ಭಾನುವಾರ, ಜೂನ್ 25, 2017

ಗಗನಗೋಚರೀ ವಸುಂಧರಾ ದಿಂದ

ನಮಸ್ತೇ!!! ಗಗನಗೋಚರೀ ವಸುಂಧರಾ ದಿಂದ ಅಹೋರಾತ್ರ ನಟೇಶ ಪೋಲೇಪಲ್ಲಿ. ವಿಶ್ವವೆಲ್ಲಾ ವ್ಯಾಪಿಸಿರುವವನು ವಿಷ್ಣು. ಕಾಶ್ಯಪ ಶಿಲ್ಪಶಾಸ್ತ್ರ ಹೇಳುವಂತೆ ಈ ಜಗತ್ತು ವಿಶ್ವಕರ್ಮನು ಮಾಡಿದ ಪಂಚಭೂತಗಳ ಪಂಚೀಕರಣದಿಂದಾಗಿದೆ.. ಪಂಚೀರಣವೆಂದರೇ ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿ  ಇವುಗಳ ಮಿಶ್ರಣದ ಪ್ರಮಾಣೀಕರಣ. ಉದಾಹರಣೆಗೆ  ಆಕಾಶದ ನಾಲ್ಕು ಭಾಗ ಮತ್ತು ವಾಯುವಿನ ಒಂದು ಭಾಗ ಸೇರಿಸಿದರು, ಹೀಗೆ ನಮಗೆಲ್ಲಾ ಗೊತ್ತಿರುವಂತೆ ವೈಜ್ಞಾನಿಕವಾಗಿ  ಪೃಥ್ವಿಯ ಒಂದು ಭಾಗ ಜಲದ ಎರಡುಭಾಗ ಸೇರಿ ಭೂಮಿಯಾಯಿತಲ್ಲವೇ. ಈ ಏಲ್ಲಾ ಮಿಶ್ರಣಗಳ ಪಂಚೀಕರಣದಿಂದಲೇ ಈ ಜಗತ್ತನ್ನು ನಾವು ಪ್ರಪಂಚವೆನ್ನುವುದು. ನಮ್ಮ ದೇಶದಲ್ಲಿ ಊರಿಗೊಂದು ದೇವಾಲಯವಿರುವುದು ಸಹಜ, ಆದರೇ ಕೆಲವು ತೀರ್ಥಕ್ಷೇತ್ರಗಳು ದೇವಾಯತನದಿಂದ ಊರಾಗಿರುವುದು ಆಶ್ಚರ್ಯವುಂಟುಮಾಡುತ್ತವೆ. ಅದಕ್ಕೆ ಸಾಕ್ಷಿಯೆಂಬಂತೆ, ತಿರುಪತಿ, ಶ್ರೀರಂಗಂ, ಮೇಲುಕೋಟೆ, ಗಯಾ ಮುಂತಾದ ವೈಷ್ಣವ ಕ್ಷೇತ್ರಗಳೂ, ೫೧ ಶಕ್ತಿ ಪೀಠಗಳು, ೧೨ ಜ್ಯೋತಿರ್ಲಿಂಗಗಳೂ, ತಮಿಳುನಾಡಿನ ೬ ಕುಮಾರ ಕ್ಷೇತ್ರಗಳೂ ಮತ್ತು ನಾವಿಂದು ಅಭ್ಯಾಸ ಮಾಡಲು ಹೊರಟಿರುವ ಪಂಚಭೂತಗಳನ್ನು ಪ್ರತಿನಿಧಿಸುವ ಪಂಚಲಿಂಗ ಕ್ಷೇತ್ರಗಳಾದ 
೧. ಚಿದಂಬರಂನ ಆಕಾಶ ಲಿಂಗ, 
೨. ಶ್ರೀ ಕಾಳಹಸ್ತಿಯ ವಾಯು ಲಿಂಗ,
೩. ತಿರುವಣ್ಣಾಮಲೈನ ಅಗ್ನಿ ಲಿಂಗ,
೪. ತಿರುವನೈಕಾವಲ್ ನ ಜಲ ಲಿಂಗ, ಹಾಗು
೫. ಕಾಂಚಿಪುರದ ಪೃಥ್ವಿ ಲಿಂಗ.
