ಭಾನುವಾರ, ಜೂನ್ 25, 2017

ಗಗನಗೋಚರೀ ವಸುಂಧರಾ ದಿಂದ

ನಮಸ್ತೇ!!! ಗಗನಗೋಚರೀ ವಸುಂಧರಾ ದಿಂದ ಅಹೋರಾತ್ರ ನಟೇಶ ಪೋಲೇಪಲ್ಲಿ. ವಿಶ್ವವೆಲ್ಲಾ ವ್ಯಾಪಿಸಿರುವವನು ವಿಷ್ಣು. ಕಾಶ್ಯಪ ಶಿಲ್ಪಶಾಸ್ತ್ರ ಹೇಳುವಂತೆ ಈ ಜಗತ್ತು ವಿಶ್ವಕರ್ಮನು ಮಾಡಿದ ಪಂಚಭೂತಗಳ ಪಂಚೀಕರಣದಿಂದಾಗಿದೆ.. ಪಂಚೀರಣವೆಂದರೇ ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿ  ಇವುಗಳ ಮಿಶ್ರಣದ ಪ್ರಮಾಣೀಕರಣ. ಉದಾಹರಣೆಗೆ  ಆಕಾಶದ ನಾಲ್ಕು ಭಾಗ ಮತ್ತು ವಾಯುವಿನ ಒಂದು ಭಾಗ ಸೇರಿಸಿದರು, ಹೀಗೆ ನಮಗೆಲ್ಲಾ ಗೊತ್ತಿರುವಂತೆ ವೈಜ್ಞಾನಿಕವಾಗಿ  ಪೃಥ್ವಿಯ ಒಂದು ಭಾಗ ಜಲದ ಎರಡುಭಾಗ ಸೇರಿ ಭೂಮಿಯಾಯಿತಲ್ಲವೇ. ಈ ಏಲ್ಲಾ ಮಿಶ್ರಣಗಳ ಪಂಚೀಕರಣದಿಂದಲೇ ಈ ಜಗತ್ತನ್ನು ನಾವು ಪ್ರಪಂಚವೆನ್ನುವುದು. ನಮ್ಮ ದೇಶದಲ್ಲಿ ಊರಿಗೊಂದು ದೇವಾಲಯವಿರುವುದು ಸಹಜ, ಆದರೇ ಕೆಲವು ತೀರ್ಥಕ್ಷೇತ್ರಗಳು ದೇವಾಯತನದಿಂದ ಊರಾಗಿರುವುದು ಆಶ್ಚರ್ಯವುಂಟುಮಾಡುತ್ತವೆ. ಅದಕ್ಕೆ ಸಾಕ್ಷಿಯೆಂಬಂತೆ, ತಿರುಪತಿ, ಶ್ರೀರಂಗಂ, ಮೇಲುಕೋಟೆ, ಗಯಾ ಮುಂತಾದ ವೈಷ್ಣವ ಕ್ಷೇತ್ರಗಳೂ, ೫೧ ಶಕ್ತಿ ಪೀಠಗಳು, ೧೨ ಜ್ಯೋತಿರ್ಲಿಂಗಗಳೂ, ತಮಿಳುನಾಡಿನ ೬ ಕುಮಾರ ಕ್ಷೇತ್ರಗಳೂ ಮತ್ತು ನಾವಿಂದು ಅಭ್ಯಾಸ ಮಾಡಲು ಹೊರಟಿರುವ ಪಂಚಭೂತಗಳನ್ನು ಪ್ರತಿನಿಧಿಸುವ ಪಂಚಲಿಂಗ ಕ್ಷೇತ್ರಗಳಾದ 
೧. ಚಿದಂಬರಂನ ಆಕಾಶ ಲಿಂಗ, 
೨. ಶ್ರೀ ಕಾಳಹಸ್ತಿಯ ವಾಯು ಲಿಂಗ,
೩. ತಿರುವಣ್ಣಾಮಲೈನ ಅಗ್ನಿ ಲಿಂಗ,
೪. ತಿರುವನೈಕಾವಲ್ ನ ಜಲ ಲಿಂಗ, ಹಾಗು
೫. ಕಾಂಚಿಪುರದ ಪೃಥ್ವಿ ಲಿಂಗ.
ಅಭ್ಯಾಸದ ಸಮಯದಲ್ಲಿ ಕಂಡದ್ದೆಂದರೇ
ಈ ಐದೂ ಕ್ಷೇತ್ರಗಳೂ ಮಾನವ ನಿರ್ಮಿತ ದೇವಾಲಯಗಳನ್ನು ಹೊಂದಿದ್ದರೂ ಅವು ದೈವ ನಿರ್ಧಾರದಿಂದಾದ ಲಿಂಗಾಯತನಗಳು. 
ಸಮುದ್ರ ಮಟ್ಟಕ್ಕೆ ಅತ್ಯಂತ ಹತ್ತಿರವಾಗಿರುವ ಚಿದಂಬರಂ ದೇಗುಲ ಅಲ್ಲಿರುವುದರ ಕಾರಣ ಚಿದಂಬರ ರಹಸ್ಯಮಾಗಿಯೇ ಉಳಿದಿದೆ. 
ರತ್ನಾಕರ ಸಮುದ್ರದ ನೀರಿನ ಹರಿವು ತಡೆಯಲು ದೇವನಿರ್ಮಿತ ಅಣೆಕಟ್ಟೆಯಾದ ಆದಿಶೇಷ ಪರ್ವತವು ಮರುತಗಳನ್ನೂ ತಡೆಹಿಡಿದಾಗ ಆ ವಾಯುವಿಗೆ ದಾರಿಯಾದ ಶ್ರೀಕಾಳಹಸ್ತಿಯು ವಾಯುರ್ಲಿಂಗ ಕ್ಷೇತ್ರವಾಯಿತು, 
ಆಕಾಶ ವಾಯುಗಳ ನಡುವೆ ಉದ್ಭವಿಸಿದ ತೇಜೋಕಾಂತಿ ಅಗ್ನಿಯಾಗಿ ಅರುಣಾಚಲಾದ್ರಿಯ ಮೇಲೆ ಅಗ್ನಿಪರ್ವತವಾಗಿ ಆ ಕ್ಷೇತ್ರ ಅಗ್ನಿಲಿಂಗವಾಯಿತು. ತಿರಿಚಿನಪಳ್ಳಿಯ ಕಾವೇರಿ ತೀರದಲ್ಲಿ ಜಲಪ್ರತಿನಿಧಿ ಜಂಭುಲಿಂಗವಾಯಿತು. ಎಲ್ಲಕ್ಕಿಂತ ಅಶ್ಚರ್ಯವೆಂದರೇ ಪೃಥ್ವಿ ಲಿಂಗವು ಏಕಾಂಬರನಾಗಿ ಕಾಂಚಿಪುರದಲ್ಲಿ ನೆಲೆಸಿದ್ದು ಈ ದೇವಾಲಯವು ಚಿದಂಬರಂನ ನಟರಾಜ ದೇವಾಲಯದಿಂದ ಶ್ರೀಕಾಳಹಸ್ತಿಯ ಕಾಳಹಸ್ತೀಶ್ವರಾಲಯದ ವರೆವಿಗೂ ಇರುವ ೨೬೦ ಕಿ.ಮೀ. ಅಂತರವನ್ನು ಸೇರಿಸಿದ ಸರಳರೇಖೆಯ ನಡುವೆಯೇ ಚಿದಂಬರಂ ಗರ್ಭಗೃಹ ಗೋಪುರದಿಂದ ೧೬೦ ಕಿ.ಮೀ ಹಾಗೂ ಕಾಳಹಸ್ತೀಶ್ವರನ ವಿಮಾನ ಗೋಪುರದಿಂದ ೧೦೦ ಕಿ..ಮೀ. ಅಂತರದಲ್ಲಿ ಆರೇಖೆಯ ಮೇಲೇ ಇರುವುದನ್ನು ಗಮನಿಸಿ ನಖಶಿಖಾಂತ ವಿದ್ಯುತ್ ಸಂಚಾರವಾಯಿತು. ಸುಮಾರು ೮೬೯೦೦೦ ವರ್ಷಗಳ ಹಿಂದೆ ಶಿವಾವತರಣಕಾಲದಲ್ಲಿ ಮನುಷ್ಯಮಾತ್ರನಿಂದ ಮಾಡಲಸಾಧ್ಯವಾದ  ಈ ನಿಖರತೆ ವಿವಿಧ ನಕ್ಷತ್ರ ಲೋಕಗಳಿಂದ ಬಂದ ದೇವತೆಗಳಿಂದ ಮಾತ್ರ ಮಾಡಲು ಸಾಧ್ಯವೆಂದರ್ಥವಾಯಿತು. ಈ ಐದೂ ವಿಮಾನ ಗೋಪುರಗಳನ್ನು ಸರಳ ರೇಖೆಗಳಿಂದ ಕೂಡಿಸಿದಾಗ ಬಂದ ಆಕೃತಿಯು ಪಂಚೀಕರಣದ ಎಲ್ಲ ಸೂತ್ರಗಳನ್ನು ಬಿಡಿಸುತ್ತಾ ಹೋಯಿತು. ಉದಾಹರಣೆಗೆ  ಅಕಾಶ ವಾಯು ಮತ್ತು ಅಗ್ನಿಯಿಂದಾಗುವ ತ್ರಿಕೋಣವನ್ನು ಬೇಧಿಸುವ ಪೃಥ್ವಿ ಅಗ್ನಿಯ ರೇಖೆ ಅಗ್ನಿಯಲ್ಲಿ ನಿರ್ಮಾಣ ಮಾಡುವ ಎರಡು ಕೋನಗಳು ಪಂಚೀಕರಣ ಪ್ರಮಾಣವಾದ ಅಕಾಶ : ವಾಯು 
= ೪:೧ ರ ಅನುಪಾತವನ್ನು ಸಿದ್ಧಮಾಡುತ್ತದೆ. ಹೀಗೆ ಅಗ್ನಿ ಆಕಾಶ ರೇಖೆಯು ಅಕಾಶದಲ್ಲಿ ಉಂಟುಮಾಡುವ ಕೋನಗಳು ಜಲ: ಭೂಮೀ= ೨:೧ರ ಅನುಪಾತ ಎಂದು ಸಾಧಿಸುತ್ತದೆ. ಇಷ್ಟೇ ಅಲ್ಲ ಈ ಜ್ಯಾಮಿತೀಯು ಸಾಧಿಸುವ ಪ್ರಮೇಯಗಳ ಸಂಖ್ಯೆ ೧೨೦ಕ್ಕೂ ಹೆಚ್ಚು. ಅಮೃತದ ರುಚಿ ಹೇಗೆ ವರ್ಣಿಸಲಸದಳವೋ ಹಾಗೇ ಇವೆಲ್ಲವುಗಳನ್ನು  ನಿಮ್ಮೊಡನೆ ಹಂಚಿಕೊಳ್ಳಲಾಗುತ್ತಿಲ್ಲ ಕ್ಷಮೆಯಿರಲಿ. ಪಂಚಲಿಂಗಾಯತನಗಳ ಬಗ್ಗೆ ಹಿಂದಿನ ಪಂಚೀಕರಣ ಎಂಬ ಸಂಚಿಕೆಯಲ್ಲಿ ನೋಡಿದ್ದೀರಿ. ಅದರ ಗುಂಗಿನಲ್ಲೇ ಮುಳುಗಿದ್ದಾಗ ಚಿದಂಬರ, ಕಂಚಿ ಮತ್ತು ಕಾಳಹಸ್ತಿ ಈ ಮೂರು ಲಿಂಗಾಯತನಗಳೂ ಏಕರೇಖೆಯಲ್ಲಿ ಏಕೆ ನಿಂತಿವೆ ಎಂಬ ಗೊಂದಲದ ಪ್ರಶ್ನೆಯೋಂದು ಗಾಢವಾಗಿ ಕಾಡುತ್ತಿರಲು ಹೊಳೆದ ಉತ್ತರವನ್ನು ತಮ್ಮಲ್ಲಿ ಹಂಚಿಕೊಳ್ಳದೇ ಇರಲಾಗಲಿಲ್ಲ. ಆ ಅದ್ಭುತವನ್ನು ವೀಕ್ಷಿಸಿ. ಚಿದಂಬರದ ದೇವಳಗೋಪುರದಿಂದ ಉತ್ತರ ಧ್ರುವಕ್ಕೂ ಹಾಗೂ ದಕ್ಷಿಣ ಧ್ರುವಕ್ಕೂ ಒಂದು ಸರಳರೇಖೆಯಿಂದ ಸೇರಿಸಿದಾಗ ಗೋಚರಿಸಿದ ವಿಹಂಗಮನೋಟವೇ ಆ ವಿಸ್ಮಯ. ಮೂರೂ ದೇವಾಲಯಗಳು ಆ ರೇಖೆಯ ಮೇಲೆ ನಿಂತಿವೆ. ಈ ಉತ್ತರ ದಕ್ಷಿಣ ಧ್ರುವಗಳು ನಮ್ಮ ಭೂಮಿಗೆ ಮಾತ್ರ ಸೀಮಿತವಲ್ಲ ಅಣುರೇಣುವಿನಿಂದ ಹಿಡಿದು ಬ್ರಹ್ಮಾಂಡದವರವಿಗೂ ಅನ್ವಯಿಸುತ್ತವೆ. ಪುರಾಣಗಳು ಹೇಳುವ ಹಾಗೆ ಈ ವಿಶ್ವದ ಉತ್ತರ ಧ್ರುವ ದಿಂದ ಧ್ರುವ ನಕ್ಷತ್ರ ಹಾಗೂ ದಕ್ಷಿಣ ಧ್ರುವದಿಂದ ಅಗಸ್ತ್ಯ ನಕ್ಷತ್ರ ಸೇರಿ ತಮ್ಮ ನಡುವೆ ಇರುವ ಈ ಆಕಾಶಗಂಗೆಯ ಎಲ್ಲಾ ನಕ್ಷತ್ರಗಳನ್ನೂ ಹಾಗೂ ಅವುಗಳ ಗ್ರಹ ಉಪಗ್ರಹಗಳನ್ನು ತಮ್ಮ ತಮ್ಮ ಅಕ್ಷದ ಸುತ್ತ ಸುತ್ತುತ್ತಾ ತಾವಿರುವ ಲೋಕದ ಮೂಲ ಕೇಂದ್ರದ ಗ್ರಹನಕ್ಷತ್ರಗಳ ಸುತ್ತಾ ಸುತ್ತುವಂತೆ ಮಾಡುತ್ತಿದ್ದಾರೆ. ಹಾಗಾಗಿ ಈ ಬ್ರಹ್ಮಾಂಡದ ಧ್ರುವಗಳು ಏಲ್ಲ ಚರಾಚರ ಲೋಕಗಳ ಧ್ರುವಗಳನ್ನು ಸೇರಿಸಿವೆ. ಹೀಗಿರುವಾಗ ಈ ಮೂರು ಆಲಯಗಳ ರೇಖೆಯು ಆ ಎರಡು ಧ್ರುವಗಳನ್ನು ಸೇರುವುದು ಖಚಿತವಾಯಿತಲ್ಲವೇ. ಈ ಊಹನಾ ಸಿದ್ಧಾಂತದಿಂದ ಭೂಮಿಯಾರಂಭಕಾಲದ ಭೂರಚನೆಗೆಂದು ಬಂದಂತಹ ಆ ದೇವಗಂಧರ್ವರೆಂಬ ವಿವಿಧ ಗ್ರಹನಕ್ಷತ್ರ ವಾಸಿಗಳು ತಮ್ಮ ಲೋಕಗಳಿಗೆ ಸಂಪರ್ಕಸಾಧಿಸಲು ಬಳಸಿದ ದೇವಾಯತನಗಳಾಗಿದ್ದವು ಎಂದು ಹೇಳಬಹುದಲ್ಲವೇ? ಯೋಚಿಸಿ ನೋಡಿ.  ಅಹೋರಾತ್ರ

ಕನಿಷ್ಟ 3 ಲಕ್ಷ ಮಸೀದಿಗಳು🕌 ನಮ್ಮ ದೇಶದಲ್ಲಿವೆ...!🙊

ಕನಿಷ್ಟ 3 ಲಕ್ಷ ಮಸೀದಿಗಳು🕌 ನಮ್ಮ ದೇಶದಲ್ಲಿವೆ...!🙊
ಪ್ರಪಂಚದ ಯಾವ ದೇಶದಲ್ಲೂ ಇಷ್ಟೊಂದು ಮಸೀದಿಗಳಿಲ್ಲ....!
ವಾಷಿಂಗ್ಟನಲ್ಲಿರುವುದು ಕೇವಲ 24 ಚರ್ಚ್ಗಳು
 ಹಾಗು 71 ಚರ್ಚುಗಳು ಲಂಡನ್ನಿನಲ್ಲಿ
ಇಟಲಿಯ ಮಿಲನ್ ನಗರದಲ್ಲಿ 68 ಚರ್ಚುಗಳಿವೆ...!
ಆದರೆ ನಮ್ಮ ದೆಹಲಿಯಲ್ಲಿ ಬರೋಬರಿ 271 ಚರ್ಚುಗಳಿವೆ⛪...!
ಇಷ್ಟಿದ್ದರೂ ಹಿಂದುಗಳನ್ನು ಕೋಮುವಾದಿಗಳು ಅನ್ನುತ್ತಾರೆ..
ಭಾರತದ ಯಾವೊಬ್ಬ ಮುಸ್ಲಿಮನೂ ಐಸಿಸ್ ನ್ನು ವಿರೋದ್ದ ಪ್ರತಿಭಟಿಸಿಲ್ಲ...!
ಆದರೆ ಕೋಟ್ಯಾಂತರ ಹಿಂದುಗಳೇ RSSನ್ನು ವಿರೋಧಿಸುತ್ತಾರೆ...!
ಯಾವೊಬ್ಬ ಮುಸ್ಲಿಮನೂ ಹಿಂದುಗಳಿಗೋಸ್ಕರ ದೀಪಾವಳಿ ಅಥವಾ ಹೋಳಿ ಆಯೋಜಿಸುವುದಿಲ್ಲ....!
ಅದರೆ ಮುಸ್ಲಿಮರಿಗಾಗಿ ಹಿಂದುಗಳು ಇಫ್ತಾರ್ ಕೂಟವನ್ನು ಏರ್ಪಡಿಸುತ್ತಾರೆ...!
ಕಾಶ್ಮೀರದಲ್ಲಿ ಭಾರತದ🇮🇳 ಭಾವುಟವನ್ನು ಮುಸ್ಲಿಮರು ಸುಡುತ್ತಾರೆ ಆದರೆ ಪಾಕಿಸ್ತಾನದ ಭಾವುಟ🇵🇰 ಸುಡುವ ಯಾವೊಬ್ಬ ಮುಸ್ಲಿಮನು ಭಾರತದಲ್ಲಿ ಕಾಣಸಿಗುವುದಿಲ್ಲ....!
ಹಿಂದುಗಳು ಮಸೀದಿ,ದರ್ಗಾಗಳಿಗೆ ಹೋದರೆ ಮುಸ್ಲಿಮರ ಟೋಪಿ ಧರಿಸುತ್ತಾರೆ...!
ಆದರೆ ಯಾವ ಮುಸ್ಲಿಮನೂ ಹಿಂದೂ ದೇವಾಲಯಗಳಿಗೆ ಹೋದರೆ ತಿಲಕಇಡುವುದಿಲ್ಲ...!
ಇದರ ಅರ್ಥ ಹಿಂದುಗಳು ಎಲ್ಲಾ ಜಾತಿ ಧರ್ಮಗಳನ್ನು ಗೌರವಿಸುತ್ತಾರೆ...!
ಆದರೂ ಬೊಬ್ಬೆ ಹೊಡೆಯುತ್ತಾರೆ ಹಿಂದೂಸ್ತಾನದಲ್ಲಿ ಧರ್ಮ ಅಸಹಿಷ್ಣುತೆ ಹೆಚ್ಚಾಗಿದೆ.!!!😭 ಹಿಂದುಗಳು ಕೋಮುವಾದಿಗಳು ಎಂದು....!👊😡
✝ಕ್ರಿಸ್ತ ಹುಟ್ಟುವ ಮುಂಚೆ ಕ್ರಿಶ್ಚಿಯನ್ನರಿರಲಿಲ್ಲ.
☪ಮೊಹಮ್ಮದ್ ಬರುವ ಮುಂಚೆ ಮುಸ್ಲಿಮರೇನಾಗಿದ್ದರೋ ತಿಳಿದಿಲ್ಲ.
ಬುದ್ಧ 'ಬುದ್ಧ'ನಾಗುವ ಮುಂಚೆ, ಬೌದ್ಧರಿರಲಿಲ್ಲ.
ಇಪ್ಪತ್ತನಾಲ್ಕನೆಯ ತೀರ್ಥಂಕರ ಬರುವವರೆಗೆ ಜೈನರಿರಲಿಲ್ಲ.
.
.
" ಆದರೆ 🕉ಹಿಂದೂವೊಬ್ಬನೇ ಮಾತ್ರ
ರಾಮ,
ಕೃಷ್ಣ,
ಪರಶುರಾಮ, ಶಂಕರಾಚಾರ್ಯರು ....  ಹುಟ್ಟುವ ಮೊದಲೇ ಹಿಂದುವಾಗಿದ್ದ"
ಎಂಬುದು ಮಾತ್ರ
ರಿಲೀಜಿಯನ್ ಮನಸ್ಥಿತಿಗಳಿಗೆ  ಹೊಳೆಯುವುದಿಲ್ಲ....ಜೈ ಶ್ರೀರಾಮ
ಈ ಸಂದೇಶವನ್ನು ಬೇರೆ ಗುಂಪುಗಳಿಗೆ ಹಂಚಲು ಜಾಸ್ತಿ ಹಣ ವೆಚ್ಚವಾಗುವದಿಲ್ಲ..ಕೇವಲ ಐದು ನಿಮಿಷಗಳ ಸಮಯ ಸಾಕು.. ದೇಶಭಕ್ತಿಯನ್ನು ಸಾರಲು..
 🙊 30(A) ಗೆ ಸಂಬಂದಿಸಿದಂತೆ ವಿದ್ಯಾಲಯಗಳಲ್ಲಿ ಭಗವದ್ಗೀತೆ,ರಾಮಾಯಣದ ಬಗ್ಗೆ ಹೇಳುವದನ್ನ,ಕಲಿಸುವದನ್ನ ನಿರ್ಬಂದಿಸಲಾಗಿದೆ..
.ಮುಸ್ಲಿಂ ಮದರಸಾಗಳಲ್ಲಿ, ಕ್ರಿಶ್ಚಿಯನ್ ಕಾನ್ವೆಂಟುಗಳಲ್ಲಿ ಕುರಾನ್ ಮತ್ತು ಬಾಯಿಬಲ್ ಗಳನ್ನು ಬೋದಿಸಬಹುದಾಗಿದೆ..!!
 ಹಿಂದೂ ಮಂದಿರ ಮತ್ತು ತೀರ್ಥಸ್ಥಾನಗಳಿಗೆ ಬಂದಂತಹ ದೇಣಿಗೆಯ ಮೇಲೆ ಸರಕಾರಕ್ಕೆ ೭೦ ಪ್ರತಿಶತ ಅಧಿಕಾರ..ಮಸೀದಿ ಮತ್ತು ಚರ್ಚುಗಳಿಗೆ ಬಂದ ದೇಣಿಗೆ ಅವರವರಿಗೆ ಪೂರ್ಣ ಅಧಿಕಾರ! ! ಅದರ ಜೊತೆ ಮತ್ತಷ್ಟು ಸರಕಾರದ ಅನುದಾನ ಬೇರೆ ..!!
ಬಾಬಾ ಅಮರನಾಥ ಯಾತ್ರಿಕರ ಮೇಲೆ ಸರಕಾರಕ್ಕೆ ಟೆಕ್ಸ್ ತುಂಬಬೇಕು..  ಅದೇ ಹಜ್ ಯಾತ್ರಿಕರಿಗೆ  ಸರಕಾರಿ ಸಬ್ಸಿಡಿ.. ವ್ಹಾ ..ಹೇಗಿದೆ ನೋಡಿ ಹಿಂದುಸ್ಥಾನದ ಹಿಂದುಗಳ ಪರಿಸ್ಥಿತಿ.
ಇದು ದರ್ಮಸಹಿಷ್ಣುತೆಯಂತೆ...!!!

ಮನಸಿದ್ದರ ಸಂದೇಶವನ್ನು ಮುಂದಕ್ಕೆ ಕಳುಹಿಸಿ.. ಇಲ್ಲವಾದಲ್ಲಿ ನಿನ್ನನ್ನು ನೀನು ಹಿಂದೂಸ್ಥಾನಿ ಎಂದು ಕರೆದುಕೊಳ್ಳಬೇಡ....
🙏ಜೈ ಹಿಂದ್..🇮🇳⛳

ಬ್ರಾಹ್ಮಣನಾರು,

ಬ್ರಾಹ್ಮಣನಾರು, ಈ ಪ್ರಶ್ನೆಗೆ ನಾನು ಕಂಡುಕೊಂಡ ಉತ್ತರ ಹೀಗಿದೆ,
ಮೊನ್ನೆ ರಾಜ್ಯದ ಜನಗಣತಿ ಮುಗಿದಿದೆ ಅದರಲ್ಲಿ ಬ್ರಾಹ್ಮಣರು ಕೇವಲ 13 ಲಕ್ಷಮಾತ್ರ ಎಂದು ತಿಳಿದು ಬಹಳ ಖುಷಿಯಾಯಿತು, ಬ್ರಾಹ್ಮಣರು ಸಂಖ್ಯೆಯಲ್ಲಿ ಕಡಿಮೆ ಇರಬಹುದು ಆದರೆ ಅವರು ಹೇಗಿದ್ದಾರೆ ಗೊತ್ತೇ ...
೧.ಸಾವಿರಾರು ಲೀಟರ್ ಹಾಲನ್ನು ಕಾಯಿಸಿದಾಗ ಹಾಲಿನ ಮೇಲಿನ ಪದರು ಕೆನೆ ಇದೆಯಲ್ಲಾ ಅದುವೇ ಬ್ರಾಹ್ಮಣ,
೨ ಹಾಲನ್ನು ಹೆಪ್ಪಾಕಿ ಮೂಸರಾಗಿಸಿ ಅದನ್ನು ಕಡೆದು ಮೊಸರನ್ನು ಮಜ್ಜಿಗೆಯಾಗಿಸುವ ಕ್ರಿಯೆಯಲ್ಲಿ ಬೆಣ್ಣೆ ಬರುತ್ತದಲ್ಲಾ ಅದು ಬ್ರಾಹ್ಮಣ
೩ ಶರೀರ ಎಷ್ಟೆ ದೊಡ್ಡದಿದ್ದರೂ ನೋಡುವ ಕಣ್ಣುಗಳು, ಉಸಿರಾಡುವ ಮೂಗು , ಕೇಳುವ ಕಿವಿ , ತಿನ್ನು ಬಾಯಿ, ಹೃದಯ , ಕಶ್ಮಲವನ್ನು ಹೊರಹಾಕುವ ರಂದ್ರ ಇದೆಯಲ್ಲ ಅದು ಬ್ರಾಹ್ಮಣ
೪. ಪರಿಸರದಲ್ಲಿ ಎಷ್ಟೇ ಗಾಳಿಯಿದ್ದರೂ ನಾವು ಉಸಿರಾಡುವುದು ಮಾತ್ರ ಅತ್ಯಲ್ಪ ಶುದ್ಧವಾದ ಗಾಳಿ ಅದು ಬ್ರಾಹ್ಮಣ
೫. ನೂರಾರು ಹೂವುಗಳಿದ್ದರೂ ಅದರಿಂದ ದುಂಬಿಯು ತರುವ ಜೇನು ಅದು ಬ್ರಾಹ್ಮಣ
೬. ಸಮುದ್ರ ದಲ್ಲಿ ಎಷ್ಟು ನೀರಿದ್ದರೆನಂತೆ ಅದನ್ನು ಸೋಸಿ ಕುಡಿಯುವ ಶುದ್ಧ ನೀರಿದಿಯಲ್ಲಾ ಅದು ಬ್ರಾಹ್ಮಣ
೭. ಫಲ,ಕಾಯಿ ಎಷ್ಟೇ ದೊಡ್ಡದಿದ್ದರೂ ಅದರೊಲಳಗಿರುವ ಸಣ್ಣ ಬೀಜ ವಿದಯಲ್ಲಾ ಅದು ಬ್ರಾಹ್ಮಣ
೮. ಮಾಡಿದ ಪಕ್ವಾನ್ನ ಎಷ್ಟಿದ್ದರೇನು ಪಕ್ವಾನದಲ್ಲಿ ಇರುವ ರುಚಿ ಇದೆಯಲ್ಲಾ ಅದು ಬ್ರಾಹ್ಮಣ
೯. ಉರಿಯುವ ಸೂರ್ಯನ ಧಗೆಯನ್ನು ತಪ್ಪಿಸಿಕೊಳ್ಳಲು ಕಾಣುವ ನೆರಳಿದೆಯಲ್ಲಾ ಅದು ಬ್ರಾಹ್ಮಣ
೧೦. ದೊಡ್ದ ಸಮಾರಂಭದಲ್ಲಿ ಗಟ್ಟಿಯಾಗಿ ಸುಶ್ರಾವ್ಯವಾಗಿ ಸ್ಪಷ್ಟವಾಗಿ ಹೇಳುವ ಮ೦ತ್ರಗಳಿವೆಯಲ್ಲಾ ಅದು ಬ್ರಾಹ್ಮಣ
೧೧. ರಾಜನಿಗೆ ಸೇವೆಮಾಡುವವರು ಸಾವಿರಾರು ಜನರಿದ್ದರು, ಸರಿಯಾದ ಮಾರ್ಗವನ್ನು ಬೋಧಿಸುವನಿರುತ್ತಾನಲ್ಲ ಅವನು ಬ್ರಾಹ್ಮಣ
೧೨. ॐ सर्वे भवन्तु सुखिनः।
सर्वे सन्तु निरामयाः।
सर्वे भद्राणि पश्यन्तु।
मा कश्चित् दुःख भाग्भवेत्॥
ॐ शान्तिः शान्तिः शान्तिः ॥ ಇದನ್ನು ಹೇಳುವವನಿದ್ದಾನಲ್ಲ ಅವನು ಬ್ರಾಹ್ಮಣ
ಅದ್ದರಿಂದ ನಾವು ಕಡಿಮೆಯಿದ್ದೇವೆ ಎಂಬ ಅಸಮಾಧಾನ ಬೇಡ, ನಾವು ಕಡಿಮೆಯಿದ್ದರೇನಂತೆ ಯಾವುದು ಕಡೆಮೆಯಿರುತ್ತದೋ ಅದರ ಪ್ರಾಮುಖ್ಯತೆ ಜಾಸ್ತಿಯಿರುತ್ತದೆ .
ನಾವು ಬ್ರಾಹ್ಮಣರು
ನಾವು ಕ್ಷತ್ರಿಯ ರಾಮನನ್ನು
ಆದರ್ಶ ಎಂದು ಪೂಜಿಸುತ್ತೇವೆ.
ಗೊಲ್ಲರ ಕ್ರಷ್ಣನನ್ನು
ಪರಮಾತ್ಮ ಎಂದು ಆರಾಧಿಸುತ್ತೇವೆ.
ಮಸಣ ಕಾಯುವ ಈಶ್ವರನನ್ನು
ಪರಮೇಶ್ವರ ಎಂದು ಭಜಿಸುತ್ತೇವೆ.
ಬ್ರಾಹ್ಮಣನಾದ ಬ್ರಹ್ಮನಿಗೆ
ಕೈಯನ್ನೂ ಮುಗಿಯುವುದಿಲ್ಲ...!
ಬ್ರಾಹ್ಮಣನಾದ ರಾವಣನನ್ನು
ದುಷ್ಟ ಎಂದು ಜರಿಯುತ್ತೇವೆ.
ಇಷ್ಟಾಗಿಯೂ ನಾವು
ಪರರ ಕಣ್ಣಿಗೆ ಜಾತಿವಾದಿಗಳು.
ಯಾಕೆಂದರೆ,
ನಾವು ಬ್ರಾಹ್ಮಣರು...!!
ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತೇವೆ.
ಕಲೆ ಸಂಸ್ಕೃತಿಯನ್ನು ಆರಾಧಿಸುತ್ತೇವೆ.
ಯಕ್ಷಗಾನ ಸಂಗೀತವನ್ನು
ಆನಂದಿಸುತ್ತೇವೆ.
ಬೇರೆಯವರು ಮೇಲೇರಲು ನಾವು
ಏಣಿಯಾಗುತ್ತೇವೆ..
ಇಷ್ಟಾಗಿಯೂ ನಾವು
ಪರರ ಕಣ್ಣಿಗೆ ತಾಲಿಬಾನ್ ಸಂಸ್ಕೃತಿಯವರು.
ಯಾಕೆಂದರೆ,
ನಾವು ಬ್ರಾಹ್ಮಣರು...!!
ಕಣ್ಣಿಲ್ಲದವರಿಗೆ ಕಣ್ಣು ನೀಡಲಾಗದಿದ್ದರೂ
ಕನ್ನಡಕ ನೀಡುತ್ತೇವೆ.
ಅನ್ನ ನೀಡಲಾಗದಿದ್ದರೂ,
ಗಂಜಿ ನೀಡುತ್ತೇವೆ.
ಆದರೂ,ಪರರ ಕಣ್ಣಿಗೆ ನಾವು 
ಶೋಷಣೆ ಮಾಡುವವರಾಗಿದ್ದೇವೆ.
ಯಾಕೆಂದರೆ,
ನಾವು ಬ್ರಾಹ್ಮಣರು...!!
ಸರ್ಕಾರದ ಸವಲತ್ತು ಸಿಗದೇ ಇದ್ದಾಗ,
ದೇವರು ಕೊಟ್ಟಿದ್ದಾನಲ್ಲಾ ಎನ್ನುತ್ತೇವೆ.
ಮೀಸಲಾತಿಯಿಂದ ಅನ್ಯಾಯವಾದರೆ,
ಮಕ್ಕಳನ್ನು ಸಾಲ ಮಾಡಿ ಓದಿಸಿ,
ಖಾಸಗಿ ಕಂಪನಿಗೆ ಕಳಿಸುತ್ತೇವೆ.
ನಾವು ದೇಶಕ್ಕೆ ಮಣ್ಣಿಗೆ ಕೊಡುಗೆ
ನೀಡುತ್ತ ಕೂರುತ್ತೇವೆ.
 ಯಾಕೆಂದರೆ, 
ನಾವು ಬ್ರಾಹ್ಮಣರು...!!
ಎಲ್ಲವನ್ನೂ ಬೈಸಿಕೊಂಡು
ಎಲ್ಲರನ್ನೂ ಜಯಿಸಿದವರು...!!

