ಸಪ್ತಪದಿ
ನಮ್ಮ ಪೂರ್ವಜರು ಎಲ್ಲದಕ್ಕೂ ಒಂದು ವಿಧ ವಿಧಾನ ಮಾಡಿದರು ಎಲ್ಲದಕ್ಕೂ ಒಂದು ಅರ್ಥಗರ್ಭಿತ ಕಾರಣ ಕೊಟ್ಟರು ಅದರಲ್ಲಿ ಜೀವನ ತಿಳಿಸಿ ಕೊಟ್ಟರು.....ವಿವಾಹದ ಅರ್ಥಪೂರ್ಣ ಹೆಜ್ಜೆಗಳೇ ಈ ಸಪ್ತಪದಿ. !!!
*ಮೊದಲನೇ ಹೆಜ್ಜೆ.. 1*.
ವರ -- ನನ್ನೊಂದಿಗೆ ಮೊದಲ ಹೆಜ್ಜೆಯಿಟ್ಟಿರುವೆ.ನಾವೀಗ ಗೆಳೆಯರಾಗಿದ್ದೇವೆ.ಸದಾ ನನಗೆ ಆಹಾರವನ್ನು ಒದಗಿಸು.ಧಾರ್ಮಿಕವ್ರತಾಚರಣೆಗಳಲ್ಲಿ ಸಹಭಾಗಿಯಾಗು,ಉತ್ತಮ ಸಂತಾನಗಳನ್ನು ಪಡೆದು ನಾವಿಬ್ಬರೂ ಬಹುಕಾಲ ಬದುಕೋಣ.
ವಧು --ನನ್ನನ್ನು ನಿಮಗೆ ಸಮರ್ಪಿಸಿಕೊಳ್ಳುತ್ತಿದ್ದೇನೆ.ಮನೆಯ, ಆಹಾರದ,ಹಣಕಾಸಿನ ಜವಾಬ್ದಾರಿಯನ್ನು ನನಗೀಗ ನೀಡಿ.ನನಗೆ ಕೊಟ್ಟ ಜವಾಬ್ದಾರಿಗಳನ್ನು ನಾನು ಸಮರ್ಥವಾಗಿ ನಿಭಾಯಿಸುತ್ತೇನೆ.
*ಎರಡನೇ ಹೆಜ್ಜೆ*
ವರ - ನನ್ನೊಂದಿಗೆ ಎರಡನೇ ಹೆಜ್ಜೆಯಿಟ್ಟಿದ್ದೀಯಾ.ಸದಾ ನನ್ನೊಂದಿಗಿದ್ದು ಶಕ್ತಿಯನ್ನು ನೀಡು.
ವಧು - ನೀವು ದುಃಖದಲ್ಲಿರುವಾಗ ಮನಸ್ಫೂರ್ತಿಯನ್ನು ನೀಡುವೆ.ನಿಮ್ಮ ಒಳಿತಿಗಾಗಿ ಸದಾ ಚಿಂತಿಸುವೆ.ಸದಾ ನಿಮಗೆ ಹಿತಕರವಾದ ಮಾತನ್ನಾಡುವೆ.ಕುಟುಂಬ ಹಾಗೂ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸುತ್ತೇನೆ.ನಿಮ್ಮ ಪ್ರೀತಿ ಸದಾ ನನ್ನೊಬ್ಬಳಿಗೇ ಇರಲಿ.
*ಮೂರನೇ ಹೆಜ್ಜೆ..*
ವರ - ನನ್ನ ಸಂಪತ್ತನ್ನು ನೀನು ಇನ್ನೂ ಹೆಚ್ಚಿಸುವೆಯೆಂಬ ನಂಬಿಕೆಯಿಂದ ನಿನ್ನೊಡನೆ ಮೂರನೇ ಹೆಜ್ಜೆಯನ್ನಿಟ್ಟಿದ್ದೇನೆ.
ವಧು - ಒಂದೇ ಮನಸ್ಸಿನಿಂದ ನಿಮ್ಮನ್ನೇ ಆರಾಧಿಸುತ್ತೇನೆ.ನನ್ನ ಸಹೋದರರನ್ನು ಪ್ರೀತಿಸುವಂತೇ ನಿಮ್ಮನ್ನೂ ಪ್ರೀತಿಸುತ್ತೇನೆ.ನಿಮ್ಮಲ್ಲೇ ಭಕ್ತಿ ಹೊಂದಿರುತ್ತೇನೆ.ಇದು ನನ್ನ ಪ್ರತಿಜ್ಞೆ.
*ನಾಲ್ಕನೇ ಹೆಜ್ಜೆ..*
.ವರ --ನನ್ನ ಸಂತೋಷವನ್ನು ಹೆಚ್ಚಿಸುವೆಯೆಂಬ ನಂಬಿಕೆಯಿಂದ ನಿನ್ನೊಂದಿಗೆ ನಾಲ್ಕನೇ ಹೆಜ್ಜೆಯನ್ನಿಡುತ್ತಿದ್ದೇನೆ.
ವಧು - ಯಾವಾಗಲೂ ನೀವು ಆನಂದದಲ್ಲಿರುವಂತೇ ನೋಡಿಕೊಳ್ಳುತ್ತೇನೆ.ನಿಮ್ಮ ಲಾಲನೆ-ಪೋಷಣೆಯ ಜವಾಬ್ದಾರಿ ನನ್ನದು.
*ಐದನೇ ಹೆಜ್ಜೆ..*
ವರ- ಉತ್ತಮ ಸಂತಾನವನ್ನು ಕರುಣಿಸುವೆಯೆಂಬ ನಂಬಿಕೆಯಿಂದ ಐದನೇ ಹೆಜ್ಜೆಯನ್ನಿಡುತ್ತಿದ್ದೇನೆ.
ವಧು - ಸಂಪತ್ತಿನಲ್ಲಿ,ದುಃಖದಲ್ಲಿ ಸದಾ ನಿಮ್ಮೊಂದಿಗಿರುತ್ತೇನೆ.ವಿಶ್ವಾಸ ಹಾಗೂ ಪ್ರಾಮಾಣಿಕತೆಯಿಂದ ನಿಮ್ಮೊಂದಿಗೆ ಜೀವಿಸುತ್ತೇನೆ.ನಿಮ್ಮ ಆಸೆಗಳನ್ನು ಸದಾ ನೆರವೇರಿಸುತ್ತೇನೆ.
*ಆರನೇ ಹೆಜ್ಜೆ..*
ವರ - ಎಲ್ಲ ಋತುಗಳಲ್ಲೂ ಸಂತೋಷವನ್ನು ನೀಡುವೆಯೆಂಬ ಭರವಸೆಯಿಂದ ಆರನೇ ಹೆಜ್ಜೆಯನ್ನಿಡುತ್ತಿದ್ದೇನೆ.
ವಧು-- ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲೂ,ಎಲ್ಲ ವಿಧದ ಸಂತೋಷ,ದುಃಖಗಳಲ್ಲೂ ನಾನು ನಿಮ್ಮೊಂದಿಗಿರುತ್ತೇನೆ.ಯಾವಾಗಲೂ ನಿಮ್ಮ ಸಂತೋಷವನ್ನೇ ಬಯಸುತ್ತೇನೆ.
*ಏಳನೇ ಹೆಜ್ಜೆ..*
ವರ -- ಪರಸ್ಪರರು ಅರಿತು ಜೀವನದುದ್ದಕ್ಕೂ ಜೊತೆಯಾಗಿ ಬಾಳೋಣ ಎನ್ನುತ್ತಾ ನಿನ್ನೊಡನೆ ಎಳನೇ ಹೆಜ್ಜೆಯನ್ನಿಡುವೆ.
ವಧು --- ದೇವಾನುದೇವತೆಗಳ ಅನುಗ್ರಹದಿಂದ,ನಿಮ್ಮೊಡನೆ ಏಳು ಹೆಜ್ಜೆ ನಡೆದು ನಿಮ್ಮ ಪತ್ನಿಯಾಗಿರುವೆ.ಯಾವ ಪ್ರತಿಜ್ಞೆಗಳನ್ನು ಮಾಡಿದ್ದೇವೆಯೋ ಅದನ್ನು ಶಿರಸಾವಹಿಸಿ ಪಾಲಿಸೋಣ.ಪರಸ್ಪರರು ಎಂದಿಗೂ ವಿಶ್ವಾಸದಿಂದಿರೋಣ.ಯಾವಾಗಲೂ ಒಬ್ಬರನ್ನೊಬ್ಬರು ಪ್ರೀತಿಸೋಣ.
ಇದನ್ನು ಪ್ರತಿಯೊಬ್ಬರು ಮನಃ ಪೂರ್ವಕ ವಾಗಿ ಅರಿತು ಬಾಳಿದಾಗ ವಿಚ್ಛೇದನದ ಅನ್ನುವ ಪದ ಯಾವ ಪತಿಪತ್ನಿಯ ಜೀವನದಲ್ಲಿ ಬರುವದೇ ಇಲ್ಲ .. ಆದರೆ ಇವತ್ತಿನ ದಿನ ಎಲ್ಲರೂ ಸ್ವಾಭಿಮಾನ ಅನ್ನುವ ಅಹಂ ಬಲಿಯಾಗಿ ಜೀವನದ ಹಾದಿ ತಪ್ಪುತ್ತಿದ್ದಾರೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