ಮಂಗಳವಾರ, ಏಪ್ರಿಲ್ 17, 2018

*ವೈಷ್ಣವಾನಾಂ ಯಥಾ ಶಂಭುಃ*

ತಾರತಮ್ಯದಲ್ಲಿ 5ನೇ ಕಕ್ಷೆಯಲ್ಲಿ ಬರುವ ದೇವನು ರುದ್ರ ದೇವನು. ಎಲ್ಲಾ ವೈಷ್ಣವರು ಅವಶ್ಯವಾಗಿ ಪೂಜಿಸಲೇ ಬೇಕಾದ ವೈಷ್ಣವೋತ್ತಮ ದೇವನೀತನು.
*ವೈಷ್ಣವಾನಾಂ ಯಥಾ ಶಂಭುಃ* 
ಎಂದು ಹೇಳಿದಂತೆ ವೈಷ್ಣವರಲ್ಲಿ ಭಗವಂತನ ವಿಭೂತಿರೂಪವು ರುದ್ರನಲ್ಲಿ ಅತಿಶಯವಾಗಿದೆ.
ಆದ್ದರಿಂದ ರುದ್ರನು ಅತ್ಯಂತ ಪ್ರಸನ್ನನಾಗಿರುವ ಶಿವರಾತ್ರಿಯಂದು ರುದ್ರನ ವಿಶೇಷ ಪೂಜೆಯನ್ನು ನಾವೆಲ್ಲರೂ ಮಾಡಬೇಕು.
ರಾತ್ರಿ ಶಬ್ದವು ಅಜ್ಞಾನಕ್ಕೆ ದ್ಯೋತಕ. ಯಾಕೆಂದರೆ ಕತ್ತಲಿನಲ್ಲಿ ಯಾವುದೇ ವಸ್ತುವಿನ ಜ್ಞಾನ ಬರಲಾರದು.
ಆದ್ದರಿಂದ ಅಜ್ಞಾನವೆಂಬ ಕತ್ತಲನ್ನು ಓಡಿಸಿ ಭಗವಜ್ಜ್ಞಾನವೆಂಬ ಬೆಳಕನ್ನು ನೀಡುವ ದೇವತೆ ಶಿವ.
ಆದ್ದರಿಂದ ಈ ದಿನವು #ಶಿವರಾತ್ರಿ ಎಂದು ಪ್ರಸಿದ್ಧ.
ಭಗವಾನ್ ಶಿವನು ಲಿಂಗರೂಪಿಯಾಗಿ ಉದಿಸಿದ
ದಿನವು ಶಿವರಾತ್ರಿ ಎಂದು ಪ್ರಸಿದ್ಧವಾಗಿದೆ.
ರುದ್ರನು ಲಿಂಗರೂಪಿಯಾಗಿ ಉದಿಸಿದನು ಎಂದರೆ ಏನರ್ಥ?
*ಲೀನಂ ಗಮಯತೀತಿ ಲಿಂಗಃ* ಎಂದು ಇರುವಂತೆ ತನ್ನಲ್ಲಿ ಲೀನವಾಗಿರುವ ಭಗವಂತನನ್ನು ತೋರಿಸಿಕೊಡುವ ರೂಪವೇ ಲಿಂಗ.
ಆದ್ದರಿಂದ ರುದ್ರನು ಈ ರೂಪದಿಂದ ಉದಿಸಿ ಅಜ್ಞರಿಗೆ   ಮೋಹವನ್ನು ಕೊಟ್ಟು ಮುಮುಕ್ಷುಗಳಿಗೆ ಭಗವಂತನನ್ನು ತೋರಿಸಿ ಕೊಟ್ಟ ದಿನ ಶಿವರಾತ್ರಿ.
ಈ ದಿನ ರುದ್ರನು ವಿಷಪಾನವನ್ನು ಮಾಡಿದ ದಿನವೆಂದೂ ಹೇಳುತ್ತಾರೆ.
ಅಂದು ರುದ್ರನು ವಿಷಪಾನವನ್ನು ಮಾಡಿ ಅದರ ನಂಜು ಏರದಿರಲು ಉಪವಾಸವಿದ್ದು ರಾತ್ರಿ ಎಲ್ಲಾ ಜಾಗರಣೆ ಮಾಡಿದನು.
ಆದ್ದರಿಂದ ಎಲ್ಲಾ ಭಕ್ತರು ಅಂದು ಉಪವಾಸ ಇದ್ದು ಜಾಗರಣೆ ಮಾಡಬೇಕು ಎಂದು ಹೇಳುತ್ತಾರೆ.
ರುದ್ರನು ಸ್ವತಃ ಎಲ್ಲರ ನಂಜನ್ನು ಪರಿಹರಿಸುವವನಾದ್ದರಿಂದ ಅವನಿಗೆ ನಂಜು ಏರಲು ಸಾಧ್ಯವಿಲ್ಲ. ಅಲ್ಲದೆ ಪದ್ಮಪುರಾಣದಲ್ಲಿ ಸ್ವತಃ ತಾನೇ ಹೇಳಿಕೊಂಡಿದ್ದಾನೆ.
ಎಲ್ಲಾ ದೇವತೆಗಳೂ ಹಾಲಾಹಲವಿಷ ಬಂದಾಗ ಅದರ ಉರಿ ತಾಳಲಾರದೆ ಓಡಲು ಶುರುಮಾಡುತ್ತಾರೆ.
ಆಗ ರುದ್ರ ದೇವರು ದೇವತೆಗಳಿಗೆ ಹೀಗೆ ಹೇಳುತ್ತಾರೆ.
*ಅಹಮಾಹಾರಯಿಷ್ಯಾಮಿ ಕಾಲಕೂಟಂ
ಮಹಾವಿಷಮ್।ಇತ್ಯುಕ್ತಾಸ್ತೇ ಮಯಾ ಸರ್ವೇ ದೇವಾ ಇಂದ್ರಪುರೋಗಮಾಃ॥*
ಎಂದು ನಾನು ಈ ವಿಷವನ್ನು ಪಾನಮಾಡುತ್ತೇನೆ.
ನನಗೆ ಈ ವಿಷವು ಏನೂ ಮಾಡಲಾರದು.
ಯಾಕೆಂದರೆ ನಾನು ಹೃದಯದಲ್ಲಿ ನಾರಾಯಣನನ್ನು ಧ್ಯಾನ ಮಾಡುತ್ತಾ *ಅಚ್ಯುತಾನಂತಗೋವಿಂದ* ಎಂಬ ನಾಮತ್ರಯ ಮಂತ್ರವನ್ನು ಉಚ್ಚರಿಸುತ್ತಾ ಈ ವಿಷವನ್ನು ಪಾನಮಾಡುತ್ತೇನೆ.
ಆದ್ದರಿಂದ ನನಗೆ ಈ ವಿಷವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
*ಧ್ಯಾತ್ವಾ ನಾರಾಯಣಂ ದೇವಂ ಹೃದಯೇ ಗರುಡಧ್ವಜಂ।ಉದಯಾದಿತ್ಯಸಂಕಾಶಂ ಶಂಖಚಕ್ರಗದಾಧರಮ್॥ಏಕಾಗ್ರಮನಸಾ ಧ್ಯಾತ್ವಾ ಸರ್ವದುಃಖಹರಂ ಪ್ರಭುಮ್।ನಾಮತ್ರಯಂ ಮಹಾಮಂತ್ರಂ ಜಪನ್ ಭಕ್ತ್ಯಾ ಸಮನ್ವಿತಃ॥ತದ್ವಿಷಂ ಪೀತವಾನ್ ಘೋರಂ ಆದ್ಯಂ ಸರ್ವಭಯಂಕರಮ್।ನಾಮತ್ರಯಪ್ರಭಾವಾಚ್ಚ ವಿಷ್ಣೋಃ ಸರ್ವಗತಸ್ಯ ವೈ।ವಿಷಂ ತದಭವಚ್ಚೀರ್ಣಂ ಲೋಕಸಂಹಾರಕಾರಕಂ ॥*
ಎಂದು. ಹೀಗೆ ರುದ್ರ ದೇವರು ತಮ್ಮ ವಿಷದ ನಂಜು ಪರಿಹಾರವಾಗಲು ರಾತ್ರಿಯಿಡೀ ಜಾಗರಣೆ ಮಾಡಿ ನಾಮತ್ರಯ ಮಂತ್ರವನ್ನು ಜಪ ಮಾಡಿದರು.
ಅದರಿಂದ ತಮ್ಮ ಸಕಲ ವಿಪಪಾನದ ತೊಂದರೆಯನ್ನು ಪರಿಹರಿಸಿಕೊಂಡರು.
ಇದನ್ನು ಅವರೇ ಪಾರ್ವತೀ ದೇವಿಯಲ್ಲಿ ಹೇಳಿಕೊಂಡಿದ್ದಾರೆ.
*ಅಚ್ಯುತಾನಂತಗೋವಿಂದ ಇತಿ ನಾಮತ್ರಯಂ ಹರೇಃ।ಯೋ ಜಪೇತ್ ಪ್ರಯತೋ ಭಕ್ತ್ಯಾ ಪ್ರಣವಾದ್ಯಂ ನಮೋಂತಕಮ್॥ತಸ್ಯಮೃತ್ಯು ಭಯಂ ನಾಸ್ತಿ ವಿಷರೋಗಾಗ್ನಿಗಂ ಮಹತ್॥ನಾಮತ್ರಯಂ ಮಹಾಮಂತ್ರಂ ಜಪೇದ್ಯಃಪ್ರಯತಾತ್ಮವಾನ್।ಕಾಲಮೃತ್ಯುಭಯಂ ಚಾಪಿ ತಸ್ಯ ನಾಸ್ತಿ ಕಿಮನ್ಯತಃ॥ಇತಿ ನಾಮತ್ರಯೇಣೈವ ಪೀತಂ ದೇವಿ ಮಯಾ ವಿಷಮ್॥*
ಎಂದು. ಆದ್ದರಿಂದ ಶಿವರಾತ್ರಿಯಂದು ಮಹಾಪ್ರದೋಷಸಮಯವಾಗಿರುವುದರಿಂದ ಅಂದು ಶಿವನ ಅನುಗ್ರಹಕ್ಕಾಗಿ ರುದ್ರ ಪಾರಾಯಣ, ಶಿವಸ್ತುತಿ ಪಾರಾಯಣ ಮಾಡುವುದರ ಜೊತೆಗೆ ವಿಶೇಷವಾಗಿ ನಾಮತ್ರಯ ಮಂತ್ರದ ಜಪವನ್ನೂ ಮಾಡಬೇಕು.
ಪ್ರತಿನಿತ್ಯ ರುದ್ರನು ಪ್ರದೋಷಸಮಯವಾದ ಮುಸ್ಸಂಜೆಯಂದು ತನ್ನ ಗಣಗಳೊಂದಿಗೆ ಸ್ಮಶಾನದಿಂದ ಹೊರಗೆ ಬಂದು ಎಲ್ಲಾ ಭಕ್ತರ ಸಂಕಟವನ್ನು ಪರಿಹರಿಸಿದರೆ ಶಿವರಾತ್ರಿಯೆಂಬ ಮಹಾಪ್ರದೋಷದಂದು ವಿಶೇಷವಾಗಿ ನಮ್ಮ ಸಂಕಟಪರಿಹರಿಸಿ ಅನುಗ್ರಹಿಸುವನು

ಭಸ್ಮದ ಅರ್ಥ ಮತ್ತು ಮಹತ್ವ:

 ಭಸ್ಮದ ಅರ್ಥ ಮತ್ತು ಮಹತ್ವ: ಭಸ್ಮ ಶಬ್ದದಲ್ಲಿನ ‘ಭ’ ಎಂದರೆ ‘ಭರ್ತ್ಸನಮ್’ ಅಂದರೆ ‘ನಾಶವಾಗಲಿ.’ ಭಸ್ಮ ಶಬ್ದದಲ್ಲಿನ ‘ಸ್ಮ’ ಎಂದರೆ ಸ್ಮರಣೆ. ಭಸ್ಮದಿಂದ ಪಾಪವು ನಾಶವಾಗಿ ಈಶ್ವರನ ಸ್ಮರಣೆಯಾಗುತ್ತದೆ.
ಭಸ್ಮದ ಸಮಾನಾರ್ಥಕ ಶಬ್ದ: ವಿಭೂತಿ, ರಕ್ಷೆ, ಬೂದಿ.
ಭಸ್ಮದ ಬೋಧನೆ
೧. ಮನುಷ್ಯನು ತನ್ನ ಆಹುತಿಯನ್ನು ನೀಡಿ ಭಸ್ಮವಾಗಬೇಕು, ಅಂದರೆ ತನ್ನ ಇಚ್ಛೆ - ಆಕಾಂಕ್ಷೆ, ದೋಷ, ಅಜ್ಞಾನ ಮತ್ತು ಅಹಂಗಳನ್ನು ತ್ಯಾಗ ಮಾಡಿ ಮನಸ್ಸಿನ ಶುದ್ಧತೆಯನ್ನು ಪಡೆದುಕೊಳ್ಳಬೇಕು.
೨. ಮಾನವೀ ದೇಹವು ನಶ್ವರವಾಗಿರುವುದರಿಂದ ಮರಣದ ನಂತರ ಈ ದೇಹವು ಸುಟ್ಟು ಬೂದಿಯಾಗುತ್ತದೆ. ಆದುದರಿಂದ ಯಾರೂ ದೇಹಾಸಕ್ತಿಯನ್ನು ಇಟ್ಟುಕೊಳ್ಳಬಾರದು. ಮೃತ್ಯು ಯಾವುದೇ ಕ್ಷಣ ಬರಬಹುದು. ಇದರ ಅರಿವನ್ನಿಟ್ಟುಕೊಂಡು ಬಹುಪ್ರಯತ್ನದಿಂದ ದೊರಕಿರುವ ಈ ಮನುಷ್ಯಜನ್ಮವನ್ನು ಸಾರ್ಥಕ ಮಾಡಿಕೊಳ್ಳಲು ಮತ್ತು ನಮ್ಮ ಪ್ರತಿಯೊಂದು ಕ್ಷಣವನ್ನು ಪವಿತ್ರ ಹಾಗೂ ಆನಂದಮಯಗೊಳಿಸಲು ಪ್ರಯತ್ನಿಸಬೇಕು ಎಂಬುದನ್ನೇ ಭಸ್ಮವು ಸೂಚಿಸುತ್ತದೆ.
೩. ಭಸ್ಮವು ವೈರಾಗ್ಯವನ್ನು ಕಲಿಸುತ್ತದೆ

ನಾನು ಇತಿಹಾಸದ ಈ ವಿಷಯಗಳನ್ನ ಮರೆತಿಲ್ಲ

ನಾನು ಇತಿಹಾಸದ ಈ ವಿಷಯಗಳನ್ನ ಮರೆತಿಲ್ಲ ಆದರೆ ನೀವುಗಳು ಮರೆತಿದ್ದೀರಿ ಅನಿಸುತ್ತೆ!!
1.
ಕಾಮಪಿಶಾಚಿ *ಅಲ್ಲಾವುದ್ದಿನ್ ಖಿಲ್ಜಿ* ಎಂಬ ರಾಕ್ಷಸನ ಕಾರಣ ತಮ್ಮ ಶೀಲ ಕಾಪಾಡಿಕೊಳ್ಳಲು *14,000 ಹಿಂದೂ ಹೆಣ್ಣುಮಕ್ಕಳು* ಬೆಂಕಿಗೆ ಹಾರಿ ಜೌಹಾರ್ ಮಾಡಿಕೊಂಡದ್ದು ನಾನು ಮರೆತಿಲ್ಲ
2. ಇಸ್ಲಾಂ ಸ್ವೀಕರಿಸಲಿಲ್ಲ ಅನ್ನೋ ಕಾರಣಕ್ಕೆ ಶಿವಾಜಿ ಮಹಾರಾಜರ ಮಗ *ಸಂಭಾಜೀ ಮಹಾರಾಜ*ರನ್ನ ನಾಲಿಗೆ ಕತ್ತರಿಸಿ, ಕಾದ ಕಬ್ಬಿಣ ಸಲಾಕೆಯಿಂದ ಕಣ್ಣು ಕೀಳಿಸಿದ ದರಿದ್ರ
*ಔರಂಗಜೇಬ*ನನ್ನ ನಾ ಮರೆತಿಲ್ಲ
3. ಒಂದೇ ದಿನದಲ್ಲಿ ಲಕ್ಷಾಂತರ ಅಮಾಯಕ ಹಿಂದುಗಳನ್ನ ಕೊಂದ ಕ್ರೂರ *ಟಿಪ್ಪು ಸುಲ್ತಾನ್* ಎಂಬ 'ಮೈಸೂರು ಹುಲಿಯಲ್ಲ *ಮೈಸೂರು ಇಲಿ*ಯನ್ನ ನಾ ಮರೆತಿಲ್ಲ
4. 14 ವರ್ಷದ ಬ್ರಾಹ್ಮಣ ಬಾಲಕಿಯನ್ನ ತನ್ನ ಮಹಲಿನಲ್ಲಿ ಬಲವಂತವಾಗಿ ಬಲಾತ್ಕಾರ ಮಾಡಿದ ಆ *ಶಹಜಹಾನ್*ನ್ನ ನಾ ಮರೆತಿಲ್ಲ
5. ಬರ್ಬರವಾಗಿ *ಶ್ರೀರಾಮನ ಮಂದಿರ*ವನ್ನು ಆಯೋಧ್ಯೆಯಲ್ಲಿ ಕೆಡವಿ ಮಸೀದಿ ನಿರ್ಮಿಸಿದ ಆ *ಬಾಬರ್*ನ್ನ ನಾ ಮರೆತಿಲ್ಲ
6. ಜ್ವಾಲಾಮುಖಿ ಮಂದಿರದಲ್ಲಿನ *ದುರ್ಗಾಮಾತೆ*ಯ ಮೂರ್ತಿ ಭಗ್ನಗೊಳಿಸಿ ದೇವಸ್ಥಾನದಲ್ಲೇ ಗೋವನ್ನ ಕತ್ತರಿಸಿ ಅದನ್ನ ಕಟುಕರಿಗೆ ಕೊಟ್ಟ ಹರಾಮಿ *ಸಿಕಂದರ್ ಲೋದಿ*ಯನ್ನ ನಾ ಮರೆತಿಲ್ಲ
7. ಇಡೀ ಪ್ರಪಂಚದಲ್ಲೇ ವೈಭವಯುತವಾದ ಸಾಮ್ರಾಜ್ಯ ಎಂದು ಕರೆಸಿಕೊಳ್ಳುತ್ತ ಬೀದಿ ಬೀದಿಗಳಲ್ಲಿ ಮುತ್ತು ರತ್ನ ಮಾರಾಟ ಮಾಡುತ್ತಿದ್ದಂತಹ *ವಿಜಯನಗರ ಸಾಮ್ರಾಜ್ಯ*ವನ್ನು ಮೋಸದಿಂದ ಬೆಂಕಿ ಹಚ್ಚಿ ವೈಭವಯುತ ಹಂಪಿಯನ್ನ ಹಾಳು ಹಂಪೆ ಮಾಡಿದ *ಬಿಜಾಪುರದ ಸುಲ್ತಾನ*ನ್ನ ನಾ ಮರೆತಿಲ್ಲ
8.  ಸೂಫಿ ಅಂತ ಹೇಳಿಕೊಂಡು ಪ್ರಥ್ವಿರಾಜನ ಪಿತೋರಗಢ್ ಸೇರಿಕೊಂಡು ಮೋಸದಿಂದ *ಪ್ರಥ್ವಿರಾಜ*ನನ್ನ ಸೋಲಿಸಿ ನಂತರ ಆತನ ಪತ್ನಿ *ಸಂಯೋಗಿತಾ*ಳನ್ನ ತನ್ನ ಸೈನಿಕರೆದುರು ನಗ್ನಗೊಳಿಸಿ ರೇಪ್ ಮಾಡಿ ಕೊಂದ ಕ್ರೂರಿ, ಕಾಮಿ *ಮೋಯಿನುದ್ದಿನ್ ಚಿಶ್ತಿ*ಯ ಕ್ರೌರ್ಯ ನಾ ಮರೆತಿಲ್ಲ
9. ಗುರುಗೋವಿಂದ ಸಿಂಗರ 7 ವರ್ಷದ ಹಾಗು 5 ವರ್ಷದ ಚಿಕ್ಕ ಮಕ್ಕಳಾದ *ಫತೆಹ್ ಸಿಂಗ್, ಜೋರಾವರ್ ಸಿಂಗ್* ರನ್ನ ಗೋಡೆ ಕಟ್ಟಿ ಜೀವಂತ ಸಮಾಧಿ ಮಾಡಿದ *ಬಾಜಿರ್ ಖಾನ್*ನ್ನ ನಾ ಮರೆತಿಲ್ಲ
10. ಕಾದ ಕಬ್ಬಿಣದಿಂದ ಮೈ ಸುಟ್ಟು ದೇಹದ ಮಾಂಸ ಖಂಡ ಕಾಣೋ ಹಾಗೆ ಸುಟ್ಟರೂ ಇಸ್ಲಾಂ ಒಪ್ಪದಿದ್ದ *ಬಂದಾ ಬೈರಾಗಿ*ಯನ್ನ ಚಿತ್ರಹಿಂಸೆ ಕೊಟ್ಟ ಜಿಹಾದಿ *ಬಾಜಿರ್ ಖಾನ್*ನ್ನ ನಾ ಮರೆತಿಲ್ಲ
11. ಕಾದ ಕಬ್ಬಿಣದಿಂದ ಮೈ ಚರ್ಮ ಸುಲಿದು ಸಂಭಾಜಿಮಹಾರಾಜರನ್ನ ಜೀವಂತವಾಗಿ ಬೆಂಕಿಗೆ ದೂಡಿದ *ಔರಂಗಜೇಬ*ನನ್ನ ನಾ ಮರೆತಿಲ್ಲ
12. 72 ವರ್ಷದ ವೃದ್ಧ *ಹೇಮು*ವಿನ ತಂದೆ ಇಸ್ಲಾಂ ಒಪ್ಪಿಕೊಳ್ಳದ ಕಾರಣ ಆತನ ತಲೆಯನ್ನ ನಿರ್ದಯವಾಗಿ ಕಡಿದು ಹಾಕಿದ ಬೇವರ್ಸಿ *ಅಕ್ಬರ್*ನ್ನ ನಾ ಮರೆತಿಲ್ಲ
13. *ಧರ್ಮವೀರ ಮತಿದಾಸ್ ಭಾಯಿ*ಯನ್ನ ಇಸ್ಲಾಂ ಒಪ್ಪಿಕೊಳ್ಳದ ಕಾರಣ ನಡು ಬೀದಿಯಲ್ಲಿ ನಿಲ್ಲಿಸಿ ಕೊಂದ ಜಿಹಾದಿ *ಔರಂಗಜೇಬ*ನ ಕುಕೃತ್ಯ ನಾ ಮರೆತಿಲ್ಲ
14. ಸ್ವರ್ಗದಂತಿದ್ದ  ಕಾಶ್ಮೀರವನ್ನ ಇಸ್ಲಾಮೀಕರಣ ಮಾಡಿದ *ಸೂಫಿ ಸೈಯ್ಯದ್ ಶರಾಫುದ್ದಿನ್ ಬುಲ್ಬುಲ್*ನ ಕುತಂತ್ರವನ್ನ ನಾ ಮರೆತಿಲ್ಲ.
15. ಅಧಿಕಾರದ ಆಸೆಗಾಗಿ ಧರ್ಮಾಧಾರಿತ ಆಧಾರದ ಮೇಲೆ ದೇಶವನ್ನ ವಿಭಜಿಸಿ ಲಕ್ಷಾಂತರ ಹಿಂದೂಗಳ ಮಾರಣಹೋಮಕ್ಕೆ ಕಾರಣವಾದ *ಮೊಹಮ್ಮದ್ ಅಲಿ ಜಿನ್ನಾ*ನನ್ನ ನಾ ಮರೆತಿಲ್ಲ
16. ತನ್ನ ಒಣಪ್ರತಿಷ್ಟೆಗಾಗಿ, ಅಧಿಕಾರದ ಆಸೆಗಾಗಿ ದೇಶವನ್ನೇ ಅಡಕ್ಕಿಟ್ಟು ಚೀನಾದ ವಿರುದ್ಧ ತಲೆ ತಗ್ಗಿಸುವಂತೆ ಮಾಡಿದ ಆ *ನೆಹರೂ*ವನ್ನ ನಾ ಮರೆತಿಲ್ಲ
17. ರೋಮ್, ಇಟಲಿಯಿಂದ ಅರಬೋಗಟ್ಟಲೆ ದುಡ್ಡು ತರಿಸಿಕೊಂಡು ಇಲ್ಲಿನ ಹಿಂದುಗಳನ್ನ ಕ್ರಿಶ್ಚಿಯನ್ನರಾಗಿ ಮತಾಂತರಿಸೋಕೆ 10 ವರ್ಷಗಳ ಕಾಲ ಅಧಿಕಾರ ತನ್ನ ಕೈಲಿಟ್ಟುಕೊಂಡಿದ್ದವಳ ಬಗ್ಗೆ ನಾ ಮರೆತಿಲ್ಲ
18. *ಹಿಂದೂ ಕೋಡ್ ಬಿಲ್* ಜಾರಿಗೊಳಿಸಿ ಹಿಂದುಗಳ ನಾಗರಿಕ ಹಕ್ಕುಗಳನ್ನು ಕಸಿದು ಮುಸಲ್ಮಾನರನ್ನ ಎತ್ತಿಹಿಡಿಯಲು ಪ್ರಯತ್ನಿಸಿದ್ದ ಕಾಂಗ್ರೆಸ್'ನ್ನ ನಾ ಮರೆತಿಲ್ಲ
19. ಹಿಂದುಗಳ ಶ್ರದ್ಧೆ, ನಂಬಿಕೆಯ ಪ್ರತೀಕವಾಗಿರುವ ರಾಮಾಯಣ ಕಾಲದಿಂದ ಈಗಲೂ ಪ್ರಸ್ತುತವಿರುವ ರಾಮಸೇತುವನ್ನ ಒಡೆದು ಹಾಕ್ತೇವೆ ಅಂತ ಕಮಿಟಿ ರಚನೆ ಮಾಡಿದ್ದ ಕಾಂಗ್ರೆಸ್'ನ್ನ ನಾ ಮರೆತಿಲ್ಲ
20. ಧಾರ್ಮಿಕವಾಗಿ, ಸಾಮಾಜಿಕವಾಗಿ ಸಹಿಷ್ಣುಗಳಾಗಿ ಬೇಡಿ ಬಂದವರಿಗೆ ಆಶ್ರಯ ನೀಡಿದ ಹಿಂದೂಗಳನ್ನ *ಕೇಸರಿ ಭಯೋತ್ಪಾದಕರು* ಅಂತ ಕಾಂಗ್ರೆಸ್ ಕರೆದದ್ದನ್ನ ನಾ ಮರೆತಿಲ್ಲ
21. ರಾಮ, ಸೀತೆ, ರಾಮಾಯಣ, ಮಹಾಭಾರತ ಇವೆಲ್ಲ ಕಟ್ಟುಕಥೆಗಳಂತ ಹಿಂದೂ ಧರ್ಮವನ್ನ ಲೇವಡಿ ಮಾಡಿದ್ದ ಕಾಂಗ್ರೆಸ್'ನ್ನ ನಸ ಮರೆತಿಲ್ಲ
22. ರಾಮ ಷಂಡ ಅಂತ ಹೇಳಿಕೆ ಕೊಟ್ಟರೂ ಆತನನ್ನ ಬಂಧಿಸದೆ, ಭಯೋತ್ಪಾದಕ ಚಟುವಟಿಕೆ ನಡೆಸುವ PFI, KFD ಕೊಲೆಗಡುಕರ ಮೇಲಿದ್ದ 150 ಕೇಸ್ಗಳನ್ನ ವಜಾ ಮಾಡಿ ರಾಜ್ಯದಲ್ಲಿ ಹಿಂದೂಗಳ ಸರಣಿ ಹತ್ಯೆಗೆ ಕಾರಣವಾದ *ಸಿದ್ದರಾಮಯ್ಯ*ನನ್ನ ನಾ ಮರೆತಿಲ್ಲ
23. ಹಿಂದುಗಳು ಪೂಜಿಸುವ ಗೋಮಾತೆಯನ್ನ ನಡು ಬೀದಿಯಲ್ಲಿ ಕತ್ತರಿಸಿ ತಿಂದ *ಕೇರಳದ ಕಾಂಗ್ರೆಸ್ ಕಾರ್ಯಕರ್ತರ* ಆ ಹೇಸಿಗೆಯ ಕೆಲಸವನ್ನ ನಾ ಮರೆತಿಲ್ಲ
24. 'ಇಸ್ಲಾಮಿಕ್ ಇತಿಹಾಸ'ದ ವಿಷಯದ ಮೇಲೆ ಪೋಸ್ಟ್ ಗ್ರ್ಯಾಜ್ಯೂಯೇಷನ್ ಮಾಡಿಕೊಂಡು, ವೋಟಬ್ಯಾಂಕಿಗಾಗಿ ಬಾಂಗ್ಲಾದೇಶದ ಮುಸಲ್ಮಾನರನ್ನ ಅಕ್ರಮವಾಗಿ ಪಶ್ಚಿಮ ಬಂಗಾಳಕ್ಕೆ ಕರೆಸಿಕೊಂಡು ಅವರಿಗೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮಾಡಿಸಿಕೊಟ್ಟು ತನ್ನ ರಾಜ್ಯದಲ್ಲಿನ ಹಿಂದುಗಳ ಮೇಲೆ ದಾಳಿ ಮಾಡಿಸುತ್ತಿರೋ *ಮಮತಾ ಬ್ಯಾನರ್ಜಿ*ಯನ್ನ ನಾ ಮರೆತಿಲ್ಲ
25. ದೇವರನಾಡಾಗಿದ್ದ ಕೇರಳವನ್ನ ಐಸಿಸ್ ಉಗ್ರರ ಸ್ವರ್ಗವಾಗಿ ಬದಲಿಸಿದ, ಹಿಂದುಗಳನ್ನ ಕಂಡ ಕಂಡಲ್ಲಿ ಕತ್ತರಿಸಿ ಹಾಕುವಂತೆ ಮಾಡುತ್ತಿರೋ ಕೇರಳದ *ಪಿಣರಾಯಿ ವಿಜಯನ್*ನ್ನ ನಾ ಮರೆತಿಲ್ಲ
ಬರೆಯುತ್ತಾ ಹೋದರೆ ಇನ್ನೂ ಸಾವಿರಾರು ಘಟನೆಗಳಿವೆ, ಇವುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲುವವರು ಯಾರಿದ್ದಾರೆ ಈ ದೇಶದಲ್ಲಿ? ಹಿಂದುಗಳ ಹಿತ ಕಾಪಾಡುವವರು ಯಾರಿದ್ದಾರೆ ಈ ದೇಶದಲ್ಲಿ? *ನರೇಂದ್ರ ಮೋದಿ*ಯೆಂಬ *ಹಿಂದೂ ರಾಷ್ಟ್ರವಾದಿ* ಈ ದೇಶಕ್ಕೆ ಹಿಂದುತ್ವ ಉಳಿಸುವ ರಾಜನಾಗಿ 900 ವರ್ಷಗಳ ನಂತರ ದೆಹಲಿಯ ಗದ್ದುಗೆ ಮೇಲೆ ಕೂತಿದ್ದಾನೆ.
65 ವರ್ಷಗಳ ಕಾಲ ದೇಶವನ್ನ ಒಂದು ಕುಟುಂಬಕ್ಕೆ ಭ್ರಷ್ಟಾಚಾರ ಮಾಡಲು ಲೀಸ್ ಮೇಲೆ ಕೊಟ್ಟು ಸುಮ್ಮನಿದ್ದ ಜನಗಳು ಇಂದು ಮೋದಿಯನ್ನ ದೂಷಿಸುತ್ತಿರೋದನ್ನ ನೋಡಿದರೆ ನಗು ಬರುತ್ತೆ ಅಷ್ಟೇ ಕೋಪವೂ ಬರುತ್ತೆ
ಸತತ 900 ವರ್ಷಗಳ ದೌರ್ಜನ್ಯದ ನಂತರ ಭಾರತಕ್ಕೆ ಆಶಾಕಿರಣವಾಗಿ ಹಿಂದೂ ರಾಜನೊಬ್ಬ ಸಿಕ್ಕಿದ್ದಾನೆ. ಆತನಿಗೆ ಕೆಲಸ ಮಾಡೋಕೆ ಸ್ವಲ್ಪ ಸಮಯ ಕೊಡಿ, ಇಲ್ಲವಾದರೆ ಇತಿಹಾಸ ಮರುಕಳಿಸುತ್ತೆ ನಾವೆಲ್ಲ ಒಂದೋ ಸಾಯಬೇಕು ಇಲ್ಲವಾದರೆ ಮತಾಂತರವಾಗಬೇಕು!

