ಸೋಮವಾರ, ಮಾರ್ಚ್ 19, 2018

ಲಘುನ್ಯಾಸ-ರುದ್ರ..........

ಲಘುನ್ಯಾಸ-ರುದ್ರ(ನಮಕ)-ಸರ್ವೋ ವೈ ರುದ್ರ-ಚಮಕಭಾಷ್ಯಮ್
|| ಶ್ರೀಗಣೇಶಾಯ ನಮಃ ||
|| ಓಂ ನಮಃ ಶಿವಾಯ ||
|| ಶ್ರೀಗುರುಭ್ಯೋ ನಮಃ ||
|| ಹರಿಃ ಓ೩ಮ್ ||
|| ಅಥ ಲಘುನ್ಯಾಸಭಾಷ್ಯಮ್ ||
ಓಂ ಅಗ್ಂಹೋಮುಚ ಮಾಂಗಿರ ಸಂ ಗಯಂ ಚ ಸ್ವಸ್ತ್ಯಾತ್ರೇಯಂ ಮನಸಾ ಚ ತಾರ್ಕ್ಷ್ಯಮ್ | ಪ್ರಯತ ಪಾಣಿಃ ಶರಣಂ ಪ್ರಪದ್ಯೇ ಸ್ವಸ್ತಿ ಸಂಬಾಧೇಷ್ವಭಯಂ ನೋ ಅಸ್ತು ||
ಪದವಿಭಾಗಃ—
ಓಂ ಅಂ ಹೋಮ್ ಉಚಮ್ ಆಂಗಿರಸಂ ಗಯನ್ ಚ ಸ್ವಸ್ತಿ (ಸು + ಅಸ್ತಿ) ಆತ್ರೇಯಂ ಮನಸಾ ಚ ತಾರ್ಕ್ಷ್ಯಮ್ | ಪ್ರಯತಪಾಣಿಃ ಶರಣಂ ಪ್ರಪದ್ಯೇ ಸ್ವಸ್ತಿ ಸಂ ಬಾಧೇಷು ಅಭಯಂ ನಃ ಅಸ್ತು ||
ಅನ್ವಯಾರ್ಥಃ—
(ಓಂ) ಆರಂಭ ಮಂಗಲ ಸೂಚಕ; ದೇವತಾಹ್ವಾನ ಸೂಚಕ; ಶುಭಸೂಚಕ.
(ಸ್ವಸ್ತಿ) ಒಳ್ಳೆಯದಾಗಲಿ ಎಂಬ ಶುಭಸೂಚಕಪದ.
(ಅಂ) ಋಗ್ವೇದವನ್ನು, (ಹೋಮ್) ಯಜುರ್ವೇದವನ್ನು, (ಉಚಮ್— ಉಕ್ಥಮ್) ಸಾಮವೇದವನ್ನು, (ಚ) ಮತ್ತು, (ಆಂಗಿರಸಂ) ಅಥರ್ವವೇದವನ್ನು, (ಗಯನ್— ಗಾಯನ್ / ಗಯಂ) ಪಠಿಸುತ್ತಾ / ಪುಣ್ಯಾತ್ಮನೂ ರಾಜರ್ಷಿಯೂ ಆದ ಗಯನನ್ನು, (ಆತ್ರೇಯಂ) ಅತ್ರಿಪುತ್ರನಾದ ಭಗವಾನ್ ದತ್ತಗುರುವನ್ನು / ಅತ್ರಿವಂಶಜನಾದ ಆತ್ರೇಯಮಹರ್ಷಿಯನ್ನು, (ಚ) ಮತ್ತು, (ತಾರ್ಕ್ಷ್ಯಂ) ವಿಷ್ಣುವಾಹನವಾದ ವೈನತೇಯ ಗರುಡನನ್ನು, (ಪ್ರಯತಪಾಣಿಃ) ಮುಗಿದ / ನಮಸ್ಕಾರಮುದ್ರೆಯ ಕೈಯುಳ್ಳವನಾಗಿ, (ಶರಣಂ ಪ್ರಪದ್ಯೇ) ಶರಣು ಹೊಂದುತ್ತೇನೆ. (ನಃ— ಅಸ್ಮಭ್ಯಂ) ನಮಗೆ, (ಬಾಧೇಷು) ಬಾಧೆ / ವಿಘ್ನ / ಅಡ್ಡಿ-ಆತಂಕಗಳ ಬಗ್ಗೆ, (ಸಮ್ ಅಭಯಮ್) ನಿರಂತರವಾದ ಅಭಯವು, (ಅಸ್ತು) ಇರಲಿ. (ಸ್ವಸ್ತಿ) ಎಲ್ಲರಿಗೂ ಒಳ್ಳೆಯದಾಗಲಿ.
ಭಾವಾರ್ಥಃ ವಿವರಣಮ್ ಚ—
ಸಕಲ ವೇದಮಂತ್ರಗಳ ಪಠಣವೂ ಪ್ರಣವಾಕ್ಷರವೆನಿಸಿದ, ಭಗವದ್ವಾಚ್ಯವಾದ ಏಕಾಕ್ಷರಿಯಾದ, ಶಬ್ದಬ್ರಹ್ಮವೆನಿಸಿದ “ಓಂ”ಕಾರದೊಂದಿಗೇ ಆರಂಭಿಸಲ್ಪಡಬೇಕು ಎಂಬುದು ಪೂರ್ವಸೂರಿಗಳ, ಪ್ರಾಜ್ಞರ ಮತ. ಇದು ಭಗವಂತನಿಗೆ ಸ್ವಾಗತಸೂಚಕವೂ ಹೌದು.
ಸ್ವಸ್ತಿವಾಚನವೂ ಸಹ ಸಕಲಕಾರ್ಯಾರಂಭಕ್ಕೆ ವಿಘ್ನನಿವಾರಣಾಸೂಚಕ, ಶುಭದಾಯಕ.
ಋಗ್ವೇದವು “ಅಗ್ನಿಮೀಳೇ ಪುರೋಹಿತಂ” ಎಂದು ಅ-ಕಾರದಿಂದಲೇ ಪ್ರಾರಂಭವಾಗುವುದರಿಂದಲೂ, ಇದು ಪ್ರಧಾನವಾಗಿ ಭಗವಂತನಾದ ವಿಷ್ಣುವನ್ನು ಸ್ತುತಿಸುವುದರಿಂದಲೂ, “ಅ”ಕಾರವು ವಿಷ್ಣುವಾಚಕವಾದುದರಿಂದಲೂ, ಋಗ್ವೇದವನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರತಿನಿಧಿಸುತ್ತದೆ. ಋಗ್ವೇದವನ್ನು ಎಂಬರ್ಥದಲ್ಲಿ “ಅಂ” ಎಂದು ಪ್ರಯೋಗಿಸಿದ್ದು (ರಾಮಂ— ರಾಮನನ್ನು ಎಂದಂತೆ) ಕಾಣಬರುತ್ತದೆ. ಯಜುರ್ವೇದದಲ್ಲಿ “ಹ,ಶ,ಷ,ಸ” ಗಳೆಂಬ ಕರ್ಕಶವ್ಯಂಜನಗಳ ಹಿಂದೆ ಬರುವ ಅನುಸ್ವಾರಕ್ಕೆ “ಗ್ಂ” ಆದೇಶವಾಗುತ್ತದೆ. ಇದು ಯಜುರ್ವೇದದ ಭಾಷಾ ಪ್ರಯೋಗದ ವಿಶೇಷತೆ / ವೈಶಿಷ್ಟ್ಯ. ಹಾಗಾಗಿಯೇ ಇಲ್ಲಿ ಅಂ ಹೋಮುಚಮಾಂಗಿರಸಂ” ಎಂಬಲ್ಲಿ “ಹೋ”ಕಾರದ ಹಿಂದಿನ ಅನುಸ್ವಾರವು “ಅಂ” ಬದಲು “ಅಗ್ಂ” ಎಂದಾಗಿದೆ.
