಹುದ್ದೆಯಿಂದ ನಿವೃತ್ತಿ ಹೊಂದಿದ ನಂತರ  ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು! ೧೯೪೬ರಲ್ಲಿ, ಬ್ರಿಟಿಷ್ ಸರಕಾರ ಭಾರತಕ್ಕೆ ಅಧಿಕಾರ ಹಸ್ತಾಂತರಿಸುವುದು ಬಹುತೇಕ ಖಚಿತವಾದ ಮೇಲೆ ನರಸಿಂಗರಾಯರನ್ನು ಭಾರತದ ಸಂವಿಧಾನ ಸಮಿತಿಯ ಸಲಹೆಗಾರರನ್ನಾಗಿ ನೇಮಿಸಲಾಯಿತು. ತನ್ನ ಸೇವಾವಧಿಯಲ್ಲಿ ಸುಮಾರು ಮೂರು ದಶಕಗಳ ಕಾಲ ನ್ಯಾಯಾಂಗದಲ್ಲಿ ಕೆಲಸ ಮಾಡಿದ ಅವರಿಗಿಂತ ಸೂಕ್ತ ವ್ಯಕ್ತಿ ಬೇರಾರಿದ್ದಾರು? ನರಸಿಂಗರಾಯರು ಸರಕಾರ ಕೇಳಿಕೊಂಡಂತೆ ಸಂವಿಧಾನದ ಕರಡು ಸಿದ್ಧಪಡಿಸಿದರು. ಇದರಲ್ಲಿ ಒಟ್ಟು ೨೪೩ ವಿಧಿಗಳೂ ೧೩ ಅನುಚ್ಛೇದಗಳೂ ಇದ್ದವು. ಇದನ್ನು ಮುಂದಿಟ್ಟುಕೊಂಡು ಸಂವಿಧಾನ ಕರಡು ರಚನಾ ಸಮಿತಿಯು ಸಂವಿಧಾನವನ್ನು ಬೆಳೆಸುವ, ತಿದ್ದುವ, ಪರಿಷ್ಕರಿಸುವ ಕೆಲಸವನ್ನು ಕೈಗೆತ್ತಿ ಕೊಂಡಿತು. ರಾಯರು ಬರೆದ ಮೂಲ ಸಂವಿಧಾನಕ್ಕೆ ನಂತರ ಹಲವು ವಿಧಿಗಳನ್ನು ಸೇರಿಸಲಾಯಿತು. ಕೆಲವನ್ನು ಪರಿಷ್ಕಾರ ಮಾಡಲಾಯಿತು. ಮೊದಲ ಕರಡು ಪ್ರತಿಯನ್ನು ಅದು ಸಂಸತ್ತಿಗೆ ಸಲ್ಲಿಸಿದಾಗ ಅದರಲ್ಲಿ ೩೧೫ವಿಧಿಗಳೂ ೮ ಅನುಚ್ಛೇದಗಳು ಇದ್ದವು. ಕೊನೆಗೆ ಸಂಸತ್ತಿನ ಒಪ್ಪಿಗೆ ಪಡೆಯುವ ಸಮಯಕ್ಕೆ ಅದರಲ್ಲಿ ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ ಅವುಗಳ ಸಂಖ್ಯೆ ೩೯೫ಕ್ಕೆ ಏರಿತು. ತನ್ನ ಈ ಕರ್ತವ್ಯವನ್ನು ರಾಯರು ಒಂದೇ ಒಂದು ರುಪಾಯಿ ವೇತನ ಅಥವಾ ಸಂಭಾವನೆ ಪಡೆಯದೇ ಉಚಿತವಾಗಿ ನಡೆಸಿಕೊಟ್ಟರು ಎನ್ನುವುದು ಇನ್ನೊಂದು ಮಹತ್ವದ ಅಂಶ. ಸಂವಿಧಾನವನ್ನು ಪೂರ್ತಿ ಬರೆದವರೇ ಅಂಬೇಡ್ಕರ್ ಎಂಬ ತಪ್ಪು ಕಲ್ಪನೆ ಈಗ ಬೆಳೆದುಬಂದಿದೆ. ಬಹುಶಃ ಕಾಲಕಾಲಕ್ಕೆ ಜನರನ್ನು ಜಾತಿ ಆಧಾರದ ಮೇಲೆ ಓಲೈಸಿಕೊಂಡು ಬಂದ ರಾಜಕೀಯ ಪಕ್ಷಗಳೇ ಈ ಮಿಥ್ಯ ಚರಿತ್ರೆಗೆ ನೇರ ಹೊಣೆ ಎನ್ನಬಹುದು. ಸಂವಿಧಾನ ಆಂಗೀಕೃತವಾದ ಸುವರ್ಣ ಮಹೋತ್ಸವದ ಸಂದರ್ಭದಲ್ಲೂ ಅದರ ಮೂಲಕರಡನ್ನು ತಯಾರಿಸಿಕೊಟ್ಟ ಮೇಧಾವಿ, ಯಾರಿಗೂ ನೆನಪಾಗಿಲ್ಲವೆಂದರೆ ಅದು ಈ ಗಣರಾಜ್ಯದ ದುರಂತ !
ನರಸಿಂಗರಾಯರು, ಸಂವಿಧಾನದ ಕೆಲಸ ಮುಗಿಸಿದ ಮೇಲೆ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿಯಾಗಿ ಆಯ್ಕೆಯಾದರು. ಅದೇ ಸಮಯದಲ್ಲಿ ಬರ್ಮಾ ದೇಶ, ತನ್ನ ಸಂವಿಧಾನದ ಕರಡನ್ನು ಸಿದ್ಧಪಡಿಸಿ ಕೊಡಲು ರಾಯರನ್ನು ಕೇಳಿ ಕೊಂಡಿತು ! ಆ ಕೆಲಸವನ್ನೂ ಪೂರೈಸಿಕೊಟ್ಟ ರಾಯರು, ವಿಶ್ವಸಂಸ್ಥೆಯಲ್ಲಿ ಒಂದೊಂದೇ ಹುದ್ದೆಗಳನ್ನು ಏರುತ್ತಾಹೋಗಿ ೧೯೫೦ರಲ್ಲಿ ಅದರ ಸೆಕ್ಯುರಿಟಿ ಕೌನ್ಸಿಲ್ಲಿನ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಭಾರತಕ್ಕೆ ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ಲಿನ ಸದಸ್ಯ ರಾಷ್ಟ್ರವಾಗಲು ಚಿನ್ನದಂಥಾ ಅವಕಾಶ ಒದಗಿಬಂದಿತ್ತು. ಆದರೆ ಆ ಅದೃಷ್ಟವನ್ನು ನಮ್ಮ ದೇಶದ ಆಗಿನ ಪ್ರಧಾನಿ ನೆಹರೂ, ಕೃಷ್ಣಾರ್ಪಣ ಮಾಡಿದ್ದರಿಂದ ಎಪ್ಪತ್ತು ವರ್ಷಗಳೇ ಕಳೆದರೂ ನಮಗೆ ವಿಶ್ವದ ಸೂಪರ್ ಪವರ್ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿ ಕೊಳ್ಳಲು ಸಾಧ್ಯವಾಗಿಲ್ಲ. ೧೯೫೨ರಲ್ಲಿ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಗುವ ಅವಕಾಶ ರಾಯರಿಗೆ ಕೂದಲೆಳೆಯಲ್ಲಿ ಕೈತಪ್ಪಿ ಹೋಯಿತು. ಆದರೇನಂತೆ, ಅವರು ಹೇಗ್ ನ ಅಂತರ-ರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾದರು. ಆದರೆ, ಆ ಹುದ್ದೆಯಲ್ಲಿ ಬಹುಕಾಲ ಮುಂದುವರಿಯಲು ಅದೃಷ್ಟ ಇರಲಿಲ್ಲವೋ ಏನೋ.೧೯೫೩ರ ನವೆಂಬರ್ ೩೦ರಂದು ಬೆನಗಲ್ ನರಸಿಂಗ ರಾಯರು ಜ್ಯೂರಿಕ್ ನಲ್ಲಿ ತನ್ನ ೬೬ನೆಯ ವಯಸ್ಸಿನಲ್ಲಿ ನಿಧನರಾದರು. ನರಸಿಂಗ ರಾಯರ ಉಳಿದಿಬ್ಬರು ಸೋದರರೂ ಮಹಾರಥಿಗಳೇ. ಅವರ ಮೊದಲ ಸಹೋದರರಾದ ಬಿ. ರಾಮರಾವರವರು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದರು. ಎರಡನೆಯ ಸಹೋದರ ಶಿವರಾಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದ ಕಾರ್ಮಿಕ ಹೋರಾಟಗಾರರು. ಜೊತೆಗೆ ಸಂಸದರೂ ಆಗಿದ್ದವರು. ತನ್ನ ರಾಜಕೀಯ ಜೀವನದ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿ ಬದುಕಿನ ಕೊನೆಯ ಹದಿನೈದು ವರ್ಷಗಳನ್ನು ಸಂಶೋಧನೆಗೆ ಮೀಸಲಿಟ್ಟ ವಿಚಿತ್ರ ಮತ್ತು ಅಪರೂಪದ ರಾಜಕಾರಣಿ ಅವರು. ಕಾರ್ಕಳದ ಬೆನಗಲ್ಲಿನಂಥ ಒಂದು ಪುಟ್ಟ ಊರಿನಿಂದ ವಿಶ್ವಸಂಸ್ಥೆ, ಬಅಂತರರಾಷ್ಟ್ರೀಯ ನ್ಯಾಯಾಲಯಗಳಂಥ ಎತ್ತರಗಳನ್ನು ಏರಿ, ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ, ಭಾರತದ ಸಂವಿಧಾನವನ್ನು ಬರೆಯುವಂಥ ಅವಕಾಶ ಪಡೆದ ಧೀಮಂತರು ನಮ್ಮ ದೇಶದಲ್ಲಿ ಹೆಚ್ಚಿಲ್ಲ. ಸಂಸತ್ತಿನ ಹೊರಗೆ ಅಂಬೇಡ್ಕರರ ಪಕ್ಕದಲ್ಲಿ ಹೆಗಲೆಣೆಯಾಗಿ ನಿಲ್ಲಬೇಕಿದ್ದ ಪ್ರತಿಮೆ ಬೆನಗಲ್ ನರಸಿಂಗರಾಯರದು ! ಆದರೆ, ನಮ್ಮ ಕರ್ನಾಟಕದ ಈ ಮಹಾನ್ ವ್ಯಕ್ತಿಯನ್ನು ದೇಶಕ್ಕೆ ಮರು-ನೆನಪಿಸುವ ಕೆಲಸವನ್ನು ಯಾವ ಜನಪ್ರತಿನಿಧಿಯೂ ಇದುವರೆಗೆ ಮಾಡಿಲ್ಲ ಎನ್ನುವುದು ನಮ್ಮ ಅಭಿಮಾನ-ಶೂನ್ಯತೆಯನ್ನು ಎತ್ತಿ ತೋರಿಸುವಂತಿದೆ !
ಕೊನೆಯಪಕ್ಷ ಈಗಲಾದರೂ ನಮ್ಮ ಶಾಸಕರು, ಸಂಸದರು ಹಾಗೂ ಮುಂದಾಳುಗಳು ಈ ಕಾರ್ಯವನ್ನು ಮಾಡಿ ಒಬ್ಬ ಮಹಾನ್ ಮೇಧಾವಿ ಸತ್ಪುರುಷನನ್ನು ಹೊಸಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಲಿ ಎಂದು ಆಶಿಸೋಣವೇ?
ದಯವಿಟ್ಟು ಈ ಬರಹವನ್ನು ಆದಷ್ಟು ಶೇರ್ ಮಾಡಿ.

*ನಾಗರ ಪಂಚಮಿ''

