ಬುಧವಾರ, ಫೆಬ್ರವರಿ 7, 2018

ಮಹಾದಾಯಿ ನದಿ ವಿಚಾರ

ಮಹಾದಾಯಿ ನದಿ ವಿಚಾರವಾಗಿ ಮೋದಿಜಿ ನ ದೂಷಿಸುವ ಮುಂಚೆ ಸತ್ಯವನ್ನು ಅರಿಯಿರಿ...ಮುಗ್ದ ಜನರ ಕಣ್ಣಿಗೆ ಮಣ್ಣು ಎರಚುತ್ತಿರುವವರ ನಿಜ ಬಣ್ಣ ಬಯಲು ಮಾಡಿ...
ಅವಳೊಬ್ಬಳ ವಿರೋಧದಿಂದಾಗಿ  ಮಹದಾಯಿ ಹೋರಾಟಗಾರರು ಕಣ್ಣೀರು ಇಡುತ್ತಿದ್ದಾರೆ!! ಕರ್ನಾಟಕ ಹೊತ್ತಿ ಉರಿಯುತ್ತಿದೆ!! ಆಕೆ ಯಾರು ಗೊತ್ತಾ?!
ಇದೇನು ತುಂಬಾ ಜಟಿಲವಾದ ಸಮಸ್ಯೆಯೂ ಅಲ್ಲ, ಬಗೆಹರಿಸಲಾಗದಂಥ ವಿವಾದವೂ ಅಲ್ಲ. ಈ ಸಮಸ್ಯೆಗೆ ಪರಿಹಾರ ಕಂಡು ಹುಡುಕುವ ಮೊದಲು ವಿನಾಕಾರಣ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಕಟಕಟೆಗೆ ಎಳೆದು ತಂದು ನಿಲ್ಲಿಸುವ, ಬಿಜೆಪಿಯನ್ನು ದೂಷಿಸುವ ಮೂಲಕ ಈ ಹಿಂದಿನ ತನ್ನ ಇಬ್ಬಂದಿ ನಿಲುವನ್ನು ಮರೆಮಾಚಿಕೊಳ್ಳುವ ರಾಜಕೀಯ ತಂತ್ರಗಾರಿಕೆಯನ್ನು ಕಾಂಗ್ರೆಸ್ ಬಿಡಬೇಕು ಅಷ್ಟೇ. ಅದಕ್ಕೂ ಮೊದಲು ವಿಷಯಕ್ಕೆ ಬರೋಣ…
ದಿನಾಂಕ: 24-11-2006.
ಕೆ. ವೋಹ್ರಾ, ಹಿರಿಯ ಜಂಟಿ ಆಯುಕ್ತ, ಕೇಂದ್ರ ಜಲಸಂಪನ್ಮೂಲ ಖಾತೆ, ಭಾರತ ಸರಕಾರ, ಶ್ರಮ ಶಕ್ತಿ ಭವನ, ರಫಿ ಮಾಗ೯, ಹೊಸದೆಹಲಿ. ನಾನು ಈ ಮಧ್ಯಂತರ ಅಜಿ೯ಯನ್ನು ಓದಿ, ಅಥೈ೯ಸಿಕೊಂಡು ದೃಢೀಕರಿಸುತ್ತಿದ್ದೇನೆ ಹಾಗೂ ಈ ಅಫಿಡವಿಟ್ಟಿನಲ್ಲಿರುವ ಎಲ್ಲ ಅಂಕಿ ಅಂಶ, ಸನ್ನಿವೇಶಗಳಿಗೆ ಖುದ್ದು ಸಾಕ್ಷೀಭೂತನಾಗಿ ಭಾರತ ಸರಕಾರದ ಪರವಾಗಿ ಪ್ರಮಾಣೀಕರಿಸುತ್ತಿದ್ದೇನೆ.
…..26-04-2006 ರಂದು ಕೇಂದ್ರ ಜಲ ಆಯೋಗದ(ಸಿಡಬ್ಯ್ಲೂಸಿ) ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕನಾ೯ಟಕ, ಗೋವಾ ಮತ್ತು ಮಹಾರಾಷ್ಟ್ರ ಈ ಮೂರೂ ರಾಜ್ಯಗಳಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಮಹದಾಯಿ ನದಿಯಿಂದ 7.56 ಟಿಎಂಸಿ ನೀರನ್ನು ಬೇರೆಡೆಗೆ ತಿರುಗಿಸುವ ಕನಾ೯ಟಕದ ಪ್ರಸ್ತಾವಕ್ಕೆ ಗೋವಾ ಮುಖ್ಯಮಂತ್ರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕೇಂದ್ರ ಸರಕಾರ(ಜಲಸಂಪನ್ಮೂಲ ಖಾತೆ) ಒಂದು ನಿಧಾ೯ರಕ್ಕೆ ಬಂದಿದೆ. ಈ ವಿವಾದವನ್ನು ಮಾತುಕತೆ ಮೂಲಕ ಸೌಹಾದ೯ಯುತವಾಗಿ ಬಗೆಹರಿಸಲು ಸಾಧ್ಯವಿಲ್ಲ. ಹಾಗಾಗಿ ಅಂತರ್ ರಾಜ್ಯ ಜಲವಿವಾದ ಕಾಯಿದೆ-1956 ಹಾಗೂ ಅಂತರ್ ರಾಜ್ಯ ಜಲವಿವಾದ ನಿಯಮ 1959ರ ಅನ್ವಯ ಮುಂದಿನ ಕ್ರಮಕ್ಕೆ ಸಚಿವಾಲಯ ಮುಂದಾಗಿದೆ.
ಹಾಗಂತ ಸುಪ್ರೀಂ ಕೋಟ್‍೯ಗೆ ಅಫಿಡವಿಟ್ ಸಲ್ಲಿಸಲಾಯಿತು. ಆಗಿನ ಕೇಂದ್ರ ಸರಕಾರ ಯಾರದ್ದು? ಕಾಂಗ್ರೆ ಸ್ಸಿನದ್ದು. ಆಗಿನ ಪ್ರಧಾನಿ ಯಾರಾಗಿದ್ದರು? ಡಾ. ಮನಮೋಹನ್ ಸಿಂಗ್. ಆಗಿನ ಗೋವಾ ಸರಕಾರ ಯಾರದ್ದಾಗಿತ್ತು? ಕಾಂಗ್ರೆ ಸ್ಸಿನದ್ದು. ಕಾಂಗ್ರೆಸ್ ಮುಖ್ಯಮಂತ್ರಿ ಯಾರಾಗಿದ್ದರು? ಪ್ರತಾಪ್ ಸಿಂಗ್ ರಾಣೆ. ಇಲ್ಲಿಗೇ ಮುಗಿಯಲಿಲ್ಲ!
ದಿನಾ೦ಕ: 29-05-2007.
ಗೋವಾದಲ್ಲಿ ವಿಧಾನಸಭೆ ಚುನಾವಣೆ ಏಪಾ೯ಡಾಗಿತ್ತು. ಚುನಾವಣಾ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಲು ಕಾಂಗ್ರೆ ಸ್‍ನ ಅಧಿನಾಯಕಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಬಂದಿದ್ದರು. ಚುನಾವಣೆಯಲ್ಲಿ ಗೆಲ್ಲಬೇಕೆಂದು ಬಹಳ ವೀರಾವೇಶದಿಂದ ಮಾತಿಗಿಳಿದರು. “ಯಾವುದೇ ಕಾರಣಕ್ಕೂ ಮಹದಾಯಿ ನದಿ ನೀರನ್ನು ಬೇರೆಡೆಗೆ ತಿರುಗಿಸಲು ಬಿಡುವುದಿಲ್ಲ’ ಎಂದರು. ಮುಂದುವರಿದು, “ಈ ಮಾತಿಗೆ ನಾನು ಬದ್ಧಳಾಗಿದ್ದೇನೆ’ ಎಂದು ಸಾವ೯ಜನಿಕವಾಗಿ ಶಪಥ ಮಾಡಿದರು! ಪರಿಣಾಮವಾಗಿ ಮತ್ತೆ ಗೋವಾದಲ್ಲಿ ಕಾಂಗ್ರೆ ಸ್ ಸರಕಾರ ಬಂತು! ಸೋನಿಯಾ ಗಾಂಧಿಯವರ ವಾಗ್ದಾನ ಹಾಗೂ ತಂತ್ರಗಾರಿಕೆ ಫಲ ಕೊಟ್ಟಿತು. ದಿಗಂಬರ್ ಕಾಮತ್ ಮುಖ್ಯಮಂತ್ರಿಯಾದರು. 2005ರಿಂದ 2012ರವರೆಗೂ ಗೋವಾದಲ್ಲಿ ಇದ್ದಿದ್ದು ಕಾಂಗ್ರೆ ಸ್ ಸರಕಾರವೇ. ಇಷ್ಟೂ ಕಾಲ ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಇದ್ದಿದ್ದೂ ಕಾಂಗ್ರೆ ಸ್ ಸರಕಾರವೇ. ಕೋಟಿ೯ನಾಚೆ ಸೌಹಾದ೯ಯುತ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಸುಪ್ರೀಂ ಕೋಟಿ೯ಗೆ ಕೇಂದ್ರ ಸರಕಾರ ಅಫಿಡವಿಟ್ ಸಲ್ಲಿಸಿದ್ದು, ಕನಾ೯ಟಕ ಸರಕಾರದ ಅಭೀಪ್ರಾಯ ಕೇಳದೆ, ಗಮನಕ್ಕೆ ತಾರದೆ ನ್ಯಾಯಮಂಡಳಿ ಅಥವಾ ನ್ಯಾಯಾಧಿಕರಣವನ್ನು (ಟ್ರಿಬ್ಯೂನಲ್) ಕೇಂದ್ರ ಸರಕಾರ ಸ್ಥಾಪನೆ ಮಾಡಿದ್ದೂ ಇದೇ ಕಾಲದಲ್ಲಿ!
ಹಾಗಿರುವಾಗ, ಈಗ ಮತ್ತ್ಯಾರನ್ನೋ ಏಕೆ ದೂಷಿಸುತ್ತಿದ್ದೀರಿ ಕಾಂಗ್ರೆ ಸ್ಸಿಗರೇ?!
ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕು ಎಂದು ಬೊಬ್ಬೆ ಹೊಡೆಯುತ್ತಿದ್ದೀರಲ್ಲ, ನಿಮ್ಮ ಪ್ರಧಾನಿ ಮನಮೋಹನ್‍ಸಿಂಗರು 2006ರಿಂದ 2014ರವರೆಗೂ ನಿದ್ರೆ ಮಾಡುತ್ತಿದ್ದರಾ? ಕೋಟಿ೯ನಾಚೆ ಸೌಹಾದ೯ಯುತವಾಗಿ ಬಗೆಹರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋಟ್‍೯ ಮುಂದೆ ಹೇಳಿದವರು ಈಗೇಕೆ ನರೇಂದ್ರ ಮೋದಿಯವರತ್ತ ಬೆರಳು ತೋರುತ್ತಿದ್ದೀರಿ?
ಟ್ರಿಬ್ಯೂನಲ್ ರಚನೆಯಾದಾಗ ಕೇಂದ್ರ ಸರಕಾರದಲ್ಲಿ ಮಂತ್ರಿಗಳಾಗಿದ್ದ ಐವರು ಕನಾ೯ಟಕ ಕಾಂಗ್ರೆ ಸ್ಸಿಗರು (ಮೋಯ್ಲಿ, ಕೃಷ್ಣ, ಖಗೆ೯, ಮುನಿಯಪ್ಪ, ಆಸ್ಕರ್) ಏಕೆ ಧ್ವನಿಯೆತ್ತಿರಲಿಲ್ಲ? ಪ್ರಧಾನಿ ಮನಮೋಹನ್ ಸಿಂಗ್ ಮಧ್ಯಸ್ಥಿಕೆ ವಹಿಸಬೇಕೆಂದು ಆಗೇಕೆ ಒತ್ತಾಯಿಸಿರಲಿಲ್ಲ? ನ್ಯಾಯಮಂಡಳಿ ರಚಿಸುವ ಮೊದಲು ನಮ್ಮನ್ನುಸಂಪಕಿ೯ಸಿ, ನಮ್ಮ ಗಮನಕ್ಕೆ ತನ್ನಿ, ಕಳಸ-ಬಂಡೂರಿ ಕಾಮಗಾರಿ ಮುಂದುವರಿಯುವುದಕ್ಕೆ ಅಡ್ಡಿಪಡಿಸಬೇಡಿ ಎಂದು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮನವಿ ಮಾಡಿಕೊಂಡಿದ್ದರೂ ಗಮನಕ್ಕೇ ತಾರದೆ ಏಕಾಏಕಿ ನ್ಯಾಯಮಂಡಳಿಯನ್ನು ಕಾಂಗ್ರೆ ಸ್ ರಚನೆ ಮಾಡಿದ್ದೇಕೆ? 2010 ರಲ್ಲಿನ್ಯಾಯಮಂಡಳಿಯನ್ನು ರಚನೆ ಮಾಡಿ ಕೈತೊಳೆದುಕೊಳ್ಳಲು ಪ್ರಯತ್ನಿಸಿದ್ದೇನೋ ಸರಿ. ಆದರೆ ಅದಕ್ಕೆ ಬೇಕಾದ ಸ್ಥಳ, ಸಿಬ್ಬಂದಿ, ಸಲಕರಣೆ ನೀಡಲು 2012ರವರೆಗೂ, ಸುಮಾರು 3 ವಷ೯ಗಳ ಕಾಲ ವಿಳಂಬ ಮಾಡಿದ್ದೇಕೆ? ಇದೆಲ್ಲಕ್ಕಿಂತ ಮುಖ್ಯವಾಗಿ 2012ರಲ್ಲಿ ನ್ಯಾಯಮಂಡಳಿಯ ಕಲಾಪ ಆರಂಭವಾದ ಮೇಲೆ ಗೋವಾ ಸರಕಾರ ಮಧ್ಯಂತರ ಅಜಿ೯ ಸಲ್ಲಿಸಿ ಕಳಸಾ-ಬಂಡೂರಿ ಕಾಮಗಾರಿಯನ್ನು ತಡೆಯಲು ಯತ್ನಿಸಿದಾಗ ನ್ಯಾಯಮಂಡಳಿ ಅಂತಿಮ ತೀಪು೯ ಕೊಡುವವರೆಗೂ ಒಂದು ಹನಿ ನೀರನ್ನೂ ಕಳಸಾ-ಬಂಡೂರಿ ಯೋಜನೆಯಿಂದ ಮಲಪ್ರಭಕ್ಕೆ ಹರಿಸುವುದಿಲ್ಲ ಎಂದು 2014, ಏಪ್ರಿಲ್ 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಚ್ಚಳಿಕೆ ಬರೆದುಕೊಟ್ಟಿದ್ದೇಕೆ?
ಹಾಗ೦ತ ಕಾಂಗ್ರೆ ಸ್‍ನತ್ತ ಬೆರಳು ತೋರಿಸಿ ಬಿಜೆಪಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಖಂಡಿತ ಸಾಧ್ಯವಿಲ್ಲ! ಈ ವಿವಾದವೇ ಕಾಂಗ್ರೆ
ಸ್ಸಿನ ಪಾಪದ ಕೂಸು ಎಂದು ಕೈತೊಳೆದುಕೊಳ್ಳುವುದಕ್ಕೂ ಆಗುವುದಿಲ್ಲ!
ಇವತ್ತು ಬಹಳಷ್ಟು ಸಂಘ-ಸಂಸ್ಥೆಗಳು ಕಳಸಾ-ಬಂಡೂರಿ ಹೋರಾಟಕ್ಕೆ ಕೈಜೋಡಿಸಿರಬಹುದು, ಚಲನಚಿತ್ರತಾರೆಗಳು ಧರಣಿಯಲ್ಲಿ ಕುಳಿತೆದ್ದು ಹೋಗಿರಬಹುದು. ಆದರೆ ಈ ಯೋಜನೆಯ ಜಾರಿಗೆ ಇದುವರೆಗೂ ಪ್ರಾಮಾಣಿಕವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇ ಬಿಜೆಪಿ. 2002, ಏಪ್ರಿಲ್ 30ರಂದು ಈ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದೇ ಅಟಲ್ ಬಿಹಾರಿ ವಾಜಪೇಯಿ ಸರಕಾರ! ಈ ಯೋಜನೆಗೆ 100 ಕೋಟಿ ರು. ಹಣ ನೀಡಿ ಶಂಕುಸ್ಥಾಪನೆ ಮಾಡಿ, ಯೋಜನೆ 75 ಪರ್ಸೆಂಟ್   ಪ್ರಗತಿಯಾಗಲು ಕಾರಣೀಭೂತರಾಗಿದ್ದೇ ಆಗಿನ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಬಿಎಸ್ ಯಡಿಯೂರಪ್ಪನವರು. ಅವರ ಜತೆಗೆ ನಿಂತವರು ನೀರಾವರಿ ಸಚಿವ ಈಶ್ವರಪ್ಪ, ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ, ಬೊಮ್ಮಾಯಿಯವರು.
ಮೊದಲೇ ಹೇಳಿದಂತೆ ಇದೇನು ಬಗೆಹರಿಸಲಾಗದಂಥ ಸಮಸ್ಯೆಯಲ್ಲ. ಮಹದಾಯಿ ನದಿ ಹುಟ್ಟುವುದು ಮುಖ್ಯವಾಗಿ ಬೆಳಗಾವಿಯ ಖಾನಾಪುರ ತಾಲೂಕಿನಲ್ಲಿ. ಹರಿದು ಅರಬ್ಬೀ ಸಮುದ್ರ ಸೇರುವುದು ಗೋವಾದ ಪಣಜಿ ಬಳಿ. ಕನಾ೯ಟಕದಲ್ಲಿ ಇವಳು ಮಹದಾಯಿಯಾದರೆ ಗೋವಾದಲ್ಲಿ ಮಾಂಡೋವಿಯಾಗುತ್ತಾಳೆ. ಸುಮಾರು 2032 ಚದರ ಕಿ.ಮೀ. ಅಚ್ಚುಕಟ್ಟು ಪ್ರದೇಶದಿಂದ ನೀರನ್ನು ಪಡೆದುಕೊಳ್ಳುವ ಮಹದಾಯಿ ಕನಾ೯ಟಕದಲ್ಲಿ 375, ಮಹಾರಾಷ್ಟ್ರದಲ್ಲಿ 77 ಹಾಗೂ ಗೋವಾದಲ್ಲಿ 1580 ಚದರ ಕಿ.ಮೀ. ಅಚ್ಚುಕಟ್ಟು ಹೊಂದಿದ್ದಾಳೆ. ಕೇಂದ್ರ ಜಲ ಆಯೋಗದ ಅಂದಾಜಿನ ಪ್ರಕಾರ ಇಡೀ ಜಲಾನಯನ ಪ್ರದೇಶ ಸುಮಾರು 200 ಟಿಎಂಸಿ ನೀರನ್ನು ಹೊಂದಿದೆ, ಅದರಲ್ಲಿ ಕನಾ೯ಟಕದಿಂದ ಸೇರುವುದು 45 ಟಿಎಂಸಿ.
ಇತ್ತ ಕೃಷಿ ಪ್ರದೇಶ ಬಿಡಿ ಕುಡಿಯುವ ನೀರಿಗೇ ಹಾಹಾಕಾರ ಎದುರಿಸುತ್ತಿರುವ ಧಾರವಾಡ, ಗದಗ, ಬೆಳಗಾವಿಗಳು ಬಗಲಲ್ಲೇ ಇವೆ. ಹಾಗಾಗಿ ಕಳಸಾ ನಾಲೆಯಿಂದ 3.56 ಹಾಗೂ ಬಂಡೂರಿ ನಾಲೆಯಿಂದ 4 ಟಿಎಂಸಿ ನೀರನ್ನು ಮಹದಾಯಿಯಿಂದ ಮಲಪ್ರಭಾಕ್ಕೆ ತಿರುಗಿಸಿ ಈ ನಗರಗಳಿಗೆ ಕುಡಿಯುವ ನೀರು ನೀಡುವ ಕೂಗು ಆರಂಭವಾಗಿ ಮೂರೂವರೆ ದಶಕಗಳೇ ಆದವು. ಆದರೆ ಅದಕ್ಕೆ ನಿಜವಾಗಿಯೂ ಒತ್ತು ಸಿಕ್ಕಿದ್ದು 2002ರಲ್ಲಿ ಅಟಲ್ ಸರಕಾರ ತಾತ್ವಿಕ ಒಪ್ಪಿಗೆ ನೀಡಿದ ನಂತರ. ಅದಾದ ಬಳಿಕ ಗೋವಾದ ಕಾಂಗ್ರೆ ಸ್ ಸರಕಾರ ಸುಪ್ರೀಂಕೋಟ್‍೯ನ ಮೊರೆ ಹೋಗಿದ್ದು, ಕೇಂದ್ರದ ಕಾಂಗ್ರೆ ಸ್ ಸರಕಾರ ಅಫಿಡವಿಟ್ಟು ಕೊಟ್ಟಿದ್ದು, ಸೋನಿಯಾ ಗಾಂಧಿಯವರು ಗೋವಾದ ಪರ ನಿಲುವು ತಳೆದಿದ್ದು, ಹೇಳದೇ ಕೇಳದೇ ನ್ಯಾಯಾಧಿಕರಣ ರಚನೆ ಮಾಡಿದ್ದು ಹಾಗೂ ಸಿದ್ದರಾಮಯ್ಯನವರು ಮುಚ್ಚಳಿಕೆ ಬರೆದುಕೊಟ್ಟಿದ್ದು ಎಲ್ಲವೂ ನಡೆದುಹೋದವು.
ಆದರೆ….
ಬಹಳ ವಿಷಾದದ ಸಂಗತಿಯೆಂದರೆ ನ್ಯಾಯಾಧಿಕರಣ 7.56 ಟಿಎಂಸಿ ನೀರು ಬಿಡುವಂತೆ ಮಧ್ಯಂತರ ಆದೇಶ ನೀಡುವುದಕ್ಕೆ ನಕಾರ ವ್ಯಕ್ತಪಡಿಸಿದ ಕೂಡಲೇ ಕಾಂಗ್ರೆ ಸ್ಸಿಗರು ಪ್ರಧಾನಿ ಮೋದಿಯವರನ್ನು ದೂರಲು ಆರಂಬಿಸಿದರು. ಮ್ಯೆಕಾ’ಸುರರೂ ಮೋದಿಯವರನ್ನು ದೂಷಿಸಿದರು. ಹಾಗೆ ದೂರುವ ಮೊದಲು ಸ್ವಲ್ಪ ಅಥ೯ ಮಾಡಿ- ಕೊಳ್ಳಿ. ಕಳೆದ ವಷ೯ ಬರದ ಹಿನ್ನೆಲೆಯಲ್ಲಿ ಮಹದಾಯಿ ವಿಚಾರ ಮತ್ತೆ ನನೆಗುದಿಗೆ ಬಿದ್ದಾಗ 2015, ಅಗಸ್ಟ್ 25ರ೦ದು ಪ್ರಧಾನಿ ಬಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸವ೯ಪಕ್ಷ ನಿಯೋಗವನ್ನು ಕೊಂಡೊಯ್ದಿದ್ದರು. ಕೋಟಿ೯ನಾಚೆ ಬಗೆಹರಿಸಿಕೊಡಿ ಎಂದು ಕೇಳಿದಾಗ ನೀವು ಮೊದಲು ಗೋವಾ ಮತ್ತು ಮಹಾರಾಷ್ಟ್ರದ ವಿರೋಧ ಪಕ್ಷಗಳ(ಕಾಂಗ್ರೆ ಸ್) ಜತೆ ಮಾತನಾಡಿ ಮನವೊಲಿಸಿ, ನಂತರ ನಾನು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ಮತ್ತೆ ತನ್ನ ವರಸೆ ತೋರಿಸಿದ ಕಾಂಗ್ರೆಸ್, ಪ್ರಧಾನಿ ಹೇಳಿದ ಕೆಲಸವನ್ನು ಮರೆತು ಮಧ್ಯಸ್ಥಿಕೆ ವಹಿಸಲು ಮೋದಿ ನಕಾರ ಎಂದು ಹೇಳಿಕೆ ಕೊಟ್ಟರು. ಗೋವಾ, ಮಹಾರಾಷ್ಟ್ರಗಳ ವಿರೋಧ ಪಕ್ಷಗಳ ಜತೆ ಕನಿಷ್ಠ ನೀವಾದರೂ ಮಾತನಾಡಿ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾಜು೯ನ ಖಗೆ೯ಯವರಿಗೆ ರಾಜ್ಯ ಬಿಜೆಪಿ ಮನವಿ ಮಾಡಿ- ಕೊಂಡರೆ, ಆಯಾ ರಾಜ್ಯಗಳಲ್ಲಿ ವಿರೋಧ ಪಕ್ಷಗಳು(ಕಾಂಗ್ರೆ ಸ್) ತಮ್ಮ ರಾಜಕಾರಣಕ್ಕಾಗಿ ವಿರೋಧ ಮಾಡಿಯೇ ಮಾಡುತ್ತವೆ ಎಂದು ಪ್ರತಿಕ್ರಿಯಿಸಿದ್ದರು!
ಇಂಥ ಮನಸ್ಥಿತಿ ಏನನ್ನು ತೋರಿಸುತ್ತದೆ ಹೇಳಿ?
ಈ ಮಧ್ಯೆ, ಯಾವುದಾದರೂ ವಿಷಯ ನ್ಯಾಯಾಧಿಕರಣದ ಮುಂದಿರುವಾಗ ಅಹವಾಲು ಸಲ್ಲಿಸಿರುವ ಎಲ್ಲ ರಾಜ್ಯಗಳೂ ಒಪ್ಪಿದರೆ ಮಾತ್ರ ಸಂಧಾನ ಪ್ರಕ್ರಿಯೆಯನ್ನು ಆರಂಭೀಸಬಹುದು ಎಂದು ಅಂದಿನ ಕೇಂದ್ರ ಜಲಸಂಪನ್ಮೂಲ ಖಾತೆ ಸಚಿವೆ ಉಮಾಭಾರತಿ ಕನಾ೯ಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು. ದೆಹಲಿಯ ಕನಾ೯ಟಕ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ್ದ ಬಿಜೆಪಿ ರಾಜ್ಯ ಅಧ್ಯಕ್ಷರು ಹಾಗೂ ರೈತನಾಯಕರಾದ ಬಿ.ಎಸ್. ಯಡಿಯೂರಪ್ಪನವರು “ಕಾಂಗ್ರೆ ಸ್ಸಿಗರು ಗೋವಾ ಹಾಗೂ ಮಹಾರಾಷ್ಟ್ರದಲ್ಲಿರುವ ಪ್ರತಿಪಕ್ಷದವರ(ಕಾಂಗ್ರೆ ಸ್) ಮನವೊಲಿಸಿ, ನಾವು ಬಿಜೆಪಿ ಮುಖ್ಯಮಂತ್ರಿಗಳ ಮನವೊಲಿಸುತ್ತೇವೆ’ ಎಂದು ಸ್ಪಷ್ಟವಾಗಿ ಹೇಳಿದ್ದರು. ಅದರೂ ಕಾಂಗ್ರೆಸ್ ಮನಸು ಮಾಡಲೇ ಇಲ್ಲ ಮತ್ತು ಬಿಜೆಪಿಯನ್ನು ದೂಷಿಸುತ್ತಾ ನಾಲ್ಕುವರೆ ವಷ೯ ಕಳೆದು ಬಿಟ್ಟರಲ್ಲ

