ನಾನು ಯಾರು ಎನ್ನುವುದು ಗೊತ್ತಿದೆ; ಆದರೆ ಬ್ರಹ್ಮ ಯಾವುದೆಂದು ನಿಶ್ಚಿತವಾಗಿಲ್ಲ ಎಂಬ ಸ್ಥಿತಿಯಲ್ಲಿಯೇ ಈ ಪ್ರಶ್ನೆಗಳು ಉದ್ಭವಿಸುತ್ತವೆ.
ಆನಂದೋ ಬ್ರಹ್ಮೇತಿವ್ಯಜಾನಾತ್| -ವಿಜ್ಞಾನಮಾನಂದಂ ಬ್ರಹ್ಮ| -ಸತ್ಯಂಜ್ಞಾನಮನಂತಂ ಬ್ರಹ್ಮ|- ಆಕಾಶವತ್ಸರ್ವಗತಶ್ಚನಿತ್ಯಂ| -ಭೀಷಾಸ್ಮಾದ್ವಾತಃ ಪವತೇ|-ಯದ್ವಾಚಾನಭ್ಯುದಿತಂ ಯೇನ ವಾಗಭ್ಯುದ್ಯತೇ--ಯನ್ಮಸಾನಮನುತೇ ಯೇನಾಹುರ್ಮನೋಮತಂ| ತದೇವ ಬ್ರಹ್ಮ ತ್ವಂವಿದ್ಧಿ ನೇದಂ ಯದಿದಮುಪಾಸತೇ| -ಅನಣ್ವಮಸ್ಥೂಲಮಹ್ರಸ್ವಮದೀರ್ಘಾ ಮಜಮವ್ಯಯಂ| ಅರೂಪಗುಣ ವರ್ಣಾಖ್ಯಂ ತದ್ಬಹ್ಮೇತ್ಯವಧಾರಯೇತ್|-
( ಈ ಉಪನಿಷನ್ಮಂತ್ರಗಳ ಅರ್ಥವು ನಿಮಗೆ ತಿಳಿದಿರುವುದರಿಂದ ಅವುಗಳ ಅರ್ಥವನ್ನು ನಿಮಗೆ ವಿವರಿಸುವ ಅಗತ್ಯವಿಲಿಕ್ಕಿಲ್ಲವೆಂದು ನಂಬಿದ್ದೇನೆ.) ಇಂಥ ನೂರಾರುವಾಕ್ಯಗಳು ಬ್ರಹ್ಮನನ್ನು ನಿರಾಕಾರಿ, ನಿರ್ಗುಣ ಇತ್ಯಾದಿಯಾಗಿಯೇ ವರ್ಣಿಸುತ್ತವೆಯೇ ವಿನಃ ಸಗುಣನನ್ನಾಗಿಯೋ ಸಾಕಾರಿಯನ್ನಾಗಿಯೋ ಅಲ್ಲವಲ್ಲ!
ಶ್ರೀಮದಾಚಾರ್ಯರು ಕೂಡ ತಮ್ಮ ಭಾಷ್ಯಗಳಲ್ಲಿ ಬ್ರಹ್ಮವನ್ನು –ಕೂಟಸ್ಥನಿತ್ಯಶುದ್ಧಬುದ್ಧಮುಕ್ತ -ಎಂದೇ ವರ್ಣಿಸಿದ್ದಾರೆಯೇ ವಿನಃ ಸಾಕಾರಿಯನ್ನಾಗಿ ಅಲ್ಲ. ಬ್ರಹ್ಮನು ನಿರ್ವಿಶೇಷನು. ನಿರ್ವಿಶೇಷನಾದ ಬ್ರಹ್ಮನಿಗೆ ವಿಶೇಷಣಗಳಾಗಿ ಏನೂ ಇರಲಾರವು. ವಿಶೇಣಗಳೇನಾದರೂ ಇದ್ದರೆ ಅವುಗಳನ್ನು ಮಾತಿನಿಂದ ಹೇಳಬಹುದು, ಮನಸ್ಸಿನಿಂದ ಊಹಿಸಬಹುದು. ನಿರ್ವಿಶೇಷನಾದ್ದರಿಂದಲೇ ಯದ್ವಾಚಾ ನಭ್ಯುದಿತಂ, ಯನ್ಮನಸಾ ನಮನುತೇ ಇತ್ಯಾದಿವಾಕ್ಯಗಳು ಇವೆಯಲ್ಲವೇ? ರಾಜನಿಗೆ ಸಿಂಹಾಸನ, ಸೈನ್ಯ, ರಾಣಿ, ಪ್ರಜಾಜನರು, ಇತ್ಯಾದಿಯಾಗಿ ಇರುವಂತೆ ಬ್ರಹ್ಮನಿಗೆ ಅಂಥಯಾವುದೂ ಇರಲಾರದಲ್ಲವೇ? ಆದ್ದರಿಂದ ನಿರ್ವಿಶೇಷನಾದವನೇ ಬ್ರಹ್ಮನು; ಆ ಬ್ರಹ್ಮನೇ ನಾನು ಎಂದು ನಿಶ್ಚಯಿಸಿಕೊಳ್ಳಲಿಕ್ಕೆ ತೊಡಕಗಲಿಕ್ಕಿಲ್ಲ. ಇನ್ನು,
ಯತೋ ವಾ ಇಮಾನಿ ಭೂತಾನಿ ಜಾಯಂತೇ | ಯೇನ ಜಾತಾನಿ ಜೀವಂತಿ| ಯತ್ಪ್ರಯಂತ್ಯಭಿಸಂವಿಶಂತಿ| ತದ್ವಿಜಿಜ್ಞಾಸಸ್ವ| ತದ್ಬ್ರಹ್ಮೇತಿ| ಈ ಉಪನಿಷದ್ವಾಕ್ಯದಂತೆ ಬ್ರಹ್ಮವು ಜಗದುತ್ಪತ್ತಿಕಾರಣವು ಇತ್ಯಾದಿಯಾಗಿ ತಿಳಿಯುತ್ತದೆ. ಇದರಿಂದಾಗಿ ನಾನು ಜಗತ್ತಿನ ಸೃಷ್ಟಿಕರ್ತನಲ್ಲ, ಲಯಕರ್ತನಲ್ಲವಲ್ಲ! ಈ ನಾನು ಬ್ರಹ್ಮ ಹೇಗಾದೇನು? ಎಂಬುದು ಸಂದೇಹ. ಇಲ್ಲಿ ಬ್ರಹ್ಮವು ಜಗತ್ಕಾರಣವೆಂದು ಹೇಳಿರುವುದನ್ನು ಸಾಕಾರಿ ಎಂದು ಅರ್ಥೈಸುವುದು ಸಮರ್ಪಕವಲ್ಲ. –ಮನ ಏವಾಖಿಲಂ ವಿಶ್ವಂ ಸೃಜತ್ಯತ್ರ ತು ನೋ ವಿಧಿಃ| ಸ್ವಪ್ನವನ್ನ ಹಿ ಸ್ವಪ್ನಾರ್ಥೋ ಬ್ರಹ್ಮಣಾ ಸೃಷ್ಟ ಈಕ್ಷತೇ|| -ಮನಸ್ಸೇ ಪ್ರಪಂಚವನ್ನು ಸೃಷ್ಟಿಸುತ್ತದಯೇ ಹೊರತು ಬ್ರಹ್ಮವಲ್ಲ; ಸ್ವಪ್ನದಂತೆಯೇ (ಇದನ್ನು ತಿಳಿಯಬೇಕು) ಸ್ವಪ್ನದಲ್ಲಿ ನಾವು ಕಾಣುವ ವಸ್ತುಗಳನ್ನು ಬ್ರಹ್ಮನು ಸೃಷ್ಟಿಸುವುದು ಕಂಡುಬರುವುದಿಲ್ಲವಷ್ಟೆ? ಸಂಸಾರೋ ಮನಸಾ ಪುಂಸಃ ಕಲ್ಪಿತೋsಸ್ತಿ ನ ವಸ್ತುತಃ | ಮನಃ ಶೂನ್ಯೋ ಸುಷುಪ್ತ್ಯಾದೌ ಸಂಸಾರೋ ನೈವ ದೃಶ್ಯತೇ|| -ಮನುಷ್ಯನಿಗೆ ಸಂಸಾರ(ಪ್ರಪಂಚ)ವು ಮನಸ್ಸಿನಿಂದಲೇ ಕಲ್ಪಿತವಾಗಿರುತ್ತದಯೇ ಹೊರತು ನಿಜವಾಗಿರುವುದಿಲ್ಲ. ಮನಸ್ಸಿಲ್ಲದ ನಿದ್ರಾವಸ್ಥೆಯಲ್ಲಿ ಪ್ರಪಂಚವು ತೋರುವುದೇ ಇಲ್ಲ. ಕಲ್ಲಿನಿಂದಾದ ವಿಷ್ಣುವಿನ ಮೂರ್ತಿಯ ಕೈ, ಕಾಲು, ಮುಖ, ಆಯುದೇತ್ಯಾದಿಗಳು