*ಋಗ್ವೇದದ ಪ್ರಥಮ ಋಕ್ – ಒಂದು ಆಧುನಿಕ ವಿಶ್ಲೇಷಣೆ*🕉
ಇಂಗ್ಲೀಷ ; ಶ್ರೀ ಅರವಿಂದರು
ಕನ್ನಡ; ಪುಟ್ಟು ಕುಲಕರ್ಣಿ
ಇಂಗ್ಲೀಷ ; ಶ್ರೀ ಅರವಿಂದರು
ಕನ್ನಡ; ಪುಟ್ಟು ಕುಲಕರ್ಣಿ
ಅಗ್ನಿ; ಅಗ್ನಿಯು ಭೌತಿಕಶಕ್ತಿಯ ವ್ಯಾಪ್ತಿಯಲ್ಲಿ ‘ತೇಜಸ್ಸಿನ’ ಪ್ರತೀಕವಾಗಿದ್ದಾನೆ. ಇದು ಪಂಚಭೂತ ತತ್ತ್ವಗಳಲ್ಲಿ ತೃತೀಯ ಹಾಗೂ ಅತ್ಯಂತ ಪ್ರಾಮುಖ್ಯದ ಸ್ಥಾನದಲ್ಲಿ ಇದೆ. ಈ ವಿಷಯವನ್ನು ವೇದಕಾಲದ ವಿಜ್ಞಾನ ಕಂಡುಕೊಂಡಿತ್ತು. ಈ ತೇಜಸ್ಸು ಸಪ್ತರೂಪಿ ಆಯಾಮ ಹೊಂದಿದ್ದು , ಛಾಯಾ ಅಥವಾ ನಿಷೇಧಾತ್ಮಕ ಕಾಂತಿಯ(Negative luminosity) ರೂಪದಲ್ಲಿ ಅನ್ನಮಯ ಕೋಶದ ತತ್ತ್ವವಾಗಿದೆ. ದೋಷ ಅಥವಾ ನಿಷಾದಿ(twilight) ಯು ಛಾಯೆಯ ಮೂಲಕವಾಗಿ ಸಂವಾದಗೊಂಡ ಪಂಚದೋಷಗಳ ಆಧಾರದಲ್ಲಿ ರೂಪಣೆಗೊಂಢ ತೇಜತ್ವವಾಗಿದೆ.
ತೇಜಸ್ಸು; ಇದು ಸುಸ್ಪಷ್ಟದಲ್ಲಾಗಲೀ ಅಥವಾ ಸಹಜ ಸ್ಪಷ್ಟತೆಯಲ್ಲಿ ಮತ್ತು ದೀಪ್ತಿಮಯಕಾಂತಿಯಲ್ಲಿ , ದಿನದ(ಬೆಳಗಿನ)ಪ್ರಕಾಶದಲ್ಲಿ ಇರುವಾಗ ಮನಃಕೋಶದ ತತ್ತ್ವಾಗಿರುತ್ತದೆ. ಜ್ಯೋತಿ ಅಥವಾ ಸೂರ್ಯಪ್ರಕಾಶವು ಅತ್ಯಂತ ಉಜ್ವಲವಾಗಿದ್ದು, ಪ್ರದೀಪ್ತತೆಯಿಂದ ಕೂಡಿದ್ದು,ಇದು ವಿಜ್ಞಾನಮಯ ಕೋಶದ ಆಧಾರವಾಗಿದೆ. ಅಗ್ನಿ ಅಥವಾ ತೇಜೋಮಯ ಪ್ರಕಾಶವು ಚಿತ್ಕೋಶದ ಆಧಾರತತ್ತ್ವವಾಗಿದೆ. ವಿದ್ಯುತ್ ಅಥವಾ ವಿದ್ಯುತ್-ಕಾಂತಿಯ ತೇಜೋಮಯತೆಯು ಆನಂದಕೋಶದ ಆಧಾರ ತತ್ತ್ವವಾಗಿದೆ. ಪ್ರಕಾಶವು ಸತ್-ಕೋಶದ ಆಧಾರವಾಗಿದೆ. ಹೀಗಾಗಿ ಈ ಏಳೂ ಅಂಶಗಳು ತಮ್ಮದೇ ಆದ ಗುಣವಿಶೇಷಗಳನ್ನು ಹಾಗೂ ಶಕ್ತಿಗಳನ್ನು ಹೊಂದಿವೆ. ಇಲ್ಲಿ ಶಕ್ತಿ (Energy) ಅಥವಾ ಚೈತನ್ಯಕ್ಕೆ ವಾಸ್ತವವು ಮತ್ತು ಪ್ರಕಾಶವು ಕೇವಲ ಶಕ್ತಿಯ ಗುಣಾತ್ಮಕ-ಸಹಚರಿಯಾಗಿರುತ್ತದೆ. ಈ ಸರ್ವ ವ್ಯವಸ್ಥೆಯಲ್ಲಿ , ಅಗ್ನಿಯು ಸರ್ವಶ್ರೇಷ್ಠನಾಗಿ , ವಿಶ್ವದಲ್ಲಿ ನೆಲೆಸಿದ್ದಾನೆ. ಇದು ವಿದ್ಯುತ್ ಗಿಂತಲೂ ಶ್ರೇಷ್ಠವಾಗಿದೆ. ಇಲ್ಲಿ ವಿದ್ಯುತ್ ಅಂಶದ ಪ್ರಧಾನ ದೇವತೆ ವಿಷ್ಣುವಾಗಿದ್ದರೂ ಸಹಿತ , ಮತ್ತೆ ಆನಂದಮಯ ಕೋಶದ ಒಡೆಯನೂ ವಿಷ್ಣುವೇ ಆಗಿದ್ದರೂ ಸಹಿತ , ಅಗ್ನಿಯೇ ಪ್ರಾಶಸ್ತ್ಯದಲ್ಲಿ ಇರುತ್ತಾನೆ. ಇದು ಉಪನಿಷತ್ತಿನಲ್ಲಿ ನಿರೂಪಿತವಾಗಿರುವ “ವಿದ್ಯತ್ತೋ ಮಾನವಃ(ವಿದ್ಯನ್ಮಾನವ)ದಲ್ಲಿ ಸ್ಪಷ್ಟವಾಗಿ ನಿರೂಪಿತವಾಗಿದೆ.
ವಿಜ್ಞಾನದ ವಿಷಯದಲ್ಲಿ , ಸೂರ್ಯ ಮತ್ತು ವಿಷ್ಣುವಿಗಿಂತಲೂ ಅಗ್ನಿಯೇ ಮೇಲು ಎನ್ನುವದು ವಿಶ್ವಸತ್ಯ. ಆದರೆ ಇಲ್ಲಿ , ವಿಷ್ಣು ಮತ್ತು ಸೂರ್ಯ ಇಬ್ಬರೂ ಅಗ್ನಿಯ ಪ್ರಭುತ್ವದ ಚೇತನದಲ್ಲಿ (ಶಕ್ತಿ)ಯಲ್ಲಿಯೇ ಕಾರ್ಯ ಪ್ರವೃತ್ತರಾಗಿ –ಇಂದ್ರನನ್ನು ತೃಪ್ತಿಪಡಿಸಲು ಕಾರ್ಯ ನಿರ್ವಹಿಸುತ್ತಾರೆ. ವಿಷ್ಣುವನ್ನು ಇಂದ್ರನಿಗಿಂತಲೂ ಕೆಳಹಂತದಲ್ಲಿರುವ ದೇವತೆಯನ್ನಾಗಿ ರೂಪಿಸಿ –ಉಪೇಂದ್ರನೆಂದು ಕರೆದು- ಉಪನಿಷತ್ತುಗಳು ಈ ವಿಷಯದ ಹಿಂದಿರುವ ರಹಸ್ಯವನ್ನು ತೆರೆದಿಟ್ಟಿವೆ.
ಆಧುನಿಕ ಭೌತಶಾಸ್ತ್ರ ಮತ್ತು ಅಗ್ನಿ;
ಇವೆಲ್ಲ ವಿಷಯವನ್ನು ಆಧುನಿಕ ಭೌತಶಾಸ್ತ್ರದ ಪರಿಧಿಯಲ್ಲಿ ಅನುವಾದಿಸುವದಾದರೆ , ಅಗ್ನಿಯು ಉಷ್ಣತೆ ಮತ್ತು ತಂಪು ಎರಡನ್ನೂ ರೂಪಿಸವ , ನಿರ್ದೇಶಿಸುವ, ನಿರೂಪಿಸುವ ಶಕ್ತಿಯಾಗಿದ್ದಾನೆ. ಅಲ್ಲದೇ , ಪ್ರಕಾಶ ಮತ್ತು ಉಷ್ಣತೆ (ಶಾಖ)ದ ಪ್ರಾತಿಭಾಸಿಕ ಜಗತ್ತಿನಲ್ಲಿ ಈ ಅಗ್ನಿಯೇ ಆಧಾರಭೂತ ಶಕ್ತಿತತ್ವವಾಗಿದೆ. ಇಲ್ಲಿ ಸೂರ್ಯನು ಪ್ರಕಾಶ ಮತ್ತು ಉಷ್ಣದ ಸಂಗ್ರಹಾಗಾರ ಮಾತ್ರ. ವಿಶಿಷ್ಟ ತೆರನಾದ ಸೂರ್ಯನ ಜ್ವಾಲೆಗಳುಕೇವಲ ತೇಜಸ್ಸಿನ ಸ್ವರೂಪವನ್ನು ಮಾತ್ರ ಕಾಣಿಸುತ್ತವೆ. ಹೀಗಾಗಿಯೇ ನಾವು ಸೂರ್ಯಪ್ರಕಾಶವನ್ನು ಪ್ರಕಾಶದ ಸ್ಥಾಯೀಶಕ್ತಿಯೆಂದು (Static energy) ಅಥವಾ ಸಾರಭೂತ ಪ್ರಕಾಶವೆಂದು ಕರೆಯುತ್ತೇವೆ.ಇದು ಸತ್-ಕೋಶದ ಆಧಾರವಾಗಿದೆ. ಇದೇ ವಿದ್ಯುತ್ಕಾಂತೀಯ ಶಕ್ತಿಯಾಗಿದ್ದು ಅಥವಾ ವಿದ್ಯುತ್ ಆಗಿರುತ್ತದೆ. ಇದರ ಜೊತೆಗೆ ಅಗ್ನಿಯ ತೇಜತ್ವವು ಸೂರ್ಯನ ಸ್ವಭಾವದಿಂದ ರೂಪಾಂತರಗೊಂಡು , ಪ್ರಕಾಶದ ವಿವಿಧ ಪ್ರಕಾರಗಳನ್ನು ರೂಪಿಸುವಲ್ಲಿ , ನಿರ್ಧರಣೆಗೊಳಿಸುವಲ್ಲಿ ಪ್ರಮುಖವಾಗಿರುತ್ತದೆ.