ಅಭ್ಯಾಸದ ಸಮಯದಲ್ಲಿ ಕಂಡದ್ದೆಂದರೇ
ಈ ಐದೂ ಕ್ಷೇತ್ರಗಳೂ ಮಾನವ ನಿರ್ಮಿತ ದೇವಾಲಯಗಳನ್ನು ಹೊಂದಿದ್ದರೂ ಅವು ದೈವ ನಿರ್ಧಾರದಿಂದಾದ ಲಿಂಗಾಯತನಗಳು. 
ಸಮುದ್ರ ಮಟ್ಟಕ್ಕೆ ಅತ್ಯಂತ ಹತ್ತಿರವಾಗಿರುವ ಚಿದಂಬರಂ ದೇಗುಲ ಅಲ್ಲಿರುವುದರ ಕಾರಣ ಚಿದಂಬರ ರಹಸ್ಯಮಾಗಿಯೇ ಉಳಿದಿದೆ. 
ರತ್ನಾಕರ ಸಮುದ್ರದ ನೀರಿನ ಹರಿವು ತಡೆಯಲು ದೇವನಿರ್ಮಿತ ಅಣೆಕಟ್ಟೆಯಾದ ಆದಿಶೇಷ ಪರ್ವತವು ಮರುತಗಳನ್ನೂ ತಡೆಹಿಡಿದಾಗ ಆ ವಾಯುವಿಗೆ ದಾರಿಯಾದ ಶ್ರೀಕಾಳಹಸ್ತಿಯು ವಾಯುರ್ಲಿಂಗ ಕ್ಷೇತ್ರವಾಯಿತು, 
ಆಕಾಶ ವಾಯುಗಳ ನಡುವೆ ಉದ್ಭವಿಸಿದ ತೇಜೋಕಾಂತಿ ಅಗ್ನಿಯಾಗಿ ಅರುಣಾಚಲಾದ್ರಿಯ ಮೇಲೆ ಅಗ್ನಿಪರ್ವತವಾಗಿ ಆ ಕ್ಷೇತ್ರ ಅಗ್ನಿಲಿಂಗವಾಯಿತು. ತಿರಿಚಿನಪಳ್ಳಿಯ ಕಾವೇರಿ ತೀರದಲ್ಲಿ ಜಲಪ್ರತಿನಿಧಿ ಜಂಭುಲಿಂಗವಾಯಿತು. ಎಲ್ಲಕ್ಕಿಂತ ಅಶ್ಚರ್ಯವೆಂದರೇ ಪೃಥ್ವಿ ಲಿಂಗವು ಏಕಾಂಬರನಾಗಿ ಕಾಂಚಿಪುರದಲ್ಲಿ ನೆಲೆಸಿದ್ದು ಈ ದೇವಾಲಯವು ಚಿದಂಬರಂನ ನಟರಾಜ ದೇವಾಲಯದಿಂದ ಶ್ರೀಕಾಳಹಸ್ತಿಯ ಕಾಳಹಸ್ತೀಶ್ವರಾಲಯದ ವರೆವಿಗೂ ಇರುವ ೨೬೦ ಕಿ.ಮೀ. ಅಂತರವನ್ನು ಸೇರಿಸಿದ ಸರಳರೇಖೆಯ ನಡುವೆಯೇ ಚಿದಂಬರಂ ಗರ್ಭಗೃಹ ಗೋಪುರದಿಂದ ೧೬೦ ಕಿ.ಮೀ ಹಾಗೂ ಕಾಳಹಸ್ತೀಶ್ವರನ ವಿಮಾನ ಗೋಪುರದಿಂದ ೧೦೦ ಕಿ..ಮೀ. ಅಂತರದಲ್ಲಿ ಆರೇಖೆಯ ಮೇಲೇ ಇರುವುದನ್ನು ಗಮನಿಸಿ ನಖಶಿಖಾಂತ ವಿದ್ಯುತ್ ಸಂಚಾರವಾಯಿತು. ಸುಮಾರು ೮೬೯೦೦೦ ವರ್ಷಗಳ ಹಿಂದೆ ಶಿವಾವತರಣಕಾಲದಲ್ಲಿ ಮನುಷ್ಯಮಾತ್ರನಿಂದ ಮಾಡಲಸಾಧ್ಯವಾದ  ಈ ನಿಖರತೆ ವಿವಿಧ ನಕ್ಷತ್ರ ಲೋಕಗಳಿಂದ ಬಂದ ದೇವತೆಗಳಿಂದ ಮಾತ್ರ ಮಾಡಲು ಸಾಧ್ಯವೆಂದರ್ಥವಾಯಿತು. ಈ ಐದೂ ವಿಮಾನ ಗೋಪುರಗಳನ್ನು ಸರಳ ರೇಖೆಗಳಿಂದ ಕೂಡಿಸಿದಾಗ ಬಂದ ಆಕೃತಿಯು ಪಂಚೀಕರಣದ ಎಲ್ಲ ಸೂತ್ರಗಳನ್ನು ಬಿಡಿಸುತ್ತಾ ಹೋಯಿತು. ಉದಾಹರಣೆಗೆ  ಅಕಾಶ ವಾಯು ಮತ್ತು ಅಗ್ನಿಯಿಂದಾಗುವ ತ್ರಿಕೋಣವನ್ನು ಬೇಧಿಸುವ ಪೃಥ್ವಿ ಅಗ್ನಿಯ ರೇಖೆ ಅಗ್ನಿಯಲ್ಲಿ ನಿರ್ಮಾಣ ಮಾಡುವ ಎರಡು ಕೋನಗಳು ಪಂಚೀಕರಣ ಪ್ರಮಾಣವಾದ ಅಕಾಶ : ವಾಯು 
= ೪:೧ ರ ಅನುಪಾತವನ್ನು ಸಿದ್ಧಮಾಡುತ್ತದೆ. ಹೀಗೆ ಅಗ್ನಿ ಆಕಾಶ ರೇಖೆಯು ಅಕಾಶದಲ್ಲಿ ಉಂಟುಮಾಡುವ ಕೋನಗಳು ಜಲ: ಭೂಮೀ= ೨:೧ರ ಅನುಪಾತ ಎಂದು ಸಾಧಿಸುತ್ತದೆ. ಇಷ್ಟೇ ಅಲ್ಲ ಈ ಜ್ಯಾಮಿತೀಯು ಸಾಧಿಸುವ ಪ್ರಮೇಯಗಳ ಸಂಖ್ಯೆ ೧೨೦ಕ್ಕೂ ಹೆಚ್ಚು. ಅಮೃತದ ರುಚಿ ಹೇಗೆ ವರ್ಣಿಸಲಸದಳವೋ ಹಾಗೇ ಇವೆಲ್ಲವುಗಳನ್ನು  ನಿಮ್ಮೊಡನೆ ಹಂಚಿಕೊಳ್ಳಲಾಗುತ್ತಿಲ್ಲ ಕ್ಷಮೆಯಿರಲಿ. ಪಂಚಲಿಂಗಾಯತನಗಳ ಬಗ್ಗೆ ಹಿಂದಿನ ಪಂಚೀಕರಣ ಎಂಬ ಸಂಚಿಕೆಯಲ್ಲಿ ನೋಡಿದ್ದೀರಿ. ಅದರ ಗುಂಗಿನಲ್ಲೇ ಮುಳುಗಿದ್ದಾಗ ಚಿದಂಬರ, ಕಂಚಿ ಮತ್ತು ಕಾಳಹಸ್ತಿ ಈ ಮೂರು ಲಿಂಗಾಯತನಗಳೂ ಏಕರೇಖೆಯಲ್ಲಿ ಏಕೆ ನಿಂತಿವೆ ಎಂಬ ಗೊಂದಲದ ಪ್ರಶ್ನೆಯೋಂದು ಗಾಢವಾಗಿ ಕಾಡುತ್ತಿರಲು ಹೊಳೆದ ಉತ್ತರವನ್ನು ತಮ್ಮಲ್ಲಿ ಹಂಚಿಕೊಳ್ಳದೇ ಇರಲಾಗಲಿಲ್ಲ. ಆ ಅದ್ಭುತವನ್ನು