ಸೋಮವಾರ, ಜೂನ್ 19, 2017

ಗೋವಿನ ಮಹತ್ವ

ಗೋವಿನ ಮಹತ್ವ ಮತ್ತು ರಾಜೀವ್ ದೀಕ್ಷಿತರ ಕಾನೂನು ಹೋರಾಟ
ರಾಜೀವ್ ದೀಕ್ಷಿತರ ವ್ಯಾಖ್ಯಾನದ ಲೇಖನದ ರೂಪ

ಈ ಅವತರಣಿಕೆಯನ್ನು ಎಲ್ಲರೂ ಪೂರ್ತಿಯಾಗಿ ಓದಬೇಕೆಂದು ವಿನಂತಿ. ಇದು ನನಗೆ ನನ್ನ ಆತ್ಮೀಯರೊಬ್ಬರಿಂದ ಆಂಗ್ಲ ಭಾಷೆಯಲ್ಲಿ ಬಂದ ಅವತರಣಿಕೆ. ಅದು ಕನ್ನಡದಲ್ಲಿ ಇದ್ದರೆ, ಎಲ್ಲರಿಗೂ ಸುಲಭವಾಗಿ ತಿಳಿಯುವದೆಂಬ ಭಾವನೆಯಿಂದ ಇದನ್ನು ಅನುವಾದ ಮಾಡಿದ್ದೇನೆ. ಇದರಿಂದ ನಮ್ಮಲ್ಲಿ ಜಾಗ್ರತಿ ಆದರೆ, ನನ್ನ ಶ್ರಮ ಸಾರ್ಥಕ ಎಂದು ನನ್ನ ಭಾವನೆ. *ದಯವಿಟ್ಟು ಓದಿ, ನಿಮ್ಮ ಅಭಿಪ್ರಾಯ ತಿಳಿಸಿ. ನಿಮಗೆ ಒಪ್ಪಿಗೆ ಆದರೆ, ನಿಮ್ಮ ಮಿತ್ರ, ಬಂಧುಗಳಿಗೂ ಕಳಿಸಿರಿ*

ಇದು ನಾವೆಲ್ಲರೂ ಅವಶ್ಯವಾಗಿ ಓದಲೇಬೇಕಾದ ಅವತರಣಿಕೆ. ದಯವಿಟ್ಟು ಇದನ್ನು ಪೂರ್ತಿಯಾಗಿ ಓದಿ. ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೂ ಸಾಧ್ಯವಾದಷ್ಟು ಮುಂದುವರಿಕೆ ಮಾಡಿ. ವಾಸ್ತವ ಎಲ್ಲರಿಗೂ ತಿಳಿಯಲಿ. ಗೋಸುಂಬೆ ರಾಜಕಾರಣಿಗಳು ಮಾಡುವ ಅನ್ಯಾಯದ ಅರಿವು ಎಲ್ಲರಿಗೂ ಗೊತ್ತಾಗಲಿ. ನಮ್ಮ ದೇಶದ ಗೋಸಂಪತ್ತಿನ ರಕ್ಷಣೆಯಾಗಲಿ.

ನಾವು ಏಕೆ ಗೋಮಾಂಸ ಸೇವನೆಯನ್ನು ವಿರೋಧಿಸುತ್ತೇವೆ ಮತ್ತು ಆಕಳನ್ನು ಪ್ರೀತಿಸಿ, ಪೂಜಿಸುತ್ತೇವೆ ಎಂಬುದಕ್ಕೆ ಬಲವಾದ ಕಾರಣಗಳು.
=======================

ಪ್ರಪ್ರಥಮವಾಗಿ ನಾವು ಅರಿಯಲೇ ಬೇಕಾದ ಸಂಗತಿ ಎಂದರೆ, ಭಾರತದಲ್ಲಿ ಹಸುಗಳನ್ನು ವಧಿಸಲು ಅಧಿಕೃತವಾಗಿ ಅನುಮತಿ ಪಡೆದ ಸರಿಸುಮಾರು ೩,೬೦೦ ವಧಾಗೃಹಗಳಿವೆ. ಇದರ ಹೊರತಾಗಿ ಅಧಿಕೃತ ಅನುಮತಿಯೇ ಇಲ್ಲದಂಥ ೩೬,೦೦೦ಕ್ಕೂ ಮಿಕ್ಕಿದ ಸಂಖ್ಯೆಯ ಕಾನೂನುಬಾಹಿರ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿವೆ! ಹೆಚ್ಚೂಕಡಿಮೆ ಎರಡೂವರೆ ಕೋಟಿ ಹಸುಗಳು ಪ್ರತಿವರ್ಷ ಹತ್ಯೆಮಾಡಲ್ಪಡುತ್ತವೆ. ಇವುಗಳ ಹೊರತಾಗಿ, ಒಂದೂಕಾಲು ಕೋಟಿ ಎಮ್ಮೆ-ಕೋಣಗಳು, ಎರಡರಿಂದ ಮೂರು ಕೋಟಿ ಹಂದಿಗಳು, ಅಗಣಿತ ಸಂಖ್ಯೆಯ ಆಡುಗಳು, ಕುರಿ-ಕೋಳಿ ಇತ್ಯಾದಿಗಳಂತಹ ಚಿಕ್ಕ ಜೀವಿಗಳು ಕೊಲ್ಲಲ್ಪಡುವದರಿಂದ ನಮ್ಮ ದೇಶ ಭಾರತವು, ವಿಶ್ವದ ಕಸಾಯಿಕೇಂದ್ರಗಳ ರಾಜಧಾನಿ ಎನಿಸಲ್ಪಟ್ಟಿದೆ!