*ಗುರು ಶಿಷ್ಯ ಬಾಂಧವ್ಯದ ಪ್ರತೀಕವೇ ಮಂತ್ರಾಕ್ಷತೆ*

 *ಗುರು ಶಿಷ್ಯ ಬಾಂಧವ್ಯದ ಪ್ರತೀಕವೇ ಮಂತ್ರಾಕ್ಷತೆ*
* ಮಠಕ್ಕೆ ಬರುವಾಗ- ಹೋಗುವಾಗ ಬರಿಗೈಯಿಲ್ಲ. ಬರುವಾಗ ಫಲವಸ್ತುವನ್ನು ತರುವುದು, ಮಠದಿಂದ ಮಂತ್ರಾಕ್ಷತೆ ಪಡೆದುಕೊಳ್ಳುವುದು
ಮಂತ್ರಾಕ್ಷತೆ ಸಿಗದೇ ಮಠಕ್ಕೆ ಬಂದ ಕಾರ್ಯ ಪೂರ್ಣವಾಗುವುದಿಲ್ಲ.
*ಮಂತ್ರಾಕ್ಷತೆ ನಮ್ಮನ್ನು ರಕ್ಷಿಸುತ್ತದೆ*
ಮಂತ್ರಾಕ್ಷತೆ - ಮಂತ್ರ ಮತ್ತು ಅಕ್ಷತ ಎಂಬ ಎರಡು ಪದಗಳು.
ಅಕ್ಷತ ಅಂದ್ರೆ ಅಖಂಡ, ತುಂಡು ಇಲ್ಲದಂತದ್ದು, ಪೂರ್ಣದ ಸಂ
ಮನುಷ್ಯನಿಗೆ ಜೀವನದಲ್ಲಿ ಪೂರ್ಣತೆ ಬೇಕು, ಆರೋಗ್ಯ, ರೂಪ, ಆಯುಷ್ಯ ಬೇಕು.. ಆಗಲೇ ಪೂರ್ಣ. ಅಕ್ಷತೆ ಅಂದ್ರೆ ಅದು.
; ಅಕ್ಷತೆ ನಮ್ಮ ಜೀವನದಲ್ಲಿ ಪೂರ್ಣತೆಯನ್ನು ಒದಗಿಸುತ್ತದೆ.
ಕ್ಷತ ಅಂದ್ರೆ ಘಾತ, ಪೆಟ್ಟು, ಆಘಾತ.. ಇವೆಲ್ಲ ಜೀವನದಲ್ಲಿ ಬಂದಾಗ ಅಕ್ಷತೆ ನಮ್ಮನ್ನು ರಕ್ಷಿಸುತ್ತದೆ.
ಮಂತ್ರ ಶಬ್ದಕ್ಕೆ ಅರ್ಥ ಯಾವುದನ್ನು ಮನನ ಮಾಡುವುದರಿಂದ ನಮ್ಮನ್ನು ರಕ್ಷಿಸುತ್ತದೋ ಅದು ಮಂತ್ರ.
; ಗುರುವಿನ ಮನಸ್ಸಿನಲ್ಲಿ ಶಿಷ್ಯನ ಕ್ಷೇಮಕ್ಕಾಗಿ, ಶ್ರೇಯಸ್ಸಿಗಾಗಿ ಮನನ ಮಾಡಿ ಅನುಗ್ರಹಿಸುವುದು. 
**ನಮ್ಮಲ್ಲಿ ಭಾವ ಎಷ್ಟಿದೆಯೋ ಅಷ್ಟು ಫಲವನ್ನು ಮಂತ್ರಾಕ್ಷತೆ ಕೊಡುತ್ತದೆ*
* ಗುರು ಶಿಷ್ಯನ ಉನ್ನತಿಗಾಗಿ ಭಾವಿಸಿ ಕೊಡಬೇಕು, ಹಾಗೆಯೇ ಶಿಷ್ಯ ತನ್ನ ಶ್ರೇಯಸ್ಸಿಗೆ ಬೇಕು ಎಂದು ಭಾವಿಸಿ ಪಡೆಯಬೇಕು
ಮಂತ್ರಾಕ್ಷತೆಯನ್ನು ನೆಚ್ಚಿದವರಿಗೆ ಸೋಲಿಲ್ಲ*
ಮಂತ್ರಾಕ್ಷತೆ ಗುರುಪ್ರೀತಿಯ ಪ್ರತೀಕ, *ಜೊತೆಗಿರುವ ಗುರು*
*ಚರುವನ್ನು ದೇವರಿಗೆ ಅರ್ಪಿಸುತ್ತೇವೆ, ಮಂತ್ರಾಕ್ಷತೆ ನಮ್ಮೊಳಗಿನ ದೇವನಿಗೆ ಅರ್ಪಿಸೋಣ.
ಬದುಕಿನ ಅವಿಭಾಜ್ಯ ಅಂಗವಾಗಲಿ ಮಂತ್ರಾಕ್ಷತೆ, ಭಾವ ಇರಲಿ, ಭಕ್ತಿ ಇರಲಿ.
ಜೀವನದಲ್ಲಿ ಎರಡೇ ಔಷಧಿಗಳು. ಒಂದು ಮಂತ್ರಾಕ್ಷತೆ, ಅದರ ಜೊತೆ ಭಾವ.
*ಬದುಕಿನ ಎಲ್ಲ ಕ್ಲೇಶಗಳನ್ನು, ಪ್ರಶ್ನೆಗಳನ್ನು ಉತ್ತರಿಸುತ್ತದೆ, ಭವಸಾಗರವನ್ನು ಮಂತ್ರಾಕ್ಷತೆ ದಾಟಿಸುತ್ತದೆ*
*ಮಂತ್ರಾಕ್ಷತೆ ಎಂದಿಗೂ ನಿಮ್ಮ ತಲೆಯ ಮೇಲೆ ಇರಲಿ
ಎಲ್ಲರಿಗೂ ಒಳಿತಾಗಲಿ

ನಾನೇಕೆ ನನ್ನ ಧರ್ಮವನ್ನು ಪ್ರೀತಿಸುತ್ತೇನೆ ?

ನಾನೇಕೆ ನನ್ನ ಧರ್ಮವನ್ನು ಪ್ರೀತಿಸುತ್ತೇನೆ ?
ಪ್ರತಿಯೊಂದು ಧರ್ಮವೂ ಮನುಷ್ಯನಲ್ಲಿ ಒಂದು ಸಂಸ್ಕಾರವನ್ನು, ಒಂದು ಅರಿವನ್ನು ಮೂಡಿಸುತ್ತದೆ. ಆ ಸಂಸ್ಕಾರವಾದರೋ ನಮ್ಮ ನಿತ್ಯದ ಬದುಕಿಗೆ ದಾರಿದೀಪ. ಬೆಳಕಿನ ದಾರಿಗೆ ಸೂರ್ಯನಂತೆಯೇ ಬದುಕಿನ ದಾರಿಗೆ ಧರ್ಮ ಬೆಳಕಾಗುತ್ತದೆ. ನನ್ನದು ಸನಾತನ ಧರ್ಮ. ಜೀವ-ಜಡದಂಗಳದಲ್ಲಿರುವ ನಂಟನ್ನು ಹೊಸೆದು ಬೆಸೆದು ಸುಂದರ ತತ್ವವೊಂದನ್ನು ಕಟ್ಟಿಕೊಟ್ಟ ಧರ್ಮ. ವೇದವ್ಯಾಸರು, ಸನಕಾದಿ ಮುನಿಗಳು, ದೂರ್ವಾಸರು, ಅತ್ರಿ, ಅಗಸ್ತ್ಯರು, ವಸಿಷ್ಟ, ವಿಶ್ವಾಮಿತ್ರರು, ಜನಕ ಮಹಾರಾಜರು ಪ್ರೀತಿಸಿದ ಧರ್ಮವನ್ನು ರಮಣರು, ರಾಮಕೃಷ್ಣರು, ವಿವೇಕಾನಂದರು ಪೋಷಿಸಿದರು. ಇಲ್ಲಿನ ಬಗೆ ಆಚರಣೆ ಸರಳ ಸುಂದರ.
ದಿನ ನಿತ್ಯ ಮುಂಜಾವಿಗೆ ಕಣ್ತೆರೆದಾಗ ದೇವರ ದರ್ಶನವನ್ನು ಮಾಡಬೇಕು. 'ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂಚಾಲೆ ರಾಘಪ್ಪ' ಎನ್ನುವ ಮಾತಿದೆ. ದರ್ಶನಕ್ಕೆ ನಿತ್ಯ ತಿರುಪತಿಯನ್ನು ತಲುಪಲು ಕಷ್ಟ ಸಾಧ್ಯವಲ್ಲವೇ?
"ಕರಾಗ್ರೆ ವಸತೇ ಲಕ್ಷ್ಮಿ, ಕರಮಧ್ಯೇ ಸರಸ್ವತಿ|
ಕರಮೂಲೇ ತು ಗೋವಿಂದ ಪ್ರಭಾತೆ ಕರ ದರ್ಶನಂ||"
ಭಗವಂತ ಇಲ್ಲಿಯೇ ನನ್ನೊಟ್ಟಿಗೇ ಇದ್ದಾನೆ ಎನ್ನುವ ಧೈರ್ಯವನ್ನು ನಿತ್ಯ ಎದ್ದೇಳುವಾಗ ನನ್ನ ಧರ್ಮ ತುಂಬಿಕೊಡುತ್ತದೆ.
ಬ್ರಹ್ಮಾಂಡದಲ್ಲಿ ಜೀವ ಕೋಟಿ ಸಂಕುಲಗಳನ್ನು ಭಗವಂತ ಭೂಮಿಯಲ್ಲಿ ಸೃಷ್ಟಿಸಿದ. ಅದನ್ನು ಅವನೇ ಪಾಲಿಸುವ ಹೊಣೆಹೊತ್ತನು. ಭಗವಂತ ತಂದೆಯಾದ ಮೇಲೆ ಧರಿತ್ರಿ ನಮ್ಮ ತಾಯಿಯಲ್ಲವೇ? ಅರೆ! ಈ ಭೂಮಿಯನ್ನು ನಾವು ತುಳಿಯುತ್ತೇವೆ, ಅಗೆದು ಬಗೆಯುತ್ತೇವೆ. ವಿಧಿಯಿಲ್ಲವೇ. ಆದರೆ ಸ್ಪರ್ಶಿಸುವ ಮುನ್ನ ಒಮ್ಮೆ ಅವಳಲ್ಲಿ ಶರಣಾಗಬಹುದಲ್ಲವೇ?
"ಸಮುದ್ರವಸನೆ ದೇವಿ ಪರ್ವತ ಸ್ತನ ಮಂಡಲೆ,
ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ"
ಈ ಶ್ಲೋಕವನ್ನು ಹೇಳುವಾಗ ಅವಳಲ್ಲಿನ ವಾತ್ಸಲ್ಯ ನೂರ್ಮಡಿಯಾಗುತ್ತದೆ.
ಅಂತರಂಗ ಶುದ್ಧಿ ಮಾನವನ ಜೀವನದ ಪ್ರಮುಖ ಸಾಧನ. ಅಂತೆಯೇ ಬಹಿರಂಗ ಶುದ್ಧಿಯೂ ಕೂಡ. 'ಗಂಗಾಪಾನ ತುಂಗಾಪಾನ' ಎನ್ನುವ ಮಾತಿದೆ. ಹಾಗಾದರೆ ನಿತ್ಯ ಗಂಗೆಯನ್ನು ಹುಡುಕಿ ಮಿಂದು ಬರುವುದೇ?
"ಗಂಗೇಚ ಯಮುನೇಚ ಗೋದಾವರಿ ಸರಸ್ವತಿ,
ನರ್ಮದೇ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಿಂ ಕುರು."
ಬಾತ್ ರೂಮಿನ ಶವರ್ ನ ಅಡಿಯಲ್ಲಿ ನಿಂತರೂ ಈ ಶ್ಲೋಕದಿಂದ ಸರ್ವರೋಗಗಳನ್ನು ಕಳೆಯುವ ಪಾಪವಿನಾಶಿನಿಯಾದ ಗಂಗಾ-ಕಾವೇರಿಯರ ಕರುಣೆಯನ್ನು ಬೇಡಬಹುದು.
ಒಂದಷ್ಟು ಹೊತ್ತು ದೇವರ ಸ್ಮರಣೆ ಕಣ್ಮುಚ್ಚಿ ತದೇಕಚಿತ್ತದಿಂದ "ಕೃಷ್ಣ, ರಾಮ" ಎಂದರೆ ಸಾಕಲ್ಲವೆ. "ಕರ್ಷತಿ ಇತಿ ಕೃಷ್ಣಃ", " ರಮಂತೇ ಇತಿ ರಾಮಃ"‌ ಭಗವಂತ ನಮ್ಮೊಳಗಿನ ನಕಾರಾತ್ಮಕ ತರಂಗಗಳನ್ನು ಕರ್ಷಿಸಿ ಅವನ ಕರುಣೆಯಿಂದ ಸಕಾರಾತ್ಮಕ ಶಕ್ತಿಯನ್ನು ತುಂಬುವುದಿಲ್ಲವೆ.
ಬಹಿರಂಗ ಶುದ್ಧಿಯಾಯಿತು ಅಂತರಂಗ ಶುದ್ಧಿ?
"ಅಪವಿತ್ರಃ ಪವಿತ್ರೋವ ಸರ್ವಾವಸ್ಥಂ ಗತೋಪಿವ
ಯಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಬ್ಯಂತರಂ ಶುಚಿಃ". 
ರಾತ್ರಿ ಮಲಗುತ್ತೇವೆ. ಕತ್ತಲಿನದ್ದು ತಮೋಗುಣ. ಇರುಳಿನಲ್ಲಿ ಸೂರ್ಯನಾರಾಯಣನ ಪ್ರಭೆ ಇರುವುದಿಲ್ಲ. ವಿಜ್ಞಾನದ ದೃಷ್ಟಿ ಹರಿಸಿ ಕಾಣುವುದಾದರೆ, ಸಕಲ ಜೀವರಾಶಿಗಳ ಆಧಾರಸ್ಥಾಯಿಯಾಗಿ ಸೂರ್ಯನಿದ್ದಾನೆ. ಅವನ ಕಿರಣಗಳು ಸೋಕದ ಹೊರತು ಪುಷ್ಪಗಳೂ ಅರಳಲೊಲ್ಲವು. ಸಸ್ಯಗಳು ಅವನ ಗೈರಿನಲ್ಲಿ ಇಂಗಾಲದ ಆಮ್ಲವನ್ನು ಹೊರಹಾಕುತ್ತವೆ. ಇನ್ನು ಅವನ ಬೆಳಕನ್ನು ಬಿಂಬಿಸುವ ಚಂದಿರ ತಿಂಗಳಿನಲ್ಲಿ ಕ್ಷೀಣಿಸುತ್ತಾ ಬರುತ್ತಾನೆ. ಇದರ ಪರಿಣಾಮ ಇಡ ಮತ್ತು ಪಿಂಗಳದ ಮೂಲಕ ನಮ್ಮ ದೇಹವನ್ನು ಹೊಕ್ಕು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ಮಲಗಿರುವಾಗ ನಮ್ಮಲ್ಲಿನ‌ ಜೀವಕೋಶಗಳಲ್ಲಿನ ಜೀವ ಕ್ರಿಯ ನಿಧಾನವಾಗಿರುತ್ತದೆ. ಆ ಕಾರಣ ಮನಸ್ಸಿನ ಮೇಲೆ ತಮೋಗುಣ ಪ್ರಭಾವಿತವಾಗಿ ದುಸ್ವಪ್ನಗಳು ಬರುವ ಸಧ್ಯತೆ ಹೆಚ್ಚು. ಅದಕ್ಕೆಂದೆ ಪ್ರತಿ ಮುಂಜಾವಿಗೆ ಯೋಗ ಸೂರ್ಯ ನಮಸ್ಕಾರಗಳಿಂದ ಭಗವಂತ ನೀಡಿದ ಮತ್ತೊಂದು‌ ದಿನಕ್ಕೆ ಅವನನ್ನು ವಂದಿಸುತ್ತಾ ಇರುಳಿನ ತಮೋಗುಣವನ್ನೆಲ್ಲಾ ಕಳೆದು ನಮ್ಮನ್ನು ಪವಿತ್ರಗೊಳಿಸು ಎಂದು ಬೇಡುತ್ತೇವೆ.
ಸೃಷ್ಟಿಸಿದವನಿಗೆ ಭೂಮಿ‌ ಭಾಮೆಯಾದರೆ ಅಂತೆಯೇ ತುಳಸಿಯೂ ಕೂಡ. ಭೂಮಿ ಸಕಲ ಜೀವಗಳಿಗೆ ಆಸರೆ ನೀಡಿದರೆ ತುಳಸಿ ಜೀವ ವಾಯುವನ್ನು ನೀಡುತ್ತಾಳೆ. ಹಾಗಾಗಿ ಈ ತುಳಸಿಗೆ ಭಗವಂತನೇ ಆಸರೆ. ನಿತ್ಯ ತುಳಿಸಿಗೆ ಒಂದು ನಮಸ್ಕಾರ.
" ನಮಃ ತುಳಸಿ ಕಲ್ಯಾಣಿ, ನಮೋ ವಿಷ್ಣುಪ್ರಿಯೆ ಶುಭೆ,
ನಮೋ ಮೋಕ್ಷ ಪ್ರದೇ ದೇವಿ ನಮಃ ಸಂಪತ್ಪ್ರದಾಯಿನಿ||".
ಭಗವಂತನನ್ನು ಸ್ಮರಿಸಲು ಕಾಲವೇ ಆದರೂ ಮುಂಜಾವಿಗೆ ಅವನನ್ನು ನೆನೆಯದಿದ್ದರೆ ನರಜನ್ಮದ ಭಾರವೆಲ್ಲಿ‌ ಹಿಂಗೀತು?
"ನಿತ್ಯಾಯ ನಿರವದ್ಯಾಯ ಸತ್ಯಾನಂದ ಚಿದಾತ್ಮನೆ,
ಸರ್ವಾಂತರಾತ್ಮನೆ ಶ್ರೀಮದ್ವೇಂಕಟೇಶಾಯ ಮಂಗಳಂ||"
ಎಂದು ಆರತಿ ಬೆಳಗುವಾಗ ನನ್ನಲ್ಲಿನ ಪ್ರಸ್ತುತ ದಿನ ಸರ್ವರಲ್ಲಿಯೂ ಭಗವಂತನನ್ನು ಕಾಣುವ ಮನಸ್ಸು ಪುಟಿದೇಳುತ್ತದೆ.
"ಮಾತೃದೇವೋಭವ, ಪಿತೃದೇವೋಭವ" ಎನ್ನುವ ಸದ್ಭಾವನೆಯನ್ನು ಎಳೆಯ‌‌ ಮನಸ್ಸಿನಿಂದ ಬಿತ್ತಿಬೆಳೆಸಿದ ಧರ್ಮ ನನ್ನದು.
ಗಂಡು-ಹೆಣ್ಣು ಪ್ರಕೃತಿ - ಪುರುಷರ ಸಾಂಕೇತಿಕ ರೂಪ. ಗಂಡು ಒಂದು ಜೀವಿಯನ್ನು ತನ್ನಿಂದ ಹೊರಗೆ ಸೃಷ್ಟಿಸಿದಲ್ಲಿ, ಹೆಣ್ಣು ಅದೇ ಜೀವವನ್ನು ತನ್ನೊಳಗೆ ಸೃಷ್ಟಿಸುತ್ತಾಳೆ. ನವಮಾಸ ಗರ್ಭದಲ್ಲಿ ಹೊತ್ತು ಪೋಷಿಸುತ್ತಾಳೆ. ಈ ನಿಟ್ಟಿನಲ್ಲಿ ನನ್ನ ಧರ್ಮ ಹೇಳುವ ನುಡಿಗಳು ಐತರೇಯ ಉಪನಿಷತ್ತಿನಲ್ಲಿ ಹೀಗೆ ದಾಖಲಾಗಿದೆ.
"ಸಾ ಭಾವಯತ್ರೀ ಭಾವಯಿತವ್ಯಾಭವತಿ,
ತಂ ಸ್ತ್ರೀ ಗರ್ಭಂ ಬಿರ್ಭತಿ|
ಸೋಗ್ರ ಏವ ಕುಮಾರಂ ಜನ್ಮನೋಗ್ರೇಧಿ ಭಾವಯತಿ||"
ಅವಳು ನಿನ್ನ ಗರ್ಭವನ್ನು ದೇಹದಲ್ಲಿ ಧರಿಸಿ ನಿನ್ನ ಮರುಜನ್ಮಕ್ಕೆ ಕಾರಣಳಾಗಿರುವಳು. ಅವಳನ್ನು ಪೋಷಿಸುವುದು ನಿನ್ನ ಧರ್ಮ ಎನ್ನುವುದು ಇದರರ್ಥ.
ಉಪನಿಷತ್ ಗಳಲ್ಲಿ ಬರುವ ಶಾಂತಿ ಮಂತ್ರಗಳಾದರೋ ಅದು ಮನಸ್ಸನ್ನು ಮೀರಿದ ಬುದ್ಧಿ ಚೈತನ್ಯಕ್ಕೆ ಆಂತರ್ಯಕ್ಕೆ.
"ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಮೃತ್ಯೋಮ ಅಮೃದಂಗಮಯ
ಓಂ ಶಾಂತಿ, ಶಾಂತಿ, ಶಾಂತಿಃ"
ಅಸತ್ಯವಾದ ಈ ದೇಹ ಮನಸ್ಸಿಗೆ ಸದ್ಗತಿ ದೊರೆಯಲಿ,
ಕತ್ತಲ್ಲಿಂದ ಕೂಡಿದ ನನ್ನ ಮನೋಬುದ್ಧಿಗೆ ಬೆಳಕು ಒದಗಲಿ, ಮರ್ತ್ಯದೇಹವಾದರೂ ಅಮರ್ತ್ಯ ಆತ್ಮವಿದೆ ಮುಕ್ತಿಯ ಮೂಲಕ ಆ ಆತ್ಮಕ್ಕೆ ಅಮೃತತ್ವ ಒದಗಲಿ. ಓ, ಅಧಿಭೌತಿಕ, ಅಧ್ಯಾತ್ಮಿಕ, ಅಧಿದೈವಿಕ ಶಕ್ತಿಗಳೇ ಶಾಂತರಾಗಿ.
ಧರ್ಮ ಪುಸ್ತಕದ ಪುಟಗಳಲ್ಲಿ ವಿಜೃಂಭಿಸುವಂತದ್ದಲ್ಲ. ಅದು ನಿತ್ಯ ನಿರಂತರ ಆಚರಣೆಗೆ ಒದಗುವಂತದ್ದು. ನನ್ನ ಧರ್ಮ ಹೀಗೆ ದಿನ ನಿತ್ಯ ಆಚರಣೆಗೆ ನನ್ನನ್ನು ಒದಗಿಸಿ ನನ್ನೊಳಗೊಂದು ಸಂಸ್ಕಾರವನ್ನು ಸೃಷ್ಟಿಸಿದೆ. ನಮ್ಮ ಧರ್ಮ ನಮ್ಮ ಹೆಮ್ಮೆಯಲ್ಲವೇ?
            - ಭಾಸ್ಕರ ಮಾಳ್ವ

ಪ್ರತಿ ತಿಂಗಳು ಆಚರಿಸುವ ವ್ರತ :

