ಬುಧವಾರ, ನವೆಂಬರ್ 29, 2017

ಬ್ರಾಹ್ಮಣರ ಇತಿಹಾಸ

ಬ್ರಾಹ್ಮಣರ ಇತಿಹಾಸ
1 .ಬ್ರಾಹ್ಮಣರು ಭಾರತದ ಮೂಲನಿವಾಸಿಗಳು .
ಈ ಪ್ರಶ್ನೆಗೆ ಉತ್ತರ ಹೇಳಿ!!!!!!
ಸಂಪ್ರದಾಯಸ್ಥ ಬ್ರಾಹ್ಮಣರು ಈರುಳ್ಳಿ , ಬೆಳ್ಳುಳ್ಳಿ , ಟೊಮ್ಯಾಟೋ ಮುಂತಾದ ತರಕಾರಿಗಳನ್ನು ಏಕೆ ತಿನ್ನುವುದಿಲ್ಲ ಗೊತ್ತೇ ???
ಏಕೆಂದರೆ ಆ ಗುಂಪಿನ ತರಕಾರಿಗಳು ಭಾರತದ ನೆಲದಲ್ಲಿ ಹುಟ್ಟಿದ ತರಕಾರಿಗಳಲ್ಲ.
ಅವು ಬೇರೆ ಬೇರೆ ದೇಶಗಳಿಂದ ಬಂದಂತಹ ತರಕಾರಿಗಳು. ಸಾವಿರಾರು ವರ್ಷಗಳ ಹಿಂದೆ ಆ ತರಕಾರಿಗಳು ಭಾರತದಲ್ಲಿ ಇರಲಿಲ್ಲ. ಆದ್ದರಿಂದ ಆ ತರಕಾರಿಗಳನ್ನು ತಿಂದು ಅಭ್ಯಾಸವಿಲ್ಲದ ಬ್ರಾಹ್ಮಣರು ಅವು ಭಾರತಕ್ಕೆ ಬಂದಾಗ ಅನುಮಾನದಿಂದ ನೋಡಿ ಅವನ್ನು ತಿನ್ನಲಿಲ್ಲ. ಆಮೇಲೆ ಅವು ಸಾತ್ವಿಕ-ಆಹಾರವಲ್ಲ ಎಂದು ಅವನ್ನು ತಿನ್ನಲಿಲ್ಲ.
ಈಗ ನಿಮಗೆ ಭಾರತದ ಮೂಲನಿವಾಸಿಗಳಾದ ಬ್ರಾಹ್ಮಣರು ಭಾರತದ ಮೂಲ ತರಕಾರಿಗಳನ್ನು ಮಾತ್ರ ತಿನ್ನುವ ಅಭ್ಯಾಸವನ್ನು ಆದಷ್ಟೂ ಪಾಲಿಸಿಕೊಂಡು ಬಂದಿದ್ದಾರೆ ಎಂದು ನಿಮಗೆ ಅನಿಸುತ್ತಿದೆಯಲ್ಲವೇ ???
ಹೌದು !!!!!!
ಬ್ರಾಹ್ಮಣರು ಭಾರತದ ಮೂಲ ನಿವಾಸಿಗಳು.
ಬ್ರಾಹ್ಮಣರು ಭಾರತದಲ್ಲಿ ಲಕ್ಷಾಂತರ ವರ್ಷಗಳಿಂದ ವಾಸವಾಗಿದ್ದಾರೆ. ಅಂದರೆ ಬ್ರಾಹ್ಮಣರ ಮೂಲ ತಳಿ ಹುಟ್ಟಿದ್ದು ಭಾರತದಲ್ಲೇ. ಬ್ರಾಹ್ಮಣರು ಭಾರತದಲ್ಲಿ ಈಗಿರುವ ಎಲ್ಲಾ ಜನಾಂಗಗಳಿಗಿಂತ ಮೊದಲಿನಿಂದಲೇ ಭಾರತದಲ್ಲಿ ವಾಸಿಸುತ್ತಿದ್ದರು ಎಂಬುದಕ್ಕೆ ಹಲವಾರು ಸಾಕ್ಷಿಗಳು ದೊರೆಯುತ್ತವೆ.
ಕೆಲ ತಿಂಗಳುಗಳ ಹಿಂದೆ ಬ್ರಾಹ್ಮಣರ ವಂಶವಾಹಿಗಳು ಜಗತ್ತಿನ ಬೇರೆ ಯಾವ ಭಾಗದ ಜನರ ವಂಶವಾಹಿಗಳೊಂದಿಗೆ ಹೋಲುವುದಿಲ್ಲ ಎಂದು ವಿಜ್ಞಾನಿಗಳಿಂದ ದೃಡವಾಗಿದೆ ಎಂದು ಓದಿದ ನೆನಪು. ಆ ವಂಶವಾಹಿಗಳು ಮಧ್ಯ ಏಷ್ಯಾದ ಜನರ ವಂಶವಾಹಿಗಳೊಂದಿಗೆ ಹೋಲುವುದಿಲ್ಲ ಎಂದೂ ಸಹ ದೃಡಪಟ್ಟಿದೆ ಎಂದೂ ಸಹ ಓದಿದ ನೆನಪು.
ಈಗ ಬ್ರಾಹ್ಮಣರು ಭಾರತದ ಮೂಲನಿವಾಸಿಗಳೆಂದು ಸಾಬೀತುಪಡಿಸಲು ನನ್ನ ವಾದಗಳನ್ನು ನಿಮ್ಮ ಮುಂದಿಡುತ್ತೇನೆ.
ಮೊದಲಿಗೆ ನೀವು ತಿಳಿಯಬೇಕಾದ ವಿಷಯವೆಂದರೆ ಆರ್ಯರ ಆಗಮನವೆಂಬ ವಿಷಯವು ಐತಿಹಾಸಿಕ ಅಥವಾ ಸಾಮಾಜಿಕವಾದ ವಿಷಯವಲ್ಲ.
ಅದೊಂದು ಪಕ್ಕಾ ರಾಜಕೀಯ ವಿಷಯ.
ಆ ಕಲ್ಪನೆಯನ್ನು ಬ್ರಿಟಿಷರು ಹೇಗೆ ದುರುಪಯೋಗ ಪಡಿಸಿಕೊಂಡರೋ ಹಾಗೆಯೇ ಈಗಿನ ಕೆಲ ರಾಜಕಾರಣಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಬ್ರಿಟಿಷರು ಭಯಪಟ್ಟಿದ್ದು ಬ್ರಾಹ್ಮಣರು ರಾಷ್ಟ್ರೀಯತೆಯ ಕಲ್ಪನೆಯಿಂದ ಎಲ್ಲರಲ್ಲಿಯೂ ಅವರ ವಿರುದ್ಧ ಜನ ಜಾಗೃತಿ ಮೂಡಿಸುತ್ತಿದ್ದುದರಿಂದ.
ಬ್ರಿಟಿಷರ ಉದ್ದೇಶವೇನೆಂದರೆ ಬ್ರಾಹ್ಮಣರ ನೈತಿಕ ಸ್ಥೈರ್ಯವನ್ನು ಕುಗ್ಗಿಸಿ ಅವರು ತಮ್ಮ ವಿರುದ್ದ ಉಗ್ರವಾಗಿ ಹೋರಾಡದಂತೆ ಮಾಡುವುದು. ಜನಜಾಗೃತಿ ಮೂಡಿಸದಂತೆ ಮಾಡುವುದು. ಆದರೆ ಆ ತಂತ್ರ ಅವರಿಗೆ ಫಲ ಕೊಡಲಿಲ್ಲ.
ಈಗಿನ ಕೆಲವು ರಾಜಕಾರಣಿಗಳು ಬ್ರಾಹ್ಮಣರ ಮನಸ್ಸಿನ ಶಕ್ತಿಯಿಂದ ಭಯಪಟ್ಟು ಅವರೊಂದಿಗೆ ಸ್ಪರ್ಧೆ ಮಾಡಲಾರದವರು ಈ ವಿಷಯವನ್ನು ಸುದ್ದಿವಾಹಿನಿಗಳ ಚರ್ಚೆಗಳಲ್ಲಿ ಆಗಾಗ್ಗೆ ಪ್ರಸ್ತಾಪಿಸಿ ಬ್ರಾಹ್ಮಣರ ನೈತಿಕ ಸ್ಥೈರ್ಯವನ್ನು ಕಡಿಮೆ ಮಾಡಲು ಪ್ರಯತ್ನಿಸುವುದನ್ನು ನಾವು ನೋಡಿದ್ದೇವೆ.
ಮತ್ತೊಂದು ತಂತ್ರವೆಂದರೆ ಬೇರೆ ಕೆಲವು ಜಾತಿಯ ಜನರ ಮತಗಳನ್ನು ಪಡೆಯಲು ಅವರನ್ನು ಹೊಗಳಲು ಮತ್ತು ಅವರನ್ನು ಬ್ರಾಹ್ಮಣರ ವಿರುದ್ದ ಪ್ರಚೋದಿಸಲು ಆರ್ಯರ ಆಗಮನವೆಂಬ ಕಲ್ಪನೆಯನ್ನು ಬಳಸಿಕೊಳ್ಳುವುದನ್ನೂ ಸಹ ನಾವು ಗಮನಿಸಿದ್ದೇವೆ.
ಯಾರಾದರೂ ಬ್ರಾಹ್ಮಣ ರಾಜಕಾರಣಿಗಳು “ಅನ್ಯಾಯದ ಮೀಸಲಾತಿಯನ್ನು ರದ್ದು ಮಾಡಿ ಸಮಾನತೆಯನ್ನು ಸ್ಥಾಪಿಸಬೇಕು” ಎಂದು ವಾದಿಸಿದಾಗಲೂ ಬೇರೆ ಕೆಲವರು ಅವರ ಬಾಯಿಮುಚ್ಚಿಸಲು ಈ ವಿಷಯವನ್ನು ಬಳಸಿಕೊಳ್ಳುವುದನ್ನು ನೀವು ಗಮನಿಸಿರಬಹುದು.
ಈಗಲೂ ಸಹ ಈ ವಿಷಯ ಮೇಲ್ಜಾತಿ ಮತ್ತು ಕೆಳಜಾತಿಯ ಜನರ ನಡುವೆ ದ್ವೇಷ ಮೂಡಿಸಲು ಈ ವಿಷಯವನ್ನು ವ್ಯಾಪಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಅದು ಅಷ್ಟು ಸುಲಭವಾಗಿ ಫಲ ಕೊಡುವುದಿಲ್ಲ.
ಅದರಿಂದ ನಮಗೆ ತಿಳಿಯುವುದೇನೆಂದರೆ ಆರ್ಯರ ಆಗಮನವೆಂಬುದು ನೂರಕ್ಕೆ ನೂರು ಕುತಂತ್ರದ ಕಲ್ಪನೆ.
ಬ್ರಿಟಿಷರಿಂದ ಪ್ರೇರಿತರಾದ ಇತಿಹಾಸಕಾರರು ಮತ್ತು ನಕಲಿ ಬುದ್ದಿಜೀವಿಗಳು ಹೇಳುವ ಪ್ರಕಾರ ಉತ್ತರ ಭಾರತಕ್ಕೆ ಆರ್ಯರು ಬಂದರು ಮತ್ತು ದಕ್ಷಿಣ ಭಾರತದಲ್ಲಿ ದ್ರಾವಿಡರು ವಾಸಿಸುತಿದ್ದರು. ಹಾಗಾದರೆ ಬ್ರಾಹ್ಮಣನಾದ ರಾವಣ ದಕ್ಷಿಣದಲ್ಲಿರುವ ಶ್ರೀಲಂಕಾವನ್ನು ಹೇಗೆ ಆಳುತ್ತಿದ್ದ???!!!!
ಅದೂ ಅಲ್ಲದೇ , ಈಗ ದೊರಕಿರುವ ಅತೀ ಪ್ರಾಚೀನವಾದ ಸಿಂಧೂ ನಧಿಯ ನಾಗರಿಕತೆಯು ಸಾಕ್ಷ್ಯಗಳು ದೊರಕಿರುವುದು ಉತ್ತರ ಭಾರತದಲ್ಲೇ.
ಆದರೆ ದಕ್ಷಿಣ ಭಾರತದಲ್ಲಿ ಯಾವುದೇ ಪ್ರಾಚೀನವಾದ ನಾಗರಿಕತೆ ಇದ್ದ ಪಳೆಯುಳಿಕೆಗಳು ದೊರಕಿಲ್ಲ. ಅಂದರೆ ದಕ್ಷಿಣ ಭಾರತದವರಿಗಿಂತ ಉತ್ತರ ಭಾರತದವರೇ ಲಕ್ಷಾಂತರ ವರ್ಷಗಳ ಮೊದಲಿನಿಂದಲೇ ಭಾರತದಲ್ಲಿ ವಾಸಿಸುತ್ತಿದ್ದರು. ರಾಮಾಯಣ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ವಾಸಿಸುತ್ತಿದ್ದವರು ವಾನರರು ಮತ್ತು ಶ್ರೀಲಂಕಾದಲ್ಲಿ ಇದ್ದವರು ರಾಕ್ಷಸರು. ಮಹಾಕವಿ ವಾಲ್ಮಿಕಿಯು ತನ್ನ ಶ್ರೀರಾಮಾಯಣದಲ್ಲಿ ದಕ್ಷಿಣ ಭಾರತದಲ್ಲಿ ಶ್ರೀರಾಮನು ದ್ರಾವಿಡರನ್ನು ಭೇಟಿ ಮಾಡಿದನು ಎಂದು ಬರೆದೇ ಇಲ್ಲವಲ್ಲ. ಅಂದರೆ ದ್ರಾವಿಡರು ಆಮೇಲೆ ಅಲ್ಲಿಗೆ ಬಂದಿರುವ ಸಾಧ್ಯತೆ ಇದೆ. ಇನ್ನೊಂದು ಪ್ರಶ್ನೆಯೆಂದರೆ ಅಲ್ಲಿದ್ದ ವಾನರರು ಮತ್ತು ರಾಕ್ಷಸರು ಏನಾದರು??!!!!
“ಭಾರತದ ಅತೀ ಪ್ರಾಚೀನವಾದ ಕವಿ ಎಂದು ಹೇಳಲಾಗುತ್ತಿರುವ ಮಹರ್ಷಿ ವಾಲ್ಮಿಕಿಯು ತನ್ನ ಶ್ರೀ ರಾಮಾಯಣದಲ್ಲಿ ಆರ್ಯರು (ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು.) ಎಲ್ಲಿಂದಲೋ ಬಂದವರೆಂದು ಎಲ್ಲಿಯೂ ಉಲ್ಲೇಖಿಸಿಯೇ ಇಲ್ಲ.
ಆರ್ಯರು 5000 ವರ್ಷಗಳ ಸುಮಾರಿಗೆ ಭಾರತಕ್ಕೆ ಬಂದಿದ್ದರೆ ಅದಕ್ಕಿಂತಲೂ ಹಿಂದೆ ವಾಲ್ಮಿಕಿಯು ಬ್ರಾಹ್ಮಣರು ಮತ್ತು ಕ್ಷತ್ರಿಯರ ಬಗ್ಗೆ ಹೇಗೆ ಬರೆಯಲು ಸಾಧ್ಯ????!!!! ರಾಮಾಯಣದ ಅತ್ಯಂತ ಬಲಿಷ್ಠ ಖಳನಾಯಕನಾದ ರಾವಣನು ಬ್ರಾಹ್ಮಣನೇ ಅಲ್ಲವೇ???? ಅಂದರೆ ರಾಮಾಯಣವನ್ನು ಬರೆಯುವುದಕ್ಕಿಂತ ಮೊದಲೇ ಬ್ರಾಹ್ಮಣರು ಭಾರತ ಮತ್ತು ಶ್ರೀಲಂಕಾದಲ್ಲಿ ವಾಸಿಸುತ್ತಿದ್ದರು.
ಆರ್ಯರು ಭಾರತಕ್ಕೆ ಬಂದರೆಂದು ಹೇಳುವುದು ಮತ್ತು ವಾಲ್ಮಿಕಿಯು ರಾಮಾಯಣವನ್ನು ಬರೆದನೆಂದು ಹೇಳುವ ಕಾಲವನ್ನು ಇತಿಹಾಸಕಾರರು ಸುಮಾರು ಕ್ರಿ.ಪೂ.5000 ಇಸವಿಯೆಂದು ಹೇಳುತ್ತಾರೆ. ಆದರೆ ಇದು ಅನೇಕ ಸಂಶಯಗಳಿಗೆ ಆಸ್ಪದ ಕೊಡುತ್ತದೆ. ವಾಲ್ಮೀಕಿ ರಾಮಾಯಣವನ್ನು ಕ್ರಿ.ಪೂ.5000ದಲ್ಲಿ ಬರೆದಿದ್ದರೆ ಆ ಮಹಾಕಾವ್ಯದಲ್ಲಿ ಅವನೂ ಒಂದು ಪಾತ್ರ ವಹಿಸುವುದು ಸುಳ್ಳೇ ????!!!
ತ್ರೇತಾಯುಗದಲ್ಲಿ ನಡೆದ ರಾಮಾಯಣದಲ್ಲಿ ದ್ವಾಪರ ಯುಗವೂ ಕಳೆದ ನಂತರ ಅವರು ಹೇಳಿದಂತೆ ಕಲಿಯುಗದಲ್ಲಿ ಹುಟ್ಟಿದ ವಾಲ್ಮೀಕಿ ಸೀತಾದೇವಿಗೆ ಹೇಗೆ ಆಶ್ರಯ ಕೊಟ್ಟನು ??
ಒಟ್ಟಿನಲ್ಲಿ ಇತಿಹಾಸಕಾರರು ಹೇಳುವ ಮಾತುಗಳನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ.
1.ವಾಲ್ಮೀಕಿಯ ಪ್ರಕಾರ ಬ್ರಾಹ್ಮಣರು ತ್ರೇತಾಯುಗದಲ್ಲೇ ಭಾರತದಲ್ಲಿ ವಾಸವಾಗಿದ್ದರು.
2. ಇತಿಹಾಸಕಾರರು ಬ್ರಾಹ್ಮಣರು ಕಲಿಯುಗದಲ್ಲಿ ಮಧ್ಯ ಏಷ್ಯಾದಿಂದ ಬಂದರು ಎಂದು ಹೇಳುತ್ತಾರೆ.
ಇವುಗಳಲ್ಲಿ ಯಾವುದನ್ನು ನಂಬುವುದು???
ಈ ಇತಿಹಾಸಕಾರರು ಸುಳ್ಳುಗಾರರಗಿರಬೇಕು. ಇಲ್ಲವೇ ವಾಲ್ಮೀಕಿ ಸುಳ್ಳು ಬರೆದಿರಬೇಕು. ಎರಡರಲ್ಲಿ ಯಾವುದು ನಿಜ.
ಆರ್ಯರು ಬಂದರೆಂದು ಹೇಳಲಾಗುವ ಕಾಲದಲ್ಲಿಯೇ ವಾಲ್ಮಿಕಿಯು ಶ್ರೀ ರಾಮಾಯಣವನ್ನು ಬರೆದಿದ್ದರೆ ಆರ್ಯರು ಬಂದ ಬಗ್ಗೆ ಅದರಲ್ಲಿ ಯಾವುದಾದರೂ ಒಂದು ಉಲ್ಲೇಖ ಇರಲೇಬೇಕಾಗಿತ್ತು.
ಆರ್ಯರ ಆಗಮನದ ಬಗ್ಗೆ ಬರೆಯಲು ವಾಲ್ಮೀಕಿ ಭಯಪಟ್ಟನೇ ???
ಒಬ್ಬ ಬ್ರಾಹ್ಮಣನನ್ನು ಖಳನಾಯಕನನ್ನಾಗಿ ಚಿತ್ರಿಸಿದ ವಾಲ್ಮೀಕಿ ಆರ್ಯರ ಆಗಮನದ ಬಗ್ಗೆ ಬರೆಯಲು ಹೆದರಿದನೇ????
ಇಲ್ಲ!!!!!!
ಇದರ ಅರ್ಥ,ಆರ್ಯರ ಆಗಮನವೆಂಬುದು ಬ್ರಿಟಿಷರಿಂದ ಪ್ರೇರಿತರಾದ ಇತಿಹಾಸಕಾರರು ಮತ್ತು ಬುದ್ಧಿಜೀವಿಗಳಿಂದ ಸೃಷ್ಟಿಸಲ್ಪಟ್ಟ ಕಲ್ಪನೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಭಾರತೀಯರನ್ನು ಮೇಲ್ಜಾತಿಯ ವಿರುದ್ಧ ಕೆಳಜಾತಿಯೆಂದು ವಿಭಜಿಸಿ ಆಳಲು ಮತ್ತು ಭಾರತೀಯರ ಒಗ್ಗಟ್ಟನ್ನು ನಾಶಪಡಿಸಿ ಸ್ವಾತಂತ್ರ ಹೋರಾಟವನ್ನು ದುರ್ಬಲಗೊಳಿಸಲು ಮಾಡಿದ ಒಂದು ಕುತಂತ್ರ.
ಅದೂ ಅಲ್ಲದೇ ಭಾರತದ ಯಾವುದೇ ಸಾಹಿತ್ಯ ಅಥವಾ ಜನಪದ ಕತೆ ಆರ್ಯರ ಆಗಮನದ ಬಗ್ಗೆ ತಿಳಿಸುವುದೇ ಇಲ್ಲ.
ಆರ್ಯರು ಎಲ್ಲಿಂದಲೋ ಬಂದಿದ್ದರೆ ಅದನ್ನು ಇತಿಹಾಸಕಾರರು ಸೃಷ್ಟಿಸುವ ಅಗತ್ಯವಿರಲಿಲ್ಲ. ಜನರೇ ಯಾವುದೋ ಒಂದು ಕತೆಯಲ್ಲೋ , ಒಂದು ಗಾದೆ ಮಾತಿನಲ್ಲೋ ಅಥವಾ ಯಾವುದಾದರೂ ಒಂದು ಜನಪದ ಕತೆ ಇಲ್ಲವೇ ಹಾಡುಗಳಲ್ಲಿ ಅದನ್ನು ದಾಖಲಿಸುತಿದ್ದರು. ಆದ್ದರಿಂದ ಭಾರತೀಯ ಇತಿಹಾಸಕಾರರು ಬರೆದ ಅನೇಕ ಸುಳ್ಳುಗಳಲ್ಲಿ ಆರ್ಯರ ಆಗಮನವು ಮೊದಲ ಸುಳ್ಳಾಗಿದೆ ಎಂಬುದು ಸ್ಪಷ್ಟ.
ನಿಜವಾಗಿ ಬ್ರಾಹ್ಮಣರು ಅತಿ ಪುರಾತನ ಕಾಲದಿಂದಲೂ ಭಾರತದ ತುಂಬೆಲ್ಲಾ ವಾಸಿಸುತ್ತಿದ್ದರು. ಆದರೆ ಈಗ ಪಾಕಿಸ್ತಾನದ ಬಳಿಯಿರುವ ಸರಸ್ವತಿ ನಧಿಯ ದಂಡೆಯ ಮೇಲೆ ಅತಿ ದಟ್ಟವಾಗಿದ್ದರು. ಅವರಿದ್ದ ನಗರಗಳನ್ನೇ ಸಿಂಧೂ ನಧಿಯ ನಾಗರಿಕತೆ ಎಂದು ಹೇಳುವುದು. ಈಗಿನ ಆಧುನಿಕ ನಗರಗಳಂತೆಯೇ ಪ್ರಾಚೀನ ಭಾರತದ ಬ್ರಾಹ್ಮಣರ ಹರಪ್ಪ ಮತ್ತು ಮೆಹಂಜದಾರೋ ನಗರಗಳಿದ್ದವು.
ಬಲೂಚಿಸ್ತಾನದವರೆಗೂ ಅಥವಾ ಇನ್ನೂ ಆಚೆಗೆ ಇದ್ದ ಅಂದಿನ ಭಾರತವೇ ಬ್ರಾಹ್ಮಣರ ನಿಜವಾದ ಜನ್ಮ ಭೂಮಿ. ಸಿಂಧೂ ನಧಿ ನಾಗರಿಕತೆ ಎನ್ನುತ್ತಾರಲ್ಲ ಭಾರತದಲ್ಲಿ ಅಂದಿನ ಕಾಲದಲ್ಲೇ ನಾಗರಿಕರಾಗಿರಲು ಯಾರಿಂದ ಸಾಧ್ಯ . ತಮ್ಮ ಪ್ರಾದೇಶಿಕ ಭಾಷೆಗಳಿಗೆ ಲಿಪಿಗಳನ್ನು ತಯಾರಿಸಲಾರದವರು ಅಷ್ಟು ನಾಗರಿಕರಾಗಿದ್ದರೇ ????? ಅಂತಹ ಆಧುನಿಕವಾದ ನಗರಗಳನ್ನು ನಿರ್ಮಾಣ ಮಾಡಲು ಯಾರಿಗೆ ಸಾಧ್ಯವಿದೆ??? ಈಗಲೇ ಮೀಸಲಾತಿಯೆಂಬ ಕೃತಕವಾದ ವ್ಯವಸ್ಥೆಯಿಂದ ಉದ್ಯೋಗ ಪಡೆಯುತ್ತಿರುವವರು ಆಗಲೇ ಅಷ್ಟು ಮುಂದುವರೆದಿದ್ದರೇ ????? ಆಗ ಅತಿ ಆಧುನಿಕರಾಗಿದ್ದು ಆಮೇಲೆ ಹಿಂದುಳಿದರೇ ?????
ಹಾಸ್ಯಾಸ್ಪದವಾಗಿದೆ ಇತಿಹಾಸಕಾರರ ಕಲ್ಪನೆ!!!!!
ಬ್ರಾಹ್ಮಣರು ಭಾರತದ ಮೂಲನಿವಾಸಿಗಳೆಂದು ನಿರೂಪಿಸಲು ಇನ್ನೂ ಹಲವಾರು ಸಾಕ್ಷ್ಯಗಳಿವೆ.
ಬ್ರಾಹ್ಮಣರ ಅತಿ ಪ್ರಾಚಿನ ಮಂತ್ರಗಳಲ್ಲಿ “ ಭರತಖಂಡೇ ,ಭಾರತವರ್ಷೇ , ಜಂಭೂ ದ್ವೀಪೇ”, ಎಂಬ ಪದಗಳಿವೆ.
ಬ್ರಾಹ್ಮಣರು ಬೇರೆ ದೇಶದಿಂದ ಬಂದಿದ್ದರೆ ಆ ಮಂತ್ರಗಳಲ್ಲಿ ಭಾರತ ದೇಶದ ಪ್ರಾಚೀನ ಹೆಸರುಗಳು ಏಕೆ ಇರುತ್ತವೆ???ಅವರು ಹೇಳುವಂತೆ ಬ್ರಾಹ್ಮಣರು ಮಧ್ಯ ಏಷ್ಯಾದಿಂದ ಬಂದಿದ್ದರೆ ಅವುಗಳಲ್ಲಿ , “ಮಧ್ಯ ಎಷ್ಯೇ ,” ಎಂದು ಇರಬೇಕಾಗಿತ್ತು . ಅದೂ ಅಲ್ಲದೇ ಬ್ರಾಹ್ಮಣರ ಪೂರ್ವಜರು ಏಕೆ ಅದರ ಬಗ್ಗೆ ಏನನ್ನೂ ಹೇಳಿಲ್ಲ ಮತ್ತು ಬರೆದಿಲ್ಲ. ಬ್ರಾಹ್ಮಣರು ಭಾರತ ದೇಶಕ್ಕೆ ನಿಷ್ಟರಾಗಿದ್ದಾರೆಯೇ ಹೊರತು ಮಧ್ಯ ಏಷ್ಯಾದ ಸ್ಮರಣೆಯನ್ನೇ ಮಾಡುವುದಿಲ್ಲವಲ್ಲಾ?????.
ಮಧ್ಯ ಏಷ್ಯಾದವರೆಗೆ ಸಂಸ್ಕೃತದ ಪ್ರಭಾವ ಇದೆ ಅದರಿಂದ ಆರ್ಯರು ಮಧ್ಯ ಏಷ್ಯಾದಿಂದ ಬಂದಿದ್ದಾರೆ ಎಂದು ಹೇಳುತ್ತಾರೆ.ಹಾಗಾದರೆ ಸಂಸ್ಕೃತದ ಪ್ರಭಾವ ಜರ್ಮನಿಯಿಂದ ಇಂಡೋನೇಷಿಯಾದವರೆಗೆ ಇದೆ. ಆರ್ಯರು ಜರ್ಮನಿಯಿಂದಲೇ ಏಕೆ ಬಂದಿರಬಾರದು???
ಅದೂ ಅಲ್ಲದೇ ಈಗ ಭಾರತದಲ್ಲಿ ಇಂಗ್ಲಿಷಿನ ಪ್ರಭಾವ ಇದೆಯಲ್ಲ ಅದರಿಂದ ಬ್ರಿಟಿಷರೆಲ್ಲರೂ ಭಾರತದಿಂದಲೇ ಏಕೆ ಇಂಗ್ಲೆಂಡಿಗೆ ಹೊಗಿರಬಾರದು???ಭಾರತದಲ್ಲಿ ಇಂಗ್ಲಿಷಿನ ಪ್ರಭಾವ ಇದೆ ಅದರಿಂದ ಬ್ರಿಟಿಷರು ಇಂಗ್ಲೆಂಡಿನ ಮೂಲ ನಿವಾಸಿಗಳೇ ಅಲ್ಲ ಎಂದರೆ ಒಪ್ಪಿಕೊಳ್ಳುತ್ತಾರಾ?????
ಮಧ್ಯ ಏಷ್ಯಾದಲ್ಲಿ ಸಂಸ್ಕೃತದ ಪ್ರಭಾವ ಇದ್ದರೆ ಭಾರತದಲ್ಲಿ ಸಂಸ್ಕೃತವೇ ಇದೆಯಲ್ಲ???
ಅವರು ಕೊಡುವ ಮತ್ತೊಂದು ಸಾಕ್ಷ್ಯವೆಂದರೆ ಉತ್ತರ ಭಾರತದ ಜನರು ಬೆಳ್ಳಗಿದ್ದಾರೆ ಅದರಿಂದ ಅವರು ಭಾರತದ ಮೂಲನಿವಾಸಿಗಳಲ್ಲ ಎಂದು ಹೇಳುತ್ತಾರೆ. ದಕ್ಷಿಣ ಭಾರತದ ಜನರು ಕಪ್ಪಗಿದ್ದಾರೆ ಅದ್ದರಿಂದ ಅವರು ಭಾರತದ ಮೂಲ ನಿವಾಸಿಗಳು ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಾರೆ.
ಬೆಳ್ಳಗಿರುವವರೆಲ್ಲಾ ಒಂದು ದೇಶದವರು ಮತ್ತು ಕಪ್ಪಗಿರುವವರೆಲ್ಲಾ ಮತ್ತೊಂದು ದೇಶದವರು ಎಂದು ಹೇಳಿದರೆ ದ್ರಾವಿಡರು ಮತ್ತು ಆಫ್ರಿಕಾದ ಜನರು ಕಪ್ಪಾಗಿರುವುದರಿಂದ ದ್ರಾವಿಡರು ಆಫ್ರಿಕಾದಿಂದಲೇ ಏಕೆ ಬಂದಿರಬಾರದು????
ಆದರೆ ಭಾರತದ ಮಣ್ಣಿನಲ್ಲಿ ಕರಿಯರು ಮಾತ್ರ ಹುಟ್ಟಬೇಕು ಎಂದು ಇಲ್ಲಿ ಜೀವದ ಉಗಮವಾಗುವ ಮೊದಲೇ ಯಾವ ಸರ್ಕಾರಗಳಾದರೂ ಕಾನೂನು ಮಾಡಿದ್ದವೇ?????
ಭಾರತದ ಮಣ್ಣಿನಲ್ಲಿ ಕರಿಯರು ಮಾತ್ರ ಹುಟ್ಟಬೇಕು ಎಂದು ಕಾನೂನು ಮಾಡಿದವರು ಯಾರು?????ಎಷ್ಟೋ ಜನ ಕರಿಯ ಬ್ರಾಹ್ಮಣರಿಲ್ಲವೇ??????
ಕಪ್ಪಗಿರುವ ಬ್ರಾಹ್ಮಣರು ಮತ್ತು ಕಪ್ಪಗಿರುವ ಇತರರ ನಡುವೆ ಮುಖ ಲಕ್ಷಣಗಳಲ್ಲಿ ,ಸಂಸ್ಕಾರದಲ್ಲಿ ಸ್ಪಷ್ಟವಾದ ವ್ಯತ್ಯಾಸಳಿಲ್ಲವೇ??????
ಭಾರತದ ಮಣ್ಣಿನಲ್ಲಿ ಕರಿಯರು ಹುಟ್ಟಲು ಹೇಗೆ ಸಾಧ್ಯವೋ ಹಾಗೆಯೇ ಬಿಳಿಯರೂ ಸಹ ಹುಟ್ಟಲು ಸಾಧ್ಯ!!!!!!
ಉತ್ತರ ಭಾರತದ ಜನರ ಮುಖ ಬೇರೆ ರೀತಿಯಲ್ಲಿ ಇದೆ ಎಂದು ಹೇಳುತ್ತಾರೆ. ಆ ರೀತಿಯ ಮುಖಗಳಿಗೆ ಜನ್ಮ ಕೊಡಲು ಭಾರತದ ಮಣ್ಣಿಗೆ ಸಾಧ್ಯವಿಲ್ಲವೇ?????ಅದೂ ಅಲ್ಲದೇ ಉತ್ತರ ಭಾರತದ ಜನರ ಮುಖಗಳನ್ನು ನೋಡಿದಾಗ ದಕ್ಷಿಣ ಭಾರತದ ಜನರ ಮುಖಗಳೇ ಬೇರೆ ರೀತಿಯಲ್ಲಿ ಇವೆಯಲ್ಲಾ ????? ಹಾಗಾದರೆ ದಕ್ಷಿಣ ಭಾರತದ ಜನರು ಬೇರೆ ದೇಶದಿಂದ ಬಂದವರಾ?????
ನಿಜವಾಗಿ ಹೇಳಬೇಕೆಂದರೆ , ಭಾರತದಲ್ಲಿಯೇ ಅಲ್ಲ . ಇಡೀ ಪ್ರಪಂಚದ ದಕ್ಷಿಣ ಭಾಗದ ಜನರೆಲ್ಲರೂ ಕರಿಯರೇ.
ಅದಕ್ಕೆ ಕಾರಣ ಉಷ್ಣವಲಯದಲ್ಲಿ ಬಿಸಿಲು ಜಾಸ್ತಿಯಿರುವುದರಿಂದ ಚರ್ಮ ರೋಗಗಳಿಗೆ ರಕ್ಷಣೆಯಾಗಿ ದೇಹವೇ ಅಂತಹ ಬಣ್ಣವನ್ನು ಹೊಂದುತ್ತದೆ. ಅದಕ್ಕೆ ಕಾರಣ ಜೀವವಿಕಾಸ.
ದಕ್ಷಿಣ ಅಮೆರಿಕಾ, ಆಫ್ರಿಕಾ ಮತ್ತು ಆಸ್ತ್ರೆಲಿಯಾಗಳಲ್ಲಿ ಮೊದಲು ವಾಸಿಸುತ್ತಿದ್ದವರು ಕರಿಯರೇ. ಬ್ರಿಟಿಷರು ಆ ದೇಶಗಳಿಗೆ ಹೋದ ಮೇಲೆ ಅಲ್ಲಿ ಬಿಳಿಯರು ಹೆಚ್ಚಾದರು.
ಕರಿಯರನ್ನು ಮಾತ್ರ ಭಾರತದ ಮೂಲ ನಿವಾಸಿಗಳೆಂದು ಬ್ರಿಟಿಷರು ಬರೆಸಿರುವುದು ಅವರು ಪಾಶ್ಚಿಮಾತ್ಯ ದೇಶಗಳಲ್ಲಿ ಆಚರಿಸುವ ಉಗ್ರವಾದ ವರ್ಣಬೇಧ ನೀತಿಯಿಂದ ಪ್ರಭಾವಿತವಾಗಿದೆ. ಅವರು ಅಲ್ಲಿ ಮಾಡುವಂತೆ ಇಲ್ಲಿಯೂ ಭಾರತೀಯರನ್ನು ಕರಿಯರು ಎಂದು ಕೀಳು ಮಾಡುವ ಪ್ರಯತ್ನಕ್ಕೆ ಚಾಲನೆ ನೀಡಿದರು. ಅವರ ಕುತಂತ್ರ ಏಕೆ ಫಲ ಕೊಡಲಿಲ್ಲವೆಂದರೆ ಅಲ್ಲಿಯಂತೆ ಭಾರತದಲ್ಲಿ ಕರಿಯರನ್ನು ಕೀಳಾಗಿ ಕಾಣುತ್ತಿರಲಿಲ್ಲ.
ಮತ್ತೊಂದು ವಿಷಯವೆಂದರೆ ಬ್ರಾಹ್ಮಣರು ,ಕ್ಷತ್ರಿಯರು, ಮತ್ತು ವೈಶ್ಯರನ್ನು ಬಿಟ್ಟು ಉಳಿದ ಜಾತಿಗಳಲ್ಲಿ ಕೋಟ್ಯಂತರ ಜನ ಬಿಳಿಯರಿದ್ದಾರೆ. ಆದರೆ ಅವರು ಬಿಳಿಯರಾಗಿದ್ದರೂ ಅವರ ಮುಖ ಲಕ್ಷಣಗಳು ಭಿನ್ನವಾಗಿವೆ. ದಲಿತರಲ್ಲಿಯೂ ಬಿಳಿಯರಿದ್ದಾರೆ. ಹಾಗಾದರೆ ಅವರೂ ಮಧ್ಯ ಎಷ್ಯಾದಿಂದಲೇ ಬಂದವರಾ????
?
ಭೂಮಿಯ ಎಲ್ಲಾ ದೇಶಗಳ ಉತ್ತರ ಭಾಗಗಳಲ್ಲಿ ಇರುವಂತೆ ಉತ್ತರ ಭಾರತದಲ್ಲಿಯೂ ಬಿಳಿಯರೇ ಹುಟ್ಟಿದ್ದಾರೆ. ಭೂಮಿಯ ಉತ್ತರಕ್ಕೆ ಹೋದಂತೆಲ್ಲಾ ಬಿಳಿಯರೇ ಇರುತ್ತಾರೆ.
ಉದಾಹರಣೆಗೆ ಚೀನಾ, ರಷ್ಯಾ, ಜಪಾನ್, ಸೌದಿ ಅರೇಬಿಯಾ ಮುಂತಾದ ದೇಶಗಳಲ್ಲೆಲ್ಲಾ ಬಿಳಿಯರೇ ಇದ್ದಾರೆ. ಚೀನಾ ಮತ್ತು ರಷ್ಯಾಗಳ ಜನರು ಭಾರತದವರಿಗಿಂತಲೂ ಬೆಳ್ಳಗಿದ್ದಾರೆ . ಏಕೆಂದರೆ ಅವರು ಭಾರತದವರಿಗಿಂತಲೂ ಉತ್ತರದ ಜನರು. ಹಾಗೆಂದು ಅವರೆಲ್ಲರೂ ಮಧ್ಯ ಎಷ್ಯಾದಿಂದಲೇ ಬಂದಿದ್ದಾರೆ ಎನ್ನಲು ಸಾಧ್ಯವೇ????
ಮೇಲಿನ ಎಲ್ಲಾ ಕಾರಣಗಳಿಂದ ನಮಗೆ ತಿಳಿಯುವುದೇನೆಂದರೆ ಬ್ರಾಹ್ಮಣರು ಭಾರತದ ಮೂಲ ನಿವಾಸಿಗಳೆಂಬುದು ಸೂರ್ಯನಷ್ಟೇ ಸತ್ಯ.
ಆರ್ಯರ ಆಗಮನವೆಂಬುದು ಕುತಂತ್ರಿಗಳು ರಚಿಸಿದ ಕಪೋಲ ಕಲ್ಪಿತ ಕಲ್ಪನೆ. ಹಿಂದೂ ಮುಸ್ಲಿಂ,ಮೇಲ್ಜಾತಿ ಕೆಳಜಾತಿ ಎಂದು ವಿಭಜಿಸಿ ಆಳುವ ಬ್ರಿಟಿಷರ ಕುತಂತ್ರವನ್ನು ಜಾರಿಗೊಳಿಸಲು ತಯಾರಿಸಿದ ಒಂದು ಕಲ್ಪನೆ. ಮದ್ದು ಗುಂಡುಗಳಿಗೆ ಕೊಬ್ಬು ಸವರುವ ವಿಷಯದಲ್ಲಿ ಮಾಡಿದ ತಂತ್ರದಂತೆಯೇ ಇದೂ ಕೂಡ.
ಭಾರತೀಯ ರಾಜಕಾರಣಿಗಳು ಬ್ರಿಟಿಷರಿಂದ ಶಿಸ್ತು ಮತ್ತು ಪ್ರಾಮಾಣಿಕತೆಗಳನ್ನು ಕಲಿಯಲಿಲ್ಲ. ಆದರೆ ವಿಭಜಿಸಿ ಆಳುವ ತಂತ್ರವನ್ನು ಕಲಿತು ಅದನ್ನು ಉಪಯೋಗಿಸುವುದರಲ್ಲಿ ತುಂಬಾ ಪಳಗಿದ್ದಾರೆ.
ಈ ಆರ್ಯರ ಆಗಮನಕ್ಕೆ ಅವರು ಕೊಡುವ ಮತ್ತೊಂದು ಸಾಕ್ಷ್ಯವೆಂದರೆ ಮಧ್ಯ ಏಷ್ಯಾದಲ್ಲಿ ಬ್ರಾಹ್ಮಣರಿಗೆ ಸಂಬಂಧಿಸಿದ ವಸ್ತುಗಳು ದೊರಕಿವೆ ಎಂಬುದು. ಆ ವಸ್ತುಗಳನ್ನು ಮಧ್ಯ ಎಷ್ಯಾದವರು ಕದ್ದು ಕೊಂಡು ಅಥವಾ ಕೊಂಡುಕೊಂಡು ಹೋಗಿರಬಹುದು. ಅಥವಾ ಆಗಿನ ಕಾಲದಲ್ಲಿದ್ದ ಲಕ್ಷಾಂತರ ರಾಕ್ಷಸರ ಕಾಟದಿಂದ ಬೇಸತ್ತು ಕೆಲ ಬ್ರಾಹ್ಮಣರು ಮಧ್ಯ ಎಷ್ಯಾಕ್ಕೆ ವಲಸೆ ಹೋಗಿರಬಹುದು. ಅಥವಾ ಯಾರಾದರೂ ಪ್ರಾಚೀನ ಪ್ರವಾಸಿಗರು ಬೇಟಿ ಕೊಟ್ಟಾಗ ನಮ್ಮ ದೇಶದ ರಾಜರು ಅವರಿಗೆ ಆ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಕಳುಹಿಸಿರಬಹುದು.
ಭಾಷೆಯ ಪ್ರಭಾವ ಮತ್ತು ವಸ್ತುಗಳು ದೊರಕಿರುವುದು ಆರ್ಯರ ಅಗಮನವೆಂಬ ಕಲ್ಪನೆಗೆ ಹೇಗೆ ಸಾಕ್ಷಿಯಾಗಬಲ್ಲದೋ ಹಾಗೆಯೇ ಆರ್ಯರು ಭಾರತದಿಂದ ಅಲ್ಲಿಗೆ ವಲಸೆ ಹೋಗಿದ್ದಾರೆ ಎಂಬ ವಿಷಯಕ್ಕೂ ಸಾಕ್ಷಿಯಾಗಬಲ್ಲದು.
ಮಧ್ಯ ಏಷ್ಯಾದಲ್ಲಿ ಬ್ರಾಹ್ಮಣರಿಗೆ ಸಂಬಂದಿಸಿದ ವಸ್ತುಗಳು ದೊರಕಿರಬಹುದು. ಆದರೆ ಅಲ್ಲಿ ಬ್ರಾಹ್ಮಣರೇ ದೊರೆತಿಲ್ಲವಲ್ಲ.
ಇಲ್ಲಿರುವ ಬ್ರಾಹ್ಮಣರನ್ನು ಪೂರ್ತಿಯಾಗಿ ಹೋಲುವ ಮತ್ತು ಇಲ್ಲಿರುವ ಬ್ರಾಹ್ಮಣರು ಆಚರಿಸುವ ಎಲ್ಲಾ ಸಂಪ್ರದಾಯಗಳನ್ನು ಆಚರಿಸುವ ಬ್ರಾಹ್ಮಣರು ಅಲ್ಲಿ ದೊರಕಿಲ್ಲವಲ್ಲ. ಯಾವುದೇ ವಸ್ತುಗಳನ್ನು ಯಾರು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಹಾಗಂತ ಜನರೇ ಅಲ್ಲಿಂದ ಬಂದರು ಎಂದರೆ ಯಾರು ನಂಬಲು ಸಾಧ್ಯ????!!!!!
ಮತ್ತೊಂದು ವಿಷಯವೆಂದರೆ , ಯಾವುದೇ ಜನರ ವಲಸೆಯಿಂದ ಆ ಜನರು ಹೋಗಿ ನೆಲೆಸಿದ ಸ್ಥಳದಲ್ಲಿ ಅವರ ಸಂಸ್ಕೃತಿ ಬೆಳೆದರೂ ಅವರು ಮೊದಲಿದ್ದ ಜಾಗದಲ್ಲಿ ಅದು ಸಂಪೂರ್ಣವಾಗಿ ನಶಿಸುವುದಿಲ್ಲ. ಉದಾಹರಣೆಗೆ ಮುಸಲ್ಮಾನರ ವಲಸೆಯಿಂದ ಭಾರತದಲ್ಲಿ ಮುಸ್ಲಿಂ ಸಂಸ್ಕೃತಿ ಬೆಳೆದಿದೆ. ಆದರೆ ಅವರ ಮೂಲ ಸ್ಥಳವಾದ ಮೆಕ್ಕಾ, ಮದೀನ, ಮತ್ತು ಸೌದಿ ಅರೇಬಿಯಾಗಳಲ್ಲಿ ಮುಸ್ಲಿಂ ಸಂಸ್ಕೃತಿ ನಶಿಸಿಯೇ ಇಲ್ಲವಲ್ಲ. ಅದೇ ರೀತಿಯಲ್ಲಿ ಭಾರತಕ್ಕೆ ಆರ್ಯರು ಬಂದರೆ ಇಲ್ಲಿ ಆರ್ಯರ ಸಂಸ್ಕೃತಿ ಬೆಳೆದಿದೆ. ಆದರೆ ಆ ಸಂಸ್ಕೃತಿ ಮಧ್ಯ ಏಷ್ಯಾದಲ್ಲಿ ಏಕೆ ನಶಿಸಿತು????!!!!! ಈ ಪ್ರಶ್ನೆಗೆ ಇತಿಹಾಸಕಾರರು ಸರಿಯಾದ ಕಾರಣವನ್ನು ಕೊಡುವುದರಲ್ಲಿ ವಿಫಲರಾಗಿದ್ದಾರೆ.
ಅದು ನಿಜವಾಗಿದ್ದರೆ ಏನಾದರೂ ಕಾರಣಗಳು ಮತ್ತು ಸಾಕ್ಷ್ಯಗಳು ದೊರೆಯಬಹುದು. ಆದರೆ ಸೃಷ್ಟಿ ಮಾಡಲ್ಪಟ್ಟ ಕಲ್ಪನೆಗೆ ಸಾಕ್ಷ್ಯಗಳನ್ನು ಎಲ್ಲಿಂದ ತಂದಾರು??????
ಮೇಲಾಗಿ ಬ್ರಾಹ್ಮಣರ ರಕ್ತ ಮತ್ತು ವಂಶವಾಹಿಗಳಲ್ಲಿರುವ ಭಾರತೀಯತೆಯು ಬ್ರಾಹ್ಮಣರು ಭಾರತದ ಮೂಲ ನಿವಾಸಿಗಳೇ ಎಂಬುದನ್ನು ಸಾಬೀತು ಪಡಿಸುತ್ತವೆ. ಕಾಶ್ಮೀರದಲ್ಲಿ ಲಕ್ಷಾಂತರ ಜನ ಬ್ರಾಹ್ಮಣರ ಕಗ್ಗೊಲೆ ನಡೆದಾಗಲೂ, ಅಲ್ಲಿ ಸತ್ತ ಪ್ರತಿಯೊಬ್ಬ ಬ್ರಾಹ್ಮಣರೂ ತಮ್ಮ ಭಾರತಕ್ಕೆ ಇದ್ದ ನಿಷ್ಠೆಯನ್ನು ಬದಲಿಸಲಿಲ್ಲ. ಅಂತಹ ಉಗ್ರವಾದ ಭಾರತ ನಿಷ್ಠೆ ಏನನ್ನು ಸೂಚಿಸುತ್ತದೆ.
ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಬ್ರಾಹ್ಮಣರ ಕೊಡುಗೆಯೆಷ್ಟಿದೆ. ಲಕ್ಷಾಂತರ ಬ್ರಾಹ್ಮಣರು ತಮ್ಮ ಪ್ರಾಣ ಕೊಟ್ಟಿದ್ದಾರೆ.
ಭಾರತದ ಮಣ್ಣಿನ ಮಕ್ಕಳಾದ್ದರಿಂದಲೇ ಲಕ್ಷಾಂತರ ವೀರ ಬ್ರಾಹ್ಮಣರು ಬ್ರಿಟಿಷರನ್ನು ಎದುರಿಸಿ ಬಲಿದಾನ ಮಾಡಿದ್ದಾರೆ. ವಲಸೆ ಬಂದವರಿಗೆ ಅಂತಹ ನಿಷ್ಠೆ ಬರುವುದು ಹೇಗೆ ಸಾಧ್ಯ!!!!!
ಆರ್ಯರ ಆಗಮನವೆಂಬ ನಂಬಲಿಕ್ಕೆ ಸಾಧ್ಯವಿಲ್ಲದ ಕಲ್ಪನೆಯೆಂಬುದು ಈಗಿನ ವಿಧ್ಯಾವಂತ ಯುವಜನರಿಗೆ ಅರಿವಾಗಿದೆ.
ಭಾರತದ ಬಹುಸಂಖ್ಯಾತ ಜನರು ಆರ್ಯರ ಆಗಮನವೆಂಬುದು ಒಂದು ಬಾಲಿಶವಾದ ಕಲ್ಪನೆಯೆಂದು ಅರಿತುಕೊಂಡಿದ್ದಾರೆ. ಅದನ್ನು ಈಗ ಯಾರೂ ನಂಬುವುದಿಲ್ಲ.
ಮತ್ತೊಂದು ವಿಷಯವೆಂದರೆ ಬ್ರಾಹ್ಮಣರ ಹೆಸರುಗಳಿಗೂ ಮತ್ತು ಉಳಿದ ಭಾರತೀಯರ ಹೆಸರುಗಳಿಗೂ ಇರುವ ಹೋಲಿಕೆ.
ಒಂದೊಂದು ದೇಶದ ಜನರ ಹೆಸರುಗಳು ಒಂದೊಂರು ರೀತಿಯಲ್ಲಿ ಇರುತ್ತವೆ. ರಾಷ್ಯಾದವರ ಹೆಸರುಗಳು ನಿಕೊಲೋವಿಚ್ , ಚೆಕೊವ್ ಈ ರೀತಿ ಇದ್ದರೆ ಚೀನಾದವರ ಹೆಸರುಗಳು ವಾಂಗ್ ಲೀ, ಬ್ರೂಸ್ ಲೀ ಎಂದು ಇರುತ್ತವೆ. ಇಂಗ್ಲೆಂಡ್ನವರ ಹೆಸರುಗಳು ಜಾನ್, ಅಲೆಗ್ಸಾಂಡರ್ ತರ ಇದ್ದರೆ ಆಫ್ರಿಕಾದವರ ಹೆಸರುಗಳು ಅಚಿಬೆ, ವಾಲ್ಕಾಟ್ ಎಂಬಂತೆ ಇರುತ್ತವೆ. ಅರಬ್ ಜನರ ಹೆಸರುಗಳು ಇಸ್ಮಾಯಿಲ್ , ಗಜನಿ , ಕುತುಬ್ಬುದೀನ್ ಎಂದು ಇರುತ್ತವೆ. ಆದರೆ ಬ್ರಾಹ್ಮಣರ ಹೆಸರುಗಳು ಉಳಿದ ಭಾರತೀಯರ ಹೆಸರುಗಳಂತೆ ಇವೆಯೇ ಹೊರತು ಜಗತ್ತಿನ ಬೇರೆ ಯಾವ ದೇಶದ ಜನರ ಹೆಸರುಗಳಂತೆಯೂ ಇಲ್ಲ.
ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ಬ್ರಾಹ್ಮಣರ ಅತೀ ಪ್ರಾಚಿನ ಗ್ರಂಥಗಳಲ್ಲಿಯೂ ಕೂಡಾ ಅವುಗಳಲ್ಲಿನ ಕತೆಗಳಲ್ಲಿ ವಿವರಿಸುವ ಪರಿಸರ, ಪ್ರಾಣಿ-ಪಕ್ಷಿಗಳು, ಆಹಾರ ಧಾನ್ಯಗಳು ಮುಂತಾದುವುಗಳು ಭಾರತಕ್ಕೆ ಸರಿಹೊಂದುತ್ತವೆಯೇ ಹೊರತು ಮಧ್ಯ ಎಷ್ಯಾಕ್ಕೆ ಹೊಂದುವುದಿಲ್ಲ. ಉದಾಹರಣೆಗೆ ಬ್ರಾಹ್ಮಣರಿಗೆ ಸಂಬಂಧಿಸಿದ ಕತೆಗಳಲ್ಲಿ ಎಲ್ಲಿಯೂ , “ ಆ ಬಡ ಬ್ರಾಹ್ಮಣನು ತನ್ನ ಒಂಟೆಯನ್ನು ಪಾಪಾಸ್ ಕಳ್ಳಿ ಗಿಡಕ್ಕೆ ಕಟ್ಟಿ ಹಾಕಿ ಅಲ್ಲಿಯೇ ಕುಳಿತು ಖರ್ಜೂರದ ಹಣ್ಣುಗಳನ್ನು ತಿನ್ನತೊಡಗಿದನು,” ಈ ರೀತಿಯಲ್ಲಿ ವರ್ಣನೆ ಇರುವುದಿಲ್ಲ. ಸುತ್ತಲಿನ ಪರಿಸರ, ಪ್ರಾಣಿಗಳು ಮತ್ತು ಆಹಾರ ಭಾರತದ್ದೇ ಇರುತ್ತದೆ.
ಅದ್ದರಿಂದ ಆರ್ಯರು ಭಾರತೀಯರೇ. ಆದರೆ ಆರ್ಯರು ಭಾರತದ ಉಳಿದ ಜನಾಂಗಗಳ ಬುಡಕಟ್ಟಿಗೆ ಸೇರುವುದಿಲ್ಲ. ಆರ್ಯರು ಉತ್ತರ ಭಾರತದಲ್ಲಿಯೇ ಜನ್ಮತಾಳಿ ಅಲ್ಲಿಯೇ ವಿಕಾಸವಾದರು. ದ್ರಾವಿಡರು ವಿಂಧ್ಯ ಪರ್ವತಗಳನ್ನು ದಾಟಿ ಉತ್ತರಕ್ಕೆ ಹೋಗಿ ಅಲ್ಲಿದ್ದ ಆರ್ಯರನ್ನು ನೋಡಿರಲೇ ಇಲ್ಲ. ಶ್ರೀ ರಾಮ , ರಾವಣ ಮುಂತಾದವರು ಹೋದ ಮೇಲೆಯೇ ಅವರಿಗೆ ಉತ್ತರದಲ್ಲಿಯೂ ಜನರಿದ್ದಾರೆ ಎಂದು ಅರಿವಾಗಿದ್ದು.
ಈಗ ನಾನು ಇಲ್ಲಿ ತಿಳಿಸಿರುವ ವಿಷಯಗಳಲ್ಲದೇ ಇನ್ನೂ ಹಲವಾರು ಅಂಶಗಳು ಬ್ರಾಹ್ಮಣರು ನಿಜವಾದ ಭಾರತೀಯರೇ ಎಂಬುದನ್ನು ದೃಡಪಡಿಸಲು ದೊರೆಯುತ್ತವೆ. ತಮಗೆ ಹೊಳೆದರೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ಅದಕ್ಕಿಂತಲೂ ಮುಖ್ಯವಾಗಿ ಬ್ರಾಹ್ಮಣರು ಭಾರತದ ಮೂಲ ನಿವಾಸಿಗಳಾಗಿದ್ದು ಅವರಿಗೆ ಇಲ್ಲಿನ ಎಲ್ಲವನ್ನೂ ಪಡೆಯಲು ಹಕ್ಕಿದೆ ಎಂಬುದನ್ನು ಅರಿತುಕೊಳ್ಳಿ