ಇದನ್ನು ಗಮನಿಸಿದ ಕೆಲವು ಸಮಾನಮನಸ್ಕ ಪ್ರಜೆಗಳು, ರಾಜೀವಭಾಯಿಯವರ ಮುಂದಾಳತ್ವದಲ್ಲಿ ೧೯೯೮ರಲ್ಲಿ, ಒಂದು ತಂಡವನ್ನು ರಚಿಸಿ, ವರಿಷ್ಠ ನ್ಯಾಯಾಲಯದಲ್ಲಿ ಒಂದು ಮೊಕದ್ದಮೆಯನ್ನು ದಾಖಲಿಸುತ್ತಾರೆ. ಇಲ್ಲಿ ಈ ಸಂಬಂಧ ಎರಡು ಸಂಸ್ಥೆಗಳಿವೆ. ಮೊದಲನೆಯದು ರಾಜೀವಭಾಯಿ ಅವರಿಗೆ ಸಂಬಂಧಿಸಿದ "ಅಖಿಲ ಭಾರತೀಯ ಗೋ ಸೇವಕ ಸಂಘ" (ಇದು ರಾಜೀವಭಾಯಿ ಅವರ ಹುಟ್ಟೂರಾದ ವರ್ಧಾದಲ್ಲಿ ಮುಖ್ಯ ಕಚೇರಿಯನ್ನು ಹೊಂದಿದೆ) ಮತ್ತು ಇನ್ನೊಂದು, "ಅಹಿಂಸಾ ಆರ್ಮಿ ಥ್ರಸ್ಟ್". ಇವೆರಡೂ ಸೇರಿ, ಜಂಟಿಯಾಗಿ ಮೊಕದ್ದಮೆಯನ್ನು ದಾಖಲಿಸುತ್ತಾರೆ. ಅಂತಿಮ ಹಂತದಲ್ಲಿ, ಗುಜರಾತ್ ಸರಕಾರವೂ ಇವರೊಂದಿಗೆ ಕೈಜೋಡಿಸಿ, ಕೂಡಿಕೊಳ್ಳುತ್ತದೆ.

ಹಸು-ದನಕರುಗಳ ಹತ್ಯೆ ಮಾಡುವುದನ್ನು ಪ್ರತಿಬಂಧಿಸಬೇಕು ಎಂದು ಮೊಕದ್ದಮೆಯನ್ನು ದಾಖಲು ಮಾಡಲಾಯಿತು. ಪ್ರತಿವಾದಿಗಳಾಗಿ ಕಟುಕರ ಗುಂಪು ನಿಂತು, ಯಾಕೆ ಜಾನುವಾರುಗಳನ್ನು ಹತ್ಯೆ ಮಾಡಬಾರದು? ಎಂಬ ಸವಾಲನ್ನು ಹಾಕಿತು.

ರಾಜೀವಭಾಯಿಯವರು, ಇದೊಂದು ಅತ್ಯಂತ ಗಂಭೀರವಾದ ವಿಷಯವಾಗಿದ್ದುದರಿಂದ, ಕೇವಲ ಎರಡು ನ್ಯಾಯಾಧೀಶರನ್ನು ಒಳಗೊಂಡ ಪೀಠಕ್ಕೆ ಬದಲಾಗಿ ಹೆಚ್ಚಿನ ಸದಸ್ಯರನ್ನು ಒಳಗೊಂಡ ನ್ಯಾಯಪೀಠವನ್ನು ಸ್ಥಾಪಿಸಲು ವಿನಂತಿಸಿದರು. ಕೊನೆಗೂ ಘನ ನ್ಯಾಯಾಲಯವು ಈ ಬೇಡಿಕೆಗೆ ಸಮ್ಮತಿಸಿ, ಸರಿಸುಮಾರು ೩-೪ ವರ್ಷಗಳ ನಂತರ ಒಂದು ಸಾಂವಿಧಾನಿಕ ನ್ಯಾಯಪೀಠದ ರಚನೆ ಮಾಡಿತು. ಮಾನ್ಯ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ಆರ್.ಸಿ.ಲಾಹೋಟಿಯವರ ಘನ ಅಧ್ಯಕ್ಷತೆಯಲ್ಲಿ, ಏಳು ಜನ ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ನ್ಯಾಯಪೀಠವನ್ನು ರಚಿಸಲಾಯಿತು. ವಿಚಾರಣೆಗಳು ೨೦೦೪ರಿಂದ ಸೆಪ್ಟೆಂಬರ್ ೨೦೦೫ರ ವರೆಗೆ ನಡೆದವು.

