ಮತಾಂತರದ ಗೀಳು...... ಮತ್ತು ಗೋಳು........
ಕೆಲವರು ಮತಾಂತರ ಮಾಡಿ ನಮ್ಮ ಧರ್ಮವನ್ನು ಬೆಳೆಸಬೇಕು ಎಂದು, ಆ ಮೂಲಕ ತಾನು ದೇವರ ಕೆಲಸ ಮಾಡುತ್ತಿದ್ದೇನೆ ತನ್ನ ಧರ್ಮವನ್ನು ಉದ್ದಾರ ಮಾಡಡುತ್ತಿದ್ದೇನೆ ಎಂದು ತಿಳಿದು ಮತಾಂತರ ನಡೆಯುವುತ್ತದೆ. ನಮ್ಮ ದೇಶದಲ್ಲಿ ಸುಮಾರು ೨೦೦೦ ವರ್ಷಗಳಿಂದಲೂ ಈ ಕೆಲಸವು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಕೆಲವರಿಗೆ ಮತಾಂತರ ಮಾಡುವುದು ಒಂದು ಗೀಳು. ಕೆಲವವರಿಗೆ ಮತಾಂತರ ವಾಗುವುದು ಒಂದು ಗೋಳು. ಇದರಿಂದ ಯಾರೂ ಯಾವ ಸಾಧನೆಯನ್ನೂ ಮಾಡಿದಂತಾಗುವುದಿಲ್ಲ.
ಮತ ಎಂಬುದು ಧರ್ಮವಲ್ಲ. ಮತ ಬೇರೆ ಧರ್ಮ ಬೇರೆ ಧರ್ಮದಲ್ಲಿ ಹಲವು ಮತಗಳು ಇರುತ್ತವೆ. ಕೆಲವರು ನಾವು ಹಿಂದಗಳಲ್ಲ ನಮ್ಮದು ಧರ್ಮವೇ ಬೇರೆ.. ಎಂದು ವಾದ ಮಾಡುತ್ತಾರೆ. ಆದರೆ ಧರ್ಮವು ಮನುಷ್ಯನ ಉಗಮದೊಂದಿಗೆ ಆತ್ಮದಲ್ಲಿ ಹುಟ್ಟಿಕೊಂಡದ್ದು. ಧರ್ಮದಲ್ಲಿ - ಧರ್ಮ ಮತ್ತು ಅಧರ್ಮ ಎಂದು ಇದೆ. ಆದರೆ ಮತದಲ್ಲಿ ಮತ ಮತ್ತು ಅಮತ ಎಂದು ಇಲ್ಲ. ಮತಗಳಲ್ಲಿ ಶ್ರೇಷ್ಠ ಎಂದೂ ಇಲ್ಲ. ಹಾಗೇನಾದರೂ ಹೇಳುವುದಾದರೆ ಅವರಿಗೆ ಧರ್ಮ ಮತ್ತು ಮತದ ಬಗ್ಗೆ ತಿಳುವಳಿಕೆ ಇಲ್ಲವೆಂದೇ ಅರ್ಥ. ಮತದ ಆಚರಣೆ ಅವನ ಆತ್ಮಸಾಕ್ಷಿಗೆ ಅನುಗುಣವಾಗಿ ಅವನು ಆಚರಿಸುವ ರೀತಿ ನೀತಿ ಅವನಿಗೆ ಸೇರಿದ್ದು. ಹಾಗಾಗಿ ನೀನು ಈ ಮತವನ್ನು ಆಚರಿಸು ಎಂದು ಹೇಳುವುದು ಅಂದರೆ ಮತ ಪ್ರಚಾರ ಮಾಡುವುದೇ, ಇರಲಿ ಮತಾಂತರ ಮಾಡುವುದೇ ಇರಲಿ ಅದು ಧರ್ಮ ವಿರೋಧಿ. ಇನ್ನು ಧರ್ಮ ಮತ್ತು ಮತ ಆಚರಣೆಯೂ ಕೇವಲ ಆತ್ಮಸಂಸ್ಕಾರಕ್ಕೇ ಹೊರತು ಅದು ಬದುಕಿನಲ್ಲಿ ಆಸ್ತಿ ಅಂತಸ್ತುಗಳಿಗೂ ಯಾವುದೇ ಸಂಬಂಧವಿಲ್ಲವೇ ಇಲ್ಲ. ಒಂದು ವೇಳೆ ಹಾಗೇನಾದರೂ ಮತಾಂತರ ಮಾಡುವಾಗ ಹೇಳಿದ್ದರೆ ಅದು ಆ ಮತದಲ್ಲಿರುವ ನ್ಯೂನತೆಯೇ ಹೊರತು ಅರ್ಹತೆಯಾಗುವುದಿಲ್ಲ.