ಪ್ರತಿ ತಿಂಗಳು ಆಚರಿಸುವ ವ್ರತ :
1.ಸತ್ಯನಾರಾಯಣ ವ್ರತ (ಮಾಸ ಪೂರ್ಣಿಮೆ /ಹುಣ್ಣಿಮೆ)
2.ಸಂಕಷ್ಟ ಹರ ಗಣಪತಿ ವ್ರತ(ಮಾಸ ಕೃಷ್ಣ ಪಕ್ಷ ಚತುರ್ಥಿ)
ಚೈತ್ರ ಮಾಸದ ವಿಶೇಷ ದಿನಗಳು
1.ಯುಗಾದಿ ( ಚೈತ್ರ ಮಾಸ ಶುಕ್ಲ ಪಕ್ಷದ ಪ್ರತಿಪದ್/ಪಾಡ್ಯ)
2.ಗೌರೀತದಿಗೆ ( ಚೈತ್ರ ಮಾಸ ಶುಕ್ಲ ಪಕ್ಷದ ತದಿಗೆ)
3.ರಾಮನವಮಿ ( ಚೈತ್ರ ಮಾಸ ಶುಕ್ಲ ಪಕ್ಷದ ನವಮಿ) 
ವೈಶಾಖ ಮಾಸದ ವಿಶೇಷ ದಿನಗಳು
1.ಅಕ್ಷಯ ತೃತೀಯಾ (ವೈಶಾಖ ಮಾಸ ಶುಕ್ಲ ಪಕ್ಷದ ತದಿಗೆ)
2.ಶಂಕರಾಚಾರ್ಯ ಜಯಂತಿ (ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ)
3.ಶ್ರೀ ನೃಸಿಂಹ ಜಯಂತೀ (ವೈಶಾಖ ಮಾಸ ಶುಕ್ಲ ಪಕ್ಷದ ಚತುರ್ದಶಿ)
ಜ್ಯೇಷ್ಠಮಾಸದ ವಿಶೇಷ ವಿಶೇಷ ದಿನಗಳು
1.ವಟ ಸಾವಿತ್ರಿ ವ್ರತ (ಜ್ಯೇಷ್ಠ ಮಾಸದ ಪೂರ್ಣಿಮೆ /ಹುಣ್ಣಿಮೆ )
ಆಷಾಢ ಮಾಸದ ವಿಶೇಷ ದಿನಗಳು
1.ಆಷಾಡ ಶುಕ್ರವಾರ (ಆಷಾಢ ಮಾಸದ ಶುಕ್ರವಾರಗಳು )
2.ಗುರು ಪೂರ್ಣಿಮಾ (ಆಷಾಢ ಮಾಸ ಪೂರ್ಣಿಮೆ /ಹುಣ್ಣಿಮೆ )
3.ಭೀಮನ ಅಮಾವಸ್ಯೆ (ಆಷಾಡ ಮಾಸ ಅಮಾವಸ್ಯೆ)
ಶ್ರಾವಣ ಮಾಸದ ವಿಶೇಷ ದಿನಗಳು
1.ಮಂಗಳಗೌರೀ ವ್ರತ (ಶ್ರಾವಣಮಾಸದ ನಾಲ್ಕು ಮಂಗಳವಾರ)
2.ಸಂಪತ್ತು ಶುಕ್ರವಾರ (ಶ್ರಾವಣ ಮಾಸದ ಶುಕ್ರವಾರಗಳು)
3.ಶ್ರಾವಣ ಶನಿವಾರ (ಶ್ರಾವಣ ಮಾಸದ ಶನಿವಾರಗಳು)
4.ನಾಗಚತುರ್ಥಿ (ಶ್ರಾವಣ ಮಾಸ ಶುಕ್ಲ ಪಕ್ಷದ ಚತುರ್ಥಿ)
5.ನಾಗಪಂಚಮೀ (ಶ್ರಾವಣ ಮಾಸ ಶುಕ್ಲ ಪಕ್ಷದ ಪಂಚಮೀ)
6.ವರಮಹಾಲಕ್ಷ್ಮೀ ವ್ರತ (ಶ್ರಾವಣ ಮಾಸದ ಶುಕ್ಲ ಪಕ್ಷದ 2 ನೇ ಶುಕ್ರವಾರ )
7.ಉಪಾಕರ್ಮ (ಶ್ರಾವಣ ಮಾಸ ಶುಕ್ಲ ಪಕ್ಷದ ಚತುರ್ದಶಿ)
8.ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ (ಶ್ರಾವಣ ಮಾಸ ಕೃಷ್ಣ ಪಕ್ಷದ ದ್ವಿತೀಯಾ)
9.ಕೃಷ್ಣಾಷ್ಟಮೀ (ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿ)
ಭಾದ್ರಪದ ಮಾಸದ ವಿಶೇಷ ದಿನಗಳು
1.ಸ್ವರ್ಣಗೌರೀ (ಭಾದ್ರಪದ ಶುಕ್ಲ ಪಕ್ಷದ ತೃತೀಯಾ )
2.ಗಣೇಶಚತುರ್ಥೀ (ಭಾದ್ರಪದ ಶುಕ್ಲ ಪಕ್ಷದ ಚೌತಿ )
3.ಅನಂತಪದ್ಮನಾಭ ವ್ರತ (ಭಾದ್ರಪದ ಶುಕ್ಲ ಪಕ್ಷದ ಚತುರ್ದಶೀ )
4.ಪಿತೃಪಕ್ಷ - ಮಹಾಲಯ (ಭಾದ್ರಪದ ಕೃಷ್ಣಪಕ್ಷ )
ಆಶ್ವಯುಜ ಮಾಸದ ವಿಶೇಷ ದಿನಗಳು
1.ನವರಾತ್ರಿ (ಆಶ್ವಯುಜ ಶುಕ್ಲ ಪಕ್ಷದ ಪಾಡ್ಯದಿಂದ ದಶಮಿ ಯವರೆಗೆ)
2.ಸರಸ್ವತಿ ಪೂಜೆ (ಆಶ್ವಯುಜ ಶುಕ್ಲ ಪಕ್ಷದ ಸಪ್ತಮಿ)
3.ದುರ್ಗಾಷ್ಟಮಿ (ಆಶ್ವಯುಜ ಶುಕ್ಲ ಪಕ್ಷದ ಅಷ್ಟಮಿ)
4.ಆಯುಧ ಪೂಜಾ / ಮಹಾ ನವಮಿ (ಆಶ್ವಯುಜ ಶುಕ್ಲ ಪಕ್ಷದ ನವಮಿ)
5.ವಿಜಯದಶಮಿ (ಆಶ್ವಯುಜ ಶುಕ್ಲ ಪಕ್ಷದ ದಶಮಿ)
6.ಮಧ್ವಜಯಂತೀ (ಆಶ್ವಯುಜ ಶುಕ್ಲ ಪಕ್ಷದ ದಶಮಿ)
7.ನರಕಚತುರ್ದಶೀ (ಆಶ್ವಯುಜ ಕೃಷ್ಣ ಪಕ್ಷದ ಚತುರ್ದಶೀ )
8.ದೀಪಾವಳೀ ಅಮಾವಾಸ್ಯೆ ಲಕ್ಷ್ಮೀ ಪೂಜೆ (ಆಶ್ವಯುಜ ಅಮಾವಸ್ಯೆ )
ಕಾರ್ತೀಕ ಮಾಸದ ವಿಶೇಷ ದಿನಗಳು
1.ಬಲಿಪಾಡ್ಯಮೀ (ಕಾರ್ತೀಕ ಶುಕ್ಲ ಪಕ್ಷದ ಪಾಡ್ಯ )
2.ಉತ್ತಾನದ್ವಾದಶೀ (ಕಾರ್ತೀಕ ಶುಕ್ಲ ಪಕ್ಷದ ದ್ವಾದಶೀ )
3.ಕಾರ್ತೀಕ ಸೋಮವಾರ (ಕಾರ್ತೀಕ ಮಾಸದ ಸೋಮವಾರಗಳು)
ಮಾರ್ಗಶಿರ ಮಾಸದ ವಿಶೇಷ ದಿನಗಳು
1.ಸುಬ್ರಹ್ಮಣ್ಯ ಷಷ್ಠೀ (ಮಾರ್ಗಶಿರ ಶುಕ್ಲ ಪಕ್ಷದ ಷಷ್ಠಿ )
2.ಗೀತಾ ಜಯಂತಿ(ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಏಕಾದಶಿ)
3.ದತ್ತಾತ್ರೇಯ ಜಯಂತಿ (ಮಾರ್ಗಶಿರ ಮಾಸದ ಹುಣ್ಣಿಮೆ/ಪೂರ್ಣಿಮಾ)
4.ಎಳ್ಳಮಾವಸ್ಯೆ (ಮಾರ್ಗಶಿರ ಮಾಸದ ಅಮಾವಸ್ಯೆ)
5.ವೈಕುಂಠ ಏಕಾದಶಿ (ಧನುರ್ಮಾಸದ ಏಕಾದಶಿ)
6.ಮಾರ್ಗಶಿರ ಮಹಾಲಕ್ಷ್ಮಿ ವ್ರತ (ಮಾರ್ಗಶಿರ ಮಾಸದ ಗುರುವಾರಗಳು)
ಪುಷ್ಯ ಮಾಸದ ವಿಶೇಷ ದಿನಗಳು
1.ವೈಕುಂಠ ಏಕಾದಶಿ (ಧನುರ್ಮಾಸದ ಏಕಾದಶಿ)
2.ಮಕರ ಸಂಕ್ರಮಣ/ಸಂಕ್ರಾಂತಿ
ಮಾಘ ಮಾಸದ ವಿಶೇಷ ದಿನಗಳು
1.ವಸಂತ ಪಂಚಮೀ(ಮಾಘ ಮಾಸದ ಶುಕ್ಲ ಪಕ್ಷದ ಪಂಚಮೀ)
2.ರಥಸಪ್ತಮಿ (ಮಾಘ ಶುಕ್ಲ ಪಕ್ಷದ ಸಪ್ತಮಿ)
3.ಮಧ್ವನವಮೀ (ಮಾಘ ಶುಕ್ಲ ಪಕ್ಷದ ನವಮಿ)
4.ಶಿವರಾತ್ರಿ (ಮಾಘ ಕೃಷ್ಣ ಪಕ್ಷದ ಚತುರ್ದಶಿ)
ಫಾಲ್ಗುಣ ಮಾಸದ ವಿಶೇಷ ದಿನಗಳು
1.ಹೋಲೀ ಹುಣ್ಣಿಮೆ (ಫಾಲ್ಗುಣ ಮಾಸದ ಪೂರ್ಣಿಮೆ /ಹುಣ್ಣಿಮೆ)

*ದುರ್ಗಾ ಸಪ್ತಶತಿಯ ಅಂಗ ಹಾಗೂ ಶ್ಲೋಕ ಸಂಖ್ಯೆ*

 *ದುರ್ಗಾ ಸಪ್ತಶತಿಯ ಅಂಗ ಹಾಗೂ ಶ್ಲೋಕ ಸಂಖ್ಯೆ*
ಪರಾಶಕ್ತಿಯ ೩-೩ ವಿಭಾಗವಾಯಿತು. ಅವ್ಯಕ್ತದ ನಂತರ ಮಹಾಕಾಲೀ ಪ್ರಥಮ ರೂಪವಾಗಿದೆ. ಆ ಚರಿತ್ರೆಯಲ್ಲಿ ಕೇವಲ ಒಂದು ಅಧ್ಯಾಯವಿದೆ.
ಮಹಾಲಕ್ಷ್ಮಿಯಲ್ಲಿ ೩ ಹಾಗೂ ಮಹಾಸರಸ್ವತೀ ಚರಿತ್ರೆಯಲ್ಲಿ ೩x೩=೯ ಅಧ್ಯಾಯಗಳಿವೆ. ಇದೇ ರೀತಿ ಮೂಲ ವೇದವು ವಿಭಜನೆಗೊಂಡು ಋಗ್ಯಜುಸ್ಸಾಮ ಎಂಬ ಶಾಖೆ ಮೂರಾಯಿತು.
ಮೂಲವೂ ಅಥರ್ವದಲ್ಲಿ ಉಳಿದಿದೆ, ವೇದತ್ರಯೀ ಎಂದರೆ ೪ ವೇದಗಳು ಎಂದು. ಅಂದರೆ ೧ ಮೂಲ + ೩ ಶಾಖೆ. (ಮುಂಡಕ ಉಪನಿಷತ್ತು, ೧/೧/೧-೫)
ಇದರ ಪ್ರತೀಕವಾಗಿ ಉಪನಯನದ ಸಮಯದಲ್ಲಿ ವೇದಾರಂಭದ ದ್ಯೋತಕವಾಗಿ ಪಲಾಶ ದಂಡದ ಪ್ರಯೋಗವಿದೆ. ಪಲಾಶದಲ್ಲೂ ಒಂದು ಶಾಖೆಯಿಂದ ೩ ಎಲೆಗಳು ಹೊರಡುತ್ತವೆ.
ಇದು ಬ್ರಹ್ಮದ ಪ್ರತೀಕವಾಗಿದೆ.
ಸಪ್ತಶತಿಯ ೩ ಚರಿತ್ರೆ ೩ ವೇದ ಶಾಖೆಗಳಾದ ಋಕ್, ಯಜು, ಸಾಮ ಸ್ವರೂಪದಲ್ಲಿದೆ. ಮೂಲ ಅಥರ್ವವೇದದ ಸ್ವರೂಪವು ದೇವೀ ಅಥರ್ವಶೀರ್ಷ.
ದೇವೀ ಅಥರ್ವಶೀರ್ಷದ ವಿವಿಧ ಛಂದಸ್ಸುಗಳಲ್ಲಿನ ಶ್ಲೋಕ ಸಂಖ್ಯೆಯನ್ನು ಎಣಿಸಿರಿ. ತದನಂತರ ಪ್ರಥಮ ಚರಿತ್ರೆಯ ಒಂದು ನಿರ್ದಿಷ್ಟ ಛಂದಸ್ಸು ಗಾಯತ್ರೀ,
ದ್ವಿತೀಯ ಚರಿತ್ರೆಯ ಉಷ್ಣಿಕ್ ಹಾಗೂ ತೃತೀಯ ಚರಿತ್ರೆಯ ಅನುಷ್ಟುಪ್ ಛಂದಸ್ಸುಗಳಲ್ಲಿನ ಶ್ಲೋಕ ಸಂಖ್ಯೆ ಎಣಿಸಿರಿ. ಇವುಗಳಲ್ಲಿ ೩ ಏಕಾಕ್ಷರೀ ಮಂತ್ರಗಳಾದ ಐಂ, ಹ್ರೀಂ, ಕ್ಲೀಂ ಎಂಬ ೩ ಅಂಕಿಯನ್ನು ಕೂಡಿರಿ. ಸರಿಯಾಗಿ ೭೦೦ ಸಂಖ್ಯೆಯಾಗುತ್ತದೆ. ಇನ್ನು ೨೦ ಮಂತ್ರಗಳು ಉವಾಚಗಳಲ್ಲಿ ಸೇರಿದೆ. ಒಟ್ಟು ೭೨೦ ಆಗುತ್ತದೆ. ಇದು ವೃತ್ತದ ಪೂರ್ಣ ಪರಿಕಲ್ಪನೆ.
೩೬೦ ಅಲ್ಲ, ೭೨೦ ಆದರೆ ವೃತ್ತಕ್ಕೆ ಸರಿಯಾದ ಅರ್ಥ ಬರುತ್ತದೆ. ಅದಕ್ಕೆ ಉನ್ನತ ಆಯಾಮ ಗಣಿತ ತಿಳಿದಿರಬೇಕು.
ಇದರ ಪೂರ್ವದಲ್ಲಿ ಅರ್ಗಲಾ, ಕೀಲಕಗಳ ಪಾಠವಿದೆ. ಉದಾ:- ಮನೆಗೆ ಗೋಡೆಗಳೇ ಕವಚ, ಬಾಗಿಲೇ ಅರ್ಗಲಾ, ಬೀಗವೇ ಕೀಲಕ. ಈ ಕೀಲಕ ಶಬ್ದದಿಂದಲೇ ಆಂಗ್ಲದಲ್ಲಿ key-lock ಆಗಿದೆ.
ಮನುಷ್ಯನಿಗೆ ಶರೀರವೇ ಕವಚ. ಇದನ್ನು ಪಂಜರ ಎಂದೂ ಕರೆಯುತ್ತಾರೆ. ದೇಹದಲ್ಲಿ ನವರಂಧ್ರಗಳೆಂಬ ದ್ವಾರಗಳಿವೆ. ಹತ್ತನೇಯ ದ್ವಾರವೇ ಬ್ರಹ್ಮರಂಧ್ರ.
ಸಪ್ತಶತಿಯ ೩ ಚರೆತ್ರೆಗಳು ದೇಹದ ೩ ಗ್ರಂಥಿಗಳನ್ನು ಭೇದಿಸುತ್ತದೆ -
೧. ಮಣಿಪೂರದವರೆಗೆ (ಸೂರ್ಯ ದ್ವಾರ, ವಿರಜಾ) ಬ್ರಹ್ಮಗ್ರಂಥಿ,
೨. ಅನಾಹತದಿಂದ ವಿಶುದ್ಧಿಯವರೆಗೆ ವ್ಯಾಪ್ತ ವಿಷ್ಣು ಗ್ರಂಥಿ,
೩. ಆಜ್ಞಾದಿಂದ ಸಹಸ್ರಾರದರ ಬ್ರಹ್ಮರಂಧ್ರದವರೆಗೆ ವ್ಯಾಪ್ತ ರುದ್ರಗ್ರಂಥಿ.
ಈ ಗ್ರಂಥಿಗಳನ್ನು ಭೇದಿಸುವ ಉಲ್ಲೇಖವು ಮುಂಡಕೋಪನಿಷತ್ತಿನಲ್ಲಿ ೩ ಮುಂಡಕಗಳಲ್ಲಿದೆ. ಇದನ್ನು ಯಾವುದೇ ಜಿಜ್ಞಾಸುವು ಹುಡುಕಿ ನೋಡಬಹುದು.
ಗ್ರಂಥಿ ಭೇದವೇ ಕೀಲಕ!! ಈ ಸಂದರ್ಭದಲ್ಲಿ ಕವಚ, ಅರ್ಗಲಾ, ಕೀಲಕದ ವರ್ಣನೆ ಹಾಗೂ ದುರ್ಗಾ ನಾಮಾವಳಿಗಳ ಮೇಲೆ ಚಿಂತನೆ ಮಾಡಿರಿ.
ಬೀಗಗಳು ೩ ಇವೆ. ಎಲ್ಲವಕ್ಕೂ ಕುಂಜಿ ಅಥವಾ ಕೀಲಿಕೈ ಮಾತ್ರ ಒಂದೇ. ಅದನ್ನೇ ಕುಂಜಿಕಾ ಸ್ತೋತ್ರ ಎಂದದ್ದು

*ರೇಖೀ" - ವೇದ*

 *ರೇಖೀ" - ವೇದ*
ಅದು ಅಥರ್ವಣ ವೇದದಲ್ಲಿರತಕ ವಿದ್ಯೆ
೧. ಸಂಜ್ಞಾಪನಾ,
೨. ಸಂವೇದನಾ,
೩. ಸಂಮೋಹನ,
೪. ಶೋಷಣ,
೫. ಕ್ರಿಯಾಕರ್ಮ,
೬. ಉದ್ದೀಪನ
ಎಂಬ ಆರು ಬಗೆಯ ಶಕ್ತಿಪಾತವೆಂಬ ಒಂದು ಪ್ರಕ್ರಿಯೆ.
 *ದೇಹೋ ದೇವಾಲಯ ಪ್ರೋಕ್ತಾ, ದೇಹಕ್ಕೂ ದೇವಾಲಯಕ್ಕೂ ಸಂಬಂಧ?*
ಮನುಷ್ಯ ದೇಹವು ಕೆಲವು ನಿರ್ದಿಷ್ಟ ಒಳಾಂಗ ರಚನೆಯಿಂದ ಕೂಡಿರುತ್ತದೆ. ಅದರಂತೆ ದೇವಾಲಯ ರಚನೆಯನ್ನು ಕೂಡಾ ಮಾನವ ದೇಹ ರಚನೆಯೊಂದಿಗೆ ಹೋಲಿಸಬಹುದು.
*ತಂತ್ರಶಾಸ್ತ್ರ ರೀತ್ಯಾ*
1.ಗರ್ಭಗೃಹವು ಶಿರೋ ಭಾಗವಾದರೆ,
2.ಸುಖನಾಸಿಯು ಹೃದಯ ಭಾಗವು,
3.ಪ್ರಸಾದ ಮಂಟಪವು ಉದರ ಭಾಗವು,
4.ಪ್ರಾಕಾರವು ಊರು ಭಾಗವು,
5.ಧ್ವಜಸ್ತಂಭ ಅಥವಾ ಪಾದಪೀಠವು ಪಾದ ಭಾಗವೂ ಆಗಿರುತ್ತದೆ.
ಅದರಂತೆ ಶಿರೋ ಭಾಗವಾದ ಗರ್ಭಗೃಹದಲ್ಲಿ ಜ್ಞಾನವು ಮತ್ತು ಹೃದಯಕ್ಕೆ ಸಮೀಪ ಪ್ರಾಪ್ತನಾದ ಭಕ್ತನಿಗೆ ದೇವರಲ್ಲಿರುವ ಜ್ಞಾನವು ಪ್ರಾಪ್ತವಾಗಲು ಸಾಧ್ಯ. ತೀರ್ಥ, ಪ್ರಸಾದಾಕಾಂಕ್ಷಿಗಳಾದ ಭಕ್ತರಿಗೆ ಭೋಗ ಭಾಗ್ಯಗಳು ಲಭಿಸುತ್ತದೆ. ಪಾದಾಕಾಂತನಾದ ಭಕ್ತನನ್ನು ಭಗವಂತನು ಎತ್ತಿ ಕೈಹಿಡಿದು ನಡೆಸುತ್ತಾನೆ ಎಂದರ್ಥ.

ಪೂಜೆಯಲ್ಲಿ ಶಂಖದ ಅವಶ್ಯಕತೆಯೇನು

 *ಪೂಜೆಯಲ್ಲಿ ಶಂಖದ ಅವಶ್ಯಕತೆಯೇನು? ಪೂಜೆಗೆ ಏಕೆ ಬಳಸುತ್ತಾರೆ?*
ಶಂಖವು ನಮ್ಮ ಆಧ್ಯಾತ್ಮಿಕ ಸಾಮ್ರಾಜ್ಯದಲ್ಲಿ ವಿಶೇಷವಾದ ಸ್ಥಾನವನ್ನು ಪಡೆದಿದೆ. ಪ್ರಕೃತಿದತ್ತವಾಗಿ ಸಿಗುವ ಸಮುದ್ರದ ಒಂದು ಜೀವಿಯ ರಕ್ಷಾಕವಚವೇ ಈ ಶಂಖ. ಈ ಶಂಖದಲ್ಲಿ ಒಂದು ವಿಶೇಷತೆಯಿದೆ. ಪ್ರಕೃತಿಯ ಮೂಲ ಶಕ್ತಿಯಾದ ನಾದ ಅಥವಾ ಓಂಕಾರ ಈ ಶಂಖದಿಂದ ಅನಾಯಾಸವಾಗಿ ಹೊರಡಿಸಲು ಸಾಧ್ಯವಿದೆ. ಹಾಗಾಗಿ ಆಧ್ಯಾತ್ಮ ಜಗತ್ತಿನಲ್ಲಿ ಓಂಕಾರವೇ ಸರ್ವಸ್ವ ಎಂದು ತಿಳಿದ ದಾರ್ಶನಿಕರು ಈ ಚೈತನ್ಯದ ಮೂಲವಾದ ಈ ಪಳೆಯುಳಿಕೆಯನ್ನು ವಿಶೇಷವಾದ ಸ್ಥಾನ ಮಾನ ಕೊಟ್ಟು ಪೂಜಾದಿಗಳಲ್ಲಿ ಬಳಸುವ ಚಾಲ್ತಿ ತಂದರು. ಅಭಿಷೇಕಕ್ಕೆ ಶಂಖ ಮಾತ್ರವಲ್ಲದೆ ಶೃಂಗ, ಧಾರಾಪಾತ್ರೆ, ಕೊಂಬಿನ ಗಿಂಡಿ, ಗೋಮುಖ ಪಾತ್ರೆ ಇತ್ಯಾದಿ ಅಭಿಷೇಕ ಸೌಲಭ್ಯ ದೃಷ್ಟಿಯಿಂದ ಬಳಸುವುದು ರೂಢಿಯಲ್ಲಿದೆ. ಅದರಲ್ಲಿ ಶಂಖ ಉತ್ತಮ. ಏಕೆಂದರೆ ಸಮುದ್ರಜೀವಿಯ ಮೂಲದ ಈ ಚಿಪ್ಪು ಕ್ಯಾಲ್ಸಿಯಂನಿಂದ ಒಳಗೊಂಡಿರುವುದರಿಂದ ಅಭಿಷೇಕದ ನೀರನ್ನು ಶುದ್ಧಿಮಾಡುವುದರೊಂದಿಗೆ ತೀರ್ಥವನ್ನು ಉತ್ತಮ ಔಷಧಿಯಾಗಿ ಪರಿವರ್ತಿಸಬಲ್ಲದು. ಅದಕ್ಕಾಗಿ ಶಂಖವು ಅಭಿಷೇಕಕ್ಕೆ ವಿಶೇಷತೆಯನ್ನು ಪಡೆಯಿತು.

ಜೀವನ “ಬಹಳ ಬೇಜಾರು” ಅನ್ನುವವರು.......

 ಜೀವನ “ಬಹಳ ಬೇಜಾರು” ಅನ್ನುವವರು ಬುದ್ಧನ ಈ 19 ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು .
1. ಒಳ್ಳೆಯವರಾಗಿರಿ ಆದರೆ ಅದನ್ನು ಸಾಬೀತುಪಡಿಸವಲ್ಲಿಯೇ ನಿಮ್ಮ ಜೀವನವನ್ನು ಮತ್ತು ಸಮಯವನ್ನು ವ್ಯರ್ಥ ಮಾಡಬೇಡಿ.
2. ನೀವೇ ನಿಮ್ಮ ಜೀವನದ ಚಾಲಕರು ಆ ಚಾಲನೆಯ ಅಧಿಕಾರವನ್ನು ಮತ್ತು ಆ ಸ್ಥಳವನ್ನು ಬೇರೆಯವರು ಕದಿಯಲು ಅವಕಾಶ ಮಾಡಿಕೊಡಬೇಡಿ.
3. ಯಾವತ್ತೂ ಬೇರೆಯವರಲ್ಲಿ ಕ್ಷಮೆ ಕೇಳಬೇಡಿ. ಯಾಕೆಂದರೆ ಅವರು ನಿಮ್ಮ ಮಾತನ್ನು ತಪ್ಪು ಅರ್ಥ ಮಾಡಿಕೊಂಡರೆ ನೀವ್ಯಾಕೆ ಕ್ಷಮೆ ಕೇಳಬೇಕು.
4. ನಾವು ಒಂಟಿಯಾಗಿ ಇದ್ದರೆ ಅದರ ಅರ್ಥ ನಾವು ಒಂಟಿಯಾಗಿದ್ದೇವೆ ಎಂದು ಅಲ್ಲ. ಅದರ ಅರ್ಥ ನಾವು ಒಬ್ಬರೇ ಎಲ್ಲಾ ವಿಷಯಗಳನ್ನು ಎದುರಿಸುವ ಸಾಮರ್ಥ್ಯ ನಮಗಿದೆ ಎಂದು.
5. ಎಲ್ಲೇ ಆಗಲಿ ನೀವು ಒಂದೇ ತರದ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಒಂದೇ ತರನಾದ ವ್ಯಕ್ತಿಯಾಗಿರಿ. ಅದು ನಿಮ್ಮ ಸ್ವಂತ ವಿಷಯದಲ್ಲಾಗಲಿ, ಸಾರ್ವಜನಿಕವಾಗಿಯಾಗಲಿ ಅಥವಾ ಖಾಸಗಿಯಾಗಲಿ. 6. ಹಣ ಮನುಷ್ಯರ ಜೀವನದ ಒಂದು ಅತೀ ಕೆಟ್ಟ ಸಂಶೋಧನೆ. ಆದರೆ ಅದು ನಂಬಿಕೆಗೆ ಮನುಷ್ಯನು ಅರ್ಹನೋ ಆಲ್ಲವೋ ಎಂಬುದನ್ನು ಮತ್ತು ಮನುಷ್ಯನ ಸ್ವಭಾವವನ್ನು ಪರೀಕ್ಷೆ ಮಾಡುತ್ತದೆ.
7. ಈ ಜಗತ್ತಿನ ತುಂಬೆಲ್ಲಾ ಅಧಿಕವಾಗಿ ರಾಕ್ಷಸರೇ ಇರುವುದು. ಆದರೆ ಸ್ನೇಹಿತರಂತೆ ಮುಖವಾಡವನ್ನು ಹಾಕಿಕೊಂಡಿದ್ದಾರೆ ಅಷ್ಟೇ. 8. ನಿಮ್ಮ ಮಕ್ಕಳನ್ನು ಶ್ರೀಮಂತರನ್ನಾಗಿ ಮಾಡಿಸಲು ಶಿಕ್ಷಣ ಕೊಡಿಸಬೇಡಿ. ಅದರ ಬದಲು ಜೀವನದಲ್ಲಿ ಹೇಗೆ ಖುಷಿಯಾಗಿರುವುದು ಎಂದು ಹೇಳಿಕೊಡಿ. ಆಗ ಅವರು ಬೆಳೆದು ದೊಡ್ಡವರಾದಾಗ ವಸ್ತುಗಳ ಮಹತ್ವ ತಿಳಿಯುತ್ತಾರೆ ಬರೀ ಅದರ ಬೆಲೆಯನಲ್ಲ.
9. ನೀವು ಎಷ್ಟು ಕಡಿಮೆ ಕೆಟ್ಟ ವ್ಯಕ್ತಿಗಳಿಗೆ ಸ್ಪಂದಿಸದೇ ಇರುತ್ತೀರೋ, ಜೀವನದಲ್ಲಿ ಅಷ್ಟು ನೆಮ್ಮದಿಯಿಂದ ಇರುತ್ತೀರಿ. 10. ಬಲಹೀನ ವ್ಯಕ್ತಿಗಳು ಪ್ರತೀಕಾರವನ್ನು ತೆಗೆದುಕೊಳ್ಳುತ್ತಾರೆ. ಬಲವಾದ ವ್ಯಕ್ತಿಗಳು ಕ್ಷಮಿಸಿಬಿಡುತ್ತಾರೆ, ಬುದ್ದಿವಂತ ವ್ಯಕ್ತಿಗಳು ನಿರ್ಲಕ್ಷಿಸುತ್ತಾರೆ.
11. ನೀವು ಸಂತೋಷದಿಂದ ಇರಬೇಕಾದರೆ, ಹಿಂದೆ ನಿಮ್ಮ ಜೀವನದಲ್ಲಿ ಆದ ಘಟನೆಗಳನ್ನು ನೆನೆಸಿಕೊಂಡು ಕೊರಗಬೇಡಿ. ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳಬೇಡಿ. ಈಗಿರುವ ಜೀವನದ ಬಗ್ಗೆ ಸಂಪೂರ್ಣವಾಗಿ ಹೇಗಿರಬೇಕೆಂದು ಯೋಚಿಸಿ.
12. ನೀವು ನಿಮ್ಮ ಜೀವನದಲ್ಲಿ ಗಳಿಸುವ ಸಂತೋಷಕ್ಕೆ ನೀವೇ ಕಾರಣಕರ್ತರಾಗಬೇಕು. ಬೇರೆಯವರು ನಿಮ್ಮನ್ನು ಸಂತೋಷಪಡಿಸುತ್ತಾರೆ ಎಂದು ಅಂದುಕೊಂಡರೆ, ಅದು ಯಾವಾಗಲೂ ಕೊನೆಗೆ ನಿರಾಸೆಯಿಂದಲೇ ಕೊನೆಗೊಳ್ಳುತ್ತದೆ.
13. ನಾನು ಸತ್ಯವನ್ನು ಹೇಳುವವರನ್ನು ಗೌರವಿಸುತ್ತೇನೆ. ಸತ್ಯವು ಎಷ್ಟೇ ಕಠಿಣವಾಗಿದ್ದರೂ ಸರಿಯೇ.
14. ನೀವು ಜೀವನದಲ್ಲಿ ಗಿಣಿಯ ತರ ಇರಬೇಡಿ ಬದಲಿಗೆ ಹದ್ದುಗಳಾಗಿ ಇರಿ. ಗಿಣಿಯು ಅಧಿಕವಾಗಿ ಮಾತನಾಡುತ್ತದೆ. ಆದರೆ ಹದ್ದು ಶಾಂತವಾಗಿ ಇದ್ದು, ಅದಕ್ಕೆ ಆಕಾಶವನ್ನು ಮುಟ್ಟುವಂತಹ ಯೋಚನಾ ಶಕ್ತಿ ಇದೆ.
15. ಜೀವನದಲ್ಲಿ ಬದಲಾವಣೆಯನ್ನು ಕಾಲಕ್ಕೆ ತಕ್ಕಂತೆ ಮಾಡಿಕೊಳ್ಳಿ, ಹೆದರಿಕೊಳ್ಳಬೇಡಿ, ನೀವು ಯಾವುದೋ ಒಂದು ಒಳ್ಳೆಯದನ್ನು ಕಳೆದುಕೊಳ್ಳುತ್ತೀರ, ಆದರೆ ಏನೋ ಒಂದು ಉತ್ತಮವಾದುದನ್ನು ಪಡೆದುಕೊಳ್ಳುತ್ತೀರ.
16. ನಮ್ಮ ತೊಂದರೆಗಳ ಬಗ್ಗೆ ಮಾತನಾಡುವುದೇ ನಮ್ಮ ಅತೀ ದೊಡ್ಡ ತಪ್ಪು, ಹುಚ್ಚು ಚಟವಾಗಿದ್ದು , ಅಂತಹ ಅಭ್ಯಾಸವನ್ನು ಬಿಟ್ಟುಬಿಡಿ, ನಿಮ್ಮ ಸಂತೋಷ ಮತ್ತು ಖುಷಿಯ ಬಗ್ಗೆ ಮಾತನಾಡಿ.
17. ಯಾರ ಜೊತೆಗೂ ಯಾವತ್ತೂ ಕೂಡ ಅತಿಯಾದ ಬಾಂಧವ್ಯವನ್ನು ಇಟ್ಟುಕೊಳ್ಳಬೇಡಿ, ಯಾಕೆಂದರೆ ಆ ಅತಿಯಾದ ಬಾಂಧವ್ಯ ಅತಿಯಾದ ನಿರೀಕ್ಷೆಗಳನ್ನು ತಂದೊಡ್ಡಿ ಆ ನೀರಿಕ್ಷೆಗಳು ಸುಳ್ಳಾದಾಗ ನೋವಿನಿಂದ ಬಳಲುವಂತೆ ಮಾಡುತ್ತದೆ.
18. ಅಸಂಬದ್ಧತೆಗಿಂತ ಶಾಂತಿಯೇ ಮೇಲು.
19. ಅತಿಯಾದ ಯೋಚನೆಯೇ ನಮ್ಮ ಜೀವನದ ಸಂತೋಷವನ್ನು ಹಾಳುಮಾಡಿ ದುಃಖಪಡಲು ಅತೀ ದೊಡ್ಡ ಕಾರಣವಾಗುತ್ತದೆ.