ಕಟುಕರ ತಂಡವು ತಮ್ಮ ಪರವಾಗಿ ವಾದಿಸಲು, ಅತ್ಯಂತ ವರ್ಚಸ್ವಿ ನ್ಯಾಯವಾದಿಗಳನ್ನು ೫೦ ಲಕ್ಷ ರೂ. ಗಳಿಗೂ ಹೆಚ್ಚಿನ ಸಂಭಾವನೆ ನೀಡಿ ನೇಮಿಸಿಕೊಂಡಿತು. ಅವರಲ್ಲಿ ಕೆಲವು ಪ್ರಸಿದ್ಧರ ವಿವರ ಇಂತಿದೆ. ಸೋಲಿ ಸೊರಾಬ್ಜಿ ರೂ. ೨೦ ಲಕ್ಷ, ಕಪಿಲ್ ಸಿಬ್ಬಲ್ ರೂ. ೨೨ ಲಕ್ಷ, ರಾಮ್ ಜೇಠ್ಮಲಾನಿಯವರ ಮಹೇಶ್ ಜೇಠ್ಮಲಾನಿ ರೂ ೩೨ರಿಂದ ೩೫ ಲಕ್ಷ ಸಂಭಾವನೆ! ಇವರೆಲ್ಲರೂ ಕಟುಕರ ಪಕ್ಷ ವಹಿಸಿದ ಮಹಾನುಭಾವರು!

ರಾಜೀವಭಾಯಿಯವರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಧನಸಂಚಯವಿಲ್ಲದ ಕಾರಣ, ಅವರ ಪರವಾಗಿ ವಾದಿಸಲು ಒಬ್ಬ ವಕೀಲರನ್ನೂ ಸಹ ನೇಮಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವಿಷಯವನ್ನು ನ್ಯಾಯಾಲಯಕ್ಕೆ ಅರುಹಿದರು. ನಾವೇ ನಿಮಗೆ ಒಬ್ಬ ವಕೀಲರನ್ನು ಒದಗಿಸಿಕೊಡಬಹುದೇ ಎಂದು ನ್ಯಾಯಾಲಯವು ಕೇಳಿತು. ಅದು ನಿಜವಾಗಿಯೂ ಸಹಾಯಕಾರಿ ಆಗಬಹುದೆಂದು ರಾಜೀವಭಾಯಿ ಹೇಳಿದರಾದರೂ, ನಮ್ಮ ಸ್ವಂತ ಪ್ರಕರಣವನ್ನು ವಾದ ಮಾಡಲು, ನಮಗೇ ಅನುಮತಿ ನೀಡಿದರೆ, ಅದು ಖಂಡಿತ ಘನವಾದದ್ದಾಗುತ್ತದೆ ಎಂದು ವಿನಂತಿಸಿದರು. ನ್ಯಾಯಾಲಯವು ಇದಕ್ಕೆ ಅನುಮತಿ ನೀಡಿತು ಮತ್ತು ಎಮ್.ಇ.ಎಸ್ಕೂರಿಯನ್ನು ನೇಮಿಸಿದ ನಂತರ ಅವರು ತಮ್ಮ ಪ್ರಕರಣವನ್ನು ಆರಂಭಿಸಿದರು.

ಮೆಕಾಲೆಯ ಶಿಕ್ಷಣ ಪದ್ಧತಿಯಿಂದ ಪ್ರೇರಿತರಾದ ಶ್ರೀ ಶರದ್ ಪವಾರ್ ನೆಹರು ಅಥವಾ ಅವರಂತೆಯೇ ಇದ್ದ ಅನೇಕ ಜನರು ಬಹಳ ದಿನಗಳಿಂದ ಹೇಳುತ್ತಲೇ ಬಂದ ವಾದದಂತೆಯೇ, ಕಟುಕರೂ ಸಹ ತಮ್ಮಯ ವಾದವನ್ನು ಮಂಡಿಸಿದರು. ಕಟುಕರಿಂದ ಮಂಡನೆ ಮಾಡಲ್ಪಟ್ಟ ಕುತರ್ಕಗಳು ಹೀಗಿದ್ದವು.

ಕುತರ್ಕ ೧.
ಮುದಿ ಹಸುವನ್ನು ಉಳಿಸುವದರಿಂದ ಯಾವುದೇ ಪ್ರಯೋಜನವಿಲ್ಲ. ನಾವು ಗೋವಿನ ಮಾಂಸವನ್ನು ರಫ್ತು ಮಾಡಿ ದೇಶದ ಅರ್ಥವ್ಯವಸ್ಥೆಯನ್ನು ಬಲಪಡಿಸುತ್ತೇವೆ.

ಕುತರ್ಕ ೨.
ಇಲ್ಲಿ, ಭಾರತದಲ್ಲಿ, ಜಾನುವಾರು ಹಾಗೂ ಹಸುಗಳಿಗೆ, ಮೇವಿನ ಕೊರತೆಯಿದೆ. ಆದುದರಿಂದ, ಅವುಗಳು ಹಸಿವಿನಿಂದ ಸಾಯುವ ಬದಲು ಅವುಗಳನ್ನು ವಧಿಸುವುದೇ ಒಳ್ಳೆಯದು.

ಕುತರ್ಕ ೩.
ಭಾರತದಲ್ಲಿ ಜನರಿಗೇನೇ ವಾಸಿಸಲು ಸ್ಥಳವಿಲ್ಲದಾಗ ಜಾನುವಾರುಗಳನ್ನು ಎಲ್ಲಿ ಮೇಯಿಸುತ್ತೀರಿ?

ಕುತರ್ಕ ೪.
ಇದರ ರಫ್ತಿನಿಂದ ನಾವು ಅತ್ಯಂತ ಅಮೂಲ್ಯವಾದ ವಿದೇಶೀ ವಿನಿಮಯವನ್ನು ಗಳಿಸುತ್ತೇವೆ.

