ಬುಧವಾರ, ಫೆಬ್ರವರಿ 18, 2015

ಭಗವದ್ಗೀತೆ ಮತ್ತು  ಅಹಂಕಾರಿಗಳು  

ಭಗವದ್ಗೀತೆಯದು  ಸೂಕ್ಷ್ಮ ಶರೀರ - ಅಹಂಕಾರಿಗಳದು ಸ್ಥೂಲ ಶರೀರ

ಭಗವದ್ಗೀತೆಯ ವಿರುದ್ಧ ಹೇಳಿಕೆ ನೀಡಿರುವ  ಅಥವಾ ಭಗವದ್ಗೀತೆಯನ್ನು ತೆಗಳುವುದು ಎಂದರೆ ತಮ್ಮನ್ನು ತಾವು ತೆಗಳುವುದ ಎಂದು ಅರ್ಥ.  ಯಾಕೆಂದರೆ ಭಗವದ್ಗೀತೆ ಸೃಷ್ಟಿಯಾದಾಗ ಅಥವಾ ಅದನ್ನು ಬರೆದಾಗ  ಅದು ಜಾತೀ ಆಧಾರದಿಂದ ವಾಗಲೀ ಧರ್ಮ ಆಧಾರದಿಂದವಾಗಲೀ ಉಂಟಾಗಲಿಲ್ಲ. ಯಾಕೆಂದರೆ ಆಗ ಈಗಿನ ಹಾಗ ಧಾರ್ಮಿಕ ಚಳುವಳಿಗಳೇ ಇರಲಿಲ್ಲ. ಆದರೆ ಈಗಿನ ವಾಸ್ತವದಲ್ಲಿ ಕೆಲವರಿಗೆ ತಮ್ಮನ್ನು ಒಬ್ಬ ಹೋರಾಟಗಾರನಾಗಿ ಗುರುತಿಸಿಕೊಂಡು ಬೆಳೆಯುವುದಕ್ಕೆ ಒಂದು ವೇದಿಕೆ  ಅಷ್ಟೇ. ಒಬ್ಬರು ತೆಗಳುವುದು... ಇನ್ನೊಬ್ಬರು ಕೆರಳುವುದು ಯಾವ ತಳಹದಿಯ ಧರ್ಮ ?

ನಂಬಿಕೆಯೇ ಮನುಷ್ಯನ ಜೀವನದ ತಳಹದಿ.   ಆದರೂ ಕೆಲವರು ಅಲ್ಲ ಎಂದು ವಾದ ಮಾಡುವವರೂ ಇದ್ದಾರೆ?  ನಂಬಿಕೆ ಇಲ್ಲದಿದ್ದರೆ ಮನುಷ್ಯನ ಅಸ್ಥಿತ್ವವೇ ಇರುವುದಿಲ್ಲ. ಇದಕ್ಕೆ ಉದಾಹರಣೆ ತನ್ನ ತಂದೆಯನ್ನು ಪ್ರತಿಯೊಬ್ಬನೂ ಗುರುತಿಸುವುದು ತಾಯಿಯಿಂದ ಮಾತ್ರ ಸಾದ್ಯ. ಇದು ಕಣ್ಣಿಗೆ ಕಾಣದ ಸತ್ಯ.  ಆದರೆ ತಾಯಿಯನ್ನು ಪ್ರತಿಯೊಬ್ಬರೂ ನಂಬುವಂತೆ ಹಾಗೆಯೇ ತಾಯಿ ಹೇಳಿದ್ದನ್ನೂ ನಂಬುತ್ತೇವೆ.  ಆದುದರಿಂದ ಸತ್ಯ ಎನ್ನುವುದು ಎಷ್ಟು ವಾಸ್ತವೋ ಅಷ್ಟೇ ಕಣ್ಣಿಗೆ ಕಾಣವುದಿಲ್ಲ.  ಈ ಸತ್ಯದ ಮುಂದೆಯೂ ಯಾರಾದರೂ ವ್ಯತಿರಿಕ್ತವಾಗಿ ವಾದ ಮಾಡುತ್ತಾರೆಂದರೆ ಅದು ಅವನಲ್ಲಿ ಇರುವ  ಆಹಂಕಾರವೇ ಕಾರಣ.   ಆಹಂಕಾರ ಇದ್ದವ ಸತ್ಯವನ್ನು ನಂಬುವುದಿಲ್ಲ. ಹಾಗೂ ಅವನು ಕಣ್ಣಿಗೆ ಕಂಡದ್ದನ್ನು ಮಾತ್ರ ಸತ್ಯವೆಂದು ನಂಬುತ್ತಾನೆ.  ಆಹಂಕಾರ ಎಂದರೆ ಶರೀರವೇ ಪ್ರಧಾನವಾಗಿ  ಇರುವ ನಂಬಿಕೆ.  ಅಹಂ ಎಂಬ ಮಮಕಾರ , ಪ್ರೀತಿ. ಇವರೆಲ್ಲ ಶರೀರವನ್ನೇ ಮನುಷ್ಯ ಎಂದು ನಂಬಿಕೊಂಡು ಬದುಕನ್ನು ನಡೆಸುತ್ತಿರುತ್ತಾರೆ.  ಇವರಿಗೆ ಶರೀರದ ಅಸ್ತಿತ್ವಕ್ಕೆ ಕಾರಣವೇನು ಎಂಬ ನಂಬಿಕೆಯೇ ಇವರಿಗೆ ಇರುವುದಿಲ್ಲ. ಕೇವಲ “ನಾನು”

ಮನುಷ್ಯನ ಶರೀರದ ಅಸ್ತಿತ್ವಕ್ಕೆ  ಬೇಕಾಗುವ ಪ್ರಾಣವೇ ಮನುಷ್ಯನ ಅಸ್ತಿತ್ವ ಎಂಬ ಸತ್ಯವನ್ನು ಎಲ್ಲಿಯ ವರೆಗೆ ತಿಳಿಯುವುದಿಲ್ಲವೋ ಅಲ್ಲಿಯವರೆಗೆ ಇಂಥವರಿಗೆ ಭಗವದ್ಗೀತೆಯಾಗಲಿ ದೇವರಾಗಲೀ ಜಾತಿಯಾಗಲಿ, ಧರ್ಮವಾಗಲಿ ಅರ್ಥವಾಗುವುದೇ ಇಲ್ಲ.   ಇಂಥವರು ಸಮಾಜದಲ್ಲೇ ಬ್ರಹ್ಮನ ಹಾಗೆ ನಾನೇ ಬ್ರಹ್ಮ ಎಂದು ತಿಳಿದು ಬ್ರಹ್ಮಸೃಷ್ಟಿಯನ್ನೇ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ನಿಜವಾಗಿಯೂ ಇದೊಂದು ಅಲಕ್ಷಿಸಬೇಕಾದ ವಿಚಾರ. 

ಪ್ರತಿಯೊಬ್ಬ ಮನುಷ್ಯ ಅವನು ಹೇಳಿದ್ದನ್ನು ಕೇಳಿ ತಾನು ಬದುಕನ್ನು ರೂಪಿಸಿಕೊಳ್ಲುವುದಕ್ಕಿಂತಲೂ, ತನ್ನ ಬದುಕು  ಹೇಗಿರ ಬೇಕು ಎಂದು ತೀರ್ಮಾನ ಮಾಡುವ ಹಕ್ಕು ಪ್ರತಿಯೊಬ್ಬನಿಗಿದೆ, ಅದಕ್ಕೆ ಯಾವುದೇ ಧರ್ಮವಾಗಲಿ ಆಚಾರವಾಗಲಿ ವಿಚಾರವಾಗಲಿ ಅಡ್ಡಿ ಬರುವುದಿಲ್ಲ.  ಉದಾಹರಣೆಗೆ : ಮನುಷ್ಯನಾದವ (ಶರೀರದಿಂದಲ್ಲ - ಆತ್ಮದಿಂದ) ಹೆಣ್ಣು ಮಕ್ಕಳನ್ನು ಗೌರವಿಸುತ್ತಾನೆ, ಪ್ರೀತಿಸುತ್ತಾನೆ  ಅವನ ಪಾಲಿಗೆ ಅವಳು ದೇವತೆ , ಮನೆಬೆಳಗುವ ಸೊಸೆ,  ತಂದೆ ತಾಯಿಗೆ ಪ್ರೀತಿಯ ಮಗಳು. ಹಾಗೆ  ಹುಟ್ಟಿದ ಮನೆಯನ್ನು ತೊರೆದು ಸೇರಿದ ಮನೆಯಲ್ಲಿ ಒಂದಾಗಿ ಬಾಳುತ್ತಾಳೆ. ಇಷ್ಟು ಸಾಕು ಅವಳ ಬದುಕಿನ್ನು ಅರಿತು ಅವಳನ್ನು ಗೌರವಿಸಲು. ಆದರೆ ನಾವು ಹಾಗೆ ಮಾಡುತ್ತೇವೆಯೇ?  ಹೆಣ್ಣನ್ನು ಬೋಗಿಸುವ ವಸ್ತು ಎಂದು ತಿಳದು ಅವಳಿಗೆ ಹಿಂಸೆ ಕೊಡುತ್ತೇವೆ,  ಮದುವೆಯಾದ ಗಂಡು ಅವಳನ್ನು ತನ್ನ ಅಡಿಯಾಳಾಗಿ ಮಾಡವು ಪ್ರಯತ್ನದಲ್ಲಿ ಒತ್ತಡ, ಹಿಂದೆ ಎಲ್ಲವನ್ನೂ ಬಳಸುತ್ತಾನೆ. ಇದು ಅಹಂ ಕಾರದಿಂದ ಉಂಟಾದದ್ದು - ಮನುಷ್ಯ ಎಂದು ಹೇಳುವವನ ಕೃತ್ಯವಲ್ಲ.  ಈಗ ನಾವೇ ಆಲೋಚನೆ ಮಾಡವ ರೀತಿ ಹೇಗಿದೆ? ಯಾರೋ ಮಾಡೋ ತಪ್ಪಿಗೆ ಯಾರನ್ನೋ ಬೈಯುವ ತೆಗೆಳುವ ದಿಕ್ಕರಿಸುವ  ನಿಂದಿಸುವ ಎಲ್ಲವನ್ನೂ ಮಾಡುವ  ಅರ್ಥವೇನು? ಅಲ್ಪ ವಿದ್ಯಾ  ಮಹಾ ಗರ್ವಿ ಎಂದು. ಅವನಿಗೆ ಎಲ್ಲವೂ ಗೊತ್ತಿದೆ. ಆದರೆ ಅದರ ಅರ್ಥವೇ ಗೊತ್ತಿಲ್ಲ. ಹೀಗಾಗಿ ವಿರುದ್ಧ ದಿಕ್ಕಿನಲ್ಲಿಯೇ ಮಾತಾಡುತ್ತಾನೆ.