ಪ್ರಕಾಶ ಮತ್ತು ವಿದ್ಯುತ್;
ಇವೆರಡೂ ಅಗ್ನಿಯಲ್ಲಿ ಪ್ರವೇಶಿಸಿದಾಗ ಮಾತ್ರ ಕಾರ್ಯಪ್ರವೃತ್ತವಾಗುತ್ತವೆ. ಹೀಗಾಗಿ ಅಗ್ನಿಯ ಆಧಾರದಲ್ಲಿಯೆ ಕಾರ್ಯ ನಿರ್ವಹಿಸುವ ನಿಯಿತಿ ಇದೆ. ಸೂರ್ಯನಿಗೂ ಸಹಿತ ಈ ಅಗ್ನಿಯೇ ಶಕ್ತಿಪೂರೈಕೆಯ ಕೇಂಧ್ರವಾಗಿದ್ದಾನೆ. ಇವನು ಜ್ಯೋತಿಗಳನ್ನು ಸೃಷ್ಟಿಸುತ್ತಾನೆ.ಇವನು ತೇಜಸ್ಸನ್ನೂ ಸೃಷ್ಟಿಸುತ್ತಾನೆ. ಸೃಷ್ಟಿಯನ್ನೂ ರೂಪಿಸುತ್ತಾನೆ. ಇಂತಹ ಸೃಷ್ಟಿಯು ನಿಷೇಧಾತ್ಮಕ ಅಂಶಗಳಿಂದ ಕೂಡಿದ್ದಲ್ಲಿ , ಅದು ಛಾಯಾ ಸೃಷ್ಟಿ ಎನಿಸಿಕೊಳ್ಳುತ್ತದೆ. ಇದು ಸೂಕ್ತವಾಗಿದೆಯೋ ಇಲ್ಲವೋ ಎನ್ನುವ ಸಂಶಯಕ್ಕಿಂತ , ವೇದದ ಭೌತಶಾಸ್ತ್ರದ ರಚನೆ ಇದಾಗಿದೆ.
ತೇಜಸ್ಸು; ಇದು ಸುಸ್ಪಷ್ಟದಲ್ಲಾಗಲೀ ಅಥವಾ ಸಹಜ ಸ್ಪಷ್ಟತೆಯಲ್ಲಿ ಮತ್ತು ದೀಪ್ತಿಮಯಕಾಂತಿಯಲ್ಲಿ , ದಿನದ(ಬೆಳಗಿನ)ಪ್ರಕಾಶದಲ್ಲಿ ಇರುವಾಗ ಮನಃಕೋಶದ ತತ್ತ್ವಾಗಿರುತ್ತದೆ. ಜ್ಯೋತಿ ಅಥವಾ ಸೂರ್ಯಪ್ರಕಾಶವು ಅತ್ಯಂತ ಉಜ್ವಲವಾಗಿದ್ದು, ಪ್ರದೀಪ್ತತೆಯಿಂದ ಕೂಡಿದ್ದು,ಇದು ವಿಜ್ಞಾನಮಯ ಕೋಶದ ಆಧಾರವಾಗಿದೆ. ಅಗ್ನಿ ಅಥವಾ ತೇಜೋಮಯ ಪ್ರಕಾಶವು ಚಿತ್ಕೋಶದ ಆಧಾರತತ್ತ್ವವಾಗಿದೆ. ವಿದ್ಯುತ್ ಅಥವಾ ವಿದ್ಯುತ್-ಕಾಂತಿಯ ತೇಜೋಮಯತೆಯು ಆನಂದಕೋಶದ ಆಧಾರ ತತ್ತ್ವವಾಗಿದೆ. ಪ್ರಕಾಶವು ಸತ್-ಕೋಶದ ಆಧಾರವಾಗಿದೆ. ಹೀಗಾಗಿ ಈ ಏಳೂ ಅಂಶಗಳು ತಮ್ಮದೇ ಆದ ಗುಣವಿಶೇಷಗಳನ್ನು ಹಾಗೂ ಶಕ್ತಿಗಳನ್ನು ಹೊಂದಿವೆ. ಇಲ್ಲಿ ಶಕ್ತಿ (Energy) ಅಥವಾ ಚೈತನ್ಯಕ್ಕೆ ವಾಸ್ತವವು ಮತ್ತು ಪ್ರಕಾಶವು ಕೇವಲ ಶಕ್ತಿಯ ಗುಣಾತ್ಮಕ-ಸಹಚರಿಯಾಗಿರುತ್ತದೆ. ಈ ಸರ್ವ ವ್ಯವಸ್ಥೆಯಲ್ಲಿ , ಅಗ್ನಿಯು ಸರ್ವಶ್ರೇಷ್ಠನಾಗಿ , ವಿಶ್ವದಲ್ಲಿ ನೆಲೆಸಿದ್ದಾನೆ. ಇದು ವಿದ್ಯುತ್ ಗಿಂತಲೂ ಶ್ರೇಷ್ಠವಾಗಿದೆ. ಇಲ್ಲಿ ವಿದ್ಯುತ್ ಅಂಶದ ಪ್ರಧಾನ ದೇವತೆ ವಿಷ್ಣುವಾಗಿದ್ದರೂ ಸಹಿತ , ಮತ್ತೆ ಆನಂದಮಯ ಕೋಶದ ಒಡೆಯನೂ ವಿಷ್ಣುವೇ ಆಗಿದ್ದರೂ ಸಹಿತ , ಅಗ್ನಿಯೇ ಪ್ರಾಶಸ್ತ್ಯದಲ್ಲಿ ಇರುತ್ತಾನೆ. ಇದು ಉಪನಿಷತ್ತಿನಲ್ಲಿ ನಿರೂಪಿತವಾಗಿರುವ “ವಿದ್ಯತ್ತೋ ಮಾನವಃ(ವಿದ್ಯನ್ಮಾನವ)ದಲ್ಲಿ ಸ್ಪಷ್ಟವಾಗಿ ನಿರೂಪಿತವಾಗಿದೆ.
ವಿಜ್ಞಾನದ ವಿಷಯದಲ್ಲಿ , ಸೂರ್ಯ ಮತ್ತು ವಿಷ್ಣುವಿಗಿಂತಲೂ ಅಗ್ನಿಯೇ ಮೇಲು ಎನ್ನುವದು ವಿಶ್ವಸತ್ಯ. ಆದರೆ ಇಲ್ಲಿ , ವಿಷ್ಣು ಮತ್ತು ಸೂರ್ಯ ಇಬ್ಬರೂ ಅಗ್ನಿಯ ಪ್ರಭುತ್ವದ ಚೇತನದಲ್ಲಿ (ಶಕ್ತಿ)ಯಲ್ಲಿಯೇ ಕಾರ್ಯ ಪ್ರವೃತ್ತರಾಗಿ –ಇಂದ್ರನನ್ನು ತೃಪ್ತಿಪಡಿಸಲು ಕಾರ್ಯ ನಿರ್ವಹಿಸುತ್ತಾರೆ. ವಿಷ್ಣುವನ್ನು ಇಂದ್ರನಿಗಿಂತಲೂ ಕೆಳಹಂತದಲ್ಲಿರುವ ದೇವತೆಯನ್ನಾಗಿ ರೂಪಿಸಿ –ಉಪೇಂದ್ರನೆಂದು ಕರೆದು- ಉಪನಿಷತ್ತುಗಳು ಈ ವಿಷಯದ ಹಿಂದಿರುವ ರಹಸ್ಯವನ್ನು ತೆರೆದಿಟ್ಟಿವೆ.
ಆಧುನಿಕ ಭೌತಶಾಸ್ತ್ರ ಮತ್ತು ಅಗ್ನಿ;
ಇವೆಲ್ಲ ವಿಷಯವನ್ನು ಆಧುನಿಕ ಭೌತಶಾಸ್ತ್ರದ ಪರಿಧಿಯಲ್ಲಿ ಅನುವಾದಿಸುವದಾದರೆ , ಅಗ್ನಿಯು ಉಷ್ಣತೆ ಮತ್ತು ತಂಪು ಎರಡನ್ನೂ ರೂಪಿಸವ , ನಿರ್ದೇಶಿಸುವ, ನಿರೂಪಿಸುವ ಶಕ್ತಿಯಾಗಿದ್ದಾನೆ. ಅಲ್ಲದೇ , ಪ್ರಕಾಶ ಮತ್ತು ಉಷ್ಣತೆ (ಶಾಖ)ದ ಪ್ರಾತಿಭಾಸಿಕ ಜಗತ್ತಿನಲ್ಲಿ ಈ ಅಗ್ನಿಯೇ ಆಧಾರಭೂತ ಶಕ್ತಿತತ್ವವಾಗಿದೆ. ಇಲ್ಲಿ ಸೂರ್ಯನು ಪ್ರಕಾಶ ಮತ್ತು ಉಷ್ಣದ ಸಂಗ್ರಹಾಗಾರ ಮಾತ್ರ. ವಿಶಿಷ್ಟ ತೆರನಾದ ಸೂರ್ಯನ ಜ್ವಾಲೆಗಳುಕೇವಲ ತೇಜಸ್ಸಿನ ಸ್ವರೂಪವನ್ನು ಮಾತ್ರ ಕಾಣಿಸುತ್ತವೆ. ಹೀಗಾಗಿಯೇ ನಾವು ಸೂರ್ಯಪ್ರಕಾಶವನ್ನು ಪ್ರಕಾಶದ ಸ್ಥಾಯೀಶಕ್ತಿಯೆಂದು (Static energy) ಅಥವಾ ಸಾರಭೂತ ಪ್ರಕಾಶವೆಂದು ಕರೆಯುತ್ತೇವೆ.ಇದು ಸತ್-ಕೋಶದ ಆಧಾರವಾಗಿದೆ. ಇದೇ ವಿದ್ಯುತ್ಕಾಂತೀಯ ಶಕ್ತಿಯಾಗಿದ್ದು ಅಥವಾ ವಿದ್ಯುತ್ ಆಗಿರುತ್ತದೆ. ಇದರ ಜೊತೆಗೆ ಅಗ್ನಿಯ ತೇಜತ್ವವು ಸೂರ್ಯನ ಸ್ವಭಾವದಿಂದ ರೂಪಾಂತರಗೊಂಡು , ಪ್ರಕಾಶದ ವಿವಿಧ ಪ್ರಕಾರಗಳನ್ನು ರೂಪಿಸುವಲ್ಲಿ , ನಿರ್ಧರಣೆಗೊಳಿಸುವಲ್ಲಿ ಪ್ರಮುಖವಾಗಿರುತ್ತದೆ.
