ಜಾತಿ ಜನಗಣತಿಯಿಂದ ಆಗುವ ಸಾಧನೆ ಏನು?
ಜಾತೀಯ ಜನಗಣತಿ ಎಂಬುದೇ ಜಾತ್ಯಾತೀತ ಎಂಬ ನಂಬುಗೆಯ ಮೇಲೆ ಸ್ಥಾಪಿತವಾದ ಪ್ರಜಾಪ್ರಭುತ್ವದ ಒಂದು ಅಣಕು. ಜಾತಿ ಎಂಬುದೇ ಒಂದು ಬದುಕು. ಈ ಬದುಕು ಪ್ರತಿಯೊಬ್ಬನಿಗೆ ಅವನದೇ ಆದ ರೀತಿಯಲ್ಲಿ ಆಚರಿಸುವ ಹಕ್ಕು ಸ್ವಾತಂತ್ರ ಎಲ್ಲವೂ ಇದೆ. ಜಾತ್ಯಾತೀತ ಅರ್ಥ ಆಡಳಿತವು ಜಾತೀ ಆಧಾರವಾಗಲೀ ಅಥವಾ ನಮ್ಮ ದೇಶ ಈ ಜಾತೀ ಅಥವಾ ಧರ್ಮಕ್ಕೆ ಸಂಬಂಧಿಸಿದುದು ಎಂದು ಅರ್ಥೈಸುವಂತಿಲ್ಲ ಎಂಬುದೇ ಸತ್ಯ. ನಮ್ಮಲ್ಲಿ ಪ್ರತಿ ಜಾತಿ ಮತ ಪಂಥ ಆಚಾರ ವಿಚಾರಗಳಿಗೆ, ಅವನವನ ನಂಬಿಕೆಗಳಿಗೆ ಅವನವನು ಬದ್ಧನಾಗ ಬದುಕಲು ಬಹುದು. ಹಾಗಾಗಿ ಅವನನ್ನು ಸರಕಾರ ಜಾತೀ ಆಧಾರವಾಗಿಯೇ ಗುರುತಿಸುವುದು ಸಂಪೂರ್ಣ ಸಂವಿಧಾನ ವಿರೋಧಿ ನೀತಿ. ಆದರೆ ಹಲವಾರು ಧುರೀಣರು ಜಾತೀ ಜನಗಣಿತಿಯನ್ನು ಬೆಂಬಲಿಸುತ್ತಾರೆ. ಯಾಕೆಂದರೆ ಆ ಮೂಲಕ ತಮ್ಮ ಜಾತಿಯ ಸ್ಥಿತಿಗತಿಯನ್ನು ತಿಳಿದು ಅವರನ್ನು ಮೇಲಕ್ಕೆ ಎತ್ತುಲು ಯೋಜನೆಗಳನ್ನು ರೂಪಿಸುವುದು ಸಾಧ್ಯವೆಂದು ಅವರ ನಂಬಿಕೆ. ಆದರೆ ಒಬ್ಬನ ಸ್ಥಿತಿ ಗತಿ ಎನ್ನುವುದು ಅವನವನ ಶ್ರಮ ಹಾಗೂ ಅವನ ಬೌದ್ಧಿಕ ಮಟ್ಟದ್ದಾಗಿರುತ್ತದೆಯೇ ವಿನಹಃ ಅದು ಒದಗಿಸುವಂಥದಲ್ಲ. ಆದುದರಿಂದ ವಿದ್ಯೆಯೇ ಮನುಷ್ಯನ ಅಭಿವೃದ್ಧಿಗೆ ಪ್ರೇರಣಾ ಶಕ್ತಿ. ಸರಕಾರವೇ ಆಗಲಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಜಾತಿಯನ್ನು ನಮೂದಿಸುವುದು ಮತ್ತು ಗುರುತಿಸುವುದು ಸರಿಯಾದ ವ್ಯವಸ್ಥೆ ಅಲ್ಲ. ನಮಗೆ ಬೇಕಾಗಿರುವುದು ಏಕ ರೂಪ ಕಾನೂನು. ನ್ಯಾಯಾಲವು ಹೇಳಿದೆ ಈಗ ಸರಕಾರಗಳು ನೀಡುವ ಜಾತೀ ಸವಲತ್ತುಗಳು ಇನ್ನೆಷ್ಟು ದಿನ ಮುಂದುವರಿಸಬೇಕು ? ಎಂಬ ಅರ್ಥದಲ್ಲಿ ಹೇಳಿರುವುದ ಸತ್ಯವಾದರೂ. ಜಾತೀ ಗಣತಿಯ ಮೂಲಕ ಸತ್ಯ ಹೊರಬರುವುದೆಂಬ ವಿಶ್ವಾಸವಿದೆಯೇ. ಪ್ರತಿ ಜಾತಿಯಲ್ಲಿ ನೂರಾರು ಒಳ ಪಂಗಡಗಳಿವೆ. ಅವುಗಳು ಈಗಾಗಲೇ ತಮ್ಮ ಜಾತೀ ಜನರನ್ನು ಈ ರೀತಿಯಾಗಿಯೇ ನಮೂದಿಸಿ ಎಂದು ಫರ್ಮಾನು ಹೊರಡಿಸುವುದು ನೋಡಿದರೆ. ಜಾತೀ ಜನಗಣತಿಯ ಮೂಲ ಉದ್ದೇಶವೇ ಮೂಲೆ ಸೇರುವುದರಲ್ಲಿ ಸಂಶಯವಿಲ್ಲ.