ಮತ್ತು, ಕಟುಕರಿಂದ ಮಂಡಿಸಲಾದ ವಾದಗಳಲ್ಲಿ ಅತ್ಯಂತ ಅಪಾಯಕಾರಿ ಆದುದೆಂದರೆ, .....
ಕುತರ್ಕ ೫.
ಗೋಹತ್ಯೆ ಮಾಡುವುದು ಅವರ ಧಾರ್ಮಿಕ ಹಕ್ಕು!

ಇಂತಹ ವಾದಗಳನ್ನು ಮಂಡಿಸಿದ ಕಟುಕರು ಯಾರೆಂಬುದು ನಿಮಗೆ ಗೊತ್ತೇ? ಮುಸ್ಲಿಂ ಸಮುದಾಯದ ಎಲ್ಲ ಮುಸ್ಲಿಮರಿಗಿಂತ ಹೆಚ್ಚಿನದಾಗಿ ಕೊಲ್ಲುವ ಕಾರ್ಯ ಮಾಡುವ "ಖುರೇಶಿ" ಎಂಬ ಉಪ-ಪಂಗಡವಿದೆ. ಅವರೇ ಇಂತಹ ಕುತರ್ಕದ ವಾದಗಳನ್ನು ಮಂಡಿಸಿದವರು!

ಈ ಮೇಲೆ ಮಂಡಿಸಿದ ಎಲ್ಲಾ ವಾದಗಳಿಗೆ, ಪ್ರತಿಯಾಗಿ ರಾಜೀವಭಾಯಿಯವರು ವಾಸ್ತವವನ್ನು ಹಾಗೂ ಅಂಕಿ-ಸಂಖ್ಯೆಗಳನ್ನು, ಯಾವುದೇ ರೀತಿಯ ಕೋಪವನ್ನು ಪ್ರದರ್ಶಿಸದೇ, ಅತ್ಯಂತ ಸಂಯಮಪೂರಿತವಾಗಿ ಮಂಡಿಸಿದರು.

ಕಟುಕರ ಮೊದಲ ಕುತರ್ಕಕ್ಕೆ ಉತ್ತರವಾಗಿ, ತಮ್ಮ ಸಾಕ್ಷ್ಯಾಧಾರಗಳನ್ನು ಈ ರೀತಿ ಒದಗಿಸಿದರು. ಒಂದು ಆಕಳನ್ನು ವಧಿಸಿದಾಗ, ದೇಶಕ್ಕೆ ಹಣ ಸಿಗುತ್ತದೆ ಹಾಗೂ ಮಾಂಸದ ರಫ್ತಿನಿಂದ ಅಮೂಲ್ಯವಾದ ವಿದೇಶಿವಿನಿಮಯ ಲಭ್ಯವಾಗುತ್ತದೆ. ಅವರು ಈ ವಿಷಯದಲ್ಲಿ ವಾಸ್ತವಿಕತೆಯ ಹಾಗೂ ಅಂಕಿ-ಸಂಖ್ಯೆಗಳ ವಿವರಗಳನ್ನು ನೀಡಲು ಪ್ರಾರಂಭ ಮಾಡಿದರು. ಒಂದು ಹಸುವನ್ನು ಹತ್ಯೆ ಮಾಡಿದಾಗ, ಸಂಗ್ರಹವಾಗುವ ಮಾಂಸ, ರಕ್ತ ಹಾಗೂ ಎಲುವುಗಳ ವಿವರ ಹೀಗಿದೆ.

ಒಂದು ಆರೋಗ್ಯವಂತ ಹಸುವು ೩-೩.೫ ಕ್ವಿಂಟಲ್ ಭಾರವಿರುತ್ತದೆ. ಮತ್ತು, ಅದನ್ನು ಹತ್ಯೆ ಮಾಡಿದಾಗ, ಅಂದಾಜು ೭೦ ಕಿಲೋ ಮಾಂಸ ಸಿಗುತ್ತದೆ. ಒಂದು ಕಿಲೋಗೆ ರೂ.೫೦ರ ದರದಲ್ಲಿ ರಫ್ತು ಮಾಡಲಾಗುವದರಿಂದ ೭೦×೫೦ರಂತೆ ರೂ.೩,೫೦೦ಗಳು ಸಿಗುತ್ತವೆ. ಅಂದಾಜು ೨೫ಲೀಟರ್ ರಕ್ತವನ್ನು ಅದೇ ಆರೋಗ್ಯವಂತ ಹಸುವಿನಿಂದ ತೆಗೆಯಲಾಗುತ್ತದೆ. ಅದರಿಂದ ಸಿಗುವ ೩೦-೩೫ ಕಿಲೋ ಎಲುವುಗಳನ್ನು ರೂ.೧,೦೦೦ದಿಂದ ೧,೨೦೦ಗಳಿಗೆ ಮಾರಲಾಗುತ್ತದೆ. ಈ ಪ್ರಕಾರ, ಒಂದು ಆಕಳನ್ನು ವಧಿಸಿ, ಅದರ ಅಂಗಾಂಗಗಳನ್ನು ಮಾರಾಟ ಮಾಡಿದಾಗ, ರೂ.೭,೦೦೦ಕ್ಕಿಂತ ಹೆಚ್ಚಿನ ಆದಾಯ ಸಿಗುವುದು ಅಸಾಧ್ಯ.