ಈಗ ಭಗವದ್ಗೀತೆಯಲ್ಲಿನ ವಿಚಾರವಾಗಿ ಸಂಕ್ಷಿಪ್ತವಾಗಿ ಹೇಳುವುದಾದರೆ...  (ಅರ್ಥವಾಗುವವರಿಗೆ ಮಾತ್ರ) ಮನುಷ್ಯನ ಬದುಕಿನಲ್ಲಿ ಎಲ್ಲವೂ ಇದೆ. ಅವನ ಸುತ್ತಮುತ್ತಲೂ ಆಸ್ತಿ, ಅಂತಸ್ತು, ಬಂದು ಬಳಗ, ರಾಜ್ಯ  ಎಲ್ಲವೂ  ಇದೆ.  ಅದರೆ ಬದುಕು ಎಂದಾಗ ಅದು ಧರ್ಮ ಮತ್ತು ಕರ್ಮ ಬದ್ದವಾಗಿರಲೇ ಬೇಕು ಎಂಬ ಸೂಕ್ಷ್ಮವನ್ನು ಅರ್ಥವಾಗಿ ಹೇಳಿರುವ ಒಂದು ಗ್ರಂಥ ಭಗವದ್ಗೀತೆ.  ಕೆಲವು ಸಮಯದಲ್ಲಿ ಗೊಂದಲಗಳು ನಮ್ಮ ಬದುಕಿನಲ್ಲೂ ಬರುತ್ತದೆ.  ಆ ಸಮಯದಲ್ಲಿ ನಾವು ಮಾಡುವ ಕರ್ಮ ಯಾವ ಆಧಾರದ ಮೇಲೆ ಇರಬೇಕು  ಮತ್ತು ಪೂರ್ವದಲ್ಲಿ ಮನುಷ್ಯ ಎಂದರೆ ಏನು?  ಅವನ ಅಸ್ತಿತ್ವವೇನು  ಈ ಮೊದಲಾದ ಕಣ್ಣೀಗೆ ಕಾಣದ ಸತ್ಯವನ್ನು ನಮಗೆ  ಭಗವದ್ಗೀತೆ ಹೇಳಿಕೊಡುತ್ತದೆ.   ಇದರಲ್ಲಿ ಟೀಕೆಗೆ ಒಳಗಾಗುವುದೇನಿದೆ? 

ಯಾವುದೇ ಒಂದು ಕ್ರಿಯೆ  ಅಥವಾ ಒಂದು ಕರ್ಮ ಜರುಗಿದಾಗ  ಅದಕ್ಕೆ ಒಂದು ಪ್ರತಿಕ್ರಿಯೆ ಇರುತ್ತದೆ.  ಹೀಗಿ ಉಂಟಾಗುವ ಪ್ರತಿಪಲ ದಿಂದ ನಮ್ಮಗೆ ಕರ್ಮಭಾದೆ ನಮ್ಮ ನಾಶಕ್ಕೆ ಕಾರಣವಾಗದಿರಲಿ ಎಂಬುದು ಭಗವದ್ಗೀತೆಯ ಉದ್ದೇಶ.  ನೀರಿಗೆ ಸಣ್ಣ ಕಲ್ಲು ಹಾಕಿದಾಗ ಅದು ಅಲೆಯನ್ನು ಸೃಷ್ಟಿಸುತ್ತದೆ. ಏನೂ ತೊಂದರೆ ಯಾವುದಿಲ್ಲ.  ಆ ಕರ್ಮದಿಂದ ಯಾವ ಬಾದೆಯೂ ಉಂಟಾಗುವುದಿಲ್ಲ. ಆದರೆ ಒಂದು ದೊಡ್ಡ ಕಲ್ಲನ್ನು  ಹಾಕಿದಾಗ ನೀರು ಅಲೆ ಅಲೆಯಾಗಿ ದಡಕ್ಕೆ ಅಪ್ಪಳಿಸಿ ನಾ ನಾ ವಿಧದ ಸಂಕಷ್ಟವನ್ನು ಉಂಟುಮಾಡುತ್ತದೆ. ಹಾಗೇ  ಹಾಕಿದವನ ಮೇಲೆ ಸಿಡಿದು ಅವನನ್ನು ತೊಂದರೆಗೆ ಒಳಪಡಿಸುತ್ತದೆ. ಈ ರೀತಿ ಯಾವುದೇ ಕರ್ಮವೂ ಆಗಿರಲಿ ಅದರಿಂದ ತನಗೆ, ಕುಟುಂಬಕ್ಕೆ,  ಸಮಾಜಕ್ಕೆ,  ರಾಜ್ಯಕ್ಕೆ, ವಿಶ್ವಕ್ಕೆ ಯಾವುದೇ ತೊಂದರೆಯಾಗದಿರಲಿ ಮತ್ತು ಸಮಾಜಕ್ಕೆ ತೊಂದರೆ ಉಂಟು ಮಾಡುವ ಮತ್ತು ನಂಬಿಕೆಗೆ ವಿರುದ್ಧವಾಗಿ ನಡೆಯುವ  ವ್ಯಕ್ತಿ ಸಮಾಜಕ್ಕೆ ಕಂಟಕನಾಗಿರುವುದರಿಂದ ಅವನನ್ನೂ ನಿಗ್ರಹಿಸುವುದು ಕ್ಷತ್ರಿಯನಾದ ನಿನ್ನ ಕರ್ತವ್ಯ ಎಂಬುದನ್ನು ಮೂಲವಾಗಿ ಇಟ್ಟುಕೊಂಡು ಸಮಾಜಕ್ಕೆ ಒಂದು ಸಂದೇಶವನ್ನು ಕೊಟ್ಟಿರುವುದೇ ವಿನಹಃ  ಯಾರದೇ ಮನೆ ಹಾಳು ಮಾಡುವ ಮತ್ತು ಯಾರನ್ನೂ ನೋಯಿಸುವ ಯಾವ ವಿಚಾರವೂ ಅದರಲ್ಲಿ ಅಡಗಿಲ್ಲ. 

ತಿಳಿದರವರು ಮಾತನಾಡುವುದೇ ಇಲ್ಲ. ನನಗೆಲ್ಲವೂ ತಿಳಿದಿದೆ ಎಂದು ಹೇಳುವವರಿಗೆ ಅರ್ಥ ಮಾಡಿಸುವುದು ಸಾಧ್ಯವಿಲ್ಲ. ಅವನು ಅಹಂಕಾರಿ. ನನ್ನಗಿನ್ನೂ ಏನು ತಿಳಿದಿಲ್ಲ. ತಿಳಿಯಬೇಕಾದ್ದು ಇನ್ನಷ್ಟೂ ಇದೆ  ಎಂದುಕೊಳ್ಳುವವನೇ ಶ್ರೇಷ್ಟ. 

ಶನಿವಾರ, ಫೆಬ್ರವರಿ 14, 2015

ಮತಾಂತರದ ಗೀಳು......  ಮತ್ತು  ಗೋಳು........

ಕೆಲವರು ಮತಾಂತರ ಮಾಡಿ ನಮ್ಮ ಧರ್ಮವನ್ನು ಬೆಳೆಸಬೇಕು ಎಂದು, ಆ ಮೂಲಕ ತಾನು ದೇವರ ಕೆಲಸ ಮಾಡುತ್ತಿದ್ದೇನೆ ತನ್ನ ಧರ್ಮವನ್ನು ಉದ್ದಾರ ಮಾಡಡುತ್ತಿದ್ದೇನೆ ಎಂದು ತಿಳಿದು ಮತಾಂತರ ನಡೆಯುವುತ್ತದೆ.  ನಮ್ಮ ದೇಶದಲ್ಲಿ ಸುಮಾರು ೨೦೦೦ ವರ್ಷಗಳಿಂದಲೂ ಈ ಕೆಲಸವು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಕೆಲವರಿಗೆ ಮತಾಂತರ ಮಾಡುವುದು ಒಂದು ಗೀಳು. ಕೆಲವವರಿಗೆ ಮತಾಂತರ ವಾಗುವುದು ಒಂದು ಗೋಳು. ಇದರಿಂದ ಯಾರೂ ಯಾವ ಸಾಧನೆಯನ್ನೂ  ಮಾಡಿದಂತಾಗುವುದಿಲ್ಲ.  