ಪ್ರಕಾಶ ಮತ್ತು ವಿದ್ಯುತ್;
ಇವೆರಡೂ ಅಗ್ನಿಯಲ್ಲಿ ಪ್ರವೇಶಿಸಿದಾಗ ಮಾತ್ರ ಕಾರ್ಯಪ್ರವೃತ್ತವಾಗುತ್ತವೆ. ಹೀಗಾಗಿ ಅಗ್ನಿಯ ಆಧಾರದಲ್ಲಿಯೆ ಕಾರ್ಯ ನಿರ್ವಹಿಸುವ ನಿಯಿತಿ ಇದೆ. ಸೂರ್ಯನಿಗೂ ಸಹಿತ ಈ ಅಗ್ನಿಯೇ ಶಕ್ತಿಪೂರೈಕೆಯ ಕೇಂಧ್ರವಾಗಿದ್ದಾನೆ. ಇವನು ಜ್ಯೋತಿಗಳನ್ನು ಸೃಷ್ಟಿಸುತ್ತಾನೆ.ಇವನು ತೇಜಸ್ಸನ್ನೂ ಸೃಷ್ಟಿಸುತ್ತಾನೆ. ಸೃಷ್ಟಿಯನ್ನೂ ರೂಪಿಸುತ್ತಾನೆ. ಇಂತಹ ಸೃಷ್ಟಿಯು ನಿಷೇಧಾತ್ಮಕ ಅಂಶಗಳಿಂದ ಕೂಡಿದ್ದಲ್ಲಿ , ಅದು ಛಾಯಾ ಸೃಷ್ಟಿ ಎನಿಸಿಕೊಳ್ಳುತ್ತದೆ. ಇದು ಸೂಕ್ತವಾಗಿದೆಯೋ ಇಲ್ಲವೋ ಎನ್ನುವ ಸಂಶಯಕ್ಕಿಂತ , ವೇದದ ಭೌತಶಾಸ್ತ್ರದ ರಚನೆ ಇದಾಗಿದೆ.
ಅರೇಬಿಯಾದ ಸಂಸ್ಕೃತಿಯಲ್ಲಿ ಸಂಸ್ಕೃತದ ಬೇರುಗಳು...
ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂದು ನೀವಂದು ಕೊಳ್ಳುತ್ತಿದ್ದರೆ ಅದು ನಿಮ್ಮ ತಪ್ಪಲ್ಲ ಬಿಡಿ. ಏಕೆಂದರೆ ನಾನು ಹೇಳ ಹೊರಟಿರುವ ವಿಷಯವಿರುವುದೇ ಹಾಗೆ. ಆದರೆ ಕೆಲದಿನಗಳ ಹಿಂದೆ ಓರ್ವರು ಮೆಕ್ಕಾದಲ್ಲಿ ಇರುವ ದೇವರು ಮಕ್ಕೆಶ್ವರ ಎಂದೂ ಅಲ್ಲಿ ಸಿಂಧೂ ನದಿ ಹರಿಯುತ್ತದೆ ಎಂದೂ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ನನಗೂ ಈ ವಿಷಯ ತಿಳಿದಿದ್ದು ಸುಧಾ ವಾರಪತ್ರಿಕೆಯಲ್ಲಿ ಇವರ ವಿರುದ್ಧ ಪ್ರಕಟವಾದ ಕೆಲ ಓದುಗರ ಪತ್ರ ಓದಿದ ಮೇಲೆಯೆ. ಯಾರೇ ಒಪ್ಪಲಿ ಅಥವಾ ಬಿಡಲಿ, ಅರೇಬಿಯದ ಮರಳುಗಾಡಿನಲ್ಲಿ ಭಾರತೀಯತೆಯ ಮತ್ತು ಸಂಸ್ಕೃತದ ಬೇರುಗಳು ತೀರಾ ಗಾಢವಾಗಿ ಹರಡಿ ಕೊಂಡಿರುವುದಂತೂ ಸುಳ್ಳಲ್ಲ.
ಮುಸ್ಲೀಮರು ಪವಿತ್ರ ಮೆಕ್ಕಾಯಾತ್ರೆ ಮಾಡುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಆ ಯಾತ್ರೆಗೂ ಸನಾತನ ಭಾರತೀಯ ಸಂಸ್ಕೃತಿಗೂ ದೇವರ ದಾಸಿಮಯ್ಯನೆಂದಂತೆ "ಎತ್ತಣ ಮಾಮರ ಎತ್ತಣ ಕೋಗಿಲೆ, ಎತ್ತಣದಿಂದೆತ್ತಣ ಸಂಬಂಧವಯ್ಯಾ" ಎಂದು ನೀವು ಕೇಳ ಬಹುದು. ಬಹಳಷ್ಟು ಮುಸ್ಲೀಮೇತರರಿಗೆ ತಿಳಿಯದೇನೆಂದರೆ ಮೆಕ್ಕಾದಲ್ಲಿ ಹಜ್ ಯಾತ್ರಿಕರು ಹಿಂದೂ ಸಂಪ್ರದಾಯದಂತೆ ಶುಭ್ರವಾಗಿ, ಹೊಲಿಯದ ಬಿಳಿ ಪಂಚೆ ಮತ್ತು ಉತ್ತರೀಯವನ್ನು ಹೊದ್ದು ಕಾಬಾದ (ಕಃ ಭಗವಾನ್= ಕಾಬಾ) ಶಿವ ಲಿಂಗಕ್ಕೆ ಏಳು ಪ್ರದಕ್ಷಿಣೆ ಹಾಕಿ ಅದನ್ನು ಮುಟ್ಟಿ ಭಕ್ತಿ ತೋರಿಸಿ, ಅದರ ಹತ್ತಿರವಿರುವ ಝಂಝಂ ಎಂಬ ಬಾವಿಯ ತೀರ್ಥ ಸೇವಿಸುತ್ತಾರೆ. ಶಿವನಿದ್ದಲ್ಲಿ ಗಂಗೆ ಇರಲೇ ಬೇಕಲ್ಲವೇ? ಅದಕ್ಕೇ ಏನೋ, ಅರೇಬಿಯದಂಥ ಮರುಭೂಮಿಯಲ್ಲೂ ಕಾಬಾದ ಹತ್ತಿರ ಝಂಝಂ ಎಂಬ ಸಿಹಿನೀರಿನ ತೀರ್ಥವಿದೆ. ಇವತ್ತಿಗೂ ಹಜ್ ಯಾತ್ರೆಗೆ ಹೋದ ಕೆಲವರು ಈ ತೀರ್ಥವನ್ನು ಬಾಟಲಿಗಳಲ್ಲಿ ತುಂಬಿ ಕೊಂಡು ತಮ್ಮೊಟ್ಟಿಗೆ ತರುತ್ತಾರೆ. ಏಳು ಪ್ರದಕ್ಷಿಣೆಯ ಹಿಂದೆಯೂ ಒಂದು ಅರ್ಥವಿದೆ. ಹಿಂದೂಗಳು ವಿವಾಹದ ಸಂದರ್ಭದಲ್ಲಿ ಅಗ್ನಿಗೆ ಏಳು ಪ್ರದಕ್ಷಿಣೆ ಹಾಕುತ್ತಾರೆ. "ಮಖ” ಎಂದರೆ ಸಂಸ್ಕೃತದಲ್ಲಿ ಅಗ್ನಿ ಅಥವಾ ಯಜ್ಞಕುಂಡ. ಇದು ಪೂರ್ವ ಏಷ್ಯಾದಲ್ಲಿ ಪ್ರಚಲಿತದಲ್ಲಿದ್ದ ಭಾರತೀಯ ಮೂಲದ ಅಗ್ನಿಪೂಜೆಯ ಮುಖ್ಯ ಕುರುಹು. ನಂತರದ ಕಾಬಾವನ್ನು ನಿರ್ಮಿಸಿದ ಅಬ್ರಹಾಮನ (ಬ್ರಹ್ಮಪಾದ) ಪಾದದ ಚಿಹ್ನೆ ಇರುವ ಕಲ್ಲಿಗೆ ಪ್ರದಕ್ಷಿಣೆ ಹಾಕಿ, ಅಪಾಪತ್ (ಆರ್ಯಪಥ)ನಲ್ಲಿ ಸುತ್ತಾಡಿ, ಅಬ್ರಹಾಮನು ಆಚರಿಸಿದ ಯಾಗದ ನೆನಪಿಗಾಗಿ ಪ್ರಾಣಿ ಬಲಿಯನ್ನು ಸಮರ್ಪಿಸುತ್ತಾರೆ. ಅಲ್ಲಿಂದ ನಂತರ ಮದೀನಾಕ್ಕೆತೆರಳುತ್ತಾರೆ.