“ಹೋ” ಎಂದರೆ “ಹ್ವಯತೇ ಆಹ್ವಯತೇ ಅನೇನ ಇತಿ”— ದೇವತೆಗಳನ್ನು ಹೋಮಾಗ್ನಿಯಲ್ಲಿ ಆಹ್ವಾನಿಸಿ, ಹವಿಸ್ಸನ್ನು ಹೋಮಿಸಿ, ಅರ್ಪಿಸಲಾಗುತ್ತದೆ. ಯಜ್ಞ / ಹೋಮಪ್ರಧಾನವಾದದ್ದು ಯಜುರ್ವೇದ. ಆದ್ದರಿಂದ, ಯಜುರ್ವೇದವನ್ನು ಸೂಚ್ಯವಾಗಿ “ಹೋಮ್” ಎನ್ನಲಾಗಿದೆ.
“ಉಚಮ್”— ಉಕ್ಥಮ್— ಸಾಮವೇದವಾಚ್ಯ ಶಬ್ದ. 
“ಆಂಗಿರಸಂ”— ಅಥರ್ವಾಂಗಿರಸ ಮಹರ್ಷಿಸಂಕಲಿತವಾದದ್ದು ಅಥರ್ವ / ಆಥರ್ವಣವೇದ. ಆದ್ದರಿಂದ, ಅಂಗಿರಸ ಸಂಕಲಿತವಾದದ್ದು ಆಂಗಿರಸಸಂಹಿತೆ. ಅದೇ ಅಥರ್ವವೇದ.
“ಗಯಂ ಚ”— “ಗಯನ್ + ಚ” ಇವೆರಡನ್ನು ಕೂಡಿಸಿ ಪಠಿಸುವಾಗ ಗಯಂಚ ಎಂದಾಗುತ್ತದೆ. ಗಯನ್ ಎಂಬುದು ಬಹುಶಃ ಗಾಯನ್ ಎಂಬುದರ ಆರ್ಷ / ವೈದಿಕ ಪ್ರಯೋಗ. ೪ ವೇದಗಳನ್ನೂ ಗಾನಮಾಡುತ್ತಾ, ಪಠಿಸುತ್ತಾ, ಉಚ್ಚರಿಸುತ್ತಾ ಎಂದರ್ಥ. ಗಯ— ಎಂದರೆ ಪ್ರಖ್ಯಾತ ಭಾಗವತೋತ್ತಮನೆನಿಸಿದ, ಬ್ರಹ್ಮಜ್ಞಾನಿಯಾದ, ರಾಜರ್ಷಿಯಾಗಿದ್ದ ಪುರಾತನ ಮಹಾರಾಜನೊಬ್ಬನ ಹೆಸರೂ ಹೌದು. ಹೀಗೆ ಅವನ ಸ್ಮರಣೆ / ಭಗವದ್ಭಕ್ತರ ಸ್ಮರಣೆಯು ಭಗವಂತನಿಗೂ ಪ್ರಿಯವಾಗುವುದೆಂದೂ, ನಮಗೂ ಅಂಥವರ ಕೃಪೆಯಿಂದ ಭಗವದ್ಭಕ್ತಿ-ಜ್ಞಾನಾದಿಗಳು ಉದಿಸಲೆಂದೂ ಗಯನ ಪುಣ್ಯಸ್ಮರಣೆಯೂ ಇದಾಗುತ್ತದೆ.
ಆತ್ರೇಯನೆಂದರೆ ಅವಧೂತಪರಂಪರೆಯ ಸ್ಥಾಪಕ, ತ್ರಿಮೂರ್ತಿ ಸ್ವರೂಪ ಸದ್ಗುರು ದತ್ತಾತ್ರೇಯ. ಗುರುವಿಲ್ಲದೆ ವಿದ್ಯೆಯಿಲ್ಲ, ಮುಕ್ತಿಯಿಲ್ಲ.
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಪರಿ ಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ”
“ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್”— ಎಂಬ ಸೂಕ್ತಿಗಳಂತೆ, ಅಜ್ಞಾನವೆಂಬ ತಿಮಿರದಿಂದ ಅಂಧನಾದವನ ಚಕ್ಷುಗಳನ್ನು ಜ್ಞಾನವೆಂಬ ಅಂಜನಶಲಾಕೆಯಿಂದ ತೆರೆದ ಗುರುಮೂರ್ತಿಗೆ ನಮೋ ನಮಃ— ಗುರುವು ಶಿಷ್ಯೋದ್ಧಾರಕ್ಕೆ / ಸಾಧಕನ ಬಂಧಮುಕ್ತಿಗೆ ಸಾಧನಜ್ಯೋತಿ / ಮಾರ್ಗದರ್ಶಕ ಕೈದೀವಿಗೆ. ಅಲ್ಲದೆ, ಗುರುಪರಂಪರೆಯಲ್ಲೇ ಬರುವ ಆಯುರ್ವೇದ ಮಹರ್ಷಿ, ಆತ್ರೇಯಸಂಹಿತೆಯ ಕರ್ತೃ ಆತ್ರೇಯರ ಸ್ಮರಣೆಯೂ ಆಗುತ್ತದೆ. ಅತ್ರಿಯು ಬ್ರಹ್ಮಮಾನಸ ಪುತ್ರರಲ್ಲೊಬ್ಬ, ಸಪ್ತರ್ಷಿಗಳಲ್ಲೊಬ್ಬ. ಅಂಥವರ ವಂಶಜರು ಆತ್ರೇಯರು.
ತಾರ್ಕ್ಷ್ಯನೆಂದರೆ ವಿಷ್ಣುವಿನ ರಥ / ವಾಹನನಾದ, ವಿನತೆ-ಕಶ್ಯಪ(ತಾರ್ಕ್ಷ)  ಸುತನಾದ, ವೈನತೇಯ ಗರುಡ. ಇವನು ವೇದಾಭಿಮಾನೀ / ವಿದ್ಯಾಭಿಮಾನೀ ದೇವತೆ. ಆದ್ದರಿಂದ, ವೇದ/ ವಿದ್ಯೆಯ ಸಿದ್ಧಿಗಾಗಿ ಇವನ ಸ್ಮರಣೆ, ಶರಣಾಗತಿ.