ಭಾನುವಾರ, ಫೆಬ್ರವರಿ 4, 2018

"ಮೊಟ್ಟೆ, ಹಾಲು ಶಾಕಾಹಾರವೇ ? ಮಾಂಸಾಹಾರವೇ "?*

ಪ್ರಶ್ನೆ : "ಮೊಟ್ಟೆ, ಹಾಲು ಶಾಕಾಹಾರವೇ ? ಮಾಂಸಾಹಾರವೇ "?*
*ಉತ್ತರ:* ಮೊದಲನೆಯದಾಗಿ ನಾವು ಶಾಕಾಹಾರವೆಂದರೆ ಏನು? ಮಾಂಸಾಹಾರವೆಂದರೆ ಏನು? ಎಂಬ ವಿಷಯದ ಬಗ್ಗೆ ಪಂಡಿತರು ಹೇಳಿದ ವಿವರಣೆಯನ್ನು ಪರಿಶೀಲಿಸೋಣ.
    ಭಗವಂತನ ಪ್ರೇರಣೆಯಿಂದ (ಭಗವಂತನು ಇಷ್ಟವಿಲ್ಲದವರು ಬದಲಾಯಿಸಿ ಓದಿಕೊಳ್ಳಿ) ಈ ಭೂಮಿಯ ಮೇಲೆ ಚರಾಚರ ಸೃಷ್ಟಿ (ಜನನ) ಎನ್ನುವುದನ್ನು ನಾಲ್ಕು ವಿಧಗಳಾಗಿ ವಿಭಜಿಸಿ ಅರ್ಥ ಮಾಡಿಕೊಳ್ಳಲಾಗಿದೆ.
ಇವುಗಳನ್ನು,
1. ಜರಾಯುಜಗಳು
2. ಅಂಡಜಗಳು
3. ಸ್ವೇದಜಗಳು
4. ಉದ್ಭೀಜಗಳು
ಎಂದು ಕರೆಯುತ್ತಾರೆ.
1. *ಜರಾಯುಜಗಳು:* " ಗರ್ಭದಲ್ಲಿನ ಪಿಂಡವನ್ನು ಆವರಿಸಿ ಮಾಯೆಯಿಂದ ಹುಟ್ಟಿರುವವು. ಮನುಷ್ಯರು, ಪಶುಗಳು.
2. *ಅಂಡಜಗಳು:* ಮೊಟ್ಟೆಯಿಂದ ಹುಟ್ಟುವ ಪಕ್ಷಿಗಳು, ಹಾವುಗಳು ಮೊದಲಾದವು.
3. *ಸ್ವೇದಜಗಳು:* ಬೆವರಿನಿಂದ ಹುಟ್ಟುವ ಸೊಳ್ಳೆಗಳು, ತಿಗಣೆಗಳು ಮೊದಲಾದವು.
4. *ಉದ್ಭೀಜಗಳು:* ಬೀಜವನ್ನು ಒಡೆದು ಜನ್ಮಿಸುವ ವೃಕ್ಷ, ಬಳ್ಳಿಗಳು ಮೊದಲಾದವು.
ಇನ್ನು ಇದರಲ್ಲಿ ಎರಡು ವಿಧಗಳು: "ಚರ ಸೃಷ್ಟಿ", "ಅಚರ ಸೃಷ್ಟಿ".
   ಜರಾಯುಜಗಳು, ಅಂಡಜಗಳು, ಸ್ವೇದಜಗಳು " ಚರ ಸೃಷ್ಟಿ " ಎಂದು, ಉದ್ಭೀಜಗಳು ಮಾತ್ರ "ಅಚರ ಸೃಷ್ಟಿ" ಎಂದು ಹೇಳಲಾಗಿದೆ. "ಚರ" ಎಂದರೆ ಕದಲುವಂತಹವು. ಇದಕ್ಕೆ ಉದಾಹರಣೆ ಮನುಷ್ಯರು, ಪಶುಗಳು, ಪಕ್ಷಿಗಳು, ಹಾವುಗಳು, ಸೊಳ್ಳೆಗಳು, ತಿಗಣೆಗಳು, ಕ್ರಿಮಿ ಕೀಟಗಳು, ಇವು ಚಲಿಸುವಿಕೆಯನ್ನು ಹೊಂದಿರುತ್ತವೆ. ಇವು ಮುಖ್ಯವಾಗಿ ತಮ್ಮ ಚಲನೆಯನ್ನು ತಮ್ಮನ್ನು ತಾವು ಕಾಪಾಡಿಕೊಳ್ಳುವ ಕ್ರಮದಲ್ಲೂ, ತಮ್ಮ ಆಹಾರವನ್ನು ಹುಡುಕುವ ಪ್ರಯತ್ನದಲ್ಲೂ ಬಳಸಿಕೊಳ್ಳುತ್ತವೆ. ಇವು ರಜೋ ಗುಣ, ತಮೋ ಗುಣ ಸ್ವಭಾವಿಗಳು, ಆದ್ದರಿಂದ ಇವು ಧರಿಸುವ ಶರೀರಗಳನ್ನು ದೋಷಪೂರಿತವೆಂದು, ದುರ್ಗಂಧವನ್ನು ಆವರಿಸುವ ವಿಧದಲ್ಲಿ ಭಾವಿಸಿ ಇವುಗಳನ್ನು "ನೀಚವೆಂದು", "ಮಾಂಸವೆಂದು", ಮಾಂಸಾಹಾರವೆಂದು ಪೂರ್ವಿಕರು ಹೇಳಿದ್ದಾರೆ. ಈ ಚರ ಸೃಷ್ಟಿಯೆಲ್ಲಾ ತಮ್ಮ ತಲೆಯನ್ನು ಕೆಳಗೆ ಬಾಗಿಸಿ ಆಹಾರವನ್ನು ಸ್ವೀಕರಿಸುವ ಪ್ರಯತ್ನ ಮಾಡುತ್ತವೆ. ಪಶುಗಳು ಮೇವು ತಿಂದರೂ, ಮಾನವರು ಆಹಾರ ತಿನ್ನುತ್ತಿದ್ದರೂ ತಲೆಯನ್ನು ಕೆಳಗೆ ಬಾಗಿಸಿ ನೋಡುತ್ತಾರೆ, ಆದ್ದರಿಂದ ನೀಚ ಎನ್ನುವ ಪದವನ್ನು ಬಳಸಿದ್ದಾರೆ. ಆದ್ದರಿಂದ, ಬೇರೆ ವಿಧದಲ್ಲಿ ಅರ್ಥ ಮಾಡಿಕೊಳ್ಳಬಾರದು.
🔺 *ಇನ್ನು ಉಳಿದದ್ದು, ಉದ್ಭೀಜಗಳು:* ಬೀಜದಿಂದ ಬರುವಂತಹುದನ್ನು ಉಚ್ಛವಾದವು ಎಂದು ಕರೆದಿದ್ದಾರೆ. ಇವು ಸಾಧ್ಯವಾದಷ್ಟು ಸೂರ್ಯನನ್ನು ಹೊಂದುವುದಕ್ಕೆ ಆಕಾಶದ ಕಡೆಗೆ ಸಾಗುತ್ತವೆ. ಇವು ಸತ್ವಗುಣ ಪೂರಿತವಾಗಿವೆ. ಆದ್ದರಿಂದ ಇವುಗಳನ್ನು " ಶಾಕಾಹಾರ " ವೆಂದು ಕರೆದಿದ್ದಾರೆ.
🔺 ಚರ ಸೃಷ್ಟಿಯನ್ನು ಆಹಾರಕ್ಕಾಗಿ ಬಳಸಬಾರದು ಎಂದು ಯಜ್ಞವಲ್ಕ್ಯ ಸ್ಮೃತಿ ಹೇಳುತ್ತದೆ. ಜಿಂಕೆಯೊಂದರ ಕಾಲನ್ನು ನಾವು ಕತ್ತರಿಸಿದರೆ, ಅದು ಜೀವನ ಪರ್ಯಂತ ಕುಂಟುತ್ತಾ ಇರುತ್ತದೆ ಹೊರತು ಅದು ಬೇರೊಂದು ಕಾಲನ್ನು ಬೆಳೆಸಿಕೊಳ್ಳಲಾರದು. ಹಾಗೆಯೇ ತನಗೆ ಒಂದು ಕಡೆ ಆಹಾರವೇನು ಸಿಗದಿದ್ದರೆ ಬೇರೆ ಕಡೆಗೆ ಹೋಗಬಲ್ಲಂತಹ ರಜೋಗುಣವನ್ನು ಜಿಂಕೆ, ಮಾನವ, ಹಾವು, ತಿಗಣೆಯಂತಹ ಚರಾ ಸೃಷ್ಟಿ ಹೊಂದಿದ ಪ್ರಾಣಿಗಳಲ್ಲಿ ಇರುತ್ತದೆ.
🔺 ಆದರೆ, ಅಚರ ಸೃಷ್ಟಿ ಇದಕ್ಕೆ ಭಿನ್ನವಾದದ್ದು. ಒಂದು ಗಿಡಮರದ ರೆಂಬೆ ಕೊಂಬೆಯನ್ನು ಕತ್ತರಿಸಿದರೆ, ಅದು ಬೇರೊಂದು ಕೊಂಬೆಯನ್ನು ಬೆಳೆಸಿಕೊಳ್ಳುತ್ತದೆ. ಗಿಡವು ತನ್ನ ಎಲೆಗಳನ್ನು ಸಮೃದ್ಧಿಯಾಗಿ ಉದುರಿಸುತ್ತವೆ, ತನ್ನ ಹಣ್ಣುಗಳನ್ನು ಉದುರಿಸುತ್ತವೆ. ಹಾಗೆಯೇ ಭತ್ತದಂತಹ ಗಿಡಗಳ ಧಾನ್ಯವನ್ನು, ಆ ಗಿಡವು ಪ್ರಕೃತಿ ಸಿದ್ಧವಾಗಿ ಸತ್ತು ಹೋದ ನಂತರವೇ ನಾವು ಆ ಬೆಳೆಯನ್ನು ಕತ್ತರಿಸಿ ಬೀಜಗಳನ್ನು ಮನೆಗೆ ತಂದುಕೊಳ್ಳುತ್ತೇವೆ. ಈ ಅಚರ ಸೃಷ್ಟಿ ತಮಗೆ ಆಹಾರ ಸಿಗಲಿಲ್ಲವೆಂದು ಬೇರೊಂದು ಕಡೆಗೆ ಚಲಿಸುವುದಿಲ್ಲ. ಇವುಗಳಲ್ಲಿ ಸತ್ವ ಗುಣವಿದೆ (ಸತ್ವಂ ಸುಖೇ ಸಂಜಾಯತಿ). ಆದ್ದರಿಂದ ಮಾವು, ಗೋಧಿ, ಬಾರ್ಲಿ, ಎಳ್ಳು ಗಳಂತಹುದನ್ನು ಭುಜಿಸಿದರೆ, ಸತ್ವ ಗುಣ ವೃದ್ಧಿಯಾಗಿ, ಆಲೋಚನೆಯಲ್ಲಿ ಕ್ರೂರತ್ವ ನಶಿಸಿ, ಮನುಷ್ಯನು ಆರೋಗ್ಯಪೂರ್ಣ ಜೀವನವನ್ನು ನಡೆಸುತ್ತಾನೆ. ಆದ್ದರಿಂದಲೇ, ಶಾಕಾಹಾರವನ್ನು ಭುಜಿಸುವುದರಿಂದ ಮಾನವನು ಸುಖವನ್ನು ಹೊಂದಿ, ಕೈವಲ್ಯವನ್ನು ಹೊಂದಬಹುದು ಎಂದು ಸಾಧನಾ ಗ್ರಂಥದಲ್ಲಿ ಋಷಿಗಳು ಬೋಧಿಸಿದ್ದಾರೆ.
🔺 ಈ ಶಾಕಾಹಾರ, ಮಾಂಸಾಹಾರ ಚರ್ಚೆ ಎನ್ನುವುದು ಜರಾಯುಜಗಳಲ್ಲೇ ಸಾಧ್ಯ. ಮಾನವರು ಜರಾಯುಜರಿಂದಲೇ ಹುಟ್ಟುತ್ತಾರೆ. ತಾಯಿ ಹಾಲು ಕುಡಿದು ಬೆಳೆಯುತ್ತಾರೆ. ಆದುದರಿಂದ, ಜರಾಯುಜಗಳಾದ ಹಸುಗಳು, ಜಿಂಕೆಗಳು, ಕುದುರೆಗಳಂತಹುದರ ಹಾಲನ್ನು ಇವರು ಕುಡಿಯಬಹುದು ಎಂದು ಹೇಳಿದ್ದಾರೆ. ಈ ಹಾಲು ಎನ್ನುವುದನ್ನು ತಮ್ಮ ಮಗುವು ಕುಡಿಯುವುದಕ್ಕಿಂತ ಎರಡು ಪಟ್ಟು ಅಧಿಕವಾಗಿಯೇ ಜರಾಯುಜಗಳು ಉತ್ಪತ್ತಿ ಮಾಡುತ್ತವೆ. ಆದ್ದರಿಂದ 'ಕರು' ಕುಡಿದು ಉಳದ ಹಾಲನ್ನು ಈ ಜರಾಯುಜಗಳು ಸಹಜವಾಗಿಯೇ ವಿಸರ್ಜಿಸುತ್ತವೆ. ಅಂದರೆ ನೀವು ಹಾಲು ಕರೆಯದಿದ್ದರೂ ಹೆಚ್ಚಾದ ಹಾಲನ್ನು, ಯಾವ ಒಂದು ಗಿಡಕ್ಕೋ ತನ್ನ ಕೆಚ್ಚಲನ್ನು ಒತ್ತಿ ಹಿಡಿದು ಸುರಿಸುತ್ತವೆ. ಆದ್ದರಿಂದ, ಇಂತಹ ಹಾಲನ್ನು ಶೇಖರಿಸುವುದರಿಂದ, ಅವುಗಳಿಗೆ ಪ್ರಾಣಹಾನಿ ಆಗುವುದಿಲ್ಲ. ಇದು ಖಚಿತವಾಗಿ ಶಾಕಾಹಾರವೇ!
🔺 ಆದರೆ ಇದಕ್ಕೆ ಒಂದು ನಿಯಮವಿದೆ. ಉದ್ಭೀಜಗಳನ್ನು ತಿಂದು ಬದುಕುವ "ಜರಾಯುಜಗಳ" ಹಾಲು ಮಾತ್ರವೇ ಶಾಕಾಹಾರ - ಅಂದರೆ ಹುಲ್ಲು ತಿಂದು ಹಾಲು ನೀಡುವ ಹಸುವಿನ ಹಾಲು ಮಾತ್ರ ಶಾಕಾಹಾರ.
🔺 ಆದರೆ, ಬೇರೆಯವುಗಳನ್ನು ತಿಂದು ಹಾಲು ನೀಡುವ ಜರಾಯುಜಗಳ ಹಾಲು 'ಮಾಂಸಾಹಾರ' - ಅಂದರೆ ಹಸುವನ್ನು ತಿಂದು ಹಾಲು ಕೊಡುವ ಹುಲಿಯ ಹಾಲು ಮಾಂಸಾಹಾರ! ಮಾನವರು ಸ್ವತಃ ಉದ್ಭೀಜಗಳನ್ನು ತಿಂದು ಬದುಕುವ ಜರಾಯುಜಗಳು.
🔺 ಮೊಟ್ಟೆಯು ಮಾಂಸಾಹಾರ. Sterile egg, ಇದರಲ್ಲಿ ಮಾತೃಗರ್ಭದಲ್ಲಿದ್ದಾಗಲೇ ಅದರ ಜೀವವನ್ನು ಕೆಲವು ರಸಾಯನಗಳನ್ನು ಉಪಯೋಗಿಸಿ, ಅದು ಬೆಳೆಯದಿರುವಂತೆ ಸಾಯಿಸುತ್ತಾರೆ. ಹಾಗಾಗಿ ಅದು ಹುಟ್ಟಿದ ನಂತರವೂ ಬೆಳೆಯದೇ ಮೊಟ್ಟೆಯಂತೆ ಇದ್ದು ಹೋಗುತ್ತದೆ. ಆ ಮೊಟ್ಟೆಯಿಂದ ಮರಿಯು ಹೊರಗೆ ಬಾರದಂತೆ ರಾಸಾಯನಿಕಗಳನ್ನು ಬಳಸಿರುತ್ತಾರೆ. ಆದ್ದರಿಂದ ಅದು ಶಾಕಾಹಾರ ಎನ್ನುವುದು ವ್ಯರ್ಥ ವಾದ.
🔺 ಯಾವುದು ಸೂಕ್ಷ್ಮವಾಗಿ ಚಲಿಸುತ್ತದೆಯೋ, ಚಲಿಸಿ ತನ್ನ ಪ್ರಾಣವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆಯೋ, ಚಲಿಸುವಂತಹ ತನ್ನಂತಹ ಪ್ರತಿರೂಪಕ್ಕೆ ಜನ್ಮ ನೀಡುತ್ತದೆಯೋ - ಅದನ್ನು ತಿನ್ನುವುದು ಮಾಂಸಾಹಾರ, ಆದುದರಿಂದ ಮೊಟ್ಟೆಯು ಖಚಿತವಾಗಿ ಮಾಂಸವೇ ! ಆದರೆ ಹಾಲು ಶಾಕಾಹಾರ.
🔺 ಯಾವುದು ಚಲಿಸದೇ, ತನ್ನ ರೆಂಬೆ ಕೊಂಬೆಗಳನ್ನು ಇನ್ನಷ್ಟು ಬೆಳೆಸಿಕೊಳ್ಳುತ್ತದೆಯೋ, ಎಲೆಗಳನ್ನು ಚಿಗುರಿಸಿಕೊಳ್ಳಬಲ್ಲದೋ, ಅದು ಶಾಕಾಹಾರ.
ಮೀನುಗಳು "ಅಂಡಜಗಳೇ" ಅಂದರೆ ಮೊಟ್ಟೆಯಿಂದ ಹುಟ್ಟಿದ್ದು. ಚಲನೆ ಹೊಂದಿರುವಂತಹುವು. ಆದ್ದರಿಂದ ಮೀನುಗಳು ಸಹ ಮಾಂಸಾಹಾರವೆಂದು ಪರಿಗಣಿಸಲ್ಪಡುತ್ತವೆ. ಪ್ರತಿ ಜೀವಿಗೆ ತನ್ನ ಸ್ವತಃ ಸಿದ್ಧವಾದ ಆಹಾರವಿರುತ್ತದೆ. ಜಿಂಕೆಗಳು, ಹಸುಗಳು, ಕುದುರೆಗಳು ಹುಲ್ಲನ್ನು ಮೇಯುತ್ತವೆ. ಹುಲಿಗಳು, ಸಿಂಹಗಳು, ಹದ್ದುಗಳು ಮಾಂಸವನ್ನು ತಿನ್ನುತ್ತವೆ.
🔺ಮಾನವರು ಹಣ್ಣು, ತರಕಾರಿಗಳು, ಕೆಲ ವಿಧವಾದ ಬಿದುರು ಹಾಗೂ ಬಿದುರಿನ ಕಾಳುಗಳನ್ನು ( ಭತ್ತ, ಗೋಧಿ, ಮೊದಲಾದವುಗಳನ್ನು) ತಿನ್ನುತ್ತಾರೆ. ಮನುಷ್ಯನ ಶರೀರದ ನಿರ್ಮಾಣಕೃತಿಯ ಅಂತರ್ಗತವಾದ ಜೀರ್ಣಾಶಯವು, ಈ ವಿಷಯವನ್ನು ನಿರ್ಧರಿಸುತ್ತವೆ. ಮಾನವರ ಕರುಳುಗಳ ಸರಾಸರಿ ಏಳು ಮೀಟರ್ ಉದ್ದವಿರುತ್ತದೆ. ಇವು ಬೇರೆ ಶಾಕಾಹಾರ ಜರಾಯುಜಗಳಾದ ಜಿಂಕೆ, ಸಾರಂಗ, ಹಸುಗಳನ್ನು ಹೋಲುವ ನಿರ್ಮಾಣವಾಗಿರುತ್ತವೆ. ಹುಲಿ, ಸಿಂಹದಂತಹ ಸಹಜಸಿದ್ಧವಾದ ಮಾಂಸಾಹರ ಜರಾಯುಜಗಳ ಹೊಟ್ಟೆಯಲ್ಲಿನ ಕರುಳುಗಳು ಒಂದು ಮೀಟರ್ ಉದ್ದ ಕೂಡ ಇರುವುದಿಲ್ಲ, ಏಕೆಂದರೆ ಇವು ಮಾಂಸವನ್ನು ತಿನ್ನುತ್ತವೆ. ಮಾಂಸ ಎಂದರೆ ಈಗಾಗಲೇ ಒಂದು ಪ್ರಾಣಿಯು ತಿಂದು ಅರಗಿಸಿಕೊಂಡು ಬಲವಾಗಿ ಬದಲಿಸಿಕೊಂಡ ಪದಾರ್ಥ. ಆದುದರಿಂದ, ಪುನಃ ಮಾಂಸವನ್ನು ಅರಗಿಸಿಕೊಳ್ಳಬೇಕಾದ ಅಗತ್ಯ ಇದರ ಕರುಳುಗಳಿಗೆ ಇರುವುದಿಲ್ಲ. ಕರುಳಿನ ಮೇಲೆ ಭಾರವೂ ಬೀಳುವುದಿಲ್ಲ. ಅದಕ್ಕಾಗಿಯೇ ಸಹಜಸಿದ್ಧವಾಗಿ ಮಾಂಸ ತಿನ್ನುವ ಪ್ರಾಣಿಗಳ ಕರುಳು ಚಿಕ್ಕದಾಗಿರುತ್ತವೆ. ಹಾಗಾಗಿ ಮಾನವರು ಸಹಜವಾಗಿ ಶಾಕಾಹಾರ ಜೀವಿಗಳು.

ಕೃಷಿಯ ಉದ್ಧೇಶಕ್ಕಾಗಿ ಉಪಯೋಗಿಸುತ್ತಿದ್ದ ಗೋವನ್ನು

ಕೃಷಿಯ ಉದ್ಧೇಶಕ್ಕಾಗಿ ಉಪಯೋಗಿಸುತ್ತಿದ್ದ ಗೋವನ್ನು ಮಾಂಸಕ್ಕಾಗಿ ಕತ್ತರಿಸಿ ತಿನ್ನಲು ಪ್ರಾರಂಭಿಸಿದರೆ ಸಹಜವಾಗಿ ಭಾರತದಲ್ಲಿ ಗೋ ಸಂಪತ್ತು ನಾಶವಾಗುತ್ತದೆ. ಹೀಗೊಂದು ನಿರ್ಣಯವನ್ನು ೧೮ನೇ ಶತಮಾನದಲ್ಲಿ ಆಂಗ್ಲರು ಕೈಗೆತ್ತಿಕೊಂಡರು. ಈ ನಿರ್ಣಯಕ್ಕೆ ಭಾರತದಲ್ಲಿದ್ದ ಬ್ರಿಟೀಷ್ ಅಧಿಕಾರಿಗಳು ಒಪ್ಪಲಿಲ್ಲ. ಜನರ ಭಾವನೆಗಳಿಗೆ ಘಾಸಿಗೊಳಿಸಿ ಅಪಾಯವನ್ನು ಮೈಮೇಲೆ ಎಳೆದು ಹಾಕಿಕೊಳ್ಳಲು ಅಧಿಕಾರಿಗಳು ಸಿದ್ಧರಿರಲಿಲ್ಲ.
ಲಿಯಾನ್ಸ್ ಡೌನ್ ಎಂಬ ಅಧಿಕಾರಿ ಈ ಬಗ್ಗೆ ಆಳವಾದ ಅದ್ಯಯನ ನಡೆಸಿ ರಾಣಿ ವಿಕ್ಟೋರಿಯಾಳಿಗೆ ಒಂದು ಪತ್ರ ಬರೆದಿದ್ದ.ಈ ಪತ್ರದ ಪ್ರತಿ ಈಗಲೂ ಲಭ್ಯವಿದೆ. ಈ ಪತ್ರದಲ್ಲಿ ಅಧಿಕಾರಿ ಇಲ್ಲಿ ಗೋವಿನ ಹತ್ಯೆಯ ವಿರುದ್ಧ ಜನರು ಸಂಘಟಿತಗೊಳ್ಳುತ್ತಿದ್ದಾರೆ ಎಂಬ ಎಚ್ಚರಿಕೆಯ ಮಾತನ್ನು ರಾಣಿಗೆ ಮನವರಿಕೆ ಮಾಡುವ ಕೆಲಸವನ್ನು ಮಾಡಿದ್ದಾನೆ. ಆತನ ಪ್ರಕಾರ ಭಾರತದ ಸುಮಾರು ೭ ಲಕ್ಷ ಗ್ರಾಮಗಳಲ್ಲಿ ಗೋರಕ್ಷಾದಳಗಳು ತಲೆ ಎತ್ತಿದ್ದು ಪ್ರತೀ ಗ್ರಾಮದಲ್ಲಿ ಜಾತಿ ಮತ ಭೇಧ ಮರೆತು ಗೋವಿನ ಹತ್ಯೆಯ ವಿರುದ್ಧ ಜನ ಎಚ್ಚೆತ್ತುಕೊಂಡಿದ್ದಾರೆ ಎಂಬ ಮಾಹಿತಿ ಇದೆ.
ಈ ರಿಪೋರ್ಟ್ ಕಂಡು ಕೆಂಡಮಂಡಲವಾದ ಬ್ರಿಟೀಷ್ ರಾಣಿ ಯಾವುದೇ ಕಾರಣಕ್ಕೂ ಗೋಹತ್ಯೆಯನ್ನು ಕೈ ಬಿಡುವ ಪ್ರಶ್ನೆ ಇಲ್ಲ. ಕೂಡಲೆ ಪ್ರಮುಖ ನಗರಗಳಲ್ಲಿ ಮತ್ತು ಸೈನಿಕ ಛಾವಣಿಗಳ ಪಕ್ಕದಲ್ಲಿ ಕಸಾಯಿಖಾನೆಗಳನ್ನು ಸ್ಥಾಪಿಸಿ ಈ ಕಸಾಯಿಖಾನೆಗಳಿಗೆ ಕೇವಲ ಮುಸಲ್ಮಾನ ಕಸಾಯಿಗಳನ್ನು ಮಾತ್ರ ನೇಮಕಗೊಳಿಸಿ ಎಂದು ರಾಣಿ ಆಪ್ಪಣೆ ಮಾಡಿದಳು. ಈ ಪತ್ರ ೦೮ ಡಿಸೆಂಬರ್ ೧೮೯೩ರಂದು ಭಾರತ ತಲುಪಿತು.
ಮಹಾರಾಣಿಯ ಷಡ್ಯಂತ್ರವನ್ನು ಜಾರಿಗೊಳಿಸಲು ಈಸ್ಟ್ ಇಂಡಿಯಾ ಕಂಪನಿ ೩೫೦ ಪರವಾನಿಗೆ ಸಹಿತವಾದ ಕಸಾಯಿಖಾನೆಗಳನ್ನು ಭಾರತದಲ್ಲಿ ಪ್ರಾರಂಭಿಸಿತು.ಇಲ್ಲಿಂದ ಪ್ರಾರಂಭವಾಯಿತು ಭಾರತದ ನೆಲದಲ್ಲಿ ಗೋವುಗಳ ಸಾಮೂಹಿಕ ಹತ್ಯೆ..ಬ್ರಿಟೀಷ್ ಅಧಿಕಾರಿಗಳಿಗೆ,ಆಂಗ್ಲ ಸೈನಿಕರಿಗೆ ಮತ್ತು ಆಂಗ್ಲ ಪ್ರಜೆಗಳಿಗೆ ಈ ಕಸಾಯಿಖಾನೆಗಳಿಂದಲೇ ಮಾಂಸ ಸರಬರಾಜು ಪ್ರಾರಂಭವಾಯಿತು. ಈ ಕಸಾಯಿಖಾನೆಗಳ ಅಬ್ಬರ ಎಷ್ಟಿತ್ತು ಎಂದರೆ ೧೯೧೦ರಿಂದ ೧೯೪೦ರ ತನಕ ೧೦ ಕೋಟಿ ಗೋವುಗಳು ಗದ್ದೆಯಿಂದ ಅನಾಮತ್ತಾಗಿ ಆಂಗ್ಲರ ಹೊಟ್ಟೆ ಸೇರಿ ಬಿಟ್ಟವು.
ಬ್ರಿಟೀಷರ ಈ ಅನಾಚಾರದ ವಿರುದ್ಧ ಗ್ರಾಮ ಗ್ರಾಮಗಳಲ್ಲಿ ಆಕ್ರೋಷ ಬುಗಿಲೇಳ ತೊಡಗಿತು. ಈ ಆಕ್ರೋಷದ ತೋಪಿಗೆ ಮೊದಲ ಕಿಡಿ ಹಚ್ಚಿದವನೇ ಮಂಗಲ್ ಪಾಂಡೆ...... ಬ್ಯಾರಕಪುರದ ಸೈನಿಕ ಛಾವಣಿಯಲ್ಲಿ ೧೮೫೭ರ ಮಾರ್ಚ್ ತಿಂಗಳ ೨೯ರಂದು ಮಂಗಲ್ ಪಾಂಡೆ ಬ್ರಿಟೀಷರ ವಿರುದ್ಧ ಬಂಡಾಯದ ಬಾವುಟ ಹಾರಿಸಿದರು. ಆರ್ಯ ಸಮಾಜದ ಕಟ್ಟಾ ಅನುಯಾಯಿಯಾಗಿದ್ದ ಮಂಗಲಪಾಡೆ ಗೋವಿನ ಕೊಬ್ಬು ಸವರಿದ ಗುಂಡುಗಳನ್ನು ಬಂಲಸಲು ವಿರೋಧ ವ್ಯಕ್ತ ಪಡಿಸಿದರು. ಆಗ ತಾನೆ ಬಂಗಾಲ್ ರೆಜಿಮೆಂಟಿಗೆ ಪರಿಚಯಿಸಲಾಗಿದ್ದ ಎನ್ಫಿಲ್ಟ್ ಪಿ ೫೩ ರೈಫಲ್ ತನ್ನ ಮೊದಲ ಬಲಿ ಪಡೆದು ಕೊಂಡಿತು. ದುರಂತವೆಂದರೆ ವಿರೋಧಿಗಳ ಎದೆ ಸೀಳಲು ಬ್ರಿಟೀಷರು ತರಿಸಿದ್ದ ಈ ಭಾರಿ ಬಂದೂಕು ಹ್ಯೂಸನ್ ಎಂಬ ಅಂಗ್ರೇಜಿ ಅಧಿಕಾರಿಯನ್ನು ನೆಲಕ್ಕುರುಳಿಸಿಬಿಟ್ಟಿತು.
ಕ್ರಾಂತಿಯ ಜ್ವಾಲೆ ಹೊತ್ತಿಕೊಂಡಿತು. ಬೇಗಂ ಹಜ್ರತ್ ಮಹಲ್ ಜಾನ್ಸಿ ರಾಣಿ ಲಕ್ಷ್ಮಿ ಬಾಯಿ ತಾತ್ಯಾ ಟೋಪೆ ನಾನಾ ಸಾಹೇಬ ಕುವರ ಸಿಂಹ ನರಗುಂದದ ಬಾಬಾ ಸಾಹೇಬ ನರಸಪ್ಪ ನಾಯಕ ಝೀನತ್ ಮಹಲ್ ಅಜೀಮುಲ್ಲಾ ಖಾನ್ ಖುದಾ ಬಕ್ಷ್ ಗೌಸ್ ಖಾನ್, ಮೊದಲಾಗಿ ಸಾವಿರಾರು ದೇಶಿ ಸಿಪಾಯಿಗಳು ದಂಗೆ ಎದ್ದರು. ಪರಿಣಾಮವಾಗಿ ೧೮೫೭ರ ಕ್ರಾಂತಿ ಭಾರತದ ನೆಲದಲ್ಲಿ ಸುಮಾರು ೩ ಲಕ್ಷ ೩೭ ಸಾವಿರ ಬ್ರಿಟೀಷರ ಹೆಣ ಉರುಳಿಸಿತು. ಈ ಮಹಾನ್ ಕ್ರಾಂತಿಗೆ ಮೂಲಕಾರಣವೇ ಗೋವಿನ ಬಗ್ಗೆ ಇದ್ದ ಅಚಲವಾದ ನಂಬಿಕೆ.ಇದನ್ನು ಹೊರತುಪಡಿಸಿ ಉಳಿದ ಹಲವಾರು ಕಾರಣಗಳಿದ್ದರೂ ೧೮೫೭ರ ದಂಗೆಗೆ ಮೂಲ ಕಾರಣ ದನದ ಕೊಬ್ಬು.!! ಈ ಅಪಾಯದ ಬಗ್ಗೆ ಬ್ರಿಟೀಷರಿಗೆ ಮೊದಲೇ ಅರಿವಿತ್ತು. ೧೮೫೭ ಹೊತ್ತಿಗೆ ಭಾರತದ ಎಲ್ಲಾ ಗ್ರಾಮಗಳಲ್ಲೂ ಗೋರಕ್ಷಾ ಸಮಿತಿ ರಚನೆಯಾಗಿತ್ತು.೧೮೯೩ರಲ್ಲಿ ಇದರ ಬಗ್ಗೆ ಈಸ್ಟ್ ಇಂಡಿಯಾ ಕಂಪನಿಯ ಉನ್ನತ ಅಧಿಕಾರಿಗಳು ಇಂಗ್ಲೆಂಡಿಗೆ ವರದಿಯನ್ನೂ ಮಾಡಿದ್ದರು.
ಆದರೆ ರಾಣಿಗೆ ಇಲ್ಲಿನ ಜನರ ಭಾವನೆಯ ತೀವ್ರತೆ ಅರಿವಾಗಲಿಲ್ಲ.ಬ್ರಿಟೀಷ್ ದಾಖಲೆಗಳ ಪ್ರಕಾರ ೧೮೭೦ರಲ್ಲಿ ಹಿಂದೂ ಮುಸಲ್ಮಾನರು ಒಂದಾಗಿ ಗೋಹತ್ಯೆಯ ವಿರುದ್ಧ ಹೋರಾಟ ಮಾಡಿದ್ದರು. ಮದ್ಯ ಪ್ರದೇಶದ ರಾಟ್ ಮುಸ್ಲೀಮರು ರಾಜಸ್ಥಾನದ ಮೇವ್ ಮುಸ್ಲೀಮರು ಗೋಸಂತತಿಯ ಹತ್ಯೆಯ ವಿರುದ್ಧ ಖಡ್ಗ ಹಿಡಿದು ಹೋರಾಡಿದ ಉದಾಹರಣೆ ಇದೆ. ಕಾಲಕ್ರಮೇಣ ಮುಸಲ್ಮಾನರನ್ನು ಬ್ರಿಟೀಷರು ತಮ್ಮ ತುಷ್ಟೀಕರಣ ನೀತಿಯ ಮೂಲಕ ಹಿಂದೂಗಳ ವಿರುದ್ಧ ಎತ್ತಿ ಕಟ್ಟುವುದರಲ್ಲಿ ಸಫಲರಾದರು. ಎರಡೂ ಸಮುದಾಯಗಳ ಮದ್ಯೆ ಬ್ರಿಟೀಷರು ಬಿತ್ತಿದ ಅಪನಂಬಿಕೆಯ ಬೀಜ ಮುಂದೊಂದು ದಿನ ಇಡೀ ರಾಷ್ಟ್ರವನ್ನೇ ವಿಭಜನೆಯ ಬಲಿವೇಧಿಯಲ್ಲಿ ತಂದು ನಿಲ್ಲಿಸಿತು. ಇದು ಎಲ್ಲರಿಗೂ ತಿಳಿದಿರುವ ಸಂಗತಿ

