ನಾನು ಯಾರು ?
ನಾನು ಬಂದದ್ದು ಎಲ್ಲಿಂದ ??
....
ಎಂಬ ಪ್ರಶ್ನೆ ತಲೆಯಲ್ಲಿ ಮೂಡಿದರೆ ...
ನೀವು ಅನ್ವೇಷಣೆಗೆ ತಯಾರಾದಿರಿ ಎಂದರ್ಥ....
ಇಂತಹ ಪ್ರಶ್ನೆಯೊಂದು ಸಾಮಾನ್ಯನು ತಾನು ಬಂದಿದ್ದು ತಂದೆ, ತಾಯಿಯ ಮೂಲಕ, ತಂದೆ ತಾಯಿ ಅವರ ಮಾತಾ ಪಿತೃ ಮೂಲಕ ಈ ತರಹ ತನಗೆ ಅಗತ್ಯವಿಲ್ಲದ ಪ್ರಶ್ನೆಗೆ ಉಢಾಫೆಯಾಗಿ ಉತ್ತರ ಕೊಡಬಹುದು...
ಆದರೆ ಅಸಾಮಾನ್ಯ ತನ್ನ ಹುಟ್ಟಿನ ಮರ್ಮವನ್ನು ಅರಿಯಲು ತನ್ನ ಜನ್ಮದ ಗಡಿಯಾರವನ್ನು ಹಿಂದಕ್ಕೆ ತಿರುಗಿಸಲು ಪ್ರಾರಂಭಿಸುತ್ತಾನೆ...
ಆಗಲೇ ಜ್ಞಾನದ ಹಸಿವು ಶುರುವಾಗುವುದು.
ಪ್ರಕೃತಿ ಇಂತಹ ಅಸಾಮಾನ್ಯನಿಗೆ , ಕುತೂಹಲಿಗೆ ಹುಡುಕಾಟಕ್ಕೆ ಅಥವಾ ಅನ್ವೇಷಣೆಗೆ ದಾರಿ ಮಾಡುತ್ತದೆ...
ಹೌದು ಜ್ಞಾನದ ಹಂಬಲವಿರುವವರಿಗೆ , ಅದರ ಬೆನ್ನತಿ ಹೋದವರಿಗೆ ಪ್ರಕೃತಿ ಎಂದೂ ನಿರಾಶೆ ಮಾಡುವುದಿಲ್ಲ. ಅದು ಅವರ ಬೆಂಗವಳಾಗಿ ಸಾತ್ ಕೊಡುತ್ತದೆ....
ಈವತ್ತು ಹಲವಾರು ಮಾಯೆಯ ಹಿಂದೆ , ಅಂದರೆ ಹೆಣ್ಣು, ಹೊಣ್ಣು, ಮಣ್ಣು ಇವುಗಳ ಹಿಂದೆ ಹೋಗಲು ಬಯಸಿದರೆ, ಬೆರಳೆಣಿಕೆಯ ಮಂದಿ ಮಾತ್ರ ಇವೆಲ್ಲವನ್ನೂ ಲೆಕ್ಕಕ್ಕೆ ತೆಗೆಯದೆ ಬರೀ ಜ್ಞಾನದ ಹಿಂದೆ ಹೋಗಲು ತಯಾರಾದ ಇವರಿಗೆ ಪ್ರಕೃತಿಯ ಆರ್ಶಿವಾದ, ಪರಮಾತ್ಮನ ಅಭಯ ಹಸ್ತ ಯಾವಾಗಲೂ ಇದ್ದೇ ಇರುತ್ತೆ, ಅದು ಮಾಯೆಯ ಹಿಂದೆ ಬಿದ್ದವರಿಗಿಂತಲೂ ಅಧಿಕ ಪಟ್ಟು. ಏಕೆಂದರೆ ಜ್ಞಾನದ ಮೂಲ ಶುರುವಾಗುವುದೇ ದೇವರ ಬಗ್ಗೆ ತಿಳಿಯುವುದರ ಮೂಲಕ.....
ಹಾಗಂತ ಲೌಕಿಕ ಜೀವನದಲ್ಲಿರುವ, ಬದುಕಿಗಾಗಿ ಹೊರಾಟ ನಡೆಸುವ ಸಂಸಾರಿಗಳನ್ನು ಕಡೆಗಣಿಸುವುದಿಲ್ಲ. ಇವರು ಸಹ ಸೃಷ್ಟಿ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುವ ಪ್ರಕೃತಿಯ ಪ್ರಮುಖ ಭಾಗಗಳೆಂದೇ ಭಾವಿಸುವೆ....