*ನಾಗರ ಪಂಚಮಿ''
       ನಾಗರ ಪಂಚಮಿ ಅಥವಾ ಗರುಡ ಪಂಚಮಿ ಶ್ರಾವಣ ಮಾಸದಲ್ಲಿ ಬರುವ ದೊಡ್ಡ ಹಬ್ಬ. ಇದು ತನಿ ಎರೆಯುವ ಹಬ್ಬ. ಪಂಚಮಿಯ ದಿನ ನಾಗರಕಲ್ಲಿಗೆ,ಹಾವಿನ ಹುತ್ತಕ್ಕೆ ಅಥವಾ ಮನೆಗೇ ತಂದ ಹುತ್ತದ ಮಣ್ಣಿಗೆ ಇಲ್ಲವೆ ರಂಗೋಲಿಯಿಂದ ಬರೆದ, ಅಕ್ಕಿ ಹಿಟ್ಟಿನಿಂದ ಮಾಡಿದ ನಾಗರ ಹಾವಿನ ಚಿತ್ರಕ್ಕೆ ಶ್ರದ್ಧಾಭಕ್ತಿಗಳಿಂದ  ಹಾಗೂ ಮಡಿಯಿಂದ ಹಾಲೆರೆಯುವುದು ಹಿಂದಿನಿಂದ ನಡೆದುಬಂದ ಸಂಪ್ರದಾಯ.
👉🏻ಶ್ರಾವಣ ಮಾಸದಲ್ಲಿ ಅದೂ ಐದನೇ ದಿನವೇ ಏಕೆ ಹಾಲೆಯರಬೇಕು? ಇದನ್ನು ಸಹೋದರ,ಸಹೋದರಿಯರ ಹಬ್ಬ ಎಂದು ಏಕೆ ಕರೆಯುತ್ತಾರೆ?ಅಂದು ತುಪ್ಪ ಅಥವಾ ಎಣ್ಣೆಯಿಂದ ಕರಿದ ತಿಂಡಿ-ತಿನಿಸು ಏಕೆ ಮಾಡುವುದಿಲ್ಲ ಎಂಬ ಪ್ರಶ್ನೆಗಳೂ ಉದ್ಭವಿಸುತ್ತವೆ.
👉🏻ಚಂದ್ರನು ಪೂರ್ಣಿಮಾ ದಿನ ಶ್ರವಣ ನಕ್ಷತ್ರದಲ್ಲಿ ಇರುವ ಮಾಸವೇ ಶ್ರಾವಣ. ಚಂದ್ರ ಮನಃಕಾರಕ. ಶ್ರಾವಣದಲ್ಲಿ ಚಂದ್ರನ ಪ್ರಭಾವ ಹೆಚ್ಚು. ಚಂದ್ರನು ಶ್ರಾವಣ ತಿಂಗಳ ಮೊದಲ ದಿನವಾದ ಪಾಡ್ಯದಿಂದ ಪ್ರತಿ ದಿನವೂ ೧೨ ಡಿಗ್ರಿಯಂತೆ ಸಂಚರಿಸುತ್ತಾನೆ. ಪಂಚಮಿಯ ದಿನದ ಹೊತ್ತಿಗೆ ೬೦ ಡಿಗ್ರಿಗೆ ಬರುತ್ತಾನೆ. ಅಂದರೆ ಚಂದ್ರ ಆ ಹೊತ್ತಿಗೆ ಒಂದು ಕೋನದಲ್ಲಿರುತ್ತಾನೆ. ಚಂದ್ರನು ತ್ರಿಕೋನಕ್ಕೆ ಬಂದಾಗ ಭೂವರ್ಗ ಹಾಗೂ ಜಲವರ್ಗದ ಮೇಲೆ ಅವನ ಪ್ರಭಾವ ಹೆಚ್ಚಾಗಿರುತ್ತದೆ ಎನ್ನುವುದು ಪಂಚಾಂಗಕರ್ತರ ಲೆಕ್ಕಾಚಾರ. ಚಂದ್ರ ಪ್ರಭಾವ ಹೆಚ್ಚಿರುವ ಕಾಲದಲ್ಲಿ ಸಾತ್ವಿಕ ಆಹಾರ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎನ್ನುವುದು ಅನುಭವದ ಮಾತು.
👉🏻ಶ್ರಾವಣ ಶುದ್ಧ ಪಂಚಮಿಯ ದಿನ ಉದ್ದಿನ ಕಡುಬು ಹಾಗೂ ಸಿಹಿ ಕಡುಬು, ತಂಬಿಟ್ಟು ಮೊದಲಾದ ಸಾತ್ವಿಕ ಆಹಾರಗಳನ್ನು ಮಾಡುತ್ತಾರೆ. ಅಂದು ಸಾತ್ವಿಕ ಆಹಾರ ಸೇವಿಸಿ ಪಾರಮಾರ್ಥಿಕ ಚಿಂತನೆ ಮಾಡುವುದರಿಂದ ಮನಸ್ಸಿಗೆ ಉಲ್ಲಾಸ ದೊರಕುತ್ತದೆ.
🌼 *ಹುತ್ತಕ್ಕೆ ಅಥವಾ ಹುತ್ತದ ಮಣ್ಣಿಗೆ ಹಾಲೆರೆಯುವುದೇಕೆ?*
👉🏻ಶ್ರಾವಣ ಮಾಸದ ಪಂಚಮಿಯ ದಿನ ಹುತ್ತಕ್ಕೆ ಹಾಲೆರೆಯುವ ಬಗ್ಗೆ ಎರಡು ಪ್ರಮುಖ ಕಾರಣಗಳನ್ನು ನಮ್ಮ ಹಿರಿಯರು ನೀಡುತ್ತಾರೆ. ಹುತ್ತಕ್ಕೆ ಹಾಲೆರೆಯುವುದು ಕೃತಜ್ಞತೆಯ ಸಂಕೇತವೆಂಬುದು ಮೊದಲ ಕಾರಣವಾದರೆ, ಹುತ್ತಕ್ಕೆ ಹಾಲೆರೆಯುವುದರಿಂದ ಸಂತಾನೋತ್ಪತ್ತಿಗೆ ನೆರವಾಗುತ್ತದಂತೆ.
👉🏻ಕೃತಜ್ಞತೆಯ ಸಂಕೇತ: ಸಾಮಾನ್ಯವಾಗಿ ಜ್ಯೇಷ್ಠ - ಆಷಾಢದ ನಡುವೆ ಮಳೆಯಾಗುತ್ತದೆ. ಈ ಕಾಲದಲ್ಲಿ ರೈತರು ಬಿತ್ತನೆಯಲ್ಲಿ ತೊಡಗುತ್ತಾರೆ. ಶ್ರಾವಣದ ಆರಂಭದ ಹೊತ್ತಿಗೆ ಬಿತ್ತಿದ ಬೀಜಗಳು ಪೈರಾಗಿ ಬೆಳೆದಿರುತ್ತವೆ. ಬೆಳೆದ ಪೈರನ್ನು ರೈತನ ಶತ್ರುಗಳ ಪಟ್ಟಿಯಲ್ಲಿ ಸೇರಿರುವ ಇಲಿಗಳು ತಿಂದು, ಅವನಿಗೆ ಅಪಾರ ಹಾನಿ ಉಂಟು ಮಾಡುತ್ತವೆ.
👉🏻ಇಲಿಗಳನ್ನು ಹಿಡಿಯುವುದು ರೈತರಿಗೆ ಅಸಾಧ್ಯವಾದ ಕೆಲಸ. ಈ ಕಾರ್ಯದಲ್ಲಿ ಹಾವುಗಳು ರೈತನಿಗೆ ನೆರವಾಗುತ್ತವೆ. ಹೀಗಾಗೆ ಹಾವುಗಳನ್ನು ರೈತ ಮಿತ್ರ ಎನ್ನುತ್ತಾರೆ. ಇಲಿಗಳನ್ನು ತಿನ್ನುವ ಮೂಲಕ ಹಾವು ರೈತನ ಮಿತ್ರನಾಗಿದೆ. ಈ ಋಣವನ್ನು ರೈತ ಹುತ್ತಕ್ಕೆ ಹಾಲು ಎರೆಯುವ ಮೂಲಕ ತೀರಿಸುತ್ತಾನೆ ಎನ್ನಲಾಗುತ್ತದೆ. ಆದರೆ ಮತ್ತೆ ಕೆಲವರು ಹೇಳುವುದೇಬೇರೆ. ಹಾವುಗಳಿಗೆ ಹಸುವಿನ ಹಾಲು ವಿಷವಂತೆ. ಹಾಲು ಕುಡಿದ ಹಾವು ಸಾಯುತ್ತದೆ. ಬೇಸಿಗೆಯಲ್ಲಿ ಹೊರಬರುವ ಹಾವುಗಳು, ಶ್ರಾವಣದ ಚಳಿಗೆ ಮುದುಡಿ ಹುತ್ತ ಸೇರುತ್ತವೆ. ಹೀಗೆ ಹುತ್ತಕ್ಕೆ ಹಾಲು ಹಾಕುವುದರಿಂದ ಆ ಹಾಲು ಕುಡಿಯುವ ಹಾವುಗಳು ಸಾಯುತ್ತವೆ. ಇಲ್ಲವೇ ಸುಶುಪ್ತಾವಸ್ಥೆಯಲ್ಲಿರುವ ಹಾವುಗಳ ಮೇಲೆ ಬೀಳುವ ಹಾಲಿನ ವಾಸನಗೆಗೆ ಹುತ್ತದ ಒಳ ಬರುವ ಇರುವೆಗಳು ಹಾವುಗಳನ್ನು ಕಚ್ಚಿ ಕೊಲ್ಲುತ್ತವೆ. ಹೀಗಾಗಿ ಹಾವುಗಳನ್ನು ಸಾಯಿಸಲೆಂದೇ ಹಾಲು ಎರೆಯುತ್ತಾರೆ ಎನ್ನುತ್ತಾರೆ.
👉🏻ಸಂತಾನೋತ್ಪತ್ತಿಗೆ ಸಹಕಾರಿ : ಶ್ರಾವಣದಲ್ಲಿ ನಾಗರಪಂಚಮಿಯ ದಿನ ಹುತ್ತಕ್ಕೆ ಹಾಲೆರೆಯುವುದು ಹಿಂದಿನಿಂದ ನಡೆದ ಬಂದ ಪದ್ಧತಿ. ಹುತ್ತಕ್ಕೆ ಹಾಲೆರೆಯುವ ಬಗ್ಗೆ ಕೆಲವು ಪಂಡಿತರು ನೀಡುವ ವೈಜ್ಞಾನಿಕ ಎನ್ನುವ ಕಾರಣ ಇಂತಿದೆ. ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು.
👉🏻ನಮಗೆಲ್ಲಾ ತಿಳಿದಿರುವಂತೆ ಹಾವುಗಳು ಎಂದೂ ಹುತ್ತ ಕಟ್ಟುವುದಿಲ್ಲ. ಗೆದ್ದಲುಗಳು ಕಟ್ಟುವ ಹುತ್ತದಲ್ಲಿ ಹಾವು ವಾಸಿಸುತ್ತದೆ. ಗೆದ್ದಲುಗಳು ತಮ್ಮ ಬಾಯಿಯಿಂದ ಒಸರುವ ರಸದ ನೆರವು ಪಡೆದು, ಭೂಮಿಯ ಒಳಗಿನಿಂದ ಮಣ್ಣನ್ನು ಹೊರತೆಗೆದು ಹುತ್ತವನ್ನು ನಿರ್ಮಿಸುತ್ತವೆ. ಬಹು ನವಿರಾದ, ನಯವಾದ ಮಣ್ಣಿನಿಂದ ಗೆದ್ದಲು ಕಟ್ಟಿದ ಹುತ್ತ, ಮಳೆ, ಗಾಳಿಗಳಿಗೂ ಜಗ್ಗುವುದಿಲ್ಲ. ಹುತ್ತದ ಒಳಗೆ ಕೂಡ ಗೆದ್ದಲುಗಳು ನವಿರಾದ ಮಣ್ಣಿನಿಂದ ನೆಲವನ್ನು ಸಮತಟ್ಟು ಮಾಡಿರುತ್ತವೆ. ಇದನ್ನು ಎಲ್ಲಾದರೂ ಹುತ್ತ ಅಗೆದಾಗ ನೀವೂ ಕಾಣಬಹುದು. ಹುತ್ತದೊಳಗೆ ನೆಲ ಮೆತ್ತನೆಯ ಹಾಸಿಗೆಯಂತಿರುತ್ತದೆ. ಅಲ್ಲಿ ಒಂದು ಚಿಕ್ಕ ಕಲ್ಲು ಕೂಡ ಇರುವುದಿಲ್ಲ.
👉🏻ಇಂತಹ ನವಿರಾದ ಸ್ಥಳದಲ್ಲಿ ವಾಸಿಸುವ ಹಾವುಗಳಿಗೆ ಶ್ರಾವಣದ ಚಂದ್ರಮನ ರಶ್ಮಿಗಳು ಬೀಳುತ್ತಿದ್ದಂತೆ ಕಾಮೋದ್ರೇಕಗೊಳ್ಳುತ್ತವೆ. ಸಾಮಾನ್ಯವಾಗಿ ಹಾವುಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದೂ ಈ ಕಾಲದಲ್ಲೇ ಅಂತೆ. ಹಾವುಗಳು ಲೈಂಗಿಕ ಕ್ರಿಯೆಗೆ ಕೂಡುವ ಸಮಯಕ್ಕೆ ಮುನ್ನ ಹೆಣ್ಣು ಹಾವುಗಳಿಗೆ ಋತುಸ್ರಾವವಾಗುತ್ತದಂತೆ. ಇದಕ್ಕೆ ರಿಪ್ರೊಡಕ್ಟೀವ್ ಸೈಕಲ್ ಎನ್ನುತ್ತಾರೆ. ಈ ಸಮಯದಲ್ಲಿ ಹಾವುಗಳು ಹುತ್ತದಿಂದ ಹೊರಗೆ ಬರುವಾಗ ಇಲ್ಲವೆ ಹುತ್ತ ಸೇರುವಾಗ ವಿಸರ್ಜಿಸಲ್ಪಟ್ಟ ರಜಸ್ಸನ್ನು ನಯವಾದ ಹುತ್ತದ ಮಣ್ಣು ಹೀರಿಕೊಳ್ಳುತ್ತದೆ.
👉🏻ಅದೇ ರೀತಿ ಈ ಸಮಯದಲ್ಲಿ ಸ್ಖಲನವಾಗುವ ಗಂಡು ಹಾವಿನ ವೀರ್ಯವೂ ಹುತ್ತದ ಮಣ್ಣಿನಲ್ಲಿ ಸೇರ್ಪಡೆಯಾಗುತ್ತದೆ. ಈ ರೀತಿಯಾಗಿ ವೀರ್ಯ ಮತ್ತು ರಜಸ್ಸು ಲೇಪಿತ ಹುತ್ತದ ಮಣ್ಣಿಗೆ ನೀರಾಗಲಿ ಹಾಲಾಗಲಿ ಬಿದ್ದಾಗ ಒಂದು ಸುಮಧುರವಾದ ವಾಯು ಉತ್ಪತ್ತಿಯಾಗುತ್ತದೆ. ಹೆಂಗಸರು ಹಬ್ಬದ ದಿನ ಹುತ್ತಕ್ಕೆ ಹಾಲು ಹಾಕಿದಾಗ ಅಂದರೆ ತನಿ ಎರೆದಾಗಲೂ ಈ ಪ್ರಕ್ರಿಯೆ ನಡೆಯುತ್ತಿದೆ. ಈ ಸುಗಂಧಯುಕ್ತವಾದ ವಾಯು ಹೆಣ್ಣಿನ ಭಾವನೆಗಳನ್ನು ಕೆರಳಿಸುವುದೇ ಅಲ್ಲದೆ, ರಿಪ್ರೊಡಕ್ಟಿವ್ ಆರ್ಗನ್ಸ್‌ಗಳ ಮೇಲೂ ನೇರ ಪರಿಣಾಮ ಉಂಟು ಮಾಡುತ್ತವಂತೆ. ಈ ಮಾಸದಲ್ಲಿ ಚಂದ್ರ ಪ್ರಭಾವವೂ ಇರುವ ಕಾರಣ, ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ.
👉🏻ನಮ್ಮಲ್ಲಿ ಸಾಮಾನ್ಯವಾಗಿ ನಾಗರ ಎಂಬ ಒಂದು ಚರ್ಮವ್ಯಾಧಿ ಬಂದಾಗ, ಜನರು ಹುತ್ತಕ್ಕೆ ಹಾಲೆರೆದು ಆ ಹುತ್ತದ ಮಣ್ಣನ್ನು ಮೈಗೆಲ್ಲಾ ಹಚ್ಚಿಕೊಳ್ಳುತ್ತಾರೆ. ಅಂದರೆ,ಹುತ್ತದ ಮಣ್ಣಿನಲ್ಲಿ ಔಷಧೀಯ ಗುಣವಿದೆ ಎಂಬುದನ್ನು ಇದು ಸಾಬೀತು ಪಡಿಸುತ್ತದೆ ಎಂಬುದು ಪಂಡಿತರು ತಮ್ಮ ವಾದಕ್ಕೆ ನೀಡುವ ಪುಷ್ಟಿ. (ಮಡ್ ಥೆರಪಿ)
👉🏻ಅಣ್ಣತಮ್ಮಂದಿರ ಹಬ್ಬ : ನಾಗರ ಪಂಚಮಿ ಅಣ್ಣ - ತಂಗಿಯರ ಹಬ್ಬ. ಅಂದು ಸೋದರ - ಸೋದರಿಯರು ಹೊಟ್ಟೆ ತಣ್ಣಗಿರಲಿ, ಬೆನ್ನು ತಣ್ಣಗಿರಲಿ ಎಂದು ಹೇಳಿ ಹುತ್ತಕ್ಕೆ ಎರೆದ ಹಾಲನ್ನು ಸಹೋದರರ ಹೊಕ್ಕಳಿಗೂ,ಬೆನ್ನಿಗೂ ಹಚ್ಚಿ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ.
👉🏻ಅಶ್ವತ್ಥಕಟ್ಟೆಗಳ ಕೆಳಗೆ ಪ್ರತಿಷ್ಠಾಪಿಸಿದ ನಾಗರಕಲ್ಲುಗಳಿಗೆ ಪಂಚಮಿಯ ದಿನ ಮುತ್ತೈದೆಯರು ಮಡಿಯಲ್ಲಿ ಹಾಲೆರೆದು ಪೂಜಿಸುತ್ತಾರೆ. ಸುಬ್ರಹ್ಮಣ್ಯೇಶ್ವನ ದೇವಾಲಯಗಳಲ್ಲೂ ನಾಗರ ಪಂಚಮಿಯ ದಿನ ವಿಶೇಷ ಪೂಜೆಗಳು ನಡೆಯುತ್ತವೆ. ಶ್ರಾವಣ ಶುದ್ಧ ಪಂಚಮಿಯಂದು ನಾಗರಕಲ್ಲಿಗೆ ಹಾಲೆರೆಯುವ ಮೂಲಕ ತಾಯಿಯ ಹಾಲ ಋಣ ತೀರಿಸಬಹುದು ಎಂಬ ನಂಬಿಕೆಯೂ ಇದೆ. ಕೆಲವು ಕಡೆ ದಿಟ ನಾಗರನಿಗೇ ಹಾಲೆರೆವ ರೂಢಿಯೂ ಇದೆ.
👉🏻ಅಣ್ಣತಮ್ಮಂದಿರ ಹಬ್ಬ ಎನ್ನುವುದೇಕೆ. ಹಿಂದೆಲ್ಲ ಒಂದೂರಿನಿಂದ ಮತ್ತೊಂದೂರಿಗೆ ಹೋಗಲು ಈಗಿನಂತೆ ವಾಹನ ಸೌಕರ್ಯ ಇರುತ್ತಿರಲಿಲ್ಲ. ಆಗ ಆಣ್ಣ ತಮ್ಮಂದಿರು, ಅಕ್ಕತಂಗಿಯರು ಒಬ್ಬರನ್ನೊಬ್ಬರು ನೋಡುವುದೇ ಕಷ್ಟವಾಗಿತ್ತು. ಕನಿಷ್ಠ ವರ್ಷಕ್ಕೊಮ್ಮೆಯಾದರೂ ಅಣ್ಣ -ತಂಗಿ, ಅಕ್ಕ -ತಮ್ಮಂದಿರು ಸಂಸಲಿ ಬಾಂಧವ್ಯ ಹಾಗೇ ಚಿರವಾಗಿರಲಿ ಎಂದು ಹಿರಿಯರು ಈ ಹಬ್ಬವನ್ನು ಸಹೋದರ - ಸಹೋದರಿಯರ ಹಬ್ಬ ಎಂದು ಕರೆದರು.
👉🏻ಬಿತ್ತನೆ ಕಾರ್ಯ ಮುಗಿಸಿ, ವರ್ಷದ ಮೊದಲ ಫಸಲಿನ ನೀರಿಕ್ಷೆಯಲ್ಲಿರುವ ಸೋದರರು, ಸಹೋದರಿಯರನ್ನು ಕರೆಸಿ, ಉಡಿತುಂಬಿ ಕಳುಹಿಸಲಿ ಎಂಬುದೂ ಈ ಹಬ್ಬದ ಆಶಯವಾಗಿದೆ. ಮನುಷ್ಯನ ಚಿಂತನೆಯ ಕೇಂದ್ರವೇ ಮೆದುಳು. ಮೆದುಳು ಕೂಡ ಸರ್ಪದ ಆಕಾರದಲ್ಲೇ ಇದೆ. ಹೀಗಾಗಿ ಇದಕ್ಕೆ ಕುಂಡಲಿನಿ ಎನ್ನುವುದು. ಮನಃಕಾರಕನಾದ ಚಂದ್ರನ ಪ್ರಭಾವವಿರುವ ಮಾಸದಲ್ಲಿ ಕುಂಡಲಿಯನ್ನು ಸಾತ್ವಿಕ ರೀತಿಯಲ್ಲಿ ಉದ್ರೇಕಿಸುವುದೇ ಈ ಸರ್ಪಪೂಜೆಯ ಪರಮಾರ್ಥವಾಗಿದೆ.

