ಭಾನುವಾರ, ಜೂನ್ 25, 2017

ಬ್ರಾಹ್ಮಣನಾರು,

ಬ್ರಾಹ್ಮಣನಾರು, ಈ ಪ್ರಶ್ನೆಗೆ ನಾನು ಕಂಡುಕೊಂಡ ಉತ್ತರ ಹೀಗಿದೆ,
ಮೊನ್ನೆ ರಾಜ್ಯದ ಜನಗಣತಿ ಮುಗಿದಿದೆ ಅದರಲ್ಲಿ ಬ್ರಾಹ್ಮಣರು ಕೇವಲ 13 ಲಕ್ಷಮಾತ್ರ ಎಂದು ತಿಳಿದು ಬಹಳ ಖುಷಿಯಾಯಿತು, ಬ್ರಾಹ್ಮಣರು ಸಂಖ್ಯೆಯಲ್ಲಿ ಕಡಿಮೆ ಇರಬಹುದು ಆದರೆ ಅವರು ಹೇಗಿದ್ದಾರೆ ಗೊತ್ತೇ ...
೧.ಸಾವಿರಾರು ಲೀಟರ್ ಹಾಲನ್ನು ಕಾಯಿಸಿದಾಗ ಹಾಲಿನ ಮೇಲಿನ ಪದರು ಕೆನೆ ಇದೆಯಲ್ಲಾ ಅದುವೇ ಬ್ರಾಹ್ಮಣ,
೨ ಹಾಲನ್ನು ಹೆಪ್ಪಾಕಿ ಮೂಸರಾಗಿಸಿ ಅದನ್ನು ಕಡೆದು ಮೊಸರನ್ನು ಮಜ್ಜಿಗೆಯಾಗಿಸುವ ಕ್ರಿಯೆಯಲ್ಲಿ ಬೆಣ್ಣೆ ಬರುತ್ತದಲ್ಲಾ ಅದು ಬ್ರಾಹ್ಮಣ
೩ ಶರೀರ ಎಷ್ಟೆ ದೊಡ್ಡದಿದ್ದರೂ ನೋಡುವ ಕಣ್ಣುಗಳು, ಉಸಿರಾಡುವ ಮೂಗು , ಕೇಳುವ ಕಿವಿ , ತಿನ್ನು ಬಾಯಿ, ಹೃದಯ , ಕಶ್ಮಲವನ್ನು ಹೊರಹಾಕುವ ರಂದ್ರ ಇದೆಯಲ್ಲ ಅದು ಬ್ರಾಹ್ಮಣ
೪. ಪರಿಸರದಲ್ಲಿ ಎಷ್ಟೇ ಗಾಳಿಯಿದ್ದರೂ ನಾವು ಉಸಿರಾಡುವುದು ಮಾತ್ರ ಅತ್ಯಲ್ಪ ಶುದ್ಧವಾದ ಗಾಳಿ ಅದು ಬ್ರಾಹ್ಮಣ
೫. ನೂರಾರು ಹೂವುಗಳಿದ್ದರೂ ಅದರಿಂದ ದುಂಬಿಯು ತರುವ ಜೇನು ಅದು ಬ್ರಾಹ್ಮಣ
೬. ಸಮುದ್ರ ದಲ್ಲಿ ಎಷ್ಟು ನೀರಿದ್ದರೆನಂತೆ ಅದನ್ನು ಸೋಸಿ ಕುಡಿಯುವ ಶುದ್ಧ ನೀರಿದಿಯಲ್ಲಾ ಅದು ಬ್ರಾಹ್ಮಣ
೭. ಫಲ,ಕಾಯಿ ಎಷ್ಟೇ ದೊಡ್ಡದಿದ್ದರೂ ಅದರೊಲಳಗಿರುವ ಸಣ್ಣ ಬೀಜ ವಿದಯಲ್ಲಾ ಅದು ಬ್ರಾಹ್ಮಣ
೮. ಮಾಡಿದ ಪಕ್ವಾನ್ನ ಎಷ್ಟಿದ್ದರೇನು ಪಕ್ವಾನದಲ್ಲಿ ಇರುವ ರುಚಿ ಇದೆಯಲ್ಲಾ ಅದು ಬ್ರಾಹ್ಮಣ
೯. ಉರಿಯುವ ಸೂರ್ಯನ ಧಗೆಯನ್ನು ತಪ್ಪಿಸಿಕೊಳ್ಳಲು ಕಾಣುವ ನೆರಳಿದೆಯಲ್ಲಾ ಅದು ಬ್ರಾಹ್ಮಣ
೧೦. ದೊಡ್ದ ಸಮಾರಂಭದಲ್ಲಿ ಗಟ್ಟಿಯಾಗಿ ಸುಶ್ರಾವ್ಯವಾಗಿ ಸ್ಪಷ್ಟವಾಗಿ ಹೇಳುವ ಮ೦ತ್ರಗಳಿವೆಯಲ್ಲಾ ಅದು ಬ್ರಾಹ್ಮಣ
೧೧. ರಾಜನಿಗೆ ಸೇವೆಮಾಡುವವರು ಸಾವಿರಾರು ಜನರಿದ್ದರು, ಸರಿಯಾದ ಮಾರ್ಗವನ್ನು ಬೋಧಿಸುವನಿರುತ್ತಾನಲ್ಲ ಅವನು ಬ್ರಾಹ್ಮಣ
೧೨. ॐ सर्वे भवन्तु सुखिनः।
सर्वे सन्तु निरामयाः।
सर्वे भद्राणि पश्यन्तु।
मा कश्चित् दुःख भाग्भवेत्॥
ॐ शान्तिः शान्तिः शान्तिः ॥ ಇದನ್ನು ಹೇಳುವವನಿದ್ದಾನಲ್ಲ ಅವನು ಬ್ರಾಹ್ಮಣ
ಅದ್ದರಿಂದ ನಾವು ಕಡಿಮೆಯಿದ್ದೇವೆ ಎಂಬ ಅಸಮಾಧಾನ ಬೇಡ, ನಾವು ಕಡಿಮೆಯಿದ್ದರೇನಂತೆ ಯಾವುದು ಕಡೆಮೆಯಿರುತ್ತದೋ ಅದರ ಪ್ರಾಮುಖ್ಯತೆ ಜಾಸ್ತಿಯಿರುತ್ತದೆ .