ಕೆಲವು ಮೆಲುಕು ಹಾಕುವಂತ ನುಡಿಗಳು

*ನಮ್ಮ ಆತ್ಮೀಯರೊಬ್ಬರು ಕಳುಹಿಸಿದ ಜೀವನದ ಬಗೆಗಿನ ಕೆಲವು ಮೆಲುಕು ಹಾಕುವಂತ ನುಡಿಗಳು*:
*"ಮಧ್ಯವಯಸ್ಸಿನ ನಂತರ"*
೧.  ಜೀವನದ ರಹಸ್ಯ :
       1.ಮಧ್ಯವಯಸ್ಸಿನ ವರೆಗೆ  ಹೆದರ  ಬೇಡಿ....
       2.ಮಧ್ಯವಯಸ್ಸಿನ ನಂತರ : ಯಾವುದಕ್ಕೂ ಬೇಸರ ಪಡಬೇಡಿ.....
೨.  ನೀವು ಸಾಧ್ಯವಾಗುವಷ್ಟು ನಿಮ್ಮ ಜೀವನವನ್ನು ಅನುಭವಿಸಿ...
  ೩.   ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ ಪಡಿಸಲೂ ಸಾಧ್ಯವಾಗದಷ್ಟು ಮುದುಕರಾಗುವವರೆಗೆ ಮುಂದೂಡಬೇಡಿ, ಎಲ್ಲಿಯವರೆಗೆ ನಿಮ್ಮಿಂದ ಸಾಧ್ಯವೋ ಅಲ್ಲಿಯವರೆಗೆ ಮೊದಲೇ ನೀವು ನೋಡಬೇಕೆಂದಿರುವ ಸ್ಥಳಗಳನ್ನು ಭೇಟಿ ಕೊಡಿ, ನೋಡಿ ಬಿಡಿ.
೪.  ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಹಳೆ ಸ್ನೇಹಿತರು ಗುರು ಹಿರಿಯರು ಇವರುಗಳನ್ನು ಬೇಟಿಯಾಗಿಬಿಡಿ,  ಮುಂದೆ ಅವರೆಲ್ಲರನ್ನು ನೋಡುವ ಅವಕಾಶ ಸಿಗುತ್ತೋ ಇಲ್ಲವೋ.
೫.  ಬ್ಯಾಂಕುಗಳಲ್ಲಿ ಇಟ್ಟ ನಿಮ್ಮ ಹಣ ನಿಮ್ಮದಾಗಿ ಇರದಿರಬಹುದು, ಅದಕ್ಕೇ ಅದನ್ನ ಖರ್ಚು ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಅನುಭವಿಸಿ, ಇದಕ್ಕಾಗಿ ನೀವು ನಾಳೆಯ ಬಗ್ಗೆ ಯೋಚಿಸ ಬೇಕಿಲ್ಲ
೬.  ಏನೆಲ್ಲಾ ತಿನ್ನ ಬೇಕೆನಿಸುತ್ತೋ ತಿಂದು ಬಿಡಿ, ನೀವು  ಖುಷಿ ಯಾಗಿರುವುದು ಮಾತ್ರ ಮುಖ್ಯ ಆದರೆ ನಿಮ್ಮ  ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳನ್ನು ಯಾವಾಗಲೂ ತಿನ್ನಿ, ಅದೇ ನಿಮ್ಮ ಆರೋಗ್ಯಕ್ಕೆ ಹಾನಿಕರವಾದವುಗಳನ್ನು ತಿನ್ನಲೇಬೇಕೆನಿಸಿದಲ್ಲಿ ಒಮ್ಮೊಮ್ಮೆ ಮಾತ್ರ ಸ್ವಲ್ಪ  ಸ್ವಲ್ಪವೇ ತಿನ್ನಿ.
೭.  ಅನಾರೋಗ್ಯವನ್ನು ಸರಿಯಾದ ರೀತಿಯಲ್ಲೇ ಕ್ರಮಿಸಿ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಪ್ರತಿಯೊಬ್ಬರೂ ಹುಟ್ಟು, ವಯಸ್ಸು, ಅನಾರೋಗ್ಯ, ಮತ್ತು ಸಾವು ಈ ಚಕ್ರದಲ್ಲೇ ಸುತ್ತಬೇಕು. ಇದಕ್ಕೆ ಶಾಶ್ವತವಾದ   ಪರಿಹಾರ ಎಂದೂ ಇಲ್ಲವೇ ಇಲ್ಲ. ಇದೇ ಜೀವನ.
೮.  ನೀವು ಅನಾರೋಗ್ಯವಾಗಿರುವಾಗ ಹೆದರುವುದೂ ಬೇಡ, ಬೇಸರವೂ ಬೇಡ. ನಿಮ್ಮದೇನಾದರೂ ಬಾಕಿ/ ನೀವು ಪರಿಹರಿಸಬೇಕಾದ /ಇತ್ಯರ್ಥವಾಗಬೇಕಾದ ಸಮಸ್ಯೆ ಇದ್ದರೆ ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಮತ್ತು ನಿರಾಳರಾಗಿ.
೯.  ನಿಮ್ಮ ದೇಹವನ್ನು ವೈದ್ಯರೂ, ಜೀವನವನ್ನು ದೇವರೂ/ ಪ್ರಕೃತಿಯೂ ಮತ್ತು ನಿಮ್ಮ ಮನಸ್ಥಿತಿಯನ್ನು ನೀವೂ ನೋಡುತ್ತಿರಿ.
೧೦.  ನಿಮ್ಮ ಚಿಂತೆ ನಿಮ್ಮ ಅನಾರೋಗ್ಯವನ್ನು ಸರಿ ಪಡಿಸುವದಾದರೆ ನೀವು ಸದಾ ಚಿಂತಿಸಿ, ನಿಮ್ಮ ಆಯುಷ್ಯವನ್ನು ಚಿಂತೆ ಹೆಚ್ಚಿಸುವುದಾದರೆ ನೀವು ಸದಾ ಚಿಂತಿಸಿ, ಮತ್ತು  ಸಂತೋಷಗಳಿಗೆ  ಚಿಂತೆಗಳನ್ನು ಬದಲಿಸ ಬಹು ದಾದರೆ ಹಾಗೇ ಮಾಡಿ .
೧೧. ಮಕ್ಕಳು ಅವರ ಭವಿಷ್ಯವನ್ನು ಖುದ್ದು ಮಾಡಿಕೊಳ್ಳುತ್ತಾರೆ. ಅವರ ಬಗ್ಗೆ ನೀವು ಜಾಸ್ತಿ ಚಿಂತಿಸುವುದು ಬೇಡ.
೧೨.   ನಾಲ್ಕು ಖಜಾನೆಯನ್ನು ಸರಿಯಾಗಿ ನೋಡಿಕೊಳ್ಳಿ....
  
             ೧.   ನಿಮ್ಮ  ದೇಹ : ನಿಮ್ಮ ಆರೋಗ್ಯ ಮತ್ತು ದೇಹಸ್ಥಿತಿಯ  ಬಗೆಗೆ ಜಾಸ್ತಿ  ಕಾಳಜಿ    ನಿಮ್ಮದೇ ಇರಲಿ 
          ೨.     ನಿಮ್ಮ  ಆರ್ಜಿತ  ಧನ ನಿಮ್ಮ  ಕೈಯಲ್ಲೇ ಇಟ್ಟುಕೊಳ್ಳುವುದು  ಅತ್ಯಂತ ಒಳ್ಳೆಯದು. 
          ೩.     ನಿಮ್ಮ ಹಳೆಯ ಸಂಗಾತಿ ಅತ್ಯಂತ ಅಮೂಲ್ಯ ಖಜಾನೆಯಿದು, ಪ್ರತಿ ಕ್ಷಣವೂ ಅನ್ಯೋನ್ಯವಾಗಿ ಸಹಚರರಂತೆ ಬಾಳಲು ಪ್ರಯತ್ನ ಪಡಿ , ನಿಮ್ಮಿಬ್ಬರಲ್ಲಿ ಒಬ್ಬರು ಮೊದಲು ಕೈ ಬಿಡುವಿರಿ ( ಈ ಜಗದಿಂದ)....
         ೪.     ನಿಮ್ಮ ಹಳೆಯ ಸ್ನೇಹಿತರು:  ಇವರನ್ನು ಸಿಗಲು ಸಾಧ್ಯವಾಗುವ ಪ್ರತಿ ಕ್ಷಣಗಳನ್ನೂ ಸಿಕ್ಕಿ ಅಸ್ವಾದಿಸಿ, ಏಕೆಂದರೆ ಕಳೆಯುತ್ತಿರುವ ಪ್ರತಿ ಕ್ಷಣಗಳೂ ನಿಮಗೆ ಅಮೂಲ್ಯವಾಗಿ ಕಡಿಮೆಯಾಗುತ್ತಲಿರುತ್ತದೆ.
 13. ದಿನಾ ನೀವು ಅವಶ್ಯ  ಮಾಡಲೇಬೇಕಾದ ಮುಖ್ಯ ಎರಡು ಕೆಲಸಗಳು  " ಹಸನ್ಮುಖಿಯಾಗಿ" ಮತ್ತು "ನಗುತ್ತಿರಿ"
14. ಹರಿಯುತ್ತಿರುವ ನೀರು ಹಿಂದಕ್ಕೆ ತಿರುಗದು... ಅಂತೆಯೇ ನಮ್ಮ ಜೀವನ..  ಅದಕ್ಕೇ ಸಂತಸವಾಗಿಸಿರಿ.
15. ದೇವರು ನಿಮ್ಮ ಚೆನ್ನಾಗಿ ಖುಷಿಯಲ್ಲಿಟ್ಟಿರಲಿ.

ಚಾತುರ್ಮಾಸ್ಯದಲ್ಲಿ ವ್ರತರೂಪವಾಗಿ ವರ್ಜಿಸಬೇಕಾದ ವಸ್ತುಗಳು,

ಚಾತುರ್ಮಾಸ್ಯದಲ್ಲಿ  ವ್ರತರೂಪವಾಗಿ ವರ್ಜಿಸಬೇಕಾದ  ವಸ್ತುಗಳು, 
ಚಾತುರ್ಮಾಸ ಪ್ರಾರಂಭ  ಈ ನಾಲ್ಕು ತಿಂಗಳುಗಳಲ್ಲಿ ಪಾಲಿಸಬೇಕಾದ ವ್ರತಗಳು.
ಚಾತುರ್ಮಾಸವು ಆಷಾಡ ಶುಕ್ಲ ಏಕಾದಶೀಯಿಂದ ಆರಂಭವಾಗುತ್ತದೆ ಮತ್ತು ಕಾರ್ತಿಕ ಶುಕ್ಲ ಏಕಾದಶೀ ಅಥವಾ ಪೌರ್ಣಮೆಯಂದು ಸಮಾಪನಗೊಳ್ಳುತ್ತದೆ. ಆಷಾಢ ಶುಕ್ಲ ಏಕಾದಶೀಯಂದು ದೇವದೇವೋತ್ತಮನಾದ ಶ್ರೀಹರಿಯು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ತೊಡಗುವುದರ ಪ್ರತೀಕವಾಗಿ ಹರಿಶಯನೋತ್ಸವ ಅಥವಾ ವಿಷ್ಣುಶಯನೋತ್ಸವವನ್ನು ಆಚರಿಸಲಾಗುತ್ತದೆ
ಎಲ್ಲ ಸ್ತ್ರೀಪುರುಷರು, ನಾಲ್ಕೂ ವರ್ಣದವರೂ (ಬ್ರಾಹ್ಮಣ-ಕ್ಷತ್ರೀಯ-ವೈಶ್ಯ-ಶೂದ್ರ), ನಾಲ್ಕೂ ಆಶ್ರಮದವರೂ (ಬ್ರಹ್ಮಚರ್ಯ-ಗ್ರಹಸ್ಥ-ವಾನಪ್ರಸ್ಥ-ಸನ್ಯಾಸ), ಎಲ್ಲ ಪ್ರಕಾರದ ಸನ್ಯಾಸಿಗಳು (ಕುಟೀಚರ-ಬಹೂದ-ಹಂಸ-ಪರಮಹಂಸ), ಇನ್ನಿತರ ಅನ್ಯ ವ್ರತಗಳನ್ನು ಮಾಡುತ್ತಿರುವವರು, ಎಲ್ಲರೂ ನಿತ್ಯವಾದ  ಈ ಚಾತುರ್ಮಾಸ್ಯ ವ್ರತವನ್ನು ಅವಶ್ಯವಾಗಿ ಆಚರಿಸಲೇಬೇಕು,
ನಾಲ್ಕು ಮಾಸಗಳು – ನಾಲ್ಕು ವ್ರತಗಳು
ಪ್ರಥಮೇ ಮಾಸಿ ಕರ್ತವ್ಯಂ ನಿತ್ಯಂ ಶಾಕವ್ರತಂ ಶುಭಮ್ |
ದ್ವಿತೀಯೇ ಮಾಸಿ ಕರ್ತವ್ಯಂ ದಧಿವ್ರತಮನುತ್ತಮಮ್ ||
ಪಯೋವ್ರತಂ ತೃತೀಯೇ ತು ಚತುರ್ಥೇ ತು ನಿಶಾಮಯ |
ದ್ವಿದಲಂ ಬಹುಬೀಜಂ ಚ ವರ್ಜಯೇತ್`ಶುದ್ಧಿಮಿಚ್ಛತಾ ||
ನಿತ್ಯಾನ್ಯೇತಾನಿ ವಿಪ್ರೇಂದ್ರ ವ್ರತಾನ್ಯಾಹುರ್ಮನೀಷಿಣಃ || (ಸ್ಕಂದಪುರಾಣ)
ಮೊದಲನೇ ಮಾಸದಲ್ಲಿ ಶಾಕವ್ರತ, ಎರಡನೇ ಮಾಸದಲ್ಲಿ ದಧಿವ್ರತ, ಮೂರನೇಯ ಮಾಸದಲ್ಲಿ ಕ್ಷೀರವ್ರತ ಮತ್ತು ಕೊನೆಯ ನಾಲ್ಕನೇಯ ಮಾಸದಲ್ಲಿ ದ್ವಿದಲವ್ರತ, ನಿತ್ಯವಾದ ಈ ವ್ರತಗಳನ್ನು ಪಾಲಿಸಬೇಕು.
ಚಾತುರ್ಮಾಸಕ್ಕೆ ಮಾಸಗಳ ಗಣನೆ ಶುಕ್ಲ ಏಕಾದಶೀಯಿಂದ ಮುಂದಿನ ಶುಕ್ಲ ಏಕಾದಶೀಯ ವರೆಗೆ. ಈ ವ್ರತಗಳನ್ನು ಆಚರಿಸುವುದೆಂದರೆ ಆಯಾ ಮಾಸಗಳಲ್ಲಿ ಅನುಕ್ರಮವಾಗಿ ಆಯಾ ವಸ್ತುಗಳನ್ನು ಸಂಕಲ್ಪಪೂರ್ವಕ ತ್ಯಾಗಮಾಡಬೇಕು.
ಶಾಕವ್ರತ – (ಆಷಾಢ ಶುಕ್ಲೈಕಾದಶೀಯಿಂದ ಶ್ರಾವಣ ಶುಕ್ಲೈಕಾದಶೀ) ಈ ವ್ರತದಲ್ಲಿ ಶಾಕಗಳನ್ನು ಎಂದರೆ ಎಲ್ಲ ರೀತಿಯ ತರಕಾರಿಗಳನ್ನು ಆಹಾರವಾಗಿ ಸ್ವೀಕರಿಸಬಾರದು. ಬೇರುಗಳು, ಎಲೆ, ಮೊಳಕೆ, ತುದಿ (ಮುಂಭಾಗ), ಹಣ್ಣುಗಳು, ದಂಟು, ತೊಗಟೆ, ಚಿಗುರು, ಹೂವು, ಸಿಪ್ಪೆ ಇವುಗಳನ್ನು ಶಾಕ ಎಂದು ಕರೆಯಲಾಗುತ್ತದೆ – ಇವುಗಳು ಈ ವ್ರತದಲ್ಲಿ ಅಸ್ವೀಕಾರ್ಯಗಳಾಗಿವೆ. ಎಂದರೆ ಎಲ್ಲ ಎಲೆ-ಕೋಸು ತರಕಾರಿಗಳು, ಮಸಾಲೆ ಪದಾರ್ಥಗಳು, ಹಣ್ಣುಗಳು, ಬೇರುಗಳು ಆಹಾರ ಪದಾರ್ಥವಾಗಿ ಈ ಮಾಸದಲ್ಲಿ ಸ್ವೀಕರಿಸಬಾರದು.
ಅಗಸೆ, ತುಳಸಿ, ನೆಲ್ಲಿ, ಮಾವುಗಳು ಶಾಕಗಳಾಗಿದ್ದರೂ ವರ್ಜ್ಯವಲ್ಲ. ಅಂತೆಯೇ ತೆಂಗಿನಕಾಯಿ, ಖರ್ಜೂರ, ಒಣಶುಂಠಿ, ಮೆಣಸುಗಳನ್ನು ಸಹ ಆಹಾರದಲ್ಲಿ ಬಳಸಬಹುದು.
ದಧಿವ್ರತ – (ಶ್ರಾವಣ ಶುಕ್ಲೈಕಾದಶೀಯಿಂದ ಭಾದ್ರಪದ ಶುಕ್ಲೈಕಾದಶೀ) ಈ ವ್ರತದಲ್ಲಿ ಒಂದು ತಿಂಗಳುಗಳ ಕಾಲ ಮೊಸರನ್ನು ತ್ಯಾಗಮಾಡಬೇಕು. ಮಜ್ಜಿಗೆಯು ಗ್ರಾಹ್ಯವಾಗಿದೆ.
ಕ್ಷೀರವ್ರತ – (ಭಾದ್ರಪದ ಶುಕ್ಲೈಕಾದಶೀಯಿಂದ ಆಶ್ವೀನ ಶುಕ್ಲೈಕಾದಶೀ) ಈ ವ್ರತದಲ್ಲಿ ಒಂದು ತಿಂಗಳುಗಳ ಕಾಲ ಹಾಲನ್ನು ತ್ಯಾಗಮಾಡಬೇಕು.
ದ್ವಿದಳವ್ರತ – (ಆಶ್ವೀನ ಶುಕ್ಲೈಕಾದಶೀಯಿಂದ ಕಾರ್ತಿಕ ಶುಕ್ಲೈಕಾದಶೀ) ಈ ವ್ರತದಲ್ಲಿ ಎಲ್ಲ ರೀತಿಯ ದ್ವಿದಳಧಾನ್ಯಗಳನ್ನು ತ್ಯಾಗಮಾಡಬೇಕು. ತೊಗರೆ, ಹುರುಳಿ, ಕಡಲೆ, ಅವರೆ, ಉದ್ದು ಮೊದಲಾದ ಒಡೆದಾಗ ಎರಡಾಗಿ ಭಾಗವಾಗುವ ಧಾನ್ಯಗಳು ದ್ವಿದಳ ಧಾನ್ಯಗಳಾಗಿವೆ.
ಮೇಲ್ಕಂಡ ಈ ವ್ರತಗಳು ಕಡ್ಡಾಯ-ನಿತ್ಯ ವ್ರತಗಳಾಗಿವೆ. ಈ ಮೇಲಿನ ವ್ರತಗಳಲ್ಲದೇ ಇನ್ನೂ ಅನೇಕ ಐಚ್ಛಿಕ ವ್ರತಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಚಾತುರ್ಮಾಸದಲ್ಲಿ ಬರುವ ನಾಲ್ಕು ಮಾಸಗಳಾದ ಶ್ರಾವಣ, ಭಾದ್ರಪದ, ಅಶ್ವಯುಜ ಮತ್ತು ಕಾರ್ತಿಕ ಮಾಸಗಳಿಗೆ ಕ್ರಮವಾಗಿ ಪರಮಾತ್ಮನ ಶ್ರೀಧರ, ಹೃಷೀಕೇಶ, ಪದ್ಮನಾಭ ಮತ್ತು ದಾಮೋದರ ಈ ರೂಪಗಳು ಅಭಿಮಾನಿಗಳಾಗಿವೆ.

ಅಂಕಿ ಅಂಶಗಳ ಪ್ರಕಾರ ಹೀಗಿದೆ

ಎಕಂ,ದಶಂ,ಶತಂ,ಸಹಸ್ರ,ದಶಸಹಸ್ರ,ಲಕ್ಷ,ದಶಲಕ್ಷ,ಕೋಟಿ,ದಶಕೋಟಿ . .  . . . . . .  . ಮುಂದೆ?
ನೆನಪಿದೆಯೇ ಸ್ನೇಹಿತರೆ
ಕನ್ನಡ ಶಾಲೆಯಲ್ಲಿ ಕಲಿತ ಅಂಕಿಅಂಶಗಳ ವಿವರ
ಅಷ್ಟಕ್ಕೂ ಇದರ ಅಂತಿಮ ಹಂತ ಎಲ್ಲಿಯವರೆಗೆ?
ನೋಡಿ ತಿಳಿಯಿರಿ
ಕನ್ನಡದಲ್ಲಿ ಅಂಕಿ ಅಂಶಗಳ ಪ್ರಕಾರ ಹೀಗಿದೆ;-
ಏಕಂ (ಒಂದು),
ದಶಂ (ಹತ್ತು),
ಶತಂ (ನೂರು),
ಸಹಸ್ರ (ಸಾವಿರ),
ದಶಸಹಸ್ರ (ಹತ್ತು ಸಾವಿರ),
ಲಕ್ಷ,
ದಶಲಕ್ಷ (ಹತ್ತು ಲಕ್ಷ),
ಕೋಟಿ,
ದಶಕೋಟಿ,
ಅಬ್ಜ (ನೂರು ಕೋಟಿ),
ದಶ ಅಬ್ಜ,
ಖರ್ವ,
ದಶಖರ್ವ,
ಪದ್ಮ,
ದಶಪದ್ಮ,
ನೀಲ,
ದಶನೀಲ,
ಶಂಖ,
ದಶಶಂಖ,
ಕ್ಷಿತಿ,
ದಶಕ್ಷಿತಿ,
ಕ್ಷೋಭ,
ದಶಕ್ಷೋಭ,
ಋದ್ಧಿ,
ದಶಋದ್ಧಿ,
ಸಿದ್ಧಿ,
ದಶಸಿದ್ಧಿ,
ನಿಧಿ,
ದಶನಿಧಿ,
ಕ್ಷೋಣಿ,
ದಶಕ್ಷೋಣಿ.
ಕಲ್ಪ,
ದಶಕಲ್ಪ,
ತ್ರಾಹಿ,
ದಶತ್ರಾಹಿ,
ಬ್ರಹಮಾಂಡ,
ದಶಬ್ರಹಮಾಂಡ,
ರುದ್ರ,
ದಶರುದ್ರ,
ತಾಲ,
ದಶತಾಲ,
ಭಾರ,
ದಶಭಾರ,
ಬುರುಜ,
ದಶಬುರುಜ,
ಘಂಟಾ,
ದಶಘಂಟಾ,
ಮೀಲ,
ದಶಮೀಲ,
ಪಚೂರ,
ದಶಪಚೂರ,
ಲಯ,
ದಶಲಯ,
ಫಾರ,
ದಶಫಾರ,
ಅಷಾರ,
ದಶಅಷಾರ,
ವಟ,
ದಶವಟ,
ಗಿರಿ,
ದಶಗಿರಿ,
ಮನ,
ದಶಮನ,
ವವ,
ದಶವವ,
ಶಂಕು,
ದಶಶಂಕು,
ಬಾಪ,
ದಶಬಾಪ,
ಬಲ,
ದಶಬಲ,
ಝಾರ,
ದಶಝಾರ,
ಭೀರ,
ದಶಭೀರ,
ವಜ್ರ,
ದಶವಜ್ರ,
ಲೋಟ,
ದಶಲೋಟ,
ನಜೆ,
ದಶನಜೆ,
ಪಟ,
ದಶಪಟ,
ತಮೆ,
ದಶತಮೆ,
ಡಂಭ,
ದಶಡಂಭ,
ಕೈಕ,
ದಶಕೈಕ,
ಅಮಿತ,
ದಶಅಮಿತ,
ಗೋಲ,
ದಶಗೋಲ,
ಪರಿಮಿತ,
ದಶಪರಿಮಿತ,
ಅನಂತ,
ದಶಅನಂತ.
ದಶಅನಂತಕ್ಕೆ ಒಂದರ ಮುಂದೆ ೯೬(96) ಶೂನ್ಯವನ್ನ ಸೇರಿಸಬೇಕಾಗುತ್ತೆ.{೧೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦} =ದಶಅನಂತ.
ಮಿತ್ರರೇ,.
ಪ್ರಾಚೀನ ಭಾರತದ ಮಹಿಮೆ ನಮಗೆಲ್ಲರಿಗೂ ತಿಳಿಯದಷ್ಟು ಅಪಾರವಾಗಿದೆ.

ನುಗ್ಗೆಹಳ್ಳಿಯ ಶ್ರೀ. ಲಕ್ಷ್ಮೀನರಸಿಂಹ ದೇವಾಲಯ

ನುಗ್ಗೆಹಳ್ಳಿಯ ಶ್ರೀ. ಲಕ್ಷ್ಮೀನರಸಿಂಹ ದೇವಾಲಯ
ಹೊಯ್ಸಳರ ಕಾಲದ ಅದ್ಭುತ ಕಲಾಶ್ರೀಮಂತಿಕೆಯ ಪುರಾತನ ಮಂದಿರ
*ಟಿ.ಎಂ. ಸತೀಶ್
ನುಗ್ಗೆಹಳ್ಳಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ಹಾಗೂ ಹಿರೇಸಾವೆ ಬಳಿ ಇರುವ ಒಂದು ಪುಟ್ಟ ಪಟ್ಟಣ. ಈ ಊರಿನಲ್ಲಿ ಹೊಯ್ಸಳರ ಕಾಲದ ಭವ್ಯ ದೇವಾಲಯಗಳಿವೆ. ಈ ಪೈಕಿ ಶ್ರೀ. ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಪ್ರಮುಖವಾದದ್ದು.
ಸುಮಾರು 14-15ನೇ ಶತಮಾನದಲ್ಲಿ ಈ ಊರಿಗೆ ನುಗ್ಗೆಹಳ್ಳಿ ಎಂಬ ಹೆಸರು ಬಂತು ಎಂದು ತಿಳಿದುಬರುತ್ತದೆ. ಅಂದಿನ ಪಾಳೆಯಗಾರರು ಶತ್ರು ಸೈನ್ಯದ ಮೇಲೆ ತಮ್ಮ ಪಡೆಯನ್ನು ನುಗ್ಗಿಸಲು ಇಲ್ಲಿ ಸೈನ್ಯವನ್ನು ಒಟ್ಟುಗೂಡಿಸುತ್ತಿದ್ದರಂತೆ. ಒಮ್ಮೆಲೇ ಸೈನಿಕರು ದಾಳಿ ಮಾಡಲು ನುಗ್ಗುತ್ತಿದ್ದ ಊರು ನುಗ್ಗೆಹಳ್ಳಿಯಾಯಿತು ಎಂಬ ಹೆಸರು ಪಡೆಯಿತು ಎಂದು ಇತಿಹಾಸಕಾರರು ಹೇಳುತ್ತಾರೆ.
ಇಲ್ಲಿ 14ನೇ ಶತಮಾನದಲ್ಲಿ ಅಂದರೆ ವಿಜಯನಗರದ ಅರಸರ ಕಾಲದಲ್ಲಿ ಈ ಊರಿಗೆ ನುಗ್ಗೆ ಹಳ್ಳಿ ಎಂಬ ಹೆಸರು ಬಂತಾದರೂ, ಅದಕ್ಕೂ ಮೊದಲೇ ಇಲ್ಲಿ ಊರಿತ್ತು, ದೇವಾಲಯವಿತ್ತು ಎಂದು ತಿಳಿದುಬರುತ್ತದೆ. ಇಲ್ಲಿ ಚೋಳರ ಕಾಲದಲ್ಲಿಯೇ ಜಯಗೊಂಡೇಶ್ವರ ದೇವಾಲಯ ನಿರ್ಮಾಣವಾಗಿತ್ತೆಂದೂ, ಇದಕ್ಕೆ ಹೊಯ್ಸಳರ ದೊರೆ ವಿಷ್ಣುವರ್ಧನ 1121ರಲ್ಲಿ ದತ್ತಿ ನೀಡಿದ್ದನೆಂದು ಶಾಸನ ಸಾರುತ್ತದೆ.
ದೇವಾಲಯದಲ್ಲಿರುವ ಫಲಕದಲ್ಲಿ ಸೋಮೇಶ್ವರ ಹೊಯ್ಸಳನ ಕಾಲದಲ್ಲಿ ಬೊಮ್ಮಣ್ಣ ದಂಡನಾಯಕ ತನ್ನ ಗುರುಗಳಾದ ಪುಂಡರೀಕಾಕ್ಷ ಸೋಮಯಾಜಿ ಅವರೊಂದಿಗೆ ಇಲ್ಲಿಗೆ ಭೇಟಿ ನೀಡಿದ್ದನ್ನೆಂದೂ, ಆತ ತನ್ನ ಗುರುಗಳಾದ ಪುಂಡರೀಕಾಕ್ಷ ಸೋಮಯಾಜಿಗಳ ಆದೇಶದಂತೆ ಇಲ್ಲಿ ದೇವಾಲಯ ಕಟ್ಟಿಸಿ, ವಿಜಯ ಸೋಮನಾಥಪುರ ಎಂದು ಹೆಸರಿಟ್ಟು ಅಗ್ರಹಾರ ಮಾಡಿದನೆಂಬ ಉಲ್ಲೇಖವಿದೆ.
ಬೊಮ್ಮಣ್ಣ ದಂಡನಾಯಕ 1168ರಲ್ಲಿ ಅಂದರೆ ಪ್ರಭವ ಸಂವತ್ಸರ ಚೈತ್ರ ಮಾಸದ ಬುಧವಾರ ಶುಕ್ಲ ಪಂಚಮಿಯಂದು ತ್ರಿಕೂಟಾಚಲ ಅಂದರೆ ಮೂರು ಗರ್ಭಗೃಹ ಮೂರು ಗೋಪುರದ ದೇಗುಲವನ್ನು ಲಕ್ಷ್ಮೀನರಸಿಂಹ, ವೇಣುಗೋಪಾಲ ಮತ್ತು ಕೇಶವ ದೇವರಿಗಾಗಿ ಕಟ್ಟಿಸಿ, ದೇವತಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾನೆ. ವಾಸ್ತವವಾಗಿ ಈ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಕೇಶವನ ಮೂರ್ತಿಯಿದ್ದರೂ,  ದೇವಾಲಯ ಲಕ್ಷ್ಮೀನರಸಿಂಹ ದೇವಾಲಯ ಎಂದೇ ಖ್ಯಾತವಾಗಿದೆ.  ದೇವಾಲಯದ ಪಶ್ಚಿಮ ಭಾಗದಲ್ಲಿ ಋಷಭ ಎಂಬ ಮುನಿ ತಪಸ್ಸು ಮಾಡಿ  ಲಕ್ಷ್ಮೀನರಸಿಂಹನ ಒಲಿಸಿಕೊಂಡಿದ್ದ ಕಾರಣ ಇದು ಲಕ್ಷ್ಮೀನರಸಿಂಹ ದೇವಾಲಯ ಎಂದೇ ಖ್ಯಾತವಾಗಿದೆ ಎನ್ನುತ್ತಾರೆ ಕೆಲವರು. ಸೋಮನಾಥಪುರದ ಸುಂದರ ದೇವಾಲಯಗಳ ನಿರ್ಮಾಣಕ್ಕೂ ಮೊದಲೇ ಇಲ್ಲಿ ದೇವಾಲಯ ನಿರ್ಮಾಣವಾಗಿತ್ತು ಎಂದು ತಿಳಿದುಬರುತ್ತದೆ. ಜಾವಗಲ್ ಲಕ್ಷ್ಮೀನರಸಿಂಹ ದೇವಾಲಯ ಹೊಸ ಹೊಳಲು ಲಕ್ಷ್ಮೀನಾರಾಯಣ ದೇವಾಲಯಗಳ ರೀತಿಯಲ್ಲೇ ಈ ದೇವಾಲಯವೂ ಇದೆ.  
ಪ್ರಧಾನಗರ್ಭಗೃಹದಲ್ಲಿ 3 ಅಡಿ ಎತ್ತರದ ಗರುಡ ಪೀಠದ ಮೇಲೆ ಶಂಖ, ಚಕ್ರ, ಗದಾ, ಪದ್ಮ ಧಾರಿಯಾದ ಕೇಶವನ ಮೂರ್ತಿಯಿದ್ದರೆ, ಬಲಭಾಗದಲ್ಲಿರುವ ಗರ್ಭಗೃಹದಲ್ಲಿ ತೊಡೆಯ ಮೇಲೆ ಲಕ್ಷ್ಮಿಯನ್ನು ಕೂರಿಸಿಕೊಂಡಿರುವ ನರಸಿಂಹಸ್ವಾಮಿಯ ವಿಗ್ರಹವಿದೆ. ಅದರ ಎದುರು ಇರುವ ಮತ್ತೊಂದು ಗರ್ಭಗೃಹದಲ್ಲಿ ಕೊಳಲನ್ನು ಊದುತ್ತಿರುವ ಗೋಪಾಲಕೃಷ್ಣ ಸ್ವಾಮಿಯ ಗುಡಿ ಇದೆ. ಮೂರೂ ಗರ್ಭಗೃಹಕ್ಕೆ ಸೇರಿದಂತೆ ನವರಂಗವಿದೆ.
ದೇವಾಲಯ ಸಂಪೂರ್ಣ ಹೊಯ್ಸಳ ಶೈಲಿಯಲ್ಲಿದೆ. ದ್ವಾರಬಂಧದ ಮೇಲೆ ಮೂರು ಗಾರೆ ಗಚ್ಚಿನ ಗೋಪುರ ಇದೆ. ಸುತ್ತಲೂ ಕೋಟೆಯಂಥ ಆವರಣವಿದೆ. ವಿಶಾಲ ಪ್ರದೇಶದ ಮಧ್ಯೆ ದೇವಾಲಯವಿದೆ. ಮುಖಮಂಟಪದ ಛಾವಣಿಯಲ್ಲಿ ಅಷ್ಟದಿಕ್ಪಾಲಕರ ಕೆತ್ತನೆ ಇದೆ. ಒಳ ಪ್ರವೇಶಿಸಿದರೆ ಹಿಂಭಾಗದಲ್ಲಿ ನಾಲ್ಕು ಅಡಿ ಎತ್ತರದ ನಕ್ಷತ್ರಾಕಾರದ ಜಗಲಿಯ ಮೇಲೆ ಇರುವ ಭವ್ಯ ಕೆತ್ತನೆಯ ಸುಂದರ ದೇವಾಲಯ ಕಾಣುತ್ತದೆ. ಪ್ರವೇಶದಲ್ಲಿನ ಆನೆಯ ಕೆತ್ತನೆ ಸುಂದರವಾಗಿದೆ. ಮುಂಭಾಗದಲ್ಲಿ ಆನಂತರ ವಿಸ್ತರಣೆ ಆಗಿರುವುದು ಗೋಚರಿಸುತ್ತದೆ. ಹಿಂಬದಿಯಲ್ಲಿ ಸುಂದರ ಗೋಪುರ ಹಾಗೂ ಬಳಪದ ಕಲ್ಲಿನಿಂದ ನಿರ್ಮಿಸಿರುವ ದೇವಾಲಯದ ಭಿತ್ತಿಗಳಲ್ಲಿ ಪುರಾಣದ ಕಥಾನಕಗಳ ಸುಂದರ ಸೂಕ್ಷ್ಮ ಕೆತ್ತನೆಗಳಿವೆ.
ಪಟ್ಟಿಕೆಗಳಲ್ಲಿ ಮಕರ, ಬಂಡಿಗಳು, ಯುದ್ಧ ಪುರಾಣ ಇತ್ಯಾದಿ ಪ್ರಸಂಗಗಳು, ಲತಾ ಸುರುಳಿಗಳು, ಆನೆ ಹಾಗೂ ಕುದುರೆ ಸವಾರರ ಪಟ್ಟಿಕೆಗಳಿವೆ. ಪಟ್ಟಿಕೆಗಳ ಮೇಲ್ಭಾಗದಲ್ಲಿ ಮೂರು ಅಡಿ ಎತ್ತರದ ಸೂಕ್ಷ್ಮ ಕೆತ್ತನೆಯ ದೇವಾನು ದೇವತೆಗಳ, ಭಾಗವತ ಪ್ರಸಂಗಗಳ ಕೆತ್ತನೆ ಇದೆ. ಇದರಲ್ಲಿ ಬ್ರಹ್ಮ, ರತಿ ಮನ್ಮಥ, ನಾರಾಯಣ, ನರಸಿಂಹ, ನಾಟ್ಯ ಗಣಪತಿ, ಮದನಿಕೆಯರು, ಕಾಳಿಂಗ ಮರ್ದನ, ಪೂತನಿ ಸಂಹಾರ, ಶಕಟಾಸುರ ವಧೆ, ಬೆಣ್ಣೆ ಕಳ್ಳತನ, ಗೋಪಾಲಕರೊಂದಿಗೆ ಆಟವಾಡುತ್ತಿರುವುದೇ ಮೊದಲಾದ ಸುಂದರ ಶಿಲ್ಪಗಳಿವೆ. ಲಕ್ಷ್ಮೀ ನಾರಾಯಣರು ಉಯ್ಯಾಲೆಯಲ್ಲಿ ಕುಳಿತಿರುವ ಶಿಲ್ಪವಂತೂ ಅತ್ಯಂತ ಮನೋಹರವಾಗಿದೆ. ಆದರೆ ಕೆಲವು ಶಿಲ್ಪಗಳನ್ನು ಕಲ್ಲಿನಿಂದ ಜಜ್ಜಿ ವಿರೂಪಗೊಳಿಸಿರುವುದನ್ನು ನೋಡಿದಾಗ ವೇದನೆಯಾಗುತ್ತದೆ. ನುಗ್ಗೇಹಳ್ಳಿಯಲ್ಲಿ ಭೂ ವರಹನಾಥ ಸ್ವಾಮಿ, ಸದಾಶಿವ ದೇವಾಲಯಗಳೂ ಇದ್ದು, ನೋಡಲೇಬೇಕಾದ ಸ್ಥಳವಾಗಿದೆ.
ಹೋಗುವುದು ಹೇಗೆ: ನುಗ್ಗೆಹಳ್ಳಿಗೆ ಹೋಗಲು ಹೆಚ್ಚಿನ ಬಸ್ ಸೌಕರ್ಯ ಇಲ್ಲದ ಕಾರಣ, ಸ್ವಂತ ವಾಹನ ಬಳಕೆ ಉತ್ತಮ. ಚನ್ನರಾಯಪಟ್ಟಣದಿಂದ 18 ಹಾಗೂ ಬೆಂಗಳೂರಿನಿಂದ 139 ಕಿ.ಮೀ. ದೂರದಲ್ಲಿದೆ. ಬೆಂಗಳೂರು ಮಂಗಳೂರು ರಸ್ತೆಯಲ್ಲಿ ಹಿರೇಸಾವೆ ದಾಟಿದ ತರುವಾಯ ಸ್ವಲ್ಪ ದೂರ ಸಾಗಿ ಬಲಕ್ಕೆ ತಿರುಗಿದರೆ ನುಗ್ಗೆಹಳ್ಳಿಗೆ ಹೋಗಬಹುದು. ಹಿರೇಸಾವೆಯಿಂದ ನುಗ್ಗೆ ಹಳ್ಳಿಗೆ 16 ಕಿ.ಮೀ. ಮಾತ್ರ.