ಧರ್ಮ ಎಂದರೆ ಸಂಕ್ಷಿಪ್ತವಾಗಿ ಹೇಳುವುದಾದರೆ ಸೂಕ್ಷ್ಮಜೀವಿಯಾದ ಆತ್ಮ ಮನುಷ್ಯನನ್ನು ಎಚ್ಚರಿಸುವ ಒಂದು ತಾತ್ವಿಕ ವಿದಾನ ಅಥವಾ ಶಕ್ತಿ. ಮನುಷ್ಯನಲ್ಲಿ ಸ್ಥೂಲರೂಪ ಮತ್ತು ಸೂಕ್ಷ್ಮರೂಪ ಎಂಬುದು ಇದೆ. ನಾವು ಸತ್ತಾಗ ಸೂಕ್ಷ್ಮರೂಪ ನಮ್ಮನ್ನು ಬಿಟ್ಟು ಹೋಗಿರುತ್ತದೆ. ಆಗ ನಾವು ಹೆಣವಾಗಿ ನಮ್ಮನ್ನು ಮಣ್ಣಿಗೋ ಬೆಂಕಿಗೋ ಒಪ್ಪಿಸುತ್ತಾರೆ. ಆತ್ಮ ನಮ್ಮ ಶರೀರದಲ್ಲಿದ್ದಷ್ಟು ದಿನವೂ ನಮ್ಮ ಶರೀರದಲ್ಲಿ ವಾಸನಾ ಪ್ರಭಾವದಿಂದಾಗಿ ಆಸೆ, ಬಯಕೆಗಳು ಉಂಟಾಗುತ್ತಿತು ಈ ಬೇಕು ಬೇಡಗಳು ಉಂಟಾಗುವುದು ಮನಸ್ಸಿನಲ್ಲಿ, ಮನಸ್ಸು ಎಂಬುದು ಶರೀರದಲ್ಲಿ ಇರುವ ಒಟ್ಟು ಜೀವಕೋಶ ಗಳಲ್ಲಿರುವ ಅಣುಗಳು ಹೊರಡಿಸುವ ತರಂಗಳ ಒಟ್ಟು ಮೊತ್ತ. ಹಾಗಾಗಿ ಪ್ರತಿಯೊಬ್ಬನಲ್ಲೂ ಅವನವನ ಮನಸ್ಸಿಗೆ ಅನುಗುಣವಾಗಿ ಕಾಮ ಕ್ರೋಧಗಳು ಲೋಭ ಮೋಹ ಮದ ಮತ್ಸರಗಳು ಬೇರೆ ಬೇರೆ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ಶರೀರ ಯಾವಾಗಲೂ ಮನಸ್ಸಿನ ಅಡಿಯಾಳಾಗಿ ಬೇಕು ಬೇಡಗಳ ವಿವೇಚನೆ ಇಲ್ಲದೆ ಕಾರ್ಯ ನಿರತವಾಗಿ ಧರ್ಮ ಅಧರ್ಮಗಳ ವಿವೇಚನೆ ಇಲ್ಲದೆ ಕ್ರಿಯಾಶೀಲವಾಗುವ ಸಂದರ್ಭದಲ್ಲಿ ಅವನ್ನು ನಿಯಂತ್ರಿಸುವ ಬುದ್ಧಿ ಧರ್ಮ - ಅಧರ್ಮದ ವಿವೇಚನೆಗೆ ತೊಡಗಿ ಶರೀರಕ್ಕೆ ನಿಯಂತ್ರಣ ವನ್ನು ತರುತ್ತದೆ ಅದುವೇ ನಿಜವಾದ ಅರ್ಥದಲ್ಲಿ ಧರ್ಮ. ಈ ಧರ್ಮ ಎಂಬ ತತ್ವವು ವಿಶ್ವದ ಪ್ರತಿಯೊಂದು ಅಣುಗಳಲ್ಲಿಯೂ ಇರುವುದರಿಂದ ನಾವು ದೇವರನ್ನು ಅಣು ರೇಣು ತೃಣ ಕಾಷ್ಟಗಳಲ್ಲಿಯೂ ಇರುತ್ತಾನೆ ಎಂದು ಹೇಳುತ್ತೇವೆ. ...... ಇದು ಧರ್ಮದ ಅಸ್ತಿತ್ವದ ಒಂದು ಸ್ವರೂಪವಷ್ಟೇ ಇದನ್ನು ಇನ್ನೂ ಮೂಲದಲ್ಲೂ ಕಾಣವುದು ಸಾಧ್ಯ. ಹೀಗೆ ಧರ್ಮದ ಮೂಲ ಅದರ ಉಗಮವನ್ನು ಹುಡುಕುತ್ತಾ ಹೋಗಲೂ ಬಹುದು..... ಅದಕ್ಕೆ ಆತ್ಮಜ್ಞಾನ ಇರಲೇ ಬೇಕು.....
ಈರೀತಿಯಿಂದಾಗಿ ಧರ್ಮ ಮತ್ತು ಮತಗಳನ್ನು ಸರಿಯಾಗಿ ಅರಿಯದೆ, ತಮ್ಮ ತಮ್ಮ ಅರಾಧ್ಯ ಮೂರ್ತಿ ಮತ ಸ್ಥಾಪಕರನ್ನೂ ಅರಿಯದೇ ಈಗಿನವರು ಹುಟ್ಟಿಸುವ ದಾಂದಲೇಯೇ ಮತಾಂತರ. ಅರ್ಥ ಇಲ್ಲದ ಬದುಕು.... ಅರ್ಥ ಇಲ್ಲದ ಕಾನೂನು... ಅರ್ಥ ಇಲ್ಲದೆ ಆಚರಣೆ.....ಕಲಿಕಾಲದ ಮಹಿಮೆ ಎಂದೇ ಹೇಳಬೇಕಲ್ಲದೆ ಬೇರೆ ಏನನ್ನೂ ಹೇಳಲು ಸಾಧ್ಯವಿಲ್ಲ. ಹಾಗಿದ್ದೂ ಹೇಳುವುದು ನಮ್ಮ ಧರ್ಮವೇ ಶ್ರೇಷ್ಟ? ಮಾಡುವುದು ಮಾತ್ರ ಅನಾಚಾರ.... "ಯಾವಾಗ ಮನುಷ್ಯ ಅಂತರಂಗವನ್ನು ಅರಿಯುವುದಿಲ್ಲವೋ ಅಲ್ಲಿಯವರೆಗೆ ಅಧರ್ಮವು ನಡೆಯುತ್ತಲೇ ಇರುತ್ತದೆ" ಹಾಗಾಗಿ ತಿಳಿದವರು ಮಾತನಾಡುವುದೇ ಇಲ್ಲ. ತಿಳಿಯದವರು ಬೊಬ್ಬೆ ಹೊಡೆಯುವುದು ಜೋರಾಗಿ ಕೇಳುತ್ತಿರುತ್ತದೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