Collected by Whatsapp.

ಉಪಾಕರ್ಮ ಎಂದರೇನು ?

*🕉ವಿಚಾರಧಾರೆ🕉*
೧.ಪ್ರ:  ಉಪಾಕರ್ಮ ಎಂದರೇನು ?
ಉ:  "ಉಪಾಕರ್ಮ" ಅಥವಾ ಉಪಕ್ರಮ ಎಂದರೆ ಪ್ರಾರಂಭ.
೨.ಪ್ರ: -  ಯಾವುದರ ಪ್ರಾರಂಭ ?
ಉ: ವೇದಾಧ್ಯಯನದ ಪ್ರಾರಂಭ.
೩. ಪ್ರ:- ಉತ್ಸರ್ಜನ ಎಂದರೇನು ? ಅದರ ಕ್ರಿಯಾರ್ಥವೇನು ?
ಉ: ಅಧ್ಯಯನವನ್ನು ಮನನ ಮಾಡಿಕೊಳ್ಳುವದಕ್ಕಾಗಿ ಮಾಡುವ ತಾತ್ಕಾಲಿಕ ವಿರಮನ.
೪.ಪ್ರ:- ವೇದಗಳ ಅಧ್ಯಯನದ ಆರಂಭ ಮತ್ತು ವಿರಮನ ಯಾವಾಗ ಹೇಗೆ ಮಾಡಬೇಕು.?
ಉ: ಆಪಸ್ತಂಬರು ಇದಕ್ಕೆ ಸೂತ್ರವನ್ನು ಹೇಳಿದ್ದಾರೆ.
"ಶ್ರಾವಣ್ಯಾಂ ಪೌರ್ಣಮಾಸ್ಯಾಂ ಅಧ್ಯಾಯೋ ಪ್ರಾಕೃತ್ಯ ತೈಷ್ಯಾಂ ಪೌರ್ಣಮಾಸ್ಯಾಂ ರೋಹಿಣ್ಯಾಂ ವಾ ವಿರಮೇತ್ "
ಮೇಲಿನ ಶ್ಲೋಕದ ಅರ್ಥವೇನೆಂದರೆ :- ಶ್ರಾವಣ ಮಾಸದ  ಹುಣ್ಣಿಮೆಯ ದಿನದಂದು ವೇದಾಧ್ಯಯನವನ್ನು ಪ್ರಾರಂಭಿಸಿ ಪುಷ್ಯ ಮಾಸದ ಹುಣ್ಣಿಮೆಯ ದಿನದಲ್ಲಾಗಲೀ ಅಥವಾ ಪುಷ್ಯಮಾಸದ ರೋಹಿಣೀ ನಕ್ಷತ್ರಯುಕ್ತ ದಿನದಲ್ಲಾಗಲೀ ವಿರಮಿಸ ಬೇಕು.ಅರ್ಥಾತ್ ಅಧ್ಯಯನದ ಕಾಲ ಕೇವಲ ಐದು ತಿಂಗಳು.
೫.ಪ್ರ:- ಕೇವಲ ಐದು ತಿಂಗಳಷ್ಟೇ ಅಧ್ಯಯನವನ್ನು ಏಕೆ ಮಾಡಬೇಕು ?
ಉ: ಇದಕ್ಕೆ ನಿರ್ದಿಷ್ಟವಾದ ಕಾರಣವೇನೆಂಬುದು ತಿಳಿದಿಲ್ಲ.ಆದರೂ  ಕಲಿತದ್ದದ್ದನ್ನು ಮನನ ಮಾಡಬೇಕೆಂದು ಮತ್ತು ಮಿಕ್ಕ ಕಾಲದಲ್ಲಿ ವೇದಾಂಗಗಳನ್ನು ಅಧ್ಯಯನ ಮಾಡುವದಕ್ಕಾಗಿ ಅನುಕೂಲವಾಗಲಿ ಎಂದು ಸೂತ್ರಕಾರರು ಹೀಗೆ ಹೇಳಿರಬಹುದು.ಹಾಗೂ ಹಿಂದಿನ ಗುರುಕುಲ ಪದ್ಧತಿಯನ್ನು ಪರಿಶೀಲಿಸಿದಾಗ ನಮಗೆ ತಿಳಿಯುವ ವಿಷಯವೇನೆಂದರೇ   ಮಾಘಮಾಸದಿಂದಾಚೆಗೆ ಹಬ್ಬಹರಿದಿನಗಳೂ, ಯಜ್ಞಯಾಗಾದಿಗಳೂ ನಡೆಯುವ ಕಾಲವಾದ್ದರಿಂದ ಅಧ್ಯಾಪಕರು ವ್ಯಾವಹಾರಿಕ , ದ್ರವ್ಯ ಸಂಗ್ರಹಣೆ ಹಾಗೂ ವಿತರಣೆಗೆ ಕಾಲಾವಕಾಶವು ಬೇಕಾದ್ದರಿಂದ ಈ ರೀತಿಯಾಗಿ ಕಾಲಾನುಕೂಲವನ್ನು ಮಾಡಿಕೊಂಡಿರಬಹುದಾಗಿದೆ.
೬.  ವೇದವ್ರತಗಳಾದ  ಈ  ಉಪಾಕರ್ಮ ಮತ್ತು ಉತ್ಸರ್ಜನಗಳಿಗೆ ಅಧಿಕಾರಿಗಳಾರು ?
ಉ:- ವೇದಾಧ್ಯಯನವನ್ನು ಮಾಡುವವರೇ ಇದಕ್ಕೆ ಅಧಿಕಾರಿಗಳು. ಹಾಗೂ ವೇದಾಧ್ಯಯನ ಮಾಡಿರುವವರಿಗೇ ಬ್ರಹ್ಮಯಜ್ಞವನ್ನೂ ಹೇಳಿರುವದು. ಯಾವುದಾದರೊಂದು ಶಾಖೆಯನ್ನು ವೇದಾಂಗಗಳೊಡನೆ ಪರಿಪೂರ್ಣ ಅಧ್ಯಯನ ಮಾಡಿ  ಪ್ರತಿನಿತ್ಯ ಸಂಧ್ಯೋಪಾಸನೆ,ಬ್ರಹ್ಮಯಜ್ಞ,ಅಗ್ನಿಕಾರ್ಯ ,ವೇದ ಪಠನ ಹಾಗೂ ಅನುಷ್ಠಾನ ಮಾಡುವವರಿಗೆ ಈ ವ್ರತಗಳನ್ನು  ಮಾಡಲೇಬೇಕೆಂಬ ನಿಯಮವಿಲ್ಲ. 
೭.ಪ್ರ:- ಉಪಾಕರ್ಮ ಮತ್ತು ಉತ್ಸರ್ಜನಗಳ ಔಚಿತ್ಯವೇನು ?
ಉ:- ವೇದಸಮೂಹವನ್ನು ಪ್ರಪಂಚದ ಒಳಿತಿಗಾಗಿ ಕಂಡುಕೊಟ್ಟ ,ದ್ರಷ್ಟಾರರಾದ ಋಷಿಗಳಿಗೂ ಅದನ್ನು ಹೇಳಿಕೊಟ್ಟ ಅಧ್ಯಾಪಕರಿಗೂ ಕೃತಜ್ಞತಾಭಾವವನ್ನು ವ್ಯಕ್ತಪಡಿಸುವದೇ ಇದರ ಮುಖ್ಯ ಉದ್ದೇಶ. ಅದಕ್ಕನುಗುಣವಾಗಿ ಆಯಾ ದೇವತೆಗಳಿಗೂ , ಆಯಾ ಮಂತ್ರಗಳ ದ್ರಷ್ಟಾರರಾದ ಋಷಿಗಳಿಗೂ ಹೋಮಗಳ ಮೂಲಕ ಹವಿಸ್ಸುಗಳನ್ನು ,ತರ್ಪಣಗಳನ್ನೂ ಕ್ರಮವಾಗಿ ಕೊಡಬೇಕು.
೮.ಪ್ರ:-ಉಪಾಕರ್ಮ ಮತ್ತು ಉತ್ಸರ್ಜನಗಳ ಸಂಪ್ರದಾಯವೇನು ?
ಉ:- ಉಪಾಕರ್ಮವು ಎರಡು ವಿಧ.ಕಾಂಡೋಪಾಕರ್ಮ ಮತ್ತು ಅಧ್ಯಾಯೋಪಾಕರ್ಮ.
ಕಾಂಡೋಪಾಕರ್ಮ: ಗುರುಕುಲದಲ್ಲಿ ಯಜುರ್ವೇದದ ಅಧ್ಯಯನವನ್ನು ಪ್ರಾರಂಬಿಸಿದಾಗ ಇದನ್ನು ಮಾಡಬೇಕು.ಉಪಾಕರ್ಮವನ್ನು ಪ್ರತಿಯೊಂದು ಕಾಂಡದ ಆದಿಯಲ್ಲೂ , ಉತ್ಸರ್ಜನವನ್ನು ಅಂತ್ಯದಲ್ಲೂ ಮಾಡಬೇಕು.ಇದನ್ನು ಯಜುರ್ವೇದದ ಏಳು ಕಾಂಡ ಸಂಹಿತೆ, ಮೂರು ಆಷ್ಟಕ ಬ್ರಾಹ್ಮಣ ,ಆರು ಆರಣ್ಯಕಗಳು,ಏಕಾಗ್ನಿಕಾಂಡ ಮತ್ತು ನಾಲ್ಕು ಉಪನಿಷತ್ತುಗಳು  (ಇಷ್ಟೂ ಸೇರಿ ಮಾಡುವದಕ್ಕೆ ಸಾರಸ್ವತ ಪಾಠವೆನ್ನುತ್ತಾರೆ)   ಇವುಗಳ ಅಧ್ಯಯನ ಸಂಪೂರ್ಣವಾಗುವವರೆಗೂ ಮಾಡುವದಕ್ಕೆ ಕಾಂಡೋಪಾಕರ್ಮ ಎಂಬುದಾಗಿ ಹೇಳುತ್ತಾರೆ.
ಅಧ್ಯಾಯೋಪಾಕರ್ಮ: ಇದು ಸಾಮಾನ್ಯವಾಗಿ ವೇದದ ಎಲ್ಲಾ ಶಾಖೆಗಳಿಗೂ ಅನ್ವಯಿಸುತ್ತದೆ.ಪ್ರತಿವರ್ಷವೂ ಶ್ರಾವಣ ಹುಣ್ಣಿಮೆಯಲ್ಲಿ ಉಪಕ್ರಮಿಸಿ ಪುಷ್ಯ ಹುಣ್ಣಿಮೆಯಲ್ಲಿ  ಉತ್ಸರ್ಜಿಸುವ ಕ್ರಮ.
೯.ಪ್ರ:- ಈ ಕರ್ಮಗಳನ್ನು ಮಾಡಲಾಗದಿದ್ದರೇ ಪ್ರಾಯಶ್ಚಿತ್ತವೇನು ?
ಉ: ಇವುಗಳು   ನಿತ್ಯನೈಮಿತ್ತಿಕಕರ್ಮಗಳಾದ್ದರಿಂದ ಇವುಗಳನ್ನು ಮಾಡಲೇ ಬೇಕು.ಮಾಡದೇ ಇರುವದರಿಂದ ಪ್ರತ್ಯವಾಯ ದೋಷಗಳು ಅಂಟಿಕೊಳ್ಳುತ್ತವೆ. ಆದ್ದರಿಂದ ಇದಕ್ಕೆ ಪ್ರಾಯಶ್ಚಿತ್ತವೆಂಬ ಮಾರ್ಗವಿಲ್ಲ.ಆದರೂ ಗೃಹ್ಯಸೂತ್ರಗಳಲ್ಲಿ ಇದಕೆ ಪ್ರಾಯಶ್ಚಿತ್ತಕರ್ಮಗಳನ್ನೂ ಹೇಳಿರುತ್ತಾರೆ.
೧೦.ಪ್ರ:- ಜನಿವಾರ ಹಾಕಿಕೊಳ್ಳುವುದಕ್ಕೂ ಉಪಾಕರ್ಮೋತ್ಸರ್ಜನಕ್ಕೂ ಏನೂ ಸಂಬಂಧವಿಲ್ಲ ಎಂದಿರಲ್ಲ.ಅದು ಹೇಗೆ ?
ಉ:- ನಾವು ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೇ ಜನಿವಾರ ಹಾಕಿಕೊಳ್ಳುವದು ಉಪಾಕರ್ಮೋತ್ಸರ್ಜನಗಳ ಒಂದು ಅಂಗವಲ್ಲ.ಅದು ನಾವು ಪವಿತ್ರರಾಗಿ,ಶುಚಿರ್ಭೂತರಾಗಿದ್ದೇವೆ ಎಂಬ ಭಾವನೆಯನ್ನು ದೃಢಪಡಿಸುವ ಕೇವಲ ಸಾಂಕೇತಿಕವಾದ ಕ್ರಿಯೆ.ಜನಿವಾರ ಹಾಕಿಕೊಳ್ಳುವದೇ ಉಪಾಕರ್ಮೋತ್ಸರ್ಜನಗಳಲ್ಲ.ಹೀಗೆ ಮಾಡಿ ಕೃತಾರ್ಥರಾದೆವು ಎಂಬುವದು ಇತ್ತೀಚಿನ ಒಂದು ಸಾಂಪ್ರದಾಯಿಕವಾದ ಅಪಾಯಕಾರೀ ಭ್ರಾಂತಿ ಎನ್ನುವದರಲ್ಲಿ ತಪ್ಪೇನಿಲ್ಲ.
೧೧.ಪ್ರ:- ಪ್ರಥಮೋಪಾಕರ್ಮ ಎಂದರೇನು?
ಉ:- ಇದರಲ್ಲಿ ವಿಶೇಷವಾದ ಯಾವ ಅರ್ಥವೂ ಇಲ್ಲ. ಉಪನಯನವಾದಮೇಲೆ ಹೊಸದಾಗಿ ವೇದಾಧ್ಯಯನ ಪ್ರಾರಂಭಮಾಡುವ ಒಂದು ಕ್ರಿಯೆಯಲ್ಲಿ ಅದು ನಿರ್ವಿಘ್ನವಾಗಿ ನೆರವೇರಲಿ ಮತ್ತು ಮುಂದೆವರೆಯಲಿ ಎಂಬುವಲ್ಲಿ ಮಹತ್ವವುಳ್ಳದ್ದಾಗಿದೆ.
೧೨.ಪ್ರ:- ಉಪಾಕರ್ಮೋತ್ಸರ್ಜನಗಳ ಪ್ರಯೋಜನವೇನು?
ಉ:- ಇದರ ಮುಖ್ಯ ಮಹತ್ವ ಎಂದರೆ ನಮ್ಮ ಆರ್ಷೇಯಪದ್ಧತಿಯು ನಿರಂತರವಾಗಿ ಮುಂದುವರೆಯಲಿ ಎಂಬುವದು. ನಾವು ಕಲಿತದ್ದನ್ನು ಮೆಲುಕು ಹಾಕುತ್ತಾ ಅರ್ಥಾತ್ ಮನನ ಮಾಡಿಕೊಳ್ಳುವದು ಮತ್ತೂ ಅದರಿಂದುಂಟಾದ ಜ್ಞಾನವನ್ನು ಲೋಕೋಪಯೋಗಕ್ಕೆ ಮಾಡಿಕೊಳ್ಳುವದು ಇನ್ನೊಂದು. ಮೇಲ್ನೋಟಕ್ಕೆ ಹೀಗೆ ಕಂಡರೂ ಇದರಲ್ಲಿ ಅತಿಮುಖ್ಯವಾದ ಮಹತ್ತರವಾದ ಉದ್ದೇಶವೂ ಇದೆ.ಅದು ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂಬುವದು.