ಪ್ರಯತಪಾಣಿಯೆಂದರೆ ಚೆನ್ನಾಗಿ, ಪ್ರಕೃಷ್ಟವಾಗಿ ಯತ— ಬಿಗಿಹಿಡಿದ, ನಿಯಂತ್ರಿತ, ದುಷ್ಕಾರ್ಯಗಳಿಂದ ದೂರವಾದ, ಶರಣಾಗತಿದ್ಯೋತಕವಾದ ನಮಸ್ಕಾರಮುದ್ರೆಯುಳ್ಳ ಪಾಣಿ / ಕರಗಳುಳ್ಳವನು.
ರಾಮಾನುಜಾಚಾರ್ಯರು ಪ್ರಪತ್ತಿ / ಶರಣಾಗತಿಮಾರ್ಗವನ್ನೇ ಶ್ರೇಷ್ಠವೆಂದು ಬೋಧಿಸಿರುವರು.
“ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||”
ಎಂಬ ಗೀತಾಚಾರ್ಯನ ಅಭಯವಾಕ್ಯದಂತೆ ಭಗವಂತನಿಗೆ ಸರ್ವಾತ್ಮನಾ ಶರಣಾಗುವಿಕೆಯನ್ನು ಇಲ್ಲಿ “ಶರಣಂ ಪ್ರಪದ್ಯೇ” ಎಂದು ಹೇಳಲಾಗಿದೆ.
ಹಾಗೇ, ಯಾವುದೇ ಕಾರ್ಯಾರಂಭದಲ್ಲಿ, ಮುಂದೆ ಬರಬಹುದಾದ ವಿಘ್ನಗಳ ಪರಿಹಾರಕ್ಕಾಗಿ ಪ್ರಾರ್ಥಿಸುವುದು ನಮ್ಮ ಪರಂಪರೆ. ಅದಕ್ಕಾಗಿ, ನಮ್ಮ ಕಾರ್ಯಗಳಿಗೆ ಬರಬಹುದಾದ ಸಕಲ ಬಾಧೆಗಳಿಂದ ಪರಿಹಾರಕ್ಕೆ ಭಗವಂತನ ಎಡೆಬಿಡದ ಅಭಯವು ನಮ್ಮ ಮೇಲಿರಲಿ ಎಂಬುದಕ್ಕಾಗಿ “ಸ್ವಸ್ತಿ ಸಂ ಬಾಧೇಷ್ವಭಯಂ ನೋ ಅಸ್ತು” ಎನ್ನಲಾಗಿದೆ. ಇಲ್ಲಿ ಸಮ್ ಎಂದರೆ “ಸಮ್-ಪ್ರಕರ್ಷ-ಆಶ್ಲೇಷ-ನೈರಂತರ್ಯ-ಔಚಿತ್ಯ-ಅಭಿಮುಖ್ಯೇಷು” ಎಂಬಂತೆ ನಿರಂತರವಾಗಿ ಅಭಯವಿರಲಿ; ಚೆನ್ನಾಗಿ / ಪ್ರಕೃಷ್ಟವಾಗಿ ಬಹುವಾಗಿ ಅಭಯವಿರಲಿ ಎಂದರ್ಥ.
ಕೊನೆಗೆ “ಸ್ವಸ್ತಿ” ಯ ಪುನರುಕ್ತಿಯು “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಭಾರತೀಯ ಋಷಿಪರಂಪರೆಯು ಸರ್ವಸಮಭಾವಕ್ಕೆ, “ತನ್ನಂತೆ ಪರರ ಬಗೆ”ವ ಉದಾತ್ತ / ವಿಶಾಲ ಭಾವಕ್ಕೆ ನೀಡಿರುವ ಪ್ರಾಮುಖ್ಯತೆಯ ದ್ಯೋತಕವಾಗಿದೆ.

ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ | ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು ||

ಪದ-ವಿಭಾಗಃ—
ಸು ಅಸ್ತಿ ನಃ ಇಂದ್ರಃ ವೃದ್ಧಶ್ರವಾಃ ಸು ಅಸ್ತಿ ನಃ ಪೂಷಾ ವಿಶ್ವವೇದಾಃ | ಸು ಅಸ್ತಿ ನಃ ತಾರ್ಕ್ಷ್ಯಃ ಅರಿಷ್ಟನೇಮಿಃ ಸು ಅಸ್ತಿ ನಃ ಬೃಹಃ ಪತಿಃ ದಧಾತು ||
ಅನ್ವಯಾರ್ಥಃ—
ವೃದ್ಧಶ್ರವಾಃ ಇಂದ್ರಃ— ವೃದ್ಧನಾದ ದೇವಗುರು ಬೃಹಸ್ಪತಿಯ ಮಾತನ್ನು ಶ್ರವಣಮಾಡಿ ಅನುಸರಿಸುವ / ಬಹು ಕೀರ್ತಿಯುಳ್ಳವನಾದ ದೇವೇಂದ್ರನು,
ನಃ ಸ್ವಸ್ತಿ (ದಧಾತು)— ನಮಗೆ ಮಂಗಲವನ್ನೀಯಲಿ. 
ವಿಶ್ವವೇದಾಃ ಪೂಷಾ— ಸರ್ವಜ್ಞನಾದ ಪೂಷನ್ ದೇವನು,
ನಃ ಸ್ವಸ್ತಿ (ದಧಾತು)— ನಮಗೆ ಶುಭವೀಯಲಿ.
ಅರಿಷ್ಟನೇಮಿಃ ತಾರ್ಕ್ಷ್ಯಃ— ಅನಿಷ್ಟಗಳನ್ನು ನಾಶಮಾಡುವ ವಿಷ್ಣುವಾಹನ ಗರುಡನು,
ನಃ ಸ್ವಸ್ತಿ ದಧಾತು— ನಮಗೆ ಹಿತವನ್ನೀಯಲಿ.
(ದೇವಗುರುಃ) ಬೃಹಸ್ಪತಿಃ ನಃ ಸ್ವಸ್ತಿ ದಧಾತು— (ದೇವಗುರುಗಳಾದ) ಬೃಹಸ್ಪತಿಗಳು ನಮಗೆ ಒಳ್ಳಿತನ್ನೀಯಲಿ.