ಮಂಗಳಾರತಿ

 ದೇವರಿಗೆ ಮಾಡಿದ ಮಂಗಳಾರತಿಯನ್ನು ತೆಗೆದುಕೊಳ್ಳುವಾಗ ಎರಡೂ ಕೈಗಳಿಂದ ತೆಗೆದುಕೊಳ್ಳಬಾರದು  ಒಂದೇ ಕೈಯಿಂದ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ .ಏಕೆ? ಇದಕ್ಕೆ ಯಾವುದಾದರೂ ಪ್ರಮಾಣ ಉಂಟಾ?
ಉತ್ತರ ||
ನೀರಾಜನ ಕಾಲದಲ್ಲಿ ದೇವರ ಮುಖದರ್ಶನ ಕೋಟಿ ಬ್ರಹ್ಮ ಹತ್ಯೆಗಳನ್ನು ಕೋಟಿ ಅಗಮ್ಯಾಗಮನ ದೋಷಗಳನ್ನು ನಾಶಮಾಡುತ್ತದೆ.
ಆರ್ತಿಕ್ಯಗ್ರಹಣೇ ಕಾಲೇ ಏಕಹಸ್ತೇನ ಯೋಜಯೇತ್ |
ಯದಿ ಹಸ್ತ ದ್ವಯೇನೈವ ಮಮ ದ್ರೋಹೀ ನ ಸಂಶಯ: ||
ಮಂಗಳಾರತಿಯನ್ನು ಎರಡು ಕೈಗಳಿಂದ ಸ್ವೀಕಾರ ಮಾಡಬಾರದು. ಆರತಿಯನ್ನು ಬಲ ಕೈಯಿಂದ ಮಾತ್ರ ತೆಗೆದು ಕೊಳ್ಳಬೇಕು. ಈ ವಿಷಯವನ್ನು ವರಾಹದೇವರು ತನ್ನ ಪತ್ನಿಗೆ ತಿಳಿಸುತ್ತಾನೆ.
ಆರತಿಯನ್ನು ಮೊದಲು ತಲೆಗೆ ತೆಗೆದುಕೊಂಡು,  ಆಮೇಲೆ ಹೃದಯ, ಆಮೇಲೆ ನಾಭಿಯ ಎಡಭಾಗದಲ್ಲಿ ತೆಗೆದುಕೊಳ್ಳಬೇಕು.
ಶಿರದಲ್ಲಿ ಇರುವ ಅಮೃತವನ್ನು  ಹೃದಯಕ್ಕೆ ತಂದು, ಹೃದಯದಲ್ಲಿ ಇರುವ ಅಗ್ನಿಯನ್ನು ನಾಭಿಯ  ಎಡಭಾಗದಲ್ಲಿ ಇರುವ ಪಾಪಪುರುಷನಲ್ಲಿ  ಸುಡಬೇಕು.
ಅಲ್ಲಿಗೆ ನಮ್ಮ ದೇಹ ಶುದ್ಧ.
ಈ ಅನುಸಂಧಾನ ಮುಖ್ಯ.

ಮೂರ್ಖರದಿನ*

 *ಇಂದು ಮೂರ್ಖರ ದಿನಾಚರಣೆ*
ಏನಿದೆಯೋ ಅದನ್ನು ಬಿಟ್ಟು ಇನ್ನೇನೋ ತಿಳಿದುಕೊಳ್ಳುವವ ಮೂರ್ಖ.
ಮೂರ್ಖರು ಯಾರು... ???
ಯಾರಿದ್ದಾರೆಯೋ ಇಲ್ಲೋ ತಿಳಿಯದು, ನಾನಂತೂ ಮೂರ್ಖನೆ.
ನಾನು ಯಾಕೆ ಮೂರ್ಖ.... ??
೧) ಎಲ್ಲವೂ ನಾನು ಎಂದು ಹೆಳಿಕೊಳ್ಳುತ್ತೇನೆ, ೨) ಏನೆಲ್ಲ ಮಾಡಿದ್ದೇನೆ ಅದೆಲ್ಲವೂ ನಾನೆ ಮಾಡಿದ್ದೇನೆ ಎಂದೇ ಬೊಗುಳುತ್ತೇನೆ ಆದ್ದರಿಂದಲೇ ನಾನು ಮೂರ್ಖ.
ನಾನು ಮೂರ್ಖನಲ್ಲ ಎಂದೇ ಗುರುತಿಸಬೇಕಾದರೆ ಏನು ಮಾಡುವದು.... ????
ನಾನು ಎನ್ನುವದನ್ನು ಕಳೆದುಕೊಂಡಾಗ ಅಥವಾ ಬಿಟ್ಟಾಗ ನಾನು ಬುದ್ಧಿವಂತನು ಎಂದಾಗುವೆ. ಅಂತೆಯೇ "ನಾನು ಹೋದರೆ ಹೋದೇನು" ಎಂದು ಉದ್ಗಾರ ತೆಗೆದರು ಕನಕದಾಸರು.
ನಾನೇಕೇ ಮೂರ್ಖ......
ನಾನು ನಾನೇ ಆಗಿದ್ದೇನೆಯೇ ಹೊರತು ನಾನು ಮತ್ತೇನೂ ಆಗಿಲ್ಲ. ಏನೂ ಆಗದ ನಾನು ಎಲ್ಲವೂ ನಾನೇ ಎಂದು ಹೇಳಿಕೊಂಡರೆ ಮೂರ್ಖನೇ ತಾನೆ.....
ನಾನು ಏನು ಮಾಡಿದ್ದೇನೆ ಎಲ್ಲವೂ ಎನ್ನಲಿ ನಿಂತ ದೇವರೇ ಮಾಡಿಸಿದ್ದಾನೆ. ಎಲ್ಲವನ್ನೂ ಮಾಡಿಸಿರುವದು ದೇವರು. ನಾನು ತಿಳಿದು ಕೊಂಡಿದ್ದು "ನಾನು ಮಾಡಿದೆ" ಎಂದು ಇದುವೇ ತಾನೇ ಮೂರ್ಖತನ....
ನನ್ನ ಸುಖ ಎನ್ನಲ್ಲಿ ಅಡಗಿದೆ.
ಆ ಸುಖವನ್ನು ಎನ್ನಲ್ಲಿ  ಹುಡುಕಿಕೊಳ್ಳದೇ ಹೊರಗಿನ ಬೇರೆಯದೇ ವಸ್ತುಗಳಿಂದ ಸಿಗುತ್ತದೆ ಎಂದೇ ಕೊರಗುತ್ತೆನೆ ಎದುವೇ ತಾನೇ ಮೂರ್ಖರ ಲಕ್ಷಣ.....
ಸುಖದ ಹಾಗೆಯೇ "ಜ್ಙಾನ, ಬಲ, ಶಕ್ತಿ, ಆರೋಗ್ಯ, ಆಯುಷ್ಯ, ಸೌಭಾಗ್ಯ, ಶಾಂತಿ, ಸಮೃದ್ಧಿ, ತೃಪ್ತಿ, ಐಶ್ವರ್ಯ ಹೀಗೆ ಪ್ರತಿಯೊಂದೂ ಎನ್ನಲ್ಕೇ ಇವೆ. ಆದರೆ ನಾ ಅಪೆಕ್ಷೆಪಡುವದು ಮಾತ್ರ ಹೊರಗಿಂದ. *ಇರುವದು ಒಳಗೆ, ಅಪೇಕ್ಷಿಸಿ ಪಡೆದದ್ದು ಹೊರಗಿನಿಂದ. ಸಿಕ್ಕೀತು ಆದರೂ ಹೇಗೆ...??* ಇದುವೇ ಅಲ್ಲವೇ ಮೂರ್ಖತನ...
ನಮ್ಮ ಮೂರ್ಖತನವನ್ನು ಹೋಗಲಾಡಿಸಲೇ " ವೇದವ್ಯಾಸದೇವರು, ಶ್ರೀಮದಾಚಾರ್ಯರು, ಟೀಕಾಕೃತ್ಪಾದರು, ರಘೂತ್ತಮರು, ರಾಯರು, ಯಾದವಾರ್ಯರು ಇವರೇ ಮೊದಲಾದ ಜ್ಙಾನಿಗಳು ಭುವಿಗಿಳಿದು ಶಾಸ್ತ್ರರಚಿಸಿ ಅನುಗ್ರಹಿಸಿದ್ದಾರೆ, ಅದನ್ನು ಅನಾಯಾಸೇನೆ ತ್ಯಜಿಸಿದ ನಾನೇ ಮೂರ್ಖನಲ್ಲವೇ...
ನನಗೆ ನನ್ನದೂ ಆದ ಸುಖ ಸಮೃದ್ಧಿ ವೈಭವ ಸಿಗಲು ಬೇಕು ಧರ್ಮ. ಆ ಧರ್ಮವನ್ನು *ಧರ್ಮವೆಂಬ ಒಂದು ಪದಾರ್ಥವೂ ಇಲ್ಲವೇನೋ* ಎನ್ನುವಷ್ಟು ಕಡೆಗಾಣಿಸಿದ ನಾನೇ ಮೂರ್ಖನಲ್ಲವೇ....
ಈಗ ಒಂದು ಲೇಖನೆ ಓದಿದೆ‌ *ನಮ್ಮಲ್ಲಿ ಮೂರ್ಖರು ಯಾರಿಲ್ಲ* ಎಂದು. ಕ್ಷಣ ಖುಶಿ ಆಯ್ತು. ಆ ಸುಖ ಕ್ಷಣವೇ ಅನಿಸುತು. ಮೂರ್ಖರು  ಯಾರಿಲ್ಲದಿರಬಹುದು *ನಾನು* ಅಂತೂ ಮಹಾ ಮೂರ್ಖನೇ ಎಂದು. ಹೀಗೆ ತಿಳಿದಾಗ ಸಮಾಧಾನ ಅನಿಸಿತು......
*ಭಕ್ತರ ಸಂಗಕೊಟ್ಟು ಮೂರ್ಖತನ ಕಳೆದು ರಕ್ಷಿಸು ಸಂರಕ್ಷಿಸು ಎಂದು ಅನೇಕ ಪ್ರಣಾಮಗಳನ್ನು ಸಲ್ಲಿಸುತ್ತಾ ಮೂರ್ಖರೆಲ್ಲರೂ ಸೇರಿ ಮೂರ್ಖರದಿನಾಚರಣೆಯನ್ನು ಮಾಡೋಣ.... 
*
*ಇಂದುಮೂರ್ಖರದಿನ*  *ಪುರಂದರ ದಾಸರ ಕೀತ೯ನೆ ಒಂದು ಚಿಂತನೆ*-
ಇಂದು ಮೂರ್ಖರದಿನವಾಗಿದ್ದು *ಪುರಂದರದಾಸರು ತಮ್ಮ ಕೀತ೯ನೆಯೊಂದರಲ್ಲಿ ಮೂರ್ಖರೆಂದರೆ ಯಾರು ಎಂಬುದನ್ನು ತಿಳಿಸಿದ್ದಾರೆ.
*ದೃಢ ಭಕ್ತಿ ಇಲ್ಲದವ ಮೂರ್ಖ*
*ಸರ್ಪನಲಿ ಸರಸವಾಡುವವ ಮೂರ್ಖ*
*ರಾಮನಾಮವ ಭಜಿಸಿ* *ನೆನೆಯದವ ಮೂರ್ಖ*
*ಭೂಸುರರಿಗನ್ನವನು ಕೊಡದವ ಮೂರ್ಖ*
*ಶೇಷಗಿರಿ ಕೃಷ್ಣನ್ನ ಭಜಿಸದಿದ್ದವ ಮೂರ್ಖ*
*ದಾಸನಾಗದವ ಕಡುಮೂರ್ಖ*
*ಉಂಡಮನೆಗೆರಡನ್ನು ಬಗೆಯುವವ ಮೂರ್ಖ*
*ಕೊಂಡೆ ಮಾತನು ಕೇಳಿ ಕುಣಿವವನು ಮೂರ್ಖ*,
*ಪುಂಡರೀಕಾಕ್ಷ ಶ್ರೀ ಪುರಂದರ ವಿಠಲನ ಕೊಂಡಾಡಿ ಭಜಿಸದವ ಕಡು ಮೂರ್ಖ!!*
*ಮೂರ್ಖರಾದರು ಜನರು ಜಗದೊಳಗೆ*

ಇನ್ನೆಲ್ಲಿ ಬೆಂಕಿ ಹತ್ತಿಸ್ತಾರೋ ನೋಡ್ಬೇಕು!!

 ಹಿಂದೊಮ್ಮೆ ಜಿಗ್ನೇಶ್ ಮೇವಾನಿ, ಸಿದ್ದರಾಮಯ್ಯನವರ ಆಣತಿಯ ಮೇರೆಗೆ ಉಡುಪಿ ಮಠಕ್ಕೆ ಮುತ್ತಿಗೆ ಹಾಕುವ ಬೆದರಿಕೆ ಹಾಕಿದ್ದು ನೆನಪಿದೆಯಾ? ಅವತ್ತು ಯುವಾಬ್ರಿಗೇಡ್ ಕನಕ ನಡೆಯಿಂದ ಅವರಿಗೆ ಪ್ರತ್ಯುತ್ತರ ಕೊಟ್ಟಿತ್ತು. ನಾವು ಬರಿ ಕಾರ್ಯಕ್ರಮ ಮಾಡಿ ಸುಮ್ಮನಾಗಿರಲಿಲ್ಲ. ದಲಿತ ಹೆಣ್ಣುಮಕ್ಕಳನ್ನು ಸ್ವಾವಲಂಬಿಯಾಗಿಸುವಲ್ಲಿ ಶ್ರಮವಹಿಸುತ್ತಿದ್ದೇವೆಂದು ಪೇಜಾವರ ಶ್ರೀಗಳ ಎದುರಲ್ಲಿಯೇ ಮಾತು ಕೊಟ್ಟಿದ್ದೆವು. ಅದಕ್ಕೆ ಸಹಕಾರ ನೀಡುವುದಾಗಿ ಅವರೂ ವೇದಿಕೆಯ ಮೇಲೆಯೇ ಭರವಸೆ ಕೊಟ್ಟಿದ್ದರು.
ನಾವು ನುಡಿದಂತೆಯೇ ನಡೆದಿದ್ದೇವೆ. ಕನಕ ನಡೆಯಾಗಿ ಮೂರ್ನಾಲ್ಕು ತಿಂಗಳಲ್ಲಿಯೇ ಬೆಳಗಾವಿಯ ಕಲ್ಲೋಳಿಯಲ್ಲಿ ನಿವೇದಿತಾ ಸೇವಾ ಕೇಂದ್ರ ಶುರು ಮಾಡಿ ಸ್ಥಳೀಯ ಹೆಣ್ಣುಮಕ್ಕಳಿಗೆ ಹೊಲಿಗೆ ತರಬೇತಿ ಕೊಡಿಸಿ ಅವರಿಂದ ಕೈಚೀಲ ಮಾಡಿಸಿ ಮಾರುಕಟ್ಟೆಗೆ ತಲುಪಿಸಲಾರಂಭಿಸಿದೆವು. ಬೆಂಗಳೂರಿನ ಭಾರತಿ ಅಕ್ಕ ಈ ದಿಸೆಯಲ್ಲಿ ಮಾಡಿದ ಸಹಕಾರ ಅಷ್ಟಿಷ್ಟಲ್ಲ. ಸ್ವಾವಲಂಬಿಯಾದ ಈ ಹೆಣ್ಣುಮಕ್ಕಳು ಸ್ವಾಭಿಮಾನಿಗಳಾಗಿ ಅನೇಕ ಜಾತ್ರೆ, ವಸ್ತು ಪ್ರದರ್ಶನಗಳಲ್ಲಿ ತಮ್ಮ Stall ತೆರೆದು ಸೇವಾ ಕೇಂದ್ರದ ಪರಿಚಯ ಮಾಡಿಕೊಡಲಾರಂಭಿಸಿದರು.
ಇತ್ತೀಚೆಗೆ ಈ ಕೇಂದ್ರದ ಮೂಲಕ ಕುರ್ತಾ, ಶರ್ಟುಗಳನ್ನು ಹೊಲಿದು ಹೊಸ brand ರೂಪಿಸಬೇಕೆಂದು ನಿರ್ಧರಿಸಿದಾಗ ಅದಕ್ಕೆ ಬೇಕಾದ ಯಂತ್ರಗಳನ್ನು ಕೊಳ್ಳಲು ಹಣ ನೀಡಿದವರು ಪೇಜಾವರ ಶ್ರೀಗಳು. ಅವರು ಅಕ್ಷರಶಃ ದೇವರು. ವೇದಿಕೆಯ ಮೇಲೆ‌ ನೀಡಿದ್ದ ವಾಗ್ದಾನವನ್ನು ಪರ್ಯಾಯದ ಗಡಿಬಿಡಿಯಲ್ಲೂ ನೆನಪಿಸಿಕೊಂಡು ಕರೆ ಮಾಡಿ‌ ತನ್ನಿಂದ ಸಹಾಯ ಸ್ವೀಕರಿಸಿರೆಂದಿದ್ದರು. ಕೊಡುತ್ತೇನೆಂದದ್ದು ಅವರ ಕಚೇರಿಯಿಂದ ಸೂಕ್ತ ಸಮಯದಲ್ಲಿ ಬರದೆ ಹೋದಾಗ ಇತ್ತ ನಾವೂ ಚಡಪಡಿಸುತ್ತಿದ್ದೆವು. ಆ ವೇಳೆಗೆ ಶ್ರೀಗಳಿಗೆ ಅಪಘಾತವಾಗಿ ಹಾಸಿಗೆ ಹಿಡಿದಿದ್ದರು. ಅವರನ್ನು ಆ‌ ಹೊತ್ತಲ್ಲಿ ಕೇಳುವುದಾಗದೆಂದು ನಾವು ‌ಸುಮ್ಮನಾಗಿಬಿಟ್ಟೆವು. ಅಚ್ಚರಿಯೇನು ಗೊತ್ತೇ? ಅಂತಹ ಸಂದರ್ಭದಲ್ಲೂ ಅವರೇ ನೆನಪಿಸಿಕೊಂಡು, ಕರೆ ಮಾಡಿ ಒಂದು ಲಕ್ಷದ 89 ಸಾವಿರ ರೂಪಾಯಿಯ ಚೆಕ್ಕನ್ನು ನಮಗೆ ಕಳಿಸಿಕೊಟ್ಟರು. ನಮ್ಮೆಲ್ಲ ಸಾಹಸವನ್ನೂ ಕೇಳಿ ಯಂತ್ರ ಕೊಡಬೇಕಾದ ಅಂಗಡಿಯವರು ಸಾಕಷ್ಟು ಬೆಲೆ‌ ಕಡಿಮೆ ಮಾಡಿ ನಮ್ಮ ಕೇಂದ್ರಕ್ಕೆ ಇನ್ನೊಂದು ಯಂತ್ರ ಹೆಚ್ಚಿಗೆ ಸಿಗುವಂತೆ ನೋಡಿಕೊಂಡರು.
ಓಹ್! ಇಂದು ಕೇಂದ್ರವನ್ನು ಕಂಡಾಗ ಖುಷಿಯೆನಿಸುತ್ತದೆ. ಉಡುಪಿಯ ವೇದಿಕೆಯ ಮೇಲೆ ಬಾಯ್ಬಡಕೊಂಡವರೆಲ್ಲ ಸರ್ಕಾರದ‌ ಸವಲತ್ತುಗಳಿಗೆ ನಾಲಿಗೆ ಚಾಚಿ‌ ಹಾಯಾಗಿದ್ದಾರೆ. ಆದರೆ ಯುವಾಬ್ರಿಗೇಡ್ ಅಂದು ಮಾಡಿದ ಸಂಕಲ್ಪದಿಂದಾಗಿ ಒಂದಷ್ಟು ದಲಿತ ಹೆಣ್ಣುಮಕ್ಕಳು ನೆಮ್ಮದಿಯ ಬದುಕು ಸವೆಸುತ್ತಿದ್ದಾರೆ.
ಅಂದಹಾಗೆ ಸಿದ್ದರಾಮಯ್ಯನವರು ಮತ್ತೊಮ್ಮೆ‌ ಜಿಗ್ನೇಶ್ ಮೇವಾನಿಯನ್ನು  ರಾಜ್ಯಕ್ಕೆ ಕರೆಸುತ್ತಿದ್ದಾರಂತೆ!!
ಇನ್ನೆಲ್ಲಿ ಬೆಂಕಿ ಹತ್ತಿಸ್ತಾರೋ ನೋಡ್ಬೇಕು!!