Collected by Whatsapp..

ಖಂಡಗ್ರಾಸ ಚಂದ್ರಗ್ರಹಣ

ಖಂಡಗ್ರಾಸ ಚಂದ್ರಗ್ರಹಣ ( ಸೋಮವಾರ ಚಂದ್ರಗ್ರಹಣವಾಗುವುದರಿಂದ ಚೂಡಾಮಣಿ ಯೋಗವಿರುತ್ತದೆ.)
ಹೇಮಲಂಬಿ ನಾಮ ಸಂವತ್ಸರದ ಶ್ರಾವಣ ಶುಕ್ಲ ಹುಣ್ಣಿಮೆ 7-08-2017 ನೇ ಸೋಮವಾರ ಶ್ರವಣಾ ನಕ್ಷತ್ರ ಮಕರ ರಾಶಿಯಲ್ಲಿ ಚಂದ್ರನಿಗೆ ಕೇತು ಗ್ರಹಣ.
ಮಾಂದ್ಯಾರಂಭ. 9.18pm
ಗ್ರಹಣ ಸ್ಪರ್ಶ 10.53pm
ಗ್ರಹಣ ಮಧ್ಯ 11.50pm
ಗ್ರಹಣ ಮೋಕ್ಷ 12.48am(8-8-2017)
ಮಾಂದ್ಯಾವಸಾನ 2.23am
ಸಂಜೆ ಸಂಧ್ಯಾಕಾಲದ ನಂತರ   ಆಹಾರವನ್ನೂ ಸ್ವೀಕರಿಸಬಾರದು. ರಾತ್ರಿ ಭೋಜನ ನಿಷಿಧ್ದ.  ಅಶಕ್ತರು ರಾತ್ರಿ ಏಳು ಗಂಟೆಯ ವರೆಗೆ ಲಘು ಆಹಾರವನ್ನು ಸ್ವೀಕರಿಸಬಹುದು. ಆ ನಂತರ ಅವರೂ ಸಹ ಸ್ವೀಕರಿಸಬಾರದು.    
                (ಗ್ರಹಣಕಾಲದಲ್ಲಿ ಮಾಡಲೇಬೇಕಾದ್ದು)
ಗ್ರಹಣದ ಆಚರಣೆ ಶಾಸ್ತ್ರದ ವಚನ ;ಎಂದರೆ ಭಗವಂತನ ಆದೇಶ. ಪರಮಾತ್ಮ ನಮ್ಮ ಬದುಕಿಗೆ ಹಾಕಿದ ಸಂವಿಧಾನ ಅದು. ಅವಶ್ಯವಾಗಿ ಆಚರಣೆ ಮಾಡಲೇಬೇಕು.

೧ ಗ್ರಹಣದ ಆರಂಭ ಅಂತ್ಯಗಳಲ್ಲಿ ಸ್ನಾನವನ್ನು ಮಾಡಬೇಕು.
೨ ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ.
೩ಗ್ರಹಣ ಬಿಟ್ಟ ನಂತರವೇ ಅಡಿಗೆ ಮಾಡಿ,  ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು, ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು.
೪ "ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುಸೂತಕೇ"
ಎಲ್ಲ ವರ್ಣದವರೂ ಗ್ರಹಣಕಾದಲ್ಲಿ ಮೈಲಿಗೆಯನ್ನು ಆಚರಿಸಬೇಕು.

೫ ಜನನಶೌಚವಿರುವವರು, ಮೃತಾಶೌಚವಿರುವವರು ಮತ್ತು ರಜಸ್ವಲೆಯಾದವರೂ ಸಹ ಗ್ರಹಣದ ಸ್ಪರ್ಶಸ್ನಾನ, ಮುಕ್ತಿಸ್ನಾನಗಳನ್ನು ಮಾಡಲೇಬೇಕು. ಅವರು ಜಪ ಪಾರಾಯಣಗಳನ್ನು ಮಾಡಬಾರದು.
೬ ಗ್ರಹಣದ ಎರಡೂ ಸ್ನಾನಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.
೭ ಗ್ರಹಣಕಾಲದಲ್ಲಿ ನದಿಗಳಲ್ಲಿ,  ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರಸ್ನಾನ ಸರ್ವೋತ್ತಮ
೮ ಗ್ರಹಣಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು ಎಂದು ಯಮನ ಆದೇಶವಿದೆ. ತೀರ ಅಶಕ್ತರಾದವರು ಮಾತ್ರ ಬಿಸಿನೀರಿನಿಂದ ಸ್ನಾನವನ್ನು ಮಾಡಬೇಕು
೯ ಯಾರ ಮನೆಯಲ್ಲಿ ಭಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು. ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆ ಅಂತಹವರು ನೀರಿನ ಪಾತ್ರೆಗಳ (ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇತರೆ) ಮೇಲೆ ದರ್ಭೆಯನ್ನು ಹಾಕಿರಬೇಕು.
೧೦ ಇಡಿಯ ಗ್ರಹಣ ಕಾಲದಲ್ಲಿ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು. ಗ ಹೋಮ, ಶ್ರಾದ್ಧ, ಪಾರಾಯಣ, ದಾನಗಳನ್ನು ಮಾಡಬೇಕು.( ಇನ್ನೇನು ಗ್ರಹಣ ಬಿಡುತ್ತದೆ ಎನ್ನುವಾಗ ಮಾಡುವ ದಾನ ಅತೀಶ್ರೇಷ್ಠ)

