ಸೋಮವಾರ, ಮಾರ್ಚ್ 19, 2018

ಶಿವಪುರಾಣಸಾರ

ಶಿವಪುರಾಣಸಾರ
ಪುರಾಣ - ಕಥಾಭಾಗ, ಕರ್ಮ/ಉಪಾಸನಾಭಾಗ, ತತ್ತ್ವನಿರೂಪಣಭಾಗ.
ಶಿವಪುರಾಣ - ೭ ಸಂಹಿತೆಗಳು - ೨೪,೦೦೦ ಶ್ಲೋಕಗಳು.
೧. ವಿದ್ಯೇಶ್ವರಸಂಹಿತಾ — ಶಿವಾರಾಧನಾಕ್ರಮ.
೨. ರುದ್ರಸಂಹಿತಾ — ಶಿವಕಥಾನಿರೂಣೆ.
೩. ಶತರುದ್ರಸಂಹಿತಾ — ಲೋಕೋಪಕಾರಕ್ಕಾಗಿ ಪರಮೇಶ್ವರನು ಕೈಗೊಂಡ ನೂರು ಅವತಾರಗಳ ವರ್ಣನೆ.
೪. ಕೋಟಿರುದ್ರಸಂಹಿತಾ — ಪ್ರಪಂಚದಲ್ಲಿರುವ ಶೈವಸಂಬಂಧವಾದ ತೀರ್ಥಕ್ಷೇತ್ರಮಾಹಾತ್ಮ್ಯವರ್ಣನೆ.
೫. ಉಮಾಸಂಹಿತಾ — ಪುಣ್ಯಪಾಪಗಳ ಫಲರೂಪವಾದ ಸ್ವರ್ಗ-ನರಕಾದಿಗಳ ವಿವರಣೆ.
೬. ಕೈಲಾಸಸಂಹಿತಾ — ಮತ್ತು
೭. ವಾಯವೀಯಸಂಹಿತಾ —
      ಕೊನೆಯ ಎರಡರಲ್ಲಿ  ಪ್ರಣವಸ್ವರೂಪ, ತತ್ತ್ವಮಸ್ಯಾದಿ ವಾಕ್ಯನಿರೂಪಣ            ಮುಂತಾದ ಉಪನಿಷದ್ವಾಕ್ಯವಿವರಣೆ.
ಶಿವ ⟫ ಸನತ್ಕುಮಾರ ⟫ ವ್ಯಾಸ ⟫ ಸೂತಮುನಿ ⟫ ಶೌನಕಾದಿಗಳು.
⟫ ಶಿವಪುರಾಣಮಾಹಾತ್ಮ್ಯ-
ಸ್ಕಾನ್ದಪುರಾಣಾನ್ತರ್ಗತ- ೭ ಅಧ್ಯಾಯಗಳು.
✦ ಅಧ್ಯಾಯ 1 : ಶಿವಪುರಾಣ-ಮಹಿಮವರ್ಣನಮ್
ಸರ್ವಸಿದ್ಧಾನ್ತನಿಷ್ಪನ್ನಂ ಭಕ್ತ್ಯಾದಿಕವಿವರ್ಧನಮ್ ।
ಶಿವತೋಷಕರಂ ದಿವ್ಯಂ ಶೃಣು ವತ್ಸ ರಸಾಯನಮ್ ‖ ಅ.1-ಶ್ಲೋ.7 ‖
ಕಾಲವ್ಯಾಲಮಹಾತ್ರಾಸ-ವಿಧ್ವಂಸಕರಮುತ್ತಮಮ್ ।
ಶೈವಂ ಪುರಾಣಂ ಪರಮಂ ಶಿವೇನೋಕ್ತಂ ಪುರಾ ಮುನೇ ‖1-8 ‖
ಚತುರ್ವಿಂಶತಿಸಾಹಸ್ರೋ ಗ್ರನ್ಥೋऽಯಂ ಸಪ್ತಸಂಹಿತಃ ।
ಭಕ್ತಿತ್ರಿಕಸುಸಂಪೂರ್ಣಃ ಶ್ರುಣುಯಾತ್ತಂ ಪರಾದರಾತ್ ||1-31||
(ಭಕ್ತಿತ್ರಿಕ= ಭಕ್ತಿ-ಜ್ಞಾನ-ವೈರಾಗ್ಯ)
     ಕಲಿಯುಗದಲ್ಲಿ ಜನರು ಸದ್ಗತಿಯನ್ನು ಪಡೆಯಲು ಸಾಧನಗಳಾವುವೆಂದು ಶೌನಕನು ಸೂತಮುನಿಯನ್ನು ಪ್ರಶ್ನಿಸಿದಾಗ, ಸೂತನು ಶಿವಪುರಾಣದ ಮಹಿಮೆಯನ್ನು ವಿವರಿಸುತ್ತಾನೆ. ಶಿವಪುರಾಣದ ಶ್ರವಣಫಲಗಳು, ಅದರ 7 ಸಂಹಿತೆಗಳ ವಿವರಣೆ, ಅದರಿಂದ ಮೋಕ್ಷದ ಸಿದ್ಧಿ- ಇವು ಈ ಅಧ್ಯಾಯದ ವಿಷಯಗಳು.
✦ ಅಧ್ಯಾಯ 2 : ದೇವರಾಜ-ಮುಕ್ತಿ-ವರ್ಣನಮ್
     ಶಿವಪುರಾಣ ಶ್ರವಣದಿಂದ ಯಾರು ಯಾರು ಸದ್ಗತಿ ಪಡೆದರೆಂಬ ಶೌನಕರ ಪ್ರಶ್ನೆಗೆ ಸೂತನು ದೇವರಾಜನೆಂಬ ಬ್ರಾಹ್ಮಣನ ಉಪಾಖ್ಯಾನವನ್ನು ವಿವರಿಸುತ್ತಾನೆ. ದೇವರಾಜನು ದುರಾಚಾರಿಯಾಗಿದ್ದರೂ, ಶಿವಪುರಾಣಶ್ರವಣದಿಂದ ಅವನಿಗೆ ಕೈಲಾಸಪ್ರಾಪ್ತಿ.
ಯೇ ಮಾನವಾಃ ಪಾಪಕೃತೋ ದುರಾಚಾರರತಾಃ ಖಲಾಃ |
ಕಾಮಾದಿನಿರತಾ ನಿತ್ಯಂ ತೇऽಪಿ ಶುಧ್ಯನ್ತ್ಯನೇನ ವೈ ||2-5||
ಸದಾಶಿವಮಹಾಸ್ಥಾನಂ ಪರಂ ಧಾಮ ಪರಂ ಪದಮ್ |
ಯದಾಹುರ್ವೇದವಿದ್ವಾಂಸಃ ಸರ್ವಲೋಕೋಪರಿಸ್ಥಿತಮ್ ||2-38||
✦ ಅಧ್ಯಾಯ 3 : ಚಂಚುಲಾ-ವೈರಾಗ್ಯ-ವರ್ಣನಮ್
     ಬಿಂದುಗ-ಚಂಚುಲೆ ದಂಪತಿಗಳ ವೃತ್ತಾಂತ. ಚಂಚುಲೆಯು ತನ್ನ ಪಾಪಕ್ಕೆ ಪಶ್ಚಾತ್ತಾಪಗೊಂಡು, ದೇವಮಂದಿರದಲ್ಲಿ ಶಿವಕಥಾಪಾರಾಯಣ ಮಾಡುತ್ತಿದ್ದ ಬ್ರಾಹ್ಮಣನನ್ನು ಶರಣು ಹೊಂದಿದುದು.
ಯೋಷಿತಾಂ ಜಾರಸಕ್ತಾನಾಂ ನರಕೇ ಯಮಕಿಂಕರಾಃ |
ಸಂತಪ್ತಲೋಹಪರಿಘಂ ಕ್ಷಿಪಂತಿ ಸ್ಮರಮಂದಿರೇ ||3-39||
ತ್ವಮೇವ ಮೇ ಗುರುರ್ಬ್ರಹ್ಮನ್ ತ್ವಂ ಮಾತಾ ತ್ವಂ ಪಿತಾಸಿ ಚ |
ಉದ್ಧರೋದ್ಧರ ಮಾಂ ದೀನಾಂ ತ್ವಮೇವ ಶರಣಂ ಗತಾಮ್ ||3-56||
✦ ಅಧ್ಯಾಯ 4 : ಚಂಚುಲಾ-ಸದ್ಗತಿ-ವರ್ಣನಮ್
      ಚಂಚುಲೆಗೆ ಬ್ರಾಹ್ಮಣನ ಉಪದೇಶ. ಶಿವಕಥಾಶ್ರವಣದಿಂದ ಚಂಚುಲೆಗೆ ಸದ್ಗತಿ ಪ್ರಾಪ್ತಿ.
ಪಶ್ಚಾತ್ತಾಪಃ ಪಾಪಕೃತಾಂ ಪಾಪಾನಾಂ ನಿಷ್ಕೃತಿಃ ಪರಾ |
ಸರ್ವೇಷಾಂ ವರ್ಣಿತಂ ಸದ್ಭಿಸ್ಸರ್ವಪಾಪವಿಶೋಧನಮ್ ||4-5||
ಪಶ್ಚಾತ್ತಾಪೇನೈವ ಶುದ್ಧಿಃ ಪ್ರಾಯಶ್ಚಿತ್ತಂ ಕರೋತಿ ಸಃ |
ಯಥೋಪದಿಷ್ಟಂ ಸದ್ಭಿರ್ಹಿ ಸರ್ವಪಾಪವಿಶೋಧನಮ್ ||4-6||
ಪ್ರಾಯಶ್ಚಿತ್ತಮಧೀಕೃತ್ಯಾವಿಧಿವನ್ನಿರ್ಭಯಃ ಪುಮಾನ್ |
ನ ಯಾತಿ ಸುಗತಿಂ ಪ್ರಾಯಃ ಪಶ್ಚಾತ್ತಾಪೀ ನ ಸಂಶಯಃ ||4-7||
ಗತ್ವಾ ತತ್ರ ಮಹಾದೇವಂ ಸಾ ದದರ್ಶ ತ್ರಿಲೋಚನಮ್ |
ವಿಷ್ಣುಬ್ರಹ್ಮಾದಿಭಿರ್ದೇವೈಃ ಸೇವ್ಯಮಾನಂ ಸನಾತನಮ್ ||4-42||
ಗಣೇಶಭೃಂಗಿನಂದೀಶವೀರಭದ್ರೇಶ್ವರಾದಿಭಿಃ |
ಉಪಾಸ್ಯಮಾನಂ ಸದ್ಭಕ್ತ್ಯಾ ಕೋಟಿಸೂರ್ಯಸಮಪ್ರಭಮ್ ||4-43||
ನೀಲಗ್ರೀವಂ ಪಂಚವಕ್ತ್ರಂ ತ್ರ್ಯಂಬಕಂ ಚಂದ್ರಶೇಖರಮ್ |
ವಾಮಾಂಗೇ ಬಿಭ್ರತಂ ಗೌರೀಂ ವಿದ್ಯುತ್ಪುಂಜಸಮಪ್ರಭಾಮ್ ||4-44||
ಕರ್ಪೂರಗೌರಂ ಗೌರೀಶಂ ಸರ್ವಾಲಂಕಾರಧಾರಿಣಮ್ |
ಸಿತಭಸ್ಮಲಸದ್ದೇಹಂ ಸಿತವಸ್ತ್ರಂ ಮಹೋಜ್ವಲಮ್ ||4-45||
ಪಾರ್ವತ್ಯಾ ಸಾ ಕೃತಾ ಪ್ರೀತ್ಯಾ ಸ್ವಸಖೀ ದಿವ್ಯರೂಪಿಣೀ||4-46ಪೂರ್ವಾರ್ಧ||
✦ ಅಧ್ಯಾಯ 5: ಬಿಂದುಗ-ಸದ್ಗತಿ-ವರ್ಣನ
ತನ್ನ ಪತಿ ಬಿಂದುಗನಿಗೆ ಸದ್ಗತಿ ಸಿಗುವಂತೆ ಪಾರ್ವತಿಯಲ್ಲಿ ಚಂಚುಲೆಯ ಪ್ರಾರ್ಥನೆ. ಪಿಶಾಚಜನ್ಮ ತಾಳಿದ್ದ ಬಿಂದುಗನಿಗೆ, ಪಾರ್ವತಿಯು ಕಳುಹಿಸಿದ ತುಂಬುರು ಎಂಬ ಗಂಧರ್ವನಿಂದ ಶಿವಪುರಾಣಕಥಾಶ್ರವಣದ್ವಾರಾ ಸದ್ಗತಿ ಪ್ರಾಪ್ತಿ.
