ನಿಮ್ಮ ಬದುಕಿಗೊಂದು ಬೆಳಕು....
ಕಥೆ: *ಜೀವನದಲ್ಲಿ ಎಚ್ಚರತಪ್ಪಿದರೇ ಸಾವು ನಿಶ್ಚಿತ.*
ಅದೊಂದು ಸಣ್ಣ ಕೊಳ. ಅಲ್ಲಿ ವಾಸವಿದ್ದ ಆಮೆಯೊಂದಕ್ಕೆ ಅಪರೂಪವೆಂಬಂತೆ ಎರಡು ಬೆಳ್ಳಕ್ಕಿಗಳೊಂದಿಗೆ ಸ್ನೇಹ ಬೆಳೆಯಿತು. ಅವುಗಳೊಂದಿಗೆ ಬಾಯಿಗೆ ಬಂದಂತೆ ವಟಗುಟ್ಟುತ್ತಿತ್ತು ಆಮೆ. ಇದಕ್ಕೆ ಪ್ರತಿಯಾಗಿ, ತಾವು ರೆಕ್ಕೆ ಬೀಸಿ ಹಾರುತ್ತ ವಿವಿಧ ಸುಂದರ ಸ್ಥಳಗಳನ್ನು ಕಣ್ತುಂಬಿಕೊಳ್ಳುವ, ಬಗೆಬಗೆಯ ಹಣ್ಣುಗಳನ್ನು ಸೇವಿಸುವ ವಿಷಯವನ್ನೆಲ್ಲ ಬೆಳ್ಳಕ್ಕಿಗಳು ಆಮೆಯೊಂದಿಗೆ ಹೇಳಿಕೊಂಡು ಸಂಭ್ರಮಿಸುತ್ತಿದ್ದವು. ಆದರೆ ಈ ಮಾತಿಗೆ ಉತ್ಸಾಹದಿಂದ ಪ್ರತಿಸ್ಪಂದಿಸುವ ಬದಲು ಆಮೆ ಮಂಕಾಗಿ ಕೂತಿರುತ್ತಿತ್ತು. ಬೆಳ್ಳಕ್ಕಿಗಳು ಕಾರಣ ಕೇಳಲಾಗಿ, *‘ನನಗೂ ಹಾರುವ ಶಕ್ತಿ ಇದ್ದಿದ್ದರೆ, ಇದಕ್ಕಿಂತ ದೊಡ್ಡ ಕೊಳದಲ್ಲಿ ಈಜಿಕೊಂಡು ವಿಹರಿಸಬಹುದಿತ್ತು, ನಿಮ್ಮಂತೆ ಬಗೆಬಗೆಯ ಆಹಾರವನ್ನು ಸೇವಿಸಬಹುದಿತ್ತು. ಆದರೇನು ಮಾಡಲಿ? ನನ್ನದು ಭಾರದ ದೇಹ, ಜತೆಗೆ ರೆಕ್ಕೆಯೂ ಇಲ್ಲ. ಈ ಪುಟ್ಟ ಕೊಳದ ಬಳಿಯೇ ಬಿದ್ದಿರಬೇಕು. ಎಲ್ಲ ನನ್ನ ದುರದೃಷ್ಟ’* ಎಂದು ಬೇಸರಿಸಿಕೊಂಡಿತು. ಬೆಳ್ಳಕ್ಕಿಗಳು ಆಮೆಯನ್ನು ಸಮಾಧಾನ ಮಾಡಿದವು, ಜತೆಗೆ ಒಂದು ಉಪಾಯವನ್ನೂ ಮಾಡಿದವು. ಒಂದು ಗಟ್ಟಿಯಾದ ಕೋಲನ್ನು ಎಲ್ಲಿಂದಲೋ ತಂದು ಆಮೆಯ ಎದುರಿಗಿಟ್ಟವು. ಏನಾಗುತ್ತಿದೆ ಎಂದು ಆಮೆಗೆ ಅರ್ಥವಾಗದೆ ಗಲಿಬಿಲಿಗೊಂಡಾಗ, *‘ಈ ಕೋಲಿನ ಮಧ್ಯಭಾಗವನ್ನು ಬಿಗಿಯಾಗಿ ಕಚ್ಚಿಹಿಡಿದುಕೋ. ಎಂಥ ಸಂದರ್ಭ ಬಂದರೂ ಬಾಯಿಬಿಡಬೇಡ. ನಾವಿಬ್ಬರು ಕೋಲಿನ ಎರಡೂ ತುದಿಗಳನ್ನು ಕಚ್ಚಿಕೊಂಡು ಬಾನಿಗೆ ಹಾರುತ್ತೇವೆ. ಇದರಿಂದಾಗಿ ಈ ಭೂಮಿಯ ವಿಹಂಗಮ ದೃಶ್ಯವನ್ನು ನೀನು ನೋಡಬಹುದು, ಜತೆಗೆ ನಾವು ಕರೆದುಕೊಂಡು ಹೋಗುವ ದೊಡ್ಡ ಕೊಳದಲ್ಲೂ ವಿಹರಿಸಬಹುದು’* ಎಂದು ಬೆಳ್ಳಕ್ಕಿಗಳು ಭರವಸೆ ನೀಡಿದವು. ಆಮೆ ಈ ಮಾತಿಗೆ ಸಂಭ್ರಮದಿಂದ ಸಮ್ಮತಿಸಿತು.