ಇರಲಿ ಬಿಡಿ,
ಸೃಷ್ಟಿಯ ಮೂಲದ ಬಗ್ಗೆ ಹಿಂದೆ ತಿಳಿದಿದ್ದೆವು,
ಆದಿಯಲ್ಲಿ ಅನಂತವೂ, ಅದ್ವಿತೀಯವೂ ಆತ್ಮತತ್ವದಲ್ಲಿ ಶುಕ್ರಸ್ಫೋಟವಾದಾಗ ಉಂಟಾದ ಅಗಾಧ ಪ್ರಮಾಣದ ಶಕ್ತಿಯಿಂದಾಗಿ ' ಉದ್ಗೀಥ ' ಎಂಬ ಮಹಾಕಂಪನವೊಂದು ಕಾಣಿಸಿಕೊಂಡಿತಲ್ಲದೇ ' ಅಹಸ್ ' ಎಂಬ ಭ್ರಾಮಕದ್ರವ್ಯವೂ ಅಸ್ತಿತ್ವಕ್ಕೆ ಬಂತು. ಈ ಅಹಸ್ ದ್ರವ್ಯವೂ ಯಾವುದೇ ಅಯಾಮಗಳಿಲ್ಲದೇ ಅಸ್ತಿತ್ವವನ್ನು ಪಡೆದಿರುವುದರಿಂದ ಅದನ್ನು ಕೇವಲ ಕಾಂತಿ ಮಾತ್ರ ಎಂದು ಉಪನಿಷತ್ತುಗಳು ವಿವರಿಸಿದೆ. ಅಂತಹ ಅಹಸ್ ದ್ರವ್ಯವು ವಿಶ್ವವೆಲ್ಲಾ ವ್ಯಾಪಿಸಿರುವಾಗ ಶುಕ್ರಸ್ಫೋಟದ ಸಮಯದಲ್ಲಿ ಸಿಡಿದ ಆತ್ಮತತ್ತ್ವದ ಅಸಂಖ್ಯಾತ ಕಿಡಿಗಳು ಅಂತಹ ಅರ್ಕದ್ರವ್ಯದ ಮೇಲೆ ಬಿದ್ದವು...
( ಮೂಲ ಆತ್ಮತತ್ತ್ವದಂತೆಯೇ ಅದರಿಂದ ಸಿಡಿದ ಕಿಡಿಗಳಿಗೂ ಯಾವುದೇ ರೂಪರೇಖೆ, ಬಣ್ಣ, ಗುಣ, ವಾಸನೆ ಹಾಗೆನೇ ಯಾವುದೇ ಆಯಾಮಗಳು ಇರುವುದಿಲ್ಲ. ಆತ್ಮತತ್ತ್ವವನ್ನು ಬ್ರಹ್ಮ ಗಾತ್ರದ ಶೂನ್ಯ ಎಂದರೆ ಅದರ ಕಿಡಿಯನ್ನು ಸೂಕ್ಷ್ಮಗಾತ್ರದ ಶೂನ್ಯ ಎನ್ನಬಹುದಷ್ಟೇ )
ಆಗ ಅದೇ ಅಹಸ್ ದ್ರವ್ಯವು ಆತ್ಮತತ್ತ್ವದ ಕಿಡಿಗಳ ಸುತ್ತ ' ಅಹಂ ' ದ್ರವ್ಯವಾಗಿ ಆವರಿಸಿ ಅವೆಲ್ಲವುಗಳಿಗೆ ಸ್ವತಂತ್ರ ಅಸ್ತಿತ್ವವನ್ನು ಪಡೆಯುವಂತೆ ಮಾಡಿತು.
ಜೀವಾತ್ಮಕ್ಕೆ ನಾನು ಎಂಬ ಭಾವನೆ ಬರಲು ಈ ಅಹಂ ದ್ರವ್ಯವೇ ಕಾರಣ. ಈ ಅಹಂ ದ್ರವ್ಯವು ಸ್ತ್ರೀ ತತ್ತ್ವದ ಪಾತ್ರವನ್ನು ವಹಿಸಿ ಆತ್ಮತತ್ತ್ವವೆಂಬ ಪುರುಷ ವಿಭಾಗದ ಕಿಡಿಗಳ ಜೊತೆ ಸೇರಿ ಆತ್ಮಮಿಥುನವಾಗಿ ಅದು #ಜೀವಾತ್ಮ ಎನಿಸಿತು
ನಾನು ಬಂದದ್ದು ಎಲ್ಲಿಂದ ??
