ಭಾರತದಲ್ಲಿ ಧಾರ್ಮಿಕ ಸಹಿಷ್ಣುತೆ........
ಭಾರತದಲ್ಲಿ ಧಾರ್ಮಿಕ ಸಹಿಷ್ಣುತೆ ವಿಚಾರದಲ್ಲಿ ಅಮೇರಿಕಾ ಅಧ್ಯಕ್ಷರಾದ ಬರಾಕೋ ಓಬಾಮ ಅವರು ನುಡಿದಿರುವ ಮಾತುಗಳು ''ಭಾರತದಲ್ಲಿ ನಡೆಯುತ್ತಿರುವ ಧಾರ್ಮಿಕ ಅಸಹಿಷ್ಣುತೆ ಕೃತ್ಯಗಳನ್ನು ನೋಡಿದ್ದಿದ್ದರೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ಆಘಾತ ಗೊಳ್ಳುತ್ತಿದ್ದರು'' ಬೇರೆ ಬೇರೆ ಮನೋಭಾವದವರು ಅವರಿಗೆ ಬೇಕಾದಂತೆ ಅರ್ಥೈಸಿ ಹೇಳಿಕೆ ನೀಡಿರುವುದು ಒಂದು ರಾಜಕೀಯ ಬಣ್ಣ ಪಡೆದ ವಿಚಾರ. ಆದರೆ ಬರಾಕೋ ಓಬಾಮ ಯಾವ ಅರ್ಥದಲ್ಲಿ ಹೇಳಿದರು ಎಂಬುದನ್ನು ಊಹಿಸಿವುದಕ್ಕಿಂತಲೂ ನಮ್ಮಲ್ಲಿರುವ ಸತ್ಯವನ್ನು ಅವರಿಗೆ ಮನಗಾಣಿಸುವುದ ಮುಖ್ಯ. ಗಾಂಧೀಜಿಯವರು ಧಾರ್ಮಿಕ ವಿಚಾರವನ್ನು ಯಾವತ್ತೂ ಹೆಚ್ಚಾಗಿ ಪ್ರಸ್ತಾಪಿಸಲೇ ಇಲ್ಲ. ಅವರು ವಿಚಾರದಲ್ಲಿ ನಿನ್ನ ಒಂದು ಕೆನ್ನೆಗೆ ಹೊಡೆದರು ಎಂದಾದರೆ ಇನ್ನೊಂದು ಕೆನ್ನೆಯನ್ನು ಕೊಡು ಎಂಬುದು. ಅಂದರೆ ಅವರು ನೋವನ್ನು ಅನುಭವಿಸಿದರೂ ಚಿಂತಿಲ್ಲ ಸತ್ಯಕ್ಕೆ ಹೋರಾಡು ಎಂಬ ನೀತಿ ನಮಗೆ ಉಡುಗೊರೆಯಾಗಿ ಕೊಟ್ಟರು. ಹಾಗಾಗಿಯೇ ಭಾರತ ವಿಭಜನೆಯ ಸಂದರ್ಭದಲ್ಲಿ ಕಠಿಣ ನಿಲುವನ್ನು ತಾಳಲಾರದೆ ಸಮಸ್ಯೆಗೆ ಕಾರಣವಾಗಿ ಹೋಯಿತು.