ವೀಕ್ಷಿಸಿ. ಚಿದಂಬರದ ದೇವಳಗೋಪುರದಿಂದ ಉತ್ತರ ಧ್ರುವಕ್ಕೂ ಹಾಗೂ ದಕ್ಷಿಣ ಧ್ರುವಕ್ಕೂ ಒಂದು ಸರಳರೇಖೆಯಿಂದ ಸೇರಿಸಿದಾಗ ಗೋಚರಿಸಿದ ವಿಹಂಗಮನೋಟವೇ ಆ ವಿಸ್ಮಯ. ಮೂರೂ ದೇವಾಲಯಗಳು ಆ ರೇಖೆಯ ಮೇಲೆ ನಿಂತಿವೆ. ಈ ಉತ್ತರ ದಕ್ಷಿಣ ಧ್ರುವಗಳು ನಮ್ಮ ಭೂಮಿಗೆ ಮಾತ್ರ ಸೀಮಿತವಲ್ಲ ಅಣುರೇಣುವಿನಿಂದ ಹಿಡಿದು ಬ್ರಹ್ಮಾಂಡದವರವಿಗೂ ಅನ್ವಯಿಸುತ್ತವೆ. ಪುರಾಣಗಳು ಹೇಳುವ ಹಾಗೆ ಈ ವಿಶ್ವದ ಉತ್ತರ ಧ್ರುವ ದಿಂದ ಧ್ರುವ ನಕ್ಷತ್ರ ಹಾಗೂ ದಕ್ಷಿಣ ಧ್ರುವದಿಂದ ಅಗಸ್ತ್ಯ ನಕ್ಷತ್ರ ಸೇರಿ ತಮ್ಮ ನಡುವೆ ಇರುವ ಈ ಆಕಾಶಗಂಗೆಯ ಎಲ್ಲಾ ನಕ್ಷತ್ರಗಳನ್ನೂ ಹಾಗೂ ಅವುಗಳ ಗ್ರಹ ಉಪಗ್ರಹಗಳನ್ನು ತಮ್ಮ ತಮ್ಮ ಅಕ್ಷದ ಸುತ್ತ ಸುತ್ತುತ್ತಾ ತಾವಿರುವ ಲೋಕದ ಮೂಲ ಕೇಂದ್ರದ ಗ್ರಹನಕ್ಷತ್ರಗಳ ಸುತ್ತಾ ಸುತ್ತುವಂತೆ ಮಾಡುತ್ತಿದ್ದಾರೆ. ಹಾಗಾಗಿ ಈ ಬ್ರಹ್ಮಾಂಡದ ಧ್ರುವಗಳು ಏಲ್ಲ ಚರಾಚರ ಲೋಕಗಳ ಧ್ರುವಗಳನ್ನು ಸೇರಿಸಿವೆ. ಹೀಗಿರುವಾಗ ಈ ಮೂರು ಆಲಯಗಳ ರೇಖೆಯು ಆ ಎರಡು ಧ್ರುವಗಳನ್ನು ಸೇರುವುದು ಖಚಿತವಾಯಿತಲ್ಲವೇ. ಈ ಊಹನಾ ಸಿದ್ಧಾಂತದಿಂದ ಭೂಮಿಯಾರಂಭಕಾಲದ ಭೂರಚನೆಗೆಂದು ಬಂದಂತಹ ಆ ದೇವಗಂಧರ್ವರೆಂಬ ವಿವಿಧ ಗ್ರಹನಕ್ಷತ್ರ ವಾಸಿಗಳು ತಮ್ಮ ಲೋಕಗಳಿಗೆ ಸಂಪರ್ಕಸಾಧಿಸಲು ಬಳಸಿದ ದೇವಾಯತನಗಳಾಗಿದ್ದವು ಎಂದು ಹೇಳಬಹುದಲ್ಲವೇ? ಯೋಚಿಸಿ ನೋಡಿ.  ಅಹೋರಾತ್ರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