ಪ್ರತಿಯೊಬ್ಬರ ಜನ್ಮ ಅವರ ಪೂರ್ವದ ಕರ್ಮದ ಫಲವಾಗಿ ಬಂದಿರುತ್ತವೆ ಎಂದು ಹೇಳುತ್ತದೆ ಶಾಸ್ತ್ರ..
ನಿಜ ಕೆಲವರು ಶ್ರೀಮಂತರಾಗಿ ಹುಟ್ಟಿದ್ದರೆ, ಕೆಲವರು ಬಡಕುಟುಂಬದಲ್ಲಿ ಜನಿಸಿರುತ್ತಾರೆ...
ಹುಟ್ಟು ಬಡವರು ಕೆಲವೊಮ್ಮೆ ಶ್ರೀಮಂತರೂ ಆಗಬಹುದು , ಶ್ರೀಮಂತರೂ ಒಂದೇ ಕ್ಷಣದಲ್ಲಿ ಬಡವರೂ ಆಗಬಹುದು..
ಇವೆಲ್ಲವನ್ನೂ ನಿರ್ಧರಿಸುವುದೇ ಕರ್ಮಫಲದಾತ ಎನಿಸಿದ ಶನಿ ಎಂಬ ಪ್ರಕೃತಿ ತತ್ವ..
ಕೆಲವರು ಹೇಳಬಹುದು ಈಗಿನ ಕಾಲದಲ್ಲಿ ಅನ್ಯಾಯ, ಅಧರ್ಮದ ದಾರಿಯಲ್ಲಿ ಹೋದರೆ ಮಾತ್ರ ಬದುಕಲು ಸಾಧ್ಯ, ಅಂತಹವರನ್ನು ದೇವರು ಸಹ ಏನೂ ಮಾಡುವುದಿಲ್ಲ, ಜೀವನ ಪೂರ್ತಿ ಸುಖವಾಗಿ ಬದುಕಿರುತ್ತಾರೆ ಎಂದು...
ಸತ್ಯ ದಲ್ಲಿ ನ್ಯಾಯದಲ್ಲಿ ಬದುಕಿದವನಿಗೆ ದೇವರು ಒಳ್ಳೆಯದೇ ಮಾಡುವುದಿಲ್ಲ, ಅವನು ಯಾವಾಗಲೂ ಕಷ್ಟ ಪಡುತ್ತಿರುತ್ತಾನೆಂದು...
....
ಸತ್ಯದ ದಾರಿ ಹಾಗೆನೆ ,ಮೊದಲು ಕಷ್ಟದ ತರಹ ಅನಿಸಬಹುದು. ಸತ್ಯದ ಪರೀಕ್ಷೆ ಮುಗಿದ ಮೇಲೆ ಎಲ್ಲವೂ ನಿರಾಳ..
ಆದರೆ ತಪ್ಪು ದಾರಿಯಲ್ಲಿ ಹೋದವನ ಬದುಕಿನ ಅಂತ್ಯ ಹಾಗೂ ಮುಂದಿನ ಜನ್ಮಕ್ಕೆ ಸಿದ್ದತೆ ನಡೆಸುವ ಸಮಯ ಬಂದಾಗ ಮಾಡಿದ ಅನ್ಯಾಯದ ಫಲವನ್ನು ಸ್ವೀಕರಿಸಲು ಸಿದ್ದರಿರಬೇಕು ಅನ್ನುವುದನ್ನು ಮರೆತಿರುತ್ತಾನೆ.. ಅದಾಗಲೇ ಕರ್ಮಫಲದಾತ ಶನಿ ತನ್ನ ವಕ್ರದೃಷ್ಟಿ ಅವನ ಮೇಲೆ ಬೀರುತ್ತಾನೆ..