ಮತ ಎಂಬುದು ಧರ್ಮವಲ್ಲ. ಮತ ಬೇರೆ ಧರ್ಮ ಬೇರೆ  ಧರ್ಮದಲ್ಲಿ ಹಲವು ಮತಗಳು ಇರುತ್ತವೆ.  ಕೆಲವರು ನಾವು ಹಿಂದಗಳಲ್ಲ ನಮ್ಮದು ಧರ್ಮವೇ ಬೇರೆ.. ಎಂದು ವಾದ ಮಾಡುತ್ತಾರೆ.  ಆದರೆ ಧರ್ಮವು ಮನುಷ್ಯನ ಉಗಮದೊಂದಿಗೆ ಆತ್ಮದಲ್ಲಿ ಹುಟ್ಟಿಕೊಂಡದ್ದು.  ಧರ್ಮದಲ್ಲಿ - ಧರ್ಮ ಮತ್ತು ಅಧರ್ಮ ಎಂದು ಇದೆ. ಆದರೆ ಮತದಲ್ಲಿ ಮತ ಮತ್ತು ಅಮತ ಎಂದು ಇಲ್ಲ.  ಮತಗಳಲ್ಲಿ ಶ್ರೇಷ್ಠ ಎಂದೂ ಇಲ್ಲ.  ಹಾಗೇನಾದರೂ ಹೇಳುವುದಾದರೆ ಅವರಿಗೆ ಧರ್ಮ ಮತ್ತು ಮತದ ಬಗ್ಗೆ ತಿಳುವಳಿಕೆ ಇಲ್ಲವೆಂದೇ ಅರ್ಥ. ಮತದ ಆಚರಣೆ ಅವನ ಆತ್ಮಸಾಕ್ಷಿಗೆ ಅನುಗುಣವಾಗಿ  ಅವನು ಆಚರಿಸುವ ರೀತಿ ನೀತಿ ಅವನಿಗೆ ಸೇರಿದ್ದು.  ಹಾಗಾಗಿ ನೀನು ಈ ಮತವನ್ನು ಆಚರಿಸು ಎಂದು ಹೇಳುವುದು ಅಂದರೆ ಮತ ಪ್ರಚಾರ ಮಾಡುವುದೇ, ಇರಲಿ ಮತಾಂತರ ಮಾಡುವುದೇ ಇರಲಿ  ಅದು ಧರ್ಮ ವಿರೋಧಿ. ಇನ್ನು ಧರ್ಮ ಮತ್ತು ಮತ ಆಚರಣೆಯೂ ಕೇವಲ ಆತ್ಮಸಂಸ್ಕಾರಕ್ಕೇ ಹೊರತು ಅದು ಬದುಕಿನಲ್ಲಿ ಆಸ್ತಿ ಅಂತಸ್ತುಗಳಿಗೂ ಯಾವುದೇ ಸಂಬಂಧವಿಲ್ಲವೇ ಇಲ್ಲ.  ಒಂದು ವೇಳೆ ಹಾಗೇನಾದರೂ ಮತಾಂತರ ಮಾಡುವಾಗ ಹೇಳಿದ್ದರೆ ಅದು ಆ ಮತದಲ್ಲಿರುವ ನ್ಯೂನತೆಯೇ ಹೊರತು ಅರ್ಹತೆಯಾಗುವುದಿಲ್ಲ. 

ಧರ್ಮ ಎಂದರೆ ಸಂಕ್ಷಿಪ್ತವಾಗಿ ಹೇಳುವುದಾದರೆ ಸೂಕ್ಷ್ಮಜೀವಿಯಾದ ಆತ್ಮ ಮನುಷ್ಯನನ್ನು ಎಚ್ಚರಿಸುವ ಒಂದು ತಾತ್ವಿಕ ವಿದಾನ ಅಥವಾ  ಶಕ್ತಿ.  ಮನುಷ್ಯನಲ್ಲಿ ಸ್ಥೂಲರೂಪ ಮತ್ತು ಸೂಕ್ಷ್ಮರೂಪ ಎಂಬುದು ಇದೆ. ನಾವು ಸತ್ತಾಗ ಸೂಕ್ಷ್ಮರೂಪ ನಮ್ಮನ್ನು ಬಿಟ್ಟು ಹೋಗಿರುತ್ತದೆ.  ಆಗ ನಾವು ಹೆಣವಾಗಿ ನಮ್ಮನ್ನು ಮಣ್ಣಿಗೋ ಬೆಂಕಿಗೋ ಒಪ್ಪಿಸುತ್ತಾರೆ. ಆತ್ಮ ನಮ್ಮ ಶರೀರದಲ್ಲಿದ್ದಷ್ಟು ದಿನವೂ ನಮ್ಮ ಶರೀರದಲ್ಲಿ ವಾಸನಾ ಪ್ರಭಾವದಿಂದಾಗಿ ಆಸೆ, ಬಯಕೆಗಳು ಉಂಟಾಗುತ್ತಿತು ಈ ಬೇಕು ಬೇಡಗಳು ಉಂಟಾಗುವುದು  ಮನಸ್ಸಿನಲ್ಲಿ,  ಮನಸ್ಸು ಎಂಬುದು ಶರೀರದಲ್ಲಿ ಇರುವ ಒಟ್ಟು ಜೀವಕೋಶ ಗಳಲ್ಲಿರುವ ಅಣುಗಳು ಹೊರಡಿಸುವ ತರಂಗಳ ಒಟ್ಟು ಮೊತ್ತ. ಹಾಗಾಗಿ ಪ್ರತಿಯೊಬ್ಬನಲ್ಲೂ ಅವನವನ ಮನಸ್ಸಿಗೆ ಅನುಗುಣವಾಗಿ ಕಾಮ ಕ್ರೋಧಗಳು ಲೋಭ ಮೋಹ ಮದ ಮತ್ಸರಗಳು ಬೇರೆ ಬೇರೆ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ಶರೀರ ಯಾವಾಗಲೂ ಮನಸ್ಸಿನ ಅಡಿಯಾಳಾಗಿ ಬೇಕು ಬೇಡಗಳ ವಿವೇಚನೆ ಇಲ್ಲದೆ ಕಾರ್ಯ ನಿರತವಾಗಿ ಧರ್ಮ ಅಧರ್ಮಗಳ ವಿವೇಚನೆ ಇಲ್ಲದೆ ಕ್ರಿಯಾಶೀಲವಾಗುವ ಸಂದರ್ಭದಲ್ಲಿ ಅವನ್ನು ನಿಯಂತ್ರಿಸುವ ಬುದ್ಧಿ ಧರ್ಮ -  ಅಧರ್ಮದ ವಿವೇಚನೆಗೆ ತೊಡಗಿ ಶರೀರಕ್ಕೆ ನಿಯಂತ್ರಣ ವನ್ನು ತರುತ್ತದೆ ಅದುವೇ ನಿಜವಾದ ಅರ್ಥದಲ್ಲಿ ಧರ್ಮ.  ಈ ಧರ್ಮ ಎಂಬ ತತ್ವವು ವಿಶ್ವದ ಪ್ರತಿಯೊಂದು ಅಣುಗಳಲ್ಲಿಯೂ ಇರುವುದರಿಂದ ನಾವು ದೇವರನ್ನು ಅಣು ರೇಣು ತೃಣ ಕಾಷ್ಟಗಳಲ್ಲಿಯೂ ಇರುತ್ತಾನೆ ಎಂದು ಹೇಳುತ್ತೇವೆ. ...... ಇದು ಧರ್ಮದ ಅಸ್ತಿತ್ವದ ಒಂದು ಸ್ವರೂಪವಷ್ಟೇ ಇದನ್ನು ಇನ್ನೂ ಮೂಲದಲ್ಲೂ ಕಾಣವುದು ಸಾಧ್ಯ. ಹೀಗೆ ಧರ್ಮದ ಮೂಲ ಅದರ ಉಗಮವನ್ನು ಹುಡುಕುತ್ತಾ ಹೋಗಲೂ ಬಹುದು..... ಅದಕ್ಕೆ ಆತ್ಮಜ್ಞಾನ ಇರಲೇ ಬೇಕು.....

ಈರೀತಿಯಿಂದಾಗಿ ಧರ್ಮ ಮತ್ತು ಮತಗಳನ್ನು ಸರಿಯಾಗಿ ಅರಿಯದೆ, ತಮ್ಮ ತಮ್ಮ ಅರಾಧ್ಯ ಮೂರ್ತಿ ಮತ ಸ್ಥಾಪಕರನ್ನೂ ಅರಿಯದೇ ಈಗಿನವರು ಹುಟ್ಟಿಸುವ ದಾಂದಲೇಯೇ ಮತಾಂತರ.  ಅರ್ಥ ಇಲ್ಲದ ಬದುಕು....  ಅರ್ಥ ಇಲ್ಲದ ಕಾನೂನು...  ಅರ್ಥ ಇಲ್ಲದೆ ಆಚರಣೆ.....ಕಲಿಕಾಲದ ಮಹಿಮೆ ಎಂದೇ ಹೇಳಬೇಕಲ್ಲದೆ ಬೇರೆ ಏನನ್ನೂ ಹೇಳಲು ಸಾಧ್ಯವಿಲ್ಲ. ಹಾಗಿದ್ದೂ ಹೇಳುವುದು ನಮ್ಮ ಧರ್ಮವೇ ಶ್ರೇಷ್ಟ? ಮಾಡುವುದು ಮಾತ್ರ ಅನಾಚಾರ....  "ಯಾವಾಗ ಮನುಷ್ಯ ಅಂತರಂಗವನ್ನು ಅರಿಯುವುದಿಲ್ಲವೋ ಅಲ್ಲಿಯವರೆಗೆ ಅಧರ್ಮವು ನಡೆಯುತ್ತಲೇ ಇರುತ್ತದೆ"  ಹಾಗಾಗಿ ತಿಳಿದವರು ಮಾತನಾಡುವುದೇ ಇಲ್ಲ.  ತಿಳಿಯದವರು ಬೊಬ್ಬೆ ಹೊಡೆಯುವುದು ಜೋರಾಗಿ ಕೇಳುತ್ತಿರುತ್ತದೆ


ಗುರುವಾರ, ಫೆಬ್ರವರಿ 12, 2015

ಭಾರತದಲ್ಲಿ  ಧಾರ್ಮಿಕ ಸಹಿಷ್ಣುತೆ........