ಸಂಪೂರ್ಣ ಮುಸ್ಲಿಂ ದೇಶವಾಗಿದ್ದರೂ ಈ ದೇಶದ ಮೂಲಗ್ರಂಥ ರಾಮಾಯಣ

ಸಂಪೂರ್ಣ ಮುಸ್ಲಿಂ ದೇಶವಾಗಿದ್ದರೂ ಈ ದೇಶದ ಮೂಲಗ್ರಂಥ ರಾಮಾಯಣ!! ಯಾವುದಾ ರಾಷ್ಟ್ರ ಗೊತ್ತಾ? ಆ ಒಂದು ರಾಷ್ಟ್ರ ಇಸ್ಲಾಮಿಕ್ ಆದರೂ ಕೂಡಾ ಅದು ತುಂಬಾ ಶಾಂತತೆಯಿಂದ ಇದೆ.‌ ಯಾಕೆಂದರೆ ಅದರ ಮೂಲ ಧರ್ಮ ಹಿಂದೂ ಧರ್ಮ. ಹೌದು ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಇಂಡೋನೇಷ್ಯದವರು ಹಿಂದೂ ಧರ್ಮವನ್ನು ತುಂಬಾ ಗೌರವಿಸುತ್ತಾರೆ ಮತ್ತು ಅನುಸರಿಸುತ್ತಾರೆ. ಇಂಡೋನಿಷ್ಯಾದಲ್ಲಿ ಬಾಲಿ ಎಂಬ ರಾಜ್ಯವಿದೆ.ದೇಶವೆಂದ ಮೇಲೆ ರಾಜ್ಯ ಇದ್ದೇ ಇರುತ್ತೆ ಅದರಲ್ಲಿ ವಿಶೇಷವೇನು ಅಂತ ನೀವು ಕೇಳ್ಬಹುದು. ಖಂಡಿತವಾಗಿಯೂ ವಿಶೇಷವಿದೆ. ಆ ಬಾಲಿ ಎಂಬ ರಾಜ್ಯದಲ್ಲಿ ಸುಮಾರು 4.22 ಮಿಲಿಯನ್ ಹಿಂದುಗಳಿದ್ದಾರೆ. ಜಗತ್ತಿನಲ್ಲಿ ಹಿಂದುಗಳಿಗೆ ಇರುವಂತಹದ್ದು ಭಾರತ ಒಂದೇ ಅಂತ ನಾವು ನೀವು ಕೇಳಲ್ಪಟ್ಟಿದ್ದೇವು ಆದರೆ ಇದೇನು ಅಚ್ಚರಿ ಅಲ್ವಾ? ಹೌದು ಇಂಡೋನಿಷಿಯಾದ ಬಾಲಿ ಎಂಬ ರಾಜ್ಯಕ್ಕೂ ಮತ್ತು ಭಾರತಕ್ಕೂ ಒಂದೇ ತೆರನಾದ ಸಾಮ್ಯತೆಗಳಿವೆ. ಜಗತ್ತಿನೆಲ್ಲಡೆ ಇಸ್ಲಾಂ ದಾಳಿ ನಡೆದಂತೆ ಇಂಡೋನಿಷಿಯಾದ ಮೇಲೂ ನಡೆದಿತ್ತು. ಆ ದಾಳಿಯ ನಂತರವೂ ಬಾಲಿಯಲ್ಲಿದ್ದ ಹಿಂದೂಗಳು ಹಿಂದುಗಳಾಗಿಯೇ ಉಳಿದಿದ್ದರು. ಪ್ರಾಣ ಬಿಟ್ಟರೆ ಹೊರತು ಧರ್ಮವನ್ನು ಬಿಡಲಿಲ್ಲ. ಹೀಗಾಗಿ ಬಾಲಿ ಹಿಂದೂಗಳಿಗೆ ಪ್ರಸಿದ್ಧವಾಯಿತು. ಅಂದಿನ ರಾಜನ ಮೇಲೆ ಇಸ್ಲಾಮಿನ ಮತಾಂಧರು ದಾಳಿ ಮಾಡಿದಾಗ ರಾಜ ಸೋಲುವ ಹಂತಿನಲ್ಲಿದ್ದಾಗ ಸೆರೆ ಹಿಡಿದ ಮತಾಂಧರು ಮತಾಂತರ ಮಾಡಲು ಪ್ರಯತ್ನಿಸಿದರು‌. ಆದರೆ ಆ ರಾಜ ಮತಾಂತರವಾಗದೇ ತಾನೂ ಹಿಂದುವಾಗಿದ್ದೇ ಸಾಯಬೇಕೆಂದು ನಿರ್ಧರಿಸಿ ಬೆಂಕಿಗೆ ಹಾರಿ ಪ್ರಾಣ ಬಿಟ್ಟರು.ಇಂಡೋನೇಷಿಯಾದ ಬಾಲಿಯಲ್ಲಿ ಹಿಂದೂ ಧರ್ಮಕ್ಕೆ ತುಂಬಾ ಗೌರವವಿದೆ. ಅನೇಕ ಹಿಂದುಗಳ ಆಚರಣೆಗಳನ್ನು ಬಾಲಿಯ ಜನ ಮಾಡುತ್ತಾರೆ. ಅದರಲ್ಲಿ ಕೆಲವನ್ನು ನಿಮ್ಮೆದುರಿಗೆ ಇಡುವ ಪ್ರಯತ್ನ ಮಾಡುತ್ತೇನೆ.* ನಮ್ಮ ಹಿಂದೂ ಪರಂಪರೆಯ , ಹಿಂದುಗಳ ಪುನರುತ್ಥಾನಕ್ಕಾಗಿಯೇ ಶ್ರಮಿಸಿದ , ಇಡೀ ಜಗತ್ತಿನ ಮುಂದೆ ಹಿಂದೂ ಧರ್ಮದ ಪತಾಕೆಯನ್ನು ಹಾರಿಸಿದ ಋಷಿಮುನಿಗಳಾದ ಭಾರಧ್ವಾಜ್ , ಅಗಸ್ತ್ಯ ಮುನಿಗಳ , ಮಾರ್ಕಂಡೇಯ ಮುನಿಗಳ ಕುರಿತಾದ ವಿಸ್ತಾರವಾದ ಅಧ್ಯಾಯಗಳು ಇಂಡೋನೇಷಿಯಾದ ಪಠ್ಯಪುಸ್ತಗಳಲ್ಲಿವೆ. ಹೌದು ಅಚ್ಚರಿಯಾಗಲೇಬೇಕಾದ ವಿಷಯ. ನಮ್ಮ ಋಷಿಗಳ ಬಗ್ಗೆ ಅವರ ಪಠ್ಯದಲ್ಲಿ ಯಾಕೆ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರವೂ ಇದೆ. ಇಂಡೋನೇಷಿಯಾದ ಪರಂಪರೆ , ಸಂಸ್ಕೃತಿ ನಮ್ಮ ಋಷಿಮುನಿಗಳಿಂದಾಗಿದೆ.ಮತ್ತೊಂದು ಅಚ್ಚರಿ ಏನಂದ್ರೆ ಋಗ್ವೇದದ ಪರಿಚಯ ನಮ್ಮಲ್ಲಿ ಬಹತೇಕರಿಗೆ ಇಲ್ಲವೇ ಇಲ್ಲ. ಹೇಳಲೇನೋ ವೇದಗಳ ನಾಡು ಆದರೆ ನಮ್ಮಲ್ಲಿ ಬಹುತೇಕರಿಗೆ ವೇದಗಳ ಪರಿಚಯವೇ ಇಲ್ಲ. ಆದರೆ ಇಂಡೋನೇಷಿಯಾ ಜನರಿಗೆ ಋಗ್ವೇದದ 402 ಋಷಿಗಳ ಪರಿಚಯ ಅವರಿಗಿದೆ.* ಇಡೀ ಜಗತ್ತಿಗೆ ಭಾರತೀಯರೆಂದರೆ ಸೀರೆ , ಧೋತಿ , ಸನಾತನ ಸಂಸ್ಕೃತಿಯ ನೆನಪಾಗುತ್ತದೆ. ಇಡೀ ಜಗತ್ತು ನಮ್ಮನ್ನು ಅದೇ ಉದ್ದೇಶದಿಂದಲೇ ಗೌರವಿಸುತ್ತದೆ. ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ವಿದೇಶಿಯರು ಆಚರಿಸಲು ಆಸೆ ಪಡುತ್ತಾರೆ.  ಇಂಡೋನೆಷ್ಯಾದಲ್ಲಿ ಧೋತಿ ರಾಷ್ಟ್ರೀಯ ಉಡುಪು ಎಂದರೆ ನಂಬುತ್ತೀರಾ? ಹಾ ನಂಬಲೇಬೇಕು. ಧೋತಿ ಇಂಡೋನೇಷ್ಯಾದ ಬಾಲಿಯ ಸಂಕೇತ. ಧೋತಿ ಹಾಕಿಕೊಳ್ಳದೇ ದೇವಸ್ಥಾನದೊಳಕ್ಕೆ ಪ್ರವೇಶವಿಲ್ಲ. ಅಂದ್ರೆ ನಾವು ಯೋಚಿಸಲೇಬೇಕಾದ ವಿಷಯ. ನಮ್ಮನ್ನು ಅದೆಷ್ಟು ಗೌರವಿಸುತ್ತೆ ಅಂತ ವಿಚಾರ ಮಾಡಿ.* ಕಾಯಕವೇ ಕೈಲಾಸ , ಕರ್ತವ್ಯವೇ ದೇವರು ಹೀಗೆ ನಮ್ಮ ಋಷಿಮುನಿಗಳು ಬೋಧಿಸಿದ ಅನೇಕ ತತ್ವಗಳನ್ನು ಇಂಡೋನೇಷ್ಯಾದ ಬಾಲಿಯ ಜನ ಪಾಲಿಸುತ್ತಾರೆ‌. ಅದರಂತೆ ತಮ್ಮ ಕೆಲಸ , ಕಾರ್ಯಗಳನ್ನು ಅಷ್ಟೇ ಶ್ರದ್ಧೆಯಿಂದ ಮಾಡುತ್ತಾರೆ.*ಇನ್ನೂ ಅಚ್ಚರಿ ಪಡುವ ವಿಷಯವೆಂದರೆ ಇಂಡೋನೆಷ್ಯಾದ ಬಾಲಿಯಲ್ಲಿ ಪ್ರತಿಯೊಂದು ಮಗು ದಿನಕ್ಕೆ 3 ಸಲ ಗಾಯಿತ್ರಿ ಮಂತ್ರವನ್ನು ಪಠಿಸುತ್ತದೆ. ಆದರೆ ಭಾರತದಲ್ಲಿ ಬಹುತೇಕರಿಗೆ ಗಾಯಿತ್ರಿ ಮಂತ್ರದ ಅರಿವೇ ಇಲ್ಲ.*ಇಂಡೋನೆಷ್ಯಾದ ಬಾಲಿಯ ಶಿಕ್ಷಣ ವ್ಯವಸ್ಥೆ ತುಂಬಾ ಭಿನ್ನವಾಗಿದೆ. ಕಟ್ಟರ್ ಹಿಂದೂ ರಾಷ್ಟ್ರಗಳಲ್ಲಿಯೂ ಅಂತಹ ಶಿಕ್ಷಣ ವ್ಯವಸ್ಥೆ ಇಲ್ಲ. ರಾಮಾಯಣ ,ಮಹಾಭಾರತ , ಭಗವದ್ಗೀತೆಯ ಅನೇಕ ಅಧ್ಯಾಗಳನ್ನು ಇಂಡೋನೆಷ್ಯಾದ ಶಿಕ್ಷಣ ಪದ್ದತಿಯಲ್ಲಿ ಅಳವಡಿಸಿದ್ದಾರೆ. ಭಾರತದಲ್ಲಿ ಅವುಗಳ ಬಗ್ಗೆ ಮಾತನಾಡಿದರೆ ಕೋಮುವಾದಿ ಎಂಬ ಪಟ್ಟಕಟ್ಟುತ್ತಾರೆ.* ಜಾತ್ಯಾತೀತತೆವನ್ನು ನಾವು ಬಾಲಿಯನ್ನು ನೋಡಿ ಕಲಿಯಬೇಕು. ನಿಜವಾದ ಜಾತ್ಯಾತೀತವನ್ನು ಬಾಲಿ ಪಾಲಿಸುತ್ತದೆ‌. ಇಂಡೋನೆಷ್ಯಾದ ಬಾಲಿಯಲ್ಲಿ ಪ್ರತಿವರ್ಷ ಸರ್ವಧರ್ಮ ಸಮ್ಮೇಳನ ನಡೆಸುತ್ತಾರೆ. ಆ ಸಮ್ಮೇಳನದಲ್ಲಿ ಎಲ್ಲಾ ಧರ್ಮದ ಗುರುಗಳು ಒಂದೆಡೆ ಸೇರಿ ತತ್ವ ಸಿದ್ಧಾಂತಗಳನ್ನು ಬೋಧಿಸುತ್ತಾರೆ. ಅಲ್ಲಿ ಯಾವುದೇ ಕೋಮುಗಲಭೆಗಳು ನಡೆಯುವುದೇ ಇಲ್ಲ.* ಇಂಡೋನೆಷ್ಯಾದ ಬಾಲಿಯ ಸರ್ಕಾರ ಎಷ್ಟು ಜಾತ್ಯಾತೀತವೆಂದರೆ ಪ್ರತಿವರ್ಷದ ಬಜೆಟ್ ನಲ್ಲಿ ಎಲ್ಲಾ ಧರ್ಮದವರಿಗೂ ಸಮ ಪಾಲು ಹಂಚುತ್ತದೆ. ಇದೇ ಅಲ್ವಾ ನಿಜವಾದ ಜಾತ್ಯಾತೀತ. ಆದರೆ ಭಾರತದಲ್ಲಿ ಬಜೆಟ್ ಮಂಡನೆಯಾದರೆ ದೇವಸ್ಥಾನಕ್ಕೆ ಒಂದೇ ಒಂದು ಪಾಲು ಇರುವುದಿಲ್ಲ , ಎಲ್ಲವೂ ಮಸೀದಿ ಮತ್ತು ಚರ್ಚಗಳಿಗೆ ಹಂಚಿಕೆಯಾಗುತ್ತದೆ.* ಇನ್ನೂ ಮಾತೃಭೂಮಿಯ ವಿಷಯಕ್ಕೆ ಬಂದರೆ ಭಾರತದಲ್ಲಿ ಕೆಲವರು ಭೂಮಿಯನ್ನು ತಾಯಿ ಎನ್ನುವುದಿಲ್ಲ ಅದು ನಿಮ್ಮ ಕಲ್ಪನೆಯಷ್ಟೆ. ನಾವಂತೂ ಭೂಮಿಯನ್ನು ತಾಯಿ , ದೇವರು ಅಂತ ಒಪ್ಪಿಕೊಳ್ಳಲ್ಲವೆಂದು ಬೊಗಳುತ್ತಾರೆ. ಆದರೆ ಇಂಡೋನೆಷ್ಯಾದಲ್ಲಿ ಅತೀ ಹೆಚ್ಚು ಅಕ್ಕಿಯನ್ನು ಬೆಳೆಯುತ್ತಾರೆ.ಜಗತ್ತಿನಲ್ಲಿ ಅತೀ ಹೆಚ್ಚು ಅಕ್ಕಿ ಬೆಳೆಯುವವರ ಪೈಕಿ ಇಂಡೋನೆಷ್ಯಾ ಒಂದು. ಇಂಡೊನೇಷ್ಯಾದ ಜನರಿಗೆ ಇದರ ಬಗ್ಗೆ ಕೇಳೊದಾಗ ಅವರು ಹೇಳಿದ್ದೇನು ಗೊತ್ತಾ? ನಾವು ಇಷ್ಟು ಅಕ್ಕಿ ಬೆಳೆಯಲು ಕಾರಣ ಮಾತೃಭೂಮಿಯ ಕೃಪೆ ಎಂದು ಹೇಳುತ್ತಾರೆ. ಇನ್ನೊಂದು ವಿಷಯಬನ್ನು ಇಂಡೋನೆಷ್ಯಾದ ಜನ ಹೇಳುತ್ತಾರೆ ಅದೇನೆಂದರೆ ನಮ್ಮ ಎಲ್ಲಾ ಬೆಳವಣಿಗೆಗೆ ತಳಹದಿ ಭಾರತೀಯ ಋಷಿಮುನಿಗಳು ಎಂದು. *ಭಾರತದಲ್ಲಿ ಆಚರಿಸುವು ಎಲ್ಲಾ ಹಿಂದೂ ಧರ್ಮದ ಹಬ್ಬಗಳನ್ನು ಇಂಡೋನೆಷ್ಯಾದ ಬಾಲಿಯ ಜನ ಅತೀ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಅವರ ಎಲ್ಲಾ ಹಬ್ಬಗಳಲ್ಲಿ ರಾಮಾಯಾಣ , ಮಹಾಭಾರತ , ಭಗವದ್ಗೀತೆಗಳನ್ನು ರಥದಲ್ಲಿ ಇಟ್ಟು ಮೆರವಣಿಗೆ ಮಾಡುತ್ತಾರೆ. ಮೆರಣವಣಿಗೆ ಮುಗಿದ ಮೇಲೆ ಗೀತೆಯ ಅಧ್ಯಾಯಗಳನ್ನು ಪಠಿಸುತ್ತಾರೆ‌.ಇಂಡೋನೇಷ್ಯಾದ ಜನ ಹಿಂದೂ ಧರ್ಮವನ್ನು ಅನುಸರಿಸುವುದರಿಂದಲೇ ತುಂಬಾ ಶಾಂತತೆಯಿಂದ, ಸೌಹಾರ್ದತೆಯಿಂದ ಇದ್ದಾರೆ ಅಂತ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದರೆ ಅರ್ಥವಾಗುತ್ತದೆ

ಶ್ರೀ ಕ್ಷೇತ್ರ ಗಾಣಗಾಪುರ

ಶ್ರೀ ಕ್ಷೇತ್ರ ಗಾಣಗಾಪುರ ಕರ್ನಾಟಕದ ಸುಪ್ರಸಿದ್ಡ ಧಾರ್ಮಿಕ ಕ್ಷೇತ್ರ. ಶ್ರೀ ಕ್ಷೇತ್ರ ಗಾಣಗಾಪುರವು ಗುಲ್ಬರ್ಗಾದಿಂದ ನಗರದಿಂದ ಸುಮಾರು ೫೦ ಕಿಲೋಮೀಟರುಗಳ ದೂರದಲ್ಲಿದೆ.ದತ್ತಸಂಪ್ರದಾಯದ ಒಂದು ಪವಿತ್ರ ತೀರ್ಥಕ್ಷೇತ್ರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯಲ್ಲಿ ಪುಣೆ - ರಾಯಚೂರು ರೈಲುಮಾರ್ಗದಲ್ಲಿರುವ ಗಾಣಗಾಪುರ ರೈಲುನಿಲ್ದಾಣದಿಂದ 22 ಕಿಮೀ ದೂರದಲ್ಲಿ ಭೀಮಾ- ಅಮರಜ ನದಿಗಳ ಸಂಗಮದ ಹತ್ತಿರ ಈ ಊರು ಇದೆ. ಶ್ರೀಗುರುಚರಿತ್ರೆ ಎಂಬ ಗ್ರಂಥದಲ್ಲಿ ಇದನ್ನು ಗಾಣಗಾಪುರ, ಗಾಣಗಾಭವನ, ಗಂಧರ್ವಭವನ, ಗಂಧರ್ವಪುರ ಎಂಬ ಹೆಸರುಗಳಿಂದ ಉಲ್ಲೇಖಿಸ ಲಾಗಿದೆ. ದತ್ತಾವತಾರಿ ಎಂದು ಪ್ರಸಿದ್ಧಿಹೊಂದಿರುವ ಶ್ರೀನರಸಿಂಹ ಸರಸ್ವತಿಯವರು ವಾಡಿ ಎಂಬ ಊರಿನಿಂದ ಇಲ್ಲಿಗೆ ಬಂದು ಸುಮಾರು 23 ವರ್ಷ ನೆಲೆಸಿದ್ದರು. ಈ ಅವಧಿಯಲ್ಲಿ ಇಲ್ಲಿ ದತ್ತಸಂಪ್ರದಾಯವನ್ನನುಸರಿಸುವವರ ಸಂಖ್ಯೆ ಹೆಚ್ಚಾಯಿತು. ಸರಸ್ವತಿಯವರು ಮೊದಲು ಸಂಗಮದ ಹತ್ತಿರವೇ ವಾಸವಾಗಿದ್ದು ಅನಂತರ ಊರ ಮಧ್ಯದಲ್ಲಿರುವ ಮಠದಲ್ಲಿರತೊಡಗಿ ಮುಂದೆ ಶ್ರೀಶೈಲದ ಕಡೆಗೆ ತೆರಳಿದರು. ಮಠದ ಆವಾರದಲ್ಲಿ ಮಹಾದೇವ - ಪಾರ್ವತಿಯರ ಮೂರ್ತಿ, ಅಶ್ವತ್ಥವೃಕ್ಷದ ಪೊದರಿನಲ್ಲಿ ನಾಗನಾಥ ಮತ್ತು ಹನುಮಂತನ ಮೂರ್ತಿಗಳು ತುಲಸೀ ವೃಂದಾವನಗಳು ಗೋಚರವಾಗುತ್ತವೆ. ಈ ಮಠದಲ್ಲಿರುವ ಶ್ರೀಗುರುಗಳ ಪಾದುಕೆಗಳು ನಿರ್ಗುಣ ಪಾದುಕೆಗಳೆಂದು ಹೆಸರಾಗಿವೆ. ವಾಡಿಯಲ್ಲಿರುವ ಪಾದುಕೆಗಳನ್ನು ಮನೋಹರ ಪಾದುಕೆಗಳೆನ್ನುತ್ತಾರೆ. ಮಠದ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಎರಡು ಮಹಾದ್ವಾರ ಗಳಿವೆ. ಪಶ್ಚಿಮದ ಮಹಾದ್ವಾರ ವಿಶಾಲವಾಗಿದ್ದು ಅದರ ಮಹಡಿಯಲ್ಲಿ ನಗಾರಖಾನೆ (ದೇವಸ್ಥಾನದ ನಗಾರಿಗಳನ್ನು ಬಾರಿಸುವ ಜಾಗ) ಇದೆ. ಭಕ್ತಾದಿಗಳು ಕೂಡಲು ಯೋಗ್ಯವಾದ ಏಳು ಜಗಲಿಗಳಿವೆ. ಗರ್ಭಗುಡಿಯಲ್ಲಿನ ಪಾದುಕೆಗಳ ದರ್ಶನ ಮಾಡಬೇಕಾದರೆ ಉಡುಪಿಯಲ್ಲಿರುವಂತೆ ಒಂದು ಬೆಳ್ಳಿಯ ಕಿಟಕಿಯ ಮೂಲಕ ನೋಡಬೇಕಾಗುತ್ತದೆ. ಇಲ್ಲಿ ನಿತ್ಯೋಪಾಸನೆ ಬೆಳಗ್ಗಿನಿಂದ ಪ್ರಾರಂಭವಾಗುತ್ತದೆ. ಪಾದುಕೆಗಳಿಗೆ ಜಲಸ್ಪರ್ಶ ಮಾಡುವುದಿಲ್ಲ. ಕೇಸರಿ ಮತ್ತು ಅಷ್ಟಗಂಧಗಳನ್ನು ಲೇಪಿಸುತ್ತಾರೆ. ಪ್ರತಿ ಗುರುವಾರ ರಾತ್ರಿ ಪಲ್ಲಕ್ಕಿಸೇವೆ ನಡೆಯುತ್ತದೆ.
ಊರಿನಿಂದ 1.6 ಕಿಮೀ ದೂರದಲ್ಲಿ ಭೀಮಾ- ಅಮರಜ ನದಿಗಳ ಸಂಗಮದ ಹತ್ತಿರ ಭಸ್ಮದ ರಾಶಿಯಿದೆ. ಹಿಂದೆ ಇಲ್ಲಿ ಯಜ್ಞಕಾರ್ಯಗಳು ನೆರವೇರುತ್ತಿದ್ದು ಆ ಯಜ್ಞಬೂದಿಯನ್ನು ಹೀಗೆ ಒಂದು ಕಡೆ ಗುಡ್ಡೆ ಮಾಡಲಾಗಿದೆಯೆಂದು ಪ್ರತೀತಿ. ಭಾವುಕ ಭಕ್ತರು ಸ್ನಾನಮಾಡಿದ ಅನಂತರ ಈ ಭಸ್ಮವನ್ನು ಲೇಪಿಸಿಕೊಳ್ಳುವರು. ಸಂಗಮೇಶ್ವರ ದೇವಾಲಯದ ಎದುರು ಶ್ರೀನರಸಿಂಹ ಸರಸತ್ವಿಯವರ ತಪೋಭೂಮಿ ಇದೆ. ಸಂಗಮದಿಂದ ಊರಿಗೆ ಬರುವ ದಾರಿಯಲ್ಲಿ ಷಟ್ಕುಲತೀರ್ಥ, ನರಸಿಂಹತೀರ್ಥ, ಭಾಗೀರಥೀತೀರ್ಥ, ಪಾಪವಿನಾಶಿತೀರ್ಥ, ಕೋಟಿತೀರ್ಥ, ರುದ್ರಪಾದತೀರ್ಥ, ಚಕ್ರತೀರ್ಥ ಮತ್ತು ಮನ್ಮಥತೀರ್ಥ ಎಂಬ ಎಂಟು ತೀರ್ಥಗಳಿವೆ. ಇಲ್ಲಿನ ತೀರ್ಥಗಳಲ್ಲಿ ಸ್ನಾನಮಾಡಿದರೆ ಅನೇಕ ಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ.
ಗಾಣಗಾಪುರದ ಉತ್ಸವ ಸಮಾರಂಭಗಳಲ್ಲಿ ಶ್ರೀದತ್ತಜಯಂತಿ ಮತ್ತು ಶ್ರೀನರಸಿಂಹ ಸರಸ್ವತಿಯವರ ಪುಣ್ಯತಿಥಿ - ಇವೆರಡು ವಿಶೇಷ ಮಹತ್ತ್ವದವು. ಶ್ರೀಗುರುವಿನ ಜೀವನಕಾರ್ಯ ಇಲ್ಲಿಯೇ ನಡೆದುದರಿಂದ ಈಗ ಸು. 500 ವರ್ಷಗಳಿಂದ ಇದು ಭಕ್ತರಿಗೆ ಜಾಗೃತ ಸ್ಥಾನವಾಗಿದೆ.
ಆಧಿವ್ಯಾಧಿಗಳಿಂದ ಬಳಲುವ ಅನೇಕ ಜನ ತಮ್ಮ ದುಃಖನಿವಾರಣೆಗಾಗಿ ಇಲ್ಲಿಗೆ ಬಂದು ಸೇವೆಮಾಡಿ ಶ್ರೀಗುರುಚರಿತ್ರೆ ಪಾರಾಯಣಮಾಡಿ ಭಿಕ್ಷಾ ಜೀವನವನ್ನು ನಡೆಸುವರು. ಶ್ರೀಗುರುಚರಿತ್ರೆಯಲ್ಲಿನ ಚಮತ್ಕಾರಿ ಕಥೆಗಳನ್ನೋದುವುದರಿಂದ ಶ್ರದ್ಧಾಜೀವನವನ್ನನುಸರಿಸುವುದರಲ್ಲಿ ವಿಶ್ವಾಸ ಹುಟ್ಟುತ್ತದೆ. ಮಠದಲ್ಲಿ ಮಧ್ಯಾಹ್ನ ಮಹಾನೈವೇದ್ಯ ನಡೆಯುತ್ತದೆ. ಅನಂತರ ಸೇವಾಕರ್ತರು ಮಧುಕರಿ ಬೇಡಲು ಹೋಗುತ್ತಾರೆ. ಧನಿಕರಾದ ಅನೇಕ ದತ್ತಭಕ್ತರು ಸೇವಾಕರ್ತರಿಗೆ ಧನಧಾನ್ಯ ಸಹಾಯ ಒದಗಿಸುತ್ತಿದ್ದಾರೆ. ದತ್ತವ್ರತದ ಪ್ರಕಾರ ಪ್ರತಿಯೊಬ್ಬ ಯಾತ್ರಿಕನೂ ಕನಿಷ್ಠಪಕ್ಷ ಐದು ಮನೆಗಳಿಗಾದರೂ ಹೋಗಿ ಬೇಡಬೇಕು ಎಂಬುದು ನಿಯಮ. ಭಾವುಕ ಭಕ್ತರು ಈ ನಿಯಮವನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಾರೆ

ಸನಾತನ ಹಿಂದೂಧರ್ಮದ ಕುತೂಹಲಕಾರಿ ಆಚಾರ ವಿಚಾರ*

ಸನಾತನ ಹಿಂದೂಧರ್ಮದ ಕುತೂಹಲಕಾರಿ ಆಚಾರ ವಿಚಾರ* 
💠 ನಾವು ಸಂದ್ಯಾವಂದನೆ ಮಾಡುವುದೇಕೆ?
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ "ಸಂಧ್ಯಾವಂದನೆ". ಸಂಧ್ಯಾವಂದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ,ಶಾಂತಿ ದೊರಕುತ್ತದೆ. ಆರೋಗ್ಯ ದೃಷ್ಟಿಯಿಂದ ಪ್ರಾಣಾಯಾಮ ಮಾಡಿದರೆ ಮನಸ್ಸು ಶುದ್ಧವಾಗಿ ಬುದ್ಧಿ ಚುರುಕಾಗುತ್ತದೆ, ಆಯಸ್ಸು ಹೆಚ್ಚುತ್ತದೆ. ಋಷಿವರೇಣ್ಯರ ದೀರ್ಘಾಯುಷ್ಯದ ಗುಟ್ಟು ಈ "ಪ್ರಾಣಾಯಾಮ". ಹಾಗೆ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುತ್ತದೆ. ಸೂರ್ಯನ ಕಿರಣಗಳಲ್ಲಿನ "ಡಿ" ಅನ್ನಾಂಗಗಳು ನಮ್ಮ ದೇಹವನ್ನು ಸೇರುತ್ತವೆ. ಅಷ್ಟೆ ಅಲ್ಲದೆ ನಮ್ಮ ಜೀವನದಲ್ಲಿ ಶಿಸ್ತು ಮೂಡಲು ಪ್ರಥಮ ಮೆಟ್ಟಿಲು ಸಂಧ್ಯಾವಂದನೆ ಆಗಿದೆ.
💠 ನಾವು ಧ್ಯಾನವನ್ನೇಕೆ ಮಾಡ ಬೇಕು?
ಧ್ಯಾನ ಎಂದರೆ ಏಕಾಗ್ರತೆ. ನಮ್ಮ ಮನಸ್ಸು ಚಂಚಲವಾಗಿರುತ್ತದೆ. ಈ ಚಂಚಲತೆಯನ್ನು ಹೋಗಲಾಡಿಸಿ ಮನಸ್ಸನ್ನು ಧೃಡವಾಗಿರಿಸುವ ಪ್ರಕ್ರಿಯೆಯೇ "ಧ್ಯಾನ". ದೃಢವಾದ ಮನಸ್ಸಿನಿಂದ ಸರಿಯಾದ ನಿರ್ಣಯಗಳನ್ನು ತೆಗೆದು ಕೊಳ್ಳ ಬಹುದು. ಹಾಗೆ ಸರಿಯಾದ ನಿರ್ಣಯಗಳಿಂದ ತೆಗೆದು ಕೊಂಡ ನಿರ್ಧಾರವು ತಪ್ಪಾಗಲಿಕ್ಕೆ ಸಾಧ್ಯವಿಲ್ಲ.ಯಾವುದೇ ಕಾರ್ಯಗಳನ್ನು ಏಕಾಗ್ರತೆಯಿಂದ ಮಾಡುವವನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸಿನ ಸಂಕಟಗಳು ದೂರವಾಗುತ್ತದೆ. ಮನಸ್ಸನ್ನು ಉಲ್ಲಾಸದಾಯಕವಾಗಿ ಇಡುವ ಈ ಧ್ಯಾನವನ್ನು ಮೂಢ ನಂಬಿಕೆಯೆಂದು ದೂರ ಮಾಡಿದರೆ, ಬಹಳ ದೊಡ್ಡ ಪ್ರಮಾಣದ ನಷ್ಟವೆಂದರೆ ಅತಿಶಯೋಕ್ತಿಯಲ್ಲ.
💠 ನಾವು ದೇವರಿಗೆ ದೀಪವನ್ನು ಹಚ್ಚುವುದು ಏಕೆ?
ಭಗವಂತನು ಜ್ಯೋತಿ ಸ್ವರೂಪನಾಗಿದ್ದಾನೆ. ಆತನಿಗೆ ಜ್ಯೋತಿಗಳಿಂದ ಉಪಯೊಗವೇನು? ಅಂದರೆ ನಾವು ಬೆಳಗುವ ದೀಪಗಳು ಪರಮಾತ್ಮನಿಗಲ್ಲ. ಆತನಿಂದ ಜ್ಞಾನವೆಂಬ ಬೆಳಕು ಅಂಧಕಾರದ ನಮ್ಮ ಬಾಳಿನಲ್ಲಿ ಹರಡಲಿ ಎಂಬ ಭಾವನೆಯನ್ನಿಟ್ಟು ಕೊಂಡು ದೀಪವನ್ನು ಬೆಳಗುತ್ತೇವೆ. ಹಾಗೆಂದು ವಿದ್ಯುದ್ದೀಪಗಳನ್ನು ಹಚ್ಚುತ್ತೇವೆಂದರೆ ನಿಮ್ಮ ಅಂದಾಜು ತಪ್ಪು ಎನ್ನುತ್ತೇನೆ. ಏಕೆಂದರೆ, ದೀಪಗಳನ್ನು ತುಪ್ಪ ಅಥವ ಎಣ್ಣೆ ಮತ್ತು ಬತ್ತಿಗಳಿಂದ ಹಚ್ಚುತ್ತೇವೆ. ತುಪ್ಪದ ದೀಪದ ಬೆಳಕು ಕಣ್ಣಿನ ಆರೋಗ್ಯವನ್ನು ವೃಧ್ದಿಸುತ್ತದೆ. ವಿದ್ಯುದ್ದೀಪದ ಬೆಳಕು ದೃಷ್ಠಿಯನ್ನು ಮಂದವಾಗಿಸುತ್ತದೆ. ಎಣ್ಣೆಯ ದೀಪಕ್ಕಿಂತ ತುಪ್ಪದ ದೀಪವು ಅಧಿಕ ಆಮ್ಲಜನಕ ಬಿಡುಗಡೆ ಮಾಡುವುದರಿಂದ ಶ್ರೇಷ್ಟ ಎಂದಿದ್ದಾರೆ. ಅಂತೆಯೇ ನಂದಾ ದೀಪವನ್ನು ಹಚ್ಚುವುದೇಕೆಂದರೆ, ಹಿಂದಿನ ಕಾಲದಲ್ಲಿ ಅಂದರೆ ರಂಜಕದಿಂದ ಬೆಂಕಿಯ ಉಪಯೋಗವು ತಿಳಿಯುವುದಕ್ಕೆ ಮುಂಚೆ ಎರಡು ಬೆಣಚು ಕಲ್ಲುಗಳ ಘರ್ಷಣೆಯಿಂದ ಅಥವಾ ಅರುಣಿಗಳಿಂದ ಬೆಂಕಿಯನ್ನು ಉತ್ಪಾದಿಸುತ್ತಿದ್ದರು. ಇವುಗಳಿಂದ ಬೆಂಕಿಯನ್ನು ಉತ್ಪಾದಿಸುವುದು ಬಹಳ ಕಷ್ಟಕರವಾದ ಮತ್ತು ರೇಜಿಗೆಯ ಕೆಲಸವಾಗಿತ್ತು. ಒಮ್ಮೆ ಹೊತ್ತಿಸಿದ ಬೆಂಕಿಯನ್ನು ದೀರ್ಘ ಕಾಲದವರೆಗೆ ಉಪಯೋಗಿಸುವ ಉದ್ದೇಶವಿಟ್ಟು ಕೊಂಡು ನಂದಾದೀಪವನ್ನು ಹಚ್ಚುವ ಪರಿಪಾಠವನ್ನು ರೂಢಿಸಿ ಕೊಂಡು ಬಂದಿರ ಬೇಕು.
💠 ನಾವು ಧೂಪವನ್ನು ಹಚ್ಚುವುದೇಕೆ?
ಲೋಭಾನ, ಶ್ರೀಗಂಧ, ಚಂಗಲ ಕೋಷ್ಠ, ಗುಗ್ಗುಳ, ಯಾಲಕ್ಕಿ, ಕೃಷ್ಣಾಗರು, ದೇವದಾರು, ಹಾಲುಮಡ್ಡಿ, ಜಟಾಮಾಂಸಿ ಮತ್ತು ಕಚೋರಗಳೆಂಬ ಹತ್ತು ವಿಧವಾದ ಮೂಲಿಕೆಗಳಿಂದ ಸಿದ್ಧ ಮಾಡಿ ಬೆಂಕಿಯಲ್ಲಿ ಸುಟ್ಟು ಅದರ ಹೊಗೆಯನ್ನು ಸೇವಿಸಿದರೆ ಶ್ವಾಸಕೋಶಗಳ ತೊಂದರೆಗಳು ನಿವಾರಣೆಯಾಗುತ್ತದೆ. ಈ ಹತ್ತು ವಿಧವಾದ ಮೂಲಿಕೆಗಳನ್ನು "ದಶಾಂಗ ಧೂಪ" ಎನ್ನುತ್ತಾರೆ. ಸುವಾಸನೆಗಾಗಿ ಹಚ್ಚುವ ಗಂಧದ ಕಡ್ಡಿಗಳು ಹೆಚ್ಚು ಉಪಯೋಗಕಾರಿ ಆಗುವುದಿಲ್ಲ. ಧೂಪವನ್ನು ಹಚ್ಚುವುದರಿಂದ ಅದರ ಸುವಾಸನೆಯು ನಮ್ಮ ಮನಸ್ಸನ್ನು ಹಗುರ ಮಾಡುತ್ತದೆ. ಭಕ್ತಿಯಿಂದ ಪ್ರಾರ್ಥನೆ ಮಾಡುವುದಕ್ಕೆ ಅನುಕೂಲವಾದ ಈ ಧೂಪವನ್ನು ಹಚ್ಚುವುದರಲ್ಲಿ ಹುಚ್ಚು ಕೆಲಸ ಅಲ್ಲವೆಂಬುದು ಸತ್ಯವಷ್ಟೇ.
💠  ನಾವು ಪೂಜೆಗೆ ಮುಂಚೆ ಘಂಟೆಯನ್ನೇಕೆ ಭಾರಿಸುತ್ತೇವೆ?
ಎರಡು ಲೋಹಗಳು ಪರಸ್ಪರ ಢಿಕ್ಕಿ ಹೊಡೆದಾಗ ಶಬ್ದ ತರಂಗಗಳು ಉಂಟಾಗುತ್ತವೆ. ಈ ಶಬ್ಧ ತರಂಗಗಳು ಕಿವಿಯನ್ನು ಹೊಕ್ಕು ಮೆದುಳನ್ನು ಸೇರುತ್ತದೆ.
ಸಾಮಾನ್ಯವಾಗಿ ಘಂಟೆಗಳನ್ನು ಕಂಚು, ಪಂಚಲೋಹ, ಬೆಳ್ಳಿ ಅಥವ ಹಿತ್ತಾಳೆಯಿಂದ ಮಾಡುತ್ತಾರೆ. ಪೂಜೆ ಮಾಡುವಾಗ ಹೊರಗಿನ ಎಲ್ಲ ವಿಚಾರಗಳನ್ನು ಪಕ್ಕಕ್ಕಿಟ್ಟು ಶುದ್ಧವಾದ ಮನಸ್ಸಿನಿಂದ ಪೂಜಿಸ ಬೇಕು. ಕಂಚಿನ ಘಂಟೆಯ ಸದ್ದು ಕಿವಿಯಲ್ಲಿ ಗುಂಯಿಗುಡುತ್ತಾ ಹೊರಗಿನ ಪ್ರಪಂಚವನ್ನು ಕ್ಷಣ ಕಾಲ ಮರೆಸಿ ಬಿಡುತ್ತದೆ ಗಮನಿಸಿದ್ದೀರಾ? ಅಂತಹ ಸ್ಥಿತಿಯಲ್ಲಿ ನಮ್ಮ ಮನಸ್ಸು ಪರಿಪೂರ್ಣ ಶುದ್ಧವಾಗಿರುತ್ತದೆ. ಆ ಸಮಯದಲ್ಲಿ ಮಾಡುವ ಆಲೋಚನೆ ಸಫ಼ಲವಾಗುತ್ತದೆ. ಹಾಗೆಯೇ ಘಂಟೆ ಭಾರಿಸುವ ಕೈಗಳ ನಾಡಿಗಳು ಗಂಟೆಯಿಂದ ಹೊರ ಬರುವ ತರಂಗಗಳಿಂದ ಶುದ್ಧವಾಗುತ್ತದೆ. ಪೂಜೆಗೆ ಕಂಚಿನ ಘಂಟೆ ಶ್ರೇಷ್ಠವೆಂದು ಹೇಳಿದ್ದಾರೆ.
💠 ನಾವು ಆಚಮನ ಮಾಡುವುದೇಕೆ?
ಆಚಮನ ಮಾಡುವ ನೀರು ಗಾಳಿಯೊಂದಿಗೆ ಒಳಗೆ ಹೋಗಿ ಅನ್ನನಾಳ ಮತ್ತು ಶ್ವಾಸಕೋಶಗಳು ಸೇರುವ ಸಂಧಿಯಲ್ಲಿ ಸೇರಿರುವ ಕಫ಼ ಮತ್ತು ಕಸದೊಂದಿಗೆ ಹೊಟ್ಟೆಯನ್ನು ಸೇರಿ ಅಲ್ಲಿಂದ ಬಹಿರ್ದೆಸೆಯಲ್ಲಿ ಹೊರ ಬೀಳುತ್ತದೆ. ಗಂಟಲಿನಲ್ಲಿರುವ ಕಫ಼ವು ಶಬ್ಧವನ್ನು ಸ್ವಚ್ಛವಾಗಿ ಉಚ್ಛಾರ ಮಾಡಲು ಬಿಡುವುದಿಲ್ಲ ಎಂಬುದು ಗೊತ್ತಿರುವ ಸಂಗತಿಯಾಗಿದೆ. ಸ್ವಚ್ಛವಾಗಿ ಉಚ್ಛಾರ ಮಾಡದ ಮಂತ್ರಗಳ ಅರ್ಥಗಳು ಬೇರೆಯೇ ಆಗುತ್ತದೆ. ಇದಕ್ಕೆ ಹಲವು ಉದಾಹರಣೆಗಳಿವೆ. ಈ ರೀತಿಯ ತಪ್ಪುಗಳು ಆಗದಿರಲಿ ಎಂದು ಋಷಿ ಮುನಿಗಳು ಕಂಡು ಕೊಂಡ ಉಪಾಯವೇ ಈ "ಆಚಮನ" ಆಗಿದೆ. ಆಚಮನ ಮಾಡುವಾಗ ವೇದಗಳ, ದೇವರ ಸ್ಮರಿಸಿ ನೀರು ಕುಡಿಯುವುದರಿಂದ ವಿಶೇಷ ಶಕ್ತಿ ಸಿಕ್ಕ ಅನುಭವ ಆಗುವುದು.
💠 ನಾವು ಸಂಕಲ್ಪವನ್ನೇಕೆ ಮಾಡುತ್ತೇವೆ?
ನಾವು ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡ ಬೇಕಾದರೆ ಪೂರ್ವ ಯೋಜನೆ ಅಗತ್ಯ. ಪೂರ್ವ ಯೋಜನೆ ಹಾಕಿ ಕೊಂಡು ಮಾಡುವ ಎಲ್ಲ ಕಾರ್ಯಗಳು ಉತ್ತಮ ಫಲದಾಯಕವಾಗಿದ್ದು ಅದೇ ರೀತಿ ಯಾವುದೇ ಪೂಜಾ ಕೈಂಕರ್ಯಗಳಲ್ಲಿ ಮೊದಲು ಪೂರ್ವ ಯೋಜನೆ ಮಾಡಿ ಕೊಳ್ಳುವ ಸಲುವಾಗಿ ಸಂಕಲ್ಪವನ್ನು ಮಾಡಿ ಕೊಳ್ಳುತ್ತೇವೆ. ಸಂಕಲ್ಪದಲ್ಲಿ ನಾವು ವಾಸಿಸುತ್ತಿರುವ ಸ್ಥಳದ ಪರಿಚಯ, ಈಗಿನ ಕಾಲಮಾನ, ಯಾವ ಉದ್ದೇಶದಿಂದ ಏನು ಮಾಡುತ್ತಿದ್ದೇವೆ? ಯಾರನ್ನು ಉದ್ದೇಶಿಸಿ ಮಾಡುತ್ತಿದ್ದೇವೆ? ಇವೆಲ್ಲದರ ಸಂಕ್ಷಿಪ್ತವಾದ ವಿವರಣೆ ಇರುತ್ತದೆ. ಇದರಿಂದ ಕಾರ್ಯಕ್ರಮದ ಯಾವ ಘಟ್ಟವನ್ನೂ ಮರೆಯುವ ಸಾದ್ಯತೆಯಿರುವುದಿಲ್ಲ. ಆದ್ದರಿಂದ ಸಂಕಲ್ಪ ಮಾಡುವುದರಲ್ಲಿ ಯಾವುದೇ ಕಂದಾಚಾರ ಇಲ್ಲವೆಂಬುದು ಸಾಭೀತಾಗುತ್ತದೆ.
💠 ನಾವು ಪವಿತ್ರವನ್ನು ಯಾಕೆ ಧರಿಸ ಬೇಕು?
"ಪವಿತ್ರ"ವೆಂದರೆ ಹೆಸರೇ ಹೇಳುವಂತೆ ಬಹಳ ಪವಿತ್ರವಾದದ್ದು. ಧರ್ಭೆಗಳನ್ನು ಸೇರಿಸಿ ಕಟ್ಟಿ ಉಂಗುರದಂತೆ ಮಾಡಿ ಉಂಗುರದ ಬೆರಳಿಗೆ ಹಾಕಿ ಕೊಳ್ಳುವ ಸಾಧನವೇ ಪವಿತ್ರ. ಧರ್ಭೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಅದರ ರಚನೆ ಹಲವಾರು ಮುಳ್ಳುಗಳಿಂದ ಆಗಿದೆ. ಈ ಮುಳ್ಳುಗಳು ಎಷ್ಟೋ ಬ್ಯಾಕ್ಟೀರಿಯಾಗಳನ್ನು ತಡೆದು ತನ್ನಲ್ಲೆ ಉಳಿಸಿ ಕೊಳ್ಳುತ್ತದೆ. ಈ ಪವಿತ್ರವನ್ನು ಹಾಕಿ ಕೊಂಡು ಪ್ರಾಣಾಯಾಮ ಮಾಡುವುದರಿಂದ ವಾತಾವರಣದಲ್ಲಿನ ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಸೇರುವ ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ. ಇದರಿಂದ ಅನೇಕ ರೋಗಾಣುಗಳು ನಮ್ಮ ದೇಹವನ್ನು ಸೇರುವುದು ತಪ್ಪುತ್ತದೆ ಮತ್ತು ಆರೋಗ್ಯವಾಗಿ ಇರುವುದಕ್ಕೆ ಸಹಕಾರಿಯಾಗಿರುತ್ತದೆ.
💠 ಕಲಶಗಳ ಕೆಳಗೆ ಅಕ್ಕಿಯನ್ನೇಕೆ ಹಾಕ ಬೇಕು?
ಅಕ್ಕಿಯು ಶಾಂತಿಯ ಸಂಕೇತ. ಏಕದಳ ಧಾನ್ಯವಾಗಿರುವ ಅಕ್ಕಿಯನ್ನು ಪೂಜೆ ಮಾಡುವ ಕಲಶಗಳ ಕೆಳಗೆ ಹಾಕುವುದು, ಪ್ರತಿದಿನ ನಮ್ಮ ಹಸಿವನ್ನು ನೀಗಿಸುವ ಧಾನ್ಯಕ್ಕೆ ಕೃತಜ್ಞತೆ ತೋರಿಸುವ ಉದ್ದೇಶಕ್ಕಾಗಿ, ಮನುಷ್ಯನಿಗೆ ಉಪಕಾರಿಯಾಗುವ ಎಲ್ಲ ವಸ್ತುಗಳು ದೈವ ರೂಪವೇ ಎಂದು ಅವುಗಳೆಲ್ಲವಕ್ಕೂ ದೇವರ ಸನ್ನಿಧಿಯಲ್ಲಿ ಸ್ಥಾನ ಕಲ್ಪಿಸಿದೆ ನಮ್ಮ ಧರ್ಮ.
💠 ನಾವು ತಾಮ್ರದ ಕಲಶವನ್ನೇ ಏಕೆ ಉಪಯೋಗಿಸುತ್ತೇವೆ?
ತಾಮ್ರವು ಲೋಹಗಳಲ್ಲೆಲ್ಲಾ  ಅತುತ್ತಮವಾದದ್ದು. ಇದಕ್ಕೆ ವಿಶೇಷವಾದ ಗುಣಗಳು ಇರುವುದರಿಂದಲೇ ಇದಕ್ಕೆ ವಿಶೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ. ತಾಮ್ರದೊಂದಿಗೆ ನೀರು ಬೆರೆತಾಗ ಅಲ್ಲಿ ರಾಸಾಯನಿಕ ಕ್ರಿಯೆ ಉಂಟಾಗಿ ವಿಶಿಷ್ಟವಾದ ದ್ರಾವಣ ಉತ್ಪತ್ತಿಯಾಗಿ ಅನೇಕ ತರಹದ ಚರ್ಮ ರೋಗಗಳು ಗುಣವಾಗುತ್ತವೆಂದು ವೈಜ್ಞಾನಿಕವಾಗಿ ಸಾಭೀತಾಗಿದೆ.
💠ನಾವು ಕಲಶದೊಳಗೆ ಧರ್ಬೆಯ ಕೂರ್ಚವನ್ನೇಕೆ ಹಾಕುತ್ತೇವೆ?
ನಾವು ಮಂತ್ರವನ್ನು ಉಚ್ಛಾರ ಮಾಡುವಾಗ ಕೆಲವು ಏರುಪೇರುಗಳಾಗುವ ಸ್ವರಗಳನ್ನು ಛಂದೋಬದ್ಧವಾಗಿ ಹೇಳುವ ಮಂತ್ರಗಳು ಪ್ರಕೃತಿಯಲ್ಲಿನ ವಿದ್ಯುತ್ಕಾಂತೀಯ ಶಕ್ತಿಯನ್ನು  ಸಂಯೋಜಿಸಲ್ಪಟ್ಟು ಶಕ್ತಿಯು ಕಲಶದೊಳಗೆ ಇಟ್ಟಿರುವ ಧರ್ಭೆಯಿಂದ ಆಕರ್ಷಿತಗೊಂಡು ಕಲಶದೊಳಗೆ ಸೇರುತ್ತದೆ. ಇದನ್ನೇ ಹಿಂದಿನ ಕಾಲದವರು ದೈವ ಸಾನ್ನಿಧ್ಯವೆನ್ನುತ್ತಿದ್ದರು ಎಂದು ಕಾಣುತ್ತದೆ. ಇಂತಹ ದೈವ ಸಾನ್ನಿಧ್ಯಕ್ಕಾಗಿ ಧರ್ಬೆಯ ಕೂರ್ಚನ್ನು ಕಲಶದೊಳಗೆ ಹಾಕುತ್ತೇವೆ.
💠 ಕಲಶದೊಳಗೆ ಮಾವಿನ ಸೊಪ್ಪನ್ನು ಏಕೆ ಹಾಕುತ್ತೇವೆ ?
ಮಾವಿನ ಎಲೆಗಳಲ್ಲಿ ಪತ್ರ ಹರಿತ್ತಿನ ಪ್ರಮಾಣ ಹೆಚ್ಚಾಗಿದ್ದು, ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದು ತಿಳಿದಿರುವ ಸಂಗತಿಯಾಗಿದೆ. ಶುಭ ಕಾರ್ಯಗಳು ಮನೆಯಲ್ಲಿ ಜರುಗುವಾಗ ಬಹಳ ಜನ ಸೇರುವುದು ಸಾಮಾನ್ಯವಾಗಿದ್ದು ಹಾಗೆ ಬಹಳ ಜನ ಸೇರಿದಾಗ ಅಷ್ಟೂ ಜನಕ್ಕೆ ಸರಿ ಹೊಂದುವ ಆಮ್ಲಜನಕ ವಾತಾವರಣದಲ್ಲಿ ಸೇರಿಸುವ ಸಲುವಾಗಿ ಮಾವಿನ ಸೊಪ್ಪು ಮತ್ತು ಬಾಳೆ ಎಲೆಗಳನ್ನು ಉಪಯೋಗಿಸುತ್ತಾರೆ . ಮಾವಿನ ಎಲೆಗಳು ಮತ್ತು ಬಾಳೆ ಎಲೆಗಳು ದೀರ್ಘ ಕಾಲದವರೆಗೆ ಆಮ್ಲಜನಕವನ್ನು ಉತ್ಪಾದಿಸುತ್ತವೆ. ಅಲ್ಲದೆ ಮಾವಿನ ಎಲೆಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿದ್ದು ಚರ್ಮ ರೋಗಗಳಿಗೆ ರಾಮಬಾಣವಾಗಿದೆ.
💠ಕಲಶದ ಮೇಲೆ ತೆಂಗಿನ ಕಾಯಿ ಇಡುವ ಉದ್ದೇಶವೇನು ?
ಪರಮಾತ್ಮನು ಜ್ಯೋತಿ ಸ್ವರೂಪನಾಗಿದ್ದಾನೆ. ಜ್ಯೋತಿ ಸ್ವರೂಪನಾದ ಭಗವಂತನನ್ನು ಕಲಶದಲ್ಲಿ ಆವಾಹನೆ ಮಾಡುತ್ತೇವೆ. ಕಲಶವೂ ಜ್ಯೋತಿ ಸ್ವರೂಪದಂತೆ ಕಾಣುತ್ತದೆ. ತೆಂಗಿನ ಬಗ್ಗೆ ಹೇಳ ಬೇಕಾದದ್ದೇನೂ ಇಲ್ಲ. ತೆಂಗಿನ ಮರದ ಯಾವುದೇ ಭಾಗವೂ ಕೆಲಸಕ್ಕೆ ಬಾರದೇ ಇಲ್ಲ. ತೆಂಗು ಯಾವುದೇ ಪ್ರಾಣಿ - ಪಕ್ಷಿಗಳ ಎಂಜಲಿನಿಂದ ಬೆಳೆದಿರುವುದಿಲ್ಲ. ಆದ್ದರಿಂದಲೇ ಅದಕ್ಕೂ ದೈವ ಸ್ಥಾನವನ್ನು ಕೊಟ್ಟು ಕಲ್ಪವೃಕ್ಷ ಎಂದಿದ್ದೇವೆ. ಅಂತಹ ಪವಿತ್ರವಾದ ಮರದಲ್ಲಿ ಹುಟ್ಟಿದ ತೆಂಗಿನ ಕಾಯಿಯನ್ನು ಪರಮಾತ್ಮನಿಗೆ ಅರ್ಪಣೆ ಮಾಡುವುದರಿಂದ ಧನ್ಯತೆಯನ್ನು ಪಡೆಯುವುದರ ಉದ್ದೇಶವನ್ನಿಟ್ಟು ಕೊಂಡು ತೆಂಗಿನ ಕಾಯಿಯನ್ನು ಪೂಜೆಯಲ್ಲಿ ಬಳಸುತ್ತೇವೆ.
💠 ಮನೆಯ ಮುಂದೆ ಸಗಣಿಯಿಂದ ಸಾರಿಸುವುದೇಕೆ?
ಗೋಮಯ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ ಇವುಗಳನ್ನು ಪಂಚಗವ್ಯ ಎನ್ನುತ್ತೇವೆ. ಇವೆಲ್ಲವೂ ಆಕಳದ್ದಾಗಿರುತ್ತದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ವಿಶೇಷ  ಗುಣಗಳಿರುತ್ತವೆ. ವಿಶೇಷವಾಗಿ ಗೋಮಯದಲ್ಲಿ ಸೂಕ್ಷ್ಮಾತಿ ಸೂಕ್ಷ್ಮವಾದ ಬ್ಯಾಕ್ಟೀರಿಯಾಗಳನ್ನು ತಡೆಯುವ ಶಕ್ತಿ ಹೆಚ್ಚಾಗಿರುತ್ತದೆ. ಗೋಮಯದಿಂದ ಮನೆಯ ಮುಂದೆ ಸಾರಿಸಿದರೆ ವಾತಾವರಣದಲ್ಲಿನ ರೋಗಕಾರಕ ಬ್ಯಾಕ್ಟೀರಿಯಾಗಳು ಮನೆಯೊಳಗೆ ಬರದಂತೆ ತಡೆಯುತ್ತದೆ. ಇದರಿಂದ ಅನೇಕ ರೋಗಗಳನ್ನು ಹತ್ತಿರ ಸುಳಿಯದಂತೆ ಮಾಡ ಬಹುದಾಗಿದೆ. ಹಾಗೆಯೇ ರಂಗವಲ್ಲಿ ಹಾಕುವುದು ನಮ್ಮ ಧರ್ಮದ ವಿಶೇಷ ಸಂಪ್ರದಾಯವಾಗಿದೆ. ಚಿತ್ತಾಕರ್ಷಕ ಬಗೆಬಗೆಯ ರಂಗೋಲಿಗಳನ್ನು ಸುಣ್ಣದ ಉಂಡೆ ಮತ್ತು ಕೆಂಪು ಮಣ್ಣಿನಿಂದ ಹಾಕುತ್ತಾರೆ. ಸುಣ್ಣದ ಉಂಡೆ ಮತ್ತು ಕೆಂಪು ಮಣ್ಣುಗಳೂ ಸಹ ಜೀವ ನಿರೋಧಕ  ಎಂಬುದನ್ನು ಮರೆಯ ಬಾರದು. ಈಗೀಗ ನಗರ ಪ್ರದೇಶಗಳಲ್ಲಿ ಸಮಯದ ಮತ್ತು ಸ್ಥಳದ ಅಭಾವದಿಂದ ಮನೆಯ ಮುಂದೆ ಸಾರಿಸುವುದು ಮತ್ತು ರಂಗವಲ್ಲಿ ಹಾಕುವುದು ದೂರವೇ ಉಳಿದಿದೆ. ಅಲ್ಲಲ್ಲಿ ನಡೆಯುವ ರಂಗವಲ್ಲಿ ಸ್ಪರ್ಧೆಗಳಲ್ಲಿ ಮಾತ್ರ ರಂಗವಲ್ಲಿಗಳನ್ನು ನೋಡುವುದು ಅನಿವಾರ್ಯವಾಗಿದೆ.
💠 ಮನೆಯ ಮುಂದೆ ತುಳಸಿ ಕಟ್ಟೆಯನ್ನೇಕೆ ಕಟ್ಟುತ್ತೇವೆ?
ತುಳಸಿಯ ಎಲೆಗಳಲ್ಲಿ ವಿಶೇಷ ಗುಣಗಳಿವೆ. ತುಳಸಿಯು ಔಷಧೀಯ ಸಸ್ಯವಾಗಿದೆ. ಇದರಿಂದ ಅನೇಕ ಕಾಯಿಲೆಗಳನ್ನು ಗುಣ ಪಡಿಸ ಬಹುದು. ಆಯುರ್ವೇದದಲ್ಲಿ ತುಳಸಿಗೆ ಬಹಳ ಪವಿತ್ರ ಸ್ಥಾನವನ್ನು ಕೊಟ್ಟಿದ್ದಾರೆ. ಕೆಮ್ಮು, ಕಫ಼ ಮುಂತಾದ ಸಣ್ಣ ಸಣ್ಣ ಕಾಯಿಲೆಗಳಿಂದ ಹಿಡಿದು ಕ್ಷಯದ ವರೆಗೆ ನಿವಾರಿಸುವ ಶಕ್ತಿ ಈ ತುಳಸಿಗಿದೆ. ಅಂತಹ ತುಳಸಿ ಪ್ರತಿಯೊಂದು ಮನೆಯಲ್ಲೂ ಇಲ್ಲದೆ ಇದ್ದರೆ ಮುಂದಿನ ಪೀಳಿಗೆಯವರಿಗೆ ಕನ್ನಡಿಯೊಳಗಿನ ಗಂಟು ಆಗುವುದರಲ್ಲಿ ಸಂದೇಹವಿಲ್ಲ.

ಕರುನಾಡ ವಾಣಿ

ಕರುನಾಡ ವಾಣಿ
1965 ರ ಇಂಡೋ-ಪಾಕ್ ಯುದ್ದದಲ್ಲಿ ಮೋದಿಜಿ ಹೇಗೆಲ್ಲಾ ಸೈನಿಕರಿಗೆ ಸಹಾಯ ಮಾಡಿದ್ದಾರೆ ಗೋತ್ತಾ..??ಇದನ್ನ ಓದಿ ಅರ್ಥವಾಗುತ್ತೆ..!!
Jan 25, 2018 | ಅಂಕಣ
1965 ರ ಇಂಡೋ-ಪಾಕ್ ಯುದ್ದದಲ್ಲಿ ಮೋದಿಜಿ ಹೇಗೆಲ್ಲಾ ಸೈನಿಕರಿಗೆ ಸಹಾಯ ಮಾಡಿದ್ದಾರೆ ಗೋತ್ತಾ..??ಇದನ್ನ ಓದಿ ಅರ್ಥವಾಗುತ್ತೆ..!!
648
ಹೌದು!! 1965 ರ ಇಂಡೋ ಪಾಕ್ ಯುದ್ಧದಲ್ಲಿ ನರೇಂದ್ರ ಮೋದಿ ನಮ್ಮ ಸೈನಿಕರಿಗೆ ಸಹಾಯ ಮಾಡಿದ್ದಾರೆ, ಆಗೀನು ಮೋದಿ ಜಿ ವಯಸು ಬರಿ ೧೪ ವರ್ಷ!! ಇದೇನಪ್ಪ ಬರಿ ೧೪ ವರ್ಷದಲ್ಲಿ ಮೋದಿ ಜಿ ಹೇಗೆ ಸಹಾಯ ಮಾಡಲು ಸಾಧ್ಯ ಅಂತ ನಿಮಗೆ ಅನಿಸುತ್ತಿರಬಹುದು, ನಂಬಲು ಸ್ವಲ್ಪ ಕಷ್ಟ ಕೂಡ ಆಗಬಹುದು ಆದರೆ ಅದು ನಿಜವಾದ ರೋಚಕ್ ಕಥೆ.
ಮೋದಿಜಿ ಸಹಾಯ ಮಾಡಿರುವ ಬಗ್ಗೆ ಅರ್ಥವಾಗಬೇಕೆಂದರೆ ನಾವು 1965 ಯುದ್ದದ ಬಗ್ಗೆ ಒಂದು ಕ್ವಿಕ್ ಲುಕ್ ತೆಗೆದುಕೊಳಬೇಕಾಗುತ್ತದೆ..!!
ಯೆಸ್!!ಆಗತಾನೆ ನೆಹರು ಅವರು ಮಾಡಿರುವ ತಪ್ಪು ನಿರ್ಧಾರದಿಂದ ಚೀನಾದ ಜೊತೆ ಸೆಣಸಾಡಿ ಭಾರತ ಯುದ್ಧದಲ್ಲಿ ಸೋತಿತು. 1965 ರಲ್ಲಿ ಮತ್ತೊಂದು ಯುದ್ದದಕ್ಕೆ ಭಾರತ ತಯಾರಾಗಿತ್ತು ಅದೇ ಇಂಡೋ ಪಾಕ್ ಯುದ್ಧ.
ನೆಹರೂ ಅವರು ತೀರಿಕೊಂಡ ಮೇಲೆ ಅತ್ಯಂತ ಸರಳ ಜೀವಿಯಾದ ಲಾಲ್ ಬಹದ್ದೂರ್ ಶಾಸ್ತ್ರೀಯವರು ಪ್ರಧಾನಿಯಾಗಿ ಚುಕ್ಕಾಣಿ ಹಿಡಿದರು.
ಚೀನಾದ ಯುದ್ಧದಲ್ಲಿ ಸೋತ ಮೇಲೆ ಭಾರತದ ರಕ್ಷಣಾ ಸಚಿವರು ಪಾಕಿಸ್ತಾನ ವನ್ನು ಟೀಕಿಸಿದರು ಇದು ಪಾಕಿಸ್ತಾನವನ್ನ ಕೆರಳಿಸಿತು ಪಾಕಿಸ್ತಾನ ಮೊದಲ ಅಜೆಂಡಾ ಜಮ್ಮು ಮತ್ತು ಕಾಶ್ಮೀರ ವಿವಾದ ಮತ್ತೆ ಮರುಹುಟ್ಟು ಪಡೆದುಕೊಂಡಿತು.
1965ರ ಭಾರತ-ಪಾಕಿಸ್ತಾನ ಯುದ್ಧವು 1965ರ ಏಪ್ರಿಲ್ ಮತ್ತು ಸೆಪ್ಟೆಂಬರ್ ಮಧ್ಯೆ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ನಡೆದ ಕದನಗಳು. ಇದನ್ನು ಎರಡನೇ ಕಶ್ಮೀರ್ ಯುದ್ಧ ಎಂದೂ ಕರೆಯಲಾಗುತ್ತದೆ.
ಮೊದಲಿಗೆ ಗುಜರಾತ್ ನ ಕಚ್ ಮೇಲೆ ದಾಳಿ ನಡೆಸಿದ ಪಾಕಿಸ್ತಾನ ಯುದ್ಧ ಪ್ರಾಂಭಿಸಿತು. ಪಾಕಿಸ್ತಾನವು ರಹಸ್ಯವಾಗಿ ಅನೇಕ ಯೋಧರನ್ನು ಕಾಶ್ಮೀರದ ಒಳಕ್ಕೆ ಕಳುಹಿಸಲು ಪ್ರಯತ್ನಿಸಿದ್ದು ಈ ಯುದ್ಧಕ್ಕೆ ಕಾರಣವಾಯಿತು. ಈ ಯುದ್ಧವು ಸಂಯುಕ್ತ ರಾಷ್ಟ್ರಗಳ ಮುನ್ನಡೆಯಲ್ಲಿ ಉಂಟಾದ ಕದನವಿರಾಮದಿಂದ ಮತ್ತು ನಂತರದ ತಾಷ್ಕೆಂಟ್ ಘೋಷಣೆಗಳಿಂದ ಮುಕ್ತಾಯವಾಯಿತು.
ಇದಿಷ್ಟು 1965 ಯುದ್ಧದಲ್ಲಿ ನಡೆದ ಘಟನೆಗಳು ಆದರೆ ನಮಗೆ ಕಾಡುತ್ತಿರುವುದು ಪ್ರಶ್ನೆ ಮೋದಿ ಹೇಗೆ ಸೈನಿಕರನ್ನ ಸಹಾಯ ಮಾಡಿದ್ದಾರೆ ಅನ್ನೋದು ..!!ಮುಂದೆ ಓದಿ.
ಸಾಮಾನ್ಯವಾಗಿ 14 ವರ್ಷ ವಯಸ್ಸು ಹುಡುಗಾಟದ ವಯಸ್ಸು ದೇಶ ಸೇವೆಯ ಬಗ್ಗೆ ಅಷ್ಟೊಂದು ತಿಳುವಳಿಕೆ ಇರುದಿಲ್ಲ ಆದರೆ ಮೋದಿಜಿ ವಿಷಯದಲ್ಲಿ ಹಾಗಿಲ್ಲ ಅವರು ತಮ್ಮ 14 ವಯಸ್ಸಿನಲ್ಲೆ ದೇಶದ ಬಗ್ಗೆ ಕಾಳಜಿ ವಹಿಸುತ್ತಿದ್ದರು..!!
ಅಷ್ಟಕು ಮೋದಿ ಹೇಗೆ ಸೈನಿಕರಿಗೆ ಸಹಾಯ ಮಾಡಿದ್ದಾರೆ ಅಂತ ಹೇಳುವ ಗಳಿಗೆ ಬಂದೆ ಬಿಡ್ತು ನೋಡಿ!!!
ಮೋದಿಜಿ ದೇಶ ಪ್ರೇಮ ಯುವಕರಿದಾಗಲೇ ಪ್ರಾರಂಭವಾಯಿತು, 1965 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಮೋದಿ ರೈಲ್ವೆ ನಿಲ್ದಾಣಗಳಲ್ಲಿ ಭಾರತ ಸೇನೆಗೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು ಹಾಗೆ 1967 ರಲ್ಲಿ ಗುಜರಾತ್ನಲ್ಲಿ ಪ್ರವಾಹ ಸಂತ್ರಸ್ತರನ್ನು ಸಹ ಅವರು ಸಹಾಯ ಮಾಡಿದರು.”
ಈಗ ಹೇಳಿ ಮೋದಿಜಿ ದೇಶ ಪ್ರೇಮ ಎಂತಹದು ಅಂತ, ಯಾವ ಜನ್ಮದ ಪುಣ್ಯವೋ ನಾವು ಇಂತಹ ಪ್ರಧಾನಿಯನ್ನು ಪಡೆದುಕೊಂಡಿದ್ದೇವೆ.
ಈಗಲೂ ದಿನದ 18 ಕೆಲಸ ಮಾಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ದೇಶಕೊಸ್ಕರ ದುಡಿಯುತ್ತಿದ್ದಾರೆ. ಈ ಪುಣ್ಯಾತ್ಮನಿಗೆ ದೇವರು ನೂರು ವರ್ಷ ಆಯಸ್ಸು ಕೊಟ್ಟು ಇನು ನಮ್ನ ದೇಶ ಸೇವೆ ಮಾಡಲು ಆಶಿರ್ವಾದಿಸಲೆಂದು ಆಶಿಸೋಣ