ನಾವು ಬ್ರಾಹ್ಮಣರು
ನಾವು ಕ್ಷತ್ರಿಯ ರಾಮನನ್ನು
ಆದರ್ಶ ಎಂದು ಪೂಜಿಸುತ್ತೇವೆ.
ಗೊಲ್ಲರ ಕ್ರಷ್ಣನನ್ನು
ಪರಮಾತ್ಮ ಎಂದು ಆರಾಧಿಸುತ್ತೇವೆ.
ಮಸಣ ಕಾಯುವ ಈಶ್ವರನನ್ನು
ಪರಮೇಶ್ವರ ಎಂದು ಭಜಿಸುತ್ತೇವೆ.
ಬ್ರಾಹ್ಮಣನಾದ ಬ್ರಹ್ಮನಿಗೆ
ಕೈಯನ್ನೂ ಮುಗಿಯುವುದಿಲ್ಲ...!
ಬ್ರಾಹ್ಮಣನಾದ ರಾವಣನನ್ನು
ದುಷ್ಟ ಎಂದು ಜರಿಯುತ್ತೇವೆ.
ಇಷ್ಟಾಗಿಯೂ ನಾವು
ಪರರ ಕಣ್ಣಿಗೆ ಜಾತಿವಾದಿಗಳು.
ಯಾಕೆಂದರೆ,
ನಾವು ಬ್ರಾಹ್ಮಣರು...!!
ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತೇವೆ.
ಕಲೆ ಸಂಸ್ಕೃತಿಯನ್ನು ಆರಾಧಿಸುತ್ತೇವೆ.
ಯಕ್ಷಗಾನ ಸಂಗೀತವನ್ನು
ಆನಂದಿಸುತ್ತೇವೆ.
ಬೇರೆಯವರು ಮೇಲೇರಲು ನಾವು
ಏಣಿಯಾಗುತ್ತೇವೆ..
ಇಷ್ಟಾಗಿಯೂ ನಾವು
ಪರರ ಕಣ್ಣಿಗೆ ತಾಲಿಬಾನ್ ಸಂಸ್ಕೃತಿಯವರು.
ಯಾಕೆಂದರೆ,
ನಾವು ಬ್ರಾಹ್ಮಣರು...!!
ಕಣ್ಣಿಲ್ಲದವರಿಗೆ ಕಣ್ಣು ನೀಡಲಾಗದಿದ್ದರೂ
ಕನ್ನಡಕ ನೀಡುತ್ತೇವೆ.
ಅನ್ನ ನೀಡಲಾಗದಿದ್ದರೂ,
ಗಂಜಿ ನೀಡುತ್ತೇವೆ.
ಆದರೂ,ಪರರ ಕಣ್ಣಿಗೆ ನಾವು 
ಶೋಷಣೆ ಮಾಡುವವರಾಗಿದ್ದೇವೆ.
ಯಾಕೆಂದರೆ,
ನಾವು ಬ್ರಾಹ್ಮಣರು...!!
ಸರ್ಕಾರದ ಸವಲತ್ತು ಸಿಗದೇ ಇದ್ದಾಗ,
ದೇವರು ಕೊಟ್ಟಿದ್ದಾನಲ್ಲಾ ಎನ್ನುತ್ತೇವೆ.
ಮೀಸಲಾತಿಯಿಂದ ಅನ್ಯಾಯವಾದರೆ,
ಮಕ್ಕಳನ್ನು ಸಾಲ ಮಾಡಿ ಓದಿಸಿ,
ಖಾಸಗಿ ಕಂಪನಿಗೆ ಕಳಿಸುತ್ತೇವೆ.
ನಾವು ದೇಶಕ್ಕೆ ಮಣ್ಣಿಗೆ ಕೊಡುಗೆ
ನೀಡುತ್ತ ಕೂರುತ್ತೇವೆ.
 ಯಾಕೆಂದರೆ, 
ನಾವು ಬ್ರಾಹ್ಮಣರು...!!
ಎಲ್ಲವನ್ನೂ ಬೈಸಿಕೊಂಡು
ಎಲ್ಲರನ್ನೂ ಜಯಿಸಿದವರು...!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