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು

ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು
ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು.
ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ|
ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:||
ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ.
ತುಳಸೀ ಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಹಚ್ಚಬೇಕು
ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇತ್ಯಾದಿಗಳನ್ನೂ ಮಾಡುವುದು ಅಗತ್ಯವಾಗಿದೆ. ಗೃಹಿಣಿಯರು ಸಂಜೆಯ ಹೊತ್ತು ಶುಚಿರ್ಭೂತರಾಗಿ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತುಳಸಿಕಟ್ಟೆಯಲ್ಲಿ ತುಳಸಿಯ ಕಡೆಗೆ ದೀಪ ಜ್ವಾಲೆಯು ಮುಖಮಾಡಿರುವಂತೆ ತುಪ್ಪದ ಯಾ ಎಳ್ಳೆಣ್ಣೆಯ ದೀಪವನ್ನು ಸಾತ್ವಿಕ ಊದುಬತ್ತಿಯನ್ನು ಉರಿಸಿಟ್ಟು ತುಳಸಿಗೆ ಪ್ರದಕ್ಷಿಣೆ ಗೈದು ನಮಸ್ಕರಿಸಬೇಕು. ತುಳಸಿಯ ಸ್ತೋತ್ರವನ್ನೂ ಹೇಳಬಹುದು. ಹೀಗೆ ಮಾಡುವುದರಿಂದ ಆ ದೀಪದ ಬೆಳಕಿನಲ್ಲಿ ತುಳಸಿಯು ಬ್ರಹ್ಮಾಂಡದಿಂದ ಶ್ರೀಕೃಷ್ಣನ ಮಾರಕ ತತ್ತ್ವವನ್ನು ಆಕರ್ಷಿಸಿ ತುಳಸಿಕಟ್ಟೆಯ ಹಾಗೂ ಮನೆಯ ಸುತ್ತಲೂ ಅದನ್ನು ಪ್ರಕ್ಷೇಪಿಸಿ ಕಣ್ಣಿಗೆ ಗೋಚರವಾಗದ ಸೂಕ್ಷ್ಮರೂಪದ ಸಂರಕ್ಷಣಾ ಕವಚವನ್ನು ನಿರ್ಮಿಸಿ ಅನಿಷ್ಟ ಶಕ್ತಿಗಳಿಂದ ಜೀವಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವುದು ದೀಪ ಜ್ಯೋತಿಯ ಸ್ತೋತ್ರವು ಈ ಕೆಳಗೆ ಕಂಡಂತಿರುವುದು
ಶುಭಂ ಕರೋತಿ ಕಲ್ಯಾಣಂ
ಆರೋಗ್ಯಂ ಧನಸಂಪನದಃ
ಶತ್ರುಬುದ್ಧಿ ವಿನಾಶಾಯ
ದೀಪಜ್ಯೋತಿರ್ನಮೋಸ್ತುತೆ|
ದೀಪಜ್ಯೋತಿಃ ಪರಬ್ರಹ್ಮಾ
ದೀಪಜ್ಯೋತಿರ್ಜನಾರ್ದನಃ
ದೀಪೋ ಹರತಿ ಪಾಪಾನಿ
ಸಂಧ್ಯಾದೀಪ ನಮೋಸ್ತುತೇ||

ಋಣಮೋಚನಸ್ತೋತ್ರ

ಋಣಮೋಚನಸ್ತೋತ್ರ
*ಭಕ್ತರ ಸಾಲದ ಬಾಧೆಯ ಪರಿಹಾರಕ್ಕೆ ರಾಮಬಾಣದಂತಿರುವ,  ಶ್ರೀವಾದಿರಾಜಗುರುಸಾರ್ವಭೌಮರು ಶ್ರೀನರಸಿಂಹಪುರಾಣದಿಂದ ತೆಗೆದು ಕಾರುಣ್ಯದಿಂದ ನಮಗೆ ನೀಡಿರುವ ದಿವ್ಯಸ್ತೋತ್ರ. ಇದರ ಅರ್ಥ ಮತ್ತು ಪಠಿಸುವ ಕ್ರಮವನ್ನು ವಿಸ್ತೃತವಾಗಿ ಉಪನ್ಯಾಸದಲ್ಲಿ ತಿಳಿಸಲಾಗಿದೆ.*
ಶ್ರೀವಾದಿರಾಜಯತಿಪ್ರೋಕ್ತಂ
ಶ್ರೀನೃಸಿಂಹಪುರಾಣಸ್ಥಂ
ಋಣಮೋಚನಸ್ತೋತ್ರಮ್ 
ದೇವತಾಕಾರ್ಯಸಿದ್ಧ್ಯರ್ಥಂ
ಸಭಾಸ್ತಂಭಸಮುದ್ಭವಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೧ II
ಲಕ್ಷ್ಮ್ಯಾಲಿಂಗಿತವಾಮಾಂಗಂ
ಭಕ್ತಾನಾಂ ವರದಾಯಕಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೨ II
ಆಂತ್ರಮಾಲಾಧರಂ ಶಂಖ-
ಚಕ್ರಾಬ್ಜಾಯುಧಧಾರಿಣಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೩ II
ಸ್ಮರಣಾತ್ ಸರ್ವಪಾಪಘ್ನಂ
ಕದ್ರೂಜವಿಷನಾಶನಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೪ II
ಸಿಂಹನಾದೇನ ಮಹತಾ
ದಿಗ್ದಂತಿಭಯನಾಶನಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೫ II
ಪ್ರಹ್ಲಾದವರದಂ ಶ್ರೀಶಂ
ದೈತ್ಯೇಶ್ವರವಿದಾರಣಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೬ II
ಕ್ರೂರಗ್ರಹೈಃ ಪೀಡಿತಾನಾಂ
ಭಕ್ತಾನಾಮಭಯಪ್ರದಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೭ II
ವೇದ-ವೇದಾಂತ-ಯಜ್ಞೇಶಂ
ಬ್ರಹ್ಮ-ರುದ್ರಾದಿವಂದಿತಮ್ I
ಶ್ರೀನೃಸಿಂಹಂ ಮಹಾವೀರಂ
ನಮಾಮಿ ಋಣಮುಕ್ತಯೇ II ೮ II
ಯ ಇದಂ ಪಠತೇ ನಿತ್ಯಂ
ಋಣಮೋಚನಸಂಜ್ಞಿತಮ್ I
ಅನೃಣೀ ಜಾಯತೇ ಸದ್ಯೋ
ಧನಂ ಶೀಘ್ರಮವಾಪ್ನುಯಾತ್ II ೯ II
ಇತಿ ಶ್ರೀವಾದಿರಾಜಯತಿಪ್ರೋಕ್ತಂ
ಶ್ರೀನೃಸಿಂಹಪುರಾಣಸ್ಥಂ
ಋಣಮೋಚನಸ್ತೋತ್ರಮ್.

ಸೋಮವಾರ, ಜೂನ್ 19, 2017

ಬೋಲ್ಡ್‌ಸ್ಕೈ » ಕನ್ನಡ » Inspiration » ಸಣ್ಣಕಥೆ ರಾಮಾಯಣದ ಬಳಿಕ ವಾನರ ಸೇನೆಯ ಕಥೆ ಏನಾಯಿತು?
Updated: Tue, May 24, 2016, 18:06 [IST]

ರಾಮಾಯಣ ಮಹಾಕಾವ್ಯದಲ್ಲಿ ಚಿತ್ರಿಸಿರುವ೦ತೆ ಹನುಮಾನ್, ವಾಲಿ, ಹಾಗೂ ಸುಗ್ರೀವರ ನೇತೃತ್ವದ ವಾನರ ಸೇನೆಯು ನಿರ್ವಹಿಸಿದ ಅಮೋಘ ಪಾತ್ರದ ಕುರಿತ೦ತೆ ಪ್ರತಿಯೊಬ್ಬರಿಗೂ ತಿಳಿದೇ ಇದೆ. ಆದರೆ ಆ ಬಳಿಕ ವಾನರ ಸೇನೆಗೆ ಏನಾಯಿತು ಎ೦ಬುದರ ಬಗ್ಗೆ ಹೆಚ್ಚಿನವರಿಗೆ ಬಹುಶ: ತಿಳಿದಿರಲಿಕ್ಕಿಲ್ಲ.. ಹೌದು, ರಾಮಾಯಣದಲ್ಲಿ ಜನರಿಗೆ ಗೊತ್ತೇ ಇಲ್ಲದ ಇನ್ನೂ ಅನೇಕ ಆಸಕ್ತಿದಾಯಕ ವಿಷಯಗಳಿದ್ದು ಇವುಗಳ೦ತೂ ನಿಜಕ್ಕೂ ಬಹಳ ವಿಸ್ಮಯಕರವಾಗಿವೆ..! ಬನ್ನಿ ಮುಂದೆ ವಾನರ ಸೇನೆಗೆ ಏನಾಯಿತು ಎಂಬುದನ್ನು ತಿಳಿಯೋಣ.... ನೀವು ತಿಳಿದಿರದ ರಾಮನ ಬಗೆಗಿನ ಆಘಾತಕಾರಿ ಸತ್ಯಗಳು! ರಾಮಾಯಣದ ಒ೦ದು ಭಾಗದ ಪ್ರಕಾರ ರಾಮಾಯಣ ಮಹಾಕಾವ್ಯದ ಉತ್ತರಕಾ೦ಡದ ಒ೦ದು ಭಾಗದಲ್ಲಿ, ರಾಮಾಯಣದ ನ೦ತರದ ಕಾಲಘಟ್ಟದಲ್ಲಿ ವಾನರ ಸೇನೆಯ ವಿವಿಧ ವಾನರರ ಕಥೆ ಏನಾಯಿತೆ೦ಬುದನ್ನು ವಿವರಿಸಲಾಗಿದೆ.
ಭೂಮಿಯ ಮೇಲಿನ ರಾಮಾವತಾರದ ಅವಧಿಯು ಸಮಾಪ್ತಿಗೊಳ್ಳಲು ಕಾಲವು ಸನ್ನಿಹಿತವಾಗಿದೆಯೆ೦ದು ಯಮಧರ್ಮನು ಶ್ರೀ ರಾಮಚ೦ದ್ರನಲ್ಲಿ ಪ್ರಸ್ತಾಪಿಸಿದಾಗ, ಶ್ರೀ ರಾಮನು ಸರಯೂ ನದಿಯನ್ನು ಪ್ರವೇಶಿಸುವುದರ ಮೂಲಕ ಭೂಮಿಯಿ೦ದ ಬೇರಾಗಲು ತಯಾರಿಗೊಳ್ಳುವನು.  ಅ೦ಗದನ ನೇತೃತ್ವ ಸುಗ್ರೀವನು ರಾಮಾವತಾರದ ಸಮಾಪ್ತಿಯ ಕುರಿತ೦ತೆ ಅರಿತುಕೊ೦ಡಾಗ, ವಾನರ ಸಾಮ್ರಾಜ್ಯವಾದ ಕಿಷ್ಕಿ೦ದೆಯ ಆಧಿಪತ್ಯವನ್ನು ವಾಲಿಯ ಮಗನಾದ ಅ೦ಗದನಿಗೆ ವಹಿಸಿ, ಆ ಬಳಿಕ ಸುಗ್ರೀವ ಹಾಗೂ ಆತನ ಅನುಯಾಯಿಗಳಾಗಿದ್ದ ವಾನರ ಪಡೆಯ ಗು೦ಪೊ೦ದು ಸೇರಿದ೦ತೆ ರಾಮನೊ೦ದಿಗೆ ಜೊತೆಗೂಡಿ ಭೂಮಿಯ ಋಣವನ್ನು ಕಡಿದುಕೊಳ್ಳುವುದಕ್ಕಾಗಿ ಅಯೋಧ್ಯೆಯತ್ತ ತೆರಳುತ್ತಾರೆ.
ವಾನರರು ಇದಾದ ಬಳಿಕ ಕರಡಿಗಳು (ಜಾ೦ಬವ) ಹಾಗೂ ರಾಕ್ಷಸರೊ೦ದಿಗೆ ಒಡಗೂಡಿದ ವಾನರರು ಸಭೆ ಸೇರಲಾರ೦ಭಿಸುತ್ತಾರೆ. ಭೂಮಿಯನ್ನು ತೊರೆದು ವೈಕು೦ಠಲೋಕಕ್ಕೆ ನಿರ್ಗಮಿಸುವ ಶ್ರೀ ರಾಮಚ೦ದ್ರನ ನಿರ್ಧಾರವನ್ನು ತಿಳಿದುಕೊ೦ಡ ವಾನರರು, ಋಷಿಗಳು ಹಾಗೂ ಗ೦ಧರ್ವರೊಡನೆ ಶ್ರೀ ರಾಮಚ೦ದ್ರನನ್ನು ಕಾಣಲು ಬ೦ದರು.  ಇವೆರಲ್ಲರೂ ಶ್ರೀ ರಾಮಚ೦ದ್ರನಿಗೆ ಏನು ಹೇಳಿದರು? ಇವರೆಲ್ಲರೂ ಶ್ರೀ ರಾಮನ ಕುರಿತ೦ತೆ ಹೀಗೆ ಹೇಳುವರು, 'ಎಲೈ ಶ್ರೀ ರಾಮನೇ, ಪುರುಷೋತ್ತಮನೇ (ಸಮಸ್ತ ಮಾನವ ವರ್ಗಕ್ಕೆ ಆದರ್ಶಪ್ರಾಯದವನು), ನೀನು ನಮ್ಮೆಲ್ಲರನ್ನೂ ತೊರೆದು ವೈಕು೦ಠಲೋಕಕ್ಕೆ ತೆರಳಿದರೆ, ಅದು ನಮ್ಮೆಲ್ಲರ ಮೇಲೆ ಬ೦ದೆರಗಿದ ಯಮಪಾಶಕ್ಕೆ ಸಮ' ಎ೦ದು ತಮ್ಮ ಮನದ ಅಳಲನ್ನು ತೋಡಿಕೊಳ್ಳುವರು. ವಾನರರಲ್ಲಿಯೇ ಅತೀ ಬಲಶಾಲಿಯಾದ ಸುಗ್ರೀವನೂ ಕೂಡಾ ಶ್ರೀ ರಾಮಚ೦ದ್ರನಿಗೆ ವ೦ದಿಸುತ್ತಾ ಹೀಗೆ ಹೇಳುವನು, 'ಎಲೈ ಪುರುಷಶ್ರೇಷ್ಟನೇ, ನಾನು ಅ೦ಗಧನನ್ನು ಕಿಷ್ಕಿ೦ದಾಧಿಪತಿಯಾಗಿ ನೇಮಿಸಿ ಈಗ ನಿನ್ನಲ್ಲಿಗೆ ಬ೦ದಿರುವೆನು. ಎಲೈ ದೊರೆಯೇ, ನಾನೂ ಕೂಡಾ ನಿನ್ನನ್ನೇ ಅನುಸರಿಸಲು ಬ೦ದಿರುವೆನು' ಎ೦ದು ಅಲವತ್ತುಕೊಳ್ಳುತ್ತಾನೆ. ಶ್ರೀ ರಾಮಚ೦ದ್ರನು ಒಪ್ಪಿಕೊಳ್ಳುವನು ವಾನರಶ್ರೇಷ್ಟರ ಮಾತುಗಳೆಲ್ಲವನ್ನೂ ಆಲಿಸಿದ ಬಳಿಕ, ಶ್ರೀ ರಾಮಚ೦ದ್ರನು ಅವರ ಕೋರಿಕೆಗಳನ್ನು ನೆರವೇರಿಸಲು ಒಪ್ಪಿಕೊಳ್ಳುತ್ತಾನೆ.
ಶ್ರೀ ರಾಮನು ತನ್ನ ಪರಮಾಪ್ತನಾದ ಹನುಮ೦ತನಲ್ಲಿ ಹೀಗೆ ಹೇಳುತ್ತಾನೆ, 'ಹನುಮನೇ, ನೀನು ಚಿರ೦ಜೀವಿಯು. ಜಗತ್ತಿನಲ್ಲಿ ಎ೦ದಿನವರೆಗೆ ನನ್ನ ಇತಿಹಾಸದ ಮನನ, ಶ್ರವಣಗಳು ನಡೆಯಲ್ಪಡುವವೋ, ಅಲ್ಲಿಯವರೆಗೂ ನೀನೂ ಕೂಡಾ ಸ್ತುತಿಸಲ್ಪಡುವೆ. ವಾನರನು ಪ್ರಮುಖವಾಗಿ ಕಾಣಿಸಿಕೊಳ್ಳುವ ಪ್ರಕರಣಗಳು ಈ ಘಟನೆಯ ಬಳಿಕ ವಾನರನ ಪುನರಾಗಮನದ ಸ೦ದರ್ಭವು ಯಾವುದೆ೦ದರೆ ಯುಗವೊ೦ದರ ಬಳಿಕ ಭಗವಾನ್ ಶ್ರೀ ಹನುಮ೦ತ ಹಾಗೂ ಪಾ೦ಡವರ ಭೇಟಿ. ಮಹಾಭಾರತದ ವಾನರಪರ್ವದಲ್ಲಿ, ಭಗವಾನ್ ಹನುಮನು ಭೀಮಸೇನನ ಮಾರ್ಗವನ್ನು ಹಿಮಾಲಯದ ತಪ್ಪಲಲ್ಲಿರುವ ಗ೦ಧಮಾದನ ಪರ್ವತದ ಬಳಿ ತಡೆಹಿಡಿದಿರುವ ಕುರಿತು ವಿವರಿಸಲಾಗಿದೆ. ಹನುಮ೦ತ ಹಾಗೂ ಭೀಮಸೇನರಿಬ್ಬರೂ ವಾಯುದೇವನ ಪುತ್ರರೂ, ಸಹೋದರರೂ ಆಗಿರುವರು. ಕೃಷ್ಣ ಹಾಗೂ ಜಾ೦ಬವ೦ತ ಮತ್ತೊ೦ದು ಪ್ರಕರಣದಲ್ಲಿ, ಭಗವಾನ್ ಶ್ರೀ ಕೃಷ್ಣನು ಶ್ಯಮ೦ತಕ ಮಣಿಯನ್ನು ಕದ್ದಿರುವನೆ೦ಬ ಸುಳ್ಳು ಆಪಾದನೆಗೆ ಗುರಿಯಾಗುವುದನ್ನು ಹಾಗೂ ತನ್ನ ಕುರಿತ೦ತೆ ಕೇಳಿ ಬ೦ದ ಸುಳ್ಳು ಅಪವಾದವನ್ನು ತೊಡೆದು ಹಾಕುವುದರ ಮೂಲಕ ತಾನು ನಿರ್ದೋಷಿಯೆ೦ದು ನಿರೂಪಿಸಲು ಶ್ರೀ ಕೃಷ್ಣನು ಕೈಗೊ೦ಡ ಅನ್ವೇಷಣೆಯ ಕುರಿತ೦ತೆ ಶ್ರೀ ಮದ್ಭಾಗವತವು ವಿವರಿಸುತ್ತದೆ. ವಾಸ್ತವವಾಗಿ ಶ್ಯಮ೦ತಕ ಮಣಿಯ ಜಾ೦ಬವ೦ತನ ಕೈಗಳಲ್ಲಿಯೇ ಬಿದ್ದಿತ್ತು. ಜಾ೦ಬವ೦ತನು ಪರ್ವತದ ಗುಹೆಯೊ೦ದರ ನಿವಾಸಿಯಾಗಿದ್ದು, ತನ್ನ ಪುತ್ರನಿಗೆ ಶ್ಯಮ೦ತಕ ಮಣಿಯನ್ನು ಆಟವಾಡಲೆ೦ದು ನೀಡಿರುತ್ತಾನೆ. ಕೃಷ್ಣ, ಜಾ೦ಬವ೦ತರ ನಡುವಿನ ಕಾಳಗ ಕೃಷ್ಣನು ಶ್ಯಮ೦ತಕ ಮಣಿಯನ್ನು ಪಡೆದುಕೊಳ್ಳುವುದಕ್ಕೋಸ್ಕರವಾಗಿ ಜಾ೦ಬವ೦ತನೊಡನೆ ಕಾದಾಡಬೇಕಾಗುತ್ತದೆ. ಶ್ರೀ ಕೃಷ್ಣನು ತ್ರೇತಾಯುಗದ ಭಗವಾನ್ ಶ್ರೀ ರಾಮಚ೦ದ್ರನ ಅವತಾರಿಯೆ೦ದೇ ಮನಗ೦ಡ ಬಳಿಕ ಜಾ೦ಬವ೦ತನ ಆನ೦ದಕ್ಕೆ ಪಾರವೇ ಇಲ್ಲದ೦ತಾಗುತ್ತದೆ. ಏಕೆ೦ದರೆ, ಜಾ೦ಬವ೦ತನೆ೦ಬ ಕರಡಿಯು ತ್ರೇತಾಯುಗದಲ್ಲಿ ಶ್ರೀ ರಾಮಚ೦ದ್ರನ ಪ್ರತಿ ಅತ್ಯ೦ತ ಸ್ವಾಮಿನಿಷ್ಟೆಯುಳ್ಳವನಾಗಿದ್ದ ಸೇವಕನಾಗಿರುತ್ತಾನೆ.ಶ್ರೀ ಕೃಷ್ಣನೇ ಶ್ರೀ ರಾಮನೆ೦ದರಿತ ಬಳಿಕ ಜಾ೦ಬವನು ಮನ:ಪೂರ್ವಕವಾಗಿ ಶ್ರೀ ಕೃಷ್ಣನಿಗೆ ಶ್ಯಮ೦ತಕ ಮಣಿಯನ್ನು ಒಪ್ಪಿಸುತ್ತಾನೆ ಹಾಗೂ ಜೊತೆಗೆ ತನ್ನ ಮಗಳನ್ನೂ ಕೂಡಾ ಶ್ರೀ ಕೃಷ್ಣನಿಗೆ ಧಾರೆಯೆರೆದು ಕೊಡುತ್ತಾನೆ.ಹೀಗೆ ಜಾ೦ಬವ೦ತನ ಪುತ್ರಿಯಾದ ಜಾ೦ಬವತಿಯೂ ಕೂಡಾ ಶ್ರೀ ಕೃಷ್ಣನ ರಾಣಿಯರಲ್ಲಿ ಓರ್ವಳೆ೦ದೆನಿಸಿಕೊಳ್ಳುತ್ತಾಳೆ. ಪಾ೦ಡವರು ಹಾಗೂ ಇತರ ವಾನರರು ಯುಧಿಷ್ಟಿರನು ರಾಜಸೂಯಯಾಗವನ್ನು ಕೈಗೊ೦ಡ ರೀತಿಯ ಬಗ್ಗೆ ಮಹಾಭಾರತದ ಸಭಾಪರ್ವವು ವಿವರಿಸುತ್ತದೆ. ರಾಜಸೂಯಯಾಗದ ಸ೦ದರ್ಭದಲ್ಲಿ ಯುಧಿಷ್ಟಿರನು ತನ್ನ ನಾಲ್ಕು ಸಹೋದರರನ್ನು ನಾಲ್ಕು ದಿಕ್ಕುಗಳಿಗೆ ಕಳುಹಿಸಿಕೊಡುತ್ತಾನೆ. ಆ ಸಹೋದರರು ಸಾಗುವ ದಿಕ್ಕಿನಲ್ಲಿ ಅವರು ಯಾವ ರಾಜರನ್ನು ಎದುರುಗೊಳ್ಳುವರೋ ಆ ರಾಜರುಗಳು ಒ೦ದೋ ಶರಣಾಗತರಾಗಿ ಯುಧಿಷ್ಟಿರನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಬೇಕು ಇಲ್ಲವಾದಲ್ಲಿ ಯುದ್ಧಕ್ಕೆ ಸಿದ್ಧರಾಗಬೇಕು, ಹೀಗಿತ್ತು ರಾಜಸೂಯಯಾಗದ ನಿಯಮವು. ದಕ್ಷಿಣ ದಿಕ್ಕಿನಲ್ಲಿ ಸಾಗಿದ ಸಹದೇವನು, ವಾನರ ಸಾಮ್ರಾಜ್ಯವಾದ ಕಿಷ್ಕಿ೦ದಾನಗರಿಯನ್ನು ಆ ಅವಧಿಯಲ್ಲಿ ಆಳುತ್ತಿದ್ದ ಮೈ೦ದ ಹಾಗೂ ದ್ವಿವಿದರೆ೦ಬ ಇಬ್ಬರು ವಾನರರನ್ನು ಒ೦ದು ವಾರದವರೆಗೆ ನಡೆದ ಕಾಳಗದಲ್ಲಿ ಸೋಲಿಸಿ ಕಿಷ್ಕಿ೦ದೆಯನ್ನು ವಶಪಡಿಸಿಕೊಳ್ಳುತ್ತಾನೆ. ಕಿಷ್ಕಿ೦ದಾನಗರಿಯ ಗುಹೆಗಳು ಉದ್ದನೆಯ ತೋಳುಗಳುಳ್ಳ ಮಹಾವೀರನಾದ ಸಹದೇವನು ದಕ್ಷಿಣ ದಿಕ್ಕಿನಲ್ಲಿ ಸಾಗುತ್ತಿರಲು, ಕಿಷ್ಕಿ೦ದಾನಗರಿಯ ಪ್ರಖ್ಯಾತ ಗುಹೆಗಳಿರುವ ಸ್ಥಳವನ್ನು ತಲುಪುತ್ತಾನೆ.ಅಲ್ಲಿ ಸಹದೇವನು ವಾನರಾಧಿಪತಿಗಳಾದ ಮೈ೦ದ ಹಾಗೂ ದ್ವಿವಿದರೊಡನೆ ಒ೦ದು ವಾರದ ಕಾಲ ಕಾದಾಡಬೇಕಾಗುತ್ತದೆ. ಆ ಪ್ರಖ್ಯಾತರಾಗಿದ್ದ ವಾನರಾಧಿಪತಿಗಳು ಕಾದಾಟದಿ೦ದ ಹಿಮ್ಮೆಟ್ಟದೇ, ಸಹದೇವನ ಪರಾಕ್ರಮದತ್ತ ಆಕರ್ಷಿತರಾಗಿ ಆತನತ್ತ ಸ್ನೇಹಹಸ್ತವನ್ನು ಚಾಚುತ್ತಾರೆ. ಆ ವಾನರವೀರರು ಕುರುಕುಲದ ರಾಜಕುಮಾರನಾದ ಸಹದೇವನನ್ನು ಕುರಿತು ಹೀಗೆ ಹೇಳುವರು,'ವ್ಯಾಘ್ರರೂಪೀ ಪಾ೦ಡವ ಸಹೋದರನೇ, ನಮ್ಮೆಲ್ಲರ ಗೌರವಾದರಗಳನ್ನೂ, ಕಾಣಿಕೆಗಳನ್ನೂ ಸ್ವೀಕರಿಸಿ ಕ್ಷೇಮವಾಗಿ ಹಿ೦ದಿರುಗು. ಯುಧಿಷ್ಟಿರನು ಕೈಗೊ೦ಡಿರುವ ರಾಜಸೂಯ ಯಾಗವು ನಿರ್ವಿಘ್ನವಾಗಿ ನೆರವೇರಲಿ' ಎ೦ದು ಹಾರೈಸುತ್ತಾರೆ. Image courtesy ದ್ವಿವಿದನ ಕುರಿತ ಕಥೆ ದ್ವಿವಿದನೆ೦ಬ ವಾನರನು ನರಕಾಸುರನ ಮಿತ್ರನಾಗಿದ್ದನು. ಮೈ೦ದನ ಸಹೋದರನೂ, ಮಹಾಪರಾಕ್ರಮಶಾಲಿಯೂ ಆಗಿದ್ದ ದ್ವಿವಿದನು, ತನ್ನ ಮಿತ್ರನಾದ ನರಕನ ಮರಣದ ಪ್ರತೀಕಾರವನ್ನು ಪಡೆದುಕೊಳ್ಳುವ೦ತೆ ರಾಜಾ ಸುಗ್ರೀವನಿ೦ದ ಆದೇಶಿಸಲ್ಪಟ್ಟವನಾಗಿರುತ್ತಾನೆ. ಸುಗ್ರೀವನ ಆಜ್ಞೆಯನ್ನು ಶಿರಸಾವಹಿಸಿದ ದ್ವಿವಿದನು ತನ್ನ ಮಿತ್ರನ ಸಾವಿಗೆ ಕಾರಣನಾದವನ ಸಮಸ್ತ ಸಾಮ್ರಾಜ್ಯವನ್ನು ನಾಶಪಡಿಸುತ್ತಾನೆ. ನಗರಗಳು, ಗ್ರಾಮಗಳು, ಗಣಿಗಳು, ಹಾಗೂ ಗೋಪಾಲಕರ ನಿವಾಸಗಳೆಲ್ಲವುಗಳಿಗೆ ಬೆ೦ಕಿಯನ್ನು ಹಚ್ಚುವುದರ ಮೂಲಕ ಅವೆಲ್ಲವನ್ನೂ ನಾಶಪಡಿಸುತ್ತಾನೆ. ಮಹಾವಿನಾಶ ಮಹಾಪರಾಕ್ರಮಶಾಲಿಯಾಗಿದ್ದ ದ್ವಿವಿದನು ಹಲವಾರು ಪರ್ವತಗಳನ್ನು ಬೇರುಸಮೇತ ಕಿತ್ತು ಅವುಗಳನ್ನು ಅನರ್ಟ ಪ್ರದೇಶದ ಸುತ್ತಮುತ್ತಲಿನ ಸಾಮ್ರಾಜ್ಯಗಳೆಲ್ಲವನ್ನೂ ನಾಶಪಡಿಸಲು ವಿಶೇಷವಾಗಿ ಬಳಸಿಕೊಳ್ಳುತ್ತಾನೆ. ಏಕೆ೦ದರೆ, ಅನರ್ಟ ಪ್ರದೇಶದಲ್ಲಿಯೇ ಆತನ ಸ್ನೇಹಿತನನ್ನು ಕೊ೦ದ ವ್ಯಕ್ತಿಯು ವಾಸವಾಗಿರುತ್ತಾನೆ. ಬಳಿಕ ದ್ವಿವಿದನು ತನ್ನ ಹತ್ತುಸಾವಿರ ಆನೆಗಳ ಬಲಕ್ಕೆ ಸರಿಸಮಾನವಾದ ಸಾಮರ್ಥ್ಯದೊ೦ದಿಗೆ ಸಮುದ್ರವನ್ನು ಪ್ರವೇಶಿಸಿ, ತನ್ನ ತೋಳುಗಳಿ೦ದ ಸಮುದ್ರದ ನೀರನ್ನು ಅಲ್ಲೋಲಕಲ್ಲೋಲಗೊಳಿಸುವುದರ ಮೂಲಕ, ಸಾಗರತೀರ ಪ್ರದೇಶದಲ್ಲಿದ್ದ ಎಲ್ಲಾ ಭೂಭಾಗವನ್ನೂ ಜಲಸಮಾಧಿಗೊಳಿಸುತ್ತಾನೆ. ಋಷಿಮುನಿಗಳು ಸ೦ಕಷ್ಟಕ್ಕೀಡಾಗುವರು ದುರ್ಬುದ್ಧಿಯುಳ್ಳ ದ್ವಿವಿದನು ಆಶ್ರಮದ ಸುತ್ತಮುತ್ತಲಿನ ಮರಗಳೆಲ್ಲವನ್ನೂ ಬೇರುಸಹಿತ ಕಿತ್ತು ಅವುಗಳನ್ನು ಯಜ್ಞಕು೦ಡಗಳಲ್ಲಿ ಹಾಕುವುದರ ಮೂಲಕ ಪವಿತ್ರ ಯಜ್ಞಕು೦ಡಗಳನ್ನು ಹಾಳುಗೆಡವುತ್ತಾನೆ. ಕಣಜಹುಳುವು ತನ್ನ ಆಹಾರವಾದ ಇತರ ಸಣ್ಣ ಕ್ರಿಮಿಕೀಟಗಳನ್ನು ತನ್ನ ಗೂಡಿನಲ್ಲಿ ಆಹಾರಕ್ಕಾಗಿ ಬ೦ಧಿಸಿಡುವ ರೀತಿಯಲ್ಲಿಯೇ ದ್ವಿವಿದನು ಮಹಾದರ್ಪವುಳ್ಳವನಾಗಿ, ಪರ್ವತಕಣಿವೆಯಲ್ಲಿದ್ದ ಗುಹೆಗಳತ್ತ ಸ್ತ್ರೀ ಹಾಗೂ ಪುರುಷರನ್ನು ಎಸೆದು ಆ ಗುಹೆಗಳ ದ್ವಾರಗಳನ್ನು ಬೃಹತ್ ಬ೦ಡೆಗಳಿ೦ದ ಮುಚ್ಚಿಬಿಡುತ್ತಾನೆ. ಕೃಷ್ಣನ ಸಹೋದರ ಬಲರಾಮ ಕಟ್ಟಕಡೆಗೆ, ದ್ವಿವಿದನು ಶ್ರೀ ಕೃಷ್ಣನ ಸಹೋದರನಾದ ಬಲರಾಮನೊ೦ದಿಗಿದ್ದ ಯುವಸ್ತ್ರೀಯರ ಗು೦ಪನ್ನು ತೊ೦ದರೆ ಪಡಿಸಲಾರ೦ಭಿಸುತ್ತಾನೆ. ಹೀಗಾಗಿ, ಬಲರಾಮನು ದ್ವಿವಿದನೊ೦ದಿಗೆ ಐತಿಹಾಸಿಕ ಯುದ್ಧದಲ್ಲಿ ತೊಡಗಿಸಿಕೊಳ್ಳುತ್ತಾನೆ. ಭಗವಾನ್ ಬಲರಾಮನು ತನ್ನ ನೇಗಿಲನ್ನು ಬಳಸಿಕೊ೦ಡು ದ್ವಿವಿದನನ್ನು ಸ೦ಹರಿಸಲು ನಿರ್ಧರಿಸುತ್ತಾನೆ. ಆದರೆ, ಅದಕ್ಕಿ೦ತಲೂ ಮು೦ಚೆಯೇ ಮಹಾಶಕ್ತಿಶಾಲಿಯಾಗಿದ್ದ ದ್ವಿವಿದನು ತನ್ನ ಮುಷ್ಟಿಗಳನ್ನು ಬಿಗಿಗೊಳಿಸಿ ಬಲರಾಮನ ಶರೀರಕ್ಕೆ ತಾಗುವ೦ತೆ ಆತನ ನೇಗಿಲನ್ನು ಬಲವಾಗಿ ಗುದ್ದುತ್ತಾನೆ. ಇದರಿ೦ದ ತೀವ್ರವಾಗಿ ಕೆರಳಿದ ಬಲರಾಮನು ತನ್ನ ನೇಗಿಲನ್ನು ದೂರ ಬಿಸುಟು ಬರಿಗೈಯಿ೦ದಲೇ ದ್ವಿವಿದನ ಭುಜದ ಬಳಿಯ ಮೂಳೆಗೆ ಬಲವಾಗಿ ಹೊಡೆಯುತ್ತಾನೆ. ಆಗ ದ್ವಿವಿದನು ರಕ್ತಕಾರುತ್ತಾ ಸತ್ತು ಬೀಳುತ್ತಾನೆ. ತ್ರೇತಾಯುಗದಿ೦ದ ದ್ವಾಪರಯುಗದವರೆಗೆ ಮೇಲಿನ ಎಲ್ಲಾ ಘಟನೆಗಳು ತ್ರೇತಾಯುಗದಿ೦ದ ದ್ವಾಪರಯುಗದವರೆಗೆ ವಾನರರ ಅಸ್ತಿತ್ವದ ಕುರಿತ೦ತೆ ನಮಗೆ ಸಾಕ್ಷ್ಯವನ್ನು ಒದಗಿಸುತ್ತವೆ. ಈ ವಾನರರು ಕಲಿಯುಗದಲ್ಲಿಯೂ ಇರುವರೇನು....?! ಬಹುಶ: ಕಾಲವೇ ಈ ಪ್ರಶ್ನೆಗೆ ಉತ್ತರಿಸಬೇಕು.
Let’s find out! LIFESTYLE BEGINS HERE JOIN US SUBSCRIBE TO OUR DAILY NEWSLETTER GET ALERTS ON HEALTH, BEAUTY & MORE GET PUSH NOTIFICATION About • Terms of Service • Privacy Policy • Contact • Advertise • Jobs • Apps Visit Other Greynium Sites © 2017 Greynium Information Technologies Pvt. Ltd. Next Article

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ - ಉಗ್ರ ಮುಸ್ಲಿಂ ಸಂಘಟನೆಯ ಅಸಲೀ ಕಥೆ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ - ಉಗ್ರ ಮುಸ್ಲಿಂ ಸಂಘಟನೆಯ ಅಸಲೀ ಕಥೆ- ಭಾಗ ಒಂದು.

"ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ" ಎಂಬ ಕೇರಳದಲ್ಲಿ ಹುಟ್ಟಿ ಕರ್ನಾಟಕ ತಮಿಳುನಾಡಲ್ಲಿ ಬೆಳೆದು ಈಗ ದೇಶವಿಡೀ ವಿಷದಂತೆ ವ್ಯಾಪಿಸುತ್ತಿರುವ ಇಸ್ಲಾಮಿಕ್ ಉಗ್ರ ಸಂಘಟನೆಯ ಸಂಪೂರ್ಣ ವಿವರಗಳುಳ್ಳ ಚಿತ್ರಣವಿದು.

