ಬುಧವಾರ, ಆಗಸ್ಟ್ 2, 2017

ಹಣಗಳಿಸುವ ಯೋಗವಿದೆಯಾ

*ಧರ್ಮಶಾಸ್ತ್ರದ ಪ್ರಕಾರ ನಿಮ್ಮ ಜಾತಕದಲ್ಲಿ ಹಣಗಳಿಸುವ ಯೋಗವಿದೆಯಾ ಎಂದು ಇಲ್ಲಿ ನೋಡಿ ತಿಳಿದುಕೊಳ್ಳಿ..!*
*ಜನ್ಮ ಕುಂಡಲಿಯಲ್ಲಿ  ಧನಯೋಗಗಳು. ೧*
ಜಾತಕದಲ್ಲಿ ಧನಯೋಗದ ಬಗ್ಗೆ ನೋಡಲು ಲಗ್ನದಿಂದ ಅಥವಾ ಚಂದ್ರನಿಂದ ಎರಡನೆಯ ಮನೆ ಮತ್ತು ಏಕಾದಶ ಮನೆಯನ್ನು ನೋಡಬೇಕಾಗುತ್ತದೆ. ಹನ್ನೋಂದನೆ ಮನೆಯಿಂದ ನಿರಂತರ ಧನಾಗಮನದ ವಿಚಾರ ಮತ್ತು ಎರಡನೇ ಮನೆಯಿಂದ ಸಂಚಿತ ಧನಾಗಮನದ ಬಗ್ಗೆ ತಿಳಿಯಬಹುದು.

*ಕುಂಡಲಿಯಲ್ಲಿ ಈ ಭಾವಗಳು ಮತ್ತು ಭಾವಾಧಿಪತಿಗಳಿಂದ ಧನದ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.*
1. ಶುಕ್ರನಿಂದ ಹಣ, ಸಂಪತ್ತು, ಬಂಗಾರ, ಆಭರಣ ಮುಂತಾದವುಗಳನ್ನು.
2. ಶನಿಯಿಂದ ಸ್ಥಾಯಿ ಸಂಪತ್ತನ್ನು, ಗುರುವಿನಿಂದ ಧನಾಗಮನವನ್ನು.
3.ಕುಂಡಲಿಯಲ್ಲಿ ದ್ವಿತೀಯಾಧಿಪತಿ ಲಗ್ನದಲ್ಲಿ ಇದ್ದರೆ ಜಾತಕರು ಧನವಂತರಾಗುತ್ತಾರೆ.
4. ಧನಾಧಿಪತಿ, ಲಾಭಾಧಿಪತಿ ಶುಭ ಗ್ರಹಗಳ ಜೊತೆ ಕೂಡಿದರೆ ಧನಯೋಗ.
5. ಗುರು ಗ್ರಹ ಮತ್ತು ಕುಜಗ್ರಹ ಯುತಿಯಿದ್ದರೆ ಧನವಂತನಾಗುತ್ತಾರೆ.
6. ಶುಕ್ರ ಗ್ರಹವು ನವಮದಲ್ಲಿ ಗುರುಗ್ರಹದ ಜೊತೆ ಕಲೆತಿದ್ದರೆ ಜಾತಕರು ವಿಶೇಷ ಧನವಂತರಾಗುತ್ತಾರೆ.
7. ದ್ವಿತೀಯಾಧಿಪತಿ ಸ್ವಕ್ಷೇತ್ರ ಅಥವಾ ಉಚ್ಚ ಕ್ಷೇತ್ರದಲ್ಲಿ ಇದ್ದರೆ ಧನವಂತರಾಗುತ್ತಾರೆ.
8. ಧನಕಾರಕನಾದ ಗುರುವು ದ್ವಿತೀಯದಲ್ಲಿ ಬುಧನೊಂದಿಗೆ ಕಲೆತಿದ್ದರೆ ಜಾತಕರು ಧನವಂತರಾಗುತ್ತಾರೆ.
9. ಲಗ್ನದಲ್ಲಿ ಚಂದ್ರ, ಗುರು, ಶುಕ್ರ ಗ್ರಹಗಳು ಇದ್ದರೆ ಜಾತಕರು ಧನವಂತರಾಗುತ್ತಾರೆ.
10. ದ್ವಿತಿಯಾಧಿಪತಿ ಲಾಭ ಸ್ಥಾನದಲ್ಲಿ ಲಾಭಾಧಿಪತಿ ದ್ವಿತೀಯದಲ್ಲಿ ಇದ್ದರೆ ಧನವಂತರಾಗುತ್ತಾರೆ.
11. ರವಿಯು ನವಮದಲ್ಲಿ ಚಂದ್ರನು ತೃತೀಯದಲ್ಲಿ ಗುರುವು ಪಂಚಮದಲ್ಲಿ ಜಾತಕರು ಧನವಂತರಾಗುತ್ತಾರೆ.
12. ಬುಧ, ಶುಕ್ರ ಅಥವಾ ಗುರುಗ್ರಹಗಳಲ್ಲಿ ಯಾವುದಾದರೊಂದು ಗ್ರಹವು ಧನಸ್ಥಾನಲಿದ್ದು ಲಗ್ನಾಧಿಪತಿ ಬಲಿಷ್ಠನಾಗಿದ್ದರೆ ಧನವಂತರಾಗುತ್ತಾರೆ.