ಭಾರತದಲ್ಲಿ  ಧಾರ್ಮಿಕ ಸಹಿಷ್ಣುತೆ ವಿಚಾರದಲ್ಲಿ ಅಮೇರಿಕಾ ಅಧ್ಯಕ್ಷರಾದ ಬರಾಕೋ ಓಬಾಮ ಅವರು  ನುಡಿದಿರುವ ಮಾತುಗಳು  ''ಭಾರತದಲ್ಲಿ ನಡೆಯುತ್ತಿರುವ ಧಾರ್ಮಿಕ ಅಸಹಿಷ್ಣುತೆ ಕೃತ್ಯಗಳನ್ನು ನೋಡಿದ್ದಿದ್ದರೆ ರಾಷ್ಟ್ರಪಿತ  ಮಹಾತ್ಮಾ ಗಾಂಧಿ ಅವರು  ಆಘಾತ ಗೊಳ್ಳುತ್ತಿದ್ದರು'' ಬೇರೆ ಬೇರೆ ಮನೋಭಾವದವರು ಅವರಿಗೆ  ಬೇಕಾದಂತೆ ಅರ್ಥೈಸಿ ಹೇಳಿಕೆ ನೀಡಿರುವುದು ಒಂದು ರಾಜಕೀಯ ಬಣ್ಣ ಪಡೆದ ವಿಚಾರ.  ಆದರೆ ಬರಾಕೋ ಓಬಾಮ ಯಾವ ಅರ್ಥದಲ್ಲಿ ಹೇಳಿದರು ಎಂಬುದನ್ನು ಊಹಿಸಿವುದಕ್ಕಿಂತಲೂ ನಮ್ಮಲ್ಲಿರುವ ಸತ್ಯವನ್ನು ಅವರಿಗೆ ಮನಗಾಣಿಸುವುದ ಮುಖ್ಯ.  ಗಾಂಧೀಜಿಯವರು  ಧಾರ್ಮಿಕ ವಿಚಾರವನ್ನು ಯಾವತ್ತೂ ಹೆಚ್ಚಾಗಿ ಪ್ರಸ್ತಾಪಿಸಲೇ ಇಲ್ಲ. ಅವರು ವಿಚಾರದಲ್ಲಿ ನಿನ್ನ ಒಂದು ಕೆನ್ನೆಗೆ ಹೊಡೆದರು ಎಂದಾದರೆ ಇನ್ನೊಂದು ಕೆನ್ನೆಯನ್ನು ಕೊಡು ಎಂಬುದು.  ಅಂದರೆ ಅವರು ನೋವನ್ನು ಅನುಭವಿಸಿದರೂ ಚಿಂತಿಲ್ಲ ಸತ್ಯಕ್ಕೆ ಹೋರಾಡು ಎಂಬ ನೀತಿ ನಮಗೆ ಉಡುಗೊರೆಯಾಗಿ ಕೊಟ್ಟರು. ಹಾಗಾಗಿಯೇ ಭಾರತ ವಿಭಜನೆಯ ಸಂದರ್ಭದಲ್ಲಿ ಕಠಿಣ ನಿಲುವನ್ನು ತಾಳಲಾರದೆ  ಸಮಸ್ಯೆಗೆ ಕಾರಣವಾಗಿ ಹೋಯಿತು.

ಅದೇನೇ ಇರಲಿ. ಭಾರತದಲ್ಲಿ ಧಾರ್ಮಿಕ ಸಹಿಷ್ಣತೆ ಇಲ್ಲ ಎಂದು ಹೇಳಿದವರಾರು?  ಭಾರತದಲ್ಲಿ ಹಾಗೂ ಭಾರತೀಯರಲ್ಲಿ ಇರುವಷ್ಟು ಧಾರ್ಮಿಕ ಸಹಿಷ್ಣುತೆ ಬೇರೆ ಯಾವ ದೇಶದಲ್ಲೂ ಯಾವ ಧಾರ್ಮಿಕ ನೀತಿಯಲ್ಲೂ  ಕಾಣುವುದಿಲ್ಲ.  ನಮ್ಮ ಸಂಸ್ಕೃತಿಯಲ್ಲಿ ತಿಳಿದೋ ತಿಳಿಯದೆಯೋ ವಿದ್ಯಾವಂತನೋ ಅವಿದ್ಯಾವಂತನೋ ಪ್ರತಿಯೊಬ್ಬನಲ್ಲಿಯೂ ಅಂತರಂಗದಲ್ಲಿ ಮನುಷ್ಯತ್ವವಿದೆ.  ಹಾಗೆಂದು  ಕ್ರೌರ್ಯವಿಲ್ಲವೆಂದಲ್ಲ. ಅದಕ್ಕಿಂತಲೂ ಮೀರಿ ನಾವು ಶರೀರದಿಂದ ಮನುಷ್ಯ ಅನಿಸುದಕ್ಕಿಂತಲೂ ಆತ್ಮದಿಂದ ಮನುಷ್ಯ ಅನಿಸಿಕೊಳ್ಳುತ್ತೇವೆ. ಹಾಗಿ ನಮಗೆ ಭಾವನಾತ್ಮ ಸಂಬಂದ ಕುಟುಂಬದಲ್ಲಿ ಸಮಾಜದಲ್ಲಿ ಪರಿಸರದಲ್ಲಿ  ನಂಬುಗೆಯಲ್ಲಿ ದೇಶದಲ್ಲಿ ವಿಶ್ವದಲ್ಲಿ ಬೆಳೆಸಿಕೊಂಡಿರುತ್ತೇವೆ.  ಇಲ್ಲಿನ  ಒಂದು ಕುಗ್ರಾಮದ ಒಂದು  ಅಜ್ಜಿ ತನಗೆ ಬೇಕಾದ ನೀರನ್ನು ಬಹಳ ಕಷ್ಟದಿಂದ ದೂರದಿಂದ ಹೊತ್ತು ಬರುತ್ತಿದ್ದರೂ ದಾರಿಹೋಕನೊಬ್ಬ ಬಾಯಾರಿದ್ದಾನೆಂದರೆ ಆ ನೀರನ್ನೇ ಕೊಟ್ಟು ಸಂತೋಷ ಪಡುವಷ್ಟು ಧಾರ್ಮಿಕ  ಸಹಿಷ್ಣುತೆ ನಮ್ಮಲ್ಲಿ ಇದೆ.  ನಮ್ಮ ಪುರಾಣಗಳಲ್ಲಿ ಹೇಳುವುದೇ ''ಸರ್ವಜನ ಸುಖಿನೋ ಭವಂತು'' ಎಂದು.

ನಮ್ಮಲ್ಲಿ ಧಾರ್ಮಿಕ ಸಹಿಷ್ಣುತೆ ಇಲ್ಲ ಎಂದು ನಿಮಗೆ ಅನಿಸಿದರೆ. ಅಥವಾ ನಮ್ಮಲ್ಲಿ ಮತೀಯ ಗಲಭೆಗಳು ನಡೆದಿರುವುದು  ಧಾರ್ಮಿಕ ಅಸಹಿಷ್ಣುತೆ ಎಂದು ನಿಮಗೆ ಅನಿಸಿದರೆ ಅದಕ್ಕೆ ನಮ್ಮ ಸನಾತನ ಧರ್ಮ ಹೊಣೆಯಲ್ಲ. ನಮ್ಮಲ್ಲಿ ಎಷ್ಟೋ ಹಳ್ಳಿ ಗಳಲ್ಲಿ ವಿವಿಧ ಜನಾಂಗದ ಜನ ಒಂದಾಗಿ ಆತ್ಮೀಯವಾಗಿ ಬದುಕುತ್ತಿದ್ದಾರೆ. ಅವರಲ್ಲಿ ಯಾವ ಭೇದಭಾವವೇ ಇಲ್ಲ. ನಮ್ಮ ಮನೆಯ ಹತ್ತಿರವೂ ಹಲವಾರು ಮುಸಲ್ಮಾನ ಮನೆಗಳು ಇವೆ ನಾನು ಕಂಡ ಹಾಗೆ ಸುಮಾರು ೬೦ ವರ್ಷಗಳಿಂದಲೂ ನಾವು ಅನ್ಯೋನ್ಯವಾಗಿದ್ದೇವೆ.

ನಮ್ಮಲ್ಲಿನ ರಾಜಕೀಯ ಆಟದಲ್ಲಿ ಧಾರ್ಮಿಕವೂ ಒಂದು ಕಾಯಿ. ಹಾಗಾಗಿ ಇಷ್ಟೆಲ್ಲ ರಾಮಾಯಣವಾಗುತ್ತಿದೆ.  ರಾಜಕೀಯ ಎಂದರೆ ಏನು ಅರಸನಾದವ ಯಾವತ್ತು ಸೋಲು ಬಯಸುವುದಿಲ್ಲ. ಹಾಗೆ ರಾಜಕೀಯದಲ್ಲಿ ಸೋಲು ಬಯಸುವುದಿಲ್ಲ.  ಹಾಗಾಗಿ ತಾನು ಜನನಾಯಕ ಎಂದು ಗುರುತಿಸಿಕೊಳ್ಳ ಬೇಕಾದರೆ ಏನೆಲ್ಲ ಕಸರತ್ತು ಮಾಡಬೇಕೋ ಅದರಲ್ಲಿ ಧರ್ಮವೂ ಒಂದು.