ಅದೇನೇ ಇರಲಿ. ಭಾರತದಲ್ಲಿ ಧಾರ್ಮಿಕ ಸಹಿಷ್ಣತೆ ಇಲ್ಲ ಎಂದು ಹೇಳಿದವರಾರು? ಭಾರತದಲ್ಲಿ ಹಾಗೂ ಭಾರತೀಯರಲ್ಲಿ ಇರುವಷ್ಟು ಧಾರ್ಮಿಕ ಸಹಿಷ್ಣುತೆ ಬೇರೆ ಯಾವ ದೇಶದಲ್ಲೂ ಯಾವ ಧಾರ್ಮಿಕ ನೀತಿಯಲ್ಲೂ ಕಾಣುವುದಿಲ್ಲ. ನಮ್ಮ ಸಂಸ್ಕೃತಿಯಲ್ಲಿ ತಿಳಿದೋ ತಿಳಿಯದೆಯೋ ವಿದ್ಯಾವಂತನೋ ಅವಿದ್ಯಾವಂತನೋ ಪ್ರತಿಯೊಬ್ಬನಲ್ಲಿಯೂ ಅಂತರಂಗದಲ್ಲಿ ಮನುಷ್ಯತ್ವವಿದೆ. ಹಾಗೆಂದು ಕ್ರೌರ್ಯವಿಲ್ಲವೆಂದಲ್ಲ. ಅದಕ್ಕಿಂತಲೂ ಮೀರಿ ನಾವು ಶರೀರದಿಂದ ಮನುಷ್ಯ ಅನಿಸುದಕ್ಕಿಂತಲೂ ಆತ್ಮದಿಂದ ಮನುಷ್ಯ ಅನಿಸಿಕೊಳ್ಳುತ್ತೇವೆ. ಹಾಗಿ ನಮಗೆ ಭಾವನಾತ್ಮ ಸಂಬಂದ ಕುಟುಂಬದಲ್ಲಿ ಸಮಾಜದಲ್ಲಿ ಪರಿಸರದಲ್ಲಿ ನಂಬುಗೆಯಲ್ಲಿ ದೇಶದಲ್ಲಿ ವಿಶ್ವದಲ್ಲಿ ಬೆಳೆಸಿಕೊಂಡಿರುತ್ತೇವೆ. ಇಲ್ಲಿನ ಒಂದು ಕುಗ್ರಾಮದ ಒಂದು ಅಜ್ಜಿ ತನಗೆ ಬೇಕಾದ ನೀರನ್ನು ಬಹಳ ಕಷ್ಟದಿಂದ ದೂರದಿಂದ ಹೊತ್ತು ಬರುತ್ತಿದ್ದರೂ ದಾರಿಹೋಕನೊಬ್ಬ ಬಾಯಾರಿದ್ದಾನೆಂದರೆ ಆ ನೀರನ್ನೇ ಕೊಟ್ಟು ಸಂತೋಷ ಪಡುವಷ್ಟು ಧಾರ್ಮಿಕ ಸಹಿಷ್ಣುತೆ ನಮ್ಮಲ್ಲಿ ಇದೆ. ನಮ್ಮ ಪುರಾಣಗಳಲ್ಲಿ ಹೇಳುವುದೇ ''ಸರ್ವಜನ ಸುಖಿನೋ ಭವಂತು'' ಎಂದು.
ನಮ್ಮಲ್ಲಿ ಧಾರ್ಮಿಕ ಸಹಿಷ್ಣುತೆ ಇಲ್ಲ ಎಂದು ನಿಮಗೆ ಅನಿಸಿದರೆ. ಅಥವಾ ನಮ್ಮಲ್ಲಿ ಮತೀಯ ಗಲಭೆಗಳು ನಡೆದಿರುವುದು ಧಾರ್ಮಿಕ ಅಸಹಿಷ್ಣುತೆ ಎಂದು ನಿಮಗೆ ಅನಿಸಿದರೆ ಅದಕ್ಕೆ ನಮ್ಮ ಸನಾತನ ಧರ್ಮ ಹೊಣೆಯಲ್ಲ. ನಮ್ಮಲ್ಲಿ ಎಷ್ಟೋ ಹಳ್ಳಿ ಗಳಲ್ಲಿ ವಿವಿಧ ಜನಾಂಗದ ಜನ ಒಂದಾಗಿ ಆತ್ಮೀಯವಾಗಿ ಬದುಕುತ್ತಿದ್ದಾರೆ. ಅವರಲ್ಲಿ ಯಾವ ಭೇದಭಾವವೇ ಇಲ್ಲ. ನಮ್ಮ ಮನೆಯ ಹತ್ತಿರವೂ ಹಲವಾರು ಮುಸಲ್ಮಾನ ಮನೆಗಳು ಇವೆ ನಾನು ಕಂಡ ಹಾಗೆ ಸುಮಾರು ೬೦ ವರ್ಷಗಳಿಂದಲೂ ನಾವು ಅನ್ಯೋನ್ಯವಾಗಿದ್ದೇವೆ.