ಮೊಸರಿನೊಂದಿಗೆ

*ಮೊಸರನ್ನು ಈ 10 ಪದಾರ್ಥಗಳೊಂದಿಗೆ ಪ್ರತ್ಯೇಕವಾಗಿ ಬೆರೆಸಿಕೊಂಡು ತಿನ್ನಿ, ಅದ್ಭುತ ಫಲಿತಾಂಶ ಪಡೆಯಿರಿ.*
🍚🍚🍚🍚🍚🍚🍚🍚
*ಹಾಲಿನಿಂದ ತಯಾರಿಸುವ ಮೊಸರೆಂದರೆ ಬಹಳಷ್ಟು ಮಂದಿಗೆ ಇಷ್ಟ. ಕೆಲವರಂತೂ ಊಟದ ಬಳಿಕ ಮೊಸರು ತಿನ್ನದಿದ್ದರೆ ಅವರಿಗೆ ಪರಿಪೂರ್ಣ ತೃಪ್ತಿ ಸಿಗಲ್ಲ. ಭೋಜನ ಅಸಂಪೂರ್ಣವಾಗಿ ಮುಗಿದಂತೆ ಭಾವಿಸುತ್ತಾರೆ. ಆ ಮಾತು ಬಿಡಿ, ಮೊಸರಿನಿಂದ ನಮಗೆ ಅನೇಕ ವಿಧವಾದ ಲಾಭಗಳಿವೆ. ಈ ವಿಷಯ ಎಲ್ಲರಿಗೂ ಗೊತ್ತಿರುವುದೇ. ಮೊಸರಿನೊಂದಿಗೆ ಕೆಲವು ಆಹಾರ ಪದಾರ್ಥಗಳನ್ನು ಬೆರೆಸಿಕೊಂಡು ತಿಂದರೆ ಹಲವು ವಿಧದ ಅನಾರೋಗ್ಯ ಸಮಸ್ಯೆಗಳು ಸುಲಭವಾಗಿ ದೂರವಾಗುತ್ತವೆ. ಆ ಆಹಾರ ಯಾವುದು ಎಂದು ಈಗ ತಿಳಿದುಕೊಳ್ಳೋಣ ಬನ್ನಿ.*
*🍚1. ಸ್ವಲ್ಪ ಜೀರಿಗೆ ತೆಗೆದುಕೊಂಡು ಪುಡಿ ಮಾಡಿ ಅದನ್ನು ಒಂದು ಕಪ್ ಮೊಸರಿನಲ್ಲಿ ಬೆರೆಸಿಕೊಂಡು ತಿಂದರೆ ಶೀಘ್ರವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು.*
*🍚2. ಸ್ವಲ್ಪ ಕಪ್ಪು ಉಪ್ಪನ್ನು ತೆಗೆದುಕೊಂಡು ನುಣ್ಣಗೆ ಮಾಡಿಕೊಳ್ಳಿ. ಅದನ್ನು ಒಂದು ಕಪ್ ಮೊಸರಿನೊಂದಿಗೆ ಬೆರೆಸಿಕೊಂಡು ಕುಡಿಯಬೇಕು. ಇದರಿಂದ ಜೀರ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಮುಖ್ಯವಾಗಿ ಗ್ಯಾಸ್, ಅಸಿಡಿಟಿಯಂತಹವು ಕಡಿಮೆಯಾಗುತ್ತವೆ.*
*🍚3. ಸ್ವಲ್ಪ ಮೊಸರಿನೊಂದಿಗೆ ಸಕ್ಕರೆ ಬೆರೆಸಿಕೊಂಡು ತಿನ್ನಬೇಕು. ಇದರಿಂದ ದೇಹಕ್ಕೆ ಕೂಡಲೆ ಶಕ್ತಿ ಸಿಗುತ್ತದೆ. ಮೂತ್ರಕೋಶದ ಸಮಸ್ಯೆಗಳು ದೂರವಾಗುತ್ತವೆ.*
*🍚4. ಸ್ವಲ್ಪ ಓಂಕಾಳನ್ನು ತೆಗೆದುಕೊಂಡು ಒಂದು ಕಪ್ ಮೊಸರಿನೊಂದಿಗೆ ಬೆರೆಸಿ ತಿನ್ನಬೇಕು. ಇದರಿಂದ ಬಾಯಿಹುಣ್ಣು, ಹಲ್ಲುನೋವು, ಇತರೆ ದಂತ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ.*
*🍚5. ಒಂದು ಕಪ್ಪು ಮೊಸರಿನೊಂದಿಗೆ ಸ್ವಲ್ಪ ಕಪ್ಪು ಮೆಣಸಿನ ಪುಡಿಯನ್ನು ಬೆರೆಸಿ ತಿನ್ನಬೇಕು. ಇದರಿಂದ ಮಲಬದ್ಧತೆ ದೂರವಾಗುತ್ತದೆ. ತಿಂದ ಆಹಾರ ಸರಿಯಾಗಿ ಪಚನವಾಗುತ್ತದೆ.*
*🍚6. ಮೊಸರಿನಲ್ಲಿ ಸ್ವಲ್ಪ ಓಟ್ಸ್ ಬೆರೆಸಿ ತಿನ್ನಬೇಕು. ಹೀಗೆ ಮಾಡುವುದರಿಂದ ಒಳ್ಳೇ ಪ್ರೋಬಯೋಟಿಕ್ಸ್, ಪ್ರೋಟೀನ್ ಲಭಿಸುತ್ತದೆ. ಇವು ಮಾಂಸಖಂಡಗಳ ಶಕ್ತಿಗೆ ಸಹಾಯಕಾರಿ.*
*🍚7. ಮೊಸರಿನೊಂದಿಗೆ ವಿವಿಧ ರೀತಿಯ ಹಣ್ಣುಗಳನ್ನು ಬೆರೆಸಿಕೊಂಡು ತಿಂದರೆ ಶರೀರ ರೋಗನಿರೋಧಕ ಶಕ್ತಿ ಹೆಚ್ಚುತ್ತೆ. ಹಲವು ವಿಧದ ಇನ್‌ಫೆಕ್ಷನ್‌ಗಳು, ರೋಗಗಳು ಬರದಂತೆ ನೋಡಿಕೊಳ್ಳಬಹುದು.*
*🍚8. ಮೊಸರಿನೊಂದಿಗೆ ಸ್ವಲ್ಪ ಅರಿಶಿಣ, ಸ್ವಲ್ಪ ಶುಂಠಿ ಬೆರೆಸಿ ತಿನ್ನಬೇಕು. ಇದರಿಂದ ಫೋಲಿಕ್ ಆಸಿಡ್ ಶರೀರಕ್ಕೆ ಸೇರುತ್ತದೆ. ಇದು ಚಿಕ್ಕಮಕ್ಕಳಿಗೆ, ಗರ್ಭಿಣಿಯರಿಗೆ ಎಷ್ಟೋ ಉಪಯುಕ್ತ.*
*🍚9. ಮೊಸರಿನೊಂದಿಗೆ ಆರೆಂಜ್ ಜ್ಯೂಸ್ ಬೆರೆಸಿಕೊಂಡು ತಿನ್ನಬೇಕು. ಇದರಿಂದ ಶರೀರಕ್ಕೆ ಸಾಕಷ್ಟು ವಿಟಮಿನ್ ಸಿ ಲಭ್ಯವಾಗುತ್ತದೆ. ಇದು ಕೀಲು ನೋವು ಕಡಿಮೆ ಮಾಡುತ್ತೆ. ವೃದ್ಧಾಪ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.*
*🍚10. ಮೊಸರಿನೊಂದಿಗೆ ಜೇನುತುಪ್ಪ ಬೆರೆಸಿ ತಿಂದರೆ ಹೊಟ್ಟೆಯಲ್ಲಿನ ಅಲ್ಸರ್ ಮಾಯವಾಗುತ್ತದೆ. ಈ ಮಿಶ್ರಣ ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಇದರಿಂದ ದೇಹದಲ್ಲಿನ ಇನ್‌‍ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ*.

*ಊಟ ಮಾಡುವಾಗ ನಾವೇಕೆ ನೆಲದ ಮೇಲೆ ಕುಳಿತುಕೊಳ್ಳಬೇಕು.?*

*ಊಟ ಮಾಡುವಾಗ ನಾವೇಕೆ ನೆಲದ ಮೇಲೆ ಕುಳಿತುಕೊಳ್ಳಬೇಕು.?*
*ಭಾರತದಲ್ಲಿ ನಾವು ಎಲ್ಲರ ಮನೆಯಲ್ಲಿಯೂ ಸಾಮಾನ್ಯವಾಗಿ ನೆಲದ ಮೇಲೆ ಕೂತು ಊಟ ಮಾಡುವ ಜನರನ್ನು ಕಾಣುತ್ತೇವೆ. ನಮ್ಮಲ್ಲಿ ಕೆಲವು ಜನ ಊಟ ಮಾಡಲೆಂದೆ ಡೈನಿಂಗ್ ಟೇಬಲ್,ಚೇರ್ ಮುಂತಾದವುಗಳನ್ನು ಇಟ್ಟುಕೊಂಡಿರುತ್ತಾರೆ. ಇನ್ನೂ ಕೆಲವರು ಟಿವಿ ಮುಂದೆಯೋ ಅಥವಾ ತಮ್ಮ ಹಾಸಿಗೆಯ ಮೇಲೋ ಕುಳಿತು ಊಟ ಮಾಡುವ ರೂಢಿಯನ್ನು ಇಟ್ಟುಕೊಂಡಿರುತ್ತಾರೆ. ಬಹುಶಃ ಟಿವಿ ನೋಡುತ್ತಾ ಅಥವಾ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ನಿಮಗೆ ಆರಾಮದಾಯಕವಾಗಿರಬಹುದು.*
*ಆದರೆ ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಉಪಯೋಗವಾಗುವುದಿಲ್ಲ. ಇದಕ್ಕಾಗಿ ನಮ್ಮ ಪೂರ್ವಿಕರು ಒಂದು ಶಿಸ್ತನ್ನೆ ಅಳವಡಿಸಿದ್ದರು. ಅವರೆಲ್ಲರು ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತು ಆಹಾರವನ್ನು ಸೇವಿಸುತ್ತಿದ್ದರು. ಹೀಗೆ ಆಹಾರ ಸೇವಿಸಲು ಇರುವ 10 ಕಾರಣಗಳನ್ನು ನಾವಿಲ್ಲಿ ನೀಡಿದ್ದೇವೆ, ಇದನ್ನು ಅಳವಡಿಸಿಕೊಳ್ಳಿ ಇದರಿಂದ ನಿಮ್ಮ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳು ದೊರೆಯುತ್ತವೆ.*
*ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ:*
*ನೀವು ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿಕೊಂಡು ಊಟ ಮಾಡುವುದರಿಂದ ನಿಮಗೆ ತಿಳಿಯದಂತೆ ಒಂದು ಉಪಯೋಗ ದೊರೆಯುತ್ತದೆ. ಅದೇನೆಂದರೆ ಚಕ್ಕಳ ಮಕ್ಕಳವು ಒಂದು ಸುಖಾಸನ ಅಥವಾ ಅರ್ಧ ಪದ್ಮಾಸನ ಎಂದೇ ಹೆಸರುವಾಸಿಯಾಗಿದೆ. ಈ ಸುಖಾಸನವು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಗಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ (ಇನ್ನೂ ಕೆಲವರ ಅಭಿಪ್ರಾಯದಂತೆ ನೀವು ಸುಖಾಸನದಲ್ಲಿ ಕುಳಿತ ಕೂಡಲೆ ನಿಮ್ಮ ಮೆದುಳಿಗೆ ಜೀರ್ಣ ಶಕ್ತಿಯನ್ನು ಪ್ರಚೋದಿಸುವಂತಹ ಸಂಕೇತಗಳು ತಲುಪುತ್ತವೆಯಂತೆ). ಇದರ ಜೊತೆಗೆ ನೀವು ತಟ್ಟೆಯಲ್ಲಿ ಕುಳಿತು ಊಟ ಮಾಡುವಾಗ ಆಹಾರವನ್ನು ಸೇವಿಸಲು ಸ್ವಲ್ಪ ಮುಂದೆ ಬಾಗುತ್ತೀರಿ ಮತ್ತು ಅದನ್ನು ಅಗಿಯಲು ಹಿಂದಕ್ಕೆ ಬಾಗುತ್ತೀರಿ. ಹೀಗೆ ನಿಯಮಿತವಾಗಿ ಹಿಂದೆ- ಮುಂದೆ ಬಾಗುವುದರಿಂದ ನಿಮ್ಮ ಕಿಬ್ಬೊಟ್ಟೆಯ ಭಾಗದ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ. ಇದರಿಂದ ಹೊಟ್ಟೆಯಲ್ಲಿ ಆಮ್ಲಗಳು ಹೆಚ್ಚಾಗಿ ಸ್ರವಿಸಿ ಜೀರ್ಣಕ್ರಿಯೆ ಸರಾಗವಾಗಿ ಸಾಗುತ್ತದೆ.*
*ತೂಕವನ್ನು ಇಳಿಸಿಕೊಳ್ಳಲು ಸಹಕಾರಿ:*
*ನೀವು ಸುಖಾಸನದಲ್ಲಿ ಕುಳಿತಾಗ ಮೆದುಳು ತನ್ನಷ್ಟಕ್ಕೆ ತಾನೆ ಶಾಂತಗೊಳ್ಳುತ್ತದೆ ಮತ್ತು ಆಹಾರವನ್ನು ಸೇವಿಸಲು ಅಗತ್ಯವಾಗಿರುವ ಮನಸ್ಥಿತಿಗೆ ಬಂದು ಅದರ ಮೇಲೆಯೇ ಗಮನ ಕೇಂದ್ರೀಕರಿಸುತ್ತದೆ. ಇದಕ್ಕಿಂತ ಹೆಚ್ಚಾಗಿ ಈ ಆಸನವು ಒಮ್ಮನಿಸಿನಿಂದ ಆಹಾರವನ್ನು ಸೇವಿಸುವಂತೆ ಮಾಡಿ, ನಿಮಗೆ ಬೇಗ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಇನ್ನೂ ಕುತೂಹಲದಾಯಕ ವಿಚಾರವೆಂದರೆ ಈ ಆಸನದಲ್ಲಿ ನೀವು ಕುಳಿತು ಊಟ ಮಾಡುವಾಗ, ಟೇಬಲ್ ಮೇಲೆ ಕುಳಿತು ಊಟ ಮಾಡುವುದಕ್ಕಿಂತ ಕಡಿಮೆ ಆಹಾರವನ್ನು ಸೇವಿಸುತ್ತೀರಿ. ಹೀಗೆ ನೀವು ಕಡಿಮೆ ಆಹಾರವನ್ನು ಸೇವಿಸಲು ಮತ್ತು ಆಹಾರ ಸೇವನೆಯ ಕುರಿತಾಗಿ ಆಸಕ್ತಿ ತಾಳುವುದು ಕಡಿಮೆಯಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ನೆಲದ ಮೇಲೆ ಕುಳಿತು ಊಟ ಮಾಡುವುದು ನಿಮ್ಮ ದೇಹಕ್ಕೆ ಅತ್ಯಗತ್ಯವಾಗಿ ಒಳ್ಳೆಯದು.*
*ನಿಮ್ಮ ದೇಹಕ್ಕೆ ಮತ್ತಷ್ಟು ನಮ್ಯತೆಯನ್ನು ಒದಗಿಸುತ್ತದೆ:*
*ನೀವು ಚಕ್ಕಳ ಮಕ್ಕಳ ಅಥವಾ ಪದ್ಮಾಸನದಲ್ಲಿ ಕುಳಿತಾಗ ಕಿಬ್ಬೊಟ್ಟೆಯ ಮೇಲಿನ ಮತ್ತು ಕೆಳ ಭಾಗದಲ್ಲಿ, ಸೊಂಟ, ಹೊಟ್ಟೆಯ ಸುತ್ತ ಇರುವ ಪೆಲ್ವಿಸ್ ಭಾಗದಲ್ಲಿರುವ ಎಲ್ಲಾ ಸ್ನಾಯುಗಳು ಹಿಗ್ಗುತ್ತವೆ ಮತ್ತು ಇದರಿಂದ ನಿಮಗೆ ಮುಂದೆ ಬರುವ ನೋವು ಸಹ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಜೀರ್ಣಾಂಗ ವ್ಯೂಹವು ವಿಶ್ರಾಂತಿಯನ್ನು ಪಡೆದು ತನ್ನ ಸುಸ್ಥಿತಿಯನ್ನು ಕಾಪಾಡಿಕೊಳ್ಳುತ್ತದೆ. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಈ ಆಸನವು ನಿಮ್ಮ ಹೊಟ್ಟೆಯನ್ನು ಯಾವುದೇ ಕಾರಣಕ್ಕು ಕುಗ್ಗಿಸುವುದಿಲ್ಲ. ಮೇಲಾಗಿ ಇದು ನೀವು ತಿಂದ ಆಹಾರವನ್ನು ಜೀರ್ಣ ಮಾಡಲು ಸಹಕರಿಸುತ್ತದೆ.*
*ಊಟ ಮಾಡುವಾಗ ಸ್ಥಿರ ಪ್ರಙ್ಞೆಯನ್ನು ಒದಗಿಸುತ್ತದೆ:*
*ನೀವು ನೆಲದ ಮೇಲೆ ಕುಳಿತು ಊಟ ಮಾಡುವಾಗ ನಿಮ್ಮ ಮನಸ್ಸು ತನ್ನ ಪ್ರಶಾಂತತೆಯನ್ನು ಕಾಪಾಡಿಕೊಂಡಿರುತ್ತದೆ. ಇದರಿಂದ ನಿಮಗೆ ಆಹಾರದಲ್ಲಿ ಏನನ್ನು ತಿನ್ನಬೇಕು ಎಂಬ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಆಗ ನೀವು ಸಹಜವಾಗಿ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸಲು ಆಧ್ಯತೆ ನೀಡುತ್ತೀರಿ. ಅಲ್ಲದೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಕುರಿತಾಗಿ ಸಹ ನೀವು ಆಲೋಚಿಸಿ ಆಹಾರವನ್ನು ಸೇವಿಸುತ್ತೀರಿ. ಹೀಗೆ ನೆಲದ ಮೇಲೆ ಕುಳಿತು ಊಟ ಮಾಡುವಾಗ ನೀವು ಸ್ಥಿತ ಪ್ರಙ್ಞೆಯನ್ನು ಕಾಯ್ದುಕೊಳ್ಳುತ್ತೀರಿ*.
*ನಿಮ್ಮ ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯಲು ನೆರವಾಗುತ್ತದೆ:*
*ನೀವು ನೆಲದ ಮೇಲೆ ಕುಳಿತು ಊಟ ಮಾಡುವಾಗ ಮತ್ತೊಂದು ಉಪಯೋಗ ನಿಮಗೆ ದೊರೆಯುತ್ತದೆ. ಅದೇನೆಂದರೆ ನಿಮ್ಮ ಕುಟುಂಬದ ಜೊತೆಗೆ ಕುಳಿತು ಊಟ ಮಾಡುವ ಸುಯೋಗ. ಹೌದು ಎಂತಹ ಬೆಲೆ ಬಾಳುವ ಊಟದ ಮೇಜನ್ನು ನಿಮ್ಮ ಮನೆಯಲ್ಲಿ ಹೊಂದಿದ್ದರು, ಅದರಲ್ಲಿ ಹತ್ತು ಜನ ಕುಳಿತು ಊಟ ಮಾಡಲು ಸ್ವಲ್ಪ ಇರಿಸು ಮುರಿಸು ಉಂಟಾಗುತ್ತದೆ. ಆದರೆ ನೆಲದ ಮೇಲೆ ಕುಳಿತು ಊಟ ಮಾಡುವಾಗ ಈ ಸಮಸ್ಯೆಯು ನಿಮ್ಮನ್ನು ಕಾಡುವುದಿಲ್ಲ. ಜೊತೆಗೆ ನಿಮ್ಮ ಕುಟುಂಬ ಸದಸ್ಯರ ಸಮಸ್ಯೆಗಳನ್ನು ಮತ್ತು ಯೋಗ ಕ್ಷೇಮಗಳನ್ನು ವಿಚಾರಿಸಿಕೊಳ್ಳುವ ವೇದಿಕೆಯಾಗಿ ನಿಮ್ಮ ಊಟದ ಸಮಯ ಸದ್ವಿನಿಯೋಗವಾಗುತ್ತದೆ. ಹೀಗೆ ನಿಮ್ಮ ಕುಟುಂಬ ಸದಸ್ಯರ ಜೊತೆಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಸಹ ಈ ಪದ್ಧತಿ ನಿಮ್ಮ ನೆರವಿಗೆ ಬರುತ್ತದೆ.*
*ನಿಮ್ಮ ನಿಲುವನ್ನು ಸುಧಾರಿಸುತ್ತದೆ:*
*ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಿಮ್ಮ ನಿಲುವು ಸಹ ಸುಧಾರಿಸುತ್ತದೆ. ನೆಲದ ಮೇಲೆ ಕುಳಿತು ಊಟ ಮಾಡುವಾಗ ನಿಮ್ಮ ಬೆನ್ನು ಮೂಳೆಯು ನೇರವಾಗಿರುತ್ತದೆ, ಜೊತೆಗೆ ಬೆನ್ನು ಮೂಳೆಯು ಉದ್ದವಾಗಲು ಸಹ ಸಹಾಯವಾಗುತ್ತದೆ ಮತ್ತು ನಿಮ್ಮ ಭುಜಗಳನ್ನು ಹಿಂದಕ್ಕೆ ಸರಿಸಲು ಸಹ ಇದು ನೆರವಾಗುತ್ತದೆ. ಇದೆಲ್ಲದಕ್ಕಿಂತ ಮೇಲಾಗಿ ನಿಮ್ಮ ಕುಳಿತುಕೊಳ್ಳುವ ಭಂಗಿಯಿಂದ ಸಂಭವಿಸಬಹುದಾದ ಸಣ್ಣ ಪುಟ್ಟ ನೋವುಗಳು ಸಹ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಿವಾರಣೆಯಾಗುತ್ತವೆ.*
*ನಿಮ್ಮನ್ನು ದೀರ್ಘಾಯುಷ್ಯಿಯನ್ನಾಗಿಸುತ್ತದೆ*
*ಯೂರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯವರು ಪ್ರಕಟಿಸಿರುವ ಒಂದು ಅಧ್ಯಯನದ ಪ್ರಕಾರ ನೆಲದ ಮೇಲೆ ಕುಳಿತು ಊಟ ಮಾಡುವವರು ಅಂದರೆ, ಪದ್ಮಾಸನದಲ್ಲಿ ಕುಳಿತು ಊಟ ಮಾಡುವವರು, ಯಾವುದೇ ಸಹಾಯವಿಲ್ಲದೆ ಏಳಲು ಶಕ್ತರಾಗಿದ್ದಲ್ಲಿ ಅವರು ನಿಸ್ಸಂಶಯವಾಗಿ ದೀರ್ಘಾಯುಷ್ಯಿಗಳಾಗಿ ಬಾಳುತ್ತಾರಂತೆ. ಇದಕ್ಕೆ ಕಾರಣ ಅವರ ದೇಹದ ನಮ್ಯತೆಯ ಗುಣ. ಈ ಅಧ್ಯಯನದ ಪ್ರಕಾರ ಯಾವುದೇ ಸಹಾಯವಿಲ್ಲದೆ ಕುಳಿತ ಭಂಗಿಯಿಂದ ಏಳುವವರು ಮುಂದಿನ ಆರು ವರ್ಷದಲ್ಲಿ ಸಾಯುವ ಸಾಧ್ಯತೆ 6.5 ಪಟ್ಟು ಕಡಿಮೆಯಿರುತ್ತದೆಯಂತೆ.*
*ನಿಮ್ಮ ಮೊಣಕಾಲುಗಳು ಮತ್ತು ಮೊಣಕೈಗಳ ಸಂಧಿಗಳಲ್ಲಿ ದ್ರವಗಳನ್ನು ಸ್ಫುರಿಸಿ ಅವುಗಳ ಆರೋಗ್ಯವನ್ನು ಸುಧಾರಿಸುತ್ತದೆ.*
*ಪದ್ಮಾಸನ ಅಥವಾ ಸುಖಾಸನವು ನಮ್ಮ ಇಡೀ ದೇಹಕ್ಕೆ ಆರೋಗ್ಯವನ್ನು ನೀಡುವಂತಹ ಆಸನಗಳಾಗಿರುತ್ತವೆ. ಇವುಗಳಿಂದ ಕೇವಲ ನಿಮ್ಮ ಜೀರ್ಣ ಶಕ್ತಿಯು ಸುಧಾರಿಸುವುದರ ಜೊತೆಗೆ ನಿಮ್ಮ ದೇಹದ ಸ್ನಾಯುಗಳು ಮತ್ತು ಸಂಧಿಗಳನ್ನು ಆರೋಗ್ಯವನ್ನು ಸುಧಾರಿಸಿ, ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದ ಸಂಧಿವಾತ ಮತ್ತು ಒಸ್ಟಿಯೊಪೊರೊಸಿಸ್‍ನಂತಹ ಕಾಯಿಲೆಗಳು ಬರದಂತೆ ತಡೆಯಲು ಅನುಕೂಲವಾಗುತ್ತದೆ. ಇದು ಹೇಗೆ ಸಾಧ್ಯ ಎಂದು ನಿಮಗನಿಸಬಹುದು? ನಿಯಮಿತವಾಗಿ ನಾವು ಕುಳಿತು ಏಳುವುದರಿಂದ ನಮ್ಮ ಕಾಲುಗಳಿಗೆ,ಸ್ನಾಯುಗಳಿಗೆ, ಮೊಣಕೈ ಮತ್ತು ಮೊಣಕಾಲುಗಳಿಗೆ ಅಗತ್ಯವಾದ ವ್ಯಾಯಾಮ ದೊರೆತು ಅವುಗಳಲ್ಲಿ ನಮ್ಯತೆ ಮೂಡುತ್ತದೆ. ಈ ನಮ್ಯತೆಯಿಂದ ಸಂಧಿಗಳಲ್ಲಿ ದ್ರವದ ಸರಾಗ ಚಲನೆ ಕಂಡು ಬರುತ್ತದೆ. ಹೀಗೆ ಇದು ಕಾಯಿಲೆಗಳಿಗೆ ಸಿಲುಕಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆಯಾಗುತ್ತದೆ. ಆಗಾಗಿ ನೆಲದ ಮೇಲೆ ಕುಳಿತು ಊಟ ಮಾಡಲು ಶುರು ಮಾಡಿ.*
*ಮನಸ್ಸನ್ನು ಪ್ರಶಾಂತಗೊಳಿಸುತ್ತದೆ ಮತ್ತು ಉದ್ವೇಗವನ್ನು ತಡೆಯುತ್ತದೆ:*
*ಆಯುರ್ವೇದದ ಪ್ರಕಾರ ಪ್ರಶಾಂತವಾದ ಮನಸ್ಥಿತಿಯಲ್ಲಿ ಊಟವನ್ನು ಸೇವಿಸುವುದರಿಂದ ಜೀರ್ಣಶಕ್ತಿಯು ಹೆಚ್ಚುತ್ತದೆಯಂತೆ. ಜೊತೆಗೆ ಇದು ಊಟದ ಸವಿಯನ್ನು ಸಹ ಹೆಚ್ಚಿಸುವ ಗುಣವನ್ನು ಹೊಂದಿದೆಯಂತೆ. ಮತ್ತೇಕೆ ತಡ ಸುಲಭವಾಗಿ ಖರ್ಚಿಲ್ಲದೆ ದೊರೆಯುವ ಈ ಕೆಲಸವನ್ನು ಮೊದಲು ಮಾಡಿ.*
*ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಹೃದಯವನ್ನು ಸದೃಢಗೊಳಿಸುತ್ತದೆ:*
*ನೀವು ನೆಲದ ಮೇಲೆ ಕುಳಿತು ಊಟ ಮಾಡುವಾಗ ನಿಮ್ಮ ಹೃದಯದಿಂದ ರಕ್ತವು ಪಂಪ್ ಆಗಿ ಇಡೀ ದೇಹಕ್ಕೆ ಪ್ರಸಾರಗೊಳ್ಳಲು ನೆರವಾಗುತ್ತದೆ. ಜೊತೆಗೆ ಜೀರ್ಣಾಂಗ ವ್ಯೂಹವು ಸಹ ತನ್ನ ಕಾರ್ಯವನ್ನು ಸರಾಗವಾಗಿ ಮಾಡಲು ಇದರಿಂದ ಅನುಕೂಲವಾಗುತ್ತದೆ. ಆದರೆ ಡೈನಿಂಗ್ ಟೇಬಲ್ ಮುಂದೆ ಕುಳಿತು ಊಟವನ್ನು ಸೇವಿಸುವಾಗ ನಿಮಗೆ ಈ ಪ್ರಯೋಜನ ದೊರೆಯುವುದಿಲ್ಲ. ಕಾರಣ ಅಲ್ಲಿ ಕಾಲುಗಳು ನಿಮ್ಮ ಹೃದಯದಿಂದ ಕೆಳಭಾಗದಲ್ಲಿ ಇಳಿಜಾರಾಗಿ ನಿಂತಿರುತ್ತವೆ. ಆಗ ಹೃದಯದಲ್ಲಿ ಪರಿಚಲನೆಗೊಳ್ಳುವ ರಕ್ತದ ವೇಗಕ್ಕಿಂತ ಕಡಿಮೆ ವೇಗದಲ್ಲಿ ರಕ್ತವು ಕಾಲುಗಳಿಗೆ ಪ್ರಸಾರವಾಗುತ್ತಿರುತ್ತದೆ. ಅದಕ್ಕಾಗಿ ನಮ್ಮ ದೈನಂದಿನ ಜಂಜಡಯುತವಾದ ಜೀವನದ ಒತ್ತಡವನ್ನು ಎದುರಿಸಲು ನಮ್ಮ ಹೃದಯ ಮತ್ತು ಸ್ನಾಯುಗಳು ಆರೋಗ್ಯಕರವಾಗಿರಬೇಕಾದುದು ಅತ್ಯಗತ್ಯ. ಅದಕ್ಕಾಗಿ ನೆಲದ ಮೇಲೆ ಕುಳಿತು ಊಟ ಮಾಡುವುದನ್ನು ರೂಢಿಸಿಕೊಳ್ಳಿ.*

Healthy Meal Scheme

Sri Ramanuja’s Healthy Meal Scheme

We hear a lot about Healthy Meal Scheme for under-privileged children in schools; they are also called as Mid-day Meals for school children. But a few centuries ago, the Vaishnavite Saint, Sri Ramanuja devised a marvelous scheme for under nourished children! The story goes like this:

In the famous Sri Ranganatha Swamy temple in Srirangam, Tamil Nadu,  a long line of devotees would patiently wait  for the delicious Prasadam, even a few centuries ago. A poor Vaishnavite used to be the first one in the line and was notorious for demanding prasadam not only for himself, but for his entire family consisting of sixteen children! Everyday he would fight with the temple authorities for a huge amount of Prasadam, even as the devotees standing behind him had to make do with a tiny quantity. Exasperated, the authorities resorted to pushing him out of the temple. He would wail, “ My sixteen children would starve if they do not get this Prasadam, please have pity on me!”. One day, he decided to bring all his malnourished children to stand in the line. As usual, the fight with the temple authorities started on that day also. Sri Ramanuja, who happened to be at the temple at that time, asked the authorities what the commotion was all about. They told him about the demands of the Vaishnavite and said that they would not mind giving him extra Prasadam if only he was willing to do some service to the temple.
Turning to the Vaishnavite, Sri Ramanuja asked him what was preventing him from rendering some service to the temple. He replied,  “ Swamy! Look at my children ! They are under nourished and sick most of the times. All my time is spent in taking care of them. Moreover, unfortunately, I have not studied the Vedas or the Divya Prabandhams ( hymns by the Azhwars) and so cannot join in the temple Parayanam. What all I know is a part of Vishnu- sahasranamam only! What can I do ? “

Sri Ramanuja then asked him to recite the Vishnu Sahasranamam to the extent that he knew it. The Vaishnavite hesitated and then began the recitation. “ Vishvam Vishnu Vashatkaro Bhuta Bhavya   Bhavat -prabhuh ; Bhutakrit Bhutabhrut..”  That was all he knew in Vishnu-sahasranamam! Only upto the sixth name! The poor Vaishnavite was overcome by self pity and exclaimed, “ That is the only part I know, Swamy!”     Sri Ramanuja looked at him reflectively and said, “ You recited the sixth name, Bhutabrut. Now onwards you must go on doing the Japam of the sixth name, in this manner: Bhutabhrute namah. If you do this, you don’t have to seek  food; food will come to you, to your place! Will you do it?” The Vaishnavite eagerly nodded.

From that day onwards, he was not to be seen in the temple. All the commotion during the prasadam distribution time stopped altogether. A few days later, when Sri Ramanuja went to the temple, the temple authorities came to him. They had a different story to tell now. They said, “ Swamy! A strange thing is being observed nowadays in the temple. Though a substantial quantity of Prasadam is offered to Sri Ranganatha as usual, when we take up the distribution it is found that a considerable amount is missing! This has started happening after you told the fighting Vaishnavite to stop coming to the temple. Our security is tight but still this is happening. We feel that the Vaishnavite maybe responsible. Somehow he is managing to steal the Prasadam!” Sri Ramanuja was stunned to hear this. He asked them whether they knew where he stayed. They said, “ That is again strange! He has moved out of his house.” Sri Ramanuja asked them to search for the Vaishnavite and bring him, as he would like to see him. All their efforts were in vain to locate that person.

A few weeks later, Sri Ramanuja had to cross the Kollidam river that surrounds Srirangam, for an event in a nearby village. Suddenly he saw a person running after him, calling out, “ Swamy! Swamy!”. It was none other than the Vaishnavite who stopped coming to the Srirangam temple for Prasadam. He fell at the feet of Sri Ramanuja, weeping profusely. When he managed to talk, he said, “ Swamy! By your Grace, that boy is delivering the prasadam, both times everyday! All my children are no more sick or under -nourished. I have moved out of the place near the  temple so as not to get into problem with the temple authorities. I am eternally grateful to you. I am also doing the japam, ‘Bhutabhrute namah’, constantly.”   Sri Ramanuja was overwhelmed. “ Which boy? What did he say his name was?” asked Sri Ramanuja. The Vaishnavite replied that the boy introduced himself as The Servant of Sri Ramanuja!

Sri Ramanuja realised now what was going on. Sri Ranganatha Himself was delivering the food to the Vaishnavite, everyday, both in the morning and in the night! The Divine Name ‘ Bhutabhrut’ means One Who Nourishes the entire Universe!

ದರ್ಬಾ

ಧಾರ್ಬಾ (ಪವಿತ್ರ ಹುಲ್ಲು) ನಮ್ಮ ಮಂಗಳಕರ ಮತ್ತು ದುಃಖಕರ ಸಂದರ್ಭಗಳಲ್ಲಿ ಯಾಕೆ ರಿಂಗ್ ಆಗಿ ಬಳಸಲಾಗುತ್ತದೆ?
ಸಂಶೋಧನಾ ಸಹಕಾರ ಮತ್ತು ನಮ್ಮ ಹಿಂದೂ ಆಚರಣೆಗಳ ಪರಿಚಿತ ವ್ಯಕ್ತಿಯ ಸಂಶೋಧನೆಗಳು ...
"ದರ್ಬಾ, ಧರ್ಬಾಮ್ ಅಥವಾ ಧರ್ಬಾಯ್ ಎಂಬ ಪವಿತ್ರ ಹುಲ್ಲು ಬಳಸಿ ಭಾರತೀಯ ಬ್ರಾಹ್ಮಣರು ವ್ಯಾಪಕವಾಗಿ ಬಳಸಿದ ಪದ್ಧತಿಗಳಲ್ಲಿ ಈ ಲೇಖನವಿದೆ.
ಸಸ್ಯಶಾಸ್ತ್ರೀಯ ಹೆಸರು "ಎರಾಗ್ರೊಸ್ಟಿಸ್ ಸಿನೊಸುರೈಡ್" ಮತ್ತು ಹಿಂದಿ ಭಾಷೆಯಲ್ಲಿ ಇದನ್ನು ಕುಸ್ ಅಥವಾ ಕುಶ ಎಂದು ಕರೆಯುತ್ತಾರೆ. ಬ್ರಾಹ್ಮಣರು ಈ ಧಾರ್ಬಾಯ್ ಹುಲ್ಲುಗಳನ್ನು ಎಲ್ಲಾ ಕಾರ್ಯಗಳಲ್ಲಿ, ಮಂಗಳಕರ ಅಥವಾ ದುಃಖಕರವಾಗಿ ಬಳಸುತ್ತಾರೆ.
ಪ್ರದರ್ಶನದ ವ್ಯಕ್ತಿಯು ಈ ಧರ್ಬಾಮ್ನಿಂದ ಮಾಡಿದ ರಿಂಗ್ ಅನ್ನು ಧರಿಸಬೇಕಾಗುತ್ತದೆ. ಆದರೆ ಮೊದಲನೆಯದಾಗಿ ಏಕೆ ಬಳಸಬೇಕೆಂಬುದಕ್ಕೆ ಅನೇಕ ಕಾರಣಗಳು ಕಳೆದುಹೋಗಿವೆ.
ನನ್ನ ತಂದೆಯಿಂದ ನಾನು ಕಲಿತದ್ದು ಮೆಡಿಸಿನ್ ಪ್ರಾಕ್ಟೀಷನರ್ನಿಂದ ನಿಖರವಾಗಿ ಸರಿಪಡಿಸಲ್ಪಟ್ಟಿದೆ. ಒಂದು ವೈದ್ಯಕೀಯ ವೈದ್ಯರು ಒಮ್ಮೆ ನನ್ನ ಮನೆಗೆ ಭೇಟಿ ನೀಡಿದರು. ವಿಷಯವು ಅನೇಕ ವಿಷಯಗಳಿಗೆ ತಿರುಗಿದಾಗ, ನಾನು ಧರ್ಬಾಮ್ ಎಂಬ ಪವಿತ್ರ ಹುಲ್ಲು ಬಗ್ಗೆ ಅವನಿಗೆ ಹೇಳಬೇಕಾಗಿತ್ತು. ನಾನು ಬಳಕೆಯ ಮತ್ತು ಮೌಲ್ಯಗಳ ಬಗ್ಗೆ ಹೇಳಿದಾಗ, ಅವರು ಕೇವಲ ನನ್ನ ಪದಗಳನ್ನು ನಂಬಲು ಸಾಧ್ಯವಾಗಲಿಲ್ಲ. ಆದ್ದರಿಂದ, ಅವರು ನನ್ನಿಂದ ಧರ್ಬಾಮ್ನ ಒಂದು ಗುಂಪನ್ನು ತೆಗೆದುಕೊಂಡರು, ಧರ್ಮಾಮ್ನೊಂದಿಗೆ ಕೈಯನ್ನು ಮುಚ್ಚುವ ಮೂಲಕ ತನ್ನ ಪಾಮ್ನ ಎಕ್ಸ್-ಕಿರಣವನ್ನು ತೆಗೆದುಕೊಳ್ಳಲು ನೇರವಾಗಿ ಕ್ಲಿನಿಕ್ಗೆ ಹೋದರು. ಅವನ ಸಂಪೂರ್ಣ ಆಶ್ಚರ್ಯಕ್ಕೆ, ಹುಲ್ಲು 60% ನಷ್ಟು (ಎಕ್ಸ್-ಕಿರಣ) ವಿಕಿರಣವನ್ನು ಹೀರಿಕೊಂಡಿದೆ ಎಂದು ಅವನು ಕಂಡುಕೊಂಡನು!
ಆದ್ದರಿಂದ ಪ್ರಬಲ ಎಕ್ಸರೆ ವಿಕಿರಣವನ್ನು ಹೋಲಿ ಗ್ರಾಸ್ ಹೀರಿಕೊಳ್ಳುವಾಗ, ಅದು ವಾತಾವರಣದ ಮೇಲೆ ಹರಡುವ ಕೆಟ್ಟ ವಿಕಿರಣಗಳನ್ನು ಹೀರಿಕೊಳ್ಳುವಂತಿಲ್ಲವೇ?
ಗ್ರಹಣಗಳ ವಿಕಿರಣದಿಂದ ರಕ್ಷಿಸಲು ಸೂರ್ಯನ ಗ್ರಹಣ ಅಥವಾ ಚಂದ್ರ ಗ್ರಹಣ ಸಮಯದಲ್ಲಿ ನಮ್ಮ ಹಿರಿಯರು ಮನೆಯ ಎಲ್ಲಾ ಆಹಾರ ಧಾರಕಗಳಲ್ಲಿ ಈ ಪವಿತ್ರ ಹುಲ್ಲು ಇರಿಸಿಕೊಳ್ಳಲು ಬಳಸುತ್ತಿದ್ದರು.
ಕೆಲವು ವೈದಿಕ ನುಡಿಗಟ್ಟುಗಳು ಮತ್ತು ಶ್ಲೋಕಗಳನ್ನು ಪಠಿಸುತ್ತಾ ಮತ್ತು ಪಠಿಸುವಾಗ, ಅವನ ಬಲಗೈ ರಿಂಗ್ ಬೆರಳಿನಲ್ಲಿ ಧರ್ಬಾಮ್ನಿಂದ ಮಾಡಲ್ಪಟ್ಟ ಒಂದು ರಿಂಗ್ ಅನ್ನು ಧರಿಸಬೇಕಾಗುತ್ತದೆ. ಅಗ್ನಿ ಸಂತಾನಂ, ತಿರು-ಆರಧಾನಮ್, ಎಲ್ಲಾ ರೀತಿಯ ಆಚರಣೆಗಳನ್ನು ನಿರ್ವಹಿಸುವಾಗ ಇದು ಅತ್ಯಗತ್ಯವಾಗಿದೆ
ಹೋಮ್ ಇತ್ಯಾದಿ ಎಂದು ಕರೆಯಲ್ಪಡುವ ಹವಾನ್ಸ್
ಎಲೆಗಳ ಎಣಿಕೆಯು ವಿಝ್ ನಡೆಯುವ ಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ. ಮರಣಕ್ಕೆ ಸಂಬಂಧಿಸಿದ ಕೆಲವು ಕಾರ್ಯಗಳಿಗಾಗಿ ಏಕೈಕ ಎಲೆ ಧರ್ಭಾಮ್ ಅನ್ನು ಬಳಸಲಾಗುತ್ತದೆ; ಮಂಗಳಕರ ಮತ್ತು ದಿನನಿತ್ಯದ ಎರಡು ಎಲೆಗಳಿಂದ ಮಾಡಲ್ಪಟ್ಟ ಒಂದು ಉಂಗುರವನ್ನು ಬಳಸಲಾಗುತ್ತದೆ; ಅಮಾಯಸ್ಯ ತಾರ್ಪಣಂ, ಪಿಥ್ರೂ ಪೂಜ ಇತ್ಯಾದಿ) ಮೂರು-ಲೀಫ್ ಧರ್ಭಾಮ್ ಉಂಗುರವನ್ನು ಬಳಸಲಾಗುತ್ತದೆ. ಮತ್ತು ದೇವಾಲಯದ ಪ್ರೇಯರ್ ಮತ್ತು ಪೂಜಾಕ್ಕಾಗಿ, ನಾಲ್ಕು-ಲೀಫ್ ಧರ್ಭಾಮ್ ಉಂಗುರವನ್ನು ಬಳಸಲಾಗುತ್ತದೆ.
ಅಲ್ಲದೆ, ಅಗ್ನಿ ಸಂತಾನ ಎಂದು ಕರೆಯಲಾಗುವ ಬೆಂಕಿಯ ಆಚರಣೆಯನ್ನು ನಡೆಸಿದಾಗ, ಈ ಧರ್ಬಾಮವು ಅಗ್ನಿ ಕುಂಡಮ್ನ ನಾಲ್ಕು ಭಾಗಗಳನ್ನು ಹರಡಿದೆ. ಅಲ್ಲದೆ, ಎಕ್ಲಿಪ್ಸ್ ಸಮಯದಲ್ಲಿ, ಈ ಧಾರಾಭೆಯನ್ನು ಹಾನಿಕಾರಕ ಅಲ್ಟ್ರಾ ನೇರಳೆ ವಿಕಿರಣದಿಂದ ರಕ್ಷಿಸಲು ಎಲ್ಲಾ ಆಹಾರ ಪದಾರ್ಥಗಳನ್ನು ಬಳಸಿಕೊಳ್ಳಲಾಗುತ್ತದೆ.
ಯಾವುದೇ ಕಾರ್ಯವು ನಡೆಯುವಾಗ, ಮೊದಲಿಗೆ ಅವರು "ಶುಧಿ ಪುನ್ಯಯವಚನಮ್" ಎಂದು ಕರೆಯಲ್ಪಡುವ ಒಂದು ಸೈಟ್-ಶುದ್ಧೀಕರಣ ಕಾರ್ಯವನ್ನು ನಿರ್ವಹಿಸುತ್ತವೆ. ಆಯ್ದ ವರ್ಸಸ್ ವಾಚನ ಮಾಡುವಾಗ, ಅವರು ತಮ್ಮ ಕೈಯಲ್ಲಿ ಧರ್ಭಾಮ್ ಗುಂಪನ್ನು ಹಿಡಿದುಕೊಳ್ಳುತ್ತಾರೆ ಮತ್ತು
ನೀರನ್ನು ಒಳಗೊಂಡಿರುವ ಹಡಗಿನ ಮೇಲೆ ಅದರ ತುದಿಯ ಬಿಂದುವನ್ನು ಇರಿಸಿ. ಹೀಗಾಗಿ ಓದಿದ ಕಂಪನ ಮೌಲ್ಯಗಳನ್ನು ದರ್ಬಾಮ್ ಮೂಲಕ ಹಡಗಿನಲ್ಲಿ ನೀರು ಹೀರಿಕೊಳ್ಳುತ್ತದೆ.
ಅವರು ಧಾರ್ಭಾಮ್ ಎಂದು ಕರೆಯಲ್ಪಡುವ ಹೋಲಿ ಹುಲ್ಲು ಫೋನಿಟಿಕ್ ಕಂಪನಗಳನ್ನು ಅದರ ತುದಿಯ ಮೂಲಕ ನಡೆಸುವುದರಲ್ಲಿ ಅತ್ಯಧಿಕ ಮೌಲ್ಯವನ್ನು ಹೊಂದಿದೆ ಎಂದು ಅವರು ಕಂಡುಕೊಂಡರು. ನಂತರ, ಅವರು ಪ್ರತಿ ಮೂಲೆ ಮತ್ತು ಸ್ಥಳದ ಮೂಲೆಯಲ್ಲಿ ಪವಿತ್ರ ನೀರನ್ನು ಸಿಂಪಡಿಸಿ, ಅಲ್ಲಿ ಕಾರ್ಯ ನಡೆಯುತ್ತದೆ. ಸಲಹೆಯಿಲ್ಲದೇ ಒಂದು ಧರ್ಬಾಮ್ ಯಾವುದೇ ಮೌಲ್ಯವಿಲ್ಲವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ವಾಹಕ-ರೀತಿಯ ಮೌಲ್ಯವು ಅದರಲ್ಲಿ ಕಳೆದುಹೋಗುತ್ತದೆ. "
ಇಂದಿನ ವಿಜ್ಞಾನಿಗಳಿಗಿಂತ ನಮ್ಮ ಋಷಿಗಳು ಹೆಚ್ಚಿನ ಜ್ಞಾನವನ್ನು ಹೊಂದಿದ್ದರು, ಇಂದಿನ ವಿಜ್ಞಾನವು ಪುರಾತನ ಗ್ರೇಟ್ ಋಷಿಯ ಆವಿಷ್ಕಾರಗಳನ್ನು ಅರ್ಥಮಾಡಿಕೊಳ್ಳಲು ಹೆಣಗಾಡುತ್ತಿದೆ ..
"ನಾವು ನಮ್ಮ ಪುರಾತನ ವಿಜ್ಞಾನ ಮತ್ತು ನಮ್ಮ ಮಹಾನ್ ಪರಂಪರೆಗಳನ್ನು ಉಳಿಸೋಣ"

*ಭಗವಾನ್*

*|| ಶ್ರೀಮನ್ಮೂಲರಾಮೋ ವಿಜಯತೇ ||*
*|| ಶ್ರೀಗುರುರಾಜೋ ವಿಜಯತೇ ||*

ಪರಮಾತ್ಮನ ಮಹಾವಿಭೂತಿಯನ್ನು *ಭಗವಾನ್* ಎಂಬ ಶಬ್ದದಿಂದ ಕರೆಯುತ್ತಾರೆ.

ಭಗವಾನ್ ಶಬ್ದದಲ್ಲಿ *ಭ* ಕಾರಕ್ಕೆ ಎಲ್ಲರನ್ನೂ ಪಾಲನ ಪೋಷಣ ಮಾಡುವವ ಎಂದರ್ಥ. *ಗ* ಕಾರಕ್ಕೆ ಸ್ಠಿತಿಕರ್ತಾ,ನಾಶಕರ್ತಾ,ಮೋಕ್ಷವನ್ನು ಕೊಡುವವ ಎಂದರ್ಥವಿದೆ.

*ಐಶ್ವರ್ಯಸ್ಯ ಸಮಗ್ರಸ್ಯ ಧರ್ಮಸ್ಯ ಯಶಸಃ ಶ್ರೀಯಃ*
*ಜ್ಞಾನ ವೈರಾಗ್ಯಯೋಶ್ಚೈವ ಷಣ್ಣಾಂಭಗ ಇತೀರಣಾ |*
ಪೂರ್ಣವಾದ ಐಶ್ವರ್ಯ,ಧರ್ಮ,ಯಶಸ್ಸು,ಶ್ರೀ,ಜ್ಞಾನ,ವೈರಾಗ್ಯ ಈ ಆರರ ಗಣಕ್ಕೆ *ಭಗ* ಎಂದು ಹೆಸರು.
*ವಸತಿ ಅಸ್ಮಿನ್ ಸರ್ವಂ* ಅಥವಾ *ವಸತಿ ಸರ್ವೇಷು* ಅಂದರೆ ಈ ಪರಮಾತ್ಮನು ಸರ್ವರಲ್ಲಿಯೂ ಸರ್ವತ್ರಾಪಿ ವಾಸಿಸಿದ್ದಾನೆ.ಸರ್ವವೂ ಅವನನ್ನು ಆಧರಿಸಿಕೊಂಡಿದೆ.(ಸರ್ವವೂ ಅವನ ಅಧಿನ) ಎಂದೂ  *ವ* ಶಬ್ವವು ತಿಳಿಸುತ್ತದೆ.ಹೀಗೆ ಭಗವತ್ ಶಬ್ದವು ಸರ್ವ ಕರ್ತನೂ ಜ್ಞಾನಾನಂದಾದಿಷಡ್ಗುಣೈಶ್ವರ್ಯ ಸಂಪನ್ನನೂ ಸರ್ವತ್ರ ವ್ಯಾಪ್ತನೂ ಆದ ಆ ಪರಮಾತ್ಮನನ್ನು ಬೋಧಿಸುತ್ತದೆ.
ಪರಬ್ರಹ್ಮ ಬೋಧಕವಾದ ಈ ಭಗವಾನ್ ಶಬ್ದವು ವಾಸುದೇವನ ಹೊರತು ಬೇರಾರನ್ನೂ ಬೋಧಿಸಲಾರದು.ಪೂಜ್ಯವಸ್ತುವನ್ನು ಹೇಳುವ ಪರಿಭಾಷೆಯುಳ್ಳ ಈ  ಶಬ್ದವು ಮುಖ್ಯವಾಗಿ ಭಗವದ್ವಾಚಕ. ಬೇರೆಡೆ ಅವನ ಭಕ್ತಾದಿಗಳಲ್ಲಿ ಅವನ ಭೃತ್ಯರಾದ ದೇವತಾದಿಗಳಲ್ಲಿಯೂ ಪ್ರಯೋಗಿಸಿದರೂ ಅದು ಗೌಣ.ಕೇವಲ ಪೂಜ್ಯರು ದೊಡ್ಡವರು ಎಂದು ಮಾತ್ರ ಅರ್ಥ ಕೊಡುವದು. ಇತರತ್ರ ಇದು ಔಪಚಾರಿಕ ಎಂದು ತಿಳಿಯಬೇಕು.ನಿಜವಾದ *ಭಗವಾನ್*ಎಂದರೆ
*ಉತ್ಪತ್ತಿಂ ಪ್ರಳಯಂ ಚೈವ ಭೂತಾನಾಮಾಗತಿಂ ತಥಾ |*
*ವೇತ್ತಿ ವಿದ್ಯಾಮವಿದ್ಯಾಂ ಚ ಸ ವಾಚ್ಯೋ ಭಗವಾನಿತಿ ||*
ಜಗತ್ತಿನ ಸೃಷ್ಟಿ ಸಂಹಾರ,ಎಲ್ಲ ಪ್ರಾಣಿಗಳ ಜನ್ಮ ಜನ್ಮಾಂತರಗಳ ಆಗ ತಿಸ್ಠಿತಿಗತಿಗಳನ್ನೂ ವಿದ್ಯಾ ಅವಿದ್ಯಾಗಳನ್ನು ತಿಳಿದು ಸರ್ವನಿಯಮನ ಮಾಡುವವನೇ *ಭಗವಾನ್* ಎಂದು ಕರೆಯಲ್ಪಡುತ್ತಾನೆ.ಪೂರ್ಣಜ್ಞಾನ,ಪೂರ್ಣೈಶ್ವರ್ಯ,ಪೂರ್ಣಶಕ್ತಿ ಪೂರ್ಣತೇಜಸ್ಸು,ದೋಷರಾಹಿತ್ಯ ಮುಂತಾದ ಗುಣಗಳು ಭಗವಾನ್ ಶಬ್ದದಿಂದ ಹೇಳಲ್ಪಡುತ್ತವೆ.ಈ ಎಲ್ಲ ಗುಣಗಳೂ ಸರ್ವಭೂತವಾಚಕನಾದ ಆ ವಾಸುದೇವನ ಹೊರತು ಬೇರೊಬ್ಬರಲ್ಲಿ ಬರುವುದು ಸಾಧ್ಯವಿಲ್ಲದ್ದರಿಂದ ಅವನೇ ನಿಜವಾದ *ಭಗವಾನ್* ಆಗಿರುತ್ತಾನೆ.
*ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ |*
*ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ||*
- *_ಈಶಾವಾಸ್ಯೋಪನಿಷದ್_*

ಹಿಂದೆ ಖಾಂಡಿಕ್ಯ ಜನಕನು ಪ್ರಶ್ನೆ ಮಾಡಿದಾಗ ಕೇಶಿಧ್ವಜನು ವಾಸುದೇವ ಶಬ್ದದ ಅರ್ಥವನ್ನು ಈ ರೀತಿಯಾಗಿ ತಿಳಿಸಿದ್ದ :

*ಭೂತೇಷುವ ಸತೇ ಸೋಂತರ್ವಸಂತ್ಯತ್ರ ಚ ತಾನಿ ಯತ್ |*
*ಧಾತಾ ವಿಧಾತಾ ಜಗತಾಂ ವಾಸುದೇವ ಸ್ತತಃ ಪ್ರಭುಃ ||*
ಯಾವನು ಸರ್ವಪ್ರಾಣಿಗಳಲ್ಲಿಯೂ ವಾಸವಾಗಿದ್ದಾನೋ,ಯಾವನಲ್ಲಿ ಎಲ್ಲ ಪ್ರಾಣಿಗಳೂ ಇರುತ್ತವೆಯೋ(ವಾಸವಾಗಿವೆಯೋ),ಯಾವನು ಈ ಜಗತ್ತಿನ ಸೃಷ್ಟಿ ಸ್ಥಿತ್ಯಾದಿ ಕರ್ತನಾಗಿದ್ದಾನೋ,ಯಾವನು ಸರ್ವನಿಯಾಮಕನು ಆಗಿದ್ದಾನೋ ಅವನೇ ವಾಸುದೇವ.ಅವನು ಸರ್ವ ಪ್ರಕೃತಿ ವಿಕಾರ ಪ್ರಾಕೃತಿಕ ಗುಣದೋಷಗಳಿಂದ ಅತ್ಯಂತ ದೂರನಾಗಿದ್ದಾನೆ.
ಯಾವ ಆವರಣ ನಿಯಮ ನಿಬಂಧನೆಗಳಿಗೂ ಅವನು ಒಳಗಾಗುವುದಿಲ್ಲ.ಸಕಲ ಕಲ್ಯಾಣ ಗುಣಪರಿಪೂರ್ಣನಾದ ಅವನು ತನ್ನ ಶಕ್ತಿಯ ಲವಲೇಶದಿಂದಲೇ ಜಗದಂಡ ಮಂಡಲವನ್ನೇಲ್ಲ ಸರ್ವತ್ರ ವ್ಯಾಪಿಸಿಕೊಂಡು ತನ್ನ ಇಚ್ಛೆಯಿಂದಲೇ ಅನೇಕ ರೂಪ ದೇಹಾದಿಗಳನ್ನು ಸ್ವೀಕರಿಸಿ ಪ್ರಪಂಚದಲ್ಲಿ ಕಲ್ಯಾಣವನ್ನುಂಟು ಮಾಡುತ್ತಾನೆ.ಇಂಥ ಸರ್ವಗುಣ ಪರಿಪೂರ್ಣನೂ ಪರಮಾತ್ಮನೂ ವ್ಯಕ್ತಾವ್ಯಕ್ತಸ್ವರೂಪನೂ ಸರ್ವೇಶ್ವರನೂ,ಸರ್ವಜ್ಞಾನಿಯೂ,ಸರ್ವಸಮರ್ಥನೂ ಆದ ಆ ಪರಮೇಶ್ವರನನ್ನೂ ಯಥಾಶಕ್ತಿ ತಿಳಿಸಿಕೊಡುವ ವಿದ್ಯೆಯೇ *ಪರವಿದ್ಯೆ*.ಉಳಿದವೆಲ್ಲವೂ ಅಪರವಿದ್ಯೆ.

*|| ನಾಹಂ ಕರ್ತಾ ಹರಿಃ ಕರ್ತಾ ||*
*|| ಗುರವಂತರ್ಗತ ಶ್ರೀಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು ||*

ಊರ್ಧ್ವಪುಂಡ್ರ

ಊರ್ಧ್ವಪುಂಡ್ರ
ಶ್ರೀ‍ಮಧ್ವಾಚಾರ್ಯರು ತಮ್ಮ “ ಕೃಷ್ಣಾಮೃತ ಮಹಾರ್ಣವ ” ಎಂಬ ಗ್ರಂಥದಲ್ಲಿ ಊರ್ಧ್ವಪುಂಡ್ರದ ಬಗೆಗೆ ವಿವರಣೆ ನೀಡಿದ್ದಾರೆ.
ಆಡುಭಾಷೆಯಲ್ಲಿ ಪುಂಡ್ರ ಎಂದರೆ ದೇಹದ ಮೇಲಿರುವ ಒಂದು ಚಿಹ್ನೆ. ಈ ಚಿಹ್ನೆಯು ಅದನ್ನು ಧರಿಸಿರುವವರ ಸಂಪ್ರದಾಯವನ್ನು ಸೂಚಿಸುತ್ತದೆ. ಈ ಚಿಹ್ನೆ ಅಥವಾ ಪುಂಡ್ರದ ಮತ್ತೊಂದು ಮೂಲ ಉದ್ದೇಶವೆಂದರೆ ಅನೀತಿ ಹಾಗೂ ಅಧಾರ್ಮಿಕತೆಯನ್ನು ತೊಡೆದು ಹಾಕುತ್ತದೆ. ಇಂದು ಊರ್ಧ್ವಪುಂಡ್ರ ಧಾರಣೆಯ ಅಂತರಾರ್ಥ. ಊರ್ಧ್ವಪುಂಡ್ರಧಾರಣೆಯಿಂದ “” ಆಂತರ್ಯ ಪುಂಡತನ ”” ತೊಲಗಿ ಗಾಂಭೀರ್ಯ, ಸದಾಚಾರ, ಸನ್ನಡತೆಗಳು ನೆಲೆಯೂರುತ್ತವೆ. “ಪುಂಡಂ ರಾಹಯತಿ ಇತಿ ಪುಂಡ್ರಂ ” ಎಂಬುದು ವಿಗ್ರಹವಾಕ್ಯ. ನೇರವಾಗಿ ಧರಿಸುವ ಪುಂಡ್ರವನ್ನು ಊರ್ಧ್ವಪುಂಡ್ರವೆಂದೂ, ಅಡ್ಡಲಾಗಿ ಧರಿಸುವುದನ್ನು ತಿರ್ಯಕ್‍ಪುಂಡ್ರವೆಂತಲೂ ಕರೆಯಲಾಗುತ್ತದೆ.
ಗೋಪೀಚಂದನ:
ಮಾಧ್ವ ಸಂಪ್ರದಾಯದಲ್ಲಿ ಊರ್ಧ್ವಪುಂಡ್ರವನ್ನು ಗೋಪೀಚಂದನದಲ್ಲಿ ದೇಹದ ಹನ್ನೆರಡು ಕಡೆಗಳಲ್ಲಿ ಧರಿಸಲಾಗುತ್ತದೆ.
ಅದರ ವಿವರಣೆ ಹೀಗಿದೆ:
1. ಹೊಟ್ಟೆಯ ಮೇಲೆ ಮೂರು ಪುಂಡ್ರಗಳನ್ನು ಧರಿಸುವುದರಿಂದ ತ್ರಿನಾಡಿಗಳಾದ ಇಡಾ, ಪಿಂಗಳಾ, ಸುಶುಮ್ನಾ ನಾಡಿಗಳ ಕುಂಡಲಿನೀ ಶಕ್ತಿಯು ವೃದ್ಧಿ ಹೊಂದುತ್ತದೆ.
2. ಎದೆಯ ಮೇಲೆ ಎರಡು ಸ್ತನಗಳ ಮಧ್ಯದಲ್ಲಿ ಧರಿಸುವ ಕಮಲದಳದ ಆಕಾರದ ಪುಂಡ್ರವು ಹೃದಯಕಮಲವನ್ನು ಹಿಗ್ಗಿಸುತ್ತದೆ.
3. ಕತ್ತಿನ ಸುತ್ತಲೂ ನಾಲ್ಕು ಪುಂಡ್ರಗಳನ್ನು ಧರಿಸುವುದರಿಂದ ಅನಾಹತ ಮತ್ತು ವಿಶುದ್ಧಿ ಚಕ್ರಗಳ ಕುಂಡಲಿನೀ ಶಕ್ತಿಯು ಜಾಗೃತಗೊಂಡು ವಿಕಾಸಗೊಳ್ಳುತ್ತದೆ.
4. ಎರಡು ಭುಜಗಳ ಮೇಲೆ ಧರಿಸುವ ಪುಂಡ್ರದಿಂದ ಕೈಗಳ ಮೂಲಕ ಹರಿಯುವ ಪ್ರಾಣಶಕ್ತಿಯನ್ನು ಉದ್ದೀಪನಗೊಳಿಸಿ ಸಕ್ರಮಗೊಳಿಸುತ್ತದೆ.
5. ಹಣೆಯ ಮೇಲೆ ಧರಿಸುವ ಒಂದು ಪುಂಡ್ರವು ಆಜ್ಞಾಚಕ್ರದಿಂದ ಸಹಸ್ರಾರಚಕ್ರಕ್ಕೆ ಕುಂಡಲಿನೀಶಕ್ತಿಯ ಮೂಲಕ ಉದ್ದೀಪನಗೊಳಿಸುತ್ತದೆ.
6. ಬೆನ್ನಿನ ಕೆಳಭಾಗದಲ್ಲಿ ಧರಿಸುವ ಒಂದು ಪುಂಡ್ರದಿಂದ ಮೂಲಾಧಾರದಲ್ಲಿರುವ ಕುಂಡಲಿನೀಶಕ್ತಿಯನ್ನು ಜಾಗೃತಗೊಳಿಸುತ್ತದೆ.
ಗೋಪೀಚಂದನ ಲಿಪ್ತಾಂಗೋ ಯಂ ಯಂ ಪಶ್ಯತಿ ಚಕ್ಷುಶಾ |
ತಂ ತಂ ಶುದ್ಧಂ ವಿಜಾನೀಯತಿ ನಾತ್ರ ಕಾರ್ಯಾ ವಿಚಾರಣಾ || 221 || (ಕೃ.ಮ.)
ಗೋಪೀಚಂದನವನ್ನು ಧರಿಸಿರುವವನು ತನ್ನ ಕಣ್ಣುಗಳಿಂದ ಅವಲೋಕಿಸುವ ಸಮಸ್ತ ವಸ್ತುಗಳೂ ಶುದ್ಧಗೊಳ್ಳುತ್ತವೆ. ಆತನು ನೋಡಿದ ಕೂಡಲೇ ವಸ್ತುಗಳು ಶುದ್ಧಗೊಳ್ಳುತ್ತವೆಯೆಂಬುದಕ್ಕೆ ಯಾವುದೇ ಅನುಮಾನವು ಸಲ್ಲದು. ಹೀಗಿರುವ ಗೋಪೀಚಂದನವನ್ನು ಧರಿಸಿರುವ ವ್ಯಕ್ತಿಗೆ ಲಭಿಸುವ ಪುಣ್ಯದ ಬಗ್ಗೆ ಹೇಳಬೇಕಾದ್ದೇನಿದೆ?
ಶ್ರೀಮಧ್ವಾಚಾರ್ಯರ “ಕೃಷ್ಣಾಮೃತ ಮಹಾರ್ಣವ ”ದಿಂದ ಆಯ್ದ ಕೆಲವು ಶ್ಲೋಕಗಳು ಇಂತಿವೆ:
ಅಶುಚಿರ್ಯಾ ಅಪಿ ಅನಾಚಾರೋ ಮನಸಾ ಪಾಪಂ ಆಚರೇತ್ |
ಶುಚಿರೇವ ಭವೇತ್ ನಿತ್ಯಂ ಊರ್ಧ್ವಪುಂಡ್ರಾಂಕಿತೋ ನರಃ ||217||
ಅಶುಚಿವಂತನಾದ, ಹೀನಕಾರ್ಯಗಳಲ್ಲಿ ಸದಾನಿರತನಾಗಿರುವ, ಕುತ್ಸಿತ ಮನಸ್ಸಿನವನಾಗಿದ್ದರೂ ಊರ್ಧ್ವಪುಂಡ್ರ ಧರಿಸಿದವನ ಎಲ್ಲ ಪಾಪಗಳೂ ನಿವಾರಣೆಗೊಂಡು ಆತನನ್ನು ಶುಚಿರ್ಭೂತನೆಂದು ಪರಿಗಣಿಸಬೇಕು.
ಊರ್ಧ್ವಪುಂಡ್ರ ವಿಹೀನಸ್ಯ ಸ್ಮಶಾನ ಸದೃಶಂ ಮುಖಂ |
ಅವಲೋಕ್ಯ ಮುಖಂ ತೇಷಾಂ ಆದಿತ್ಯಂ ಅವಲೋಕಯೇತ್ || 218 ||
ಊರ್ಧ್ವಪುಂಡ್ರವಿಲ್ಲದವನ ಮುಖವು ಸ್ಮಶಾನವಿದ್ದಂತೆ. ಅಂತಹವರ ಮುಖವನ್ನು ಅಕಸ್ಮಾತ್ ದರ್ಶಿಸಿದರೆ ಕೂಡಲೆ ಪ್ರಾಯಶ್ಚಿತ್ತಾರ್ಥದಲ್ಲಿ ಸೂರ್ಯನನ್ನು ಅವಲೋಕಿಸಬೇಕು.
ಯಜ್ಞೋ ದಾನಂ ತಪೋ ಹೋಮಃ ಸ್ವಾಧ್ಯಾಯಃ ಪಿತೃತರ್ಪಣಮ್ |
ವ್ಯರ್ಥಮ್ ಭವತಿ ತತ್ಸರ್ವಂ ಊರ್ಧ್ವಪುಂಡ್ರಂ ವಿನಾ ಕೃತಮ್ || 219 ||    
ಯಜ್ಞ, ದಾನ, ತಪಸ್ಸು, ಹೋಮ, ಸ್ವಾಧ್ಯಾಯನ ಅಥವಾ ಪಿತೃತರ್ಪಣ ನೀಡುವ ಯಾವುದೇ ಧಾರ್ಮಿಕ ಕ್ರಿಯೆಗಳು ಊರ್ಧ್ವಪುಂಡ್ರವಿಲ್ಲದಿದ್ದರೆ ವ್ಯರ್ಥ ಅಥವಾ ಅರ್ಥಹೀನವಾಗುತ್ತವೆ.
ಗೋಪೀಚಂದನವೆಂದರೇನು?
ಲಭ್ಯವಿರುವ ಮಾಹಿತಿಯಂತೆ ಇಂದಿನ ಗುಜರಾತ್ ರಾಜ್ಯದಲ್ಲಿರುವ ದ್ವಾರಕಾ ನಗರದಲ್ಲಿರುವ ಗೋಪಿಕುಂಜ್ ಎಂಬ ಕೊಳದಲ್ಲಿ ಕೆಲವು ಗೋಪಿಕಾ ಸ್ತ್ರೀಯರು ಮುಳುಗಿದರು. 'ಕುಂಜ್' ಎಂದರೆ ಕೊಳ ಎಂದರ್ಥ. ಈ ಕೊಳದ ತಳದಲ್ಲಿರುವ ಮಣ್ಣು ಗೋಪೀ ಚಂದನದ ಮೂಲವೆಂದು ಹೇಳಲಾಗುವುದು. ಮಹಾಭಾರತ ಯುದ್ಧದಲ್ಲಿ ಕೌರವರ ವಿನಾಶವಾದನಂತರ, ಪಾಂಡವರ ವಿಜಯಕ್ಕೆ ತಾನೇ ರೂವಾರಿಯೆಂದು ಅರ್ಜುನನು ಬೀಗುತ್ತಿದ್ದನು. ಇದು ಕೃಷ್ಣನ ಗಮನಕ್ಕೆ ಬಂದಿತು.
ಅರ್ಜುನನಿಗೆ ಜ್ಞಾನವುಂಟುಮಾಡಲೆಂದು ಶ್ರೀಕೃಷ್ಣನು ತನ್ನ ಶಿಷ್ಯನಿಗೆ ಗೋಪಿಕಾಸ್ತ್ರೀಯರನ್ನು ವನವಿಹಾರಕ್ಕೆ ಕರೆದುಕೊಂಡು ಹೋಗಲು ಹೇಳಿದನು. ವನವಿಹಾರದ ಸಮಯದಲ್ಲಿ ಅರಣ್ಯವಾಸಿ ನಿಷಾದರು ಗೋಪಿಕಾ ಸ್ತ್ರೀಯರನ್ನು ಅವಹೇಳನ ಮಾಡಿದಾಗ ಅರ್ಜುನನು  ಅವರನ್ನು ಹೊಡೆದೋಡಿಸಲು ಪ್ರಯತ್ನಿಸಿದನು. ಆದರೆ, ನಿಷಾದರೆದುರು ಅರ್ಜುನನ ಶೌರ್ಯ ಕೆಲಸಕ್ಕೆ ಬರಲಿಲ್ಲ. ನಿಷಾದರ ಕಿರುಕುಳದಿಂದ ತಪ್ಪಿಸಿಕೊಳ್ಳಲು ಸಮೀಪದಲ್ಲಿದ್ದ ಕೊಳವೊಂದರಲ್ಲಿ ಗೋಪಿಕಾಸ್ತ್ರೀಯರು ಹಾರಿಕೊಳ್ಳುತ್ತಾರೆ. ಈ ಕೊಳದ ತಳದಲ್ಲಿ ಹಾಗೂ ಸುತ್ತಮುತ್ತಲಿನ ಮಣ್ಣು ಗೋಪಚಂದನವೆಂದು ಪರಿಗಣಿಸಲ್ಪಟ್ಟಿದೆ.
ಗೋಪೀಚಂದನದ ಮಹತ್ವ ಮತ್ತು ಪಾವಿತ್ರ್ಯತೆಯನ್ನು ಗರುಡಪುರಾಣ, ಪದ್ಮಪುರಾಣ, ವಾಸುದೇವ ಉಪನಿಷತ್ ಮತ್ತು ಶ್ರೀಮಧ್ವಾಚಾರ್ಯರ “ಕೃಷ್ಣಾಮೃತ ಮಹಾರ್ಣವ ” ಮುಂತಾದ ಅನೇಕ ಶಾಸ್ತ್ರಗಳಲ್ಲಿ ವಿವರಿಸಲಾಗಿದೆ.
ಗುಜರಾತ್ ರಾಜ್ಯದಲ್ಲಿರುವ ದ್ವಾರಕಾನಗರದಲ್ಲಿ ದೊರೆಯುವ ಒಂದು ವಿಶಿಷ್ಟ ಮಣ್ಣನ್ನು ಗೋಪೀಚಂದನವೆಂದು ಪರಿಗಣಿಸಲಾಗುತ್ತದೆ. ಬ್ರಹ್ಮಾಂಡ ಪುರಾಣವು ಉಲ್ಲೇಖಿಸಿರುವಂತೆ ಗೋಪೀಚಂದನವು ದ್ವಾರಕಾ ಮೂಲದ ಮಣ್ಣಾಗಿರಬೇಕೆಂಬ ಯಾವುದೇ ನಿಯಮವಿಲ್ಲ. ಶುದ್ಧಗೊಳಿಸಿದ ಯಾವುದೇ ಮಣ್ಣು ಅಥವಾ ಪರಮಾತ್ಮನಿಗೆ ಅರ್ಪಿಸಲಾದ ಚಂದನವನ್ನು ಪುಂಡ್ರಕ್ಕೆಂದು ಬಳಸಬಹುದು. ಆದರೆ ಊರ್ಧ್ವಪುಂಡ್ರ ಧಾರಣೆ ಅನಿವಾರ್ಯ ಮತ್ತು ಅತ್ಯಾವಶ್ಯಕ.
ಬ್ರಹ್ಮಾಂಡಪುರಾಣವು ಗೋಪೀಚಂದನದ ಬಗ್ಗೆ ಹೆಚ್ಚಿನ ವಿವರಣೆ ನೀಡುತ್ತದೆ. ದ್ವಾರಕೆಯಲ್ಲಿ ದೊರೆಯುವ ಶ್ರೀ‍ಕೃಷ್ಣ, ಗೋಪಿಕಾಸ್ತ್ರೀಯರ ಪಾದಧೂಳಿಯಲ್ಲದೆ, ಪರ್ವತಶಿಖರಾಗ್ರಭಾಗದಲ್ಲಿ ದೊರೆಯುವ, ನದೀತೀರಗಳಲ್ಲಿ ದೊರೆಯುವ, ಮಾಧ್ವ ಯಾತ್ರಾಸ್ಥಳಗಳಿಂದ ತರಲಾದ, ಸಮುದ್ರತೀರದ, ಹುತ್ತದ ಅಥವಾ ಸರ್ಪಗಳ ಗೂಡಿನಿಂದ ತರುವ, ತುಳಸಿ ಸಸ್ಯದ ಬುಡದಿಂದ ತೆಗೆಯುವ ಮಣ್ಣುಗಳನ್ನೂ ಊರ್ಧ್ವಪುಂಡ್ರಕ್ಕೆ ಬಳಸಬಹುದಾಗಿದೆ.
ಕೆಲವು ಸಂದರ್ಭಗಳಲ್ಲಿ ಗೋಪೀಚಂದನವನ್ನು ಧರಿಸುವಂತಿಲ್ಲ. ಗೋಪೀಚಂದನವನ್ನು ದೈಹಿಕ ಪರಿಮಳ ಅಥವಾ ಸುಗಂಧದ್ರವ್ಯಸಾಧನವಾಗಿ ಸರ್ವಥಾ ಬಳಸುವಂತಿಲ್ಲ. ಯಾವುದೇ ಹುಟ್ಟು ಅಥವಾ ಸಾವಿನ ಹತ್ತುದಿನಗಳಲ್ಲಿ ಮೈಲಿಗೆ ಇರುವುದರಿಂದ ಗೋಪೀಚಂದನವನ್ನು ಬಳಸಬಾರದು. ಆದರೆ, ದೇವರಿಗೆ ಸಮರ್ಪಿಸಿದ ಗಂಧವನ್ನು ಬಳಸಬಹುದು.
ಗರ್ಗಸಂಹಿತೆಯು ಗೋಪೀಚಂದನಧಾರಣವನ್ನು ಗಂಗಾಸ್ನಾನಕ್ಕೆ ಸಮವೆಂದು ನಿರ್ದೇಶಿಸುತ್ತದೆ. ದಿನನಿತ್ಯದಲ್ಲಿ ಗೋಪೀಚಂದನವನ್ನು ಧರಿಸುವುದು ಜಗತ್ತಿನ ಎಲ್ಲ ಪವಿತ್ರ ನದೀದಡಗಳಲ್ಲಿ ಸ್ನಾನ ಮಾಡಿದಷ್ಟು ಪುಣ್ಯಕರ. ಗೋಪೀಚಂದನಧಾರಣೆಯು ಸಹಸ್ರ ಅಶ್ವಮೇಧಯಾಗ ಮತ್ತು ನೂರು ರಾಜಸೂಯ ಯಾಗಗಳನ್ನು ಮಾಡಿದ ಪುಣ್ಯಕ್ಕೆ ಸಮ. ಗೋಪೀಚಂದನವು ಗಂಗೆಯ ಒಡಲಿನಲ್ಲಿರುವ ಮಣ್ಣಿಗಿಂತ ಎರಡರಷ್ಟು ಮತ್ತು ಪಂಚವಟೀ ತೀರ್ಥದ ಮಣ್ಣಿಗಿಂತಲೂ ಹತ್ತರಷ್ಟು ಹೆಚ್ಚು ಪುಣ್ಯಕರವೆಂದು ಗರ್ಗಸಂಹಿತೆಯಲ್ಲಿ ಹೇಳಲಾಗಿದೆ. ದಿನಕ್ಕೆರಡು ಬಾರಿ ಗೋಪೀಚಂದನವನ್ನು ಶಾಸ್ತ್ರರೀತಿಯಲ್ಲಿ ಲೇಪಿಸಿಕೊಂಡರೆ ಗೋಕುಲಕ್ಕೆ ಪ್ರವೇಶ ದೊರೆಯುತ್ತದೆ.ಅಷ್ಟೇ ಅಲ್ಲದೆ, ಈ ರೀತಿಯಲ್ಲಿ ಗೋಪೀಚಂದನವನ್ನು ಲೇಪಿಸಿಕೊಳ್ಳುವವರೆಡೆಗೆ ಯಮಧರ್ಮನೂ ಸುಳಿಯಲಾರ. ಗೋಪೀಚಂದನಧಾರಣೆಯಿಂದ ಸಕಲಪಾಪಗಳೂ ನಾಶಹೊಂದುತ್ತವೆ ಎಂದು ಗರ್ಗರು ನುಡಿದಿದ್ದಾರೆ