*ಜನ್ಮ ಕುಂಡಲಿಯಲ್ಲಿ ಧನಯೋಗಗಳು. 2*
1. ಜಾತಕದಲ್ಲಿ ದ್ವಿತೀಯಾಧಿಪತಿಯು ಕೇಂದ್ರ ಅಥವಾ ತ್ರಿಕೋನ ಸ್ಥಾನದಲ್ಲಿ ಇದ್ದರೆ ಜಾತಕರಿಗೆ ಲಕ್ಷ್ಮೀ ಯೋಗವಾಗುತ್ತದೆ.
2. ಗುರುಗ್ರಹವು ಕೇಂದ್ರದಲ್ಲಿ ಚತುರ್ಥ ನವಮಾಧಿಪತಿಯೊಂದಿಗೆ ಕಲೆತಿದ್ದರೆ ಜಾತಕರು ಧನವಂತರಾಗುತ್ತಾರೆ.
3. ದ್ವಿತೀಯ ಮತ್ತು ಚತುರ್ಥ ಭಾವಗಳಲ್ಲಿ ಶುಭ ಗ್ರಹಗಳು ಅಂದರೆ ಶುಕ್ರ, ಗುರು, ಚಂದ್ರ ಬುಧನಿದ್ದರೆ ಶುಭಕರವಾಗುತ್ತದೆ.
4. ಗುರು ಗ್ರಹವು ಏಕಾದಶದಲ್ಲಿ ಶುಕ್ರಗ್ರಹ ದ್ವಿತೀಯದಲ್ಲಿದ್ದರೆ ಧನವಂತರಾಗುತ್ತಾರೆ.
5. ದ್ವಿತೀಯದಲ್ಲಿ ಶುಕ್ರಗ್ರಹವು ಉಚ್ಚ ಕ್ಷೇತ್ರದಲಿದ್ದರೆ ಧನವಂತನಾಗುತ್ತಾರೆ.
6. ಗುರು ಮತ್ತು ಶುಕ್ರಗ್ರಹಗಳು ಕುಂಡಲಿಯ ದ್ವಿತೀಯ ಭಾವವನ್ನು ನೋಡುತಿದ್ದರೆ ಶುಭಕರ ಧನವಂತರು.
7. ಭಾಗ್ಯಾಧಿಪತಿಯು ಉಚ್ಚಕ್ಷೇತ್ರ, ಸ್ವಕ್ಷೇತ್ರದಲ್ಲಿ ಇದ್ದರೆ ಧನವಂತರು.
8. ಭಾಗ್ಯಾಧಿಪತಿ ಮತ್ತು ಲಗ್ನಾಧಿಪತಿಯು ಏಕಾದಶ ಸ್ಥಾನದಲ್ಲಿ ಕೂಡಿದರೆ ಧನವಂತರಾಗುತ್ತಾರೆ.
9. ಗುರು ಗ್ರಹ ಮತ್ತು ದ್ವಿತೀಯಾಧಿಪತಿಯು ಬುಧ ಶುಕ್ರಗ್ರಹಗಳ ದೃಷ್ಟಿ ಇದ್ದರೆ ಶುಭಕರ.
10. ದ್ವಿತೀಯಾಧಿಪತಿಯು ನವಮದಲ್ಲಿ ಅಥವಾ ಏಕಾದಶದಲ್ಲಿ ಉಚ್ಚಕ್ಷೇತ್ರ ಸ್ವಕ್ಷೇತ್ರದಲಿದ್ದರೆ ಧನವಂತರು.
11. ನವಮದಲ್ಲಿ ಮತ್ತು ದ್ವಿತೀಯದಲ್ಲಿ ಶನಿಗ್ರಹವು ಉಚ್ಚಕ್ಷೇತ್ರದಲಿದ್ದರೆ ಧನವಂತರು.
12. ದ್ವಿತೀಯಾಧಿಪತಿಯು ಉಚ್ಚಗ್ರಹ ಶುಕ್ರ ಅಥವಾ ಗುರು ಗ್ರಹ ಜೊತೆ ಇದ್ದರೆ ಜಾತಕರು ಧನವಂತರಾಗುತ್ತಾರೆ.
Collected by Whatsapp.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