ವಿಷ್ಣುವಿನ ಅವಯವಗಳಲ್ಲ, ಕಲ್ಲಿಗಿಂತ ಅವು ಬೇರೆಯೇ ಅಲ್ಲ ದಿರುವಂತೆ ನಿದ್ರೆಯಲ್ಲಿ ಅನುಭವಕ್ಕೆ ಬರುವ ಶುದ್ಧಚೈತನ್ಯಕ್ಕಿಂತ ಪೂರ್ಣ ಬೇರೆಯಾದ ಪ್ರಪಂಚವೇ ಇಲ್ಲ. ಆ ಚೈತನ್ಯವೇ ಕನಸಿನಲ್ಲಿ ತೋರುವ ತನ್ನ ಹಾಗೂ ಇತರೆಲ್ಲ ದೇಹಗಳಾಗಿರುವಂತೆ ಜಾಗ್ರತ್ತಿನಲ್ಲೂ ಅದೇ ದೇಹ-ಜಗತ್ತಾಗಿ ರೂಪತಳೆದಿದೆ. ಜಾಗ್ರದ್ದರ್ಶಿಯು ಮಿಥ್ಯಾರೂಪ; ನನ್ನ ಸ್ವರೂಪವೇ (ಚೈತನ್ಯವೇ) ಈ ದೇಹ ಮತ್ತು ಇಡೀ ಪ್ರಪಂಚವಾಗಿ ಉದಯಿಸಿದೆ. ಜಾಗ್ರತ್ ಮುಗಿದಾಗ ಇವೆಲ್ಲವೂ ನಾನಲ್ಲದೆ ಮತ್ತೇನೂ ಆಗುವುದಿಲ್ಲ ವಾದ್ದರಿಂದ ಚೈತನ್ಯವಾದ ನಾನೇ ಸೃಷ್ಟಿ-ಸ್ತಿತಿ-ಲಯ ಕರ್ತನು ಎಂದು ನಿರ್ದರಿಸಿಕೊಂಡಾಗ ನಾನು ಬ್ರಹ್ಮ ಏಕಲ್ಲ? ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಿದರೂ ಸಿಗಲಿಕ್ಕಲ್ಲ
ಆನಂದೋ ಬ್ರಹ್ಮೇತಿವ್ಯಜಾನಾತ್| -ವಿಜ್ಞಾನಮಾನಂದಂ ಬ್ರಹ್ಮ| -ಸತ್ಯಂಜ್ಞಾನಮನಂತಂ ಬ್ರಹ್ಮ|- ಆಕಾಶವತ್ಸರ್ವಗತಶ್ಚನಿತ್ಯಂ| -ಭೀಷಾಸ್ಮಾದ್ವಾತಃ ಪವತೇ|-ಯದ್ವಾಚಾನಭ್ಯುದಿತಂ ಯೇನ ವಾಗಭ್ಯುದ್ಯತೇ--ಯನ್ಮಸಾನಮನುತೇ ಯೇನಾಹುರ್ಮನೋಮತಂ| ತದೇವ ಬ್ರಹ್ಮ ತ್ವಂವಿದ್ಧಿ ನೇದಂ ಯದಿದಮುಪಾಸತೇ| -ಅನಣ್ವಮಸ್ಥೂಲಮಹ್ರಸ್ವಮದೀರ್ಘಾ
( ಈ ಉಪನಿಷನ್ಮಂತ್ರಗಳ ಅರ್ಥವು ನಿಮಗೆ ತಿಳಿದಿರುವುದರಿಂದ ಅವುಗಳ ಅರ್ಥವನ್ನು ನಿಮಗೆ ವಿವರಿಸುವ ಅಗತ್ಯವಿಲಿಕ್ಕಿಲ್ಲವೆಂದು ನಂಬಿದ್ದೇನೆ.) ಇಂಥ ನೂರಾರುವಾಕ್ಯಗಳು ಬ್ರಹ್ಮನನ್ನು ನಿರಾಕಾರಿ, ನಿರ್ಗುಣ ಇತ್ಯಾದಿಯಾಗಿಯೇ ವರ್ಣಿಸುತ್ತವೆಯೇ ವಿನಃ ಸಗುಣನನ್ನಾಗಿಯೋ ಸಾಕಾರಿಯನ್ನಾಗಿಯೋ ಅಲ್ಲವಲ್ಲ!