ಕಲಶದ ವೀಳ್ಯದೆಲೆ ಮತ್ತು ವಿಶೇಷಗಳು..

ಕಲಶದ ವೀಳ್ಯದೆಲೆ ಮತ್ತು ವಿಶೇಷಗಳು..
"ಕಲಶದ ವೀಳ್ಯದೆಲೆ"ಯನ್ನು, ಪೂಜೆಯ ನಂತರ ಏನು ಮಾಡಬೇಕು..?  ಕಲಶದ ವೀಳ್ಯದೆಲೆಯನ್ನು ಪ್ರಸಾದ ರೂಪವಾಗಿ ಮನೆಯ ಹಿರಿಯರು ಮಾತ್ರ ಹಾಕಿಕೊಳ್ಳಬೇಕು..  (ಹಿರಿಯರು ಯಾರು ಯಾರು ಎಂದು ತಿಳಿದು ಮಾಡಿ)  ಬೇರೆಯವರು ಹಾಕಿಕೊಳ್ಳಬಾರದು..  ಮಗಳು ಅಳಿಯ ಇದ್ದರೆ ಹಾಕಿಕೊಳ್ಳಬಹುದು ..  ಕಲಶದ ವೀಳ್ಯದೆಲೆಯನ್ನು ಒಣಗಿಸಿದರೆ , ಅಥವಾ ಕಸದಲ್ಲಿ ಗುಡಿಸಿದರೆ..  ಆ ಮನೆಗೆ ದಾರಿದ್ರ್ಯ ಬಂದು ಬಿಡುತ್ತದೆ..
ಕಲಶದೇವಿಯ ಶಾಪವಾಗಿ ಆ ಮನೆಯಲ್ಲಿ ಸಂಪಾದಿಸಿದ ಹಣ ಬೇರೆಯವರ ಪಾಲಾಗಿ, ತುಂಬಾ ಕಷ್ಟದ ಜೀವನ ಮಾಡುತ್ತೀರಿ.. ಸಾಲದಭಾದೆ ಇಂದ ನರಳುವಿರಿ..  ಶತೃಭಾಧೆ ಜಾಸ್ತಿಯಾಗುತ್ತದೆ ..  ಪೂಜಿಸಿದ ಕಲಶದ ವೀಳ್ಯದೆಲೆಯನ್ನು ತುಳಸೀ ಕಟ್ಟೆಗೆ ಹಾಕಿದರೆ,  ಅವರು ಮಾಡಿದ ಪಾಪಗಳೆಲ್ಲವೂ ನಿವಾರಣೆಯಾಗುತ್ತದೆ ..  ಬಹಳ ತೇಜೋವಂತರೂ ಕಾಂತಿವಂತರೂ ಆಗಿ, ನೆಮ್ಮದಿಯ ಜೀವನ ಮಾಡುತ್ತಾರೆ..  ಸರ್ವ ತೀರ್ಥಗಳೂ ತುಳಸಿಯಲ್ಲಿ ಇರುವುದರಿಂದ ಸರ್ವ ಶ್ರೇಷ್ಠ..  (ಯಾವ ಸಮಯದಲ್ಲಿ ಹಾಕಬೇಕು, ಯಾರು ಹಾಕಬೇಕು ತಿಳಿದು ಮಾಡಿ)  ಕಲಶದ ವೀಳ್ಯದೆಲೆಯನ್ನು ಪೂಜ್ಯ ಭಾವನೆಯಿಂದ , ಕುಲದೇವತಾ ಸ್ಮರಣೆ ಮಾಡಿ, ಹರಿಯುವ ನದಿಯಲ್ಲಿ ಬಿಟ್ಟರೆ ,  ಪೂಜಿಸಿದ ದೇವರು, ಕಲಶದ ದೇವರು, ಕುಲದೇವರ ಆಶೀರ್ವಾದ ಎಂದೆಂದೂ ಇದ್ದು ಇಷ್ಟಾರ್ಥ ಸಿದ್ಧಿಯಾಗುತ್ತದೆ..  (ಪೂರ್ವವಾಹಿನಿ, ಉತ್ತರವಾಹಿನಿ ನದಿಗಳಲ್ಲಿ ಮಾತ್ರ ಬಿಡಬೇಕು)  ನೆನೆದ ಕಾರ್ಯಗಳು ಬಹಳ ಬೇಗ ಈಡೇರುತ್ತವೆ..  ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇದ್ದು ಎಲ್ಲರೂ ಆರೋಗ್ಯವಂತರಾಗಿರುತ್ತಾರೆ..  ಕಲಶಕ್ಕೆ ಬಿಳೀ ವೀಳ್ಯದೆಲೆ ಇಟ್ಟರೆ ಸ್ತ್ರೀ ದೋಷ ಮತ್ತು ಶಾಪ ಉಂಟಾಗುತ್ತದೆ ..  ದಟ್ಟದಾರಿದ್ಯ ಅನುಭವಿಸುತ್ತಿರಿ .  ಕಲಶಕ್ಕೆ ಇಡೋ ವೀಳ್ಯದೆಲೆ ಹಸಿರು ಬಣ್ಣದ್ದಾಗಿರಬೇಕು..  ಎಳೆಯ ವೀಳ್ಯದೆಲೆ ಆಗಿರಬೇಕು.. ಹಸ್ತದ ಆಕಾರ ಇರಬೇಕು.. ಭಿನ್ನವಾಗಿರಬಾರದು

*ದೇವಸ್ಥಾನಕ್ಕೆ ಹೋಗ ಬೇಕೆ ?*

*ದೇವಸ್ಥಾನಕ್ಕೆ ಹೋಗ ಬೇಕೆ ?*
ದೇವಸ್ಥಾನಗಳಿಗೆ ಹೆಚ್ಚೆಚ್ಚು ಹೋಗುವುದರಿಂದ ಆರೋಗ್ಯ ವರ್ಧಿಸುತ್ತದೆ...!!!  ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟ ವಿಷಯ..
ಗೆಳೆಯರೇ.. ನಿಜಕ್ಕೂ ಅಚ್ಚರಿಯಾಗಬಹುದು... ದೇವಸ್ಥಾನಗಳಿಗೆ  ಹೋಗುವುದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಿ.. ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.. ದೇವಸ್ಥಾನಗಳನ್ನು ಕಟ್ಟಿದ ಜಾಗಗಳಲ್ಲಿ ಅಯಸ್ಕಾಂತೀಯ ತರಂಗಗಳು (Magnetic Waves) ಸದಾ ಪ್ರವಹಿಸುತ್ತಲೇ ಇರುತ್ತವೆ... ಹೇಗೆ ಗೊತ್ತೇ...?? ದೇವರ ಮೂಲಸ್ಥಾನ ಗರ್ಭಗುಡಿ... ಆ ಗರ್ಭಗುಡಿಗೆ ಅಥವಾ ಮೇಲ್ಛಾವಣಿಗೆ ಹೊದೆಸಿರುವ ತಾಮ್ರದ ಹೊದಿಕೆಗಳನ್ನು ನೀವು ನೋಡಿರಬಹುದು... ಆ ತಾಮ್ರದ ಹೊದಿಕೆಗಳಲ್ಲೇ ಸದಾ ಸಕಾರಾತ್ಮಕ ಶಕ್ತಿ (Positive energy) ಪ್ರವಹಿಸುತ್ತಲೇ ಇರುತ್ತದೆ... ನಾವು ದೇವಸ್ಥಾನಕ್ಕೆ ಅಥವಾ ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಈ ಶಕ್ತಿ ನಮ್ಮ ಶರೀರದಲ್ಲೂ ಪ್ರವಹಿಸುತ್ತದೆ... ದೇವಸ್ಥಾನದಲ್ಲಿ ಜಾಸ್ತಿ ಹೊತ್ತು ಕುಳಿತು ಜಪ ಅಥವಾ ಧ್ಯಾನ ಮಾಡುವುದರಿಂದ ದೇಹದ ಆಯಾಸ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು... ಅದಕ್ಕೆ ಕಾರಣ ಇದೇ Positive energy. ದೇವಸ್ಥಾನದಲ್ಲಿನ ಶಾಂತತೆಯಿಂದ ನಮ್ಮ ಮನಸ್ಸೂ ಪ್ರಶಾಂತವಾಗುತ್ತದೆ
ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ಇನ್ನೂ ಇದೆ... ಪವಿತ್ರವಾದ ಗರ್ಭಗೃಹ ಮೂರೂ ಕಡೆಯಿಂದ ಮುಚ್ಚಲಾಗಿರುತ್ತದೆ... ಮುಖ್ಯದ್ವಾರವೊಂದೇ ತೆರೆದಿರುತ್ತದೆ... ಗರ್ಭಗುಡಿಯಲ್ಲಿ ಪ್ರವಹಿಸುವ ಅಯಸ್ಕಾಂತೀಯ ತರಂಗಗಳು (Magnetic Waves) ಮುಖ್ಯದ್ವಾರದ ಮೂಲಕ ಜೋರಾಗಿ ಚಿಮ್ಮುತ್ತದೆ... ಆದ್ದರಿಂದ ಮುಖ್ಯದ್ವಾರದ ಮುಂದೆ ನಿಂತಷ್ಟೂ ನಮಗೆ ಸಮಾಧಾನವಾಗುತ್ತದೆ... ಒಂದೆಡೆ ದೇವರ ದರ್ಶನ , ಇನ್ನೊಂದೆಡೆ ಆಯಾಸ ಪರಿಹಾರ... ಹೇಗಿದೆ
ನೋಡಿ..!!  ಹಾಗೇ ದೀಪಗಳಿಂದ ಬೆಳಕಿನ ಶಕ್ತಿ (Light energy),  ಘಂಟಾನಾದದಿಂದ ಹಾಗೂ ಮಂತ್ರಘೋಷಗಳಿಂದ ಶಬ್ದ ಶಕ್ತಿ (Sound Energy), ಹೂಗಳ ಪರಿಮಳದಿಂದ, ಕರ್ಪೂರದ  ಸುವಾಸನೆಯಿಂದ ರಾಸಾಯನಿಕ ಶಕ್ತಿ (Chemical Energy),  ಇವೆಲ್ಲಕ್ಕಿಂತಲೂ ಪ್ರಮುಖವಾದದ್ದು ದೇವರ ಪ್ರತಿಮೆಯಿಂದ  ಹಾಗೂ ಗರ್ಭಗುಡಿಯಲ್ಲಿ ಇಟ್ಟಿರುವ ತಾಮ್ರದ ಹರಿವಾಣ, ತಾಮ್ರದ ಪೂಜಾಸಾಮಗ್ರಿಗಳಿಂದ ಬರುವ, ಉತ್ತರ ದಕ್ಷಿಣ  ಧೃವಗಳಿಂದ (South north pole) ಪ್ರವಹಿಸುವ ಸಕಾರಾತ್ಮಕ ಶಕ್ತಿ..!! ಇನ್ನು ತೀರ್ಥಸೇವನೆ...  ತೀರ್ಥವನ್ನು ಮಾಡುವುದು ಹೇಗೆ...???  ಯಾಲಕ್ಕಿ , ತುಳಸಿ , ಲವಂಗ ಮುಂತಾದವುಗಳಿಂದ...  ಇವುಗಳನ್ನು ನೀರಿಗೆ ಹಾಕುವುದರಿಂದ ನೀರಿನಲ್ಲಿಯೂ  ಸಕಾರಾತ್ಮಕ ಶಕ್ತಿಯ ಉದ್ಭವವಾಗುತ್ತದೆ...  ತೀರ್ಥಸೇವನೆಯಿಂದ ದೇಹ ಆಹ್ಲಾದವಾಗುತ್ತದೆ... ಚೈತನ್ಯ  ಮೂಡುತ್ತದೆ... ಆರೋಗ್ಯಕರವೂ ಹೌದು... ಹೇಗೆಂದರೆ, ಲವಂಗ  ನಮ್ಮ ಹಲ್ಲುಗಳ ಆರೋಗ್ಯವನ್ನು ವರ್ಧಿಸುತ್ತದೆ, ತುಳಸಿ ನೆಗಡಿ,  ಕೆಮ್ಮು, ಬರದಂತೇ ತಡೆಯುತ್ತದೆ, ಯಾಲಕ್ಕಿ ಅಥವಾ  ಪಂಚಕರ್ಪೂರ ಬಾಯಿಯನ್ನು ಶುದ್ಧವಾಗಿಸುತ್ತದೆ... ಇನ್ನೂ ಅನೇಕ ಔಷದೀಯ ಗುಣಗಳು ತೀರ್ಥದಲ್ಲಿರುತ್ತವೆ... ದೀಪಾರಾಧನೆ, ವಿಶೇಷಪೂಜೆಗಳ ದಿನಗಳಲ್ಲಿ ದೇವಾಲಯಗಳಲ್ಲಿ  ಹೆಚ್ಚು - ಹೆಚ್ಚು ಸಕಾರಾತ್ಮಕಶಕ್ತಿಯ ಸಂಚಾರವಾಗುತ್ತಿರು
ತ್ತದೆ...  ಇನ್ನು ದೇವಸ್ಥಾನಗಳಲ್ಲಿ ಶುದ್ಧಿಗಾಗಿ ನೀರನ್ನು ದೇಹದ  ಮೇಲೆ ಚಿಮುಕಿಸುತ್ತಿರುವುದನ್ನು ನೋಡಿರಬಹುದು... ಇದರಿಂದ ನಮ್ಮ ಶರೀರದ ಶುದ್ಧಿ ಹಾಗೂ ಆಯಾಸದ ನಿವಾರಣೆಯಾಗುತ್ತದೆ... ಆ ಕಾರಣದಿಂದಲೇ ಪುರುಷರು  ದೇವಸ್ಥಾನಕ್ಕೆ ಹೋಗುವಾಗ ಅಂಗಿಯನ್ನು ಕಳಚಿಟ್ಟು  ಹೋಗುವುದು ಒಳ್ಳೆಯದು... ಮಹಿಳೆಯರು ಜಾಸ್ತಿ ಒಡವೆಗಳನ್ನು  ಹಾಕಿಕೊಂಡು ಹೋಗುವುದು ಒಳ್ಳೆಯದು... ಏಕೆಂದರೆ  ಲೋಹಗಳಿಂದ ಶಕ್ತಿಯ ಸಂಚಾರ ದೇಹದಲ್ಲಾಗುತ್ತದೆ..  ಸಾಕಲ್ಲವೇ ಇಷ್ಟು ವೈಜ್ಞಾನಿಕ ಆಧಾರ...??  ಆದ್ದರಿಂದ ಸ್ನೇಹಿತರೇ ದೇವಸ್ಥಾನಗಳಿಗೆ ಹೆಚ್ಚೆಚ್ಚು ಭೇಟಿ  ನೀಡಿ...

*ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ

ಕಾಂಗ್ರೆಸ್ ಪಕ್ಷದ ಮತ್ತೊಂದು ಹಗರಣ

 ಕಾಂಗ್ರೆಸ್ ಪಕ್ಷದ ಮತ್ತೊಂದು ಹಗರಣ ಬಡ ರೈತರಿಗೆ 30.000 ಸಾವಿರ ಕೋಟಿ ರೂಪಾಯಿ ಮೋಸ ಮಾಡಿದ ರಾಬರ್ಟ್ ವಾದ್ರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಸಿಬಿಐ.
ರಾಜಸ್ತಾನದ. ಛತ್ತೀಸಗಡ. ಜಾರ್ಖಂಡ್. ಉತ್ತರ ಪ್ರದೇಶದಲ್ಲಿ ರೈತರಿಗೆ ಒಂಚಿಸಿ ಪಡೆದ ಭೂಮಿ ಡಿ ಎಲ್ ಎಪ್ ಗೆ ಮಾರಾಟ ಮಾಡಲಾಗಿತ್ತು.
ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಎಎಪಿ ಮಂತ್ರಿ ಸತ್ಯೇಂದ್ರ ಜೈನ್ ವಿರುದ್ಧ ಸಿಬಿಐ ದಾಖಲಿಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರ ರಾಬರ್ಟ್ ವಾದ್ರಾ ಅವರನ್ನು ತನಿಖೆ ನಡೆಸಲು ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ತನಿಖೆ ನಡೆಸುತ್ತಿದೆ. ಬಿಕಾನೆರ್ನಲ್ಲಿ ನಡೆದ ಭೂ ಹಗರಣಗಳ ಕುರಿತು ತನಿಖೆ ನಡೆಸಲು ಬಿಜೆಪಿ ನೇತೃತ್ವದ ರಾಜಸ್ಥಾನ ಸರ್ಕಾರವು ಕೇಳಿದ ಬಳಿಕ ಸಿಬಿಐ ಬುಧವಾರ 18 ಎಫ್ಐಆರ್ಗಳನ್ನು ದಾಖಲಿಸಿದೆ.
ಬಿಕನೇರ್ನಲ್ಲಿ ಮಹಾಜನ್ ಫೈರಿಂಗ್ ರೇಂಜ್ನ ಬದಲಿಗೆ ಭೂಮಿ ವ್ಯವಹಾರಗಳ ಸರಣಿಯ ಬಗ್ಗೆ ಐಪಿಸಿ ಹಲವಾರು ವಿಭಾಗಗಳ ಅಡಿಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ. ಅದರಲ್ಲಿ ವದ್ರಾ ಕಂಪೆನಿಗಳು ಕೂಡಾ ಕೆಲವು ಖರೀದಿಗಳನ್ನು ಮಾಡಿದ್ದವು ಮತ್ತು ನಂತರ ಅವುಗಳನ್ನು ಭಾರೀ ಲಾಭದಲ್ಲಿ ಮಾರಾಟ ಮಾಡಿದೆ. ರಾಜ್ಯವು 18 ರೂಪಾಂತರಗಳನ್ನು ರದ್ದುಗೊಳಿಸಿದಾಗ, ಬಿಕಾನೆರ್ನಲ್ಲಿ ಮಾಲೀಕತ್ವದ ವರ್ಗಾವಣೆಯನ್ನು ಕಾನೂನುಬಾಹಿರವೆಂದು ಕಂಡುಹಿಡಿದ ನಂತರ ಈ ಪ್ರಕರಣವು 2014 ರಲ್ಲಿ ಹೊರಹೊಮ್ಮಿತು.
ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್ನಿಂದ ಸ್ಥಳಾಂತರಿಸಲ್ಪಟ್ಟ ರೈತರು “ತಪ್ಪಾಗಿ” ತೋರಿಸಲ್ಪಟ್ಟ ಕೆಲವು ಹಳ್ಳಿಗರು ಈ ಭೂಮಿಯನ್ನು ಅಕ್ರಮವಾಗಿ 2006-07 ರಲ್ಲಿ ಹಂಚಿಕೊಂಡರು ಅಥವಾ ಹೊಂದಿದ್ದರು.
 ಲ್ಯಾಂಡ್ ಸ್ಕ್ಯಾಮ್
ಭೂಮಿಯನ್ನು ಕಳೆದುಕೊಂಡಿರುವವರು 90 ರ ದಶಕದಲ್ಲಿ ಪುನರ್ವಸತಿ ಹೊಂದಿದ್ದರೂ, ವದ್ರಾ ಕಂಪೆನಿ ಸೇರಿದಂತೆ ಹಲವು ಪಕ್ಷಗಳು ದೊಡ್ಡ ಪ್ರಮಾಣದ ಭೂಮಿಯನ್ನು ಖರೀದಿಸಿವೆ ಎಂದು ಆರೋಪಿಸಲಾಯಿತು.
ಸಿಬಿಐ ತನಿಖೆಗಳು ಪ್ರದೇಶದ ಕೆಲವು ಪ್ರಭಾವಶಾಲಿ ಜನರಿಗೆ ಇಳಿಯಲು ಸಾಧ್ಯವಿದೆ, ಕೆಲವು ಕಾಂಗ್ರೆಸ್ ಮುಖಂಡರು ಸೇರಿದಂತೆ ತೊಂದರೆ ಎದುರಿಸುತ್ತಾರೆ. ವದ್ರಾ ನಂತರದ ಹಂತದಲ್ಲಿ ಚಿತ್ರಕ್ಕೆ ಬಂದರು ಮತ್ತು ಕೆಲವು ಕಂಪೆನಿಗಳ ಹೆಸರಿನಲ್ಲಿ ಅವರು ಖರೀದಿಸಿದ ಬಹುಪಾಲು ಭೂಮಿ ಈಗಾಗಲೇ ಕೆಲವು ಬಾರಿ ಕೈಗಳನ್ನು ವಿನಿಮಯ ಮಾಡಿಕೊಂಡಿದ್ದವು.
ಒಂದು ಹಂತದಲ್ಲಿ, ಆ ಪ್ರದೇಶದಲ್ಲಿನ ನಿವ್ವಳ ಭೂಮಿ ಹಿಡಿದಿಟ್ಟುಕೊಂಡಿದ್ದಕ್ಕಿಂತ ಹೆಚ್ಚಿನ ಕಂಪೆನಿಯ ನಿರ್ದೇಶಕರಾಗಿದ್ದರು, ಆದರೆ ಭೂಮಿ ಮೇಲ್ಛಾವಣಿಯನ್ನು ಸಣ್ಣ ಅಂತರದಿಂದ ಮೀರಿದ್ದರು, ಆದರೆ ಒಮ್ಮೆ ಹೆಚ್ಚಿನ ಭೂಮಿ ಶರಣಾಯಿತು ಎಂದು ಅವರು ಸ್ಪಷ್ಟಪಡಿಸಿದರು.
ಹೇಗಾದರೂ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರಗಳು ಮತ್ತು ಸೌರ ಉದ್ಯಾನಗಳ ಪ್ರಸ್ತಾಪವನ್ನು ಸ್ಥಾಪಿಸುವ ಬಗ್ಗೆ ಭೂಮಿ ಖರೀದಿಸುವ ಆರೋಪವನ್ನು ಅವರು ಎದುರಿಸಿದರು – ಇದು ರಾಕ್ ಬಾಟಮ್ ಭೂಮಿ ಬೆಲೆಗಳು ಏಕಕಾಲದಲ್ಲಿ ಆಕಾಶ ರಾಕೆಟ್ಗೆ ಸಿಕ್ಕಿತು. ಆದರೂ, ಅವರು ಮಾಡಿದ ಲಾಭವು ಕೆಲವೇ ಕೋಟಿ ಮಾತ್ರ ಎಂದು ಅಂದಾಜಿಸಲಾಗಿದೆ – ಗುರಗ್ರಾಮ್ನಲ್ಲಿನ ಭೂಮಿ ವ್ಯವಹಾರಗಳಿಗೆ ಹೋಲಿಸಿದರೆ ಅಲ್ಪ ಮೊತ್ತ.
 ಸಿಬಿಐ ತನಿಖೆಗಳು ಉಲ್ಬಣಗೊಳ್ಳಲು
ಅವರು ಮಾರಾಟ ಮಾಡಿದ ಕೆಲವು ಭೂಮಿಯನ್ನು ರಾಜ್ಯದ ಕಾಂಗ್ರೆಸ್ ನಾಯಕರು ಖರೀದಿಸಿದರು. ಗೃಹ ಸಚಿವ ಗುಲಾಬ್ ಚಂದ್ ಕಟೇರಿಯಾ ಅವರ ಪ್ರಕಾರ, ಸರಕಾರವು ವ್ಯವಹಾರಗಳ ವೆಬ್ ಮತ್ತು ತನಿಖೆಯ ಉಲ್ಲಂಘನೆಗಳ ಬಗ್ಗೆ ತನಿಖೆ ಮಾಡಲು ಕಷ್ಟಕರವಾಗಿದೆ. ವದ್ರಾ ವರದಿ ಮಾಡಲ್ಪಟ್ಟಿದ್ದಕ್ಕಿಂತ ಹೆಚ್ಚಿನದನ್ನು ಖರೀದಿಸಿದೆ ಎಂಬ ಆರೋಪವೂ ಇದೆ, ಆದರೆ ಈ ಹೇಳಿಕೆಗಳು ರುಜುವಾತಾಗಿದೆ. ರಾಜ್ಯದಲ್ಲಿ ವಸುಂಧರಾ ರಾಜೇ ಸರಕಾರವು ವದ್ರಾವನ್ನು ಉಗುಳಿಸಲು ಇಷ್ಟವಿಲ್ಲವೆಂದು ತೋರಿಸಿದೆ ಅಥವಾ ಅದು ಅವನ ಬಳಿ ಹೋಗಲು ಸಾಕಷ್ಟು ವಸ್ತುವನ್ನು ಕಂಡುಹಿಡಿಯಲಿಲ್ಲ ಮತ್ತು ಆದ್ದರಿಂದ ಸಿಬಿಐಗೆ ಪ್ರಕರಣಗಳನ್ನು ಕಳುಹಿಸಲು ನಿರ್ಧರಿಸಿದೆ. ಹಿಂದೆ ಕೆಲವು ಬಂಧನಗಳು ನಡೆದಿವೆ, ಮತ್ತು ಸಿಬಿಐ ತನಿಖೆಗಳು ಇನ್ನೂ ಹೆಚ್ಚಿನದಕ್ಕೆ ತೊಂದರೆ ತರಲು ನಿರೀಕ್ಷಿಸಲಾಗಿದೆ.
ಅದಕ್ಕಾಗಿಯೇ ಸಿಬಿಐ ವದ್ರಾವನ್ನು ವಿಚಾರಣೆಗೊಳಪಡಿಸಬಹುದು ಮತ್ತು ಒಂದು ಹಂತದಲ್ಲಿ ಭೂಮಿ ಸೀಲಿಂಗ್ ಅನ್ನು ಮೋಸದಿಂದ ಖರೀದಿಸಿದವರಿಂದ ಖರೀದಿಸುವಂತಹ ತಪ್ಪುದಾರಿಗೆಳೆಯುವ ಆರೋಪಗಳನ್ನು ಎದುರಿಸಬೇಕಾಗುತ್ತದೆ.
ವಾದ್ರಾ ಅವರು ತಾವು ಮುಗ್ಧರಾಗಿದ್ದೇವೆಂದು ಗುರಿಯಾಗಿದ್ದೇವೆಂದು ಮೊದಲು ಹೇಳಿದ್ದರು. ರಾಜಸ್ಥಾನ ಪೊಲೀಸರು ಎಫ್ಐಆರ್ 26 ಆಗಸ್ಟ್ 2014 ರಂದು ಅರ್ಜಿ ಸಲ್ಲಿಸಿದರು. 3 ವರ್ಷಗಳಲ್ಲಿ ಅವರು ಆರೋಪಪಟ್ಟಿಗಳನ್ನು ದಾಖಲಿಸಿದರು, ಕಂಪೆನಿ ಅಧಿಕಾರಿಗಳು, ಇನ್ನೂ ಕಂಪನಿಯ ಅಧಿಕಾರಿಗಳು, ಇನ್ನೂ ಕಂಡುಬಂದಿಲ್ಲ ಎಫ್ಐಆರ್ ಅಥವಾ ಚಾರ್ಜ್ಶೀಟ್ಗಳು ಯಾವುದೇ ರೀತಿಯಲ್ಲೂ ನನ್ನೊಂದಿಗೆ ಸಂಬಂಧ ಹೊಂದಿದ ಕಂಪೆನಿಗಳನ್ನು ಆರೋಪಿಸಿಲ್ಲ

ಹೊಯ್ಸಳರಕಾಲದಲ್ಲಿ ಬ್ರಾಹ್ಮಣರ ವರಮಾನ ಯಾವರೀತಿ ಇತ್ತು?