ಕರ್ನಾಟಕದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ವೋಟಿನಾಸೆಗಾಗಿ ಮುದ್ದಿನ ಗಿಣಿಯಂತೆ ಸಾಕಿ ಬೆಳೆಸುತ್ತಿರುವ ಪಿ.ಎಫ್.ಐ. ಈಗ ಸಾಕಿದವರನ್ನೇ ರಣಹದ್ದಾಗಿ ಕಚ್ಚ ತೊಡಗಿದೆ. ಮೊನ್ನೆ ಮಂಗಳೂರಿನಲ್ಲಿ ಪೊಲೀಸ್ ಮುಖ್ಯಸ್ಥರಿಗೇ ಮುತ್ತಿಗೆ ಹಾಕಿ ಪೋಲೀಸರ ಮೇಲೆಯೇ ದಾಳಿ ನಡೆಸಿ ಕಾಂಗ್ರೆಸ್ ಮಂತ್ರಿ ರಮಾನಾಥ ರೈಯವರ ಮೇಲೆಯೇ ತಿರುಗಿ ಬಿದ್ದಿದೆ. ಅದಕ್ಕೆ ಸರಿಯಾಗಿ ಅಲ್ಲಿನ ಮುಸ್ಲಿಂ ಕಾಂಗ್ರೆಸ್ ಲೀಡರುಗಳೂ ಪಿ.ಎಫ್.ಐ.ಬೆನ್ನಿಗೆ ನಿಂತುಬಿಟ್ಟಿದ್ದಾರೆ. ಆದರೂ ಪಾಠ ಕಲಿಯದ ಸಿದ್ದರಾಮಯ್ಯ ಮತ್ತೆ ಪಿ.ಎಫ್.ಐ. ನಾಯಕರನ್ನು ಪಕ್ಕದಲ್ಲೇ ಕೂರಿಸಿಕೊಂಡು ಮುದ್ದು ಮಾಡಿಕಳಿಸಿದ್ದಾರೆ. ತನ್ನ ಸರಕಾರದ ಪೊಲೀಸ್ ಗುಪ್ತಚರ ವರದಿಯನ್ನೇ ನಂಬದ, ತನ್ನ ಸರಕಾರದ ಗೃಹ ಇಲಾಖೆಯ ಅಧಿಕಾರಿಗಳ ಮಾತಿಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬೆಲೆ ಕೊಡದೆ ಸಿದ್ದರಾಮಯ್ಯ ೨೦೧೫ರ್ ಜೂನ್ ತಿಂಗಳಲ್ಲಿ ಪಿ.ಎಫ್.ಐ.ನ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಹೂಡಲಾಗಿದ್ದ ನೂರಾ ಎಪ್ಪತ್ತೈದಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸಿದ್ದರು. ಹಾಸನ ಶಿವಮೊಗ್ಗ, ಮೈಸೂರು, ಮಂಗಳೂರು ಮಾತ್ರವಲ್ಲದೆ ರಾಜ್ಯದಾದ್ಯಂತ ಪಿ.ಎಫ್.ಐ.ಕಾರ್ಯಕರ್ತರ ಮೇಲೆ ದಾಖಲಿಸಿದ ಎಲ್ಲಾ ಕೇಸುಗಳನ್ನು ಕಾಂಗ್ರೆಸ್ ಸರಕಾರದ ಕಾನೂನು ಮಂತ್ರಿ ಟಿ.ಬಿ.ಜಯಚಂದ್ರ ರದ್ದು ಮಾಡಿದಾಗ ಹಲವು ಪೊಲೀಸ್ ಅಧಿಕಾರಿಗಳೇ ಅಸಾಮಾಧಾನಗೊಂಡಿದ್ದರು.

ಮೈಸೂರಿನಲ್ಲಿ, ಶಿವಮೊಗ್ಗದಲ್ಲಿ ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಪಿ.ಎಫ್.ಐ. ಕಾರ್ಯಕರ್ತರ ಮೇಲಿನ ಕೇಸುಗಳು ರದ್ದಾದಾಗ ಹಲ್ಲೆಗೊಳಗಾದ ಪೊಲೀಸರ ಮನಸ್ಥಿತಿ ಹೇಗಾಗಿರಬೇಡ...? ಆದರೆ ನಿರ್ಲಜ್ಜ ಕಾಂಗ್ರೆಸ್ ಸರಕಾರ ಆ ಮಟ್ಟಿಗೆ ಹೇಸಿಗೆಯ ಓಲೈಕೆ ರಾಜಕಾರಣ ಮಾಡಿತು. ಆದರೆ ಈಗ ಮಂಗಳೂರಿನಲ್ಲಿ ಪಿ.ಎಫ್.ಐ.ಮತ್ತೊಮ್ಮೆ ಪೊಲೀಸರ ಮೇಲೆಯೇ ದಾಳಿ ಮಾಡಿದೆ. ಉರ್ವಾ ಪೊಲೀಸ್ ಎ.ಎಸ್ ಐ ಐತಪ್ಪ ಅನ್ನುವವರ ಮೇಲೆ ಬೆಳಗಿನ ಜಾವ ಮೂರೂವರೆ ವೇಳೆಗೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ ಕಾಟಿಪಳ್ಳದ ಶಮೀರ್ ಮತ್ತು ಮೊಹಮ್ಮದ ನಿಯಾಜ್ ರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರ ಮೇಲೂ ರೇಪ್ ಸಹಿತ ಹಲವಾರು ಕೇಸುಗಳಿವೆ. ಹೀಗೆ ಪೊಲೀಸರ ಮೇಲೆಯೇ ಪಿ.ಎಫ್.ಐ ಕಾರ್ಯಕರ್ತರು ಹಲ್ಲೆ ನಡೆಸುವುದು ಹೊಸದೇನಲ್ಲ... ಹಿಂದೆಯೂ ಮಂಗಳೂರಿನಲ್ಲಿ ಮೈಸೂರು, ಶಿವಮೊಗ್ಗ ಮುಂತಾದ ಕಡೆಗಳಲ್ಲೂ ಪಿ.ಎಫ್.ಐ. ಕಾರ್ಯಕರ್ತರು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆದರೂ ಸಿದ್ದರಾಮಯ್ಯ ಪಿ.ಎಫ್.ಐ. ಕಾರ್ಯಕರ್ತರ ಮೇಲಿನ ಕ್ರಿಮಿನಲ್ ಕೇಸುಗಳನ್ನು ತಮ್ಮ ಸಂಪುಟದ ಮೂಲಕವೇ ವಜಾ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಮೊನ್ನೆ ಮಂಗಳೂರಿನ ಘಟನೆಯ ನಂತರವೂ ತಮ್ಮಲ್ಲಿಗೆ ಬಂದ ಪಿ.ಎಫ್.ಐ. ನಿಯೋಗವೊಂದನ್ನು ತಮ್ಮ ಮನೆಯಲ್ಲೇ ಭೇಟಿಮಾಡಿದ ಸಿದ್ದರಾಮಯ್ಯ ಅವರಿಗೆ ಅಭಯ ನೀಡಿ ಕಳಿಸಿದ್ದಾರೆ.!

ಆದರೆ ಪಿ.ಎಫ್.ಐ. ಎಂಬ ಈ ಸಂಘಟನೆ ಯಾವಾಗ? ಹೇಗೆ? ಯಾಕಾಗಿ ಹುಟ್ಟಿಕೊಂಡಿತು ಎಂಬ ಬಗ್ಗೆ ನಮ್ಮ ಪೊಲೀಸರಲ್ಲಿ ಮಾಹಿತಿ ಇಲ್ಲವೇ? ಕೇವಲ ಹತ್ತೇ ವರ್ಷಗಳಲ್ಲಿ ಈ ಸಂಘಟನೆ ಇಷ್ಟೊಂದು ವ್ಯಾಪಕವಾಗಿ, ಪ್ರಬಲವಾಗಿ ಬೆಳೆದದ್ದು ಹೇಗೆ? ಇದರ ಹಿಂದೆ ಯಾರಿದ್ದಾರೆ?... ಈ ಸಂಘಟನೆಯ ಹಿನ್ನೆಲೆಯೇನು? ಅವರಿಗಿರುವ ಸಂಪರ್ಕಗಳೇನು? ಈ ಎಲ್ಲಾ ವಿವರಗಳೂ ನಮ್ಮ ಪೊಲೀಸ್ ಇಲಾಖೆಗೆ, ನಮ್ಮ ಗುಪ್ತಚರ ಇಲಾಖೆಗೆ ಗೊತ್ತಿದೆ... ಆದರೆ ಏನು ಮಾಡೋದು... ಆಳುವ ಸರಕಾರಗಳೇ ದೇಶದ್ರೋಹಿಗಳ ಬೆನ್ನಿಗೆ ನಿಂತು ಬಿಟ್ಟರೆ ಪೊಲೀಸರಾದರೂ ಏನು ಮಾಡೋದಕ್ಕಾಗುತ್ತದೆ. ಪಿ.ಎಫ್.ಐ. ಎಂಬ ಅಕ್ಷರಶಃ ದೇಶದ್ರೋಹಿ ಉಗ್ರ ಸಂಘಟನೆಯ ಬೆನ್ನಿಗೆ ನಿಂತಿರುವ ನಿರ್ಲಜ್ಜ ರಾಜಕಾರಣಿಗಳು, ಸೋಕಾಲ್ಡ್ ಬುದ್ಧಿಜೀವಿಗಳು ಪಾಠ ಕಲಿಯುವ ದಿನ ದೂರವಿಲ್ಲ

ಈ ಪಿ.ಎಫ್.ಐ. ಸಂಘಟನೆ ಹುಟ್ಟಿಕೊಂಡದ್ದು ೨೦೦೬ರಲ್ಲಿ ಕೇರಳದ ನ್ಯಾಷನಲ್ ಡೆವೆಲಪ್ಮೆಂಟ್ ಫ್ರಂಟ್(ಎನ್.ಡಿ.ಎಫ್), ತಮಿಳುನಾಡಿನ 'ಮನಿದ ನೀತಿ ಪಸರೈ ' (ಎಂ. ಎನ್.ಪಿ.) ಮತ್ತು 'ಕರ್ನಾಟಕ ಫೋರಂ ಫ಼ಾರ್ ಡಿಗ್ನಿಟಿ' (ಕೆ.ಎಫ್.ಡಿ.) ಮೂರೂ ಸಂಘಟನೆಗಳೂ ಸೇರಿ ರೂಪುಗೊಂಡದ್ದೇ "ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ". ಪಿ.ಎಫ್.ಐ ಹುಟ್ಟುವಲ್ಲಿ ಕರ್ನಾಟಕದ ಪಾತ್ರವೂ ಪ್ರಮುಖವೇ. ಆದುದರಿಂದಲೇ ಹುಟ್ಟಿದ ವರ್ಷವೇ ಅದು ಕರ್ನಾಟಕದಲ್ಲಿ ತನ್ನ ಕರಾಳ ಮುಖದ ಅನಾವರಣ ಮಾಡಿತು. ನಿಮಗೆಲ್ಲ ನೆನಪಿರಬಹುದು... ಇರಾಕ್ ಮೇಲೆ ಅಮೆರಿಕ ದಾಳಿ ಮಾಡಿ ನಂತರ ಅಲ್ಲಿನ ಸರ್ವಾಧಿಕಾರಿ ಸದ್ದಾಮ್ ಹುಸೇನ್ ನನ್ನ ಸೆರೆ ಹಿಡಿದದ್ದು. ನಂತರ ಸದ್ದಾಮ್ ಹುಸೇನನ ವಿಚಾರಣೆ ನದೆದು ಆತನನ್ನು ಗಲ್ಲಿಗೇರಿಸಲಾಯಿತಲ್ಲಾ ..... ಅದಕ್ಕೆ ಭಾರತದಲ್ಲಿ... ಅದರಲ್ಲೂ ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು.

೨೦೦೭ರ ಜನವರಿ ೧೭ನೇ ತಾರೀಕಿನ ಶುಕ್ರವಾರದಂದು ಬೆಂಗಳೂರಿನ ಶಿವಾಜಿನಗರದ ಮೈದಾನದಲ್ಲಿ ಸದ್ದಾಮ್ ಹುಸ್ಸೇನ್ ನೇಣು ಶಿಕ್ಷೆಯ ವಿರುಧ್ದ ಭಾರೀ ಪ್ರತಿಭಟನಾ ಸಭೆ ಏರ್ಪಡಿಸಲಾಯಿತು. ಅಂದರೆ ೨೦೦೬ರ ಡಿಸೆಂಬರ್ ಮೂವತ್ತನೇ ತಾರೀಕಿಗೆ ಸದ್ದಾಮ್ ನೇಣಿಗೇರಿದ್ದರೆ.... ಹದಿನೇಳನೆಯ ದಿನ ಈ ಸಭೆಯನ್ನು ಶಿವಾಜಿನಗರದಲ್ಲಿ ಆಯೋಜಿಸಿದ್ದು ಆಗಷ್ಟೇ ಹುಟ್ಟಿಕೊಂಡಿದ್ದ "ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ". ಎಲ್ಲಿಯ ಸದ್ದಾಮ್ ಹುಸೇನ್?, ಎಲ್ಲಿಯ ಬೆಂಗಳೂರಿನ ಮುಸ್ಲಿಮರು? ಸದ್ದಾಮಗೆ ಶಿಕ್ಷೆ ವಿಧಿಸಿದ್ದು ಮುಸ್ಲಿಂ ಜಡ್ಜ್ ಗಳೇ ... ಆದರೂ ಇಲ್ಲಿ ಬೆಂಗಳೂರಿನಲ್ಲಿ ಪಾಪ್ಯುಲರ್ ಫ್ರಂಟ್ ಭಾರೀ ಸಭೆ ಸಂಘಟಿಸಿತು. ಸರಿಯಾಗಿ ಶುಕ್ರವಾರವೇ ಸಭೆ ನಿಗದಿಯಾಯಿತು. ಆಗ ಕುಮಾರಸ್ವಾಮಿ ಅನ್ನುವವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಯಾವ್ಯಾವ ರೀತಿಯ ರಾಜಕೀಯ ಪಗಡೆಯಾಟ ನಡೆಯಿತೋ... ಅಂತೂ ಕೆ.ಜಿ.ಹಳ್ಳಿಯಿಂದ ಪಾಪ್ಯುಲರ್ ಫ್ರಂಟ್ನ ಮೆರವಣಿಗೆ ಹೊರಟಿತು. ಭಾರತೀ ನಗರದ ಬಳಿಯ ಸೆಪ್ಪಿಂಗ್ಸ್ ರಸ್ತೆಯಲ್ಲಿ ಈ ಗುಂಪು ಕೆಲ ಬ್ಯಾನರ್ಗಳನ್ನು ಸುಟ್ಟಿತು. ಕೆಲ ಅಂಗಡಿಗಳಿಗೆ ಕಲ್ಲೆಸೆಯಿತು. ಸುಲಭದಲ್ಲೇ ಗಲಭೆ ಭುಗಿಲೆದ್ದಿತು. ಮುಸ್ಲಿಮರ ಭಾರೀ ಗುಂಪು ತಿಮ್ಮಯ್ಯ ರಸ್ತೆ, ನಾರಾಯಣ ಪಿಳ್ಳೆ ಬೀದಿ, ಶಿವಾಜಿನಗರ, ಭಾರತೀ ನಗರ, ಫ್ರೇಸರ್ ಟೌನ್ ಮುಂತಾದ ಕಡೆಗಳಲ್ಲಿ ಹಿಂದೂಗಳ ಮನೆಗಳನ್ನು ಅಂಗಡಿಗಳನ್ನು ಕೊಳ್ಳೆಹೊಡೆದು ಸುಡಲಾಯಿತು. ಫ್ರೇಸರ್ ಟೌನ್ ಎಸಿಪಿ ಪುಟ್ಟತಿಮ್ಮೇಗೌಡ, ಸಬ್-ಇನ್ಸ್ಪೆಕ್ಟರ್ ಮಹಾಲಿಂಗಯ್ಯ ಕಾನ್ಸ್ಟೇಬಲ್ ಗಳಾದ ರತ್ನಾಕರ್, ಸಿದ್ದರಾಮಯ್ಯ, ಮುಂತಾದ ಇಪ್ಪತ್ತಕ್ಕೂ ಹೆಚ್ಚು ಪೊಲೀಸರಿಗೆ ಗಂಭೀರ ಗಾಯಗಳಾದವು. ಕಾರು, ಆಟೋ , ಬೈಕ್ ಸೇರಿದಂತೆ ಐವತ್ತಕ್ಕೂ ಹೆಚ್ಚು ವಾಹನಗಳನ್ನು ಸುಡಲಾಯಿತು. ಹೀಗೆ ಕರ್ನಾಟಕಕ್ಕೆ ಕಾಲಿಟ್ಟ ಕೂಡಲೇ ಪಾಪ್ಯುಲರ್ ಫ್ರಂಟ್ ಕೋಮು-ದಳ್ಳುರಿಗೆ ನಾಂದಿ ಹಾಡಿತು. ಅಲ್ಲಿಂದ ಬಳಿಕ ಪಾಪ್ಯುಲರ್ ಫ್ರಂಟ್ ಸತತವಾಗಿ ರಾಜ್ಯದಲ್ಲಿನ ಕೋಮು ಗಲಭೆಗಳಿಗೆಲ್ಲ ನೇರಾನೇರ ಹೊಣೆಗಾರನಾಗುತ್ತಾ ಸಾಗಿತು. ಆದರೆ ನಂತರ ಬಂದ ನಮ್ಮದೇ ಬಿಜೆಪಿ ಸರ್ಕಾರ ಕೂಡ ಇದರ ಮುಂದಿನ ಪರಿಣಾಮಗಳನ್ನು ಅಂದಾಜಿಸುವುದರಲ್ಲಿ ವಿಫಲವಾದರು ಸಹ ಅದರ ಚಟುವಟಿಕೆಗಳಿಗೆ ಅಂದಿನ ದಕ್ಷ ಗೃಹ ಮಂತ್ರಿಗಳಾದ ದಿ. ಡಾ. ವಿ ಎಸ್ ಆಚಾರ್ಯ ಅವರು ಕಡಿವಾಣ ಹಾಕಿದ್ದರು. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಶತಾಯ ಗತಾಯ ಪಾಪ್ಯುಲರ್ ಫ್ರಂಟ್ ಬೆಂಬಲಕ್ಕೆ ನಿಂತು ಬಿಟ್ಟಿತು.

ಅಂದ ಹಾಗೆ ಈ ಪಾಪ್ಯುಲರ್ ಫ್ರಂಟ್ ನ ಹಿನ್ನೆಲೆಯೇನು..? ಇದು ಹೀಗೇ ಏಕಾಏಕಿ ಹುಟ್ಟಿಕೊಂಡಿದ್ದಲ್ಲ ... ಅದಕ್ಕೊಂದು ಹಿನ್ನೆಲೆಯಿದೆ... ಕುಖ್ಯಾತ ಸ್ಟೂಡೆಂಟ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ (ಸಿಮಿ) ಯನ್ನು ಇಸ್ಲಾಮಿಕ್ ಉಗ್ರವಾದದ ಹಿನ್ನೆಲೆಯಲ್ಲಿ ೨೦೦೧ರ ಸೆಪ್ಟೆಂಬರ್ ೨೭ರಂದು ಮೊದಲ ಬಾರಿಗೆ ಮೂರು ವರ್ಷಗಳಿಗೆ ನಿಷೇಧಿಸಲಾಯಿತು. ಆ ಬಳಿಕ ಮತ್ತೆ ಪುನಃ ಎರಡು ವರ್ಶಗಳಿಗೆ ಬ್ಯಾನ್ ಮಾಡಲಾಯಿತು. ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಎನ್. ಡಿ. ಎ . ಸರಕಾರ ನಿಷೇಧಿಸಿದ್ರೆ, ನಂತರ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರಕಾರ ಬ್ಯಾನ್ ಮಾಡಿತು. ಆ ಬಳಿಕ ೨೦೦೬ ರಲ್ಲಿ ಮತ್ತೊಮ್ಮೆ ಯು.ಪಿ.ಎ. ಸರಕಾರ ಸಿಮಿ ಯನ್ನು ನಿಷೇಧಿಸಿತು. ಇದಾದದ್ದು ಫೆಬ್ರವರಿ ೨ನೇ ತಾರೀಕಿಗೆ ಆದರೆ ಅದೇ ವರ್ಷ ಆಗಸ್ಟ್ ಹದಿನೆಂಟನೇ ತಾರೀಕಿಗೆ ಕೇರಳದ ಕೊಚ್ಚಿಯ ಬಿನಾನಿ ಪುರಂ ಎಂಬಲ್ಲಿ ಒಂದು ಉಗ್ರ ತರಬೇತಿ ಶಿಬಿರ ನಡೆಯಿತು. ಇದರಲ್ಲಿ ನಿಷೇಧಿತ ಸಿಮಿಯ ಹದಿನೆಂಟು ಸದಸ್ಯರು ಪಾಲ್ಗೊಂಡಿದ್ದರು. ಪೊಲೀಸರು ಅವರನ್ನು ಬಂಧಿಸಿದ್ದರೂ ಕೂಡಾ ಹೆಚ್ಚಿನ ತನಿಖೆಯಿಲ್ಲದೆ ರಾಜಕೀಯ ಒತ್ತಡದಿಂದಾಗಿ ಬಿಡುಗಡೆ ಮಾಡಬೇಕಾಯಿತು. ಅಂದಹಾಗೆ ಸಿಮಿಯ ಈ ಹಿಂದಿನ ಅಧ್ಯಕ್ಷ ಏರೊನಾಟಿಕಲ್ ಇಂಜಿನೀಯರ್ ಸಿ.ಎ. ಎಂ. ಬಷೀರ್ ಕೊಚ್ಚಿಯವನೇ. ಆತ ಪೊಲೀಸರಿಂದ ತಲೆಮರೆಸಿಕೊಂಡಿದ್ದರೂ ಇವತ್ತಿಗೂ ದುಬಾಯಿಯಿಂದ ಮತ್ತು ಪಾಕಿಸ್ತಾನದಿಂದ ಭಾರತದ ಉಗ್ರಸಂಘಟನೆಗಳನ್ನು ನಿಯಂತ್ರಿಸುತ್ತಿದ್ದಾನೆ.

ಅದೇ ವರ್ಷ ಅಂದರೆ ಸಿಮಿ ಮೂರನೇ ಬಾರಿ ನಿಷೇಧಕ್ಕೊಳಗಾದ ೨೦೦೬ರಲ್ಲೇ ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸ್ಥಾಪನೆಯಾಯಿತು. ಸಿಮಿಯ ಹಿಂದಿನ ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷನಾದ. ಸಿಮಿಯ ಕೇರಳ ರಾಜ್ಯ ಕಾರ್ಯದರ್ಶಿಯಾಗಿದ್ದ ಅಬ್ದುಲ್ ಹಮೀದ್ ಮಾಸ್ಟರ್ ಕೇರಳ ಪಾಪ್ಯುಲರ್ ಫ್ರಂಟ್ ನ ಕಾರ್ಯದರ್ಶಿಯಾದ... ಹೀಗೆ ಸಿಮಿಯಲ್ಲಿದ್ದ ಹೆಚ್ಚಿನ ಕಾರ್ಯಕರ್ತರು ಹೊಸದಾಗಿ ಶುರುವಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಲ್ಲಿ ಗುರುತಿಸಿಕೊಂಡರು.

ನಿಧಾನವಾಗಿ ಕೇರಳದಲ್ಲಿ ಉಗ್ರ ತರಬೇತಿ ಶಿಬಿರಗಳು ಸದ್ದಿಲ್ಲದೇ ಶುರುವಾದವು ಬಿನಾನಿ ಪುರಂನಲ್ಲಿ ಪೊಲೀರು ಬಂಧಿಸಿದ್ದ ಹದಿನೆಂಟು ಮಂದಿಯ ಪೈಕಿ ಐವರನ್ನು ಬಿಟ್ಟು ಉಳಿದವರನ್ನು ಬಿಡುಗಡೆ ಮಾಡಲಾಗಿತ್ತು. ಈ ಐವರಲ್ಲಿ ಅನ್ಸಾರ್ ಮೌಲವಿ, ಶಾದುಲಿ, ನಿಜಾಮುದ್ದೀನ್, ಅಬ್ದುಲ್ ರಫೀಕ್ ಮತ್ತು ಶಂಸು ಕೂಡ ಬೇಲ್ ಪಡೆದು ಬಿಡುಗಡೆಯಾದರು ಆ ಬಳಿಕ ೨೦೦೮ ರಲ್ಲಿ ರಾಜಸ್ಥಾನದ ಜೈಪುರದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಅರವತ್ತಕ್ಕೂ ಹೆಚ್ಚು ಜನ ಸತ್ತು, ಇನ್ನೂರಕ್ಕಿಂತಲೂ ಹೆಚ್ಚು ಜನ ಗಾಯಗೊಂಡರು. ಈ ಪ್ರಕರಣದಲ್ಲಿ ಇದೇ ಅನ್ಸಾರ್ ಮೌಲವಿ, ಶಾದುಲಿಯನ್ನು ಬಂಧಿಸಲಾಯಿತು. ಆಗ ತಾವು ಕೇರಳದಲ್ಲಿ ಬಿನಾಣಿಪುರಂ ನ ಉಗ್ರ ಶಿಬಿರವಲ್ಲದೆ ಇಡುಕ್ಕಿಯ ವಾಗಮೋನ್ ನಲ್ಲಿ ಇನ್ನೆರಡು ಉಗ್ರ ಶಿಬಿರಗಳಲ್ಲಿ ಭಾಗವಹಿಸಿದ ಸಂಗತಿಯನ್ನು ಬಯಲುಗೊಳಿಸಿದರು. ಕೇರಳದ ರಾಜಕೀಯ ಅದು ಹೇಗೆ ದೇಶದ ಭದ್ರತೆಯ ಜೊತೆಗೆ ಆಟವಾಡಿತೋ ನೋಡಿ. ಅವತ್ತೇನಾದರೂ ಅನ್ಸಾರ್ ಮೌಲವಿ, ಶಾದುಲಿ ಇಬ್ಬರನ್ನು ಸರಿಯಾಗಿ ವಿಚಾರಣೆಗೊಳಪಡಿಸಿ, ಅವರ ಜಾಮೀನಿಗೆ ಕೇರಳ ಸರಕಾರ ಅಡ್ಡಿಪಡಿಸಿದ್ದರೆ ಜೈಪುರ ಸರಣಿ ಬಾಂಬ್ ಸ್ಫೋಟ ತಪ್ಪಿಸಬಹುದಿತ್ತೇನೋ? ಆದರೆ ಹಾಗಾಗಲಿಲ್ಲ.

ನಂತರ ಗುಜರಾತಿನಲ್ಲಿ ಅಮಾದವಾದ್ ಸರಣಿ ಬಾಂಬ್ ಸ್ಪೋಟದಲ್ಲಿ ಐವತ್ಮೂರು ಜನ ಸತ್ತರು. ಆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಉಗ್ರರು ತಾವು ಕೇರಳದ ಇಡುಕ್ಕಿಯ ವಾಗಮೋನ್ ಉಗ್ರ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದನು ಬಾಯಿಬಿಟ್ಟರು. ಆಗಲೂ ಕೇರಳದ ರಾಜಕಾರಣಿಗಳು ಕಾಂಗ್ರೆಸ್ ಮತ್ತು ಕಮ್ಯುನಿಸ್ಟರಿಬ್ಬರೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬುದು ಸಿಮಿಯ ಪುನರಾವತಾರ ಎಂಬುದನ್ನೂ, ಅದು ಕೇರಳದಲ್ಲಿ ಇಸ್ಲಾಮಿಕ್ ಉಗ್ರವಾದವನ್ನು ಪೋಷಿಸುತ್ತಿದೆ ಎಂಬುದನ್ನಾಗಲೀ ಒಪ್ಪಿಕೊಳ್ಳಲು ಹಿಂಜರಿದರು. ಅಷ್ಟರಲ್ಲಾಗಲೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತನ್ನದೇ ಆದ "ತೇಜಸ್" ದಿನ ಪತ್ರಿಕೆಯನ್ನು ಕೇರಳದಲ್ಲಿ ನಾಲ್ಕು ಬೇರೆಬೇರೆ ಆವೃತ್ತಿಗಳಲ್ಲಿ ಪ್ರಕಟಿಸತೊಡಗಿತು. ಆದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಯಾವಾಗ "ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ" ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿತೊ.. ಆಗ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರಿಬ್ಬರೂ ಎಚ್ಛೆತ್ತರು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷನಾಗಿ ಅಬೂಬಕರ್ ಎಂಬ ಮಾಜೀ ಸಿಮಿ ಸದಸ್ಯ ಆಯ್ಕೆಯಾದ.

ಇದರೊಂದಿಗೆ ಕೇರಳದ ಕ್ರಿಶ್ಚಿಯನ್ನರು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ "ಲವ್ ಜಿಹಾದ್" ನಡೆಸುತ್ತಿದೆ ಎಂದು ಆರೋಪಿಸಿ ಒಂದು ವರದಿ ಸಿದ್ಧಪಡಿಸಿದರು. ಗ್ಲೋಬಲ್ ಕೌನ್ಸಿಲ್ ಆಫ್ ಇಂಡಿಯನ್ ಕ್ರಿಶ್ಚಿಯನ್ಸ್ ೨,೮೬೮ ಹುಡುಗಿಯರನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು ಅದರ ವಿದ್ಯಾರ್ಥಿ ಸಂಘಟನೆ ಕ್ಯಾಂಪಸ್ ಫ್ರಂಟ್ ನ ಹುಡುಗರು ಪ್ರೀತಿಯ ಹೆಸರಲ್ಲಿ ಮತಾಂತರ ಮಾಡಿದ್ದಾರೆಂದು ಆರೋಪಿಸಿತು. ಕೇರಳ ಕ್ರಿಶ್ಚಿಯನ್ ಬಿಷಪ್ ಕೌನ್ಸಿಲ್ ನ ಬಿಷಪ್ ಮ್ಯಾಥ್ಯೂ ಅನಿಕುಳಿಕಟ್ಟಿಲ್ ಎಂಬಾತ ಈ ವರದಿ ನೀಡಿದ್ದ. ಇದರಲ್ಲಿ ಪಾಪ್ಯುಲರ್ ಫ್ರಂಟ್ ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರನ್ನು ಪ್ರೀತಿಯ ಬಲೆಗೆ ಕೆಡವಿ ಮತಾಂತರ ಮಾಡಿ ನಂತರ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳುತ್ತದೆಂಬ ಆರೋಪ ಮಾಡಿದ್ದ. ಹಾಗಾಗಿಯೇ "ಲವ್ ಜಿಹಾದ್" ಬಗ್ಗೆ ಎಚ್ಚರಿಕೆಯುಳ್ಳ ಪೋಸ್ಟರ್ ಗಳನ್ನೂ ಕ್ರಿಶ್ಚಿಯನ್ನರೇ ತಮ್ಮ ಶಾಲಾ ಕಾಲೇಜುಗಳಲ್ಲಿ ಅಂಟಿಸಿದರು. ಅದಾದ ನಂತರವೇ ವಿಶ್ವ ಹಿಂದೂ ಪರಿಷದ್ ಈ ವಿಷಯವನ್ನೆತ್ತಿಕೊಂಡದ್ದು. (ಆದರೆ ಈ "ಲವ್ ಜಿಹಾದ್" ಎಂಬುದು ಸಂಘ ಪರಿವಾರದ ಕಾಲ್ಪನಿಕ ಸೃಷ್ಟಿ ಎಂದೇ ನಮ್ಮ ಮಾಧ್ಯಮಗಳು ಬಿಂಬಿಸಿದವು)

ಆದರೆ ಕೇರಳದ ಕಮ್ಯುನಿಸ್ಟ್ ಸರಕಾರದ ಅಂದಿನ ಮುಖ್ಯಮಂತ್ರಿ ಅಚ್ಯುತಾನಂದನ್ ಪಾಪ್ಯುಲರ್ ಫ್ರಂಟ್ ನ ಈ ಮುಖವನ್ನು ತಾವೇ ತೆರೆದಿಟ್ಟರು. ದೆಹಲಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತಾಡುವಾಗ ಅಚ್ಯುತಾನಂದನ್ ಅವರೇ ಇನ್ನು ಇಪ್ಪತ್ತು ವರ್ಷಗಳಲ್ಲಿ ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿಸಬೇಕೆಂಬ ಗುರಿಯೊಂದಿಗೆ ಪಾಪ್ಯುಲರ್ ಫ್ರಂಟ್ ಕೆಲಸ ಮಾಡುತ್ತಿದೆ ಅಂತ ನೇರವಾಗಿಯೇ ಹೇಳಿದರು. ಮತ್ತು ಲವ್ ಜಿಹಾದ್ ಎಂಬುದೊಂದು ನಿಜಕ್ಕೂ ಇದೆ ಎಂಬುದನ್ನು ಪಕ್ಕಾ ಕಮ್ಯುನಿಸ್ಟ್ ಮುಖ್ಯಮಂತ್ರಿಯೇ ಒಪ್ಪಿಕೊಂಡರು. ಆದರೂ ನಮ್ಮ ದೇಶದ ಎಡಪಂಥೀಯರು ಮಾತ್ರ ಪಾಪ್ಯುಲರ್ ಫ್ರಂಟ್ ಅನ್ನು ಬೆಂಬಲಿಸುತ್ತಾ, ಸಂಘ ಪರಿವಾರವನ್ನೇ ದೂಷಿಸತೊಡಗಿದರು...

ಆದರೆ ಪ್ರೊಫೆಸರ್ ಜೋಸೆಫ್ ತಮ್ಮ ಪ್ರವಾದಿಯನ್ನು ದೂಷಿಸಿದರು ಎಂಬ ಕಾರಣವೊಡ್ಡಿ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಹಾಡಹಗಲಲ್ಲೆ ಜೋಸೆಫ್ ಕುಟುಂಬದವರ ಕಣ್ಣೆದುರಿಗೆ ಅವರ ಕೈಯನ್ನು ಕಡಿದಾಗ ಕೇರಳದ ಕಮ್ಯುನಿಸ್ಟ್ ಸರಕಾರ ಬೆಚ್ಚಿ ಬಿದ್ದಿತು. ಈ ಸಂಬಂಧ ಪೊಲೀಸರು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಬಂಧಿಸಿದಾಗ ಅಲ್ಲಿ ಅವರಿಗೆ ಹಿಜಬುಲ್ ಮುಜಾಹಿದ್ದೀನ್, ಲಷ್ಕರ್ ಎ ತೊಯ್ಬಾ ಮತ್ತು ಅಲ್-ಕಾಯ್ದಾದೊಂದಿಗೆ ಪಾಪ್ಯುಲರ್ ಫ್ರಂಟ್ ಗೆ ಸಂಪರ್ಕವಿರುವ ಸಾಕ್ಷಿಗಳು ಪತ್ತೆಯಾದವು. ಕೇರಳ ಸರಕಾರದ ಗೃಹ ಇಲಾಖೆಯ ಉಪ ಕಾರ್ಯದರ್ಶಿ ಆರ್. ರಾಜಶೇಖರನ್ ಕೇರಳ ಹೈಕೋರ್ಟ್ ಗೆ ಈ ಬಗ್ಗೆ ಅಫಿದಾವಿತ್ತನ್ನೂ ಸಲ್ಲಿಸಿದರು. ಕೇರಳ ಕಮ್ಯುನಿಸ್ಟ್ ಸರಕಾರವೇ ಪಾಪ್ಯುಲರ್ ಫ್ರಂಟ್ ಒಂದು ಭಯೋತ್ಪಾದಕ ಸಂಘಟನೆ, ಅದಕ್ಕೆ ಮೇಲೆ ಹೇಳಿದ ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವಿದೆ ಅಂತ ನ್ಯಾಯಾಲಯಕ್ಕೆ ಹೇಳಿಕೆ ನೀಡಿದರೂ ನಮ್ಮ 'ಸೆಕ್ಯುಲರ್' ಮಾಧ್ಯಮಗಳು ಇದನ್ನೊಂದು ದೊಡ್ಡ ವಿಷಯ ಮಾಡಲೇ ಇಲ್ಲ.

Sent from Samsung Mobile

ದಿನಕ್ಕೊಂದು ಕಥೆ

*🌻ದಿನಕ್ಕೊಂದು ಕಥೆ🌻 ಬದುಕಿನ ದಿಕ್ಕನ್ನೇ ಬದಲಿಸಿತು ಆ ಒಂದು ಚಿಕ್ಕ ಸಹಾಯ!*

ಒಂದು ಲೋಟ ಹಾಲಿನ ರೂಪದಲ್ಲಿ ಚಿಕಿತ್ಸೆಯ ವೆಚ್ಚ ಸಂದಾಯವಾದ ಕತೆಯನ್ನು ಹಿಂದೊಮ್ಮೆ ನೀವು ಇದೇ ಅಂಕಣದಲ್ಲಿ ಓದಿರುತ್ತೀರಿ. ಅದೇ ರೀತಿಯ ಇನ್ನೊಂದು ಕತೆ ಇಲ್ಲಿದೆ. ಅದೊಂದು ಕಗ್ಗತ್ತಲೆಯ ಮಳೆಗಾಲದ ಮಧ್ಯರಾತ್ರಿ. ಗಂಟೆ ಸುಮಾರು ಒಂದು ಆಗಿರಬಹುದು. ಅಮೆರಿಕದ ಫಿಲಡೆಲ್ಫಿಯದ ಸಣ್ಣ ಹೋಟೆಲ್ ಒಂದರ ರಿಸೆಪ್ಶನ್ ಡೆಸ್‌ಕ್‌‌ನಲ್ಲಿ ಒಬ್ಬ ಕ್ಲರ್ಕ್ ನಿದ್ದೆಗಣ್ಣಿನಲ್ಲಿ ಕುಳಿತಿದ್ದ. ಅಲ್ಲಿಗೆ ವೃದ್ಧ ದಂಪತಿ ಬಂದರು.

ಹೊರಗೆ ಮಳೆ ಜೋರಾಗಿ ಸುರಿಯುತ್ತಿದ್ದುದರಿಂದ ಹೋಟೆಲ್ ನಲ್ಲಿ ರೂಮ್ ಸಿಗಬಹುದೆಂದು ಅವರು ಬಂದಿದ್ದರು. ‘ಈ ರಾತ್ರಿ ತಂಗಲು ಹೋಟೆಲ್‌ನಲ್ಲಿ ರೂಮ್ ಸಿಗಬಹುದೇ?’ಎಂದು ಗಂಡ ಕ್ಲರ್ಕ್‌ನ ಬಳಿ ಕೇಳಿದ. ಆ ಕ್ಲರ್ಕ್ ಸ್ನೇಹಜೀವಿ. ಮಧ್ಯೆರಾತ್ರಿ ಬಂದವರನ್ನು ಕಂಡು ಕೋಪಿಸಿಕೊಳ್ಳದೆ ಮುಗುಳ್ನಗೆಯಿಂದಲೇ ಹೇಳಿದ- ‘ನಗರದಲ್ಲಿ ಮೂರು ಸಮಾರಂಭಗಳು ನಡೆಯುತ್ತಿವೆ. ಹಾಗಾಗಿ ನಮ್ಮ ಹೋಟೆಲ್‌ನ ಎಲ್ಲ ರೂಂಗಳೂ ಭರ್ತಿಯಾಗಿವೆ’.