ನಮ್ಮಲ್ಲಿನ ರಾಜಕೀಯ ಆಟದಲ್ಲಿ ಧಾರ್ಮಿಕವೂ ಒಂದು ಕಾಯಿ. ಹಾಗಾಗಿ ಇಷ್ಟೆಲ್ಲ ರಾಮಾಯಣವಾಗುತ್ತಿದೆ. ರಾಜಕೀಯ ಎಂದರೆ ಏನು ಅರಸನಾದವ ಯಾವತ್ತು ಸೋಲು ಬಯಸುವುದಿಲ್ಲ. ಹಾಗೆ ರಾಜಕೀಯದಲ್ಲಿ ಸೋಲು ಬಯಸುವುದಿಲ್ಲ. ಹಾಗಾಗಿ ತಾನು ಜನನಾಯಕ ಎಂದು ಗುರುತಿಸಿಕೊಳ್ಳ ಬೇಕಾದರೆ ಏನೆಲ್ಲ ಕಸರತ್ತು ಮಾಡಬೇಕೋ ಅದರಲ್ಲಿ ಧರ್ಮವೂ ಒಂದು.
ಈ ವಿದ್ಯೆಯನ್ನು ನಮಗೆ ಕಲಿಸಿದವರು ನಮ್ಮನ್ನು ೨೦೦ ವರ್ಷ ಆಳಿದ ಬ್ರಿಟಿಷರು. ಅವರೂ ಒಮ್ಮಲೇ ಏನು ಆಧಿಕಾರಕ್ಕೆ ಬರಲಿಲ್ಲಿ. ವ್ಯಪಾರಕ್ಕೆ ಅಂತ ಬಂದರು. ಬಂದವರೇ ಇಲ್ಲಿನ ರಾಜರು ಪಾಳೆಗಾರರ ಮುಂದೆ ಕೈಕಟ್ಟಿಕೊಂಡು ನಿಂತು ತಮ್ಮ ವ್ಯಪಾರವನ್ನು ಹೇಗೆ ಮುಂದುವರಿಸುವುದು ಎಂದು ಮಗ್ನರಾದಾಗ ಅವರಿಗೆ ತಿಳಿಯಿತು ಭಾರತೀಯರು ಇತರನ್ನು ಬೇಗ ನಂಬುತ್ತಾರೆ, ಒಂದು ಬಾರಿ ನಂಬಿದರೆ ಅಮೇಲೆ ತಮ್ಮನೇ ಅಂತ ಸೇರಿಸಿಕೊಳ್ಳುತ್ತಾರೆ ಅಂತ. ಹಾಗಾಗಿ ಇಲ್ಲಿನ ದೊರೆಗಳಿಗೆ ಆತ್ಮೀಯವಾಗಿ ಬೆಳೆದರು. ಇದು ಒಂದು ರೀತಿಯಲ್ಲಿ ಧಾರ್ಮಿಕ ಸಹಿಷ್ಣುತೆಯೇ. ಕ್ರಮೇಣ ನಂಬಿಕೆಯ ಆಧಾರದ ಮೇಲೆ ಅವರಿಗೆ ಪದವಿ ಅಧಿಕಾರ ಎಲ್ಲವೂ ಸಿಗುವಾಗ ಎಲ್ಲವನ್ನೂ ತಮ್ಮದಾಗಿಸುವುದು ಹೇಗೆ ಅದೂ ಕಾನೂನು ಬದ್ದ ಎಂಬ ಚಿಂತನೆಗಳಿಂದ ನಮ್ಮ ದೇಶದ ದೊರೆಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡೋ ಮಾತುಗಳಿಗೆ ಕಟಿ ಬದ್ದರಾಗಿಯೋ ಅಧಿಕಾರವನ್ನೂ ಪಡೆದುಕೊಂಡರು. ದೊರಗಳು ಧರ್ಮ ಸಂಕಟಕ್ಕೆ ಕಟ್ಟು ಬಿದ್ದು ಬೇಸರ ಹೊಂದಿದ್ದರೂ ಅಧಿಕಾರ ಕಳೆದುಕೊಂಡರು. ಬ್ರಿಷರಿಗೆ ಆಧಿಕಾರ ಸಿಕ್ಕಿದ ಮೇಲೆ ಅವರು ಅದನ್ನು ವಿಸ್ತರಿಸಿ ಇಡಿ ಭಾರತದಲ್ಲಿ ವ್ಯಾಪಸಿಕೊಂಡರು. ಹಾಗೆ ಅವರು ಅಧಿಕಾರ ಹಿಡಿದ ಮೇಲೆ ಅವರಿಗೆ ಪೂಜೆ ಪುನಸ್ಕಾರ ಗಳಿಗೆ ಚರ್ಚುಗಳ ಸ್ಥಾಪನೆಯೂ ಆಯಿತು. ಅದರೊಂದಿಗೆ ಅವರ ಧಾರ್ಮಿಕ ಗುರುಗಳು ಬಂದರು. ಇವರು ಚರ್ಚಿಗೆ ಹೋಗುವಾಗ ತನ್ನ ನೆರೆಕರೆಯವರನ್ನೂ ಕರೆದುಕೊಂಡು ಹೋದರು ( ಇದೂ ಭಾರತೀಯರಲ್ಲಿ ಇರುವ ಧಾರ್ಮಿಕ ಸಹಿಷ್ಟುತೆಯೇ) ಇಲ್ಲದಿದ್ದರೆ ಇದು ನಮ್ಮ ಧರ್ಮ ಅಲ್ಲ ನಾವೇಕೆ ಹೋಗಬೇಕು ಎಂದು ವಿರೋಧಿಸುತ್ತಿದ್ದರಲ್ಲವೇ? ಹೀಗೆ ಹೋದವರು ನಿಧಾನವಾಗಿ ಅವರೊಂದಿಗೆ ಗುರುತಿಸಿಕೊಂಡು ಅವರ ಮತವನ್ನೇ ಅವಲಂಬಿಸಿದರು. ನಮ್ಮಲ್ಲಿ ಒಬ್ಬ ಮತಾಂತರ ಹೊಂದಿದರೆ ಮನೆಯಲ್ಲಿ ಹಿರಿಯರು ಬುದ್ಧಿ ಹೇಳುತ್ತಾರೆ, ಗಲಾಟೆ ಮಾಡುತ್ತಾರೆ, ಕೊನೆಗೆ ಹೇಳಿಯೂ ಕೇಳದಿದ್ದರೆ "ಹೇಳಿದ ಮಾತು ಕೇಳುವುದಿಲ್ಲ ಅವನ ಕರ್ಮ ಅವನು ಅನುಭವಿಸುತ್ತಾನೆ" ಎಂದು ಹೇಳಿಕೊಂಡು ಕೂತರೇ ವಿನಃ ಇವನ ದಾರಿ ತಪ್ಪಿಸಿದವರ ವಿರುದ್ಧ ಹಿಡಿಶಾಪ ಹಾಕಿದರೇ ವಿನಃ ಪ್ರತಿಭಟಿಸಲಿಲ್ಲ. ಇದಕ್ಕಿಂತ ದೊಡ್ಡ ಧಾರ್ಮಿಕ ಸಹಿಷ್ಣತೆ ಬೇರೆ ಬೇಕಾ? ಹೀಗೆ ಭಾರತದಲ್ಲಿ ಕ್ರಿಶ್ಚಿಯನ್ ಸಂಖ್ಯೆ ಬೆಳೆಯಿತು. ಇಲ್ಲಿರುವ ಕ್ರಿಶ್ಚಿಯನರೆಲ್ಲ ಹಿಂದುಗಳೇ ಆದರೆ ಕ್ರಿಶ್ಚಿಯನ್ ಮತಾವಲಂಬಿಗಳು. ಅವರು ದೇವರನ್ನು ಕಾಣುವ ರೀತಿ ಕ್ರಿಶ್ಚಿಯನ್ ಧರ್ಮದ ಮೂಲಕ ಅಷ್ಟೇ . ಈ ತತ್ವಕ್ಕಿಂತ ಬೇರೆ ಆದರ್ಶ ಬೇರೆ ಯಾವ ಧರ್ಮದಲ್ಲಿ ಇದೆ ಹೇಳಿ.