|| ಚಂಚುಲೋऽವಾಚ ||
ಗಿರಿಜೇ ಸ್ಕನ್ದಮಾತಸ್ತ್ವಂ ಸೇವಿತಾ ಸರ್ವದಾ ನರೈಃ |
ಸರ್ವಸೌಖ್ಯಪ್ರದೇ ಶಂಭುಪ್ರಿಯೇ ಬ್ರಹ್ಮಸ್ವರೂಪಿಣಿ ||5-4||
ವಿಷ್ಣುಬ್ರಹ್ಮಾದಿಭಿಃ ಸೇವ್ಯಾ ಸಗುಣಾ ನಿರ್ಗುಣಾಪಿ ಚ |
ತ್ವಮಾದ್ಯಾ ಪ್ರಕೃತಿಃ ಸೂಕ್ಷ್ಮಾ ಸಚ್ಚಿದಾನಂದರೂಪಿಣೀ ||5-5||
ಸೃಷ್ಟಿಸ್ಥಿತಿಲಯಕರೀ ತ್ರಿಗುಣಾ ತ್ರಿಸುರಾಲಯಾ |
ಬ್ರಹ್ಮವಿಷ್ಣುಮಹೇಶಾನಾಂ ಸುಪ್ರತಿಷ್ಠಾಕರಾ ಪರಾ ||5-6||
✦ ಅಧ್ಯಾಯ 6: ಶ್ರವಣ-ವಿಧಿ-ವರ್ಣನಮ್
ಶಿವಪುರಾಣವನ್ನು ಯಾವ ವಿಧಿ-ವಿಧಾನಗಳ ಮೂಲಕ ಕೇಳಬೇಕೆಂಬ ವಿವರ.
ಉದಙ್ಮುಖೋ ಭವೇದ್ವಕ್ತಾ ಶ್ರೋತಾ ಪ್ರಾಗ್ವದನಸ್ತಥಾ |6-20 ಪೂರ್ವಾರ್ಧ|
ಭವಕೋಟಿಸಹಸ್ರೇಷು ಭೂತ್ವಾ ಭೂತ್ವಾವಸೀದತಾಮ್ |
ಯೋ ದದಾತಿ ಪರಾಂ ಮುಕ್ತಿಂ ಕೋऽನ್ಯಸ್ತಸ್ಮಾತ್ಪರೋ ಗುರುಃ ||6-26||
ಪುರಾಣಜ್ಞಃ ಶುಚಿರ್ದಕ್ಷಃ ಶಾಂತೋ ವಿಜಿತಮತ್ಸರಃ |
ಸಾಧುಃ ಕಾರುಣ್ಯವಾನ್ ವಾಗ್ಮೀ ವದೇತ್ ಪುಣ್ಯಕಥಾಮಿಮಾಮ್ ||6-27||
ಸೋಷ್ಣೀಷಮಸ್ತಕಾ ಯೇ ಚ ಶ್ರುಣ್ವಂತೀಮಾಂ ಕಥಾಂ ನರಾಃ |
ತತ್ಪುತ್ರಾಶ್ಚ ಪ್ರಜಾಯಂತೇ ಪಾಪಿನಃ ಕುಲದೂಷಕಾಃ ||6-42||
ತಲೆಯಲ್ಲಿ ಪೇಟ ಇತ್ಯಾದಿ ಧರಿಸಿ ಶ್ರವಣ ಮಾಡಿದರೆ ಅಂಥವರ ಮಕ್ಕಳು ಪಾಪಿಗಳೂ, ಕುಲಕಂಟಕರೂ ಆಗುವರು. ಉನ್ನತಾಸನದಲ್ಲಿ ಕುಳಿತು ಕೇಳಿದರೆ ನರಕವಾಸದ ನಂತರ ಕಾಗೆಗಳಾಗಿ ಹುಟ್ಟುವರು. ವೀರಾಸನಾದಿಗಳಲ್ಲಿ ಕುಳಿತಿದ್ದರೆ ನಾರಕಿಗಳಾಗಿ, ಮತ್ತೆ ವಿಷವೃಕ್ಷಗಳಾಗುವರು. ಪುರಾಣಿಕನನ್ನು ನಮಿಸದಿದ್ದರೆ, ನರಕವಾಸಾನಂತರ ಅರ್ಜುನ / ಮತ್ತಿಮರವಾಗುವರು. ರೋಗಿಯಲ್ಲದೆಯೂ ಮಲಗಿ ಕೇಳಿದರೆ ನರಕಾನಂತರ ಅಜಗರದಂಥ ಹಾವಾಗುವರು. ಪುರಾಣಿಕನಿಗೆ ಸಮನಾದ ಆಸನದಲ್ಲಿ ಮಂಡಿಸಿದರೆ ನರಕದಲ್ಲಿ ಗುರುತಲ್ಪಗಮನ / ಗುರುಪತ್ನೀಗಮನದ ಪಾಪಕ್ಕೀಡಾಗುವನು. ಪುರಾಣಿಕನನ್ನಾಗಲೀ, ಶಿವಪುರಾಣವನ್ನಾಗಲೀ ನಿಂದಿಸಿದರೆ, 100 ಜನ್ಮಗಳನ್ನು ದುಃಖಮಯವಾಗಿಸಿ, ತರುವಾಯ ನಾಯಿಯಾಗಿ ಹುಟ್ಟುವರು. ಕೀರ್ತನಾಕಾಲದಲ್ಲಿ ಕೆಟ್ಟಮಾತುಗಳನ್ನಾಡಿದರೆ, ಘೋರನರಕವನ್ನನುಭವಿಸಿ, ನಂತರ ಕತ್ತೆಯಾಗಿ ಜನ್ಮಿಸುವರು. ಯಾರು ಈ ಸತ್ರದಲ್ಲಿ ಕಥೆಯನ್ನು ಸ್ವಲ್ಪವೂ ಕೇಳುವುದಿಲ್ಲವೋ ಅಂಥವರು ಘೋರನರಕವನ್ನನುಭವಿಸಿ, ಕಾಡುಹಂದಿಗಳಾಗುವರು. ಯಾರು ಈ ಸತ್ರದಲ್ಲಿ ಕಥೆಗೆ ಅಡ್ಡಿಪಡಿಸುವರೋ ಅವರು, ಕೋಟಿವರ್ಷ ನರಕವಾಸಿಗಳಾಗಿ, ನಂತರ ಊರಹಂದಿಗಳಾಗುವರು.
ಶ್ರೀಮಚ್ಛಿವಪುರಾಣಾಖ್ಯಃ ಪ್ರತ್ಯಕ್ಷಸ್ತ್ವಂ ಮಹೇಶ್ವರಃ |
ಶ್ರವಣಾರ್ಥಂ ಸ್ವೀಕೃತೋऽಸಿ ಸಂತುಷ್ಟೋ ಭವ ವೈ ಮಯಿ ||6-57||
ಮನೋರಥೋ ಮದೀಯೋऽಯಂ ಕರ್ತವ್ಯಃ ಸಫಲಸ್ತ್ವಯಾ |
ನಿರ್ವಿಘ್ನೇನ ಸುಸಂಪೂರ್ಣಂ ಕಥಾಶ್ರವಣಮಸ್ತು ಮೇ ||6-58||
ಭವಾಬ್ಧಿಮಗ್ನಂ ದೀನಂ ಮಾಂ ಸಮುದ್ಧರ ಭವಾರ್ಣವಾತ್ |
ಕರ್ಮಗ್ರಾಹಗೃಹೀತಾಂಗಂ ದಾಸೋऽಹಂ ತವ ಶಂಕರ ||6-59||
ಏವಂ ಶಿವಪುರಾಣಂ ಹಿ ಸಾಕ್ಷಾಚ್ಛಿವಸ್ವರೂಪಕಮ್ |
ಸ್ತುತ್ವಾ ದೀನವಚಃ ಪ್ರೋಚ್ಯ ವಕ್ತುಃ ಪೂಜಾಂ ಸಮಾರಭೇತ್ ||6-60||
ವ್ಯಾಸರೂಪ ಪ್ರಬೋಧಾಗ್ರ್ಯ ಶಿವಶಾಸ್ತ್ರವಿಶಾರದ |
ಏತತ್ಕಥಾಪ್ರಕಾಶೇನ ಮದಜ್ಞಾನಂ ವಿನಾಶಯ ||6-63||
✦ ಅಧ್ಯಾಯ 7: ಶಿವಪುರಾಣಶ್ರವಣವ್ರತೀನಾಂ ವಿಧಿ-ನಿಷೇಧ-ಪುಸ್ತಕ-ವಕ್ತೃ-ಪೂಜನವರ್ಣನಮ್
ಈ ಅಧ್ಯಾಯದಲ್ಲಿ, ಶಿವಪುರಾಣ ಹೇಳುವ- ಕೇಳುವ ವ್ರತಸ್ಥರು ಆಚರಿಸಬೇಕಾದ ವಿಧಿ-ನಿಷೇಧ-ನಿಯಮಗಳು, ಪುಸ್ತಕಪೂಜೆ, ಆಚಾರ್ಯಪೂಜೆ, ಕೊನೆಯಲ್ಲಿ ಶಿವಪ್ರೀತಿಗಾಗಿ ಮಾಡಬೇಕಾದ ವ್ರತ-ಹೋಮ-ದಾನಾದಿಗಳ ವಿವರಣೆಗಳಿವೆ.
