ಭಾನುವಾರ, ಮಾರ್ಚ್ 22, 2015

 ಪಿಕಲಾಟಕ್ಕೆ ಬಿದ್ದ ಮುಖ್ಯಮಂತ್ರಿ :

ಡಿ. ಕೆ. ರವಿ ಸಂಶಯಾತ್ಮಕ ಸಾವಿನ ತನಿಖೆ ಸಿ ಬಿ.ಐ ಒಪ್ಪಿಸ ಬೇಕಾಗಿಲ್ಲ  ಯಾಕೆ ?

ಭ್ರಷ್ಟಾಚಾರ ಸಮಾಜಕ್ಕೆ ಬಡಿದ ಒಂದು ಕಳಂಕ. ಅದರ ಕರಾಳ ಮುಖವೇ  ಡಿ. ಕೆ. ರವಿ ಎಂಬ ದಕ್ಷ ಅಧಿಕಾರಿಯ ಸಂಶಯಾಸ್ಪದ ಮರಣ.  ಭ್ರಷ್ಟಾಚಾರದ ವಿರೋಧಿಯಾದ  ರವಿಯವರು  ದಕ್ಷ, ಹಾಗೂ ಪ್ರಾಮಾಣಿಕ ಎಂಬುದರಲ್ಲಿ ಅವರ ಮರಣಾನಂತರ ಅವರ ಮರಣಕ್ಕೆ ಕಾರಣ ರಾದವರನ್ನು ಹಿಡಿದು ಶಿಕ್ಷಸಿ ಎಂಬ ಬೇಡಿಕೆಗೆ ಪಕ್ಷ ಬೇದ ಮರೆತು  ಜಾತಿ ಮತ ಮರೆತು ಸಿಗುತ್ತಿರುವ  ಬೆಂಬಲ.

ನಮ್ಮ ಆಡಳಿತವೆಂಬ ಯಂತ್ರವೇ  ಭ್ರಷ್ಠಾಚಾರದ ಬೆನ್ನೆಲುಬಾಗಿರುವಾಗ  ಭ್ರಷ್ಟಾಚಾರವನ್ನು ನಿರ್ಮೂಲನೆ  ಮಾಡುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿ ಹೋರಾಟ ಮಾಡುವವರ ಪರಿಸ್ಥಿತಿಯೂ ಅಷ್ಟು ಸುರಕ್ಷಿತವಾಗಿಲ್ಲ.   ದಕ್ಷ ಪ್ರಾಮಾಣಿಕ ನಾಗಿಯೇ ನಾನು ಬದುಕುತ್ತೇನೆ ಎಂದರೆ ಯಾವಾಗಲೂ  ಕಷ್ಟ ತಪ್ಪಿದಲ್ಲ.
ಪ್ರಾಥಮಿಕ ವರದಿಯ ಪ್ರಕಾರ ರವಿಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಎಂಥವರು ಆತ್ಮಹತ್ಯೆ ಮಾಡುತ್ತಾರೆ. ಸಾಮಾನ್ಯವಾಗಿ ಪುಕ್ಕಲು ಸ್ವಭಾದವರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುವುದು  ಸಾದ್ಯ. ಯಾವುದೇ ಸಮಸ್ಯೆಗೆ ಪರಿಹಾರವೇ ಇಲ್ಲವೇನೋ ಎಂದಾಗ ಆ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ. ಎರಡನೆಯದಾಗಿ ನೋಡುವುದಾದರೆ ಮಾಡ ಬಾರದ ತಪ್ಪನ್ನು ಮಾಡಿ ಆ ತಪ್ಪಿನಿಂದ ಆದ ತೊಂದರೆ ಕಷ್ಟಗಳಿಂದ ತಪ್ಪಿಸಿಕೊಳ್ಳು ಆಗದಾಗ  ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.  ಮನುಷ್ಯ ಎಂದ ಮೇಲೆ  ತಪ್ಪು ಆಗುವುದು ಸಹಜ. ತನ್ನಿಂದ ತಪ್ಪು ಆಗಿದೆ ಎಂದು ಅರಿವಾಗುವುದು  ಎಂದರೆ ಆತ್ಮಸಾಕ್ಷಿ ದೇಹವನ್ನು ಕೇಳುತ್ತದೆ ನೀನು ಮಾಡಿದ್ದು ಸರಿಯಾ? ಎಂದು  ಅಂದರೆ ಮನುಷ್ಯ ಪ್ರಜ್ಞೆ ಇರುವವನು ಯಾವತ್ತೂ ಆತ್ಮಹತ್ಯೆ ಮಾಡುವುದೇ ಇಲ್ಲ.  ಈ ಕಾರಣವನ್ನು ಮುಂದಿಟ್ಟುಕೊಂಡರೆ ರವಿ ಒಬ್ಬ ದಕ್ಷ  ಅಧಿಕಾರಿ ಸಮಾಜ ಕಂಟಕ ಭ್ರಷ್ಟಾಚಾರ ಮಾಡುವವರಿಗೆ ಸಿಂಹ ಸ್ವಪ್ನವಾಗಿದ್ದರು. ಅಲ್ಲದೆ ಅವರು  ತನ್ನ  ಅಧಿಕಾರದ  ಯಾವುದೇ ಹುದ್ದೆಯಲ್ಲಿಯೂ ಅವರು ಭ್ರಷ್ಟರನ್ನು ಸೆದೆ ಬಡೆಯುವುದೆ ಮೂಲ ಮಂತ್ರವಾಗಿಸಿಕೊಂಡಿದ್ದರು.  ಅಲ್ಲದೆ ನೂರಾರು ಭ್ರಷ್ಟರ ವಿರುದ್ಧ ಚಾಟಿ ಬೀಸಿದ್ದರು. ಹೀಗಾಗಿ ಕೆಲವು ಸಂದರ್ಭಗಳಲ್ಲಿ ನಿಷ್ಠುರವಾಗಿ ನಡೆದೇ ನಡೆದುಕೊಳ್ಳುವ ಪರಿಸ್ತಿತಿಯಿಂದಾಗಿ  ಭ್ರಷ್ಟರ ಕೆಂಗಣ್ಣಿಗೆ ಗುರಿಯಾಗಿರುವುದರಲ್ಲಿ ಸಂಶಯವಿಲ್ಲ, ಈ ಎಲ್ಲ ಅಂಶಗಳನ್ನು ಗಮನ ವಿರಿಸಿಕೊಂಡು ಯೋಚಿಸುವುದಾದರೆ  ಇದು ಆತ್ಮಹತ್ಯೆಯಲ್ಲ. ಒಂದು ಪಿತೂರಿ ಎಂದೇ ಹೇಳುವುದು. ಸಾಧ್ಯ.