ಸತ್ಯ ,ಧರ್ಮದಲ್ಲಿ ಬದುಕಿದವನಿಗೆ ಯಾವಾಗಲೂ ಕಷ್ಟ ಇರುವುದೆಂದು, ಇವರ ವಾದ ಇರಬಹುದು.. ಆದರೆ ಆತ ಮಾನಸಿಕವಾಗಿ ನೆಮ್ಮದಿಯಾಗಿರುತ್ತಾನೆ, ಆನಂದದಿರುತ್ತಾನೆ, ಮುಂದಿನ ಹೊಸ ಜನ್ಮದ ಅದ್ದೂರಿ ರಾಜವೈಭೋಗದ ಜೀವನಕ್ಕೆ ಅರ್ಹತೆ ಗಳಿಸಿರುತ್ತಾನೆ ಅನ್ನುವುದು ಅವರಿಗೆ ತಿಳಿದಿರುವುದಿಲ್ಲ...
ಇವೆಲ್ಲಾ ಸುಳ್ಳು , ಪುನರ್ಜನ್ಮ, ಕರ್ಮ ಎಲ್ಲಾ ಸುಳ್ಳು ಎನ್ನುವವರೂ ಒಮ್ಮೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿದಾಗ ನರಕದ ದರ್ಶನ ಅವರಿಗೆ ಆಗುತ್ತದೆ ಒಮ್ಮೆ...
ಕರ್ಮಫಲದಾತ ಶನಿ ಹೇಗೆ ತನ್ನ ವಕ್ರದೃಷ್ಟಿ ಬೀರುತ್ತಾನೆಂದರೆ....
ಒಬ್ಬ ಮೆದುಳಿನ ಸಣ್ಣ ನರದ ತೊಂದರೆಯಿಂದ ಮಾನಸಿಕವಾಗಿ , ದೈಹಿಕವಾಗಿ ನರಳಾಡುತ್ತಿರುತ್ತಾನೆ..
ಮತ್ತೊಬ್ಬ ಕುಡಿತದ ಪರಿಣಾಮ ದೇಹದ ಪ್ರಮುಖ ಅಂಗಗಳಾದ ಮೇದೋಜೀರಕಾಂಗ , ಪಿತ್ತಜನಕಾಂಗಗಳನ್ನ ಕಳೆದು ಕೊಂಡು ಅಂತಿಮ ಯಾತ್ರೆಗೆ ಸಿದ್ದತೆ ಮಾಡಿಕೊಂಡಿರುತ್ತಾನೆ ..
ಇನ್ನು ಹಲವರು ಅತೀಯಾದ ,ಕ್ರಮಬದ್ದವಲ್ಲದ ಆಹಾರ ಸೇವನೆಯಿಂದ ಸಕ್ಕರೆ ಖಾಯಿಲೆ, ರಕ್ತದೊತ್ತಡದಂತಹ ಮಾರಕ ಖಾಯಿಲೆಗಳಿಗೆ ತುತ್ತಾಗಿ ಜೀವನ ಪೂರ್ತಿ ಅನಾರೋಗ್ಯದ ದೇಹದೊಂದಿಗೆ ನರಕಯಾತನೆ ಅನುಭವಿಸುತ್ತಾರೆ...
ಅದೇ ರೀತಿ ಅಪಘಾತದಿಂದ ಕೈ, ಕಾಲು, ಕಣ್ಣು ,ಮೂಗು ಈ ರೀತಿ ಅಂಗಾಂಗ ಕಳೆದುಕೊಂಡು ಬೇರೆಯವರಿಗೆ ಹೊರೆಯಾಗಿ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ....
ಇದೇ ಅಲ್ಲವೇ ಕರ್ಮ....
ಈ ಭೂಮಿ ಮೇಲೆ ನಮಗಿಷ್ಟ ಬಂದ ಹಾಗೆ ಬದುಕಿದರೆ, ಅಂದರೆ ಅನ್ಯಾಯ ,ಅಧರ್ಮದಲ್ಲಿ ಬದುಕುತ್ತೇನೆ ಅಂದರೆ ಈ ನರಕಲೋಕದ ದರ್ಶನಕ್ಕೆ ಸಿದ್ದರಾಗಲೇಬೇಕು...
ಅದೇ ಸತ್ಯ, ಧರ್ಮದಲ್ಲಿ ಬದುಕುತ್ತೇನೆ , ಪ್ರಾಮಾಣಿಕವಾಗಿರುತ್ತೇನೆ ಎಂದು ಬಯಸುವವರಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆ ಯಾವುದೋ ಲೋಕದಲ್ಲಿ ಅಲ್ಲ.