ಭಾವಾರ್ಥಃ ವಿವರಣಂ ಚ—
“ವೃದ್ಧಾತ್ ಬೃಹಸ್ಪತೇಃ ಶೃಣೋತಿ ಇತಿ ವೃದ್ಧಶ್ರವಾಃ”— ವಯೋವೃದ್ಧನೂ, ಜ್ಞಾನವೃದ್ಧನೂ ಆದ ದೇವಗುರು ಬೃಹಸ್ಪತಿಯ ಮಾತನ್ನು ಪಾಲಿಸುವವ ಎಂಬುದರಿಂದ ಇಂದ್ರನನ್ನು ವೃದ್ಧಶ್ರವಾಃ ಎನ್ನಲಾಗಿದೆ. ಅಲ್ಲದೆ, “ವೃದ್ಧೇಭ್ಯಃ ಶೃಣೋತಿ ಇತಿ”— ಹಿರಿಯರ ಮಾತನ್ನಾಲಿಸುವವನು, ಪಾಲಿಸುವವನು. “ವೃದ್ಧಂ ಪ್ರಭೂತಂ ಶ್ರವಃ ಶ್ರವಣಂ ಸ್ತೋತ್ರಂ ಹವಿರ್ಲಕ್ಷಣಮನ್ನಂ ವಾ ಯಸ್ಯ”— ಅತಿಯಾದ ಸ್ತುತಿ, ಪ್ರಶಂಸೆ, ಕೀರ್ತಿಗಳು ಯಾವನದೋ ಅವನು ಅಥವಾ ಬಹುವಾದ ಹವಿಸ್ಸಿನ ರೂಪವಾದ ಅನ್ನ / ದೊಡ್ಡ ಹವಿರ್ಭಾಗವು ಯಾವನದೋ ಅವನು ಇಂದ್ರನು, ದೇವತೆಗಳ ಒಡೆಯ, ಮನಸ್ಸಿನ ಅಧಿದೇವತೆ, ಸಕಲೇಂದ್ರಿಯಾಭಿಮಾನೀ ದೇವತೆಗಳ ಅಧಿಪತಿ ಸಕಲೇಂದ್ರಿಯಗಳೊಡೆಯನಾದ ಮನಸ್ಸಿನ ಅಭಿಮಾನಿಯಾದ ಇಂದ್ರನು. “ವೃದ್ಧಂ ಶ್ರವಃ ಧನಂ ಕೀರ್ತಿಃ ವಾ ಯಸ್ಯ”— ಅಧಿಕವಾದ ಸಂಪತ್ತು ಅಥವಾ ಕೀರ್ತಿ, ಪ್ರಸಿದ್ಧಿಗಳು ಯಾವನದೋ ಅವನು. ಪುರಾಣಗಳಲ್ಲಿ ಹಲವೆಡೆ ಇಂದ್ರನನ್ನು ತೆಗಳಿದರೂ, ವೇದಗಳಲ್ಲಿ ಇಂದ್ರಸ್ತುತಿಯು ಬಹುವಾಗಿದೆ. 
“ಇಂದತೇ ಇತಿ ಇಂದ್ರಃ”— ‘ಇಂದ ಪರಮೈಶ್ವರ್ಯೇ’ ಧಾತು. ಶ್ರೇಷ್ಠವಾದ ಆಧ್ಯಾತ್ಮಿಕ ಸಂಪತ್ತು / ಬ್ರಹ್ಮಜ್ಞಾನವುಳ್ಳವನೇ ಇಂದ್ರ.
“ವಿಶ್ವಂ ಸರ್ವಂ ವೇತ್ತಿ ಇತಿ ವಿಶ್ವವೇದಾಃ”— ವಿಶ್ವವನ್ನೇ / ಎಲ್ಲವನ್ನು ತಿಳಿಯುತ್ತಾನೆ / ತಿಳಿದವನು ಎಂಬುದು ವಿಶ್ವವೇದಾಃ ಪದದ ಅರ್ಥ. ಸರ್ವಜ್ಞ ಎಂದರ್ಥ. 
“ಪೂಷತಿ ಇತಿ ಪೂಷ ವೃದ್ಧೌ ಧಾತೋಃ ನಿಷ್ಪನ್ನಃ ಪೂಷನ್ ಶಬ್ದಃ, ತಸ್ಯ ಪ್ರಥಮೈಕವಚನಂ ಪೂಷಾ ಇತಿ ಸೂರ್ಯವಾಚಕಃ”— ಜಗದ ಸಕಲ ಜೀವರನ್ನು ಆಹಾರಾದಿಗಳನ್ನು ಸೃಜಿಸಿ ಪೋಷಿಸುತ್ತಾನೆ, ಬೆಳೆಸುತ್ತಾನೆ ಎಂಬರ್ಥ ಕೊಡುವ ಪೂಷನ್ ಶಬ್ದವು ಪೂಷ ವೃದ್ಧೌ ಧಾತುಜನ್ಯವಾಗಿದೆ. ಅದರ ಪ್ರಥಮಾವಿಭಕ್ತಿ ಏಕವಚನವು ಪೂಷಾ ಎಂದಾಗಿದೆ. ಅಲ್ಲದೆ,
“ಧಾತಾ ಮಿತ್ರೋऽರ್ಯಮಾ ಶಕ್ರೋ ವರುಣಸ್ತ್ವಂಶ ಏವ ಚ |
ಭಗೋ ವಿವಸ್ವಾನ್ ಪೂಷಾ ಚ ಸವಿತಾ ದಶಮಸ್ತಥಾ ||
ಏಕಾದಶಸ್ತಥಾ ತ್ವಷ್ಟಾ ದ್ವಾದಶೋ ವಿಷ್ಣುರುಚ್ಯತೇ |
ಜಘನ್ಯಜಸ್ತು ಸರ್ವೇಷಾಮಾದಿತ್ಯಾನಾಂ ಗುಣಾಧಿಕಃ ||”
— ಮಹಾಭಾರತೇ ೧.೬೫.೧೫ -೧೬.
ಹೀಗೆ ಮಹಾಭಾರತದ ಪ್ರಕಾರ, ಧಾತಾ, ಅರ್ಯಮಾ, ಶಕ್ರ (ಇಂದ್ರ), ವರುಣ, ಅಂಶ, ಭಗ, ವಿವಸ್ವಾನ್, ಪೂಷಾ, ಹತ್ತನೆಯವನಾದ ಸವಿತಾ, ಹಾಗೆಯೇ, ೧೧ನೆಯವನಾದ ತ್ವಷ್ಟಾ, ಹಾಗೂ ೧೨ನೆಯವನಾದ ವಿಷ್ಣುವು— ಇವರು ಕಶ್ಯಪ ಹಾಗೂ ಅದಿತಿದೇವಿಯ ೧೨ ಮಕ್ಕಳಾದ ದ್ವಾದಶ ಆದಿತ್ಯರು. ಇವರಲ್ಲಿ, ಕೊನೆಯವನಾದ ವಿಷ್ಣುವು ಎಲ್ಲರಿಗಿಂತ ಶ್ರೇಷ್ಠನು. ಇಲ್ಲಿ ಪೂಷನ್ನನು ದ್ವಾದಶಾದಿತ್ಯರಲ್ಲಿ ೯ನೆಯವನು.
ಇಂತಹ ಸೂರ್ಯ / ಪೂಷನ್ನನು ಲೋಕದೀಪಕನಾಗಿ, ಸಕಲರ ಕರ್ಮಸಾಕ್ಷಿಯಾಗಿ, ವಿಶ್ವವೇದ / ಸರ್ವಜ್ಞನೂ ಹೌದು.