ಮಹಾಭಾರತದ ಒಂದು ಸಣ್ಣ ಮಾಹಿತಿ

 ಮಹಾಭಾರತದ ಒಂದು ಸಣ್ಣ ಮಾಹಿತಿ
ಪಂಚ ಪಾಂಡವರಲ್ಲಿ ಅಪರೂಪದ ಶಾಸ್ತ್ರಜ್ಞಾನಿಯಾಗಿದ್ದ ಸಹದೇವ ....ನಕುಲನಾದರೋ ಅಪ್ರತಿಮ ರೂಪವಂತ. .
ಮೂರುಲೋಕದಲ್ಲಿ ಇದಿರಿಲ್ಲದ ಪರಾಕ್ರಮಿಯಾಗಿದ್ದ ಅರ್ಜುನ .. ಸಹಸ್ರ ಸಹಸ್ರ ಗಂಡಾನೆಗಳ ಭೀಮ ನ ಭುಜ ಬಲಕ್ಕೆ ಸಾಟಿ ಯಾರು..?
ಆದರೆ ಇವರೆಲ್ಲರಿಗಿಂತ ಹಿರಿಯನಾದ  ಧರ್ಮರಾಜ ನಲ್ಲಿ ಇವು ಯಾವ ಗುಣಗಳೂ ಇರಲಿಲ್ಲ..!  ಆತ ಭೀಮನಂತೆ ಬಲವಂತನಲ್ಲ, ಅರ್ಜುನನಂತೆ ಪರಾಕ್ರಮಿಯಲ್ಲ, ನಕುಲ-ಸಹದೇವರ ರೂಪವಾಗಲಿ, ಪಾಂಡಿತ್ಯವಾಗಲಿ ಆತನಲ್ಲಿ ಇರಲಿಲ್ಲ..  ಧರ್ಮರಾಜನಲ್ಲಿ ದ್ದ ಏಕೈಕ  ಸಂಪತ್ತೆಂದರೆ “ ಧರ್ಮ “..!
ಹುಟ್ಟು ಹೆಸರು
ಯುಧಿಷ್ಠಿರ ನಾಗಿದ್ದರೂ ಧರ್ಮವು ಸಂಪೂರ್ಣವಾಗಿ ಆತನಲ್ಲಿ ನೆಲಸಿದ್ದುದರಿಂದ ಧರ್ಮರಾಜನೆಂದೇ ಆತ ಪ್ರಖ್ಯಾತನಾದ.
“ ಶರಣರ ಮಹಿಮೆಯನ್ನು ಮರಣ ಕಾಲದಲ್ಲಿ ಕಾಣಬೇಕು ” ಇದು ಗಾದೆ ಮಾತು.
ಧರ್ಮರಾಜನೇನೆಂದು ಅರ್ಥಮಾಡಿಕೊಳ್ಳಬೇಕಾದರೆ ಪಾಂಡವರ ಜೀವನದ ಕೊನೆಗೆ ನಾವು ಬರಬೇಕು..
ಭಗವಾನ್ ಶ್ರೀಕೃಷ್ಣನಿಗೆ ಪಾಂಡವರೆಂದರೆ ಪಂಚಪ್ರಾಣ. ಪಾಂಡವರಿಗಾದರೋ – ಶ್ರೀಕೃಷ್ಣ ಆತ್ಮವೇ ಆಗಿದ್ದ.
ಹೀಗಾಗಿ ಶ್ರೀಕೃಷ್ಣ ಪರಂಧಾಮದ ನಂತರ ಪಾಂಡವರಿಗೆ ಆತನಿಲ್ಲದ ಭೂಮಿ ಶೂನ್ಯವೆನಿಸಿತು.. ಬದುಕು ಸಪ್ಪೆ ಎನಿಸಿತು..!
ಮನಸ್ಸು ಮಹಾಪ್ರಸ್ಥಾನ ಕ್ಕೆ ಅಣಿಯಾಯಿತು..!
ಮಹಾಪ್ರಸ್ಥಾನವೆಂದರೆ ಹಿಂದಿರುಗಿ ಬಾರದ ಪ್ರಯಾಣ.
ಬದುಕು ಸಾಕೆನಿಸಿದಾಗ ಮನಸ್ಸನ್ನು ಪರತತ್ವದಲ್ಲಿ ಲೀನಗೊಳಿಸಿ, ಅನ್ನನೀರುಗಳನ್ನೂ ಪರಿತ್ಯಜಿಸಿ ಶರೀರ ಬೀಳುವವರೆಗೆ ನಡೆಯುತ್ತಲೇ ಭೂಮಂಡಲ ಪರ್ಯಟನೆ ಮಾಡುವ ಒಂದು ಮಹಾವ್ರತ..!!
ರಾಜವಸ್ತ್ರಗಳನ್ನು ತೊರೆದು, ನಾರುಮಡಿಯುಟ್ಟು ಮಹಾಪ್ರಸ್ಥಾನಕ್ಕೆ ಹೊರಟುನಿಂತ ಪಾಂಡವರನ್ನು ಕಂಡು ಹಸ್ತಿನಾವತಿಯೇ ಗೋಳಿಟ್ಟಿತು..
ವನವಾಸದ ನೆನಪು ಮತ್ತಷ್ಟು ದಾರುಣವಾಗಿ ಮರುಕಳಿಸಿತು..  ಪೌರರೆಷ್ಟೇ ಪ್ರಯತ್ನಿಸಿದರೂ ಮುಕ್ತಿಗೆ ಮುಖಮಾಡಿ ನಿಂತಿದ್ದ ಪಾಂಡವರನ್ನು ಹಿಂದಿರುಗಿಸಲು ಸಾಧ್ಯವಾಗಲೇ ಇಲ್ಲ.!   ವನವಾಸಕ್ಕೆ ಹೊರಟುನಿಂತಾಗ ಇದ್ದಂತೆ ಪಾಂಡವರಲ್ಲಿ ಕಿಂಚಿತ್ತಾದರೂ ದುಃಖವಿರಲಿಲ್ಲ.  ಮರಣ ವು ಅವರಿಗೆ ಮಹೋತ್ಸವವೇ ಆಗಿತ್ತು.!  ಮುಂದೆ ಮುಂದೆ ಧರ್ಮರಾಜ, ಮತ್ತೆ ಭೀಮ, ಅರ್ಜುನ, ನಕುಲ-ಸಹದೇವರು, ಕೊನೆಯಲ್ಲಿ ದ್ರೌಪದಿ – ಹೀಗೆ ಸಾಗುತ್ತಿದ್ದ ಪಾಂಡವರನ್ನು ನಾಯಿಯೊಂದು ಹಿಂಬಾಲಿಸಿತು.  ಭೂಮಿಯನ್ನೆಲ್ಲಾ ಸುತ್ತಿ ಕೊನೆಯಲ್ಲಿ ಪಾಂಡವರು ಹಿಮಾಲಯದ ಶಿಖರಗಳನ್ನು ದಾಟಿ ಸಾಗುತ್ತಿದ್ದಾಗ ಮೊದಲಿಗೆ ದ್ರೌಪದಿಯು ಪ್ರಾಣಗಳನ್ನು ತೊರೆದು ಬಿದ್ದು ಬಿಟ್ಟಳು.
ಒಡನೆಯೇ ಭೀಮ ಧರ್ಮರಾಜನನ್ನು ಪ್ರಶ್ನಿಸುತ್ತಾನೆ:” ಅಣ್ಣಾ, ದ್ರೌಪದಿಯೇಕೆ ಯೋಗಭ್ರಷ್ಟಳಾಗಿ ಬಿದ್ದು ಬಿಟ್ಟಳು…!? ”
ಧರ್ಮರಾಜ ಉತ್ತರಿಸಿದ, “ ಐವರನ್ನು ಸಮಾನರಾಗಿ ಪ್ರೀತಿಸಬೇಕಾಗಿದ್ದ ಆಕೆ ಗುಪ್ತವಾಗಿ ಅರ್ಜುನನನ್ನು ಅಧಿಕವಾಗಿ ಪ್ರೀತಿಸುತ್ತಿದ್ದಳು.ಈ ತಾರತಮ್ಯವೇ ಅವಳ ಪತನಕ್ಕೆ ಕಾರಣವಾಯಿತು ”  ಮುಂದೆ ಸಾಗುತ್ತಿದ್ದಂತೆಯೇ  ಸಹದೇವ ಧರೆಗುರುಳಿದಾಗ..
ಭೀಮ ಪುನಃ ಅಣ್ಣನನ್ನು ಪ್ರಶ್ನಿಸಿದ, “ ಅಣ್ಣ, ಸಹದೇವನಿಗೇಕೆ ಹೀಗಾಯಿತು? ”
ಧರ್ಮರಾಜ ಉತ್ತರಿಸಿದ: “ ತನ್ನ ಶಾಸ್ತ್ರಜ್ಞಾನದ ಬಗ್ಗೆ ಸಹದೇವನಿಗೆ ಗುಪ್ತ ಗರ್ವವಿದ್ದಿತು. ಅದುವೇ ಆತನ ಪತನಕ್ಕೆ ಕಾರಣವಾಯಿತು.”
ಮತ್ತೆ ಕುಸಿದವನು ನಕುಲ , ಅಣ್ಣನಲ್ಲಿ ಭೀಮ ನಕುಲನ ಪತನಕ್ಕೆ ಕಾರಣವನ್ನು ಪ್ರಶ್ನಿಸಿದ..
“ ತನ್ನ ಅನನ್ಯ ಸಾಧಾರಣವಾದ ರೂಪದ ಕುರಿತಾದ ಗಾಢ ಗರ್ವವೇ ನಕುಲನ ಪತನಕ್ಕೆ ಕಾರಣ” ವಾಯಿತೆಂದು ಧರ್ಮರಾಜ ಉತ್ತರಿಸಿದ.
ಮತ್ತೆ ಮೃತ್ಯುವಿನ ಸರದಿ
ಅರ್ಜುನ ದಾಯಿತು.
ಕಂಗೆಡುವ ಮನದ ಕಣ್ಣೀರನ್ನು ನುಂಗುತ್ತ ಭೀಮ ದೊಡ್ಡಣ್ಣನನ್ನು ಕೇಳಿದನು:” ಗೀತೋಪದೇಶಕ್ಕೆ ಪಾತ್ರನಾದ ಅರ್ಜುನನ ಸ್ಥಿತಿ ಹೀಗೇಕಾಯಿತು? ”
ಧರ್ಮರಾಜ ಹೀಗೆ ಉತ್ತರಿಸಿದ: “ತನ್ನ ಪರಾಕ್ರಮದ ಬಗೆಗೆ ಅರ್ಜುನನಿಗೆ ಅತಿಶಯವಾದ ಅಹಂಕಾರವಿದ್ದಿತು..  ಅಹಂಕಾರದ ಆವೇಗದಲ್ಲಿ ಲೋಕದ ಎಲ್ಲಾ ವೀರರನ್ನು ಒಂದೇ ದಿನದಲ್ಲಿ ಮಣಿಸಿಬಿಡುವೆನೆಂದು ಆತ ಹೇಳಿಕೊಂಡಿದ್ದ.!  ಆದರೆ ಹಾಗೆ ಮಾಡಲು ಸಾಧ್ಯವಾಗದಿದ್ದುರಿಂದ ಸುಳ್ಳಾಡಿದಂತಾಯಿತು..
ಗರ್ವ ಮತ್ತು ಮಿಥ್ಯಾ ವಚನಗಳು ಅರ್ಜುನನ ಪತನಕ್ಕೆ ಕಾರಣವಾದುವು”  ಮಹಾಪ್ರಸ್ಥಾನ ಮುಂದುವರೆಯಿತು..
ಕೊಂಚ ದೂರ ಹೋಗುವಷ್ಟರಲ್ಲಿ ಸ್ವಯಂ ಭೀಮ ನೇ ಬಿದ್ದುಬಿಟ್ಟ.
ಆದರೆ ಪ್ರಾಣ ಕಳೆದುಕೊಳ್ಳುವುದಕ್ಕೆ ಮುನ್ನ, ಪ್ರಜ್ಞೆಕಳೆದುಕೊಳ್ಳದೆ, ಧೃತಿಗೆಡದೆ ಅಣ್ಣನನ್ನು ಪ್ರಶ್ನಿಸಿದ, “ ಅಣ್ಣಾ, ನಿನ್ನ ಪ್ರಿಯ ಸೋದರನಾದ ನನಗೆ ಹೀಗೇಕಾಗುತ್ತಿದೆ? ”
ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿಯೂ ತನ್ನ ದೋಷಗಳನ್ನು ತಿಳಿಯಬಯಸಿದ ಭೀಮನ ಜ್ಞಾನದಾಹವನ್ನು, ಧೃತಿಯನ್ನು ಯಾರೂ ಮೆಚ್ಚಬೇಕು..!!
ಜೀವಜ್ಯೋತಿ ಆರಿ ಹೋಗುವ ಕೊನೆಯ ಕ್ಷಣಗಳಲ್ಲಿ ತನ್ನ ವ್ಯಕ್ತಿತ್ವದ ಕೊರತೆಗಳನ್ನು ತಿಳಿಹೇಳುವ ಅಣ್ಣನ ತಿಳಿಮಾತುಗಳು ತಮ್ಮನ ಕಿವಿಗಳಿಗೆ ಬಿದ್ದವು.
“ ಬಾಹುಬಲದ ಗರ್ವ ನಿನ್ನ ಪತನದ ಪ್ರಬಲ ಕಾರಣ..
ಅದಕ್ಕಿಂತ ಮುಖ್ಯ ಕಾರಣ – ನೀನು ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತಿದ್ದುದು.  ನಮ್ಮ ಶರೀರ ಧಾರಣೆಗೆ ಎಷ್ಟು ಅಗತ್ಯವಿದೆಯೋ ಅಷ್ಟು ಆಹಾರದ ಮೇಲೆ ಮಾತ್ರವೇ ನಮಗೆ ಅಧಿಕಾರವಿದೆ..
ಜಗತ್ತಿನಲ್ಲಿ ಹಸಿವೆಯಿಂದ ಬಳಲುವ -ಸಾಯುವ ಜೀವಗಳೆಷ್ಟೋ!!
ನಾವೇ ಸಂಪಾದಿಸಿದ್ದಾದರೂ ನಾಲಿಗೆ ಚಪಲಕ್ಕಾಗಿ ಅಗತ್ಯವಿಲ್ಲದೇ ಆಹಾರ ಸೇವಿಸುವುದು ಆ ಜೀವಗಳಿಗೆ ಮಾಡಿದ ಅನ್ಯಾಯ. ಅನ್ನದೇವತೆಗೆ ಮಾಡಿದ ಅಪಚಾರವದು. ”
ಧೀರ ಧರ್ಮಜ ಅಸಹಾಯ ಶೂರನಾಗಿ ಮುಕ್ತಿಯ ಹಾದಿಯಲ್ಲಿ ಮುನ್ನಡೆದ. ಭೂಮಂಡಲಕ್ಕೆ ಚಕ್ರವರ್ತಿ ಎನಿಸಿದ್ದ ಜನನಾಥ ಧರ್ಮಜನ ಜೊತೆ ಉಳಿದಿದ್ದು ಕೊನೆಗೊಂದು ನಾಯಿ ಮಾತ್ರ.
ಬುದ್ಧಿ-ಭಾಷೆಗಳನ್ನು ಮೀರಿದ ಮಹಾ ಯಾತ್ರೆಯನ್ನು ಕೈಗೊಂಡಿದ್ದ ಆ ಮಹಾನುಭಾವನಿಗೆ ಕೆಲಹೊತ್ತಿನಲ್ಲಿಯೇ ದೇವರಾಜನ ದಿವ್ಯ ರಥದ ಘೋಷ ಕೇಳಿಸಿತು.
ಕಲ್ಮಷದ ಕಪ್ಪು ಚುಕ್ಕೆಗಳೇ ಇಲ್ಲದ ಧವಳ ಜೀವನವನ್ನು ಗೌರವಿಸಲು – ಧರೆಯ ದೊರೆಯನ್ನು ದಿವಿಗೆ ಸ್ವಾಗತಿಸಲು ಸ್ವಯಂ ಸ್ವರ್ಗದ ದೊರೆಯೇ ಆಗಮಿಸಿದ.
ದಿವಿ-ಭುವಿಯ ರಾಜರ ಆ ಭವ್ಯ ಸಮಾಗಮದಲ್ಲಿ ದೇವೇಂದ್ರ ಧರ್ಮರಾಜನಿಗೆ ಶರೀರ ಸಹಿತವಾಗಿ ಸ್ವರ್ಗಕ್ಕೆ ಬರಲು ಆಮಂತ್ರಣವಿತ್ತ.
“ ತನ್ನ ಬದುಕನ್ನು ಸ್ವರ್ಗಮಾಡಿದ ತಮ್ಮಂದಿರು ಮತ್ತು ಮಡದಿಯ ಒಡನಾಟ ಸ್ವರ್ಗದಲ್ಲಿಯೂ ಬೇಕೆಂ “ದ ಧರ್ಮರಾಜ.
“ ಶರೀರ ಸಹಿತವಾಗಿ ಸ್ವರ್ಗವೇರುವ ಅಪೂರ್ವ ಸುಯೋಗವು ನಿನ್ನದಾದರೆ, ನಿನ್ನ ತಮ್ಮಂದಿರು ಮತ್ತು ಮಡದಿ ಶರೀರವನ್ನು ತೊರೆದು ಆಗಲೇ ಸ್ವರ್ಗದೆಡೆಗೆ ಪ್ರಯಾಣ ಬೆಳೆಸಿದ್ದಾರೆ ” ಎಂಬುದು ಇಂದ್ರನ ಉತ್ತರವಾಗಿತ್ತು.
ಧರ್ಮರಾಜನ ಮುಂದಿನ ಮನವಿ ಮನಸ್ಸು ಮುಟ್ಟುವಂತಹುದು.
“ ಆಶ್ರಿತರನ್ನು ಕೈ ಬಿಡುವುದು ಸಜ್ಜನರ ಧರ್ಮವಲ್ಲ.
ಸೈನ್ಯ ಕೋಶಗಳು, ಅಮಾತ್ಯ ಪ್ರಜೆಗಳು, ಕೊನೆಗೆ ನನ್ನ ಜೀವದ ಒಡನಾಡಿಗಳೇ ಆಗಿದ್ದ ಸಹೋದರರು, ಮಡದಿಯೂ ಸೇರಿದಂತೆ ಸರ್ವಸ್ವವೂ ನನ್ನಿಂದ ದೂರವಾದರೂ ಜೊತೆಬಿಡದ ಈ ನಾಯಿಯನ್ನು ಬಿಡಲಾರೆ.
ನೀನು ನನ್ನ ವಿಷಯದಲ್ಲಿ ಪ್ರಸನ್ನನಾಗಿರುವುದೇ ನಿಜವಾದರೆ ಸ್ವರ್ಗದಲ್ಲಿ ನನ್ನೊಡನೆ ಈ ನಾಯಿಗೂ ಸ್ಥಾನವನ್ನು ಕಲ್ಪಿಸು. ”
ಚಕಿತನಾದ ಇಂದ್ರ ಹೇಳಿದ, “ ಸ್ವರ್ಗದಲ್ಲಿ ನಾಯಿಗಳಿಗೆ ಅವಕಾಶವಿಲ್ಲ “. (Dogs are not allowed..!)
“ ಹಾಗಿದ್ದರೆ ನನಗೆ ಯಾವ ಸ್ವರ್ಗವೂ ಬೇಡ, ನಾಯಿಯೊಡನೆ ನಾನೂ ಇಲ್ಲಿಯೇ ಇರುತ್ತೇನೆ ” ಧರ್ಮರಾಜನ ಈ ಮಾತುಗಳು ಇಂದ್ರನನ್ನು ದಂಗುಬಡಿಸಿತು.!
ಧರ್ಮ ಬೇಡ..ಆದರೆ ಧರ್ಮದ ಫಲ ಬೇಕು ಎನ್ನುವ ಹುಲುಮಾನವರೆಲ್ಲಿ..?
ಜೀವನಪರ್ಯಂತ ಆಚರಿಸಿದ ಧರ್ಮದ ಫಲವಾಗಿ ಸಾಕ್ಷಾತ್ ಸ್ವರ್ಗವೇ ಹಸ್ತಗತವಾಗುತ್ತಿರುವಾಗಲೇ ಆಶ್ರಿತ-ಪರಿಪಾಲನೆಯೆಂಬ ಧರ್ಮಕ್ಕಾಗಿ ಅದನ್ನು ತ್ಯಜಿಸಲು ಸಿದ್ಧನಾದ ಯುಧಿಷ್ಠಿರನೆಲ್ಲಿ….?
ಧರ್ಮದ ಪರಿಪೂರ್ಣ ಸಾಕ್ಷಾತ್ಕಾರ ಇಂತಹ ಅಮೃತಗಳಿಗೆಯಲ್ಲಲ್ಲದೆ ಇನ್ಯಾವಾಗ ಆಗಲು ಸಾಧ್ಯ?
ಸ್ವರ್ಗಕ್ಕೆ ಬೆನ್ನು ಹಾಕಿ ನಾಯಿ ಇದ್ದ ಕಡೆ ಮುಖಮಾಡಿ ನಿಂತ ಧರ್ಮರಾಜ ನಿಗೆ ಮಹಾದಾಶ್ಚರ್ಯವೇ ಕಾದಿತ್ತು..!!
ನಾಯಿ ಮಾಯವಾಗಿತ್ತು..!!
ಆಸ್ಥಾನ ದಲ್ಲಿ ಧರ್ಮ ನಿಂತಿತ್ತು..!!
ಯಾವ ಧರ್ಮಕ್ಕಾಗಿ ರಾಜ್ಯ ಕೋಶಗಳನ್ನೂ ಕಳೆದು ಕೊಂಡನೋ ,
ಯಾವ ಧರ್ಮಕ್ಕಾಗಿ ತುಂಬಿದ ರಾಜ ಸಭೆಯಲ್ಲಿ ಧರ್ಮಪತ್ನಿಯ ವಸ್ತ್ರಾಪಹರಣ ವನ್ನು ಎದುರಿಸಿದನೋ ,
ಯಾವ ಧರ್ಮಕ್ಕಾಗಿ ಕಾಡಾಡಿಯಾಗಿ ಕ್ಲೇಶಗಳನ್ನು ಅನುಭವಿಸಿದನೋ,
ಯಾವ ಧರ್ಮಕ್ಕಾಗಿ ಸಂಗ್ರಾಮ ಯಜ್ಞದೀಕ್ಷಿತನಾಗಿ ಬಂಧು ಮಿತ್ರರು,ಮುದ್ದು ಮಕ್ಕಳು,
ಯುದ್ಧ ಯಜ್ಞದಲ್ಲಿ ಹತರಾಗಿ-ಹುತರಾಗಿ ಹೋಗುವುದನ್ನು ಕಣ್ಣಾರೆ ಕಂಡನೋ ,
ಯಾವ ಧರ್ಮದ ಪೂರ್ಣಸಾಧನೆಗಾಗಿ ಸರ್ವತ್ಯಾಗದ ಮಹಾಪ್ರಸ್ಥಾನವನ್ನು ಕೈ ಗೊ೦ಡನೋ, ಆ ಧರ್ಮ ಭುವಿಯ ಬದುಕಿನ ಕೊನೆ ಕ್ಷಣಗಳಲ್ಲಿ, ಎಲ್ಲವನ್ನು ಕಳೆದು ಕೊಂಡ ಅಕಿಂಚನ ಸ್ಥಿತಿಯಲ್ಲಿ ಕಣ್ಣೆದುರು ಮೈದಳೆದು ನಿಂತಿತ್ತು..ಧರ್ಮರಾಜನಿಗೆ ತನ್ನಿರವೇ ಮರೆಯಿತು..!!
ನಾಯಿ ನಾಯಿಯಾಗಿರಲಿಲ್ಲ, ಧರ್ಮರಾಜನ ತಂದೆ ಯಮಧರ್ಮರಾಜನಾಗಿದ್ದ..! ಧರ್ಮಸ್ವರೂಪಿಯೇ ಅವನಲ್ಲವೇ?
ಬದುಕೆ೦ಬುದು ಮರಣದೆಡೆಗಿನ ನಿರಂತರ ಪಯಣ..
ಬದುಕೆ೦ಬುದು ಮರಣದ ಸಿದ್ಧತೆ ಮಾತ್ರ..!!
ಕೊನೆಗೊಮ್ಮೆ ಎಲ್ಲವನ್ನೂ ಬಿಡಲೆಂದೇ ಎಲ್ಲವನ್ನೂ ಕೂಡಿಕೊಳ್ಳುವುದೇ ಬದುಕು..
ಬದುಕಿನ ಪ್ರತಿಯೊಂದು ಕ್ಷಣವೂ ಒಂದಿಲ್ಲೊಂದು ಸಂಪಾದನೆಯಾಗುತ್ತಲೇ ಇರುತ್ತದೆ..
ಸಂಬಂಧಗಳು….ಸಂಪತ್ತುಗಳು…….ಏನಿಲ್ಲವೆಂದರೆ ಅನುಭವವಾದರೂ……ಕೂಡಿಕೊಳ್ಳುತ್ತಲೇ ಇರುತ್ತದೆ..
“ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ..”
ಬದುಕಿನ ಕೋಟಿ ಕೋಟಿ ಕ್ಷಣಗಳ ಗಳಿಕೆ ಇಲ್ಲವಾಗಿಬಿಡುವ ಒಂದು ಕ್ಷಣಕ್ಕೆ “ಸಾವು” ಎಂದು ಹೆಸರು..
ಆಸರೆ – ರಕ್ಷಣೆಗಳ ಸುಳಿವೂ ಇಲ್ಲದಾಗಿಬಿಡುವ ಆ ಕ್ಷಣದಲ್ಲಿ ನಮ್ಮನ್ನು ಸಂತೈಸುವ ಸಖನಾರು.?
ಬಲವೇ ..?
ಪರಾಕ್ರಮವೇ ..?
ರೂಪವೇ..?
ವಿದ್ಯೆಯೇ..?
ಮರಣದ ಮಾತು ಹಾಗಿರಲಿ..
ಬದುಕಿನ ಕೊನೆಯವರೆಗೆ ಕೂಡ ಇವುಗಳು ಬರಲಾರವು..
ಕಾಲ ಕಳೆದಂತೆ ಬಲ ಕುಂದುತ್ತದೆ ..
ಪರಾಕ್ರಮ ಮಸುಕಾಗುತ್ತದೆ..
ರೂಪ ಮಾಸುತ್ತದೆ..
ವಿದ್ಯೆ ಮರೆಯುತ್ತದೆ ..
ದ್ರೌಪದಿ ನಕುಲರ ರೂಪವೇನಾಯಿತು ?
ಸಹದೇವನ ವಿದ್ಯೆ ಎಲ್ಲಿಹೋಯಿತು ?
ಭೀಮಾರ್ಜುನರ ಬಲ ಪರಾಕ್ರಮಗಳು ಯಾವ ಪ್ರಯೋಜನಕ್ಕೆ ಬಂದವು?
ಧರ್ಮರಾಜನೆಂದೂ ಕೈಬಿಡದ ಧರ್ಮವೊಂದೇ ತಾನೆ ನಾಯಿಯಾಗಿ ಅವನನ್ನು ಕಾಯುತ್ತಿದ್ದುದು..!!
ಧರ್ಮದೊಡನಿದ್ದರೆ ಮಾತ್ರ ಬಲ ವಿದ್ಯೆ ರೂಪಗಳಿಗೊಂದು ಅರ್ಥ ..
ಹಾಗಿಲ್ಲದಿದ್ದರೆ ಇವುಗಳು ಪತನ ಸೋಪಾನಗಳೇ ಸರಿ ..
ಧರ್ಮಶೀಲನಿಗೆ ಬದುಕಿನ ಕೊನೆ ಧರ್ಮರೂಪದಲ್ಲಿಯೇ ಬಂದರೆ ಉಳಿದವರಿಗೆ ಅದು ಮೃತ್ಯುರೂಪ …
*"*" ಭೋಜರಾಜನ ಜೀವನಸಂದೇಶವನ್ನು ಗಮನಿಸಿ:
ವಾತಾಭ್ರವಿಭ್ರಮಮಿದಂ ವಸುಧಾಧಿಪತ್ಯಂ |
ಆಪಾತಮಾತ್ರ ಮಧುರೋ ವಿಷಯೋಪಭೋಗಃ||
ಪ್ರಾಣಸ್ತೃಣಾಗ್ರ ಜಲಬಿಂದುಸಮೋ ನರಾಣಾಂ |
ಧರ್ಮಸ್ಸಖಾ ಪರಮಹೋ ಪರಲೋಕ ಯಾನೇ ||
(ಗಾಳಿಗೆ ಸಿಕ್ಕಿದ ಮೋಡವೆಷ್ಟು ಸ್ಥಿರವೋ, ರಾಜ್ಯಾಧಿಕಾರವೂ ಕೂಡ ಅಷ್ಟೇ ಸ್ಥಿರವಾದುದು ..
ಭೌತಿಕ ಸುಖಗಳು ಮೇಲ್ನೋಟಕ್ಕೆ ಮಾತ್ರ ಸುಖಕರ ..
ಬೆಳಗಿನ ಹೊತ್ತು ಹುಲ್ಲಿನ ತುದಿಯಲ್ಲಿ ಕುಳಿತ ಮಂಜಿನ ಬಿಂದುವಿನಹಾಗೆ ನಮ್ಮ ಪ್ರಾಣ ..
ಪರಲೋಕ ಪ್ರಯಾಣದ ಪರಮಸಖನೆಂದರೆ ಧರ್ಮವೊಂದೇ ಅಲ್ಲವೇ..?)
*** ಧರ್ಮ ವಿರುವಲ್ಲಿ ಸಾವಿಲ್ಲ ,ನೋವಿಲ್ಲ..
ಧರ್ಮಶೀಲನಾದವನು ಸ್ವರ್ಗಕ್ಕಾಗಿ ಹುಡುಕಬೇಕಾಗಿಲ್ಲ ..
ಅವನಿರುವಲ್ಲಿ ಸ್ವರ್ಗವೇ ಧರೆಗಿಳಿಯುವುದು ..!!

