ಮಾತೃಭಾಷೆ ಮನುಷ್ಯನ ಉಸಿರು
ವಿಶ್ವದಾದ್ಯಂತ ಸುಮಾರು ೬೦೦೦ ಬಾಷೆಗಳಿವೆ. ವಿಶ್ವದಾದ್ಯಂತ ವಿವಿಧ ಸಮುದಾಯಗ ಬಹುಭಾಷಾ ವೈಶಿಷ್ಟ್ಯವನ್ನು ಉಳಿಸುವ ಹಾಗೂ ಬೆಳೆಸುವ ಉದ್ದೇಶದಿಂದ ವಿಶ್ವದ ಎಲ್ಲಾ ಭಾಷೆಗಳನ್ನು ಸಂರಕ್ಷಿಸುವ ಸಲುವಾಗಿ ಫೆಬ್ರವರಿ ೨೧ ರಂದು ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ, ವಿಶ್ವಸಂಸ್ಥೆ ಹಾಗೂ ಯುನೆಸ್ಕೋ ಜೊತೆಯಾಗಿ ವಿಶ್ವಜ ಜನರೆಲ್ಲಾ ಮಾತೃಭಾಷೆದಿನವನ್ನಾಗಿ ಆಚರಿಸುವಂತೆ ೧೯೯೯ ರಲ್ಲಿಯೇ ಕರೆನೀಡಿತ್ತು,. ಅಲ್ಲದೆ ವಿಶ್ವಸಂಸ್ಥೆಯು ೨೦೦೮ನೇ ವರ್ಷವನ್ನು 'ವಿಶ್ವ ಭಾಷೆಗಳ ವರ್ಷ` ಎಂದೂ ಘೋಷಿಸಿತ್ತು.
ಮನುಷ್ಯನ ಹುಟ್ಟು ಎಷ್ಟು ಸಹಜವೋ ಮಾತೃಭಾಷೆಯೂ ಅಷ್ಟೇ ಸಹಜ. ಮಾತೃಭಾಷೆ ಎಂದರೆ ನಾವು ಓದುವ - ಬರಿಯುವ - ಹಾಗೂ ಉದ್ಯೋಗಕ್ಕಾಗಿ - ಸಂಪಾದನೆಗಾಗಿ ಕಲಿಯುವ ಭಾಷೆ ಎಂಬ ಭ್ರಮೆ ಇದೆ.ಹಾಗಾಗಿ ನಾವು ಕನ್ನಡ ಮಾತೃ ಭಾಷೆಯಾದರೂ ಕಲಿಯುವುದು ಮಾತ್ರ ಇಂಗ್ಲಿಷ್ ಭಾಷೆಯಲ್ಲಿಯೇ. ನಮ್ಮ ವಿದ್ಯಾಭ್ಯಾಸ ಇಂಗ್ಲಿಷಿನಲ್ಲಿಯೇ ಆದರೆ ಉತ್ತಮ ಉದ್ಯೋಗ ಸಿಗುವುದು. ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ದೊರಕುವುದು ಎಂಬ ಚಿಂತನೆ ಹಾಗು ನಂಬಿಕೆ ಬೆಳೆಯುತ್ತಿದೆ. ಹಾಗಾಗಿ ನಾವು ಮಾತೃಭಾಷೆಯನ್ನು ಉಪೇಕ್ಷೇ ಮಾಡುತ್ತೇವೆ. ಕೆಲವರಿಗೆ ನಮ್ಮನ್ನು ನಾವು ಗುರುತಿಸಿಕೊಳ್ಳಲು ಇಂಗ್ಲಿಷ್ ಭಾಷೆಯೇ ನಮ್ಮ ವಿದ್ಯೆ ಹಾಗು ಬುದ್ಧಿವಂತಿಕೆಯ ಲಕ್ಷಣ ಎಂಬ ನಂಬಿಕೆಯಿಂದ ಮಾತೃಭಾಷೆಯನ್ನು ಅಷ್ಟಾಗಿ ಬಳಸುವುದಿಲ್ಲ. ಆದರೆ ಮಾತೃ ಭಾಷೆಯೇ ನಿಜವಾಗಿಯೂ ಅರ್ಥವಾಗುವ ಭಾಷೆ.
