ಪಾತಂಜಲಿ ಯೋಗ ಸೂತ್ರ :--
🕉 ಸಮಾಧಿ ಪಾದ 🕉
🕉 ಸೂತ್ರ : ವಿತರ್ಕವಿಚಾರಾನಂದಾಸ್ಮಿತಾನುಗಮಾತ್ ಸಂಪ್ರಜ್ಞಾತಃ || ೧೭ ||
🕉 ಸಮಾಧಿ ಪಾದ 🕉
🕉 ಸೂತ್ರ : ವಿತರ್ಕವಿಚಾರಾನಂದಾಸ್ಮಿತಾನುಗಮಾತ್
🕉 ಅರ್ಥ : ವಿತರ್ಕವಿಚಾರಾನಂದಾಸ್ಮಿತಾನುಗಮಾತ್ = ವಿತರ್ಕ, ವಿಚಾರ, ಆನಂದ, ಅಸ್ಮಿತಾ ಈ ನಾಲ್ಕರೊಂದಿಗೆ ಅಂಬಂಧಿಸಿದುದರಿಂದ ( ಅಂಥ ಸಮಾಧಾನದ ಚಿತ್ತಕ್ಕೆ ) ಸಂಪ್ರಜ್ಞಾತಸಮಾಧಿ ಎನ್ನುತ್ತಾರೆ.
🕉 ಭಾವ : ಯಾವ ಚಿತ್ತದಲ್ಲಿ ಸಂಶಯ ಹಾಗೂ ವಿಪರ್ಯಯಗಳು ಇಲ್ಲವೋ ಯಾವುದರಿಂದ ಭಾಹ್ಯವಸ್ತುವಿನ ಸ್ವರೂಪವು ತಿಳಿಯಲ್ಪಡುವವೋ ಅದೇ ಸಂಪ್ರಜ್ಞಾತಸಮಾಧಿವೃತ್ತಿ. ಇದರಲ್ಲಿ ವಿತರ್ಕ, ವಿಚಾರ, ಆನಂದ, ಅಸಮಿತೆ ಎಂದು ನಾಲ್ಕು ಬಗೆ.
🕉 ವಿವರಣ : ಸಂಪ್ರಜ್ಞಾತ ಸಮಾಧಿಗಾಗಿ ಯಾವ ಸ್ಥೂಲವಿಷಯದ ಆಲಂಬನ ಇದೆಯೋ ಅದು ವಿತರ್ಕ. ಆ ವಿಷಯದೊಂದಿಗೆ ತದಾಕಾರಗೊಂಡ ತದನುಗತವಾದ ಚಿತ್ತವೃತ್ತಿಗೆ ಸವಿತರ್ಕ ಎನ್ನುತ್ತಾರೆ.
🕉 ಸೂಕ್ಷ್ಮ ವಿಷಯದ ಅಪೇಕ್ಷೆಯು ವಿಚಾರ. ಅದರೊಡನೆ ತದಾಕಾರವಾದ ಚಿತ್ತವೃತ್ತಿಗೆ ಸವಿಚಾರ ನಾಮ. ಸತ್ವಗುಣದ ಅಪೇಕ್ಷೆಯು ಆನಂದ. ಕೇವಲ ಅಹಂ ಸ್ಫುರಣದ ಅಪೇಕ್ಷೆಯು ಅಸ್ಮಿತಾ. ಅದರೊಡನೆ ತದಾಕಾರಗೊಂಡ ಚಿತ್ತವೃತ್ತಿಗೆ ಸಾಸ್ಮಿತಾ ಎಂಬ ನಾಮ.
🕉 ಸ್ಥೂಲ, ಸೂಕ್ಷ್ಮ, ಸೂಕ್ಷ್ಮತರ, ಸೂಕ್ಷ್ಮತಮ ಎಂಬ ವಿಷಯಗಳೇ ಆ ನಾಲ್ವಿಧ ಸಮಾಧಿಗಳ ಆಲಂಬನೆಗಳು.
