ಕಾಳ ಸರ್ಪಯೋಗ ವಿಶೇಷ ಮಾಹಿತಿ
ನಮ್ಮ ಏಳಿಗೆಗೆ ಕಾರಣವಾದ ಎಲ್ಲಗ್ರಹಗಳೂ ರಾಹು ಹಾಗೂ ಕೇತುಗಳ ಮಧ್ಯದಲ್ಲಿ ಬಂದಾಗ ಅದು ಸಂಪೂರ್ಣ ಕಾಳಸರ್ಪಯೋಗ
ರಾಹು ಎಂದರೆ ಸರ್ಪದ ಹೆಡೆ ಕೇತು ಎಂದರೆ ಸರ್ಪದ ಬಾಲ
ಈ ಹೆಡೆ ಹಾಗೂ ಬಾಲದ ಮಧ್ಯದಲ್ಲಿರುವದೇ ಸರ್ಪದ ದೇಹ
ನಮ್ಮ ಏಳಿಗೆಗೆ ಕಾರಣವಾದ ಗ್ರಹಗಳು ಹೆಡೆ ಹಾಗೂ ಬಾಲದ ಮಧ್ಯದಲ್ಲಿದ್ದಾಗ
ನಾವು ಯಾವದೇ ಕಾರ್ಯವನ್ನು ಎಷ್ಟೇ ಪ್ರಯತ್ನ ಪಟ್ಟರೂ ಕೊನೆಯ ಹಂತದ ವರೆಗೆ ಆದಹಾಗೆ ಆಗಿ
ಲಾಸ್ಟ್ ಮೊಮೆಂಟ್ ನಲ್ಲಿ ಫೇಲ್ ಆಗತ್ತೆ
ಅರ್ಧಕಾಲಸರ್ಪ ವಾಗಲಿ ಸಂಪೂರ್ಣ ಕಾಳಸರ್ಪವಾಗಲಿ ನಮ್ಮ ಗ್ರಹಗತಿಗಳಿಗೆ ಅನುಸಾರವಾಗಿ ಇರುತ್ತವೆ
ಈ ಯೋಗಗಳು ಬಂದಾಗ ಅದರ ಫಲಗಳು ಸಿಗುವದ ನಮ್ಮ ನಮ್ಮ ಪೂರ್ವಜನ್ಮದ ಕರ್ಮಾನುಸಾರ ಹಾಗೂ ಅದಕ್ಕಿಂತ ಮಹತ್ವ ಅಂದರೆ ಶಿಂಶುಮಾರ ಪರಮಾತ್ಮನ ಆಜ್ಞೆಯಿಂದ
ಹೀಗಾಗಿ ಈ ಯೋಗಗಳು ಬಂದಾಗ ಭಗವಂತನಲ್ಲಿ ವಿಶೇಷವಾದ ಭಕ್ತಿಯನ್ನಿಟ್ಟು ,
ಶ್ರೀಮದ್ಭಾಗವತದಲ್ಲೊ ಬರುಬ ಶಿಂಶುಮಾರ ರೂಪಿ ಭಗವಂತನ ಧ್ಯಾನ ಶ್ಲೋಕವನ್ನು ಭಕ್ತಿಯಿಂದ
ಜಪ ಮಾಡಬೇಕು , ಹಾಗೆಯೇ , ಸರ್ಪ ಅಷ್ಟಕುಲನಾಗಗಳ ನಿಯಾಮಕನಾದ ಅನಂತ ನಾಮಕ ಭಗವಂತನ
ಸ್ತೋತ್ರರೂಪವಾದ ಮೂಲಮಂತ್ರವನ್ನು ಭಕ್ತಿಯಿಂದ ಜಪ ಮಾಡಬೇಕು
ಜಪ , ಅರ್ಘ್ಯ , ಹಾಗೂ ಹೋಮ ಈ ಪ್ರಕ್ರಿಯೆಗಳನ್ನು ಶ್ರದ್ಧೆಯಿಂದ ಭಕ್ತಿ
ವಿಶ್ವಾಸಗಳಿಂದ ಮಾಡುವದರಿಂದ ಈ ದೋಷದ ದುಷ್ಟಫಲ ಭಗವಂತ ಪರಮಾನುಗ್ರಹದಿಂದ
ನಿವಾರಣೆಯಾಗುವದು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