ಭಗವದ್ಗೀತೆ ಮತ್ತು ಅಹಂಕಾರಿಗಳು
ಭಗವದ್ಗೀತೆಯದು ಸೂಕ್ಷ್ಮ ಶರೀರ - ಅಹಂಕಾರಿಗಳದು ಸ್ಥೂಲ ಶರೀರ
ಭಗವದ್ಗೀತೆಯ ವಿರುದ್ಧ ಹೇಳಿಕೆ ನೀಡಿರುವ ಅಥವಾ ಭಗವದ್ಗೀತೆಯನ್ನು ತೆಗಳುವುದು ಎಂದರೆ ತಮ್ಮನ್ನು ತಾವು ತೆಗಳುವುದ ಎಂದು ಅರ್ಥ. ಯಾಕೆಂದರೆ ಭಗವದ್ಗೀತೆ ಸೃಷ್ಟಿಯಾದಾಗ ಅಥವಾ ಅದನ್ನು ಬರೆದಾಗ ಅದು ಜಾತೀ ಆಧಾರದಿಂದ ವಾಗಲೀ ಧರ್ಮ ಆಧಾರದಿಂದವಾಗಲೀ ಉಂಟಾಗಲಿಲ್ಲ. ಯಾಕೆಂದರೆ ಆಗ ಈಗಿನ ಹಾಗ ಧಾರ್ಮಿಕ ಚಳುವಳಿಗಳೇ ಇರಲಿಲ್ಲ. ಆದರೆ ಈಗಿನ ವಾಸ್ತವದಲ್ಲಿ ಕೆಲವರಿಗೆ ತಮ್ಮನ್ನು ಒಬ್ಬ ಹೋರಾಟಗಾರನಾಗಿ ಗುರುತಿಸಿಕೊಂಡು ಬೆಳೆಯುವುದಕ್ಕೆ ಒಂದು ವೇದಿಕೆ ಅಷ್ಟೇ. ಒಬ್ಬರು ತೆಗಳುವುದು... ಇನ್ನೊಬ್ಬರು ಕೆರಳುವುದು ಯಾವ ತಳಹದಿಯ ಧರ್ಮ ?
ನಂಬಿಕೆಯೇ ಮನುಷ್ಯನ ಜೀವನದ ತಳಹದಿ. ಆದರೂ ಕೆಲವರು ಅಲ್ಲ ಎಂದು ವಾದ ಮಾಡುವವರೂ ಇದ್ದಾರೆ? ನಂಬಿಕೆ ಇಲ್ಲದಿದ್ದರೆ ಮನುಷ್ಯನ ಅಸ್ಥಿತ್ವವೇ ಇರುವುದಿಲ್ಲ. ಇದಕ್ಕೆ ಉದಾಹರಣೆ ತನ್ನ ತಂದೆಯನ್ನು ಪ್ರತಿಯೊಬ್ಬನೂ ಗುರುತಿಸುವುದು ತಾಯಿಯಿಂದ ಮಾತ್ರ ಸಾದ್ಯ. ಇದು ಕಣ್ಣಿಗೆ ಕಾಣದ ಸತ್ಯ. ಆದರೆ ತಾಯಿಯನ್ನು ಪ್ರತಿಯೊಬ್ಬರೂ ನಂಬುವಂತೆ ಹಾಗೆಯೇ ತಾಯಿ ಹೇಳಿದ್ದನ್ನೂ ನಂಬುತ್ತೇವೆ. ಆದುದರಿಂದ ಸತ್ಯ ಎನ್ನುವುದು ಎಷ್ಟು ವಾಸ್ತವೋ ಅಷ್ಟೇ ಕಣ್ಣಿಗೆ ಕಾಣವುದಿಲ್ಲ. ಈ ಸತ್ಯದ ಮುಂದೆಯೂ ಯಾರಾದರೂ ವ್ಯತಿರಿಕ್ತವಾಗಿ ವಾದ ಮಾಡುತ್ತಾರೆಂದರೆ ಅದು ಅವನಲ್ಲಿ ಇರುವ ಆಹಂಕಾರವೇ ಕಾರಣ. ಆಹಂಕಾರ ಇದ್ದವ ಸತ್ಯವನ್ನು ನಂಬುವುದಿಲ್ಲ. ಹಾಗೂ ಅವನು ಕಣ್ಣಿಗೆ ಕಂಡದ್ದನ್ನು ಮಾತ್ರ ಸತ್ಯವೆಂದು ನಂಬುತ್ತಾನೆ. ಆಹಂಕಾರ ಎಂದರೆ ಶರೀರವೇ ಪ್ರಧಾನವಾಗಿ ಇರುವ ನಂಬಿಕೆ. ಅಹಂ ಎಂಬ ಮಮಕಾರ , ಪ್ರೀತಿ. ಇವರೆಲ್ಲ ಶರೀರವನ್ನೇ ಮನುಷ್ಯ ಎಂದು ನಂಬಿಕೊಂಡು ಬದುಕನ್ನು ನಡೆಸುತ್ತಿರುತ್ತಾರೆ. ಇವರಿಗೆ ಶರೀರದ ಅಸ್ತಿತ್ವಕ್ಕೆ ಕಾರಣವೇನು ಎಂಬ ನಂಬಿಕೆಯೇ ಇವರಿಗೆ ಇರುವುದಿಲ್ಲ. ಕೇವಲ “ನಾನು”
ಮನುಷ್ಯನ ಶರೀರದ ಅಸ್ತಿತ್ವಕ್ಕೆ ಬೇಕಾಗುವ ಪ್ರಾಣವೇ ಮನುಷ್ಯನ ಅಸ್ತಿತ್ವ ಎಂಬ ಸತ್ಯವನ್ನು ಎಲ್ಲಿಯ ವರೆಗೆ ತಿಳಿಯುವುದಿಲ್ಲವೋ ಅಲ್ಲಿಯವರೆಗೆ ಇಂಥವರಿಗೆ ಭಗವದ್ಗೀತೆಯಾಗಲಿ ದೇವರಾಗಲೀ ಜಾತಿಯಾಗಲಿ, ಧರ್ಮವಾಗಲಿ ಅರ್ಥವಾಗುವುದೇ ಇಲ್ಲ. ಇಂಥವರು ಸಮಾಜದಲ್ಲೇ ಬ್ರಹ್ಮನ ಹಾಗೆ ನಾನೇ ಬ್ರಹ್ಮ ಎಂದು ತಿಳಿದು ಬ್ರಹ್ಮಸೃಷ್ಟಿಯನ್ನೇ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ನಿಜವಾಗಿಯೂ ಇದೊಂದು ಅಲಕ್ಷಿಸಬೇಕಾದ ವಿಚಾರ.
ನಂಬಿಕೆಯೇ ಮನುಷ್ಯನ ಜೀವನದ ತಳಹದಿ. ಆದರೂ ಕೆಲವರು ಅಲ್ಲ ಎಂದು ವಾದ ಮಾಡುವವರೂ ಇದ್ದಾರೆ? ನಂಬಿಕೆ ಇಲ್ಲದಿದ್ದರೆ ಮನುಷ್ಯನ ಅಸ್ಥಿತ್ವವೇ ಇರುವುದಿಲ್ಲ. ಇದಕ್ಕೆ ಉದಾಹರಣೆ ತನ್ನ ತಂದೆಯನ್ನು ಪ್ರತಿಯೊಬ್ಬನೂ ಗುರುತಿಸುವುದು ತಾಯಿಯಿಂದ ಮಾತ್ರ ಸಾದ್ಯ. ಇದು ಕಣ್ಣಿಗೆ ಕಾಣದ ಸತ್ಯ. ಆದರೆ ತಾಯಿಯನ್ನು ಪ್ರತಿಯೊಬ್ಬರೂ ನಂಬುವಂತೆ ಹಾಗೆಯೇ ತಾಯಿ ಹೇಳಿದ್ದನ್ನೂ ನಂಬುತ್ತೇವೆ. ಆದುದರಿಂದ ಸತ್ಯ ಎನ್ನುವುದು ಎಷ್ಟು ವಾಸ್ತವೋ ಅಷ್ಟೇ ಕಣ್ಣಿಗೆ ಕಾಣವುದಿಲ್ಲ. ಈ ಸತ್ಯದ ಮುಂದೆಯೂ ಯಾರಾದರೂ ವ್ಯತಿರಿಕ್ತವಾಗಿ ವಾದ ಮಾಡುತ್ತಾರೆಂದರೆ ಅದು ಅವನಲ್ಲಿ ಇರುವ ಆಹಂಕಾರವೇ ಕಾರಣ. ಆಹಂಕಾರ ಇದ್ದವ ಸತ್ಯವನ್ನು ನಂಬುವುದಿಲ್ಲ. ಹಾಗೂ ಅವನು ಕಣ್ಣಿಗೆ ಕಂಡದ್ದನ್ನು ಮಾತ್ರ ಸತ್ಯವೆಂದು ನಂಬುತ್ತಾನೆ. ಆಹಂಕಾರ ಎಂದರೆ ಶರೀರವೇ ಪ್ರಧಾನವಾಗಿ ಇರುವ ನಂಬಿಕೆ. ಅಹಂ ಎಂಬ ಮಮಕಾರ , ಪ್ರೀತಿ. ಇವರೆಲ್ಲ ಶರೀರವನ್ನೇ ಮನುಷ್ಯ ಎಂದು ನಂಬಿಕೊಂಡು ಬದುಕನ್ನು ನಡೆಸುತ್ತಿರುತ್ತಾರೆ. ಇವರಿಗೆ ಶರೀರದ ಅಸ್ತಿತ್ವಕ್ಕೆ ಕಾರಣವೇನು ಎಂಬ ನಂಬಿಕೆಯೇ ಇವರಿಗೆ ಇರುವುದಿಲ್ಲ. ಕೇವಲ “ನಾನು”
ಮನುಷ್ಯನ ಶರೀರದ ಅಸ್ತಿತ್ವಕ್ಕೆ ಬೇಕಾಗುವ ಪ್ರಾಣವೇ ಮನುಷ್ಯನ ಅಸ್ತಿತ್ವ ಎಂಬ ಸತ್ಯವನ್ನು ಎಲ್ಲಿಯ ವರೆಗೆ ತಿಳಿಯುವುದಿಲ್ಲವೋ ಅಲ್ಲಿಯವರೆಗೆ ಇಂಥವರಿಗೆ ಭಗವದ್ಗೀತೆಯಾಗಲಿ ದೇವರಾಗಲೀ ಜಾತಿಯಾಗಲಿ, ಧರ್ಮವಾಗಲಿ ಅರ್ಥವಾಗುವುದೇ ಇಲ್ಲ. ಇಂಥವರು ಸಮಾಜದಲ್ಲೇ ಬ್ರಹ್ಮನ ಹಾಗೆ ನಾನೇ ಬ್ರಹ್ಮ ಎಂದು ತಿಳಿದು ಬ್ರಹ್ಮಸೃಷ್ಟಿಯನ್ನೇ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ನಿಜವಾಗಿಯೂ ಇದೊಂದು ಅಲಕ್ಷಿಸಬೇಕಾದ ವಿಚಾರ.
ಪ್ರತಿಯೊಬ್ಬ ಮನುಷ್ಯ ಅವನು ಹೇಳಿದ್ದನ್ನು ಕೇಳಿ ತಾನು ಬದುಕನ್ನು ರೂಪಿಸಿಕೊಳ್ಲುವುದಕ್ಕಿಂತಲೂ, ತನ್ನ ಬದುಕು ಹೇಗಿರ ಬೇಕು ಎಂದು ತೀರ್ಮಾನ ಮಾಡುವ ಹಕ್ಕು ಪ್ರತಿಯೊಬ್ಬನಿಗಿದೆ, ಅದಕ್ಕೆ ಯಾವುದೇ ಧರ್ಮವಾಗಲಿ ಆಚಾರವಾಗಲಿ ವಿಚಾರವಾಗಲಿ ಅಡ್ಡಿ ಬರುವುದಿಲ್ಲ. ಉದಾಹರಣೆಗೆ : ಮನುಷ್ಯನಾದವ (ಶರೀರದಿಂದಲ್ಲ - ಆತ್ಮದಿಂದ) ಹೆಣ್ಣು ಮಕ್ಕಳನ್ನು ಗೌರವಿಸುತ್ತಾನೆ, ಪ್ರೀತಿಸುತ್ತಾನೆ ಅವನ ಪಾಲಿಗೆ ಅವಳು ದೇವತೆ , ಮನೆಬೆಳಗುವ ಸೊಸೆ, ತಂದೆ ತಾಯಿಗೆ ಪ್ರೀತಿಯ ಮಗಳು. ಹಾಗೆ ಹುಟ್ಟಿದ ಮನೆಯನ್ನು ತೊರೆದು ಸೇರಿದ ಮನೆಯಲ್ಲಿ ಒಂದಾಗಿ ಬಾಳುತ್ತಾಳೆ. ಇಷ್ಟು