🕉 ಸೂಕ್ಷ್ಮ ವಿಷಯದ ಅಪೇಕ್ಷೆಯು ವಿಚಾರ. ಅದರೊಡನೆ ತದಾಕಾರವಾದ ಚಿತ್ತವೃತ್ತಿಗೆ ಸವಿಚಾರ ನಾಮ. ಸತ್ವಗುಣದ ಅಪೇಕ್ಷೆಯು ಆನಂದ. ಕೇವಲ ಅಹಂ ಸ್ಫುರಣದ ಅಪೇಕ್ಷೆಯು ಅಸ್ಮಿತಾ. ಅದರೊಡನೆ ತದಾಕಾರಗೊಂಡ ಚಿತ್ತವೃತ್ತಿಗೆ ಸಾಸ್ಮಿತಾ ಎಂಬ ನಾಮ.
🕉 ಸ್ಥೂಲ, ಸೂಕ್ಷ್ಮ, ಸೂಕ್ಷ್ಮತರ, ಸೂಕ್ಷ್ಮತಮ ಎಂಬ ವಿಷಯಗಳೇ ಆ ನಾಲ್ವಿಧ ಸಮಾಧಿಗಳ ಆಲಂಬನೆಗಳು.
ಇಚ್ಛಾಶಕ್ತಿ
ಆಶಾಭಾವನೆ ಮತ್ತು ಶಿಸ್ತಿನ ಜೀವನ.
ಬದುಕಿನಲ್ಲಿ ಯಶಸ್ಸು ಸಾಧಿಸಬೇಕಾದರೆ ಆಶಾಭಾವನೆ ಇಟ್ಟುಕೊಳ್ಳಬೇಕಾದುದು ಅತೀ ಅವಶ್ಯ. ಆಶಾಭಾವನೆ ಬದುಕಿನಲ್ಲಿ ಆಸಕ್ತಿ ಮೂಡಿಸುತ್ತದೆ, ಉತ್ಸಾಹ ತುಂಬಿಸುತ್ತದೆ. ಹಾಗೆಯೇ ಆರೋಗ್ಯವನ್ನು ಕೂಡಾ ವೃದ್ದಿಸುತ್ತದೆ.
ಆರೋಗ್ಯಕ್ಕೂ ಆಶಾಭಾವನೆಗೂ ನೇರವಾದ ಸಂಬಂಧವಿದೆಯೆಂದು ಮನೋವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಇದರ ಜೊತೆಯಲ್ಲಿ ಶಿಸ್ತಿನ ಜೀವನವನ್ನು ನಡೆಸುವುದು ಆರೋಗ್ಯವನ್ನು ರಕ್ಷಿಸಿಕೊಳ್ಳಲು ಉಪಯುಕ್ತವಾದ ಮಾರ್ಗ. ದಿನಚರಿಯ ಎಲ್ಲ ಕೆಲಸಗಳನ್ನು ಒಂದು ನಿರ್ಧಿಷ್ಟ ಸಮಯದಲ್ಲಿ ಮಾಡುವುದು, ಎಲ್ಲವನ್ನೂ ಪ್ರಕೃತಿ ನಿಯಮದ ಚೌಕಟ್ಟಿನಲ್ಲಿ ನಿರ್ವಹಿಸುವುದು, ಯಾವುದರಲ್ಲೂ ಅತಿರೇಕವಿಲ್ಲದೆ ಸಂಯಮವನ್ನಾಚರಿಸುವುದು ಶಿಸ್ತಿನ ಜೀವನದ ಪ್ರಮುಖ ಭಾಗಗಳು.
ಈ ರೀತಿಯ ಶಿಸ್ತುಬದ್ಧ ಜೀವನ, ಆಶಾವಾದ ಮತ್ತು ನಂಬಿಕೆ ಬೆಳೆಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆ ಸಾಧ್ಯ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