ಆಂದೋಲನವೋ ಅಥವ #ಷಡ್ಯಂತ್ರವೋ

 #ಬಂದಿದ್ದು_ಸುಪ್ರೀಂ_ಕೋರ್ಟಿನ_ಆದೇಶ ಆದರೆ ತಿರಿಗಿಬಿದ್ದಿದ್ದು ಮಾತ್ರ ಪ್ರಧಾನಿ #ಮೋದಿಯ ವಿರುದ್ಧ!! #ಆಂದೋಲನವೋ ಅಥವ #ಷಡ್ಯಂತ್ರವೋ?
ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ
ಕೆಲ ತಿಂಗಳ ಹಿಂದೆ ಸಂಸತ್ತಿನಲ್ಲಿ ಮಾತನಾಡುತ್ತ ಕಾಂಗ್ರೆಸ್ಸಿನ‌ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ರವರು ಒಂದು ಮಾತನ್ನ ಹೇಳಿದ್ದರು “ಸಂವಿಧಾನದ ತಂಟೆಗೆ ಬಂದರೆ ದೇಶದಲ್ಲಿ ರಕ್ತಪಾತ ನಡೆದುಹೋಗುತ್ತೆ ಹುಷಾರ್..!!” ಎಂದಿದ್ದರು.
ಅದನ್ನ ಈಗ ದುಷ್ಟ ಶಕ್ತಿಗಳು ನಿಜ ಮಾಡಿ ತೋರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೇನೋ ಅನಿಸುತ್ತಿದೆ.
ರಾಜಕಾರಣದಲ್ಲಿ ಪಳಗಿರುವ ನಾಯಕನಾಗಿರುವ ಮಲ್ಲಿಕಾರ್ಜುನ ಖರ್ಗೆ ದೇಶದಲ್ಲಿ ಶಾಂತಿ ನೆಲೆಸುವ ಕುರಿತಾಗಿ ಮಾತನಾಡುವ ಬದಲಾಗಿ ದೇಶದಲ್ಲಿ ರಕ್ತಪಾತವಾಗುವುದರ ಬಗ್ಗೆ ಅದ್ಯಾಕೋ ಬಹಳ ಉತ್ಸುಕತೆಯಿಂದ ಹೇಳಿಕೆ ನೀಡಿ ದೇಶದಲ್ಲಿ ಬೆಂಕಿ ಹೊತ್ತಿಕೊಳ್ಳುವಂತೆ ಪ್ರೋತ್ಸಾಹಿಸಿದ್ದರ ಪರಿಣಾಮವೋ ಅಥವ ಮಹಾರಾಷ್ಟ್ರದಲ್ಲಿ ದಲಿತರ ಮರಾಠರ ನಡುವೆ ಬೆಂಕಿಯಿಟ್ಟು ತಮಾಷೆ ನೋಡಿದ್ದ ಜಿಗ್ನೇಶ್ ಮೇವಾನಿಯಂಥವನ ಕುತಂತ್ರದಿಂದಲೋ ದೇಶ ಮತ್ತೆ ಹೊತ್ತಿ ಧಗ ಧಗ ಉರಿಯುವಂತಾಗಿದೆ.
ಮೊನ್ನೆ ಅಂದರೆ ಏಪ್ರಿಲ್ 2 ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿತ್ತು. ಅದಕ್ಕೆ ಕಾರಣ ಸುಪ್ರೀಂಕೋರ್ಟಿನ ಆದೇಶವಾಗಿತ್ತು. ಅಷ್ಟಕ್ಕೂ ಸಂವಿಧಾನಕ್ಕೆ ನಾವು ಅಪಾರ ಗೌರವ ನೀಡಿತ್ತೇವೆ, ಸಂವಿಧಾನವೇ ನಮಗೆ ಶ್ರೇಷ್ಟ ಗ್ರಂಥ, ಅಂಬೇಡ್ಕರರೇ ನಮಗೆ ದೇವರು ಅಂತ ಹೇಳಿಕೊಳ್ಳುವವರೇ ಭಾರತದ ಕೆಲ ರಾಜ್ಯಗಳನ್ನ ರಣಾಂಗಣವಾಗಿ ಮಾರ್ಪಡಿಸಿಬಿಟ್ಟರು.
ಅಷ್ಟಕ್ಕೂ ದಲಿತರ ಹೆಸರ ಮೇಲೆ ರಾಜಕೀಯ, ಗೂಂಡಾಗಿರಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ, ಕೊಲೆ, ದಂಗೆ ನಡೆಸುವುದು ಎಷ್ಟು ಸರಿ? ಇದರ ಹಿಂದಿರುವವರಾದರೂ ಯಾರು?
ಅಷ್ಟಕ್ಕೂ ಆದ ಘಟನೆಯೇನು?
SC/ST ಆ್ಯಕ್ಟ್ ಕುರಿತಾಗಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ವಿರುದ್ಧವೋ ದೇಶವಿರೋಧಿ ಜನರು ದೇಶದಲ್ಲಿ ದಂಗೆಯನ್ನ ಎಬ್ಬಿಸಿಬಿಟ್ಟಿದ್ದರು. ರಾಜಕೀಯ ಪಕ್ಷಗಳ ಜೊತೆ ಜೊತೆಗೆ ಕೆಲ ದಲಿತ ಸಂಘಟನೆಗಳು ಸುಪ್ರೀಂಕೋರ್ಟಿನ ಆದೇಶದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ದೇಶದ ಹಲವಾರು ರಾಜ್ಯಗಳಲ್ಲಿ‌ದಲಿತ ಸಂಘಟನೆಗಳು ಏಪ್ರಿಲ್ 2 ರಂದು ಭಾರತ್ ಬಂದ್ ಗೆ ಕರೆ ನೀಡಿದ್ದವು.
ಆದರೆ ಹೆಸರಿಗೆ ಮಾತ್ರ ಇದು ಭಾರತ್ ಬಂದ್ ಆಗಿತ್ತು ಆದರೆ ಭಾರತ್ ಬಂದ್ ಹೆಸರ ಮೇಲೆ ಕಂಡ ಕಂಡಲ್ಲಿ ಹಿಂಸಾಚಾರ, ರೇಲ್ವೆ ಹಳಿಗಳನ್ನ ಕಿತ್ತೆಸೆದಿದ್ದು, ಬಸ್ ಗಳನ್ನ ಸುಟ್ಟು ಹಾಕಿದ್ದು, ಆ್ಯಂಬುಲೆನ್ಸ್ ಗಳನ್ನ ತಡೆದು ರೋಗಿಗಳ ಪ್ರಾಣಹರಣ ಮಾಡಿದ್ದು, ಕೈಯಲ್ಲಿ ಶಸ್ತ್ರ ಹಿಡಿದುಕೊಂಡು ಬೀದಿಗಳಲ್ಲಿ ಓಡಾಡಿದ್ದು, ಮನೆಯಿಂದ ಗನ್ ಗಳನ್ನ ತಂದು ಅಮಾಯಕರ ಮೇಲೆ ಗುಂಡು ಹಾರಿಸಿದ್ದು, ಪೋಲಿಸ್ ಸ್ಟೇಷನ್ ಗಳಿಗೆ ಬೆಂಕಿಯಿಟ್ಟಿದ್ದು, ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಸ್ ಗಳನ್ನ ಚೇಸ್ ಮಾಡಿ ಸುಡಲು ಯತ್ನಿಸಿದ್ದು ಮೊನ್ನೆಯ ಭಾರತ್ ಬಂದ್ ನಲ್ಲಿ ಕಂಡು ಬಂದ ದೃಶ್ಯಗಳಾಗಿದ್ದವು.
ಅಷ್ಟಕ್ಕೂ ತೀರ್ಪು ನೀಡಿದ್ದು ಸುಪ್ರೀಂಕೋರ್ಟ್ ಆದರೆ ಈ ಭಾರತ್ ಬಂದ್ ಪ್ರಧಾನಿ ಮೋದಿಯವರ ವಿರುದ್ಧ ತಿರುಗಿದ್ಯಾಕೆ? ಭಾರತದ ರಾಜ್ಯಗಳಲ್ಲಿ ಭಾರತ್ ಬಂದ್ ಹೆಸರ ಮೇಲೆ ದೇಶಕ್ಕೆ ಬೆಂಕಿಯಿಟ್ಟ ಜನರೇ SC/SC ಆ್ಯಕ್ಟ್ ನ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಪ್ರಧಾನಿ ಮೋದಿ ವಿರುದ್ಧ ಇಷ್ಟೆಲ್ಲಾ ದಂಗೆ ನಡೆಸುವ ಉದ್ದೇಶವಾದರೂ ಏನಿತ್ತು? ಸುಪ್ರೀಂಕೋರ್ಟಿನ ನ ನಿರ್ಧಾರಕ್ಕೂ ಮೋದಿ ಸರ್ಕಾರಕ್ಕೂ ಸಂಬಂಧವೇನ್ರಯ್ಯಾ?
ಸುಪ್ರೀಂಕೋರ್ಟ್ ವಿರುದ್ಧ ಭಾರತ್ ಬಂದ್ ಮಾಡಿ ಹಿಂಸಾಚಾರವೆಸಗಿದ ದೇಶವಿರೋಧಿಗಳೇ ನಿಮ್ಮ ಆಂದೋಲನದಲ್ಲಿ ಮೋದಿ ವಿರೋಧಿ ಘೋಷಣೆಗಳು ಕೇಳಿಬಂದಿದ್ಯಾಕೆ? ಪೋಲಿಸರ ವಿರುದ್ಧವೇ ಬಙದೂಕಿನಿಂದ ಗುಂಡು ಹಾರಿಸಿದ್ಯಾಕೆ? ಹಾಗಾದರೆ ಸುಪ್ರೀಂಕೋರ್ಟಿನ ತೀರ್ಪನ್ನ ಸಾರಾಸಗಟಾಗಿ ಧಿಕ್ಕರಿಸಿ ನೀಚು ಅದ್ಯಾವ ಸಂವಿಧಾನದ ರಕ್ಷಣೆ ಮಾಡೋಕೆ ಮುಂದಾಗಿದೀರ?
ಆಂದೋಲನ, ಪ್ರತಿಭಟನೆಯೆಂದರೆ ರೇಲ್ವೆ ಹಳಿಗಳನ್ನ ಕಿತ್ತಾಕೋದು, ಗೋಲಿಬಾರ್ ನಡೆಸೋದು, ಅಮಾಯಕರನ್ನ ಕೊಲ್ಲೋದು ಆಂದೋಲನ ಅಥವ ಪ್ರತಿಭಟನೆಯಾ ಅಂತ ದೇಶದ ಜನತೆ ಕೇಳಲಿಚ್ಛಿಸಿದ್ದಾರೆ.
ಸುಪ್ರೀಂಕೋರ್ಟಿನ ತೀರ್ಪಿನ ವಿರುದ್ಧ ರಸ್ತೆಗಿಳಿದು ಸ್ಕೂಲ್ ಬಸ್ ಗಳಿಗೆ ಬೆಂಕಿಯಿಡೋಕೆ ಪ್ರಯತ್ನಿಸುವುದು, ಗಾಡಿಗಳನ್ನ ಸುಟ್ಟು ಹಾಕೋದು, ಪೋಲಿಸ್ ಠಾಣೆ, ಚೌಕಿಗಳಲ್ಲಿ ಬೆಂಕಿಯಿಡೋದು, ಗ್ವಾಲಿಯರ್ ನಲ್ಲಿ ಜೈ ಭೀಮ್ ಘೋಷಣೆ ಕೂಗುತ್ತ ರಿವಾಲ್ವರ್ ನಿಂದ ಪೋಲಿಸರ ಮೇಲೆ ಗುಂಡು ಹಾರಿಸೋದು, ಫಿರೋಜಾಬಾದ್ ನಲ್ಲಿ ಪೋಲಿಸರ ಮೇಲೆಯೇ ಹಲ್ಲೆ ನಡೆಸೋದು, ಆಟೋದಲ್ಲಿ ತೆರಳುತ್ತಿದ್ದ ಮಹಿಳೆಯರ ಮಕ್ಕಳ ಮೇಲೆ ಹಲ್ಲೆ ನಡೆಸೋದೂ ಆಂದೋಲನವಾ ಪ್ರತಿಭಟನೆಯಾ? ಯಾವ ದೇಶದ ಅನ್ನ ತಿಂತಿದೀರೋ, ಯಾವ ದೇಶದಲ್ಲಿ ಬದುಕುತ್ರಿದ್ದೀರೋ ಅದೇ ದೇಶದಲ್ಲಿ ಬೆಂಕಿಯಿಡೋದೂ ಒಂದು ಪ್ರತಿಭಟನೆಯಾ? ಅಂತ ದೇಶದ ಜನತೆ ಈ ಭಯೋತ್ಪಾದಕರಿಗೆ ಕೇಳುತ್ತಿದ್ದಾರೆ.
ಇಂದು ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಜೈ ಭೀಮ್ ಘೋಷಣೆಗಳನ್ನ ಕೂಗುತ್ತ ನರೇಂದ್ರ ಮೋದಿ ಮುರ್ದಾಬಾದ್ ಅಂತ ನೀವು ಮಾಡಿದ ನಂಗಾನಾಚ್ ಗಳನ್ನ ದೇಶದ ಜನತೆ ಇವರು ತಮ್ಮ‌ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿಲ್ಲ ಬದಲಾಗಿ ರಾಜಕೀಯ ಪಕ್ಷಗಳ ಚೇಲಾಗಳಾಗಿ ವರ್ತಿಸುತ್ತಿದ್ದಾರೆ ಅನ್ನೋದು ಅರ್ಥವಾಗಿದೆ.
ಇದು ಆಂದೋಲನವಲ್ಲ ಇದು 2019 ರಲ್ಲಿ ಪ್ರಧಾನಿ ಮೋದಿಯನ್ನ ಅಧಿಕಾರದಿಂದ ಇಳಿಸಲು ನಡೆಯುತ್ತಿರುವ ಪೂರ್ವಭಾವಿ ತಯಾರಿ ಅನ್ನೋದು ಪ್ರತಿಯೊಬ್ಬ ದೇಶಭಕ್ತನಿಗೂ ಅರ್ಥವಾಗಿದೆ‌. ಈ ಹಿಂಸಾಚಾರದ ಪರದೆಯ ಹಿಂದೆ ಮೋದಿ ವಿರೋಧಿಗಳ ದಂಡೇ ನಿಂತಿವೆ ಅನ್ನೋದಕ್ಕೆ ಖರ್ಗೆ ಅಂದು ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯೊಂದೇ ಅಲ್ಲ ಮೊನ್ನೆ ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಟ್ವೀಟ್ ಮಾಡಿ ದೇಶದಲ್ಲಿ ಹಿಂಸಾಚಾರವೆಬ್ಬಿಸುತ್ತಿರುವ ನಾಲಾಯಕರಿಗೆ ಸಲಾಂ ಮಾಡುತ್ತಿದ್ದ.
ಈ ಆಂದೋಲನಕ್ಕಿಟ್ಟಿದ್ದ ಹೆಸರು “ಭಾರತ್ ಬಂದ್” ಆದರೆ ಲೂಟಿ, ದಂಗೆ, ಕೊಲೆ, ಹಿಂಸಾಚಾರ ಮಾಡಿ ಬೀದಿಗಿಳಿದು ಹೋರಾಟ ಮಾಡಿದ್ದು ಮಾತ್ರ ಬಿಜೆಪಿ ಸರ್ಕಾರವಿರೋ ರಾಜ್ಯಗಳಾದ ಉತ್ತರಪ್ರದೇಶ, ಝಾರ್ಖಂಡ್, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಗಳಂತಹ ರಾಜ್ಯಗಳಲ್ಲಿ. ಹಾಗಾದರೆ ಈ ರಾಜ್ಯಗಳಷ್ಟೇ ಭಾರತದಲ್ಲುವೆಯಾ? ಬೇರೆ ರಾಜ್ಯಗಳಲ್ಲಿ ಆಗದ ಗಲಭೆಗಳು ಕೇವಲ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಷ್ಟೇ ಯಾಕೆ?
ಅಷ್ಟಕ್ಕೂ ದೇಶದಲ್ಲಿ ಬೆಂಕಿ ಹಚ್ಚಿದ ಈ ದ್ರೋಹಿಗಳಿಗೆ ಸುಪ್ರೀಂಕೋರ್ಟ್ ನ ಅದ್ಯಾವ ತೀರ್ಪು ರೊಚ್ಚಿಗೆಬ್ಬಿಸಿದ್ದು ಗೊತ್ತಾ?
1989 ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಲ್ಲಿ ತಿದ್ದುಪಡಿ ತರುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಬಂದ್ ನಡೆಯುತ್ತಿದ್ದು, ಪಂಜಾಬಿನ ಲುಧಿಯಾನಾ, ಬಿಹಾರದ ಪಾಟ್ನಾ, ಉತ್ತರ ಪ್ರದೇಶದ ಆಗ್ರಾ, ಮಧ್ಯಪ್ರದೇಶ, ಜಾರ್ಖಂಡ್, ರಾಜಸ್ಥಾನದ ಹಲವು ಸ್ಥಳಗಳಲ್ಲಿ ಗಲಭೆ ಎಬ್ಬಿಸಿವೆ.
ಈ ಕಾಯ್ದೆಯನ್ವಯ ಎಸ್ಸಿ ಮತ್ತು ಎಸ್ಟಿ ಪಂಗಡಗಳ ಮೇಲೆ ಯಾವುದೇ ರೀತಿಯ ದೌರ್ಜನ್ಯದ ದೂರು ಬಂದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಈ ಕಾಯ್ದೆ ದುರುಪಯೋಗವಾಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ಸುಪ್ರೀಂ ಕೋರ್ಟ್, ಯಾವುದೇ ದೂರು ಬಂದರೂ ಪ್ರಾಥಮಿಕ ಡಿಎಸ್ ಪಿ ತನಿಖೆಯ ನಂತರವೇ ಕ್ರಮ ಕೈಗೊಳ್ಳುವಂತೆ ತೀರ್ಪು ನೀಡಿತ್ತು.
ಈ ತೀರ್ಪಿನಿಂದ ಎಸ್ಟಿ, ಎಸ್ಟಿಗಳ ಹಕ್ಕನ್ನು ಕಸಿದಂತಾಗುತ್ತದೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತವೆ ಎಂದು ದೂರಿ ವಿವಿಧ ದಲಿತಪರ ಸಂಘಟನೆಗಳು ಏ.2 ರಂದು ಭಾರತ್ ಬಂದ್ ಗೆ ಕರೆ ನೀಡಿ ದೇಶಾದ್ಯಂತ ಬೆಂಕಿ ಹಚ್ಚಿ ಇಲ್ಲಿಯವರೆಗೂ 10 ಜನರ ಪ್ರಾಣವನ್ನ ಬಲಿ ತೆಗೆದುಕೊಳ್ಳಲಾಗಿದೆ.
ಇದು ಸಂವಿಧಾನವನ್ನ ಗೌರವಿಸುವ ಪರಿಯೇ?

ಹಿಂದು – ಒಂದು ವೇದೋಕ್ತ ಶಬ್ದ

ಹಿಂದು – ಒಂದು ವೇದೋಕ್ತ ಶಬ್ದ
ಹಿಂಕೃಣ್ವತೀ ವಸುಪತ್ನೀ ವಸೂನಾಂ ವತ್ಸಮಿಚ್ಛಂತೀ ಮನಸಾಭ್ಯಾಗಾತ್ |
ದುಹಾಮಶ್ವಿಭ್ಯಾಂ ಪಯೋ ಅಘ್ನ್ಯೇಯಂ ಸಾ ವರ್ಧತಾಂ ಮಹತೇ ಸೌಭಗಾಯ
|| ಋಗ್ವೇದ ೧-೧೬೪-೨೭ ||
ಒಟ್ಟು ಮಂತ್ರದ ಸಾರಾಂಶ ರೂಪೀ ಸೂತ್ರವೇ ಆದ್ಯಕ್ಷರ ಸಂಯೋಗದಿಂದ ಉಂಟಾಗುವ “ಹಿಂದು” ಎಂಬ ಶಬ್ದ. ಹಿಂಕೃಣ್ವತೀ ಎಂದರೆ ಪ್ರಕೃತಿಯ ಒಂದು ವಿಶಿಷ್ಟ ತರಂಗ ವ್ಯವಸ್ಥೆಯ ಸದಾಕಾಲ ವ್ಯಕ್ತವಾಗುವ ಘೋಷ. ಹಿಂಕಾರದ ಆ ಘೋಷ ಅಥವಾ ಗಾನವನ್ನು ವಿಸ್ತಾರವಾಗಿ ಸಾಮವೇದವು ತೋರಿಸಿಕೊಡುತ್ತದೆ. ವಿಶೇಷವಾಗಿ ಗಾಯತ್ರ ಸಾಮದ ಪ್ರಕೃತಿ ಗಾನದಲ್ಲೇ ಹಿಂಕಾರ ಹಿಂಜಲ್ಪಟ್ಟು ವಿಸ್ತರಿಸಲ್ಪಟ್ಟಿದೆ. ಇನ್ನು ಹಲವಾರು ಕಡೆ ಹಿಂಕಾರದ ಮಹತ್ವ ಹೇಳಲ್ಪಟ್ಟಿದೆ. ವೇದವು ನಾದ ರೂಪದಲ್ಲಿದೆ. ಭೂಮ್ಯಂತರ್ಗತ ವೇದ ತರಂಗವು ಹಿಂಕಾರ ರೂಪದಲ್ಲಿ ವ್ಯಕ್ತವಾದಾಗ ಅದು ಒಂದು ವಿಶೇಷ, ವಿಶಿಷ್ಟ ವಿಚಾರಪ್ರದ ಭಾಗದಲ್ಲಿ ವ್ಯಕ್ತಿಯನ್ನು ಕೊಂಡೊಯ್ಯುತ್ತದೆ. ಆ ಶಕ್ತಿಯೇ ಪತ್ನಿ ಎನ್ನಿಸಿಕೊಳ್ಳುತ್ತದೆ. ಈ ಮೂಲಪ್ರಕೃತಿಯನ್ನಾಧರಿಸಿದ ಜೈವಿಕವೆಲ್ಲವೂ ಗಿಡಮರ ಸಹಿತವಾದದ್ದು ವಸು. ಅವೆಲ್ಲವನ್ನೂ ಉತ್ತಮ ವಿಚಾರಧಾರೆಯೊಂದಿಗೆ ಕೊಂಡೊಯ್ಯುವ ಶಕ್ತಿಯೇ ಪತ್ನಿ. ಹಾಗಾಗಿ ಹಿಂಕಾರವು ವಸುಪತ್ನೀಯಾಗಿ ಪ್ರವರ್ಧಮಾನಕ್ಕೆ ಬರುತ್ತದೆ. ವತ್ಸಮಿಚ್ಛಂತೀ ಎಂದರೆ ಪುನರುತ್ಪಾದನೆ ಸಹಿತವಾದಂತಹಾ ಸಾರ್ವತ್ರಿಕ ನಿತ್ಯ ನಿರಂತರ ಬೆಳವಣಿಗೆ. ಅದನ್ನೇ ವತ್ಸ ಎಂದದ್ದು. ಅದೊಂದು ವಿಶೇಷ ತರಂಗಾಧಾರಿತ ಪ್ರಕೃತಿ ವ್ಯವಸ್ಥೆ. ಅದು ವಸೂನಾಂ ಅಂದರೆ ಮೂಲಪ್ರಕೃತಿಯನ್ನಾಧರಿಸಿದ ಜೈವಿಕವೆಲ್ಲವೂ ಮನಸಾಭ್ಯಾಗಾತ್ – ಮನಸ್ಸಿನ ಮುಖೇನವೇ ಅಭಿವ್ಯಕ್ತ ರೂಪದಲ್ಲಿ ಭಾವನೆಗಳಿಂದಲೇ ರತವಾಗುತ್ತದೆ, ಹಾಗಾಗಿ ಭಾರತವಾಗುತ್ತದೆ.
ದುಹಾಮಶ್ವಿಭ್ಯಾಂ ಪಯೋ ಅಘ್ನ್ಯೇಯಂ – ಹಾಹಾಕಾರವನ್ನು ಲುಪ್ತಗೊಳಿಸುವ ಶಕ್ತಿಯುಳ್ಳ ಹಾಲು ಆಯಾಯ ಜೀವಿಗಳಿಗೆ ಅದರದರ ನಿಯಮದಂತೆ ಪ್ರಥಮ ಆಹಾರವಾಗಿ ಒದಗುತ್ತದೆ. ಅಂದರೆ ಓಷದೀ ರೂಪದಲ್ಲಿ ತಾಯಿ+ಹಾಲು ಎಂಬ ದ್ವಿಸೂತ್ರವು ಪೋಷಕವಾಗಿ ಒದಗಣೆಯಾಗುತ್ತದೆ. ಅಂತಹಾ ವ್ಯವಸ್ಥೆಯಲ್ಲಿ ಸಪ್ತಮಾತೃಕಾ ಚಿಂತನೆ ಇದೆ. ಅದರಲ್ಲಿ ಜನ್ಮಕೊಟ್ಟ ತಾಯಿ, ಗೋವೂ ಇತ್ಯಾದಿ ಬರುತ್ತದೆ. ಅವೆಲ್ಲವೂ ಗೌರವಾನ್ವಿತವಾಗಿ, ಪೂಜನೀಯವಾಗಿ, ವಧಾರ್ಹವಲ್ಲದಂತೆ ರಕ್ಷಿಸಲ್ಪಡುವ ವ್ಯವಸ್ಥೆ ಇರುತ್ತದೆ. ಸಾ ವರ್ಧತಾಂ ಮಹತೇ ಸೌಭಗಾಯ – ವೇದವು ಉಂಟುಮಾಡಿದ ಸಂವಹನ ತರಂಗವು ಅಗಾಧ, ಜೀವಜಗತ್ತಿನ ಜೀವಕೋಟಿಗಳ ಸ್ಥಿರತೆ, ಬದ್ಧತೆಯನ್ನೊಳಗೊಂಡ ಧೈವೀಕ ವ್ಯವಸ್ಥೆಯನ್ನು ಕಾಪಾಡುವ ದೇಹಾಂತರ್ಗತ ತರಂಗಗಳ ಮೂಲವೇದ ತರಂಗವು ಒಳ್ಳೆಯ ದಾರಿ ಅಥವಾ ಮಾರ್ಗವನ್ನೇ ತೋರುತ್ತದೆ. ಜೀವ ಜಗತ್ತಿನ ಸತ್ವವೇ ವೇದ. ಅಂತಹಾ ವೇದಾಧಾರಿತವಾಗಿ ಸಮೀಕೃತವಾಗಿರುವ ಗುಂಪೇ ಹಿಂ+ದು ಎಂದು ಉತ್ಕೀಲಿಸಲ್ಪಟ್ಟ ಸಮುಚ್ಛಯ ವ್ಯವಸ್ಥೆ. ಇದು ವೇದಗಳ ಸ್ವರ ಸಹಿತವಾಗಿ ಅರ್ಥೈಸುವ ವಿವಿಧ ವಿಧಾನಗಳಿಂದ ಬ್ರಾಹ್ಮೀ ಭಾಷೆಯಲ್ಲಿ ನೀಡಿರುವ ಒಂದು ವಿಧಾನದ ಭಾವಾರ್ಥವಾಗಿದೆ.
ಹಿಂದು ಎಂದರೆ ಏನೆಂದು ಆ ಮಂತ್ರ ವಿವರಿಸಿದೆ. ಅಂತಹಾ ಗುಂಪಿನ ಜನರು ಇರುವ ಸ್ಥಾನವನ್ನು ಹಿಂದೂಸ್ಥಾನ ಎಂದು ಕರೆದಿರುವುದು ಅಪಭ್ರಂಶವಲ್ಲ, ಅದು ಸಾಧು. ಮೆಕಾಲೆ ಶಿಕ್ಷಣ ಬಂದ ಮೇಲೆ ವೇದವನ್ನು ಅಧ್ಯಯನ ಮಾಡುವ ಪದ್ಧತಿಯೇ ಮರೆತು ಹೋಗಿದೆ. ವೇದವು ಸಂಸ್ಕೃತದಲ್ಲಿ ಇಲ್ಲ, ಅದು ಬ್ರಾಹ್ಮಿ ಭಾಷೆಯಲ್ಲಿದೆ. ಇನ್ನು ಅರ್ಥೈಸುವ ವಿಧಾನದಲ್ಲಿ ಗಣಕ ಗುಣಕದ ಹಲವಾರು ಸೂತ್ರಗಳಿವೆ. ಬರೆ ಬ್ರಿಟೀಷ್ ಮಿಷನರಿಗಳ ಕ್ರೈಸ್ತ ಸಂಶೋಧಕರು ಬರೆದು ತಿದ್ದಿ ತೀಡಿರುವ ಶಬ್ದಕೋಶ ಹಿಡಿದು ಇಂದಿನ ವಿದ್ವಾಂಸರು ಸೋಲುತ್ತಿದ್ದಾರೆ. 3500 ವರ್ಷಗಳಿಗೂ ಹಿಂದಿನಿಂದ ರಚನೆ ಆಗುತ್ತಾ ಬಂದ ಸರ್ವಭಾಷಾಮಯಿಭಾಷಾ ಸಿರಿಭೂವಲಯ ಎಂಬ ಕನ್ನಡದ ಲಭ್ಯ ಅತೀ ಪುರಾತನ ಅಂಕಕಾವ್ಯವೂ ಇದೇ ರೀತಿಯ ಅಕ್ಷರ ಸಂಯೋಜನೆಯನ್ನು ಅಂಕಾಕ್ಷರ ಗಣಿತ ವಿಧಾನದಲ್ಲಿ ತೋರಿಸಿದೆ. ಜಯಾಖ್ಯಾನ ಸಂಹಿತೆಯ ಮೂಲ ಭಗವದ್ಗೀತೆಯ ಶ್ಲೋಕಗಳು ಇದೇ ಕ್ರಮದಲ್ಲಿ ಇವೆ. ಲಗತ್ತಿಸಿರುವ ಉದಾಹರಣೆ ಗಮನಿಸಬಹುದು.
ಹಿಂಕೃಣ್ವತೀ ಎಂದೂ ಹಿಙ್ಕೃಣ್ವತೀ ಎಂದೂ ಬರೆಯುತ್ತಾರೆ. ಅಲ್ಲಿ ವಿಶೇಷ ಅನುನಾಸಿಕದ ಸಂಯೋಜನೆ ಇದೆ. ಈಗ ಅದು ಬಳಕೆಯಲ್ಲಿಲ್ಲ. ಬ್ರಾಹ್ಮಿ ಭಾಷೆಯಲ್ಲಿ  ಅಂದಾಜು ೨೪ ಅನುಸಾಸಿಕಗಳಿವೆ. ಮಂತ್ರದ ಪ್ರಕಾರ ಹಿಂ ಅಥವಾ ಹಿಙ್ ಎಂದು ಇದ್ದದ್ದು ಸೂತ್ರವಾಗುವಾಗ ಹಿಂದು, ಹಿಙ್ದು, ಅಥವಾ ಹಿನ್ದು ಎಂದಾಗಬಹುದು. ಬರೆಯುವುದಕ್ಕೆ ಏನೇ ಬರೆದುಕೊಂಡರೂ ಮೂಲದಲ್ಲಿರುವುದು ಹಿಕಾರದ ಮುಂದೆ ಇರುವ ಒಂದು ವಿಶೇಷ ಅನುನಾಸಿಕ. ಅದರ ಅನುಸಂಧಾನದಿಂದ ದುಹಾಮಿಚ್ಛಂತೀ… ಸಂಯೋಜಿಸಲ್ಪಡುತ್ತದೆ. ಅದು ವಿಶೇಷ ಒಕ್ಕೂಟವಾದ ಹಿಂದು. ಇದು ಶ್ರೌತ.
ಇಲ್ಲಿ ಈಗಿನ ಅಧುನಿಕ ವ್ಯಾಕರಣ ನಿಯಮಗಳು ಅನ್ವಯವಾಗುವುದಿಲ್ಲ. ವೇದವು ವ್ಯಾಕರಣದಿಂದ ಆದದ್ದಲ್ಲ. ವೇದ ಉದಯಿಸಿದ್ದು ಆದಿ ನಾದದ ಮೂಲದಿಂದ. ಜ್ಞಾನವೇ ವೇದ ತರಂಗಗಳು. ಅವು ನಾದತರಂಗದಲಿ ಮೇಳೈಸಿತು. ಆ ನಾದವೇ ವೇದ ಎಂದೆಂದು ಸಾರುತ ಮಾನವನು ಎದ್ದನು ಊರ್ಧ್ವಗತಿಗಾಗಿ. ವಾದದೊಳು ಹುಟ್ಟಿದವು ಉಪನಿಷತ್, ಪುರಾಣಾದಿಗಳು; ವೇದದೊಳಗಣ ವಿಚಾರ ಚರ್ಚಿಸಿ ಸಾಂಖ್ಯದಾದಿಯಾಗಿ ನಿರುಕ್ತ, ಜ್ಯೋತಿಷ, ವ್ಯಾಕರಣಗಳು ಉದಿಸೆ; “ಮೀಮಾಂಸಕವಾದವು”.
|| ಜೈ ಹಿಂದ್ ||