ಮಂಗಳವಾರ, ನವೆಂಬರ್ 28, 2017

ಶ್ರೀರಾಮನ ದರ್ಶನ ಆಗಿದೆಯೇ


ತುಂಬಾ ಚೆನ್ನಾಗಿದೆ ಓದಿ:
ಒಮ್ಮೆ ಭಕ್ತನೊಬ್ಬ ಗೋಸ್ವಾಮಿ
ತುಳಸೀದಾಸರನ್ನು ಕೇಳುತ್ತಾನೆ...
"ನೀವು  ಇಷ್ಟೆಲ್ಲ ರಾಮನಾಮ ಗುಣಗಾನ  ಮಾಡಿದ್ದೀರಲ್ವಾ, ನಿಮಗೆ ಒಮ್ಮೆಯಾದರೂ  ಶ್ರೀರಾಮನ ದರ್ಶನ ಆಗಿದೆಯೇ?"
ಅದಕ್ಕೆ ತುಳಸೀದಾಸರು, "ಖಂಡಿತವಾಗಿಯೂ ಆಗಿದೆ!" ಎಂದು  ಹೆಮ್ಮೆಯಿಂದ ಹೇಳುತ್ತಾರೆ.
ಭಕ್ತನು  "ಹಾಗಿದ್ದರೆ ನನಗೂ ಶ್ರೀರಾಮದರ್ಶನ  ಸಾಧ್ಯವಿದೆಯೇ?" ಎಂದು ಕೇಳುತ್ತಾನೆ.  ತುಳಸೀದಾಸರು "ಯಾಕಿಲ್ಲ? ನಿನಗೂ ಶ್ರೀರಾಮದರ್ಶನ ಸಾಧ್ಯವಿದೆ! ಅದು ಬಹಳ  ಸುಲಭವಾಗಿಯೂ ಇದೆ. ನೀನು ಈ ಪ್ರಪಂಚದಲ್ಲಿ ಯಾವುದೇ  ವ್ಯಕ್ತಿಯನ್ನಾದರೂ ನೋಡು, ಅಲ್ಲಿ ನಿನಗೆ  ರಾಮನೇ ಕಾಣುತ್ತಾನೆ!" ಎನ್ನುತ್ತಾರೆ.  ಭಕ್ತನಿಗೆ ಅರ್ಥವಾಗಲಿಲ್ಲ. "ಬಿಡಿಸಿ ಹೇಳಿ  ಸ್ವಾಮೀ" ಎಂದು ವಿನಂತಿಸಿದ.  ತುಳಸೀದಾಸರು ಹೇಳುತ್ತಾರೆ-  "ನೋಡು, ಇದಕ್ಕೊಂದು ಸುಲಭಸೂತ್ರ  ಇದೆ. ಈ ಪ್ರಪಂಚದಲ್ಲಿ ಯಾರದೇ  ಹೆಸರಿಗಾದರೂ ಸರಿ ಈ ಸೂತ್ರವನ್ನು ಅಳವಡಿಸಿದರೆ ಕೊನೆಯಲ್ಲಿ ನಿನಗೆ ರಾಮನ ಹೆಸರೇ ಸಿಗುತ್ತದೆ!"
ಭಕ್ತನಿಗೆ ಮತ್ತಷ್ಟು ಕುತೂಹಲ, ಅಚ್ಚರಿ. ಯಾವುದು ಆ ಸೂತ್ರ? ಎಂದು ಕೇಳಿದ. ಆಗ ತುಳಸೀದಾಸರು ಹೇಳುತ್ತಾರೆ:
 ನಾಮ ಚತುರ್ಗುಣ ಪಂಚತತ್ತ್ವ ಮಿಲನ
ತಾಸಾಂ ದ್ವಿಗುಣ ಪ್ರಮಾಣ
ತುಲಸೀ ಅಷ್ಟಸೌಭಾಗ್ಯೇ ಅಂತ ಮೇ
ಶೇಷ ರಾಮ ಹೀ ರಾಮ ||

ಇದರ ಪ್ರಕಾರ, ಯಾರದೇ ಹೆಸರಾದರೂ ಸರಿ, ಅದರಲ್ಲಿರುವ ಅಕ್ಷರಗಳನ್ನು ಎಣಿಸು. ಅದನ್ನು ನಾಲ್ಕರಿಂದ ಗುಣಿಸು (ಚತುರ್ಗುಣ). ಅದಕ್ಕೆ ಐದನ್ನು ಕೂಡಿಸು (ಪಂಚತತ್ತ್ವ ಮಿಲನ). ಆಗ ಬಂದ ಸಂಖ್ಯೆಯನ್ನು ದುಪ್ಪಟ್ಟು ಮಾಡು (ದ್ವಿಗುಣ ಪ್ರಮಾಣ). ಬಂದ ಉತ್ತರವನ್ನು ಎಂಟರಿಂದ ಭಾಗಿಸು (ಅಷ್ಟಸೌಭಾಗ್ಯ).
ಭಾಗಲಬ್ಧ ಎಷ್ಟೇ ಇರಲಿ, ಶೇಷ ಉಳಿಯುವುದು ಎರಡೇ. ಆ ಎರಡು ಅಕ್ಷರಗಳೇ "ರಾಮ"!

ಭಕ್ತನಿಗೆ ಆಶ್ಚರ್ಯವೋ ಆಶ್ಚರ್ಯ. ಮೊದಲು ತನ್ನ ಹೆಸರು "ನಿರಂಜನ" ಎಂದು ನಾಲ್ಕು ಅಕ್ಷರಗಳು ಇದ್ದದ್ದಕ್ಕೆ ಸೂತ್ರವನ್ನು
ಅನ್ವಯಿಸಿದ. 4X4=16; 16+5=21;    21X2=42; 42/8= ಭಾಗಲಬ್ಧ 5. ಶೇಷ 2.
ತನ್ನ ಹೆಂಡತಿಯ ಹೆಸರು "ನಿರ್ಮಲಾ" ಎಂದು  ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ. 3X4=12;  12+5=17; 17X2=34; 34/8 =
ಭಾಗಲಬ್ಧ 4. ಶೇಷ 2.
ತನ್ನ ಮಗಳ ಹೆಸರು "ನಿಧಿ" ಎಂದು ಇದ್ದದ್ದಕ್ಕೆ  ಸೂತ್ರ ಅನ್ವಯಿಸಿದ. 2X4=8; 8+5=13;   13X2=26; 26/8 = ಭಾಗಲಬ್ಧ 3. ಶೇಷ2.

ತನ್ನ ಪಕ್ಕದಮನೆಯವನ ಹೆಸರು "ನಿಖಿಲಾನಂದ"  ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ.  5X4=20; 20+5=25; 25X2=50; 50/8
= ಭಾಗಲಬ್ಧ 6. ಶೇಷ 2.
ಹೌದಲ್ವಾ! ಹೆಸರು ಯಾವುದೇ ಇದ್ದರೂ,  ಎಷ್ಟು ಅಕ್ಷರಗಳೇ ಇದ್ದರೂ  ಕೊನೆಯಲ್ಲುಳಿಯುವುದು ಎರಡಕ್ಷರ  "ರಾಮ" ಮಾತ್ರ! ಭಕ್ತನಿಗೆ ಬಹಳ
ಖುಷಿಯಾಯ್ತು.  ತುಳಸೀದಾಸರ  ಕಾಲಿಗೆರಗಿದ. ಇವತ್ತು ನನಗೆ  ಶ್ರೀರಾಮದರ್ಶನ ಮಾಡಿಸಿದಿರಿ. ಇನ್ನು  ಯಾವಾಗಲೂ ನಾನು ರಾಮನನ್ನೇ ಕಾಣುತ್ತಿರುತ್ತೇನೆ ಎಂದು ಅಲ್ಲಿಂದ ಹೊರಟುಹೋದ.

ಅಷ್ಟಾಗಿ, ತುಳಸೀದಾಸರು ಹೇಳಿದ  ಸೂತ್ರದಲ್ಲಿನ ಸಂಖ್ಯೆಗಳ ಮತ್ತು ಗಣಿತಕ್ರಿಯೆಗಳ ಮಹತ್ವ ಏನು ಗೊತ್ತೇ? ಚತುರ್ಗುಣ = ಧರ್ಮ, ಅರ್ಥ, ಕಾಮ, ಮೋಕ್ಷ  ಎಂಬ ನಾಲ್ಕು ಪುರುಷಾರ್ಥ.   ಪಂಚತತ್ತ್ವ = ಭೂಮಿ, ನೀರು, ಅಗ್ನಿ, ವಾಯು, ಆಕಾಶ ಎಂಬ ಪಂಚಮಹಾಭೂತ.   ದ್ವಿಗುಣ = ಮಾಯೆ ಮತ್ತು ಬ್ರಹ್ಮ.   ಅಷ್ಟಸೌಭಾಗ್ಯ = ಅನ್ನ, ಅರ್ಥ, ಪ್ರಭುತ್ವ,  ಯೌವನ, ವೈಭವ, ಗೃಹ, ವಸ್ತ್ರ, ಆಭರಣ ಎಂಬ  ಎಂಟು ಸೌಭಾಗ್ಯಗಳು.
ಇವೆಲ್ಲದರೊಟ್ಟಿಗೆ ನಾವು ಜೀವನಜಂಜಾಟ   ನಡೆಸಿ, ಗುಣಿಸಿ, ಕೂಡಿಸಿ, ಭಾಗಿಸಿ, ಭೋಗಿಸಿ  ಕೊನೆಗೂ ಉಳಿಯುವ ಶೇಷ "ರಾಮ"ಮಾತ್ರ!
ಜೈ ಶ್ರೀರಾಮ್
"ಭಗವತ್ ಗೀತೆ ನುಡಿ "
ಹುಟ್ಟಿದಾಗ ನೀ ಅಳುತ್ತಿದ್ದೆ,
ಮಡಿದಾಗ ನಿನ್ನವರು ಅಳುತ್ತಿದ್ದರು.
ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
 ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.
 ಹುಟ್ಟಿದಾಗ  ಹುಡುಕುವರು ನಿನಗೆ
ನೂರೆಂಟು ನಾಮ,
ಮಡಿದಮೇಲೆ ಶವ ಎಂದೇ
ನಿನ್ನ ನಾಮ.
ನೀನೇನನ್ನೂ ಗಳಿಸದೇ ಬಂದೆ,
 ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.

ಓ ಮಾನವಾ..
ಮಡಿದಾಗ ಮಣ್ಣಲ್ಲಿ ಮರಳಾಗಿ
ಹೊಗುವ ನೀನು
ನಿನ್ನದು ಎನ್ನಲು ನಿನಗೇನಿದೆ,
ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,
ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,
ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,
ಕಡೆಗೆ ನಿನ್ನ ಅಂತ್ಯ ಸಂಸ್ಕಾರ
ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.
ನಾನು ಎಂದು ಅಹಂಕರಿಸಲು
ನಾನು ಯಾರು ?
ಏನಿದೇ ನನ್ನಲ್ಲಿ ?
ಚಿಂತಿಸುವವನಿಗೆ ದೃಷ್ಟಾಂತವಿದೆ. - One of the best messages I have read
ಸೋಂಪು
♦ ಬಿಸಿ ನೀರಿನೊಂದಿಗೆ ಸೋಂಪು ಮತ್ತು ಜೇನುತುಪ್ಪ ಸೇರಿಸಿ ಕುಡಿದರೆ ಕೆಮ್ಮು ದೂರವಾಗುತ್ತದೆ.
♦ ಊಟದ ಬಳಿಕ ತಿಂದಲ್ಲಿ ಆಹಾರ ಜೀರ್ಣಕ್ಕೆ ಸಹಕಾರಿ.
♦ ಪ್ರತಿದಿನ ತಿಂದಲ್ಲಿ ರಕ್ತ ಶುದ್ದಿ ಖಚಿತ ಅಲ್ಲದೆ ಬಾಯಿಯ ದುರ್ವಾಸನೆ ತಡೆಯಬಹುದು.
♦ ನೀರಿಗೆ ಸೋಂಪು ಹಾಕಿ ಕುದಿಸಿ ಗಟ್ಟಿಯಾಗಿರುವುದನ್ನು ಮುಖಕ್ಕೆ ಹಚ್ಚಿ ತೊಳೆದಲ್ಲಿ ಮುಖದಲ್ಲಿ ಹೊಳಪು ಮೂಡುತ್ತದೆ.
♦ ಜೀರಿಗೆ ಮತ್ತು ಕಲ್ಲು ಸಕ್ಕರೆಯೊಂದಿಗೆ ತಿಂದರೆ ಆಯಾಸ ಕಡಿಮೆಯಾಗುತ್ತದೆ
.
ಮಾಹಿತಿ: ಆರೋಗ್ಯ ಮಾಹಿತಿ
ಪ್ರವಚನ ಸಾರ                   1-11-17
ಗೀತೆಯು ವೇದಕ್ಕಿಂತಲೂ ಶ್ರೇಷ್ಠ.ವೇದಗಳು ಭಗವಂತನ ನಿಃಶ್ವಾಸದಿಂದ ಪ್ರಕಟವಾದರೆ
ಗೀತೆಯು ಅವನ ಬಾಯಿಂದ ಬಂದಿರುತ್ತದೆ.
ಅವನ ಇಚ್ಛೆಯಂತೆಯೇ ಎಲ್ಲವೂ ನಡೆದಿರುವದು
ಎನ್ನುವದೇ ಗೀತೆಯ ಸಾರ.ತೋಟಿಗನು ಬಿಟ್ಟ
ನೀರು ಯಾವದೇ ತಕರಾರು ಮಾಡದೇ ಅವನು
ಬಿಟ್ಟ ಗಿಡಗಳ ಕಡೆ ಹೋಗುತ್ತದೆಯೋ ಹಾಗೆಯೇ
ಪ್ರಯತ್ನ ಮತ್ತು ಪ್ರಾರಬ್ಧಗಳಿಗನುಸಾರವಾಗಿ
ಯಾವದೇ ತಕರಾರು ಮಾಡದೇ ಅವನಿಟ್ಟ ಪರಿಸ್ಥಿತಿಯಲ್ಲಿ ಸಮಾಧಾನದಿಂದ ಇದ್ದು   ಭಗವಂತನ  ಅನುಸಂಧಾನದಲ್ಲಿರುವದೇ
ಗೀತೆಯಿಂದ ಸಾಧಕರು ಕಲಿಯುವದಾಗಿರುತ್ತದೆ.
ಜೀವನದಲ್ಲಿ ಒದಗಿಬರುವ ಸುಖ ದುಃಖ ಗಳಲ್ಲಿ
ಭಗವಂತನ ನಾಮದ ಅನುಸಂಧಾನ ಕಾಯ್ದುಕೊಂಡು ಸಮಾಧಾನದಿಂದ ಪರಿಸ್ಥಿತಿಯನ್ನು
ಎದುರಿಸುವದನ್ನು ಅಭ್ಯಾಸ ಮಾಡಬೇಕು.ಉತ್ತಮ
ನಿಷ್ಠೆಯ ನಿತ್ಯ  ನಿಯಮಿತ ನಾಮಸ್ಮರಣೆಯಿಂದ
ಇದನ್ನು ಸಾಧಿಸಬಹುದು.ಹಾಗೆಯೇ ಗೀತಾಶ್ರವಣ
ಮಾಡುವಾಗ ಅದರಲ್ಲಿ ವರ್ಣಿಸಿದ ಆತ್ಮನಿವೇದನ
,ಸಾಧಕನಿಗೆ ಬರುವ ವಿವಿಧ ಅವಸ್ಥೆಗಳ ಚಿಂತನ
ಮನನ ಮಾಡಬೇಕು.ಸರಳ ಸಾಧನ ನಾಮದ ಅನುಸಂಧಾನದಲ್ಲಿರಬೇಕು.ಹೀಗೆ ಗೀತೆಯು ಸರ್ವ
ಗ್ರಂಥಗಳ ತಾಯಿ ಆಗಿರುತ್ತದೆ.
ಶ್ರೀ ರಾಮ
*ಚಿತ್ತಜನಯ್ಯನ ಚಿಂತಿಸು ಮನವೆ*
ಸರ್ವಾಂತರ್ಯಾಮಿ, ಸರ್ವ ನಿಯಾಮಕ, ಪ್ರೇರಕ ಶ್ರೀಹರಿ.
ಭೋಗ್ಯವಸ್ತುಗಳಲ್ಲಿ ದೇವರು ಇರುವ. ಭೋಗಿಸುವ  ಎನ್ನಲ್ಲಿಯೂ ಇರುವ.
ಭೋಗಮಾಡುವ ಆಯುಷ್ಯವಿರುವಾಗ ಭೋಗ್ಯವಸ್ತುಗಳು ರುಚಿಸುವದೇ ಇಲ್ಲ. ಭೋಗ್ಯವಸ್ತುಗಳು ದೊರೆತಾದಾಗ ಭೋಗಿಸುವ ಜೀವ ಜೀರ್ಣನಾಗಿರುತ್ತಾನೆ‌.
ಯಾವ ಪದಾರ್ಥ ಅಯೋಗ್ಯವಾಗಿರುತ್ತವೋ ಅದುವೇ ಎನ್ನನು ಆಕರ್ಷಿಸುತ್ತವೆ. ಯಾವದು ಎನಗೆ ಯೋಗ್ಯವಾಗಿದೆ ಅದು ಆಕರ್ಷಿಸುವದೇ ಇಲ್ಲ.
ಮತ್ತೆ ಕೆಲವೊಮ್ಮೆ ಭೋಗ್ಯವಸ್ತುವಿಗೂ ಭೋಗಿ ಜೀವನಿಗೂ ಸಂಪರ್ಕವೇ ಆಗುವದಿಲ್ಲ.
ಒಟ್ಟಾರೆಯಾಗಿ ಜೀವ ಮಾತ್ರ ತಾನು ಕಂಗಾಲಾಗೇ ಇರುತ್ತಾನೆ.
"ಇದುವೇ ಎನಗೆ ಭೋಗ್ಯ ಹಾಗೂ ಯೋಗ್ಯ  ಎಂದು ತಿಳಿಯಬೇಕು. ಆ ವಸ್ತು ಎನ್ನನು ಆಕರ್ಷಿಸಬೇಕು. ಅದರಲ್ಲಿ ಅಭಿರುಚಿ ಹುಟ್ಟಬೇಕು. ಸರಿಯಾದ ಸಮಯದಲ್ಲಿ ದೊರೆತಿರಬೇಕು, ಅತ್ಯಂತ ಯೋಗ್ಯರೀತಿಯಲ್ಲಿ ಭೋಗಿಸಿರಬೇಕು." ಇಷ್ಟೆಲ್ಲದಕ್ಕೂ ಒಂದು ಸಂಪರ್ಕ ಕೊಂಡಿ ಇದೆ. ಅದುವೇ  ಎಲ್ಲದರಲ್ಲಿಯೂ ಅಂತರ್ಯಾಮಿ ಶ್ರೀಹರಿ.
*ವಿಷಯಸ್ಥಸ್ಸನ್ ಸರ್ವಜೀವೇಂದ್ರಿಯ ಆಕರ್ಷಕಃ*
ಎನಗೆ ಯೋಗ್ಯವಾದ, ನನ್ನಿಂದ ಭೋಗ್ಯವಾದ ವಿಷಯಗಳಲ್ಲಿದ್ದು ಎನ್ನನ್ನು ಯೋಗ್ಯವಾದ ಕಾಲದಲ್ಲಿ ಆಕರ್ಷಿಸುವವನು ದೇವರೆ. ಎಂಬ ಸುಂದರವಾದ ಚಿಂತನೆಯನ್ನು ಆಚಾರ್ಯರು ಎಮಗೆ ತಿಳುಹಿಸಿಕೊಡುತ್ತಾರೆ.
ಎನ್ನಂತರ್ಯಾಮಿಯೇ, ಭೋಗ್ಯವಿಷಯಾಂತರ್ಯಾಮಿ, ಅವನೇ ಮಾನವನಿಗೂ ಭೋಗ್ಯವಿಷಯಕ್ಕೂ ಸಂಪರ್ಕಸಾಧಿಸುವ ಯೋಗ್ಯ ಕಾಲಾಂತರ್ಯಾಮಿಯೂ ಆಗಿದ್ದಾನೆ. ಈ ಹರಿಯ ಚಿಂತನೆಯಿಂದಲೇನೆ *ಯೋಗ್ಯ ಪದಾರ್ಥವನ್ನು, ಯೋಗ್ಯಕಾಲದಲ್ಲಿ ಅತ್ಯಂತ ಯೋಗ್ಯರೀತಿಯಿಂದ ಅನುಭವಿಸಲು ಸಾಧ್ಯ* ಎಂದು ಅರುಹಿಸಿ ಕೊಡುತ್ತಾರೆ.
ಈ ತರಹದ ಚಿಂತನೆಯ ಮಾರ್ಗದಿಂದ ಪರಿಪೂರ್ಣ ವಿಮುಖರಾದದ್ದಾರಿಂದಲೇ *ಹಲ್ಲು ಇರುವಾಗ ಕಡಲೆ ಇಲ್ಲ, ಕಡಲೆ ದೊರೆತಾಗ ಹಲ್ಲಗಳು ಇಲ್ಲ* ಎಂಬವಸ್ಥೆಯನ್ನು ತಂದುಕೊಂಡಾಗಿದೆ.
ಇಂದಿನಿಂದ ಪ್ರಯತ್ನಪಟ್ಟು ಅತ್ಯಂತ ಹಠದಿಂದ ಒಂದು ಬಾರಿಯಾದರೂ ಚಿಂತಿಸೋಣ.
*✍🏼✍🏼✍🏼ನ್ಯಾಸ*

*ಸಂಸತ್ತೆಂಬ “ಪ್ರಜಾಪ್ರಭುತ್ವ”ದ ದೇಗುಲ

*ಸಂಸತ್ತೆಂಬ “ಪ್ರಜಾಪ್ರಭುತ್ವ”ದ ದೇಗುಲದಲ್ಲಿ ಅಡಕವಾಗಿರುವ ಹಿಂದೂ ಮೌಲ್ಯಗಳ ಬಗ್ಗೆ ನಿಮಗೆ ಗೊತ್ತೇ?*
ಹೌದು, ಪ್ರಜಾಪ್ರಭುತ್ವದ ದೇವಸ್ಥಾನ(‘temple of democracy’) ಎಂದು ಕರೆಸಿಕೊಳ್ಳುವ ದೆಹಲಿಯ ಸಂಸತ್ತಿನಲ್ಲಿಯೂ ಹಿಂದುತ್ವದ ಕಂಪು ಎಲ್ಲೆಲ್ಲೂ ಕಾಣಸಿಗುತ್ತದೆ. ಲೋಕಸಭೆಯ ಸಭಾಪತಿಯ ಸ್ಥಾನವೆನ್ನುವುದು ಅತ್ಯಂತ ಗೌರವಾರ್ಹವಾದ ಉನ್ನತ ಸ್ಥಾನ. ಅವರ ಆಸನದ ಮೇಲ್ಗಡೆ ಬರೆದಿರುವುದು ’ಧರ್ಮಚಕ್ರ ಪ್ರವರ್ತನಾಯ’ (ಧರ್ಮದ ಚಕ್ರವನ್ನು ತಿರುಗಿಸುವುದಕ್ಕಾಗಿ). ನಮ್ಮ ಪ್ರಾಚೀನ ಭಾರತದ ರಾಜರೂ ಧರ್ಮದ ಚಕ್ರ ಸದಾ ತಿರುಗುತ್ತಿರುವಂತೆ ಅಂದರೆ ಧರ್ಮ ಸ್ಥಾಪಿಸಿ ಅಂದರೆ ಒಳ್ಳೆಯ ಆಡಳಿತ ನೀಡಲು ಪ್ರಯತ್ನಿಸುವುದೇ ತಮ್ಮ ಕರ್ತವ್ಯ ಎಂದು ಭಾವಿಸಿದ್ದರು.
ಸ್ವತಂತ್ರಭಾರತದ ನಿರ್ಮಾತೃಗಳೂ(creators) ಅದೇ ದಾರಿಯಲ್ಲಿ ನಮ್ಮ ಸರ್ಕಾರಗಳು ಮುನ್ನಡೆಯಬೇಕೆಂದು ಆಶಿಸಿದ್ದರು. ಅದಕ್ಕೇ, ನಮ್ಮ ಧ್ವಜದಲ್ಲೂ, ಸಂಸತ್ತಿನಲ್ಲೂ ಧರ್ಮಚಕ್ರಕ್ಕೆ ಸ್ಥಾನ ನೀಡಿದರು.
ಸಂಸತ್ ಭವನದಲ್ಲೂ ಹಿಂದು ಮೌಲ್ಯಗಳನ್ನು ನೆನಪಿಸುವ ಬರಹಗಳು ಅನೇಕ ಕಡೆಗಳಲ್ಲಿ ಕಾಣಸಿಗುತ್ತವೆ:
ಒಂದನೇ ದ್ವಾರದಲ್ಲಿ
ಲೋಕ ದ್ವಾರಮಪಾತ್ರಾರ್ಣೂ ಪಶ್ಯೇಮ ತ್ವಾಂ ವಯಂ ವೇರಾ  (ಛಾಂದೋಗ್ಯ ಉಪನಿಷತ್ತಿನಿಂದ ಆರಿಸಿಕೊಂಡದ್ದು)
ಅರ್ಥ: ಜನರ ಕಲ್ಯಾಣಕ್ಕಾಗಿ ಮತ್ತು ಅವರಿಗೆ ಸಾರ್ವಭೌಮತೆಯ ಹಾದಿಯನ್ನು ತೋರಿಸುವುದಕ್ಕಾಗಿ ಬಾಗಿಲು ತೆರೆ.
2. ಕೇಂದ್ರ ಸಭಾಭವನದ ದ್ವಾರದಲ್ಲಿ:
ಅಯಂ ನಿಜಃ ಪರೋವೇತಿ ಗಣನಾ ಲಘುಚೇತಸಾಂ
ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್‌॥  (ಪಂಚತಂತ್ರದಿಂದ ಆರಿಸಿಕೊಂಡದ್ದು)
ಅರ್ಥ: ನಾನು, ಅವರು ಎಂದೆಲ್ಲ ಯೋಚಿಸುವುವವರದ್ದು ಸಂಕುಚಿತ ಮನಸ್ಸು. ಇಡೀ ಪ್ರಪಂಚವೇ ನಮ್ಮ ಕುಟುಂಬ ಎಂದು ಯೋಚಿಸುವುದು ಉದಾರ ಮನಸ್ಸಿನವರ ಲಕ್ಷಣ.
3. ಒಂದನೇ ಲಿಫ್ಟ್‌ನ ಬಳಿಯ ಗುಮ್ಮಟದಲ್ಲಿ:
ನ ಸಾ ಸಭಾ ಯತ್ರ ನ ಸಂತಿ ವೃದ್ಧಾಃವೃ
ದ್ಧಾಃ ನ ತೇ ಯೋ ನ ವದಂತಿ ಧರ್ಮಂ
ಧರ್ಮಃ ಸ ನೋ ಯತ್ರ ನ ಸತ್ಯಮಸ್ತಿ
ಸತ್ಯಂ ನ ತದ್ಯಚ್ಛಲಮಭ್ಯುಪೈತಿ ॥  (ಮಹಾಭಾರತದಿಂದ ಆರಿಸಿಕೊಂಡದ್ದು)
ಅರ್ಥ: ವೃದ್ಧರಿಲ್ಲದ ಸಭೆ ಒಂದು ಸಭೆಯೇ ಅಲ್ಲ. ಧರ್ಮದ ಅನುಸಾರ ಮಾತನಾಡದ ವೃದ್ಧರು ವೃದ್ಧರೇ ಅಲ್ಲ. ಸತ್ಯವಿಲ್ಲದ ಧರ್ಮ ಧರ್ಮವೆನಿಸಲು ಸಾಧ್ಯವಿಲ್ಲ. ಮೋಸ ಮತ್ತು ಕಾಪಟ್ಯವಿದ್ದಲ್ಲಿ ಅದು ಸತ್ಯವೆನಿಸಿಕೊಳ್ಳಲು ಸಾಧ್ಯವಿಲ್ಲ.
4. ಎರಡನೇ ಲಿಫ್ಟಿನ ಬಳಿಯ ಗುಮ್ಮಟದಲ್ಲಿ:
ಸಭಾ ವಾ ನ ಪ್ರವೇಷ್ಟಯ ವಕ್ತವ್ಯಂ ವಾ ಸಮಂಜಸಂ
ಅಬ್ರುವನ್ವಿಬ್ರುವನ್ವಾಪಿ ನರೋ ಭವತಿ ಕಿಲ್ವಿಷಿ ॥  (ಮನುಸ್ಮೃತಿಯಿಂದ ಆರಿಸಿಕೊಂಡದ್ದು)
ಅರ್ಥ: ಒಂದೋ ಸಭೆಯನ್ನು ಪ್ರವೇಶಿಸಬೇಡ ಅಥವಾ ಸಭೆಯಲ್ಲಿದ್ದ ಮೇಲೆ ಧರ್ಮದ ಅನುಸಾರವೇ ಮಾತನಾಡು. ಮಾತನಾಡದಿರುವುದು ಮತ್ತು ಅಧರ್ಮವನ್ನು ಮಾತನಾಡುವುದು ಎರಡೂ ಪಾಪಕಾರ್ಯಗಳೇ.
ನಮ್ಮ ಆಡಳಿತ ಮತ್ತು ಕಾನೂನು ವ್ಯವಸ್ಥೆಯ ಮೇಲೆ ಹಿಂದೂ ಪರಂಪರೆ ಮತ್ತು ಮೌಲ್ಯಗಳ ಪ್ರಭಾವವಿರುವುದು ಹಲವು ಸಂಸ್ಥೆಗಳು ಅಂಗೀಕರಿಸಿರುವ ತಮ್ಮ  ಪರಮೋಚ್ಚ ಧ್ಯೇಯವನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ.
1.ಭಾರತ ಸರ್ಕಾರ: ಸತ್ಯಮೇವ ಜಯತೇ
2.ಲೋಕಸಭೆ: ಧರ್ಮಚಕ್ರ ಪ್ರವರ್ತನಾಯ
3.ಸರ್ವೋಚ್ಚ ನ್ಯಾಯಾಲಯ: ಯತೋ ಧರ್ಮಸ್ತತೋ ಜಯಃ
4.ಆಲ್ ಇಂಡಿಯಾ ರೇಡಿಯೋ: ಬಹುಜನಹಿತಾಯ
5.ದೂರದರ್ಶನ: ಸತ್ಯಂ ಶಿವಂ ಸುಂದರಂ
6.ಭಾರತೀಯ ಭೂಸೇನೆ: ಸೇವಾ ಅಸ್ಮಾಕಂ ಧರ್ಮಃ
7.ಭಾರತೀಯ ನೌಕಾಸೇನೆ: ಶಂ ನೋ ವರುಣಃ
8.ಭಾರತೀಯ ವಾಯುಸೇನೆ: ನಭಃ ಸ್ಪೃಶಂ ದೀಪ್ತಂ
9.ದೆಹಲಿ ವಿಶ್ವವಿದ್ಯಾಲಯ: ನಿಷ್ಠ ಧೃತಿ ಸತ್ಯಂ
10.ಭಾರತೀಯ ಜೀವವಿಮಾ ನಿಗಮ: ಯೋಗಕ್ಷೇಮಂ ವಹಾಮ್ಯಹಂ
ಈ ಧ್ಯೇಯವಾಕ್ಯಗಳಾವುವು ಯಾವುದೇ ಮತದ ಸಿದ್ಧಾಂತಗಳನ್ನು ಹೇಳುವಂಥವಲ್ಲ. ಅವು ಜೀವನ ಮೌಲ್ಯಗಳು. ಮಾನವ ಧರ್ಮವನ್ನು ಬೋಧಿಸುವ ನಮ್ಮ ಪ್ರಾಚೀನ ಪರಂಪರೆಯಿಂದ ಬಂದವುಗಳಾಗಿವೆ. ಈ ಹಿಂದೂ ಜೀವನ ಮೌಲ್ಯಗಳು ಪ್ರಜಾಪ್ರಭುತ್ವಾಧಾರಿತವಾದ ನಮ್ಮ ರಾಜ್ಯವ್ಯವಸ್ಥೆಯ ಸುಭದ್ರ ಭವಿಷ್ಯಕ್ಕೆ ಅಗತ್ಯವೆಂದು ನಮ್ಮ ಆಧುನಿಕ ಭಾರತದ ನಿರ್ಮಾತೃಗಳು(creators) ಭಾವಿಸಿದ್ದರು.

