ಮಾನವನ ಶತ್ರು ನಾನು.......?
ನಾನು ಒಬ್ಬ ರಾಜಕಾರಣಿ, ನಾನು ಒಬ್ಬ ಶಿಕ್ಷಕ, ನಾನು ಒಬ್ಬ ಪಂಡಿತ, ನಾನು ಒಬ್ಬ ಕಲಾವಿದ, ನಾನು ಒಬ್ಬ ಸಭ್ಯ ಗೃಹಸ್ಥ, ನಾನೊಬ್ಬ ಧನಿಕ ಹೀಗೆ ನಾ ನಾ ಕಾರಣಗಳಿಂದ ಮನುಷ್ಯನಲ್ಲಿ 'ಅಹಂ` ತುಂಬಿಕೊಂಡಿರುತ್ತದೆ. ಈ ಅಹಂಕಾರ ಸರ್ವತ್ರ. ಯಾರನ್ನೂ ಬಿಟ್ಟಿರುವುದಿಲ್ಲ. 'ನಾನು' ಎಂದು ತನ್ನನ್ನು ಪ್ರತಿನಿಧಿಸಿಕೊಳ್ಳುತ್ತಿರುವ ವ್ಯಕ್ತಿತ್ವವು ಆ ವ್ಯಕ್ತಿಯ ಭೌತ ಶರೀರಕ್ಕೆ ಸಂಬಂಧಪಟ್ಟದ್ದು.
ಅಂದುಕೊಳ್ಳುವಾಗ ಪ್ರಪಂಚದಲ್ಲಿ ನನ್ನಂತೆ ಯಾರೂ ಇಲ್ಲ ಎಂಬ ಭಾವನೆ ಇಂಥವರಲ್ಲಿ ಬೆಳೆದಿದ್ದು ಅವರ ಮಾತು ನಡವಳಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುತ್ತದೆ. ಹಾಗಾಗಿ ಇವರನ್ನು ಅಹಂಕಾರಿ ಎಂದು ತಿಳಿದವರು ಗುರುತಿಸುತ್ತಾರೆ. ಈ ರೀತಿಯ ಸ್ವಭಾವದವರಿಗೆ ಯಾವಾಗಲೂ ತನ್ನ ಸುಖಕ್ಕೆ ಬೇಕಾದುದನ್ನು ಹೊಂದುವ ಅವರಸರದಲ್ಲಿ ಇವರು ಬೇರೆಯವರಿಗೆ ಕೆಡುಕಾಗುತ್ತದೋ ಏನೋ ಎಂಬ ಚಿಂತೆಯನ್ನು ಮಾಡದೆ, ಏನೆಲ್ಲಾ ಬೇಕು ಅದನ್ನೆಲ್ಲಾ ಮಾಡುತ್ತಲೇ ಇರುತ್ತಾರೆ, ಇವರಿಗೆ ತನ್ನ ತಂದೆ - ತಾಯಿ, ಅಣ್ಣ ತಮ್ಮ ಅಕ್ಕ ತಂಗಿ, ಬಂದು ಬಳಗ ಸ್ನೇಹಿತರು ಈ ಮೊದಲಾದ ಸಂಬಂಧಗಳಿಗೆ ಯಾವ ಬೆಲೆಯೂ ಕೊಡುವವರಲ್ಲ. ಯಾಕೆಂದರೆ ಇವರು ಎಲ್ಲ ಚಂತನೆಗಳಲ್ಲಿ ಸ್ವಾರ್ಥ ತುಂಬಿಕೊಂಡಿರುತ್ತದೆ. ಇವೆಲ್ಲಕ್ಕೂ ಕಾರಣ ಅಹಂಕಾರ.
