ಶುಕ್ರವಾರ, ಮಾರ್ಚ್ 23, 2018

ಬಲವಂತವಾಗಿ #ಮುಸಲ್ಮಾನರಿಂದ ಹೀಗೆ ಬರೆಸಿಕೊಳ್ಳುತ್ತಿದೆ #ಚೀನಾ!!!

ಬಲವಂತವಾಗಿ #ಮುಸಲ್ಮಾನರಿಂದ ಹೀಗೆ ಬರೆಸಿಕೊಳ್ಳುತ್ತಿದೆ #ಚೀನಾ!!! 
ಏನಂತ ಗೊತ್ತಾ?
ಅದೆಂಥಾ ವಿಚಿತ್ರ ನೋಡಿ, ಭಾರತ ಬಿಟ್ಟು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಕಮ್ಯುನಿಸ್ಟರು ಇಸ್ಲಾಂ, ಕ್ರಿಶ್ಚಿಯನ್ ಮತವನ್ನ ಓಲೈಸಿಕೊಂಡು ಅವರ ಪರ ಬ್ಯಾಟಿಂಗ್ ಮಾಡೋದೇ ಇಲ್ಲ ಆದರೆ ಭಾರತದಲ್ಲಿ ಮಾತ್ರ ಕಮ್ಯುನಿಸ್ಟರದ್ದು ತದ್ವಿರುದ್ಧ ನೀತಿ.
ಮುಸಲ್ಮಾನರ, ಕ್ರಿಶ್ಚಿಯನ್ನರ ಹಕ್ಕುಗಳ ಠೇಕಾ ನಾವೇ ತೆಗೆದುಕೊಂಡಿದ್ದೀವಿ ಅನ್ನೋ ರೀತಿಯಲ್ಲಿ ಮುಸಲ್ಮಾನರ ಪರ ಇಲ್ಲಿನ ಕಮ್ಯುನಿಸ್ಟರು ರೋಡಿಗಿಳಿದುಬಿಡುತ್ತಾರೆ. ಆದರೆ ಅದೇ ಕಮ್ಯುನಿಸ್ಟರು ಚೀನಾದಲ್ಲಿರುವ ತಮ್ಮ ಕಮ್ಯುನಿಸ್ಟ್ ವಿಚಾರಧಾರೆಯದ್ದೇ ಸರ್ಕಾರ ಮುಸಲ್ಮಾನರ ವಿರುದ್ಧ ಕೈಗೊಳ್ಳುತ್ತಿರುವ ವಿಚಾರದ ಬಗ್ಗೆ ತುಟಿಕ್ ಪಿಟಿಕ್ ಅನ್ನೋದಿಲ್ಲ. ಬೇರೆಲ್ಲ ವಿಚಾರಗಳಿಗೆ ಚೀನಾದಿಂದ ಹಿಂಬಾಗಿಲಿನಿಂದ ಫಂಡ್ ಪಡೆಯುವ ನಕ್ಸಲರು ಚೀನಾದ ಮುಸಲ್ಮಾನರ ಬಗ್ಗೆ ಹಾಗು ಚೀನಾ ಸರ್ಕಾರದ ನಡೆಯನ್ನ ವಿರೋಧಿಸುವ ಗೋಜಿಗೆ ಹೋಗೋದೇ ಇಲ್ಲ.
ಅದಿರಲಿ ಬಡಿ ಅವರ ಆಷಾಢಭೂತಿತನ ನಮಗೆಲ್ಲಾ ತಿಳಿದದ್ದೆ. ಈಗ ಚೀನಾ ಮತ್ತೆ ಮುಸಲ್ಮಾನರ ವಿರುದ್ಧ ಏನು ಮಾಡಿದೆ ಅನ್ನೋದನ್ನ ನೋಡೋಣ ಬನ್ನಿ.
ಚೀನಾ ಸರ್ಕಾರ ಅಲ್ಲಿನ ಮುಸಲ್ಮಾನರನ್ನ ಒತ್ತಾಯಪೂರ್ವಕವಾಗಿ ಪತ್ರವೊಂದನ್ನ ಬರೆಸಿಕೊಳ್ಳುತ್ತಿದೆಯಂತೆ, ಆ ಪತ್ರದಲ್ಲಿ ಬರೆದ ವಿಷಯ ಇಸ್ಲಾಮಿಗೆ ವಿರುದ್ಧವಾದರೂ ಅಲ್ಲಿನ ಮುಸಲ್ಮಾನರು ಚೀನಾ ಸರ್ಕಾರಕ್ಕೆ ಹೆದರಿ ಅಂತಹದ್ದೊಂದು ಪತ್ರ ಬರೆದುಕೊಡುತ್ತಿದ್ದಾರಂತೆ.