ಇನ್ನು ನಮ್ಮಲ್ಲಿ ಮುಸ್ಲಿಂರೂ ಇದ್ದಾರೆ. ಅದೂ ಭಾರತದ ಮೂಲ ಧರ್ಮ ಅಲ್ಲ. ಅವರೂ ಇಲ್ಲಿಗೆ ಬಂದವರು . ಬಹುಶಃ ಘಜನಿ ಮಹಮ್ಮದನೊಂದಿಗೆ ಬಂದ ಧರ್ಮ. ಅವನೂ ಬ್ರಿಟಿಷರ ಹಾಗೆ ಮತ ಧರ್ಮ ಪ್ರಚಾರಕ್ಕೆ ಬಂದವರಲ್ಲ. ಅವನು ಅರಸ. ಅವನ ನೀತಿ ಸಾಮ್ರಾಜ್ಯ ವಿಸ್ತರಣೆ. ಅದು ಅವನ ಧರ್ಮ. ಆದುದರಿಂದ ನಮ್ಮ ಮೇಲೆ ಆಕ್ರಮಣ ಮಾಡಿದ ನಾವು ಸೋತೆವು ಅಥವಾ ನಮ್ಮನ್ನು ಸೋಲಿಸಿದ ಆಧಿಕಾರಕ್ಕೆ ಬಂದ. ಬಂದಮೇಲೆ ಅವನ ಆಧಿಕಾರ ಇರುವಾಗ ಅವನ ಧರ್ಮವೂ ಬರಬೇಕಲ್ಲ. ಹಾಗೆ ಅದೂ ಬಂತು.ಅವರ ಧರ್ಮ ಪ್ರಚಾರಕರೂ ಬಂದರು. ಬಂದ ಮೇಲೆ ಅವರಿಗೆ ನಮಾಜು ಮಾಡಲು ಮಸೀದಿ ಬೇಕಾಯಿತು ಅದನ್ನೂ ಕಟ್ಟಿಕೊಂಡ. ಅದನ್ನು ಕಟ್ಟಿಕೊಳ್ಳ ಬೇಡ ಎಂದು ನಾವು ಕೇಳಿದರೆ ಅವನ ಆಚಾರಕ್ಕೆ ಅಡ್ಡಿ ಮಾಡಿದ ಪಾಪ ನಮಗೆ ಸುತ್ತಿಕೊಳ್ಳುತ್ತದೆ ಎಂಬ ನಮಗೆ (ನಮಗೆ ಫಾಪ ಬೀತಿ ಸ್ವಲ್ಪ ಜಾಸ್ತಿ) ಅವರಿಗೆ ಅದೆಲ್ಲ ಇಲ್ಲ. ಹಾಗಾಗಿ ನಮ್ಮ ಹೆಣ್ಣು ಮಕ್ಕಳನ್ನು ಎಳೆದುಕೊಂಡು ಅನುಭವಿಸಿದರು. ಅವರಿಗೆ ಸಂತಾನಗಳಾಯಿತು. ನಮಗೆ ಪಾಪ ಭೀತಿ. ಅವನ ಬಲತ್ಕಾರಕ್ಕೆ ಒಳಗಾದ ಹೆಣ್ಣು ಮಗಳು ನಮಗೆ ಜಾತಿ ಕೆಟ್ಟವಳು ಆದಳು. ಅವಳನ್ನು ನಮ್ಮೊಂದಿಗೆ ಸೇರಿಸಕೊಂಡರೆ ಎಲ್ಲಿ ನಮ್ಮ ಬಂದುಬಳಗ ಎಲ್ಲಾ ನಮ್ಮನ್ನು ದೂರ ಮಾಡುತ್ತರೋ ತು... ಛಿ... ಎಂದು ಉಗಿಯುತ್ತಾರೋ ಎಂಬ ಭಯ. ಹೀಗೆ ಆಗಿ ನಮ್ಮಲ್ಲಿಗೆ ಬಂದ ಮುಸ್ಲಿಂ ಗಳು