Collected by Whatsapp.

ಹಣಗಳಿಸುವ ಯೋಗವಿದೆಯಾ

*ಧರ್ಮಶಾಸ್ತ್ರದ ಪ್ರಕಾರ ನಿಮ್ಮ ಜಾತಕದಲ್ಲಿ ಹಣಗಳಿಸುವ ಯೋಗವಿದೆಯಾ ಎಂದು ಇಲ್ಲಿ ನೋಡಿ ತಿಳಿದುಕೊಳ್ಳಿ..!*
*ಜನ್ಮ ಕುಂಡಲಿಯಲ್ಲಿ  ಧನಯೋಗಗಳು. ೧*
ಜಾತಕದಲ್ಲಿ ಧನಯೋಗದ ಬಗ್ಗೆ ನೋಡಲು ಲಗ್ನದಿಂದ ಅಥವಾ ಚಂದ್ರನಿಂದ ಎರಡನೆಯ ಮನೆ ಮತ್ತು ಏಕಾದಶ ಮನೆಯನ್ನು ನೋಡಬೇಕಾಗುತ್ತದೆ. ಹನ್ನೋಂದನೆ ಮನೆಯಿಂದ ನಿರಂತರ ಧನಾಗಮನದ ವಿಚಾರ ಮತ್ತು ಎರಡನೇ ಮನೆಯಿಂದ ಸಂಚಿತ ಧನಾಗಮನದ ಬಗ್ಗೆ ತಿಳಿಯಬಹುದು.

*ಕುಂಡಲಿಯಲ್ಲಿ ಈ ಭಾವಗಳು ಮತ್ತು ಭಾವಾಧಿಪತಿಗಳಿಂದ ಧನದ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.*
1. ಶುಕ್ರನಿಂದ ಹಣ, ಸಂಪತ್ತು, ಬಂಗಾರ, ಆಭರಣ ಮುಂತಾದವುಗಳನ್ನು.
2. ಶನಿಯಿಂದ ಸ್ಥಾಯಿ ಸಂಪತ್ತನ್ನು, ಗುರುವಿನಿಂದ ಧನಾಗಮನವನ್ನು.
3.ಕುಂಡಲಿಯಲ್ಲಿ ದ್ವಿತೀಯಾಧಿಪತಿ ಲಗ್ನದಲ್ಲಿ ಇದ್ದರೆ ಜಾತಕರು ಧನವಂತರಾಗುತ್ತಾರೆ.
4. ಧನಾಧಿಪತಿ, ಲಾಭಾಧಿಪತಿ ಶುಭ ಗ್ರಹಗಳ ಜೊತೆ ಕೂಡಿದರೆ ಧನಯೋಗ.
5. ಗುರು ಗ್ರಹ ಮತ್ತು ಕುಜಗ್ರಹ ಯುತಿಯಿದ್ದರೆ ಧನವಂತನಾಗುತ್ತಾರೆ.
6. ಶುಕ್ರ ಗ್ರಹವು ನವಮದಲ್ಲಿ ಗುರುಗ್ರಹದ ಜೊತೆ ಕಲೆತಿದ್ದರೆ ಜಾತಕರು ವಿಶೇಷ ಧನವಂತರಾಗುತ್ತಾರೆ.
7. ದ್ವಿತೀಯಾಧಿಪತಿ ಸ್ವಕ್ಷೇತ್ರ ಅಥವಾ ಉಚ್ಚ ಕ್ಷೇತ್ರದಲ್ಲಿ ಇದ್ದರೆ ಧನವಂತರಾಗುತ್ತಾರೆ.
8. ಧನಕಾರಕನಾದ ಗುರುವು ದ್ವಿತೀಯದಲ್ಲಿ ಬುಧನೊಂದಿಗೆ ಕಲೆತಿದ್ದರೆ ಜಾತಕರು ಧನವಂತರಾಗುತ್ತಾರೆ.
9. ಲಗ್ನದಲ್ಲಿ ಚಂದ್ರ, ಗುರು, ಶುಕ್ರ ಗ್ರಹಗಳು ಇದ್ದರೆ ಜಾತಕರು ಧನವಂತರಾಗುತ್ತಾರೆ.
10. ದ್ವಿತಿಯಾಧಿಪತಿ ಲಾಭ ಸ್ಥಾನದಲ್ಲಿ ಲಾಭಾಧಿಪತಿ ದ್ವಿತೀಯದಲ್ಲಿ ಇದ್ದರೆ ಧನವಂತರಾಗುತ್ತಾರೆ.
11. ರವಿಯು ನವಮದಲ್ಲಿ ಚಂದ್ರನು ತೃತೀಯದಲ್ಲಿ ಗುರುವು ಪಂಚಮದಲ್ಲಿ ಜಾತಕರು ಧನವಂತರಾಗುತ್ತಾರೆ.
12. ಬುಧ, ಶುಕ್ರ ಅಥವಾ ಗುರುಗ್ರಹಗಳಲ್ಲಿ ಯಾವುದಾದರೊಂದು ಗ್ರಹವು ಧನಸ್ಥಾನಲಿದ್ದು ಲಗ್ನಾಧಿಪತಿ ಬಲಿಷ್ಠನಾಗಿದ್ದರೆ ಧನವಂತರಾಗುತ್ತಾರೆ.

*ಜನ್ಮ ಕುಂಡಲಿಯಲ್ಲಿ ಧನಯೋಗಗಳು. 2*
1. ಜಾತಕದಲ್ಲಿ ದ್ವಿತೀಯಾಧಿಪತಿಯು ಕೇಂದ್ರ ಅಥವಾ ತ್ರಿಕೋನ ಸ್ಥಾನದಲ್ಲಿ ಇದ್ದರೆ ಜಾತಕರಿಗೆ ಲಕ್ಷ್ಮೀ ಯೋಗವಾಗುತ್ತದೆ.
2. ಗುರುಗ್ರಹವು ಕೇಂದ್ರದಲ್ಲಿ ಚತುರ್ಥ ನವಮಾಧಿಪತಿಯೊಂದಿಗೆ ಕಲೆತಿದ್ದರೆ ಜಾತಕರು ಧನವಂತರಾಗುತ್ತಾರೆ.
3. ದ್ವಿತೀಯ ಮತ್ತು ಚತುರ್ಥ ಭಾವಗಳಲ್ಲಿ ಶುಭ ಗ್ರಹಗಳು ಅಂದರೆ ಶುಕ್ರ, ಗುರು, ಚಂದ್ರ ಬುಧನಿದ್ದರೆ ಶುಭಕರವಾಗುತ್ತದೆ.
4. ಗುರು ಗ್ರಹವು ಏಕಾದಶದಲ್ಲಿ ಶುಕ್ರಗ್ರಹ ದ್ವಿತೀಯದಲ್ಲಿದ್ದರೆ ಧನವಂತರಾಗುತ್ತಾರೆ.
5. ದ್ವಿತೀಯದಲ್ಲಿ ಶುಕ್ರಗ್ರಹವು ಉಚ್ಚ ಕ್ಷೇತ್ರದಲಿದ್ದರೆ ಧನವಂತನಾಗುತ್ತಾರೆ.
6. ಗುರು ಮತ್ತು ಶುಕ್ರಗ್ರಹಗಳು ಕುಂಡಲಿಯ ದ್ವಿತೀಯ ಭಾವವನ್ನು ನೋಡುತಿದ್ದರೆ ಶುಭಕರ ಧನವಂತರು.
7. ಭಾಗ್ಯಾಧಿಪತಿಯು ಉಚ್ಚಕ್ಷೇತ್ರ, ಸ್ವಕ್ಷೇತ್ರದಲ್ಲಿ ಇದ್ದರೆ ಧನವಂತರು.
8. ಭಾಗ್ಯಾಧಿಪತಿ ಮತ್ತು ಲಗ್ನಾಧಿಪತಿಯು ಏಕಾದಶ ಸ್ಥಾನದಲ್ಲಿ ಕೂಡಿದರೆ ಧನವಂತರಾಗುತ್ತಾರೆ.
9. ಗುರು ಗ್ರಹ ಮತ್ತು ದ್ವಿತೀಯಾಧಿಪತಿಯು ಬುಧ ಶುಕ್ರಗ್ರಹಗಳ ದೃಷ್ಟಿ ಇದ್ದರೆ ಶುಭಕರ.
10. ದ್ವಿತೀಯಾಧಿಪತಿಯು ನವಮದಲ್ಲಿ ಅಥವಾ ಏಕಾದಶದಲ್ಲಿ ಉಚ್ಚಕ್ಷೇತ್ರ ಸ್ವಕ್ಷೇತ್ರದಲಿದ್ದರೆ ಧನವಂತರು.
11. ನವಮದಲ್ಲಿ ಮತ್ತು ದ್ವಿತೀಯದಲ್ಲಿ ಶನಿಗ್ರಹವು ಉಚ್ಚಕ್ಷೇತ್ರದಲಿದ್ದರೆ ಧನವಂತರು.
12. ದ್ವಿತೀಯಾಧಿಪತಿಯು ಉಚ್ಚಗ್ರಹ ಶುಕ್ರ ಅಥವಾ ಗುರು ಗ್ರಹ ಜೊತೆ ಇದ್ದರೆ ಜಾತಕರು ಧನವಂತರಾಗುತ್ತಾರೆ.
Collected by Whatsapp.