ಆನಂತರದಲ್ಲಿ, ರಾಜೀವಭಾಯಿ ಅದರ ತದ್ವಿರುದ್ಧವಾದ ವಾದವನ್ನು ಮಂಡಿಸಿದರು. ಒಂದು ಹಸುವನ್ನು ಹತ್ಯೆ ಮಾಡದಿದ್ದಲ್ಲಿ ಏನಾಗುತ್ತದೆ? ಅದನ್ನು ಪಾಲನೆ ಮಾಡಿದರೆ, ನಂತರದಲ್ಲಿ ಅದರಿಂದ ಎಷ್ಟು ಗಳಿಕೆ ಮಾಡಬಹುದು? ಅದರ ಲೆಕ್ಕಾಚಾರವು ಈ ಕೆಳಗಿನಂತಿದೆ.

ಒಂದು ಆರೋಗ್ಯವಂತ ಹಸುವು, ಅಂದಾಜು ೧೦ ಕಿಲೋ ಗೊಬ್ಬರ ಅಂದರೆ ಸೆಗಣಿ, ಮತ್ತು ೩ ಲೀಟರ್ ಗೋಮೂತ್ರವನ್ನು ನೀಡುತ್ತದೆ. ಒಂದು ಕಿಲೋ ಸೆಗಣಿಯಿಂದ ಅಂದಾಜು ೩೩ ಕಿಲೋ ಗೊಬ್ಬರದ ಉತ್ಪತ್ತಿಯಾಗುತ್ತದೆ. ಅದು "ಸಾವಯವ ಗೊಬ್ಬರ" ಎಂದು ಪ್ರಸಿದ್ಧ ವಾಗಿದೆ. ಇದು ಹೇಗೆ ಸಾಧ್ಯವಾಗುತ್ತದೆ? ಎಂದು ನ್ಯಾಯಮೂರ್ತಿಗಳು ಕೇಳುತ್ತಾರೆ. ಈ ವಿಷಯವನ್ನು ಸಿದ್ಧಮಾಡಿ ತೋರಿಸಲು, ರಾಜೀವಭಾಯಿ ಸ್ವಲ್ಪ ಸಮಯಾವಕಾಶ ಹಾಗೂ ಸ್ಥಳವನ್ನುನೀಡಲು ವಿನಂತಿಸುತ್ತಾರೆ. ನ್ಯಾಯಾಲಯವು ಅನುಮತಿ ನೀಡಿದ ನಂತರ ರಾಜೀವಭಾಯಿ ಪ್ರತ್ಯಕ್ಷವಾಗಿ ಒಂದು ಕಿಲೋ ಗೊಬ್ಬರ ಅಥವಾ ಸೆಗಣಿಯಿಂದ, ೩೩ ಕಿಲೋ ಸಾವಯುವ ಗೊಬ್ಬರ ಉತ್ಪಾದಿಸಿ ತೋರಿಸಿದರು. ಅವರು ಐ.ಆರ್.ಸಿ. ವಿಜ್ಞಾನಿಗಳನ್ನು ಕರೆಯಿಸಿ, ಗೊಬ್ಬರವನ್ನು ಪರೀಕ್ಷೆ ಮಾಡಲು ನ್ಯಾಯಾಲಯಕ್ಕೆ ವಿನಂತಿ ಮಾಡುತ್ತಾರೆ. ಪರೀಕ್ಷೆಯ ನಂತರ, ಕೃಷಿಯೋಗ್ಯ ಜಮೀನಿಗೆ ಅಗತ್ಯವಿದ್ದ ಮ್ಯಾಂಗನೀಸ್, ಫಾಸ್ಫೇಟ್, ಕಬ್ಬಿಣ, ಕ್ಯಾಲ್ಷಿಯಂ, ಪೊಟ್ಯಾಸಿಯಂ, ಸಿಲಿಕಾನ್‌, ಕೋಬಾಲ್ಟ್ ಇತ್ಯಾದಿ ೧೮ ಪೋಷಕಾಂಶಗಳು, ಆ ತಿಪ್ಪೆಯ ಗೊಬ್ಬರದಲ್ಲಿ ಸಮ್ಮಿಳಿತವಾಗಿವೆ ಎಂದು ಸಿದ್ಧವಾಯಿತು. ಕೃತಕ ಗೊಬ್ಬರಗಳಲ್ಲಿ ಕ್ವಚಿತ್ತಾಗಿಯೂ ಸಹ ಮೂರಕ್ಕಿಂತ ಹೆಚ್ಚಿನ ಪೋಷಕಾಂಶಗಳು ಲಭ್ಯವಿರುವದಿಲ್ಲ. ಆದ್ದರಿಂದ, ಹಸುವಿನ ಸೆಗಣಿಯಿಂದ ಮಾಡಿದ ತಿಪ್ಪೆಗೊಬ್ಬರವು, ಕೃತ್ರಿಮ ಗೊಬ್ಬರಕ್ಕಿಂತ ಹತ್ತು ಪಟ್ಟು ಉತ್ತಮ ಎಂಬ ವಾದವನ್ನು ನ್ಯಾಯಾಲಯವು ಅನುಮೋದಿಸುತ್ತದೆ.