“ಅರಿಷ್ಟಾನ್ ಅಶುಭಾನ್ ಉಪದ್ರವಾನ್ ನಯತಿ ವಿನಾಶಮ್ ಇತಿ ಅರಿಷ್ಟನೇಮಿಃ”— ಸಕಲ ತೊಂದರೆಗಳನ್ನು ವಿನಾಶದೆಡೆಗೆ ಒಯ್ಯುತ್ತಾನೆಂಬುದರಿಂದ ತಾರ್ಕ್ಷ್ಯನೆಂದೆನಿಸಿದ ಗರುಡನು ಅರಿಷ್ಟನೇಮಿಯೆನಿಸಿರುವನು. ಅಲ್ಲದೆ,
“ತಾರ್ಕ್ಷ್ಯಶ್ಚಾರಿಷ್ಟನೇಮಿಶ್ಚ ಗರುಡಶ್ಚ ಮಹಾಬಲಃ |
ಅರುಣಶ್ಚಾರುಣಿಶ್ಚೈವ ವಿನತಾಯಾಃ ಸುತಾಃ ಸ್ಮೃತಾಃ ||”
— ಹರಿವಂಶೇ
ಮಹಾಭಾರತದ ಖಿಲ (ಪ್ರಕ್ಷಿಪ್ತ / ಉಳಿಕೆ / ಶೇಷ) ಭಾಗವಾದ ಹರಿವಂಶದ ಪ್ರಕಾರ, ತಾರ್ಕ್ಷ್ಯ, ಅರಿಷ್ಟನೇಮಿ, ಮಹಾಬಲಶಾಲಿಯಾದ ಗರುಡ, ಸೂರ್ಯಸಾರಥಿಯಾದ ಅರುಣ ಹಾಗೂ ಅರುಣಿ— ಇವರು  ವಿನತೆಯ ಮಕ್ಕಳೆಂದು ಸ್ಮರಿಸಲ್ಪಟ್ಟಿದ್ದಾರೆ. ಹೀಗೆ, ಸಕಲ ಪಾಪವಿದೂರನಾದ ವಿಷ್ಣುವಾಹನನಾದ ವೈನತೇಯ ಗರುಡನನ್ನು ಸ್ಮರಿಸಲಾಗಿದೆ.
“ಬೃಹತ್ಯಾಃ ವಾಚಃ ಪತಿಃ ಬೃಹಸ್ಪತಿಃ”— ಬೃಹತ್ತಾದ ವಾಕ್ಕಿನ ಪತಿಯು ಬೃಹಸ್ಪತಿಯು, ದೇವಗುರುವು. 
ಹೀಗೆ, ಸುಪ್ರಸಿದ್ಧನಾದ ಇಂದ್ರನೂ, ಸರ್ವಜ್ಞನಾದ ಸೂರ್ಯನೂ, ಅರಿಷ್ಟನಾಶಕನಾದ ಗರುಡನೂ, ದೇವಪುರೋಹಿತನಾದ ವಾಕ್ಪತಿ / ವಾಗೀಶ / ವಾಚಸ್ಪತಿ / ಬೃಹಸ್ಪತಿಯೂ ನಮಗೆ ಮಂಗಳವುಂಟುಮಾಡಲೆಂಬುದು ಈ ಸ್ವಸ್ತಿವಾಚನ ಮಂತ್ರದ ಸಾರ.

ಸರ್ವೇಷು ಕಾಲೇಷು ಸಮಸ್ತದೇಶೇಷ್ವಶೇಷಕಾರ್ಯೇಷು ತಥೇಶ್ವರೇಶ್ವರಃ | ಸರ್ವಸ್ವರೂಪೀ ಭಗವಾನನಾದಿರ್ಮಮಾಸ್ತು ಮಾಂಗಲ್ಯವಿವೃದ್ಧಯೇ (ಮಾಂಗಲ್ಯಾಭಿವೃದ್ಧಯೇ) ಹರಿಃ ||
ಪದ-ವಿಭಾಗಃ—
ಸರ್ವೇಷು ಕಾಲೇಷು ಸಮಸ್ತ-ದೇಶೇಷು ಅ-ಶೇಷ-ಕಾರ್ಯೇಷು ತಥಾ ಈಶ್ವರ-ಈಶ್ವರಃ | ಸರ್ವ-ಸ್ವರೂಪೀ ಭಗವಾನ್ ಅನಾದಿಃ ಮಮ ಅಸ್ತು ಮಾಂಗಲ್ಯ-ವಿ-ವೃದ್ಧಯೇ (ಮಾಂಗಲ್ಯ-ಅಭಿವೃದ್ಧಯೇ) ಹರಿಃ ||
ಅನ್ವಯಾರ್ಥಃ—
ಸರ್ವೇಷು ಕಾಲೇಷು— ಎಲ್ಲಾ ಕಾಲಗಳಲ್ಲೂ (ಯಾವಾಗಲೂ, ಸದಾ, ಸರ್ವದಾ, ಕಷ್ಟಕಾಲದಲ್ಲೂ, ಸುಖಕಾಲದಲ್ಲೂ, ಹಗಲೂ, ಇರುಳೂ, ಬೇಸಿಗೆ-ಮಳೆ-ಚಳಿಗಾಲಗಳಲ್ಲೂ);
ಸಮಸ್ತ-ದೇಶೇಷು— ಎಲ್ಲಾ ಪ್ರದೇಶಗಳಲ್ಲೂ (ಎಲ್ಲಾ ದೇಶಗಳಲ್ಲೂ, ನಾವು ಎಲ್ಲಿದ್ದರೂ);
ತಥಾ ಅ-ಶೇಷ-ಕಾರ್ಯೇಷು— ಹಾಗೆಯೇ, ಎಲ್ಲಾ ಕಾರ್ಯಗಳಲ್ಲೂ (ನಾವು ಮಾಡುವ ಎಲ್ಲ ಕೆಲಸಗಳಲ್ಲಿ ಒಂದನ್ನೂ ಬಿಡದೆ ಎಲ್ಲದರಲ್ಲೂ; ಲೌಕಿಕ ವ್ಯವಹಾರ, ಕೃಷಿ ಮುಂತಾದವುಗಳಲ್ಲೂ, ಧಾರ್ಮಿಕ-ಆಧ್ಯಾತ್ಮಿಕ ಸ್ವಾಧ್ಯಾಯ, ಪೂಜಾಯಜ್ಞಾದಿಗಳಲ್ಲೂ);
ಈಶ್ವರ-ಈಶ್ವರಃ— ಸಕಲ ಅಧಿಪತಿಗಳ ಸಾರ್ವಭೌಮ ಚಕ್ರವರ್ತಿಯಾದ ಪರಮೇಶ್ವರ ಭಗವಂತನಾದ (ಈಶ್ವರಾಣಾಮ್ ಈಶ್ವರಃ);
ಸರ್ವ-ಸ್ವರೂಪೀ— ವಿಶ್ವದ / ಸೃಷ್ಟಿಯ ಎಲ್ಲದರ ಮೂಲಸ್ವರೂಪವೇ ತಾನಾಗಿರುವ,
ಅನಾದಿಃ ಭಗವಾನ್#— ಆದಿಯಿಲ್ಲದೆ ಅನಾದಿಯೆನಿಸಿದ, ಭಗವಂತನು,
ಹರಿಃ— ಶ್ರೀಹರಿಯೆನಿಸಿದ ಮಹಾವಿಷ್ಣುವು (ಹರಿರ್ಹರತಿ ಪಾಪಾನಿ— ತನ್ನ ಭಕ್ತರ ಸಕಲ ದುರಿತಗಳನ್ನು ಪರಿಹರಿಸುವುದರಿಂದಲೂ, ಗಜೇಂದ್ರನ ಆರ್ತ ಮೊರೆಗೆ ಓಗೊಟ್ಟು ಮೊಸಳೆಯಿಂದಲೂ, ಸಂಸಾರಬಂಧನದಿಂದಲೂ ಅದನ್ನು ಮುಕ್ತಿಗೊಳಿಸಿ, ಕಷ್ಟಪರಿಹರಿಸಿದ್ದರಿಂದಲೂ ಹರಿಯೆನಿಸಿದ ಶ್ರೀಮನ್ನಾದಿನಾರಾಯಣನು);
ಮಮ ಮಾಂಗಲ್ಯವಿವೃದ್ಧಯೇ (ಮಾಂಗಲ್ಯಾಭಿವೃದ್ಧಯೇ) ಅಸ್ತು— ನನ್ನ (ನಮ್ಮ) ಶುಭವನ್ನು, ಹಿತವನ್ನು, ಮಂಗಲವನ್ನು ವರ್ಧಿಸಲಿ, ಹೆಚ್ಚಿಸುವವನಾಗಲಿ. (ಲೌಕಿಕ / ಐಹಿಕ ಹಾಗೂ ಪಾರಲೌಕಿಕ / ಆಮುಷ್ಮಿಕ ಅಭಿವೃದ್ಧಿಯನ್ನುಂಟುಮಾಡುವವನಾಗಲಿ.)