ಈ ವಿದ್ಯೆಯನ್ನು ನಮಗೆ ಕಲಿಸಿದವರು ನಮ್ಮನ್ನು ೨೦೦ ವರ್ಷ ಆಳಿದ  ಬ್ರಿಟಿಷರು.  ಅವರೂ ಒಮ್ಮಲೇ ಏನು ಆಧಿಕಾರಕ್ಕೆ ಬರಲಿಲ್ಲಿ. ವ್ಯಪಾರಕ್ಕೆ ಅಂತ ಬಂದರು. ಬಂದವರೇ ಇಲ್ಲಿನ ರಾಜರು ಪಾಳೆಗಾರರ ಮುಂದೆ ಕೈಕಟ್ಟಿಕೊಂಡು ನಿಂತು ತಮ್ಮ ವ್ಯಪಾರವನ್ನು ಹೇಗೆ ಮುಂದುವರಿಸುವುದು ಎಂದು ಮಗ್ನರಾದಾಗ ಅವರಿಗೆ ತಿಳಿಯಿತು  ಭಾರತೀಯರು ಇತರನ್ನು ಬೇಗ ನಂಬುತ್ತಾರೆ, ಒಂದು ಬಾರಿ ನಂಬಿದರೆ ಅಮೇಲೆ ತಮ್ಮನೇ ಅಂತ ಸೇರಿಸಿಕೊಳ್ಳುತ್ತಾರೆ ಅಂತ.  ಹಾಗಾಗಿ ಇಲ್ಲಿನ ದೊರೆಗಳಿಗೆ ಆತ್ಮೀಯವಾಗಿ ಬೆಳೆದರು. ಇದು ಒಂದು ರೀತಿಯಲ್ಲಿ ಧಾರ್ಮಿಕ ಸಹಿಷ್ಣುತೆಯೇ.  ಕ್ರಮೇಣ ನಂಬಿಕೆಯ ಆಧಾರದ ಮೇಲೆ ಅವರಿಗೆ ಪದವಿ ಅಧಿಕಾರ ಎಲ್ಲವೂ ಸಿಗುವಾಗ ಎಲ್ಲವನ್ನೂ ತಮ್ಮದಾಗಿಸುವುದು ಹೇಗೆ ಅದೂ ಕಾನೂನು ಬದ್ದ ಎಂಬ ಚಿಂತನೆಗಳಿಂದ  ನಮ್ಮ ದೇಶದ ದೊರೆಗಳನ್ನು ಬುಟ್ಟಿಯಲ್ಲಿ  ಹಾಕಿಕೊಂಡೋ  ಮಾತುಗಳಿಗೆ ಕಟಿ ಬದ್ದರಾಗಿಯೋ ಅಧಿಕಾರವನ್ನೂ ಪಡೆದುಕೊಂಡರು. ದೊರಗಳು ಧರ್ಮ ಸಂಕಟಕ್ಕೆ ಕಟ್ಟು ಬಿದ್ದು  ಬೇಸರ ಹೊಂದಿದ್ದರೂ ಅಧಿಕಾರ ಕಳೆದುಕೊಂಡರು.  ಬ್ರಿಷರಿಗೆ ಆಧಿಕಾರ ಸಿಕ್ಕಿದ ಮೇಲೆ ಅವರು ಅದನ್ನು ವಿಸ್ತರಿಸಿ ಇಡಿ ಭಾರತದಲ್ಲಿ ವ್ಯಾಪಸಿಕೊಂಡರು.  ಹಾಗೆ ಅವರು ಅಧಿಕಾರ ಹಿಡಿದ ಮೇಲೆ ಅವರಿಗೆ ಪೂಜೆ ಪುನಸ್ಕಾರ ಗಳಿಗೆ ಚರ್ಚುಗಳ ಸ್ಥಾಪನೆಯೂ ಆಯಿತು. ಅದರೊಂದಿಗೆ ಅವರ ಧಾರ್ಮಿಕ ಗುರುಗಳು ಬಂದರು.  ಇವರು ಚರ್ಚಿಗೆ ಹೋಗುವಾಗ ತನ್ನ ನೆರೆಕರೆಯವರನ್ನೂ ಕರೆದುಕೊಂಡು ಹೋದರು ( ಇದೂ ಭಾರತೀಯರಲ್ಲಿ ಇರುವ ಧಾರ್ಮಿಕ ಸಹಿಷ್ಟುತೆಯೇ) ಇಲ್ಲದಿದ್ದರೆ ಇದು ನಮ್ಮ ಧರ್ಮ ಅಲ್ಲ ನಾವೇಕೆ ಹೋಗಬೇಕು ಎಂದು ವಿರೋಧಿಸುತ್ತಿದ್ದರಲ್ಲವೇ?  ಹೀಗೆ ಹೋದವರು ನಿಧಾನವಾಗಿ ಅವರೊಂದಿಗೆ ಗುರುತಿಸಿಕೊಂಡು  ಅವರ ಮತವನ್ನೇ ಅವಲಂಬಿಸಿದರು.  ನಮ್ಮಲ್ಲಿ ಒಬ್ಬ ಮತಾಂತರ ಹೊಂದಿದರೆ ಮನೆಯಲ್ಲಿ ಹಿರಿಯರು ಬುದ್ಧಿ ಹೇಳುತ್ತಾರೆ, ಗಲಾಟೆ ಮಾಡುತ್ತಾರೆ, ಕೊನೆಗೆ ಹೇಳಿಯೂ ಕೇಳದಿದ್ದರೆ "ಹೇಳಿದ ಮಾತು ಕೇಳುವುದಿಲ್ಲ ಅವನ ಕರ್ಮ ಅವನು ಅನುಭವಿಸುತ್ತಾನೆ" ಎಂದು ಹೇಳಿಕೊಂಡು ಕೂತರೇ ವಿನಃ  ಇವನ ದಾರಿ ತಪ್ಪಿಸಿದವರ ವಿರುದ್ಧ ಹಿಡಿಶಾಪ ಹಾಕಿದರೇ ವಿನಃ ಪ್ರತಿಭಟಿಸಲಿಲ್ಲ. ಇದಕ್ಕಿಂತ ದೊಡ್ಡ ಧಾರ್ಮಿಕ ಸಹಿಷ್ಣತೆ ಬೇರೆ  ಬೇಕಾ? ಹೀಗೆ ಭಾರತದಲ್ಲಿ  ಕ್ರಿಶ್ಚಿಯನ್ ಸಂಖ್ಯೆ  ಬೆಳೆಯಿತು. ಇಲ್ಲಿರುವ ಕ್ರಿಶ್ಚಿಯನರೆಲ್ಲ  ಹಿಂದುಗಳೇ ಆದರೆ ಕ್ರಿಶ್ಚಿಯನ್ ಮತಾವಲಂಬಿಗಳು.  ಅವರು ದೇವರನ್ನು ಕಾಣುವ ರೀತಿ ಕ್ರಿಶ್ಚಿಯನ್ ಧರ್ಮದ ಮೂಲಕ ಅಷ್ಟೇ . ಈ ತತ್ವಕ್ಕಿಂತ ಬೇರೆ ಆದರ್ಶ ಬೇರೆ ಯಾವ ಧರ್ಮದಲ್ಲಿ ಇದೆ ಹೇಳಿ.

ಇನ್ನು ನಮ್ಮಲ್ಲಿ ಮುಸ್ಲಿಂರೂ ಇದ್ದಾರೆ. ಅದೂ  ಭಾರತದ ಮೂಲ ಧರ್ಮ ಅಲ್ಲ.  ಅವರೂ ಇಲ್ಲಿಗೆ ಬಂದವರು . ಬಹುಶಃ ಘಜನಿ ಮಹಮ್ಮದನೊಂದಿಗೆ ಬಂದ ಧರ್ಮ.  ಅವನೂ ಬ್ರಿಟಿಷರ ಹಾಗೆ ಮತ ಧರ್ಮ ಪ್ರಚಾರಕ್ಕೆ ಬಂದವರಲ್ಲ. ಅವನು ಅರಸ. ಅವನ ನೀತಿ ಸಾಮ್ರಾಜ್ಯ ವಿಸ್ತರಣೆ. ಅದು ಅವನ ಧರ್ಮ. ಆದುದರಿಂದ ನಮ್ಮ ಮೇಲೆ ಆಕ್ರಮಣ ಮಾಡಿದ ನಾವು ಸೋತೆವು ಅಥವಾ ನಮ್ಮನ್ನು ಸೋಲಿಸಿದ ಆಧಿಕಾರಕ್ಕೆ ಬಂದ. ಬಂದಮೇಲೆ ಅವನ ಆಧಿಕಾರ ಇರುವಾಗ ಅವನ ಧರ್ಮವೂ ಬರಬೇಕಲ್ಲ. ಹಾಗೆ ಅದೂ ಬಂತು.ಅವರ ಧರ್ಮ ಪ್ರಚಾರಕರೂ ಬಂದರು.  ಬಂದ ಮೇಲೆ ಅವರಿಗೆ ನಮಾಜು ಮಾಡಲು ಮಸೀದಿ ಬೇಕಾಯಿತು ಅದನ್ನೂ ಕಟ್ಟಿಕೊಂಡ. ಅದನ್ನು ಕಟ್ಟಿಕೊಳ್ಳ ಬೇಡ ಎಂದು ನಾವು ಕೇಳಿದರೆ ಅವನ ಆಚಾರಕ್ಕೆ ಅಡ್ಡಿ ಮಾಡಿದ ಪಾಪ ನಮಗೆ ಸುತ್ತಿಕೊಳ್ಳುತ್ತದೆ ಎಂಬ ನಮಗೆ (ನಮಗೆ ಫಾಪ ಬೀತಿ ಸ್ವಲ್ಪ ಜಾಸ್ತಿ) ಅವರಿಗೆ  ಅದೆಲ್ಲ ಇಲ್ಲ.  ಹಾಗಾಗಿ ನಮ್ಮ ಹೆಣ್ಣು ಮಕ್ಕಳನ್ನು ಎಳೆದುಕೊಂಡು ಅನುಭವಿಸಿದರು. ಅವರಿಗೆ ಸಂತಾನಗಳಾಯಿತು.  ನಮಗೆ ಪಾಪ ಭೀತಿ. ಅವನ ಬಲತ್ಕಾರಕ್ಕೆ ಒಳಗಾದ ಹೆಣ್ಣು ಮಗಳು ನಮಗೆ ಜಾತಿ ಕೆಟ್ಟವಳು ಆದಳು.  ಅವಳನ್ನು ನಮ್ಮೊಂದಿಗೆ  ಸೇರಿಸಕೊಂಡರೆ ಎಲ್ಲಿ ನಮ್ಮ ಬಂದುಬಳಗ ಎಲ್ಲಾ ನಮ್ಮನ್ನು ದೂರ ಮಾಡುತ್ತರೋ ತು... ಛಿ... ಎಂದು  ಉಗಿಯುತ್ತಾರೋ ಎಂಬ ಭಯ.  ಹೀಗೆ ಆಗಿ  ನಮ್ಮಲ್ಲಿಗೆ ಬಂದ ಮುಸ್ಲಿಂ ಗಳು ಕೆಲವರಾದರೂ ಅವರ ಸಂತಾನವೂ ಬೆಳೆಯಿತು. ಅದೂ ಅಲ್ಲದೆ ಈಗಲೂ ಅವರಿಗೆ ಎಷ್ಷು ಬೇಕಾದರೂ ಮಕ್ಕಳು ಹುಟ್ಟಿಸುವ ಆಧಿಕಾರ ನಮ್ಮ ಸರಕಾರ ಕೊಟ್ಟಿದೆ. ಅದರೆ ನಮಗೆ ಎರಡೆ? ಇದೆಲ್ಲವೂ  ನಮ್ಮ ಧಾರ್ಮಿಕ ಸಹಿಷ್ಣತೆಯ ಪರವಾದ ವಿಚಾರವಲ್ಲವೆ.

