ಸೋಮವಾರ, ಮಾರ್ಚ್ 19, 2018

ಪ್ರಾಚೀನ ಋಷಿವಿಜ್ಞಾನಿಗಳ ಮತದಂತೆ

*ಧರ್ಮ ಸಂದೇಹ
ಪ್ರಾಚೀನ ಋಷಿವಿಜ್ಞಾನಿಗಳ ಮತದಂತೆ, ನೂತನ ವಿಜ್ಞಾನಿಗಳ ಪುಷ್ಠೀಕರಣ ಹಾಗು  ವಿರೋಧಗಳೆಡೂ ಇಲ್ಲದೆ, ಇರುವ ಎಂಬತ್ತನಾಲ್ಕು ಲಕ್ಷ ಪ್ರಭೇದದ ಜೀವಿಗಳಲ್ಲಿ ತ್ರಿಭಾಗವನ್ನು ಕಾಣುತೇವೆ, ಅವು ಭೂಚರ,ಖೇಚರ,ಜಲಚರ.ಭೂಚರರಲ್ಲಿ ದ್ವಿ ವಿಧ. ದಿವಾಚರ,ನಿಶಾಚರ. ಪ್ರಾಕೃತವಾಗಿ ಮನುಷ್ಯ ದಿವಾಚರ. (ಇಂದಿನ ಜಾಗತೀಕ ಜೀವನ ಶೈಲಿಯಲ್ಲಿ ರಾತ್ರೀಪಾಳಿ ಕಲಸ ಮಾಡುವವರನ್ನು ಬಿಟ್ಟು ) ಈ ಎಲ್ಲಾ ಜೀವಿಗಳಲ್ಲಿ ವಿಶೇಷ ಮನುಷ್ಯನೇ , ಕಾರಣಗಳು ಹಲವು, ಕಾರಣೀಭೂತನೋಬ್ಬನೆ , ಮನುಷ್ಯನ ಸಾಮಥ್ರ್ಯ ಮತ್ತು ಅಶಕ್ತ್ಯತೆಯು ಮನಸ್ಸೇ . ಇದು ಬಂಧನ ಹಾಗು ಮುಕ್ತ ಕಾರಣವಾಗಿರುತ್ತದೆ . ಮನುಷ್ಯ ಜನ್ಮ ಪ್ರಾಯಶ್ಚಿತ್ತ ಜನ್ಮವೂ ಹಾಗೂ ಮಿಕ್ಕ ಯಾವ ಜೀವಿಗಳಲ್ಲಿಯೂ ಪ್ರಾಯಶ್ಚಿತ್ತ ಮನ ವಿರುವುದಿಲ್ಲ , ಪ್ರಾಯಶ್ಚಿತ್ತ ಜನ್ಮ ವಿದ್ದೂ ಅನ್ಯ ಜೀವಯಂತೆ ಜೀವನ ಸಾಗಿಸುವುದು ಪಶ್ಚಾತ್ತಾಪ ಜನ್ಮದಂತಾಗತ್ತದೆ , ಮನುಷ್ಯರಲ್ಲಿ ಇಬ್ಬಗೆಯ ಸ್ವಭಾವವನ್ನು ಕಾಣುತ್ತೇವೆ,  ಹುಟ್ಟು ಸಾವಿನ ಅಂತರದ ಸಮಯವನ್ನು ವೈಭೋಗಯುತವಾಗಿಸುವುದೆಂದೂ ಯಾವ ಸ್ವರ್ಗ ನರಕವಿರುವುದಿಲ್ಲ ಹಾಗಾಗಿ ಎಲ್ಲದರಲ್ಲೂ ಸುಖವನ್ನು ಮಾತ್ರ ಅನುಭವಿಸುವುದು, ಎಂದೋ ಒಂದು ದಿನ ಸಾಯುವುದಕ್ಕೆ ಇಂದು ಪಡುವ ಕಷ್ಟವೇಕೆ ,  ಹುಟ್ಟಿಗೂ ಸಾವಿಗೂ ಯಾವ ಸಂಬಂಧವಿಲ್ಲ (ಚಾರುವಾಕ ಸಿದ್ಧಾಂತ). ಜನ್ಮವೃತ್ತ, ಇದರಲ್ಲಿ ಹುಟ್ಟಿನ ಹಿಂದೆ ಸಾವು, ಈ ಜನ್ಮದಲ್ಲಿ ಅನುಭವಿಸುವ ಎಲ್ಲಾ ಸಂಗತಿಗಳು ಹಿಂದಿನ ಜನ್ಮದ ಪಾಪ ಪ್ಮಣ್ಯಗಳನ್ನು ಅನುಸರಿಸಿ ಪೂರ್ವನಿರ್ಣಯದಂತೆ ಜೀವನಾರಂಭ. ಈ ಜನ್ಮದಲ್ಲಿ ಮಾಡುವ ಪುಣ್ಯ ಕಾರ್ಯಗಳಿಂದ  ಹಿಂದಿನ ಜನ್ಮದ ಪಾಪಕ್ಷಯ, ಹೆಚ್ಚಿನ ಪುಣ್ಯಪ್ರಾಪ್ತಿಯಿಂದ ಮುಂದಿನ ಜನ್ಮದಲ್ಲಿ  ಸುಖಜೀವನ, ಈ ಸುತ್ತುವಿಕೆಯನ್ನ ಹೋಗಲಾಡಿಸಿಕೊಳ್ಳಲು ಮೋಕ್ಷ ಪ್ರಾಪ್ತಿಯ ಸಾಧನೆ, ಜೀವನ್ಮುಕ್ತಿ  ಅದಕ್ಕಾಗಿ ಜೀವನ ಶೈಲಿ ಮಾರ್ಪಾಡು,ಸತ್ಕ್ರಿಯೋನ್ಮುಖ ನಡವಳಿಕೆ, ಶೃತಿ ಸ್ಮೃತಿ ಪುರಾಣಗಳ ನಿದರ್ಶನಗಳು, ಸುಪ್ರಜೆಯಾಗುವ ಧನ್ಯತಾಭಾವನೆ .  ಎಲ್ಲವನ್ನು ನೋಡುತ್ತಿರುವ ಒಂದು ಶಕ್ತಿ ಮನುಷ್ಯನ ಮನಸ್ಸು  ಮತ್ತು ದೈಹಿಕ ಕ್ರಿಯೆಗಳಿಗೊಂದು ಸೂಕ್ತಮಾಪನ ಅಳವಡಿಕೆಮಾಡಿರುತ್ತಾರೆ, ನಮ್ಮ ಎಲ್ಲಾ ಕ್ರಿಯೆಗಳಿಗೆ ನಾವೇ ಜವಾಬ್ದಾರರಾಗಬೇಕಾಗಿದೆ.ನಿಷ್ಠೆಗೆ ತಕ್ಕ ನ್ಯಾಯಯುತ ತೀರ್ಪು, ಬಹುಷಃ ಭೂಮಿಯ ಯಾವ ದೇಶದ ಅತ್ತ್ಯುನ್ನತ ಸರ್ವೋಚ್ಛನ್ಯಾಯಾಲವು ಈ ರೀತಿ ತೀರ್ಪುನೀಡಲಾಗದು ಕಾರಣ ಮಾನಸಿಕ ಮಾಪನವಿಲ್ಲದ್ದು. ಹೀಗಾಗಿ ಆಧ್ಯಾತ್ಮ ಸೂಕ್ಷ್ಮ ಸೂತ್ರವೇ ವೇದೋಕ್ತ ಜೀವನದ ಪ್ರಯಾಣ . ಧರ್ಮದ ವಿಚಾರವಾಗಿ ಯಾವುದಾದರೋ ಸಂದೇಹವಿದ್ದಲ್ಲಿ ನಿವಾರಣೆಗಾಗಿ ಪರಿಷತ್ ರಚಿಸಿ ಬಗೆಹರಿಸಕೋಳ್ಳಬಹುದು .ಪರಿಷತ್ ಎಂದರೆ ನಾಲ್ಕು ಜನ ವೇದಾಧ್ಯಾಯಿಗಳಾಗಿರಬಹುದು ,ನಾಲ್ಕು ವೇದವನ್ನುತಿಳಿದಿರುವ ಇಬ್ಬರಾಗಬಹದು,ಅಥವ ಒಬ್ಬ ಆತ್ಮಜ್ಞಾನಿಯಾಗಬಹುದು .