ನನ್ನ ಭಾರತದ ಕಿರು ಪರಿಚಯ

ನನ್ನ ಭಾರತದ ಕಿರು ಪರಿಚಯ
ಬಟ್ಟೆ ಹಾಕಿಕೊಳ್ಳಲು ಗೊತ್ತಿಲ್ಲದವರಿಗೆ, ಬಟ್ಟೆ ಹಾಕುವದನ್ನು ಕಲಿಸಿದವರು ನಮ್ಮ ಪೂರ್ವ ಭಾರತೀಯರು ಅರ್ಥಾತ್ ಸಂಸ್ಕೃತ ಪಂಡಿತರು,
ಗಣಿತವನ್ನು ಅರಿದು ಕುಡಿದವರು ಹಾಗೂ ಇಡೀ ಜಗತ್ತಿಗೆ ಗಣಿತವನ್ನು ಕಲಿಸಿದವರು ಸಂಸ್ಕೃತ ಪಂಡಿತರು.
ಜಗತ್ತಿಗೆ ಸೊನ್ನೆ ಕೊಟ್ಟವರು ನಮ್ಮ ಸಂಸ್ಕೃತ ಪಂಡಿತರೇ.
೧೦,೦೦೦ ವರ್ಷಗಳ ಹಿಂದೆಯೇ ನಮ್ಮ ಸಂಸ್ಕೃತ ಪಂಡಿತರು ಭೂಮಿ ಗೋಲಾಕಾರದಲ್ಲಿದೆ ಎಂದು ಹೇಳಿದ್ದರು...ಏಕೆಂದರೆ #ಭೂಗೋಳ ಎಂದೆ ನಾವು ಕರೆಯುತ್ತೇವೆ ಭೂಮಿ ಗೋಳಾಕಾರದಲ್ಲಿದ್ದದ್ದರಿಂದ ಭೂಗೋಳ ಎಂದು ನಮ್ಮ ಸಂಸ್ಕೃತ ಪಂಡಿತರು ಆವಾಗಲೇ
ಹೆಸರಿಸಿದ್ದಾರೆ.
Civilization ಆದ ನಂತರ ವಿದೇಶಿಯರು telescope ಮುಖಾಂತರ ಒಂಭತ್ತು ಗ್ರಹಗಳಿವೆ ಎಂದು ಹೆಸರಿಸಿದರೆ, ನಮ್ಮ ಸಂಸ್ಕೃತ ಪಂಡಿತರು ೧೦,೦೦೦ ವರ್ಷಗಳ ಹಿಂದೆಯೆ # ನವಗ್ರಹ ಎಂದು ಹೆಸರಿಸಿದ್ದಾರೆ. ಅಷ್ಟೇ ಅಲ್ಲ,  ಈ  ಗ್ರಹಗಳ  ಗಾತ್ರ,  ತೂಕ,  ವೇಗ  ಇತ್ಯಾದಿಗಳನ್ನೆಲ್ಲಾ  ನಿರೂಪಿಸಿದ್ದಾರೆ.
ವಿದೇಶಿಯರು trigonometry ಎಂದು ಗಣಿತದಲ್ಲಿ ಹೇಳಿದರೆ, ನಮ್ಮ ಸಂಸ್ಕೃತ ಪಂಡಿತರು #ತ್ರಿಕೋಣಮಿತಿ ಎಂದು ಏಳು-ಎಂಟನೇ ಶತಮಾನದಲ್ಲಿ ಹೇಳಿದ್ದಾರೆ.
ವೇಳೆ ಹೇಳಲು ಬರದ ವಿದೇಶೀಯರಿಗೆ ವೇಳೆ ಹೇಗೆ ಹೇಳಬೇಕು ಎಂದು ಕಲಿಸಿಕೊಟ್ಟವರು ನಮ್ಮ ಸಂಸ್ಕೃತ ಪಂಡಿತರು.
ಓರಿಸ್ಸಾದ ಕೋನಾರ್ಕ್ ಮಂದಿರಕ್ಕೆ ಅಂಟಿಕೊಂಡಂತಹ ೨೪ ಚಕ್ರಗಳನ್ನು ನೋಡಿ ಈಗಲೂ ಪ್ರಖರವಾಗಿ ವೇಳೆ ಹೇಳುವರು.
Live show ಎಂದು ೧೦೦ ವರ್ಷದಿಂದ ವಿದೇಶಿಯರು ಹೇಳುತ್ತ ಬರುತ್ತಿದ್ದರೆ, ನಮ್ಮ ಸಂಸ್ಕೃತಿಯಲ್ಲಿ ಹೇಳಲಾಗಿರುವ ಪ್ರಕಾರ ಮಹಾಭಾರತದಲ್ಲಿ ಈ LIVE SHOW ಪ್ರಮಾಣವಾಗಿದೆ.ಮಹಾಭಾರತದ ಯುದ್ಧವನ್ನು ಕುಳಿತಲ್ಲಿಯೇ ಸಂಜಯನು ಕುರುಡ ಧೃತರಾಷ್ಟ್ರನಿಗೆ ಕಾಮೆಂಟ್ರಿ ಹೇಳ್ತಾನೆ. ಇದು ಸಂಸ್ಕೃತ ಮಾತನಾಡುವ ಕಾಲದಲ್ಲಿಯೇ.
ಈಗಿನ ಕಾರ್ಖಾನೆಯಲ್ಲಿ zinc ಅದಿರು ಪ್ರಮುಖವಾದ ಪಾತ್ರವನ್ನು ವಹಿಸಿದೆ ,ಏಕೆಂದರೆ zinc ಬಳಸಿ galvanizing ಮಾಡಿದರೆ steel productಗಳು ತುಕ್ಕು ಹಿಡಿಯುವದಿಲ್ಲ.....ಉದಾಹರಣೆಗೆ steel ವಿದ್ಯುತ್ ಕಂಬಗಳನ್ನು ನೋಡಿ, silver ಬಣ್ಣದಲ್ಲಿರುತ್ತವೆ,ಕಾರಣ zinc ಉಪಯೋಗ ಮಾಡಿರುತ್ತಾರೆ....
ಆ zinc ಹೇಗೆ mining ಮಾಡಿಬತೆಗೆದುಕೊಳ್ಳಬೇಕೆಂಬ ಪದ್ಧತಿ ಮೊದಲು ಭಾರತೀಯರೇ ಕಂಡುಹಿಡಿದದ್ದು....ಪುರಾವೆ ಇದೆ....ಕೊಲ್ಲೂರಿನಲ್ಲಿ ದೇವಸ್ಥಾನದ ಮುಂದೆ ಈಗಲೂ ೭೫೦ft. ಉಕ್ಕಿನ ಕಂಬವೊಂದನ್ನು ನೆಡಲಾಗಿದೆ. Carbon testing ಪ್ರಕಾರ ಆ ಕಂಬ ೧೫೦೦ ವರ್ಷಗಳ ಹಿಂದೆ ನೆಡಲಾಗಿದೆ..
ವಿದೇಶೀಯರಿಗೆ ಬಂಗಾರ ಎಂದರೆ ಏನು ವಜ್ರ ಎಂದರೇನು ಎಂಬ ತಿಳುವಳಿಕೆ ಇಲ್ಲದೇ ಇರತಕ್ಕಂತಹ ಕಾಲದಲ್ಲಿ ಬಂಗಾರದ ಒಡವೆ ಮಾಡಿಸಿ ದೇವರಿಗೆ ಸಮರ್ಪಿಸುವದು ಅಷ್ಟೆ ಅಲ್ಲ ನಮ್ಮ ಮಹಿಳೆಯರು ಆಭರಣಗಳನ್ನು ಮಾಡಿಸಿ ತೊಡುತ್ತಿದ್ದರು.....
ಜಗತ್ತಿನಲ್ಲಿ ಅತೀ ಪುರಾತನ ಭಾಷೆಯ ಪಟ್ಟಿಯಲ್ಲಿ ಸಂಸ್ಕೃತ ಭಾಷೆ ಮೊಟ್ಟ ಮೊದಲದ್ದಾಗಿದೆ...
ನೆನಪಿರಲಿ ಕನ್ನಡ ಭಾಷೆ ಮೂರನೇಯದ್ದಾಗಿದೆ.
ಈಗೀಗ ವಿದೇಶಿಯರು ಯೋಗಾಸನದತ್ತ ಮುಖಮಾಡಿದ್ದಾರೆ....ಎಷ್ಟೋ ಸಾವಿರ ವರ್ಷಗಳ ಹಿಂದೆಯೇ ಸಂಸ್ಕೃತ ಪಂಡಿತರು ಯೋಗಾಸನವನ್ನು ಹೇಳಿಕೊಟ್ಟಿದ್ದಾರೆ....ವಿಶ್ವಾಮಿತ್ರರು ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದ ಭಂಗಿಗೆ ವಿಶ್ವಾಮಿತ್ರ ಆಸನ ಎಂದು ಹೇಳುವರು.....
ಭೂಮಿ ಸೂರ್ಯನಿಂದ ಎಷ್ಟು ದೂರ ಇದೆ ಎಂದು ವಿದೇಶಿಯರು ಅರ್ಥಾತ್ ನಾಸಾದವರು ೪೦೦-೫೦೦ ವರ್ಷಗಳ ಹಿಂದೆ ಕಂಡುಹಿಡಿದರೆ, ಅದಕ್ಕಿಂತು ಮೊದಲಾಗಿ ಅಕ್ಬರನ ಪ್ರಾಂತ್ಯದಲ್ಲಿ ವಾಸವಾಗಿದ್ದ ತುಲಸೀದಾಸರು ಹನುಮಂತ ದೇವರ ಕುರಿತು ಸ್ತೋತ್ರ ಬರೆಯುತ್ತಾರೆ ಆ ಸ್ತೋತ್ರದಲ್ಲಿ ಎಷ್ಟು ದೂರ ಎಂಬುದನ್ನು ಪ್ರಖರವಾಗಿ ಅಂಕಿಗಳಲ್ಲಿ ಬರೆಯಲಾಗಿದೆ ಕಾರಣ ಹನುಮಂತ ದೇವರು ಸೂರ್ಯನನ್ನು ಉಂಡೆ ಎಂದು ತಿಳಿದು ತಿನ್ನಲು ಹೋಗಿದ್ದರಲ್ಲಾ ಆ ಕಾರಣವೇ ....ಅದಿರಲಿ....ಆ ಸ್ತೋತ್ರ ಹನುಮಾನ ಚಾಲಿಸಾ.....
ಇನ್ನು ಅನೇಕ ಪುರಾವೆಗಳಿವೆ....ನಮ್ಮ ಸಂಸ್ಕೃತ ಪಂಡಿತರೇ ಈ ಇಡೀ ಜಗತ್ತಿನ civilization ಗೆ ಕಾರಣ ಎಂದು ತೋರಿಸಲು.......
ನನ್ನ ಭಾರತ ಶ್ರೇಷ್ಠ ಭಾರತ....
🙏ವಿಶ್ವಗುರುಭಾರತ🙏
ಸಮಸ್ತರೊಂದಿಗೆ ಹಂಚಿಕೊಳ್ಳಿ (share it)

ಬೆಳಿಗ್ಗೆ ಗಂಜಿ ಊಟ ಮಾಡಿದರೆ ಏನಾಗುತ್ತೆ ಗೊತ್ತೇ

ಬೆಳಿಗ್ಗೆ ಗಂಜಿ ಊಟ ಮಾಡಿದರೆ ಏನಾಗುತ್ತೆ ಗೊತ್ತೇ ?
ಬೆಳಗ್ಗಿನ ಉಪಹಾರಕ್ಕೆ  ದೋಸೆ ,ಇಡ್ಲಿ ಮುಂತಾದ ಬಗೆಬಗೆಯ ತಿಂಡಿಗಳನ್ನು ಮಾಡುವುದು ಹೆಚ್ಚಿನವರ  ಅಭ್ಯಾಸ . ಆದರೆ ಹೆಚ್ಚಿನ ಹಳ್ಳಿಗಳಲ್ಲಿ ಇರುವ ಶ್ರಮಿಕವರ್ಗ ರಾತ್ರಿ ಉಳಿದ ಅನ್ನವನ್ನು ಗಂಜಿಯಾಗಿ ಸೇವಿಸುವ ಅಭ್ಯಾಸ ಇಟ್ಟುಕೊಂಡಿದ್ದಾರೆ .ಗಂಜಿ ಉಣ್ಣುವವರನ್ನು ತೀರಾ ಬಡವರು ಎಂದು ಹೆಸರಿಸುವ ಜನ ,ನಿಜವಾಗಲೂ ತಿಳಿಯಬೇಕಾದ ವಿಚಾರವೇನೆಂದರೆ ಅವರು ಆರೋಗ್ಯದ ದೃಷ್ಟಿಯಲ್ಲಿ ನಿಜವಾಗಲೂ ಶ್ರೀಮಂತರು ಎಂದು.ಈ ಬಗ್ಗೆ ಅಧ್ಯಯನ ನಡೆಸಿದ ಸಂಸ್ಥೆಯೊಂದು ಗಂಜಿಯ ಮಹತ್ವದ ಬಗ್ಗೆ ಮಾಹಿತಿ ನೀಡಿದೆ .
ರಾತ್ರಿ ಉಳಿದ ಅನ್ನವನ್ನು (ಅಂದಾಜು ೧೦೦g ಅಕ್ಕಿ) ಮಣ್ಣಿನ  ಮಡಿಕೆಯಲ್ಲಿ ಹನ್ನೆರಡು ಗಂಟೆಗಳ ಕಾಲ ,ನೀರಿನಲ್ಲಿ ಹಾಕಿಟ್ಟು ಮರುದಿನ ಊಟಮಾಡುವುದರಿಂದ ಕಬ್ಬಿಣಾಂಶದ ಪ್ರಮಾಣ 3.4mg ನಿಂದ 73.91mg ವರೆಗೆ ಏರಿಕೆಯಾಗುತ್ತದೆ . ಅದೇ ರೀತಿ ಕ್ಯಾಲ್ಸಿಯಂ ಪ್ರಮಾಣವೂ ಹೆಚ್ಚುತ್ತದೆ . ಇದರಿಂದಾಗಿ ದೇಹಕ್ಕೆ ಶಕ್ತಿ ಹಾಗೂ ದೇಹವನ್ನು ತಂಪಾಗಿರಿಸಲು ಕೂಡಾ ಸಹಾಯಕಾರಿ ಎಂದು ವಿವಿಧ ಭಾಗಗಳ ಆಹಾರ ಅಭ್ಯಾಸದ ಬಗ್ಗೆ ಅಧ್ಯಯನ ನಡೆಸಿದ  ವಿಜ್ಞಾನಿಗಳು ತಿಳಿಸಿದ್ದಾರೆ .ಗಂಜಿ ಊಟವನ್ನು ಮಾಡುವುದರಿಂದ b6 b12 ವಿಟಮಿನ್ ಗಳು,  ಸುಲಭವಾಗಿ ದೊರಕಲು ಸಹಾಯವಾಗುತ್ತದೆ ಹಾಗೂ ಇದನ್ನು ಬೇರೆ ಮೂಲಗಳಿಂದ ಪಡೆಯಲು ತುಂಬಾ ಕಷ್ಟ ಪಡ ಬೇಕಾಗುತ್ತದೆ ಎಂಬ ಅಂಶವನ್ನೂ ತಿಳಿಸಿದ್ದಾರೆ .
ಗಂಜಿಯಲ್ಲಿ ನಡೆಯುವ ಬ್ಯಾಕ್ಟೀರಿಯಾ ಪ್ರಕ್ರಿಯೆಗಳಿಂದ ,ಇದು ಜೀರ್ಣಾಂಗ ಸಾಮರ್ಥ್ಯವನ್ನು ವೃದ್ಧಿಸುವ ಕೆಲಸ ಮಾಡುತ್ತದೆ ಮತ್ತು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ .ಅದೇ ರೀತಿ ವಿವಿಧ ರೀತಿಯ ಗಂಟುನೋವು , ಚರ್ಮ ಸುಕ್ಕು ಕಟ್ಟುವಿಕೆಗಳಿಂದ ಇದು ತಡೆಯುತ್ತೆ ,ಚರ್ಮದ ಕಾಂತಿಗಾಗಿ ಹೆಣ್ಣುಮಕ್ಕಳು ಶೃಂಗಾರ ಸಾಧನಗಳಿಗೆ ಜೋತುಬೀಳಬೇಕಾದ ಅವಶ್ಯಕತೆಯನ್ನು ದೂರಮಾಡುತ್ತದೆ .
ಅಮೇರಿಕನ್ ನ್ಯೂಟ್ರಿಷನ್ ಅಸೋಸಿಯೇಷನ್, ಅನ್ನವನ್ನು ಗಂಜಿಯಾಗಿಸಿ ಉಣ್ಣುವದರಿಂದ ಆಗುವ ಲಾಭಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಿದೆ .
★ಗಂಜಿ ಊಟ ಮಾಡುವುದರಿಂದ ದೇಹವು ಸುಧೃಡ ಹಾಗೂ ಶಕ್ತಿಯುತವಾಗಿರುತ್ತದೆ .
★ಇದು ಜೀರ್ಣಾಂಗ ವ್ಯವಸ್ಥೆಗೆ ಅನುಕೂಲವಾಗಿರುವ ಬ್ಯಾಕ್ಟೀರಿಯಾಗಳನ್ನು ,ದೇಹಕ್ಕೆ ಹೇರಳವಾಗಿ ಒದಗಿಸುತ್ತವೆ.
★ದೇಹವನ್ನು ತಂಪಾಗಿರಿಸುತ್ತೆ .
★ದೇಹದಲ್ಲಿರುವ ಜಡತ್ವ ದೂರವಾಗಿಸಿ ಮಲಬದ್ದತೆಯನ್ನು ತಡೆಗಟ್ಟಲು ಸಹಾಯಕಾರಿ .
★ಅಧಿಕ ರಕ್ತದೊತ್ತಡವನ್ನು ತಡೆಗಟ್ಟಲು ಸಹಾಯಕಾರಿ
★ವಿವಿಧ ರೀತಿಯ ಅಲರ್ಜಿ ಹಾಗೂ ಅಲ್ಸರ್ಗಳನ್ನು ತಡೆಗಟ್ಟುತ್ತದೆ .
★ತಾರುಣ್ಯವನ್ನು ಧೀರ್ಘಾವಾಗಿರಿಸುತ್ತದೆ .
ಮತ್ತೇಕೆ ತಡ ,ಬೆಳಗ್ಗಿನ ತಿಂಡಿಯ ಬದಲಿಗೆ ಗಂಜಿ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ ಹಾಗೂ ಆರೋಗ್ಯವಂತರಾಗಿ