ಬ್ರಹ್ಮಚರ್ಯಮಧಸ್ಸುಪ್ತಿಃ ಪತ್ರಾವಳ್ಯಾಂ ಚ ಭೋಜನಮ್ |
ಕಥಾಸಮಾಪ್ತೌ ಭುಕ್ತಿಂ ಚ ಕುರ್ಯಾನ್ನಿತ್ಯಂ ಕಥಾವ್ರತೀ ||7-5||
ನಿಷ್ಕಾಮಶ್ಚ ಸಕಾಮಶ್ಚ ನಿಯಮಾಚ್ಛೃಣುಯಾತ್ಕಥಾಮ್ |
ಸಕಾಮಃ ಕಾಮಮಾಪ್ನೋತಿ ನಿಷ್ಕಾಮೋ ಮೋಕ್ಷಮಾಪ್ನುಯಾತ್ ||7-16||
ಪುರಾಣಾರ್ಥಂ ಪ್ರಯಚ್ಛನ್ತಿ ಯೇ ಸೂತ್ರಂ ವಸನಂ ನವಮ್ |
ಭೋಗಿನೋ ಜ್ಞಾನಸಂಪನ್ನಾಸ್ತೇ ಭವನ್ತಿ ಭವೇ ಭವೇ ||7-28||
ಶ್ರೀಮಚ್ಛಿವಪುರಾಣಂ ತು ಪುರಾಣತಿಲಕಂ ಸ್ಮೃತಮ್ |
ಮಹಚ್ಛಿವಪ್ರಿಯಂ ರಮ್ಯಂ ಭವರೋಗನಿವಾರಣಮ್ ||7-48||
ಸಕಲಗುಣವಿಭೇದೈರ್ನಿತ್ಯಮಸ್ಪಷ್ಟರೂಪಂ
ಜಗತಿ ಚ ಬಹಿರನ್ತರ್ಭಾಸಮಾನಂ ಮಹಿಮ್ನಾ |
ಮನಸಿ ಚ ಬಹಿರನ್ತರ್ವಾಙ್ಮನೋವೃತ್ತಿರೂಪಂ
ಪರಶಿವಮನಂತಾನಂದಸಾಂದ್ರಂ ಪ್ರಪದ್ಯೇ ||7-50||
|| श्रीः ||
|| ॐ नमः शिवाय ||
ಶ್ರೀ ವ್ಯಾಸಮಹರ್ಷಿಪ್ರಣೀತಂ
ಶ್ರೀ ಶಿವಮಹಾಪುರಾಣಮ್
ವಿದ್ಯೇಶ್ವರಸಂಹಿತಾಯಾಂ
ಮುನಿಪ್ರಶ್ನವರ್ಣನೋ ನಾಮ ಪ್ರಥಮೋऽಧ್ಯಾಯಃ
ಋಷಿಗಳು ಮಾಡುವ ಯಜ್ಞಾವಲೋಕನಾರ್ಥವಾಗಿ ಸೂತಮುನಿಯು ನೈಮಿಷಾರಣ್ಯಕ್ಕೆ ಬರುವುದು. ಕಲಿಯುಗದಲ್ಲಿ ವಿವಿಧ ವರ್ಣಗಳ ಜನರ ಆಚಾರರಹಿತತೆ ಹಾಗೂ ದುರಾಚಾರಗಳ ವಿವರಣೆ. ವರ್ಣಾಶ್ರಮಧರ್ಮರಹಿತರಾದ ಜನರಿಗೆ ಶ್ರೇಯಸ್ಸಾಧನವೇನೆಂದು ಋಷಿಗಳು ಸೂತಮುನಿ ರೋಮಹರ್ಷಣರನ್ನು ಪ್ರಶ್ನಿಸುವುದು.
ಆದ್ಯಂತಮಂಗಲಮಜಾತಸಮಾನಭಾವ-
ಮಾರ್ಯಂ ತಮೀಶಮಜರಾಮರಮಾತ್ಮದೇವಮ್ |
ಪಂಚಾನನಂ ಪ್ರಬಲಪಂಚವಿನೋದಶೀಲಂ
ಸಂಭಾವಯೇ ಮನಸಿ ಶಂಕರಮಂಬಿಕೇಶಮ್ ||
ಧರ್ಮಕ್ಷೇತ್ರೇ ಮಹಾಕ್ಷೇತ್ರೇ ಗಂಗಾಕಾಲಿಂದಿಸಂಗಮೇ |
ಪ್ರಯಾಗೇ ಪರಮೇ ಪುಣ್ಯೇ ಬ್ರಹ್ಮಲೋಕಸ್ಯ ವರ್ತ್ಮನಿ ||1-1-1||
ಮುನಯಃ ಶಂಸಿತಾತ್ಮಾನಃ ಸತ್ಯವ್ರತಪರಾಯಣಾಃ |
ಮಹೌಜಸೋ ಮಹಾಭಾಗಾ ಮಹಾಸತ್ರಂ ವಿತೇನಿರೇ ||1-1-2||
ಪ್ರಾಪ್ತೇ ಕಲಿಯುಗೇ ಘೋರೇ ನರಾಃ ಪುಣ್ಯವಿವರ್ಜಿತಾಃ |
ದುರಾಚಾರರತಾಃ ಸರ್ವೇ ಸತ್ಯವಾರ್ತಾಪರಾಙ್ಮುಖಾಃ ||1-1-12||
ಸರ್ವವರ್ಣೀಯರು ಸಾಮಾನ್ಯವಾಗಿ-
    ಘೋರವಾದ ಕಲಿಯುಗದಲ್ಲಿ ಜನರು ಪುಣ್ಯಕರ್ಮವರ್ಜಿತರೂ, ದುರಾಚಾರಿಗಳೂ, ಸತ್ಯದ ಸುದ್ದಿಗೇ ಹೋಗದವರೂ, ಪರಾಪವಾದನಿರತರೂ, ಪರದ್ರವ್ಯಾಕಾಂಕ್ಷಿಗಳೂ, ಪರಸ್ತ್ರೀಯರಲ್ಲಿ ಆಸಕ್ತರೂ, ಪರಪೀಡಕರೂ, ಶರೀರವೇ ಆತ್ಮವೆಂದು ತಿಳಿಯವವರೂ, ಮೂಢರೂ, ನಾಸ್ತಿಕರೂ, ಪಶುಬುದ್ಧಿಯುಳ್ಳವರೂ, ಮಾತಾಪಿತರ ದ್ವೇಷಿಗಳೂ, ಸ್ತ್ರೀ/ಪತ್ನೀವಶರಾದವರೂ, ಕಾಮದಾಸರೂ ಆಗಿರುವರು.
ಬ್ರಾಹ್ಮಣರು-
    ಲೋಭಿಗಳೂ, ವೇದಾದಿಗಳನ್ನು ಮಾರಿ ಬದುಕುವವರೂ, ಧನಾರ್ಜನೆಗಾಗಿಯೇ ವಿದ್ಯಾರ್ಜನೆ ಮಾಡುವವರೂ, ಮದೋನ್ಮತ್ತರೂ, ಸ್ವಜಾತಿಕರ್ಮಗಳನ್ನು ಬಿಟ್ಟವರೂ, ಪರವಂಚಕರೂ, ತ್ರಿಕಾಲಸಂಧ್ಯಾವಂದನಾದಿ ನಿತ್ಯಕರ್ಮರಹಿತರೂ, ವೇದಾಂತೋಕ್ತ ಬ್ರಹ್ಮವಿದ್ಯೆಯ ಅರಿವಿಲ್ಲದವರೂ, ದಯಾಹೀನರೂ, ತಮ್ಮನ್ನು ತಾವೇ ಪಂಡಿತರೆಂದು ತಿಳಿದವರೂ, ತಮ್ಮ ಆಚಾರ-ವಿಚಾರ-ವ್ರತಾದಿರಹಿತರೂ, ಕೃಷಿ-ವ್ಯಾಪಾರಾದಿನಿರತರೂ, ಕ್ರೂರಿಗಳೂ, ಸದಾ ಕೆಟ್ಟ ಯೋಚನೆಗಳಲ್ಲಿ ನಿಮಗ್ನರಾದವರೂ ಆಗಿರುತ್ತಾರೆ.
ಕ್ಷತ್ರಿಯರು-
     ಸ್ವಧರ್ಮಬಿಟ್ಟವರೂ, ದುಷ್ಟಸಹವಾಸಿಗಳೂ, ಪಾಪರತರೂ, ವ್ಯಭಿಚಾರಿಗಳೂ, ಹೇಡಿಗಳೂ, ಯುದ್ಧಪರಾಙ್ಮುಖರೂ, ಪಲಾಯನಪರರೂ, ದುರ್ವ್ಯಾಪಾರನಿರತರೂ, ಶೂದ್ರಸದೃಶರೂ, ಸದಾ ಕಾಮಭೋಗಾಸಕ್ತರೂ, ಶಸ್ತ್ರ-ಅಸ್ತ್ರಾದಿ ಪ್ರಯೋಗ/ ಧನುರ್ವೇದ ತಿಳಿಯದವರೂ, ಗೋ-ಬ್ರಾಹ್ಮಣರನ್ನೂ ದೇಶವನ್ನೂ ರಕ್ಷಣೆಮಾಡದವರೂ, ಶರಣಾಗತರಕ್ಷಕರಲ್ಲದವರೂ, ಸ್ತ್ರೀಸಂಗ-ಮೃಗಯಾವಿಹಾರಾಸಕ್ತರೂ, ಸ್ವಧರ್ಮವಾದ ಪ್ರಜಾಪಾಲನಾದಿಗಳನ್ನು ಬಿಟ್ಟು ಸದಾ ಭೋಗಿಗಳಾಗಿ ಪ್ರಜಾ-ಪಶ್ವಾದಿ ಪೀಡನೆಯಿಂದ ತಾಮಸಾನಂದಪಡುವವರಾಗಿ ದುಷ್ಟರಾಗಿ ಮೆರೆಯುತ್ತಾರೆ.
ವೈಶ್ಯರು-
      ಸಂಸ್ಕಾರಹೀನರೂ, ಸ್ವಧರ್ಮ(ಕೃಷಿ, ವ್ಯಾಪಾರ) ಬಿಟ್ಟವರೂ, ದುರ್ಮಾರ್ಗಿಗಳೂ, ಅನ್ಯಾಯ-ವಂಚನೆ ಮುಂತಾದ ದುರ್ಮಾರ್ಗದಿಂದ ದ್ರವ್ಯಾರ್ಜನೆ ಮಾಡುವವರೂ, ಗುರು-ದೇವ-ಬ್ರಾಹ್ಮಣರಲ್ಲಿ ಗೌರವತೋರದವರೂ, ದುರ್ಬುದ್ಧಿಯವರೂ, ಬ್ರಾಹ್ಮಣಭೋಜನಾದಿಗಳನ್ನು ನೀಡದವರೂ, ಜಿಪುಣರೂ, ದುಷ್ಟಚಿತ್ತರೂ, ಜಾರಸ್ತ್ರೀಗಾಮಿಗಳೂ, ಸನ್ಮಾರ್ಗಭ್ರಷ್ಟರೂ, ಲೋಭ-ಮೋಹಾವಿಷ್ಟರೂ ಆಗಿರುವರು.