ನಿಜ ಕೆಲವರು ಶ್ರೀಮಂತರಾಗಿ ಹುಟ್ಟಿದ್ದರೆ, ಕೆಲವರು ಬಡಕುಟುಂಬದಲ್ಲಿ ಜನಿಸಿರುತ್ತಾರೆ...
ಹುಟ್ಟು ಬಡವರು ಕೆಲವೊಮ್ಮೆ ಶ್ರೀಮಂತರೂ ಆಗಬಹುದು , ಶ್ರೀಮಂತರೂ ಒಂದೇ ಕ್ಷಣದಲ್ಲಿ ಬಡವರೂ ಆಗಬಹುದು..
ಇವೆಲ್ಲವನ್ನೂ ನಿರ್ಧರಿಸುವುದೇ ಕರ್ಮಫಲದಾತ ಎನಿಸಿದ ಶನಿ ಎಂಬ ಪ್ರಕೃತಿ ತತ್ವ..
ಕೆಲವರು ಹೇಳಬಹುದು ಈಗಿನ ಕಾಲದಲ್ಲಿ ಅನ್ಯಾಯ, ಅಧರ್ಮದ ದಾರಿಯಲ್ಲಿ ಹೋದರೆ ಮಾತ್ರ ಬದುಕಲು ಸಾಧ್ಯ, ಅಂತಹವರನ್ನು ದೇವರು ಸಹ ಏನೂ ಮಾಡುವುದಿಲ್ಲ, ಜೀವನ ಪೂರ್ತಿ ಸುಖವಾಗಿ ಬದುಕಿರುತ್ತಾರೆ ಎಂದು...
ಸತ್ಯ ದಲ್ಲಿ ನ್ಯಾಯದಲ್ಲಿ ಬದುಕಿದವನಿಗೆ ದೇವರು ಒಳ್ಳೆಯದೇ ಮಾಡುವುದಿಲ್ಲ, ಅವನು ಯಾವಾಗಲೂ ಕಷ್ಟ ಪಡುತ್ತಿರುತ್ತಾನೆಂದು...
....
ಸತ್ಯದ ದಾರಿ ಹಾಗೆನೆ ,ಮೊದಲು ಕಷ್ಟದ ತರಹ ಅನಿಸಬಹುದು. ಸತ್ಯದ ಪರೀಕ್ಷೆ ಮುಗಿದ ಮೇಲೆ ಎಲ್ಲವೂ ನಿರಾಳ..
ಆದರೆ ತಪ್ಪು ದಾರಿಯಲ್ಲಿ ಹೋದವನ ಬದುಕಿನ ಅಂತ್ಯ ಹಾಗೂ ಮುಂದಿನ ಜನ್ಮಕ್ಕೆ ಸಿದ್ದತೆ ನಡೆಸುವ ಸಮಯ ಬಂದಾಗ ಮಾಡಿದ ಅನ್ಯಾಯದ ಫಲವನ್ನು ಸ್ವೀಕರಿಸಲು ಸಿದ್ದರಿರಬೇಕು ಅನ್ನುವುದನ್ನು ಮರೆತಿರುತ್ತಾನೆ.. ಅದಾಗಲೇ ಕರ್ಮಫಲದಾತ ಶನಿ ತನ್ನ ವಕ್ರದೃಷ್ಟಿ ಅವನ ಮೇಲೆ ಬೀರುತ್ತಾನೆ..
ಸತ್ಯ ,ಧರ್ಮದಲ್ಲಿ ಬದುಕಿದವನಿಗೆ ಯಾವಾಗಲೂ ಕಷ್ಟ ಇರುವುದೆಂದು, ಇವರ ವಾದ ಇರಬಹುದು.. ಆದರೆ ಆತ ಮಾನಸಿಕವಾಗಿ ನೆಮ್ಮದಿಯಾಗಿರುತ್ತಾನೆ, ಆನಂದದಿರುತ್ತಾನೆ, ಮುಂದಿನ ಹೊಸ ಜನ್ಮದ ಅದ್ದೂರಿ ರಾಜವೈಭೋಗದ ಜೀವನಕ್ಕೆ ಅರ್ಹತೆ ಗಳಿಸಿರುತ್ತಾನೆ ಅನ್ನುವುದು ಅವರಿಗೆ ತಿಳಿದಿರುವುದಿಲ್ಲ...