ಈ ರೀತಿ ಅಹಂಕಾರ ಬೆಳೆಯಲು ಅವರಲ್ಲಿರುವ ಅಜ್ಞಾನವೇ ಕಾರಣ. ತಾನು ಏನೇ ಸಾಧನೆ ಮಾಡಿರಬಹುದು ಎಲ್ಲರಿಗಿಂತಲೂ ಶ್ರೇಷ್ಟವಾದ ವಿದ್ವತ್ ಅವರಲ್ಲಿ ಇರಬಹುದು. ಅವರು ಸಂಪಾದಿಸಿದ ಐಶ್ವರ್ಯ ಅವರಲ್ಲಿ ಇರಬಹುದು, ಅವರಲ್ಲಿ ಕಲಾವಿದನ ಪ್ರತಿಭೆ ಇರಬಹುದು. ಆದರೆ ಅವನಲ್ಲಿರ ಬೇಕಾದ ಮಾನವನೆನಿಸಲು ಇರಬೇಕಾದ ಆತ್ಮಜ್ಞಾನ ಇಲ್ಲದೇ ಇದ್ದರೆ ಏನೂ ಪ್ರಯೋಜನವಿಲ್ಲ.
ಮನುಷ್ಯನೆಂದರೆ ಯಾರು? ಆತ್ಮ ಎಂದರೆ ಏನು? ನಾವು ವಿಶ್ವದಲ್ಲಿ ಒಂದು ಪ್ರಾಣಿ (ಪ್ರಾಣವುಳ್ಳದೆಲ್ಲ ಪ್ರಾಣಿ) ಆದರೆ ಪ್ರಾಣಿಗಳಲ್ಲಿ ವಿಶೇಷ ವಾಗಿ ವರ್ಗೀಕರಿಸಲ್ಪಟ್ಟ ಪ್ರಾಣಿ. ಅದಕ್ಕೆ ಕಾರಣ ಇದೆ. ಪ್ರಾಣಿಗಳಿಗೆಲ್ಲ ಇರುವಂತೆ ಮನುಷ್ಯನಿಗೂ ಹಸಿವು, ಬಾಯಾರಿಕೆ ನಿದ್ರೆ ಮೈಥುನ ಎಲ್ಲವೂ ಇದೆ. ಆದರೆ ಪ್ರಾಣಿಗಳಂತೆ ಮನುಷ್ಯ ಯಾವಾಗ ಬೇಕೆಂದರೂ, ಆಥವಾ ಸಿಕ್ಕಿದ್ದನ್ನು ತಿನ್ನವುದಿಲ್ಲ ಖುಷಿ ಬಂದಹಾಗೆ ಬದುಕುವುದಿಲ್ಲ. ಅವನ ಬದುಕು ನಿಯಂತ್ರಕ್ಕೆ ಒಳಪಟ್ಟಿರುತ್ತದೆ. ಒಂದು ರೀತಿ ನೀತಿ, ಆಚಾರ ವಿಚಾರ, ನಂಭಿಕೆ ಈ ಎಲ್ಲವನ್ನೂ ಒಳಗೊಂಡು ಒಂದು ನಿಯಂತ್ರಣವನ್ನು ಹೊಂದಿರುವ ಬದುಕು ಮಾನವನದು. ಈ ನಿಯಂತ್ರಣವನ್ನು ತೊರೆದು ಬದುಕನ್ನು ಅನುಭವಿಸುವುದಕ್ಕೂ ಇವರಿಗೆ ಆಗುವುದೇ ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮನ್ನು ನಿಯಂತ್ರಣಕ್ಕೆ ಒಳಪಡಿಸುವುದು ಮತ್ತು ಒಳಪಡಿಸಿದ್ದು ಯಾರು? ಸಾಮಾನ್ಯವಾದ ಉತ್ತರ ನಮ್ಮ ಧರ್ಮದಿಂದ ಒಳಗೊಂಡ ಆಚಾರ ವಿಚಾರ. ಒಂದು ವಸ್ತುವಿನ್ನು ಗುರುತಿಸಲ್ಪಡುವುದು ಅದರ ಧರ್ಮದಿಂದ. ಅದು ಮನುಷ್ಯನಿಗೂ ಅನ್ವಯಿಸುತ್ತದೆ, ಇತರ ಪ್ರಾಣಿ, ಪಕ್ಷಿಗಳಿಗೂ ಅನ್ವಯಿಸುತ್ತದೆ. ಸೂರ್ಯ ಚಂದ್ರರಿಗೂ ಅನ್ವಯಿಸುತ್ತೆ ಒಟ್ಟಿನಲ್ಲಿ ಹೇಳುವುದಾದರೆ ಅಣುಗಳನ್ನೂ ಗುರುತಿಸುವುದು ಅದರ ಧರ್ಮದಿಂದಲೇ. ಆಂತಹ ಒಂದು ಗುಣ ಮನುಷ್ಯನನ್ನೂ ಪ್ರಾಣಿಗಳಿಂದ ವರ್ಗೀಕರಿಸಿ ಮಾನವ ಎಂದು ಹೇಳಿಕೊಳ್ಳಲು ಕಾರಣವಾಯಿತು. ಅದಕ್ಕೆ ಕಾರಣ ಜೀವಿಗಳಲ್ಲಿ ಶರೀರ ಮತ್ತು ಅದರಲ್ಲಿರುವ ಜೀವ
ಅದೇ ಧರ್ಮ ಆಚರಣೆಯನ್ನು ಒಪ್ಪಿಕೊಂಡಿದ್ದರೂ ಕೆಲವು ಸಂದರ್ಭದಲ್ಲಿ ಆಧರ್ಮದಲ್ಲಿ ಇಲ್ಲದೇ ಇರುವುದನ್ನು ಆಚರಿಸುವುದೂ ಇದೆ, ಯಾವುದೇ ಧರ್ಮದಲ್ಲಿ ಹಿಂಸೆಯನ್ನು ಬೋಧಿಸುವುದೇ ಇಲ್ಲ. ಒಂದು ವೇಳೆ ಬೋಧಿಸಿದರೆ ಅದು ಅಧರ್ಮ. ಹೀಗೆ ಒಬ್ಬ ವ್ಯಕ್ತಿ ತನ್ನ ಅನುಕೂಲಕ್ಕೆ ಏನು ಬೇಕು ಅದನ್ನೆಲ್ಲಾ ಆಚರಿಸುವುವಾಗ ನ್ಯಾಯ ನೀತಿ ಸತ್ಯ ಧರ್ಮ ಆಚಾರ ವಿಚಾರ ಎಲ್ಲವನ್ನೂ ಗಾಳಿಗೆ ತೂರುವುದೂ ಇದೆ. ಇದಕ್ಕೆ ಕಾರಣ ಅಹಂಕಾರ ಅಂದರೆ ಶರೀರವೇ ಪ್ರಧಾನವೆಂಬ ನಂಬಿಕೆಯಿಂದ ಬದುಕುವ ಮನುಷ್ಯ,
ಆದರೆ ನಿಜವಾದ ಮನುಷ್ಯನ ಸ್ವರೂಪ ಅದಲ್ಲ. ಶರೀರದಿಂದ ಪ್ರಾಣಿಯಾಗಿರುವ ಜೀವಿಯಲ್ಲಿರುವ ಪ್ರಾಣ, ಅಥವಾ ಜೀವ ಅಥವಾ ಆತ್ಮದಲ್ಲಿ ಇರುವ ಸತ್ಯ ಧರ್ಮವೇ ಅವನ ನಿಜವಾದ ಸ್ವರೂಪ. ಅಂತವನಲ್ಲಿ ನಾನು ಎಂಬುದು ಇರುವುದೇ ಇಲ್ಲ. ಶರೀರ ನಾನು ಎನ್ನಲು ಅದರಲ್ಲಿರುವ ಜೀವದ ಸಹಾಯ ಬೇಕಾಯಿತು. ಜೀವ ಇಲ್ಲದೇ ಇದ್ದರೆ ಆ ಶರೀರ ನಾನು ಎನ್ನುವುದು ಸಾಧ್ವವೇ ಇಲ್ಲ. ಆದುದರಿಂದ ನಾನು ಎನ್ನುವುದು ಮನುಷ್ಯನೊಂದಿಗೆ ಹುಟ್ಟಿ ಮನುಷ್ಯನೊಂದಿಗೆ ಸಾಯುತ್ತದೆ. ಅದು ಕೇವಲ ಶರೀರ ದ್ಯೋಕವಾದ ಶಬ್ದ. ಆದರೆ ಅದೇ ಶರೀರ ನಾನು ಮತ್ತು ಪ್ರಾಣ ಸೇರಿಯೇ ಈ ಶರೀರದ ಅಸ್ತಿತ್ವವನ್ನು ಅರಿತುಕೊಂಡಾಗ ಅವನ ಇಡೀ ಬದುಕೇ ನಿಯಮ ಬದ್ಧವಾಗಿರುತ್ತದೆ.