ಕೆಲವರಾದರೂ ಅವರ ಸಂತಾನವೂ ಬೆಳೆಯಿತು. ಅದೂ ಅಲ್ಲದೆ ಈಗಲೂ ಅವರಿಗೆ ಎಷ್ಷು ಬೇಕಾದರೂ ಮಕ್ಕಳು ಹುಟ್ಟಿಸುವ ಆಧಿಕಾರ ನಮ್ಮ ಸರಕಾರ ಕೊಟ್ಟಿದೆ. ಅದರೆ ನಮಗೆ ಎರಡೆ? ಇದೆಲ್ಲವೂ ನಮ್ಮ ಧಾರ್ಮಿಕ ಸಹಿಷ್ಣತೆಯ ಪರವಾದ ವಿಚಾರವಲ್ಲವೆ.
ಆದರೆ ಮುಸ್ಲೀಂ ಅರಸರು ಬಂದು ಅವರು ನಮ್ಮ ಹೆಣ್ಣುಗಳನ್ನು ಹೊಂದಿ ಅದರಿಂದ ಸಂತತಿ ಬೆಳೆಸಿದರೂ ನಾವು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಅವರು ನಮ್ಮ ಪೂಜಾಸ್ಥಳದ ಮೇಲೆ ದಾಳಿ ಮಾಡಿ ನಮ್ಮ ನಂಬುಗೆಗಳನ್ನು ದ್ವಂಸ ಮಾಡಿದರಲ್ಲ ನೋಡಿ ಆವಾಗ ನಮಗೆ ಉರಿ ಹತ್ತಿಕೊಂಡದ್ದು. ನಮ್ಮ ರಾಮಾಯಣ ಮಹಾಭಾರತ ಕಾದಲ್ಲಿಯೂ ಇದೇ ನಡೆದದ್ದು. ಅದುದರಿಂದ ಕೆಲವು ಅರಸರು ಅವರ ಮೇಲೆ ತಿರುಗಿ ಬಿದ್ದದ್ದನ್ನು ಒಪ್ಪಿಕೊಳ್ಳುತ್ತೇವೆ. ಈಗಲೂ ಹಾಗೆ ಘಟನೆಗಳು ನಡೆಯತ್ತಲೇ ಇರುತ್ತದೆ. ಅದು ರಾಜಕೀಯದ ಬಣ್ಣ ದಿಂದ ನಡೆಯ ಬಾರದು. ಮತ್ತು ರಾಜಕೀಯದವರು ಆ ವಿಷಯವನ್ನು ಮಾತನಾಡಲೇ ಬಾರದು. ಮಾತನಾಡಿದಗಲೇ ಅದೊಂದು ಭೂತವಾಗಿ ಕಾಡುವುದು. ಅದು ಮನುಷ್ಯನ ನಂಬುಗೆಯನ್ನು ಕಾಪಾಡುವ ಹೋರಾಟ. ನಮ್ಮಲ್ಲಿ ಒಂದು ಕ್ರಮ ಇದೆ. ಬೇರೆಯವರ ನಂಬುಗೆಗೆ ನಾವು ಅಡ್ಡಿ ಬರುವುದಿಲ್ಲ. ನಮ್ಮ ಹಾಗೆ ನೀವೂ ಮನುಷ್ಯರೂ ನೀವು ನಿಮ್ಮ ಇಚ್ಛೆಯಹಾಗೆ ಬದುಕಬಹುದು ನಮ್ಮಲ್ಲಿರುವ ಧಾರ್ಮಿಕ ಸಹಿಷ್ಣುತೆಯೇ ಹೌದಾಅಲ್ಲವಾ.... ನೀವೇ ಹೇಳಿ?