ಬಾಳೆಹಣ್ಣಿನ ಈ 12 ವೈಶಿಷ್ಟ್ಯ


 *ಬಾಳೆಹಣ್ಣಿನ ಈ 12 ವೈಶಿಷ್ಟ್ಯಗಳನ್ನು ಕೇಳಿದ ಕೂಡಲೆ ಒಂದು ನಾಲ್ಕು ತಿಂದು ಬಿಡ್ತಿರಿ!* 
*ಉದಾ: ಜೀವನದಲ್ಲಿ ಒತ್ತಡ ಜಾಸ್ತಿ ನಾ? ಇದಕ್ಕಿಂತ ಔಷಧಿ ಇಲ್ಲ.*
*1. ಬಾಳೆಹಣ್ಣಲ್ಲಿ ಟ್ರಿಪ್ಟೋಫಾನ್ ಎಂಬ ಅಮೀನೋ ಆಸಿಡ್ ಮತ್ತು ವಿಟಮಿನ್ ಬಿ-6 ಇರುತ್ತವೆ. ಇವೆರಡೂ ಸೇರಿ ನಮ್ಮ ದೇಹದಲ್ಲಿ ಸೆರಟೋನಿನ್ ಅನ್ನುವ ಕೆಮಿಕಲ್ ಹೆಚ್ಚಿಸುತ್ತದೆ. ಇದರಿಂದ ಖಿನ್ನತೆ, ಬೇಜಾರು, ಮುಂತಾದವೆಲ್ಲ ಕಡಿಮೆಯಾಗುತ್ತವೆ. ಈ ಸೆರಟೋನಿನ್ ಮಾತ್ರೆಗಳೂ ಈಗ ಸಿಗುತ್ತವೆ. ಆದರೆ ನೇರವಾಗಿ ಬಾಳೆಹಣ್ಣು ತಿನ್ನುವುದೇ ಒಳ್ಳೇದು ಅಂತ ಡಾಕ್ಟರುಗಳೂ ಒಪ್ತಾರೆ.* 
*2. ಬಾಳೆಹಣ್ಣು ದೇಹಕ್ಕೆ ಬಹಳ ಶಕ್ತಿ ಕೊಡುತ್ತೆ. ಎರಡೇ ಎರಡು ತಿಂದರೆ ಸಾಕು, 90 ನಿಮಿಷ ಜಿಮ್ಮಲ್ಲಿ ಕಸರತ್ತು ಮಾಡಕ್ಕೆ ಬೇಕಾಗುವಷ್ಟು ಶಕ್ತಿ ಸಿಗುತ್ತೆ. ಕೋತಿಗಳಿಗೆ ಎಷ್ಟು ಶಕ್ತಿ ಇದೆ ಅಂತ ಗೊತ್ತು ತಾನೆ?* 
*3. ಹಿಂದಿನ ದಿನ ಕುಡಿದಿದ್ದರೆ ಬೆಳಗ್ಗೆ ಬಾಳೆಹಣ್ಣು ತಿನ್ನೋದರಿಂದ ಕುಡಿತದ ಅಮಲು ಕಡಿಮೆಯಾಗುತ್ತೆ. ಯಾಕಂದ್ರೆ ಅದರಲ್ಲಿ ಪೊಟಾಸಿಯಂ ಇರುತ್ತದೆ.* 
*4. ಮನುಷ್ಯನ DNAಗೂ ಬಾಳೆಹಣ್ಣಿನ DNAಗೂ 50% ಸಾಮ್ಯತೆ ಇರುತ್ತಂತೆ! ಯಾರಿಗಾದರೂ ಬಾಳೆಹಣ್ಣು ಕೊಟ್ಟರೆ ಅದರಲ್ಲಿ ನಮ್ಮ ಅಂಶವೂ ಇರುತ್ತೆ ಅಂತ ಆಯಿತು!* 
*5. ದೇಹದಲ್ಲಿ ಪೊಟಾಸಿಯಂ ಮಟ್ಟ ಮಿತಿಮೀರಿ ಮನುಷ್ಯ ಸಾಯಕ್ಕೆ 480 ಬಾಳೆಹಣ್ಣು ತಿನ್ನಬೇಕಾಗುತ್ತೆ. ಅಂದರೆ ಎಂತೆಂಥಾ ಹೊಟ್ಟೇಬಾಕರಿಗೂ ಬಾಳೆಹಣ್ಣಿಂದ ಏನೂ ಆಗಲ್ಲ, ಎಷ್ಟು ತಿಂದರೂ ತೊಂದರೆ ಇಲ್ಲ ಅಂತ ಅರ್ಥ :-)* 
*6. ನೈಸರ್ಗಿಕವಾಗಿ ಜೀವನದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಒತ್ತಡದಿಂದ ಆಗುವ ಎಲ್ಲಾ ದೈಹಿಕ ಮತ್ತು ಮಾನಸಿಕ ತೊಂದರೆಗಳಿಗೂ ಇದು ಸಿದ್ಧೌಷಧ. ಅದಕ್ಕೇ ಬಾಳೆಹಣ್ಣು ಪ್ರಪಂಚದಲ್ಲೆಲ್ಲ ಜನ ಇಷ್ಟ ಪಟ್ಟು ತಿನ್ನೋದು.* 
*7. ಬಾಳೆಹಣ್ಣಲ್ಲಿ ಒಂದು ಚೂರೂ ಕೊಬ್ಬು, ಸೋಡಿಯಂ ಅಥವಾ ಕೊಲೆಸ್ಟ್ರಾಲ್ ಇರೋದಿಲ್ಲ. ಬದಲಾಗಿ ನಾರಿನಂಶ, ವಿಟಮಿನ್ ಸಿ ಮತ್ತು ಬಿ-6, ಪೊಟಾಸಿಯಂ ಮತ್ತು ಮ್ಯಾಂಗನೀಸ್ ಇರುತ್ತವೆ. ಎಂದರೆ ಬಹಳ ಒಳ್ಳೇದು ಅಂತ ಅರ್ಥ!* 
*8. ಬಾಳೆಹಣ್ಣು ತಿನ್ನೋದರಿಂದ ಹೃದಯಾಘಾತ, ಲಕ್ವಾ ಹೊಡೆಯುವುದು, ಕ್ಯಾನ್ಸರ್ ಬರುವುದು - ಇವೆಲ್ಲದರ ಸಾಧ್ಯತೆ ಕಡಿಮೆಯಾಗುತ್ತದೆ. ಆದ್ದರಿಂದ ಯಾಕೆ ಕಾಯ್ತಿದೀರಿ? ಬೇರೆಬೇರೆ ರೀತಿಯಲ್ಲಿ ಈ ಹಣ್ಣು ತಿನ್ನೋ ಪ್ರಯೋಗಗಳನ್ನ ಮಾಡಿ!* 
*9. ಬಾಳೆಹಣ್ಣಲ್ಲಿ 75% ನೀರು ತುಂಬಿರುತ್ತದೆ! ಗೊತ್ತಾಗುವುದೇ ಇಲ್ಲ, ಅಲ್ಲವಾ?* 
*10. ಪ್ರಪಂಚದ 100ಕ್ಕಿಂತ ಹೆಚ್ಚು ದೇಶಗಳಲ್ಲಿ ಬಾಳೆಹಣ್ಣು ಬೆಳೆಯುತ್ತದೆ. ಸುಮಾರು 300 ಬೇರೆಬೇರೆಯ ತಳಿಗಳು ಸಿಗುತ್ತವೆ.* 
*11. ಬಾಳೆಗಿಡ ನಿಜಕ್ಕೂ ಒಂದು ಗಿಡ. 20-25 ಅಡಿ ಎತ್ತರ ಬೆಳೆದರೂ ಇದನ್ನ ಮರ ಅನ್ನೋದಕ್ಕೆ ಆಗಲ್ಲ, ಯಾಕಂದರೆ ಬೇರೆ ಮರದಂತೆ ಇದಕ್ಕೆ ಮರದ ಕಾಂಡ ಇರೋದಿಲ್ಲ, ದಿಂಡಿರುತ್ತದೆ. ಅಷ್ಟೇ ಅಲ್ಲ, ಈ ದಿಂಡನ್ನು ಕೂಡ ನಾವು ತಿನ್ತೀವಿ.* 
*12. ಬಾಳೆ ಎಲೆ ಮೇಲೆ ಊಟ ಮಾಡುವುದರಿಂದ ಮೇಲಿನ ಹಲವು ಒಳ್ಳೆಯ ಅಂಶಗಳ ಲಾಭ ಪಡೆದುಕೊಳ್ಳಬಹುದು* 
ಸಂಗ್ರಹ

ಅಪಾಯಕಾರಿ ರೋಗ

ಮೂತ್ರದಲ್ಲಿ ರಕ್ತಸ್ರಾವ ಉಂಟಾಗುವುದು ಅಪಾಯಕಾರಿ ರೋಗದ ಚಿಹ್ನೆ!
ಮಾನವನ ದೇಹವು ಹಲವಾರು ರೋಗಗಳಿಂದ ನರಳುತ್ತಿರುತ್ತದೆ. ಕೆಲವು ರೋಗಗಳು ಅಷ್ಟು ಗಂಭೀರವಾಗಿರದೆ ಇರಬಹುದು. ಇನ್ನೂ ಕೆಲವು ರೋಗಗಳಿಗೆ ಹೆಚ್ಚು ಚಿಂತಿಸಬೇಕಾಗುತ್ತದೆ. ಹಾಗೆಯೇ ಅದರ ಚಿಕಿತ್ಸೆಗೂ ಬಹಳಷ್ಟು ಕಷ್ಟಪಡಬೇಕಾಗುವುದು. ಇಲ್ಲವಾದರೆ ಅದು ನಿಮ್ಮ ಜೀವಕ್ಕೆ ಬೆದರಿಕೆ ಹಾಕುವ ಸಾಧ್ಯತೆಯೂ ಇರುತ್ತದೆ. ಯಾವುದೇ ರೋಗದ ಆರಂಭಿಕ ಹಂತದಲ್ಲಿ ವೈದ್ಯರ ಸಲಹೆ ಹಾಗೂ ಚಿಕಿತ್ಸೆಗೆ ಒಳಗಾದರೆ ಬಹುಬೇಗ ಗುಣಪಡಿಸಬಹುದು. ಇಲ್ಲವಾದರೆ ಗಂಭೀರ ಸ್ಥಿತಿ ತಲುಪುವುದು.
ಕೆಲವು ರೋಗಗಳನ್ನು ನಾವು ಆರಂಭದಲ್ಲಿ ನಿರ್ಲಕ್ಷಿಸಬಹುದು. ಆದರೆ ಅದು ಕ್ರಮೇಣ ಗಂಭೀರ ಅಸ್ವಸ್ಥತೆಗೆ ಕಾರಣವಾಗುತ್ತದೆ. ಅಂತಹ ಕಾಯಿಲೆಗಳಲ್ಲಿ ಮೂತ್ರದಲ್ಲಿ ರಕ್ತ ಸ್ರಾವ ಉಂಟಾಗುವುದು ಒಂದು. ಸಾಮಾನ್ಯವಾಗಿ ಮೂತ್ರದಲ್ಲಿ ರಕ್ತ ಸ್ರಾವ ಉಂಟಾಗುತ್ತದೆ ಎಂದರೆ ಇದು ಸೂಕ್ಷ್ಮ ಹಾಗೂ ಪರಿಶೀಲಿಸಲೇ ಬೇಕಾದ ಆರೋಗ್ಯ ಸಮಸ್ಯೆಯಾಗಿರುತ್ತದೆ. ಇದರ ಕುರಿತು ಹೆಚ್ಚು ಆರೈಕೆ ಹಾಗೂ ಕಾಳಜಿ ವಹಿಸಬೇಕಾಗುವುದು. ಕೆಲವು ಸಂದರ್ಭದಲ್ಲಿ ರಕ್ತಸ್ರಾವ ಉಂಟಾಗುವುದು ಬರಿಗಣ್ಣಿಗೆ ಕಾಣುವುದಿಲ್ಲ. ಆಗ ರೋಗವು ಹೆಚ್ಚು ಸಂಕೀರ್ಣವಾಗುವುದು.
ಮೂತ್ರದಲ್ಲಿ ಕೆಂಪು ಬಣ್ಣವನ್ನು ನೀವು ಗಮನಿಸಿದಾಗ, ಯಾವುದೇ ವಿಳಂಬವಿಲ್ಲದೆ ನೀವು ವೈದ್ಯರನ್ನು ನೋಡಬೇಕು. ಮೂತ್ರದಲ್ಲಿ ರಕ್ತದ ಕಾರಣಗಳನ್ನು ನೀವು ಹೊಂದಿರದಿದ್ದಲ್ಲಿ ರಕ್ತದಲ್ಲಿ ಮೂತ್ರದ ಸರಿಯಾದ ಚಿಕಿತ್ಸೆಯನ್ನು ಪಡೆಯುವುದು ಕಷ್ಟ. ಪುರುಷರು ಮತ್ತು ಮಹಿಳೆಯರಲ್ಲಿ ಈ ಸಮಸ್ಯೆಗಳು ಬಹಳ ಸಾಮಾನ್ಯವಾಗಿರುವುದರಿಂದ, ಮೂತ್ರದಲ್ಲಿ ಅಥವಾ ಮಲದಲ್ಲಿನ ರಕ್ತದ ಕಾರಣಗಳನ್ನು ತಿಳಿದುಕೊಳ್ಳುವುದಕ್ಕಿಂತ ಉತ್ತಮ ಪರಿಹಾರವಿಲ್ಲ. ಈ ಸಮಸ್ಯೆಗೆ ಕಾರಣ ಹಾಗೂ ಪರಿಹಾರದ ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.
..
ಮೂತ್ರದ ಸೋಂಕು (ಯುಟಿಐ)
ಮಹಿಳೆಯರಿಗೆ ಹೆಚ್ಚು ಕಾಡಬಹುದಾದ ಒಂದು ಸಾಮಾನ್ಯ ಸಮಸ್ಯೆ. ಮೂತ್ರದಲ್ಲಿ ಕೆಂಪು ಬಣ್ಣವು ಇತರ ಕೆಲವು ರೋಗಲಕ್ಷಣಗಳೊಂದಿಗೆ ನೀವು ಗಮನಿಸಬಹುದು. ಇದು ಯುಟಿಐ ಎಂದು ಕರೆಯಲ್ಪಡುವ ಮೂತ್ರದ ಸೋಂಕಿನಿಂದ ಉಂಟಾಗುತ್ತದೆ. ಯಾವುದೇ ಅನುಮಾನವಿಲ್ಲದೆ ಇದು ಮೂತ್ರದಲ್ಲಿ ರಕ್ತದ ಅಪಾಯಕಾರಿ ಕಾರಣಗಳಲ್ಲಿ ಒಂದು.

ಮೂತ್ರಪಿಂಡದಲ್ಲಿ ಕಲ್ಲು
ಮೂತ್ರದಲ್ಲಿ ರಕ್ತ ಹೊಂದುವ ಇನ್ನೊಂದು ಪ್ರಮುಖ ಕಾರಣ ಮೂತ್ರಪಿಂಡದಲ್ಲಿ ಕಲ್ಲು. ಸಾಮಾನ್ಯವಾಗಿ ಮೂತ್ರಪಿಂಡದಲ್ಲಿ ಕಲ್ಲುಗಳು ಸಂಗ್ರಹಿಸಿದಾಗ ಮೂತ್ರದಲ್ಲಿ ರಕ್ತಸ್ರಾವ ಉಂಟಾಗುವುದು. ಮೂತ್ರವಿಸರ್ಜನೆಯ ನೈಸರ್ಗಿಕ ಪ್ರಕ್ರಿಯೆಯನ್ನು ಅಡ್ಡಿಪಡಿಸು ತ್ತದೆ. ಇದನ್ನು ಮೊದಲಿಗೆ ಔಷಧಿಗಳೊಂದಿಗೆ ಚಿಕಿತ್ಸೆ ನೀಡಬಹುದು. ಈ ಸಮಸ್ಯೆಗೆ ಅಂತಿಮವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಬೇಕಾಗುವುದು.

ಕಿಡ್ನಿ ಅಥವಾ ಗಾಲ್ ಬಾರ್ಡ್ರ್ ಗಳಲ್ಲಿ ಗೆಡ್ಡೆಗಳು
ಇದು ಮೂತ್ರದಲ್ಲಿ ರಕ್ತದ ತೀವ್ರವಾದ ಕಾರಣಗಳಲ್ಲಿ ಒಂದಾಗಿದೆ. ಆಗಾಗ್ಗೆ, ಇದನ್ನು ಸೈಟೋಲಜಿಯನ್ನು ವೈದ್ಯಕೀಯವಾಗಿ ಕರೆಯಲಾಗುತ್ತದೆ. ಹೆಚ್ಚಿನ ಸಮಯದಲ್ಲಿ ಇದನ್ನು ಶಸ್ತ್ರ ಚಿಕಿತ್ಸೆಯ ಮೂಲಕವೇ ಗುಣಪಡಿಸಬೇಕಾಗುತ್ತದೆ.

ಗ್ಲೋಮೆರುಲೋನೆಫೆರಿಟಿಸ್ ಅಥವಾ ಗ್ಲೋಮೆರಲರ್ ನೆಫ್ರೈಟಿಸ್
ಮೂತ್ರ ಮತ್ತು ಮಲದಲ್ಲಿ ರಕ್ತ ಸ್ರಾವ ಉಂಟಾಗುತ್ತಿದೆ ಎಂದಾದರೆ ಗ್ಲೋಮೆರಲರ್ ನೆಫ್ರೈಟಿಸ್ ಸಮಸ್ಯೆ ಇದೆ ಎಂದು ಸಹ ಹೇಳಬಹುದು. ಇದು ಸಾಮಾಣ್ಯವಾಗಿ ಮಕ್ಕಳಲ್ಲಿ ಮತ್ತು ವೃದ್ಧರಲ್ಲಿ ಕಂಡು ಬರುತ್ತದೆ. ವೃದ್ಧರಿಗೆ ಹೆಚ್ಚು ಕಾಡುವ ಸಮಸ್ಯೆ ಇದು. ಇದಕ್ಕೆ ಸೂಕ್ತ ರೀತಿಯ ಚಿಕಿತ್ಸೆ ಪಡೆದುಕೊಳ್ಳಬೇಕಾಗುವುದು.

ಸಿಸ್ಟಿಕ್ ಬೆಳವಣಿಗೆ
ಸಿಸ್ಟಿಕ್ ಬೆಳವಣಿಗೆ ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಇದು ಅವರಿಗೆ ಸಾಮಾನ್ಯ ಅಸ್ವಸ್ಥತೆಯಲ್ಲಿ ಒಂದಾಗಿರುತ್ತದೆ. ಮೂತ್ರದ ರಕ್ತಸ್ರಾವ ಉಂಟಾಗುವಾಗ ಬಹಳ ನೋವು ಕಾಣಿಸಿಕೊಳ್ಳುವುದು. ಸಾಮಾನ್ಯವಾಗಿ ಮೂತ್ರ ಹಾದುಹೋಗುವಾಗ ತೊಂದರೆ ಉಂಟುಮಾಡುತ್ತವೆ. ಪರಿಣಾಮವಾಗಿ ಆಗ ಮೂತ್ರದಲ್ಲಿ ರಕ್ತಸ್ರಾವವಾಗುತ್ತದೆ. ಮೂತ್ರ ಮತ್ತು ಸ್ಟೂಲ್ನಲ್ಲಿ ರಕ್ತದ ಸಾಮಾನ್ಯ ಕಾರಣಗಳು ಇವು.
ರಕ್ತದ ಕಲೆಗಳು ಗಡ್ಡೆಕಟ್ಟದೇ ದ್ರವರೂಪದಲ್ಲಿಯೇ ಇದ್ದಂತೆ ತೋರಿದರೆ
ಮೂತ್ರದಲ್ಲಿ ರಕ್ತದ ಕಲೆಗಳು ಗಡ್ಡೆಕಟ್ಟದೇ ದ್ರವರೂಪದಲ್ಲಿಯೇ ಇದ್ದಂತೆ ತೋರಿದರೆ (ಇದನ್ನೂ ಪರೀಕ್ಷೆಗಳಿಂದ ಮಾತ್ರ ಕಂಡುಕೊಳ್ಳಲು ಸಾಧ್ಯ) ಇದು ಮೂತ್ರಕೋಶ ಮತ್ತು ಮೂತ್ರನಾಳಗಳ ಒಳಗಣ ಸೋಂಕಿನ ಸಂಕೇತವಾಗಿದೆ. ಇದಕ್ಕೆ ಮದ್ಯಪಾನ ನೇರವಾಗಿ ಕಾರಣವಾಗಿದ್ದು ಈ ಸ್ಥಿತಿ ಬಂದ ತಕ್ಷಣ ಅನಿವಾರ್ಯವಾಗಿ ಮದ್ಯಪಾನವನ್ನು ನಿಲ್ಲಿಸಲೇಬೇಕಾಗುತ್ತದೆ. ಅಷ್ಟೇ ಅಲ್ಲ, ಆಮ್ಲೀಯವಾದ ಯಾವುದೇ ಪಾನೀಯವಾದ ಕಾಫಿ, ಟೀ, ಲಿಂಬೆ ಜಾತಿಯ ಹಣ್ಣುಗಳ ರಸ ಮೊದಲಾದವೆಲ್ಲಾ ವರ್ಜಿತವಾಗುತ್ತವೆ. ಕೇವಲ ನೀರು ಮಾತ್ರ ಈ ಸ್ಥಿತಿಯಿಂದ ಹೊರತರಬಲ್ಲುದು. ಆದರೂ ವೈದ್ಯರ ಬಳಿ ಸಲಹೆ ಪಡೆದು ಚಿಕಿತ್ಸೆ ಪಡೆಯುವುದು ಅನಿವಾರ್ಯ.
ನೆನಪಿರಲಿ  ನಿಮಗೆ ಸಾಮಾನ್ಯವಾಗಿ ಆನುವಂಶಿಯವಾಗಿ ಈ ಕಾಯಿಲೆಗಳು ಬರಬಹುದು. ಈ ಸಮಸ್ಯೆಗಳು ಉಂಟಾದಾಗ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು. ಕುಡಗೋಲು ಕಣ ರೋಗ, ಹೆಮಟುರಿಯಾ ಮತ್ತು ಅಸಹಜ ಮುಟ್ಟಿನ ಚಕ್ರಗಳನ್ನು ಮೂತ್ರದಲ್ಲಿ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದಕ್ಕೆ ಇತರ ಕಾರಣಗಳು ಆಗಿರಬಹುದು. ಹಾಗಾಗಿ ಮೂತ್ರದಲ್ಲಿ ರಕ್ತ ಕಂಡು ಬಂದಾಗ ಸರಿಯಾದ ಚಿಕಿತ್ಸೆಯನ್ನು ಪಡೆಯಲು ನೀವು ಎಂದಿಗೂ ನಿರ್ಲಕ್ಷಿಸಬಾರದು
ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವ ಅಭ್ಯಾಸ ಬೆಳೆಸಿ, ಆರೋಗ್ಯವಾಗಿರಿ...
ಆಯುರ್ವೇದ ಚಿಕಿತ್ಸಾ ವಿಧಾನದಲ್ಲಿ ಭಾರತ ಅತ್ಯಂತ ಶ್ರೇಷ್ಠ ಸ್ಥಾನವನ್ನು ಪಡೆದುಕೊಂಡಿದೆ. ಪುರಾತನ ಕಾಲದಿಂದಲೂ ಬಳಸುತ್ತಿದ್ದ ಕೆಲವು ಚಿಕಿತ್ಸಾ ವಿಧಾನ ಹಾಗೂ ಪದ್ಧತಿಗಳು ಇಂದಿಗೂ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಅಂತಹ ಒಂದು ಅತ್ಯುತ್ತಮ ಪದ್ಧತಿಗಳಲ್ಲಿ ಒಂದಾಗಿರುವುದು "ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯುವುದು". ಪುರಾತನ ಕಾಲದಲ್ಲಿ ತಾಮ್ರದ ತಟ್ಟೆಯಲ್ಲಿಯೇ ಊಟ ಮಾಡುವುದು, ನೀರು ಕುಡಿಯುತ್ತಿದ್ದರು.
ಹೀಗೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು ಎನ್ನುವ ನಂಬಿಕೆಯಿದೆ. ಈ ನಂಬಿಕೆಯು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಕಫಾ, ಪಿತ್ತಾ ಮತ್ತು ವಾತವು ಸಮತೋಲನದಲ್ಲಿರುತ್ತದೆ.
ಗಣನೀಯವಾಗಿ ತಾಮ್ರದ ಪಾತ್ರೆಯ ನೀರನ್ನು ಕುಡಿಯುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಒಂದು ಉತ್ತಮ ಪದ್ಧತಿ. ಇದನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ ತಾಮ್ರವು ದೇಹಕ್ಕೆ ಅಗತ್ಯವಾದ ಒಂದು ಲೋಹ. ಈ ಲೋಹದ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿಟ್ಟು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಯನ್ನು ಪರಿಹರಿಸಬಹುದು.
ಜ್ಯೋತಿಷ್ಯ: ಚಿನ್ನ, ಬೆಳ್ಳಿಗಿಂತಲೂ 'ತಾಮ್ರದ ಉಂಗುರ' ಶ್ರೇಷ್ಠ!
ಈ ಹವ್ಯಾಸದಿಂದ ಯಾವೆಲ್ಲಾ ಸಮಸ್ಯೆಗಳನ್ನು ದೂರ ಇಡಬಹುದು? ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಈ ಕೆಳಗಿನ ವಿವರಣೆಯನ್ನು ಪರಿಶೀಲಿಸಿ...
ಬ್ಯಾಕ್ಟೀರಿಯಾವನ್ನು ಕೊಲ್ಲುವುದು
ತಾಮ್ರವನ್ನು ಸ್ವಭಾವದಲ್ಲಿ ಒಲಿಗೊಡೈನಾಮಿಕ್ ಎನ್ನಲಾಗುತ್ತದೆ ಮತ್ತು ಇದು ಬ್ಯಾಕ್ಟೀರಿಯಾವನ್ನು ತುಂಬಾ ಪರಿಣಾಮಕಾರಿಯಾಗಿ ಕೊಲ್ಲುತ್ತದೆ. ಇದರಿಂದಾಗಿ ಸಾಮಾನ್ಯ ನೀರಿನಿಂದ ಬರುವ ಭೇದಿ, ಆಮಶಂಕೆ ಮತ್ತು ಕಾಮಾಲೆಯನ್ನು ತಡೆಯುತ್ತದೆ. ನೀರು ಕಲುಷಿತವಾಗಿದೆಯೆಂದು ನಿಮಗನಿಸಿದರೆ ಆಗ ಅದನ್ನು ಕುಡಿಯುವ ಮೊದಲು ತಾಮ್ರದ ಪಾತ್ರೆಯಲ್ಲಿಡಿ ಮತ್ತು ಇದರ ಬಳಿಕ ಆರೋಗ್ಯಕರ ಮತ್ತು ಸ್ವಚ್ಛ ನೀರನ್ನು ಕುಡಿಯಿರಿ.
  
ಥೈರಾಯ್ಡ್ ನಿಯಂತ್ರಿಸುತ್ತದೆ
ಥೈರಾಯ್ಡ್ ಕಾಯಿಲೆ ಎದುರಿಸುವ ಹೆಚ್ಚಿನ ಜನರಲ್ಲಿ ಕಾಣಿಸುವ ಸಾಮಾನ್ಯ ಸಮಸ್ಯೆಯೆಂದರೆ ಅವರ ದೇಹದಲ್ಲಿ ತಾಮ್ರದ ಮಟ್ಟ ತುಂಬಾ ಕಡಿಮೆಯಿರುತ್ತದೆ. ತಾಮ್ರದ ಕೊರತೆಯಿಂದಾಗಿ ಗ್ರಂಥಿಗಳ ಕಾರ್ಯಕ್ಕೆ ತೊಂದರೆಯಾಗಬಹುದು. ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟಿರುವ ನೀರನ್ನು ಕುಡಿದರೆ ಈ ಸಮಸ್ಯೆ ನಿವಾರಣೆಯಾಗಿ, ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಥೈರಾಯ್ಡ್ ಕಾಯಿಲೆ ಬಗ್ಗೆ ಮತ್ತಷ್ಟು ತಿಳಿಯಿರಿ
  
ಸಂಧಿವಾತ ಗುಣಪಡಿಸುತ್ತದೆ
ತಾಮ್ರದಲ್ಲಿ ಉರಿಯೂತ ವಿರೋಧಿ ಗುಣಗಳು ಹೆಚ್ಚಾಗಿವೆ. ಈ ವಿಶೇಷ ಗುಣದಿಂದ ಗಂಟುಗಳಲ್ಲಿ ಸಂಧಿವಾತ ಮತ್ತು ರೂಮಟಾಯ್ಡ್ ಆರ್ಥ್ರೈಟಿಸ್ ನಿಂದ ಉಂಟಾಗುವ ಸೆಳೆತ, ನೋವನ್ನು ಕಡಿಮೆ ಮಾಡುತ್ತದೆ. ತಾಮ್ರದ ಪಾತ್ರೆಯಲ್ಲಿ ಶೇಖರಿಸಿರುವ ನೀರನ್ನು ಕುಡಿದರೆ ಸೆಳೆತ, ನೋವನ್ನು ಕಡಿಮೆ ಮಾಡಬಹುದು. ಸಂಧಿವಾತ ಹಾಗೂ ರೂಮಟಾಯ್ಡ್ ಆರ್ಥ್ರೈಟಿಸ್ ಬಗ್ಗೆ ಮತ್ತಷ್ಟು ತಿಳಿಯಿರಿ.
  
ವೇಗವಾಗಿ ಗಾಯಗಳನ್ನು ಗುಣಪಡಿಸುತ್ತದೆ
ತಾಮ್ರವು ಹೊಸ ಕೋಶಗಳನ್ನು ಅಭಿವೃದ್ಧಿಪಡಿಸಲು ಮತ್ತು ತ್ವರಿತವಾಗಿ ಬೆಳೆಯಲು ಸಹಾಯ ಮಾಡುತ್ತದೆ, ಇದರಿಂದಾಗಿ ಗಾಯಗಳು ಸುಲಭವಾಗಿ ಗುಣವಾಗಲು ಸಹಾಯ ಮಾಡುತ್ತದೆ. ಇದು ಸೋಂಕಿನ ಬೆಳವಣಿಗೆಯನ್ನು ತಡೆಯುವ ವಿರೋಧಿ ವೈರಸ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.
  
ಮಿದುಳಿನ ಚಟುವಟಿಕೆ ಪ್ರಚೋದಿಸುತ್ತದೆ
ಮಿದುಳಿನಲ್ಲಿನ ನರಕೋಶಗಳ ನಡುವಿನ ಅಂತರವು ರಕ್ಷಣೆಗಾಗಿ ಮೈಲಿನ್ ಕೋಶಗಳಿಂದ ಮುಚ್ಚಲ್ಪಟ್ಟಿರುತ್ತದೆ. ಈ ಮೆಯಿಲಿನ್ ಕೋಶಗಳನ್ನು ರೂಪಿಸಲು ಲಿಪಿಡ್ ಗಳ ಸಂಶ್ಲೇಷಣೆಯಲ್ಲಿ ಕಾಪರ್ ಸಹಾಯ ಮಾಡುತ್ತದೆ. ತಾಮ್ರವು ಉಸಿರಾಟದ ಅಥವಾ ರೋಗಗ್ರಸ್ತವಾಗುವಿಕೆಯನ್ನು ತಡೆಯುತ್ತದೆ.
  
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ತಾಮ್ರಕ್ಕೆ ಕಾರಣವಾಗುವ ಹೊಟ್ಟೆಯ ನಿಧಾನಗತಿಯ ಸಂಕೋಚನ ಮತ್ತು ವಿಶ್ರಾಂತಿಗೆ ಉತ್ತೇಜಿಸಲು ಸಹಾಯ ಮಾಡುವ ಅಪರೂಪದ ಆಸ್ತಿಯನ್ನು ತಾಮ್ರ ಹೊಂದಿದೆ. ಅದಕ್ಕಾಗಿಯೇ ತಾಮ್ರದೊಂದಿಗೆ ಕುಡಿಯುವ ನೀರು ಕುಡಿಯುವ ಆರೋಗ್ಯಕರ ಜೀರ್ಣಕಾರಿ ವ್ಯವಸ್ಥೆಯನ್ನು ನಿಮಗೆ ಸಹಾಯ ಮಾಡುತ್ತದೆ.
  
ರಕ್ತಹೀನತೆ ತಡೆಯುತ್ತದೆ
ನಮ್ಮ ದೇಹದಲ್ಲಿ ನಡೆಯುವ ಹೆಚ್ಚಿನ ಕಾರ್ಯಗಳಿಗೆ ತಾಮ್ರವು ಬೇಕಾಗುತ್ತದೆ ಎನ್ನುವುದು ಅತ್ಯಂತ ಮಹತ್ವದ ವಿಚಾರ. ಜೀವಕೋಶ ನಿರ್ಮಾಣದಿಂದ ಹಿಡಿದು, ಕಬ್ಬಿಣ ಹೀರುವಿಕೆ ಸಹಿತ ನಿಮ್ಮ ದೇಹಕ್ಕೆ ತಾಮ್ರವು ಪ್ರಮುಖ ಖನಿಜಾಂಶವಾಗಿದೆ. ಈ ಕಾರಣದಿಂದಾಗಿ ರಕ್ತಹೀನತೆ ಬರದಂತೆ ತಡೆಯುತ್ತದೆ.
  
ಕ್ಯಾನ್ಸರ್ ವಿರುದ್ಧ ರಕ್ಷಿಸುತ್ತದೆ
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿರುವಂತಹ ಕ್ಯಾನ್ಸರ್, ರೋಗಿಗೆ ಮತ್ತು ಅವರ ಮನೆಯವರಿಗೆ ತುಂಬಾ ಸಂಕಷ್ಟವನ್ನು ಉಂಟುಮಾಡುತ್ತದೆ. ಇದಕ್ಕೆ ತಾಮ್ರವು ಹೇಗೆನೆರವಾಗುತ್ತದೆ? ತಾಮ್ರದಲ್ಲಿ ತುಂಬಾ ಬಲಿಷ್ಠವಾದ ಆ್ಯಂಟಿಆಕ್ಸಿಡೆಂಟ್ ಗುಣಗಳಿವೆ. ಇದು ಮುಕ್ತ ರಾಡಿಕಲ್ ವಿರುದ್ಧ ಹೋರಾಡುತ್ತದೆ ಮತ್ತು ಅದರ ಕೆಟ್ಟ ಪರಿಣಾಮಗಳು ಇಲ್ಲದಂತೆ ಮಾಡುತ್ತದೆ. ಅಮೆರಿಕಾ ಕ್ಯಾನ್ಸರ್ ಸೊಸೈಟಿಯ ಪ್ರಕಾರ ತಾಮ್ರವು ಕ್ಯಾನ್ಸರ್ ನ್ನು ನಿಯಂತ್ರಿಸಲು ಎಷ್ಟು ನೆರವಾಗುತ್ತದೆ ಎಂದು ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ ತಾಮ್ರದ ಕೆಲವೊಂದು ಸಂಕೀರ್ಣಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ.
  
ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ
ತಾಮ್ರದ ಉತ್ಕರ್ಷಣ ನಿರೋಧಕ ಗುಣವು ಉತ್ತಮ ರೇಖೆಗಳು, ಸುಕ್ಕುಗಳು ಮತ್ತು ತೇಪೆಯ ಚರ್ಮವನ್ನು ಎದುರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿ ತಾಮ್ರದಿಂದ ನಿಮ್ಮ ಚರ್ಮ ಮತ್ತು ಕೂದಲು ನೈಸರ್ಗಿಕ ವರ್ಧಕವನ್ನು ಪಡೆಯುತ್ತವೆ.
  