ಶ್ರೀ ಗಂಗಾಸ್ತೋತ್ರ

ಶ್ರೀ ಗಂಗಾಸ್ತೋತ್ರವನ್ನು ಶ್ರೀಶಂಕರಾಚಾರ್ಯರು ರಚಿಸಿದ್ದಾರೆ. ಶ್ರೀಗಂಗಾ ಸ್ತೋತ್ರದಲ್ಲಿ 14 ಪರಮ ಪವಿತ್ರವಾದ ರೋಗನಾಶಕವಾದ ಹಾಗೂ ಅತೀ ರಹಸ್ಯವುಳ್ಳ ಶ್ಲೋಕಗಳನ್ನು ರಚಿಸಿದ್ದಾರೆ..
ಶ್ರೀ ಗಂಗಾಸ್ತೋತ್ರವನ್ನು ಓದುತ್ತಿರುವವರಿಗೆ ಜೀವನದಲ್ಲಿ ಯಾವುದೇ ತರಹದ ಖಾಯಿಲೆಗಳು, ಚಿಂತೆಗಳು, ಯೋಚನೆಗಳು ಬರದೆ ದೇಹವು ವಜ್ರಕಾಯ ಶರೀರವಾಗುತ್ತದೆ..
🖎ಯಾರಿಗೆ ಹಾಸಿಗೆಯಿಂದ ಎದ್ದಾಗ ತಲೆ ಸುತ್ತು ಬರುತ್ತದೆಯೋ , ಯಾರಿಗೆ ಆಚೆಕಡೆ ಸುತ್ತಾಡಿದರೆ ತಲೆನೋವು ಬರುತ್ತದೆಯೋ , ಯಾರಿಗೆ B.P.ಇದ್ದು ಎಷ್ಟು ಮಾತ್ರೆ ತೆಗೆದುಕೊಂಡರೂ ಕಡಿಮೆಯಾಗುವುದಿಲ್ಲವೋ, ಯಾರಿಗೆ ತಮ್ಮ ಖಾಯಿಲೆಯನ್ನು ವೈದ್ಯರ ಬಳಿಗೆ ಹೇಳಿದರೆ ಅರ್ಥವಾಗುವುದಿಲ್ಲವೋ, ಅಂತಹವರು "ಶ್ರೀ ಗಂಗಾದೇವಿ" ಸ್ತೋತ್ರವನ್ನು ಓದಿದರೆ ಬಹಳ ಅನುಕೂಲವಾಗುತ್ತದೆ...
🖎ಯಾರು ತುಂಬಾ ಯೋಚನೆಯನ್ನು ಮಾಡುತ್ತಾರೋ, ಯಾರಿಗೆ ನಿದ್ದೆ ಬರುವುದಿಲ್ಲವೋ, ಯಾರು ಮನೋರೋಗಿಯಾಗಿರುತ್ತಾರೋ, ಯಾರಿಗೆ ಮಾತನಾಡುವಾಗ ದೇಹ ಅದರುತ್ತದೆಯೋ, ಯಾರಿಗೆ ಬೆವರು ಜಾಸ್ತಿ ಬರುತ್ತದೆಯೋ, ಯಾರಿಗೆ ಭಯ ಜಾಸ್ತಿ ಆಗುತ್ತಿದೆಯೋ, ಯಾರು ಶವವನ್ನು ನೋಡಿದರೆ ಭಯ ಪಡುತ್ತಾರೆಯೋ, ಯಾರು ಕನಸಿನಲ್ಲಿ ಬೆಚ್ಚಿ ಬೀಳುತ್ತಾರೋ, ಯಾರಿಗೆ ಕೆಟ್ಟ ಕನಸುಗಳು ಪದೇಪದೇ ಬರುತ್ತಿರುತ್ತದೆಯೋ ಅಂತಹವರು ಗಂಗಾದೇವಿಯ ಸ್ತೋತ್ರವನ್ನು ಓದಿ ಸುಮಂಗಲಿಯರಿಗೆ ತಾಂಬೂಲದಾನ ಮಾಡಿದರೆ ಸಕಲ ದೋಷಗಳು ನಿವಾರಣೆಯಾಗುತ್ತದೆ..
ರಾತ್ರಿ ಮಲಗುವ ಮುನ್ನ ಗಂಗಾದೇವಿ ಸ್ತೋತ್ರದ ಎರಡನೇ ಶ್ಲೋಕವನ್ನು ಹೇಳಿಕೊಂಡು ಮಲಗುವುದು ಶುಭ..
🖎ಯಾರಿಗೆ ಹೆಚ್ಚು ವಿದ್ಯೆ ಕಲಿಯಲು ಆಸಕ್ತಿ ಇದ್ದು , ಎಷ್ಟು ಓದಿದರೂ ಮರೆತು ಹೋಗುತ್ತಿದ್ದರೆ , ಯಾರಿಗೆ ಓದುವಾಗ ಹೆಚ್ಚು ಯೋಚನೆಗಳು ಬರುತ್ತಿದ್ದರೆ, ಯಾರಿಗೆ ಪರಿಕ್ಷಾ ಸಮಯದಲ್ಲಿ ದೇಹವು ಸರಿ ಇರುವುದಿಲ್ಲವೋ, ಅಂತವರು "ಶ್ರೀಗಂಗಾ ಸ್ತೋತ್ರ"ದ ೨ ನೇ ಶ್ಲೋಕವನ್ನು 7 ಸಾರಿ ನೀರಿನಲ್ಲಿ ಅಭಿಮಂತ್ರಿಸಿ, ಮಂತ್ರಿಸಿದ ನೀರನ್ನು ತಲೆಗೆ, ಕಣ್ಣುಗಳಿಗೆ, ಹಚ್ಚಿ ಉಳಿದ ನೀರಿನಿಂದ ಮುಖವನ್ನು ತೊಳೆದುಕೊಂಡರೆ ಮಹಾವಿದ್ಯಾವಂತರಾಗುತ್ತಾರೆ..
🖎ಯಾರಿಗೆ ಸಕ್ಕರೆ ಖಾಯಿಲೆ ಇದ್ದು ತುಂಬಾ ಏರುಪೇರಾಗುತ್ತಿರುತ್ತದೆಯೋ ಅಂತಹವರು ಗಂಗಾದೇವಿಯ ದೇವಾಲಯದಲ್ಲಿ ಪೂಜೆ ಮಾಡಿಸಿ ಪಾನಕ ಕೋಸಂಬರಿ ಹಂಚಿದರೆ ಸಕ್ಕರೆ ಖಾಯಿಲೆಯು ಸಮತೋಲನದಲ್ಲಿರುತ್ತದೆ. ಆರೋಗ್ಯವಾಗಿರುತ್ತಾರೆ..
🖎ಯಾರು ಪ್ರತಿದಿವಸ ಸ್ನಾನ ಮಾಡುವಾಗ "ಶ್ರೀ ಗಂಗಾ ಸ್ತೋತ್ರವನ್ನು" ಹೇಳಿ ಸ್ನಾನವನ್ನು ಮಾಡಿದರೆ ಸರ್ವಪಾಪಗಳೂ ನಿವಾರಣೆಯಾಗಿ ದೇಹವು ವಜ್ರಕಾಯವಾಗುತ್ತದೆ..
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೇಜೋವಂತರಾಗಿಯೂ, ಕಾಂತಿವಂತರಾಗಿಯೂ, ದೈವಾಂಶರಾಗಿಯೂ ಕಾಣುತ್ತಾರೆ..
🖎ಹೀಗೆ  ಒಂದೊಂದು  ಸ್ತೋತ್ರಕ್ಕೂ ಒಂದೊಂದು  ಅರ್ಥ ಮತ್ತು ಮಹತ್ವವಿದೆ. ವಿಶೇಷ ಶಕ್ತಿಯಿದೆ..
ದೇವಿ! ಸುರೇಶ್ವರಿ! ಭಗವತಿ! ಗಂಗೇ ತ್ರಿಭುವನತಾರಿಣಿ ತರಳತರಂಗೇ |
ಶಂಕರಮೌಳಿವಿಹಾರಿಣಿ ವಿಮಲೇ ಮಮ ಮತಿರಾಸ್ತಾಂ ತವ ಪದಕಮಲೇ || 1 ||
ಭಾಗೀರಥಿಸುಖದಾಯಿನಿ ಮಾತಸ್ತವ ಜಲಮಹಿಮಾ ನಿಗಮೇ ಖ್ಯಾತಃ |
ನಾಹಂ ಜಾನೇ ತವ ಮಹಿಮಾನಂ ಪಾಹಿ ಕೃಪಾಮಯಿ ಮಾಮಙ್ಞಾನಮ್ || 2 ||
ಹರಿಪದಪಾದ್ಯತರಂಗಿಣಿ ಗಂಗೇ ಹಿಮವಿಧುಮುಕ್ತಾಧವಳತರಂಗೇ |
ದೂರೀಕುರು ಮಮ ದುಷ್ಕೃತಿಭಾರಂ ಕುರು ಕೃಪಯಾ ಭವಸಾಗರಪಾರಮ್ || 3 ||
ತವ ಜಲಮಮಲಂ ಯೇನ ನಿಪೀತಂ ಪರಮಪದಂ ಖಲು ತೇನ ಗೃಹೀತಮ್ |
ಮಾತರ್ಗಂಗೇ ತ್ವಯಿ ಯೋ ಭಕ್ತಃ ಕಿಲ ತಂ ದ್ರಷ್ಟುಂ ನ ಯಮಃ ಶಕ್ತಃ || 4 ||
ಪತಿತೋದ್ಧಾರಿಣಿ ಜಾಹ್ನವಿ ಗಂಗೇ ಖಂಡಿತ ಗಿರಿವರಮಂಡಿತ ಭಂಗೇ |
ಭೀಷ್ಮಜನನಿ ಹೇ ಮುನಿವರಕನ್ಯೇ ಪತಿತನಿವಾರಿಣಿ ತ್ರಿಭುವನ ಧನ್ಯೇ || 5 ||
ಕಲ್ಪಲತಾಮಿವ ಫಲದಾಂ ಲೋಕೇ ಪ್ರಣಮತಿ ಯಸ್ತ್ವಾಂ ನ ಪತತಿ ಶೋಕೇ |
ಪಾರಾವಾರವಿಹಾರಿಣಿ ಗಂಗೇ ವಿಮುಖಯುವತಿ ಕೃತತರಲಾಪಾಂಗೇ || 6 ||
ತವ ಚೇನ್ಮಾತಃ ಸ್ರೋತಃ ಸ್ನಾತಃ ಪುನರಪಿ ಜಠರೇ ಸೋಪಿ ನ ಜಾತಃ |
ನರಕನಿವಾರಿಣಿ ಜಾಹ್ನವಿ ಗಂಗೇ ಕಲುಷವಿನಾಶಿನಿ ಮಹಿಮೋತ್ತುಂಗೇ || 7 ||
ಪುನರಸದಂಗೇ ಪುಣ್ಯತರಂಗೇ ಜಯ ಜಯ ಜಾಹ್ನವಿ ಕರುಣಾಪಾಂಗೇ |
ಇಂದ್ರಮುಕುಟಮಣಿರಾಜಿತಚರಣೇ ಸುಖದೇ ಶುಭದೇ ಭೃತ್ಯಶರಣ್ಯೇ || 8 ||
ರೋಗಂ ಶೋಕಂ ತಾಪಂ ಪಾಪಂ ಹರ ಮೇ ಭಗವತಿ ಕುಮತಿಕಲಾಪಮ್ |
ತ್ರಿಭುವನಸಾರೇ ವಸುಧಾಹಾರೇ ತ್ವಮಸಿ ಗತಿರ್ಮಮ ಖಲು ಸಂಸಾರೇ || 9 ||
ಅಲಕಾನಂದೇ ಪರಮಾನಂದೇ ಕುರು ಕರುಣಾಮಯಿ ಕಾತರವಂದ್ಯೇ |
ತವ ತಟನಿಕಟೇ ಯಸ್ಯ ನಿವಾಸಃ ಖಲು ವೈಕುಂಠೇ ತಸ್ಯ ನಿವಾಸಃ || 10 ||
ವರಮಿಹ ನೀರೇ ಕಮಠೋ ಮೀನಃ ಕಿಂ ವಾ ತೀರೇ ಶರಟಃ ಕ್ಷೀಣಃ |
ಅಥವಾಶ್ವಪಚೋ ಮಲಿನೋ ದೀನಸ್ತವ ನ ಹಿ ದೂರೇ ನೃಪತಿಕುಲೀನಃ || 11 ||
ಭೋ ಭುವನೇಶ್ವರಿ ಪುಣ್ಯೇ ಧನ್ಯೇ ದೇವಿ ದ್ರವಮಯಿ ಮುನಿವರಕನ್ಯೇ |
ಗಂಗಾಸ್ತವಮಿಮಮಮಲಂ ನಿತ್ಯಂ ಪಠತಿ ನರೋ ಯಃ ಸ ಜಯತಿ ಸತ್ಯಮ್ || 12 ||
ಯೇಷಾಂ ಹೃದಯೇ ಗಂಗಾ ಭಕ್ತಿಸ್ತೇಷಾಂ ಭವತಿ ಸದಾ ಸುಖಮುಕ್ತಿಃ |
ಮಧುರಾಕಂತಾ ಪಂಝಟಿಕಾಭಿಃ ಪರಮಾನಂದಕಲಿತಲಲಿತಾಭಿಃ || 13 ||
ಗಂಗಾಸ್ತೋತ್ರಮಿದಂ ಭವಸಾರಂ ವಾಂಛಿತಫಲದಂ ವಿಮಲಂ ಸಾರಮ್ |b
ಶಂಕರಸೇವಕ ಶಂಕರ ರಚಿತಂ vm ಪಠತಿ ಸುಖೀಃ ತವ ಇತಿ ಚ ಸಮಾಪ್ತಃ || 14 ||

ಶುಕ್ರವಾರ, ಮಾರ್ಚ್ 23, 2018

#ಮಧುರೈ_ನ_ಮೀನಾಕ್ಷಿ_ದೇವಸ್ಥಾನಕ್ಕಾಯಿತೇ_ಅಗ್ನಿ_ಸ್ಪರ್ಶ?!

#ಮಧುರೈ_ನ_ಮೀನಾಕ್ಷಿ_ದೇವಸ್ಥಾನಕ್ಕಾಯಿತೇ_ಅಗ್ನಿ_ಸ್ಪರ್ಶ?!
ಬಹುಷಃ ಕ್ರೈಸ್ತರಿಗೆ ಬಹಳ ಸುಲಭವಾಗಿ ದಕ್ಕಿಬಿಡುವಂತಹ ಸ್ವರ್ಗವೆಂದರೆ ಅದು ದಕ್ಷಿಣ ಭಾರತ! ಅದರಲ್ಲಿಯೂ, ಕೇರಳ ಮತ್ತು ತಮಿಳುನಾಡು! ತಲೆ ಮೇಲೆ ಎರಡು ತಂಬಿಗೆ ನೀರು ಸುರಿದು, “ನೀ ಇಪ್ಪ ಕ್ರಿಶ್ಚಿಯನ್! ಸ್ತೋತ್ರಮ್” ಎಂದರೆ ಅಲ್ಲಿಗೆ ಮುಗಿಯಿತು! ಆತ ಭಗವದ್ಗೀತೆಯನ್ನು ಬೀಸಿ ಒಗೆದು, ಬೈಬಲ್ ಹಿಡಿದು ನಿಂತಿರುತ್ತಾನೆ!ಹಿಂದುತ್ವವನ್ನು ಶಿಲುಬೆಗೇರಿಸಿ! ಹಾಗೆಯೇ, ಮತಾಂತರಕ್ಕಿಳಿಸಿದ ಕ್ರೈಸ್ತ ಪಾದ್ರಿಗಳು, ನಿನ್ನ ನೆರೆಹೊರೆಯನ್ನೂ ಕ್ರಿಸ್ತನ ಮಕ್ಕಳನ್ನಾಗಿಸು ಎಂದರೆ ಮುಗಿದೇ ಹೋಯಿತು! ಮತಾಂತರಗೊಂಡವನೊಬ್ಬ ಕ್ರೈಸ್ತ ಮತಕ್ಕೆ ಸಿಕ್ಕ ಬಿಟ್ಟಿ ಪ್ರಚಾರಕನಾಗಿ ಹೋಗುತ್ತಾನೆ!
ಕೇವಲ ಅನಕ್ಷರಸ್ಥರು ಮಾತ್ರವೆಂತಲ್ಲ! ತಮಿಳುನಾಡಿನ ಬಹುತೇಕ ಜನ “ಎಲ್ಲಾ ಧರ್ಮವೂ ಒಂದೇ” ಎಂದು ಒಪ್ಪಿಕೊಂಡು, ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗಿಬಿಡುವಷ್ಟು ಎಡುಕೇಟೆಡ್ ಮೂರ್ಖರೆಂಬುದು ಸರಿಯೇ! ಹಾಸ್ಯಾಸ್ಪದವೆಂದರೆ ಅದೇ! ಮತಾಂತರವಾದ ಹಿಂದೂಗಳು ಕ್ರಿಸ್ತನ ಅದೆಷ್ಟು ಮಟ್ಟದ ಅನುಯಾಯಿಯಾಗಿ ಬಿಡುತ್ತಾರೆಂದರೆ, ನೀವು ಒಬ್ಬ ಕ್ಯಾಥೋಲಿಕ್ ನ ಹತ್ತಿರ ಕ್ರೈಸ್ತ ಮತವನ್ನು ಬೈದರೆ ಆತ ಸುಮ್ಮನಾಗಬಹದು, ಆದರೆ ಮತಾಂತರಗೊಂಡವರಲ್ಲ!! ಅಷ್ಟರ ಮಟ್ಟಿಗೆ ತಮಿಳು ನಾಡಿನ ಕಂಡೂ ಕಾಣದ ನೆರಳೊಂದು ಹಿಂದುತ್ವವನ್ನಾವರಿಸುತ್ತ ಬರುತ್ತದೆ!
ಇದನ್ನೆಲ್ಲ ಯಾಕೆ ಹೇಳುತ್ತಿದ್ದೀನಿ ಗೊತ್ತಾ!? ಇವತ್ತು ಅದೇ ಮತಾಂತರ ಹೆಚ್ಚಿದ ಪರಿಣಾಮ, ಅದೇ ಮತಾಂತರಗೊಂಡ ಕ್ರೈಸ್ತರನ್ನು
ಇಟ್ಟುಕೊಂಡ ಕ್ರೈಸ್ತ ಪಾದ್ರಿಗಳು ನಡೆಸುತ್ತಿರುವ ಅನಾಹುತಗಳು ಒಂದೆರಡಲ್ಲ! ಹಿಂದೂಗಳ ಜಾಗವನ್ನೂ ಸಲೀಸಾಗಿ ತಮ್ಮದೆಂದು ಹೇಳಿ ವಶಪಡಿಸಿಕೊಳ್ಳುವಷ್ಟರ ಮಟ್ಟಿಗೆ ಅಲ್ಲಿನ ಕ್ರೈಸ್ತ ಪಾದ್ರಿಗಳು ಮುಂದುವರೆದಿದ್ದಾರೆಂದರೆ ತಮಾಷೆಯ ವಿಷಯವಲ್ಲ! ಇವತ್ತು ಹಿಂದೂವಿನ ಮನೆಗಳಲ್ಲಿ ಕ್ರಿಸ್ತನ ಪಟ ಹಾಕುವ ಪಾದ್ರಿಗಳು, ಮುಂದೊಂದು ದಿನ ದೇವಸ್ಥಾನಗಳಲ್ಲಿರುವ ಹಿಂದೂ ದೇವ ದೇವತೆಗಳ ಮೂರ್ತಿಯನ್ನು ಕಿತ್ತು, ಕ್ರಿಸ್ತನ ಮೂರ್ತಿಯನ್ನೋ, ಮೇರಿಯ ಮೂರ್ತಿಯನ್ನೋ ತಂದಿಡೋಲ್ಲವೆಂಬುದನ್ನು ನಂಬುವುದಾದರೂ ಹೇಗೆ?!
ದುರಾದೃಷ್ಟ ಅದೇ! ತಮಿಳುನಾಡಿನ ಸುಪ್ರಸಿದ್ದ ದೇಗುಲಗಳನ್ನಾಕ್ರಮಿಸಿದ ಕ್ರೈಸ್ತರು!
ಮೊನ್ನೆ ಮೊನ್ನೆಯಷ್ಟೇ ತಮಿಳು ನಾಡಿನ ಸುಪ್ರಸಿದ್ಧ ಹಿಂದೂ ದೇವಾಲಯಗಳಾದ ಕಲಯರ್ ಕೊಯಿಲ್ ಮತ್ತು ಶಿವಗಂಗಾಯ್ ದೇವಸ್ಥಾನವನ್ನು ಆಕ್ರಮಿಸಿದ ಕ್ರೈಸ್ತ ಪಾದ್ರಿಗಳು ಮತ್ತು ಅನುಯಾಯಿಗಳು, ಈ ದೇವಾಲಯದ ಆವರಣ ಕ್ರೈಸ್ತರಿಗೆ ಸೇರಿದ್ದ ಎಂಬುದಾಗಿ ಘೋಷಿಸಿದ್ದಾರೆ!!
ಪ್ರಾತಃ ಕಾಲದಲ್ಲಿ ದೇವಸ್ಥಾನಕ್ಕೆ ಬಂದಿದ್ದ ಪ್ರದೇಶದ ನಿವಾಸಿಗಳು ದೇವಸ್ಥಾನದ ಆವರಣದಲ್ಲಿ ಜೀಸಸ್ ಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಕ್ರಿಶ್ಚಿಯನ್ ಗುಂಪುಗಳನ್ನು ತಡೆಯಲು ಹೋದಾಗ, ದೇವಸ್ಥಾನದೊಳಗೆ ಹಿಂದುಗಳಿಗೆ ಪ್ರವೇಶವಿಲ್ಲ ಎಂಬುದಾಗಿ ತಡೆಯೊಡ್ಡಿ ನಿಂತಿದ್ದಾರೆ!
ಹಿಂದೂಗಳಿಗೇ ಹಿಂದೂ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲದ ಪರಿಸ್ಥಿತಿ ಉದ್ಭವವಾದಾಗ, ಪೋಲಿಸರಿಗೆ ಮತ್ತು ಹಿಂದೂ ಧರ್ಮದ ರಕ್ಷಕ ಸಂಘಟನೆಯಾಗಿರುವ ” ಹಿಂದೂ ಮಕ್ಕಳ್ ಕಟ್ಚಿ” ಗೆ ವಿಷಯ ತಿಳಿಸಿದ್ದಾರೆ! ತಕ್ಷಣವೇ ದೇವಾಲಯಕ್ಕೆ ಆಗಮಿಸಿದ ಹಿಂದೂ ಮಕ್ಕಳ್ ಸಂಘಟನೆಯ ಕಾರ್ಯಕರ್ತರು, ಕ್ರೈಸ್ತ ಪಾದ್ರಿಗಳನ್ನು ತರಾಟೆಗೆ ತೆಗೆದುಕೊಂಡು, ದೇವಸ್ಥಾನದ ಆವರಣ ಬಿಟ್ಟು ನಡೆಯುವಂತೆ ಆಗ್ರಹಿಸಿದ್ದಾರೆ!
ಇಷ್ಟಕ್ಕೆ ಮುಗಿಯಲಿಲ್ಲ! ಯಾವಾಗ ಎರಡೂ ಗುಂಪುಗಳ ಮಧ್ಯೆ ಘರ್ಷಣೆ ಆರಂಭವಾಯಿತೋ, ದೇವಸ್ಥಾನವನ್ನು ಬಿಟ್ಟುಕೊಡದಿದ್ದರೆ ಸಂಘಟನರಯ ಮೇಲೆ ಹತ್ಯೆಗೆ ಪ್ರಯತ್ನ ಮಾಡಿದರೆಂಬ ಮೊಕದ್ದಮೆಯನ್ನು ಹೂಡುತ್ತೇವೆಂದು ಬೆದರಿಕೆ ಒಡ್ಡಿ ಪೋಲಿಸರನ್ನು ಸ್ಥಳಕ್ಕೆ ಕರೆಸಿದ್ದಾರೆ! ಪೋಲಿಸರು, ಕ್ರೈಸ್ತರಿಗೆ ಎಚ್ಚರಿಕೆ ನೀಡುವುದನ್ನು ಬಿಟ್ಟು, ಹಿಂದೂ ಸಂಘಟನೆಯ ೧೧ ಕಾರ್ಯಕರ್ತರನ್ನು ತಕ್ಷಣವೇ ಬಂಧಿಸಿ, ಮೊಕದ್ದಮೆ ದಾಖಲಿಸಿದ್ದಾರೆ! ಪೋಲಿಸರು ಹಿಂದೂ ಕಾರ್ಯಕರ್ತರನ್ನು ಥಳಿಸಿದ್ದಲ್ಲದೆ, ಯಾರೊಂದಿಗೂ ಮಾತನಾಡಲೂ ಅವಕಾಶ ಕೊಡುತ್ತಿಲ್ಲ ವೆಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ!
ವ್ಹಾ!! ಎಂತಹ ನ್ಯಾಯಾಂಗ ವ್ಯವಸ್ಥೆ! ದೇವಸ್ಥಾನವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಹೋದ ಕ್ರೈಸ್ತ ಪಾದ್ರಿಯರಿಗೆ ಯಾವ ತಡೆಯೂ ಇಲ್ಲ! ಬದಲಾಗಿ, ತಮ್ಮ ಧಾರ್ಮಿಕ ಹಕ್ಕುಗಳಿಗೆ ಹೋರಾಡಿದವರ ಮೇಲೆ ಸಾಲು ಸಾಲು ಮೊಕದ್ದಮೆಗಳು! ಹಿಂದೂ ಮಕ್ಕಳ್ ಸಂಘಟನೆಯವರು ಹೇಳುವ ಪ್ರಕಾರ, ಕ್ರೈಸ್ತರು ಒಂದೇ ದಿನ ಎರಡೆರಡು ದೇವಸ್ಥಾನಗಳಿಗೆ ನುಗ್ಗಿ ದೇವಸ್ಥಾನದ ಜಾಗ ನಮ್ಮದೆಂದು ಆಕ್ರಮಿಸಲು ನೋಡಿದ್ದಾರೆಂದರೆ, ಇದರ ಹಿಂದೆ ನಿಶ್ಚಿತವಾಗಿ ಮಧುರೈನ ದೇವಸ್ಥಾನಗಳನ್ನು ವಶ ಪಡೆಸಿಕೊಳ್ಳುವ ಹುನ್ನಾರವಡಗಿದೆ!!
ಇವೆಲ್ಲವನ್ನೂ ಬಿಡಿ! ಇದಕ್ಕಿಂತ ಆಘಾತಕರವೆಂದರೆ, ಯಾವ ಮಾಧ್ಯಮಗಳೂ, ಯಾವ ಪತ್ರಿಕೆಯೂ ಕ್ರೈಸ್ತ ಪಾದ್ರಿಗಳ ಈ ಕುತಂತ್ರದ ಬಗ್ಗೆ ತುಟಿಪಿಟಿಕ್ ಎಂದಿಲ್ಲ! ಪ್ರಕರಣದ ಬಗ್ಗೆ ಸುದ್ದಿ ಮಾಡಿಲ್ಲ! ಅದಾವುದೋ ಹಿಂದೂವೊಬ್ಬನೇನಾದರೂ, ಸುಮ್ಮನೇ ಕೇಸರಿ ಧ್ವಜ ಹಿಡಿದು ಚರ್ಚಿನ ಮುಂದೆ ಕುಳಿತಾಕ್ಷಣ ‘ಕೋಮುವಾದ’_ ಕೇಸರೀ ಧ್ವಜ ಹಿಡಿದು ಬೆದರಿಕೆ ಎಂದೆಲ್ಲ ಕಥೆ ಕಟ್ಟಿ, ಲೈವ್ ಆಗಿ ತೋರಿಸುವ ಮಾಧ್ಯಮಗಳು ಇವ್ಯಾವುಯದರ ಬಗ್ಗೆಯೂ ಚರ್ಚಿಸಿಯೇಬ ಇಲ್ಲ ಎಂಬುದೊಂದಿದೆಯಲ್ಲವಾ?! ಮಾಧ್ಯಮಗಳೂ ಸಹ ತಮ್ಮನ್ನು ಜಾತ್ಯಾತೀತತೆ ಎಂಬ ಸೋಗಲಾಡಿ ತುಷ್ಟೀಕರಣದ ಸಿದ್ಧಾಂತಕ್ಕೆ ಮಾರಿಕೊಂಡಿವೆಯೆಂಬರ್ಥ!! ಮಧುರೈನ ನಿವಾಸಿಗಳ ಆರೋಪವದೇ! ಈ ಎರಡೂ ದೇವಸ್ಥಾನಗಳನ್ನು ವಶಪಡಿಸಿಕೊಂಡು, ತದನಂತರ ಚರ್ಚುಗಳನ್ನಾಗಿ ಪರಿವರ್ತಿಸುವ ಹುನ್ನಾರವಡಗಿದೆ! ಬಡಜನರಿಗೆ ದುಡ್ಡನ್ನು ನೀಡಿ ಆಮಿಷವನ್ನೊಡ್ಡುವ ಮೂಲಕ ಮತಾಂತರ ಮಾಡಲಾಗುತ್ತಿದೆ! ಬಲಪ್ರಯೋಗದಿಂದಲೂ ಸಹ ಕೆಲವು ಕಡೆ ಮತಾಂತರಕ್ಕೊಳಪಡಿಸುತ್ತಿದ್ದಾರೆ! ಆದರೂ ಸಹ ಯಾವ ನ್ಯಾಯಾಂಗ ವ್ಯವಸ್ಥೆಯೂ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಿಲ್ಲ! ದಿನ ಬೆಳಗಾದರೆ ಇಂತಹುದೇ ಘಟನೆಗಳು ನಡೆಯುತ್ತಿರುತ್ತವೆ! ಹೀಗೇ ಆದರೆ, ಮುಂದೊಂದು ದಿನ ,ಇಡೀ ಮಧುರೈ ನ
ದೇವಾಲಯಗಳು ಚರ್ಚುಗಳಾಗಿ ಪೊರಿವರ್ತನೆ ಹೊಂದುವ ಎಲ್ಲಾ ಲಕ್ಷಣಗಳಿವೆ!!
ಆದರೂ, ಸಹ ಯಾವೊಬ್ಬ ಪೋಲಿಸನೂ ಮಾತನಾಡುವುದಿಲ್ಲ! ಯಾವ ಮಾಧ್ಯಮವೂ ಹ್ಯಾಷ್ ಟ್ಯಾಗ್ ಹಾಕಿ ನ್ಯಾಯ ಕೇಳುವುದಿಲ್ಲ! ಯಾವೊಬ್ಬ ಸ್ವಾಭಿಮಾನಿ ತಮಿಳನೂ ಸಹ, ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ! ಇನ್ನೊಂದು ಅಚ್ಚರಿಯ ವಿಷಯವೇನೆಂದರೆ, ಈ ಎರಡು ದೇವಾಲಯಗಳನ್ನು ವಶಪಡಿಸಿಕೊಳ್ಳುವ ಎರಡು ದಿನಗಳ ಮುಂಚೆ, ಮಧುರೈನ ಸುಪ್ರಸಿದ್ಧ ಮೀನಾಕ್ಷಿ ದೇವಾಲಯಕ್ಕೆ ಅಗ್ನಿಸ್ಪರ್ಶವಾಗಿದೆ! ಅಗ್ನಿಸ್ಪರ್ಶದಿಂದ ದೇವಾಲಯಕ್ಕೆ ಸಾಕಷ್ಟು ಹಾನಿಯಾಗಿದ್ದು, ಪೂರ್ವ ದ್ವಾರವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ! ಮಧುರೈನ ೧೦೦೦ ಕಂಬಗಳಿರುವ ಆಲಯ ಕ್ಕೂ ಕೂಡ ಸಾಕಷ್ಟು ಹಾನಿಯಾಗಿದ್ದು, ಭಕ್ತಾದಿಗಳಿಗೆ ಪ್ರವೇಶವನ್ನು ತಡೆಹಿಡಿಯಲಾಗಿದೆ! ಮಧುರೈ ದೇವಸ್ಥಾನವೊಂದು ಅದೆಷ್ಟೋ ಸಾವಿರ ವರ್ಷಗಳಿಂದ ನೆಲೆ ನಿಂತಿದೆ! ಚೋಳರ ಕಾಲದಲ್ಲಿ ಕಟ್ಟಿಸಿದ್ದ ದೇವಸ್ಥಾನದಲ್ಲಿ ಪ್ರಾಚೀನ ಶಾಸನಗಳಿದ್ದು, ಅದಕ್ಕೂ ಕೂಡ ಸಾಕಷ್ಟು ಹಾನಿಗಳಾಗಿದೆ!
ಮಧುರೈ ಮೀನಾಕ್ಷಿ ದೇವಾಲಯದಲ್ಲಿ ಅಗ್ನಿ ಕಾಣಿಸಿಕೊಂಡಿದ್ದು ಫೆಬ್ರುವರಿ ೩ ರಂದು! ಅಷ್ಟಾದರೂ ಕೂಡ, ಅಗ್ನಿಯನ್ನು ನಂದಿಸಲು ಯಾವುದೇ ಕ್ರಮವನ್ನೂ ತಕ್ಷಣಕ್ಕೆ ಸರಕಾರ ತೆಗೆದುಕೊಂಡಿಲ್ಲ! ಅದಲ್ಲದೇ, ಸರಕಾರಿ ಅಧಿಕಾರಿಗಳು ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ! ಇವತ್ತಿನವರೆಗೂ, ಅಗ್ನಿಸ್ಪರ್ಶಕ್ಕೆ ಕಾರಣವೇನು ಎಂದು ಪೋಲಿಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ! ಅದರಲ್ಲೂ, ಪ್ರಕರಣದ ಬಗ್ಗೆ ಯಾವ ಮಾಹಿತಿಯನ್ನೂ ನೀಡದೇ ಬಾಯಿಗೆ ಬೀಗ ಜಡಿದು ಕೂತಿರುವ ಪೋಲಿಸರ ಮೌನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ! ಯಾವುದೇ ಎಮ್ ಎಲ್ ಎ ಆಗಲಿ, ರಾಜಕಾರಣಿಗಳಾಗಲಿ, ಮುಖ್ಯಮಂತ್ರಿಯಾಗಲಿ, ಸ್ಥಳಕ್ಕಾಗಮಿಸುವುದು ಹೋಗಲಿ! ಮಧುರೈ ಮೀನಾಕ್ಷಿ ದೇವಸ್ಥಾನದ ಅಗ್ನಿಸ್ಪರ್ಶದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ!
ದೇವಸ್ಥಾನದ ಆವರಣದಲ್ಲಿರುವ ಶಾಸನಗಳು ಅಗ್ನಿಸ್ಪರ್ಶಕ್ಕೊಳಗಾಗಿ ಹಾನಿಗೀಡಾಗಿವೆ! ಚೋಳರ ಕಾಲದಲ್ಲಿದ್ದ ಶಿಲಾಶಾಸನಗಳೂ ಕೂಡ ಅಗ್ನಿಗಾಹುತಿಯಾಗಿದೆ! ಜೊತೆ ಜೊತೆಗೆ, ಚೋಳರ ಕಾಲದ ಕಲಾಕೃತಿಗಳು ಸಂಪೂರ್ಣ ದಹನವಾಗಿದೆ! ಅಷ್ಟಾದರೂ ಸಹ ತಮಿಳು ನಾಡಿನ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ!! ಅದೇ, ಯಾವುದೇ ಚರ್ಚುಗಳ ಮೇಲೆ ಏನಾದರೂ ಹಲ್ಲೆಯಾಗಿ ಹೋದರೆ, ತಕ್ಷಣವೇ ಸ್ಥಳಕ್ಕಾಗಮಿಸಿ ಪರಿಹಾರವನ್ನೂ ನೀಡುವ ಸರಕಾರ, ಮಧುರೈನ ದೇವಸ್ಥಾನದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವುದು ನಿಜಕ್ಕೂ ಅಚ್ಚರಿಯ ಸಂಗತಿ!
ಎರಡು ಮೂರು ದಿನಗಳೊಳಗೆ ನಡೆದ ಈ ಅನಾಹುತಗಳಿಂದ ಮಧುರೈನ ಹಿಂದೂಗಳು ಆತಂಕಕ್ಕೀಡಾಗಿದ್ದಾರೆ! ಇನ್ನು ಯಾವ ದೇವಸ್ಥಾನವನ್ನು
ಅಗ್ನಿಸ್ಪರ್ಶಕ್ಕೀಡು ಮಾಡುತ್ತಾರೋ ಇನ್ನೇನು ಅನಾಹುತ ಸಂಭವಿಸುತ್ತದೆಯೋ ಎಂದು ಕ್ರೈಸ್ತ ಮಿಷನರಿಗಳ ಬಗ್ಗೆ ಹಗಲು ರಾತ್ರಿ ಯೋಚಿಸುವಂತಾದರೂ ಸಹ… ಧ್ವನಿ ಎತ್ತುತ್ತಿರುವುದು ಹಿಂದು ಮಕ್ಕಳ್ ಸಂಘಟನೆಯ ಕಾರ್ಯಕರ್ತರೇ ವಿನಃ ಬೇರೆಯವರಲ್ಲ! ಅದೆಷ್ಟೋ ವರ್ಷಗಳಿಂದಲೂ ಸಹ ವ್ಯಾಟಿಕನ್ ಸಿಟಿಯ ಕೃಪಾದೃಷ್ಟಿಯಿಂದ ಹಲವಾರು ಏಜೆನ್ಸಿಗಳು ಭಾರತವನ್ನು ಮತಾಂತರಿಸಲು ಮುನ್ನಡಿಯಿಟ್ಟಿವೆ! ವಿದೇಶಗಳಿಂದ ಹರಿದು ಬರುವ ಹಣದಿಂದ ಭಾರತವನ್ನಾಳಲು ಪ್ರಾರಂಭಿಸಿರುವ ಕ್ರೈಸ್ತ ಪಾದ್ರಿಗಳ ಬಗ್ಗೆ ಯಾವ ರಾಜಕಾರಣಿಯೂ ಧ್ವನಿ ಎತ್ತುತ್ತಿಲ್ಲ! ಯಾವ ವ್ಯವಸ್ಥೆಯೂ ಪ್ರತಿಭಟಿಸುತ್ತಿಲ್ಲ! ಅದೇ, ದೇವಸ್ಥಾನದ ಅರ್ಚಕರು ಚರ್ಚುಗಳ ಮುಂದೆ ಘಂಟೆ ಜಾಗಟೆ ಬಾರಿಸಿದ್ದರೆ ಅದೇ ದೊಡ್ಡ ಸುದ್ದಿಯನ್ನಾಗಿ ಬಿತ್ತರಿಸುತ್ತಿದ್ದ ಮಾಧ್ಯಮಕ್ಕೆ ಇವತ್ತು ಏನಾಗಿದೆ!? ಇದ್ಯಾವುದರ ಬಗ್ಗೆಯೂ ತುಟಿಪಿಟಿಕ್ ಎನ್ನದ ಬೇಜವಾಬ್ದಾರಿಗಳಿಗೆ ಏನೆನ್ನಬೇಕೋ ಗೊತ್ತಿಲ್ಲ..!
ಯಾರನ್ನು ಹೊಣೆಗಾರರನ್ನಾಗಿ ಮಾಡಬಹುದಾಗಿದೆ?!
ಮತ್ಯಾರನ್ನೂ ಅಲ್ಲ! ತಮ್ಮ ಧರ್ಮದ ಅಳವನ್ನರಿಯದ ತಮಿಳರಿಂದಲೇ! ನೀವು ಬೇಕಾದರೆ ಗಮನಿಸಿ! ಕ್ರೈಸ್ತ ಮಿಷನರಿಗಳು ತಮಿಳುನಾಡಿನಲ್ಲಿ ಮತಾಂತರ ಮಾಡಿದಷ್ಟು ಬೇರೆ ಯಾವ ರಾಜ್ಯದಲ್ಲಿಯೂ ಮತಾಂತರಕ್ಕಿಳಿದಿಲ್ಲ! ಅದೇ ರೀತಿ, ಬೇರೆ ಯಾವ ರಾಜ್ಯದವರೂ ಕೂಡ, ತಮಿಳರ ಹಾಗೆ ಎಲ್ಲಾ ಧರ್ಮವೂ ಒಂದೇ ಎನ್ನುವುದಿಲ್ಲ! ಇದು, ಹಿಂದುತ್ವದ ದುರಾದೃಷ್ಟವೋ ಅಥವಾ, ಇನ್ನೇನೋ?! ಪ್ರಶ್ನೆಯೇಳುತ್ತದೆ!
ಇನ್ನೂ ತಮಿಳರು ಎಚ್ಚರಾಗದೇ ಹೋದರೆ, ಇಡೀ ತಮಿಳುನಾಡಿನಲ್ಲಿ ಒಂದೇ ಒಂದು ದೇವಸ್ಥಾನಗಳು ಉಳಿಯುವುದೂ ಅನುಮಾನವೇ
ಆಗಿಹೋಗುತ್ತದೆ!
ಮಾಹಿತಿ:– ನಿಹಾರಿಕಾ ಶರ್ಮಾ