ಇನ್ನು ನಮ್ಮಲ್ಲಿ ಮತಾಂತರ ಎಂಬುದೇ ಇಲ್ಲ. ಈಗಿನವರು ಬೊಬ್ಬೆಹೊಡೆಯುತ್ತಾರೆ ಹೊಡೆಯಲಿ ಬಿಡಿ. ಅದು ಒಂದು ರಾಜಕೀಯ. ನಮ್ಮಲ್ಲಿ ಮತಾಂತರ ಎಂಬ ಶಬ್ದವನ್ನು ಬಿತ್ತಿದವರು ಕ್ರಿಶ್ಚಿಯನ್ ಮತ್ತು ಮುಸ್ಲಿಂರು. ಮತ - ಧರ್ಮ ಎಂದರೆ ನಮ್ಮ ಆತ್ಮ ಸಂಸ್ಕಾರಕ್ಕೇ ಬೇಕಾದ ಒಂದು ಆಚರಣೆ ಅಷ್ಟೇ. ಅದು ಯಾವ ರೀತಿ ಆದರೆ ಏನು? ಪುರಂದರದಾಸರು ಹೇಳಿದ್ದಾರೆ "ಮಾನವ ಜನ್ಮ ದೊಡ್ಡದು" ಎಂದು ಅಂದರೆ ಅದನ್ನು ನಾನಾ ರೀತಿಯಲ್ಲಿ ಅರ್ಥ ಮಾಡಿಕೊಳ್ಳ ಬಹುದು. ಸುಖವನ್ನೇ ಗುರಿಯಾಗಿಟ್ಟವ ಮಾನವ ರಾಗಿ ಸುಖ ಪಡುವುದೇ ನಮ್ಮ ಗುರಿ ಎಂಭುದಕ್ಕೆ ಮಾವನ ಜನ್ಮ ದೊಡ್ಡದು ಎಂದು ಹೇಳಿಕೊಳ್ಳ ಬಹುದು. ಯುವಕ ಯುವತಿಯರು ಲೈಂಗಿಕ ಜೀವನದಲ್ಲಿ ಕಾಣವು ಸುಖವನ್ನೇ ಗುರುಸತಿಸಿಕೊಂಡು ಮಾನವ ಜನ್ಮವೇ ದೊಡ್ಡದು ಎಂದು ಹೇಳ ಬಹುದು. ಆದರೆ ಅವರು ಹೇಳಿದ ಅರ್ಥ. ಮನುಷ್ಯನಿಗೆ ಜ್ಞಾನ ವಿದೆ. ಆದುದರಿಂದ ತನ್ನನ್ನು ತಾನು ಅರ್ಥಮಾಡಿಕೊಂಡು ನಾನು ಅಂದರೆ ಶರೀರವೇ ಅಥವಾ ಕಣ್ಣಿಗೆ ಕಾಣದ ಸೂಕ್ಷ್ಮ ಶರೀರ ವೆನಿಸುವ ಪ್ರಾಣವೇ ಎಂಬ ಸತ್ಯವನ್ನು ತಿಳಿದು ಧರ್ಮ ಆಚರಣೆಯಿಂದ ಮೋಕ್ಷವನ್ನು ಹೊಂದುವುದು ಸಾಧ್ಯವೆಂಬ ಅರ್ಥದಲ್ಲಿ ಹೇಳಿದರು.