ಹೃದಯದ ಆರೋಗ್ಯ ಮತ್ತು ಅಧಿಕ ರಕ್ತದೊತ್ತಡ ತಡೆಯುತ್ತದೆ
ಅಮೆರಿಕಾ ಕ್ಯಾನ್ಸರ್ ಸೊಸೈಟಿಯ ಪ್ರಕಾರ ತಾಮ್ರದಲ್ಲಿ ರಕ್ತದೊತ್ತಡಹೃದಯ ಬಡಿತ ನಿಯಂತ್ರಿಸುವ ಮತ್ತು ಕೊಲೆಸ್ಟ್ರಾಲ್ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಲೋಳೆಯ ಕ್ರೋಢೀಕರಣ ತಡೆಗಟ್ಟಲು ಸಹಕಾರಿ ಮತ್ತು ರಕ್ತನಾಳಗಳು ಹಿಗ್ಗುವಂತೆ ಮಾಡಿ ಹೃದಯಕ್ಕೆ ರಕ್ತವು ಸರಿಯಾಗಿ ಪೂರೈಕೆಯಾಗುವಂತೆ ಮಾಡುತ್ತದೆ. ಅತ್ಯುತ್ತಮ ಫಲಿತಾಂಶಕ್ಕಾಗಿ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟಿರುವ ನೀರನ್ನು ಕುಡಿಯಿರಿ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಹೆಚ್ಚಿಗೆ ತಿಳಿಯಿರಿ

ಅಪಾಯಕರ ಕಾರಣಗಳು

 ಅಪಾಯಕರ ಕಾರಣಗಳು
1. ನೀರು ಸರಿಯಾಗಿ ಕುಡಿಯದಿರುವುದು
2. ಬೊಜ್ಜು-ಇವರಲ್ಲಿ ಯೂರಿಕ್ ಆಸಿಡ್ ಉಳ್ಳ ಕಲ್ಲು ಹೆಚ್ಚು.
3. ಕೆಲವು ಆಹಾರಗಳು: ಅತಿ ಹೆಚ್ಚು ಪ್ರೋಟೀನ್ ಸೇವನೆ (ವಿಶೇಷತಃ ಮಾಂಸಾಹಾರ), ಉಪ್ಪು ಅಥವಾ ಸೋಡಿಯಂ ಹೆಚ್ಚಿರುವ ಪದಾರ್ಥ, ಫ್ರಕ್ಟೋಸ್ ಹೆಚ್ಚಿರುವ ಪೇಯಗಳ ಸೇವನೆ, ಅತಿಹೆಚ್ಚು ಕಾಫಿ, ಚಹಾ ಸೇವನೆ, ಆಕ್ಸಲೇಟ್ಸ್ ಹೆಚ್ಚಿರುವ ಪಾಲಕ್ ಸೊಪ್ಪು, ರೂಬಾರ್ಬ್ ಮುಂತಾದ ಪದಾರ್ಥಗಳು, ಕೃತಕ ಸಿಹಿಕಾರಕಯುಕ್ತ ದ್ರವ್ಯಗಳು, ಪ್ಯೂರಿನ್ ಹೆಚ್ಚಿರುವ ಪದಾರ್ಥಗಳು,
ಉದಾ: ಮೀನು, ಮಾಂಸ, ಸೋಡಾ, ಕೋಲ ಮುಂತಾದ ದ್ರವ್ಯಗಳು, ಅತಿ ಹೆಚ್ಚು ಕ್ಯಾಲ್ಸಿಯಂ ಅಥವಾ ಕ್ಯಾಲ್ಸಿಯಂ ಇರುವ ಆಹಾರ ಸೇವನೆ ಉದಾ: ಹಾಲು, ಪನ್ನೀರು, ಚೀಸ್ ಇತ್ಯಾದಿಗಳು, ಚಿಪ್ಸ್ ಮುಂತಾದ ಸಂಸ್ಕರಿಸಿದ ಪದಾರ್ಥಗಳು, ಮದ್ಯಪಾನ ಇತ್ಯಾದಿ.
4. ಕೆಲವು ಔಷಧಿಗಳು: ಅತಿ ಹೆಚ್ಚು ಕ್ಯಾಲ್ಸಿಯಂ, ವಿಟಮಿನ್ ‘ಡಿ’ ಸೇವನೆ, ವಿಟಮಿನ್ ‘ಸಿ’ ಹೆಚ್ಚಿನ ಸೇವನೆ.
5. ಕೆಲವು ರೋಗಗಳು: ಹೈಪರ್ ಪ್ಯಾರಾಥೈರಾಯಿಡ್, ಮೂತ್ರವಹ ಡಿಸ್ಟಲ್ ಆಸಿಡೋಸಿಸ್, ದೊಡ್ಡ ಕರುಳಿನ ಹುಣ್ಣು, ಕ್ರಾನ್ಸ್ ರೋಗ, ಇತ್ಯಾದಿ.
ಲಿಂಬೆ, ಕಿತ್ತಲೆ ಮತ್ತು ತರಕಾರಿಗಳಲ್ಲಿ ಹೆಚ್ಚಿರುವ ಸಿಟ್ರೇಟ್ ಅಂಶ ಕಡಿಮೆಯಾದಾಗ ಕಲ್ಲು ಕಾಣಿಸಿಕೊಳ್ಳುವುದು. ಅಂತೆಯೇ ಸೋಡಿಯಂ ಹೆಚ್ಚಿ, ಪೊಟಾಶಿಯಂ ಕಡಿಮೆಯಾದಾಗಲೂ ಕಲ್ಲುಂಟಾಗುತ್ತದೆ. ಹೀಗಾಗಿ ಒಮ್ಮೆ ಮೂತ್ರದಲ್ಲಿ ಕಲ್ಲು ಕಂಡ ನಂತರ ಇದು ಮತ್ತೆ ಮತ್ತೆ ಬಾರದಂತೆ ನೋಡಿಕೊಳ್ಳಲು ಆಹಾರದಲ್ಲಿ ಗಮನ ವಹಿಸಬೇಕಾಗುವುದು ಬಹಳ ಮುಖ್ಈ ಕಲ್ಲುಗಳನ್ನು ಮೂತ್ರವಹ ಸ್ರೋತಸ್ಸಿನಲ್ಲಿ ಇರುವ ಜಾಗದ ಆಧಾರದ ಮೇಲೆ ಅಥವಾ ಅದರ ರಾಸಾಯನಿಕ ಸಂಯೋಜನೆಯ ಮೇಲೆ ವಿಂಗಡಿಸುತ್ತಾರೆ. ಮೂಲಭೂತವಾಗಿ ಎಲ್ಲ ಕಲ್ಲುಗಳೂ ಕ್ಯಾಲ್ಸಿಯಂನಿಂದ ಕೂಡಿರುತ್ತದೆ. ಅವುಗಳಲ್ಲಿ ಸಾಮಾನ್ಯವಾಗಿ ಬರುವ ಕಲ್ಲು ಅಂದರೆ 80% ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲಿರುತ್ತದೆ. ಇದು ದೊರಗಾಗಿದ್ದು ಹರಿಯುವಾಗ ಅತೀವ ನೋವು, ಉರಿಯನ್ನು ತಂದೊಡ್ಡುತ್ತದೆ.
ಹಾಗಾಗಿ 3-6 ಮಿಲಿಮೀಟರ್ ಇರುವಾಗಲೇ ಲಕ್ಷಣ ತೋರಿಸುತ್ತದೆ. ಇದನ್ನು ಔಷಧಿಗಳಿಂದ ಗುಣಪಡಿಸಬಹುದು. ಆದರೆ ಯೂರಿಕ್ ಆಸಿಡ್ ಹೆಚ್ಚಿ ಉಂಟಾಗಿರುವ ಕಲ್ಲು ಬಹಳ ದೊಡ್ಡ ಗಾತ್ರವಾಗುವವರೆಗೂ ಅರಿವಿಗೆ ಬರುವುದು ಕಮ್ಮಿ. ಏಕೆಂದರೆ ಇದರ ರಚನೆ ನುಣುಪಾಗಿರುತ್ತದೆ ಮತ್ತು ಹೆಚ್ಚಾಗಿ ಜಾಗ ಹೆಚ್ಚಿರುವ ಸ್ಥಳದಲ್ಲಿ ಸದ್ದಿಲ್ಲದೇ ಬೆಳೆಯುತ್ತದೆ. ಇದು ಹೆಚ್ಚಾಗಿ ಔಷಧಿಗೆ ಬಗ್ಗದು.
ಶಸ್ತ್ರ ಚಿಕಿತ್ಸೆ ಬೇಕಾಗಿ ಬರುತ್ತದೆ. ಇದು 5-10% ಜನರಲ್ಲಿ ಮಾತ್ರ ಕಾಣುತ್ತದೆ. ಇದು ಸಾಧಾರಣವಾಗಿ ಸ್ಥೂಲಕಾಯರಲ್ಲಿ ಕಾಣುವುದು. ಮತ್ತು ಮೂತ್ರ ಅತಿ ಹೆಚ್ಚು ಆಮ್ಲೀಯವಾದಾಗ ಕಂಡು ಬರುತ್ತದೆ. ಇದನ್ನು ಕ್ಷ-ಕಿರಣದಿಂದ ಪತ್ತೆ ಹಚ್ಚಬಹುದು. ಇನ್ನು ಕೆಲವು (ಸ್ಟ್ರುವೈಟ್, ಸಿಸ್ಟೀನ್) ಕಲ್ಲುಗಳು ಕಿಡ್ನಿಯಲ್ಲಿನ ಸೋಂಕಿನಿಂದ ತಲೆದೋರುತ್ತವೆ.
ಚಿಕಿತ್ಸೆ: ಕಲ್ಲನ್ನು ಹೊರಹಾಕುವುದರೊಂದಿಗೆ ಮತ್ತೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಹೇರಳ ನೀರಿನೊಂದಿಗೆ ಮೂತ್ರ ಹೆಚ್ಚಿಸುವ ಔಷಧಿಗಳನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಇದರೊಂದಿಗೆ ಕಲ್ಲು ಹೊರಹೋಗುವಾಗ ಆಗಬಹುದಾದ ನೋವಿಗೆ ಶಾಮಕ ಔಷಧಿಗಳನ್ನು ಸೇರಿಸಬಹುದು. 6 ಮಿಲಿಮೀಟರಿಗಿಂತ ಚಿಕ್ಕ ಕಲ್ಲು ಹರಿದು ಬರುತ್ತದೆ.ಬರುವಾಗ ರಕ್ತ ಮೂತ್ರ, ಉರಿಮೂತ್ರ, ಬೆನ್ನು, ಪಕ್ಕೆ ಅಥವಾ ಕೆಳಹೊಟ್ಟೆಯಲ್ಲಿ ಅತೀವ ನೋವು ಕಾಣಿಸಬಹುದು. ಈ ಚಿಕಿತ್ಸೆಯ ಸಮಯ ಆದಷ್ಟು ಮಲಗಿರುವುದು ಉತ್ತಮ.
ಮಲಗಿದ ನಿಲುವಿನಲ್ಲಿ ಮೂತ್ರೋತ್ಪತ್ತಿ ಹೆಚ್ಚಿರುತ್ತದೆ. ಆಯುರ್ವೇದದಲ್ಲಿ ಇದೇ ಕಾರ್ಯ ಮಾಡುವಂತಹ ಹಾಗೂ ಕಲ್ಲನ್ನು ಕರಗಿಸಿ, ಹರಳಾಗಿಸಿ ಹೊರಹಾಕುವಂಥ ಅನೇಕ ಔಷಧಿಗಳಿವೆ. ಉದಾ: ಚಂದ್ರಪ್ರಭಾ, ಗೋಕ್ಷುರಾದಿ ಕಷಾಯ, ಬ್ರಹತ್ಯಾದಿ ಕಷಾಯ, ಪುನರ್ನವಾದಿ ಕಷಾಯ, ಪುನರ್ನವಾಸವ ಇತ್ಯಾದಿ.
ಇದರೊಂದಿಗೆ ಹೇರಳ ನೀರು, ಎಳನೀರು ಅತ್ಯಗತ್ಯ. ದೊಡ್ಡ ಕಲ್ಲುಗಳಿಗೆ ಲಿಥೋಟ್ರಿಪ್ಸಿ ಮುಂತಾದ ಚಿಕಿತ್ಸೆಯ ಮೊರೆ ಹೋಗಬೇಕಾಗುತ್ತದೆ. ತದನಂತರವೂ ಬಾರದಂತೆ ತಡೆಗಟ್ಟಲು ಆಯುರ್ವೇದೀಯ ಔಷಧಿಗಳು, ಆಹಾರದಲ್ಲಿ ಜಾಗ್ರತೆ ಮುಖ್ಯ.  
ಆಹಾರದಲ್ಲಿ ಈ ಕ್ರಮವಿರಲಿ
ಮೂತ್ರದ ಕಲ್ಲಿನಲ್ಲಿ, ಚಿಕಿತ್ಸೆಯೊಂದಿಗೆ ಆಹಾರದ ಪಾತ್ರ ಬಹಳ ಮಹತ್ವದ್ದು. ಇದರಿಂದ ಮುಂದೆ ಈ ತೊಂದರೆ ತಲೆದೋರದಂತೆಯೂ ನೋಡಿಕೊಳ್ಳಬಹುದು. ಆಹಾರದಲ್ಲಿ ಈ ಕೆಳಗಿನ ಅಂಶವನ್ನು ಪಾಲಿಸುವುದು ಅತ್ಯಗತ್ಯ.
*ದಿನಕ್ಕೆ ಮೂರು ಲೀಟರಿನಷ್ಟು ನೀರು ಕುಡಿಯುವುದು.
*ಸಿಟ್ರಿಕ್ ಆಮ್ಲ ಇರುವ ಆಹಾರವನ್ನು ಹೇರಳವಾಗಿ ಸೇವಿಸುವುದು. ಉದಾ: ಲಿಂಬೆ ಹಣ್ಣು, ಮೂಸಂಬಿ, ಕಿತ್ತಲೆ.
*ಮಾಂಸಾಹಾರವನ್ನು ಬಹಳ ಮಿತಗೊಳಿಸುವುದು.
*ಕಾಫಿ, ಚಹಾ, ಹಸಿರು ಚಹಾ, ಸೋಡಾ, ಮದ್ಯಪಾನದ ಸೇವನೆ ಬೇಡ.
*ಆಹಾರದಲ್ಲಿ ಉಪ್ಪಿನಂಶವನ್ನು ಕಮ್ಮಿ ಮಾಡಬೇಕು.
*ಆಕ್ಸಲೇಟ್ ಹೆಚ್ಚಿರುವ ಆಹಾರಗಳು ಮಿತವಾಗಿರಲಿ. ಉದಾ: ಬೀಟ್ರೂಟ್, ಸ್ಟ್ರಾಬೆರಿ, ಸೆಲೆರಿ, ಚಾಕೋಲೇಟ್ ಇತ್ಯಾದಿ.
*ಹೆಚ್ಚಿನ ಹಣ್ಣು ತರಕಾರಿಗಳಲ್ಲಿ ಪೊಟಾಶಿಯಂ ಅಂಶ ಹೆಚ್ಚಿರುತ್ತದೆ. ಅವುಗಳ ಬಳಕೆ ಯಥೇಚ್ಛವಾಗಿರಲಿ. ಉದಾ: ಎಳನೀರು, ಪೈನಾಪಲ್, ಬಾಳೆಹಣ್ಣು, ಕರ್ಬೂಜ, ಕಲ್ಲಂಗಡಿ, ಒಣದ್ರಾಕ್ಷಿ ಇತ್ಯಾದಿ.
*ಪಾಲಕ್, ದಂಟಿನ ಸೊಪ್ಪು, ಹುಳಿಸೊಪ್ಪು, ಇತ್ಯಾದಿಗಳ ಬಳಕೆ ಬೇಡ.
*ಕ್ಯಾಲ್ಸಿಯಂ ಗುಳಿಗೆ ನಿಲ್ಲಿಸಿ. ಅಲ್ಲದೇ ವಿಟಮಿನ್ ‘ಸಿ’ ಗುಳಿಗೆಯೂ ಹೆಚ್ಚು ಬೇಡ.
*ಎಳನೀರು ಚೆನ್ನಾಗಿ ಕುಡಿಯಿರಿ.
*ಬಾಳೆದಿಂಡಿನ ರಸ ಉಪಯುಕ್ತ.
*ಪ್ಯುರಿನ್ ಮತ್ತು ಯುರಿಕ್ ಆಸಿಡ್ ಹೆಚ್ಚಿರುವ ಅಣಬೆ, ಪಾಲಕ್ ಸೊಪ್ಪು, ಹೂಕೋಸು, ಬ್ರೊಕೊಲಿ, ಮೀನು, ಮಾಂಸ ಇತ್ಯಾದಿಗಳು ಒಳ್ಳೆಯದಲ್ಲ.
*ಬಾರ್ಲಿ ನೀರು, ಹುರುಳಿ ಬೀಜವನ್ನು ಬೇಯಿಸಿದ ನೀರು ಒಳ್ಳೆಯದು.
ಬೇಸಿಗೆಯ ಬವಣೆಯಲ್ಲಿ ಒಂದಾದ ಮೂತ್ರದಲ್ಲಿನ ಕಲ್ಲಿನ ಬಗ್ಗೆ ಸರಿಯಾಗಿ ತಿಳಿದು ಕೊಂಡು ಸಮರ್ಪಕ ಆಹಾರ ಸೇವಿಸಿದಲ್ಲಿ ಈ ತೊಂದರೆಯಿಂದ ದೂರವಿರಲು ಸಾಧ್ಯವಿದೆ.
*ಸುಖ ಜೀವನಕ್ಕೆ 35 ಆರೋಗ್ಯ ಸೂತ್ರಗಳು...*                                                    ‌     ‌                                 ‌   ‌  ‌   ‌
 ಸಂಪೂರ್ಣವಾಗಿ ಆರೋಗ್ಯಕರವಾದ ಜೀವನವನ್ನು ಹೊಂದ ಬಯಸುವವರು ಈ ಕೆಳಗೆ ತಿಳಿಸಲಾದ 35 ಸೂತ್ರಗಳನ್ನು ಪಾಲಿಸಿ. ಇಂದಿನ ಪೀಳಿಗೆಯ ಜನಾಂಗ ಇದನ್ನು ಮರೆತಿರಬಹುದು. ಅದಕ್ಕೇ ನಿಮಗೆ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ‌     ‌    ‌                                                                   
1. ಬೆಳಿಗ್ಗೆ 4.30 ಕ್ಕೆ ನಿದ್ದೆಯಿಂದ ಏಳಬೇಕು.
2. ನಿದ್ದೆಯಿಂದ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು.
3. ಐಸ್ ಕ್ರೀಂ ತಿನ್ನಲೇ ಬಾರದು.
4. ಫ್ರಿಡ್ಜ್ ನಿಂದ ಹೊರತೆಗೆದ ಆಹಾರ ಪದಾರ್ಥಗಳನ್ನು, ಒಂದು ಗಂಟೆಯ ನಂತರ ಉಪಯೋಗಿಸಬೇಕು.
5. ತಂಪು ಪಾನೀಯವನ್ನು ಸೇವಿಸಲೇ ಬಾರದು.
6. ಮಾಡಿದ ಅಡುಗೆ ಬಿಸಿಯಾಗಿರುವಾಗಲೇ 40 ನಿಮಿಷಗಳ ಒಳಗೆ ತಿನ್ನಬೇಕು.
7.ಊಟವಾದ ನಂತರ 5-10 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.
8. ಬೆಳಿಗ್ಗೆ 8.30 ರ ಒಳಗೆ ಉಪಹಾರವನ್ನು ಸೇವಿಸಬೇಕು.
9. ಬೆಳಗಿನ ಉಪಹಾರದೊಂದಿಗೆ ಹಣ್ಣಿನ ರಸವನ್ನು ಕುಡಿಯಬೇಕು.        
10. ಉಪಹಾರದ ನಂತರ ತಪ್ಪದೇ ಕೆಲಸ ಮಾಡಬೇಕು.
11.ಮಧ್ಯಾನ್ಹದ ಒಳಗೆ 2-3 ಲೋಟ ನೀರು ಕುಡಿಯಬೇಕು.
12. ಊಟ ಮಾಡುವ 48 ನಿಮಿಷಗಳ ಮೊದಲು ನೀರು ಸೇವಿಸಬೇಕು.
13. ಕುಳಿತುಕೊಂಡು ಊಟ ಮಾಡಬೇಕು.
14.ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು.
15. ಮಧ್ಯಾನ್ಹದ ಸಾಂಬಾರಿನಲ್ಲಿ ಓಮ ಪುಡಿಯನ್ನು ಉಪಯೋಗಿಸಬೇಕು.
16. ಮಧ್ಯಾನ್ಹ ಹೊಟ್ಟೆ ತುಂಬಾ ಊಟ ಮಾಡಬೇಕು.
17. ಮಧ್ಯಾನ್ಹದ ಊಟದ ನಂತರ ಮಜ್ಜಿಗೆ ಸೇವಿಸಬೇಕು.
18. ಊಟದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು.
19. ಸೂರ್ಯ ಮುಳುಗುವುದಕ್ಕೆ ಮುಂಚೆಯೇ ಊಟ ಮಾಡಬೇಕು.
20. ರಾತ್ರಿಯ ವೇಳೆ ಮಿತವಾಗಿ ಊಟಮಾಡಬೇಕು.
21.ರಾತ್ರಿ ಊಟದ ನಂತರ ಒಂದು ಕಿ.ಮೀ ದೂರ ನಡೆಯಬೇಕು.
22. ರಾತ್ರಿ ಊಟವಾದ ಒಂದು ಗಂಟೆಯ ನಂತರ ಹಾಲು ಕುಡಿಯಬೇಕು.
23. ರಾತ್ರಿ ವೇಳೆ ಲಸ್ಸಿ, ಮಜ್ಜಿಗೆ ಕುಡಿಯಬಾರದು.
24. ರಾತ್ರಿಯ ವೇಳೆ ಹುಳಿ ಹಣ್ಣುಗಳನ್ನು ತಿನ್ನಬಾರದು.
25. ರಾತ್ರಿ 9-10 ಗಂಟೆಯೊಳಗೆ ಮಲಗಬೇಕು.
26. ಸಕ್ಕರೆ, ಮೈದಾ, ಉಪ್ಪು ಕಡಿಮೆ ಉಪಯೋಗಿಸಬೇಕು.
27. ರಾತ್ರಿ ಸಲಾಡ್ ತಿನ್ನಬಾರದು.
28. ವಿದೇಶಿ ಆಹಾರ ಪದಾರ್ಥಗಳನ್ನು ತಿನ್ನಲೇ ಬಾರದು.
29. ಟೀ,ಕಾಫೀ ಕುಡಿಯದಿರಲು ಪ್ರಯತ್ನಿಸಿ.
30. ಹಾಲಿಗೆ ಅರಶಿನ ಬೆರೆಸಿ ಕುಡಿದರೆ, ಕ್ಯಾನ್ಸರ್ ಬರುವುದಿಲ್ಲ.
31. ಆಯುರ್ವೇದ ಚಿಕಿತ್ಸಾ ಪದ್ದತಿ ಒಳ್ಳೆಯದು.
32. ಅಕ್ಟೋಬರ್ ನಿಂದ ಮಾರ್ಚ್ (ಚಳಿಗಾಲ) ಬೆಳ್ಳಿ, ಬಂಗಾರದ ಪಾತ್ರೆಯಲ್ಲಿ ನೀರು ಕುಡಿಯಬೇಕು.
33. ಜೂನ್ ನಿಂದ ಸೆಪ್ಟೆಂಬರ್( ಮಳೆಗಾಲ)ತಿಂಗಳಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬೇಕು.
34. ಮಾರ್ಚ್ ನಿಂದ ಜೂನ್ ( ಬೇಸಿಗೆ ಕಾಲ) ಮಣ್ಣಿನ ಪ್ರಾತ್ರೆಯಲ್ಲಿರಿಸಿದ ನೀರನ್ನು ಕುಡಿಯಬೇಕು.
35. ಊಟ ಮಾಡುವಾಗ ನೀರು ಕುಡಿಯ ಬಾರದು. ಅವಶ್ಯವಿದ್ದಾಗ ಮಾತ್ರ ನೀರು ಕುಡಿಯಬೇಕು

*ಪ್ರಶ್ನೋತ್ತರಮಾಲಿಕಾ*

ಶ್ರೀ ಶಂಕರ ಭಗವತ್ಪಾದರವರಿಂದ ರಚಿತವಾದ   *ಪ್ರಶ್ನೋತ್ತರಮಾಲಿಕಾ* , ಬದುಕಿನಲ್ಲಿ ಏನನ್ನು  ಮಾಡಬೇಕು , ಏನನ್ನು ಮಾಡಬಾರದೆಂದು ಬಹಳ
ಸುಂದರ , ಸರಳವಾಗಿ ತಿಳಿಸುತ್ತದೆ..
ಈ ಲೇಖನವನ್ನು ತಪ್ಪದೇ ಓದಿ..