ಆದರೆ ಮುಸ್ಲೀಂ ಅರಸರು ಬಂದು  ಅವರು ನಮ್ಮ ಹೆಣ್ಣುಗಳನ್ನು ಹೊಂದಿ ಅದರಿಂದ ಸಂತತಿ ಬೆಳೆಸಿದರೂ ನಾವು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಅವರು ನಮ್ಮ ಪೂಜಾಸ್ಥಳದ ಮೇಲೆ ದಾಳಿ ಮಾಡಿ ನಮ್ಮ ನಂಬುಗೆಗಳನ್ನು  ದ್ವಂಸ ಮಾಡಿದರಲ್ಲ ನೋಡಿ ಆವಾಗ ನಮಗೆ ಉರಿ ಹತ್ತಿಕೊಂಡದ್ದು.  ನಮ್ಮ ರಾಮಾಯಣ  ಮಹಾಭಾರತ ಕಾದಲ್ಲಿಯೂ ಇದೇ ನಡೆದದ್ದು. ಅದುದರಿಂದ ಕೆಲವು  ಅರಸರು ಅವರ ಮೇಲೆ ತಿರುಗಿ ಬಿದ್ದದ್ದನ್ನು ಒಪ್ಪಿಕೊಳ್ಳುತ್ತೇವೆ.  ಈಗಲೂ ಹಾಗೆ ಘಟನೆಗಳು ನಡೆಯತ್ತಲೇ ಇರುತ್ತದೆ.  ಅದು ರಾಜಕೀಯದ ಬಣ್ಣ ದಿಂದ ನಡೆಯ ಬಾರದು. ಮತ್ತು ರಾಜಕೀಯದವರು ಆ ವಿಷಯವನ್ನು ಮಾತನಾಡಲೇ ಬಾರದು. ಮಾತನಾಡಿದಗಲೇ ಅದೊಂದು ಭೂತವಾಗಿ ಕಾಡುವುದು.  ಅದು ಮನುಷ್ಯನ  ನಂಬುಗೆಯನ್ನು ಕಾಪಾಡುವ ಹೋರಾಟ.  ನಮ್ಮಲ್ಲಿ ಒಂದು ಕ್ರಮ ಇದೆ. ಬೇರೆಯವರ  ನಂಬುಗೆಗೆ ನಾವು ಅಡ್ಡಿ ಬರುವುದಿಲ್ಲ. ನಮ್ಮ ಹಾಗೆ ನೀವೂ ಮನುಷ್ಯರೂ ನೀವು ನಿಮ್ಮ ಇಚ್ಛೆಯಹಾಗೆ ಬದುಕಬಹುದು ನಮ್ಮಲ್ಲಿರುವ ಧಾರ್ಮಿಕ ಸಹಿಷ್ಣುತೆಯೇ ಹೌದಾಅಲ್ಲವಾ.... ನೀವೇ ಹೇಳಿ?

ಇನ್ನು ನಮ್ಮಲ್ಲಿ ಮತಾಂತರ ಎಂಬುದೇ ಇಲ್ಲ. ಈಗಿನವರು ಬೊಬ್ಬೆಹೊಡೆಯುತ್ತಾರೆ ಹೊಡೆಯಲಿ ಬಿಡಿ. ಅದು ಒಂದು ರಾಜಕೀಯ. ನಮ್ಮಲ್ಲಿ ಮತಾಂತರ ಎಂಬ ಶಬ್ದವನ್ನು ಬಿತ್ತಿದವರು ಕ್ರಿಶ್ಚಿಯನ್ ಮತ್ತು  ಮುಸ್ಲಿಂರು.  ಮತ - ಧರ್ಮ ಎಂದರೆ ನಮ್ಮ ಆತ್ಮ ಸಂಸ್ಕಾರಕ್ಕೇ ಬೇಕಾದ ಒಂದು ಆಚರಣೆ ಅಷ್ಟೇ. ಅದು ಯಾವ ರೀತಿ ಆದರೆ ಏನು? ಪುರಂದರದಾಸರು ಹೇಳಿದ್ದಾರೆ "ಮಾನವ ಜನ್ಮ ದೊಡ್ಡದು" ಎಂದು ಅಂದರೆ  ಅದನ್ನು ನಾನಾ ರೀತಿಯಲ್ಲಿ ಅರ್ಥ ಮಾಡಿಕೊಳ್ಳ ಬಹುದು. ಸುಖವನ್ನೇ ಗುರಿಯಾಗಿಟ್ಟವ ಮಾನವ ರಾಗಿ ಸುಖ ಪಡುವುದೇ ನಮ್ಮ ಗುರಿ ಎಂಭುದಕ್ಕೆ ಮಾವನ ಜನ್ಮ ದೊಡ್ಡದು ಎಂದು ಹೇಳಿಕೊಳ್ಳ ಬಹುದು. ಯುವಕ ಯುವತಿಯರು ಲೈಂಗಿಕ ಜೀವನದಲ್ಲಿ ಕಾಣವು ಸುಖವನ್ನೇ ಗುರುಸತಿಸಿಕೊಂಡು ಮಾನವ ಜನ್ಮವೇ ದೊಡ್ಡದು ಎಂದು ಹೇಳ ಬಹುದು.  ಆದರೆ ಅವರು ಹೇಳಿದ ಅರ್ಥ. ಮನುಷ್ಯನಿಗೆ ಜ್ಞಾನ ವಿದೆ. ಆದುದರಿಂದ ತನ್ನನ್ನು ತಾನು ಅರ್ಥಮಾಡಿಕೊಂಡು ನಾನು ಅಂದರೆ ಶರೀರವೇ ಅಥವಾ ಕಣ್ಣಿಗೆ ಕಾಣದ ಸೂಕ್ಷ್ಮ ಶರೀರ ವೆನಿಸುವ ಪ್ರಾಣವೇ ಎಂಬ ಸತ್ಯವನ್ನು ತಿಳಿದು  ಧರ್ಮ ಆಚರಣೆಯಿಂದ ಮೋಕ್ಷವನ್ನು ಹೊಂದುವುದು ಸಾಧ್ಯವೆಂಬ ಅರ್ಥದಲ್ಲಿ ಹೇಳಿದರು.