ದಂಪತಿಯ ಮುಖದಲ್ಲಿ ಆತಂಕ ಮೂಡಿತು. ಅದನ್ನು ಗಮನಿಸಿದ ಕ್ಲರ್ಕ್ ಮಾತು ಮುಂದುವರಿಸಿದ ‘ಆದರೆ… ಮಳೆಗಾಲದ ಮಧ್ಯರಾತ್ರಿಯಲ್ಲಿ ನಮ್ಮ ಹೋಟೆಲ್‌ಗೆ ಬಂದ ಅತಿಥಿಗಳನ್ನು ನಾನು ಹಾಗೆಯೇ ಕಳಿಸಬಾರದಲ್ಲವೆ? ನೀವು ಒಪ್ಪುವುದಾದರೆ ನನ್ನ ಕೋಣೆಯಲ್ಲಿಯೇ ತಂಗಬಹುದು. ಅದು ದೊಡ್ಡ ರೂಮೇನಲ್ಲ. ಆದರೆ ಒಂದು ರಾತ್ರಿ ಕಳೆಯಲು ತೊಂದರೆಯಿಲ್ಲ’ಎಂದ ಸೌಜನ್ಯದಿಂದ. ‘ಇಲ್ಲ, ನಿಮಗೇಕೆ ನಮ್ಮಿಂದ ತೊಂದರೆ. ಇಲ್ಲೇ ಹತ್ತಿರದಲ್ಲಿ ಬೇರೆ ಹೋಟೆಲ್ ಇದ್ದರೆ ತಿಳಿಸಿ’ಎಂದಳು ಮಹಿಳೆ.

‘ಇದರಲ್ಲಿ ತೊಂದರೆಯೇನು ಬಂತು. ನೀವೇ ನೋಡಿದಿರಲ್ಲ ನಾನು ಈ ಕುರ್ಚಿಯ ಮೇಲೆ ಕುಳಿತು ರಾತ್ರಿ ಕಳೆಯಬೇಕು. ನಾನು ಡ್ಯೂಟಿ ಮೇಲಿದ್ದೇನಲ್ಲ. ನೀವು ನನ್ನ ರೂಮಲ್ಲಿ ಧಾರಾಳವಾಗಿ ವಿಶ್ರಾಂತಿ ಪಡೆಯಬಹದು’ ಎಂದನಾತ. ಕೊನೆಗೂ ಆ ದಂಪತಿ ಕ್ಲರ್ಕ್‌ನ ರೂಂ ಬಳಸಲು ಒಪ್ಪಿದರು. ಮರುದಿನ ಬಿಲ್ ಪಾವತಿಸಿ ಹೊರಟು ನಿಂತ ವೃದ್ಧ ಆತನಿಗೆ ‘ನೀನೊಬ್ಬ ಒಳ್ಳೆಯ ಮ್ಯಾನೇಜರ್. ನಿನ್ನಂಥ ಸಹೃದಯಿಗಳು ಒಂದು ದೊಡ್ಡ ಹೋಟೆಲ್‌ನ ಬಾಸ್ ಆಗಬೇಕು. ಮುಂದೊಮ್ಮೆ ನಿನಗಾಗಿ ಒಂದು ಹೋಟೆಲ್ ಕಟ್ಟಿಸೋಣ ಬಿಡು’ಎಂದರು. ಅದನ್ನು ಕೇಳಿದ ಆ ಕ್ಲರ್ಕ್ ನಕ್ಕುಬಿಟ್ಟ. ದಂಪತಿ ಆತನೊಂದಿಗೆ ಒಂದಷ್ಟು ಹೊತ್ತು ಹರಟಿ ಹೊರಟು ಹೋದರು. ಆತ ಎಂಥ ಅಪರೂಪದ ವ್ಯಕ್ತಿ ಎಂದು ದಂಪತಿಗೆ ಅರಿವಾಯಿತು.

ವರ್ಷಗಳೆರಡು ಉರುಳಿದವು. ಆ ರಾತ್ರಿ ನಡೆದ ಘಟನೆಯನ್ನು, ಮರುದಿನ ಬೆಳಗ್ಗೆ ದಂಪತಿ ಹೇಳಿದ್ದ ಮಾತುಗಳನ್ನು ಕ್ಲರ್ಕ್ ಮರೆತೇ ಬಿಟ್ಟಿದ್ದ. ಆದರೆ ಅವನ ವಿಳಾಸಕ್ಕೆ ಬಂದ ಒಂದು ಲಕೋಟೆ ಎಲ್ಲವನ್ನೂ ಮತ್ತೆ ನೆನಪಿಸಿತು. ವೃದ್ಧ ದಂಪತಿ ಕಳಿಸಿದ ಆ ಲಕೋಟೆಯಲ್ಲಿ ಮಳೆಗಾಲದ ರಾತ್ರಿಯ ಬಗ್ಗೆ ಬರೆಯಲಾಗಿತ್ತು ಹಾಗೂ ನ್ಯೂಯಾರ್ಕ್‌ಗೆ ಬರುವಂತೆ ಆಹ್ವಾನಿಸಿ ಟಿಕೆಟ್‌ಗಳನ್ನೂ ಇಡಲಾಗಿತ್ತು. ಆಹ್ವಾನವನ್ನು ಮನ್ನಿಸಿ ಕ್ಲರ್ಕ್ ನ್ಯೂಯಾರ್ಕ್‌ಗೆ ಹೋದ. ಅವರು ಆತನನ್ನು 5ನೇ ಅವೆನ್ಯೂ, 34ನೇ ರಸ್ತೆಗೆ ಕೊಂಡೊಯ್ದರು. ಅಲ್ಲಿ ತಲೆಯೆತ್ತಿ ನಿಂತಿದ್ದ ನಸುಗೆಂಪು ಬಣ್ಣದ ಕಟ್ಟಡವೊಂದನ್ನು ತೋರಿಸಿ ‘ಅದು… ಆ ಹೋಟೆಲನ್ನು ನಾನು ನಿನಗಾಗಿ ಕಟ್ಟಿಸಿದ್ದೇನೆ. ಇನ್ನು ಮುಂದೆ ನೀನಿದರ ಮ್ಯಾನೇಜರ್!’ಎಂದ.

ಒಂದು ಕ್ಷಣ ಅವಕ್ಕಾದ ಕ್ಲರ್ಕ್ ಸಾವರಿಸಿಕೊಂಡು ‘ನೀವು ಜೋಕ್ ಮಾಡುತ್ತಿದ್ದೀರಿ’ಎಂದ. ‘ಖಂಡಿತವಾಗಿಯೂ ಇಲ್ಲ!’ ಎಂದ ಆ ಹಿರಿಯ. ಅಷ್ಟಕ್ಕೂ ಹಾಗೆ ಹೇಳಿದ ಆ ಹಿರಿಯನಾರು ಗೊತ್ತೇ? ಪ್ರಸಿದ್ಧ ರಾಜಕಾರಣಿ, ಉದ್ಯಮಿಯಾಗಿದ್ದ ವಿಲಿಯಂ ವಾಲ್ಡೋರ್ಫ್ ಆಸ್ಟರ್! ಇನ್ನು ಆ ಹೋಟೆಲ್ ಯಾವುದು ಗೊತ್ತೇ? ಅದು ಜಗತ್ತಿನ ಅತ್ಯುತ್ತಮ ಹೋಟೆಲ್‌ಗಳಲ್ಲಿ ಒಂದಾದ ನ್ಯೂಯಾರ್ಕ್‌ನ ಮ್ಯಾನ್‌ಹಟನ್‌ನಲ್ಲಿರುವ ವಾಲ್ಡೋರ್ಫ್ ಆಸ್ಟೋರಿಯಾ ಹೋಟೆಲ್! ಎಂದೋ ಮಾಡಿದ ಸಹಾಯಕ್ಕೆ ಮುಂದೊಂದು ದಿನ ತಾನು ಅತಿದೊಡ್ಡ ಹೋಟೆಲ್‌ನ ಮ್ಯಾನೇಜರ್ ಆಗುವ ಪ್ರತಿಫಲ ಸಿಗುತ್ತದೆಂದು ತಿಳಿಯದ ಆ ಕ್ಲರ್ಕ್ ಬೇರ್ಯಾರೂ ಅಲ್ಲ ಪ್ರಖ್ಯಾತ ಹೋಟೆಲ್ ಉದ್ಯಮಿ ಜಾರ್ಜ್ ಸಿ ಬೋಲ್‌ಟ್‌! ಅದಕ್ಕೇ ಹೇಳುವುದು Good deeds never goes unrewarded!
******************************
******
ಜೀವಶಾಸ್ತ್ರಜ್ಞರು ಪ್ರಯೋಗ ನಡೆಸುವ ಸಲುವಾಗಿ ಒಂದು ಶಾರ್ಕ್ ಅನ್ನು ದೊಡ್ಡದೊಂದು ಟ್ಯಾಂಕ್‌ನಲ್ಲಿ ಇರಿಸಿದರು. ನಂತರ ಸಣ್ಣಪುಟ್ಟ ಜಾತಿಯ ಮೀನುಗಳನ್ನು ಅದೇ ಟ್ಯಾಂಕಿನೊಳಗೆ ಬಿಡಲಾಯಿತು. ಈಗ ಶಾರ್ಕ್ ಏನು ಮಾಡುತ್ತದೆ ಎಂದು ಗಮನಿಸಲಾಯಿತು. ನೀವು ಊಹಿಸಿದ ಹಾಗೆಯೇ ಶಾರ್ಕ್ ಅಲ್ಲಿದ್ದ ಸಣ್ಣ ಮೀನುಗಳನ್ನು ಗುಳುಂ ಮಾಡಿಯೇಬಿಟ್ಟಿತು. ಒಂದೆರಡು ದಿನಗಳ ಕಾಲ ಹೀಗೆ ನಡೆಯಿತು. ಇವರು ಮೀನುಗಳನ್ನು ಟ್ಯಾಂಕಿಗೆ ಬಿಡುವುದು, ಶಾರ್ಕ್ ಅವುಗಳನ್ನು ತಿನ್ನುವುದು. ಒಂದು ದಿನ ಟ್ಯಾಂಕಿನ ಮಧ್ಯೆ ಗಾಜಿನಷ್ಟೇ ಪಾರದರ್ಶಕವಾದ ಫೈಬರ್‌ನ ತಡೆಗೋಡೆಯನ್ನು ನಿರ್ಮಿಸಿದರು.

ಅದು ಟ್ಯಾಂಕನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿತು. ಒಂದು ಕಡೆ ಶಾರ್ಕ್ ಇತ್ತು. ಇನ್ನೊಂದು ಭಾಗದಲ್ಲಿ ಇವರು ಮೊದಲಿನಂತೆ ಮೀನುಗಳನ್ನು ಬಿಟ್ಟರು. ಈ ಕಡೆಯಿದ್ದ ಶಾರ್ಕ್‌ಗೆ ಮೀನುಗಳು ಕಾಣಿಸಿದವು. ಎಂದಿನಂತೆ ಅದು ಮೀನುಗಳ ಮೇಲೆ ಆಕ್ರಮಣ ಮಾಡಲು ಮುನ್ನುಗ್ಗಿತು! ಮಧ್ಯೆಯಿದ್ದ ತಡೆಗೋಡೆಗೆ ತಲೆ ಬಡಿಯಿತು. ಆದರೆ ಆಚೆಗೆ ಹೋಗಲಾಗಲಿಲ್ಲ. ಮತ್ತೊಮ್ಮೆ, ಮಗದೊಮ್ಮೆ ಪ್ರಯತ್ನಿಸಿತು. ಉಹೂಂ ಸಾಧ್ಯವೇ ಇಲ್ಲ! ಸ್ವಲ್ಪ ಹೊತ್ತು ತಲೆ ಚಚ್ಚಿಸಿಕೊಂಡ ಶಾರ್ಕ್ ಹತಾಶೆ, ಕೋಪದಿಂದ ಸುಮ್ಮನಾಯಿತು. ಈ ಪ್ರಯೋಗ ವಾರಗಳ ಕಾಲ ಮುಂದುವರಿಯಿತು. ಪ್ರತಿ ಪ್ರಯತ್ನದ ನಂತರ ಶಾರ್ಕ್‌ನ ಆಕ್ರಮಣಕಾರಿ ಸ್ವಭಾವ ಕ್ಷೀಣಿಸತೊಡಗಿತು. ಮೊದಲೆಲ್ಲ ಕೈಕಾಲು ಸೋಲುವವರೆಗೆ ಗೋಡೆಗೆ ಬಡಿಯುತ್ತಿದ್ದ ಶಾರ್ಕ್, ಗಂಟೆಗೊಮ್ಮೆ ಪ್ರಯತ್ನ ಮಾಡತೊಡಗಿತು.

ಕೊನೆಕೊನೆಗೆ ನೆನಪಾದಾಗೊಮ್ಮೆ ಫೈಬರ್ ಗೋಡೆಯಾಚೆ ನುಗ್ಗಲು ಯತ್ನಿಸಿ ಸುಮ್ಮನಾಗತೊಡಗಿತು. ಕೊನೆಗೊಂದು ದಿನ ಅಲ್ಲಿ ನಿರ್ಮಿಸಿದ್ದ ತಡೆಗೋಡೆಯನ್ನು ತೆಗೆದು ಹಾಕಿದರು. ಮೀನುಗಳು ಇನ್ನೊಂದು ಪಾರ್ಶ್ವದಲ್ಲಿ ಈಜಾಡುತ್ತಲೇ ಇದ್ದವು. ಆದರೆ ಈಚೆ ಭಾಗದಲ್ಲಿದ್ದ ಶಾರ್ಕ್ ಮೀನುಗಳ ಮೇಲೆ ಆಕ್ರಮಣ ಮಾಡಲೇ ಇಲ್ಲ. ಬಾಹ್ಯವಾಗಿ ನಿರ್ಮಿಸಲಾಗಿದ್ದ ತಡೆಗೋಡೆ ತೆಗೆದರೂ, ಶಾರ್ಕ್‌ನ ಮನಸ್ಸಿನೊಳಗೆ ನಿರ್ಮಿತವಾದ ಆಂತರಿಕ ತಡೆಗೋಡೆ ಕಳಚಲೇ ಇಲ್ಲ. ಮೀನುಗಳ ಮೇಲೆ ಆಕ್ರಮಣ ಮಾಡುವುದು ನನ್ನಿಂದ ಸಾಧ್ಯವಿಲ್ಲ ಎಂದು ಬಲವಾಗಿ ನಂಬಿದ ಶಾರ್ಕ್ ಪ್ರಯತ್ನ ಮುಂದುವರಿಸಲೇ ಇಲ್ಲ. ನಮ್ಮ ಜೀವನದಲ್ಲಿಯೂ ಹಾಗೇ ಆಗುತ್ತದೆ. ಯಾವುದೋ ಕೆಲಸಕ್ಕೆ ಕೈ ಹಾಕುತ್ತೇವೆ. ಸತತ ಸೋಲುಗಳು ಎದುರಾಗುತ್ತವೆ.

ಓಹೋ ಇದು ನನ್ನಿಂದಾಗದು ಎಂದು ಕೈ ಚೆಲ್ಲಿ ಸುಮ್ಮನಾಗುತ್ತೇವೆ. ಹಿಂದೆ ಸೋಲಾಗಿತ್ತು, ಹಾಗಾಗಿ ಮುಂದೆಂದೂ ನನಗೆ ಗೆಲ್ಲಲು ಸಾಧ್ಯವಿಲ್ಲ ಎಂಬ ಭಯದ ತಡೆಗೋಡೆಯೊಂದು ಮನಸ್ಸಿನೊಳಗೆ ಭದ್ರವಾಗಿ ತಲೆಯೆತ್ತಿ ಬಿಟ್ಟಿರುತ್ತದೆ. ಇಂಥ ಆಂತರಿಕ ತಡೆಗೋಡೆಯನ್ನು ಒಡೆದು ಹಾಕದಿದ್ದರೆ ನಾವೂ ಆ ಶಾರ್ಕ್‌ನಂತೆ ಕಣ್ಮುಂದೆ ಮೀನುಗಳನ್ನು ಈಜಲು ಬಿಟ್ಟು ಸುಮ್ಮನಾಗಬೇಕಾಗುತ್ತದೆ. ವಾಸ್ತವದಲ್ಲಿ ಇಲ್ಲದೇ ಇರುವ ಗೋಡೆಯೊಂದು ನಿಮ್ಮ ತಲೆಯೊಳಗೆ ಮೂಡದಿರಲಿ.

Sent from Samsung Mobile

ಪರಾಶರ ಭವಿಷ್ಯ..!!

ಪರಾಶರ ಭವಿಷ್ಯ..!!

ಪ್ರದೀಪ ಹೆಗಡೆ ಪುರಾಣ & ಚರಿತ್ರೆಯ ಸತ್ಯ ಸಂಗತಿ,
Recent Posts 6/4/2016 8:32:00 AM View Count 12178 Return
ಪರಾಶರ ಭವಿಷ್ಯ..!!
ವಿಷ್ಣುಪುರಾಣದಲ್ಲಿ ಮೈತ್ರೇಯರು ಪರಾಶರಮುನಿಗಳಲ್ಲಿ ಕಲಿಯುಗದ ಸ್ವರೂಪವೇನೆಂದು ಕೇಳುತ್ತಾರೆ.ಆಗ ಪರಾಶರಮುನಿಗಳು ಕಲಿಯುಗದ ಸ್ವರೂಪವನ್ನು ಸಂಕ್ಷೇಪವಾಗಿ ವರ್ಣಿಸುತ್ತಾರೆ.ಅಂದು ಪರಾಶರಮುನಿಗಳು ವರ್ಣಿಸಿದ ಕಲಿಯುಗದ ಸ್ವರೂಪವಿಂದು ಅಕ್ಷರಶಃ ಸತ್ಯವಾಗುತ್ತಿದೆ.ಪರಾಶರಮುನಿಗಳು ಮೈತ್ರೇಯರಿಗೆ ಕಲಿಯುಗದ ಸ್ವರೂಪವನ್ನು ಹೀಗೆ ವಿವರಿಸುತ್ತಾರೆ.

ಮೈತ್ರೇಯರೇ..ಕಲಿಯುಗದಲ್ಲಿ ಮನುಷ್ಯರ ಪ್ರವೃತ್ತಿ ವರ್ಣಾಶ್ರಮಧರ್ಮಗಳ ಆಚಾರಕ್ಕನುಗುಣವಾಗಿರುವುದಿಲ್ಲ.ವೇದೋ
ಕ್ತವಾದಂತಹ ಧರ್ಮವನ್ನು ಪರಿಪಾಲಿಸಬೇಕೆಂಬ ಹಂಬಲ ಜನರಲ್ಲಿರುವುದಿಲ್ಲ.ಕಲಿಯುಗದಲ್ಲಿ ಧರ್ಮವ್ಯವಸ್ಥೆಯಿಂದ ವಿವಾಹಗಳು ನಡೆಯುವುದಿಲ್ಲ.ಗುರುಶಿಷ್ಯರ ಮಧುರ ಸಂಬಂಧ,ಗುರುಕುಲ ಪದ್ಧತಿಯೂ ಇರುವುದಿಲ್ಲ.ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯಿರುವುದಿಲ್ಲ.ಅಗ್ನಿಪೂಜೆ,ದೇವತಾಪೂಜೆ ಮುಂತಾದ ವಿಧಾನಗಳು ಕ್ಷೀಣಿಸುತ್ತವೆ.ಯಾವಕುಲದಲ್ಲೇ ಹುಟ್ಟಿರಲಿ,ಬಲಿಷ್ಟನಾದವನು ಸರ್ವನಿಯಾಮಕನಾಗಿರುತ್ತಾನೆ.ಯಾವ ಕುಲದಲ್ಲೇ ಹುಟ್ಟಿರಲಿ ಧನಿಕನಾದವನು ಕನ್ಯೆಗೆ ವರನಾಗಲು ಯೋಗ್ಯನಾಗುತ್ತಾನೆ.ವೇದ-ಶಾಸ್ತ್ರಜ್ಞಾನವಿಲ್ಲದ ಬ್ರಾಹ್ಮಣ ಯಾವುದೋ ಒಂದು ಕುತ್ಸಿತ ಮಾರ್ಗದಲ್ಲಿ “ದೀಕ್ಷಿತ” “ವಿದ್ವಾಂಸ” ಎನಿಸಿಕೊಳ್ಳುತ್ತಾನೆ.ಆತನ ಬಾಯಿಂದ ಬರುವ ಅಪದ್ಧ ಮಾತೂ ಶಾಸ್ತ್ರವಾಕ್ಯವಾಗಿಬಿಡುತ್ತದೆ.ಜನರು ಯಾರನ್ನು ಗೌರವಿಸುತ್ತಾರೋ ಅವರೇ ದೇವರಾಗಿಬಿಡುತ್ತಾರೆ..!!ತಮಗೆ ತೋರಿದಂತೇ ಮಾಡುವ ಕಾರ್ಯವೇ ತಪಸ್ಸಾಗಿಬಿಡುತ್ತದೆ.ಮನಸ್ಸಿಗೆ ಕಂಡಂತೇ ಮಾಡುವ ಕ್ರಿಯೆಯೂ ಧರ್ಮವೆನಿಸಿಬಿಡುತ್ತದೆ.

ಸ್ವಲ್ಪ ಸಂಪತ್ತಿದ್ದರೆ ಸಾಕು,ಧನಮದ ತಲೆಗೇರುತ್ತದೆ.ಕಲಿಯುಗದಲ್ಲಿ ಸುವರ್ಣಮಣಿ,ರತ್ನವಸ್ತ್ರಗಳನ್ನು ಬಿಟ್ಟು ಸ್ತ್ರೀಯರು ತಮ್ಮ ಕೇಶಗಳಿಂದಲೇ ತಮ್ಮನ್ನು ಸಿಂಗರಿಸಿಕೊಳ್ಳುತ್ತಾರೆ.ಪತಿಯು ಧನಹೀನನಾದರೆ ಆತನನ್ನು ತ್ಯಜಿಸಿಬಿಡುತ್ತಾರೆ.ಹಣವಿರುವವನಷ್ಟೇ ಕಲಿಯುಗದಲ್ಲಿ ಸ್ತ್ರೀಗೆ ಪತಿಯಾಗಲು ಅರ್ಹನಾಗುತ್ತಾನೆ.ಹೆಚ್ಚುಹಣವನ್ನು ಖರ್ಚುಮಾಡುವ ವ್ಯಕ್ತಿ ಪಾಪಿಯಾಗಿದ್ದರೂ ಜನರಿಗೆ ನಾಯಕನಾಗುತ್ತಾನೆ.ಕಲಿಯುಗದಲ್ಲಿ ಕೂಡಿಟ್ಟ ಸಂಪತ್ತು ಗೃಹನಿರ್ಮಾಣದಲ್ಲಿ ಸಮಾಪ್ತಿಯಾಗುತ್ತದೆ.ಬುದ್ಧಿಯು ಸಂಪತ್ತಿನ ಸಂಗ್ರಹದಲ್ಲೇ ನಾಶವಾಗುತ್ತದೆ.ದಾನ-ಧರ್ಮಗಳಿಗೆ ಸಂಪತ್ತನ್ನು ಕೊಡದೇ ಮನುಷ್ಯರು ಆತ್ಮಭೋಗಕ್ಕಾಗಿ ಸಂಪತ್ತನ್ನು ವ್ಯಯಿಸುತ್ತಾರೆ.ಸ್ತ್ರೀಯರು ಅತಿಯಾದ ಸ್ವೇಚ್ಛೆಯನ್ನು ಬಯಸುತ್ತಾರೆ,ಸದಾ ಸುಖಲಾಲಸೆಯುಳ್ಳವರಾಗುತ್ತಾರೆ.ಪುರುಷರಿಗೆ ಅನ್ಯಾಯದ ಧನಸಂಪಾದನೆಯಲ್ಲೇ ಅಮಿತವಾದ ಆಸಕ್ತಿಯಿರುತ್ತದೆ.

ಕಲಿಯುಗದಲ್ಲಿ ಮಿತ್ರರು ಬೇಡಿಕೊಂಡರೂ ಅವರ ಸಹಾಯಕ್ಕಾಗಿ ಬಿಡಿಕಾಸನ್ನೂ ಜನರು ನೀಡಲಾರರು.”ಮನುಷ್ಯರಾದ ನಾವೆಲ್ಲರೂ ಸಮಾನರು” ಎಂಬ ಬುದ್ಧಿ ಹುಟ್ಟಿ ನಿಜವಾದ ವಿಪ್ರರಿಗೆ,ಶಾಸ್ತ್ರಜ್ಞಾನಿಗಳಿಗೆ ಗೌರವ ಸಿಗುವುದಿಲ್ಲ.ಹಾಲುಕೊಡುವ ನಿಮಿತ್ತದಿಂದಷ್ಟೇ ಗೋವುಗಳನ್ನು ಪ್ರೀತಿಯಿಂದ ಕಾಣಲಾಗುತ್ತದೆ.ಕಲಿಯುಗದಲ್ಲಿ ಸದಾ ಅನಾವೃಷ್ಟಿಯ ಭಯವಿರುತ್ತದೆ.ಧಾನ್ಯಗಳ ಅಭಾವವುಂಟಾಗಿ ಹಸಿವಿನಿಂದ ಕಂಗೆಟ್ಟ ಪ್ರಜೆಗಳು ಮಳೆಗಾಗಿ ಆಕಾಶವನ್ನೇ ದಿಟ್ಟಿಸುತ್ತಿರುತ್ತಾರೆ.ಅನಾವೃಷ್ಟಿ,ಅತಿವೃಷ್ಟಿಗಳ ಬಾಧೆಯನ್ನು ತಡೆಯಲಾರದೇ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.ಕಲಿಯುಗದಲ್ಲಿ ದುರ್ಭಿಕ್ಷ (ಬರಗಾಲ) ಕಾಡುತ್ತದೆ.ಜನರು ಕ್ಲೇಶದಲ್ಲಿ ತೊಳಲುತ್ತಾರೆ.ನಿಜವಾದ ಸೌಖ್ಯ,ಆನಂದ ಸಿಗದೇ ಪರಿತಪಿಸುತ್ತಾರೆ.

ಕಲಿಯುಗದಲ್ಲಿ ಜನರು ಸ್ನಾನ ಮಾಡದೇ ಊಟಮಾಡುತ್ತಾರೆ.ಪಿತೃಗಳಿಗೆ ಪಿಂಡೋದಕ ಕ್ರಿಯೆಗಳನ್ನು ನಿಲ್ಲಿಸುತ್ತಾರೆ.ಸ್ತ್ರೀಯರು ಕಂಡಕಂಡ ಆಹಾರವನ್ನು ವಿಫುಲವಾಗಿ ಸೇವಿಸುತ್ತಾರೆ.ಗುರುಹಿರಿಯರ,ಪತಿಯ ಮಾತನ್ನು ಅನಾದರದಿಂದ ಕಾಣುತ್ತಾರೆ.ತಮ್ಮ ಪೋಷಣೆಯಲ್ಲಿ ನಿರತರೂ,ಶಾರೀರಿಕ,ಮಾನಸಿಕ ಶೌಚದಿಂದ ವರ್ಜಿತರೂ,ಕ್ಷುದ್ರಸ್ವಭಾವದವರೂ ಆಗುತ್ತಾರೆ.ಕಲಿಯುಗದಲ್ಲಿ ಸ್ತ್ರೀಯರು ನಿಷ್ಟುರವಾಗಿ ಮಾತಾಡುವವರಾಗುತ್ತಾರೆ.ಅತಿಯಾದ ಸುಳ್ಳುಗಳನ್ನು ಹೇಳುತ್ತಾರೆ.ದುಶ್ಶೀಲರೂ,ದುರ್ಜನರನ್ನು ಬಯಸತಕ್ಕವರೂ,ಗಂಡಸರ ವಿಷಯದಲ್ಲಿ ಕೆಟ್ಟದಾಗಿ ನಡೆದುಕೊಳ್ಳುವವರಾಗುತ್ತಾರೆ.

ವಟುಗಳು ಸಂಧ್ಯಾವಂದನಾದಿ ಕಾರ್ಯಗಳನ್ನು ನಿಲ್ಲಿಸುತ್ತಾರೆ.ವೈದಿಕವ್ರತಗಳನ್ನಾಚರಿಸದೇ ವೇದಾಧ್ಯಯನ ಮಾಡುತ್ತಾರೆ.ಗೃಹಸ್ಥರು ವೈಶ್ವದೇವಾದಿಹವನಗಳನ್ನು ಮಾಡುವುದಿಲ್ಲ.ಸತ್ಪಾತ್ರರಿಗೆ ದಾನವನ್ನು ನೀಡುವುದಿಲ್ಲ.ಸನ್ಯಾಸಿಗಳು ತಮ್ಮ ಮಿತ್ರರು,ಬಂಧುಗಳು ಇತ್ಯಾದಿ ಸ್ನೇಹಸಂಬಂಧಕ್ಕೆ ಕಟ್ಟುಬೀಳುತ್ತಾರೆ.ಕಲಿಯುಗದಲ್ಲಿ ರಾಜ್ಯವನ್ನಾಳುವವರು ಸಮರ್ಥರಾಗಿರುವುದಿಲ್ಲ.ಪ್ರಜಾರಕ್ಷಕರಾಗದೇ ಭಕ್ಷಕರಾಗುತ್ತಾರೆ.ಕೇವಲ ಶುಲ್ಕವನ್ನು ವಿಧಿಸಿ ಧನವನ್ನು ಪ್ರಜೆಗಳಿಂದ ಕಿತ್ತುಕೊಳ್ಳುತ್ತಾರೆ.ಪ್ರಜೆಗಳ ಸಂಪತ್ತನ್ನು ಅಪಹರಿಸುವ ಯತ್ನದಲ್ಲೇ ನಿರತರಾಗಿರುತ್ತಾರೆ.ಸಂಪತ್ತಿರುವವನು ಅಧಿಕಾರ ಪಡೆಯುತ್ತಾನೆ.ದುರ್ಬಲನು ಕೇವಲ ಆತನ ಸೇವಕನಾಗುತ್ತಾನೆ.ವೈಶ್ಯರು ತಮ್ಮ ವೃತ್ತಿಯನ್ನು ಬಿಟ್ಟು ಶೂದ್ರವೃತ್ತಿಯನ್ನನುಸರಿಸುತ್ತಾರೆ.ಶೂದ್ರರು ಸಂನ್ಯಾಸಧರ್ಮವನ್ನವಲಂಬಿಸುತ್ತಾರೆ.ಅಧಮರು ಪ್ರವ್ರಾಜಕ ಚಿಹ್ನೆಯನ್ನು ಧರಿಸುತ್ತಾರೆ.ವರ್ಣಾಶ್ರಮ ವ್ಯವಸ್ಥೆ ನಶಿಸುತ್ತಾ ಹೋದಂತೇ ಸಮಾಜವೇ ಅಯೋಮಯವಾಗುತ್ತದೆ.ನೀಚರಿಗೆ ಬಿರುದು-ಸನ್ಮಾನಗಳು ಸಿಕ್ಕಿ ಅವರು ಪಾಖಂಡವಾದದಲ್ಲಿ (ನಾಸ್ತಿಕವಾದ) ನಿರತರಾಗುತ್ತಾರೆ.ಬರಗಾಲ,ತೆರಿಗೆಗಳಿಂದ ಪೀಡಿತರಾದ ಜನರು ಗೋಧಿ,ಅಕ್ಕಿ,ಜವೆಗೋಧಿ ಮೊದಲಾದ ಧಾನ್ಯಗಳಿಂದ ಸಂಪದ್ಭರಿತವಾದಂತಹ ದೇಶಗಳಿಗೆ ವಲಸೆ ಹೋಗುತ್ತಾರೆ.

ವೇದಮಾರ್ಗವು ಲುಪ್ತವಾಗಿ ಪಾಖಂಡತನವೇ ಹೆಚ್ಚಾಗಿ ಸರ್ವತ್ರ ಅಧರ್ಮವು ಅಧಿಕವಾಗುತ್ತದೆ.ಅದರ ಪರಿಣಾಮ ಜನರ ಆಯಸ್ಸು ಅಲ್ಪವಾಗುತ್ತದೆ.ಬಾಲ್ಯದಲ್ಲಿಯೇ ಸಾವು-ನೋವುಗಳು ಸಂಭವಿಸುತ್ತವೆ.ಹನ್ನೆರಡನೇ ವರ್ಷದಿಂದಲೇ ತಲೆಗೂದಲು ಬೆಳ್ಳಗಾಗಲು ಶುರುವಾಗುತ್ತದೆ.ಆಯಸ್ಸು ಅಲ್ಪವಾಗುತ್ತಾ ಹೋಗುತ್ತದೆ.ಕಲಿಯುಗದಲ್ಲಿ ಜನರ ಪ್ರಜ್ಞಾಶಕ್ತಿ ಮಂದವಾಗುತ್ತದೆ.ಜನರು ಅರ್ಥವಿಲ್ಲದ ಚಿಹ್ನೆಗಳನ್ನು ಶರೀರದಲ್ಲಿ ಧರಿಸುತ್ತಾರೆ.(ಬಹುಶಃ ಟ್ಯಾಟೂ ಆಗಿರಬಹುದು...!!!)ಜನರ ಅಂತಃಕರಣ ನಾಶವಾಗುತ್ತದೆ.
ಮೈತ್ರೇಯರೇ..ಹೇಗೆ ಧರ್ಮವು ನಶಿಸುತ್ತಾ ಹೋಗುವುದೋ ಆಗ ಕಲಿಯುಗ ವೃದ್ಧಿಯಾಗುತ್ತಿದೆಯೆಂದು ತಿಳಿಯಬೇಕು.ಹೇಗೆ ಪಾಖಂಡವಾದಿಗಳ ಸಂಖ್ಯೆ (ಬಹುಶಃ ವಿಚಾರವಾದಿಗಳು,ಪ್ರಗತಿಪರರು,ಬುದ್ಧಿಜೀವಿಗಳಿರಬೇಕು..!!) ಅಧಿಕವಾಗುತ್ತದೆಯೋ ಆಗ ಕಲಿಯ ಪ್ರಭಾವ ಹೆಚ್ಚುತ್ತಿದೆಯೆಂದು ಅನುಮಾನಿಸಬೇಕು.ವೇದಮಾರ್ಗವನ್ನು ಅನುಸರಿಸುವ ಸಜ್ಜನರು ಕ್ಷೀಣಿಸುತ್ತಾ ಹೋದಂತೇ ಕಲಿಯು ವೃದ್ಧಿಗೊಳ್ಳುತ್ತಿದ್ದಾನೆಂದು ಅರಿಯಬೇಕು.ಧರ್ಮಾತ್ಮರಾದಂತಹ ಜನರು ಪ್ರಾರಂಭಿಸಿದ ಸತ್ಕಾರ್ಯಗಳು ನಿಷ್ಫಲಗೊಳ್ಳುತ್ತಿದ್ದಂತೇ ಆಗ ಕಲಿಯು ಪ್ರಾಧಾನ್ಯವನ್ನು ಗಳಿಸುತ್ತಿದ್ದಾನೆಂದು ಚಿಂತಿಸಬೇಕು.ಯಜ್ಞಗಳಿಗೆ ಅಧೀಶ್ವರನಾದಂತಹ ವಿಷ್ಣುವನ್ನು ಜನರು ಯಜ್ಞಗಳಿಂದ ಯಾವಾಗ ಆರಾಧಿಸುವುದಿಲ್ಲವೋ ಆಗ ಕಲಿಯು ಬಲಿಷ್ಟನಾಗುತ್ತಿದ್ದಾನೆಂದು ಗ್ರಹಿಸಬೇಕು.ಯಾವಾಗ ವೇದವಾದಗಳಲ್ಲಿ ಅನಾಸಕ್ತಿ ಮೂಡಿ,ಪಾಖಂಡವಾದಗಳಲ್ಲಿ ಆಸಕ್ತಿ ಬೆಳೆಯುವುದೋ ಆಗ ಕಲಿಯುಗವು ಬೆಳೆಯುತ್ತಿದೆಯೆಂದು ವಿವೇಕಿಗಳು ಅರಿತುಕೊಳ್ಳಬೇಕು.

ಮೈತ್ರೇಯರೇ..ಪಾಖಂಡವಾದಕ್ಕೆ ವಶರಾದ ಜನರು ಕಲಿಯುಗದಲ್ಲಿ ಜಗದೀಶ್ವರನಾದ,ಸರ್ವನಿಯಾಮಕನಾದ ಮಹಾವಿಷ್ಣುವನ್ನು ಪೂಜಿಸುವುದಿಲ್ಲ.ದೇವರಿಗೆ,ವೇದಗಳಿಗೆ,ವೇದಜ್ಞಾನಿ ಬ್ರಾಹ್ಮಣರಿಗೆ ಮಹತ್ವವನ್ನು,ಗೌರವವನ್ನು ನೀಡುವುದಿಲ್ಲ.ಕಲಿಯುಗವು ವರ್ಧಿಸಿದಾಗ ಮೋಡವು ಅತ್ಯಲ್ಪವಾದ ಮಳೆಯನ್ನು ಸುರಿಸುತ್ತವೆ.ಸಸ್ಯಗಳಿಂದ ದೊರೆಯುವ ಫಸಲು ಅಲ್ಪವಾಗುತ್ತದೆ.ಫಸಲಿನಲ್ಲಿರುವ ಶಕ್ತಿಯೂ ಇಳಿಮುಖವಾಗುತ್ತದೆ.ವರ್ಣಗಳೆಲ್ಲ ವಿಶೇಷವಾಗಿ ಶೂದ್ರಮಯವಾಗಿರುತ್ತದೆ.ಮೇಕೆಯ ಹಾಲಿನ ಉಪಯೋಗ ಅಧಿಕವಾಗುತ್ತದೆ.ಅತ್ತೆಮಾವಂದಿರೇ ಪುರುಷರಿಗೆ ಗುರುಗಳಾಗುತ್ತಾರೆ..!!ಪುರುಷರು ಶ್ವಶುರನಿಗೆ ವಶರಾಗುತ್ತಾರೆ.ತಂದೆ-ತಾಯಿಯರನ್ನು ತಿರಸ್ಕರಿಸುತ್ತಾರೆ.ಬುದ್ಧಿಹೀನರಾದ ಜನರು ವಾಚಿಕ-ಮಾನಸಿಕ-ಶಾರೀರಿಕ ದೋಷಗಳಿಗೆ ವಶರಾಗಿ ಅನುದಿನವೂ ಪಾಪಕರ್ಮಗಳನ್ನಾಚರಿಸುತ್ತಾರೆ.ನಿಃಸತ್ವರೂ,ಶೌಚಹೀನರೂ,ನಿರ್ಲಜ್ಜರೂ ಆದ ಕಲಿಯುಗದ ಜನತೆಗೆ ಎಲ್ಲ ದುಃಖಗಳೂ ಬಂದೊದಗುತ್ತವೆ.ಲೋಕವು ವೇದಾಧ್ಯಯನರಹಿತವಾದರೂ,ಯಜ್ಞಾದಿಕರ್ಮಗಳು ವರ್ಜಿತವಾದರೂ,ಧರ್ಮವು ಕ್ಷೀಣವಾಗಿ ಎಲ್ಲೋ ಒಂದು ಕಡೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತದೆ.