ಭ್ರಷ್ಟಾಚಾರವು ಹುಟ್ಟಿ ಬೆಳೆದುದೇ ರಾಜಕೀಯದಲ್ಲಿ.   ಸ್ವಾತಂತ್ತ್ಯದ ನಂತರಕ್ಕೆ  ಅಧಿಕಾರ ಬಂದ ನಮ್ಮ ಸರಕಾರಗಳಲ್ಲಿ  ಆಧಿಕಾರ ಮತ್ತು ಅದರಿಂದ ಸಿಗುವ ಸುಖ: ಸಂಪತ್ತು  ಸವಲತ್ತುಗಳು  ತಲೆ ಗೇರಿದ ಪಿತ್ತದಿಂದ ಸಮಾಜ ಸಂಸ್ಕೃತಿ, ಸಂಸ್ಕಾರಗಳನ್ನು ಭದ್ರವಾಗಿ ಹೂತು ಅಧಿಕಾರ ಪರಂಪರೆಯೇ ಸ್ಥಾಪಿಸಿಕೊಂಡಿತು. ಆಧಿಕಾರ ಇದಲ್ಲಿ ಭಟ್ಟಂಗಿಗಳು, ಚೇಲಾಗಳು ,  ಪರಾಕು ಹೇಳುವವರು ಹೀಗೆ ಅಧಿಕಾರಗಳ ವರ್ಗಗಳು ಹುಟ್ಟಿಕೊಂಡು ಅಧಿಕಾರದ ಸುತ್ತಲೂ ಬೇಲಿಯನ್ನು ಹಾಕಿ ತಮ್ಮ ಅಧೀನ ಗೊಳಿಸಿಕೊಂಡವು.  ಹೀಗಾಗಿ ರಾಜಕೀಯದಲ್ಲಿ  ಇದ್ದು ತಾವು  ಐಷಾರಮಿ ಜೀವನ ಮಾಡಲು ಸಾಧ್ಯವೆನ್ನುವ ವರ್ಗ ತನ್ನ ಆಧಿಕಾರವನ್ನು ಉಳಿಸಿಕೊಳ್ಳಲು ಈ  ಅಧಿಕಾರಕ್ಕೆ ಸಂಬಂಧಿಸಿದ ಪರಿವಾರಗಳನ್ನು ಸಾಕಲೇ ಬೇಕಾಯಿತು.   ಹಾಗಾಗಿ  ಅಧಿಕಾರದಲ್ಲಿರುವಾಗ ತನ್ನ ಪರಿವಾರ ಏನು ಹೇಳುತ್ತದೆ ಅವರ ಬೇಕು ಬೇಡಗಳೇನು ಎಂಬುದನ್ನು ಪೂರೈಸಲು ಅಧಿಕಾರದ ಚೌಕಟ್ಟನ್ನು ಮುರಿದು ಅಡ್ಡದಾರಿಯಲ್ಲಿ  ಸಾಗಬೇಕಾಗಿ ಬಂದಾಗ  ಅಧಿಕಾರದಲ್ಲಿರುವವರಿಗೂ ಪಿಕಲಾಟ ( ಇದಕ್ಕೆ ಉದಾಹರಣೆ ಹಿಂದಿನ ಬಿ.ಜೆ.ಪಿ. ಸರಕಾರ)  ಭ್ರಷ್ಟರ ವಿರುದ್ಧ   ದ್ವನಿ ಎತ್ತುವವರಿಗೂ ಅಪಾಯ ತಪ್ಪಿದಲ್ಲ.
ಇಂತದ ಸಂದರ್ಭದಲ್ಲಿ ತನ್ನ ಆಧಿಕಾರಕ್ಕೆ ಒಳಪಟ್ಟಿರುವವವರಿಂದ  ನ್ಯಾಯ ಸಿಗುವುದೆಂಬ ಭರವಸೆ ಇಡುವಂತಿಲ್ಲ. ಹಾಗಾಗಿ ಸಿ.ಬಿ.ಐ. ತನಿಕೆಯೇ ಆಗ;ಲಿ ಎಂದು ಎಲ್ಲರೂ ಬಯಸುವುದು.

ಡಿ. ಕೆ. ರವಿಯವರು ಮರಣ ಹೊಂದಿದರು ಎನ್ನುವುದಕ್ಕಿಂತಲೂ  ಒಬ್ಬ ಸಿಪಾಯಿ ಜೀವ ಹಂಗು ತೊರೆದು ದೇಶಕ್ಕೆ ಹುತಾತ್ಮರಾಗು ವಂತೆ ಹುತಾತ್ಮರಾದರು ಎಂದು ಹೇಳಿ ಗೌರವಿಸುವುದೇ ಸರಿ.  ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ಸ್  ಹಾಗೂ ಸಿದ್ದರಾಮಯ್ಯನವರ ನಡವಳಿಕೆಯೂ ಈ ದಿಸೆಯಲ್ಲಿ ಸಂಶಯಾಸ್ಸದವಾಗಿಯೇ ಕಾಣುತ್ತದೆ.  ಅವರು ಯಾರನ್ನೋ ರಕ್ಷಣೆ ಮಾಡುವ ಸಲುವಾಗಿ  ಹೆಚ್ಚಿನ ಗಮನ ಹರಿಸಿ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. 

ಒಬ್ಬ ಪ್ರಾಮಾಣಿಕ ವ್ಯಕ್ತಿ ಅಪರಂಜಿಗೆ ಸಮ. ಅಂತಹ ವ್ಯಕ್ತಿಯ ಮೇಲೆ ಆದ ಅನ್ಯಾಯವನ್ನು  ಯಾರೂ ಸಹಿಸುವುದಿಲ್ಲ ಸಹಿಸಲೂ ಬಾರದು. ಅವರ ಸಾವಿಗೆ ಕಾರಣ ಏನು? ಸಾವಿಗೆ ಕಾರಣರಾದವರನ್ನು ಶಿಕ್ಷಿಸದೇ  ಬಿಡಬಾರದು.  ಸಿ. ಬಿ. ಐ. ತನಿಕೆ ಕಾರ್ಯ ವಿಳಂಬವಿಲ್ಲದೆ ಸಾಗುವಂತೆ ಸಹಕರಿಸಿ   ಸತ್ಯವನ್ನು ಬಯಲಿಗೆಳೆಯುವುದು ಅಧಿಕಾರ ಸೂತ್ರ ಹಿಡಿದವರ ಮೊದಲ ಕರ್ತವ್ಯ  ಎಂಬುದನ್ನು ನೆನಪಿಸಕೊಳ್ಳ ಬೇಕಾದ ಅಗತ್ಯವಿದೆ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