ಸಾಕು ಅವಳ ಬದುಕಿನ್ನು ಅರಿತು ಅವಳನ್ನು ಗೌರವಿಸಲು. ಆದರೆ ನಾವು ಹಾಗೆ ಮಾಡುತ್ತೇವೆಯೇ? ಹೆಣ್ಣನ್ನು ಬೋಗಿಸುವ ವಸ್ತು ಎಂದು ತಿಳದು ಅವಳಿಗೆ ಹಿಂಸೆ ಕೊಡುತ್ತೇವೆ, ಮದುವೆಯಾದ ಗಂಡು ಅವಳನ್ನು ತನ್ನ ಅಡಿಯಾಳಾಗಿ ಮಾಡವು ಪ್ರಯತ್ನದಲ್ಲಿ ಒತ್ತಡ, ಹಿಂದೆ ಎಲ್ಲವನ್ನೂ ಬಳಸುತ್ತಾನೆ. ಇದು ಅಹಂ ಕಾರದಿಂದ ಉಂಟಾದದ್ದು - ಮನುಷ್ಯ ಎಂದು ಹೇಳುವವನ ಕೃತ್ಯವಲ್ಲ. ಈಗ ನಾವೇ ಆಲೋಚನೆ ಮಾಡವ ರೀತಿ ಹೇಗಿದೆ? ಯಾರೋ ಮಾಡೋ ತಪ್ಪಿಗೆ ಯಾರನ್ನೋ ಬೈಯುವ ತೆಗೆಳುವ ದಿಕ್ಕರಿಸುವ ನಿಂದಿಸುವ ಎಲ್ಲವನ್ನೂ ಮಾಡುವ ಅರ್ಥವೇನು? ಅಲ್ಪ ವಿದ್ಯಾ ಮಹಾ ಗರ್ವಿ ಎಂದು. ಅವನಿಗೆ ಎಲ್ಲವೂ ಗೊತ್ತಿದೆ. ಆದರೆ ಅದರ ಅರ್ಥವೇ ಗೊತ್ತಿಲ್ಲ. ಹೀಗಾಗಿ ವಿರುದ್ಧ ದಿಕ್ಕಿನಲ್ಲಿಯೇ ಮಾತಾಡುತ್ತಾನೆ.
ಈಗ ಭಗವದ್ಗೀತೆಯಲ್ಲಿನ ವಿಚಾರವಾಗಿ ಸಂಕ್ಷಿಪ್ತವಾಗಿ ಹೇಳುವುದಾದರೆ... (ಅರ್ಥವಾಗುವವರಿಗೆ ಮಾತ್ರ) ಮನುಷ್ಯನ ಬದುಕಿನಲ್ಲಿ ಎಲ್ಲವೂ ಇದೆ. ಅವನ ಸುತ್ತಮುತ್ತಲೂ ಆಸ್ತಿ, ಅಂತಸ್ತು, ಬಂದು ಬಳಗ, ರಾಜ್ಯ ಎಲ್ಲವೂ ಇದೆ. ಅದರೆ ಬದುಕು ಎಂದಾಗ ಅದು ಧರ್ಮ ಮತ್ತು ಕರ್ಮ ಬದ್ದವಾಗಿರಲೇ ಬೇಕು ಎಂಬ ಸೂಕ್ಷ್ಮವನ್ನು ಅರ್ಥವಾಗಿ ಹೇಳಿರುವ ಒಂದು ಗ್ರಂಥ ಭಗವದ್ಗೀತೆ. ಕೆಲವು ಸಮಯದಲ್ಲಿ ಗೊಂದಲಗಳು ನಮ್ಮ ಬದುಕಿನಲ್ಲೂ ಬರುತ್ತದೆ. ಆ ಸಮಯದಲ್ಲಿ ನಾವು ಮಾಡುವ ಕರ್ಮ ಯಾವ ಆಧಾರದ ಮೇಲೆ ಇರಬೇಕು ಮತ್ತು ಪೂರ್ವದಲ್ಲಿ ಮನುಷ್ಯ ಎಂದರೆ ಏನು? ಅವನ ಅಸ್ತಿತ್ವವೇನು ಈ ಮೊದಲಾದ ಕಣ್ಣೀಗೆ ಕಾಣದ ಸತ್ಯವನ್ನು ನಮಗೆ ಭಗವದ್ಗೀತೆ ಹೇಳಿಕೊಡುತ್ತದೆ. ಇದರಲ್ಲಿ ಟೀಕೆಗೆ ಒಳಗಾಗುವುದೇನಿದೆ?