ಶ್ರೀಮದಾಚಾರ್ಯರು ಕೂಡ ತಮ್ಮ ಭಾಷ್ಯಗಳಲ್ಲಿ ಬ್ರಹ್ಮವನ್ನು –ಕೂಟಸ್ಥನಿತ್ಯಶುದ್ಧಬುದ್ಧಮುಕ್ತ -ಎಂದೇ ವರ್ಣಿಸಿದ್ದಾರೆಯೇ ವಿನಃ ಸಾಕಾರಿಯನ್ನಾಗಿ ಅಲ್ಲ. ಬ್ರಹ್ಮನು ನಿರ್ವಿಶೇಷನು. ನಿರ್ವಿಶೇಷನಾದ ಬ್ರಹ್ಮನಿಗೆ ವಿಶೇಷಣಗಳಾಗಿ ಏನೂ ಇರಲಾರವು. ವಿಶೇಣಗಳೇನಾದರೂ ಇದ್ದರೆ ಅವುಗಳನ್ನು ಮಾತಿನಿಂದ ಹೇಳಬಹುದು, ಮನಸ್ಸಿನಿಂದ ಊಹಿಸಬಹುದು. ನಿರ್ವಿಶೇಷನಾದ್ದರಿಂದಲೇ ಯದ್ವಾಚಾ ನಭ್ಯುದಿತಂ, ಯನ್ಮನಸಾ ನಮನುತೇ ಇತ್ಯಾದಿವಾಕ್ಯಗಳು ಇವೆಯಲ್ಲವೇ? ರಾಜನಿಗೆ ಸಿಂಹಾಸನ, ಸೈನ್ಯ, ರಾಣಿ, ಪ್ರಜಾಜನರು, ಇತ್ಯಾದಿಯಾಗಿ ಇರುವಂತೆ ಬ್ರಹ್ಮನಿಗೆ ಅಂಥಯಾವುದೂ ಇರಲಾರದಲ್ಲವೇ? ಆದ್ದರಿಂದ ನಿರ್ವಿಶೇಷನಾದವನೇ ಬ್ರಹ್ಮನು; ಆ ಬ್ರಹ್ಮನೇ ನಾನು ಎಂದು ನಿಶ್ಚಯಿಸಿಕೊಳ್ಳಲಿಕ್ಕೆ ತೊಡಕಗಲಿಕ್ಕಿಲ್ಲ. ಇನ್ನು,
ಯತೋ ವಾ ಇಮಾನಿ ಭೂತಾನಿ ಜಾಯಂತೇ | ಯೇನ ಜಾತಾನಿ ಜೀವಂತಿ| ಯತ್ಪ್ರಯಂತ್ಯಭಿಸಂವಿಶಂತಿ| ತದ್ವಿಜಿಜ್ಞಾಸಸ್ವ| ತದ್ಬ್ರಹ್ಮೇತಿ| ಈ ಉಪನಿಷದ್ವಾಕ್ಯದಂತೆ ಬ್ರಹ್ಮವು ಜಗದುತ್ಪತ್ತಿಕಾರಣವು ಇತ್ಯಾದಿಯಾಗಿ ತಿಳಿಯುತ್ತದೆ. ಇದರಿಂದಾಗಿ ನಾನು ಜಗತ್ತಿನ ಸೃಷ್ಟಿಕರ್ತನಲ್ಲ, ಲಯಕರ್ತನಲ್ಲವಲ್ಲ! ಈ ನಾನು ಬ್ರಹ್ಮ ಹೇಗಾದೇನು? ಎಂಬುದು ಸಂದೇಹ. ಇಲ್ಲಿ ಬ್ರಹ್ಮವು ಜಗತ್ಕಾರಣವೆಂದು ಹೇಳಿರುವುದನ್ನು ಸಾಕಾರಿ ಎಂದು ಅರ್ಥೈಸುವುದು ಸಮರ್ಪಕವಲ್ಲ. –ಮನ ಏವಾಖಿಲಂ ವಿಶ್ವಂ ಸೃಜತ್ಯತ್ರ ತು ನೋ ವಿಧಿಃ| ಸ್ವಪ್ನವನ್ನ ಹಿ ಸ್ವಪ್ನಾರ್ಥೋ ಬ್ರಹ್ಮಣಾ ಸೃಷ್ಟ ಈಕ್ಷತೇ|| -ಮನಸ್ಸೇ ಪ್ರಪಂಚವನ್ನು