ಈ controversial matterಗಳನ್ನು ಬಿಟ್ಟು ಬಿಡಿ. ಇಲ್ಲಿ ಹೇಳ ಬೇಕಾಗಿರುವುದು ಅರಬ್ ಮತ್ತು ಕುರಾನುಗಳಲ್ಲಿ ಸಂಸ್ಕೃತದ ಪ್ರಭಾವ ಎಷ್ಟಿದೆ ಎಂಬುದನ್ನು ಕೆಲವು ಉದಾಹರಣೆಗಳನ್ನೇ ಗಮನಿಸಿ: ಅಬ್ರಹಾಮ (ಬ್ರಹ್ಮ), ಸರ್ಈ (ಸರಸ್ವತಿ), ಈದ್-ಗಾರ್ (ಈಡಾಗೃಹ), ಖುದಾ (ಸ್ವಧಾ), ನಮಾಜ್ (ನಮಃ ಯಜ್), ಕುರಾನ್ (ಕುರವಾಣಿ), ಸುರಾ (ಸ್ವರ), ಶಬ್-ಎ-ಬಾರತ್ (ಶಿವರಾತ್ರಿಯ ವೃತ) ಸುನ್ನಿ (ಶೂನ್ಯವಾದಿ) ಇತ್ಯಾದಿ ಇತಾದಿ... ಇವು ಬಹಳ ಸಾದಾಸೀದಾ ಶಬ್ದಗಳಾದವು. ಇನ್ನೂ ಒಳಹೊಕ್ಕು ನೋಡಿದರೆ ಇಂತಹುದೇ ಸಾವಿರಾರು ಅರಬ್ ಶಬ್ದಗಳಲ್ಲಿ ಸಂಸ್ಕೃತದ ಛಾಯೆ ಬಹಳ ಢಾಳಾಗಿಯೇ ಕಂಡು ಬರುತ್ತದೆ.
ವಿಶ್ವವಿಖ್ಯಾತ ಇತಿಹಾಸಜ್ಞ P.N.ಓಕ್ ಕಾಬಾ ಮತ್ತು ಅರಬ್ ಇತಿಹಾಸದ ಬಗ್ಗೆ ಒಂದು ಪುಸ್ತಕ ರಚಿಸಿದ್ದಾರೆ. ಹೆಸರೇನು ಗೊತ್ತೇ? ಕೇಳಿದರೆ ಆಶ್ಚರ್ಯ ಪಡುತ್ತೀರಿ! "Was the Kaaba Originally a Hindu Temple?" ಈ ಪುಸ್ತಕದ ಮುದ್ರಣ ಮತ್ತು ಮಾರಾಟ ಸ್ಥಗಿತಗೊಂಡಿದ್ದರೂ ಇದು ನಿಜಕ್ಕೂ ಎಲ್ಲಾ ಇತಿಹಾಸದ ಸಂಶೋಧನೆಗಳಿಗೆ ತಿರುವು ನೀಡ ಬಲ್ಲ ಅದ್ಭುತವಾದ ಪುಸ್ತಕ. ಈ ಪುಸ್ತಕದಲ್ಲಿ ಹೇಳಲಾದಂತೆ ಅರಬ್ಬಿನಲ್ಲಿ ಪ್ರಚಲಿತದಲ್ಲಿದ್ದ ಇನ್ನೂ ಕೆಲವು ಭಾರತೀಯ ಪದ್ಧತಿಗಳ ಬಗ್ಗೆ ಮತ್ತು ಸಂಸ್ಕೃತದ ಶಬ್ದಗಳ ಬಗ್ಗೆ ಓದಿ:
* ಇಸ್ಲಾಮ್ ಹರಡುವುದಕ್ಕಿಂತಲೂ ಮೊದಲು ಅರಬ್ ದೇಶಗಳಲ್ಲಿ ೩೩ ದೇವತೆಗಳನ್ನು ಪೂಜಿಸುತ್ತಿದ್ದರು. ಹಿಂದೂಗಳಲ್ಲೂ ೩೩ ರೀತಿಯ ದೇವರುಗಳನ್ನು ಪೂಜಿಸುವ ಪದ್ಧತಿ ಇದೆ.
* ಮುಸ್ಲೀಮರ ತಿಂಗಳು "ರಬಿ” ಸಂಸ್ಕೃತದಲ್ಲಿ ರವಿಯ ಅಪಭೃಂಶ. (ಸಂಸ್ಕೃತದ 'ವ’ ಪ್ರಾಕೃತದಲ್ಲಿ 'ಬ’ ಎಂದಾಗುತ್ತದೆ).
* ಮುಸ್ಲೀಮರ ಪವಿತ್ರ "ಗ್ಯಾರವೀ ಶರೀಫ್” ಹಿಂದೂಗಳ "ಏಕಾದಶಿ”ಗೆ ಸಮ. (ಗ್ಯಾರಾ=ಹನ್ನೊಂದು).
* ಈದ್ಗಾ ಎಂಬ ಶಬ್ದವನ್ನೇ ತೆಗೆದು ಕೊಳ್ಳಿ. ಈದ್ಗಾ ಅಥವಾ ಈದ್-ಗಾರ್ ಎಂಬುದೂ ಕೂಡ ಅಚ್ಚ ಸಂಸ್ಕೃತದಿಂದ ಬಂದದ್ದು. ಮೊದಲೇ ಹೇಳಿದಂತೆ "ಈದ್" ಅಂದರೆ ಸ್ತುತಿಸು; ಗೃಹ ಎಂದರೆ ಮನೆ. ಈದ್ಗಾ ಅಂದರೆ ಸ್ತುತಿಸುವ ಜಾಗ. ಅರೇಬಿಕ್-ನಲ್ಲೂ ಅದೇ ಅರ್ಥ ಬಳಕೆಯಲ್ಲಿದೆ. (ನೀವು ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ತಿಳಿದಿರ ಬಹುದು.)
* ಬಕ್ರೀದ್ ಅಥವಾ "ಬಕರೀ ಈದ್”, ಇದು ಅಶ್ವಮೇಧವನ್ನು ಹೋಲುತ್ತದೆ. ಬಕ್ರಿ ಅಂದರೆ ಕುರಿ ಅಥವಾ ಸಂಸ್ಕೃತದಲ್ಲಿ ಮೇಷ; ಈದ್= ಸ್ತುತಿಸು. ಬಕ್ರೀದಿನ ಆಚರಣೆ ನಡೆಯುವುದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುವ ಕಾಲದಲ್ಲಿ ಅಥವಾ ತಿಂಗಳಿನಲ್ಲೇ.
* "ಈದ್-ಉಲ್-ಪಿತರ್” ಎಂದರೆ ಇಸ್ಲಾಮಿನಲ್ಲೂ ಪೂರ್ವಜರನ್ನು ನೆನಸಿ ಕೊಳ್ಳುವುದು ಎಂದೇ. (ಪಿತರ್= ಪಿತೃ= ಪೂರ್ವಜರು)
* ನಾವು ಸಂಕ್ರಾಂತಿ ಮತ್ತು ಸಂಕಷ್ಟ ಚೌತಿಗಳಂದು ಚಂದ್ರನನ್ನು ನೋಡಿ ಆಹಾರ ಸೇವಿಸುವಂತೆ ಅವರಲ್ಲೂ ರಂಜಾನಿನ ಸಮಯದಲ್ಲಿ ಇದೇ ಪದ್ಧತಿಯಿದೆ.
* ಇದಕ್ಕಿಂತಲೂ ಚೋದ್ಯ ಅಂದರೆ, ನಿಮಗೆ ಅರಬಸ್ಥಾನ್ ಎಂಬ ಹೆಸರು ಹೇಗೆ ಬಂತು ಗೊತ್ತೇ? ಸಂಸ್ಕೃತದಲ್ಲಿ "ಅರ್ವ” ಎಂದರೆ ಕುದುರೆ. ಅದು ಅಪಭೃಂಶವಾಗಿ ಅರಬ ಎಂದಾಯಿತು. ಅರಬಸ್ತಾನ್ ಅಂದರೆ ಕುದುರೆಗಳ ನಾಡು. ಆಶ್ಚರ್ಯವೆಂದರೆ ಅರಬ್ಬಿನ ಕುದುರೆಗಳು ವಿಶ್ವವಿಖ್ಯಾತ.
"ಬ್ರಿಟಿಷರು ಬರುವ ಮೊದಲು ನಾವು ಮನುಷ್ಯರೇ ಆಗಿರಲಿಲ್ಲ. ನಮ್ಮದೊಂದು ದೇಶವೇ ಅಲ್ಲ. ಹಿಂದಿನದು ಘೋರ ಅಂಧಕಾರದ ಅಜ್ಞಾನದ ಯುಗ" ಎಂದೂ ಮೇಜು ಗುದ್ದುವ ಇತಿಹಾಸಕಾರರಿಗಾಗಲೀ, ಟಿಪ್ಪು ಕನ್ನಡ ಪ್ರೇಮಿ ಎಂದೂ ಪರಮತ ಸಹಿಷ್ಣುವೆಂದೂ, ಕೃಷ್ಣದೇವರಾಯ ಕನ್ನಡ ದ್ವೇಷಿಯೆಂದೂ ಅದ್ಭುತ (?) ಸಂಶೋಧನೆಗಳನ್ನು ನಡೆಸುವ ವಿದ್ವಾಂಸರುಗಳಿಗಾಗಲೀ, ಸೆಕ್ಯುಲರ್, ಕೋಮುವಾದ, ಪುರೋಹಿತಶಾಹಿ ಎಂದು ಬಡಬಡಿಸುವ ಸಾಹಿತಿಗಳಿಗಾಗಲೀ ಇಂಥದ್ದನ್ನೆಲ್ಲಾ ತಿಳಿದು ಕೊಳ್ಳಲು ಪುರುಸೊತ್ತಿಲ್ಲ. ಓದುವ ಧೈರ್ಯವಾಗಲೀ ತಿಳಿದು ಕೊಳ್ಳುವ ಮನಸ್ಸಾಗಲೀ ನಿಮಗಿರ ಬೇಕಷ್ಟೆ...
"ಪುರುಷರೆಂದರೆ ಯಾರು?"ಎಲ್ಲಾ ಮಹಿಳೆಯರು ತಪ್ಪದೆ ಇದನ್ನು ಓದಿ...