ಹೊಯ್ಸಳರಕಾಲದಲ್ಲಿ ಬ್ರಾಹ್ಮಣರ ವರಮಾನ ಯಾವರೀತಿ ಇತ್ತು? ಇವತ್ತಿನ ದಿನದಲ್ಲಿ ಲೆಕ್ಕ ಹಾಕಿದರೆ ಅವರಿಗೆ ಬರುತ್ತಿದ್ದ ಸಂಭಾವನೆ ಎಷ್ಟು ಇತ್ತು ? ಅಷ್ಟೇ ವರಮಾನ ಬಂದರೆ ಇಂದು ಅವತ್ತಿನಂತೆ ನೆಮ್ಮದಿಯ ಜೀವನ ಮಾಡಲು ಸಾಧ್ಯವಾ?
ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟವೇನಲ್ಲ. ಈ ವಿಷಯಗಳು ನಮ್ಮ ಗಮನಕ್ಕೆ ಬರದಂತೆ ಮಾಡಲಾಗಿದೆ ಅಷ್ಟೇ. ಮಂಡ್ಯ ಜಿಲ್ಲೆಯ ಪ್ರಸಿದ್ಧ ಹೊಯ್ಸಳರ ದೇವಸ್ಥಾನ ಇರುವುದು "ಸೋಮನಾಥಪುರ" ದಲ್ಲಿ. ಇಲ್ಲಿ ಹೊಯ್ಸಳ ದೊರೆಗಳು ಈ ದೇವಸ್ಥಾನದ ಬಗ್ಗೆ ಸಂಪೂರ್ಣ ವಿವರ ಶಾಸನದಲ್ಲಿ ದಾಖಲಿಸಿದ್ದಾರೆ. ಇದರಲ್ಲಿ ಬ್ರಾಹ್ಮಣರ ಬಗ್ಗೆ ಹೇಳಿರುವ ವಿಷಯ ಬಹಳಷ್ಟು ಸ್ವಾರಸ್ಯಕರವಾಗಿ ಇದೆ. ಇದರಲ್ಲಿ ದೇವಸ್ಥಾನಕ್ಕೆ ಬರಬೇಕಾದ ವಾರ್ಷಿಕ ವರಮಾನ (ದೇವಸ್ಥಾನಕ್ಕೆ ಕೊಟ್ಟ ಭೂಮಿ ಉಪಯೋಗಿಸುವ ರೈತರು ಸಂದಾಯ ಮಾಡುತ್ತಿದ್ದರು). ಈ ವರಮಾನದಿಂದ ಎಲ್ಲಾ ದೇವಸ್ಥಾನದ ಪರಿಚಾರಕರಿಗೂ ಕೊಡಬೇಕಾದ ವರಮಾನದ ಪಟ್ಟಿ ಮಾಡಿ ಶಾಸನದಲ್ಲಿ ದಾಖಲಿಸಿದ್ದಾರೆ. ಇದರಿಂದ ಅಲ್ಲಿದ್ದ ಬ್ರಾಹ್ಮಣರಿಗೆ, ತಮ್ಮ ಜೀವನವನ್ನು ನಡೆಸುವುದಕ್ಕೆ ಎಷ್ಟು ವರಮಾನ ಬರುತ್ತಿತ್ತು ಅನ್ನುವುದು ತಿಳಿಯುತ್ತದೆ. ಇದಲ್ಲದೆ ಬ್ರಾಹ್ಮಣರು ಮತ್ತು ಉಳಿದ ಕೆಲಸದವರಿಗೂ ವರಮಾನದಲ್ಲಿ ಬಹಳ ಅಂತರ ಇತ್ತೇ? ಬ್ರಾಹ್ಮಣರು ಬೇರೆ ಯವರನ್ನು ತುಳಿಯುತ್ತಿದ್ದರು ಅನ್ನುವ ಆಪಾದನೆಯನ್ನು ತೂಕ ಮಾಡಿ ನೋಡಬಹುದು.
೧) ಸೋಮನಾಥಪುರದಲ್ಲಿ ಶೈವ ಮತ್ತು ವೈಷ್ಣವ ಪಂಥ ಎರಡಕ್ಕೂ ಅವಕಾಶ ಮಾಡಿಕೊಡಲಾಗಿತ್ತು. ಈ ಎರಡೂ ದೇವಸ್ಥಾನಗಳಿಗೆ ಬ್ರಾಹ್ಮಣರನ್ನು ನೇಮಿಸಿ ಅವರಿಗೆ ಬೇರೆ ಬೇರೆಯ ಅಗ್ರಹಾರಾ ಕೂಡ ಮಾಡಿಕೊಡಲಾಗಿತ್ತು.
೨) ವೈಷ್ಣವ ಸಮುದಾಯದ ದೇವಸ್ಥಾನಗಳಿಗೆ ಮತ್ತು ಅದರಲ್ಲಿ ಕೆಲಸ ಮಾಡುವ ಬ್ರಾಹ್ಮಣರಿಗೆ ಶೈವ ಪಂಥದ ಬ್ರಾಹ್ಮಣರಿಗಿಂತ ಹೆಚ್ಚು ವರಮಾನ ಕೊಡಲಾಗುತ್ತಿತ್ತು. ಇದು ಹೊಯ್ಸಳ ರಾಜರ ವೈಷ್ಣವ ಪಂಥದ ಕಡೆ ವಾಲುವಿಕೆಯನ್ನ ತೋರಿಸುತ್ತದೆ. ಬ್ರಾಹ್ಮಣರಲ್ಲೇ ಇವತ್ತಿನ ಒಳಜಗಳ ಇರಲು ಈ ಬೇಧ ಮಾಡಿದ್ದೆ ಕಾರಣ ಇರಬಹುದು. ಈ ವೈಷ್ಣವ ದೇವಸ್ಥಾನಕ್ಕೆ ಹೆಚ್ಚಿನ ಅನುದಾನ ಕೊಡಲು, ಶಿವ (ನಿರ್ಮೋಹಿ), ವಿಷ್ಣು ಅಲಂಕಾರಪ್ರಿಯ ಅನ್ನುವುದೂ ಕಾರಣ ಇರಬಹುದು. ವಿಷ್ಣು ದೇವಸ್ಥಾನದಲ್ಲಿ ಅಲಂಕಾರ ಸಾಮಗ್ರಿಗಳು ಹೆಚ್ಚು ಬೇಕಾಗಿರುವುದರಿಂದ ಅಥವಾ ಕೆಲಸ ಜಾಸ್ತಿ (ಉತ್ಸವ, ಹರಿಕಥೆ ಈ ರೀತಿ) ಅಂತ ಇರಬಹುದು. ಅಥವಾ ವೈಷ್ಣವ ಧರ್ಮ ಪ್ರಚಾರ ಮಾಡಲು ಅವರಿಗೆ ಪ್ರೋತ್ಸಹಿಸಲು ಇರಬಹುದು. ಕನ್ನಡದ ದೊರೆಗಳಿಗೆ ಶಿವ ಪಂಥದ ತಮಿಳು ರಾಜರಿಂದ ಅಭದ್ರತೆ ಇತ್ತು. ಚಾಲುಕ್ಯರು ಮತ್ತು ಹೊಯ್ಸಳರು - ಪಲ್ಲವರು, ಚೋಳರು , ಚೇರರು ಈ ರೀತಿ ಶಿವ ಪಂಥದ ದೊರೆಗಳೊಂದಿಗೆ ಕಾದಿದ್ದೆ ಹೆಚ್ಚು. ಈ ದಕ್ಷಿಣದ ದೊರೆಗಳಿಂದ ಅಂತರ ಕಾಯ್ದುಕೊಳ್ಳಲು ಕನ್ನಡದ ದೊರೆಗಳು ವೈಷ್ಣವ ಪಂಥವನ್ನು ಪ್ರೋತ್ಸಹಿಸಿ, ಸಾರ್ವಜನಿಕರನ್ನೂ ವೈಷ್ಣವ ಪಂಥಕ್ಕೆ ಬರುವಂತೆ ಮನವೊಲಿಸಲು ಬಹಳಷ್ಟು ಪ್ರಯತ್ನಿಸಿದ್ದಾರೆ. ಈ ರಾಜಕೀಯ ಕಾರಣಗಳಿಂದ, ವೈಷ್ಣವರಿಗೆ ಸಂಭಾವನೆ ಹೆಚ್ಚು.
೩) ದೇವಸ್ಥಾನದ ಬ್ರಾಹ್ಮಣ ಅರ್ಚಕರಲ್ಲೇ ಬೇರೆ ಬೇರೆ ಸ್ಥರದ ಜನ ಇದ್ದರು. ಅವರಿಗೆ ಬೇರೆ ಬೇರೆ ಆದಾಯದ ಮಿತಿ ಹಾಕಲಾಗಿತ್ತು.
ಈ ಎಲ್ಲಾ ಅಂಶಗಳನ್ನು ಗಣನೆಗೆ ತಂದುಕೊಂಡು, ಒಂದು "ಸರಾಸರಿ" ಮಾಡಿದರೆ, ಒಬ್ಬ ಬ್ರಾಹ್ಮಣನಿಗೆ ತನ್ನ ಉದರ ಪೋಷಣೆ ಮಾಡಲು ಈ ಕೆಳಗಿನ ಸೌಕರ್ಯ ಸಿಗುತ್ತಿತ್ತು. ಇದನ್ನ ನೀವು ಬೇರೆ ಬೇರೆ ಸ್ತರದ ಜನರಿಗೆ ಹೀಗೆ ಲೆಕ್ಕಾಚಾರ ಹಾಕಬಹುದು
ಅ) ಇರಲು ಬಾಡಿಗೆ ಸುಂಕ, ಯಾವುದೂ ಇಲ್ಲದ ಅಗ್ರಹಾರದ ಮನೆ. ಮನೆ ರಿಪೇರಿ ಮಾತ್ರ ಜವಾಬ್ಧಾರಿ. ಮನೆ ದೇವಸ್ಥಾನದ ಸುಪರ್ಧಿಗೆ ಸೇರುತ್ತದೆ. ಬಾಡಿಗೆ ಹಣ ಅಂದರೆ ಇವತ್ತಿನ ಕಾಲದ ಲೆಕ್ಕ ೫೦೦೦- ಮಾಹೆಗೆ - ವಾರ್ಷಿಕ - ೬೦,೦೦೦ ರೂ
ಆ) ಅಕ್ಕಿ, ಬೇಳೆ, ಮೆಣಸಿನಕಾಯಿ, ತೆಂಗಿನ ಕಾಯಿ, ಎಣ್ಣೆ, ಹಾಲು, ತುಪ್ಪ - ದೇವಸ್ಥಾನದ ಉಗ್ರಾಣದಿಂದ ಕೊಡಲ್ಪಡುತ್ತಿತ್ತು- ಇದರ ಅಂದಾಜು ಮೊತ್ತ ವಾರ್ಷಿಕ ಸುಮಾರು - ೬೦,೦೦೦ ರೂ
ಇ) ಇನ್ನು ವರಮಾನ ಅಂತ ೧೨ ಗದ್ಯಾಣ (ಚಿನ್ನದ ನಾಣ್ಯ. ಹೊಯ್ಸಲರಕಾಲದಲ್ಲಿ ಇದಕ್ಕೆ ಗದ್ಯಾಣ ಅನ್ನುತ್ತಿದ್ದರು, ವಿಜಯನಗರ ಕಾಲದಲ್ಲಿ ಇದನ್ನು ವರಾಹ ಅನ್ನುತ್ತಿದ್ದರು). ತಿಂಗಳಿಗೆ ಒಂದರಂತೆ . ಒಂದು ಗದ್ಯಾಣ ಸುಮಾರು ೪ಗ್ರಾ ತೂಕ ಇರುತ್ತಿತ್ತು. ವರ್ಷಕ್ಕೆ ಸುಮಾರು ೫೦ಗ್ರಾಮ್ ಚಿನ್ನದ ಸಂಬಳ ಬರುತ್ತಿತ್ತು - ಇದರ ಬೆಲೆ - ೧,೫೦,೦೦೦ ರೂ (ಗ್ರಾಮ್ - ೩೦೦೦ರೂ  ಅಂತ ಲೆಕ್ಕ ಹಾಕಿದಾಗ)
ಇದಿಷ್ಟು ಗ್ಯಾರಂಟೀ ವರಮಾನ. ಇದಲ್ಲದೆ ಬ್ರಾಹ್ಮಣರ ಪಾಂಡಿತ್ಯದ ಮೇಲೆ ಅವರಿಗೆ ಭೂಮಿ ಕೊಡಲಾಗುತ್ತಿತ್ತು. ಇದರ ವರಮಾನ "ಬೋನಸ್".
ಈ ) ನಿವೃತ್ತಿ ಭತ್ಯೆ  ಯಾರಿಗೂ ಇರುತ್ತಿರಲಿಲ್ಲ. ಕೊಡುವ ಸವಲತ್ತು ಇಡೀ ಕುಟುಂಬವನ್ನು ಪರಿಗಣಿಸಿ  ಕೊಡಲಾಗುತ್ತಿತ್ತು (ವಟುವಿಗೆ ಕೂಡ ದೇವಸ್ಥಾನದ ಕಾರ್ಯದಲ್ಲಿ ತೊಡಗಿದಾಗ ಹಣ ಕೊಡಲಾಗುತ್ತಿತ್ತು, ಆದರೆ ಬೇರೆ ಸೌಕರ್ಯ ಇರುತ್ತಿರಲಿಲ್ಲ. ಗುರುಗಳ ಮನೆಯೇ ಆಶ್ರಯ ತಾಣ. ವಟುವಿಗೆ ಬರುತ್ತಿದ್ದ ಹಣದಲ್ಲಿ ವಿದ್ಯಾಭ್ಯಾಸದ ಗುರುಕಾಣಿಕೆ ಸಲ್ಲಿಸಬಹುದಾಗಿತ್ತು. ಇದು ಇವತ್ತಿನ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸರಕಾರ ಕೊಡುವ ಶಿಷ್ಯ ವೇತನದಂತೆ). ಗೃಹಸ್ಥರು ವಯೋವೃದ್ಧರನ್ನು ಸಾಕುವ ಹೊಣೆಗಾರಿಕೆ ಇರುತ್ತಿದ್ದರಿಂದ, ವಯೋವೃದ್ಧರಿಗೆ ಪ್ರತ್ಯೇಕ ನಿವೃತ್ತಿ ವೇತನ ಅಂತ ಇರುತ್ತಿರಲಿಲ್ಲ. ಕೊಟ್ಟರೂ, ಅಶಕ್ತತೆಯಿಂದ ಬಳಸಲು ಸಮಸ್ಯೆ ಇರುವುದರಿಂದ ಇದನ್ನು ಈ ರೀತಿ ಮಾಡಿರಬಹುದು.
ಒಬ್ಬ ಬ್ರಾಹ್ಮಣನ ಗ್ಯಾರಂಟೀ ವರಮಾನ - ವಾರ್ಷಿಕ ೨,೭೦,೦೦೦ ರೂ (ಇಂದಿನ ಬೆಲೆಯಲ್ಲಿ). ಇದು ಸೋಮನಾಥಪುರದಂಥ ಒಂದು ಪಟ್ಟಣದಲ್ಲಿ. ಇವರಿಗೆ ಮಕ್ಕಳ ಶಿಕ್ಷಣ ಮತ್ತು ಇಂದಿನ ಆಧುನೀಕತೆಯ ಖರ್ಚು ಇರಲಿಲ್ಲ. ಇವತ್ತಿನ ಆಧುನೀಕತೆಯ ಖರ್ಚಿನ ಬಾಬತ್ತು ಅಂತ ಮೇಲಿನ ವರಮಾನವನ್ನು ದುಪ್ಪಟ್ಟು ಮಾಡಿದರೆ....ಅವರ ವರಮಾನ ಸುಮಾರು ೫,೦೦,೦೦೦ ರೂ ಆಗುತ್ತದೆ.
ಇಷ್ಟು ವರಮಾನ ಇಂದು ಕರ್ನಾಟಕದ ಪಟ್ಟಣ ಪ್ರದೇಶಗಳಲ್ಲಿ ಪಡೆದರೆ (ಸುಮಾರು ೪೦,೦೦೦ ರೂ ತಿಂಗಳಿಗೆ ) ಹಿಂದಿನ ಕಾಲದ ಪೂರ್ವಿಕರಂತೆ ನೆಮ್ಮದಿಯ ಜೀವನ ಬ್ರಾಹ್ಮಣರು ಮಾಡಬಹುದು. ಇದು ತೆರಿಗೆ ಮುಕ್ತಿಯ ಹಣ. 35% ತೆರಿಗೆ ಸೇರಿದರೆ, ವರಮಾನ ತಿಂಗಳಿಗೆ ಸುಮಾರು ೫೩,೦೦೦ ರೂ ಆಗುತ್ತದೆ.
ಬರೀ ಬ್ರಾಹ್ಮಣರು ಮಾತ್ರ ಅಲ್ಲ, ದೇವಸ್ಥಾನದ ಕಾವಲುಗಾರನಿಗೂ ಇದೆ ರೀತಿ ವರಮಾನ ಬರುತಿತ್ತು. ಆದ್ದರಿಂದ, ಇಷ್ಟು ವರಮಾನ ಒಬ್ಬ ಬ್ರಾಹ್ಮಣ "ಉಪಾಧ್ಯಾಯನಿಗೂ" ಬರುತ್ತಿತ್ತು ಎಂದು ಅಂದಾಜಿಸಬಹುದು. ಇಲ್ಲದಿದ್ದರೆ ಯಾರೂ ಉಪಾಧ್ಯಾಯ ವೃತ್ತಿ ಕೈಗೊಳುತ್ತಿರಲಿಲ್ಲ.  ಆದ್ದರಿಂದ ಅವರು ನಿರ್ವಂಚನೆಯಿಂದ  "ಉತ್ತಮ ಗುಣಮಟ್ಟದ" ಶಿಕ್ಷಣವನ್ನು ಧಾರೆ ಎರೆಯುತ್ತಿದ್ದರು. ಇವತ್ತು??
ಕರ್ನಾಟಕ ಸುಭಿಕ್ಷ ರಾಜ್ಯ. ಇರುವ ಸಂಪತ್ತು ಎಲ್ಲಾ ಜನರಿಗೂ ಸರಿಯಾಗಿ ವಿತರಣೆ ನಡೆಯಬೇಕಷ್ಟೆ .  ಇದು ಹೊಯ್ಸಳರ ಕಾಲಾದಲ್ಲಿ ನಡೆಯುತ್ತಿತ್ತು ಅನ್ನುವುದು ಮನದಟ್ಟಾಗುತ್ತ್ತದೆ. ಇದೆಲ್ಲ ನೋಡಿದರೆ, ಪ್ರಜಾಪ್ರಭುತ್ವದಿಂದ ಮುಂಚೆ ಇದ್ದಂಥ ವ್ಯವಸ್ಥೆ ಹಾಳಾಗಿ ಜನರ ಜೀವನ ನೀಚವಾಗಿದೆಯಾ ಅನ್ನುವ ಪ್ರಶ್ನೆ ಉದ್ಭವಿಸುತ್ತದೆ.
ಹೊಯ್ಸಳರರ ಆದಾಯದ ಮಿತಿಯಲ್ಲಿ  ಒಂದು "ಸೂತ್ರ" ಇದೆ. ಈ ಸೂತ್ರವೇ ಒಂದು "ಆರ್ಥಿಕ ನೀತಿ" . ಈ "ಆರ್ಥಿಕ ನೀತಿಯನ್ನ" ವಿದೇಶಿದಲ್ಲಿ ಓದುಬಂದವರು ಎಂದು ಮಣೆ ಹಾಕಿ ಅವರಿಂದ  ತಿರುಚಿ, ಬದಲಾಯಿಸಿರುವುದೇ ಜನರ ಸಮಸ್ಯೆಗೆ ಮೂಲ ಕಾರಣ.
ಹೊಯ್ಸಳರ ಕಾಲದಲ್ಲಿ, ವಸತಿಗೆ ಎಷ್ಟು ಖರ್ಚಾಗುತ್ತಿತ್ತೋ, ಅಷ್ಟೇ  ದವಸ-ಧಾನ್ಯಕ್ಕೆ, ಖರ್ಚು. ಉಳಿಕೆ ಖರ್ಚಿಗೆ ಗದ್ಯಾಣದ ಆದಾಯ (ಇದರ ಇರಡೂವರೆ ಪಟ್ಟು ಇತ್ತು). ಈ ಎರಡೂವರೆ ಪಟ್ಟಿನಲ್ಲಿ ಹಣ ಖರ್ಚು ಮಾಡಿದರೇ "ಐಭೋಗ", ಉಳಿಸಿದರೆ "ಐಶ್ವರ್ಯ".  ಈಗ ವಸತಿ, ದವಸ-ಧಾನ್ಯಕ್ಕೆ,  ಶಿಕ್ಷಣ ಮತ್ತು ಅರೋಗ್ಯ ಸೇರ್ಪಡೆ ಯಾಗಿವೆ (ಈ ನಾಲ್ಕೂ ಮೂಲ ಖರ್ಚು - ಅವೂ ಅಷ್ಟೇ ಪ್ರಮಾದಲ್ಲಿ ಇರಬೇಕು. ಆದರೆ ಇಲ್ಲ ). ಉಳಿಕೆ ಖರ್ಚಿನಲ್ಲಿ ಐಷಾರಾಮಿ ಜೀವನದ ಪರಿಕರಗಳು ದುಪ್ಪಟ್ಟಾಗಿವೆ (ಸಾರಿಗೆಯೇ ಮೊದಲುಗೊಂಡ). ಹೀಗಾಗಿ ಉಳಿಸುವ ಜನರ ಸಾಮರ್ಥ್ಯ ಕಡಿಮೆ ಆಗಿದೆ. ಆದ್ದರಿಂದ, ನಮ್ಮ ಹಿರಿಯರ ಜೀವನಕ್ಕಿಂತ ಅಧೋಗತಿಗೆ ಹೋಗುತ್ತಿದ್ದೇವೆ.
ದೇವಸ್ಥಾನದ ಆದಾಯ ಗಮನಿಸಿ (ಚಿತ್ರದಲ್ಲಿ ಕೊಟ್ಟಿದೆ - ಇದು ಬರೀ ದೇಣಿಗೆ ಭೂಮಿ ಇಂದ ಬಂದದ್ದು ). ವಾರ್ಷಿಕ  ೩೦೦೦ ಗದ್ಯಾಣ. ಅಂದರೆ ೧೨೦೦೦ ಗ್ರಾಂ ಚಿನ್ನ. ಇದರ ಮೌಲ್ಯ ೩೬,೦೦೦,೦೦೦ ಅಂದರೆ ೩.೬ ಕೋಟಿ ರೂಪಾಯಿ. ಇಷ್ಟು ವರಮಾನ ನಮ್ಮ ಸೋಮನಾಥಪುರದ ಒಂದು ದೇವಸ್ಥಾನಕ್ಕೆ ವಾರ್ಷಿಕವಾಗಿ ಬರುತ್ತಿತ್ತು. ಇವತ್ತು ೧೦೦೦ ರೂ ದೇವಸ್ಥಾನಕ್ಕೆ ಕೊಟ್ಟು, ಮನೆ ಮಂದಿಯೆಲ್ಲ, ಗರ್ಭ ಗುಡಿಯಲ್ಲಿ ಕೂತು, ೩ ತಾಸು ಜನರಿಗೆ ದೇವರೇ ಕಾಣದಿರುವಂತೆ ಮಾಡುತ್ತಾರೆ. ಒಂದು ೫೦೦ ರೂ, ಟ್ಯೂಬ್ ಲೈಟ್ ಕೊಟ್ಟು ಅದರ ಅರ್ಧ ಬೆಳಕು ಕಾಣದಂತೆ ಅಕ್ಷರ ಕೆತ್ತಿಸಿರುತ್ತಾರೆ. ವಾರ್ಷಿಕ ೩.೬ ಕೋಟಿ ಆದಾಯ ಬರುವಂಥ ಭೂಮಿ ಕೊಟ್ಟ ಪುಣ್ಯಾತ್ಮ ಯಾರು ಅಂತ ಸೋಮನಾಥಪುರದ ಮಂದಿಗೆ ಇಂದು ಗೊತ್ತಿರುವುದಿಲ್ಲ. ಈ ರೀತಿ ಜನ ಅಸಡ್ಡೆ ಮಾಡಿದ್ದರಿಂದಲೇ ಕೋಟ್ಯಂತರ ಬೆಲೆ ಬಾಳುವ ದೇವಸ್ಥಾನದ ಭೂಮಿ ಇಂದು ಪರರ ಪಾಲಾಗಿದೆ. ದೇವಸ್ಥಾನ ಹಾಳು ಕೊಂಪೆಯಂತೆ ಬಿದ್ದಿದೆ.
ಕರ್ನಾಟಕದಲ್ಲಿ, ಮೈಸೂರು ಮಹಾರಾಜರ ಆಡಳಿತ ಇದ್ದಿದ್ದರಿಂದ, ಬ್ರಿಟಿಷರು ದೇವಸ್ಥಾನದ ಭೂಮಿ ಹಾಗೂ ಜನರ ಆದಾಯ ಕೀಳುವುದಕ್ಕೆ ಸಾಧ್ಯ ಆಗಿರಲಿಲ್ಲ . ಬ್ರಿಟಿಷರಿಗೆ ಕಪ್ಪಾ ಕೊಡಬೇಕಾಗಿದ್ದರಿಂದ, ಎಲ್ಲ ಜನಗಳ ಮೇಲೂ ತೆರಿಗೆ ಹೊರೆ ಜಾಸ್ತಿ ಬೀಳುತಿತ್ತು. ಆದರೆ, ಆ ತೆರಿಗೆ ಎಲ್ಲರ ಮೇಲೂ ಅವರ ಆದಾಯಕ್ಕೆ ತಕ್ಕಂತೆ ಸಮಾನವಾಗಿ ಬೀಳುತಿದ್ದರಿಂದ, ಜನರಲ್ಲಿ ಬೇಧ ಭಾವ ಬರದೇ ಅದರ ಪ್ರಭಾವವೂ ಅಷ್ಟಾಗಿ ಗೋಚರವಾಗಿ ಕಾಣುತ್ತಿರಲಿಲ್ಲ. ಜನರ ಆದಾಯಕ್ಕೆ ಯಾವುದೇ ತೊಂದರೆ ಬಂದಿರಲಿಲ್ಲ ಹಾಗೂ ಸಾರ್ವಜನಿಕ ಭ್ರಷ್ಟಾಚಾರ ಇರಲಿಲ್ಲ. ಹೊಯ್ಸಳರ ಕಾಲದ ಸಮೃದ್ಧ ಜೀವನ ಭಾರತ ಸ್ವತಂತ್ರ ಸಂಗ್ರಾಮದ ವರೆಗೂ ಕರ್ನಾಟಕದಲ್ಲಿ ಬಹಳ ಮಟ್ಟಿಗೆ  ಇತ್ತು. ಆದ್ಧರಿಂದಲೇ ಭಾರತದ ಬೇರೆ ಭಾಗಗಳಿಗೆ ಹೋಲಿಸಿದರೆ ಕರ್ನಾಟಕ ಈಗಲೂ ಸಮೃದ್ದವಾಗಿರುವಂತೆ ಕಾಣುತ್ತದೆ.
ಈ ವ್ಯವಸ್ಥೆಯನ್ನ ಪ್ರಜಾಪ್ರಭುವತ್ವ ಸರ್ಕಾರ "ಉಳುವವನಿಗೆ ಭೂಮಿ" ಅನ್ನುವ ಹೆಸರಿನಲ್ಲಿ ಹಾಗೂ ದೇವಸ್ಥಾನಗಳನ್ನು ಮುಜರಾಯೀ ಇಲಾಖೆಯ ಸುಪರ್ದಿಗೆ ಪಡೆಯುವುದರಿಂದ ಗಧಾ ಪ್ರಹಾರ ಮಾಡಿತು. ಈ ರೀತಿ ಮಾಡಿದ್ದರಿಂದಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಸಾಮಾಜಿಕ ಸೌಲಭ್ಯಕ್ಕಾಗಿ ಸರ್ಕಾರವನ್ನೇ ಅವಲಂಬಿಸುವಂತೆ ಮಾಡಲಾಯಿತು. ಈ ರೀತಿ ಮಾಡಿ ಜನರ ಆದಾಯದ ಮೂಲದಲ್ಲೇ ಕಡಿತ ಮಾಡಲಾಯಿತು. ಈಗ ಸಮಸ್ಯೆಗಳಿಗೆ ಪರಿಹಾರ ಕೊಡಲಾಗದೆ, ಎಲ್ಲದಕ್ಕೋ ಸರ್ಕಾರವನ್ನು ಏಕೆ ಅವಲಂಬಿಸಿತ್ತೀರಾ, ನಿಮ್ಮ ಊರಿನ ಉದ್ದಾರ ನೀವೇ ಯಾಕೆ ಮಾಡಬಾರದು ಅನ್ನುವ ಪ್ರಶ್ನೆ ಕೇಳಲಾಗುತ್ತಿದೆ.
ಮುಂಚೆ ಅದನ್ನೇ ಮಾಡುತ್ತಿದ್ದದ್ದು. ತುಂಬಾ ಕಷ್ಟ ಅಂದರೆ ಮಾತ್ರ ಜನ ರಾಜರ ಬಳಿ ಸಹಾಯಕ್ಕೆ ಮೊರೆ ಇಡುತ್ತಿದ್ದದ್ದು. ಅದೂ ಒಂದೋ ಎರಡು ವರ್ಷ "ಬರಕ್ಕಾಗಿ" "ಕರ" ಮನ್ನಾ ಮಾಡಲು ಯಾಚಿಸುತ್ತಿದ್ದದ್ದು . ಸಹಾಯದ ಹಣ ಕೊಡಿ ಅಂತ ಅಲ್ಲ. ಇಂದಿನಂತೆ ರೇಷನ್ ಆಗಲಿ ಅಥವಾ ಕಡಿಮೆ ದುಡ್ಡಿನ ಸರ್ಕಾರದ ಊಟವಾಗಲಿ ಜನ ಯಾವತ್ತೂ ಕೇಳಿರಲಿಲ್ಲ. ಅನ್ನ ಛತ್ರ ದಾರಿಹೋಕರಿಗೆ ಮಾತ್ರ ಇದದ್ದು. ಜನ ಭಿಕ್ಷುಕರಂತೆ ತಮ್ಮ ಊರಿನದೇ ಅನ್ನ ಛತ್ರದಲ್ಲಿ ಉಣ್ಣಲಿಕ್ಕೆ ಬರುತ್ತಿರಲಿಲ್ಲ. ಈಗ ಸರ್ಕಾರದ ಕ್ಯಾಂಟೀನ್ ಮುಂದೆ ಸಾಲುಗಟ್ಟುವುದು ಸರ್ಕಾರದ "ಹೆಮ್ಮೆಯ ವಿಷಯವೋ" ಅಥವಾ "ಅಧ:ಪತನದ ಸೂಚಕವೋ"?