ನಂತರ, ರಾಜೀವಭಾಯಿಯವರು, ಅವರದೇ ಹಳ್ಳಿಯಲ್ಲಿ, ಒಂದು ಕಿಲೋ ಸೆಗಣಿಯಿಂದ ೩೩ ಕಿಲೋ ಸಾವಯವ ಗೊಬ್ಬರವನ್ನು ಉತ್ಪಾದಿಸುವ ವಿಧಾನವನ್ನು ಪ್ರತ್ಯಕ್ಷವಾಗಿ ವೀಕ್ಷಿಸಲು, ನ್ಯಾಯಾಲಯದ ಶಿಷ್ಟಾಚಾರವು ಅಡ್ಡಬಾರದಿದ್ದರೆ, ನ್ಯಾಯಾಧೀಶರು ಸ್ವತಃ ಬರಬಹುದೆಂದು ವಿನಂತಿಸಿದರು. ಕಳೆದ ೧೫ ವರ್ಷಗಳಿಂದ ಅವರ ಪಾಲಕರು ಈ ವಿಧಾನದ ಪ್ರಕಾರ ಯಶಸ್ವಿ ಕಾರ್ಯ ಮಾಡುತ್ತಿದ್ದಾರೆ.

ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ, ೧ ಕಿಲೋ ಸಾವಯವ ಗೊಬ್ಬರವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು ಆರು ರೂಪಾಯಿಗಳಿಗೆ ಮಾರಾಟ ಆಗುತ್ತಿದೆ. ಆದ್ದರಿಂದ, ೧೦ ಕಿಲೋ ಹಸುವಿನ ಸೆಗಣಿಯು ಪ್ರತಿದಿನವೂ ರೂ.೧,೮೦೦/- ಗಳಿಂದ೨,೦೦೦ಗಳ ವರೆಗೆ ಆದಾಯ ತರುತ್ತದೆ. ೧೦ಕಿಲೋ ಸೆಗಣಿಯಿಂದ ೩೩೦ ಕಿಲೋ ಗೊಬ್ಬರ, ಪ್ರತಿ ಕಿಲೋಗೆ ರೂ.೬/- ದರದಂತೆ, ಹಾಗೂ ಆಕಳ ಸೆಗಣಿಯ ಲಭ್ಯತೆಗೆ, ರವಿವಾರ ಅಥವಾ ವಾರದ ಬಿಡುವು ಎಂಬುವುದೂ ಇಲ್ಲ! ಆದುದರಿಂದ, ವರ್ಷದ ೩೬೫ ದಿನಗಳೂ ಸಹ, ನಾವು ಸೆಗಣಿಯಿಂದ ಈ ಪ್ರಕಾರ ಗಳಿಸಬಹುದು.
೧೮೦೦×೩೬೫=ರೂ.೬,೫೭,೦೦೦.

ಒಂದು ಆಕಳಿನ ಜೀವಿತಾವಧಿಯು ಸರಾಸರಿ ೨೦ ವರ್ಷಗಳು, ಮತ್ತು ಅದು ತನ್ನ ಅಂತಿಮ ದಿನಗಳವರೆಗೆ ಸೆಗಣಿಯನ್ನು ಕೊಡುತ್ತಲೇ ಇರುತ್ತದೆ. ಆಕಳಿನ ಸೆಗಣಿಯಿಂದ ಸಿಗುವ ಆದಾಯವು ಕಲ್ಪನಾತೀತ ಆಗಿರುವದಿಲ್ಲ. ಅದು ದಶಲಕ್ಷದ ಸೀಮೆಯನ್ನು ದಾಟಿರುತ್ತದೆ.
೧,೮೦೦×೩೬೫×೨೦= ರೂ.೧,೩೧,೪೦,೦೦೦/-.

ನಮ್ಮ ಪವಿತ್ರ ಗ್ರಂಥಗಳಲ್ಲಿ ತಿಳಿಸಿರುವಂತೆ, ಆಕಳ ಸೆಗಣಿಯಲ್ಲಿ, ಶ್ರೀಲಕ್ಷ್ಮೀದೇವಿಯು ಇರುತ್ತಾಳೆ ಎಂಬ ಉಲ್ಲೇಖವನ್ನು ಸಹಸ್ರಾರು ಸಂವತ್ಸರಗಳಿಂದ ನಂಬಲಾಗಿದೆ. ಇಂದಿನ ದಿನಗಳಲ್ಲೂ ಇದು ಎಷ್ಟು ನಿಜವಾಗಿದೆ ಅಲ್ಲವೇ?

ಈ ವಾದವು, ನಮ್ಮ ಧರ್ಮ, ಸಂಸ್ಕೃತಿ ಮತ್ತು ಆಚಾರ-ವಿಚಾರ ಇತ್ಯಾದಿಗಳನ್ನು ಕೇವಲ ಬೂಟಾಟಿಕೆ ಎಂದು ಜರಿಯುವ, ಆಕಳ ಸೆಗಣಿಯಲ್ಲಿ ಲಕ್ಷ್ಮೀದೇವಿ ಇರುವಳು ಎಂಬ ನಂಬಿಕೆಗೆ, ನಕ್ಕು ಪರಿಹಾಸ್ಯ ಮಾಡುವ, ಮೆಕಾಲೆಯ ನೀತಿಯ ಶಿಕ್ಷಣ ಪದ್ಧತಿಯನ್ನು ಅನುಸರಿಸಿ ಕಲಿತ ಉನ್ನತ ಪೀಳಿಗೆಯ ಪೃಭೃತಿಗಳಿಗೆ ಮುಖದಮೇಲೆ ತಪರಾಕಿ ಭಾರಿಸಿದಂತೆ ಇತ್ತು!