ಹಾಗಾಗಿ ಧರ್ಮ ಎಂದರೆ ಮೋಕ್ಷಕ್ಕೆ ಹೋಗುವ ಧಾರಿ. ಅದಕ್ಕೆ ಕ್ರಿಶ್ಚಿಯನ್ ಧರ್ಮ ಆದರೇನು ಮುಸ್ಲಿಂ ಧರ್ಮ ಆದರೇನು? ಹಿಂದೂ ಧರ್ಮ ಅದರೇನು? ಎಂಬುದೇ ಸತ್ಯ.ಹಾಗಾಗಿ ನಮಲ್ಲಿ ಆಚರಣೆಯನ್ನು ಅನುಸರಿಸಿ ಹೇಳುವುದಾದರೆ ಬೌದ್ಧ. ಜೈನ ಮೊದಲಾದ ಧರ್ಮಗಳು ಇಲ್ಲಿ ಹುಟ್ಟಿ ಬೆಳೆದಿವೆ ಅದರ ಅನುಯಾಯಿಗಳು ಇದ್ದಾರೆ ಇದು ಕ್ರಿಶ್ಚಿಯನ್ ಮುಸ್ಲಿಂ ಧರ್ಮ ಭಾರತಕ್ಕ ಬರುವುದಕ್ಕೂ ಮೊದಲು ನಡೆದದ್ದು.  ಈ ಸಂದರ್ಭದಲ್ಲಿ ಸಾವಿರಾರು ಜನ ಆ ದಾರಿಯನ್ನು ಹಿಡಿದಿದ್ದಾರೆ. ಆದರೆ ಅವರನ್ನು ನಾವು ಎಂದಿಗೂ ದೂರ ಮಾಡಲಿಲ್ಲ. ಮತಾಂತರ ಎಂದು ಅನಿಸಲೇ ಇಲ್ಲ.  ಯಾಕೆಂದರೆ ಅವನ ದಾರಿ ಅವನಿಗೆ. ಒಟ್ಟಿನಲ್ಲಿ ಅವನಿಗೆ ಅಲ್ಲಿ ಒಳ್ಳೆಯದಾಗುವುದಾದರೆ ಆಗಲಿ ಎಂಬ ನಂಬಿಕೆ ನಮ್ಮದು. ಹೀಗೆ  ನಮ್ಮ ದೇಶ ಹಾಗೂ ಜನರ ನರ ನಾಡಿಗಳಲ್ಲಿ ಧಾರ್ಮಿಕ ಸಹಿಷ್ಣತೆ ತುಂಬಿದೆ. ಅದುವೇ ನಮ್ಮ ಉಸಿರು. ಅದುವೇ ನಮ್ಮ ನಂಬಿಕೆ.

ಆದರೂ ನಮಲ್ಲಿ ಅಲ್ಲಲ್ಲಿ  ಧರ್ಮ ನಂಬಿಕೆ ವಿಚಾರದಲ್ಲಿ ನಿತ್ಯವೂ ದೊಂಬಿ ಎಬ್ಬಿಸುವವರು ಇದ್ದಾರೆ.  ಇಲ್ಲ ಎಂದು ನಾವು ಹೇಳುವುದಿಲ್ಲ.  ಪ್ರಪಂಚವೇ ಹಾಗೆ ಒಳ್ಳೆಯದು  ಕೆಟ್ಟದ್ದೂ ಎರಡೂ ಇರಲೇ ಬೇಕು. ಒಂದು ಇದ್ದು ಇನ್ನೊಂದು ಇರದಿದ್ದರೆ   ಒಳ್ಳೆಯದು ಕೆಟ್ಟದು ಎಂದು ಯಾವುದನ್ನೂ ಗುರುತಿಸಲು ಆಗುವುದಿಲ್ಲ.   ಭಾರತದಲ್ಲಿ ಧಾರ್ಮಿಕ ಸಹಿಷ್ಣತೆ ಇಲ್ಲ ಎನ್ನುವುದೇ ಶುದ್ಧ ಸುಳ್ಳು ಮತ್ತು ನಮ್ಮ ರಾಜಕಾರಣಿಗಳಂತೆ ನಿಮ್ಮದೂ ಒಂದು ರಾಜಕಾರಣದ ಹೇಳಿಕೆಯೇ?

ಜಾತಿ ಜನಗಣತಿಯಿಂದ  ಆಗುವ ಸಾಧನೆ ಏನು?

ಜಾತೀಯ ಜನಗಣತಿ ಎಂಬುದೇ ಜಾತ್ಯಾತೀತ ಎಂಬ ನಂಬುಗೆಯ ಮೇಲೆ ಸ್ಥಾಪಿತವಾದ ಪ್ರಜಾಪ್ರಭುತ್ವದ ಒಂದು ಅಣಕು.  ಜಾತಿ ಎಂಬುದೇ ಒಂದು ಬದುಕು.  ಈ ಬದುಕು ಪ್ರತಿಯೊಬ್ಬನಿಗೆ ಅವನದೇ  ಆದ ರೀತಿಯಲ್ಲಿ ಆಚರಿಸುವ ಹಕ್ಕು ಸ್ವಾತಂತ್ರ ಎಲ್ಲವೂ ಇದೆ.  ಜಾತ್ಯಾತೀತ  ಅರ್ಥ ಆಡಳಿತವು ಜಾತೀ ಆಧಾರವಾಗಲೀ ಅಥವಾ ನಮ್ಮ ದೇಶ ಈ ಜಾತೀ ಅಥವಾ ಧರ್ಮಕ್ಕೆ ಸಂಬಂಧಿಸಿದುದು ಎಂದು ಅರ್ಥೈಸುವಂತಿಲ್ಲ ಎಂಬುದೇ ಸತ್ಯ. ನಮ್ಮಲ್ಲಿ ಪ್ರತಿ ಜಾತಿ ಮತ ಪಂಥ ಆಚಾರ ವಿಚಾರಗಳಿಗೆ, ಅವನವನ ನಂಬಿಕೆಗಳಿಗೆ ಅವನವನು  ಬದ್ಧನಾಗ ಬದುಕಲು ಬಹುದು. ಹಾಗಾಗಿ ಅವನನ್ನು ಸರಕಾರ ಜಾತೀ ಆಧಾರವಾಗಿಯೇ ಗುರುತಿಸುವುದು ಸಂಪೂರ್ಣ ಸಂವಿಧಾನ ವಿರೋಧಿ ನೀತಿ. ಆದರೆ ಹಲವಾರು ಧುರೀಣರು ಜಾತೀ ಜನಗಣಿತಿಯನ್ನು ಬೆಂಬಲಿಸುತ್ತಾರೆ. ಯಾಕೆಂದರೆ ಆ ಮೂಲಕ ತಮ್ಮ ಜಾತಿಯ ಸ್ಥಿತಿಗತಿಯನ್ನು ತಿಳಿದು ಅವರನ್ನು  ಮೇಲಕ್ಕೆ ಎತ್ತುಲು ಯೋಜನೆಗಳನ್ನು ರೂಪಿಸುವುದು ಸಾಧ್ಯವೆಂದು ಅವರ ನಂಬಿಕೆ. ಆದರೆ ಒಬ್ಬನ ಸ್ಥಿತಿ ಗತಿ ಎನ್ನುವುದು ಅವನವನ ಶ್ರಮ ಹಾಗೂ ಅವನ ಬೌದ್ಧಿಕ ಮಟ್ಟದ್ದಾಗಿರುತ್ತದೆಯೇ ವಿನಹಃ ಅದು ಒದಗಿಸುವಂಥದಲ್ಲ.  ಆದುದರಿಂದ ವಿದ್ಯೆಯೇ ಮನುಷ್ಯನ ಅಭಿವೃದ್ಧಿಗೆ ಪ್ರೇರಣಾ ಶಕ್ತಿ.  ಸರಕಾರವೇ ಆಗಲಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ  ಜಾತಿಯನ್ನು ನಮೂದಿಸುವುದು ಮತ್ತು ಗುರುತಿಸುವುದು ಸರಿಯಾದ ವ್ಯವಸ್ಥೆ ಅಲ್ಲ. ನಮಗೆ ಬೇಕಾಗಿರುವುದು ಏಕ ರೂಪ ಕಾನೂನು.  ನ್ಯಾಯಾಲವು ಹೇಳಿದೆ  ಈಗ ಸರಕಾರಗಳು ನೀಡುವ  ಜಾತೀ ಸವಲತ್ತುಗಳು ಇನ್ನೆಷ್ಟು ದಿನ ಮುಂದುವರಿಸಬೇಕು ? ಎಂಬ ಅರ್ಥದಲ್ಲಿ ಹೇಳಿರುವುದ ಸತ್ಯವಾದರೂ.  ಜಾತೀ ಗಣತಿಯ ಮೂಲಕ ಸತ್ಯ ಹೊರಬರುವುದೆಂಬ ವಿಶ್ವಾಸವಿದೆಯೇ.   ಪ್ರತಿ ಜಾತಿಯಲ್ಲಿ ನೂರಾರು ಒಳ ಪಂಗಡಗಳಿವೆ. ಅವುಗಳು ಈಗಾಗಲೇ ತಮ್ಮ ಜಾತೀ ಜನರನ್ನು ಈ ರೀತಿಯಾಗಿಯೇ ನಮೂದಿಸಿ ಎಂದು  ಫರ್ಮಾನು ಹೊರಡಿಸುವುದು ನೋಡಿದರೆ. ಜಾತೀ ಜನಗಣತಿಯ ಮೂಲ ಉದ್ದೇಶವೇ ಮೂಲೆ ಸೇರುವುದರಲ್ಲಿ ಸಂಶಯವಿಲ್ಲ.

ಇನ್ನು ಆರ್ಥಿಕವಾಗಿ ಹಿಂದುಳಿದವರು ಎಂದು ಗುರುತಿಸುವುದಾದರೂ ಬಡವರು ಯಾರು ಶ್ರೀಮಂತರು ಯಾರು ಅದಕ್ಕೆ ಮಾನದಂಡ  ಯಾವುದು?  ಎಂದು ನಿರ್ದಿಷ್ಟವಾದ ವಿಚಾರ ಗಳಿಲ್ಲದೆ ಗೊಂದಲವಿದೆ.