ಆದರೆ ಇಂದು ವೇದೋಕ್ತ ಜೀವನ ಶೈಲಿಯ ನಿರ್ಗಮನ ಕಾಲ ಈಗ ಎಲ್ಲವೂ ಯಾಂತ್ರಿಕ , ಹಿಂದೆ ಋಷಿರ್ವಿಜ್ಞಾನಿಗಳು ಯಾವ ಯಂತ್ರದ ಸಹಾಯವಿಲ್ಲದೆ ಅತೀ ದೂರದಗ್ರಹಗಳ ಚಲನಾದಿಪ್ರಕ್ರಿಯೆಗಳನ್ನು ತನ್ನ ಅತೀಂದ್ರಿಯಗಳಿಂದ ನೋಡಿ ಸಿದ್ಧಾಂತಗಳನ್ನು ರಚಿಸಿದರು , ಹೇಗೆ ನೂತನ ವಿಜ್ಞಾನಿಗಳಿಗೆ ಉಪಕರಣಗಳುಇಲ್ಲದೇ ಪ್ರಯೋಗಶಾಲೆಗಳಿಲ್ಲದೆ ತೋರಿಸಲು ಅಸಾಧ್ಯವೋ ಹಾಗೆ ಪ್ರಾಚೀನ ಋಷಿವಿಜ್ಞಾನಿಗಳು ಸೂಕ್ಷ್ಮವಿಚಾರವನ್ನು ತಿಳಿಯಲು ಕೆಲವು ಅಧಿಕರಣಗಳನ್ನು ಹೇಳಿದ್ದಾರೆ ನಿಯಮಬದ್ದವಾಗಿ ಅನುಸರಿಸಿದ್ದಲ್ಲಿ ಯಂತ್ರಗಳಿಲ್ಲದೇ ಎಲ್ಲವನ್ನೂಸಾಧಿಸಬಹುದು. ಆ ಆಧಿಕರಣಗಳು ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ ಎಂಬ ಅಷ್ಠಂಗ ಯೋಗ. ಈ ಹೆಸರುಗಳು ಓದುತ್ತಲೇ ಹಲವು ಮಂದಿಗಳು ಉನ್ಮತ್ತ ಭಾವನೆಗೆ ಮನಸ್ಸನ್ನು ಒಳಪಡಿಸಿಕೊಳ್ಳುತ್ತಾರೆ ಕಾರಣ ತಮಗೂ ಆಸನ ಪ್ರಾಣಾಯಾಮ ಧ್ಯಾನಗಳು ತಿಳಿದಿದೆಯೆಂದು , ತಾವೂ ಸಹ ಪ್ರತಿನಿತ್ಯ ಯೋಗಾಕ್ಲಾಸ್ಗೆ ಹೋಗುತ್ತೇವೆಂದು , ಕ್ಷಮಿಸಿ ಎಲ್ಲರನ್ನೂ ಕುರಿತು ಹೇಳುತ್ತಿಲ್ಲ ಸಾಧಕರು ಬಹಳ ಜನರಿದ್ದಾರೆ ಆದರೆ ಬರಿ ಯಾಂತ್ರಿಕವಾಗಿ ದೊಂಬರಾಟದ ಹಾಗೆ ಮೈಯನ್ನು ಬಗ್ಗಿಸುವುದು ಆಸನವಾಗುವುದಿಲ್ಲ, ಬಲವಂತವಾಗಿ ಹುಸಿರನ್ನು ನಿಯಂತ್ರಿಸಿ ಪ್ರಾಣಾಯಾಮ ಮಾಡಲಾಗುವುದಿಲ್ಲ, ಯಾವುದೋ ಒಬ್ಬ ವ್ಯಕ್ತಿಯ ನಿರೂಪಣೆಯಂತೆ ಮನಸ್ಸನ್ನು ಧ್ಯಾನಾಸಕ್ತವಾಗಿಸಿ ಮನಸ್ಸನ್ನು ನಿಗ್ರಹಿಸಲು ಸಾಧ್ಯವಾಗದ ವಿಷಯ ಹೇಗೆ ಅನಕ್ಷರಸ್ಥನೊಬ್ಬನಿಗೆ ತನ್ನ ರುಜುಮಾಡುವುದು ಕಲಿಸಿದಾಕ್ಷಣ ಆತ  ಪೂರ್ಣಅಕ್ಷರಜ್ಞಾನಿೆ ಎಂಬ ಭಾವನೆವಿರುವುದೋ ಹಾಗೆ ಪ್ರಾಚೀನ ಭಾರತದ ಸಿದ್ಧಾಂತಗಳನ್ನು,ನಿಯಮದ ಶೈಲಿಗಳನ್ನು ತಿಳಿಯಲು ಅಥವಾ ಅಳವಡಿಸಿಕೋಳ್ಳಲು ಪ್ರಾಥಮಿಕ ಅವಶ್ಯವೇ ಯಮ ನಿಯಮಾದಿ ಅಷ್ಠಾಂಗ ಯೋಗ (ವಿವರಣೆ ನಂತರದ ದಿನಗಳಲ್ಲಿ ಬರೆಯಲಾಗುವುದು) ಇಂದಿನ ಧರ್ಮಾಚಾರಣೆ ಎಂಬ ಪದ ದೇವರ ಪೂಜೆ ಎಂಬ ಮತ್ತೊಂದು ಪದಕ್ಕೆ ಜೊಡಣೆಯಾಗಿದೆ. ಯಾರಾದರೂ ಧರ್ಮಿಷ್ಠನೆಂದರೆ ಅವ ಅತಿ ಹಚ್ಚು ದೇವರ ಕ್ರಿಯಯಲ್ಲಿರುವವನ್ನೆನ್ನುವುದು ವಾಸ್ತವಿಕ, ಆ  ದೇವರಪೂಜೆಯೂ  ಸಹ ಮೂಡನಂಬಿಕೆಯೆಂದು ಪರಿಗಣಿಸಿರುತ್ತಾರೆ, ಸತ್ಯವೆನ್ನಬಹುದೇನೋ ಅಗೋಚರನಾದ ಚೈತನ್ಯವನ್ನು ಕೇಂದ್ರೀಕರಿಸಿ ದೈಹಿಕ, ವಾಚಿಕ, ಮನಸಾ, ಇಂದ್ರಿಯಗಳಲ್ಲಿ ಆರಾದಿಸುವ ಕ್ರಿಯೆ ತಿಳಿದಿಲ್ಲದವನಿಗೆ, ಹೌದು ಹಾಗೇ ಮೂಲ ತತ್ತ್ವವನ್ನು ಅರಿಯದೆ ಮಾರುದ್ದ ತಲೆ ಜುಟ್ಟನ್ನು ಬಿಟ್ಟು ತ್ರಿಕಾಲ ಸ್ನಾನಾದಿಗಳನ್ನು ,ಸಾದಾ ಹೋಮ ಪೂಜಾದಿಗಳನ್ನು ಮಾಡುವುದು ಸಹ ಲೌಕಿಕವಾದರೆ ಅಪ್ರಯೋಜಕಯಾಗವಾಗುತ್ತದೆ . ಇನ್ನು ಜನಸಾಮಾನ್ಯರ ಪಾಡೇನು ? ಹಲವು ಮಾದ್ಯಮಗಳಲ್ಲಿ ಕೆಲವರು ಮನಸ್ಸೋಚ್ಛೆ ಧರ್ಮತಂತ್ರಗಳನ್ನು ಯಾಂತ್ರಿಕವಾಗಿ ಬುರುಡೆ ಬಿಡುವರ ಮಾತನ್ನು ನಂಬಿ ಆಚರಿಸುತ್ತಿರುವ ತರುವಾಯ ತಾನುಮಾಡುತ್ತಿರುವ ಆಚರಿಸುತ್ತಿರುವ ಧರ್ಮ ಹುಸಿಯಾದರೆ ಮಾನಸಿಕ ಆಘಾತಕ್ಕೆ ಮಾನಸಿಕ ಖನ್ನತೆಗೆ ಒಳಹೋಗಿ ಭಾರತೀಯ ಸಂಪ್ರದಾಯವೇ ಆಧಾರರಾಹಿತ್ಯವೆಂದು ಅನ್ಯಮಾರ್ಗಕ್ಕೆ ಮೊರೆಹೋಗುವುದು ಶೋಚನೀಯ ,ನೈಜ ಸಂಗತಿ ಒಂದು ಹೊಳೆತೀರದಲ್ಲಿ  ತಮ್ಮ ತೂಕದ ಉಪ್ಪು ತಂದು ನೀರಿಗೆ ಬಿಡಲು ಹವಣಸುತ್ತಿದ್ದರು ಹಲವರು .