ಭಾಷೆ ಎಂದರೆ ಹೃದಯದಲ್ಲಿರುವ ಸ್ಪಂಧನ. ಅದು ತಾಯಿ ಮತ್ತು ಮಗುವಿನ ಬಂಧನ. ಹಾಗಾಗಿ ಮಾತೃಭಾಷೆ ಎಂದರೆ ನಾವು ಮಾತುಗಳನ್ನು ಶಬ್ದಗಳ ರೂಪದಲ್ಲಿ ವ್ಯಕ್ತಗೊಳಿಸುವದರೊಂದಿಗೆ ಅದು ಹೃದಯದಲ್ಲಿನ ಸ್ಫಂಧನವನ್ನು ನೇರವಾಗಿ ಅದೇ ಭಾಷೆ ಮಾತನಾಡುವ ವ್ಯಕ್ತಿಯೊಂದಗೆ ಬೆಸೆದುಕೊಳ್ಳುತ್ತದೆ. ಮಾತೃಭಾಷೆ ಎಂದರೆ ಹುಟ್ಟಿನಿಂದ ಪರಂಪರೆಯಲ್ಲಿ ಬಂದ ಭಾಷೆ. ಹುಟ್ಟಿಸಿದ ತಂದೆ - ತಾಯಿಯನ್ನು ಹೇಗೆ ಬದಲಾಯಿಸುವುದಾಗಲೀ ಅವರ ಜೊತೆಗಿನ ನೈಜ ಸಂಬಂಧವನ್ನು ಹೇಗೆ ಅಲ್ಲಗೆಳೆಯಲು ಸಾಧ್ಯವಿಲ್ಲವೋ ಹಾಗೆ ಮಾತೃ ಭಾಷೆಯನ್ನೂ ತೊರೆಯುವುದಾಗಲೀ ಬದಲಾಯಿಸುವುದಾಗಲೀ ಇನ್ನೊಂದನ್ನು ಸ್ವೀಕರಿಸುವುದಾಗಲೇ ಅಥವಾ ಮೇಲ್ಮಟ್ಟದ ಭಾಷೆ,, ಕೀಳ್ಮಟ್ಟದ ಭಾಷೆ ಎಂದಾಗಲಿ ಇಲ್ಲ. ಮಾತೃ ಭಾಷೆ ಮನುಷ್ಯನ ಹೃದಯದ ಭಾಷೆ. ತಾಯಿ ತಂದೆಯಿಂದ ಹರಿದು ಬರುವ ಭಾವನಾತ್ಮಕ ಸಂವಹನವೇ ಆ ವ್ಯಕ್ತಿಯ ಮಾತೃಭಾಷೆ.
ಭಾಷೆ ಎಂದರೆ ಜೀವಿಯೊಂದು ಪ್ರಕಟಿಸವು ಅದರ ಭಾವನೆ. ಅದು ಆ ಜೀವಿಗೆ ಅನುಗುಣವಾಗಿಯೇ ಇರುತ್ತದೆ. ನನಗೆ ನೀರು ಬೇಕು ಎಂದು ಶಬ್ದಗಳಲ್ಲಿ ಹೇಳುವುದು ಹಾಗೂ ಸಂಜ್ಞೆಯಲ್ಲಿ ಹೇಳಿದಾಗ ಅವನ ಹೃದಯದ ಭಾವನೆಯಾದ ಬಾಯಾರಿಕೆ ಎಂಬ ಭಾವನೆ ಪ್ರಕಟವಾಗುವುದು. ಹಾಗಾಗಿ ಇಲ್ಲಿ ಭಾಷೆಯ ಅರ್ಥ ''ಬಾಯಾರಿಕೆ ತಣಿಸಲು ನೀರು ಬೇಕು`` ಅದು ಕೇಳುಗನಿಗೆ ಅರ್ಥವಾಗುವ ಭಾಷೆಯಲ್ಲಿಯೇ ಇರಬೇಕು. ಕೇಳುಗನ ಭಷೆ ಬೇರೆಯಾಗಿ ಅವನಿಗೆ ಬಾಯಾರಿದವ ಹೇಳುವ ಮಾತು ಅರ್ಥವಾಗದಿದ್ದರೆ, ಅವನು ಅದನ್ನು ಪ್ರಕಟಿಸುವುದು ಸಂಜ್ಞೆಯ ಮೂಲಕವೇ. ಹಾಗಾಗಿ ಭಾಷೆ ಎನ್ನುವುದು ಭಾವನೆಗಳ ಪ್ರಕಟವೇ ಹೊರತು ಶಬ್ದ ಯಾವುದು ಭಾಷೆ ಯಾವುದು ಮುಖ್ಯವಲ್ಲ.
ಹಾಗಾಗಿ ಆರ್ಥವಾಗದ ಭಾಷೆಯನ್ನು ಅರ್ಥ ಮಾಡಿಸಿಕೊಂಡು ಸಂವಹಿಸುವ ರೀತಿಯೇ ಮಾತೃಭಾಷೆಯನ್ನು ಉಪೇಕ್ಷಿಸಿ ಇತರ ಭಾಷೆಯನ್ನು ಬಳಸಿ ಸಂವಹಿಸುವುದು. ಈ ಕ್ರಿಯೆಯಲ್ಲಿ ಹೇಳಿದ ಅಥವಾ ಕೇಳಿದ ಯಾಂತ್ರಿಕವಾಗಿಯೇ ಕೆಲಸ ಮಾಡುತ್ತದೆ ವಿನಹಃ ಹೃದಯುವನ್ನು ತಲುಪುದಿಲ್ಲ. ಹಾಗಾಗಿಯೇ ತಂದೆ - ತಾಯಿ - ಮಕ್ಕಳು - ಅಣ್ಣ - ತಂಗಿ - ಬಂದು ಬಳಗ ಎಲ್ಲವೂ ಯಾಂತ್ರಿಕವಾಗಿಯೇ ಇರುತ್ತದೆಯೇ ವಿನಹ: ಜೀವನದ ಮೂಲ ತತ್ವವಾದ ಪ್ರೀತಿ, ವಿಶ್ವಾಸ, ನಂಬಿಕೆಗಳ ತಳಹದಿಯೇ ಮರೆಯಾಗಿ ಜೀವನದಲ್ಲಿ ಕೊಡು - ಕೊಳ್ಳು ಎನ್ನುವ ಭಾಚನೆ ಬೆಳೆಯುತ್ತದೆ. ಈಗಿನ ದಿನಗಳಲ್ಲಿ ಕಾಣುವ ಎಲ್ಲಾ ಅನರ್ಥಕ್ಕೆ ಇದೇ ಮೂಲ ಕಾರಣ. ಎಲ್ಲದರಲ್ಲೂ ಲೆಕ್ಕಾಚಾರ ತಲೆ ಎತ್ತಿ ಹೃದಯಾತ್ಮಕ ಸಂಬಂಧವೇ ಉಳಿಯದೇ ಜೀವನವೇ ಶೂನ್ಯ ಎಂಬ ಭಾವನೆಯೇ ಮನುಷ್ಯನಲ್ಲಿ ಬೆಳೆಯುತ್ತದೆ.
ಪ್ರಕೃತಿಯಲ್ಲಿ ಸಹಜವಾಗಿ ಇರುವ ಒಳ್ಳೆಯದು ಕೆಟ್ಟದುಗಳ ನಡುವೆ ಬದುಕುವ ಮನುಷ್ಯ ತಾನು ಕೆಟ್ಟದನ್ನು ಮಾಡುವಾಗ ಅವನ ಹೃದಯದಲ್ಲಿ ತಂದೆ ತಾಯಿ ಬಂದು ಬಳಗದವರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದರೆ ಅವನಲ್ಲಿ ಕೆಲವು ಕ್ಷಣವಾದರೂ ನಾನು ಈ ತಪ್ಪು ಕೆಲಸಮಾಡಿದರೆ ನನ್ನ ಪ್ರೀತಿಯ ತಂದೆ - ತಾಯಿಗೆ - ಬಂದು ಬಳಗಕ್ಕೆ ಹೇಗೆ ಮುಖ ತೋರಿಸಲಿ ಎಂಬ ಭಾವನೆಯು ಅವನನ್ನು ಎಚ್ಚರಿಸುತ್ತದೆ. ಹಾಗಾಗಿ ಮಾತೃಭಾಷೆಯೇ ಅವನ ಹೃದಯದಲ್ಲಿ ಬೆಸೆದು ಕೊಂಡಿದ್ದರೆ ಯಾವಾಗಲೂ ಅವನ ಭಾವನೆಯನ್ನು ನಿಯಂತ್ರಿಸುತ್ತದೆ.
ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಬೇಕು ಎಂಬುದೂ ಚರ್ಚೆಗೆ ಒಳಪಡುವ ವಿಷಯವೇ ಅಲ್ಲ. ಕೋರ್ಟುಗಳೇ ಆಗಲೀ ಯಾವುದೇ ಸರಕಾರವೇ ಅಗಲಿ ಅದನ್ನು ಪ್ರಶ್ನಿಸುವದೂ ಅರ್ಥವಿಲ್ಲದ ಮಾತು. ನಮ್ಮಲ್ಲಿ ಇಂದು ಇಂಗ್ಲಿಷ್ ಮಾದ್ಯಮದ ಶಾಲೆಗಳಿವೆ. ಇಂಗ್ಲಿಷ್ ಮಾದ್ಯಮದ ಶಾಲೆಗಳನ್ನು ತೆರೆಯಲು ಅನುಮತಿ ನೀಡುವ ಬಗ್ಗೆ ಹಲವಾರು ತಕರಾರುಗಳ ನಡುವೆಯೂ ಕೆಲವರು ನ್ಯಾಯಾಲದ ಕಟ್ಟೆ ಹತ್ತಿದವರೂ ಇದ್ದಾರೆ. ಇವೆರಲ್ಲೂ ಜನರಿಗೆ ಒಳ್ಳೆಯದು ಮಾಡುವ ಹೆಸರಿನಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಸ್ವಾತಂತ್ರೈ ಬಂದು ೬೮ ವರ್ಷಗಳಾದರೂ ನಮ್ಮ ಮಕ್ಕಳು ಮಾತೃ ಭಾಷಯಲ್ಲಿಯೇ ಓದಲಿ ಎಂದು ಹೇಳುವ ಯಾವ ಸರಕಾರವೂ ಇಲ್ಲ. ಹಾಗೆಂದು ಇಂಗ್ಲಿಷ್ ಆಗಲಿ ಇನ್ನಿತರ ಭಾಷೆಯನ್ನು ನಾವು ಓದಲೇ ಬಾರದು ಎಂದು ಅಲ್ಲ. ಪ್ರಾಥಮಿಕ ಹಂತದಲ್ಲಿ (೭ನೇ ತರಗತಿಯ ವರೆಗೆ) ಕನ್ನಡದಲ್ಲಿಯೇ ಓದಲಿ. ಈ ಹಂತದಲ್ಲಿ ಭಾಷೆಯನ್ನೇ ಅದರ ವ್ಯಾಕರಣಕ್ಕೇ ಒತ್ತು ಕೊಟ್ಟು ಕಲಿಯಲಿ. ಆಮೇಲಿನ ವಿದ್ಯೆ ಪ್ರತಿಯೊಬ್ಬನೂ ಅವನ ಆಯ್ಕೆಯಂತೆ ಓದುವುದು ಉತ್ತಮ. ಇದರಿಂದಾಗಿ ಕನ್ನಡವೂ ಸರಿಯಾಗಿ ಬರುವುದು. ಇಲ್ಲವಾದರೆ ಅತ್ತ ಕನ್ನಡವೂ ಸರಿಯಾಗಿ ಬರದೆ ಇತ್ತು ಇಂಗ್ಲಿಷೂ ಸರಿಯಾಗಿ ಬರದೇ ಮನುಷ್ಯನ ಬದುಕೇ ಅತಂತ್ರವಾಗುವುದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