ಬದರೀ ಕ್ಷೇತ್ರ ಮಹಾತ್ಮೆ-

ಬದರೀ ಕ್ಷೇತ್ರ ಮಹಾತ್ಮೆ-
ಬದರಿಯು ಭರತಖಂಡದ ಸರ್ವಶ್ರೇಷ್ಠ ಪುಣ್ಯಕ್ಷೇತ್ರ. ಇದರ ವರ್ಣನೆಯು ಮಹಾಭಾರತ, ಹರಿವಂಶ, ಭಾಗವತ ಮೊದಲಾದ ಇತಿಹಾಸ ಪುರಾಣಗಳಲ್ಲಿ ವಿಫುಲವಾಗಿ ಬಂದಿದೆ. ಭರತಖಂಡದ ಆಧ್ಯಾತ್ಮಿಕ ರಾಜಧಾನಿ ಎಂಬುದಾಗಿ ಭಾಗವತವು ವರ್ಣಿಸಿದೆ. ಆದ್ದರಿಂದಲೇ ಬದರಿ ಯಾತ್ರೆಗೆ ಭಾರತದ ಧಾರ್ಮಿಕ ಜನತೆಯಲ್ಲಿ ಅತ್ಯುನ್ನತ ಸ್ಥಾನ ಲಭಿಸಿದೆ.
ಬದರಿಯು ಅತ್ಯುನ್ನತ ಕ್ಷೇತ್ರವಾದುದರಿಂದಲೇ ಇದರ ಸ್ವಾಮಿಯಾದ ನಾರಾಯಣನೇ ಸರ್ವೋತ್ತಮ ದೇವತೆಯಾಗಿರುವನು ಎಂಬುದು ಸಿದ್ಧವಾಗುವುದು. ಇಲ್ಲಿ ಹರಿಯುವ ಗಂಗಾ(ಅಲಕಾನಂದಾ) ನದಿಯು ಜಗತ್ತಿನ ಸರ್ವಶ್ರೇಷ್ಠ ನದಿಯಾಗಿದೆ. ಇದು ಮೂಲತಃ ನಾರಾಯಣನ ಪಾದೋದಕ ಎಂಬುದೂ ಗಮನಾರ್ಹ. ಪ್ರಾಚೀನ ಯುಗಗಳ ಧ್ರುವ, ಪೃಥು, ಪ್ರಿಯವ್ರತ ಮೊದಲಾದ ಸಕಲ ರಾಜರುಗಳೂ, ನಾರದಾದಿಮುನಿಗಳೂ, ಬ್ರಹ್ಮಾದಿದೇವತೆಗಳೂ ಬಹಳವಾಗಿ ಸೇವಿಸಿದ ಕ್ಷೇತ್ರ ಎಂಬುದು ಇದರ ಅಸಾಧಾರಣ ವೈಶಿಷ್ಟ್ಯ.
ಧರ್ಮಪುತ್ರತ್ವೇನ ಅವತರಿಸಿದ ಶ್ರೀಮನ್ನಾರಾಯಣನು ನರನೊಂದಿಗೆ ಲೋಕಶಿಕ್ಷಣಕ್ಕಾಗಿ ತಪಸ್ಸು ಮಾಡಿದ ಸ್ಥಳ.
ಇಂದ್ರಪ್ರೇಷಿತರಾದ ಕಾಮಾದಿಗಳು ಪರಾಜಿತರಾದ ಸ್ಥಳ.
ಉರ್ವಶಿಯು ಶ್ರೀಮನ್ನಾರಾಯಣನಿಂದ ಜನ್ಮ ತಳೆದ ಸ್ಥಳ.
ಶ್ರೀಕೃಷ್ಣರೂಪದಿಂದ ಶ್ರೀಹರಿಯು ಘಂಟಾಕರ್ಣರಿಗೆ ಮೋಕ್ಷವಿತ್ತ ಸ್ಥಳ.
ಪಾಂಡವರು ಅವತರಿಸಿದ ಸ್ಥಳ.
ಪಾಂಡವರು ಬಾಲ್ಯವನ್ನು ಕಳೆದದ್ದಲ್ಲದೇ ತಮ್ಮ ತೀರ್ಥಯಾತ್ರೆಯ ಕಾಲದಲ್ಲೂ ಮಹಾಪ್ರಸ್ಥಾನದ ಸಮಯದಲ್ಲೂ ಸಂದರ್ಶಿಸಿದ ಸ್ಥಳ.
ಶ್ರೀಮದಾಚಾರ್ಯರು ತಮ್ಮ ಪ್ರಥಮ ಬದರೀ ಸಂದರ್ಶನ ಸಮಯದಲ್ಲಿ ಗೀತಾಭಾಷ್ಯವನ್ನು ಸಮರ್ಪಿಸಿದ್ದು,  ಪಾಠ ಹೇಳಿದ್ದು, ೪೮ ದಿನಗಳ ಕಾಲ ಕಾಷ್ಠಮೌನವ್ರತವನ್ನು, ಉಪವಾಸವನ್ನು ಆಚರಿಸಿದ್ದು, ಶಿಷ್ಯರಿಗೆ ಸಂದೇಶವಿತ್ತು ತೆರಳಿದ್ದು, ಶ್ರೀವೇದವ್ಯಾಸದೇವರನ್ನು ಸಂದರ್ಶಿಸಿ ಉತ್ತರಬದರಿಯಿಂದ ಮರಳುತ್ತಲೇ ಬ್ರಹ್ಮಸೂತ್ರಭಾಷ್ಯವನ್ನು ರಚಿಸಿದ್ದು, ಶ್ರೀಸತ್ಯತೀರ್ಥರು ಬ್ರಹ್ಮಸೂತ್ರಭಾಷ್ಯದ ಪ್ರಥಮ ಪ್ರತಿಯನ್ನು ಲೇಖನ ಮಾಡಿದ್ದು ಈ ಪವಿತ್ರ ಸ್ಥಳದಲ್ಲಿ ಎಂದು ಮಧ್ವವಿಜಯವು ವರ್ಣಿಸುವುದು.
ಬದರಿಯಲ್ಲಿ ಪರಸ್ಪರ  ಎದುರಿನಲ್ಲಿ ನಾರಾಯಣಪರ್ವತ ಮತ್ತು ನರಪರ್ವತಗಳು ಇವೆ. ಬದರಿನಾರಾಯಣನ ಗುಡಿ ಇರುವ ಪರ್ವತವೇ ನಾರಾಯಣ ಪರ್ವತ. ಎದುರಿನದು ನರಪರ್ವತ. ನಾರಾಯಣಪರ್ವತದ ಬುಡದಲ್ಲೇ ಅಲಕಾನಂದಾ ನದಿಯು ಭೋರ್ಗರೆಯುತ್ತಾ ಹರಿಯುತ್ತದೆ. ಅದರ ತೀರದಲ್ಲೇ ಶ್ರೀಮನ್ನಾರಾಯಣ ದೇವರ ಧ್ಯಾನಮಗ್ನ ಮೂರ್ತಿ ಇದೆ‌. ದೇವತಾಪರಿವಾರವೂ ಇದೆ.
ಅಲಕಾನಂದೆಯು ಇಲ್ಲಿ ಸ್ಪರ್ಶಿಸಲೂ ಅಸಾಧವೆನ್ನುವಷ್ಟು ತಂಪಾಗಿದೆ. ಅದರ ತೀರದಲ್ಲೇ ತಪ್ತಕುಂಡ ಇರುವುದು ವಿಶೇಷ. ಆಳ, ವೇಗ, ಶೀತದಿಂದಾಗಿ ಅಲಕಾನಂದೆಯ ಸ್ನಾನ ಇಲ್ಲಿ ಸಾಮಾನ್ಯರಿಗೆ ಎಂದೂ ಸಾಧ್ಯವಾಗುವಂತದ್ದಲ್ಲ.
ದೇವಾಲಯದ ಒಳಾಂಗಣವೇ ಅನಂತಮಠ ಎಂದು ಪ್ರಸಿದ್ಧವಾದ ಸ್ಥಳವು. ಶ್ರೀಮದಾಚಾರ್ಯರು ಇಲಿಯೇ ತಂಗಿದ್ದು ಗೀತಾಭಾಷ್ಯವನ್ನು ರಚಿಸಿದರು.
ಬದರಿಯಿಂದ ಸುಮಾರು ಮೂರು ಕಿಮೀ ದೂರದಲ್ಲಿ ಸರಸ್ವತೀ ಮತ್ತು ಅಲಕಾನಂದಾ ನದಿಗಳ ಸಂಗಮಸ್ಥಳವಾದ ಕೇಶವಪ್ರಯಾಗ ಎಂಬ ಅಪೂರ್ವ ಸ್ಥಳ ಇದೆ. ಅದರ ಬಳಿಯಲ್ಲೇ ಬೆಟ್ಟದಲ್ಲಿ ಗಣೇಶ ಗುಹಾ ಎಂಬ  ಸ್ಥಳವಿದ್ದು, ಅದು ಮಹಾಭಾರತವನ್ನು ಗಣೇಶನು ಬರೆದ ಸ್ಥಳ ಎನ್ನುವರು. ಇಲ್ಲಿಂದ ಕೆಲವು ಅಡಿಗಳಷ್ಟು ಎತ್ತರದಲ್ಲಿ ವ್ಯಾಸಗುಹೆ ಇದೆ. ಇದನ್ನು ವ್ಯಾಸಾಶ್ರಮ ಎನ್ನುವರು. ಅಲ್ಲಿಂದ ಮೇಲೆ ಸುಮಾರು ಹತ್ತು ಕಿಮೀಗಳಷ್ಟು ದೂರದಲ್ಲಿ ಮುಚುಕುಂದ ಮಲಗಿದ್ದ, ಕಾಲಯವನ ಭಸ್ಮವಾದ, ಮುಚುಕುಂದನಿಗೆ ಶ್ರೀಕೃಷ್ಣನ ದರ್ಶನವಾದ ಮುಚುಕುಂದಗುಹೆ ಇದೆ.
ಕೇಶವಪ್ರಯಾಗದಲ್ಲಿ ಅಲಕಾನಂದೆಯನ್ನು ಸೇರುವ ಸರಸ್ವತಿಯು ಒಂದು ಕಿಮೀ ಮೊದಲು ಪರ್ವತದಿಂದ ನೂರಾರು ಅಡಿಗಳಷ್ಟು ಕೆಳಕ್ಕೆ ಧುಮುಕುವ ರುದ್ರರಮಣೀಯ ದೃಶ್ಯ ಕಾಣಬಹುದು. ಅದು ಧುಮುಕುವ ಸ್ಥಳದಲ್ಲೇ ಭೀಮಸೇನ ದೇವರು ಮಹಾಪ್ರಸ್ಥಾನಕಾಲದಲ್ಲಿ ಒಂದು ಪರ್ವತಶಿಖರವನ್ನು ಮುರಿದಿಟ್ಟು ಸೇತುವೆಯಾಗಿ ನಿರ್ಮಿಸಿದ ಭೀಮಸೇತು ಎಂಬ ಸೇತುವೆ ಇದೆ. ಜಗತ್ತಿನ ಯಾವ ಪ್ರಸಿದ್ಧ ಜಲಪಾತಕ್ಕೂ ಇಂತಹಾ ಏಕಶಿಲೆಯ ಸೇತುವೆ ಇಲ್ಲ. ಇದು ಭೀಮಸೇನ ದೇವರ ಅಗಾಧ ಬಲ ಮತ್ತು ಜ್ಞಾನಗಳಿಗೆ ಪ್ರತ್ಯಕ್ಷ ಸಾಕ್ಷಿ.
ಈ ಸರಸ್ವತೀ ನದಿಯ ತೀರದ ಸ್ಥಳವೇ ಭಾಗವತದಲ್ಲಿ ಉಲ್ಲೇಖಿಸಲ್ಪಟ್ಟಿರುವ ಶಮ್ಯಾಪ್ರಾಸ ಎಂಬ ಭಾಗವತ ರಚನೆಯ ಪುಣ್ಯಸ್ಥಳ.
ಬದರಿಗಿಂತ ೨೦ ಕಿಮೀ ಮುಂಚಿತವಾಗಿ ಪಾಂಡುಕೇಶ್ವರ ಎಂಬ ಸ್ಥಳವಿದೆ. ಅಲಕಾನಂದಾ ತೀರದ ಈ ಸ್ಥಳದಲ್ಲಿಯೇ, ಪಾಂಡುರಾಜನು ತನಗೆ ಕಿಂದಮೃಷಿಗಳಿಂದ ಶಾಪ ಬಂದ ನಂತರದ ಕಾಲದಲ್ಲಿ ವಾಸಿಸಿದ್ದನು.
ಅಲಕಾನಂದಾ ಸ್ನಾನಘಟ್ಟದ ಬಳಿ ಬ್ರಹ್ಮಕಪಾಲ, ಗರುಡಶಿಲಾ, ನಾರದಶಿಲಾ ಮೊದಲಾದ ಸ್ಥಳಗಳಿವೆ. ಬ್ರಹ್ಮಕಪಾಲದಲ್ಲಿ ಸಮರ್ಪಿಸಲ್ಪಡುವ ಪಿಂಡದಿಂದ ಪಿತೃಗಳಿಗೆ ಸದ್ಗತಿಯು ಪ್ರಾಪ್ತವಾಗುವುದೆಂಬ ಕಾರಣದಿಂದಾಗಿ ಗಯಾಕ್ಷೇತ್ರದ ವಿಷ್ಣುಪಾದ ಶ್ರಾದ್ಧದಂತೆ ಇಲ್ಲಿಯ ಶ್ರಾದ್ಧಕ್ಕೂ ತುಂಬಾ ಮಹತ್ತ್ವವನ್ನು ಶಾಸ್ತ್ರಗಳು ವಿಧಿಸಿವೆ.
ಪ್ರಸಿದ್ಧವಾದ ಎರಡು ಬದರಿಗಳಲ್ಲಿ ವಿಶಾಲಬದರಿಯೇ ನಾರಾಯಣಾಶ್ರಮದ ಬದರಿಯಾಗಿದೆ. ಭಾಗವತಾದಿಗಳಲ್ಲಿ ಇದನ್ನು ವಿಶಾಲಬದರಿ ಎಂದೇ ಕರೆಯಲಾಗಿದೆ. ಶ್ರೀವೇದವ್ಯಾಸದೇವರು ಸಾಕ್ಷಾತ್ತಾಗಿ ನೆಲೆಸಿರುವ ಉತ್ತರಬದರೀ ಎಂಬ ಇನ್ನೂ ಶ್ರೇಷ್ಠವಾದ ಮತ್ತೊಂದು ಬದರಿಯ ಪ್ರಸ್ತಾಪ ಮಹಾಭಾರತದಲ್ಲೂ ಮಹಾಭಾರತತಾತ್ಪರ್ಯನಿರ್ಣಯದಲ್ಲೂ  ಬಂದಿದೆ. ನರಾಗಮ್ಯವಾದ ಆ ಬದರಿಯನ್ನು ಶ್ರೀಮದಾಚಾರ್ಯರು ಎರಡು ಬಾರಿ ಸಂದರ್ಶಿಸಿ ಅಲ್ಲಿ ಶ್ರೀಮನ್ನಾರಾಯಣ ದೇವರಿಂದಲೂ ಅದರ ಸಮೀಪದ ನಾರಾಯಣಾಶ್ರಮದಲ್ಲಿ ಶ್ರೀವೇದವ್ಯಾಸರಿಂದಲೂ ವಿಶೇಷವಾಗಿ ಅನುಗ್ರಹೀತರಾದ ವಿವರವು ಮಧ್ವವಿಜಯದಲ್ಲಿ ಇದೆ. ಅಲ್ಲದೇ ಅವರು ಅದ್ಯಾಪಿ ಈ ಬದರಿಯಲ್ಲಿ ನೆಲೆಸಿರುವರೆಂದೂ ದೇವಮಾನದ ನೂರು ವರ್ಷಗಳ ನಂತರ ತಮ್ಮ ಮೂಲರೂಪದೊಂದಿಗೆ ಐಕ್ಯ ಹೊಂದುವರೆಂದೂ ಶ್ರೀರಾಜರು ತಮ್ಮ ಸರಸಭಾರತೀವಿಲಾಸದಲ್ಲಿ ತಿಳಿಸಿರುವರು.
ಇಷ್ಟೆಲ್ಲಾ ಮಹತ್ತ್ವದ ಪುಣ್ಯಭೂಮಿಯಾದ ಈ ದೇವಭೂಮಿಯಲ್ಲಿ ಕಾಲಿಟ್ಟರೂ ಪುಣ್ಯವೆನ್ನುತ್ತಾರೆ ಬಲ್ಲವರು.

ಬಲವಂತವಾಗಿ #ಮುಸಲ್ಮಾನರಿಂದ ಹೀಗೆ ಬರೆಸಿಕೊಳ್ಳುತ್ತಿದೆ #ಚೀನಾ!!!