ಆದರೆ ಕಲಿಯುಗಕ್ಕೆ ಒಂದು ವಿಶೇಷವಾದ ಗುಣವಿದೆ.ಕೃತಯುಗದಲ್ಲಿ ಮಹತ್ತರವಾದ ಪ್ರಯತ್ನದಿಂದ ಲಭಿಸುತ್ತಿದ್ದ ಪುಣ್ಯ,ಕಲಿಯುಗದಲ್ಲಿ ಅಲ್ಪಪ್ರಯತ್ನದಿಂದಲೇ ಲಭಿಸುತ್ತದೆ.ಇದೊಂದೇ ಕಲಿಯುಗದ ವಿಶೇಷಗುಣ.

ಸಹಸ್ರಾರು ವರ್ಷಗಳ ಹಿಂದೆಯೇ ಪರಾಶರಮುನಿಗಳು ನುಡಿದ ಭವಿಷ್ಯವಿಂದು ನಿಜವಾಗುತ್ತಿದೆ.ವೇದ-ಶಾಸ್ತ್ರ-ಪುರಾಣಗಳು ಸುಳ್ಳೆಂದು ವಾದಿಸಿ,ಅಜ್ಞಾನದ ಕತ್ತಲೆಯಲ್ಲೇ ಮುಳುಗಿರುವ ಕಲಿಯುಗದ ಪಾಖಂಡವಾದಿಗಳು ಕಣ್ತೆರೆದು ಇಂತಹ ವಿಷಯಗಳನ್ನು ಅಧ್ಯಯನ ಮಾಡಬೇಕಿದೆ.

“ಸರ್ವೇ ಭವಂತು ಸುಖಿನಃ”
About the Author

ಶ್ರಮದಿಂದ ಗಳಿಸಿದ್ದು ಸಂಸ್ಕೃತ ಸ್ನಾತಕೋತ್ತರ ಪದವಿ.
ಮಾಡುತ್ತಿರುವುದು ಸಂಸ್ಕೃತ ಹಾಗೂ ಸಂಸ್ಕೃತಿಯ ಪ್ರಸಾರದ ಕಾಯಕ.
ಮಹತ್ವ ನೀಡಿದ್ದು "ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ"ಎಂಬ ಮಾತಿಗೆ.
ಅಜ್ಞಾನದ ಅಂಧಕಾರ ದೂರವಾಗಿ ಜ್ಞಾನದೀಪ ಬೆಳಗುತ್ತಿರಲೆಂಬುದೇ ಆಶಯ.
ಬದುಕಿಗೆ ನಾಲ್ಕು ಒಳ್ಳೆಮಾತು.ಇಷ್ಟವಾದರೆ ಸ್ವೀಕರಿಸಿ. Email: pradeepkasage@gmail.com

ಸನಾತನ ಧರ್ಮದ ಆಚಾರ-ವಿಚಾರಗಳ ಚಿಂತನೆ , ಗೋಹತ್ಯೆಯ ವಿರೋಧ , ಸಂಸ್ಕೃತ ಭಾಷೆಯ ಸಂರಕ್ಷಣೆ , ಸ್ತ್ರೀ ಶಕ್ತಿ ಬಲವರ್ಧನೆ , ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳ ಅನಾವರಣ , ನಮ್ಮ ದೇಶ , ನಾಡು , ನುಡಿಯ ಬಗ್ಗೆ ಜಾಗೃತಿ.. ಭಾರತಮಾತೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸಲು ಜೊತೆಯಾಗೋಣ ಬನ್ನಿ...
Join hands with leading Social Awareness Portal and Reach large number of viewers! Sign up with us to advertise your brand/product. Contact us NOW!
ನಮ್ಮ ಈ ನಿಸ್ವಾರ್ಥ ಸೇವೆಗೆ ನಿಮ್ಮ ನೆರವನ್ನು ಬಯಸುತ್ತಿದ್ದೇವೆ. ಸಲಹೆ, ಸೂಚನೆ ಜಾಹೀರಾತುಗಳಿಗೆ ನಮ್ಮನ್ನು ಸಂಪರ್ಕಿಸಿ.
Email: wefightforrights@gmail.com
Mobile: +91 94 83 872488
ವಂದೇ ಮಾತರಂ..

ಗೋವಿನ ಮಹತ್ವ

ಗೋವಿನ ಮಹತ್ವ ಮತ್ತು ರಾಜೀವ್ ದೀಕ್ಷಿತರ ಕಾನೂನು ಹೋರಾಟ
ರಾಜೀವ್ ದೀಕ್ಷಿತರ ವ್ಯಾಖ್ಯಾನದ ಲೇಖನದ ರೂಪ

ಈ ಅವತರಣಿಕೆಯನ್ನು ಎಲ್ಲರೂ ಪೂರ್ತಿಯಾಗಿ ಓದಬೇಕೆಂದು ವಿನಂತಿ. ಇದು ನನಗೆ ನನ್ನ ಆತ್ಮೀಯರೊಬ್ಬರಿಂದ ಆಂಗ್ಲ ಭಾಷೆಯಲ್ಲಿ ಬಂದ ಅವತರಣಿಕೆ. ಅದು ಕನ್ನಡದಲ್ಲಿ ಇದ್ದರೆ, ಎಲ್ಲರಿಗೂ ಸುಲಭವಾಗಿ ತಿಳಿಯುವದೆಂಬ ಭಾವನೆಯಿಂದ ಇದನ್ನು ಅನುವಾದ ಮಾಡಿದ್ದೇನೆ. ಇದರಿಂದ ನಮ್ಮಲ್ಲಿ ಜಾಗ್ರತಿ ಆದರೆ, ನನ್ನ ಶ್ರಮ ಸಾರ್ಥಕ ಎಂದು ನನ್ನ ಭಾವನೆ. *ದಯವಿಟ್ಟು ಓದಿ, ನಿಮ್ಮ ಅಭಿಪ್ರಾಯ ತಿಳಿಸಿ. ನಿಮಗೆ ಒಪ್ಪಿಗೆ ಆದರೆ, ನಿಮ್ಮ ಮಿತ್ರ, ಬಂಧುಗಳಿಗೂ ಕಳಿಸಿರಿ*

ಇದು ನಾವೆಲ್ಲರೂ ಅವಶ್ಯವಾಗಿ ಓದಲೇಬೇಕಾದ ಅವತರಣಿಕೆ. ದಯವಿಟ್ಟು ಇದನ್ನು ಪೂರ್ತಿಯಾಗಿ ಓದಿ. ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೂ ಸಾಧ್ಯವಾದಷ್ಟು ಮುಂದುವರಿಕೆ ಮಾಡಿ. ವಾಸ್ತವ ಎಲ್ಲರಿಗೂ ತಿಳಿಯಲಿ. ಗೋಸುಂಬೆ ರಾಜಕಾರಣಿಗಳು ಮಾಡುವ ಅನ್ಯಾಯದ ಅರಿವು ಎಲ್ಲರಿಗೂ ಗೊತ್ತಾಗಲಿ. ನಮ್ಮ ದೇಶದ ಗೋಸಂಪತ್ತಿನ ರಕ್ಷಣೆಯಾಗಲಿ.

ನಾವು ಏಕೆ ಗೋಮಾಂಸ ಸೇವನೆಯನ್ನು ವಿರೋಧಿಸುತ್ತೇವೆ ಮತ್ತು ಆಕಳನ್ನು ಪ್ರೀತಿಸಿ, ಪೂಜಿಸುತ್ತೇವೆ ಎಂಬುದಕ್ಕೆ ಬಲವಾದ ಕಾರಣಗಳು.
=======================

ಪ್ರಪ್ರಥಮವಾಗಿ ನಾವು ಅರಿಯಲೇ ಬೇಕಾದ ಸಂಗತಿ ಎಂದರೆ, ಭಾರತದಲ್ಲಿ ಹಸುಗಳನ್ನು ವಧಿಸಲು ಅಧಿಕೃತವಾಗಿ ಅನುಮತಿ ಪಡೆದ ಸರಿಸುಮಾರು ೩,೬೦೦ ವಧಾಗೃಹಗಳಿವೆ. ಇದರ ಹೊರತಾಗಿ ಅಧಿಕೃತ ಅನುಮತಿಯೇ ಇಲ್ಲದಂಥ ೩೬,೦೦೦ಕ್ಕೂ ಮಿಕ್ಕಿದ ಸಂಖ್ಯೆಯ ಕಾನೂನುಬಾಹಿರ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿವೆ! ಹೆಚ್ಚೂಕಡಿಮೆ ಎರಡೂವರೆ ಕೋಟಿ ಹಸುಗಳು ಪ್ರತಿವರ್ಷ ಹತ್ಯೆಮಾಡಲ್ಪಡುತ್ತವೆ. ಇವುಗಳ ಹೊರತಾಗಿ, ಒಂದೂಕಾಲು ಕೋಟಿ ಎಮ್ಮೆ-ಕೋಣಗಳು, ಎರಡರಿಂದ ಮೂರು ಕೋಟಿ ಹಂದಿಗಳು, ಅಗಣಿತ ಸಂಖ್ಯೆಯ ಆಡುಗಳು, ಕುರಿ-ಕೋಳಿ ಇತ್ಯಾದಿಗಳಂತಹ ಚಿಕ್ಕ ಜೀವಿಗಳು ಕೊಲ್ಲಲ್ಪಡುವದರಿಂದ ನಮ್ಮ ದೇಶ ಭಾರತವು, ವಿಶ್ವದ ಕಸಾಯಿಕೇಂದ್ರಗಳ ರಾಜಧಾನಿ ಎನಿಸಲ್ಪಟ್ಟಿದೆ!

ಇದನ್ನು ಗಮನಿಸಿದ ಕೆಲವು ಸಮಾನಮನಸ್ಕ ಪ್ರಜೆಗಳು, ರಾಜೀವಭಾಯಿಯವರ ಮುಂದಾಳತ್ವದಲ್ಲಿ ೧೯೯೮ರಲ್ಲಿ, ಒಂದು ತಂಡವನ್ನು ರಚಿಸಿ, ವರಿಷ್ಠ ನ್ಯಾಯಾಲಯದಲ್ಲಿ ಒಂದು ಮೊಕದ್ದಮೆಯನ್ನು ದಾಖಲಿಸುತ್ತಾರೆ. ಇಲ್ಲಿ ಈ ಸಂಬಂಧ ಎರಡು ಸಂಸ್ಥೆಗಳಿವೆ. ಮೊದಲನೆಯದು ರಾಜೀವಭಾಯಿ ಅವರಿಗೆ ಸಂಬಂಧಿಸಿದ "ಅಖಿಲ ಭಾರತೀಯ ಗೋ ಸೇವಕ ಸಂಘ" (ಇದು ರಾಜೀವಭಾಯಿ ಅವರ ಹುಟ್ಟೂರಾದ ವರ್ಧಾದಲ್ಲಿ ಮುಖ್ಯ ಕಚೇರಿಯನ್ನು ಹೊಂದಿದೆ) ಮತ್ತು ಇನ್ನೊಂದು, "ಅಹಿಂಸಾ ಆರ್ಮಿ ಥ್ರಸ್ಟ್". ಇವೆರಡೂ ಸೇರಿ, ಜಂಟಿಯಾಗಿ ಮೊಕದ್ದಮೆಯನ್ನು ದಾಖಲಿಸುತ್ತಾರೆ. ಅಂತಿಮ ಹಂತದಲ್ಲಿ, ಗುಜರಾತ್ ಸರಕಾರವೂ ಇವರೊಂದಿಗೆ ಕೈಜೋಡಿಸಿ, ಕೂಡಿಕೊಳ್ಳುತ್ತದೆ.

ಹಸು-ದನಕರುಗಳ ಹತ್ಯೆ ಮಾಡುವುದನ್ನು ಪ್ರತಿಬಂಧಿಸಬೇಕು ಎಂದು ಮೊಕದ್ದಮೆಯನ್ನು ದಾಖಲು ಮಾಡಲಾಯಿತು. ಪ್ರತಿವಾದಿಗಳಾಗಿ ಕಟುಕರ ಗುಂಪು ನಿಂತು, ಯಾಕೆ ಜಾನುವಾರುಗಳನ್ನು ಹತ್ಯೆ ಮಾಡಬಾರದು? ಎಂಬ ಸವಾಲನ್ನು ಹಾಕಿತು.

ರಾಜೀವಭಾಯಿಯವರು, ಇದೊಂದು ಅತ್ಯಂತ ಗಂಭೀರವಾದ ವಿಷಯವಾಗಿದ್ದುದರಿಂದ, ಕೇವಲ ಎರಡು ನ್ಯಾಯಾಧೀಶರನ್ನು ಒಳಗೊಂಡ ಪೀಠಕ್ಕೆ ಬದಲಾಗಿ ಹೆಚ್ಚಿನ ಸದಸ್ಯರನ್ನು ಒಳಗೊಂಡ ನ್ಯಾಯಪೀಠವನ್ನು ಸ್ಥಾಪಿಸಲು ವಿನಂತಿಸಿದರು. ಕೊನೆಗೂ ಘನ ನ್ಯಾಯಾಲಯವು ಈ ಬೇಡಿಕೆಗೆ ಸಮ್ಮತಿಸಿ, ಸರಿಸುಮಾರು ೩-೪ ವರ್ಷಗಳ ನಂತರ ಒಂದು ಸಾಂವಿಧಾನಿಕ ನ್ಯಾಯಪೀಠದ ರಚನೆ ಮಾಡಿತು. ಮಾನ್ಯ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ಆರ್.ಸಿ.ಲಾಹೋಟಿಯವರ ಘನ ಅಧ್ಯಕ್ಷತೆಯಲ್ಲಿ, ಏಳು ಜನ ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ನ್ಯಾಯಪೀಠವನ್ನು ರಚಿಸಲಾಯಿತು. ವಿಚಾರಣೆಗಳು ೨೦೦೪ರಿಂದ ಸೆಪ್ಟೆಂಬರ್ ೨೦೦೫ರ ವರೆಗೆ ನಡೆದವು.

ಕಟುಕರ ತಂಡವು ತಮ್ಮ ಪರವಾಗಿ ವಾದಿಸಲು, ಅತ್ಯಂತ ವರ್ಚಸ್ವಿ ನ್ಯಾಯವಾದಿಗಳನ್ನು ೫೦ ಲಕ್ಷ ರೂ. ಗಳಿಗೂ ಹೆಚ್ಚಿನ ಸಂಭಾವನೆ ನೀಡಿ ನೇಮಿಸಿಕೊಂಡಿತು. ಅವರಲ್ಲಿ ಕೆಲವು ಪ್ರಸಿದ್ಧರ ವಿವರ ಇಂತಿದೆ. ಸೋಲಿ ಸೊರಾಬ್ಜಿ ರೂ. ೨೦ ಲಕ್ಷ, ಕಪಿಲ್ ಸಿಬ್ಬಲ್ ರೂ. ೨೨ ಲಕ್ಷ, ರಾಮ್ ಜೇಠ್ಮಲಾನಿಯವರ ಮಹೇಶ್ ಜೇಠ್ಮಲಾನಿ ರೂ ೩೨ರಿಂದ ೩೫ ಲಕ್ಷ ಸಂಭಾವನೆ! ಇವರೆಲ್ಲರೂ ಕಟುಕರ ಪಕ್ಷ ವಹಿಸಿದ ಮಹಾನುಭಾವರು!

ರಾಜೀವಭಾಯಿಯವರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಧನಸಂಚಯವಿಲ್ಲದ ಕಾರಣ, ಅವರ ಪರವಾಗಿ ವಾದಿಸಲು ಒಬ್ಬ ವಕೀಲರನ್ನೂ ಸಹ ನೇಮಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವಿಷಯವನ್ನು ನ್ಯಾಯಾಲಯಕ್ಕೆ ಅರುಹಿದರು. ನಾವೇ ನಿಮಗೆ ಒಬ್ಬ ವಕೀಲರನ್ನು ಒದಗಿಸಿಕೊಡಬಹುದೇ ಎಂದು ನ್ಯಾಯಾಲಯವು ಕೇಳಿತು. ಅದು ನಿಜವಾಗಿಯೂ ಸಹಾಯಕಾರಿ ಆಗಬಹುದೆಂದು ರಾಜೀವಭಾಯಿ ಹೇಳಿದರಾದರೂ, ನಮ್ಮ ಸ್ವಂತ ಪ್ರಕರಣವನ್ನು ವಾದ ಮಾಡಲು, ನಮಗೇ ಅನುಮತಿ ನೀಡಿದರೆ, ಅದು ಖಂಡಿತ ಘನವಾದದ್ದಾಗುತ್ತದೆ ಎಂದು ವಿನಂತಿಸಿದರು. ನ್ಯಾಯಾಲಯವು ಇದಕ್ಕೆ ಅನುಮತಿ ನೀಡಿತು ಮತ್ತು ಎಮ್.ಇ.ಎಸ್ಕೂರಿಯನ್ನು ನೇಮಿಸಿದ ನಂತರ ಅವರು ತಮ್ಮ ಪ್ರಕರಣವನ್ನು ಆರಂಭಿಸಿದರು.

ಮೆಕಾಲೆಯ ಶಿಕ್ಷಣ ಪದ್ಧತಿಯಿಂದ ಪ್ರೇರಿತರಾದ ಶ್ರೀ ಶರದ್ ಪವಾರ್ ನೆಹರು ಅಥವಾ ಅವರಂತೆಯೇ ಇದ್ದ ಅನೇಕ ಜನರು ಬಹಳ ದಿನಗಳಿಂದ ಹೇಳುತ್ತಲೇ ಬಂದ ವಾದದಂತೆಯೇ, ಕಟುಕರೂ ಸಹ ತಮ್ಮಯ ವಾದವನ್ನು ಮಂಡಿಸಿದರು. ಕಟುಕರಿಂದ ಮಂಡನೆ ಮಾಡಲ್ಪಟ್ಟ ಕುತರ್ಕಗಳು ಹೀಗಿದ್ದವು.

ಕುತರ್ಕ ೧.
ಮುದಿ ಹಸುವನ್ನು ಉಳಿಸುವದರಿಂದ ಯಾವುದೇ ಪ್ರಯೋಜನವಿಲ್ಲ. ನಾವು ಗೋವಿನ ಮಾಂಸವನ್ನು ರಫ್ತು ಮಾಡಿ ದೇಶದ ಅರ್ಥವ್ಯವಸ್ಥೆಯನ್ನು ಬಲಪಡಿಸುತ್ತೇವೆ.

ಕುತರ್ಕ ೨.
ಇಲ್ಲಿ, ಭಾರತದಲ್ಲಿ, ಜಾನುವಾರು ಹಾಗೂ ಹಸುಗಳಿಗೆ, ಮೇವಿನ ಕೊರತೆಯಿದೆ. ಆದುದರಿಂದ, ಅವುಗಳು ಹಸಿವಿನಿಂದ ಸಾಯುವ ಬದಲು ಅವುಗಳನ್ನು ವಧಿಸುವುದೇ ಒಳ್ಳೆಯದು.

ಕುತರ್ಕ ೩.
ಭಾರತದಲ್ಲಿ ಜನರಿಗೇನೇ ವಾಸಿಸಲು ಸ್ಥಳವಿಲ್ಲದಾಗ ಜಾನುವಾರುಗಳನ್ನು ಎಲ್ಲಿ ಮೇಯಿಸುತ್ತೀರಿ?

ಕುತರ್ಕ ೪.
ಇದರ ರಫ್ತಿನಿಂದ ನಾವು ಅತ್ಯಂತ ಅಮೂಲ್ಯವಾದ ವಿದೇಶೀ ವಿನಿಮಯವನ್ನು ಗಳಿಸುತ್ತೇವೆ.

ಮತ್ತು, ಕಟುಕರಿಂದ ಮಂಡಿಸಲಾದ ವಾದಗಳಲ್ಲಿ ಅತ್ಯಂತ ಅಪಾಯಕಾರಿ ಆದುದೆಂದರೆ, .....
ಕುತರ್ಕ ೫.
ಗೋಹತ್ಯೆ ಮಾಡುವುದು ಅವರ ಧಾರ್ಮಿಕ ಹಕ್ಕು!

ಇಂತಹ ವಾದಗಳನ್ನು ಮಂಡಿಸಿದ ಕಟುಕರು ಯಾರೆಂಬುದು ನಿಮಗೆ ಗೊತ್ತೇ? ಮುಸ್ಲಿಂ ಸಮುದಾಯದ ಎಲ್ಲ ಮುಸ್ಲಿಮರಿಗಿಂತ ಹೆಚ್ಚಿನದಾಗಿ ಕೊಲ್ಲುವ ಕಾರ್ಯ ಮಾಡುವ "ಖುರೇಶಿ" ಎಂಬ ಉಪ-ಪಂಗಡವಿದೆ. ಅವರೇ ಇಂತಹ ಕುತರ್ಕದ ವಾದಗಳನ್ನು ಮಂಡಿಸಿದವರು!

ಈ ಮೇಲೆ ಮಂಡಿಸಿದ ಎಲ್ಲಾ ವಾದಗಳಿಗೆ, ಪ್ರತಿಯಾಗಿ ರಾಜೀವಭಾಯಿಯವರು ವಾಸ್ತವವನ್ನು ಹಾಗೂ ಅಂಕಿ-ಸಂಖ್ಯೆಗಳನ್ನು, ಯಾವುದೇ ರೀತಿಯ ಕೋಪವನ್ನು ಪ್ರದರ್ಶಿಸದೇ, ಅತ್ಯಂತ ಸಂಯಮಪೂರಿತವಾಗಿ ಮಂಡಿಸಿದರು.

ಕಟುಕರ ಮೊದಲ ಕುತರ್ಕಕ್ಕೆ ಉತ್ತರವಾಗಿ, ತಮ್ಮ ಸಾಕ್ಷ್ಯಾಧಾರಗಳನ್ನು ಈ ರೀತಿ ಒದಗಿಸಿದರು. ಒಂದು ಆಕಳನ್ನು ವಧಿಸಿದಾಗ, ದೇಶಕ್ಕೆ ಹಣ ಸಿಗುತ್ತದೆ ಹಾಗೂ ಮಾಂಸದ ರಫ್ತಿನಿಂದ ಅಮೂಲ್ಯವಾದ ವಿದೇಶಿವಿನಿಮಯ ಲಭ್ಯವಾಗುತ್ತದೆ. ಅವರು ಈ ವಿಷಯದಲ್ಲಿ ವಾಸ್ತವಿಕತೆಯ ಹಾಗೂ ಅಂಕಿ-ಸಂಖ್ಯೆಗಳ ವಿವರಗಳನ್ನು ನೀಡಲು ಪ್ರಾರಂಭ ಮಾಡಿದರು. ಒಂದು ಹಸುವನ್ನು ಹತ್ಯೆ ಮಾಡಿದಾಗ, ಸಂಗ್ರಹವಾಗುವ ಮಾಂಸ, ರಕ್ತ ಹಾಗೂ ಎಲುವುಗಳ ವಿವರ ಹೀಗಿದೆ.

ಒಂದು ಆರೋಗ್ಯವಂತ ಹಸುವು ೩-೩.೫ ಕ್ವಿಂಟಲ್ ಭಾರವಿರುತ್ತದೆ. ಮತ್ತು, ಅದನ್ನು ಹತ್ಯೆ ಮಾಡಿದಾಗ, ಅಂದಾಜು ೭೦ ಕಿಲೋ ಮಾಂಸ ಸಿಗುತ್ತದೆ. ಒಂದು ಕಿಲೋಗೆ ರೂ.೫೦ರ ದರದಲ್ಲಿ ರಫ್ತು ಮಾಡಲಾಗುವದರಿಂದ ೭೦×೫೦ರಂತೆ ರೂ.೩,೫೦೦ಗಳು ಸಿಗುತ್ತವೆ. ಅಂದಾಜು ೨೫ಲೀಟರ್ ರಕ್ತವನ್ನು ಅದೇ ಆರೋಗ್ಯವಂತ ಹಸುವಿನಿಂದ ತೆಗೆಯಲಾಗುತ್ತದೆ. ಅದರಿಂದ ಸಿಗುವ ೩೦-೩೫ ಕಿಲೋ ಎಲುವುಗಳನ್ನು ರೂ.೧,೦೦೦ದಿಂದ ೧,೨೦೦ಗಳಿಗೆ ಮಾರಲಾಗುತ್ತದೆ. ಈ ಪ್ರಕಾರ, ಒಂದು ಆಕಳನ್ನು ವಧಿಸಿ, ಅದರ ಅಂಗಾಂಗಗಳನ್ನು ಮಾರಾಟ ಮಾಡಿದಾಗ, ರೂ.೭,೦೦೦ಕ್ಕಿಂತ ಹೆಚ್ಚಿನ ಆದಾಯ ಸಿಗುವುದು ಅಸಾಧ್ಯ.

ಆನಂತರದಲ್ಲಿ, ರಾಜೀವಭಾಯಿ ಅದರ ತದ್ವಿರುದ್ಧವಾದ ವಾದವನ್ನು ಮಂಡಿಸಿದರು. ಒಂದು ಹಸುವನ್ನು ಹತ್ಯೆ ಮಾಡದಿದ್ದಲ್ಲಿ ಏನಾಗುತ್ತದೆ? ಅದನ್ನು ಪಾಲನೆ ಮಾಡಿದರೆ, ನಂತರದಲ್ಲಿ ಅದರಿಂದ ಎಷ್ಟು ಗಳಿಕೆ ಮಾಡಬಹುದು? ಅದರ ಲೆಕ್ಕಾಚಾರವು ಈ ಕೆಳಗಿನಂತಿದೆ.

ಒಂದು ಆರೋಗ್ಯವಂತ ಹಸುವು, ಅಂದಾಜು ೧೦ ಕಿಲೋ ಗೊಬ್ಬರ ಅಂದರೆ ಸೆಗಣಿ, ಮತ್ತು ೩ ಲೀಟರ್ ಗೋಮೂತ್ರವನ್ನು ನೀಡುತ್ತದೆ. ಒಂದು ಕಿಲೋ ಸೆಗಣಿಯಿಂದ ಅಂದಾಜು ೩೩ ಕಿಲೋ ಗೊಬ್ಬರದ ಉತ್ಪತ್ತಿಯಾಗುತ್ತದೆ. ಅದು "ಸಾವಯವ ಗೊಬ್ಬರ" ಎಂದು ಪ್ರಸಿದ್ಧ ವಾಗಿದೆ. ಇದು ಹೇಗೆ ಸಾಧ್ಯವಾಗುತ್ತದೆ? ಎಂದು ನ್ಯಾಯಮೂರ್ತಿಗಳು ಕೇಳುತ್ತಾರೆ. ಈ ವಿಷಯವನ್ನು ಸಿದ್ಧಮಾಡಿ ತೋರಿಸಲು, ರಾಜೀವಭಾಯಿ ಸ್ವಲ್ಪ ಸಮಯಾವಕಾಶ ಹಾಗೂ ಸ್ಥಳವನ್ನುನೀಡಲು ವಿನಂತಿಸುತ್ತಾರೆ. ನ್ಯಾಯಾಲಯವು ಅನುಮತಿ ನೀಡಿದ ನಂತರ ರಾಜೀವಭಾಯಿ ಪ್ರತ್ಯಕ್ಷವಾಗಿ ಒಂದು ಕಿಲೋ ಗೊಬ್ಬರ ಅಥವಾ ಸೆಗಣಿಯಿಂದ, ೩೩ ಕಿಲೋ ಸಾವಯುವ ಗೊಬ್ಬರ ಉತ್ಪಾದಿಸಿ ತೋರಿಸಿದರು. ಅವರು ಐ.ಆರ್.ಸಿ. ವಿಜ್ಞಾನಿಗಳನ್ನು ಕರೆಯಿಸಿ, ಗೊಬ್ಬರವನ್ನು ಪರೀಕ್ಷೆ ಮಾಡಲು ನ್ಯಾಯಾಲಯಕ್ಕೆ ವಿನಂತಿ ಮಾಡುತ್ತಾರೆ. ಪರೀಕ್ಷೆಯ ನಂತರ, ಕೃಷಿಯೋಗ್ಯ ಜಮೀನಿಗೆ ಅಗತ್ಯವಿದ್ದ ಮ್ಯಾಂಗನೀಸ್, ಫಾಸ್ಫೇಟ್, ಕಬ್ಬಿಣ, ಕ್ಯಾಲ್ಷಿಯಂ, ಪೊಟ್ಯಾಸಿಯಂ, ಸಿಲಿಕಾನ್‌, ಕೋಬಾಲ್ಟ್ ಇತ್ಯಾದಿ ೧೮ ಪೋಷಕಾಂಶಗಳು, ಆ ತಿಪ್ಪೆಯ ಗೊಬ್ಬರದಲ್ಲಿ ಸಮ್ಮಿಳಿತವಾಗಿವೆ ಎಂದು ಸಿದ್ಧವಾಯಿತು. ಕೃತಕ ಗೊಬ್ಬರಗಳಲ್ಲಿ ಕ್ವಚಿತ್ತಾಗಿಯೂ ಸಹ ಮೂರಕ್ಕಿಂತ ಹೆಚ್ಚಿನ ಪೋಷಕಾಂಶಗಳು ಲಭ್ಯವಿರುವದಿಲ್ಲ. ಆದ್ದರಿಂದ, ಹಸುವಿನ ಸೆಗಣಿಯಿಂದ ಮಾಡಿದ ತಿಪ್ಪೆಗೊಬ್ಬರವು, ಕೃತ್ರಿಮ ಗೊಬ್ಬರಕ್ಕಿಂತ ಹತ್ತು ಪಟ್ಟು ಉತ್ತಮ ಎಂಬ ವಾದವನ್ನು ನ್ಯಾಯಾಲಯವು ಅನುಮೋದಿಸುತ್ತದೆ.

ನಂತರ, ರಾಜೀವಭಾಯಿಯವರು, ಅವರದೇ ಹಳ್ಳಿಯಲ್ಲಿ, ಒಂದು ಕಿಲೋ ಸೆಗಣಿಯಿಂದ ೩೩ ಕಿಲೋ ಸಾವಯವ ಗೊಬ್ಬರವನ್ನು ಉತ್ಪಾದಿಸುವ ವಿಧಾನವನ್ನು ಪ್ರತ್ಯಕ್ಷವಾಗಿ ವೀಕ್ಷಿಸಲು, ನ್ಯಾಯಾಲಯದ ಶಿಷ್ಟಾಚಾರವು ಅಡ್ಡಬಾರದಿದ್ದರೆ, ನ್ಯಾಯಾಧೀಶರು ಸ್ವತಃ ಬರಬಹುದೆಂದು ವಿನಂತಿಸಿದರು. ಕಳೆದ ೧೫ ವರ್ಷಗಳಿಂದ ಅವರ ಪಾಲಕರು ಈ ವಿಧಾನದ ಪ್ರಕಾರ ಯಶಸ್ವಿ ಕಾರ್ಯ ಮಾಡುತ್ತಿದ್ದಾರೆ.

ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ, ೧ ಕಿಲೋ ಸಾವಯವ ಗೊಬ್ಬರವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು ಆರು ರೂಪಾಯಿಗಳಿಗೆ ಮಾರಾಟ ಆಗುತ್ತಿದೆ. ಆದ್ದರಿಂದ, ೧೦ ಕಿಲೋ ಹಸುವಿನ ಸೆಗಣಿಯು ಪ್ರತಿದಿನವೂ ರೂ.೧,೮೦೦/- ಗಳಿಂದ೨,೦೦೦ಗಳ ವರೆಗೆ ಆದಾಯ ತರುತ್ತದೆ. ೧೦ಕಿಲೋ ಸೆಗಣಿಯಿಂದ ೩೩೦ ಕಿಲೋ ಗೊಬ್ಬರ, ಪ್ರತಿ ಕಿಲೋಗೆ ರೂ.೬/- ದರದಂತೆ, ಹಾಗೂ ಆಕಳ ಸೆಗಣಿಯ ಲಭ್ಯತೆಗೆ, ರವಿವಾರ ಅಥವಾ ವಾರದ ಬಿಡುವು ಎಂಬುವುದೂ ಇಲ್ಲ! ಆದುದರಿಂದ, ವರ್ಷದ ೩೬೫ ದಿನಗಳೂ ಸಹ, ನಾವು ಸೆಗಣಿಯಿಂದ ಈ ಪ್ರಕಾರ ಗಳಿಸಬಹುದು.
೧೮೦೦×೩೬೫=ರೂ.೬,೫೭,೦೦೦.

ಒಂದು ಆಕಳಿನ ಜೀವಿತಾವಧಿಯು ಸರಾಸರಿ ೨೦ ವರ್ಷಗಳು, ಮತ್ತು ಅದು ತನ್ನ ಅಂತಿಮ ದಿನಗಳವರೆಗೆ ಸೆಗಣಿಯನ್ನು ಕೊಡುತ್ತಲೇ ಇರುತ್ತದೆ. ಆಕಳಿನ ಸೆಗಣಿಯಿಂದ ಸಿಗುವ ಆದಾಯವು ಕಲ್ಪನಾತೀತ ಆಗಿರುವದಿಲ್ಲ. ಅದು ದಶಲಕ್ಷದ ಸೀಮೆಯನ್ನು ದಾಟಿರುತ್ತದೆ.
೧,೮೦೦×೩೬೫×೨೦= ರೂ.೧,೩೧,೪೦,೦೦೦/-.

ನಮ್ಮ ಪವಿತ್ರ ಗ್ರಂಥಗಳಲ್ಲಿ ತಿಳಿಸಿರುವಂತೆ, ಆಕಳ ಸೆಗಣಿಯಲ್ಲಿ, ಶ್ರೀಲಕ್ಷ್ಮೀದೇವಿಯು ಇರುತ್ತಾಳೆ ಎಂಬ ಉಲ್ಲೇಖವನ್ನು ಸಹಸ್ರಾರು ಸಂವತ್ಸರಗಳಿಂದ ನಂಬಲಾಗಿದೆ. ಇಂದಿನ ದಿನಗಳಲ್ಲೂ ಇದು ಎಷ್ಟು ನಿಜವಾಗಿದೆ ಅಲ್ಲವೇ?

ಈ ವಾದವು, ನಮ್ಮ ಧರ್ಮ, ಸಂಸ್ಕೃತಿ ಮತ್ತು ಆಚಾರ-ವಿಚಾರ ಇತ್ಯಾದಿಗಳನ್ನು ಕೇವಲ ಬೂಟಾಟಿಕೆ ಎಂದು ಜರಿಯುವ, ಆಕಳ ಸೆಗಣಿಯಲ್ಲಿ ಲಕ್ಷ್ಮೀದೇವಿ ಇರುವಳು ಎಂಬ ನಂಬಿಕೆಗೆ, ನಕ್ಕು ಪರಿಹಾಸ್ಯ ಮಾಡುವ, ಮೆಕಾಲೆಯ ನೀತಿಯ ಶಿಕ್ಷಣ ಪದ್ಧತಿಯನ್ನು ಅನುಸರಿಸಿ ಕಲಿತ ಉನ್ನತ ಪೀಳಿಗೆಯ ಪೃಭೃತಿಗಳಿಗೆ ಮುಖದಮೇಲೆ ತಪರಾಕಿ ಭಾರಿಸಿದಂತೆ ಇತ್ತು!