ಏನು ಆ ಪತ್ರದಲ್ಲಿರುವ ವಿಷಯ ಗೊತ್ತೆ?
ಚೀನಾ ಸರ್ಕಾರ ಮುಸಲ್ಮಾನರಿಗೆ “ನಾವು ನಾಸ್ತಿಕರು ನಾವು ಯಾವ ದೇವರನ್ನೂ ನಂಬುವುದಿಲ್ಲ” ಎಂಬ ಪತ್ರ ಬರೆದು ಸಹಿ ಮಾಡಿಕೊಡಲು ಆದೇಶಿಸಿದೆಯಂತೆ. ಅಲ್ಲಿನ ಮುಸಲ್ಮಾನರೂ ಇದಕ್ಕೆ ಒಪ್ಪಿ ಹಾಗೇ ಬರೆದುಕೊಡುತ್ತಿದ್ದಾರೆಯಂತೆ.
ಅಷ್ಟಕ್ಕೂ ಇಂಥದ್ದೊಂದು ರೂಲ್ಸ್ ಚೀನಾ ತರಲು ಕಾರಣವೇನು?
ಚೀನಾದಿಂದ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ಚೀನಾ ಹೇಳಿ ಕೇಳಿ ಕಮ್ಯುನಿಸ್ಟ್ ದೇಶ, ಕಮ್ಯುನಿಸ್ಟರೆಂದರೆ ಅವರು ಒಂಥರಾ ನಾಸ್ತಿಕರಿದ್ದಂತೆ, ಅವರಿಗೆ ದೇವರು ಧರ್ಮ ಆಚರಣೆ ಇವುಗಳ ಬಗ್ಗೆ ನಂಬಿಕೆಯೇ ಇಲ್ಲ. ಅಂತಹ ರಾಷ್ಟ್ರದ ಸರ್ಕಾರ ಈಗ ಅಲ್ಲಿನ ಮುಸಲ್ಮಾನರನ್ನೂ ನಾಸ್ತಿಕತೆಯನ್ನೇ ನಂಬಬೇಕು ಅನ್ನೋ ರೀತಿಯಲ್ಲಿ ಅವರಿಂದ ಪತ್ರ ಬರೆಸಿಕೊಳ್ಳುತ್ತಿದ್ದಾರೆ. ಬರೀ ಪತ್ರ ಬರೆಸಿಕೊಳ್ಳುವುದಷ್ಟೇ ಅಲ್ಲದೆ ಆ ಶಪಥ ಪತ್ರದ ಮೇಲೆ ಮುಸಲ್ಮಾನರ ಸಹಿ‌ ಕೂಡ ಪಡೆಯಲಾಗುತ್ತಿದೆ.
ಏನಿದು ವಿಷ್ಯ?
ಕಮ್ಯುನಿಸ್ಟ್ ಪಕ್ಷದಲ್ಲಿರುವ ಮುಸ್ಲಿಂ ನಾಯಕರು ತಾವು ಯಾವ ಧಾರ್ಮಿಕತೆಯಲ್ಲೂ ನಂಬಿಕೆಯಿಲ್ಲ ಅಂತ ತಮ್ಮ ಪಕ್ಷಕ್ಕೆ ಇಂತಹದ್ದೊಂದು ಮುಚ್ಚಳಿಕೆ ಬರೆದುಕೊಡಲೇಬೇಕಾಗಿದೆ.
“ನಾನು ಮಾರ್ಕ್ಸ್‌ವಾದವನ್ನ ಮಾತ್ರ ಒಪ್ಪುತ್ತೇನೆ, ನನ್ನ ನಿಷ್ಟೆ ಕೇವಲ ಮಾರ್ಕವಾದಕ್ಕೆ ಮಾತ್ರ” ಎಂಬ ಪತ್ರವನ್ನ ಮುಸ್ಲಿಂ ನಾಯಕರೂ ಬರೆದುಕೊಡಲೇಬೇಕು ಎಂಬುದು ಕಮ್ಯುನಿಸ್ಟ್ ಪಕ್ಷದ ಒತ್ತಾಯವಾಗಿದೆ. ಇಂತಹದ್ದೊಂದು ಅಭಿಯಾನ ಚೀನಾದ ಮುಸ್ಲಿಂ ಬಾಹುಳ್ಯವಿರುವ ‘ಗಾನಸೂ’ ಪ್ರಾಂತ್ಯದ ‘ಲಿನಶಿಯಾ’ ಕ್ಷೇತ್ರದಲ್ಲಿ ನಡೆಸಲಾಗುತ್ತಿದೆ. ಪಕ್ಷದ ಅಧಿಕೃತ ವೆಬಸೈಟನಲ್ಲಿ ಇದರ ಬಗ್ಗೆ ಚೀನಾ ಕಮ್ಯುನಿಸ್ಟ್ ಪಕ್ಷ ಪ್ರಕಟ ಮಾಡಿದೆ.