ಈ ನಾವು ಅನ್ನುವ ಶಬ್ಧದ ವಿಸ್ತಾರವನ್ನೂ ನೋಡಿ. ನಾವು ಅಂದಕೂಡಲೇ ತಂದೆ ತಾಯಿ ಅಜ್ಜ ಅಜ್ಜಿ ಹೀಗೆ ಹರಿದು ಬಂದ ಪರಂಪರೆಯನ್ನೇ ಬೆಸೆಯುವುದರೊಂದಿಗೆ ಮಕ್ಕಳು ಮರಿಗಳೊಂದಿಗೆ ನಿರಂತರವಾಗಿ ಹರಿಯುತ್ತದೆ. ಸಂಬಂಧಗಳನ್ನು ಬೆಳೆಸುತ್ತದೆ. ನಾವು ಎಂದಾಗ ಇವರು ನಮ್ಮ ತಂದೆ - ತಾಯಿ ಇವರಿಂದಾಗಿ ನಾನು ಈ ಲೋಕಕ್ಕೆ ಬರುವುದು ಸಾಧ್ಯವಾಯಿತು ಎಂಬ ಅರಿವಿನಿಂದ ಕೃತಜ್ಞತೆ, ಗೌರವ, ಪ್ರೀತಿ. ವಿಶ್ವಾಸ ಭಾವನೆಯಿಂದ ಸಂಬಂಧಗಳು ಇನ್ನಷ್ಟು ಗಟ್ಟಿಯಾಯಿತು. ಅಣ್ಣ ತಮ್ಮ ತಂಗಿ ಅಕ್ಕ ಎಂಬ ಭಾವನೆಗಳಲ್ಲಿ ಪ್ರೀತಿ ವಿಶ್ವಾಸ ಗೌರವಗಳು ಉಂಟಾಗಿ ತಪ್ಪು ಹಾಗೂ ಕೆಡುಕನ್ನು ಮಾಡುವುದು ಸಾಧ್ಯವೇ ಇಲ್ಲದೆ ಬದುಕು ಹಸನಾಗುವುದು. ಈ ಸಂಬಂಧವೂ ನೆರೆ ಕರೆಯಲ್ಲೂ ಪರಸ್ತ್ರೀಯರಲ್ಲಿಯೂ ಬೆಳೆದು ತಪ್ಪು ಮಾಡಬೇಕಾದರೆ ನೂರಾರು ಸಲ ಯೋಚಿಸುವಂತಾಗುವುದು. ಒಂದು ವೇಳೆ ತಪ್ಪು ಮಾಡಿದರೂ ಒಳಗಿನ ಮನುಷ್ಯನ ಪ್ರಶ್ನೆಗಳಿಗೆ ಉತ್ತರ ಕೊಡಲಾರದೇ ಸಹಿಸಲಾರದ ನೋವು ಅನುಭವಿಸುವುದು ಮತ್ತು ಈ ಮೂಲಕ ತನ್ನನ್ನು ತಾನು ತಿದ್ದಿಕೊಂಡು ಬದುಕುವುದೂ ಸಾದ್ಯ. ಇದು ನಿಜವಾದ ಮನುಷ್ಯನ ಲಕ್ಷಣ. ಬದುಕಿನ ಸಿದ್ದಾಂತ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