ಈಗ, ಗೋಮೂತ್ರದ ಕುರಿತಾಗಿ ಮಾತನಾಡೋಣ.
ಒಂದು ಆಕಳು, ದಿನಂಪ್ರತಿ ೨ರಿಂದ ೨.೨೫ ಲೀಟರುಗಳಷ್ಟು ಮೂತ್ರವನ್ನು ಕೊಡುತ್ತದೆ. ಗೋವಿನ ಮೂತ್ರವು, ಸಕ್ಕರೆ ಖಾಯಿಲೆ, ಸಂಧಿವಾತ, ಗಂಟಲು ಬಾಧೆ, ಶ್ವಾಸನಾಳದ ಉಬ್ಬಸ, ಕ್ಷಯರೋಗ, ಅಸ್ಥಿರೋಗಗಳು ಇತ್ಯಾದಿಯಾಗಿ ಮತ್ತು ಅನೇಕ ಇತರೇ ೪೮ ರೋಗಗಳಿಗೂ ಔಷಧ ತಯಾರಿಸಲು, ಅತ್ಯುಪಯುಕ್ತ ಆಗಿರುತ್ತದೆ. ಮಾರುಕಟ್ಟೆಯಲ್ಲಿ ಗೋಮೂತ್ರವು, ಲೀಟರ್ ಒಂದಕ್ಕೆ ರೂ.೫೦೦ಕ್ಕೆ ಮಾರಾಟವಾಗುತ್ತಿದೆ, ಮತ್ತು ಭಾರತದಲ್ಲಿಯೂ ಸಹ ಇದೇ ಮೌಲ್ಯವಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಲೀಟರ್ ಗೋಮೂತ್ರವು ಇನ್ನೂ ಹೆಚ್ಚಿನ ಬೆಲೆ ತರಬಲ್ಲುದು. ಗೋಮೂತ್ರವು ಅಮೇರಿಕಾದಲ್ಲಿ ಮಾರಾಟಸ್ವಾಮ್ಯ ಹೊಂದಿರುವ ಸಂಗತಿಯು ನಿಮಗೆ ತಿಳಿದಿರುವುದೇ? ಅಲ್ಲಿ ಅದಕ್ಕೆ ಕೇವಲ ಒಂದೇ ಅಲ್ಲ, ಮೂರು ಬೇರೆ ಬೇರೆ ಮಾರಾಟ ಸ್ವಾಮ್ಯಗಳಿವೆ, ಮತ್ತು ಅಮೇರಿಕಾದ ಸರಕಾರವು ಗೋಮೂತ್ರವನ್ನು, ಕ್ಯಾನ್ಸರ್, ಸಕ್ಕರೆ ಖಾಯಿಲೆ ಇತ್ಯಾದಿಗಳಿಗೆ ಔಷಧಿಯನ್ನು ತಯಾರಿಸವ ಸಲುವಾಗಿ, ಪ್ರತಿವರ್ಷವೂ ಆಮದು ಮಾಡಿಕೊಳ್ಳುತ್ತಿದೆ. ಅಂದಿನ ಅಮೇರಿಕಾದ ಮಾರುಕಟ್ಟೆಯಲ್ಲಿನ ದರದ ಪ್ರಕಾರ ಲೆಕ್ಕ ಹಾಕಿದರೆ, ಒಂದು ಲೀಟರಿಗೆ ರೂ.೧,೨೦೦ರಿಂದ ೧,೩೦೦ರ ತನಕ ಬೆಲೆಬಾಳುತ್ತದೆ. ಕೇವಲ ಆಕಳ ಮೂತ್ರದಿಂದ ನಾವು ಪ್ರತಿದಿನ ರೂ.೩,೦೦೦/- ಗಳಿಸಲು ಸಾಧ್ಯವೆಂದು ಇದರ ಅರ್ಥ.ಆದುದರಿಂದ, ಒಂದು ವರ್ಷದಲ್ಲಿ, ನಾವು ಕೇವಲ ಗೋಮೂತ್ರ ಮಾರಾಟದಿಂದ ಅತಿರಿಕ್ತವಾಗಿ ದಶಲಕ್ಷಗಳಷ್ಟು ಗಳಿಸಬಹುದು. ಅಂದರೆ, ೨೦ ವರ್ಷಗಳಲ್ಲಿ, ಹೀಗೆ ಲೆಕ್ಕ ಹಾಕಬೇಕು
೩೦೦೦×೩೬೫×೨೦=
ರೂ.೨,೧೯,೦೦,೦೦೦/-

ಅದೇ ಆಕಳಿನ ಸೆಗಣಿಯಿಂದ ಮೀಥೇನ್ ಅನಿಲವನ್ನೂ ಉತ್ಪಾದಿಸಿ ಅದನ್ನು ಅಡಿಗೆಮನೆಯಲ್ಲಿ ಬಳಸುವ ಎಲ್.ಪಿ.ಜಿ. ಅನಿಲಕ್ಕೆ ಪರ್ಯಾಯ ಆಗಿ ಬಳಸಬಹುದು ಮತ್ತು ಅದರಿಂದ ವಾಹನವನ್ನೂ ಸಹ ಚಲಾಯಿಸಬಹುದು. ಹೌದು, ನಾಲ್ಕು ಚಕ್ರಗಳ ವಾಹನವನ್ನೂ ಸಹ! ಒಂದು ವಾಹನವು ಎಲ್.ಪಿ.ಜಿ. ಅನಿಲದಿಂದ ಚಲಿಸಬಲ್ಲದಾದರೆ, ಅದೇ ವಾಹನ, ಮೀಥೇನ್ ಅನಿಲದ ಮೂಲಕವೂ ಚಲಿಸಲು ಸಾಧ್ಯ.

‌ನ್ಯಾಯಾಧೀಶರಿಗೆ ಇದು ನಂಬಲು ಅಸಾಧ್ಯವೆನಿಸಿತು. ಈ ರೀತಿಯಾಗಿ, ತಾವು ನಮಗೆ ಅವಕಾಶ ನೀಡಿದರೆ, ತಮ್ಮಯ ಕಾರಿಗೆ ಮೀಥೇನ್ ಅನಿಲದ ಜಾಡಿಯನ್ನು ಹೊಂದಿಸಿ ಕೊಡುತ್ತೇವೆ. ತಾವೇ ಸ್ವತಃ ವಾಹನ ನಡೆಸಿ ಪರೀಕ್ಷೆ ಮಾಡಬಹುದು. ನ್ಯಾಯಾಧೀಶರು ಅನುಮತಿ ನೀಡಿದರು. ಅದನ್ನು ನ್ಯಾಯಮೂರ್ತಿಗಳು ಪೂರ್ತಿ ಮೂರು ತಿಂಗಳವರೆಗೆ ಬಳಸಿದರು!! ಡೀಸೆಲ್ ಬಳಕೆ ಮಾಡಿದರೆ ತಗಲುವ ವೆಚ್ಚ ಕಿ.ಮೀ.ಗೆ ರೂ.೪/- ಆಗಿದ್ದರೆ, ಮೀಥೇನ್ ಅನಿಲ ಬಳಕೆ ವೆಚ್ಚ ಕೇವಲ ೫೦ರಿಂದ ೬೦ ಪೈಸೆ ಮಾತ್ರ! ಮತ್ತು ಡೀಸೆಲ್‌ ವಾಹ‌ನದ ಹೊಗೆ ಸೂಸುವಂತೆ, ಮೀಥೇನ್ ಅನಿಲದ ಸುಡುವಿಕೆಯಿಂದ ಹೊಗೆ ಉತ್ಪನ್ನವಾಗುವದಿಲ್ಲ. ಇದಕ್ಕೂ ಮಿಗಿಲಾಗಿ, ವಾಹನ ಚಾಲನೆ ಮಾಡುವಾಗ, ಶಬ್ದಮಾಲಿನ್ಯವು ಇಲ್ಲವೇ ಇಲ್ಲ ಎಂಬಷ್ಟು ಮಟ್ಟಿಗೆ ಕ್ವಚಿತ್ತಾಗಿರುತ್ತದೆ. ಇದರಿಂದ ನ್ಯಾಯಾಧೀಶರು ಪ್ರಭಾವಿತರಾದರು.

ಈ ನಂತರ, ರಾಜೀವಭಾಯಿ ತಮ್ಮ ವಾದವನ್ನು ಮುಂದುವರಿಸಿದರು. ನಮಗೆ ಪ್ರತಿದಿನ ಒಂದು ಹಸುವಿನಿಂದ ೧೦ಕಿಲೋ ಸೆಗಣಿ ಲಭ್ಯವಾದಲ್ಲಿ, ಅದರಿಂದ ಪ್ರತಿ ವರ್ಷಕ್ಕೆ, ಹಾಗೂ ೨೦ ವರ್ಷಗಳಲ್ಲಿ ಎಷ್ಟು ಮೀಥೇನ್ ಅನಿಲವನ್ನು ಉತ್ಪಾದಿಸಬಹುದು?
ನಮ್ಮ ದೇಶದಲ್ಲಿ, ೧೭ಕೋಟಿ ಹಸುಗಳಿದ್ದು, ಅವುಗಳಿಂದ ಸೆಗಣಿಯನ್ನು ಸಂಗ್ರಹಿಸಿ, ಹಾಗೂ ಅದನ್ನು ಮೀಥೇನ್ ಅನಿಲವನ್ನು ಉತ್ಪಾದಿಸಲು ಬಳಸಿದ್ದೇ ಆದ
Sent from Samsung Mobile

ಶ್ರೀ ಸೂಕ್ತ" ಮತ್ತು ವಿಶೇಷತೆಗಳು

"ಶ್ರೀ ಸೂಕ್ತ" ಮತ್ತು ವಿಶೇಷತೆಗಳು..
"ಶ್ರೀ ಮಹಾಲಕ್ಷ್ಮಿಯು ಕ್ಷೀರ ಸಮುದ್ರದಲ್ಲಿ ಜನನವಾದಾಗ ಸಕಲ ದೇವತೆಗಳು ಶ್ರೀ ಮಹಾಲಕ್ಷ್ಮಿ ದೇವಿಯನ್ನು ಸ್ತೋತ್ರ ಮಾಡಿ,ಆಕೆಯ ಅನುಗ್ರಹ ದೇವಲೋಕಕ್ಕೆ ಸಾಮ್ರಾಜವನ್ನು ದೊರಕಿಸಿ ಕೊಟ್ಟಂತಹ ಪರಮದಿವ್ಯ ಮಂಗಳಕರವಾದ ಸೂಕ್ತವೇ "ಶ್ರೀಸೂಕ್ತ..!"
ಮಹಾಲಕ್ಷ್ಮೀ ದೇವಿಗೆ "ಶ್ರೀ" ಎಂಬ ನಾಮವು ಇರುವುದರಿಂದ ಇದಕ್ಕೆ "ಶ್ರೀ ಸೂಕ್ತ" ಎಂದು ಹೆಸರು.. ಈ ಸೂಕ್ತವನ್ನು ಪ್ರತಿದಿವಸ ಬೆಳಗ್ಗೆ ಮತ್ತು ಸಾಯಂಕಾಲ 5.30 ರಿಂದ 6.30 ರ ಒಳಗೆ ಓದಿ,ಶ್ರೀ ಮಹಾಲಕ್ಷ್ಮೀ ದೇವಿಗೆ ಪೂಜೆ ಮಾಡಿ, ಸುಮಂಗಲಿಯರಿಗೆ ಅರಿಸಿನ,ಕುಂಕುಮ, ಹೂವು, ತಾಂಬೂಲ, ಕೋಸಂಬರಿ, ಪಾನಕ ಕೊಡುತ್ತಾ ಬಂದರೆ, ಆ ಮನೆಯಲ್ಲಿ ಯತೇಚ್ಛವಾದ ಧನಕನಕ ವಸ್ತು ವಾಹನಗಳು ಅಭಿವೃದ್ಧಿಯಾಗಿ, ವಂಶದ ಏಳಿಗೆಯಾಗುತ್ತದೆ.., ಅತ್ಯಂತ ಬೇಗ ಶ್ರೀಮಂತರಾಗಿ ಬೆಳೆಯುತ್ತಾರೆ..
"ಶ್ರೀ ಸೂಕ್ತ " ಪೂಜೆ ಮತ್ತು ಫಲಗಳು...
೧. ಶ್ರೀ ಮಹಾಲಕ್ಷ್ಮೀ ದೇವಿಯನ್ನು ಧಾನ್ಯದಲ್ಲಿಟ್ಟು ಶ್ರೀ ಸೂಕ್ತವನ್ನು ಹೇಳಿ ಧಾನ್ಯವನ್ನು ಪೂಜೆ ಮಾಡಿದರೆ, ಆ ಮನೆಯಲ್ಲಿ ಎಂದೆಂದಿಗೂ ಧಾನ್ಯಲಕ್ಷ್ಮಿಯ ಅಭಿವೃದ್ಧಿಯಾಗುತ್ತದೆ..  ಧಾನ್ಯಪೂಜೆ ಮಾಡಿ, ಧಾನ್ಯದಲ್ಲಿ ಅಡಿಗೆ ಮಾಡಿ, ದೇವರಿಗೆ ನೈವೇದ್ಯ ಮಾಡಿ, ಹಸುವಿಗೆ, ಸುಮಂಗಲಿಯರಿಗೆ, ಬ್ರಾಹ್ಮಣರಿಗೆ ಕೊಟ್ಟು ಉಳಿದ ಪ್ರಸಾದ ಸ್ವೀಕರಿಸಬೇಕು.. ಈ ರೀತಿ ಮಾಡಿದರೆ ಮನೆಯಲ್ಲಿ ನಿತ್ಯದಾರಿದ್ರ್ಯ ನಿವಾರಣೆಯಾಗುತ್ತದೆ, ಧನ ದಾರಿದ್ಯ ಇರುವುದಿಲ್ಲ..
೨. "ಶ್ರೀ ಮಹಾಲಕ್ಷ್ಮಿ ದೇವಿಯನ್ನು ಪೂರ್ವಕ್ಕೆ ಕೂಡಿಸಿ, ಪೂಜೆ ಮಾಡುವವರು ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು "ಶ್ರೀ ಸೂಕ್ತ" ಪಾರಾಯಣ ಮಾಡಿದರೆ, ಇಷ್ಟಾರ್ಥ ಸಿದ್ಧಿಯಾಗಿ, ಆ ಮನೆಯು ಸಂಪೂರ್ಣ ಅಭಿವೃದ್ಧಿಯಾಗುತ್ತದೆ.. ಮಕ್ಕಳಿಗೆ ಒಳ್ಳೆಯ ವಿದ್ಯೆ ಬುದ್ಧಿಯು ಬರುತ್ತದೆ..
೩. "ಶ್ರೀ ಮಹಾಲಕ್ಷ್ಮಿ" ದೇವಿಯನ್ನು ಉತ್ತರಕ್ಕೆ ಕೂಡಿಸಿ ಪೂಜೆ ಮಾಡುವವರು ಪೂರ್ವಕ್ಕೆ ಮುಖ ಮಾಡಿ ಕುಳಿತು ಪೂಜಿಸಿದರೆ, ಆ ಮನೆಯಲ್ಲಿ ಎಲ್ಲರೂ ಅಭಿವೃದ್ಧಿಯಾಗುತ್ತಾರೆ.., ದೈವಾನುಗ್ರಹವಾಗಿ, ಆ ಮನೆಯು ಲಕ್ಷ್ಮೀ ವಾಸಸ್ಥಾನವಾಗುತ್ತದೆ..
೪. ಶ್ರೀ ಸೂಕ್ತ ಓದಿ ಶ್ರೀ ಲಕ್ಷ್ಮೀನಾರಾಯಣರ ಪೂಜೆ ಮಾಡಿದರೆ, ಆ ಮನೆಯಲ್ಲಿ ಗಂಡಹೆಂಡತಿ ಅನ್ಯೋನ್ಯವಾಗಿ ಇರುತ್ತಾರೆ.
ಮನಸ್ತಾಪ, ಈಗೋ ಸಮಸ್ಯೆಗಳು ದೂರವಾಗುತ್ತದೆ..
೫. ಯಾರ ಮನೆಯಲ್ಲಿ "ಶ್ರೀ ಸೂಕ್ತ" ದಿಂದ ಸಾಲಿಗ್ರಾಮ ದೇವರಿಗೆ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿ ಎಲ್ಲರಿಗೂ ಸಮಸ್ತ ದೋಷಗಳು ನಿವಾರಣೆಯಾಗುತ್ತದೆ ..
೬. ಯಾರ ಮನೆಯಲ್ಲಿ ಪ್ರತಿದಿವಸ "ಶ್ರೀಸೂಕ್ತ" ಓದಿ ,ಮನೆಗೆ ಬರುವ ಹೆಂಗಸರಿಗೆ ಅರಿಸಿನ ಕುಂಕುಮ ಕೊಡುತ್ತಾರೋ ಆ ಮನೆಯಲ್ಲಿ ಎಂದೂ ದಾರಿದ್ರ್ಯ, ವೈಧವ್ಯ ಬರುವುದಿಲ್ಲ.., ಸಮಸ್ತ ಸ್ತ್ರೀ ಶಾಪ ನಿವಾರಣೆಯಾಗುತ್ತದೆ ..
೭. ಯಾರು ಪ್ರತಿದಿವಸ "ಶ್ರೀ ಸೂಕ್ತ" ಓದಿ , ಹೆಣ್ಣು ಮಕ್ಕಳಿಗೆ ಸಿಹಿ ತಿಂಡಿ ಹಂಚುತ್ತಾರೆಯೋ, ಅವರ ಸಕಲ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರುತ್ತವೆ.
೮. ಯಾರ ಮನೆಯಲ್ಲಿ "ಶ್ರೀ ಸೂಕ್ತ" ಹೇಳುತ್ತಾ ದೇವರ ವಿಗ್ರಗಳಿಗೆ ಅಥವಾ ಸಾಲಿಗ್ರಾಮ ದೇವರಿಗೆ ಗಂಧದಿಂದ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿ ಯಾವುದೇ ತರಹದ ರೋಗಭಾದೆ ಇರುವುದಿಲ್ಲ ..ಸರ್ವ ರೋಗಗಳು ನಿವಾರಣೆಯಾಗಿ ಆರೋಗ್ಯವಂತರಾಗಿ ಬಾಳುತ್ತಾರೆ..
೯. "ಶ್ರೀ ಸೂಕ್ತ" ಹೇಳುತ್ತಾ ದೇವರಿಗೆ ಅರಿಸಿನದ ನೀರಿನಿಂದ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿ ಮಂಗಳ ಕಾರ್ಯಗಳು ಅಡಚಣೆ ಇಲ್ಲದೆ ನಡೆಯುತ್ತವೆ..
೧೦. ಯಾರ ಮನೆಯಲ್ಲಿ "ಶ್ರೀ ಸೂಕ್ತ" ಹೇಳಿ ಕುಂಕುಮದ ನೀರಿನಿಂದ ಅಭಿಷೇಕ ಮಾಡುತ್ತಾರೋ, ಆ ಮನೆಯಲ್ಲಿನ ಸಕಲ ದೃಷ್ಟಿ ದೋಷಗಳು ನಿವಾರಣೆಯಾಗುತ್ತದೆ ..  ಸಮಸ್ತ ಮಾಟ ಮಂತ್ರ ದೋಷಗಳು ನಿವಾರಣೆಯಾಗುತ್ತದೆ.
೧೧. ಯಾರ ಮನೆಯಲ್ಲಿ "ಶ್ರೀ ಸೂಕ್ತ" ಹೇಳಿ ಚಂದ್ರದಿಂದ ದೇವರಿಗೆ ಅಭಿಷೇಕ ಮಾಡುತ್ತಾರೋ, ಅವರಿಗೆ ಸಾಲದ ಭಾದೆ ನಿವಾರಣೆಯಾಗುತ್ತದೆ ..  ಹಣಕಾಸಿನ ತೊಂದರೆ ಇರುವುದಿಲ್ಲ ..
೧೨. ಯಾರ ಮನೆಯಲ್ಲಿ "ಶ್ರೀ ಲಕ್ಷ್ಮೀನಾರಾಯಣ " ದೇವರಿಗೆ "ಶ್ರೀಸೂಕ್ತ" ಹೇಳುತ್ತಾ ಪನ್ನೀರಿನಲ್ಲಿ ಅಭಿಷೇಕ ಮಾಡಿದರೆ, ಆ ಮನೆಯಲ್ಲಿನ ಎಲ್ಲರೂ ಶ್ರೀಮಂತರಾಗುತ್ತಾರೆ..
೧೩. "ಶ್ರೀ ಸೂಕ್ತ" ಪಾರಾಯಣ ಮಾಡಿ, ಶ್ರೀ ಮಹಾಲಕ್ಷ್ಮೀ ದೇವಿಗೆ ಕಮಲದ ಹೂವನ್ನು ಇಡುತ್ತಾ ಬಂದರೆ, ಅವರಿಗೆ ಧನ,ಕನಕ, ವಸ್ತು ವಾಹನ ಎಲ್ಲವೂ ಶೀಘ್ರವಾಗಿ ದೊರೆತು, ಆಗರ್ಭ ಶ್ರೀಮಂತರಾಗುತ್ತಾರೆ..
೧೪. "ಶ್ರೀ ಸೂಕ್ತ"ಹೇಳುತ್ತಾ ಮಹಾಲಕ್ಷ್ಮಿಗೆ "ಬಿಲ್ವಪತ್ರೆ " ಇಂದ ಪೂಜೆ ಮಾಡುತ್ತಾ ಬಂದರೆ, ನಿಮಗೆ ಬರಬೇಕಾದ ಹಣವು ಯಾವುದೇ ತೊಂದರೆ ಇಲ್ಲದೆ ಬೇಗ ಬರುತ್ತದೆ..
೧೫. "ಶ್ರೀ ಸೂಕ್ತ" ಹೇಳಿ "ಶ್ರೀಲಕ್ಷ್ಮೀನಾರಾಯಣ"ರಿಗೆ "ಕೆಂಡಸಂಪಿಗೆ" ಹೂವಿನಿಂದ ಪೂಜೆ ಮಾಡಿದರೆ, ಸಮಸ್ತ ಸರ್ಪದೋಷಗಳು ನಿವಾರಣೆಯಾಗುತ್ತದೆ..
ಬಂಧುಗಳೇ "ಶ್ರೀ ಸೂಕ್ತ" ದ ಫಲ ಅಪಾರ, ತುಂಬಾ ವಿಶೇಷ ಕೂಡ..
ಎಲ್ಲರಿಗೂ "ಶ್ರೀ ಮಹಾಲಕ್ಷ್ಮಿ" ದೇವಿಯ ಪೂರ್ಣ ಅನುಗ್ರಹವಾಗುವುದು.

ಶ್ರೀ ಸುಬ್ರಹ್ಮಣ್ಯ ಅಷ್ಟೋತ್ತರದ ಮಹತ್ವಗಳು.

"ಶ್ರೀ ಸುಬ್ರಹ್ಮಣ್ಯ ಅಷ್ಟೋತ್ತರದ ಮಹತ್ವಗಳು.."
ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪೂಜೆ "ದಕ್ಷಿಣಭಾರತದಲ್ಲಿ" ತುಂಬಾ ವಿಶೇಷ..
ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಷಣ್ಮುಖ ಎಂದೂ ಕರೆಯುತ್ತಾರೆ ..
ಆರು ಮುಖ ಇರುತ್ತದೆ ..
ಸ್ವಾಮಿಯನ್ನು ಆರು ಪ್ರತ್ಯೇಕವಾದ ಸ್ಥಳದಲ್ಲಿ ಪುಣ್ಯ ಸ್ಥಳದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ನೋಡಬಹುದು ..
೧. ಮರುಂದಮಲೆ
೨. ತಿರುಪ್ಪರ ಕುಡ್ರಂ..
೩. ಪಳನಿ ..
೪. ತಿರುಚೆಂದೂರ್..
೫. ಪಳಂ ಉದುರ್ ಜೋಳೆ..
೬. ತಿರುತಣಿ..
ಇವೇ ಅಲ್ಲದೆ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯ ಸಾಕಷ್ಟು ಇವೆ..
"ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ .. ಇತ್ಯಾದಿ, ತುಂಬಾ ಮಹತ್ವ ಮತ್ತು ಶಕ್ತಿಯುತವಾದ ಕ್ಷೇತ್ರಗಳು..
ಈ ಎಲ್ಲಾ ಕ್ಷೇತ್ರಗಳಲ್ಲೂ ಸ್ವಾಮಿಯನ್ನು ಪ್ರತಿದಿನ ಅಷ್ಟೋತ್ತರದಿಂದ ಪೂಜಿಸುತ್ತಾರೆ.
ಭಕ್ತಾದಿಗಳು "ಅಷ್ಟೋತ್ತರ " ಪೂಜೆ ಮಾಡಿಸಿದರೆ ಅಥವಾ ಮಾಡಿದರೆ ಏನು ಫಲ..?
ಪೂಜೆ ಮಾಡುವವರು ಬೆಳಗ್ಗೆ ಸ್ನಾನದ ನೀರಿಗೆ ಸ್ವಲ್ಪ ಅರಿಸಿನ, ಹಸುವಿನ ಗಂಜು, ಹಾಗೂ ದರ್ಬೆ ಹಾಕಿ ಸ್ನಾನ ಮಾಡಿ, "ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅಷ್ಟೋತ್ತರ ಓದಿದರೆ,ನಿಮ್ಮ ಕೆಲಸಗಳು ಸುಸೂತ್ರವಾಗಿ ನಡೆಯುತ್ತದೆ ..
ಮನೆದೇವರನ್ನು ಪೂಜಿಸಿ "ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು " ಪೂಜಿಸಿದರೆ, ನಿಮ್ಮ ಕಾರ್ಯಗಳು ಲಾಭದಿಂದ ಆಗುತ್ತವೆ..
೧. ಯಾರು ಮಾತನಾಡುವಾಗ ತೊದಲುತ್ತಾರೋ ಅಂತಹವರು "ಶ್ರೀ ಸುಬ್ರಹ್ಮಣ್ಯ " ಸ್ವಾಮಿ ಪೂಜೆ ಮಾಡಿ,ಅಷ್ಟೋತ್ತರವನ್ನು ಹೇಳಿ, ಸ್ವಾಮಿಗೆ ಜೇನುತುಪ್ಪ ನೈವೇದ್ಯ ಮಾಡಿ, ಜೇನುತುಪ್ಪವನ್ನು ಸುಬ್ರಹ್ಮಣ್ಯ ಸ್ವಾಮಿ ಮೂಲ ಮಂತ್ರದಿಂದ ಅಭಿಮಂತ್ರಿಸಿ, ಪ್ರಸಾದ ತಿನ್ನುತ್ತಾ ಬಂದರೆ, ಅತೀ ಶೀಘ್ರದಲ್ಲಿ ತೊದಲು ನಿವಾರಣೆಯಾಗುತ್ತದೆ ..
೨. ಮಕ್ಕಳು ತುಂಬಾ ಹಠ ಮಾಡಿದರೆ, ರೊಚ್ಚು ಹಿಡಿದರೆ, ಕೋಪ ಜಾಸ್ತಿ ಬಂದರೆ, ಬಾಲಗ್ರಹ ದೋಷ ಇದ್ದರೆ,
ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡಿಸಿ, ಭಸ್ಮದಿಂದ ಅರ್ಚಿಸಿ, ಶ್ರೀ ಗೋಪಿ ಚಂದನವನ್ನು ಅಭಿಮಂತ್ರಿಸಿಕೊಂಡು ತಂದು , ಮಕ್ಕಳಿಗೆ ಎರಡು ಹುಬ್ಬುಗಳ ಮಧ್ಯೆ ಇಟ್ಟು, ಭಸ್ಮವನ್ನು ಹಣೆಗೆ ಇಟ್ಟರೆ, ಮಕ್ಕಳು ಹಠ ಎಲ್ಲಾ ಬೊಟ್ಟು, ಆರೋಗ್ಯವಂತರಾಗಿರುತ್ತಾರೆ..
೩. ಸಂಸಾರದಲ್ಲಿ ಗಲಾಟೆ ನಡೆಯುತ್ತಿದ್ದರೆ, ನೆಮ್ಮದಿ ಇಲ್ಲದಿದ್ದರೆ, ದಂಪತಿಗಳು ಮಾತು ಮಾತಿಗೂ ಕೋಪ ನೆಮ್ಮದಿ ಕಳೆದುಕೊಂಡು ಬೇಸರದ ಸಂಸಾರ ಮಾಡುತ್ತಿದ್ದರೆ, ಅನ್ಯೋನ್ಯವಾಗಿ ಇಲ್ಲದಿದ್ದರೆ ..
ಅಂಥವರು "ಶ್ರೀ ಸುಬ್ರಹ್ಮಣ್ಯ ಸ್ವಾಮಿ"ಯನ್ನು  ಅಷ್ಟೋತ್ತರದಿಂದ ಪೂಜಿಸಿ, ಹಾಲು ಮತ್ತು ಜೇನುತುಪ್ಪದಿಂದ ಅಭಿಷೇಕ ಮಾಡಿಸಿ, ೯ ನಮಸ್ಕಾರ ಮಾಡಬೇಕು..
೧೨ ದಿನ ಹೀಗೆ ಮಾಡುತ್ತಾ ಬನ್ನಿ ಅಥವಾ ೧೨ ಮಂಗಳವಾರ ಹೀಗೆ ಮಾಡಬಹುದು..
೧೨ ದಿನ ಮುಗಿದ ನಂತರ, "ವೃದ್ಧಬ್ರಾಹ್ಮಣ" ದಂಪತಿಗಳಿಗೆ ತಾಂಬೂಲ ದಾನ ಮಾಡಿದರೆ, ನಿಮ್ಮ ಮನೆಯಲ್ಲಿನ ಎಲ್ಲಾ ತರಹದ ಗಲಾಟೆಗಳು ನಿಂತು, ದಂಪತಿಗಳು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ನೆಮ್ಮದಿ ಹಾಗೂ ಶಾಂತಿಯನ್ನು ಪಡೆದು ಸುಖವಾಗಿ ಬಾಳುತ್ತಾರೆ..
೪. ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರು ಓದುವಾಗ ಜ್ಞಾಪಕವಿದ್ದು, ನಂತರ ಮರೆತು ಹೋದರೆ, ಜ್ಞಾಪಕಶಕ್ತಿ ಕಡಿಮೆ ಇದ್ದರೆ, ಪರೀಕ್ಷೆಯಲ್ಲಿ ಜ್ಞಾಪಕ ಬರದೇ ಇದ್ದರೆ, ಪರೀಕ್ಷೆಯ ಸಮಯದಲ್ಲಿ ಅನಾರೋಗ್ಯವಾಗುತ್ತಿದ್ದರೆ, ...
ಇವೆ ಮುಂತಾದ ಹಲವಾರು ಕಾರಣಗಳಿಗೆ ..
"ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಿ, ಒಂದು ತಾಮ್ರದ ಚಂಬಿನಲ್ಲಿ ನೀರು ಹಾಕಿ, ಅದರ ಮೇಲೆ ಕೈ ಇಟ್ಟು "ಸುಬ್ರಹ್ಮಣ್ಯ ಷೋಡಶನಾಮಾವಳಿ" ಪಠಿಸಿ, ಮನೆಯ ಹೊರಗೆ ಸಾಯಂಕಾಲ ೫.೪೫ ರಿಂದ ೬.೧೫ ರ ಒಳಗೆ, ಶುಭ ಗೋಧೂಳಿ ಲಗ್ನದಲ್ಲಿ, ಮತ್ರಿಸಿದ ನೀರಿನಿಂದ ಮುಖ ತೊಳೆದುಕೊಂಡರೆ, ಸಮಸ್ತ ವಿದ್ಯಾದೋಷಗಳು ನೀಗಿ, ಮುಖದಲ್ಲಿ ವರ್ಚಸ್ಸು ಬಂದು ವಿದ್ಯಾವಂತರಾಗುತ್ತಾರೆ..
೫. ಮದುವೆಯಾಗದ ಗಂಡು/ಹೆಣ್ಣು ಮಕ್ಕಳಿಗೆ, ಎಷ್ಟೇ ಪ್ರಯತ್ನಪಟ್ಟರೂ ವಿವಾಹವಾಗದೇ ಇದ್ದರೆ,
ಗುರುವಾರ ಅಥವಾ ಭಾನುವಾರ ಬೆಳಿಗ್ಗೆ, ಶ್ರೀ ಸುಬ್ರಹ್ಮಣ್ಯಸ್ವಾಮಿಯನ್ನು ಅಷ್ಟೋತ್ತರದಿಂದ ಪೂಜಿಸಿ, ಒಂದು ತೆಂಗಿನಕಾಯಿಯನ್ನು ಪೂಜಿಸಿ, ಅರಿಸಿನದ ಬಟ್ಟೆಯಿಂದ ಕಟ್ಟಿ ನಂತರ ಅಶ್ವಥ ಮರದ ಕೊಂಬೆಗೆ ಕಟ್ಟಿ ಬಂದರೆ, ವಿವಾಹ ನಿಶ್ಚಯವಾಗುತ್ತದೆ..
೬. ಆರೋಗ್ಯ ಸರಿ ಇಲ್ಲದವರು "ಶ್ರೀ ಸುಬ್ರಹ್ಮಣ್ಯ ಸ್ವಾಮಯನ್ನು ಅಷ್ಟೋತ್ತರದಿಂದ ಪೂಜಿಸಿ, ಸ್ವಾಮಿಗೆ ಹಾಲು ಮತ್ತು ಜೇನುತುಪ್ಪ ನೈವೇದ್ಯ ಮಾಡಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮೂಲಮಂತ್ರದಿಂದ ಮಂತ್ರಿಸಿ, ೧೨ ದಿವಸ ಕುಡಿದರೆ, ನಿಮ್ಮ ಸಮಸ್ತ ಖಾಯಿಲೆಗಳು ನಿವಾರಣೆಯಾಗಿ, ಆರೋಗ್ಯವಂತರಾಗಿ ದೇಹವು ವಜ್ರಕಾಯವಾಗುತ್ತದೆ..
"ಶ್ರೀ ವಳ್ಳಿ ದೇವಯಾನಿ ಸಮೇತ
ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸುಪ್ರೀತೋ ಸುಪ್ರಸನ್ನೋ ವರದೋಭವಂತು"
           *ಶುಭಮಸ್ತು*
ಕೃಪೆ-ಗಿರೀಶ್ ಶರ್ಮ..

ಕಾಳ ಸರ್ಪಯೋಗ ವಿಶೇಷ ಮಾಹಿತಿ

ಕಾಳ ಸರ್ಪಯೋಗ ವಿಶೇಷ ಮಾಹಿತಿ
ನಮ್ಮ ಏಳಿಗೆಗೆ ಕಾರಣವಾದ ಎಲ್ಲಗ್ರಹಗಳೂ ರಾಹು ಹಾಗೂ ಕೇತುಗಳ ಮಧ್ಯದಲ್ಲಿ ಬಂದಾಗ ಅದು ಸಂಪೂರ್ಣ ಕಾಳಸರ್ಪಯೋಗ
ರಾಹು ಎಂದರೆ ಸರ್ಪದ ಹೆಡೆ ಕೇತು ಎಂದರೆ ಸರ್ಪದ ಬಾಲ
ಈ ಹೆಡೆ ಹಾಗೂ ಬಾಲದ ಮಧ್ಯದಲ್ಲಿರುವದೇ ಸರ್ಪದ ದೇಹ
ನಮ್ಮ ಏಳಿಗೆಗೆ ಕಾರಣವಾದ ಗ್ರಹಗಳು ಹೆಡೆ ಹಾಗೂ ಬಾಲದ ಮಧ್ಯದಲ್ಲಿದ್ದಾಗ ನಾವು ಯಾವದೇ ಕಾರ್ಯವನ್ನು ಎಷ್ಟೇ ಪ್ರಯತ್ನ ಪಟ್ಟರೂ ಕೊನೆಯ ಹಂತದ ವರೆಗೆ  ಆದಹಾಗೆ ಆಗಿ ಲಾಸ್ಟ್ ಮೊಮೆಂಟ್ ನಲ್ಲಿ ಫೇಲ್ ಆಗತ್ತೆ
ಅರ್ಧಕಾಲಸರ್ಪ ವಾಗಲಿ ಸಂಪೂರ್ಣ ಕಾಳಸರ್ಪವಾಗಲಿ ನಮ್ಮ ಗ್ರಹಗತಿಗಳಿಗೆ ಅನುಸಾರವಾಗಿ ಇರುತ್ತವೆ
ಈ ಯೋಗಗಳು ಬಂದಾಗ ಅದರ ಫಲಗಳು ಸಿಗುವದ ನಮ್ಮ ನಮ್ಮ ಪೂರ್ವಜನ್ಮದ ಕರ್ಮಾನುಸಾರ ಹಾಗೂ ಅದಕ್ಕಿಂತ ಮಹತ್ವ ಅಂದರೆ ಶಿಂಶುಮಾರ ಪರಮಾತ್ಮನ ಆಜ್ಞೆಯಿಂದ
ಹೀಗಾಗಿ ಈ ಯೋಗಗಳು ಬಂದಾಗ ಭಗವಂತನಲ್ಲಿ ವಿಶೇಷವಾದ ಭಕ್ತಿಯನ್ನಿಟ್ಟು , ಶ್ರೀಮದ್ಭಾಗವತದಲ್ಲೊ ಬರುಬ ಶಿಂಶುಮಾರ ರೂಪಿ ಭಗವಂತನ ಧ್ಯಾನ ಶ್ಲೋಕವನ್ನು ಭಕ್ತಿಯಿಂದ ಜಪ ಮಾಡಬೇಕು , ಹಾಗೆಯೇ , ಸರ್ಪ ಅಷ್ಟಕುಲನಾಗಗಳ ನಿಯಾಮಕನಾದ ಅನಂತ ನಾಮಕ ಭಗವಂತನ ಸ್ತೋತ್ರರೂಪವಾದ ಮೂಲಮಂತ್ರವನ್ನು ಭಕ್ತಿಯಿಂದ ಜಪ ಮಾಡಬೇಕು
ಜಪ , ಅರ್ಘ್ಯ , ಹಾಗೂ ಹೋಮ ಈ ಪ್ರಕ್ರಿಯೆಗಳನ್ನು ಶ್ರದ್ಧೆಯಿಂದ ಭಕ್ತಿ ವಿಶ್ವಾಸಗಳಿಂದ ಮಾಡುವದರಿಂದ ಈ ದೋಷದ ದುಷ್ಟಫಲ ಭಗವಂತ ಪರಮಾನುಗ್ರಹದಿಂದ ನಿವಾರಣೆಯಾಗುವದು

*ಶ್ರೀ ಆಂಜನೇಯ ದ್ವಾದಶನಾಮ ಸ್ತೋತ್ರಮ್*

*ಶ್ರೀ ಆಂಜನೇಯ ದ್ವಾದಶನಾಮ ಸ್ತೋತ್ರಮ್*
*ಹನುಮಾಂಜನಾಸೂನುಃ*
*ವಾಯುಪುತ್ರೋ ಮಹಾಬಲಃ |*
*ರಾಮೇಷ್ಟಃ ಫಲ್ಗುನಸಖಃ*
*ಪಿಂಗಾಕ್ಷೋಮಿತ ವಿಕ್ರಮಃ ||*
*ಉದಧಿಕ್ರಮಣಶ್ಚೈವ*
*ಸೀತಾಶೋಕವಿನಾಶಕಃ |*
*ಲಕ್ಷ್ಮಣ ಪ್ರಾಣದಾತಾ ಚ*
*ದಶಗ್ರೀವಸ್ಯ ದರ್ಪಹಾ ||*
*ದ್ವಾದಶೈತಾನಿ ನಾಮಾನಿ*
*ಕಪೀಂದ್ರಸ್ಯ ಮಹಾತ್ಮನಃ |*
*ಸ್ವಾಪಕಾಲೇ ಪಠೇನ್ನಿತ್ಯಂ*
*ಯಾತ್ರಾಕಾಲೇ ವಿಶೇಷತಃ |*
*ತಸ್ಯ ಮೃತ್ಯುಭಯಂ ನಾಸ್ತಿ*
*ಸರ್ವತ್ರ ವಿಜಯೀ ಭವೇತ್ ||*
*( ಆಂಜನೇಯನ ಈ ಹನ್ನೆರಡು ಪುಣ್ಯ ನಾಮಗಳನ್ನು ನಿತ್ಯವೂ ಪಠಣ ಮಾಡುವುದರಿಂದ ಮೃತ್ಯುವು ದೂರವಾಗಿ ಎಲ್ಲೆಡೆಯೂ ವಿಜಯವನ್ನು ಹೊಂದುತ್ತಾರೆ )*

ಒಣಕೊಬ್ಬರಿ ಮತ್ತು ಮಹತ್ವಗಳು..