ಮೊದಲ ಬಾರಿ ಯಾರೊ ಒಬ್ಬರು ಪುರುಷರ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನು ಆಡಿದ್ದಾರೆ....!!!!
ಪುರುಷ ಎಂದರೆ ಯಾರು?
❗ ಪುರುಷ ಎಂದರೆ ದೇವರ ಸೃಷ್ಟಿಯ ಸುಂದರವಾದ ಭಾಗ
❗ ಆತ ತನ್ನಲ್ಲಿರುವ ಚೋಕ್ಲೇಟನ್ನು ತನ್ನ ಅಕ್ಕ ತಂಗಿಯರಿಗಾಗಿ ತ್ಯಾಗ ಮಾಡುವವನು..
❗ ಆತ ತನ್ನ ಕನಸುಗಳನ್ನು ತನ್ನ ಹೆತ್ತವರ ಮುಖದಲ್ಲಿ ನಗು ತರಿಸಲು ತ್ಯಾಗ ಮಾಡುವವನು..
❗ ತನ್ನಲ್ಲಿರುವ ಎಲ್ಲಾ pocket money ಯನ್ನು ತಾನು ಪ್ರೀತಿಸುವ ಹುಡುಗಿಯ ನಗು ನೋಡಲು ಉಡುಗೊರೆ ಖರೀದಿಸಿ ಖಾಲಿ ಮಾಡುವವನು..
❗ ತನ್ನ ಇಡೀ ಯೌವನವನ್ನು ತನ್ನ ಪತ್ನಿ ಮಕ್ಕಳಿಗಾಗಿ ತಡರಾತ್ರಿವರೆಗೆ ದುಡಿದು ಸವೆಸುವವನು..
❗ ಮುಂದಿನ ಭವಿಷ್ಯಕ್ಕಾಗಿ ಮನೆ ನಿರ್ಮಾಣ ಮಾಡಲು ಬ್ಯಾಂಕಿನಿಂದ loan ತೆಗೆದುಕೊಂಡು ತನ್ನ ಜೀವನ ಪೂರ್ತಿ ಆ ಲೋನ್ ಪಾವತಿಸುವವನು.
❗ ಇಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಆತ ತಾಯಿ, ಪತ್ನಿ ಹಾಗೂ boss ನ ಕೈಯಿಂದ ಬೈಗುಳ ಕೇಳ್ಬೇಕು....
❗ ಆತನ ಜೀವನ ಬೇರೆಯವರಿಗೆ ಸಂತೋಷ ನೀಡುವುದರಲ್ಲೇ ಕೊನೆಯಾಗುತ್ತದೆ.....
ಒಂದು ವೇಳೆ ಆತ ಹೊರಗಡೆ ಹೋದರೆ ಜವಾಬ್ದಾರಿ ಇಲ್ಲದ ಮನುಷ್ಯ.
ಆತ ಮನೆಯಲ್ಲೇ ಇದ್ದರೆ ಸೋಮಾರಿ...
ಒಂದು ವೇಳೆ ಮಕ್ಕಳಿಗೆ ಬೈದರೆ ಆತ ರಾಕ್ಷಸ
ಮಕ್ಕಳಿಗೆ ಬೈಯ್ಯದಿದ್ದರೆ ಆತ ಜವಾಬ್ದಾರಿ ಇಲ್ಲದ ಮನುಷ್ಯ.
ಪತ್ನಿಯನ್ನು ಕೆಲಸದಿಂದ ಬಿಡಿಸಿದರೆ ಪತ್ನಿಯ ಮೇಲೆ ಅಪನಂಬಿಕೆ ಹೊಂದಿರುವವ
ಒಂದು ವೇಳೆ ಪತ್ನಿಯನ್ನು ಕೆಲಸಕ್ಕೆ ಕಳಿಸಿದರೆ ಪತ್ನಿಯನ್ನು ದುಡಿಸಿ ತಿನ್ನುವವನು...
ಒಂದು ವೇಳೆ ತಾಯಿಯ ಮಾತು ಕೇಳಿದರೆ ತಾಯಿಯ ಮಗ
ಪತ್ನಿಯ ಮಾತು ಕೇಳಿದರೆ ಹೆಂಡತಿಯ ಗುಲಾಮ
ಆತ ನಿಮಗಾಗಿ ಅದೆಷ್ಟು ತ್ಯಾಗ ಮಾಡಿರಬಹುದೆಂಬ ಅರಿವು ನಿಮಗಿರಲಿಕ್ಕಿಲ್ಲ.. ಹಾಗಾಗಿ ಪ್ರತಿ ಪುರುಷರನ್ನು ಗೌರವಿಸಿ..
ಮೊದಲ ಬಾರಿ ಯಾರೊ ಒಬ್ಬರು ಪುರುಷರ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನು ಆಡಿದ್ದಾರೆ....!!!!
ಪುರುಷ ಎಂದರೆ ಯಾರು?
❗ ಪುರುಷ ಎಂದರೆ ದೇವರ ಸೃಷ್ಟಿಯ ಸುಂದರವಾದ ಭಾಗ
❗ ಆತ ತನ್ನಲ್ಲಿರುವ ಚೋಕ್ಲೇಟನ್ನು ತನ್ನ ಅಕ್ಕ ತಂಗಿಯರಿಗಾಗಿ ತ್ಯಾಗ ಮಾಡುವವನು..
❗ ಆತ ತನ್ನ ಕನಸುಗಳನ್ನು ತನ್ನ ಹೆತ್ತವರ ಮುಖದಲ್ಲಿ ನಗು ತರಿಸಲು ತ್ಯಾಗ ಮಾಡುವವನು..
❗ ತನ್ನಲ್ಲಿರುವ ಎಲ್ಲಾ pocket money ಯನ್ನು ತಾನು ಪ್ರೀತಿಸುವ ಹುಡುಗಿಯ ನಗು ನೋಡಲು ಉಡುಗೊರೆ ಖರೀದಿಸಿ ಖಾಲಿ ಮಾಡುವವನು..
❗ ತನ್ನ ಇಡೀ ಯೌವನವನ್ನು ತನ್ನ ಪತ್ನಿ ಮಕ್ಕಳಿಗಾಗಿ ತಡರಾತ್ರಿವರೆಗೆ ದುಡಿದು ಸವೆಸುವವನು..
❗ ಮುಂದಿನ ಭವಿಷ್ಯಕ್ಕಾಗಿ ಮನೆ ನಿರ್ಮಾಣ ಮಾಡಲು ಬ್ಯಾಂಕಿನಿಂದ loan ತೆಗೆದುಕೊಂಡು ತನ್ನ ಜೀವನ ಪೂರ್ತಿ ಆ ಲೋನ್ ಪಾವತಿಸುವವನು.
❗ ಇಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಆತ ತಾಯಿ, ಪತ್ನಿ ಹಾಗೂ boss ನ ಕೈಯಿಂದ ಬೈಗುಳ ಕೇಳ್ಬೇಕು....
❗ ಆತನ ಜೀವನ ಬೇರೆಯವರಿಗೆ ಸಂತೋಷ ನೀಡುವುದರಲ್ಲೇ ಕೊನೆಯಾಗುತ್ತದೆ.....
ಒಂದು ವೇಳೆ ಆತ ಹೊರಗಡೆ ಹೋದರೆ ಜವಾಬ್ದಾರಿ ಇಲ್ಲದ ಮನುಷ್ಯ.
ಆತ ಮನೆಯಲ್ಲೇ ಇದ್ದರೆ ಸೋಮಾರಿ...
ಒಂದು ವೇಳೆ ಮಕ್ಕಳಿಗೆ ಬೈದರೆ ಆತ ರಾಕ್ಷಸ
ಮಕ್ಕಳಿಗೆ ಬೈಯ್ಯದಿದ್ದರೆ ಆತ ಜವಾಬ್ದಾರಿ ಇಲ್ಲದ ಮನುಷ್ಯ.
ಪತ್ನಿಯನ್ನು ಕೆಲಸದಿಂದ ಬಿಡಿಸಿದರೆ ಪತ್ನಿಯ ಮೇಲೆ ಅಪನಂಬಿಕೆ ಹೊಂದಿರುವವ
ಒಂದು ವೇಳೆ ಪತ್ನಿಯನ್ನು ಕೆಲಸಕ್ಕೆ ಕಳಿಸಿದರೆ ಪತ್ನಿಯನ್ನು ದುಡಿಸಿ ತಿನ್ನುವವನು...
ಒಂದು ವೇಳೆ ತಾಯಿಯ ಮಾತು ಕೇಳಿದರೆ ತಾಯಿಯ ಮಗ
ಪತ್ನಿಯ ಮಾತು ಕೇಳಿದರೆ ಹೆಂಡತಿಯ ಗುಲಾಮ
ಆತ ನಿಮಗಾಗಿ ಅದೆಷ್ಟು ತ್ಯಾಗ ಮಾಡಿರಬಹುದೆಂಬ ಅರಿವು ನಿಮಗಿರಲಿಕ್ಕಿಲ್ಲ.. ಹಾಗಾಗಿ ಪ್ರತಿ ಪುರುಷರನ್ನು ಗೌರವಿಸಿ..
ಎಲ್ಲರಿಗೂ ಶೇರ್ ಮಾಡಲು ಮರೆಯದಿರಿ
ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ” ಎನ್ನುವ ಪದ ಪ್ರತಿಯೊಬ್ಬರ ನಾಲಿಗೆಯ ಮೇಲೆ ನೆಲೆದಾಡುವಂತಹ ದಾಸರ ಪದ. ಹಾಗೇ ಗುರುಗಳ ಸಂಪೂರ್ಣ ಅನುಗ್ರಹವಾದನಂತರವೇ ಆಯಾ ಜನರಿಗೆ ಸಂಪೂರ್ಣ ಜ್ಞಾನ ಪರಿಪೂರ್ಣವಾದ ಪರಿಜ್ಞಾನ, ಅರಿವು, ಮಾರ್ಗದರ್ಶನ ಸಿಗುವುದು. ಅಂತಹ ಗುರುಗಳೇ ನಮ್ಮ ಶ್ರೀ ಗುರು ರಾಘವೇಂದ್ರ ಗುರುಗಳು. ದೇವಲೋಕದಲ್ಲಿ ದೇವತೆಗಳಿಗೆ ದೇವೆಂದ್ರನು ಹೇಗೆಯೋ ಹಾಗೇ ಯತಿ ಪರಂಪರೆಗೆ ಹಿರಿಯರು ಶ್ರೀ ಗುರುರಾಘವೇಂದ್ರ ಸ್ವಾಮಿಗಳು.