....
ಎಂಬ ಪ್ರಶ್ನೆ ತಲೆಯಲ್ಲಿ ಮೂಡಿದರೆ ...
ನೀವು ಅನ್ವೇಷಣೆಗೆ ತಯಾರಾದಿರಿ ಎಂದರ್ಥ....
ಇಂತಹ ಪ್ರಶ್ನೆಯೊಂದು ಸಾಮಾನ್ಯನು ತಾನು ಬಂದಿದ್ದು ತಂದೆ, ತಾಯಿಯ ಮೂಲಕ, ತಂದೆ ತಾಯಿ ಅವರ ಮಾತಾ ಪಿತೃ ಮೂಲಕ ಈ ತರಹ ತನಗೆ ಅಗತ್ಯವಿಲ್ಲದ ಪ್ರಶ್ನೆಗೆ ಉಢಾಫೆಯಾಗಿ ಉತ್ತರ ಕೊಡಬಹುದು...
ಆದರೆ ಅಸಾಮಾನ್ಯ ತನ್ನ ಹುಟ್ಟಿನ ಮರ್ಮವನ್ನು ಅರಿಯಲು ತನ್ನ ಜನ್ಮದ ಗಡಿಯಾರವನ್ನು ಹಿಂದಕ್ಕೆ ತಿರುಗಿಸಲು ಪ್ರಾರಂಭಿಸುತ್ತಾನೆ...
ಆಗಲೇ ಜ್ಞಾನದ ಹಸಿವು ಶುರುವಾಗುವುದು.
ಪ್ರಕೃತಿ ಇಂತಹ ಅಸಾಮಾನ್ಯನಿಗೆ , ಕುತೂಹಲಿಗೆ ಹುಡುಕಾಟಕ್ಕೆ ಅಥವಾ ಅನ್ವೇಷಣೆಗೆ ದಾರಿ ಮಾಡುತ್ತದೆ...
ಹೌದು ಜ್ಞಾನದ ಹಂಬಲವಿರುವವರಿಗೆ , ಅದರ ಬೆನ್ನತಿ ಹೋದವರಿಗೆ ಪ್ರಕೃತಿ ಎಂದೂ ನಿರಾಶೆ ಮಾಡುವುದಿಲ್ಲ. ಅದು ಅವರ ಬೆಂಗವಳಾಗಿ ಸಾತ್ ಕೊಡುತ್ತದೆ....
ಈವತ್ತು ಹಲವಾರು ಮಾಯೆಯ ಹಿಂದೆ , ಅಂದರೆ ಹೆಣ್ಣು, ಹೊಣ್ಣು, ಮಣ್ಣು ಇವುಗಳ ಹಿಂದೆ ಹೋಗಲು ಬಯಸಿದರೆ, ಬೆರಳೆಣಿಕೆಯ ಮಂದಿ ಮಾತ್ರ ಇವೆಲ್ಲವನ್ನೂ ಲೆಕ್ಕಕ್ಕೆ ತೆಗೆಯದೆ ಬರೀ ಜ್ಞಾನದ ಹಿಂದೆ ಹೋಗಲು ತಯಾರಾದ ಇವರಿಗೆ ಪ್ರಕೃತಿಯ ಆರ್ಶಿವಾದ, ಪರಮಾತ್ಮನ ಅಭಯ ಹಸ್ತ ಯಾವಾಗಲೂ ಇದ್ದೇ ಇರುತ್ತೆ, ಅದು ಮಾಯೆಯ ಹಿಂದೆ ಬಿದ್ದವರಿಗಿಂತಲೂ ಅಧಿಕ ಪಟ್ಟು. ಏಕೆಂದರೆ ಜ್ಞಾನದ ಮೂಲ ಶುರುವಾಗುವುದೇ ದೇವರ ಬಗ್ಗೆ ತಿಳಿಯುವುದರ ಮೂಲಕ.....
ಹಾಗಂತ ಲೌಕಿಕ ಜೀವನದಲ್ಲಿರುವ, ಬದುಕಿಗಾಗಿ ಹೊರಾಟ ನಡೆಸುವ ಸಂಸಾರಿಗಳನ್ನು ಕಡೆಗಣಿಸುವುದಿಲ್ಲ. ಇವರು ಸಹ ಸೃಷ್ಟಿ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುವ ಪ್ರಕೃತಿಯ ಪ್ರಮುಖ ಭಾಗಗಳೆಂದೇ ಭಾವಿಸುವೆ....