ಪ್ರಶ್ನೆ- ಭಗವನ್ ಕಿಮ್ ಉಪಾದೇಯಮ್..?
ಪೂಜ್ಯರೇ ಜೀವನದಲ್ಲಿ
ಏನನ್ನು ಅನುಸರಿಸಬೇಕು ?
ಉತ್ತರ - *ಗುರುವಚನಮ್*   ಜೀವನದಲ್ಲಿ ಗುರು-ಹಿರಿಯರ  ಮಾತನ್ನು ಅನುಸರಿಸಬೇಕು.
ಪ್ರಶ್ನೆ - ಕಃ ಪಥ್ಯತರಃ ?  ಪ್ರಪಂಚದಲ್ಲಿ ಹಿತಕರವಾದದ್ದು ಯಾವುದು ?
ಉತ್ತರ - *ಧರ್ಮಃ*  ಧರ್ಮವೇ ಹಿತಕರವಾದದ್ದು.
ಪ್ರಶ್ನೆ - ಕಿಮ್ ವಿಷಮ್ ?
ಯಾವುದು ವಿಷ ?
ಉತ್ತರ - *ಅವಧೀರಣಾ ಗುರುಷು*   ಗುರು-ಹಿರಿಯರಿಗೆ ಮಾಡಿದ ಅವಮಾನ,ಅಗೌರವವೇ ವಿಷ.
ಪ್ರಶ್ನೆ - ಕಿಮ್ ಮನುಜೇಷು ಇಷ್ಟತಮಮ್ ?  ಮನುಷ್ಯರಲ್ಲಿ ಇರಲೇಬೇಕಾದ ಶ್ರೇಷ್ಠ ಗುಣ  ಯಾವುದು ?
ಉತ್ತರ - *ಸ್ವಪರಹಿತಾಯ ಉದ್ಯತಂ ಜನ್ಮ* ಯಾವಾಗಲೂ ತನ್ನ ಮತ್ತು ಇತರರ ಸುಖಕ್ಕಾಗಿ ಜೀವನವನ್ನು ತೊಡಗಿಸಿಕೊಳ್ಳುವುದು.
ಪ್ರಶ್ನೆ - ಕೇ ಚ ದಸ್ಯವಃ ?  ಕಳ್ಳರು ಯಾರು ?
ಉತ್ತರ - *ವಿಷಯಾಃ*  ಸುಖಪಭೋಗ  ವಸ್ತುಗಳೇ ಕಳ್ಳರು (ಅವು ಇಂದ್ರಿಯಗಳ ಮೂಲಕ  ಮನಸನ್ನು  ಅಪಹರಿಸುತ್ತವೆ )
ಪ್ರಶ್ನೆ - ಕೋ ವೈರೀ ?  ನಮ್ಮ ಶತ್ರು ಯಾರು ?
ಉತ್ತರ - *ಯಸ್ತು ಅನುದ್ಯೋಗಃ*  ನಿರುದ್ಯೋಗವೇ ನಮ್ಮ ಶತ್ರು.
ಪ್ರಶ್ನೆ - ಕಿಮ್ ಗುರುತಾಯಾಂ ಮೂಲಮ್ ?  ಶ್ರೇಷ್ಠತೆಯ ಮೂಲ ಯಾವುದು ?
ಉತ್ತರ - *ಯತ್ ಏತತ್ ಅಪ್ರಾರ್ಥನಮ್ ನಾಮ* ಇತರರಲ್ಲಿ ಏನನ್ನೂ ಅಂಗಲಾಚದಿರುವುದೇ ಜೀವನದ ಶ್ರೇಷ್ಠತೆ
ಪ್ರಶ್ನೆ - ಕಿಮ್ ದುಃಖಮ್ ?  ದುಃಖವೆಂದರೇನು..?
ಉತ್ತರ - *ಅಸಂತೋಷಃ*  ಸಂತೋಷವನ್ನು ಕಳೆದುಕೊಂಡಾಗಿನ ಅವಸ್ಥೆ.
ಪ್ರಶ್ನೆ - ಕಿಮ್ ಜಾಡ್ಯಮ್ ?  ಆಲಸ್ಯತನವು ಯಾವುದು ?
ಉತ್ತರ - *ಪಾಠತೋSಪಿ ಅನಭ್ಯಾಸಃ*  ವಿದ್ಯಾವಂತನಾಗಿಬಿಟ್ಟೆನೆಂದು ತಿಳಿದು , ಅಧ್ಯಯನ  ಮಾಡದಿರುವುದು.
ಪ್ರಶ್ನೆ - ನಲಿನೀ-ದಲ-ಗತ-ಜಲವತ್-ತರಲಂ ಕಿಮ್ ?  ಕಮಲದ ಎಲೆಯ ಮೇಲಿನ ನೀರಿನಂತೆ  ಚಂಚಲವಾದದ್ದು ಯಾವುದು ?
ಉತ್ತರ - *ಯೌವ್ವನಂ - ಧನಂ ಚ ಆಯುಃ*  ತಾರುಣ್ಯ,ಸಂಪತ್ತು ಮತ್ತು ಆಯುಷ್ಯ  ಇವು ಕಮಲದ ಎಲೆ ಮೇಲಿನ ನೀರಿನಂತೆ  ಚಂಚಲವಾದವುಗಳು.
ಪ್ರಶ್ನೆ - ಕಿಮ್ ಚ ಅನರ್ಘಮ್ ?  ಬೆಲೆ ಕಟ್ಟಲಾಗದ್ದು ಯಾವುದು ?
ಉತ್ತರ - *ಯದವಸರೇ ದತ್ತಮ್*   ಸರಿಯಾದ ಸಮಯದಲ್ಲಿ ಸತ್ಪಾತ್ರರಿಗೆ ದಾನ ಮಾಡಿದ್ದು.
ಪ್ರಶ್ನೆ - ಆಮರಣಾತ್ ಕಿಮ್ ಶಾಲ್ಯಮ್ ?  ಸಾಯುವವರೆಗೂ ಬಾಣದಂತೆ  ಚುಚ್ಚುತ್ತಲೇ ಇರುವುದು ಯಾವುದು ?
ಉತ್ತರ - *ಪ್ರಚ್ಛನ್ನಂ ಯತ್ ಕೃತಂ ಪಾಪಮ್*  ಬಚ್ಚಿಟ್ಟುಕೊಂಡ ಪಾಪಕಾರ್ಯ  ಸಾಯುವವರೆಗೂ ಬಾಣದಂತೆ  ಚುಚ್ಚತ್ತಲೇ ಇರುತ್ತದೆ .
ಪ್ರಶ್ನೆ - ಕುತ್ರ ವಿಧೇಯೋ ಯತ್ನಃ ?   ಯಾವ ವಿಷಯದಲ್ಲಿ ಪ್ರಯತ್ನವನ್ನು ಮಾಡಬೇಕು ?
ಉತ್ತರ - *ವಿದ್ಯಾಭ್ಯಾಸೇ ಸದೌಷಧೇ ದಾನೇ*  ವಿಧ್ಯಾಭ್ಯಾಸದಲ್ಲಿ ,ಒಳ್ಳೆಯ ಔಷಧೋಪಚಾರದಲ್ಲಿ  ಮತ್ತು ದಾನ ಮಾಡುವಲ್ಲಿ ಪ್ರಯತ್ನ  ಮಾಡಬೇಕು..
ಪ್ರಶ್ನೆ - ಕೇನ ಜಿತಂ ಜಗದೇತತ್ ?  ಈ ಜಗತ್ತನ್ನು ಯಾರು ಗೆಲ್ಲುತ್ತಾರೆ ?
ಉತ್ತರ - *ಸತ್ಯ-ತಿತಿಕ್ಷಾವತಾ ಪುಂಸಾ*  ಸತ್ಯ ಮತ್ತು ಸಹನೆಗಳಿಂದ ಕೂಡಿದ ಮನುಷ್ಯನು ಈ  ಜಗತ್ತನ್ನು ಗೆಲ್ಲುತ್ತಾನೆ.
ಪ್ರಶ್ನೆ - ಕಸ್ಯ ವಶೇ ಪ್ರಾಣಿಗಣಃ ?  ಪ್ರಾಣಿ ಸಮೂಹವು ಯಾರ ಅಧೀನದಲ್ಲಿರುತ್ತದೆ ?
ಉತ್ತರ - *ಸತ್ಯ-ಪ್ರಿಯಭಾಷಿಣೋ ವಿನೀತಸ್ಯ*  ಪ್ರಾಣಿ  ಸಮೂಹವು ಸತ್ಯವದುದನ್ನು ಮತ್ತು ಪ್ರಿಯವಾದುದನ್ನು ಮಾತನಾಡುವ ವಿನಯಶಾಲಿಯ ವಶದಲ್ಲಿ ಇರುತ್ತದೆ.
ಪ್ರಶ್ನೆ - ಕ್ವ ಸ್ಥಾತವ್ಯಮ್ ?  ಎಲ್ಲಿ ಸ್ಥಿರವಾಗಿ ನಿಲ್ಲಬೇಕು ?
ಉತ್ತರ - *ನ್ಯಾಯ್ಯೇ ಪಥಿ ದೃಷ್ಟ - ಅದೃಷ್ಟ -*  *ಲಾಭಾಢ್ಯೇ* ದೃಷ್ಟ ಮತ್ತು ಅದೃಷ್ಟ  (ಕಂಡು ಕಾಣದ )ಲಾಭದಿಂದ ಸಮೃದ್ಧವಾದ  ನ್ಯಾಯಯುತವಾದ
ಮಾರ್ಗದಲ್ಲಿ ಸದಾ ನಿಲ್ಲಬೇಕು.
ಪ್ರಶ್ನೆ - ಕಿಮ್ ದಾನಮ್ ?  ದಾನವು ಯಾವುದು ?
ಉತ್ತರ - *ಅನಾಕಾಂಕ್ಷಮ್*  ಪ್ರತಿಫಲವನ್ನು ಬಯಸದೇ ಮಾಡಿದ  ದಾನವೇ ನಿಜವಾದ ದಾನವು .
ಪ್ರಶ್ನೆ - ಕಿಮ್ ಮಿತ್ರಮ್ ? ನಿಜವಾದ ಮಿತ್ರನು ಯಾರು ?
ಉತ್ತರ - *ಯೋ ನಿವಾರಯತಿ ಪಾಪಾತ್* ಪಾಪ ಕಾರ್ಯಗಳನ್ನು ಮಾಡದಂತೆ  ತಡೆಯುವನು ನಿಜವಾದ ಮಿತ್ರನು.
ಪ್ರಶ್ನೆ - ಕಿಮ್ ಶೋಚ್ಯಮ್ ?  ದುಃಖಕರವಾದುದು ಯಾವುದು ?
ಉತ್ತರ - *ಕಾರ್ಪಣ್ಯಮ್*  ದಾರಿದ್ರ್ಯವು (ಬಡತನವು) ಕಷ್ಟಕರವಾದದ್ದು..
ಪ್ರಶ್ನೆ - ಕಃ ಪರಿಹರ್ಯೋ ದೇಶಃ ?       ಎಂತಹ ದೇಶದಿಂದ ದೂರ ಇರಬೇಕು ?
ಉತ್ತರ - *ಪಿಶುನಯುತೋ ಲುಬ್ಧಭೂಪಶ್ಚ*
ಕ್ರೂರರಾದ ಪ್ರಜೆಗಳುಳ್ಳ ಮತ್ತು ಲೋಭಿಯಾದ  ರಾಜನುಳ್ಳ ದೇಶವನ್ನು ತೊರೆಯಬೇಕು.
ಪ್ರಶ್ನೆ - ಇಹ ಭುವನೇ ಕೋ ಶೋಚ್ಯಃ ?  ವಿಶ್ವದಲ್ಲಿ ಸದಾ ದುಃಖದಲ್ಲಿರುವವನು ಯಾರು ?
ಉತ್ತರ - *ಸತ್ಯಪಿ ಭುವನೇ ಯೋ ನ ದಾತಾ*  ಸಂಪತ್ತಿದ್ದರೂ ದಾನಿಯಾಗಿರದವನೇ ದುಃಖಿ.
ಪ್ರಶ್ನೆ - ಕಿಮಹರ್ನಿಶಂ ಅನುಚಿಂತ್ಯಮ್ ?  ಹಗಲಿರುಳು (ಸದಾಕಾಲವೂ )ಯಾವುದನ್ನು ಕುರಿತು ಚಿಂತಿಸಬೇಕು ?
ಉತ್ತರ - *ಭಗವಚ್ಚರಣಮ್ ನ ಸಂಸಾರಃ*  ಹಗಲಿರುಳು ಪರಮಾತ್ಮನ ಚರಣದ ಚಿಂತೆ  ಮಾಡಬೇಕೇ ವಿನಃ ಸಂಸಾರವನ್ನಲ್ಲ .
ಪ್ರಶ್ನೆ - ಕಿಮ್ ಸಂಪಾದ್ಯಂ ಮನುಜೈಃ ?  ಮಾನವರು ಏನನ್ನು ಸಂಪಾದಿಸಬೇಕು ?
ಉತ್ತರ - *ವಿದ್ಯಾ , ವಿತ್ತಮ್ , ಬಲಂ , ಯಶಃ, ಪುಣ್ಯಮ್*  ಮಾನವರು ವಿದ್ಯೆ ,ಸಂಪತ್ತು ,ಬಲ ,ಕೀರ್ತ  ಮತ್ತು ಪುಣ್ಯಗಳನ್ನು ಸಂಪಾದಿಸಬೇಕು .
ಪ್ರಶ್ನೆ - ಕಃ ಸರ್ವಗುಣವಿನಾಶೀ ?  ಎಲ್ಲ  ಗುಣಗಳನ್ನು ನಾಶಪಡಿಸುವಂಥಹದು ಯಾವುದು ?
ಉತ್ತರ - *ಲೋಭಃ*  ಲೋಭವು ಸರ್ವ ಗುಣಗಳನ್ನು ನಾಶ ಪಡಿಸುವಂತಹದು.
ಪ್ರಶ್ನೆ - ಶತ್ರುಶ್ಚ ಕಃ ? ವೈರಿಯು ಯಾರು ?
ಉತ್ತರ - *ಕಾಮಃ* ಕಾಮವೇ ವೈರಿಯು .
ಪ್ರಶ್ನೆ - ಕಾ ಸುರಕ್ಷ್ಯಾ  ಸಂರಕ್ಷಿ ಸಲ್ಪಡತಕ್ಕಂಥಹದು ಯಾವುದು ?
ಉತ್ತರ - *ಕೀರ್ತಿಃ , ಪತಿವ್ರತಾ , ನೈಜಬುದ್ಧಿಶ್ಚ*  ಕೀರ್ತಿ ,ಪತಿವ್ರತೆ ಮತ್ತು ಸ್ವಂತ ಬುದ್ಧಿ (ಸ್ವಂತ   ವಿಚಾರ ಶಕ್ತಿ ) ಇವು ಸಂರಕ್ಷಿಸಲು ಅರ್ಹ .
ಪ್ರಶ್ನೆ - ಕಾ ಕಲ್ಪವೃಕ್ಷಃ ಲೋಕೇ ?  ಜಗತ್ತಿನ್ನಲ್ಲಿ ಕಲ್ಪವೃಕ್ಷ ಯಾವುದು ?  (ಬೇಡಿದ್ದನ್ನು ,ಬಯಸಿದ್ದನ್ನು ಕೊಡುವ ವೃಕ್ಷ)
ಉತ್ತರ - *ಸಚ್ಛಿಷ್ಯಾರ್ಪಿತ ವಿದ್ಯಾ*  ಒಳ್ಳೆಯ ಶಿಷ್ಯನಿಗೆ ಗುರುವು ನೀಡಿದ ವಿದ್ಯೆಯು  ಜಗತ್ತಿನಲ್ಲಿ ಕಲ್ಪವೃಕ್ಷವಾಗುತ್ತದೆ.
ಪ್ರಶ್ನೆ - ಪಾತಕಂ ಚ ಕಿಮ್ ?  ಪಾತಕವು ಯಾವುದು ?
ಉತ್ತರ - *ಹಿಂಸಾ*  ಹಿಂಸೆಯೇ(ಕ್ರೂರತೆ) ಪಾತಕವು.
ಪ್ರಶ್ನೆ - ಸಂಭಾವಿತಸ್ಯ ಮರಣಾತ್ ಅಧಿಕಂ ಕಿಮ್ ?  ಒಳ್ಳೆಯವನಿಗೆ ಸಾವಿಗಿಂತಲೂ  ಹೆಚ್ಚು ದುಃಖದಾಯಕ ಯಾವುದು ?
ಉತ್ತರ - *ದುರ್ಯಶೋ ಭವತಿ* ಅಪಕೀರ್ತಿಯು ಮರಣಕ್ಕಿಂತಲೂ  ಹೆಚ್ಚು ದುಃಖದಾಯಕ.
ಪ್ರಶ್ನೆ - ಕೋ ವರ್ಧತೇ ?  ಯಾರು ಪ್ರಗತಿ ಯನ್ನು ಹೊಂದುತ್ತಾರೆ ?
ಉತ್ತರ - *ವಿನೀತಃ*  ವಿನಮ್ರ ನಾದವನು (ವಿನಯಶಾಲಿಯು ) ಪ್ರಗತಿಯನ್ನು ಹೊಂದುತ್ತಾನೆ .
ಪ್ರಶ್ನೆ - ಕಿಮ್ ಭಾಗ್ಯಂ ದೇಹವತಾಮ್ ?  ದೇಹಿಗಳಿಗೆ (ಮನುಷ್ಯರಿಗೆ) ಭಾಗ್ಯವು ಯಾವುದು ?
ಉತ್ತರ - *ಆರೋಗ್ಯಮ್* ಆರೋಗ್ಯವೇ ಭಾಗ್ಯವು .
ಪ್ರಶ್ನೆ - ಕೋ ಜಗದ್ಭರ್ತಾ ? ಜಗತ್ತಿನ ಸಂರಕ್ಷಕನ್ಯಾರು ?
ಉತ್ತರ - *ಸೂರ್ಯಃ*  ಸೂರ್ಯ.
ಪ್ರಶ್ನೆ - ಸರ್ವೇಷಾಂ ಕೋ ಜೀವನಹೇತುಃ ?  ಎಲ್ಲರ ಬದುಕಿಗೆ ಕಾರಣನು ಯಾರು ?
ಉತ್ತರ - *ಸ ಪರ್ಜನ್ಯಃ*  ಪರ್ಜನ್ಯನು (ಮಳೆ ) ಎಲ್ಲರ ಬದುಕಿಗೆ ಕಾರಣನು .
ಪ್ರಶ್ನೆ - ಕಃ ಶೂರಃ ? ಶೂರನು ಯಾರು ?
ಉತ್ತರ - *ಯೋ ಭೀತತ್ರಾತಾ* ಭೀತನಾದವನನ್ನು ಕಾಪಾಡುವವನು ಶೂರನು .
ಪ್ರಶ್ನೆ - ತ್ರಾತಾ ಚ ಕಃ ? ಮತ್ತೆ ಕಾಪಾಡುವವನು ಯಾರು ?
ಉತ್ತರ - *ಸ ಗುರುಃ*  ಗುರುವೇ ಕಾಪಾಡುವವನು.
ಪ್ರಶ್ನೆ - ಪ್ರತ್ಯಕ್ಷದೇವತಾ ಕಾ ? ಪ್ರತ್ಯಕ್ಷ(ಸಾಕ್ಷಾತ್ ) ದೇವತೆ ಯಾರು ?
ಉತ್ತರ - *ಮಾತಾ*  ತಾಯಿಯೇ ಪ್ರತ್ಯಕ್ಷ ದೇವತೆಯು .
ಪ್ರಶ್ನೆ - ಪೂಜ್ಯೋ ಗುರುಶ್ಚ ಕಃ ?  ಪೂಜ್ಯ ಗುರುವು ಯಾರು ?
ಉತ್ತರ - *ತಾತಃ*  ತಂದೆಯೇ ಪೂಜ್ಯ ಗುರುವು .
ಪ್ರಶ್ನೆ - ಪಾತ್ರಂ ಕಿಮ್ ಅನ್ನದಾನೇ ? ಅನ್ನದಾನಕ್ಕೆ ಅರ್ಹನಾರು ?
ಉತ್ತರ - *ಕ್ಷುಧಿತಮ್*  ಹಸಿದವನು ಅನ್ನದಾನಕ್ಕೆ ಅರ್ಹನು .  *ಲೋಕಾಃ ಸಮಸ್ತಾಃ ಸುಖಿನೋ ಭವಂತು.*  ಜೀವನದಲ್ಲಿ ಇಷ್ಟು ಪ್ರಶ್ನೆಗಳಿಗೆ ಉತ್ತರ
ಕಂಡುಕೊಂಡರೆ ಸಾಕು..  ತತ್ವಜ್ಞಾನವನ್ನರಿಯಲು  ಇನ್ನ್ಯಾವ ಶಾಸ್ತ್ರ-ಪುರಾಣಗಳ ಅಗತ್ಯತೆಯಿಲ್ಲ

ನಾವು ಸಂದ್ಯಾವಂದನೆ ಮಾಡುವುದೇಕೆ?