# ಭಗವಾನ್—
ತದ್ಬ್ರಹ್ಮ ತತ್ಪರಂ ಧಾಮ ತದ್ಧ್ಯೋऽಯಂ ಮೋಕ್ಷಕಾಂಕ್ಷಿಣಾ |
ಶ್ರುತಿವಾಕ್ಯೋದಿತಂ ಸೂಕ್ಷ್ಮಂ ತದ್ವಿಷ್ಣೋಃ ಪರಮಂ ಪದಮ್ ||
ತದೇವ ಭಗವದ್ವಾಚ್ಯಂ ಸ್ವರೂಪಂ ಪರಮಾತ್ಮನಃ |
ವಾಚಕೋ ಭಗವಚ್ಛಬ್ದಃ ತಸ್ಯಾದ್ಯಸ್ಯಾಕ್ಷರಾತ್ಮನಃ ||
ಏವಂ ನಿಗದಿತಾರ್ಥಸ್ಯ ಸ ತತ್ತ್ವಂ ತಸ್ಯ ತತ್ತ್ವತಃ |
ಜ್ಞಾಯತೇ ಯೇನ ತಜ್ಜ್ಞಾನೇ ಪರಮನ್ಯತ್ ತ್ರಯೀಮಯಮ್ ||
ಅಶಬ್ದಗೋಚರಸ್ಯಾಪಿ ತಸ್ಯೈವ ಬ್ರಹ್ಮಣೋ ದ್ವಿಜ |
ಪೂಜಾಯಾಂ ಭಗವಚ್ಛಬ್ದಃ ಕ್ರಿಯತೇ ಹ್ಯೌಪಚಾರಿಕಃ ||
ಶುದ್ಧೇ ಮಹಾವಿಭೂತ್ಯಾಖ್ಯೇ ಪರೇ ಬ್ರಹ್ಮಣಿ ವರ್ತತೇ |
ಮೈತ್ರೇಯ! ಭಗವಚ್ಛಬ್ದಃ ಸರ್ವಕಾರಣಕಾರಣೇ ||
ಸಂಭರ್ತ್ತೇತಿ ತಥಾ ಭರ್ತ್ತಾ ಭಕಾರೋऽರ್ಥದ್ವಯಾನ್ವಿತಃ |
ತೇನಾಗಮಯಿತಾ ಸ್ರಷ್ಟಾ ಗಕಾರಾರ್ಥಸ್ತಥಾ ಮುನೇ ||
ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯ್ಯಸ್ಯ ಯಶಸಃ ಶ್ರಿಯಃ |
ಜ್ಞಾನವೈರಾಗ್ಯಯೋಶ್ಚೈವ ಷಣ್ಣಾಂ ಭಗ ಇತೀಂಗನಾ ||
ವಸಂತಿ ಯತ್ರ ಭೂತಾನಿ ಭೂತಾತ್ಮನ್ಯಖಿಲಾತ್ಮನಿ |
ಸ ಚ ಭೂತೇಷ್ವಶೇಷೇಷು ವಕಾರಾರ್ಥಸ್ತತೋऽವ್ಯಯಃ ||
ಏವಮೇವ ಮಹಾಬಾಹೋ! ಭಗವಾನಿತಿ ಸತ್ತಮ |
ಪರಮಬ್ರಹ್ಮಭೂತಸ್ಯ ವಾಸುದೇವಸ್ಯ ನಾನ್ಯಗಃ ||
ತತ್ರ ಪೂಜ್ಯ-ಪದಾರ್ಥೋಕ್ತಿ-ಪರಿಭಾಷಾ-ಸಮನ್ವಿತಃ |
ಶಬ್ದೋऽಯಂ ನೋಪಚಾರೇಣ ಅನ್ಯತ್ರ ಹ್ಯುಪಚಾರತಃ ||
ಉತ್ಪತ್ತಿಂ ಪ್ರಲಯಂ ಚೈವ ಭೂತಾನಾಮಗತಿಂ ಗತಿಮ್ |
ವೇತ್ತಿ ವಿದ್ಯಾಮವಿದ್ಯಾಂ ಚ ಸ ವಾಚ್ಯೋ ಭಗವಾನಿತಿ ||
ಜ್ಞಾನಶಕ್ತಿಬಲೈಶ್ವರ್ಯವೀರ್ಯ್ಯತೇಜಾಂಸ್ಯಶೇಷತಃ |
ಭಗವಚ್ಛಬ್ದವಾಚ್ಯಾನಿ ವಿನಾ ಹೇಯೈರ್ಗುಣಾದಿಭಿಃ ||

ಓಂ ಭೂಃ | ತತ್ಸವಿತುರ್ವರೇಣ್ಯಮ್ | ಓಂ ಭುವಃ | ಭರ್ಗೋ ದೇವಸ್ಯ ಧೀಮಹಿ | ಓಗ್ಂ ಸುವಃ | ಧಿಯೋ ಯೋ ನಃ ಪ್ರಚೋದಯಾತ್ ||
ಓಂ ಭೂಃ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಓಂ ಭುವಃ | ಧಿಯೋ ಯೋ ನಃ ಪ್ರಚೋದಯಾತ್ | ಓಗ್ಂ ಸುವಃ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ||
ವಿವರಣಮ್—
ಓಂ ಭೂಃ— ಅಮ್ಮಾ ಭೂದೇವಿಯೇ! ನಿನಗೆ ನನ್ನ ನಮಸ್ಕಾರಗಳು.
ತತ್-ಸವಿತುಃ ವರೇಣ್ಯಮ್— ಆ ಭಾನುಮಂಡಲದಲ್ಲಿ ಗೋಚರಿಸುವ ಶ್ರೇಷ್ಠನೂ, ವರಣೀಯನೂ (ಸ್ವೀಕಾರಯೋಗ್ಯನೂ / ಉಪಾಸ್ಯನೂ) ಆದ ಸವಿತೃಸೂರ್ಯನನ್ನು ಪ್ರತ್ಯಕ್ಷವಾಗಿ ನೋಡಿ, ನಮಸ್ಕರಿಸಿ, ಸ್ತುತಿಸಿ, ಉಪಾಸಿಸುತ್ತೇನೆ.