ಶೂದ್ರರು-
      ತಮ್ಮ ಧರ್ಮ ಬಿಟ್ಟು, ಮೂಢಬುದ್ಧಿಯಿಂದ ಬ್ರಾಹ್ಮಣರು ಮಾಡಬೇಕಾದ ಸಂಧ್ಯಾವಂದನಾದಿಗಳಲ್ಲಿ ಆಸಕ್ತರಾಗಿ ಆಡಂಬರದಿಂದ ಮೆರೆಯುವವರೂ, ತಪಸ್ಸನ್ನು ಮಾಡುವವರೂ, ದ್ವಿಜರನ್ನು ಅಪಮಾನಿಸುವವರೂ, ಶಿಶುಹತ್ಯಾದಿಕರ್ತರೂ, ಮಂತ್ರೋಚ್ಚಾರ ಮಾಡಲೆಳಸುವವರೂ, ಶಾಲಗ್ರಾಮಾದಿಪೂಜಕರೂ, ಹೋಮಾದಿತತ್ಪರರೂ, ಹೀಗೆ ವಿರುದ್ಧಾಚಾರನಿರತರೂ, ಕುಟಿಲಬುದ್ಧಿಯವರೂ, ಬ್ರಾಹ್ಮಣಾದಿಗಳನ್ನು ದೂಷಿಸುವವರೂ ಆಗಿರುವರು.
     ಧನಿಕರು ಕುಕರ್ಮನಿರತರೂ, ವಿದ್ಯಾವಂತರು ವಾದ-ವಿವಾದನಿರತರೂ, ಧರ್ಮದ ನೆಲೆಯನ್ನೇ ಅರಿಯದೆ ಅಧರ್ಮಪ್ರವೃತ್ತರಾಗಿರುವವರು ಶಾಸ್ತ್ರ-ಪುರಾಣ-ಆಚರಣೆಗಳ ಬೋಧನಾತತ್ಪರರಾಗಿಯೂ ಇರುವರು. ಸ್ತ್ರೀಯರು  ಸಾಧಾರಣವಾಗಿ ಭ್ರಷ್ಟರಾಗಿ, ತಮ್ಮ ಪತಿಗೆ ಅವಮಾನಮಾಡುತ್ತ, ಅವನನ್ನು ಹೀನದೃಷ್ಟಿಯಿಂದ ನೋಡುವರು. ಅತ್ತೆ-ಮಾವಂದಿರಿಗೆ ದ್ರೋಹವನ್ನೆಣಿಸುತ್ತಾ, ಲಜ್ಜಾ-ಭಯವಿಹೀನರಾಗಿ, ಯಾವಾಗಲೂ ಕೊಳಕಿನಿಂದ ಕೂಡಿರುವರು. ಕೆಟ್ಟ ಹಾವ-ಭಾವನಿರತರಾಗಿ ಕಾಮವಿಕಾರದಿಂದ ದುರ್ನಡತೆಯವರಾಗುವರು. ನಿತ್ಯವೂ ಪರಪುರುಷಾಸಕ್ತರಾಗಿ ತಮ್ಮ ಪತಿಯಲ್ಲಿ ಅನಾದರವುಳ್ಳವರಾಗುವರು. ಮಕ್ಕಳು ತಂದೆ-ತಾಯಿಗಳನ್ನು ಗೌರವಿಸದೆ, ಅವಿಧೇಯರಾಗಿ, ವಿದ್ಯಾಭ್ಯಾಸಾದಿಗಳಲ್ಲಿ ಮನಸ್ಸನ್ನಿಡದೆ, ಸದಾ ರೋಗಾದಿಪೀಡಿತರಾಗಿರುವರು.
    ಇಂತಹ ಕಲಿಕಾಲದ ಜನರಿಗೆ ಹೇಗೆ/ ಯಾವುದರಿಂದ ಇಹ-ಪರಗಳಲ್ಲಿ ಶ್ರೇಯಸ್ಸುಂಟಾಗುವುದೆಂದು ಶೌನಕಾದಿಗಳು ಸೂತರನ್ನು ಪ್ರಶ್ನಿಸಿದರು.
   ಇಲ್ಲಿಗೆ ಶಿವಪುರಾಣದ ವಿದ್ಯೇಶ್ವರಸಂಹಿತೆಯ ಪ್ರಥಮ ಅಧ್ಯಾಯದ ಸಾರವು ಮುಗಿಯಿತು.
ಸ-ಶ್ಲೋಕಸಂಹಿತಾಸಂಖ್ಯಾವಿವರಣಂ
ಪಾರಾಯಣಮಾಹಾತ್ಮ್ಯಂ ನಾಮ ದ್ವಿತೀಯೋऽಧ್ಯಾಯಃ
ಕಲಿಯುಗದಲ್ಲಿ ಸಮಸ್ತಪಾಪಗಳನ್ನು ಧ್ವಂಸ ಮಾಡುವ ಸಾಮರ್ಥ್ಯವು ಶಿವಪುರಾಣಕ್ಕೆ ಮಾತ್ರ ಇರುವುದು. ಶಿವಪುರಾಣದಲ್ಲಿರುವ ಸಂಹಿತೆಗಳ ಸಂಖ್ಯೆ ಹಾಗೂ ವಿವರಣೆ.
ವೇದಾನ್ತಸಾರಸರ್ವಸ್ವಂ ಪುರಾಣಂ ಶೈವಮುತ್ತಮ್ |
ಸರ್ವಾಘೌಘೋದ್ಧಾರಕರಂ ಪರತ್ರ ಪರಮಾರ್ಥದಮ್ ||1-2-2||
ಏತಚ್ಛಿವಪುರಾಣಂ ಹಿ ಯಃ ಪ್ರತ್ಯಹಮತಂದ್ರಿತಃ |
ಯಥಾಶಕ್ತಿ ಪಠೇದ್ಭಕ್ತ್ಯಾ ಸ ಜೀವನ್ಮುಕ್ತ ಉಚ್ಯತೇ ||1-2-21||
ಏತಚ್ಛಿವಪುರಾಣಂ ವೈ ಲಿಖಿತ್ವಾ ಪುಸ್ತಕಂ ಸ್ವಯಮ್ |
ಯೋ ದದ್ಯಾಚ್ಛಿವಭಕ್ತೇಭ್ಯಸ್ತಸ್ಯ ಪುಣ್ಯಫಲಂ ಶೃಣು ||1-2-25||
ಅಧೀತೇಷು ಚ ಶಾಸ್ತ್ರೇಷು ವೇದೇಷು ವ್ಯಾಕೃತೇಷು ಚ |
ಯತ್ಫಲಂ ದುರ್ಲಭಂ ಲೋಕೇ ತತ್ಫಲಂ ತಸ್ಯ ಸಂಭವೇತ್ ||1-2-26||
ಏತಚ್ಛಿವಪುರಾಣಂ ಹಿ ಗಾಯತೇ ಯೋऽಪ್ಯಹರ್ನಿಶಮ್ |
ಆಜ್ಞಾಂ ತಸ್ಯ ಪ್ರತೀಕ್ಷೇರನ್ದೇವಾ ಇಂದ್ರಪುರೋಗಮಾಃ ||1-2-32||
ಸಮಾಹಿತಃ ಪಠೇದ್ಯಸ್ತು ತತ್ರ ಶ್ರೀರುದ್ರಸಂಹಿತಾಮ್ |
ಸ ಬ್ರಹ್ಮಘ್ನೋऽಪಿ ಪೂತಾತ್ಮಾ ತ್ರಿಭಿರೇವ ದಿನೈರ್ಭವೇತ್ ||1-2-34||
ಕೈಲಾಸಸಂಹಿತಾ ತತ್ರ ತತೋऽಪಿ ಪರಮಾ ಸ್ಮೃತಾ |
ಬ್ರಹ್ಮಸ್ವರೂಪಿಣೀ ಸಾಕ್ಷಾತ್ಪ್ರಣವಾರ್ಥಪ್ರಕಾಶಿಕಾ ||1-2-37||
ಶಿವೇನೋಪನಿಷತ್ಸಿಂಧುಮಂಥನೋತ್ಪಾದಿತಾ ಮುದಾ |
ಕುಮಾರಾಯಾರ್ಪಿತಾಂ ತಾಂ ವೈ ಸುಧಾಂ ಪೀತ್ವಾऽಮರೋ ಭವೇತ್ ||1-2-41||
ದುಷ್ಪ್ರತಿಗ್ರಹದುರ್ಭೋಜ್ಯದುರಾಲಾಪಾದಿಸಂಭವಮ್ |
ಪಾಪಂ ಸಕೃತ್ಕೀರ್ತನೇನ ಸಂಹಿತಾ ಸಾ ವಿನಾಶಯೇತ್ ||1-2-43||
ತದಿದಂ ಶೈವಮಾಖ್ಯಾತಂ ಪುರಾಣಂ ವೇದಸಂಮಿತಮ್ |
ನಿರ್ಮಿತಂ ತಚ್ಛಿವೇನೈವ ಪ್ರಥಮಂ ಬ್ರಹ್ಮಸಂಮಿತಮ್ ||1-2-48||
ವಿದ್ಯೇಶಂ ಚ ತಥಾ ರೌದ್ರಂ ವೈನಾಯಕಮಥೌಮಿಕಮ್ |
ಮಾತ್ರಂ ರುದ್ರೈಕಾದಶಕಂ ಕೈಲಾಸಂ ಶತರುದ್ರಕಮ್ ||1-2-49||
ಕೋಟಿರುದ್ರಸಹಸ್ರಾದ್ಯಂ ಕೋಟಿರುದ್ರಂ ತಥೈವ ಚ |
ವಾಯವೀಯಂ ಧರ್ಮಸಂಜ್ಞಂ ಪುರಾಣಮಿತಿ ಭೇದತಃ ||1-2-50||
ಸಂಹಿತಾ ದ್ವಾದಶಮಿತಾ ಮಹಾಪುಣ್ಯತರಾ ಮತಾಃ |
ತಾಸಾಂ ಸಂಖ್ಯಾಂ ಬ್ರುವೇ ವಿಪ್ರಾಃ ಶ್ರುಣುತಾದರತೋऽಖಿಲಮ್ ||1-2-51||
ವಿದ್ಯೇಶಂ ದಶಸಾಹಸ್ರಂ ರುದ್ರಂ ವೈನಾಯಕಂ ತಥಾ |
ಔಮಂ ಮಾತೃಪುರಾಣಾಖ್ಯಂ ಪ್ರತ್ಯೇಕಾಷ್ಟಸಹಸ್ರಕಮ್ ||1-2-52||
ತ್ರಯೋದಶಸಹಸ್ರಂ ಹಿ ರುದ್ರೈಕಾದಶಕಂ ದ್ವಿಜಾಃ |
ಷಟ್ಸಹಸ್ರಂ ಚ ಕೈಲಾಸಂ ಶತರುದ್ರಂ ತದರ್ಧಕಮ್ ||1-2-53||
ಕೋಟಿರುದ್ರಂ ತ್ರಿಗುಣಿತಮೇಕಾದಶಸಹಸ್ರಕಮ್ |
ಸಹಸ್ರಕೋಟಿರುದ್ರಾಖ್ಯಮುದಿತಂ ಗ್ರಂಥಸಂಖ್ಯಯಾ ||1-2-54||
ವಾಯವೀಯಂ ಖಾಬ್ಧಿಶತಂ ಧರ್ಮಂ ರವಿಸಹಸ್ರಕಮ್ |
ತದೇವಂ ಲಕ್ಷಸಂಖ್ಯಾಕಂ ಶೈವಸಂಖ್ಯಾವಿಭೇದತಃ ||1-2-55||
ವ್ಯಾಸೇನ ತತ್ತು ಸಂಕ್ಷಿಪ್ತಂ ಚತುರ್ವಿಂಶತ್ಸಹಸ್ರಕಮ್ |
ಶೈವಂ ತತ್ರ ಚತುರ್ಥಂ ವೈ ಪುರಾಣಂ ಸಪ್ತಸಂಹಿತಮ್ ||1-2-56||
ವಿದ್ಯೇಶ್ವರಾಖ್ಯಾ ತತ್ರಾದ್ಯಾ ರೌದ್ರೀ ಜ್ಞೇಯಾ ದ್ವಿತೀಯಿಕಾ |
ತೃತೀಯಾ ಶತರುದ್ರಾಖ್ಯಾ ಕೋಟಿರುದ್ರಾ ಚತುರ್ಥಿಕಾ ||1-2-60||
ಪಂಚಮೀ ಚೈವಮೌಮಾಖ್ಯಾ ಷಷ್ಠೀ ಕೈಲಾಸಸಂಜ್ಞಿಕಾ |
ಸಪ್ತಮೀ ವಾಯವೀಯಾಖ್ಯಾ ಸಪ್ತೈವಂ ಸಂಹಿತಾ ಮತಾಃ ||1-2-61||
ಏತಚ್ಛಿವಪುರಾಣಂ ಹಿ ಸಪ್ತಸಂಹಿತಮಾದರಾತ್ |
ಪರಿಪೂರ್ಣಂ ಪಠೇದ್ಯಸ್ತು ಸ ಜೀವನ್ಮುಕ್ತ ಉಚ್ಯತೇ ||1-2-63||
ಶೈವಂ ಪುರಾಣಮಮಲಂ ಶಿವಕೀರ್ತಿತಂ ತದ್-
ವ್ಯಾಸೇನ ಶೈವಪ್ರವಣೇನ ಚ ಸಂಗೃಹೀತಮ್ |
ಸಂಕ್ಷೇಪತಃ ಸಕಲಜೀವಗುಣೋಪಕಾರಂ
ತಾಪತ್ರಯಘ್ನಮತುಲಂ ಶಿವದಂ ಸತಾಂ ಹಿ ||1-2-65||
ಇಲ್ಲಿಗೆ ಶಿವಪುರಾಣದ ವಿದ್ಯೇಶ್ವರಸಂಹಿತೆಯ ದ್ವಿತೀಯ ಅಧ್ಯಾಯದ ಸಾರವು ಮುಗಿಯಿತು.