(೧). ನಾವು ಸಂದ್ಯಾವಂದನೆ ಮಾಡುವುದೇಕೆ?
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ ಸೂರ್ಯನಿಗೆ ಕೃತಜ್ಞತೆ ಹೇಳುವ ಉದ್ದೇಶದಿಂದ ಮಾಡುವ ಕಾರ್ಯವೇ "ಸಂಧ್ಯಾವಂದನೆ".
ಸಂಧ್ಯಾವಂದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ,ಶಾಂತಿ ದೊರಕುತ್ತದೆ.ಆರೋಗ್ಯ ದೃಷ್ಠಿಯಿಂದ ಪ್ರಾಣಾಯಾಮ ಮಾಡಿದರೆ ಮನಸ್ಸು ಶುದ್ದವಾಗುತ್ತದೆ,ಬುದ್ಧಿ ಚುರುಕಾಗುತ್ತದೆ,ಆಯಸ್ಸು ಹೆಚ್ಚುತ್ತದೆ. ಋಷಿವರೇಣ್ಯರ ಧೀರ್ಘಾಯುಷ್ಯದ ಗುಟ್ಟು ಈ "ಪ್ರಾಣಾಯಾಮ".ಹಾಗೆ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುತ್ತದೆ. ಸೂರ್ಯನ ಕಿರಣಗಳಲ್ಲಿನ ವಿಟಮಿನ್ ಗಳು ನಮ್ಮ ದೇಹವನ್ನು ಸೇರುತ್ತವೆ.ಅಷ್ಟೆ ಅಲ್ಲದೆ ನಮ್ಮ ಜೀವನದಲ್ಲಿ ಶಿಸ್ತು ಮೂಡಲು ಪ್ರಥಮ ಮೆಟ್ಟಿಲು ಸಂಧ್ಯಾವಂದನೆ ಆಗಿದೆ.
(೨). ನಾವು ಧ್ಯಾನವನ್ನೇಕೆ ಮಾಡಬೇಕು?
ಧ್ಯಾನ ಎಂದರೆ ಏಕಾಗ್ರತೆ. ನಮ್ಮ ಮನಸ್ಸು ಚಂಚಲವಗಿರುತ್ತದೆ. ಈಚಂಚಲತೆಯನ್ನು ಹೋಗಲಾಡಿಸಿ ಮನಸ್ಸನ್ನು ಧೃಡವಾಗಿರಿಸುವ ಪ್ರಕ್ರಿಯೆಯೇ"ಧ್ಯಾನ". ದೃಡವಾದ ಮನಸ್ಸಿನಿಂದ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಬಹುದು. ಹಾಗೆ ಸರಿಯಾದ ನಿರ್ಣಯಗಳಿಂದ ತೆಗೆದುಕೊಂಡ ನಿರ್ಧಾರವು ತಪ್ಪಾಗಲಿಕ್ಕೆ ಸಾಧ್ಯವಿಲ್ಲ.ಯವುದೇ ಕಾರ್ಯಗಳನ್ನು ಏಕಗ್ರತೆಯಿಂದ ಮಾಡುವವನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.ಧ್ಯಾನದಿಂದ ಏಕಾಗ್ರತೆ ಹೆಚ್ಚುತ್ತದೆ.ಮನಸ್ಸಿನ ಸಂಕಟಗಳು ದೂರವಾಗುತ್ತದೆ. ಮನಸ್ಸನ್ನು ಉಲ್ಲಾಸದಾಯಕವಾಗಿಡುವ ಈ ಧ್ಯಾನವನ್ನು ಮೂಢ ನಂಬಿಕೆಯೆಂದು ದೂರ ಮಾಡಿದರೆ, ಬಹಳ ದೊಡ್ಡ ಪ್ರಮಾಣದ ನಷ್ಠವೆಂದರೆ ಅತಿಶಯೋಕ್ತಿಯಲ್ಲ.
(೩). ನಾವು ದೇವರಿಗೆ ದೀಪವನ್ನು ಹಚ್ಚುವುದು ಏಕೆ?
ಭಗವಂತನು ಜ್ಯೋತಿ ಸ್ವರೂಪನಾಗಿದ್ದಾನೆ.ಆತನಿಗೆ ಜ್ಯೋತಿಗಳಿಂದ ಉಪಯೊಗವೇನು? ಎಂದರೆ,ನಾವು ಬೆಳಗುವ ದೀಪಗಳು ಪರಮಾತ್ಮನಿಗಲ್ಲ.ಆತನಿಂದ ಜ್ಞಾನವೆಂಬ ಬೆಳಕು ಅಂಧಕಾರವೆಂಬ ನಮ್ಮ ಬಾಳಿನಲ್ಲಿ ಹರಡಲಿ ಎಂಬ ಭಾವನೆಯನ್ನಿಟ್ಟುಕೊಂಡು ದೀಪವನ್ನು ಬೆಳಗುತ್ತೇವೆ. ಹಾಗೆಂದು ವಿದ್ಯುದ್ದೀಪಗಳನ್ನು ಹಚ್ಚುತ್ತೇವೆಂದರೆ ನಿಮ್ಮ ಅಂದಾಜು ತಪ್ಪು ಎನ್ನುತ್ತೇನೆ.ಏಕೆಂದರೆ, ದೀಪಗಳನ್ನು ತುಪ್ಪ ಅಥವ ಎಣ್ಣೆ ಮತ್ತು ಬತ್ತಿಗಳಿಂದ ಹಚ್ಚುತ್ತೇವೆ.ತುಪ್ಪದ ದೀಪದ ಬೆಳಕು ಕಣ್ಣಿನ ಆರೋಗ್ಯವನ್ನು ವೃಧ್ದಿಸುತ್ತದೆ. ವಿದ್ಯುದ್ದೀಪದ ಬೆಳಕು ದೃಷ್ಠಿಯನ್ನು ಮಂದವಾಗಿಸುತ್ತದೆ.(ಎಣ್ಣೆಯ ದೀಪಕ್ಕಿಂತ ತುಪ್ಪದ ದೀಪವು ಶ್ರೇಷ್ಠವೆಂದಿದ್ದಾರೆ).ಅಂತೆಯೇ ನಂದಾ ದೀಪವನ್ನು ಹಚ್ಚುವುದೇಕೆಂದರೆ,ಹಿಂದಿನ ಕಾಲದಲ್ಲಿ ಅಂದರೆ ರಂಜಕದಿಂದ ಬೆಂಕಿಯ ಉಪಯೋಗವು ತಿಳಿಯುವುದಕ್ಕೆ ಮುಂಚೆ ಎರಡು ಬೆಣಚು ಕಲ್ಲುಗಳ ಸಂಘರ್ಷಣೆಯಿಂದ ಅಥವ ಅರುಣಿಗಳಿಂದ ಬೆಂಕಿಯನ್ನು ಉತ್ಪಾದಿಸುತ್ತಿದ್ದರು. ಇವುಗಳಿಂದ ಬೆಂಕಿಯನ್ನು ಉತ್ಪಾದಿಸುವುದು ಬಹಳ ಕಷ್ಠಕರವಾದ ಮತ್ತು ರೇಜಿಗೆಯ ಕೆಲಸವಾಗಿತ್ತು. ಒಮ್ಮೆ ಹೊತ್ತಿಸಿದ ಬೆಂಕಿಯನ್ನು ಧೀರ್ಘ ಕಾಲದವರೆಗೆ ಉಪಯೋಗಿಸುವ ಉದ್ದೇಶವಿಟ್ಟುಕೊಂಡು ನಂದಾದೀಪವನ್ನು ಹಚ್ಚುವ ಪರಿಪಾಠವನ್ನು ರೂಢಿಸಿಕೊಂಡಿರಬೇಕು.
(೪). ನಾವು ಧೂಪವನ್ನು ಹಚ್ಚುವುದೇಕೆ?
ಲೋಭಾನ, ಶ್ರೀಗಂಧ, ಚಂಗಲಕೋಷ್ಠ, ಗುಗ್ಗುಳ, ಯಾಲಕ್ಕಿ, ಕೃಷ್ಣಾಗರು, ದೇವದಾರು, ಹಾಲುಮಡ್ಡಿ, ಜಟಾಮಾಂಸಿ ಮತ್ತು ಕಚೋರಗಳೆಂಬ ಹತ್ತು ವಿಧವಾದ ಮೂಲಿಕೆಗಳಿಂದ ಸಿದ್ಧಪಡಿಸಿ ಬೆಂಕಿಯಲ್ಲಿ ಸುಟ್ಟು ಅದರ ಹೊಗೆಯನ್ನು ಕುಡಿದರೆ ಶ್ವಾಸಕೋಶಗಳ ತೊಂದರೆಗಳು ನಿವಾರಣೆಯಾಗುತ್ತದೆ. ಈ ಹತ್ತು ವಿಧವಾದ ಮೂಲಿಕೆಗಳನ್ನು "ದಶಾಂಗ ಧೂಪ"ವೆನ್ನುತ್ತಾರೆ. ಸುವಾಸನೆಗಾಗಿ ಹಚ್ಚುವ ಗಂಧದ ಕಡ್ಡಿಗಳು ಹೆಚ್ಚು ಉಪಯೋಗಕಾರಿಯಾಗುವುದಿಲ್ಲ. ಧೂಪವನ್ನು ಹಚ್ಚುವದರಿಂದ ಅದರ ವಾಸನೆಯು ನಮ್ಮ ಮನಸ್ಸನ್ನು ಹಗುರ ಮಡುತ್ತದೆ. ಭಕ್ತಿಯಿಂದ ಪ್ರಾರ್ಥನೆ ಮಾಡುವುದಕ್ಕೆ ಅನುಕೂಲವಾದ ಈ ಧೂಪವನ್ನು ಹಚ್ಚುವುದರಲ್ಲಿ ಹುಚ್ಚು ಕೆಲಸವಿಲ್ಲವೆಂಬುದು ಸತ್ಯವಷ್ಠೆ.
(೫). ನಾವು ಪೂಜೆಗೆ ಮುಂಚೆ ಘಂಟೆಯನ್ನೇಕೆ ಭಾರಿಸುತ್ತೇವೆ?
ಎರಡು ಲೋಹಗಳು ಪರಸ್ಪರ ಢಿಕ್ಕಿ ಹೊಡೆದಾಗ ಶಬ್ದ ತರಂಗಗಳುಂಟಾಗುತ್ತವೆ. ಈ ಶಬ್ದ ತರಂಗಗಳು ಕಿವಿಯನ್ನು ಹೊಕ್ಕು ಮೆದುಳನ್ನು ಸೇರುತ್ತದೆ.
ಸಾಮಾನ್ಯವಾಗಿ ಘಂಟೆಗಳನ್ನು ಕಂಚು,ಪಂಚಲೋಹ,ಬೆಳ್ಳಿ ಅಥವ ಹಿತ್ತಾಳೆಯಿಂದ ಮಾಡುತ್ತಾರೆ. ಪೂಜೆ ಮಾಡುವಾಗ ಹೊರಗಿನ ಎಲ್ಲ ವಿಚಾರಗಳನ್ನು ಪಕ್ಕಕ್ಕಿಟ್ಟು ಶುದ್ಧವಾದ ಮನಸ್ಸಿನಿಂದ ಪೂಜಿಸಬೇಕು. ಕಂಚಿನ ಘಂಟೆಯ ಸದ್ದು ಕಿವಿಯಲ್ಲಿ ಗುಂಯಿಗುಡುತ್ತಾ ಹೊರಗಿನ ಪ್ರಪಂಚವನ್ನು ಕ್ಷಣ ಕಾಲ ಮರೆಸಿಬಿಡುತ್ತದೆ ಗಮನಿಸಿದ್ದೀರ? ಅಂಥಹ ಸ್ಥಿತಿಯಲ್ಲಿ ನಮ್ಮ ಮನಸ್ಸು ಪರಿಪೂರ್ಣ ಶುದ್ಧವಾಗಿರುತ್ತದೆ. ಆ ಸಮಯದಲ್ಲಿ ಮಾಡುವ ಆಲೋಚನೆ ಸಫ಼ಲವಾಗುತ್ತದೆ. ಹಾಗೆಯೇ ಘಂಟೆ ಭಾರಿಸುವ ಕೈಗಳ ನಾಡಿಗಳು ಗಂಟೆಯಿಂದ ಹೊರಬರುವ ತರಂಗಗಳಿಂದ ಶುದ್ಧವಾಗುತ್ತದೆ. (ಪೂಜೆಗೆ ಕಂಚಿನ ಘಂಟೆ ಶ್ರೇಷ್ಠವೆಂದು ಹೇಳಿದ್ದಾರೆ.)
(೬). ನಾವು ಆಚಮನ ಮಾಡುವುದೇಕೆ?
ಆಚಮನ ಮಾಡುವ ನೀರು ಗಾಳಿಯೊಂದಿಗೆ ಒಳಗೆ ಹೋಗಿ ಅನ್ನನಾಳ ಮತ್ತು ಶ್ವಾಸಕೋಶಗಳು ಸೇರುವ ಸಂಧಿಯಲ್ಲಿ ಸೇರಿರುವ ಕಫ಼ ಮತ್ತು ಕಸದೊಂದಿಗೆ ಹೊಟ್ಟೆಯನ್ನು ಸೇರಿ ಅಲ್ಲಿಂದ ಬಹಿರ್ದೆಸೆಯಲ್ಲಿ ಹೊರಬೀಳುತ್ತದೆ. ಗಂಟಲಿನಲ್ಲಿರುವ ಕಫ಼ವು ಶಬ್ದವನ್ನು ಸ್ವಚ್ಚವಾಗಿ ಉಚ್ಛಾರ ಮಡಲು ಬಿಡುವುದಿಲ್ಲ ಎಂಬುದು ಗೊತ್ತಿರುವ ಸಂಗತಿಯಾಗಿದೆ. ಸ್ವಚ್ಚವಾಗಿ ಉಚ್ಛಾರ ಮಾಡದ ಮಂತ್ರಗಳ ಅರ್ಥಗಳು ಬೇರೆಯೇ ಆಗುತ್ತದೆ. ಇದಕ್ಕೆ ಹಲವು ಉದಾಹರಣೆಗಳಿವೆ. ಈ ರೀತಿಯ ತಪ್ಪುಗಳು ಆಗದಿರಲಿ ಎಂದು ಋಷಿ ಮುನಿಗಳು ಕಂಡುಕೊಂಡ ಉಪಾಯವೇ ಈ "ಆಚಮನ"ವಾಗಿದೆ. ಇದರಿಂದ ಹೆಚ್ಚಿನ ಉಪಯೋಗವಿಲ್ಲವಾದರೂ ಆಚರಿಸುವುದರಲ್ಲಿ ತಪ್ಪೇನೂ ಇಲ್ಲವೆಂದೆನಿಸುತ್ತಿದೆ.
(೭).ನಾವು ಸಂಕಲ್ಪವನ್ನೇಕೆ ಮಾಡುತ್ತೇವೆ?
ನಾವು ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ಮಡಬೇಕಾದರೆ ಪೂರ್ವ ಯೋಜನೆ ಅಗತ್ಯ. ಪೂರ್ವ ಯೋಜನೆ ಹಾಕಿಕೊಂಡು ಮಾಡುವ ಎಲ್ಲ ಕಾರ್ಯಗಳು ಉತ್ತಮ ಫಲದಾಯಕವಾಗಿರುತ್ತವೆ. ಅದೇ ರೀತಿ ಯಾವುದೇ ಪೂಜಾ ಕೈಂಕರ್ಯಗಳಲ್ಲಿ ಮೊದಲು ಪೂರ್ವ ಯೋಜನೆ ಮಾಡಿಕೊಳ್ಳುವ ಸಲುವಾಗಿ ಸಂಕಲ್ಪವನ್ನು ಮಾಡಿಕೊಳ್ಳುತ್ತೇವೆ. ಸಂಕಲ್ಪದಲ್ಲಿ ನಾವು ವಾಸಿಸುತ್ತಿರುವ ಸ್ಥಳದ ಪರಿಚಯ, ಈಗಿನ ಕಾಲಮಾನ, ಯಾವ ಉದ್ದೇಶದಿಂದ ಏನು ಮಾಡುತ್ತಿದ್ದೇವೆ? ಯಾರನ್ನು ಉದ್ದೇಶಿಸಿ ಮಾಡುತ್ತಿದ್ದೇವೆ? ಇವೆಲ್ಲದರ ಸಂಕ್ಷಿಪ್ತವಾದ ವಿವರಣೆ ಇರುತ್ತದೆ.ಇದರಿಂದ ಕರ್ಯಕ್ರಮದ ಯಾವ ಘಟ್ಟವನ್ನೂ ಮರೆಯುವ ಸಾದ್ಯತೆಯಿರುವುದಿಲ್ಲ. ಆದ್ದರಿಂದ ಸಂಕಲ್ಪ ಮಾಡುವುದರಲ್ಲಿ ಯಾವುದೇ ಕಂದಾಚಾರ ಇಲ್ಲವೆಂಬುದು ಸಾಬೀತಾಗುತ್ತದೆ.
(೮).ನಾವು ಪವಿತ್ರವನ್ನು ಯಾಕೆ ಧರಿಸಬೇಕು?
"ಪವಿತ್ರ"ವೆಂದರೆ ಹೆಸರೇ ಹೇಳುವಂತೆ ಬಹಳ ಪವಿತ್ರವಾದದ್ದು. ಧರ್ಭೆಗಳನ್ನು ಸೇರಿಸಿ ಕಟ್ಟಿ ಉಂಗುರದಂತೆ ಮಾಡಿ ಉಂಗುರದ ಬೆರಳಿಗೆ ಹಾಕಿಕೊಳ್ಳುವ ಸಾಧನವೇ ಪವಿತ್ರ. ಧರ್ಭೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಅದರ ರಚನೆ ಹಲವಾರು ಮುಳ್ಳುಗಳಿಂದ ಆಗಿದೆ. ಈ ಮುಳ್ಳುಗಳು ಎಷ್ಠೋ ಬ್ಯಾಕ್ತೇರಿಯಾಗಳನ್ನು ತಡೆದು ತನ್ನಲ್ಲೆ ಉಳಿಸಿಕೊಳ್ಳುತ್ತದೆ.ಈ ಪವಿತ್ರವನ್ನು ಹಾಕಿಕೊಂಡು ಪ್ರಾಣಾಯಾಮ ಮಾಡುವುದರಿಂದ ವಾತಾವರಣದಲ್ಲಿನ ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಸೇರುವ ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ. ಇದರಿಂದ ಅನೇಕ ರೋಗಾಣುಗಳು ನಮ್ಮ ದೇಹವನ್ನು ಸೇರುವುದು ತಪ್ಪುತ್ತದೆ ಮತ್ತು ಆರೋಗ್ಯವಾಗಿರುವುದಕ್ಕೆ ಸಹಕಾರಿಯಾಗಿರುತ್ತದೆ.
(೯). ಕಲಶಗಳ ಕೆಳಗೆ ಅಕ್ಕಿಯನ್ನೇಕೆ ಹಾಕಬೇಕು?
ಅಕ್ಕಿಯು ಶಾಂತಿಯ ಸಂಕೇತ. ಏಕದಳ ಧಾನ್ಯವಾಗಿರುವ ಅಕ್ಕಿಯನ್ನು ಪೂಜೆಮಾಡುವ ಕಲಶಗಳ ಕೆಳಗೆ ಹಾಕುವುದು, ಪ್ರತಿದಿನ ನಮ್ಮ ಹಸಿವನ್ನು ನೀಗಿಸುವ ಧಾನ್ಯಕ್ಕೆ ಕೃತಜ್ಞತೆ ತೋರಿಸುವ ಉದ್ದೇಶಕ್ಕಾಗಿ . ಮನುಷ್ಯನಿಗೆ ಉಪಕಾರಿಯಾಗುವ ಎಲ್ಲ ವಸ್ತುಗಳು ದೈವ ರೂಪವೇ ಎಂದು ಅವುಗಳೆಲ್ಲವಕ್ಕೂ ದೇವರ ಸನ್ನಿಧಿಯಲ್ಲಿ ಸ್ಥಾನ ಕಲ್ಪಿಸಿದೆ ನಮ್ಮ ಧರ್ಮ.
(೧೦).ನಾವು ತಾಮ್ರದ ಕಳಸವನ್ನೇ ಏಕೆ ಉಪಯೋಗಿಸುತ್ತೇವೆ?
ತಾಮ್ರವು ಲೋಹಗಳಲ್ಲೆಲ್ಲ ಅತುತ್ತಮವಾದದ್ದು. ಇದಕ್ಕೆ ವಿಷೇಶವಾದ ಗುಣಗಳಿರುವುದರಿಂದಲೇ ಇದಕ್ಕೆ ವಿಷೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ. ತಾಮ್ರದೊಂದಿಗೆ ನೀರುಬೆರೆತಾಗ ಅಲ್ಲಿ ರಾಸಾಯನಿಕ ಕ್ರಿಯೆ ಉಂಟಾಗಿ ವಿಶಿಷ್ಟವಾದ ದ್ರಾವಣ ಉತ್ಪತ್ತಿಯಾಗುತ್ತದೆ. ಈದ್ರಾವಣದಿಂದ ಅನೇಕ ತರಹದ ಚರ್ಮ ರೋಗಗಳು ಗುಣವಾಗುತ್ತವೆಂದು ವೈಜ್ಞಾನಿಕವಾಗಿ ಸಾಬೀತು ಮಾಡಲಾಗಿದೆ. ಅಂತಹ ಉಪಯುಕ್ತವಾದ ಮತ್ತು ಮಹತ್ವದ್ದಾದ ಕಳಸವನ್ನು ಹೀಗಳೆಯುವುದು ಸಾಧುವಲ್ಲವೆಂಬುದು ನನ್ನ ಅಭಿಪ್ರಾಯ.
(೧೧). ನಾವು ಕಲಶದೊಳಗೆ ಧರ್ಬೆಯ ಕೂರ್ಚವನ್ನೇಕೆ ಹಾಕುತ್ತೇವೆ?
ನಾವು ಮಂತ್ರವನ್ನು ಉಚ್ಛಾರ ಮಾಡುವಾಗ ಕೆಲವು ಏರುಪೇರುಗಳನ್ನು ಗಮನಿಸಿರುತೇವೆ. ಈ ಏರುಪೇರುಗಳನ್ನು ಸ್ವರಗಳೆನ್ನುತ್ತಾರೆ. ಸ್ವರಗಳನ್ನು ಛಂದೋಬದ್ಧವಾಗಿ ಹೇಳುವ ಮಂತ್ರಗಳು ಪ್ರಕೃತಿಯಲ್ಲಿನ ವಿದ್ಯುತ್ಕಾಂತೀಯ ಶಕ್ತಿಯನ್ನು {ಎಲೆಕ್ಟ್ರೋ ಮ್ಯಾಗ್ನೆಟೀಕ್ ಪಾವರ್} ಸಂಯೋಜಿಸುತ್ತವೆ. ಈ ರೀತಿ ಸಂಯೋಜಿಸಲ್ಪಟ್ಟ ಶಕ್ತಿಯು ಕಲಶದೊಳಗಿಟ್ಟಿರುವ ಧರ್ಭೆಯಿಂದ ಆಕರ್ಶಿತಗೊಂಡು ಕಲಶದೊಳಗೆ ಸೇರುತ್ತದೆ. ಇದನ್ನೇ ಹಿಂದಿನ್ ಕಾಲದವರು ದೈವ ಸಾನ್ನಿಧ್ಯವೆನ್ನುತ್ತಿದ್ದರು ಎಂದು ಕಾಣುತ್ತದೆ. ಇಂತಹ ದೈವ ಸಾನ್ನಿಧ್ಯಕ್ಕಾಗಿ ಧರ್ಬೆಯ ಕೂರ್ಚನ್ನು ಕಲಶದೊಳಗೆ ಹಾಕುತ್ತೇವೆ.
(೧೨). ಕಲಶದೊಳಗೆ ಮಾವಿನ ಸೊಪ್ಪನ್ನು ಏಕೆ ಹಾಕುತ್ತೇವೆ ?
ಮಾವಿನ ಎಲೆಗಳಲ್ಲಿ ಪತ್ರಹರಿತ್ತಿನ ಪ್ರಮಾಣ ಹೆಚ್ಚಾಗಿರುತ್ತದೆ. ಪತ್ರಹರಿತ್ತು ಹೆಚ್ಚಾಗಿರುವ ಎಲೆಗಳು ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದು ತಿಳಿದಿರುವ ಸಂಗತಿಯಾಗಿದೆ. ಶುಭ ಕಾರ್ಯಗಳು ಮನೆಯಲ್ಲಿ ಜರುಗುವಾಗ ಬಹಳಜನ ಸೇರುವುದು ಸಾಮಾನ್ಯವಾಗಿರುತ್ತದೆ. ಹಾಗೆ ಬಹಳಜನ ಸೇರಿದಾಗ ಅಷ್ಠೂ ಜನಕ್ಕೆ ಸರಿಹೊಂದುವ ಆಮ್ಲಜನಕ ವಾತಾವರಣದಲ್ಲಿ ಸೇರಿಸುವ ಸಲುವಾಗಿ ಮಾವಿನಸೊಪ್ಪು ಮತ್ತು ಬಾಳೆ ಎಲೆಗಳನ್ನು ಉಪಯೋಗಿಸುತ್ತಾರೆ . (ಮಾವಿನ ಎಲೆಗಳು ಮತ್ತು ಬಾಳೆ ಎಲೆಗಳು ಧೀರ್ಘಕಾಲದವರೆಗೆ ಆಮ್ಲಜನಕವನ್ನು ಉತ್ಪಾದಿಸುತ್ತವೆ) ಅಲ್ಲದೆ ಮಾವಿನ ಎಲೆಗಳಲ್ಲಿ ಔಷದೀಯ ಗುಣಗಳು ಹೇರಳವಾಗಿರುತ್ತವೆ ಮತ್ತು ಚರ್ಮರೋಗಗಳಿಗೆ ರಾಮಬಾಣವಾಗಿದೆ.
(೧೩).ಕಲಶದ ಮೇಲೆ ತೆಂಗಿನಕಾಯಿ ಇಡುವ ಉದ್ದೇಶವೇನು ?
ಪರಮಾತ್ಮನು ಜ್ಯೋತಿ ಸ್ವರೂಪನಾಗಿದ್ದಾನೆ. ಜ್ಯೋತಿ ಸ್ವರೂಪನಾದ ಭಗವಂತನನ್ನು ಕಲಶದಲ್ಲಿ ಆವಾಹನೆ ಮಾಡುತ್ತೇವೆ. ಕಲಶವೂ ಜ್ಯೋತಿ ಸ್ವರೂಪದಂತೆ ಕಾಣುತ್ತದೆ. ತೆಂಗಿನ ಬಗ್ಗೆ ಹೇಳಬೇಕಾದದ್ದೇನೂ ಇಲ್ಲ. ತೆಂಗಿನ ಮರದ ಯಾವುದೇ ಭಾಗವೂ ಕೆಲಸಕ್ಕೆ ಬಾರದೇ ಇಲ್ಲ. ಆದ್ದರಿಂದಲೇ ಅದಕ್ಕೂ ದೈವ ಸ್ಥಾನವನ್ನು ಕೊಟ್ಟು ಕಲ್ಪವೃಕ್ಷವೆಂದಿದ್ದೇವೆ. ಅಂತಹ ಪವಿತ್ರವಾದ ಮರದಲ್ಲಿ ಹುಟ್ಟಿದ ತೆಂಗಿನ ಕಾಯಿಯನ್ನು ಪರಮಾತ್ಮನಿಗರ್ಪಿಸುವುದರಿಂದ ಧನ್ಯತೆಯನ್ನು ಪಡೆಯುವುದರ ಉದ್ದೇಶವನ್ನಿಟ್ಟುಕೊಂಡು ತೆಂಗಿನಕಾಯಿಯನ್ನು ಪೂಜೆಯಲ್ಲಿ ಬಳಸುತ್ತೇವೆ.
(೧೪).ಮನೆಯ ಮುಂದೆ ಸಗಣಿಯಿಂದ ಸಾರಿಸುವುದೇಕೆ?
ಗೋಮಯ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ ಇವುಗಳನ್ನು ಪಂಚಗವ್ಯಗಳೆನ್ನುತ್ತೇವೆ. ಇವೆಲ್ಲವೂ ಆಕಳದ್ದಾಗಿರುತ್ತದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ಅದರದೆ ಆದ ವಿಷೇಶ ಗುಣಗಳಿರುತ್ತವೆ.ವಿಷೇಶವಾಗಿ ಗೋಮಯದಲ್ಲಿ ಸೂಕ್ಷ್ಮವಾದ ಬ್ಯಾಕ್ತೀರಿಯಾಗಳನ್ನು ತಡೆಯುವ ಶಕ್ತಿ ಹೆಚ್ಚಾಗಿರುತ್ತದೆ.ಗೋಮಯದಿಂದ ಮನೆಯ ಮುಂದೆ ಸಾರಿಸಿದರೆ ಹೊರಗಿನ ವಾತಾವರಣದಲ್ಲಿನ ರೋಗಕಾರಕ ಬ್ಯಾಕ್ತೇರಿಯಾಗಳು ಮನೆಯೊಳಗೆ ಬರದಂತೆ ತಡೆಯುತ್ತದೆ. ಇದರಿಂದ ಅನೇಕ ರೋಗಗಳನ್ನು ಹತ್ತಿರ ಸುಳಿಯದಂತೆ ಮಾಡಬಹುದಾಗಿದೆ.ಹಾಗೆಯೇ ರಂಗವಲ್ಲಿ ಹಾಕುವುದು ನಮ್ಮ ಧರ್ಮದ ವಿಶೇಷ ಸಂಪ್ರದಾಯವಾಗಿದೆ. ಚಿತ್ತಾಕರ್ಶಕ ಬಗೆಬಗೆಯ ರಂಗೋಲಿಗಳನ್ನು ಸುಣ್ಣದ ಉಂಡೆ ಮತ್ತು ಕೆಂಪು ಮಣ್ಣಿನಿಂದ ಹಾಕುತ್ತಾರೆ. ಸುಣ್ಣದ ಉಂಡೆಮತ್ತು ಕೆಂಪುಮಣ್ಣುಗಳೂ ಸಹ ಆಂಟಿ ಬಯೋಟಿಕ್ ಗಳೆಂಬುದನ್ನು ಮರೆಯಬಾರದು. ಈಗೀಗ ನಗರ ಪ್ರದೇಶಗಳಲ್ಲಿ ಸಮಯಾಭಾವ ಮತ್ತು ಸ್ಥಳಾಭಾವದಿಂದ ಮನೆಯಮುಂದೆ ಸಾರಿಸುವುದು ಮತ್ತು ರಂಗವಲ್ಲಿ ಹಾಕುವುದು ದೂರವೇ ಉಳಿದಿದೆ. ಅಲ್ಲಲ್ಲಿ ನಡೆಯುವ ರಂಗವಲ್ಲಿ ಸ್ಪರ್ದೆಗಳಲ್ಲಿ ಮಾತ್ರ ರಂಗವಲ್ಲಿಗಳನ್ನು ನೋಡುವುದು ಅನಿವಾರ್ಯವಾಗಿದೆ.
(೧೫).ಮನೆಯ ಮುಂದೆ ತುಳಸಿ ಕಟ್ಟೆಯನ್ನೇಕೆ ಕಟ್ಟುತ್ತೇವೆ?
ತುಲಸಿಯ ಎಲೆಗಳಲ್ಲಿ ವಿಷೇಶ ಗುಣಗಳಿವೆ. ತುಲಸಿಯು ಔಷದೀಯ ಸಸ್ಯವಾಗಿದೆ. ಇದರಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು. ಆಯುರ್ವೇದದಲ್ಲಿತುಲಸಿಗೆ ಬಹಳ ಪವಿತ್ರ ಸ್ಥಾನವನ್ನು ಕೊಟ್ಟಿದ್ದಾರೆ. ಕೆಮ್ಮು, ಕಫ಼ ಮುಂತಾದ ಸಣ್ಣ ಸಣ್ಣ ಕಾಯಿಲೆಗಳಿಂದ ಹಿಡಿದು ಕ್ಷಯದ ವರೆಗೆ ನಿವಾರಿಸುವ ಶಕ್ತಿ ಈ ತುಲಸಿಗಿದೆ. ಅಂಅಹ ತುಲಸಿ ಪ್ರತಿಯೊಂದು ಮನೆಯಲ್ಲೂ ಇಲ್ಲದೆಇದ್ದರೆ ಮುಂದಿನ ಪೀಳಿಗೆ ಯವರಿಗೆ ಕನ್ನಡಿಯೊಳಗಿನ ಗಂಟಾಗುವುದರಲ್ಲಿ ಸಂದೇಹವಿಲ್ಲ.
*ಸ್ನಾನದ ಮಹತ್ವ*
ಬೇಗ ಏಳು- ಬೇಗ ಮಲಗು ಪದ್ಧತಿ ಈಗಿಲ್ಲ. ರಾತ್ರಿ 12ರ ಮೇಲೆ ನಿದ್ರೆ ಮಾಡುವವರ ಸಂಖ್ಯೆಯೇ ಹೆಚ್ಚು. ಇದರಿಂದಾಗಿ ಬೆಳಿಗ್ಗೆ ಏಳುವುದು ತಡವಾಗುತ್ತದೆ. ಸೂರ್ಯೋದಯಕ್ಕಿಂತ ಮೊದಲ ಸ್ನಾನ ಮಾಡುವವರ ಸಂಖ್ಯೆ ಅತೀ ಕಡಿಮೆ. ಸೂರ್ಯ ನೆತ್ತಿ ಮೇಲೆ ಬಂದರೂ ಕೆಲವರಿಗೆ ಸ್ನಾನ ಆಗಿರುವುದಿಲ್ಲ. ನೀವು ಇಂತವರಲ್ಲಿ ಒಬ್ಬರಾಗಿದ್ದರೆ ಎಚ್ಚರ. ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ, ಸಂತೋಷ, ಆರ್ಥಿಕ ವ್ಯವಸ್ಥೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಧರ್ಮಶಾಸ್ತ್ರದಲ್ಲಿ ನಾಲ್ಕು ರೀತಿಯ ಸ್ನಾನವನ್ನು ಹೇಳಲಾಗಿದೆ.
ಬೆಳಗಿನ ಜಾವ 4 ಗಂಟೆಯಿಂದ ಐದು ಗಂಟೆಯೊಳಗೆ ಮಾಡುವ ಸ್ನಾನವನ್ನು *ಮುನಿ ಸ್ನಾನ* ಎಂದು ಕರೆಯಲಾಗುತ್ತದೆ. ಇದು ಸ್ನಾನ ಮಾಡಲು ಅತ್ಯುತ್ತಮವಾದ ಸಮಯ. ಮುನಿ ಸ್ನಾನ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿ, ಸಮೃದ್ಧಿ ನೆಲೆಸುತ್ತದೆಂದು ನಂಬಲಾಗಿದೆ.
ಬೆಳಿಗ್ಗೆ ಐದು ಗಂಟೆಯಿಂದ ಆರು ಗಂಟೆಯೊಳಗೆ ಸ್ನಾನ ಮಾಡಿದರೆ ಮಾಡಿದರೆ ಆಯಸ್ಸು, ಕೀರ್ತಿ, ಧನ, ಸಂತೋಷ ಲಭಿಸುತ್ತದೆ. ಇದನ್ನು *ದೇವಿ ಸ್ನಾನ* ಎಂದು ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಈ ಸ್ನಾನ ಕೂಡ ಉತ್ತಮವಾದದ್ದು.
ಮೂರನೇ ಸ್ನಾನವನ್ನು *ಮನುಷ್ಯ ಸ್ನಾನ* ಎಂದು ಕರೆಯಲಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯ ಒಳಗೆ ಮಾಡುವ ಸ್ನಾನ ಇದಾಗಿದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.
ಕೊನೆಯ ಸ್ನಾನ *ರಾಕ್ಷಸಿ ಸ್ನಾನ*. ಇದೀಗ ಸಾಮಾನ್ಯವಾಗಿದೆ. 8 ಗಂಟೆ ನಂತರ ಮಾಡುವ ಸ್ನಾನ ಈ ಶ್ರೇಣಿಯಲ್ಲಿ ಬರುತ್ತದೆ. ಇದನ್ನು ಧರ್ಮ ನಿಷೇಧವೆಂದು ಪರಿಗಣಿಸಲಾಗಿದೆ. ಈ ಸ್ನಾನ ಮಾಡುವುದರಿಂದ ಮನೆಯಲ್ಲಿ ಬಡತನ, ಕಲಹ, ಅಶಾಂತಿ, ಅನಾರೋಗ್ಯ ಕಾಡುತ್ತದೆ.
ಈ ನಾಕು ಕರ್ಮಗಳು ಭಯನೀಗಿಸುವವುಗಳು...ಅಶ್ರದ್ಧೆಯಿಂದ ನಡೆಸಿದಾಗ ಈ ಕರ್ಮಗಳೇ ಭಯಪ್ರದಗಳಾಗುವವು...ಅವ್ಯಾವುದೆಂದರೆ..ತಿಳಿದು ಮಾಡಿದ ಅಗ್ನಿಹೋತ್ರ,ಮೌನ,ಅಧ್ಯಯನ
ಯಜ್ಞ
"ಚತ್ವಾರಿ ಕರ್ಮಾಣ್ಯಭಯಂಕರಾಣಿ..ಭಯಂ ಪ್ರಯಚ್ಛಂತ್ಯಯಥಾಕೃತಾನಿ..ಮಾನಾಗ್ನಿಹೋತ್ರಮುತ ಮಾನಮೌನಂ..ಮಾನೇನಾಧೀತಮುತ ಮಾನಯಜ್ಞಃ"
 (ಭಾರತ-ವಿದುರನೀತಿ)
ಮೇಲೆ ಹೇಳಿದ ಪ್ರತಿಯೊಂದನ್ನು ಮಾನಪೂರ್ವಕ ಮಾಡಬೇಕೆಂದು ವ್ಯಾಸರ ಆದೇಶ..ಮಾನ ಎಂದರೆ ಪ್ರಮಾಣ ಎಂದರ್ಥ..ಯಾವುದೇ ಕರ್ಮವಿರಲಿ ಅದಕ್ಕೆ ಪ್ರಮಾಣವನ್ನು ಹುಡುಕಿ ಮಾಡಬೇಕು..ಇವತ್ತಾಚರಿಸುವ ಎಲ್ಲ ಕರ್ಮಾಂಗಗಳೂ ಎಲ್ಲಿಂದ ಹೊರಟಿವೆ..ಎಲ್ಲಿವೆ ಎನ್ನುವುದನ್ನು ಕರ್ಮಾಂಗಗಳಲ್ಲಿ ತೊಡಗಿಕೊಳ್ಳುವವರೇ ಮರೆಯುತ್ತಿದ್ದಾರೆ...ಹೀಗಾದಾಗ ಅದೇ ಕರ್ಮಗಳು ನಮ್ಮನ್ನು ಮುಳುಗಿಸುತ್ತವೆ...
ಇನ್ನು ಕೆಲವರಿಗೆ ಪ್ರಮಾಣ ಎಂದರೆ ಅವರವರ ಹಿರಿಯರು ಬರೆದಿಟ್ಟ ಹೊತ್ತಗೆಗಳು..ಅದರಲ್ಲಿದ್ದಂತೆ ಮಾಡುತ್ತೇವೆ ಅನ್ನುವವರವರು..ಅದು ಪ್ರಮಾಣ ಪದವಿಯಲ್ಲಿ ಸೇರುವುದಿಲ್ಲ..ಹಾಗಾದರೆ ಪ್ರಮಾಣ ಎಂದರೆ ಯಾವುದು?ಇದಕ್ಕೆ ಕೃಷ್ಣ ಗೀತೆಯಲ್ಲಿ ಉತ್ತರಿಸಿರುವನು.."ತಸ್ಮಾತ್ ಶಾಸ್ತ್ರಂ ಪ್ರಮಾಣಂ"ಎಂದು..ಶಾಸ್ತ್ರಗಳೇ ಪರಮ ಪ್ರಮಾಣ ಎನ್ನುವುದಾಗಿ..ಶಾಸ್ತ್ರಗಳೆಂದರೆ ಯಾವುದು?ಇದಕ್ಕುತ್ತರವನ್ನು ಆಚಾರ್ಯರು ನೀಡಿರುವರು..
 ಋಗ್ವೇದ,ಯಜುರ್ವೇದ,ಸಾಮವೇದ,ಅಥರ್ವವೇದ,ಇತಿಹಾಸ(ಭಾರತ)ಹದಿನೆಂಟು ಪುರಾಣಗಳು,ಮೂಲರಾಮಾಯಣ,ಪಂಚರಾತ್ರ ಹಾಗೂ ಈ ಕೃತಿಗಳ ಹಿನ್ನೆಲೆಯಲ್ಲಿ ರಚನೆಗೊಂಡ ಸ್ಮೃತಿಗಳು,ಮಾತುಗಳು.ಇವಿಷ್ಟು ಪ್ರಮಾಣಗಳು..
ಉಳಿದದ್ದನ್ನು ಆಚಾರ್ಯರ ಮಾತಿನಲ್ಲೇ ಹೇಳುವುದಾದರೆ "ನೈವಶಾಸ್ತ್ರಂ ಕುವರ್ತ್ಮ ತತ್" ಹಾದಿ ತಪ್ಪಿಸುವ ಗ್ರಂಥರಾಶಿಗಳಷ್ಟೇ!!
ಇವತ್ತು  ಯಜ್ಞಯಾಗಾದಿಗಳಲ್ಲಿ   ಪ್ರಾಚೀನ ಚಿಂತನೆಗಳಲ್ಲಿ ಜನರಿಗಿರುವ ನಂಬಿಕೆ ಶಿಥಿಲವಾಗುತ್ತಿದೆ..ಇದಕ್ಕೆ ವಿದುರ ನೀಡಿದ ಮೂಲಕಾರಣ ಪ್ರಮಾಣದ ಮೇಲಿನ ಹಿಡಿತ ಇಲ್ಲದಿರುವಿಕೆ

ಮನೆಮದ್ದು

ಬೆನ್ನುಮೂಳೆಯ ಸದೃಢತೆಗೆ
ಫಾಸ್ಟ್‌ಫುಡ್‌ಗಳಿಂದ ದೂರವಿರಿ. 45 ನಿಮಿಷಗಳ ವಾಕಿಂಗ್ ಅತ್ಯಗತ್ಯ.
ಬೊಜ್ಜು ಬೆನ್ನು ಮೂಳೆಯ ಭಾರ ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ. ಬೊಜ್ಜು ಬರದಂತೆ ಎಚ್ಚರ ವಹಿಸಿ.
ಕುರ್ಚಿಯ ಪೂರ್ಣ ಭಾರವನ್ನು ಬಳಸಿ ಕುಳಿತುಕೊಳ್ಳಿ. ಬೆನ್ನು ಮೂಳೆಯ ಎಲ್ಲ ತಿರುವುಗಳಿಗೂ ಹೆಚ್ಚಿನ ಭಾರ ಬೀಳಬಾರದು. ಪಾದಕ್ಕೆ ಬೆಂಬಲವಿರಬೇಕು.
ನಿಲ್ಲುವಾಗ ಕಾಲುಗಳು ಅಗಲವಾಗಿರಬೇಕು. ಮೊಣಕಾಲುಗಳು ಬಿಗಿಯಾಗಿರಬೇಕು. ಭುಜವನ್ನು ಒಳಕ್ಕೆ ಎಳೆದುಕೊಂಡಿರಬಾರದು. ಭುಜದ ಇಳಿಜಾರು ಬೆನ್ನುಮೂಳೆಯ ತಿರುವಿನ ಮೇಲೆ ನೇರ ಪರಿಣಾಮ ಬೀರುತ್ತದೆ.
ಉದ್ಯೋಗಿಗಳು ಹೆಚ್ಚು ಹೊತ್ತು ಬಾಗಿ ಕುಳಿತಿರುವುದರಿಂದ ಬೆನ್ನುಮೂಳೆಗೆ ಹಾನಿಯಾಗುತ್ತದೆ.
, ತಂಬಾಕು, ಧೂಮಪಾನ ಅಥವಾ ಹೊಗೆಸೊಪ್ಪು ಬೆನ್ನು ಮೂಳೆಯನ್ನು ದುರ್ಬಲಗೊಳಿಸುತ್ತದೆ. ಇವುಗಳಿಂದ ದೂರವಿರಿ.
ಆಸನವನ್ನು ಮಾಡಲು ನೀವು ನೆಲದ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ.
*ಬೆನ್ನು ನೇರವಾಗಿರುವಂತೆ ಕುಳಿತು, ಕಾಲುಗಳನ್ನು ಚಾಚಿ.
*ಹಿಮ್ಮಡಿಗಳು ನೆಲದ ಮೇಲೆ ಇರುವಂತೆ ಇರಿಸಿಕೊಳ್ಳಿ. ಆಗ ಒಂದು ಮೊಣಕಾಲನ್ನು ಮಡಿಚಿ, ಆ ಮೊಣಕಾಲು ಎದೆಯ ಭಾಗಕ್ಕೆ ಹತ್ತಿರವಾಗಿ ಬರುವಂತೆ ಮಡಿಚಿ
*ನಿಮ್ಮ ಕಾಲಿನ ಬೆರಳುಗಳು ಮೇಲ್ಮುಖವಾಗಿರಲಿ.
* ಈಗ ಬೆನ್ನನ್ನು ಹಿಗ್ಗಿಸಿ ಮತ್ತು ನಿಮ್ಮ ಸೊಂಟದ ಮತ್ತೊಂದು ಭಾಗವನ್ನು ತಿರುಗಿಸಿ.
*ಕೆಳ ಬೆನ್ನು ಇನ್ನೊಂದು ಕಡೆಗೆ ತಿರುಗಿಸಿ.
*ತದನಂತರ ಮಡಿಚಿದ ಮೊಣಕಾಲನ್ನು ಕೈಗಳಿಂದ ಬಳಸಿಕೊಂಡು ತಬ್ಬಿಕೊಳ್ಳಿ( ಹಿಮ್ಮುಖವಾಗಿ). ಈಗ ದೀರ್ಘವಾಗಿ ಉಸಿರಾಡಿ.
*ನಿಮ್ಮ ಎದೆಯನ್ನು ಹಿಗ್ಗಿಸಿ, ಭುಜಗಳು ಸಹ ಹಿಗ್ಗಲಿ.
*ಇದೇ ಸ್ಥಿತಿಯಲ್ಲಿ ಒಂದು ನಿಮಿಷ ಇರಿ.
*ಇದನ್ನು ದೇಹದ ಎರಡು ಕಡೆ ಪ್ರಯತ್ನಿಸಿ. ಸುಮಾರು 4-5 ಬಾರಿ ಮಾಡಿದರೆ ಒಳ್ಳೆಯದು.
ಮರೀಚ್ಯಾಸನ ಪ್ರಯೋಜನಗಳು
*ಬೆನ್ನು ಮತ್ತು ದೇಹದ ಹಿಂಭಾಗದ ಸ್ನಾಯುಗಳನ್ನು ಹಿಗ್ಗಿಸಲು ನೆರವಾಗುತ್ತದೆ.
*ಭುಜದ ಸ್ನಾಯುಗಳನ್ನು ಹಿಗ್ಗಿಸಲು ನೆರವಾಗುತ್ತದೆ.
*ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
*ಮಲಬದ್ಧತೆಯನ್ನು ನಿವಾರಿಸುತ್ತದೆ.
*ಋತುಚಕ್ರದ ನೋವನ್ನು ನಿವಾರಿಸುತ್ತದೆ.
*ಆಯಾಸದಿಂದ ಮುಕ್ತಿಯನ್ನು ನೀಡುತ್ತದೆ.
*ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ ಮತ್ತು ಒತ್ತಡದಿಂದ ಪರಿಹಾರ ನೀಡುತ್ತದೆ. ಕುತ್ತಿಗೆ, ಭುಜಗಳಲ್ಲಿ ನೋವೇ? ಮತ್ಸ್ಯಾಸನ ಅನುಸರಿಸಿ ಸಾಕು
ಎಚ್ಚರ.   ಬೆನ್ನು ನೋವು, ತಲೆ ನೋವು, ಮೈಗ್ರೇನ್, ಅಧಿಕ ರಕ್ತದೊತ್ತಡ ಇರುವವರು ಈ ಆಸನ ಮಾಡಬೇಡಿ. ಇದನ್ನು ಮಾಡುವ ಮೊದಲು ತಜ್ಞ ಯೋಗ ಶಿಕ್ಷಕರ ಸಲಹೆ ಪಡೆಯಿರಿ
ಬೆಳ್ಳುಳ್ಳಿಯಲ್ಲಿ ನೋವು ನಿವಾರಕ ಶಕ್ತಿ ಅಪಾರ ಪ್ರಮಾಣದಲ್ಲಿದೆ. ಬೆಳ್ಳುಳ್ಳಿಯನ್ನು ತೆಂಗಿನ ಎಣ್ಣೆಯಲ್ಲಿ ಬಿಸಿ ಮಾಡಿ ಅದನ್ನು ನೋವಿರುವ ಜಾಗಕ್ಕೆ ಹಚ್ಚುವುದರಿಂದ ನೋವು ಕಡಿಮೆಯಾಗುವ ಜೊತೆಗೆ ಮಾಂಸಖಂಡಗಳ ಬಿಗಿತ ಕಡಿಮೆಯಾಗುತ್ತದೆ.
ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು *ಶುಂಠಿ ರಸ 3-4 ಚಮಚ *ತುಳಸಿ 10 ಎಲೆಗಳು
ಈ ಮನೆಮದ್ದು ತುಂಬಾ ಪರಿಣಾಮಕಾರಿ ಮತ್ತು ಕೆಲವೊಂದು ಸಂಶೋಧನೆಗಳು ಕೂಡ ಈ ಮನೆಮದ್ದು ತುಂಬಾ ಪರಿಣಾಮಕಾರಿ ಎಂದು ಸಾಬೀತು ಮಾಡಿದೆ.
*ಈ ಮನೆಮದ್ದಿನೊಂದಿಗೆ ಕೆಲವೊಂದು ಆರೋಗ್ಯಕರ ವ್ಯಾಯಾಮವನ್ನು ಪಾಲಿಸಿಕೊಂಡು ಹೋದರೆ ನಿಮಗೆ ಬೆನ್ನು ನೋವಿನ ಸಮಸ್ಯೆಯೇ ಇರದು.
ಶುಂಠಿ ಹಾಗೂ ತುಳಸಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಮಾಂಸಖಂಡ ಮತ್ತು ಸಮಸ್ಯೆ ಉಂಟಾಗುವ ಜಾಗದಲ್ಲಿರುವ ಉರಿಯೂತವನ್ನು ಇದು ಕಡಿಮೆ ಮಾಡುವುದು.
ತಯಾರಿಸುವ ಹಾಗೂ ಸೇವಿಸುವ ವಿಧಾನ
*ಹೇಳಿದಷ್ಟು ಪ್ರಮಾಣದ ತುಳಸಿ ಎಲೆಗಳನ್ನು ಸರಿಯಾಗಿ ಜಜ್ಜಿಕೊಂಡು ಅದನ್ನು ಶುಂಠಿ ರಸಕ್ಕೆ ಹಾಕಿ.
ಬೆನ್ನಿನ ಭಾಗಕ್ಕೆ ಈ ಮಿಶ್ರಣವನ್ನು ಹಚ್ಚಿಕೊಂಡು ಸುಮಾರು 25 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಸ್ನಾನ ಮಾಡಿಕೊಳ್ಳಿ.
*ಇನ್ನು ಈ ಮಿಶ್ರಣವನ್ನು ದಿನಾಲೂ ಬೆಳಿಗ್ಗೆ ಉಪಹಾರಕ್ಕೆ ಮೊದಲು ಸೇವಿಸಬಹುದು. ಈ ಮನೆಮದ್ದನ್ನು ಪ್ರಯತ್ನಿಸಿ
ತೂಕವಿಳಿಸಬೇಕೆಂಬ ಇರಾದೆಯುಳ್ಳವರಿಗೆ ಲಿಂಬೆ-ಶುಂಠಿ ಬೆರೆಸಿದ ನೀರು ಒಂದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಈ ನೀರನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಅನಿವಾರ್ಯವಾಗಿ ಸಂಗ್ರಹವಾಗಿರುವ ಕೊಬ್ಬನ್ನು ಬಳಸಿಕೊಳ್ಳಲೇಬೇಕಾಗಿ ಬರುವ ಕಾರಣ ತೂಕ ಇಳಿಯುವುದು ಸುಲಭವಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಮಾತ್ರವಲ್ಲ, ತೂಕವಿಳಿಸುವ ಕ್ರಮಗಳಿಗೆ ಬೆಂಬಲವನ್ನೂ ನೀಡ್ತುತದೆ. ನೈಸರ್ಗಿಕವಾಗಿ, ಯಾವುದೇ ಅಡ್ಡಪರಿಣಾಮವಿಲ್ಲದೇ ತೂಕವನ್ನು ಇಳಿಸಬಯಸುವವರಿಗೆ ಈ ಪಾನೀಯ ಅಮೃತಸಮಾನವಾಗಿದೆ

ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!
ಅಲ್ಲದೇ ಈ ಸಂಯೋಜನೆಯನ್ನು ಇತರ ಪೇಯಗಳಲ್ಲಿ ಬೆರೆಸಿ ಕುಡಿಯುವುದರಿಂದ ದೇಹ ಈ ಪೇಯದ ಎಲ್ಲಾ ಪೋಷಕಾಂಶಗಳನ್ನು ಪಡೆಯಲು ನೆರವಾಗುತ್ತದೆ. ಲಿಂಬೆಯಲ್ಲಿ ವಿಟಮಿನ್ ಸಿ, ಬಿ6, ಪಾಲಿಫೆನಾಲುಗಳು, ಟರ್ಪೀನ್, ನಾರಿಂಜಿನ್, ಹೆಸ್ಪರಿಡಿನ್, ಪೊಟ್ಯಾಶಿಯಂ, ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಸಿಯಂ ಹಾಗೂ ಕರಗುವ ನಾರು ಹೇರಳವಾಗಿದೆ. ಈ ಪಟ್ಟಿಯಲ್ಲಿ ಶುಂಠಿಯೇನೂ ಹಿಂದೆ ಬಿದ್ದಿಲ್ಲ. ಇದರಲ್ಲಿಯೂ ಅವಶ್ಯಕ ತೈಲ, ಬಿಸಾಬೋಲೀನ್, ಜಿಂಜರಾಲ್ ಸಹಿತ ಇನ್ನೂ ಹಲವಾರು ಪೋಷಕಾಂಶಗಳಿವೆ. ಇದರ ಸೇವನೆಯಿಂದ ತೂಕ ಇಳಿಕೆಯ ಜೊತೆಗೇ ಇನ್ನೂ ಕೆಲವಾರು ಪ್ರಯೋಜನಗಳನ್ನು ಪಡೆಯಬಹುದು. ಬನ್ನಿ, ಈ ಪ್ರಯೋಜನಗಳು ಯಾವುವು ಎಂದುದನ್ನು ನೋಡೋಣ...
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶವಾಗಿದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿದ್ದಷ್ಟೂ ಆರೋಗ್ಯವೂ ಉತ್ತಮವಾಗಿರುತ್ತದೆ ಹಾಗೂ ನಿಮ್ಮ ಚಟುವಟಿಕೆಗಳನ್ನು ಪೂರ್ಣ ಕ್ಷಮತೆಯಿಂದ ನಿರ್ವಹಿಸಲು ಸಾಧ್ಯವಾಗುತ್ತದೆ.
ಫ್ರೀ ರ್‍ಯಾಡಿಕಲ್ ಗಳನ್ನು ದೂರವಾಗಿಸುತ್ತದೆ:
ಈ ಪೇಯದಲ್ಲಿ ವಿಟಮಿನ್ ಸಿ ಸಹಿತ ಇನ್ನೂ ಹಲವಾರು ಆಂಟಿ ಆಕ್ಸಿಡೆಂಟುಗಳಿವೆ. ಇವು ದೇಹದಲ್ಲಿ ಸಂಗ್ರಹವಾಗಿದ್ದ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹೊಡೆದೋಡಿಸಿ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಈ ಕಣಗಳಿಂದ ಎದುರಾಗುವ ಇನ್ನೂ ಹಲವಾರು ತೊಂದರೆಗಳಿಂದ ರಕ್ಷಿಸುತ್ತದೆ.
ಹೊಟ್ಟೆಯುರಿ-ಹುಳಿತೇಗುಗಳಿಂದ ರಕ್ಷಿಸುತ್ತದೆ
ಒಂದು ವೇಳೆ ನಿಮಗೆ ಹೊಟ್ಟೆಯಲ್ಲಿ ನೋವು, ಉರಿ ಅಥವಾ ಹುಳಿತೇಗು ಮೊದಲಾದ ತೊಂದರೆ ಕಾಣಿಸಿಕೊಂಡರೆ ತಕ್ಷಣವೇ ಲಿಂಬೆ-ಶುಂಠಿ ಬೆರೆಸಿದ ನೀರನ್ನು ಕುಡಿದುಬಿಡಬೇಕು. ವಿಶೇಷವಾಗಿ ಶುಂಠಿಯಲ್ಲಿರುವ ಪೋಷಕಾಂಶಗಳು ಕ್ಷಾರೀಯವಾಗಿದ್ದು ಹೊಟ್ಟೆಯ ಆಮ್ಲೀಯತೆಯನ್ನು ಕಡಿಮೆಗೊಳಿಸಿ ಈ ಎಲ್ಲಾ ತೊಂದರೆಗಳಿಂದ ರಕ್ಷಿಸುತ್ತದೆ.
ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ
ನಿಯಮಿತ ಸೇವನೆಯಿಂದ ನಿಮ್ಮ ತ್ವಚೆ ಆರೋಗ್ಯಕರವಾಗಿರುತ್ತದೆ. ಇದರಲ್ಲಿರುವ ವಿಟಮಿನ್ ಸಿ ಚರ್ಮಕ್ಕೆ ಬುಡದಿಂದ ಪೋಷಣೆ ನೀಡುವ ಮೂಲಕ ಚರ್ಮದ ಸೆಳೆತ ಹೆಚ್ಚಿ ನೈಸರ್ಗಿಕ ಕಾಂತಿ ಪಡೆಯುವಂತಾಗುತ್ತದೆ.
ದೇಹವನ್ನು ಬೆಚ್ಚಗಿರಿಸುತ್ತದೆ
ಶುಂಠಿಯಲ್ಲಿರುವ ಖಾರವಾದ ಪೋಷಕಾಂಶ ದೇಹವನ್ನು ಬೆಚ್ಚಗಿರಿಸಲು ನೆರವಾಗುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಹಾಗೂ ಸಂಜೆಯ ಥಂಡಿಯ ಸಮಯದಲ್ಲಿ ದೇಹವನ್ನು ಬೆಚ್ಚಗಿರಿಸಲು ನೆರವಾಗುತ್ತದೆ.
ಮೈಗ್ರೇನ್ ಕಡಿಮೆ ಮಾಡಲು ನೆರವಾಗುತ್ತದೆ
ಮೈಗ್ರೇನ್ ತಲೆನೋವು ಪ್ರಾರಂಭವಾದ ತಕ್ಷಣವೇ ಒಂದು ಲೋಟ ಲಿಂಬೆ ಹಾಗೂ ಶುಂಠಿಯ ನೀರನ್ನು ಕುಡಿಯುವ ಮೂಲಕ ತಲೆನೋವನ್ನು ಉಲ್ಬಣಗೊಳ್ಳದಂತೆ ತಡೆಯಬಹುದು. ಆದ್ದರಿಂದ ಮೈಗ್ರೇನ್ ತಲೆನೋವು ಇರುವ ವ್ಯಕ್ತಿಗಳು ಈ ನೀರನ್ನು ಸದಾ ಸಿದ್ಧವಾಗಿರಿಸುವ ಮೂಲಕ ತಲೆನೋವು ಕಡಿಮೆ ಮಾಡಲು ನೆರವಾಗುತ್ತದೆ.
ಕ್ಯಾನ್ಸರ್ ನಿಂದ ರಕ್ಷಿಸುತ್ತದೆ
ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಕ್ಯಾನ್ಸರ್ ಎದುರಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಉಂಟುಮಾಡುವ ಕಣಗಳನ್ನು ನಿವಾರಿಸುವ ಮೂಲಕ ಕ್ಯಾನ್ಸರ್ ಸಹಿತ ಇನ್ನೂ ಕೆಲವಾರು ಕಾಯಿಲೆಗಳಿಂದ ರಕ್ಷಿಸುತ್ತದೆ.
ಪ್ರಯಾಣದ ವಾಕರಿಕೆಯನ್ನು ತಡೆಯುತ್ತದೆ
ಶುಂಠಿಯಲ್ಲಿರುವ ಕೊಂಚ ಖಾರವಾದ ಜಿಂಜೆರಾಲ್ ಹಾಗೂ ಲಿಂಬೆಯ ಹುಳಿಯಾದ ರುಚಿ ಪ್ರಯಾಣದಲ್ಲಿ ಎದುರಾಗುವ ವಾಕರಿಕೆಯನ್ನು ಇಲ್ಲವಾಗಿಸುತ್ತದೆ.
ಕೆಮ್ಮು ನಿವಾರಕವಾಗಿದೆ
ಗಂಟಲಿನ ತೇವಭಾಗದಲ್ಲಿ ಬ್ಯಾಕ್ಟೀರಿಯಾಗಳು ಅಭಿವೃದ್ದಿಗೊಂಡು ಕೆರೆತ ಉಂಟುಮಾಡಿದಾ ಇದನ್ನು ಹೊರಹಾಕಲು ದೇಹ ಪ್ರಯೋಗಿಸುವ ವಿಧಾನವೇ ಕೆಮ್ಮು. ಈ ಪೇಯವನ್ನು ಕುಡಿಯುವ ಮೂಲಕ ಗಂಟಲಿನಲ್ಲಿರುವ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ ಹಾಗೂ ಕೆಮ್ಮಿನ ಅಗತ್ಯವಿಲ್ಲದೇ ಹೋಗುತ್ತದೆ. ಈ ಪೇಯದಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಕೆಮ್ಮು ನಿವಾರಿಸಲು ನೆರವಾಗುತ್ತದೆ.
ಫಲವತ್ತತೆಯನ್ನು ಹೆಚ್ಚಿಸುತ್ತದೆ
ಶುಂಠಿಯಲ್ಲಿರುವ ಕೆಲವು ಪೋಷಕಾಂಶಗಳು ಪುರುಷರಲ್ಲಿ ಫಲವತ್ತತೆಯನು ಹೆಚ್ಚಿಸುವ ಕ್ಷಮತೆ ಹೆಚ್ಚಿಸುತ್ತದೆ. ಶುಂಠಿ ಪುರುಷರಲ್ಲಿ ನಿಮಿರುದೌರ್ಬಲ್ಯ ಕಡಿಮೆಗೊಳಿಸಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
*ಮಜ್ಜಿಗೆ ಮಹಿಮೆ* -ಉಪಯುಕ್ತ ಮಾಹಿತಿ-
(ಮಲಗುವ ಮುನ್ನ) ಹಾಲು ಕುಡಿದರೆ, ಬೆಳಿಗ್ಗೆ (ಎದ್ದ ಮೇಲೆ ಮುಖ ತೊಳೆದುಕೊಂಡು) ನೀರು ಕುಡಿದರೆ, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿದರೆ ವೈದ್ಯನಿಗೇನು ಕೆಲಸ?
ಹಾಲು, ನೀರಿನ ಹಾಗೆಯೇ ಮಜ್ಜಿಗೆ ಕೂಡ ನಮ್ಮ ಆರೋಗ್ಯವನ್ನು ಕಾಪಿಡಲು ನೆರವಾಗುತ್ತದೆ. ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಅರ್ಧದಷ್ಟು ಕಡಿಮೆ ಕ್ಯಾಲರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ. ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡುವುದರಿಂದ ಕ್ಯಾಲರಿ, ಕೊಬ್ಬಿನ ಅಂಶ ತೀರಾ ಕಡಿಮೆ.
ಮಜ್ಜಿಗೆಯು ಕಷಾಯ ಹಾಗೂ ಅಮ್ಲರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣ ಹೊಂದುತ್ತದೆ. ಬೇಸಿಗೆಯಲ್ಲಂತೂ ಮಜ್ಜಿಗೆಯನ್ನು ನೆನೆಸಿಕೊಂಡರೆನೇ ‘ಆಹಾ!’ ಎನ್ನುತ್ತೇವೆ. ಮಜ್ಜಿಗೆ ಕೇವಲ ದಾಹವನ್ನು ತಣಿಸುವುದಷ್ಟೇ ಅಲ್ಲ, ಇದರಿಂದ ಹಲವು ಪ್ರಯೋಜನಗಳೂ ಇವೆ.
*ಮಜ್ಜಿಗೆ ಸೇವನೆಯಿಂದ ತೆರೆದ ಗಾಯ, ಬಾಯಿಹುಣ್ಣು, ರಕ್ತಸ್ರಾವದಂಥ ರೋಗಗಳು ಬಹುಬೇಗ ಗುಣವಾಗುತ್ತವೆ. ಆದ್ದರಿಂದಲೇ ಆಯುರ್ವೇದ ಚಿಕಿತ್ಸೆಗಳಲ್ಲಿ, ಚರ್ಮರೋಗದಿಂದ ಬಳಲುತ್ತಿರುವವರಿಗೆ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆ ಬಳಸಲಾಗುವುದು.
*ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಖನಿಜಾಂಶಗಳು ಅಧಿಕವಾಗಿವೆ. ಅನಿಮಿಯಾ, ಮಾನಸಿಕ ಒತ್ತಡ ಹಾಗೂ ಧಾತುಗಳ ಬೆ
ಳವಣಿಗೆಗೆ ಅಗತ್ಯವಿರುವ ವಿಟಮಿನ್ ಬಿ 12 ಇದರಲ್ಲಿ ಹೇರಳವಾಗಿದೆ.
*ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.
*ಮಜ್ಜಿಗೆಯಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
* ಇದರಲ್ಲಿ ಕ್ಯಾಲ್ಶಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಶಕ್ತಿ ನೀಡುತ್ತದೆ.
*ಮಜ್ಜಿಗೆಯು ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕುತ್ತದೆ.
*ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ. ಹುಳಿತೇಗು, ಹೊಟ್ಟೆಹುರಿ, ಎದೆಯುರಿ ನಿವಾರಿಸುತ್ತದೆ.
*ಜಠರ ವಿಕಾರಗಳಿಗೆ ಮಜ್ಜಿಗೆ ದಿವ್ಯೌಷಧಿ. ಬೇಧಿ, ರಕ್ತಬೇಧಿ ಹಾಗೂ ಕರುಳಿನ ವಿಕಾರಗಳಲ್ಲಿ, ಕರುಳಿನಲ್ಲಾಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಿ ಅಗತ್ಯ ನೀರಿನಾಂಶ ಹಾಗೂ ಖನಿಜಾಂಶವನ್ನು ನೀಡುತ್ತದೆ.
*ಕ್ಷಾರ ಹಾಗೂ ಕಷಾಯ ಗುಣಗಳಿಂದಾಗಿ ಮೂಲವ್ಯಾಧಿಯಲ್ಲಿನ ಗುದಾಂಕುರವನ್ನು ನಿವಾರಿಸುತ್ತದೆ.
*ಲಿವರ್‌ನಲ್ಲಿನ ವಿಷಗುಣಗಳನ್ನು ತೆಗೆದುಹಾಕುವ ಶಕ್ತಿ ಮಜ್ಜಿಗೆಗೆ ಇದೆ.
*ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ರಕ್ತದೊತ್ತಡ ಮತ್ತು ತಲೆನೋವು ಗುಣವಾಗುತ್ತದೆ.
*ಮಜ್ಜಿಗೆಗೆ ಸೈಂಧವ ಉಪ್ಪು ಮತ್ತು ಹಸಿಶುಂಠಿ ರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.
*ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಸಭೆ ಸಮಾರಂಭಗಳಲ್ಲಿ ಅಧಿಕ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ.
*ಅರ್ಧ ಚಮಚ ಶುಂಠಿರಸ ಹಾಗೂ ಜೀರಿಗೆಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಆ್ಯಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ. ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆಯೊಂದಿಗೆ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಬಹಳ ಉತ್ತಮ. ಇದು ಅಗತ್ಯ ನೀರಿನಾಂಶವನ್ನು ನೀಡುತ್ತದೆ ಹಾಗೂ ಅತಿಸಾರವನ್ನು ನಿಯಂತ್ರಿಸುತ್ತದೆ. ತ್ವಚೆಯ ಕಾಂತಿಯನ್ನು ಹೆಚ್ಚಿಸಿ ಮುಪ್ಪನ್ನು ತಡೆಯುತ್ತದೆ.
*ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.
*ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಕೊನೆಯಲ್ಲಿ ಮಜ್ಜಿಗೆ ಸೇರಿಸಿ ಊಟ ಮಾಡಿದರೆ ಹೊಟ್ಟೆಗೂ ಸುಖಕರ, ಊಟವೂ ಪೂರ್ಣವಾಗುತ್ತದೆ.
*ಸಕ್ಕರೆ ಕಾಯಿಲೆ ಇರುವವರಿಗೂ ಮಜ್ಜಿಗೆ ನೀರು ಉತ್ತಮ. ದಿನದಲ್ಲಿ ನಾಲ್ಕೈದು ಲೋಟ ಮಜ್ಜಿಗೆ ನೀರು ಕುಡಿಯುತ್ತಿದ್ದರೆ ದೇಹದ ಸ್ಥಿತಿ ಉತ್ತಮವಾಗಿರುತ್ತದೆ.
*ಡಯಟ್ ಮಾಡುವವರು ಹಣ್ಣು, ತರಕಾರಿಗಳ ಜೊತೆ ಮಜ್ಜಿಗೆಯನ್ನು ಸೇವಿಸಬೇಕು.
*ತಲೆಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಕಳೆದು ಸ್ನಾನ ಮಾಡಬೇಕು. ಹೀಗೆ ನಾಲ್ಕೈದು ಸಲ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
ಕುಡಿಯಿರಿ ಗೊತ್ತಿಲ್ಲಾದವರಿಗೆ ತಿಳಿಸಿಕೊಡಿ.

ವಿಚಾರಸಿದ್ಧವಾದ ಜ್ಞಾನವೇ ವಿಜ್ಞಾನ. ಈ ವಿಜ್ಞಾನಭಾವವು ನಾವು ದಿನನಿತ್ಯ ಬಳಸುವ ಆಹಾರಪದಾರ್ಥಗಳ ಉಪಯೋಗವನ್ನು ವೈಜ್ಞಾನಿಕ ದೃಷ್ಟಿಯಲ್ಲಿ ಸಮಜಾಯಿಷಿ ನೀಡಿ ನಮ್ಮನ್ನು ಆ ಪದಾರ್ಥದ ಬಳಕೆಗಾಗಿ ಪ್ರೇರೇಪಿಸುತ್ತದೆ. ಅಂತಹ ವೈಜ್ಞಾನಿಕ ಭದ್ರ ನೆಲೆಗಟ್ಟನ್ನು ಹೊಂದಿರುವ ಆಹಾರಪದಾರ್ಥಗಳಲ್ಲೊಂದು ನಾವು ದಿನನಿತ್ಯ ಬಳಸುವ ತರಕಾರಿಯಾದ ಬೀಟ್​ರೂಟ್. ಪ್ರೋಟೀನ್, ಫಾಸ್ಪರಸ್, ಜಿಂಕ್, ಮ್ಯಾಂಗನೀಸ್, ಮ್ಯಾಗ್ನೇಷಿಯಂ, ಪೊಟ್ಯಾಷಿಯಂ, ಕಬ್ಬಿಣ, ಜೀವಸತ್ವ ಬಿ6, ತಾಮ್ರ ಹಾಗೂ ಹೇರಳ ನಾರಿನ ಅಂಶ ಹೊಂದಿರುವ ಬೀಟ್​ರೂಟ್ ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡುತ್ತದೆ. ಹಿಮೋಗ್ಲೊಬಿನ್ ಅಂಶವು ಅಧಿಕವಾಗುತ್ತದೆ. ಶುದ್ಧ ರಕ್ತದ ಸಂಚಲನ ಉಂಟಾಗುತ್ತದೆ. ಕ್ಯಾಲ್ಶಿಯಂ ಕೊರತೆ ನೀಗಿಸಿ ಮೂಳೆಗಳನ್ನು ಧೃಡಗೊಳಿಸುತ್ತದೆ. ದೇಹದಲ್ಲಿನ ಕಶ್ಮಲ ಪದಾರ್ಥಗಳನ್ನು ಹೊರಹಾಕಲು ಇದು ಪರಿಣಾಮಕಾರಿ.

ಡಯಾಬಿಟಿಸ್ ಇರುವವರು ಬೀಟ್​ರೂಟ್ ತಿನ್ನಲೇಬಾರದು ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. 100 ಗ್ರಾಂ. ಬೀಟ್​ರೂಟ್​ನಲ್ಲಿ 10 ಗ್ರಾಂ.ನಷ್ಟು ಮಾತ್ರ ಕಾರ್ಬೆಹೈಡ್ರೇಟ್ ಅಂದರೆ ಸಕ್ಕರೆ ಅಂಶ ಇದೆ. ಜೊತೆಗೆ ಮೇಲೆ ತಿಳಿಸಿದ ಪೋಷಕಾಂಶಗಳು ಸಾಕಷ್ಟಿದೆ. ಆದರೆ ನಾವು ಮಧುಮೇಹ ನಿಯಂತ್ರಿಸಲು ಬಳಸುತ್ತಿರುವ 100 ಗ್ರಾಂ ಗೋಧಿ, ರಾಗಿ, ಜೋಳಗಳಲ್ಲಿ 70ರಿಂದ 80 ಗ್ರಾಂ.ನಷ್ಟು ಕಾಬೋಹೈಡ್ರೇಟ್ಸ್ (ಸಕ್ಕರೆ ಅಂಶ) ಇದೆ. ಹೀಗಾಗಿ, ಮಧುಮೇಹ ಹೊಂದಿರುವವರು ಹಸಿ ತರಕಾರಿಗಳ ಸಲಾಡ್, ಪಲ್ಯಗಳು, ನಟ್ಸ್​ಗಳನ್ನು ಜಾಸ್ತಿ ಸೇವಿಸುತ್ತಾ ಕಾರ್ಬೆಹೈಡ್ರೇಟ್ಸ್ ಜಾಸ್ತಿ ಇರುವ ಆಹಾರವನ್ನು ಕಡಿಮೆ ಸೇವಿಸಬೇಕು.
ಬೀಟ್​ರೂಟ್, ಕ್ಯಾರೆಟ್ ಹಾಗೂ ಮೂಲಂಗಿಯನ್ನು ಸಮಪ್ರಮಾಣದಲ್ಲಿ ರುಬ್ಬಿ ಅದಕ್ಕೆ ಕೆಂಪುಕಲ್ಲುಸಕ್ಕರೆ ಹಾಕಿ ಜ್ಯೂಸ್ ಮಾಡಿಕೊಂಡು ಪ್ರತಿನಿತ್ಯ ಕುಡಿದರೆ ರಕ್ತಹೀನತೆಯ ಸಮಸ್ಯೆ ನಿವಾರಣೆಯಾಗುತ್ತದೆ. ಚರ್ಮದ ತೊಂದರೆಯೂ ಕಡಿಮೆಯಾಗುತ್ತದೆ. ಇದೇ ಜ್ಯೂಸ್​ಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿದರೆ ಬೊಜ್ಜಿನ ಸಮಸ್ಯೆಯು ಪರಿಹಾರವಾಗುತ್ತದೆ.
ಬೀಟ್​ರೂಟ್​ನ ಪೇಸ್ಟ್​ಗೆ ಮದರಂಗಿ (ಮೆಹಂದಿ) ಸೇರಿಸಿ ತಲೆಗೆ ಲೇಪಿಸಿ ಸ್ವಲ್ಪ ಕಾಲದ ನಂತರ ಸ್ನಾನ ಮಾಡಿದಾಗ ಬೆಳ್ಳಗಾಗಿರುವ ಕೂದಲೂ ಕಪ್ಪಾಗುತ್ತದೆ.
ಅರ್ಧಗ್ಲಾಸ್ ಬೀಟ್​ರೂಟ್ ರಸ, ಅರ್ಧ ನಿಂಬೆಹಣ್ಣಿನ ರಸ ಹಾಗೂ ಒಂದು ಚಮಚ ಜೇನುತುಪ್ಪವನ್ನು ಮಿಶ್ರಣಮಾಡಿ ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ಸೇವಿಸುತ್ತ ಬಂದಲ್ಲಿ ಬೊಜ್ಜು ಕರಗುತ್ತದೆ. ಬಿಸಿ ಮಾಡಿದ ಎಳ್ಳೆಣ್ಣೆಗೆ ಅರ್ಧ ಚಮಚ ಬೀಟ್​ರೂಟ್ ಪೇಸ್ಟ್ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ತಣ್ಣಗಾದ ನಂತರ ಇದನ್ನು ಗಾಯದ ಕಲೆಗಳಿಗೆ ನಿರಂತರವಾಗಿ ಹಚ್ಚಿದರೆ ನಿಧಾನವಾಗಿ ಕಲೆಗಳು ಮಾಯವಾಗುತ್ತವೆ. ಮಲಬದ್ಧತೆ ಹಾಗೂ ಮೂಲವ್ಯಾಧಿಗೆ ಬೀಟ್​ರೂಟ್ ಸೇವನೆ ಪರಿಣಾಮಕಾರಿ. ನೀರನ್ನು ಬಿಸಿಮಾಡಿ ಅದಕ್ಕೆ ಬೀಟ್​ರೂಟ್​ನ್ನು ಸಣ್ಣಸಣ್ಣ ಚೂರುಗಳನ್ನಾಗಿ ಮಾಡಿ ಹಾಕಿ ಕುದಿಸಬೇಕು. ಅದಕ್ಕೆ ಕೆಂಪುಕಲ್ಲುಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣಮಾಡಿ ರಾತ್ರಿ ಮಲಗುವ ಮೊದಲು ಒಂದು ಲೋಟ ಕುಡಿಯುತ್ತ ಬಂದರೆ ಮೂಲವ್ಯಾಧಿ ಹಾಗೂ ಮಲಬದ್ಧತೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹೀಗೆ ಉತ್ತಮ ಆರೋಗ್ಯಕ್ಕಾಗಿ ನಾವು ಬೀಟ್​ರೂಟ್ ಸೇವಿಸಬೇಕು.ಕೊನೇ ಹನಿ
ಹಸಿ ಕ್ಯಾರೆಟ್ ತಿನ್ನುವಾಗ ಸ್ವಲ್ಪ ಎಣ್ಣೆ ಹಾಗೂ ಮೊಸರು ಸೇರಿಸಿಕೊಳ್ಳುವುದು ಉತ್ತಮ. ಏಕೆಂದರೆ ಅದರಲ್ಲಿರುವ ಬೀಟಾಕೆರೋಟಿನ್ ಹೀರಿಕೊಳ್ಳಲು ಇದು ಸಹಕಾರಿ