ಹಾಗಾಗಿ ಧರ್ಮ ಎಂದರೆ ಮೋಕ್ಷಕ್ಕೆ ಹೋಗುವ ಧಾರಿ. ಅದಕ್ಕೆ ಕ್ರಿಶ್ಚಿಯನ್ ಧರ್ಮ ಆದರೇನು ಮುಸ್ಲಿಂ ಧರ್ಮ ಆದರೇನು? ಹಿಂದೂ ಧರ್ಮ ಅದರೇನು? ಎಂಬುದೇ ಸತ್ಯ.ಹಾಗಾಗಿ ನಮಲ್ಲಿ ಆಚರಣೆಯನ್ನು ಅನುಸರಿಸಿ ಹೇಳುವುದಾದರೆ ಬೌದ್ಧ. ಜೈನ ಮೊದಲಾದ ಧರ್ಮಗಳು ಇಲ್ಲಿ ಹುಟ್ಟಿ ಬೆಳೆದಿವೆ ಅದರ ಅನುಯಾಯಿಗಳು ಇದ್ದಾರೆ ಇದು ಕ್ರಿಶ್ಚಿಯನ್ ಮುಸ್ಲಿಂ ಧರ್ಮ ಭಾರತಕ್ಕ ಬರುವುದಕ್ಕೂ ಮೊದಲು ನಡೆದದ್ದು. ಈ ಸಂದರ್ಭದಲ್ಲಿ ಸಾವಿರಾರು ಜನ ಆ ದಾರಿಯನ್ನು ಹಿಡಿದಿದ್ದಾರೆ. ಆದರೆ ಅವರನ್ನು ನಾವು ಎಂದಿಗೂ ದೂರ ಮಾಡಲಿಲ್ಲ. ಮತಾಂತರ ಎಂದು ಅನಿಸಲೇ ಇಲ್ಲ. ಯಾಕೆಂದರೆ ಅವನ ದಾರಿ ಅವನಿಗೆ. ಒಟ್ಟಿನಲ್ಲಿ ಅವನಿಗೆ ಅಲ್ಲಿ ಒಳ್ಳೆಯದಾಗುವುದಾದರೆ ಆಗಲಿ ಎಂಬ ನಂಬಿಕೆ ನಮ್ಮದು. ಹೀಗೆ ನಮ್ಮ ದೇಶ ಹಾಗೂ ಜನರ ನರ ನಾಡಿಗಳಲ್ಲಿ ಧಾರ್ಮಿಕ ಸಹಿಷ್ಣತೆ ತುಂಬಿದೆ. ಅದುವೇ ನಮ್ಮ ಉಸಿರು. ಅದುವೇ ನಮ್ಮ ನಂಬಿಕೆ.
ಆದರೂ ನಮಲ್ಲಿ ಅಲ್ಲಲ್ಲಿ ಧರ್ಮ ನಂಬಿಕೆ ವಿಚಾರದಲ್ಲಿ ನಿತ್ಯವೂ ದೊಂಬಿ ಎಬ್ಬಿಸುವವರು ಇದ್ದಾರೆ. ಇಲ್ಲ ಎಂದು ನಾವು ಹೇಳುವುದಿಲ್ಲ. ಪ್ರಪಂಚವೇ ಹಾಗೆ ಒಳ್ಳೆಯದು ಕೆಟ್ಟದ್ದೂ ಎರಡೂ ಇರಲೇ ಬೇಕು. ಒಂದು ಇದ್ದು ಇನ್ನೊಂದು ಇರದಿದ್ದರೆ ಒಳ್ಳೆಯದು ಕೆಟ್ಟದು ಎಂದು ಯಾವುದನ್ನೂ ಗುರುತಿಸಲು ಆಗುವುದಿಲ್ಲ. ಭಾರತದಲ್ಲಿ ಧಾರ್ಮಿಕ ಸಹಿಷ್ಣತೆ ಇಲ್ಲ ಎನ್ನುವುದೇ ಶುದ್ಧ ಸುಳ್ಳು ಮತ್ತು ನಮ್ಮ ರಾಜಕಾರಣಿಗಳಂತೆ ನಿಮ್ಮದೂ ಒಂದು ರಾಜಕಾರಣದ ಹೇಳಿಕೆಯೇ?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