*_"ನಾಗರ ಚೌತಿ"_

*_"ನಾಗರ ಚೌತಿ"_ ಕಲ್ಲಿನ ನಾಗರ ವಿಗ್ರಹಕ್ಕೆ ಅಥವಾ ಮನೆಯಲ್ಲಿನ ನಾಗರ ವಿಗ್ರಹಕ್ಕೆ ತನಿ ಎರೆಯುವ ಕೆಲವು ಸಲಹೆಗಳು..*
ಮೊದಲು ಸ್ನಾನ ಮಾಡೋ ನೀರಿಗೆ ಅರಿಸಿನ, ಎರಡು ಹನಿ ಗೋವು ಮೂತ್ರ, ಪಚ್ಚಕರ್ಪೂರ, ದರ್ಬೆ ಹಾಕಿ ಸಚೇಲ ಸ್ನಾನ ಮಾಡಿ..
ಕಲ್ಯಾಣಿ ಅಥವಾ ಬಾವಿಯಲ್ಲಿ ಸ್ನಾನ ಮಾಡುವುದಾದರೆ ಬೇಡ..
೧..ಮೊದಲು ನಾಗರ ಕಲ್ಲು ಅಥವಾ ವಿಗ್ರಹವನ್ನು "ಶುದ್ಧವಾದ ನೀರಿನಿಂದ ಶುದ್ಧ ಮಾಡಿ.
೨. ನಂತರ ಅರಿಶಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಇದರಿಂದ ವಿಗ್ರಹಕ್ಕೆ ಕಳೆ ಬರುವುದು..
೩. ಹಾಲು, ಜೇನುತುಪ್ಪ ತುಂಬಾ ಇಷ್ಟ ನಾಗದೇವರಿಗೆ ಹಾಕಿ ಅಭಿಷೇಕ ಮಾಡಿ..
ಹಾಲು, ಜೇನುತುಪ್ಪ, ಸಕ್ಕರೆ, ಎಳನೀರು, ಹಣ್ಣು , ತುಪ್ಪ ಹಾಕಿ ಅಭಿಷೇಕ ಮಾಡಿ..
೪. ನಂತರ ಪಚ್ಚಕರ್ಪೂರ ಹಾಕಿದ ನೀರಿನಿಂದ ಶುದ್ಧ ಮಾಡಿ,
೫. ನೀರಿನಿಂದ ಶುದ್ಧ ಮಾಡಿ
೫. ಅರಿಸಿನ ಹಾಕಿದ ನೀರು, ಕುಂಕುಮ ಹಾಕಿದ ನೀರಿನಿಂದ ಅಭಿಷೇಕ ಮಾಡಿ (ದೈವ ಕಳೆ ಬಂದು ದೃಷ್ಟಿದೋಷ ಹೋಗುವುದ)
೬. ಗೆಜ್ಜೆವಸ್ತ್ರ, ಇಡಿ, ಅರಿಸಿನ ಕುಂಕುಮ ಹೂವು ಇಟ್ಟು ಪೂಜೆ ಮಾಡಿ,
ಸುಬ್ರಹ್ಮಣ್ಯ ಅಷ್ಟೋತ್ತರ ಅಥವಾ ಸರ್ಪರಾಜ ಅಷ್ಟೋತ್ತರ ಹೇಳಿಕೊಳ್ಳಿ..
೭. ಊದುಕಡಢಿ, ಏಕಾರ್ತಿ ಮಾಡಿ ನೈವೇದ್ಯ ಮಾಡಿ , (ನೆನೆಅಕ್ಕಿ ನೆನೆಕಡಲೆ, ಚಿಗಳಿ..ಇತ್ಯಾದಿ) ಮಡಿಯಲ್ಲಿ ಮಾಡಿರಬೇಕು..
೮. ನಂತರ ಮಂಗಳಾರತಿ ಮಾಡಿ, 9 ನಮಸ್ಕಾರ ಮಾಡಿ..

ಶಿಶುಜನನವಾದಾಗ ಹುಟ್ಟಿದ ನಕ್ಷತ್ರಗಳು

ಶಿಶುಜನನವಾದಾಗ ಹುಟ್ಟಿದ ನಕ್ಷತ್ರಗಳು , ಗ್ರಹಣ ದೋಷಗಳು ಮತ್ತು  ಶಾಂತಿಗಳು
ಪ್ರತ್ಯೇಕ ವ್ಯಕ್ತಿಗಾಗಿ ಮಾಡುವ ವೈದಿಕ ಪೂಜಾ ವಿಧಾನಕ್ಕೆ ಶಾಂತಿ ಎನ್ನುತ್ತಾರೆ.ಯಾವ ಕಾರಣಕ್ಕಾಗಿ ಯಾವ ಶಾಂತಿಯನ್ನು ಮಾಡಬೇಕು?
ಮಗುವಿನ ಜನನ ಕಾಲದಲ್ಲಿ ನಾನಾವಿಧ ದೋಷಾದಿಗಳು ಬರುತ್ತವೆ. ಇದನ್ನು ಗುರುಗಳ ಮುಖೇನ ತಿಳಿದು ಬಂದಿರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಕೊಳ್ಳಬೇಕು.
೧. ಕೃಷ್ಣಚತುರ್ದಶಿ ಜನನ ಶಾಂತಿ
ಮಗು ಕೃಷ್ಣ ಪಕ್ಷದ ಚತುರ್ದಶಿಯ ದಿನ ಜನನವಾದಲ್ಲಿ ಅನೇಕವಾದ ಅನಿಷ್ಠ ಫಲಗಳು ಬರುತ್ತದೆ.ಚತುರ್ದಶಿ ತಿಥಿಯ ಕಾಲವನ್ನು ಆರು ಭಾಗ ಮಾಡಿ ಒಂದನೇಯ ಭಾಗವನ್ನು ಶುಭ ಎಂತಲೂ,ಏ ಎರಡನೇಯ ಭಾಗವನ್ನು ತಂದೆಗೆ ಅನಿಷ್ಠ ಎಂತಲೂ,ಮೂರನೇಯ ಭಾಗವನ್ನು ತಾಯಿಗೆ ಅನಿಷ್ಠ ಎಂತಲೂ, ನಾಲ್ಕನೇಯ ಭಾಗವನ್ನು ಮಾವನಿಗೆ ಅನಿಷ್ಠ ಶಎಂದೂ,ಐದನೇಯ ಭಾಗವನ್ನು ವಂಶನಾಶ ಎಂತಲೂ,ಆರನೇಯ ಭಾಗವನ್ನು ಧನಹಾನಿ ಎಂದೂ ಶಾಸ್ತ್ರದಲ್ಲಿ ಹೇಳಿದೆ.
೨. ಸಿನೀವಾಲೀ-ಕುಹೂ ಜನನ ಶಾಂತಿ
ಮಗುವು ಅಮವಾಸ್ಯೆಯ ದಿನದಂದು ಜನಿಸಿದಲ್ಲಿ, ಅಮವಾಸ್ಯೆಯ ಪರಮಘಟಿಯನ್ನು ೮ ಭಾಗವನ್ನು ಮಾಡಿ ಪ್ರಥಮ ಭಾಗ ಜನನಕ್ಕೆ ಸಿನೀವಾಲೀ, ಅಷ್ಟಮ ಭಾಗಕ್ಕೆ ಕುಹೂ ಜನನ ಎಂದೂ ಕರೆಯುತ್ತಾರೆ. ಈ ಜನನದಲ್ಲಿ ಬರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿಕೊಳ್ಳಬೇಕು.
೩. ದರ್ಶ ಜನನ ಶಾಂತಿ:
ಅಮವಾಸ್ಯೆ ತಿಥಿಯ ಪರಮಘಟಿಯನ್ನು ಭಾಗವನ್ನಾಗಿ ಮಾಡಿದಾಗ ೨ನೇಯ ಭಾಗದಿಂದ ೬ನೇ ಭಾಗದವರೆಗೆ ಹುಟ್ಟಿದ ಮಗುವಿಗೆ ಬರುವ ದೋಷ ನಿವಾರಣೆಗೆ ದರ್ಶ ಜನನ ಶಾಂತಿ ಅಥವಾ ಅಮವಾಸ್ಯೆ ಜನನ ಶಾಂತಿ ಮಾಡಿಸಿಕೊಳ್ಳಬೇಕು.
೪. ಸೂರ್ಯ ಸಂಕ್ರಾಂತಿ ಜನನ ಶಾಂತಿ ಮತ್ತು ವ್ಯತಿಪಾತ, ವೈದ್ರತಿ, ಅತೀಗಂಡ, ಗಂಡಯೋಗ ಜನನ ಶಾಂತಿ
ಮಗುವು ಮೇಲೆ ಕಾಣಿಸಿದ ಕಾಲದಲ್ಲಿ ಜನಿಸಿದರೆ ಅದರ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿಕೊಳ್ಳಬೇಕು.
೫. ಆಶ್ಲೇಷಾ ಜನನ ಶಾಂತಿ
ಮಗುವು ಆಶ್ಲೇಷಾ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ದೋಷಾದಿಗಳ ನಿವಾರಣೆಗೆ ಶಾಂತಿಗಳನ್ನು ಮಾಡಿಸಿಕೊಳ್ಳಬೇಕು. ಮೊದಲನೇ ಪಾದ ಜನನಕ್ಕೆ ಶುಭ ಫಲ, ದ್ವಿತೀಯ ಪಾದ ಜನನಕ್ಕೆ ಧನನಾಶ, ತೃತೀಯ ಪಾದ ಜನನಕ್ಕೆ ತಾಯಿಗೆ ಅನಿಷ್ಠ.
೬. ಜ್ಯೇಷ್ಠ ನಕ್ಷತ್ರ ಜನನ ಶಾಂತಿ
ಮಗುವು ಜ್ಯೇಷ್ಠ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ದೋಷಾದಿಗಳ ನಿವಾರಣೆಗೆ ಶಾಂತಿಗಳನ್ನು ಮಾಡಿಸಿಕೊಳ್ಳಬೇಕು. ವಿಶೇಷತಃ ೪ನೇ ಪಾದದಲ್ಲಿ ಜನಿಸಿದರೆ ತಂದೆ-ತಾಯಿಗೆ ಅನಿಷ್ಠ.
೭. ಮೂಲಾ ನಕ್ಷತ್ರ ಜನನ ಶಾಂತಿ
ಮಗುವು ಮೂಲಾ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ೧ನೇ ಪಾದಕ್ಕೆ ಅತೀ ಅನಿಷ್ಠ. ೨ನೇ ಪಾದಕ್ಕೆ ತಾಯಿಗೆ ಅನಿಷ್ಠ. ೩ನೇ ಪಾದಕ್ಕೆ ಧನನಾಶ. ೪ನೇ ಪಾದಕ್ಕೆ ಕುಲನಾಶ. ಹೆಣ್ಣು ಮಗು ಈ ನಕ್ಷತ್ರದಲ್ಲಿ ಜನಿಸಿದರೆ ಗಂಡನ ತಂದೆಗೆ ಅತೀ ಅನಿಷ್ಠ.
೮. ಗ್ರಹಣ ಜನನ ಶಾಂತಿ
ಮಗುವು ಸೂರ್ಯ ಅಥವಾ ಚದ್ರ ಗ್ರಹಣ ಕಾಲದಲ್ಲಿ ಜನಿಸಿದರೆ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿಕೊಳ್ಳಬೇಕು.
೯. ಏಕ ನಕ್ಷತ್ರ ಜನನ ಶಾಂತಿ
ತಾಯಿ, ತಂದೆ, ಅಣ್ಣ-ತಮ್ಮ ಎಲ್ಲರ ನಕ್ಷತ್ರ ಒಂದೇ ಆದಲ್ಲಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
೧೦. ವಿಷ ಘಟಿ ಜನನ ಶಾಂತಿ
ಮಗುವು ವಿಷ ನಾಡಿಯಲ್ಲಿ ಜನಿಸಿದರೆ ಸರ್ವರಿಷ್ಠ. ಆದ್ದರಿಂದ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
೧೧. ತ್ರಿಕ ಪ್ರಸವ ಶಾಂತಿ
ತಾಯಿಗೆ ಏಕ ಕಾಲದಲ್ಲಿ ಮೂರು ಮಗುವಿನ ಜನನವಾದರೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
೧೨. ಭದ್ರಾ ಜನನ ಶಾಂತಿ:
ಭದ್ರ ಯೋಗದಲ್ಲಿ ಜನಿಸಿದ ಮಗುವಿಗೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
೧೩. ಅಧೋಮುಖ ಜನನ ಶಾಂತಿ
ಮಗು ಜನಿಸಿವಾಗ ಕೆಳಮುಖವಾಗಿ ಜನಿಸಿದರೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
೧೪. ಸದಂತ ಜನನ ಶಾಂತಿ
ಮಗು ಹುಟ್ಟಿದಾಗಲೇ ಹಲ್ಲು ಇದ್ದರೆ ಬರುವ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
೧೫. ಯಮಳ ಜನನ ಶಾಂತಿ
ಏಕ ಕಾಲದಲ್ಲಿ ಎರಡು ಮಗುವಿನ ಜನನವಾದಲ್ಲಿ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು..
೧೬. ಪ್ರಸವ ವೈಕ್ರತಿ ಜನನ ಶಾಂತಿ
ಮಗು ಜನಿಸುವಾಗ ಅಂಗ ವಿಕಲವಿದ್ದಲ್ಲಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
೧೭. ದಿನ ಕ್ಷಯ, ವ್ಯತಿಪಾತ ಯೋಗಾದಿ ಜನನ ಶಾಂತಿ
೧೮. ಬಾಲಾರಿಷ್ಠ ಜನನ ಶಾಂತಿ
ಮಗು ಜನಿಸಿದಾಗ ಜನ್ಮದಲ್ಲಿ ರವಿ, ಕುಜ,ಶನಿ,ರಾಹು,ಕೇತುಗಳು ವಿಷಮ ಸ್ಥಿತವಾದಲ್ಲಿ ವಿಪರೀತ ಕಷ್ಟಗಳನ್ನು ಕೊಡುತ್ತದೆ. ಈ ಕಷ್ಟಗಳ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಕೊಳ್ಳಬೇಕು. ಈ ಶಾಂತಿಯನ್ನು ಮಗುವಿನ ಜನ್ಮದ ನಂತರದ ೧೨ನೆ ದಿನದ ಮೇಲೆ ಮಗು ಚಿಕ್ಕದಿದ್ದಾಗಲೆ ಮಾಡಿಕೊಳ್ಳುವುದು ಒಳ್ಳೆಯದು.
೧೯. ಅರಿಷ್ಟತ್ರಯ ಶಾಂತಿ
ಮಗು ಜನಿಸಿದಾಗ ವಿಷಮ ಸ್ಥಾನ ಸ್ಥಿತರಾದ ಗ್ರಹದಿಂದ ಬರುವ ದೋಷ ನಿವಾರಣೆಗಾಗಿ ಈ ಶಾಂತಿ ಅಗತ್ಯ.
೨೦. ಪಂಚಮಾರಿಷ್ಟ ಶಾಂತಿ
ಮಗು ಜನಿಸಿದಾಗ ಜನ್ಮ ಲಗ್ನ-ರಾಶಿಯಿಂದ ಪಂಚಮದಲ್ಲಿ ರವಿ ಇದ್ದರೆ ತಂದೆಗೆ ಅನಿಷ್ಠ, ಶನಿ ಇದ್ದರೆ ತಾಯಿಗೆ ಅನಿಷ್ಠ, ಕುಜ ಇದ್ದರೆ ಸಹೋದರೆನಿಗೆ, ಚಂದ್ರ ಇದ್ದರೆ ಮಾವನಿಗೆ, ಗುರುವಿದ್ದರೆ ತಾಯಿಯ ತಂದೆಗೆ, ಶುಕ್ರನಿದ್ದರೆ ಅಜ್ಜನಿಗೆ, ಶನಿ-ರಾಹುಗಳಿದ್ದರೆ ಮಗುವಿಗೆ ಹಾಗೂ ಕೇತುವಿದ್ದಲ್ಲಿ ಸಹೋದರನಿಗೆ ಅನಿಷ್ಠವಾದುದರಿಂದ ಈ ಶಾಂತಿಯ ಅವಶ್ಯಕತೆ ಇರುತ್ತದೆ.
೨೧. ಗೋಮುಖ ಪ್ರಸವ ಶಾಂತಿ
ಮಗು ಜನಿಸಿದಾಗ ಬಂದಿರುವ ದಿನಕ್ಷಯ, ವ್ಯತೀಪಾತ-ವಾಘಾತ, ವಿಷ್ಠಿ-ಶೂಲ, ಗಂಡ-ಮೃತ್ಯು ಯೋಗ, ದಗ್ದಯೋಹ, ಆಶ್ಲೇಷ, ಜ್ಯೇಷ್ಠ, ಮೂಲಾ ನಕ್ಷತ್ರದಲ್ಲಿ ಜನಿಸಿದಾಗ ಎಲ್ಲಾ ದೋಷ ನಿವಾರಣೆಗೆ ಈ ಶಾಂತಿಯನ್ನು ಮತ್ತು ಗೋ ಗರ್ಭ ಜನನವನ್ನು ಮಾಡಿ ಆಮೇಲೆ ಉಕ್ತವಾದ ಶಾಂತಿಯನ್ನು ಮಾಡಬೇಕು...

Collected by Whatsapp.