ಎಲ್ಲರ ತೂಕ ಎರಡು ಟನ್ ಗಿಂತ ಹೆಚ್ಚು ಇತ್ತು. ಪ್ರತೀ ತಿಂಗಳ ಹುಣ್ಣಿಮೆಗೆ ಬಿಡುತ್ತಾರಂತೆ, ಜಲಚರಗಳಿಗೆ ತೊಂದರೆ ಮಾಡಬೇಡಿ ಎನ್ನಲು ವೈಪರೀತ್ಯ ಪ್ರತಿಕ್ರಿಯೆ ನೀಡಿದರು.  ಅತ್ಯಂತ ಪ್ರಾಚೀನ ಧರ್ಮ, ನಾಗರೀಕತೆ,ತತ್ತ್ವ,ಸಿದ್ಧಾಂತಗಳನ್ನು ಒಮ್ಮೆಲೇ ಖಡ್ಗ ಪ್ರಹಾರಮಾಡಿ ಹತ್ಯೆಗೈದಂತೆ . ಮತ್ತೊಂದೆಡೆ ದೇವಾಲಯದ ಅರ್ಚಕರ ಅಜ್ಞಾನವೂ ಸಹ. ಹೀಗೇ ಒಂದು ತಾಲ್ಲೂಕಿನ ಮುಜರಾಯಿ ಅರ್ಚಕರ ಸಮಾವೇಷದಲ್ಲಿ ಪಾಲ್ಗೊಂಡಿದ್ದಾಗ ಬಹಳ ಅಘಾತಕಾರಿ ವಿಷಯ ಹೊರಬಂತು ಸುಮಾರು ಮುನ್ನೂರು ಅರ್ಚಕರಲ್ಲಿ ಬೆರಳೇಣಿಕೆಯಷ್ಟು ಅರ್ಚಕರಿಗೂ ಪೂಜಾ ವಿಧಾನ ತಿಳಿದಿಲ್ಲಿಲ್ಲ . ಇನ್ನು ಅವರನ್ನು ನಂಬಿ ದೇವಾಲಯಕ್ಕೆ ಹೋದವರ ಪಾಡೇನು ? ದೇವಾಲಯಕ್ಕೆ ಪೂಜೆಗೆ ಹೋಗಬೇಕೆನ್ನುವವರಿಗೆ ಕನಿಷ್ಠ ಐವತ್ತು ರುಪಾಯಿ ಇಲ್ಲದೆ ಪೂಜೆ ಆಗುವುದಿಲ್ಲ .ದೇವರ ಪೂಜೆ ಬರೀ ವಸ್ತುಪ್ರಧಾನವಾಗಿಬಿಟ್ಟಿದೆ ಪೂಜಾಸಾಮಾಗ್ರಿಗಳು ಇಲ್ಲದೆ ದೇವರನ್ನು ಕಾಣುವ ಸಂಗತಿಯೇ ಇಲ್ಲ. ಆದರೆ ಪೂಜೆಗೆ ಬಳಸುವ ಅರಿಶಿನ, ಕುಂಕುಮಗಳಿಂದ ಹಿಡಿದು ಹಲವಾರು ಪದಾರ್ಥಗಳು ಅಶುದ್ಧ. ನೆಪಮಾತ್ರ ಬಣ್ಣವನ್ನುಹೋಲುವ ಅರಿಶನ,ಕುಂಕುಮವನ್ನು ಲೇಪಿಸಿ ಧನ್ಯತೆಗೊಳಗಾವುದು, ಅದರಲ್ಲೂ ದ್ವಂಧ್ವ ಕುಂಕುಮಗಳೆರಡರ ಮಧ್ಯದಲ್ಲಿ ಅರಿಶನವಾ? ಅಥವಾ ಅರಿಶಿನಗಳೆರಡರ ಮಧ್ಯೆ ಕುಂಕಮನಾ ?