ಇರಲಿ ಬಿಡಿ,
ಸೃಷ್ಟಿಯ ಮೂಲದ ಬಗ್ಗೆ ಹಿಂದೆ ತಿಳಿದಿದ್ದೆವು,
ಆದಿಯಲ್ಲಿ ಅನಂತವೂ, ಅದ್ವಿತೀಯವೂ ಆತ್ಮತತ್ವದಲ್ಲಿ ಶುಕ್ರಸ್ಫೋಟವಾದಾಗ ಉಂಟಾದ ಅಗಾಧ ಪ್ರಮಾಣದ ಶಕ್ತಿಯಿಂದಾಗಿ ' ಉದ್ಗೀಥ ' ಎಂಬ ಮಹಾಕಂಪನವೊಂದು ಕಾಣಿಸಿಕೊಂಡಿತಲ್ಲದೇ ' ಅಹಸ್ ' ಎಂಬ ಭ್ರಾಮಕದ್ರವ್ಯವೂ ಅಸ್ತಿತ್ವಕ್ಕೆ ಬಂತು. ಈ ಅಹಸ್ ದ್ರವ್ಯವೂ ಯಾವುದೇ ಅಯಾಮಗಳಿಲ್ಲದೇ ಅಸ್ತಿತ್ವವನ್ನು ಪಡೆದಿರುವುದರಿಂದ ಅದನ್ನು ಕೇವಲ ಕಾಂತಿ ಮಾತ್ರ ಎಂದು ಉಪನಿಷತ್ತುಗಳು ವಿವರಿಸಿದೆ. ಅಂತಹ ಅಹಸ್ ದ್ರವ್ಯವು ವಿಶ್ವವೆಲ್ಲಾ ವ್ಯಾಪಿಸಿರುವಾಗ ಶುಕ್ರಸ್ಫೋಟದ ಸಮಯದಲ್ಲಿ ಸಿಡಿದ ಆತ್ಮತತ್ತ್ವದ ಅಸಂಖ್ಯಾತ ಕಿಡಿಗಳು ಅಂತಹ ಅರ್ಕದ್ರವ್ಯದ ಮೇಲೆ ಬಿದ್ದವು...
( ಮೂಲ ಆತ್ಮತತ್ತ್ವದಂತೆಯೇ ಅದರಿಂದ ಸಿಡಿದ ಕಿಡಿಗಳಿಗೂ ಯಾವುದೇ ರೂಪರೇಖೆ, ಬಣ್ಣ, ಗುಣ, ವಾಸನೆ ಹಾಗೆನೇ ಯಾವುದೇ ಆಯಾಮಗಳು ಇರುವುದಿಲ್ಲ. ಆತ್ಮತತ್ತ್ವವನ್ನು ಬ್ರಹ್ಮ ಗಾತ್ರದ ಶೂನ್ಯ ಎಂದರೆ ಅದರ ಕಿಡಿಯನ್ನು ಸೂಕ್ಷ್ಮಗಾತ್ರದ ಶೂನ್ಯ ಎನ್ನಬಹುದಷ್ಟೇ )
ಆಗ ಅದೇ ಅಹಸ್ ದ್ರವ್ಯವು ಆತ್ಮತತ್ತ್ವದ ಕಿಡಿಗಳ ಸುತ್ತ ' ಅಹಂ ' ದ್ರವ್ಯವಾಗಿ ಆವರಿಸಿ ಅವೆಲ್ಲವುಗಳಿಗೆ ಸ್ವತಂತ್ರ ಅಸ್ತಿತ್ವವನ್ನು ಪಡೆಯುವಂತೆ ಮಾಡಿತು.
ಜೀವಾತ್ಮಕ್ಕೆ ನಾನು ಎಂಬ ಭಾವನೆ ಬರಲು ಈ ಅಹಂ ದ್ರವ್ಯವೇ ಕಾರಣ. ಈ ಅಹಂ ದ್ರವ್ಯವು ಸ್ತ್ರೀ ತತ್ತ್ವದ ಪಾತ್ರವನ್ನು ವಹಿಸಿ ಆತ್ಮತತ್ತ್ವವೆಂಬ ಪುರುಷ ವಿಭಾಗದ ಕಿಡಿಗಳ ಜೊತೆ ಸೇರಿ ಆತ್ಮಮಿಥುನವಾಗಿ ಅದು #ಜೀವಾತ್ಮ ಎನಿಸಿತು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