ಸೋಮವಾರ, ಮಾರ್ಚ್ 19, 2018

ಮಾತೃಗಯಾ

ಮಾತೃಗಯಾ
--------------------
ಮಾತೃಗಯಾ ಇದು ಗುಜರಾತ್ ನಲ್ಲಿದೆ . ಇದಕ್ಕೆ ಮಾತೃಗಯಾ ಅಂತ ಹೆಸರು ಬರಲು ಕಾರಣವೇನು ಒಂದು ಸಣ್ಣ ಕಥೆ....
ಕರ್ದಮ ಋಷಿ ಹಾಗೂ ದೇವಹೂತಿ ದಂಪತಿಗಳು ಸಾವಿರಾರು ವರ್ಷ ತಪಸ್ಸು ಮಾಡಿದರು. ತಪಸ್ಸಿನ ಫಲವಾಗಿ  ಪರಮಾತ್ಮನನ್ನು ಮಗನನ್ನಾಗಿ ಪಡೆದರು. ಕಪಿಲ ನಾಮಕ ಪರಮಾತ್ಮ ಅವತರಿಸಿದ. ಸರ್ವಶಾಸ್ತ್ರ ಪಾರಂಗತನಾತ. ಸರ್ವಜ್ಞನಾತ.
ಲೋಕ ಕಲ್ಯಾಣ ಬಯಸಿದ. ತಾಯಿಯ ಸೇವೆ ಮಾಡಲಿಚ್ಛಿಸಿದ. 'ಸಾಂಖ್ಯ ಶಾಸ್ತ್ರ' ಉಪದೇಶಿ ಸಿದ. 'ಕಪಿಲ ಗೀತೆ' ಸಾರಿದ.  ಕೇಳಿ ಆನಂದ ಭರಿತಳಾದಳು ತಾಯಿ. ಅವಳ ಕಣ್ಣಿನಿಂದ ಉದುರಿದ ಆನಂದ ಭಾಷ್ಪ   'ಬಿಂದು ಸರೋವರ' ವಾಯಿತು. ಅವಳಿಗೆ ಸದ್ಗತಿ ದಯಪಾಲಿಸಿದ ಭಗವಂತ.   ಎಲ್ಲಿ ತನ್ನ ತಾಯಿಗೆ. ಸದ್ಗತಿ ದೊರಕಿದೆಯೊ  ಅಲ್ಲಿ  ಅಃದರೆ  ಬಿಂದು ಸರೋವರದಲ್ಲಿ ಮಿಂದು  ತಾಯಿಯ ಶ್ರಾದ್ಧ ಮಾಡಿದಲ್ಲಿ  ಅವರಿಗೂ ಸದ್ಗತಿ ದೊರೆಯಲಿ  ಅಂದ   ಅಂದಿನಿಂದ  ಅದು ಮಾತೃಗಯಾ  ಅಂತ ಪ್ರಸಿದ್ಧಿ ಪಡೆಯಿತು......ಅಲ್ಲಿಯೇ ಗುಪ್ತಗಾಮಿನಿ ಸರಸ್ವತಿ ನದಿ ಹರಿದಿದೆ. ಕರ್ದಮರ  ತಪೋಭೂಮಿ ಯೂ ಹೌದು.
ಬಿಂದು ಸರೋವರದ ಸ್ನಾನ ಅನಂತ ಪುಣ್ಯಕ್ಕೆ ಕಾರಣ. ಇಲ್ಲಿ ಮಾತೃಶ್ರಾದ್ದ ಅತ್ಯಂತ ಶ್ರೇಷ್ಠ. ಮಾತೆಗೆ ಸದ್ಗತಿದಾಯಕ. ತಾಯಿಯ ಋಣ ತೀರಿಸಲು ಒಂದು ಸದವಕಾಶ. ಶಾಸ್ತ್ರದ ಮಾತಿದು. ಅದಕ್ಕಾಗಿ ಈ ಸಿದ್ಧಪುರ 'ಮಾತೃಗಯಾ' ಎಂದೇ ಪ್ರಸಿದ್ಧವಾಗಿದೆ. ಗುಜರಾಥದಲ್ಲಿದೆ.
ಅಲ್ಲಿಗೆ ಹೋಗವ ಅವಕಾಶ ಒದಗಿದರೆ ಖಂಡಿತ ಹೋಗಿ ತಾಯಿಗೆ ಸದ್ಗತಿ ದೊರಕಿಸಿ .  ತೀರದ ತಾಯಿಯ ಋಣ ಕಿಂಚಿತ್ ತೀರಿಸುವ ಪ್ರಯತ್ನ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