ಯಾವುದೇ ಒಂದು ಕ್ರಿಯೆ ಅಥವಾ ಒಂದು ಕರ್ಮ ಜರುಗಿದಾಗ ಅದಕ್ಕೆ ಒಂದು ಪ್ರತಿಕ್ರಿಯೆ ಇರುತ್ತದೆ. ಹೀಗಿ ಉಂಟಾಗುವ ಪ್ರತಿಪಲ ದಿಂದ ನಮ್ಮಗೆ ಕರ್ಮಭಾದೆ ನಮ್ಮ ನಾಶಕ್ಕೆ ಕಾರಣವಾಗದಿರಲಿ ಎಂಬುದು ಭಗವದ್ಗೀತೆಯ ಉದ್ದೇಶ. ನೀರಿಗೆ ಸಣ್ಣ ಕಲ್ಲು ಹಾಕಿದಾಗ ಅದು ಅಲೆಯನ್ನು ಸೃಷ್ಟಿಸುತ್ತದೆ. ಏನೂ ತೊಂದರೆ ಯಾವುದಿಲ್ಲ. ಆ ಕರ್ಮದಿಂದ ಯಾವ ಬಾದೆಯೂ ಉಂಟಾಗುವುದಿಲ್ಲ. ಆದರೆ ಒಂದು ದೊಡ್ಡ ಕಲ್ಲನ್ನು ಹಾಕಿದಾಗ ನೀರು ಅಲೆ ಅಲೆಯಾಗಿ ದಡಕ್ಕೆ ಅಪ್ಪಳಿಸಿ ನಾ ನಾ ವಿಧದ ಸಂಕಷ್ಟವನ್ನು ಉಂಟುಮಾಡುತ್ತದೆ. ಹಾಗೇ ಹಾಕಿದವನ ಮೇಲೆ ಸಿಡಿದು ಅವನನ್ನು ತೊಂದರೆಗೆ ಒಳಪಡಿಸುತ್ತದೆ. ಈ ರೀತಿ ಯಾವುದೇ ಕರ್ಮವೂ ಆಗಿರಲಿ ಅದರಿಂದ ತನಗೆ, ಕುಟುಂಬಕ್ಕೆ, ಸಮಾಜಕ್ಕೆ, ರಾಜ್ಯಕ್ಕೆ, ವಿಶ್ವಕ್ಕೆ ಯಾವುದೇ ತೊಂದರೆಯಾಗದಿರಲಿ ಮತ್ತು ಸಮಾಜಕ್ಕೆ ತೊಂದರೆ ಉಂಟು ಮಾಡುವ ಮತ್ತು ನಂಬಿಕೆಗೆ ವಿರುದ್ಧವಾಗಿ ನಡೆಯುವ ವ್ಯಕ್ತಿ ಸಮಾಜಕ್ಕೆ ಕಂಟಕನಾಗಿರುವುದರಿಂದ ಅವನನ್ನೂ ನಿಗ್ರಹಿಸುವುದು ಕ್ಷತ್ರಿಯನಾದ ನಿನ್ನ ಕರ್ತವ್ಯ ಎಂಬುದನ್ನು ಮೂಲವಾಗಿ ಇಟ್ಟುಕೊಂಡು ಸಮಾಜಕ್ಕೆ ಒಂದು ಸಂದೇಶವನ್ನು ಕೊಟ್ಟಿರುವುದೇ ವಿನಹಃ ಯಾರದೇ ಮನೆ ಹಾಳು ಮಾಡುವ ಮತ್ತು ಯಾರನ್ನೂ ನೋಯಿಸುವ ಯಾವ ವಿಚಾರವೂ ಅದರಲ್ಲಿ ಅಡಗಿಲ್ಲ.
ತಿಳಿದರವರು ಮಾತನಾಡುವುದೇ ಇಲ್ಲ. ನನಗೆಲ್ಲವೂ ತಿಳಿದಿದೆ ಎಂದು ಹೇಳುವವರಿಗೆ ಅರ್ಥ ಮಾಡಿಸುವುದು ಸಾಧ್ಯವಿಲ್ಲ. ಅವನು ಅಹಂಕಾರಿ. ನನ್ನಗಿನ್ನೂ ಏನು ತಿಳಿದಿಲ್ಲ. ತಿಳಿಯಬೇಕಾದ್ದು ಇನ್ನಷ್ಟೂ ಇದೆ ಎಂದುಕೊಳ್ಳುವವನೇ ಶ್ರೇಷ್ಟ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