ಚೀನಾ ಮುಸಲ್ಮಾನರನ್ನ ಹದ್ದುಬಸ್ತಿನಲ್ಲಿಡಲು ಇದಷ್ಟೇ ಅಲ್ಲ ಇನ್ನೂ ಹಲವು ಕಾನೂನುಗಳನ್ನ ಜಾರಿಗೆ ತಂದಿದೆ.
ಅವುಗಳ್ಯಾವುವು ಗೊತ್ತಾ?
1) ಪಶ್ಚಿಮ ಚೀನಾದಲ್ಲಿ ಅಲ್ಲಿನ ಸರ್ಕಾರ ಚಳಿಗಾಲದ ನೆಪವೊಡ್ಡಿ ಮುಸ್ಲಿಂ ಮಕ್ಕಳಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದನ್ನ ನಿಷೇಧಿಸಿಬಿಟ್ಟಿದೆ.
ಈ ಪ್ರತಿಬಂಧದ ಅಲ್ಲಿನ ಶಿಕ್ಷಣ ಸಚಿವಾಲಯ ಆನಲೈನ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಜಾರಿಗೆ ತಂದಿದೆ. ಈ ಪ್ರತಿಬಂಧದ ಪ್ರಕಾರ ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯ ತರಗತಿಯಲ್ಲಿ ಅಥವ ಯಾವುದೇ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳಲ್ಲಿ ಅವರವರ ಧಾರ್ಮಿಕ ಗ್ರಂಥಗಳನ್ನ ಓದುವುದನ್ನ ನಿಷೇಧ ಮಾಡಿದೆ ಚೀನಾ ಸರ್ಕಾರ.
2) ಚೀನಾ ಸರ್ಕಾರ ಕಳೆದ ತಿಂಗಳುಗಳ ಹಿಂದೆಯಷ್ಟೇ ಮಹತ್ವದ ಆದೇಶ ಹೊರಡಿಸಿತ್ತು. ಅಲ್ಲಿನ ಸ್ಥಳೀಯರು ಅಕ್ಕಪಕ್ಕದವರಿಗೆ ಮಸೀದಿಯ ಸ್ಪೀಕರ್‌ಗಳಿಂದ ತೊಂದರೆಯಾಗುತ್ತಿದೆ ಎಂದು ದೂರು ಕೊಟ್ಟಿದ್ದರಿಂದ ಚೀನಾ ಸರಕಾರ ಕ್ವಾ0ಗೈ ಪ್ರದೇಶದ 300 ಮಸೀದಿಗಳ ಮೇಲಿನ ಸ್ಪೀಕರ್‌ಗಳನ್ನು ತೆಗೆದುಹಾಕಿತ್ತು.
ಚೀನಾ ಸರ್ಕಾರ ಬರೀ ಬೋಂಗಾ ಅಷ್ಟೇ ನಿಷೇಧಿಸಿಲ್ಲ ಬುರ್ಕಾ ಮತ್ತು ಗಡ್ಡವನ್ನು ನಿಷೇಧಿಸಲಾಗಿದೆ. ಈಗ ಅದರ ಬೆನ್ನಲ್ಲೇ ಚೀನಾ ಸರ್ಕಾರ ಕುರಾನಿನ ಎಲ್ಲಾ ಪ್ರತಿ ಮತ್ತು ಪ್ರಾರ್ಥನೆಯ ಮ್ಯಾಟ್ ಅನ್ನು ಹಿಂತಿರುಗಿಸಿ ಅಥವಾ ಕಠಿಣ ಶಿಕ್ಷೆಯನ್ನು ಎದುರಿಸಿ ಎಂದು ಅಲ್ಲಿನ ಮುಸ್ಲಿಮರಿಗೆ ಆದೇಶಿಸಿದೆ.