ಬಲವಂತವಾಗಿ #ಮುಸಲ್ಮಾನರಿಂದ ಹೀಗೆ ಬರೆಸಿಕೊಳ್ಳುತ್ತಿದೆ #ಚೀನಾ!!! 
ಏನಂತ ಗೊತ್ತಾ?
ಅದೆಂಥಾ ವಿಚಿತ್ರ ನೋಡಿ, ಭಾರತ ಬಿಟ್ಟು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಕಮ್ಯುನಿಸ್ಟರು ಇಸ್ಲಾಂ, ಕ್ರಿಶ್ಚಿಯನ್ ಮತವನ್ನ ಓಲೈಸಿಕೊಂಡು ಅವರ ಪರ ಬ್ಯಾಟಿಂಗ್ ಮಾಡೋದೇ ಇಲ್ಲ ಆದರೆ ಭಾರತದಲ್ಲಿ ಮಾತ್ರ ಕಮ್ಯುನಿಸ್ಟರದ್ದು ತದ್ವಿರುದ್ಧ ನೀತಿ.
ಮುಸಲ್ಮಾನರ, ಕ್ರಿಶ್ಚಿಯನ್ನರ ಹಕ್ಕುಗಳ ಠೇಕಾ ನಾವೇ ತೆಗೆದುಕೊಂಡಿದ್ದೀವಿ ಅನ್ನೋ ರೀತಿಯಲ್ಲಿ ಮುಸಲ್ಮಾನರ ಪರ ಇಲ್ಲಿನ ಕಮ್ಯುನಿಸ್ಟರು ರೋಡಿಗಿಳಿದುಬಿಡುತ್ತಾರೆ. ಆದರೆ ಅದೇ ಕಮ್ಯುನಿಸ್ಟರು ಚೀನಾದಲ್ಲಿರುವ ತಮ್ಮ ಕಮ್ಯುನಿಸ್ಟ್ ವಿಚಾರಧಾರೆಯದ್ದೇ ಸರ್ಕಾರ ಮುಸಲ್ಮಾನರ ವಿರುದ್ಧ ಕೈಗೊಳ್ಳುತ್ತಿರುವ ವಿಚಾರದ ಬಗ್ಗೆ ತುಟಿಕ್ ಪಿಟಿಕ್ ಅನ್ನೋದಿಲ್ಲ. ಬೇರೆಲ್ಲ ವಿಚಾರಗಳಿಗೆ ಚೀನಾದಿಂದ ಹಿಂಬಾಗಿಲಿನಿಂದ ಫಂಡ್ ಪಡೆಯುವ ನಕ್ಸಲರು ಚೀನಾದ ಮುಸಲ್ಮಾನರ ಬಗ್ಗೆ ಹಾಗು ಚೀನಾ ಸರ್ಕಾರದ ನಡೆಯನ್ನ ವಿರೋಧಿಸುವ ಗೋಜಿಗೆ ಹೋಗೋದೇ ಇಲ್ಲ.
ಅದಿರಲಿ ಬಡಿ ಅವರ ಆಷಾಢಭೂತಿತನ ನಮಗೆಲ್ಲಾ ತಿಳಿದದ್ದೆ. ಈಗ ಚೀನಾ ಮತ್ತೆ ಮುಸಲ್ಮಾನರ ವಿರುದ್ಧ ಏನು ಮಾಡಿದೆ ಅನ್ನೋದನ್ನ ನೋಡೋಣ ಬನ್ನಿ.
ಚೀನಾ ಸರ್ಕಾರ ಅಲ್ಲಿನ ಮುಸಲ್ಮಾನರನ್ನ ಒತ್ತಾಯಪೂರ್ವಕವಾಗಿ ಪತ್ರವೊಂದನ್ನ ಬರೆಸಿಕೊಳ್ಳುತ್ತಿದೆಯಂತೆ, ಆ ಪತ್ರದಲ್ಲಿ ಬರೆದ ವಿಷಯ ಇಸ್ಲಾಮಿಗೆ ವಿರುದ್ಧವಾದರೂ ಅಲ್ಲಿನ ಮುಸಲ್ಮಾನರು ಚೀನಾ ಸರ್ಕಾರಕ್ಕೆ ಹೆದರಿ ಅಂತಹದ್ದೊಂದು ಪತ್ರ ಬರೆದುಕೊಡುತ್ತಿದ್ದಾರಂತೆ.
ಏನು ಆ ಪತ್ರದಲ್ಲಿರುವ ವಿಷಯ ಗೊತ್ತೆ?
ಚೀನಾ ಸರ್ಕಾರ ಮುಸಲ್ಮಾನರಿಗೆ “ನಾವು ನಾಸ್ತಿಕರು ನಾವು ಯಾವ ದೇವರನ್ನೂ ನಂಬುವುದಿಲ್ಲ” ಎಂಬ ಪತ್ರ ಬರೆದು ಸಹಿ ಮಾಡಿಕೊಡಲು ಆದೇಶಿಸಿದೆಯಂತೆ. ಅಲ್ಲಿನ ಮುಸಲ್ಮಾನರೂ ಇದಕ್ಕೆ ಒಪ್ಪಿ ಹಾಗೇ ಬರೆದುಕೊಡುತ್ತಿದ್ದಾರೆಯಂತೆ.
ಅಷ್ಟಕ್ಕೂ ಇಂಥದ್ದೊಂದು ರೂಲ್ಸ್ ಚೀನಾ ತರಲು ಕಾರಣವೇನು?
ಚೀನಾದಿಂದ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ಚೀನಾ ಹೇಳಿ ಕೇಳಿ ಕಮ್ಯುನಿಸ್ಟ್ ದೇಶ, ಕಮ್ಯುನಿಸ್ಟರೆಂದರೆ ಅವರು ಒಂಥರಾ ನಾಸ್ತಿಕರಿದ್ದಂತೆ, ಅವರಿಗೆ ದೇವರು ಧರ್ಮ ಆಚರಣೆ ಇವುಗಳ ಬಗ್ಗೆ ನಂಬಿಕೆಯೇ ಇಲ್ಲ. ಅಂತಹ ರಾಷ್ಟ್ರದ ಸರ್ಕಾರ ಈಗ ಅಲ್ಲಿನ ಮುಸಲ್ಮಾನರನ್ನೂ ನಾಸ್ತಿಕತೆಯನ್ನೇ ನಂಬಬೇಕು ಅನ್ನೋ ರೀತಿಯಲ್ಲಿ ಅವರಿಂದ ಪತ್ರ ಬರೆಸಿಕೊಳ್ಳುತ್ತಿದ್ದಾರೆ. ಬರೀ ಪತ್ರ ಬರೆಸಿಕೊಳ್ಳುವುದಷ್ಟೇ ಅಲ್ಲದೆ ಆ ಶಪಥ ಪತ್ರದ ಮೇಲೆ ಮುಸಲ್ಮಾನರ ಸಹಿ‌ ಕೂಡ ಪಡೆಯಲಾಗುತ್ತಿದೆ.
ಏನಿದು ವಿಷ್ಯ?
ಕಮ್ಯುನಿಸ್ಟ್ ಪಕ್ಷದಲ್ಲಿರುವ ಮುಸ್ಲಿಂ ನಾಯಕರು ತಾವು ಯಾವ ಧಾರ್ಮಿಕತೆಯಲ್ಲೂ ನಂಬಿಕೆಯಿಲ್ಲ ಅಂತ ತಮ್ಮ ಪಕ್ಷಕ್ಕೆ ಇಂತಹದ್ದೊಂದು ಮುಚ್ಚಳಿಕೆ ಬರೆದುಕೊಡಲೇಬೇಕಾಗಿದೆ.
“ನಾನು ಮಾರ್ಕ್ಸ್‌ವಾದವನ್ನ ಮಾತ್ರ ಒಪ್ಪುತ್ತೇನೆ, ನನ್ನ ನಿಷ್ಟೆ ಕೇವಲ ಮಾರ್ಕವಾದಕ್ಕೆ ಮಾತ್ರ” ಎಂಬ ಪತ್ರವನ್ನ ಮುಸ್ಲಿಂ ನಾಯಕರೂ ಬರೆದುಕೊಡಲೇಬೇಕು ಎಂಬುದು ಕಮ್ಯುನಿಸ್ಟ್ ಪಕ್ಷದ ಒತ್ತಾಯವಾಗಿದೆ. ಇಂತಹದ್ದೊಂದು ಅಭಿಯಾನ ಚೀನಾದ ಮುಸ್ಲಿಂ ಬಾಹುಳ್ಯವಿರುವ ‘ಗಾನಸೂ’ ಪ್ರಾಂತ್ಯದ ‘ಲಿನಶಿಯಾ’ ಕ್ಷೇತ್ರದಲ್ಲಿ ನಡೆಸಲಾಗುತ್ತಿದೆ. ಪಕ್ಷದ ಅಧಿಕೃತ ವೆಬಸೈಟನಲ್ಲಿ ಇದರ ಬಗ್ಗೆ ಚೀನಾ ಕಮ್ಯುನಿಸ್ಟ್ ಪಕ್ಷ ಪ್ರಕಟ ಮಾಡಿದೆ.
ಚೀನಾ ಮುಸಲ್ಮಾನರನ್ನ ಹದ್ದುಬಸ್ತಿನಲ್ಲಿಡಲು ಇದಷ್ಟೇ ಅಲ್ಲ ಇನ್ನೂ ಹಲವು ಕಾನೂನುಗಳನ್ನ ಜಾರಿಗೆ ತಂದಿದೆ.
ಅವುಗಳ್ಯಾವುವು ಗೊತ್ತಾ?
1) ಪಶ್ಚಿಮ ಚೀನಾದಲ್ಲಿ ಅಲ್ಲಿನ ಸರ್ಕಾರ ಚಳಿಗಾಲದ ನೆಪವೊಡ್ಡಿ ಮುಸ್ಲಿಂ ಮಕ್ಕಳಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದನ್ನ ನಿಷೇಧಿಸಿಬಿಟ್ಟಿದೆ.
ಈ ಪ್ರತಿಬಂಧದ ಅಲ್ಲಿನ ಶಿಕ್ಷಣ ಸಚಿವಾಲಯ ಆನಲೈನ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಜಾರಿಗೆ ತಂದಿದೆ. ಈ ಪ್ರತಿಬಂಧದ ಪ್ರಕಾರ ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯ ತರಗತಿಯಲ್ಲಿ ಅಥವ ಯಾವುದೇ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳಲ್ಲಿ ಅವರವರ ಧಾರ್ಮಿಕ ಗ್ರಂಥಗಳನ್ನ ಓದುವುದನ್ನ ನಿಷೇಧ ಮಾಡಿದೆ ಚೀನಾ ಸರ್ಕಾರ.
2) ಚೀನಾ ಸರ್ಕಾರ ಕಳೆದ ತಿಂಗಳುಗಳ ಹಿಂದೆಯಷ್ಟೇ ಮಹತ್ವದ ಆದೇಶ ಹೊರಡಿಸಿತ್ತು. ಅಲ್ಲಿನ ಸ್ಥಳೀಯರು ಅಕ್ಕಪಕ್ಕದವರಿಗೆ ಮಸೀದಿಯ ಸ್ಪೀಕರ್‌ಗಳಿಂದ ತೊಂದರೆಯಾಗುತ್ತಿದೆ ಎಂದು ದೂರು ಕೊಟ್ಟಿದ್ದರಿಂದ ಚೀನಾ ಸರಕಾರ ಕ್ವಾ0ಗೈ ಪ್ರದೇಶದ 300 ಮಸೀದಿಗಳ ಮೇಲಿನ ಸ್ಪೀಕರ್‌ಗಳನ್ನು ತೆಗೆದುಹಾಕಿತ್ತು.
ಚೀನಾ ಸರ್ಕಾರ ಬರೀ ಬೋಂಗಾ ಅಷ್ಟೇ ನಿಷೇಧಿಸಿಲ್ಲ ಬುರ್ಕಾ ಮತ್ತು ಗಡ್ಡವನ್ನು ನಿಷೇಧಿಸಲಾಗಿದೆ. ಈಗ ಅದರ ಬೆನ್ನಲ್ಲೇ ಚೀನಾ ಸರ್ಕಾರ ಕುರಾನಿನ ಎಲ್ಲಾ ಪ್ರತಿ ಮತ್ತು ಪ್ರಾರ್ಥನೆಯ ಮ್ಯಾಟ್ ಅನ್ನು ಹಿಂತಿರುಗಿಸಿ ಅಥವಾ ಕಠಿಣ ಶಿಕ್ಷೆಯನ್ನು ಎದುರಿಸಿ ಎಂದು ಅಲ್ಲಿನ ಮುಸ್ಲಿಮರಿಗೆ ಆದೇಶಿಸಿದೆ.
3) ​ಕ್ಸಿನ್ಜಿಯಾಂಗ್ ವಾಯವ್ಯ ಭಾಗದಲ್ಲಿ ಮುಸ್ಲಿಮರ ವಿರುದ್ಧ ಚೀನೀಯ ಅಧಿಕಾರಿಗಳು ಮತ್ತೆ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದ್ದಾರೆ. ಪ್ರದೇಶದ ಮೂಲಗಳ ಪ್ರಕಾರ, ಜನಾಂಗೀಯ ಅಲ್ಪಸಂಖ್ಯಾತ ಮುಸ್ಲಿಮ್ ಕುಟುಂಬಗಳು ಕುರಾನ್ ಮತ್ತು ನಮಾಜ್ ಮಾಡುವ ಮ್ಯಾಟ್ ಸೇರಿದಂತೆ ಧಾರ್ಮಿಕ ವಸ್ತುಗಳನ್ನು ಕಡ್ಡಾಯವಾಗಿ ಹಿಂದಿರುಗಿಸುವಂತೆ ಮುಸ್ಲಿಂ ಕುಟುಂಬಗಳಿಗೆ ಮತ್ತು ಮಸೀದಿಗಳಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
4) ಚೀನಾದಲ್ಲಿ ನಿಷೇಧಿಸಿದಂತೆ ಸ್ವಿಟ್ಜರ್ಲೆಂಡ್‌‌ ನಲ್ಲಿಯೂ ಕೂಡಾ ಬುರ್ಕಾ ನಿಷೇಧಿಸಲಾಗಿದೆ.
5) ಚೀನಾ ಅಷ್ಟೇ ಅಲ್ಲ ಸ್ವಿಟ್ಜರ್ಲೆಂಡ್‌‌ ಕೂಡ ಈ ರೀತಿಯ ನಿರ್ಧಾರ ಕೈಗೊಂಡಿದೆ.
ಸ್ವಿಟ್ಜರ್ಲೆಂಡ್‌‌ ನ ಸಂಸತ್ತಿನಲ್ಲಿ ಚರ್ಚೆ ನಡೆದಾಗ ಒಬ್ಬ ಸಂಸದ ಎದ್ದು ನಿಂತು ಹೇಳ್ತಾನೆ.
“ನನ್ನ ದೇಶ ಸುರಕ್ಷಿತವಾಗಿರಬೇಕೆಂದರೆ ನನ್ನ ದೇಶದಲ್ಲಿ ಬುರ್ಕಾ ನಿಷೇಧವಾಗಬೇಕು. ಯಾಕೆಂದರೆ ಬುರ್ಕಾದ ಒಳಗಡೆ ಪ್ರತಿ ಸಂದರ್ಭದಲ್ಲಿಯೂ ಮಹಿಳೆಯೇ ಇರುತ್ತಾಳೆಂದು ಹೇಳಲಾಗುವುದಿಲ್ಲ. ಹಾಗಾಗಿ ನನ್ನ ದೇಶ ಸುರಕ್ಷಿತವಾಗಿರಬೇಕೆಂದರೆ ನನ್ನ ದೇಶದಲ್ಲಿ ಬುರ್ಕಾ ನಿಷೇಧವಾಗಬೇಕು”
ಒಟ್ಟಿನಲ್ಲಿ ಚೀನಾ ಸರ್ಕಾರ ತನ್ನ ಅಂತರಿಕ ಭದ್ರತಾ ದೃಷ್ಟಿಯಿಂದ ಕುರಾನಿನ ಎಲ್ಲಾ ಪ್ರತಿ ಮತ್ತು ಪ್ರಾರ್ಥನೆಯ ಮ್ಯಾಟ್ ಅನ್ನು ಹಿಂತಿರುಗಿಸಿ ಅಥವಾ ಕಠಿಣ ಶಿಕ್ಷೆಯನ್ನು ಎದುರಿಸಿ ಎಂದು ಅಲ್ಲಿನ ಮುಸ್ಲಿಮರಿಗೆ ಆದೇಶಿಸಿದೆ.
ಆದರೆ ಭಾರತ ದೇಶದಲ್ಲಿ ಮುಸಲ್ಮಾನರಿಗೆ ಎಲ್ಲ ಸೌಲಭ್ಯಗಳನ್ನ, ಧಾರ್ಮಿಕ ಸ್ವಾತಂತ್ರ್ಯವನ್ನ ಯಥೇಚ್ಚವಾಗಿ ನೀಡಿದರೂ ಭಾರತ ಅಸಹಿಷ್ಣು ರಾಷ್ಟ್ರ ಅಂತ ಬೊಬ್ಬೆಯಿಡುವುದರಲ್ಲಿ ಹಿಂದೆ ಬೀಳಲ್ಲ!!
ಮಾಹಿತಿ: ಯುವ ಭಾರತ

*ನಮಸ್ಕಾರ ಎಂದರೆ ಎನು? ಹೇಗೆ ?*

 *ನಮಸ್ಕಾರ ಎಂದರೆ ಎನು? ಹೇಗೆ ?*
ನಮಸ್ಕಾರ ಎನ್ನುವ ಪದವು ಸಂಸ್ಕೃತ ಭಾಷೆಯ ಒಂದು ಪದ. ಈ ಪದವನ್ನು ಬಿಡಿಸಿದಾಗ ನಮಸ್ | ಕಾರ ಎನ್ನುವ ಎರಡು ಬೇರೆ ಬೇರೆ ಪದಗಳು ದೊರೆಯುತ್ತವೆ. ಇದು `ಣಮು ಪ್ರಹ್ವತ್ವೇ ಶಬ್ದೇ ಚ` ಎನ್ನುವ ಧಾತುವಿನಿಂದ ಉತ್ಪನ್ನವಾಗಿದೆ. ನಮಸ್ ಎಂದರೆ ಪ್ರಹ್ವತೆ. ಧಾತುವಿನಲ್ಲಿರುವ ಪದಗಳ ಅರ್ಥವನ್ನು ನೋಡಿದಾಗ ನಾವು ನಮಸ್ಕಾರ ಎನ್ನುವ ಪ್ರಕ್ರಿಯೆಯನ್ನು ಮಾಡುವಾಗ ನಮ್ಮ ದೇಹವನ್ನು ಬಾಗಿಸಿರಬೇಕು ಮತ್ತು ಮನಸ್ಸೂ ಸಹ ಬಾಗಿರಬೇಕು ಎನ್ನುವ ಅರ್ಥ ಸಿಗುತ್ತದೆ. ಅಂದರೆ ನಮಸ್ಕಾರವನ್ನು ಮಾಡುವಾಗ ನಮ್ಮ ದೇಹಬಾಗಿದ್ದರೆ ಮಾತ್ರ ಸಾಲದು. ದೇವದೇವನ ಮುಂದೆ ನಮ್ಮ ಮನಸ್ಸೂ ಬಾಗಿದ್ದು, ಅವನ ಮಹಿಮೆಗಳು ಶಬ್ದರೂಪ ಸ್ತೋತ್ರದ ಮೂಲಕ ಹೊರಬರುತ್ತಿರಬೇಕು. 
ಇದೇ ಮಾತನ್ನು ಶ್ರೀಮಜ್ಜಯತೀರ್ಥರು ತಮ್ಮ ಸುಧಾಗ್ರಂಥದಲ್ಲಿ `ಮನೋವೃತ್ತೇಃ ತತ್ಪ್ರವಣತಾ ಹಿ ವಂದನಮ್` ಎಂದಿದ್ದಾರೆ. ಹೀಗೆ ನಮಸ್ಕಾರ ಮಾಡುವುದು ಮನಸ್ಸಿನಿಂದ, ಕೇವಲ ಅಡ್ಡಬೀಳುವುದೇ ನಮಸ್ಕಾರವಲ್ಲ. ನಾವು ಪೂಜಾವಸಾನದಲ್ಲಿ ಹೇಳುವ `ನಾಹಂ ಕರ್ತಾ ಹರಿ ಕರ್ತಾ ತತ್ಪೂಜಾ ಕರ್ಮ ಚಾಖಿಲಮ್` ಎನ್ನುವ ಮಾತಿನಂತೆ ಯಾವುದೇ ಕಾರ್ಯ ನಮ್ಮಿಂದಾದರೆ ನಿಜವಾಗಿಯೂ ಆ ಕಾರ್ಯ ನಮ್ಮಿಂದಾದುದಲ್ಲ. ಭಗವಂತನಿಂದಲೇ ಆದದ್ದು ಎನ್ನುವ ಭಾವನೆಯೇ ನಮಸ್ಕಾರ. ಅಲ್ಲದೇ! ನಮಸ್ಕಾರವನ್ನು ಮಾಡಿದಾಗ ನಮ್ಮ ದೇಹದ ಭಾರ ವನ್ನು ಭೂವರಾಹನ ಮೇಲೆ ಹಾಕಿ ಆತ್ಮವನ್ನು ನಿವೇದಿಸಬೇಕಾದರೆ `ನಾಹಂ ಕರ್ತಾ` ಎನ್ನುವ ಅನುಸಂಧಾನವಿರಲೇಬೇಕು. ಇಲ್ಲದಿದ್ದಲ್ಲಿ ದೇಹವನ್ನು ಮಾತ್ರ ಭೂಮಿಯ ಮೇಲೆ ಬೀಳಿಸಿದಂತಾ ಗುತ್ತದೆ. ಆತ್ಮನಿವೇದನೆ ಮಾಡಿದಂತಾಗುವುದಿಲ್ಲ. 
ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ |
ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಮ್ ||
ಎನ್ನುವ ನವವಿಧ ಭಕ್ತಿ ಯಲ್ಲಿ ಆತ್ಮನಿವೇದನೆ ಸೇರಿದಂತೆ ವಂದನವೂ ಸೇರಿದೆ. ಈ ವಂದನದ ಮೂಲಕ ಭಗವಂತನಲ್ಲಿ ಸ್ನೇಹವನ್ನು ಸಂಪಾದಿಸಿ, ಅವನ ದಾಸರಾಗಿ, ಅವನ ಉತ್ಕರ್ಷವನ್ನು ಒಪ್ಪಿಕೊಂಡು ಅವನಿಗೆ ನಮ್ಮ ಆತ್ಮನಿವೇದನೆಯನ್ನು ಮಾಡುವುದರ ಮೂಲಕ ನಮ್ಮ ಒಳಿತು-ಕೆಡಕುಗಳಿಗೆ ಆ ಭಗವಂತನೇ ಕಾರಣ ಎನ್ನುವ ಅನುಸಂಧಾನದ ಮೂಲಕ ಮನಸ್ಸನ್ನು ನಮ್ರವಾಗಿಸುವುದೇ ನಮಸ್ಕಾರದ ಪ್ರಕ್ರಿಯೆ.
*ನಮಸ್ಕಾರದಲ್ಲಿ ಎಷ್ಟು ವಿಧಗಳು:* 
ನಮಸ್ಕಾರವು `ಕಾಯಿಕ, ವಾಚಿಕ, ಮಾನಸಿಕ` ಎಂದು ಮೂರು ವಿಧವಾಗಿದೆ. ದೇಹ ದಿಂದ ಮಾಡುವ ನಮಸ್ಕಾರವು `ಕಾಯಿಕ(ದೈಹಿಕ) ನಮಸ್ಕಾರ` ಎನಿಸಿಕೊಂಡರೆ, ಮಾತಿನ ಮೂಲಕ ಮಾಡುವ ನಮಸ್ಕಾರವು `ವಾಚಿಕ ನಮಸ್ಕಾರ`, ಮನಸ್ಸಿನ ಮೂಲಕ ಮಾಡುವ ನಮಸ್ಕಾರವು `ಮಾನಸಿಕ ನಮಸ್ಕಾರ` ಎಂದು ಕರೆಸಿಕೊಳ್ಳುತ್ತದೆ. ಈ ಮೂರು ವಿಧವಾದ ನಮಸ್ಕಾರಗಳು ಸೇರಿದಾಗ ಮಾತ್ರ ಅದು `ಉತ್ತಮ ನಮಸ್ಕಾರ` ಎಂದೆನಿಸಿಕೊಳ್ಳುತ್ತದೆ. ಇದನ್ನೇ `ತ್ರಿಕರಣ ಪೂರ್ವಕ ನಮಸ್ಕಾರ` ಎನ್ನುತ್ತಾರೆ. ಈ ಮೂರು ವಿಧದ ನಮಸ್ಕಾರಗಳಲ್ಲಿ `ಕಾಯಿಕ ನಮಸ್ಕಾರವು ಉತ್ತಮ. ವಾಚಿಕ ನಮಸ್ಕಾರವು ಅಧಮ. ಮಾನಸಿಕ ನಮಸ್ಕಾರವು ಮಧ್ಯಮ` ಎಂದು ವಿಭಾಗ ಮಾಡಲಾಗಿದೆ 
ಕಾಯಿಕ ವಾಗ್ಭವಶ್ಚೈವ ಮಾನಸಸ್ತ್ರಿವಿಧಸ್ಸ್ಮೃತಃ| 
ನಮಸ್ಕಾರಸ್ತು ತತ್ವಜ್ಞೈಃ ಉತ್ತಮಾಧಮಮಧ್ಯಮಾಃ ||
ಎಂಬುದಾಗಿ. 
*ಕಾಯದಿಂದ ಮಾಡುವ ನಮಸ್ಕಾರಗಳಲ್ಲಿ ಪುನಃ ಮೂರುವಿಧಗಳಿವೆ* `ಕಾಯಿಕ ಉತ್ತಮ, ಕಾಯಿಕ ಮಧ್ಯಮ, ಕಾಯಿಕ ಅಧಮ` ಎಂಬುದಾಗಿ. ಕಾಯಿಕ ಉತ್ತಮ ನಮಸ್ಕಾರದ ವಿಧವನ್ನು ಹೇಳುತ್ತಿದ್ದಾರೆ, ಪ್ರಸಾರ್ಯ ಪಾದೌ ಹಸ್ತೌ ಚ ಪತಿತ್ವಾ ದಂಡವತ್ ಕ್ಷಿತೌ | 
ಜಾನುಭ್ಯಾಂ ಧರಣೀಂ ಗತ್ವಾ ಶಿರಸಾ ಸ್ಪೃಶ್ಯ ಮೇದಿನೀಮ್ | 
ಕ್ರಿಯತೇ ಯೋ ನಮಸ್ಕಾರಃ ಉತ್ತಮಕಾಯಿಕಸ್ತು ಸಃ ||
ಎಂಬುದಾಗಿ.
ಕಾಯಿಕ ಉತ್ತಮ:
ಭೂಮಿಯಲ್ಲಿ ದಂಡಾಕಾರವಾಗಿ ಮಲಗಿ, ಹಸ್ತ, ಪಾದಗಳನ್ನು ಚಾಚಿ, ಮಂಡಿ, ತಲೆಗಳಿಂದ ಭೂಮಿಯನ್ನು ಸ್ಪರ್ಶಿಸುತ್ತಾ, ನಮ್ಮ ಕಣ್ಣನ್ನು ಭಗವಂತನ ಪಾದದಲ್ಲಿಟ್ಟು, ಮನಸ್ಸನ್ನು ಭಗವಂತನಲ್ಲಿ ನೆಟ್ಟು ಮಾಡುವ ನಮಸ್ಕಾರವೇ `ಕಾಯಿಕ ಉತ್ತಮ ನಮಸ್ಕಾರ.` ಈ ರೀತಿಯ ನಮಸ್ಕಾರವನ್ನು ಪುರುಷರು ಮಾತ್ರ ಮಾಡಬೇಕು. 
ಕಾಯಿಕ ಮಧ್ಯಮ:
ಮಂಡಿಗಳನ್ನು ಭೂಮಿಯಲ್ಲಿ ಊರಿ, ತಲೆಯನ್ನು ಭೂಮಿಗೆ ತಾಗಿಸಿ ಕಣ್ಣನ್ನು ಭಗವಂತನ ಪಾದದಲ್ಲಿಟ್ಟು, ಮನಸ್ಸನ್ನು ಭಗವಂಕನ ರೂಪದಲ್ಲಿಟ್ಟು ಮಾಡುವ ನಮಸ್ಕಾರವೇ `ಕಾಯಿಕ ಮಧ್ಯಮ` ಎಂದೆನಿಸಿಕೊಳ್ಳುತ್ತದೆ. 
ಜಾನುಭ್ಯಾಂ ಚ ಕ್ಷಿತಿಂ ಸ್ಪೃಷ್ಟ್ವಾ ಶಿರಸಾ ಸ್ಪೃಶ್ಯ ಮೇದಿನೀಮ್ | 
ಕ್ರಿಯತೇ ಯೋ ನಮಸ್ಕಾರಃ ಮಧ್ಯಮಃ ಕಾಯಿಕಸ್ತು ಸಃ ||
ಎಂದು ಹೇಳಿ ಈ ನಮಸ್ಕಾರವನ್ನು ಸ್ತ್ರೀಪುರುಷರಿಬ್ಬರೂ ಮಾಡಬಹುದೆಂದು ಹೇಳಿ, ಮುಂದೆ ಕಾಯಕ ಅಧಮ ನಮಸ್ಕಾರದ ರೀತಿಯನ್ನು  ಹೇಳುತ್ತಿದ್ದಾರೆ 
ಕಾಯಿಕ ಅಧಮ:
ಪುಟೀಕೃತ್ಯ ಕರೌ ಶೀರ್ಷೇ ದೀಯತೇ ಯದ್ಯಥಾ ತಥಾ | 
ಅಸ್ಪೃಷ್ಟ್ವಾ ಜಾನುಶೀರ್ಷಾಭ್ಯಾಂ ಕ್ಷಿತಿಂ ಸೋಡಧಮ ಉಚ್ಯತೇ ||
ಮಂಡಿ ಮತ್ತು ತಲೆ ಯನ್ನು ಭೂಮಿಗೆ ತಾಗಿಸದೇ, ಕೈಯನ್ನು ತಲೆಯಲ್ಲಿಟ್ಟು ಮಾಡುವ ನಮಸ್ಕಾರವು ಕಾಯಕ ಅಧಮ ನಮಸ್ಕಾರ ಎಂದು ಕರೆಸಿಕೊಳ್ಳುತ್ತದೆ. 
ಇಲ್ಲಿ ಒಂದು ಪ್ರಶ್ನೆ ಬರುತ್ತದೆ ಎನೆಂದರೆ?  
ಕಾಯಕ ಉತ್ತಮದ ನಮಸ್ಕಾರವನ್ನು ಪುರುಷರು ಮಾತ್ರ ಎಕೆ ಮಾಡಬೇಕು, ಸ್ತ್ರೀಯರು ಎಕೆ ಮಾಡಬಾರದು ಎಂಬುದಾಗಿ? ಅದಕ್ಕೆ ಉತ್ತರವನ್ನು ಈ ರೀತಿ ಹೇಳುತ್ತಿದ್ದಾರೆ.    
ಬ್ರಾಹ್ಮಣಸ್ಯ ಗುದಂ ಶಂಖಂ ಯೋಷಿತಃ ಸ್ತನಮಂಡಲಮ್ | 
ರೇತಃ ಪವಿತ್ರಗ್ರಂಥಿಂ ಚ ನ ಭೂಃ ಧಾರಯಿತುಂ ಕ್ಷಮಾ ||
ಎನೆಂದರೆ ಇಡೀ ಭೂ ಮಂಡಲದ ಭಾರವನ್ನು ಹೊತ್ತಿರುವ ಭೂದೇವಿಯು ಬ್ರಾಹ್ಮಣರ ಗುದಪ್ರದೇಶವನ್ನು, ಶಂಖವನ್ನು, ಸ್ತ್ರೀಯರ ಸ್ತನಮಂಡಲವನ್ನು, ಶುಕ್ಲರೂಪದಲ್ಲಿರುವ ರೇತಸ್ಸನ್ನು, ಧಭರ್ೆಯ ಗ್ರಂಥಿಯನ್ನು ಧರಿಸ ಲಾರಳಂತೆ. ಆದುದರಿಂದ ಸ್ತ್ರೀಯರು ಕಾಯಕ ಉತ್ತಮ ನಮಸ್ಕಾರವನ್ನು ಮಾಡಬಾರದೆಂದು ತಿಳಿಸುತ್ತಾ ಇದನ್ನು ಕೇವಲ ಪುರುಷರಿಗೆ ಮಾತ್ರ ವಿಧಾನ ಮಾಡಿರುವರು. ಅಲ್ಲದೇ! ಪುರುಷರು ಆಸನವಿಲ್ಲದೇ ನೆಲದ ಮೇಲೆ ಕುಳಿತುಕೊಳ್ಳಬಾರದೆಂದೂ ಕೂಡ ವಿಧಾನ ಮಾಡಿರುವರು.
ಪ್ರಣಾಮ ಎಂದರೇನು? 
`ಸ್ವಾಪಕರ್ಷಬೋಧಕ, ಪರೋತ್ಕರ್ಷಬೋಧಕ ಕಾಯಕವ್ಯಾಪಾರಃ ನಮಸ್ಕಾರಃ` ಎನ್ನುವ ದುರ್ಗಾದಾಸನ ಮಾತಿನಂತೆ ಪ್ರಣಾಮವೆಂದರೆ ನಮಗಿಂತ ಹಿರಿಯರ ಮುಂದೆ ನಾನು ಅಲ್ಪ ಎನ್ನುವ ಭಾವನೆಯನ್ನು ಪ್ರತಿಬಿಂಬಿಸುವ ದೈಹಿಕ ವ್ಯಾಪಾರದ ಅನುಸಂಧಾನವೇ ನಮಸ್ಕಾರ ವೆಂದು ಗೊತ್ತಾಗುತ್ತದೆ. ಅಲ್ಲದೇ! ಮೇಲೆ ತಿಳಿಸಿದಂತೆ ಕಾಯವನ್ನು ಭೂಮಿಯಲ್ಲಿ ಬೀಳಿಸಿ, ತಲೆ ಯ ಮೇಲುಗಡೆ ಗುಣಾಕಾರದ ಚಿಹ್ನೆ( ) ಯಂತೆ ಎಡಕೈಯ ಮೇಲೆ ಬಲಕೈ ಬರುವಂತೆ ಮಾಡಿ, ನಮ್ಮ ಬಲಕೈ ಭಗವಂತನ ಬಲಪಾದವನ್ನು, ನಮ್ಮ ಎಡಕೈ ಭಗವಂತನ ಎಡಪಾದವನ್ನು ಮುಟ್ಟು ವಂತೆ ಮಾಡುವ ನಮಸ್ಕಾರವೇ ಪ್ರಣಾಮ ಎಂಬುದಾಗಿ ಕಾಲಿಕಾ ಖಂಡವು ಈ ರೀತಿಯಾಗಿ ತಿಳಿಸುತ್ತಿದೆ 
ಅಯಮೇವ ನಮಸ್ಕಾರಃ ದಂಡಾದಿಪ್ರತಿಪತ್ತಿಭಿಃ| 
ಪ್ರಣಾಮ ಇತಿ ಜ್ಞೇಯಃ ಸ ಪೂರ್ವಪ್ರತಿಪಾದಿತಃ ||
ಎಂಬುದಾಗಿ. ಇಂತಹ ಪ್ರಣಾಮವು ನಮ್ಮಲ್ಲಿರುವ ಅಹಂಕಾರವನ್ನು ಹೊಡೆದೋಡಿಸಿ, ನಾವು ನಮಸ್ಕಾರಾರ್ಹನಿಗಿಂತ ಸಣ್ಣವರು ಎನ್ನುವ ಭಾವನೆಯನ್ನು ಜಾಗೃತಗೊಳಿಸುತ್ತದೆ.
ಇಂತಹ ನಮಸ್ಕಾರದಲ್ಲಿ ಪುನಃ ನಾಲ್ಕುವಿಧಗಳಿವೆ. ಅವುಗಳೆಂದರೆ (1) ಭಕ್ತಿಪೂರ್ವಕ ನಮಸ್ಕಾರ (2) ಅಷ್ಟಾಂಗ ನಮಸ್ಕಾರ (3) ಪಂಚಾಂಗ ನಮಸ್ಕಾರ (4) ಅಭಿವಾದನ ಎಂಬುದಾಗಿ.
ಕೃಪೆ:- ಶ್ರೀ ಅನಂತಾಚಾರ್ಯ ಮುಕುಂದಾಚಾರ್ಯ.ಜೋಶಿ