ಓಂ ಭುವಃ— ಅಯ್ಯಾ ಅಂತರಿಕ್ಷವೆನಿಸಿದ ಭುವರ್ಲೋಕವೇ! ನಿನಗೆ ವಂದನೆಗಳು.
ಭರ್ಗೋ ದೇವಸ್ಯ ಧೀಮಹಿ— ಅಂತರಿಕ್ಷದಲ್ಲಿ ಗೋಚರಿಸುವ ಸೂರ್ಯದೇವನ ವರ್ಚಸ್ಸನ್ನು / ಪ್ರಭೆಯನ್ನು ಧ್ಯಾನಿಸುತ್ತೇವೆ. (“ಆದಿತ್ಯಾಂತರ್ಗತಂ ವರ್ಚೋ ಭರ್ಗಾಖ್ಯಂ ತನ್ಮುಮುಕ್ಷುಭಿಃ |
ಜನ್ಮಮೃತ್ಯುವಿನಾಶಾಯ ದುಃಖಸ್ಯ ತ್ರಿತಯಸ್ಯ ಚ ||
ಧ್ಯಾನೇನ ಪುರುಷೋ ಯಶ್ಚ ದ್ರಷ್ಟವ್ಯಃ ಸೂರ್ಯಮಂಡಲೇ ||— ಯೋಗಿಯಾಜ್ಞವಲ್ಕ್ಯೋಕ್ತಮ್ ಆಹ್ನಿಕತತ್ತ್ವಮ್.
“ಯದಾದಿತ್ಯಗತಂ ತೇಜೋ ಜಗದ್ಭಾಸಯತೇऽಖಿಲಮ್ |
ಯಚ್ಚಂದ್ರಮಸಿ ಯಚ್ಚಾಗ್ನೌ ತತ್ತೇಜೋ ವಿದ್ಧಿ ಮಾಮಕಮ್ ||— ಗೀತಾಚಾರ್ಯ ಕೃಷ್ಣೋಕ್ತಿ. ಆದಿತ್ಯಗತ ತೇಜಸ್ಸು ಸ್ವತಃ ಭಗವಂತನೇ ಎಂಬುದಕ್ಕಿದು ಆಧಾರ.)
ಓಗ್ಂ (ಓಂ) ಸುವಃ— ಹೇ ಸುವರ್ಲೋಕವೆನಿಸಿದ, ಸ್ವರ್ಲೋಕವೆನಿಸಿದ, ದೇವತೆಗಳ ನಿವಾಸವಾದ ಸ್ವರ್ಗಲೋಕವೇ! ನಿನ್ನನ್ನು ವಂದಿಸುತ್ತೇನೆ.
ಧಿಯೋ ಯೋ ನಃ ಪ್ರಚೋದಯಾತ್— ಯಾವ ಆದಿತ್ಯಮಂಡಲಾಂತರ್ಗತವಾದ ಭಗವತ್ತೇಜಸ್ಸಿದೆಯೋ ಅದರ ಮೂಲನಾದ ಭಗವಂತನು (ಯಃ), ನಮ್ಮ (ನಃ / ಅಸ್ಮಾಕಂ), ಬುದ್ಧಿಗಳನ್ನು (ಧಿಯಃ), ಪ್ರಚೋದಿಸಲಿ / ಸನ್ಮಾರ್ಗದಲ್ಲಿ ಪ್ರೇರಿಸಲಿ (ಪ್ರಚೋದಯಾತ್).
ಓಂ ಭೂಃ— ಹೇ ಸಕಲಜೀವಾಧಾರಭೂತವಾದ ಭೂಮಾತೆಯೇ! (ಭೂ ಆಧಾರೇ)/ ಹೇ ಯಜ್ಞಾಗ್ನಿಯೇ (ದೃಷ್ಟಿಗೋಚರವಾದ ಭೂಮಿಯಲ್ಲಿನ ಪವಿತ್ರವಾದ ಅಗ್ನಿಯೇ! ಭೂರಿತ್ಯಗ್ನಿಃ— ತೈತ್ತಿರೀಯೋಪನಿಷತ್) / ಅಕಾರವಾಚ್ಯನಾದ ಋಗ್ವೇದಮೂರ್ತಿಯೇ! / ಹೇ ಸರ್ವಾಧಾರನಾದ ಪರಮೇಶ್ವರನೇ! 
ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ— ಸ್ವಪ್ರಕಾಶದಿಂದ ಬೆಳಗುವ(ದೀವ್ಯತಿ ಇತಿ ದೇವಃ, ತಸ್ಯ— ದೇವಸ್ಯ), ಆ ಸವಿತೃ ಸೂರ್ಯನಾರಾಯಣಾಂತರ್ಗತವಾದ ನಿನ್ನ (ತತ್-ಸವಿತುಃ) ವರಣೀಯವಾದ, ಶ್ರೇಷ್ಠವಾದ (ವರೇಣ್ಯಂ), ಜ್ಯೋತಿರ್ಮಂಡಲದ ಪ್ರಭೆಯನ್ನು (ಭರ್ಗಃ), ಧ್ಯಾನಿಸುತ್ತೇವೆ (ಧೀಮಹಿ).
ಓಂ ಭುವಃ— ಹೇ ಆಕಾಶವೇ! / ಹೇ ವಾಯುದೇವನೇ! (ಭುವ ಇತಿ ವಾಯುಃ— ತೈತ್ತಿರೀಯೋಪನಿಷತ್) / ಹೇ ಗಾಯತ್ರಿಯ ಸಪ್ತಮಹಾವ್ಯಾಹೃತಿಗಳಲ್ಲೊಬ್ಬನೇ! / ಉಕಾರವಾಚ್ಯನಾದ ಯಜುರ್ವೇದಪುರುಷನೇ! (“ಅಕಾರಂ ಚಾಪ್ಯುಕಾರಂ ಚ ಮಕಾರಂ ಚ ಪ್ರಜಾಪತಿಃ | ವೇದತ್ರಯಾನ್ನಿರದುಹತ್ ಭೂರ್ಭುವಸ್ಸುವರಿತೀತಿ ವಾ ||— ಮನುಸ್ಮೃತಿಃ ೨.೭೩; ಅಕಾರ— ಋಗ್ವೇದ, ಉಕಾರ- ಯಜುರ್ವೇದ; ಮಕಾರ— ಸಾಮವೇದ> >ಸೇರಿದರೆ ಓಂಕಾರ);
ಧಿಯೋ ಯೋ ನಃ ಪ್ರಚೋದಯಾತ್— ಆ ಆದಿತ್ಯಪ್ರಭಾಮಂಡಲಾಂತರ್ಗತನಾದ ನಾರಾಯಣನು (ಯಃ), ನಮ್ಮ ಬುದ್ಧಿ-ಚಿತ್ತಾದಿಗಳನ್ನು (ನಃ/ ಅಸ್ಮಾಕಂ ಧಿಯಃ), ಪ್ರಕೃಷ್ಟವಾಗಿ / ಚೆನ್ನಾಗಿ ಚೋದಿಸಲಿ / ಪ್ರೇರಿಸಲಿ; ಸದ್ಬುದ್ಧಿಯನ್ನು ಕರುಣಿಸಿ, ಸತ್ಕಾರ್ಯಪ್ರೇರಕನಾಗಲಿ; ಸಚ್ಚಿಂತನೆ (ಒಳ್ಳೆಯ ಯೋಚನೆ), ಸದ್ವಾಣಿ (ಒಳ್ಳೆಯ ಮಾತು) ಹಾಗೂ ಸತ್ಕೃತಿಗೆ (ಒಳ್ಳೆಯ ಕಾರ್ಯ) ಪ್ರಚೋದನೆಯನ್ನೀಯಲಿ.