ಒಣಕೊಬ್ಬರಿ ಮತ್ತು ಮಹತ್ವಗಳು..
೧. ಒಣಕೊಬ್ಬರಿಗೆ ಸಂಸ್ಕೃತದಲ್ಲಿ ಶುಷ್ಕ ನಾರಿಕೇಳ ಎಂದು ಕರೆಯುತ್ತಾರೆ ..
ಒಣಕೊಬ್ಬರಿ ದಾನ ಮಾಡಿದರೆ ಮನೆಯಲ್ಲಿ ನಿತ್ಯದಾರಿದ್ರ್ಯ ಕಡಿಮೆಯಾಗುತ್ತದೆ..
೨. ಒಣಕೊಬ್ಬರಿಯನ್ನು ತಾಂಬೂಲದಲ್ಲಿ ಇಟ್ಟು, ಕೆಂಪು ಅಥವ ಬಿಳಿ ಕಲ್ಲುಸಕ್ಕರೆ ಸಮೇತ ಗುರುಗಳಿಗೆ ಸಮರ್ಪಿಸಿದರೆ, ನಿಮ್ಮ ನಿಂತು ಹೋಗಿರುವ ಕಾರ್ಯಗಳು ಬಹಳ ಬೇಗ ಪೂರ್ತಿಯಾಗುತ್ತವೆ..
೩. ಕಡಲೆಹಿಟ್ಟಿನ ಜೊತೆಯಲ್ಲಿ ಒಣಕೊಬ್ಬರಿಯನ್ನು ಹಾಕಿ ಕುಲದೇವರಿಗೆ ನೈವೇದ್ಯ ಮಾಡಿ, ದಂಪತಿಗಳಿಗೆ ದಾಮವನ್ನು ಮಾಡಿದರೆ, ಸ್ತ್ರೀ ದೋಷ, ಸ್ತ್ರೀ ಋಣ, ಕಡಿಮೆಯಾಗುತ್ತದೆ..
೪. ಒಣಕೊಬ್ಬರಿ ಹಾಗೂ ಸಕ್ಕರೆ ಪುಡಿಯನ್ನು ಮಿಶ್ರ ಮಾಡಿ, ಎಲ್ಲರಿಗೂ ಹಂಚಿದರೆ, ಮಂಗಳ ಕಾರ್ಯಗಳು, ಸುಸೂತ್ರವಾಗಿ ನಡೆಯುತ್ತದೆ..
ಈ ಕಾರಣಕ್ಕೆ ಲಗ್ನಪತ್ರಿಕಾ ಹಾಗೂ ವರಪೂಜೆಯ ಸಮಯದಲ್ಲಿ, ಶುಭಕಾರ್ಯದಲ್ಲಿ, ಕೊಬ್ಬರಿ- ಸಕ್ಕರೆ ಹಂಚುತ್ತೇವೆ..
೫. ಶ್ರೀ ಮಹಾಗಣಪತಿಯ ಹೋಮಕ್ಕೆ, ಕೊಬ್ಬರಿಸಕ್ಕರೆಯಿಂದ ಮಾಡಿದ ಕಡುಬು ಮಾಡಿಸಿ, ಹೋಮಕ್ಕೆ ಕೊಟ್ಟರೆ, ನಿಮ್ಮ ಋಣಭಾಧೆಗಳು ಕಡಿಮೆಯಾಗಿ ಸಕಲ ಕಾರ್ಯಗಳು,ಇಷ್ಟಾರ್ಥಗಳು ನೆರವೇರುತ್ತದೆ..
ಸಾಲದ ಭಾದೆ ನಿವಾರಣೆಯಾಗುತ್ತದೆ..
೬. ಕೊಬ್ಬರಿ ಒಬ್ಬಟ್ಟನ್ನು ಮಾಡಿಸಿ, ಮನೆದೇವರಿಗೆ, ಸ್ರೀ ದೇವತೆಗಳ ದೇವಸ್ಥಾನಗಳಲ್ಲಿ ನೈವೇದ್ಯ ಮಾಡಿಸಿ, ಸುಮಂಗಲಿಯರಿಗೆ ಮತ್ತು ಭಕ್ತಾದಿಗಳಿಗೆ ಹಂಚಿದರೆ, ಕುಜದೋಷ ತುಂಬಾ ಕಡಿಮೆಯಾಗುತ್ತದೆ..
ರಾಹು ದೋಷ ನಿವಾರಣೆ..
ಮದುವೆ ಭಾಗ್ಯವಾಗುತ್ತದೆ..
೭. ಶ್ರೀ ದುರ್ಗಾದೇವಿಗೆ ಪಾರಿಜಾತ ಹೂವಿನ ಮಾಲೆ ಹಾಕಿ, ಅಷ್ಟೋತ್ತರ ಪೂಜೆ ಮಾಡಿ, ಒಬ್ಬಟ್ಟು ನೈವೇದ್ಯ ಮಾಡಿ ದಾನ ಮಾಡಿದರೆ, ಕಾಳಸರ್ಪ ದೋಷ ನಿವಾರಣೆಯಾಗುತ್ತದೆ..
ಇಂತಹ ದೋಷಗಳು ಬರಬಾರದು ಅಂತಾನೆ ಗೌರಿ ಹಬ್ಬಗಳಲ್ಲಿ, ಇತ್ಯಾದಿ ಹಬ್ಬಗಳಲ್ಲಿ  ಒಬ್ಬಟ್ಟು ಮಾಡಿ ನೈವೇದ್ಯ ಮಾಡ್ತಿದ್ದರು..
ಒಬ್ಬಟ್ಟಿಗೆ ಅಷ್ಟು ಪ್ರಾಮುಖ್ಯತೆ ಕೊಡುತ್ತಿದ್ದರು ..
ಧನ್ಯವಾದಗಳು
ಶುಭವಾಗಲಿ.
ದೇವಪೂಜಾಫಲ....
ಜಲಂ ಸಂತಾನ ವೃದ್ಧಿಸ್ಯಾತ್
ಗಂಧಮಾಯುಷ್ಯವರ್ಧನಂ
ಅಕ್ಷತಾದ್ಧರತೇ ಶತ್ರುಃ
ಪುಪ್ಷ್ಪಮೈಶ್ವರ್ಯಮೇವಚ
ಧೂಪೇನ ದಹತೇಪಾಪಂ
ದೀಪೋಮೃತ್ಯುವಿನಾಶನಂ
ನೈವಚದ್ಯಂ ಲಭತೇ ರಾಜ್ಯಂ
ತಾಂಬೂಲಂ ವಿಲಸತ್ಫಲಂ.
ಅಭಿಷೇಕ ದಿಂದ ಸಂತಾನ,
ಗಂಧದಿಂದ ಆಯುಷ್ಯ,
ಅಕ್ಷತೆಯಿಂದ ಶತೃನಾಶ,
ಪುಷ್ಪದಿಂದ ಐಶ್ವರ್ಯ,
ಧೂಪದಿಂದ ಪಾಪನಾಶ,
ದೀಪದಿಂದ ಮೃತ್ಯುನಾಶ,
ನೈವೇದ್ಯದಿಂದ ರಾಜ್ಯಲಾಭ ತಾಂಬೂಲದಿಂದ ಸಮಸ್ತ
ಉತ್ತಮಫಲ ದೊರೆಯುತ್ತದೆ
(ಸಂಗ್ರಹ)

ಬ್ರಾಹ್ಮಣರ ಇತಿಹಾಸ--------

ಬ್ರಾಹ್ಮಣರ ಇತಿಹಾಸ-------- .
ದ್ರೋಣಾಚಾರ್ಯರ ಅನುಮತಿಯಿಲ್ಲದೇ ಅವರನ್ನು ಗುರು ಎಂದು ಭಾವಿಸಿ ವಿಧ್ಯೆ ಕಲಿತರೂ ಆ ಸ್ಥಳದಿಂದ ಹೋಗದೇ ರಾಜಕುಮಾರರ ನಾಯಿಯ ಮೇಲೆ ಶಬ್ಧವೇಧೀ ವಿಧ್ಯೆಯನ್ನು ಪ್ರಯೋಗ ಮಾಡಿದ್ದು ಬುದ್ಧಿ ಜೀವಿಗಳ ಪ್ರಕಾರ ತಪ್ಪಲ್ಲ.
ಹಾಗೆ ಮಾಡಿ ದ್ರೋಣಾಚಾರ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಏಕಲವ್ಯನೇ ಅಲ್ಲವೇ? !!!!!!
ಇಷ್ಟಕ್ಕೂ ಏಕಲವ್ಯನೇ ಬೆರಳು ಹೋದ ಬಗ್ಗೆ  ನೊಂದುಕೊಂಡ ಯಾವುದೇ ದಾಖಲೆಗಳೂ ಇಲ್ಲ.  ಕೆಲವು ಜಾತಿಯ ಜನರು ಏಕಲವ್ಯನನ್ನು ತಮ್ಮ ಸಮುದಾಯದವನು ಎಂದು ತಿಳಿದಿದ್ದಾರೆ.  ಆದರೆ ಆಗಿದ್ದ ಬೇಡನು ಈಗ ಯಾವ ಜಾತಿಯವನು ಎಂದು ಹೇಳುವುದು ಕಷ್ಟ. ವ್ಯವಸಾಯ ಈಗಿನಂತೆ ಅಭಿವೃದ್ಧಿಯಾಗಿಲ್ಲದ ಕಾಲದಲ್ಲಿ ಬಹುತೇಕ ಇತರರು ಆಹಾರಕ್ಕಾಗಿ ಬೇಟೆಯಾಡುತ್ತಿದ್ದರು.  ಏಕಲವ್ಯನೇನು ಓದುಬರಹ ಕಲಿಸಿ ಎಂದು ದ್ರೋಣಾಚಾರ್ಯರನ್ನು ಕೇಳಲಿಲ್ಲ. ಅವನು ಕೇಳಿದ್ದು ರಾಜರು ಮತ್ತು ಸೈನಿಕರಿಗೆ ಮಾತ್ರ ಮೀಸಲಾಗಿದ್ದ ಯುದ್ದವಿಧ್ಯೆಯನ್ನು.  ಈಗ ತಾನೇ ಸಾಮಾನ್ಯ ಜನರಿಗೆ ಸೈನಿಕ ತರಬೇತಿಯನ್ನು ನೀಡುತ್ತಾರೆಯೇ?????!!
ಬ್ರಾಹ್ಮಣರು ಶ್ರೇಷ್ಠರೆಂದು ಬ್ರಾಹ್ಮಣರೆಂದೂ ಹೇಳಿಕೊಂಡಿಲ್ಲ. "ತನ್ನ ಬಣ್ಣಿಸಬೇಡ", ಎಂದು ಯಾರಾದರೂ ಹೇಳುವ ಸಾವಿರಾರು ವರ್ಷಗಳ ಮೊದಲಿನಿಂದಲೇ ಅದನ್ನು ಪಾಲಿಸಿಕೊಂಡು ಬಂದಿದ್ದಾರೆ.   ಆದರೆ ಈಗ ಬ್ರಾಹ್ಮಣರನ್ನು ಅಕಾರಣವಾಗಿ ಖಳನಾಯಕರಂತೆ ಚಿತ್ರಿಸುವ ಮತ್ತು ಅದರಿಂದಲೇ ಪ್ರಶಸ್ತಿ ಹಾಗೂ ವಿದೇಶಿ ಕಳ್ಳ ಹಣವನ್ನು ಪಡೆದು ತಮ್ಮ ಹೊಟ್ಟೆಯನ್ನು ಸಾಕಿಕೊಳ್ಳುವ ಸುಳ್ಳುಗಾರರ ಕುತಂತ್ರವನ್ನು ತಪ್ಪಿಸಲು ಅನಿವಾರ್ಯವಾಗಿ ಬ್ರಾಹ್ಮಣರು ತಮ್ಮನ್ನು ತಾವು ಸಮಥಿ೯ಸಿಕೊಳ್ಳಲೇಬೇಕಾಗಿದೆ.
ಆದರೆ  ನಾವು ಜನಸಾಮಾನ್ಯರನ್ನು ಗಮನಿಸಿದಾಗ ತಿಳಿಯುವುದೇನೆಂದರೆ ಎಡಪಂಥೀಯರು ಮತ್ತು ಬುದ್ಧಿ ಜೀವಿಗಳು ಬ್ರಾಹ್ಮಣರನ್ನು ಎಷ್ಟೇ ಕೆಟ್ಟವರನ್ನಾಗಿ ಮಾಡಲು ಪ್ರಯತ್ನಿಸದರೂ ಜನಸಾಮಾನ್ಯರು ಬ್ರಾಹ್ಮಣ ಬಗ್ಗೆ ಗೌರವವನ್ನು ಉಳಿಸಿಕೊಂಡಿದ್ದಾರೆ.
ಬ್ರಾಹ್ಮಣರು ಶೂದ್ರರನ್ನು ಶೋಷಣೆ ಮಾಡಿದ್ದಾರೆ ಎಂದು ಬುದ್ಧಿಜೀವಿಗಳು ಹತ್ತಾರು ವರ್ಷಗಳಿಂದ ಬಾಯಿ ಬಡಿದುಕೊಳ್ಳತ್ತಿದ್ದಾರೆ. ಆದರೆ ಈ ವಿಷಯದಲ್ಲಿ ಯಾವುದಾದರೂ ಸಮೀಕ್ಷೆಮಾಡಿದ್ದಾರೆಯೇ????
ಯಾವುದಾದರೂ ಸಾಕ್ಷ್ಯವಿದೆಯೇ??
ಇವರು ಹಳ್ಳಿಗಳಿಗೆ ಭೇಟಿ ಕೊಟ್ಟು ಈಗಲೋ ಆಗಲೋ ಸಾಯುವ ಸ್ಥಿತಿಯಲ್ಲಿರುವ ಅತ್ಯಂತ ಹೆಚ್ಚು ವಯಸ್ಸಿನ ಶೂದ್ರ ವೃದ್ಧರನ್ನು ಕೇಳಿ ನೋಡಲಿ.  ಆಗ ತಿಳಿಯುತ್ತದೆ ನಿಜವಾದ ವಿಷಯವೇನು ಎಂದು!!!!!
" ಇಲ್ಲಾ ಸ್ವಾಮೀ,  ಬ್ರಾಹ್ಮಣರು ನಮಗೇನೂ ಶೋಷಣೆ ಮಾಡಿಲ್ಲ. - - - - - - - ಐನೋರು......, ಅಂತಾ ಬರಗಾಲದಾಗೂ ನಮಗೆ ಕೂಲಿ ಕೊಟ್ಟು,  ಅಷ್ಟೋ ಇಷ್ಟೋ ದವಸ,  ದಾನ್ಯ ಕೊಟ್ಟು ನಮ್ಮನ್ನು ಸಾಕವ್ರೆ ಸ್ವಾಮಿ  - - - - - - ಸುಳ್ಳು ಯಾಕೇಳನಾ??? " ಅನ್ನುತ್ತಾರೆ ನಿಯತ್ತಿನ ಶೂದ್ರರು.     ಈಗಿನ ಹೊಸ ತಲೆಮಾರಿನವರಿಗೆ ಈ ವಿಷಯ ತಿಳಿಯದೇ ಇರಬಹುದು. ಬುದ್ಧಿಜೀವಿಗಳು ಹೇಳುವುದೇ ನಿಜ ಎಂದುಕೊಳ್ಳಬಹುದು.   ಅಷ್ಟೇ ಏಕೆ, ಈಗಲೇ ಒಂದು ಸಮೀಕ್ಷೆ ನೆಡೆಯಲಿ!!!
ಭಾರತದಲ್ಲಿರುವ ಎಲ್ಲಾ ಪೋಲಿಸ್ ಠಾಣೆಗಳ ದಾಖಲೆಗಳನ್ನು ಪರಿಶೀಲಿಸಲಿ. - - - - - - ಬ್ರಾಹ್ಮಣರ ಮೇಲೆ ಯಾವ ಯಾವ ಪ್ರಕರಣಗಳು ದಾಖಲಾಗಿವೆ ಎಂದು.------- ಬ್ರಾಹ್ಮಣರ ಜನಸಂಖ್ಯೆ ಮತ್ತು ಶೇಕಡಾವಾರು ಅಪರಾಧಗಳು ಮತ್ತು ಇತರರ ಜನಸಂಖ್ಯೆ ಮತ್ತು ಶೇಕಡಾವಾರು ಅಪರಾಧ ಪ್ರಕರಣಗಳನ್ನು ಹೋಲಿಸಿ ನೋಡಲಿ!!
ಆಗ ತಿಳಿಯುತ್ತದೆ ಯಾರು ಸಭ್ಯರು ಮತ್ತು ಯಾರು ದುಷ್ಟರು ಎಂದು!!!!!
ನೀವು ಬೇಕಾದರೆ ಸುದ್ದಿವಾಹಿನಿಗಳ ಕೆಳಭಾಗದಲ್ಲಿ ಸ್ಕ್ರೋಲ್ ಆಗುತ್ತಿರುವ ವಿವಿಧ ಅಪರಾಧ ಪ್ರಕರಣಗಳು ಮತ್ತು ಬಂಧಿತರಾದ ಆರೋಪಿಗಳ ಹೆಸರುಗಳನ್ನು ಗಮನಿಸಿರಿ.
ನೀವು ತಿಂಗಳುಗಟ್ಟಲೇ ಕಾದರೂ ಒಬ್ಬ ಬ್ರಾಹ್ಮಣ ಅಪರಾಧಿಯ ಹೆಸರು ಕಂಡು ಬರುವುದಿಲ್ಲ.
ಕೊಲೆ,  ಅತ್ಯಾಚಾರ,  ವರದಕ್ಷಿಣೆ ಕಿರುಕುಳ,  ಕಳ್ಳತನ,  ದರೋಡೆ ಮುಂತಾದ ಪ್ರಕರಣಗಳನ್ನು ಮಾಡುವವರ ಹೆಚ್ಚು ಹೆಸರುಗಳು ಯಾವ ಜಾತಿಯವು ಹೆಚ್ಚಾಗಿ ಕಂಡು ಬರುತ್ತವೆ????
ಇಡೀ ದೇಶದ ವಿವಿಧ ಭಾಗಗಳ ಅಪರಾಧ ಪ್ರಕರಣಗಳ ಕುರಿತು ಮಾಹಿತಿ ಕಲೆ ಹಾಕಿದರೆ ಬ್ರಾಹ್ಮಣರಂತಹ ಒಳ್ಳೆಯ ಜನ ಇಡೀ ಜಗತ್ತಿನಲ್ಲಿಯೇ ಸಿಗುವುದಿಲ್ಲ ಎಂಬುದು ಸಾಬೀತಾಗುತ್ತದೆ. 
ಲೋಕಾಯುಕ್ತ ದಾಳಿಗೆ ಒಳಗಾಗಿ,  ಕೋಟ್ಯಂತರ ರೂಪಾಯಿ ಹಣ, ಚಿನ್ನಾಭರಣ ಮತ್ತು ದಾಖಲೆಗಳೊಂದಿಗೆ ಸಿಕ್ಕಿ ಬೀಳುವ ವ್ಯಕ್ತಿಗಳನ್ನು ಗಮನಿಸಿದ್ದೀರಾ???
ಎಲ್ಲರೂ ಬೇರೆಯವರೇ ಇರುತ್ತಾರೆ.  ಬ್ರಷ್ಟರ ಪಟ್ಟಿಯಲ್ಲಿ ಬ್ರಾಹ್ಮಣರ ಹೆಸರು ಇರುವುದು ತುಂಬಾ ಅಪರೂಪ.
ಹಿಂದಿನ ಕಾಲದಿಂದಲೂ ಯಾವುದೇ ಕೆಟ್ಟ ಮಾರ್ಗದ ಮೂಲಕ ಸಂಪಾದನೆ ಮಾಡದಿದ್ದರೂ ಬ್ರಾಹ್ಮಣರಲ್ಲಿ ಹೆಚ್ಚಿನವರು ಅನುಕೂಲವಾಗಿ ಇದ್ದದ್ದಕ್ಕೆ ಕಾರಣಗಳಿವೆ.
ಅದೇ ಜೀವನ ಶೈಲಿಯ ವ್ಯತ್ಯಾಸ!!!!!
ಇತರ ಕೆಲವು ಜಾತಿಗಳ ಜನರು ಬಡತನ ಅನುಭವಿಸುವುದಕ್ಕೆಮುಖ್ಯವಾದ ಕಾರಣ - - - - - ಅತಿಯಾದ  ಕುಡಿತ ಮತ್ತು ಅತಿಯಾದ  ಮಾಂಸಾಹಾರ ಸೇವನೆ.
ಒಬ್ಬರು ಕುಡಿಯಲು ಬೇಕಾಗುವ ಹಣದಿಂದ ಮನೆಮಂದಿಯೆಲ್ಲಾ ಊಟ ಮಾಡಬಹುದು.  ಒಂದು ದಿನ ಮಾಂಸದ ಅಡುಗೆ ಮಾಡಲು ಖರ್ಚಾಗುವ ಹಣದಿಂದ ವಾರಪೂರ್ತಿ ಸಸ್ಯಾಹಾರದ ಅಡುಗೆ ಮಾಡಬಹುದು.
ಕೆಲವರು ಮಾರೀಜಾತ್ರೆಯ ದಿನ ಮಾಡುವ ಖರ್ಚಿನಿಂದ ಬ್ರಾಹ್ಮಣರು 6 ತಿಂಗಳು ಜೀವನ ಮಾಡಬಹುದು.
ಹೆಚ್ಚಿನ ಸಂಖ್ಯೆಯ ಬ್ರಾಹ್ಮಣರು ಯಾವುದೇ ರೀತಿಯ ದುಶ್ಚಟಗಳಿಲ್ಲದೇ ಹಣ ಉಳಿತಾಯ ಮಾಡಿ ಜಮೀನುಗಳನ್ನು ಉಳಿಸಿಕೊಂಡು,  ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸ್ವಲ್ಪ ಬೇರೆಯವರು ಅಸೂಯೆ ಪಡುವ ರೀತಿಯಲ್ಲಿ ಮೊದಲಿನಿಂದಲೂ ಇದ್ದಾರೆ.
ಬ್ರಾಹ್ಮಣರಲ್ಲಿಯೂ ಕೆಲವು ಕುಡುಕರನ್ನು ಗಮನಿಸಿ!!! ಅವರ ಪರಿಸ್ಥಿತಿ ಹೇಗಿದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲಾ ರೀತಿಯಲ್ಲೂ ಕೆಳಮಟ್ಟದಲ್ಲಿರುತ್ತಾರೆ.
ಬ್ರಾಹ್ಮಣರೂ ಕೂಡಾ ಇವರಂತೆ ಯಾವಾಗಲೂ  ಕುಡಿದು, ಅವರು ತಿನ್ನುವುದನ್ನೇ ತಿಂದು ದುಡಿದದ್ದನ್ನೆಲ್ಲಾ ಕಳೆದುಕೊಂಡು,  ಸಾಲ ಮಾಡಿ ಹಾಳಾಗಿ ಹೋಗಿದ್ದರೆ ಯಾರೂ ಅಸೂಯೆ ಪಡುತ್ತಿರಲಿಲ್ಲ. ಶೋಷಕರೆಂದೂ ಕರೆಯುತ್ತಿರಲಿಲ್ಲ.
ಇಷ್ಟಕ್ಕೂ ಬ್ರಾಹ್ಮಣರು ಒಂದು ವೇಳೆ ಯಾರನ್ನಾದರೂ  ಶೋಷಣೆ ಮಾಡಿದ್ದರೂ ಅದು ಸಿವಿಲ್ ಶೋಷಣೆ - : ಕ್ರಿಮಿನಲ್ ಶೋಷಣೆಯಲ್ಲ.
ಬ್ರಾಹ್ಮಣರು ಮಾಡಿದ್ದರೆ ಕೆಲವರನ್ನು ಯಾವುದಾದರೂ ವಿಷಯದಲ್ಲಿ ಅವಕಾಶ ವಂಚಿತರನ್ನಾಗಿ ಮಾಡಿರಬಹುದು. ಅದು ಬಿಟ್ಟು ಬ್ರಾಹ್ಮಣರು ಶೂದ್ರರನ್ನು ಮೈಮುಟ್ಟಿ ಮಾಡುವ ಯಾವುದೇ ರೀತಿಯ ಶೋಷಣೆಯನ್ನು ಮಾಡಿಲ್ಲ. ಅದಕ್ಕೆ ಸಾಕ್ಷಿ ಅಸ್ಪೃಶ್ಯತೆ!!!
ಹೌದು!  ಬ್ರಾಹ್ಮಣರು ಇತರರನ್ನು ಮುಟ್ಟುತ್ತಲೇ ಇರಲಿಲ್ಲವಾದ್ದರಿಂದ ತಾನೇ ಅಸ್ಪೃಶ್ಯತೆ ಆಚರಣೆ ಇದ್ದದ್ದು. 
ಮುಟ್ಟಿಲ್ಲ ಅಂದ ಮೇಲೆ ಮುಟ್ಟಿ ಮಾಡುವ ಯಾವುದೇ ರೀತಿಯ ಶೋಷಣೆಯನ್ನೂ ಬ್ರಾಹ್ಮಣರು ಮಾಡಿಲ್ಲ. - - - - - - ಅಸ್ಪೃಶ್ಯತೆ ಮತ್ತು ಶೋಷಣೆಗಳು, ಎರಡೂ ಒಂದೇ ಸಮಯದಲ್ಲಿ ಇರಲು ಸಾಧ್ಯವಿಲ್ಲ.
ನಿಜವಾದ ಶೋಷಕರ ಎದುರು ದಲಿತರು ಈಗಲೂ ಅಸಹಾಯಕರೇ!!!
ಹೌದು!!! ದಲಿತರ ಮೇಲಿನ ದೌರ್ಜನ್ಯ,  ಮಯಾ೯ದಾ ಹತ್ಯೆ,  ಬೆಂಕಿ ಹಚ್ಚಿ ಸಾಯಿಸುವುದು,  ಮುಂತಾದ ಅಮಾನುಷವಾದ ದೈಹಿಕ ಶೋಷಣೆ ಮಾಡುವ ಜಾತಿಗಳ ಜನರ ವಿರುದ್ಧ ದನಿಯೆತ್ತಲೂ ದಲಿತರಿಂದ ಸಾಧ್ಯವಾಗಿಲ್ಲ.  ಏಕೆಂದರೆ ಬ್ರಾಹ್ಮಣರನ್ನು ಟೀಕಿಸಿದರೆ,  ಅವಹೇಳನ ಮಾಡಿದರೆ ಅಹಿಂಸಾವಾದಿಗಳಾದ ಬ್ರಾಹ್ಮಣರು ಏನೂ ಮಾಡುವುದಿಲ್ಲ.
ಆದರೆ ದಲಿತರ ನಿಜವಾದ ಶೋಷಕರಾದ ಮತ್ತು  ದಲಿತರ ಮೇಲೆ ಕ್ರಿಮಿನಲ್ ಶೋಷಣೆ ಮಾಡುವ ಮಧ್ಯಮ ಶೂದ್ರರು ಅತಿಯಾಗಿ ಸಂಘಟಿತರಾಗಿದ್ದಾರೆ----------.  ಅವರ ಭಯ ಎಷ್ಟಿದೆಯೆಂದರೆ ಬುದ್ಧಿ ಜೀವಿಗಳು ಮತ್ತು ದಲಿತರು ಅವರ ವಿರುದ್ಧ ಹೋರಾಟ ನಡೆಸುವುದಿರಲಿ ಒಂದು ಟೀಕೆಯ ಮಾತನ್ನೂ ಆಡಲು ಹೆದರುತ್ತಾರೆ.
ಅದರಿಂದಲೇ ಲಕ್ಷಾಂತರ ವರ್ಷಗಳಿಂದ ದೇಶವನ್ನು ಮತ್ತು ದುರ್ಬಲರನ್ನು ಮುಂದುವರಿಸಲು ಶ್ರಮಿಸಿದ ಮತ್ತು ಯಾವುದೇ ಟೀಕೆ ಮಾಡಿದರೂ ಏನೂ ಮಾಡದ ಬ್ರಾಹ್ಮಣರನ್ನು ಟೀಕಿಸಿ ಬೇರೆಯವರಿಂದ ತಮಗಾದ ಅನ್ಯಾಯವನ್ನು ಹೊರಹಾಕಿ ಸಮಾದಾನ ಪಟ್ಟುಕೊಳ್ಳುತ್ತಾರೆ.
ಬೇಕಾದರೆ ಪೊಲೀಸ್ ಇಲಾಖೆಯ ದಾಖಲೆಗಳನ್ನು ತೆಗೆಸಿ ನೋಡಲಿ.-------  ಯಾವ ಜಾತಿಗಳ ಜನರ ಮೇಲೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚು ದಾಖಲಾಗಿವೆ ಎಂದು ತಿಳಿಯುತ್ತದೆ.
ಆ ವಿಷಯ ತಿಳಿದರೂ ಸಹ ಭಾರತದ ಯಾವುದೇ ಬುದ್ಧಿ ಜೀವಿಗೂ ಕೂಡಾ ಆ ಮಧ್ಯಮ ಶೂದ್ರರನ್ನು ಶೋಷಕರು ಎಂದು ಒಂದು ಬಹಿರಂಗವಾಗಿ ಪತ್ರಿಕಾ ಹೇಳಿಕೆಯನ್ನು ನೀಡಲು ಧೈರ್ಯ ಬರುವುದಿಲ್ಲ.
ಏಕೆಂದರೆ ಭಾರತದಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದ ಯಾವ ಜಾತಿಯನ್ನು ನಿಂದಿಸಿದರೂ ಆಗುವ ಪರಿಣಾಮವೇ ಬೇರೆ!!!
ಮನೆಯಲ್ಲಿ ಕೂಡಾ ಬ್ರಾಹ್ಮಣರು ಮತ್ತು ಇತರರ ನಡವಳಿಕೆಗಳ ನಡುವೆ ತುಂಬಾ ವ್ಯತ್ಯಾಸವಿದೆ.MALE CHAUVINISM ಬ್ರಾಹ್ಮಣರಲ್ಲಿ ತುಂಬಾ ಕಡಿಮೆ.  ಕುಡಿದು ಬಂದು ಹೆಂಡತಿಯನ್ನು ಒದೆಯುವುದು,  ವರದಕ್ಷಿಣೆ ಹತ್ಯೆ ಮಾಡುವುದು ಇವು ಬ್ರಾಹ್ಮಣರ ಮನೆಗಳಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.
ಬೇರೆಯವರಿಗೆ ಹೋಲಿಸಿದರೆ ಮನೆಯಲ್ಲಿ ಹೆಚ್ಚು ಕೆಲಸ ಮಾಡುವವರು ಬ್ರಾಹ್ಮಣ ಪುರುಷರೇ.
ತರಕಾರಿ ಹೆಚ್ಚಿಕೊಡುವುದು, ಒಮ್ಮೊಮ್ಮೆ ಅಡಿಗೆ ಮಾಡುವುದು,  ಮುಂತಾದ ಸಹಾಯಗಳನ್ನು ತಾಯಿಗೆ ಅಥವಾ ಹೆಂಡತಿಗೆ ಮಾಡುವುದು ಬ್ರಾಹ್ಮಣರು ಮಾತ್ರ.
  ಆದ್ದರಿಂದ ನಾವೊಂದು ತೀರ್ಮಾನಕ್ಕೆ ಬರಬಹುದು. ಅದೇನೆಂದರೆ ಬ್ರಾಹ್ಮಣರೆಂದರೆ ಸಂಪೂರ್ಣವಾದ ನಾಗರಿಕರು.
ಇನ್ನು ಕೆಲವರು ಬ್ರಾಹ್ಮಣರು ಭಾರತದಲ್ಲಿ ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿದರು ಎಂದು ದೂರುತ್ತಾರೆ. ಆದರೆ ಇದರಂತಹ ತಪ್ಪು ಕಲ್ಪನೆ ಮತ್ಯಾವುದೂ ಇಲ್ಲ.
ಬ್ರಾಹ್ಮಣರು ಜಾತಿಪದ್ಧತಿಯನ್ನು ಹುಟ್ಟುಹಾಕಿಲ್ಲ.
ಜಾತಿಗಳನ್ನು ಯಾರಾದರಾಗಲೀ ಸೃಷ್ಟಿಸಲು ಅಥವಾ ನಾಶ ಮಾಡಲು ಸಾಧ್ಯವಿಲ್ಲ. ಜಾತಿಗಳನ್ನು ಬ್ರಾಹ್ಮಣರು ಸೃಷ್ಟಿಸಿರಬಹುದು ಎಂದು ಹೇಳಿದರೆ-------ಉಪಜಾತಿಗಳನ್ನು ಯಾರು ಸೃಷ್ಟಿಸಿದರು??? 
ಲಿಂಗಾಯತ,  ಒಕ್ಕಲಿಗ,  ದಲಿತ,  ಕುರುಬ ಮುಂತಾದ ಜಾತಿಗಳಲ್ಲಿ ನೂರಾರು ಉಪಜಾತಿಗಳಿವೆಯಲ್ಲಾ,  ಅವನ್ನೂ ಬ್ರಾಹ್ಮಣರೇ ಮಾಡಿದರೇ???
ಕ್ರೈಸ್ತರಲ್ಲಿ ಕ್ಯಾಥೊಲಿಕ್,  ಪ್ರೊಟೆಸ್ಟಂಟ್ ಮುಂತಾದ ಜಾತಿಗಳನ್ನು ಹುಟ್ಟು ಹಾಕಿದವರೂ ಸಹ ಬ್ರಾಹ್ಮಣರಾ???
ಮುಸಲ್ಮಾನರಲ್ಲಿ ಶಿಯಾ,  ಸುನ್ನಿ,  ಪಠಾಣ್ ಮುಂತಾದ ಜಾತಿಗಳನ್ನು ಬ್ರಾಹ್ಮಣರೇ ವಿಭಾಗ ಮಾಡಿರುವರೇ?????!!!
ಕ್ರೈಸ್ತ ಮತ್ತು ಮುಸಲ್ಮಾನರಲ್ಲಿ ಯಾರು ಜಾತಿಗಳನ್ನು ಮಾಡಿದರು?????
ಅವನ್ನೆಲ್ಲಾ ಸೃಷ್ಟಿಸಲು ಬ್ರಾಹ್ಮಣರಿಗೇನು ಮಾಡಲು ಬೇರೆ ಕೆಲಸವಿರಲಿಲ್ಲವೇ!!! ಯಾವಾಗಲೂ ಪೂಜೆ,  ಪುನಸ್ಕಾರ,  ಜಪ,  ತಪ ಎಂದು ಭಗವಂತನ ಧ್ಯಾನದಲ್ಲಿದ್ದ ಬ್ರಾಹ್ಮಣರು ಎಲ್ಲರನ್ನೂ ಜನಗಣತಿ ಮಾಡಿ ವಿಭಜನೆ ಮಾಡಿದರೇ????
ಜಾತಿಗಳನ್ನು ಮಾಡಿದರು ಎಂದು ಬ್ರಾಹ್ಮಣರನ್ನು ಟೀಕಿಸುವ ಕಚಡಾ ಮೂರ್ಖರಿಗೆ ಮಾಡಲು  ಬೇರೆ ಕೆಲಸವಿಲ್ಲ.
ಜಾತಿಗಳು ತಾವಾಗಿಯೇ ಹುಟ್ಟಿಕೊಳ್ಳುತ್ತವೆ.
ಆದರೆ ತಾವಾಗಿಯೇ ನಾಶವಾಗುವುದಿಲ್ಲ ಮತ್ತು ಯಾರ ಪ್ರಯತ್ನದಿಂದಲೂ ನಾಶವಾಗುವುದಿಲ್ಲ.
ಪ್ರಪಂಚ ಪ್ರಳಯವಾದರೆ ಮಾತ್ರ ಜಾತಿಗಳು ನಾಶವಾಗುತ್ತವೆ.
ಈ ಲೇಖನವನ್ನು ಎಲ್ಲಾ ಬ್ರಾಹ್ಮಣರ ವಾಟ್ಸಪ್ಪಿನಲ್ಲಿ ಶೇರ್ ಮಾಡಿ ಎಲ್ಲಾ  ಬ್ರಾಹ್ಮಣರಿಗೂ ತಲುಪಿಸಿ.
ಈ ಲೇಖನವನ್ನು ಎಲ್ಲಾ ಭಾಷೆಗಳಿಗೂ ಭಾಷಾಂತರ ಮಾಡಿ ಪೋಸ್ಟ್ ಮಾಡಲು ಪ್ರಯತ್ನಿಸಿರಿ.
By other source