ಅಂದುಕೊಂಡಂತೆಯೇ ಆಮೆ ಮಧ್ಯಭಾಗವನ್ನು ಕಚ್ಚಿಹಿಡಿದುಕೊಂಡ ಕೋಲಿನ ಎರಡೂ ತುದಿಗಳನ್ನು ಬೆಳ್ಳಕ್ಕಿಗಳು ಕೊಕ್ಕಿನಲ್ಲಿ ಹಿಡಿದು ಆಕಾಶಕ್ಕೆ ನೆಗೆದವು. ಯಾನ ಹೀಗೆ ಸಾಗುತ್ತಿರುವಾಗ ನೆಲದಲ್ಲಿ ಆಟವಾಡುತ್ತಿದ್ದ ಮಕ್ಕಳು ಈ ವಿಲಕ್ಷಣ ದೃಶ್ಯ ಕಂಡು ಬೆರಗಾಗಿ ಕೇಕೆಹಾಕಿ ಕುಣಿಯಲಾರಂಭಿಸಿದರು. ಹಕ್ಕಿಗಳು ಸಾಗಿದೆಡೆಯೆಲ್ಲ ಹಿಂಬಾಲಿಸುತ್ತ ಜೋರಾಗಿ ಕೂಗಲಾರಂಭಿಸಿದರು. ಇದನ್ನು ಕೇಳಿ ಮತ್ತಷ್ಟು ಜನ ಸೇರಿದರು. ಈ ದೃಶ್ಯ ಕಂಡ ಆಮೆಗೆ ಅಸಾಧ್ಯ ಕೋಪ ಬಂದು, ಅವರೆಲ್ಲರನ್ನೂ ಗದರಿಸಬೇಕೆಂದುಕೊಂಡಿತು. ಕೋಲಿಗೆ ಕಚ್ಚಿಹಿಡಿದ ಬಾಯನ್ನು ಎಂಥ ಸಂದರ್ಭದಲ್ಲೂ ತೆರೆಯಬಾರದು ಎಂಬ ಬೆಳ್ಳಕ್ಕಿಗಳ ಎಚ್ಚರಿಕೆ ಅದಕ್ಕೆ ನೆನಪಾಗಲೇ ಇಲ್ಲ. ನೆಲದಲ್ಲಿ ನಿಂತು ಕೇಕೆಹಾಕುತ್ತಿರುವವರಿಗೆ ಬೈಯಬೇಕೆಂದು ಆಮೆ ಬಾಯಿ ತೆರೆಯುತ್ತಿದ್ದಂತೆ ಕೋಲಿನಾಸರೆ ಕಳಚಿ ನೆಲಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿತು.