ಇನ್ನು ಆರ್ಥಿಕವಾಗಿ ಹಿಂದುಳಿದವರು ಎಂದು ಗುರುತಿಸುವುದಾದರೂ ಬಡವರು ಯಾರು ಶ್ರೀಮಂತರು ಯಾರು ಅದಕ್ಕೆ ಮಾನದಂಡ ಯಾವುದು? ಎಂದು ನಿರ್ದಿಷ್ಟವಾದ ವಿಚಾರ ಗಳಿಲ್ಲದೆ ಗೊಂದಲವಿದೆ.
ಸವಲತ್ತಿಗಾಗಿಯೇ ಜಾತಿ ಸೃಷ್ಟಿಯಾಗುವ ಅವಕಾಶವೂ ಇದೆ. ಲಾಭಕ್ಕಾಗಿ ಜಾತಿ ಬದಲಾಯಿಸಿದವರೂ ಇದ್ದಾರೆ. ತಾನು ಬಡವ ಎಂದು ಹೇಳಿಕೊಳ್ಳುವ ವ್ಯಕ್ತಿ ತನ್ನ ಆದಾಯವನ್ನು ಗುರುತಿಸುವ ಅಥವಾ ಆದಾಯದ ನಿರ್ಧಾರ ಮಾಡುವ ಯಾವುದಾದರೂ ನಿರ್ಧಿಷ್ಠ ವಿಚಾರ ಇದೆಯೇ? ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡುವವರೂ ಇಂದಿನ ದಿನಗಳಲ್ಲಿ ೪೦೦ - ೫೦೦ ಸಂಪಾದನೆ ಮಾಡುತ್ತಾರೆ? ನೊಂದಾಯಿಸುವುದು ಕೂಲಿ ಎಂದು. ಆದರೆ ಅವನು ಕೂಲಿ ಕೆಲಸ ಮಾಡುವುದಾದರೂ ಎರಡು - ಮೂರು ನಿವೇಶನಗಳನ್ನು ಹೊಂದಿ ಅವರಿಗೆ ಬಾಡಿಗೆ ಬರುವಂಥವರೂ ಇದ್ದಾರೆ. ಆದರೂ ಅವರು ಆರ್ಥಿಕ ಹಿಂದುಳಿದವರು, ಯಾಕೆಂದರೆ ಅವರು ಉದ್ಯೋಗ ಕೂಲಿ. ಅದೇ ವಾಸಕ್ಕೆ ಒಂದು ಮನೆ ಹೊಂದಿ ಅಲ್ಲಿ ವಾಸಿಸುವ ಸಂಸಾರ ಯಾವುದೋ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿ ಬರುವ ಸಂಬಳದಲ್ಲಿ ದುಬಾರಿ ಸಂಚಾರಿ ವ್ಯವಸ್ಥೆಯಲ್ಲಿ ಓಡಾಡಿ, ಮಕ್ಕಳ ವಿದ್ಯಾಭ್ಯಾಸ ಮಾಡಿಸಿ ಕೊಂಡು ಹೊಟ್ಟೆ ಹೊರೆಯುವುದರೊಂದಿಗೆ ಕುಟುಂಬದಲ್ಲಿನ ಆಗು ಹೋಗುಗಳಿಗೆ ಸ್ಪಂದಿಸಿಕೊಂಡು, ಕಾಯಿಲೆ ಕಸಾಲೆಗಳಿಗೆ ಖರ್ಚು ವೆಚ್ಚ ಮಾಡಿಕೊಂಡು ಬದುಕುವನು ಅನುಭವಿಸುವ ನರಕ ಯಾತನೆ ಯಾವುದೇ ಗಣತಿಯಿಂದ ಗುರುತಿಸುವುದು ಸಾದ್ಯವೇ ? ಯಾಕೆಂದರೆ ಅವನು ಒಂದು ಕಂಪನಿಯಲ್ಲಿ ಕೆಲಸಕ್ಕೆ ಹೋಗುವುದೇ ಒಂದು ಕಾರಣ.
ಹೀಗಿರುವಾಗ ಯಾವುದು ಸತ್ಯ ಯಾವುದು ಸುಳ್ಳು ಎಂದು ತಿಳಿಯಲು ಈಗಿನ ಈ ವ್ಯವಸ್ಥೆಗಳಿಂದ ಖಂಡಿತ ಸಾಧ್ಯವಿಲ್ಲ. ಕೇವಲ ಒಂದು ರಾಜಕಾರಣವೇ ಹೊರತು ಉಪಯೋಗವಿಲ್ಲದ ಕೆಲಸ. ಭಾರತೀಯ ಪ್ರತಿ ಯೊಬ್ಬ ಪ್ರಜೆಯೂ ತನ್ನ ಸಂಪೂರ್ಣ ವಿವರವನ್ನು ಸರಕಾರವೇ ಒಂದು ನಿರ್ಧಿಷ್ಟವಾದ ರೀತಿಯಲ್ಲಿ ಕಂಪ್ಯೂಟರೈಸ್ ಡ್ ರೀತಿಯಲ್ಲಿ ನಮೂದಿಸಿದಲ್ಲಿ ಮಾತ್ರ ಎಲ್ಲವನ್ನೂ ಸರಿಮಾಡುವುದು ಸಾಧ್ಯ ಉದ್ದೇಶವು ನೆರವೇರುವುದ ಸಾಧ್ಯ. ಇಲ್ಲವಾದರೆ ಸಮಯ ಹಣ ಎಲ್ಲವೂ ವ್ಯರ್ಥ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