ಇವೆಲ್ಲಾ ಸುಳ್ಳು , ಪುನರ್ಜನ್ಮ, ಕರ್ಮ ಎಲ್ಲಾ ಸುಳ್ಳು ಎನ್ನುವವರೂ ಒಮ್ಮೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿದಾಗ ನರಕದ ದರ್ಶನ ಅವರಿಗೆ ಆಗುತ್ತದೆ ಒಮ್ಮೆ...
ಕರ್ಮಫಲದಾತ ಶನಿ ಹೇಗೆ ತನ್ನ ವಕ್ರದೃಷ್ಟಿ ಬೀರುತ್ತಾನೆಂದರೆ....
ಒಬ್ಬ ಮೆದುಳಿನ ಸಣ್ಣ ನರದ ತೊಂದರೆಯಿಂದ ಮಾನಸಿಕವಾಗಿ , ದೈಹಿಕವಾಗಿ ನರಳಾಡುತ್ತಿರುತ್ತಾನೆ..
ಮತ್ತೊಬ್ಬ ಕುಡಿತದ ಪರಿಣಾಮ ದೇಹದ ಪ್ರಮುಖ ಅಂಗಗಳಾದ ಮೇದೋಜೀರಕಾಂಗ , ಪಿತ್ತಜನಕಾಂಗಗಳನ್ನ ಕಳೆದು ಕೊಂಡು ಅಂತಿಮ ಯಾತ್ರೆಗೆ ಸಿದ್ದತೆ ಮಾಡಿಕೊಂಡಿರುತ್ತಾನೆ ..
ಇನ್ನು ಹಲವರು ಅತೀಯಾದ ,ಕ್ರಮಬದ್ದವಲ್ಲದ ಆಹಾರ ಸೇವನೆಯಿಂದ ಸಕ್ಕರೆ ಖಾಯಿಲೆ, ರಕ್ತದೊತ್ತಡದಂತಹ ಮಾರಕ ಖಾಯಿಲೆಗಳಿಗೆ ತುತ್ತಾಗಿ ಜೀವನ ಪೂರ್ತಿ ಅನಾರೋಗ್ಯದ ದೇಹದೊಂದಿಗೆ ನರಕಯಾತನೆ ಅನುಭವಿಸುತ್ತಾರೆ...
ಅದೇ ರೀತಿ ಅಪಘಾತದಿಂದ ಕೈ, ಕಾಲು, ಕಣ್ಣು ,ಮೂಗು ಈ ರೀತಿ ಅಂಗಾಂಗ ಕಳೆದುಕೊಂಡು ಬೇರೆಯವರಿಗೆ ಹೊರೆಯಾಗಿ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ....
ಇದೇ ಅಲ್ಲವೇ ಕರ್ಮ....
ಈ ಭೂಮಿ ಮೇಲೆ ನಮಗಿಷ್ಟ ಬಂದ ಹಾಗೆ ಬದುಕಿದರೆ, ಅಂದರೆ ಅನ್ಯಾಯ ,ಅಧರ್ಮದಲ್ಲಿ ಬದುಕುತ್ತೇನೆ ಅಂದರೆ ಈ ನರಕಲೋಕದ ದರ್ಶನಕ್ಕೆ ಸಿದ್ದರಾಗಲೇಬೇಕು...
ಅದೇ ಸತ್ಯ, ಧರ್ಮದಲ್ಲಿ ಬದುಕುತ್ತೇನೆ , ಪ್ರಾಮಾಣಿಕವಾಗಿರುತ್ತೇನೆ ಎಂದು ಬಯಸುವವರಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆ ಯಾವುದೋ ಲೋಕದಲ್ಲಿ ಅಲ್ಲ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