ಸಾಧ್ಯಸಾಧನಖಣ್ಡೇ ತೃತೀಯೋऽಧ್ಯಾಯಃ
ಋಷಿಗಳಲ್ಲಿ ಸಾಧ್ಯ-ಸಾಧನ-ಸಾಧಕವಿಚಾರವಾಗಿ ಪರಸ್ಪರ ವಾದ-ವಿವಾದವು. ಬ್ರಹ್ಮನು ಅವರ ಸಂದೇಹವನ್ನು ಪರಿಹರಿಸುವುದಕ್ಕಾಗಿ, ಸಾಧ್ಯ-ಸಾಧನವಿಚಾರವನ್ನು ವಿವರಿಸುವುದು.
ಬ್ರಹ್ಮನು ಹೀಗೆ ಹೇಳಿದನು—
       “ಯಾವ ಪರಬ್ರಹ್ಮವನ್ನು ಮಾತುಗಳಿಂದ ವರ್ಣಿಸಲೂ, ಮನಸ್ಸಿನಿಂದ ಧ್ಯಾನಿಸಲೂ ಸಹ ಅಸಾಧ್ಯವೋ ಮತ್ತು ಯಾವ ನಿತ್ಯವಸ್ತುವಾದ ಆ ಪರಬ್ರಹ್ಮದಿಂದ ಬ್ರಹ್ಮ,ವಿಷ್ಣು,ರುದ್ರ,ಇಂದ್ರನೇ ಮೊದಲಾದ ದೇವತೆಗಳೂ, ಪಂಚಮಹಾಭೂತಗಳೂ, ಇಂದ್ರಿಯಗಳೂ- ಇವೆಲ್ಲವೂ ಸೃಷ್ಟಿಯ ಪ್ರಾರಂಭದಲ್ಲಿ ಉತ್ಪನ್ನವಾದವೋ, ಅಂತಹ ಜಗದೊಡೆಯನೂ, ಸರ್ವಜ್ಞನೂ ಆದ ದೇವದೇವನಾದ ಪರಮೇಶ್ವರನೊಬ್ಬನಿರುವನು. (ಪರಮ- ಶ್ರೇಷ್ಠವಾದ; ಈಶ್ವರ- ಒಡೆಯ) ಇವನನ್ನು ಅಸಾಧಾರಣ ಭಕ್ತಿಯಿಂದ ಮಾತ್ರವಲ್ಲದೇ ಇನ್ನಾವುದರಿಂದಲೂ ನೋಡಲಸಾಧ್ಯ. ಹೆಚ್ಚೇಕೆ? ಈಶ್ವರನಲ್ಲಿಡುವ ಭಕ್ತಿಯಿಂದಲೇ ಮುಕ್ತಿಯೂ ಸಾಧ್ಯ. ಆದ್ದರಿಂದ, ಎಲೈ ಮಹರ್ಷಿಗಳೇ! ನೀವೆಲ್ಲ ಭೂಲೋಕಕ್ಕೆ ತೆರಳಿ, ಅಲ್ಲಿ ಸಹಸ್ರಾರುವರ್ಷಾವಧಿ ನಡೆಸುವ ಬೃಹದ್ಯಜ್ಞವೊಂದನ್ನು ಈಶ್ವರಾನುಗ್ರಹಪ್ರಾಪ್ತಿಗಾಗಿ ಕೈಗೊಳ್ಳಿರಿ. ಆಗ ಯಜ್ಞಫಲದಾತೃವಾದ ಪರಮೇಶ್ವರನ ಕೃಪೆಯಿಂದ, ಮುಂದೆ ವೇದನಿರೂಪಿತ ಸಾಧ್ಯ-ಸಾಧನಗಳು ಲಭಿಸುವುವು…..
        ಶಿವಲೋಕಪ್ರಾಪ್ತಿಯೇ ಶ್ರೇಷ್ಠತಮವಾದ ಸಾಧ್ಯವು (ಸಾಧಿಸಬೇಕಾದುದು). ಶಿವಸೇವಾತತ್ಪರತೆಯೇ ಇದಕ್ಕೆ ಸಾಧನವು. ಅವನ ಅನುಗ್ರಹದಿಂದ ಅನಿತ್ಯವಸ್ತುಗಳಲ್ಲಿ ವೈರಾಗ್ಯ ಉಂಟಾದವನೇ ಸಾಧಕನು. ವೇದೋಕ್ತಕರ್ಮಾನುಷ್ಠಾನ ಮಾಡಬೇಕು; ಅದರ ಫಲವನ್ನು ಈಶ್ವರನಿಗರ್ಪಿಸಬೇಕು. ಇದರಿಂದ, ಸಾಲೋಕ್ಯಾ(ಶಿವಲೋಕವಾಸಾ)ದಿ ಕ್ರಮದಿಂದ ಕೊನೆಗೆ ಈಶ್ವರಪದವೇ ಲಭಿಸುವುದು. ಈಶ್ವರೋಕ್ತ ಶ್ರೇಷ್ಠ ಸಾಧನಮಾರ್ಗಗಳಾದರೋ ಶಿವನಾಮದ ಶ್ರವಣ,ಕೀರ್ತನ,ಮನನ(ಧ್ಯಾನ)ಗಳು. ಇದಕ್ಕೆ ಶ್ರುತಿ / ವೇದಗಳೇ ಪ್ರಮಾಣಗಳು. ಜಗದಲ್ಲಿ ದೃಶ್ಯವಾದುದನ್ನು ದರ್ಶಿಸಿಯೂ, ಅದೃಶ್ಯವಾದುದನ್ನು ಕೇಳಿಯೂ ಜನರು ತಿಳಿಯುವರು. ಪರಮೇಶ್ವರನು ಅದೃಶ್ಯನಾಗಿರುವುದರಿಂದ, ವಿವೇಕಿಗಳು ಮೊದಲು ಗುರುಮುಖೇನ ತತ್ಸ್ವರೂಪವನ್ನು ಕೇಳಿ, ನಂತರ ಕೀರ್ತನ-ಮನನಾದಿಗಳಲ್ಲಿ ತೊಡಗಬೇಕು.
ಕ್ರಮಾತ್-ಮನನಪರ್ಯನ್ತೇ ಸಾಧನೇsಸ್ಮಿನ್ ಸುಸಾಧಿತೇ |
ಶಿವಯೋಗೋ ಭವೇತ್ ತೇನ ಸಾಲೋಕ್ಯಾದಿಕ್ರಮಾತ್-ಶನೈಃ ||1-3-26||
ಸರ್ವಾಙ್ಗವ್ಯಾಧಯಃ ಪಶ್ಚಾತ್ ಸರ್ವಾನನ್ದಶ್ಚ ಲೀಯತೇ |
ಅಭ್ಯಾಸಾತ್ ಕ್ಲೇಶಮೇತದ್ವೈ ಪಶ್ಚಾದಾದ್ಯನ್ತಮಙ್ಗಲಮ್ ||1-3-27||
     ಇಲ್ಲಿಗೆ ಶಿವಪುರಾಣದ ವಿದ್ಯೇಶ್ವರಸಂಹಿತೆಯ ತೃತೀಯ ಅಧ್ಯಾಯದ ಸಾರವು ಮುಗಿಯಿತು.
ಸಾಧ್ಯಸಾಧನಖಣ್ಡೇ ಚತುರ್ಥೋsಧ್ಯಾಯಃ
   ಸನತ್ಕುಮಾರನು ವ್ಯಾಸಮುನಿಗೆ ಶಿವನ ಶ್ರವಣ-ಕೀರ್ತನ-ಮನನಗಳು ಮುಕ್ತಿಸಾಧನವೆಂದು ಉಪದೇಶಿಸುವುದು.
 ಈಶ್ವರನ ಮನನ-ಕೀರ್ತನ-ಶ್ರವಣಗಳ ಸ್ವರೂಪ-ವಿಧಿ-ವಿಧಾನಗಳ ಬಗೆಯೆಂತೆಂದು ಮುನಿಗಳು ಪ್ರಶ್ನಿಸಲಾಗಿ, ಚತುರ್ಮುಖ ಬ್ರಹ್ಮನು ಹೀಗೆ ಬೋಧಿಸಿದನು—
   “ಮನನವೆಂದರೆ ಈಶ್ವರನ ಪೂಜೆ, ಮಂತ್ರಜಪ, ಗುಣಗಳು, ಸ್ವರೂಪ, ಈಶ್ವರಲೀಲೆ, ಅವನ ಪವಿತ್ರ ನಾಮಗಳು—ಇವುಗಳನ್ನು ಯುಕ್ತಿಪೂರ್ವಕವಾಗಿ ಮನಸ್ಸಿನಿಂದ ಪರಿಶೋಧಿಸಿ ನಿಶ್ಚಯಿಸುವುದು. ಇದು ಈಶ್ವರಸಾಕ್ಷಾತ್ಕಾರದ ಬಹು ಮುಖ್ಯ ಸಾಧನವು.