ಓಗ್ಂ (ಓಂ) ಸುವಃ— ಹೇ ಪುಣ್ಯಧಾಮವಾದ ದೇವಲೋಕವೇ! ಸ್ವರ್ಗವೇ! ಸೌಂದರ್ಯಯುಕ್ತವಾಗಿ ದೇವತೆಗಳ ದಿವ್ಯಜ್ಯೋತಿಗಳಿಂದ ಶೋಭಾಯಮಾನವಾಗಿರುವ ಲೋಕವೇ! / ಮಕಾರವಾಚ್ಯನಾದ ಸಾಮವೇದಪುರುಷನೇ! ಆದಿತ್ಯನೇ!(ಸುವರಿತ್ಯಾದಿತ್ಯಃ— ತೈತ್ತಿರೀಯೋಪನಿಷತ್) ನಿನಗೆ ನಮಸ್ಕಾರವು.
ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್—
ಲೋಕದ ಪ್ರಸವ / ಹುಟ್ಟಿಗೆ ಕಾರಣಾದುದರಿಂದ ಪ್ರ-ಸವಿತೃವೆನಿಸಿದ ಪರಮಾತ್ಮನ ನೇತ್ರವೂ, ದಿವ್ಯತಮವೂ ಶ್ರೇಷ್ಠತಮವೂ ಪವಿತ್ರತಮವೂ ದೇದೀಪ್ಯಮಾನವೂ ಲೋಕದ ಬೆಳಕೂ ಆದ ಬಾನ ಭಾಸ್ಕರನ ಪ್ರಭಾಮಂಡಲವನ್ನು ನಾವೆಲ್ಲರೂ ಧ್ಯಾನಿಸೋಣ (ಧೀಮಹಿ— ಧ್ಯಾಯೇಮ). ಯಾವ ಆ ಜ್ಯೋತಿಸ್ವರೂಪೀ ಭಗವಂತನು ಕತ್ತಲೆ ಕಳೆದು ಹಗಲುಂಟುಮಾಡಿ ಸಕಲಜೀವರನ್ನೂ ತತ್ತತ್ ಕಾರ್ಯಾದಿಗಳಲ್ಲಿ ಚೋದಿಸುವಂತೆ, ನಮ್ಮ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಜ್ಞಾನಕಿರಣಗಳಿಂದ ನಮ್ಮ ಬುದ್ಧಿಗಳನ್ನು ಪ್ರಚೋದಿಸಿ, ಸುಜ್ಞಾನ, ಆತ್ಮಜ್ಞಾನ, ಬ್ರಹ್ಮಜ್ಞಾನ, ಲೋಕಜ್ಞಾನಾದಿಗಳನ್ನು ನಮಗಿತ್ತು ನಮ್ಮನ್ನು ಅನುಗ್ರಹಿಸಲಿ.

ಇದು ವೇದಮಾತೆಯೂ ವೇದಸಾರಭೂತವೂ ಆದ ಸವಿತೃ ಗಾಯತ್ರೀಮಂತ್ರದ ವಿಸ್ತಾರ. ಮುಂದೆ, ಚತುರ್ವೇದಾರಂಭ ಮಂತ್ರಗಳನ್ನು ಲಘುನ್ಯಾಸದಲ್ಲಿ ಉದ್ಧರಿಸಲಾಗಿದೆ.
ಓಂ ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ | ಹೋತಾರಂ ರತ್ನಧಾತಮಮ್ || 
ಪದ-ವಿಭಾಗಃ—
ಓಂ ಅಗ್ನಿಮ್ ಈಳೇ (ಈಡೇ) ಪುರಃ ಹಿತಂ ಯಜ್ಞ-ಸ್ಯ ದೇವಮ್ ಋತ್ವಿಜಮ್ | ಹೋತಾ-ರಂ ರತ್ನ-ಧಾ-ತಮಮ್ ||
ಸ್ಕಂದಸ್ವಾಮಿ-ಭಾಷ್ಯಮ್—
ಋಷಿಃ ಆದ್ಯಃ ಮಧುಚ್ಛಂದಾಃ “ವೈಶ್ವಾಮಿತ್ರಃ” (ಮೊದಲ ಋಷಿಯು ವೈಶ್ವಾಮಿತ್ರ ಮಧುಚ್ಛಂದನು.)  |
ಋಗ್ವೇದಸ್ಯ ಆದ್ಯಃ, ಋಷಿಃ ಮಧುಚ್ಛಂದಾಃ ನಾಮ (ಋಗ್ವೇದದ ಆದಿ ಋಷಿಯು ಮದುಚ್ಛಂದನೆಂಬ ಹೆಸರಿನವನು.) |
ವಿಶ್ವಾಮಿತ್ರಸ್ಯ ಪುತ್ರಃ (ವಿಶ್ವಾಮಿತ್ರನ ಮಗನು.) |
“ಆಗ್ನೇಯಂ ಪ್ರಥಮಂ ಸೂಕ್ತಂ ಮಧುಚ್ಛಂದಸಃ - ಆದಿತಃ”— ಶೌನಕಕೃತಾ ಬೃಹದ್ದೇವತಾ ೨. ೧೨೬ (ಶೌನಕಮಹರ್ಷಿ ವಿರಚಿತ ಬೃಹದ್ದೇವತಾ ಗ್ರಂಥದಲ್ಲಿ, “ಋಗ್ವೇದದಲ್ಲಿ ಅಗ್ನಿಸ್ತುತಿಪರವಾದ ಸೂಕ್ತವು ಒಂದನೆಯದು. ಆದಿಮವಾದ ಅದು ಮಧುಚ್ಛಂದ ಋಷಿಯ ದರ್ಶನ.)  |
ಮದುಚ್ಛಂದಸಃ, ಋಷೇಃ ಆದೌ ಯತ್ ಸೂಕ್ತಮ್, ಋಗ್ವೇದಸ್ಯ ಪ್ರಥಮಂ, ತದ್ ಅಗ್ನಿದೈವತಮ್ (ಋಗ್ವೇದದ ಮೊದನೆಯದಾದ ಮಧುಚ್ಛಂದ ಋಷಿಯ ಸೂಕ್ತವು ಅಗ್ನಿಯನ್ನು ದೇವತೆಯಾಗಿ ಹೊಂದಿರುವಂಥದ್ದು.) || 
ಅಗ್ನಿಮ್ ಅಹಮ್ ಸ್ತೌಮಿ (ಅಗ್ನಿಯನ್ನು ನಾನು ಸ್ತುತಿಸುತ್ತೇನೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