ಯೋಗ ಸಿದ್ದಿಗಳಲ್ಲಿ ದತ್ತಾತ್ರೇಯನು ಹೇಗೆ ಶ್ರೇಷ್ಟನೋ ಎಲ್ಲಾ ಕಡಲುಗಳಿಗಿಂತ ಕ್ಷೀರ ಸಾಗರವು ಹೇಗೆ ಶ್ರೇಷ್ಟವೋ ಹಾಗೇ ಯತಿ ಪರಂಪರೆಯಲ್ಲಿ ಸರ್ವ ಶ್ರೇಷ್ಟರು, ಸರ್ವೋತ್ತಮರು ಶ್ರೀ ರಾಘವೇಂದ್ರರು. ದೇವರೆಂದರೆ ತಿರುಪತಿ ತಿಮ್ಮಪ್ಪನೇ, ಗುರುಗಳೆಂದರೆ ಮಂಚಲೆಯ ರಾಘಪ್ಪನೆ ಎಂಬ ನಾನ್ನುಡಿ ನಮ್ಮೆಲ್ಲರಿಗೂ ಗೊತ್ತಿರುವುದೇ. ಅಂತಹ ದಿವ್ಯ ಪುರುಷರ ಮಹಿಮೆಯನ್ನು ಕೊಂಡಾಡುವುದು ನಮ್ಮೆಲ್ಲರ ಭಕ್ತಿ ಹಾಗು ಶ್ರದ್ದೆಗಳಿಗೆ ಅದು ನಿದರ್ಶನ. ಇನ್ನು ರಾಘವೇಂದ್ರರು ಅನೇಕ ಪವಾಡಗಳನ್ನು ಮೆರೆದಿದ್ದಾರೆ. ಅವರ ಮಹಿಮೆಗಳು ಅಪಾರ. ಅದರಲ್ಲಿ ಒಂದು ಮಹಿಮೆಯನ್ನು ನಿಮ್ಮೊಂದಿಗೆ ನಾವು ಹಂಚಿಕೊಳ್ಳುತ್ತಿದ್ದೇವೆ.
ಶ್ರೀ ರಾಘವೇಂದ್ರ ಸ್ವಾಮಿಗಳ ಬಳಿ ಅನೇಕ ವಿಧ್ಯಾರ್ಥಿಗಳು ವೇದ ವ್ಯಾಸಂಗ ವೇದ ಪರಾಯಣವನ್ನು ಮಾಡುತ್ತಿದ್ದರು. ಅವರಲ್ಲಿ ಒಬ್ಬನಾದ ಬಡ ವಿಧ್ಯಾರ್ಥಿ ತನ್ನ ವಿದ್ಯಾಬ್ಯಾಸ ಮುಗಿಸಿ ಹೊರಡುವಾಗ ರಾಯರಲ್ಲಿ ಬಂದು ತನ್ನ ಬಡತನದ ಕಷ್ಟವನ್ನು ಅವರ ಬಳಿ ತೋಡಿಕೊಂಡನಂತೆ. ತನ್ನನ್ನು ಅನುಗ್ರಹಿಸಬೇಕೆಂದು ಶ್ರೀ ರಾಘವೇಂದ್ರರಲ್ಲಿ ಕೇಳಿಕೊಂಡನಂತೆ. ಸ್ನಾನ ಸಮಯದಲ್ಲಿ ಇದ್ದ ರಾಯರು ತಮ್ಮ ಬಳಿ ಕೊಡಲು ಏನೂ ಇಲ್ಲವಲ್ಲಾ ಎಂದರಂತೆ. ಅಗಾ ತಾವು ಏನು ಕೊಟ್ಟರು ಅದು ಮಹಾಪ್ರಸಾದವೆಂದು ಹೇಳಿದನಂತೆ ಆ ಬಡ ವಿಧ್ಯಾರ್ಥಿ.
ಆಗ ರಾಯರು ಒಂದು ಹಿಡಿ ಮಂತ್ರಾಕ್ಷತೆಯನ್ನು ವಿಧ್ಯಾರ್ಥಿಯ ಕೈಯಲ್ಲಿ ಕೊಟ್ಟರಂತೆ. ಭಕ್ತಿಯಿಂದ ಆ ಮಂತ್ರಾಕ್ಷತೆಯನ್ನು ಮಹಾಪ್ರಸಾದವೆಂದು ಪಡೆದುಕೊಂಡು ವಿಧ್ಯಾರ್ಥಿ ತನ್ನ ಊರಿನ ಕಡೆಗೆ ಹೊರಟನಂತೆ. ದಾರಿಯಲ್ಲಿ ಕತ್ತಲಾಗಿದ್ದ ಕಾರಣ ಒಂದು ಮನೆಯ ಜಗಲಿಯ ಮೇಲೆ ಮನೆ ಮಾಲಿಕರಲ್ಲಿ ಅಪ್ಪಣೆಯನ್ನು ಪಡೆದು ಮಲಗಿದನಂತೆ. ಆ ಸಮಯದಲ್ಲಿ ಮನೆಯ ಮಾಲಿಕನ ಹೆಂಡತಿ ಗರ್ಭಿಣಿಯಾಗಿದ್ದಳು ಮದ್ಯರಾತ್ರಿಯಲ್ಲಿ ಒಂದು ಪಿಶಾಚಿಯು ಆ ಮನೆಯೊಳಗೆ ಹೋಗಿ ಹೊಟ್ಟೆಯಲ್ಲಿರುವ ಮಗುವನ್ನು ಕೊಲ್ಲಬೇಕೆಂದು ಅಲ್ಲಿ ಬಂದಿತಂತೆ. ಆದರೆ ಜಗಲಿಯಲ್ಲಿ ಮಲಗಿದ್ದ ಆ ಬಡ ವಿದ್ಯಾರ್ಥಿ ಬಳಿಯಲ್ಲಿರುವ ಮಂತ್ರಕ್ಷತೆಯನ್ನು ದಾಟಲು ಪ್ರಯತ್ನಿಸಿದಾಗ ಮಂತ್ರಕ್ಷತೆಯು ಬೆಂಕಿಯಂತೆ ಪಿಶಚಿಯನ್ನು ತಡೆಯಿತಂತೆ. ಇದರಿಂದ ಗಾಭಾರಿಗೊಂಡ ಪಿಶಾಚಿಯು ಭಕ್ತನನ್ನು ನೋಡಿ ಮಂತ್ರಕ್ಷತೆಯುನ್ನು ದೂರ ಎಸೆಯಲು ಹೇಳಿತಂತೆ. ಪಿಶಚಿಯನ್ನು ನೋಡಿದ ಭಕ್ತ ಹೆದರಿ ಮಂತ್ರಕ್ಷತೆಯುನ್ನು ಪಿಶಾಚಿಯ ಮೇಲೆ ಯೇಸೆದನು. ಮಂತ್ರಕ್ಷತೆಯ ಪ್ರಭಾವದಿಂದ ಪಿಶಚಿಯು ಸುತ್ತು ಭಾಸ್ಮವಾಯಿತಂತೆ. ಪಿಶಾಚಿಯ ಚಿರಾಟವನ್ನು ಕೇಳಿದ ಮನೆಯವರು ಮನೆಯಿಂದ ಹೊರಬಂದು ನೋಡಿ ಬೆರಗಾದರು. ಅಷ್ಟರಲ್ಲಿ ಆರೋಗ್ಯಕರವಾದ ಮಗು ಜನಿಸಿದ ಸಂತೋಷಕರ ಸುದ್ದಿ ಕೇಳಿಬರುತ್ತದೆ. ರಾಯರು ಕೊಟ್ಟ ಮಂತ್ರಕ್ಷತೆಯ ಶಕ್ತಿಯಿಂದ ದುಷ್ಟ ಶಕ್ತಿಯ ನಾಶವಾಯಿತು. ಹೀಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡಗಳು ಅನೇಕ. ಮಹಿಮೆಗಳು ಅನೇಕ.
ಮಂತ್ರಾಲಯ ವಾಸಿಯಾದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯಲ್ಲಿ ಸಾಕಷ್ಟು ಜನ ತಮ್ಮ ತನು ಮನದಿಂದ ಆ ರಾಯರನ್ನ ಆರಾಧಿಸಿ ಸಕಲ ಇಷ್ಟಾರ್ಥಗಳನ್ನು ಪಡೆದುಕೊಳ್ಳುತ್ತಾರೆ ಅವರು ನೀಡಿದ ಮಂತ್ರಕ್ಷತೆಯಲ್ಲಿಯೇ ಅಷ್ಟು ಮಹಿಮೆ ಇರಬೇಕಾದರೆ ಅವರ ಕೃಪಾ ಕಟಾಕ್ಷವನ್ನು ಹೊಂದಿದವರು ಸಕಲ ಇಷ್ಟಾರ್ಥಗಳನ್ನು ಹೊಂದುತ್ತಾರೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
" ಶ್ರೀ ಕೃಷ್ಣ - ಕನಕರ ಬಾಂಧವ್ಯ "
ಶ್ರೀ ಕನಕದಾಸರು ಶ್ರೀ ಹರಿ ವಾಯು ಗುರುಗಳು ನೆಲೆಸಿರುವ ಸಕಲ ತೀರ್ಥ ಕ್ಷೇತ್ರಗಳ ಸಂದರ್ಶಿಸುತ್ತಾ ಶ್ರೀ ಕ್ಷೇತ್ರ ಉಡುಪಿಗೆ ಬಂದರು.
ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು ಸಂಚಾರದಲ್ಲಿದ್ದರು. ಶ್ರೀ ಕೃಷ್ಣ ಪರಮಾತ್ಮನ ದರ್ಶನ ಮಾಡಬೇಕೆಂದರೆ ಶ್ರೀ ದಾಸಾರ್ಯರಿಗೆ ಅವಕಾಶ ಸಿಗಲಿಲ್ಲ. ಈ ಸಂದರ್ಭದಲ್ಲಿ ದೇವಾಲಯದ ಪಶ್ಚಿಮ ಭಾಗದಲ್ಲಿ ಶ್ರೀ ಕನಕದಾಸರು ಸ್ತೋತ್ರ ಮಾಡುತ್ತಾ ನಿಂತರು. ಒಮ್ಮೆಯಾದರೂ ಶ್ರೀ ಕೃಷ್ಣ ಪರಮಾತ್ಮನ ದರ್ಶನಕ್ಕೆ ಬಿಡು ಎಂದು ಶ್ರೀಮಠದ ಪರಿಚಾರಕನನ್ನು ಕೇಳಿದರು. ಅದಕ್ಕೆ ನಿನಗೆ ದೇವರು ಒಲಿದಿದ್ದರೆ ನಿದರ್ಶನವನ್ನು ತೋರಿಸು! ನಂತರದಲ್ಲಿ ನಾನೇ ನಿನ್ನನ್ನು ಶ್ರೀ ಕೃಷ್ಣ ಪರಮಾತ್ಮನ ದರ್ಶನಕ್ಕೆ ಕರೆದೊಯ್ಯುವನು ಎಂದನು!
ಶ್ರೀ ಯಮಾಂಶ ಕನಕದಾಸರು ಭಕ್ತಿಯಿಂದ...
ಸಾಂದೀಪನ ಮಗನ ತಂದಿತ್ತ ಶ್ರೀ ಕೃಷ್ಣನ ಕಂಡಂತೆ । ವಿನತೆಗೆ ಯಮಿ೦ತವ ತಂದಿತ್ತ ಗರುತ್ಮನ ಕಂಡಂತೆ । ರಾಮಗೆ ಸೀತೆಯ ಕಂಡು ಬಂದ ಹನುಮನ ಕಂಡಂತೆ ।
ರಾಮರ ಕಂಡ ಭರತನ ಕಂಡಂತೆ । ಸಾಂದೀಪನಿಗೆ ಆದಿಕೇಶವನ ದಾಸರ ಕಂಡರೆ ಹಲವು ಮಾತೆನೆ । ನೆಂದ ಹರಣ ಬಂದಂತೆ ಸಂದೀಪಗೆ ।।
ರಾಮರ ಕಂಡ ಭರತನ ಕಂಡಂತೆ । ಸಾಂದೀಪನಿಗೆ ಆದಿಕೇಶವನ ದಾಸರ ಕಂಡರೆ ಹಲವು ಮಾತೆನೆ । ನೆಂದ ಹರಣ ಬಂದಂತೆ ಸಂದೀಪಗೆ ।।
ಎಂದು ಸ್ತೋತ್ರ ಮಾಡುತ್ತಿರುವ ಶ್ರೀ ಕನಕದಾಸರ ಭಕ್ತಿಗೆ ಮೆಚ್ಚಿ ಪೂರ್ವಾಭಿಮುಖನಿದ್ದ ಶ್ರೀ ಕೃಷ್ಣ ಪರಮಾತ್ಮನು ತಟ್ಟನೆ ಪಶ್ಸಿಮಾಭಿಮುಖವಾಗಿ ನಿಂತು ಶ್ರೀ ದಾಸರಿಗೆ ಪರಮಾನುಗ್ರಹ ಮಾಡಿ ಶ್ರೀ ಕ್ಷೇತ್ರ ಉಡುಪಿಯಲ್ಲಿ ಶ್ರೀ ದಾಸಾರ್ಯರಿಗೆ ಸಕಲ ವ್ಯವಸ್ಥೆ ಮಾಡಿದನು. ಇದು ಅಲ್ಲವೇ ಭಕ್ತಾಪರಾಧೀನನಾದ ತನ್ನ ಭಕ್ತರ ಮೇಲೆ ತೋರುವ ಕಾರುಣ್ಯ!!
ಶ್ರೀ ವರಗಡದಿನ್ನಿ ಶೇಷದಾಸರು...
ಹೀನಜನೆಂದು ದೇವಸ್ಥಾನದಿಂದಟ್ಟಲು ।
ಮಾನವಂತರೆನೆ ತೊರೆದ ।
ಮಾನಿ ವರಗಡದಿನ್ನೆ ಶೇಷವಿಠ್ಠಲ ಭಕ್ತಿಗೆ ।
ತಾನೊಲಿದು ದರ್ಶನವಿತ್ತ - ಹಿಂದಿರುಗುತ್ತ ।।
ಮಾನವಂತರೆನೆ ತೊರೆದ ।
ಮಾನಿ ವರಗಡದಿನ್ನೆ ಶೇಷವಿಠ್ಠಲ ಭಕ್ತಿಗೆ ।
ತಾನೊಲಿದು ದರ್ಶನವಿತ್ತ - ಹಿಂದಿರುಗುತ್ತ ।।
ಶ್ರೀ ಜಯೇಶವಿಠ್ಠಲರು...
ಚಿನ್ನ ಜಯಕೃಷ್ಣನ ಸ್ತುತಿಸಿ ಕಿಂಡಿಯ ತೆರಿಸಿ ।
ಕಣ್ಣು ಮನ ತಣಿವಂತೆ ಕಂಡವರು ಅವನ ।
ಬಣ್ಣದಾ ಈ ಬದುಕು ಎಂದಿಗೂ ನಿಲದೆಂದು ।
ಬೆಣ್ಣೆ ಮಾತುಗಳಲಿ ಬೋಧಿಸಿದರು ।।
ಕಣ್ಣು ಮನ ತಣಿವಂತೆ ಕಂಡವರು ಅವನ ।
ಬಣ್ಣದಾ ಈ ಬದುಕು ಎಂದಿಗೂ ನಿಲದೆಂದು ।
ಬೆಣ್ಣೆ ಮಾತುಗಳಲಿ ಬೋಧಿಸಿದರು ।।
ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು ಸಂಚಾರ ಮುಗಿಸಿ ಶ್ರೀ ಕ್ಷೇತ್ರ ಉಡುಪಿಗೆ ಬಂದರು. ಶ್ರೀ ಕನಕದಾಸರು ಉಡುಪಿಗೆ ಬಂದಿರುವುದನ್ನೂ - ಶ್ರೀ ಕೃಷ್ಣ ಪರಮಾತ್ಮನು ಶ್ರೀ ದಾಸರ ಮೇಲೆ ತೋರಿದ ಕಾರುಣ್ಯವನ್ನು ಕೇಳಿ ಬಹಳಾ ಸಂತೋಷಪಟ್ಟರು.
ಶ್ರೀ ಕನಕದಾಸರನ್ನು ಸದಾ ಬಳಿಯಲ್ಲಿಯೇ ಇಟ್ಟುಕೊಂಡು ಭಗವಂತನ ವಿಷಯದಲ್ಲಿಯೇ ಕಾಲ ಕಳೆಯುತ್ತಿದ್ದರು ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು!
ಪ್ರತಿದಿನ ಶ್ರೀ ಕೃಷ್ಣ ಪರಮಾತ್ಮನ ಮುಂದೆ ದಾಸರೊಂದಿಗೆ ಭಜನೆ ಮಾಡುತ್ತಿದ್ದಾಗ ಏನಾದರೂ ವಿಚಿತ್ರ ಮಹಿಮೆ ಕಂಡು ಬರುತ್ತಿತ್ತು.
ಶ್ರೀ ಕನಕದಾಸರು ಶ್ರೀ ಕ್ಷೇತ್ರ ಉಡುಪಿಯಲ್ಲಿ ಅನೇಕ ಪದ - ಪದ್ಯಗಳನ್ನು ರಚಿಸುವುದರ ಜೊತೆಗೆ ಹರಿಭಕ್ತಿಸಾರ, ನಳಚರಿತ್ರೆ, ನರಸಿಂಹಸ್ತವ, ರಾಮಧಾನ್ಯಚರಿತೆಯನ್ನು ರಚಿಸಿದರು.
ಶ್ರೀ ಕನಕದಾಸರು ಉಡುಪಿಯಿಂದ ನೇರವಾಗಿ ಗುರುಗಳಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಸನ್ನಿಧಿಯಲ್ಲಿರಬೇಕೆಂದು ವಿಜಯನಗರಕ್ಕೆ ಬಂದು ಗುರುಗಳ ಜೊತೆ ಕೆಲವು ಕಾಲ ಇದ್ದು ಅವರ ಅನುಮತಿ ಪಡೆದು ತಿರುಮಲೆಯ ಚೆಲುವ ಶ್ರೀ ಶ್ರೀನಿವಾಸನ ದರ್ಶನ ಮಾಡಿ ಕಾಗಿನೆಲೆಗೆ ಬಂದು ಹತ್ತಿರದಲ್ಲಿಯೇ ಇರುವ ಕದರಮಂಡಲಗಿ ಶ್ರೀ ಪ್ರಾಣದೇವರ ಸನ್ನಿಧಿಯಲ್ಲಿ ಶ್ರೀ ವಾಯುದೇವರ ಸೇವೆ ಮಾಡಿ " ಮೋಹನ ತರಂಗಿಣೀ " ಎಂಬ ಕಾವ್ಯವನ್ನು ರಚಿಸಿ ಶ್ರೀ ಆದಿಕೇಶವನಿಗೆ ಅರ್ಪಿಸಿದರು!!
ಶ್ರೀ ಗೋಪಾಲದಾಸರು...
ಯಮಾಂಶಸ್ಯ ಪರಾಭಕ್ತ್ಯಾ ಸುಪ್ರಸನ್ನೋ ಹರಿಃಸ್ವಯಂ ।
ಯಸ್ಯಾಚಾರ್ಯೋ ವ್ಯಾಸರಾಯಃ ತಂ ವಂದೇ ಕನಕಾಭಿದಂ ।।
ಯಸ್ಯಾಚಾರ್ಯೋ ವ್ಯಾಸರಾಯಃ ತಂ ವಂದೇ ಕನಕಾಭಿದಂ ।।
ಸಾತ್ವಿಕ ಭಕುತರ ಸಂಗವನಿತ್ತು ।
ವೊತು ಹೊರವ ನಮ್ಮನಾದಿಕೇಶವ ।।
ವೊತು ಹೊರವ ನಮ್ಮನಾದಿಕೇಶವ ।।
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
ಗುರು ವಿಜಯ ಪ್ರತಿಷ್ಠಾನ
#ದೀಪಲಕ್ಷಣ
ಮನೆಯೊಳಗೆ ದೇವರ ದೀಪ ಹೇಗಿರ ಬೇಕು?