(ವಸನ್ತತಿಲಕಾವೃತ್ತಮ್- ಉಕ್ತಾ ವಸನ್ತತಿಲಕಾ ತಭಜಾ ಜಗೌಗಃ)
ಪೂಜಾ-ಜಪೇಶ-ಗುಣ-ರೂಪ-ವಿಲಾಸ-ನಾಮ್ನಾಂ
ಯುಕ್ತಿಪ್ರಿಯೇಣ ಮನಸಾ ಪರಿಶೋಧನಂ ಯತ್ |
ತತ್ ಸನ್ತತಂ ಮನನಮೀಶ್ವರದೃಷ್ಟಿಲಭ್ಯಂ
ಸರ್ವೇಷು ಸಾಧನವರೇಷ್ವಪಿ ಮುಖ್ಯಮುಖ್ಯಮ್ ||1-4-2||
(1ನೇ ವಿದ್ಯೇಶ್ವರ ಸಂಹಿತೆಯ 4ನೇ ಅಧ್ಯಾಯದ 2ನೇ ಶ್ಲೋಕ)
ಗೀತಾತ್ಮನಾ ಶ್ರುತಿಪದೇನ ಚ ಭಾಷಯಾ ವಾ
ಶಂಭುಪ್ರತಾಪಗುಣರೂಪವಿಲಾಸನಾಮ್ನಾಮ್ |
ವಾಚಾ ಸ್ಫುಟಂ ತು ರಸವತ್ ಸ್ತವನಂ ಯದಸ್ಯ
ತತ್ ಕೀರ್ತನಂ ಭವತಿ ಸಾಧನಮತ್ರ ಮಧ್ಯಮ್ ||1-4-3||
   ಶ್ರುತಿ / ವೇದದಲ್ಲಿ ಅಥವಾ ಬೇರೆ ಭಾಷೆಯಲ್ಲಿ ಹೇಳಿರುವ ಪರಮೇಶ್ವರನ ಪ್ರತಾಪ, ಗುಣ, ರೂಪ, ಲೀಲೆ, ನಾಮಗಳು— ಇವುಗಳನ್ನು ಸ್ಫುಟವಾದ ನುಡಿ-ಧ್ವನಿಗಳಿಂದ ಮಧುರವಾಗಿ ಗಾನಮಾಡಿ ಸ್ತುತಿಸುವುದೇ ಕೀರ್ತನವು. ಇದು ಮಧ್ಯಮವಾದ ಸಾಧನವು.
    
ಯೇನಾಪಿ ಕೇನ ಕರಣೇನ ಚ ಶಬ್ದಪುಞ್ಜಂ
ಯತ್ರ ಕ್ವಚಿಚ್ಛಿವಪರಂ ಶ್ರವಣೇಂದ್ರಿಯೇಣ |
ಸ್ತ್ರೀಕೇಲಿವದ್ ದೃಢತರಂ ಪ್ರಣಿಧೀಯತೇ ಯತ್
ತದ್ವೈ ಬುಧಾಃ ಶ್ರವಣಮತ್ರ ಜಗತ್ಪ್ರಸಿದ್ಧಮ್ ||1-4-4||
     ಶ್ರವಣೇಂದ್ರಿಯವಾದ ಕಿವಿಗಳಿಂದ ಎಲ್ಲೆಲ್ಲೂ, ಏನನ್ನೇ, ಯಾವ ಶಬ್ದಪುಂಜಗಳನ್ನೇ ಕೇಳಲಿ ಅವುಗಳೆಲ್ಲವೂ ಶಿವನನ್ನೇ ಸ್ತುತಿಸುವಂಥವೆಂದು— ಹೇಗೆ ಕಾಮಿಗಳು ಎಲ್ಲವನ್ನೂ ಕಾಮಪರವಾಗಿಯೇ ಅರ್ಥೈಸುವರೋ ಅಂತೆಯೇ— ದೃಢವಾಗಿ ತಿಳಿಯುವುದೇ ಜಗತ್ಪ್ರಸಿದ್ಧವಾದ  ಶ್ರವಣವೆಂದು ಜ್ಞಾನಿಗಳು ಹೇಳುವರು.
ಸತ್ಸಙ್ಗಮೇನ ಭವತಿ ಶ್ರವಣಂ ಪುರಸ್ತಾತ್
ಸಙ್ಕೀರ್ತನಂ ಪಶುಪತೇರಥ ತದ್ದೃಢಂ ಸ್ಯಾತ್ |
ಸರ್ವೋತ್ತಮಂ ಭವತಿ ತನ್ಮನನಂ ತದಂತೇ
ಸರ್ವಂ ಹಿ ಸಮ್ಭವತಿ ಶಙ್ಕರದೃಷ್ಟಿಪಾತೇ ||1-4-5||
   ಮೊದಲು ಸಜ್ಜನಸಂಗದಿಂದ ಶಿವನಾಮಲೀಲಾದಿಗಳ ಶ್ರವಣವಾಗುತ್ತದೆ; ಇದರಿಂದ ಆ ಪಶುಪತಿಯ ಪವಿತ್ರನಾಮದ ಸಂಕೀರ್ತನೆಯು ಸರ್ವದಾ ನಡೆಸುವಂತೆ ಮನವು ದೃಢವಾಗುವುದು; ಇದರಿಂದ, ಕಾಲಾಂತರದಲ್ಲಿ ಶಿವಸ್ವರೂಪಾದಿಗಳ ಮನನ / ಧ್ಯಾನದಲ್ಲೇ ಚಿತ್ತವು ಅನವರತವೂ ನಿರತವಾಗುವುದು; ಇದರಿಂದಾಗಿ ಶಂಕರನ ಕೃಪಾದೃಷ್ಟಿಯು ನಮ್ಮ ಮೇಲೆ ಹರಿದಾಗ, ಸಕಲವೂ ಸಿದ್ಧಿಸುವುದು.
     ಹಿಂದೊಮ್ಮೆ ಭಗವಾನ್ ವೇದವ್ಯಾಸರು ಮುಕ್ತಿಗಾಗಿ ತಪೋಮಗ್ನರಾಗಿದ್ದಾಗ ಬ್ರಹ್ಮಮಾನಸಪುತ್ರರೂ, ಅಖಂಡ ಬ್ರಹ್ಮಚಾರಿಗಳೂ ಆದ ಭಗವಾನ್ ಸನತ್ಕುಮಾರರು ದಿವ್ಯವಿಮಾನದಲ್ಲಿ ಅತ್ತಕಡೆಗೆ ಆಗಮಿಸಿದರು. ಅವರನ್ನು ಯಥಾವಿಧಿ ಉಪಚರಿಸಿ, ನಮಸ್ಕರಿಸಿದ ವ್ಯಾಸರು, “ಹೇ ಭಗವನ್! ನಾನು ವೇದವಿಭಾಗ, ಪುರಾಣಾದಿಗಳನ್ನು ಲೋಕಮುಖಕ್ಕೆ ಪ್ರಚುರಪಡಿಸಿ ಧರ್ಮಮಾರ್ಗವನ್ನು ಬೋಧಿಸಿದರೂ, ಮುಕ್ತಿಯ ನಿಜ ಉಪಾಯವು ನನಗೆ ತಿಳಿಯದಾಗಿರುವುದು” ಎಂದರು. ಆಗ ಸನತ್ಕುಮಾರರು—  “ಶಂಭುವಿನ ಶ್ರವಣ,ಕೀರ್ತನ,ಮನನಗಳೇ ವೇದಸಮ್ಮತವಾದ ಮುಕ್ತಿಸಾಧನಗಳೆಂದು ಹಿಂದೆ ನನಗೆ ಶಿವನ ವಾಹನನಾದ ಸಾಕ್ಷಾತ್ ನಂದಿಕೇಶ್ವರನೇ ಹೇಳಿರುವನು. ಆದ್ದರಿಂದ, ಅದನ್ನೇ ಮಾಡು” ಎಂದು ಪುನಃ ಪುನಃ ಉಪದೇಶಿಸಿ ಅಂತರ್ಹಿತರಾದರು.
     ಆಗ ಋಷಿಮುನಿಗಳು ವ್ಯಾಸರನ್ನು ಇಂತು ಪ್ರಶ್ನಿಸಿದರು- “ಶ್ರವಣ,ಕೀರ್ತನ,ಮನನಗಳನ್ನು ಮಾಡಲೂ ಅಶಕ್ತನಾದವನಿಗೆ ಬೇರೆ ಸರಳವಾದ ಉಪಾಯವೊಂದು ಏನಾದರೂ ಇದೆಯೇ?”
ಇಲ್ಲಿಗೆ ಶಿವಪುರಾಣದ ವಿದ್ಯೇಶ್ವರಸಂಹಿತೆಯ ಚತುರ್ಥ ಅಧ್ಯಾಯದ ಸಾರವು ಮುಗಿಯಿತು.
ಪಂಚಮೋऽಧ್ಯಾಯಃ
  ಸಾಧನತ್ರಯಗಳಾದ ಶ್ರವಣ-ಕೀರ್ತನ-ಮನನಗಳು ಅಸಾಧ್ಯವಾದರೆ ಶಿವಲಿಂಗ ಮತ್ತು ವಿಗ್ರಹಗಳ ಪೂಜೆಯೇ ಮುಕ್ತಿಸಾಧಕವು. ಲಿಂಗಪೂಜಾ ವಿಧಾನದಲ್ಲಿ ನಂದಿಕೇಶ್ವರನು ಹೇಳುವ ಕಾರಣನಿರೂಪಣ— ಈ ಅಧ್ಯಾಯದ ವಸ್ತು.
   ಇತರ ಎಲ್ಲ ದೇವತೆಗಳಿಗೆ ಮೂರ್ತಿಪೂಜೆಮಾತ್ರವೂ, ಶಿವನಿಗೆ ಮಾತ್ರ ಲಿಂಗ ಹಾಗೂ ವೇರ / ಬೇರ / ಮೂರ್ತಿ-ಪೂಜೆಗಳೆರಡೂ ನಡೆಯಲು ಕಾರಣವೇನೆಂಬ ಸನತ್ಕುಮಾರರ ಪ್ರಶ್ನೆಗೆ ನಂದಿಕೇಶ್ವರನು ಹೀಗೆ ಉತ್ತರಿಸಿದನು— “ಶಿವನು ಮಾತ್ರ ನಿರಾಕಾರ ಪ್ರಣವಸ್ವರೂಪೀ ಪರಬ್ರಹ್ಮವಸ್ತುವೂ, ಸಾಕಾರವಾಗಿ ವಿವಿಧ ದೇವತಾಕೃತಿಯೇ ಮುಂತಾದ ರೂಪ ತಾಳುವವನೂ— ಇವೆರಡೂ ಆಗಿರುವನೇ ಹೊರತು, ಬೇರೆಲ್ಲ ದೇವತೆಗಳೂ ಐಹಿಕ ಸುಖ ಹಾಗೂ ಸ್ವರ್ಗದ ವರೆಗಿನ ಭೋಗ ಮಾತ್ರ ಅನುಗ್ರಹಿಸಬಲ್ಲ, ಆದರೆ ಮೋಕ್ಷ ನೀಡಲಶಕ್ತರಾದ ಸಾಕಾರ ಜೀವಮಾತ್ರರಾಗಿರುವರು. ಶಿವನು ಮಾತ್ರ ಮೋಕ್ಷಪ್ರದನು.”