ಸೃಷ್ಟಿಸುತ್ತದಯೇ ಹೊರತು ಬ್ರಹ್ಮವಲ್ಲ; ಸ್ವಪ್ನದಂತೆಯೇ (ಇದನ್ನು ತಿಳಿಯಬೇಕು) ಸ್ವಪ್ನದಲ್ಲಿ ನಾವು ಕಾಣುವ ವಸ್ತುಗಳನ್ನು ಬ್ರಹ್ಮನು ಸೃಷ್ಟಿಸುವುದು ಕಂಡುಬರುವುದಿಲ್ಲವಷ್ಟೆ? ಸಂಸಾರೋ ಮನಸಾ ಪುಂಸಃ ಕಲ್ಪಿತೋsಸ್ತಿ ನ ವಸ್ತುತಃ | ಮನಃ ಶೂನ್ಯೋ ಸುಷುಪ್ತ್ಯಾದೌ ಸಂಸಾರೋ ನೈವ ದೃಶ್ಯತೇ|| -ಮನುಷ್ಯನಿಗೆ ಸಂಸಾರ(ಪ್ರಪಂಚ)ವು ಮನಸ್ಸಿನಿಂದಲೇ ಕಲ್ಪಿತವಾಗಿರುತ್ತದಯೇ ಹೊರತು ನಿಜವಾಗಿರುವುದಿಲ್ಲ. ಮನಸ್ಸಿಲ್ಲದ ನಿದ್ರಾವಸ್ಥೆಯಲ್ಲಿ ಪ್ರಪಂಚವು ತೋರುವುದೇ ಇಲ್ಲ. ಕಲ್ಲಿನಿಂದಾದ ವಿಷ್ಣುವಿನ ಮೂರ್ತಿಯ ಕೈ, ಕಾಲು, ಮುಖ, ಆಯುದೇತ್ಯಾದಿಗಳು ವಿಷ್ಣುವಿನ ಅವಯವಗಳಲ್ಲ, ಕಲ್ಲಿಗಿಂತ ಅವು ಬೇರೆಯೇ ಅಲ್ಲ ದಿರುವಂತೆ ನಿದ್ರೆಯಲ್ಲಿ ಅನುಭವಕ್ಕೆ ಬರುವ ಶುದ್ಧಚೈತನ್ಯಕ್ಕಿಂತ ಪೂರ್ಣ ಬೇರೆಯಾದ ಪ್ರಪಂಚವೇ ಇಲ್ಲ. ಆ ಚೈತನ್ಯವೇ ಕನಸಿನಲ್ಲಿ ತೋರುವ ತನ್ನ ಹಾಗೂ ಇತರೆಲ್ಲ ದೇಹಗಳಾಗಿರುವಂತೆ ಜಾಗ್ರತ್ತಿನಲ್ಲೂ ಅದೇ ದೇಹ-ಜಗತ್ತಾಗಿ ರೂಪತಳೆದಿದೆ. ಜಾಗ್ರದ್ದರ್ಶಿಯು ಮಿಥ್ಯಾರೂಪ; ನನ್ನ ಸ್ವರೂಪವೇ (ಚೈತನ್ಯವೇ) ಈ ದೇಹ ಮತ್ತು ಇಡೀ ಪ್ರಪಂಚವಾಗಿ ಉದಯಿಸಿದೆ. ಜಾಗ್ರತ್ ಮುಗಿದಾಗ ಇವೆಲ್ಲವೂ ನಾನಲ್ಲದೆ ಮತ್ತೇನೂ ಆಗುವುದಿಲ್ಲ ವಾದ್ದರಿಂದ ಚೈತನ್ಯವಾದ ನಾನೇ ಸೃಷ್ಟಿ-ಸ್ತಿತಿ-ಲಯ ಕರ್ತನು ಎಂದು ನಿರ್ದರಿಸಿಕೊಂಡಾಗ ನಾನು ಬ್ರಹ್ಮ ಏಕಲ್ಲ? ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಿದರೂ ಸಿಗಲಿಕ್ಕಲ್ಲ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