ಸವಲತ್ತಿಗಾಗಿಯೇ ಜಾತಿ ಸೃಷ್ಟಿಯಾಗುವ ಅವಕಾಶವೂ ಇದೆ. ಲಾಭಕ್ಕಾಗಿ  ಜಾತಿ ಬದಲಾಯಿಸಿದವರೂ ಇದ್ದಾರೆ.  ತಾನು ಬಡವ ಎಂದು ಹೇಳಿಕೊಳ್ಳುವ  ವ್ಯಕ್ತಿ ತನ್ನ ಆದಾಯವನ್ನು ಗುರುತಿಸುವ ಅಥವಾ ಆದಾಯದ ನಿರ್ಧಾರ ಮಾಡುವ ಯಾವುದಾದರೂ ನಿರ್ಧಿಷ್ಠ ವಿಚಾರ ಇದೆಯೇ?  ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡುವವರೂ ಇಂದಿನ ದಿನಗಳಲ್ಲಿ ೪೦೦ - ೫೦೦ ಸಂಪಾದನೆ ಮಾಡುತ್ತಾರೆ?  ನೊಂದಾಯಿಸುವುದು ಕೂಲಿ ಎಂದು.  ಆದರೆ ಅವನು ಕೂಲಿ ಕೆಲಸ ಮಾಡುವುದಾದರೂ ಎರಡು - ಮೂರು ನಿವೇಶನಗಳನ್ನು ಹೊಂದಿ ಅವರಿಗೆ ಬಾಡಿಗೆ ಬರುವಂಥವರೂ ಇದ್ದಾರೆ. ಆದರೂ ಅವರು ಆರ್ಥಿಕ ಹಿಂದುಳಿದವರು, ಯಾಕೆಂದರೆ ಅವರು ಉದ್ಯೋಗ ಕೂಲಿ.  ಅದೇ ವಾಸಕ್ಕೆ ಒಂದು ಮನೆ ಹೊಂದಿ  ಅಲ್ಲಿ ವಾಸಿಸುವ  ಸಂಸಾರ  ಯಾವುದೋ  ಪ್ಯಾಕ್ಟರಿಯಲ್ಲಿ ಕೆಲಸ ಮಾಡಿ ಬರುವ ಸಂಬಳದಲ್ಲಿ ದುಬಾರಿ ಸಂಚಾರಿ ವ್ಯವಸ್ಥೆಯಲ್ಲಿ ಓಡಾಡಿ, ಮಕ್ಕಳ ವಿದ್ಯಾಭ್ಯಾಸ  ಮಾಡಿಸಿ ಕೊಂಡು ಹೊಟ್ಟೆ ಹೊರೆಯುವುದರೊಂದಿಗೆ ಕುಟುಂಬದಲ್ಲಿನ ಆಗು ಹೋಗುಗಳಿಗೆ ಸ್ಪಂದಿಸಿಕೊಂಡು,  ಕಾಯಿಲೆ ಕಸಾಲೆಗಳಿಗೆ ಖರ್ಚು ವೆಚ್ಚ ಮಾಡಿಕೊಂಡು ಬದುಕುವನು ಅನುಭವಿಸುವ ನರಕ ಯಾತನೆ ಯಾವುದೇ  ಗಣತಿಯಿಂದ ಗುರುತಿಸುವುದು ಸಾದ್ಯವೇ ? ಯಾಕೆಂದರೆ ಅವನು ಒಂದು ಕಂಪನಿಯಲ್ಲಿ ಕೆಲಸಕ್ಕೆ  ಹೋಗುವುದೇ ಒಂದು ಕಾರಣ.

ಹೀಗಿರುವಾಗ ಯಾವುದು ಸತ್ಯ ಯಾವುದು ಸು‌ಳ್ಳು ಎಂದು ತಿಳಿಯಲು ಈಗಿನ ಈ ವ್ಯವಸ್ಥೆಗಳಿಂದ ಖಂಡಿತ ಸಾಧ್ಯವಿಲ್ಲ.  ಕೇವಲ ಒಂದು ರಾಜಕಾರಣವೇ ಹೊರತು ಉಪಯೋಗವಿಲ್ಲದ ಕೆಲಸ.  ಭಾರತೀಯ ಪ್ರತಿ ಯೊಬ್ಬ ಪ್ರಜೆಯೂ ತನ್ನ ಸಂಪೂರ್ಣ ವಿವರವನ್ನು ಸರಕಾರವೇ ಒಂದು ನಿರ್ಧಿಷ್ಟವಾದ ರೀತಿಯಲ್ಲಿ  ಕಂಪ್ಯೂಟರೈಸ್‌ ಡ್ ರೀತಿಯಲ್ಲಿ ನಮೂದಿಸಿದಲ್ಲಿ ಮಾತ್ರ ಎಲ್ಲವನ್ನೂ ಸರಿಮಾಡುವುದು ಸಾಧ್ಯ ಉದ್ದೇಶವು ನೆರವೇರುವುದ ಸಾಧ್ಯ.  ಇಲ್ಲವಾದರೆ ಸಮಯ ಹಣ ಎಲ್ಲವೂ ವ್ಯರ್ಥ

ಬುಧವಾರ, ಫೆಬ್ರವರಿ 11, 2015

ಆಪ್ಆದ್ಮಿ ಪಕ್ಷದ  ಪ್ರಚಂಡ ಬಹುಮತ !!!

ನಮ್ಮದೇಶದ ರಾಜಕಾರಣಿಗಳಿಗೆ ಒಂದು ಸಂದೇಶವಿದೆ.

ದೇಶದಲ್ಲಿ  ಕಾಂಗ್ರೆಸ್ಸ ಪಕ್ಷ ಹಾಗೂ ಅದರ ಅರ್ಥವಿಲ್ಲದ ಆಡಳಿತದ  ವಿರುದ್ದ ಹಾಗೂ ಬಿ.ಜೆ.ಪಿಗೆ ಒಂದು ಪ್ರಬಲ ಪ್ರತಿಪಕ್ಷವಾಗಿ ಬೆಳೆಯ ಬಹುದಾದ ಯೋಗ್ಯತೆಯನ್ನು ಬೆಳೆಸಿಕೊಳ್ಲ ಬುದಾದ ಒಂದು ಬೆಳವಣಿಗೆ ಈ ಸಂಧರ್ಬದಲ್ಲಿ ಕಾಣಬಹುದು. ಆಪ್ಆದ್ಮಿ ಪಕ್ಷ ಮೊದಲ ಬಾರಿಗೆ ಆಡಳಿತದಲ್ಲಿದ್ದರೂ ಆಡಳಿತದ ಅನುಭವ ವಿಲ್ಲದೆಯೋ ಸರಕಾರದ ವಿರುದ್ಧ ಸರಕಾರವೆ ಪ್ರತಿಭಟನೆಗಿಳಿದುದು ಒಂದು ದುರಂತ. ಈ ಬಾರಿ ಆ ರೀತಿಯಲ್ಲಿ ಅದು ಯಾವುದೆ ಕಾರ್ಯವನ್ನು ರೂಪಿಸದೇ ಸಂವಿಧಾನಾತ್ಮಕ ಮತ್ತು ತನ್ನ ಅಧಿಕಾರ ಬಲದಿಂದ ಸಮಯ ಸಂದರ್ಭಗಳಲ್ಲಿ ಪರಿಣತರಿಂದ ಸಲಹೆ ಪಡೆದು ಆಡಳಿತವನ್ನು ನಡೆಸುವ ಅಗತ್ಯವಿದೆ.

ಅಧಿಕಾರ ಇದ್ದಲ್ಲಿ ಭ್ರಷ್ಟಚಾರ ವಿದೆ. ಅದನ್ನು ಒಂದೇ ಏಟಿಗೆ ಕೊನೆಗೊಳಿಸುವುದು ಸಾಧ್ಯವಿಲ್ಲ ಎಂಬುದು ಸತ್ಯ. ಆದರೆ ಭ್ರಷ್ಟಾಚಾರಕ್ಕೆ ಕಾರಣವಾಗುವ ಸಂವಿಧಾನದ ಸಡಿಲು ನೀತಿಗಳನ್ನು ಗಮನದಲ್ಲಿರಿಸಿಕೊಂಡು ತನ್ನ ಕಾರ್ಯ ತಂತ್ರವನ್ನು ರೂಪಿಸಲಿ.  ಬಡವರಿಗಾಗಿಯೇ ಹುಟ್ಟಿದ  ಪಕ್ಷವಾದ ಆಪ್ ಆದ್ಮಿ ಬಡವರಿಗಾಗಿ  ಉಚಿತ ನೀರು, ಉಚಿತ ವಿದ್ಯುತ್ ಈ ಮೊದಲಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರದಿರುವುದೇ ಉತ್ತಮ.  ಉಚಿತ ವಾದ ಯಾವುದೇ ಸವಲತ್ತು ಮನುಷ್ಯನನ್ನು ಸೋಮಾರಿಯನ್ನಾಗಿಯೇ ಮಾಡುತ್ತದೆ.

ಹೊಸ ಅನನುಭವಿಗಳ ಪಕ್ಷ ಆಪ್ಆದ್ಮಿ.  ಆದರೆ ಉತ್ಸಾಹ ಭರಪೂರ ಚಿಲುಮೆಯೇ ಅವರ ಹೋರಾಟದ ಆಡಳಿತದ ಪ್ರಮುಖ ಅಂಗ.  ಇವುಗಳೊಂದಿಗೆ  ತಾರತಮ್ಯವಿಲ್ಲದ ರಚನಾತ್ಮಕ ಕೆಲಸಗಳಿಂದ ದೇಶದ ಜನರ ಮನವನ್ನು ಗೆದ್ದು ದೇಶದಲ್ಲಿ   ಉತ್ತಮ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಲಿ .  ದೇಶದಲ್ಲಿ ಸ್ವಾರ್ಥ ರಾಜಕಾರಣದ ಪರವಾಗಿ ಕ್ರಿಯಾಶೀಲವಾಗಿ  ಅಲ್ಲಲ್ಲಿ ನಾಯಿ ಕೊಡೆಯಂತೆ ಹುಟ್ಟು ಸಾವುಗಳ ನಡುವೆ ಬದುಕುತ್ತಿರುವ ಇತರ ಪಕ್ಷಗಳೆಲ್ಲವೂ  ತಮ್ಮನ್ನು ತಾವು ವಿಮರ್ಶಿಸಿಕೊಳ್ಳವ ಅಗತ್ಯವೂ ಇದೆ.