   ಆಗ ಸನತ್ಕುಮಾರರು “ಲಿಂಗ ಹಾಗೂ ಶಿವನ ಮೂರ್ತಿಗಳು ಆದಿಯಲ್ಲಿ ಹೇಗೆ ಉದ್ಭವಿಸಿದವು?” ಎಂದು ಪ್ರಶ್ನಿಸಿದರು. ಅದಕ್ಕೆ ನಂದಿಕೇಶ್ವರನು ಹೀಗೆಂದನು— “ಹಿಂದಿನ ಕಲ್ಪದಲ್ಲಿ, ಬ್ರಹ್ಮ-ವಿಷ್ಣುಗಳು ತಾ ಮೇಲು ನಾ ಮೇಲೆಂದು ಪರಸ್ಪರ ಸಂಘರ್ಷಿಸುತ್ತಿದ್ದಾಗ, ಇವರಿಬ್ಬರ ಗರ್ವ ಮುರಿಯಲೆಂದು ಪರಮೇಶ್ವರನು ಅವರ ಮುಂದೆ ಬೃಹತ್ ಸ್ತಂಭದೋಪಾದಿಯಲ್ಲಿ ನಿರಂತರ ಮೇಲಕ್ಕೆ ಬೆಳೆಯುತ್ತಿದ್ದ ಲಿಂಗರೂಪದಲ್ಲಿ ಆವಿರ್ಭವಿಸಿದನು. ಅದು ಮೊದಲ್ಗೊಂಡು, ಶಿವನಿಗೆ ಲೋಕದಲ್ಲಿ ಲಿಂಗಪೂಜೆಯೂ ಆರಂಭಗೊಂಡಿತು.”
ತದಾ ಪ್ರಭೃತಿ ಲೋಕೇಷು ನಿಷ್ಕಲಂ ಲಿಂಗಮೈಶ್ವರಮ್ |
ಸ-ಕಲಂ ಚ ತಥಾ ಬೇರಂ ಶಿವಸ್ಯೈವ ಪ್ರಕಲ್ಪಿತಮ್ ||೧-೫-೩೦||
ಶಿವಸ್ಯ ಲಿಙ್ಗ-ವೇರತ್ವಂ ಭೋಗಮೋಕ್ಷಪ್ರದಂ ಶುಭಮ್ ||೧-೫-೩೧ರ ಅಂತಿಮ ಭಾಗ ||
ಇಲ್ಲಿಗೆ ಶಿವಪುರಾಣದ ವಿದ್ಯೇಶ್ವರಸಂಹಿತೆಯ ಪಂಚಮ ಅಧ್ಯಾಯದ ಸಾರವು ಮುಗಿಯಿತು.
ಶಿವಪುರಾಣೇ ವಿದ್ಯೇಶ್ವರಸಂಹಿತಾಯಾಂ ಷಷ್ಠೋऽಧ್ಯಾಯಃ
ವಿಷ್ಣು-ಬ್ರಹ್ಮರ ವಾದ, ಯುದ್ಧ; ತಾ ಮೇಲು ನಾ ಮೇಲೆಂಬ ವಿಷಯದಲ್ಲಿ ಘೋರ ಕದನ. ಇದನ್ನು ಕಂಡು, ಲೋಕಕ್ಷೋಭೆಯನ್ನೂ ಮನಗಂಡು, ದೇವತೆಗಳು ಸರ್ವೇಶ್ವರನಾದ ಸದಾಶಿವನ ಸಂನಿಧಾನಕ್ಕೆ ತೆರಳಿ ಅವನನ್ನು ನಮಸ್ಕರಿಸುವುದು— ಇದು ಈ ಅಧ್ಯಾಯದ ಕಥಾ ವಸ್ತು. ನಂದಿಕೇಶ್ವರನು ಸನತ್ಕುಮಾರನಿಗೆ ಇದನ್ನು ವಿವರಿಸುತ್ತಾನೆ.
(ಅನುಷ್ಟುಭ್ ವೃತ್ತಮ್)
ಪುರಾ ಕದಾಚಿದ್ಯೋಗೀನ್ದ್ರ ವಿಷ್ಣುರ್ವಿಷಧರಾಸನಃ |
ಸುಷ್ವಾಪ ಪರಯಾ ಭೂತ್ಯಾ ಸ್ವಾನುಗೈರಪಿ ಸಂಯುತಃ ||೧||
ಯದೃಚ್ಛಯಾऽऽಗತಸ್ತತ್ರ ಬ್ರಹ್ಮಾ ಬ್ರಹ್ಮವಿದಾಂ ವರಃ |
ಅಪೃಚ್ಛತ್ಪುಣ್ಡರೀಕಾಕ್ಷಂ ಶಯನಂ ಸರ್ವಸುನ್ದರಮ್ ||೨||
ಕಸ್ತ್ವಂ ಪುರುಷವಚ್ಛೇಷೇ ದೃಷ್ಟ್ವಾ ಮಾಮಪಿ ದೃಪ್ತವತ್ |
ಉತ್ತಿಷ್ಠ ವತ್ಸ ಮಾಂ ಪಶ್ಯ ತವ ನಾಥಮಿಹಾಗತಮ್ ||೩||
ಆಗತಂ ಗುರುಮಾರಾಧ್ಯಂ ದೃಷ್ಟ್ವಾ ಯೋ ದೃಪ್ತವಚ್ಚರೇತ್ |
ದ್ರೋಹಿಣಸ್ತಸ್ಯ ಮೂಢಸ್ಯ ಪ್ರಾಯಶ್ಚಿತ್ತಂ ವಿಧೀಯತೇ ||೪||
ಇತಿ ಶ್ರುತ್ವಾ ವಚಃ ಕ್ರುದ್ಧೋ ಬಹಿಃ ಶಾನ್ತಮಿವಾಚರತ್ |
ಸ್ವಸ್ತಿ ತೇ ಸ್ವಾಗತಂ ವತ್ಸ ತಿಷ್ಠ ಪೀಠಮಿತೋ ವಿಶ ||೫||
ಅಹಮೇವ ವರೋ ನ ತ್ವಮಹಂ ಪ್ರಭುರಹಂ ಪ್ರಭುಃ |
ಪರಸ್ಪರಂ ಹನ್ತುಕಾಮೌ ಚಕ್ರತುಃ ಸಮರೋದ್ಯಮಮ್ ||೬||
ಸೃಷ್ಟಿಃ ಸ್ಥಿತಿಶ್ಚ ಸಂಹಾರಸ್ತಿರೋಭಾವೋऽಪ್ಯನುಗ್ರಹಃ |
ಯಸ್ಮಾತ್ ಪ್ರವರ್ತತೇ ತಸ್ಮೈ ಬ್ರಹ್ಮಣೇ ಚ ತ್ರಿಶೂಲಿನೇ ||೨೦||
(ವಂಶಸ್ಥವೃತ್ತಮ್)
ಅಶಕ್ಯಮ್ ಅನ್ಯೈಃ ಯದನುಗ್ರಹಂ ವಿನಾ
ತೃಣಕ್ಷಯೋऽಪ್ಯತ್ರ ಯದೃಚ್ಛಯಾ ಕ್ವಚಿತ್ ||೨೧||
ಇಲ್ಲಿಗೆ ಶಿವಪುರಾಣದ ವಿದ್ಯೇಶ್ವರಸಂಹಿತೆಯ ಆರನೆಯ ಅಧ್ಯಾಯದ ಸಾರವು ಮುಗಿಯಿತು.
ಶಿವಮಹಾಪುರಾಣೇ ವಿದ್ಯೇಶ್ವರಸಂಹಿತಾಯಾಂ ಸಪ್ತಮೋऽಧ್ಯಾಯಃ
ಬ್ರಹ್ಮಾ-ವಿಷ್ಣುಗಳು ಸಮರಗೈಯುತ್ತಿರುವ ಬಗ್ಗೆ ತನಗೆ ಈಗಾಗಲೇ ತಿಳಿದಿದೆ ಎಂದ ಪರಮೇಶ್ವರನು ದೇವತೆಗಳ ದುಗುಡವನ್ನು ಹೋಗಲಾಡಿಸಲು, ರಣಾಂಗಣಕ್ಕೆ ನೂರು ಗಣೇಶರಿಂದ ಕೂಡಿದ ಶಿವಸೈನ್ಯದೊಂದಿಗೆ ಆಗಮಿಸುತ್ತಾನೆ. ಅಲ್ಲಿ, ಮಾಹೇಶ್ವರಾಸ್ತ್ರವನ್ನು ವಿಷ್ಣುವೂ, ಪಾಶುಪತಾಸ್ತ್ರವನ್ನು ಬ್ರಹ್ಮನೂ ಪ್ರಯೋಗಿಸಲಾಗಿ, ಮೂರು ಲೋಕಗಳೂ ದಹಿಸಲು ಆರಂಭವಾದಾಗ, ವಾದ್ಯಘೋಷಯುತನಾಗಿ ಬಂದ ಪರಮೇಶ್ವರನು, ಅಂಬರದಲ್ಲೇ ಸದ್ದಿಲ್ಲದಂತೆ ಗುಪ್ತವಾಗಿ ವೀಕ್ಷಿಸಿ, ಅಗ್ನಿಮಯವಾದ ಮಹಾಸ್ತಂಭರೂಪನಾಗಿ ಅವರೀರ್ವರ ಮಧ್ಯೆ ಆವಿರ್ಭವಿಸಿದನು. ಅದನ್ನು ಕಂಡು ಮಹದಚ್ಚರಿಯಿಂದ, ವಿಷ್ಣುವು ಸೂಕರರೂಪ ತಾಳಿ ಪಾತಾಳದಾಚೆಗೂ ತೆರಳಿ ಅದರ ಮೂಲಗಾಣದೆ ಮರಳಿದನು. ಬ್ರಹ್ಮನು ಹಂಸರೂಪಿಯಾಗಿ ಲಿಂಗಾಂತ / ಲಿಂಗಾಗ್ರವನ್ನು ಪರಿಶೋಧಿಸಲಾಗಿ, ತುದಿಗಾಣದಾಗಿ, ಮೇಲಿಂದ ಬೀಳುತ್ತಿರುವ ಬಾಡದಿರುವ ಕೇತಕೀಪುಷ್ಪವೊಂದನ್ನು ಕಂಡನು. ಇವರೀರ್ವರ ಪರಿಸ್ಥಿತಿ ಕಂಡು ನಕ್ಕ ಪರಶಿವನ ಲಿಂಗಾಗ್ರದ ಲಘಕಂಪನದಿಂದ ಬಿದ್ದ ಈ ಕೇದಗೆಯು ಬ್ರಹ್ಮನಿಗೆ— ಲಿಂಗದ ತುದಿಯನ್ನನ್ವೇಷಿಸುವ ಕಾರ್ಯವು ವ್ಯರ್ಥವೆಂದುಸುರಿತು. ಆಗ ಬ್ರಹ್ಮನು ಅದರೊಂದಿಗೆ ಮಿತ್ರತ್ವವನ್ನು ಮಾಡಿ, ವಿಷ್ಣುವಿನಲ್ಲಿ ಬ್ರಹ್ಮನು ತುದಿ ನೋಡಿರುವನೆಂದು ಸುಳ್ಳುಸಾಕ್ಷ್ಯ ನುಡಿಯಲು ಅದನ್ನೊಪ್ಪಿಸುತ್ತಾನೆ. ಈ ಸಾಕ್ಷ್ಯವನ್ನು ನಂಬಿದ ವಿಷ್ಣುವು, ಬ್ರಹ್ಮನೇ ಜ್ಯೇಷ್ಠನೆಂದು ತಿಳಿದು ಷೋಡಶೋಪಚಾರಗಳಿಂದ ಬ್ರಹ್ಮನನ್ನು ಪೂಜಿಸುತ್ತಿದ್ದಾಗ, ಬ್ರಹ್ಮನ ವಂಚನೆಯನ್ನು ಕಂಡು ಕ್ರುದ್ಧನಾಗಿ, ಅವನಿಗೆ ತಕ್ಕ ಪಾಠ ಕಲಿಸಲು ನಿರಾಕಾರನಾದ ಈಶ್ವರನು ಸಾಕಾರನಾಗಿ ಪ್ರಕಟನಾದನು. ಅವನನ್ನು ಕಂಡು, ಭಯಭಕ್ತಿಯುತನಾಗಿ ಅವನ ಚರಣಕ್ಕೆ ನಮಿಸಿದ ವಿಷ್ಣುವು ತಾವು ಮಾಡಿದ ಕಲಹದ ತಪ್ಪಿನ ಕ್ಷಮೆಯಾಚಿಸುತ್ತಾನೆ. ಇದರಿಂದ ಪ್ರಸನ್ನನಾದ ಸದಾಶಿವನು ವಿಷ್ಣುವಿಗೆ ತನಗೆ ಸಮಾನವಾದ ಸ್ಥಾನಮಾನ, ಪೂಜೆ-ಉತ್ಸವಾದಿಗಳು ಲೋಕದಲ್ಲಿ ಇರಲೆಂದು ಅನುಗ್ರಹಿಸುತ್ತಾನೆ.