ದೇವರಿಗೆ ಅಭಿಷೇಕ,ಗಂಧ,ತಿಲಕ,ಮಂಗಳದ್ರವ್ಯ,ಹೂವು,ಧೂಪ,ದೀಪ,ನೈವೇದ್ಯ ಮಂಗಳಾರತಿ , ನಮಸ್ಕಾರಗಳನ್ನು ಸಾತ್ವಿಕ ವಿಧಾನವಾಗಿ ಮಾಡುವುದು ತಿಳಿಯಬೇಕೆಂದಿದ್ದರೆ ಉಪಚಾರ ಮಾಡುವುದನ್ನು ಮಾನಸಿಕವಾಗಿ ಯೋಚಿಸಿದರೆ ಎಲ್ಲರಿಗೂ ತಿಳಿಯುತ್ತದೆ, ಉದಾ: ಅರಿಶಿನಗಳೆರಡರ ಮಧ್ಯದಲ್ಲಿ ಕುಂಕುಮವೇ ಶಿಷ್ಠಾಚಾರ ಏಕೆಂದರೆ ಕಪಾಲಗಳಲ್ಲಿ ಅರಿಶಿನ ಧರಿಸಿ ಹಣೆಯಲ್ಲಿ ಕುಂಕುಮವನ್ನು ಶೃಂಗರಿಸುವುದೇ ಕಾರಣ. ಸತ್ಯನಾರಾಯಣ ಪೂಜಾ ವಿಧಾನ ಅದರ ಕಥೆಯಲ್ಲಿಯಷ್ಟೇ ಉಲ್ಲೇಖವಾಗಿರುವುದು ಬಹುಷಃಮತ್ತೆಲ್ಲೂ ಇಲ್ಲ ಕಥೆಯಲ್ಲಿ ಬ್ರಾಹ್ಮಣ,ಕ್ಪ್ಷತ್ರೀಯ,ವೈಶ್ಯ,ಶೂದ್ರಾದಿ ಎಲ್ಲರೂ ವ್ರತಮಾಡುವಂತಿದೆ, ಇತ್ತೀಚೆಗೆ ಯಾವುದೋಂದು ಸಂಸ್ಥೆ ನಡೆಸುತ್ತಿದ್ದ ಸತ್ಯನಾರಾಯಣಪೂಜೆಯಲ್ಲಿ ಪಾಲ್ಗೊಂಡಿದ್ದು ಸ್ನೇಹಿತರೊಬ್ಬರನ್ನು ಪೂಜೆಗೆ ಕೂರುವಂತೆ ಹೇಳಿದೆ, ಬಂದ ಉತ್ತರ ಈಗಷ್ಟೇ ಕಾರ್ತಿಕಮಾಸ ಮುಗಿದಿದೆ ಮತ್ತೆ ನಲವತೆಂಟು ದಿನ ಮಾಂಸಾಹಾರ ಬಿಡಲಾಗುವುದಿಲ್ಲವೆಂದುಪೂಜೆಗೆ ಕೂರಲ್ಲಿಲ್ಲ. ಆದರೆ ವಾಸ್ತವವಾಗಿ ನಲವತ್ತೆಂಟು ದಿನ ಸ್ವಾತಿಕ ಆಹಾರದಲ್ಲಿರಬೇಕೆಂದು ಯಾವ ಗ್ರಂಥದಲ್ಲೂ ಇಲ್ಲ. ಹೀಗೆ ಅವರವರೇ ಸ್ವಕೃತ ನಿಯಮ ಮಾಡಿಕೊಂಡು ಇತರರನ್ನು ಸಂದೆಹಕ್ಕೆ ದೂಕುವುದು, ಅದರಿಂದ ಹಿಂಸೆಯಾಗುವುದಾದರೆ ಅದೂ ಅಧರ್ಮ,ಮೂಡನಂಬಿಕೆ...... ಹೀಗೇ ಧರ್ಮಸಂದೇಹ
*ಗೋಪಾಲಕೃಷ್ಣಾವಧಾನಿ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