ಕಥೆ: *ಜೀವನದಲ್ಲಿ ಎಚ್ಚರತಪ್ಪಿದರೇ ಸಾವು ನಿಶ್ಚಿತ.*
ಅದೊಂದು ಸಣ್ಣ ಕೊಳ. ಅಲ್ಲಿ ವಾಸವಿದ್ದ ಆಮೆಯೊಂದಕ್ಕೆ ಅಪರೂಪವೆಂಬಂತೆ ಎರಡು ಬೆಳ್ಳಕ್ಕಿಗಳೊಂದಿಗೆ ಸ್ನೇಹ ಬೆಳೆಯಿತು. ಅವುಗಳೊಂದಿಗೆ ಬಾಯಿಗೆ ಬಂದಂತೆ ವಟಗುಟ್ಟುತ್ತಿತ್ತು ಆಮೆ. ಇದಕ್ಕೆ ಪ್ರತಿಯಾಗಿ, ತಾವು ರೆಕ್ಕೆ ಬೀಸಿ ಹಾರುತ್ತ ವಿವಿಧ ಸುಂದರ ಸ್ಥಳಗಳನ್ನು ಕಣ್ತುಂಬಿಕೊಳ್ಳುವ, ಬಗೆಬಗೆಯ ಹಣ್ಣುಗಳನ್ನು ಸೇವಿಸುವ ವಿಷಯವನ್ನೆಲ್ಲ ಬೆಳ್ಳಕ್ಕಿಗಳು ಆಮೆಯೊಂದಿಗೆ ಹೇಳಿಕೊಂಡು ಸಂಭ್ರಮಿಸುತ್ತಿದ್ದವು. ಆದರೆ ಈ ಮಾತಿಗೆ ಉತ್ಸಾಹದಿಂದ ಪ್ರತಿಸ್ಪಂದಿಸುವ ಬದಲು ಆಮೆ ಮಂಕಾಗಿ ಕೂತಿರುತ್ತಿತ್ತು. ಬೆಳ್ಳಕ್ಕಿಗಳು ಕಾರಣ ಕೇಳಲಾಗಿ, *‘ನನಗೂ ಹಾರುವ ಶಕ್ತಿ ಇದ್ದಿದ್ದರೆ, ಇದಕ್ಕಿಂತ ದೊಡ್ಡ ಕೊಳದಲ್ಲಿ ಈಜಿಕೊಂಡು ವಿಹರಿಸಬಹುದಿತ್ತು, ನಿಮ್ಮಂತೆ ಬಗೆಬಗೆಯ ಆಹಾರವನ್ನು ಸೇವಿಸಬಹುದಿತ್ತು. ಆದರೇನು ಮಾಡಲಿ? ನನ್ನದು ಭಾರದ ದೇಹ, ಜತೆಗೆ ರೆಕ್ಕೆಯೂ ಇಲ್ಲ. ಈ ಪುಟ್ಟ ಕೊಳದ ಬಳಿಯೇ ಬಿದ್ದಿರಬೇಕು. ಎಲ್ಲ ನನ್ನ ದುರದೃಷ್ಟ’* ಎಂದು ಬೇಸರಿಸಿಕೊಂಡಿತು. ಬೆಳ್ಳಕ್ಕಿಗಳು ಆಮೆಯನ್ನು ಸಮಾಧಾನ ಮಾಡಿದವು, ಜತೆಗೆ ಒಂದು ಉಪಾಯವನ್ನೂ ಮಾಡಿದವು. ಒಂದು ಗಟ್ಟಿಯಾದ ಕೋಲನ್ನು ಎಲ್ಲಿಂದಲೋ ತಂದು ಆಮೆಯ ಎದುರಿಗಿಟ್ಟವು. ಏನಾಗುತ್ತಿದೆ ಎಂದು ಆಮೆಗೆ ಅರ್ಥವಾಗದೆ ಗಲಿಬಿಲಿಗೊಂಡಾಗ, *‘ಈ ಕೋಲಿನ ಮಧ್ಯಭಾಗವನ್ನು ಬಿಗಿಯಾಗಿ ಕಚ್ಚಿಹಿಡಿದುಕೋ. ಎಂಥ ಸಂದರ್ಭ ಬಂದರೂ ಬಾಯಿಬಿಡಬೇಡ. ನಾವಿಬ್ಬರು ಕೋಲಿನ ಎರಡೂ ತುದಿಗಳನ್ನು ಕಚ್ಚಿಕೊಂಡು ಬಾನಿಗೆ ಹಾರುತ್ತೇವೆ. ಇದರಿಂದಾಗಿ ಈ ಭೂಮಿಯ ವಿಹಂಗಮ ದೃಶ್ಯವನ್ನು ನೀನು ನೋಡಬಹುದು, ಜತೆಗೆ ನಾವು ಕರೆದುಕೊಂಡು ಹೋಗುವ ದೊಡ್ಡ ಕೊಳದಲ್ಲೂ ವಿಹರಿಸಬಹುದು’* ಎಂದು ಬೆಳ್ಳಕ್ಕಿಗಳು ಭರವಸೆ ನೀಡಿದವು. ಆಮೆ ಈ ಮಾತಿಗೆ ಸಂಭ್ರಮದಿಂದ ಸಮ್ಮತಿಸಿತು.