3) ​ಕ್ಸಿನ್ಜಿಯಾಂಗ್ ವಾಯವ್ಯ ಭಾಗದಲ್ಲಿ ಮುಸ್ಲಿಮರ ವಿರುದ್ಧ ಚೀನೀಯ ಅಧಿಕಾರಿಗಳು ಮತ್ತೆ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದ್ದಾರೆ. ಪ್ರದೇಶದ ಮೂಲಗಳ ಪ್ರಕಾರ, ಜನಾಂಗೀಯ ಅಲ್ಪಸಂಖ್ಯಾತ ಮುಸ್ಲಿಮ್ ಕುಟುಂಬಗಳು ಕುರಾನ್ ಮತ್ತು ನಮಾಜ್ ಮಾಡುವ ಮ್ಯಾಟ್ ಸೇರಿದಂತೆ ಧಾರ್ಮಿಕ ವಸ್ತುಗಳನ್ನು ಕಡ್ಡಾಯವಾಗಿ ಹಿಂದಿರುಗಿಸುವಂತೆ ಮುಸ್ಲಿಂ ಕುಟುಂಬಗಳಿಗೆ ಮತ್ತು ಮಸೀದಿಗಳಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
4) ಚೀನಾದಲ್ಲಿ ನಿಷೇಧಿಸಿದಂತೆ ಸ್ವಿಟ್ಜರ್ಲೆಂಡ್‌‌ ನಲ್ಲಿಯೂ ಕೂಡಾ ಬುರ್ಕಾ ನಿಷೇಧಿಸಲಾಗಿದೆ.
5) ಚೀನಾ ಅಷ್ಟೇ ಅಲ್ಲ ಸ್ವಿಟ್ಜರ್ಲೆಂಡ್‌‌ ಕೂಡ ಈ ರೀತಿಯ ನಿರ್ಧಾರ ಕೈಗೊಂಡಿದೆ.
ಸ್ವಿಟ್ಜರ್ಲೆಂಡ್‌‌ ನ ಸಂಸತ್ತಿನಲ್ಲಿ ಚರ್ಚೆ ನಡೆದಾಗ ಒಬ್ಬ ಸಂಸದ ಎದ್ದು ನಿಂತು ಹೇಳ್ತಾನೆ.
“ನನ್ನ ದೇಶ ಸುರಕ್ಷಿತವಾಗಿರಬೇಕೆಂದರೆ ನನ್ನ ದೇಶದಲ್ಲಿ ಬುರ್ಕಾ ನಿಷೇಧವಾಗಬೇಕು. ಯಾಕೆಂದರೆ ಬುರ್ಕಾದ ಒಳಗಡೆ ಪ್ರತಿ ಸಂದರ್ಭದಲ್ಲಿಯೂ ಮಹಿಳೆಯೇ ಇರುತ್ತಾಳೆಂದು ಹೇಳಲಾಗುವುದಿಲ್ಲ. ಹಾಗಾಗಿ ನನ್ನ ದೇಶ ಸುರಕ್ಷಿತವಾಗಿರಬೇಕೆಂದರೆ ನನ್ನ ದೇಶದಲ್ಲಿ ಬುರ್ಕಾ ನಿಷೇಧವಾಗಬೇಕು”
ಒಟ್ಟಿನಲ್ಲಿ ಚೀನಾ ಸರ್ಕಾರ ತನ್ನ ಅಂತರಿಕ ಭದ್ರತಾ ದೃಷ್ಟಿಯಿಂದ ಕುರಾನಿನ ಎಲ್ಲಾ ಪ್ರತಿ ಮತ್ತು ಪ್ರಾರ್ಥನೆಯ ಮ್ಯಾಟ್ ಅನ್ನು ಹಿಂತಿರುಗಿಸಿ ಅಥವಾ ಕಠಿಣ ಶಿಕ್ಷೆಯನ್ನು ಎದುರಿಸಿ ಎಂದು ಅಲ್ಲಿನ ಮುಸ್ಲಿಮರಿಗೆ ಆದೇಶಿಸಿದೆ.
ಆದರೆ ಭಾರತ ದೇಶದಲ್ಲಿ ಮುಸಲ್ಮಾನರಿಗೆ ಎಲ್ಲ ಸೌಲಭ್ಯಗಳನ್ನ, ಧಾರ್ಮಿಕ ಸ್ವಾತಂತ್ರ್ಯವನ್ನ ಯಥೇಚ್ಚವಾಗಿ ನೀಡಿದರೂ ಭಾರತ ಅಸಹಿಷ್ಣು ರಾಷ್ಟ್ರ ಅಂತ ಬೊಬ್ಬೆಯಿಡುವುದರಲ್ಲಿ ಹಿಂದೆ ಬೀಳಲ್ಲ!!
ಮಾಹಿತಿ: ಯುವ ಭಾರತ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