ಈಗ, ಗೋಮೂತ್ರದ ಕುರಿತಾಗಿ ಮಾತನಾಡೋಣ.
ಒಂದು ಆಕಳು, ದಿನಂಪ್ರತಿ ೨ರಿಂದ ೨.೨೫ ಲೀಟರುಗಳಷ್ಟು ಮೂತ್ರವನ್ನು ಕೊಡುತ್ತದೆ. ಗೋವಿನ ಮೂತ್ರವು, ಸಕ್ಕರೆ ಖಾಯಿಲೆ, ಸಂಧಿವಾತ, ಗಂಟಲು ಬಾಧೆ, ಶ್ವಾಸನಾಳದ ಉಬ್ಬಸ, ಕ್ಷಯರೋಗ, ಅಸ್ಥಿರೋಗಗಳು ಇತ್ಯಾದಿಯಾಗಿ ಮತ್ತು ಅನೇಕ ಇತರೇ ೪೮ ರೋಗಗಳಿಗೂ ಔಷಧ ತಯಾರಿಸಲು, ಅತ್ಯುಪಯುಕ್ತ ಆಗಿರುತ್ತದೆ. ಮಾರುಕಟ್ಟೆಯಲ್ಲಿ ಗೋಮೂತ್ರವು, ಲೀಟರ್ ಒಂದಕ್ಕೆ ರೂ.೫೦೦ಕ್ಕೆ ಮಾರಾಟವಾಗುತ್ತಿದೆ, ಮತ್ತು ಭಾರತದಲ್ಲಿಯೂ ಸಹ ಇದೇ ಮೌಲ್ಯವಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಲೀಟರ್ ಗೋಮೂತ್ರವು ಇನ್ನೂ ಹೆಚ್ಚಿನ ಬೆಲೆ ತರಬಲ್ಲುದು. ಗೋಮೂತ್ರವು ಅಮೇರಿಕಾದಲ್ಲಿ ಮಾರಾಟಸ್ವಾಮ್ಯ ಹೊಂದಿರುವ ಸಂಗತಿಯು ನಿಮಗೆ ತಿಳಿದಿರುವುದೇ? ಅಲ್ಲಿ ಅದಕ್ಕೆ ಕೇವಲ ಒಂದೇ ಅಲ್ಲ, ಮೂರು ಬೇರೆ ಬೇರೆ ಮಾರಾಟ ಸ್ವಾಮ್ಯಗಳಿವೆ, ಮತ್ತು ಅಮೇರಿಕಾದ ಸರಕಾರವು ಗೋಮೂತ್ರವನ್ನು, ಕ್ಯಾನ್ಸರ್, ಸಕ್ಕರೆ ಖಾಯಿಲೆ ಇತ್ಯಾದಿಗಳಿಗೆ ಔಷಧಿಯನ್ನು ತಯಾರಿಸವ ಸಲುವಾಗಿ, ಪ್ರತಿವರ್ಷವೂ ಆಮದು ಮಾಡಿಕೊಳ್ಳುತ್ತಿದೆ. ಅಂದಿನ ಅಮೇರಿಕಾದ ಮಾರುಕಟ್ಟೆಯಲ್ಲಿನ ದರದ ಪ್ರಕಾರ ಲೆಕ್ಕ ಹಾಕಿದರೆ, ಒಂದು ಲೀಟರಿಗೆ ರೂ.೧,೨೦೦ರಿಂದ ೧,೩೦೦ರ ತನಕ ಬೆಲೆಬಾಳುತ್ತದೆ. ಕೇವಲ ಆಕಳ ಮೂತ್ರದಿಂದ ನಾವು ಪ್ರತಿದಿನ ರೂ.೩,೦೦೦/- ಗಳಿಸಲು ಸಾಧ್ಯವೆಂದು ಇದರ ಅರ್ಥ.ಆದುದರಿಂದ, ಒಂದು ವರ್ಷದಲ್ಲಿ, ನಾವು ಕೇವಲ ಗೋಮೂತ್ರ ಮಾರಾಟದಿಂದ ಅತಿರಿಕ್ತವಾಗಿ ದಶಲಕ್ಷಗಳಷ್ಟು ಗಳಿಸಬಹುದು. ಅಂದರೆ, ೨೦ ವರ್ಷಗಳಲ್ಲಿ, ಹೀಗೆ ಲೆಕ್ಕ ಹಾಕಬೇಕು
೩೦೦೦×೩೬೫×೨೦=
ರೂ.೨,೧೯,೦೦,೦೦೦/-

ಅದೇ ಆಕಳಿನ ಸೆಗಣಿಯಿಂದ ಮೀಥೇನ್ ಅನಿಲವನ್ನೂ ಉತ್ಪಾದಿಸಿ ಅದನ್ನು ಅಡಿಗೆಮನೆಯಲ್ಲಿ ಬಳಸುವ ಎಲ್.ಪಿ.ಜಿ. ಅನಿಲಕ್ಕೆ ಪರ್ಯಾಯ ಆಗಿ ಬಳಸಬಹುದು ಮತ್ತು ಅದರಿಂದ ವಾಹನವನ್ನೂ ಸಹ ಚಲಾಯಿಸಬಹುದು. ಹೌದು, ನಾಲ್ಕು ಚಕ್ರಗಳ ವಾಹನವನ್ನೂ ಸಹ! ಒಂದು ವಾಹನವು ಎಲ್.ಪಿ.ಜಿ. ಅನಿಲದಿಂದ ಚಲಿಸಬಲ್ಲದಾದರೆ, ಅದೇ ವಾಹನ, ಮೀಥೇನ್ ಅನಿಲದ ಮೂಲಕವೂ ಚಲಿಸಲು ಸಾಧ್ಯ.