ಅಂದುಕೊಂಡಂತೆಯೇ ಆಮೆ ಮಧ್ಯಭಾಗವನ್ನು ಕಚ್ಚಿಹಿಡಿದುಕೊಂಡ ಕೋಲಿನ ಎರಡೂ ತುದಿಗಳನ್ನು ಬೆಳ್ಳಕ್ಕಿಗಳು ಕೊಕ್ಕಿನಲ್ಲಿ ಹಿಡಿದು ಆಕಾಶಕ್ಕೆ ನೆಗೆದವು. ಯಾನ ಹೀಗೆ ಸಾಗುತ್ತಿರುವಾಗ ನೆಲದಲ್ಲಿ ಆಟವಾಡುತ್ತಿದ್ದ ಮಕ್ಕಳು ಈ ವಿಲಕ್ಷಣ ದೃಶ್ಯ ಕಂಡು ಬೆರಗಾಗಿ ಕೇಕೆಹಾಕಿ ಕುಣಿಯಲಾರಂಭಿಸಿದರು. ಹಕ್ಕಿಗಳು ಸಾಗಿದೆಡೆಯೆಲ್ಲ ಹಿಂಬಾಲಿಸುತ್ತ ಜೋರಾಗಿ ಕೂಗಲಾರಂಭಿಸಿದರು. ಇದನ್ನು ಕೇಳಿ ಮತ್ತಷ್ಟು ಜನ ಸೇರಿದರು. ಈ ದೃಶ್ಯ ಕಂಡ ಆಮೆಗೆ ಅಸಾಧ್ಯ ಕೋಪ ಬಂದು, ಅವರೆಲ್ಲರನ್ನೂ ಗದರಿಸಬೇಕೆಂದುಕೊಂಡಿತು. ಕೋಲಿಗೆ ಕಚ್ಚಿಹಿಡಿದ ಬಾಯನ್ನು ಎಂಥ ಸಂದರ್ಭದಲ್ಲೂ ತೆರೆಯಬಾರದು ಎಂಬ ಬೆಳ್ಳಕ್ಕಿಗಳ ಎಚ್ಚರಿಕೆ ಅದಕ್ಕೆ ನೆನಪಾಗಲೇ ಇಲ್ಲ. ನೆಲದಲ್ಲಿ ನಿಂತು ಕೇಕೆಹಾಕುತ್ತಿರುವವರಿಗೆ ಬೈಯಬೇಕೆಂದು ಆಮೆ ಬಾಯಿ ತೆರೆಯುತ್ತಿದ್ದಂತೆ ಕೋಲಿನಾಸರೆ ಕಳಚಿ ನೆಲಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿತು.
ಎಚ್ಚರಿಕೆಯ ಮಾತನ್ನು ಕೇಳದಿದ್ದರೆ, ಅತಿಮಾತಿನ ಅಭ್ಯಾಸವಿಟ್ಟುಕೊಂಡಿದ್ದರೆ ಅಪಾಯ ಒದಗುವುದು ನಿಶ್ಚಿತ ಎಂಬುದಕ್ಕೆ ಇದೊಂದು ದೃಷ್ಟಾಂತ. ಮಾತು ಹಿತವಾಗಿ, ಮಿತವಾಗಿ ಇರಬೇಕಾದ್ದು ಯಾವತ್ತಿಗೂ ಒಳ್ಳೆಯದು. ಆದರೆ ಕೆಲವರಿಗೆ ವಿಷಯ ತಿಳಿಯಲಿ, ತಿಳಿಯದಿರಲಿ ವಿಪರೀತ ಮಾತಾಡುವ ದುರಭ್ಯಾಸ. ನಾವು ಯಾವುದೋ ಗುರಿಯನ್ನು ತಲುಪಲು ಹೊರಟಿರುವಾಗ, ಕಾಲೆಳೆಯುವವರು, ಟೀಕಿಸುವವರು ಇದ್ದೇ ಇರುತ್ತಾರೆ. ಹಾಗೆಂದು ಅವಕ್ಕೆಲ್ಲ ಪ್ರತಿಕ್ರಿಯಿಸಲು ಹೋಗಬಾರದು, ಗುರಿಯಿಂದ ಹಿಂದೇಟು ಹಾಕಬಾರದು. ನಮ್ಮ ಅಂತಃಕರಣ ಸಾಕ್ಷಿಯಂತೆ ಸರಿಯಾದ ದಾರಿಯಲ್ಲಿ ಮುನ್ನಡೆಯುತ್ತಲೇ ಇರಬೇಕು. ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಗುರಿ ತಲುಪಬೇಕು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