ಇತಿ ಸಸ್ಮಿತಯಾ ಮಾಧ್ವ್ಯಾ ಕುಮಾರಪರಿಭಾಷಯಾ |
ಸಮತೋಷಯದ್ ಅಮ್ಬಾಯಾಃ ಸಃ ಪತಿಃ ತತ್ ಸುರವ್ರಜಮ್ ||೩||
ಇತ್ಯುಕ್ವಾ ಸೂಕರತನುಃ ವಿಷ್ಣುಃ ತಸ್ಯ ಆದಿಮ್ ಈಯಿವಾನ್ ||೧೬ ಉತ್ತರಾರ್ಧ||
ತಥಾ ಬ್ರಹ್ಮಾ ಹಂಸತನುಃ ತದ್ ಅನ್ತಂ ವೀಕ್ಷಿತುಂ ಯಯೌ ||೧೭ಪೂರ್ವಾರ್ಧ||
ಅಸತ್ಯಮಪಿ ಶಸ್ತಂ ಸ್ಯಾದ್ ಆಪದಿ ಇತಿ ಅನುಶಾಸನಮ್ ||೨೫ಉತ್ತರಾರ್ಧ||
ಇಲ್ಲಿಗೆ ಶಿವಪುರಾಣದ ವಿದ್ಯೇಶ್ವರಸಂಹಿತೆಯ ಏಳನೆಯ ಅಧ್ಯಾಯದ ಸಾರವು ಮುಗಿಯಿತು.

ಶಿವಮಹಾಪುರಾಣೇ ವಿದ್ಯೇಶ್ವರಸಂಹಿತಾಯಾಂ ಅಷ್ಟಮೋऽಧ್ಯಾಯಃ
ಪರಶಿವನ ಆಜ್ಞೆಯಂತೆ ಉದ್ಭವಿಸಿದ ಭೈರವನು ಬ್ರಹ್ಮನನ್ನು ವಧಿಸಲು ತೊಡಗಲು, ವಿಷ್ಣುವಿನ ಪ್ರಾರ್ಥನೆಯನ್ನು ಮನ್ನಿಸಿ ಶಿವನು ಯಜ್ಞಗಳಲ್ಲಲ್ಲದೆ ಇತರ ದೇವಾಲಯಾದಿಗಳಲ್ಲಿ ಪೂಜೆಗೆ ಅಯೋಗ್ಯನಾಗೆಂದು ಬ್ರಹ್ಮನಿಗೆ ಶಾಪನೀಡಿ, ಕೇತಕೀಪುಷ್ಪಕ್ಕೂ ಶಾಪಾನುಗ್ರಹಗಳನ್ನು ಪ್ರದಾನಮಾಡುವುದು ಈ ಅಧ್ಯಾಯದ ಕಥಾವಸ್ತು.
ನಂದಿಕೇಶ್ವರ ಉವಾಚ
ಸಸರ್ಜಾಥ ಮಹಾದೇವಃ ಪುರುಷಂ ಕಂಚಿದದ್ಭುತಮ್ |
ಭೈರವಾಖ್ಯಂ ಭ್ರುವೋರ್ಮಧ್ಯಾದ್ಬ್ರಹ್ಮದರ್ಪಜಿಘಾಂಸಯಾ || ೧ ||
(ಅಥ)ಅನಂತರ, (ಮಹಾದೇವಃ)ಮಹಾದೇವನಾದ ಶಿವನು (ಬ್ರಹ್ಮದರ್ಪ-ಜೀಘಾಂಸಯಾ) ಬ್ರಹ್ಮನ ದರ್ಪವನ್ನು ನಾಶಮಾಡುವ ಇಚ್ಛೆಯುಳ್ಳವನಾಗಿ, (ಭೈರವ-ಆಖ್ಯಂ) ಭೈರವನೆಂಬ ಹೆಸರಿನ (ಕಂ-ಚಿತ್)ಒಬ್ಬಾನೊಬ್ಬ (ಅದ್ಭುತಂ ಪುರುಷಂ)ಅದ್ಭುತ ಪುರುಷನನ್ನು, (ಭ್ರುವೋಃ ಮಧ್ಯಾತ್) ತನ್ನ ಭ್ರೂಮಧ್ಯದಿಂದ (ಎರಡು ಹುಬ್ಬುಗಳ ನಡುವಿನಿಂದ), (ಸಸರ್ಜ) ಸೃಜಿಸಿದನು.
ಆಗ ಉದ್ಭವಿಸಿದ ಭೀಕರಾಕೃತಿಯ ಭೈರವನು ಶಿವನನ್ನು ನಮಿಸಿ ತನ್ನ ಕಾರ್ಯವೇನೆಂದು ಕೇಳಲು ಶಿವನು,
ವತ್ಸ ಯೋऽಯಂ ವಿಧಿಃ ಸಾಕ್ಷಾಜ್ಜಗತಾಮಾದ್ಯದೈವತಮ್ |
ನೂನಮರ್ಚಯ ಖಡ್ಗೇನ ತಿಗ್ಮೇನ ಜವಸಾ ಪರಮ್ || ೩ ||
ಎಲೈ ವತ್ಸ (ಪುತ್ರ) ನಾದ ಭೈರವನೇ! ಯಾವ (ಯಃ) ಈ (ಅಯಂ) ಜಗತ್ತಿನ ಸಾಕ್ಷಾತ್ ಮೊದಲನೆಯ ದೇವನೆನಿಸಿದ(ಸಾಕ್ಷಾತ್ ಜಗತಾಮ್ ಆದ್ಯದೈವತಂ), ಶ್ರೇಷ್ಠನಾದ (ಪರಮ್),  ಸೃಷ್ಟಿಕರ್ತನಾದ ಬ್ರಹ್ಮನಿರುವನೋ (ವಿಧಿಃ) ಅವನನ್ನು ನೀನು, ಹರಿತವಾದ ಕತ್ತಿಯಿಂದ (ತಿಗ್ಮೇನ ಖಡ್ಗೇನ), ಬೇಗನೆ (ಜವಸಾ), ನಿಜವಾಗಿಯೂ (ನೂನಮ್), ಪೂಜಿಸು (ಅರ್ಚಯ), ಅರ್ಥಾತ್ ಕತ್ತರಿಸು— ಎಂದನು.
ಆಗ ಭೈರವನು ಬ್ರಹ್ಮನ ತಲೆಗೂದಲನ್ನು ಹಿಡಿದು, ಆತನ ೫ನೇ ತಲೆಯನ್ನು ಕತ್ತರಿಸಲು ಉದ್ಯುಕ್ತನಾದಾಗ, ವಿಷ್ಣುವು ಮಗು ತಂದೆಯ ಕಾಲಲ್ಲಿ ಬಿದ್ದು ಅತ್ತು ಅಂಗಲಾಚಿದಂತೆ, ಶಿವನ ಚರಣಗಳನ್ನು ಅಶ್ರುಧಾರೆಯಿಂದ ತೊಳೆದು ಮಾಡಿದ ಪ್ರಾರ್ಥನೆಗೊಲಿದ ಶಂಕರನು ಬ್ರಹ್ಮನ ಮೇಲೆ ಕರುಣೆಯಿಂದ ಅವನಿಗೆ ಲೋಕದಲ್ಲಿ ಪೂಜೆ, ದೇವಾಲಯದಲ್ಲಿ ಉತ್ಸವಾದಿಗಳಿರದಿದ್ದರೂ, ಯಜ್ಞಾದಿ ನಿತ್ಯ, ನೈಮಿತ್ತಿಕ, ಕಾಮ್ಯಕರ್ಮಗಳಲ್ಲಿ ಗುರುಸ್ಥಾನವನ್ನಿತ್ತು, ಬ್ರಹ್ಮಾರ್ಪಣೆ ಮಾಡದ ಯಾವ ಕಾರ್ಯವೂ ಪೂರ್ಣಫಲಪ್ರದವಾಗದು. ಲೋಕಾಧಿಪತಿತ್ವದ ಗುರುತಾದ ನನ್ನಿಂದ ಅನುಗ್ರಹಿಸಲ್ಪಟ್ಟ ಪಂಚಶೀರ್ಷಗಳಿಂದ ಗರ್ವಿತನಾಗದಿರು. ಲೋಕವನ್ನು ರಕ್ಷಿಸು—  ಎಂದನು.
ನಂತರ, ಸುಳ್ಳು ಸಾಕ್ಷಿ ಹೇಳಿದ ಕೇತಕೀಪುಷ್ಪವು (ಕೇದಗೆ ಹೂವು)  ಶಿವಪೂಜೆಗೆ ಅನರ್ಹವೆಂದು ಶಪಿಸಿದಾಗ, ಅದರ ಪ್ರಾರ್ಥನೆಯನ್ನು ಮನ್ನಿಸಿ ತಾನು ಧರಿಸದಿದ್ದರೂ, ತನ್ನ ಭಕ್ತರು, ತನ್ನವರು ಧರಿಸುವರು; ತನ್ನ ಧ್ವಜ/ ಪತಾಕೆಯನ್ನು ಕೇದಗೆಯಿಂದ ನಿರ್ಮಿಸುವರೆಂದು ಅನುಗ್ರಹಿಸಿದನು. ಹೀಗೆ ಕೇದಗೆಯ ಜನ್ಮವೇ ವ್ಯರ್ಥವಾಗುವುದನ್ನು ತಪ್ಪಿಸಿ ಕೃಪೆದೋರಿದನು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