‌ನ್ಯಾಯಾಧೀಶರಿಗೆ ಇದು ನಂಬಲು ಅಸಾಧ್ಯವೆನಿಸಿತು. ಈ ರೀತಿಯಾಗಿ, ತಾವು ನಮಗೆ ಅವಕಾಶ ನೀಡಿದರೆ, ತಮ್ಮಯ ಕಾರಿಗೆ ಮೀಥೇನ್ ಅನಿಲದ ಜಾಡಿಯನ್ನು ಹೊಂದಿಸಿ ಕೊಡುತ್ತೇವೆ. ತಾವೇ ಸ್ವತಃ ವಾಹನ ನಡೆಸಿ ಪರೀಕ್ಷೆ ಮಾಡಬಹುದು. ನ್ಯಾಯಾಧೀಶರು ಅನುಮತಿ ನೀಡಿದರು. ಅದನ್ನು ನ್ಯಾಯಮೂರ್ತಿಗಳು ಪೂರ್ತಿ ಮೂರು ತಿಂಗಳವರೆಗೆ ಬಳಸಿದರು!! ಡೀಸೆಲ್ ಬಳಕೆ ಮಾಡಿದರೆ ತಗಲುವ ವೆಚ್ಚ ಕಿ.ಮೀ.ಗೆ ರೂ.೪/- ಆಗಿದ್ದರೆ, ಮೀಥೇನ್ ಅನಿಲ ಬಳಕೆ ವೆಚ್ಚ ಕೇವಲ ೫೦ರಿಂದ ೬೦ ಪೈಸೆ ಮಾತ್ರ! ಮತ್ತು ಡೀಸೆಲ್‌ ವಾಹ‌ನದ ಹೊಗೆ ಸೂಸುವಂತೆ, ಮೀಥೇನ್ ಅನಿಲದ ಸುಡುವಿಕೆಯಿಂದ ಹೊಗೆ ಉತ್ಪನ್ನವಾಗುವದಿಲ್ಲ. ಇದಕ್ಕೂ ಮಿಗಿಲಾಗಿ, ವಾಹನ ಚಾಲನೆ ಮಾಡುವಾಗ, ಶಬ್ದಮಾಲಿನ್ಯವು ಇಲ್ಲವೇ ಇಲ್ಲ ಎಂಬಷ್ಟು ಮಟ್ಟಿಗೆ ಕ್ವಚಿತ್ತಾಗಿರುತ್ತದೆ. ಇದರಿಂದ ನ್ಯಾಯಾಧೀಶರು ಪ್ರಭಾವಿತರಾದರು.

ಈ ನಂತರ, ರಾಜೀವಭಾಯಿ ತಮ್ಮ ವಾದವನ್ನು ಮುಂದುವರಿಸಿದರು. ನಮಗೆ ಪ್ರತಿದಿನ ಒಂದು ಹಸುವಿನಿಂದ ೧೦ಕಿಲೋ ಸೆಗಣಿ ಲಭ್ಯವಾದಲ್ಲಿ, ಅದರಿಂದ ಪ್ರತಿ ವರ್ಷಕ್ಕೆ, ಹಾಗೂ ೨೦ ವರ್ಷಗಳಲ್ಲಿ ಎಷ್ಟು ಮೀಥೇನ್ ಅನಿಲವನ್ನು ಉತ್ಪಾದಿಸಬಹುದು?
ನಮ್ಮ ದೇಶದಲ್ಲಿ, ೧೭ಕೋಟಿ ಹಸುಗಳಿದ್ದು, ಅವುಗಳಿಂದ ಸೆಗಣಿಯನ್ನು ಸಂಗ್ರಹಿಸಿ, ಹಾಗೂ ಅದನ್ನು ಮೀಥೇನ್ ಅನಿಲವನ್ನು ಉತ್ಪಾದಿಸಲು ಬಳಸಿದ್ದೇ ಆದ
Sent from Samsung Mobile

1 ಕಾಮೆಂಟ್‌:

  1. ಶ್ರೀ ರಾಜೀವ್ ಸಾಹೇಬರ ಲೇಖನದ ಅನುವಾದಕ್ಕೆ ಶ್ರೀ ಕಾಟೇಕರರಿಗೆ ಧನ್ಯವಾದಗಳು. ನಾನು ನನ್ನ ತಾಯಿಗೆ ಕಾಣಿಸಿಕೊಂಡಿರುವ ಸ್ತನ ಕ್ಯಾನ್ಸರಿನ (೨ನೇ ಹಂತ) ಬಗ್ಗೆ ಚಿಕಿತ್ಸೆ ಕೊಡಿಸಬೇಕಾಗಿದೆ. ಇದರ ಬಗ್ಗೆ ನಿಮ್ಮಲ್ಲಿ ಶ್ರೀ ರಾಜೀವರವರ ಚಿಕಿತ್ಸಾ ವಿಧಾನಗಳ ಬಗ್ಗೆ ಲೇಖನಗಳಿದ್ದಲ್ಲಿ ದಯವಿಟ್ಟು ತಿಳಿಸಿ.

    ಪ್ರತ್ಯುತ್ತರಅಳಿಸಿ