ಇದೊಂದು ಮಹಾ ಜಿಜ್ಞಾಸೆಯ ವಿಷಯ ಆಗಿದೆ. ಒಬ್ಬೊಬ್ಬರು ಒಂದೊಂದು ತರಹ ಹೇಳಿ ತಲೆ ಕೆಡಿಸಿ ಬಿಡುತ್ತಾರೆ. ನಿಜವಾದ ತತ್ವಗಳು, ವಾಡಿಕೆಗಳೇನು? ಅನೇಕ ಜನ ದೂರದರ್ಶನ ವಾಹಿನಿಗಳ ಪಾಠಗಳಿಂದ ಏನೇನೋ ಮಾಡ ಹೋಗಿ ಕೊನೆಗೆ ಗೊಂದಲದಲ್ಲಿದ್ದಿದ್ದೂ ಇದೆ. ನಾವು 'ತಸ್ಮಾತ್ ಶಾಸ್ತ್ರ ಪ್ರಮಾಣೇಷು' ಎಂದಂತೆ ಶಾಸ್ತ್ರ ವಚನವನ್ನು ಮಾತ್ರ ಹೇಳಬಹುದಷ್ಟೆ.
ತಿಲ ತೈಲ (ಎಳ್ಳೆಣ್ಣೆ) ಮತ್ತು ಘೃತ (ತುಪ್ಪ) ದೀಪಗಳು ಮನೆಯೊಳಗೆ ದೇವರ ಕೋಣೆಯಲ್ಲಿಡಲು ಯೋಗ್ಯ. ಇನ್ಯಾವುದೇ ತೈಲಗಳು ದೇವರಿಗೆ ಯೋಗ್ಯವಲ್ಲ. ಆ ಇತರ ತೈಲಗಳು ವಾಮ ಪ್ರಯೋಗಾದಿಗಳಿಗೆ ಸಂಬಂಧಿಸಿದ್ದಾಗಿದೆ. ತಿಲವು ಪಾಪಹರವಾದರೆ, ಘೃತವು ಮೋಕ್ಷದಾಯಕ.
ಒಂದು ಸ್ಥಂಬದಲ್ಲಿ ಒಂದೇ ದೀಪ ಉರಿಯ ಬೇಕು ಅಥವಾ ದೀಪ ನಮಸ್ಕಾರ, ಉದ್ಘಾಟನೆಗಳ ಸಂದರ್ಭಗಳಲ್ಲಿ ಐದು ದೀಪ ಒಂದೇ ಸ್ಥಂಭದಲ್ಲಿ ಉರಿಯ ಬೇಕು.
*ಎರಡು ದೀಪ ಒಂದೇ ಸ್ಥಂಭದಲ್ಲಿದ್ದರೆ ಇದು ಭಿನ್ನಾಭಿಪ್ರಾಯ ಸೂಚಕ.
*ಮೂರು ಇದ್ದರೆ ಮರಣ ಸೂಚಕ.
*ನಾಲ್ಕು ಇದ್ದರೆ ಗೊಂದಲ.
*ಐದು ದೀಪಗಳು ಆರಾಧನೆಗೆ ಮಾತ್ರ.
*ಎರಡು ದೀಪ ಒಂದೇ ಸ್ಥಂಭದಲ್ಲಿದ್ದರೆ ಇದು ಭಿನ್ನಾಭಿಪ್ರಾಯ ಸೂಚಕ.
*ಮೂರು ಇದ್ದರೆ ಮರಣ ಸೂಚಕ.
*ನಾಲ್ಕು ಇದ್ದರೆ ಗೊಂದಲ.
*ಐದು ದೀಪಗಳು ಆರಾಧನೆಗೆ ಮಾತ್ರ.
ಇದರಲ್ಲಿ ಬತ್ತಿಗಳ ಪ್ರಮಾಣ:
*ಎರಡು ಬತ್ತಿ ದೇಹ ಮತ್ತು ಪ್ರಾಣಗಳ ಸಂಕೇತ.
*ಮೂರು ಬತ್ತಿ ತ್ರಿಶಕ್ತಿ ರೂಪ.
*ನಾಲ್ಕು ಬತ್ತಿಯು ಉತ್ತಮವಲ್ಲ.
*ಐದು ಬತ್ತಿಗಳು ಪಂಚಭೂತಗಳ ಸಂಕೇತ.
ಹಾಗಾಗಿ ನಾಲ್ಕು ಬತ್ತಿ ಬಿಟ್ಟು ಯಾವುದನ್ನೂ ಹಾಕ ಬಹುದು. ಆದರೂ ಎರಡು ಬತ್ತಿಯೇ ಮನೆಗಳಲ್ಲಿ ಶ್ರೇಷ್ಠ. ದೀಪ ಸ್ಥಂಭ, ದೀಪದ ಇಂಧನ ತೈಲವು ಮಲಿನವಾಗಿರ ಬಾರದು. ಹತ್ತಿ, ಕೀಟಾದಿಗಳು ಬಿದ್ದಿದ್ದರೆ ಅದನ್ನು ಶುಚಿಯಾಗಿಡ ಬೇಕು. ಎಳ್ಳೆಣ್ಣೆ ಮತ್ತು ತುಪ್ಪ ಮಿಶ್ರಣವಾಗಲೇ ಬಾರದು. ಕೈಯಲ್ಲಿ ಯಾವುದಾದರೂ ಬೇರೆ ತೈಲ ಇದ್ದರೆ ಇನ್ನೊಂದು ತೈಲ ಮುಟ್ಟ ಬೇಕಾದರೆ ಕೈಯ್ಯನ್ನು ಪ್ರಕ್ಷಾಳನ (ತೊಳೆದು) ಮಾಡಿಯೇ ಮುಟ್ಟ ಬೇಕು. ಅಂದರೆ ತುಪ್ಪದ ಕೈಯಲ್ಲಿ ಎಳ್ಳೆಣ್ಣೆ ಮುಟ್ಟ ಬಾರದು ಎಂದರ್ಥ.
*ಎರಡು ಬತ್ತಿ ದೇಹ ಮತ್ತು ಪ್ರಾಣಗಳ ಸಂಕೇತ.
*ಮೂರು ಬತ್ತಿ ತ್ರಿಶಕ್ತಿ ರೂಪ.
*ನಾಲ್ಕು ಬತ್ತಿಯು ಉತ್ತಮವಲ್ಲ.
*ಐದು ಬತ್ತಿಗಳು ಪಂಚಭೂತಗಳ ಸಂಕೇತ.
ಹಾಗಾಗಿ ನಾಲ್ಕು ಬತ್ತಿ ಬಿಟ್ಟು ಯಾವುದನ್ನೂ ಹಾಕ ಬಹುದು. ಆದರೂ ಎರಡು ಬತ್ತಿಯೇ ಮನೆಗಳಲ್ಲಿ ಶ್ರೇಷ್ಠ. ದೀಪ ಸ್ಥಂಭ, ದೀಪದ ಇಂಧನ ತೈಲವು ಮಲಿನವಾಗಿರ ಬಾರದು. ಹತ್ತಿ, ಕೀಟಾದಿಗಳು ಬಿದ್ದಿದ್ದರೆ ಅದನ್ನು ಶುಚಿಯಾಗಿಡ ಬೇಕು. ಎಳ್ಳೆಣ್ಣೆ ಮತ್ತು ತುಪ್ಪ ಮಿಶ್ರಣವಾಗಲೇ ಬಾರದು. ಕೈಯಲ್ಲಿ ಯಾವುದಾದರೂ ಬೇರೆ ತೈಲ ಇದ್ದರೆ ಇನ್ನೊಂದು ತೈಲ ಮುಟ್ಟ ಬೇಕಾದರೆ ಕೈಯ್ಯನ್ನು ಪ್ರಕ್ಷಾಳನ (ತೊಳೆದು) ಮಾಡಿಯೇ ಮುಟ್ಟ ಬೇಕು. ಅಂದರೆ ತುಪ್ಪದ ಕೈಯಲ್ಲಿ ಎಳ್ಳೆಣ್ಣೆ ಮುಟ್ಟ ಬಾರದು ಎಂದರ್ಥ.
ದೇವರ ದೀಪವನ್ನು ದೇವರ ಬಲ ಭಾಗದಲ್ಲಿಡ ಬೇಕು. (ಒಂದೇ ದೀಪ ಇಡುವುದಿದ್ದರೆ ಮಾತ್ರ. ಎರಡಿದ್ದರೆ ಎಡ ಬಲಗಳಲ್ಲಿ ಇಡ ಬಹುದು) ದೀಪದ ಮುಖ ಯಾವಾಗಲೂ ನಮ್ಮ ಅಂದರೆ ಪೂಜಿಸುವವರ ಕಡೆಗೆ, ಪೂರ್ವಾಭಿಮುಖ, ಉತ್ತರಾಭಿಮುಖ ಅಥವಾ ದೇವರ ಕಡೆ ಸ್ವಲ್ಪ ವಾಲುವಂತೆಯೂ ಇಡ ಬಹುದು.
ಇದು ಶಾಸ್ತ್ರೋಕ್ತವಾದ ದೀಪ ಲಕ್ಷಣ..
ಇದು ಶಾಸ್ತ್ರೋಕ್ತವಾದ ದೀಪ ಲಕ್ಷಣ..
ಕೃಪೆ : ವ್ಯಾಟ್ಸಪ್ ಗೆಳೆಯರು.
ನಮಃ ಶಿವಾಯ |’ ಎಂಬ ಪಂಚಾಕ್ಷರಿ ಮಂತ್ರದ ಅರ್ಥ
'ನಮಃ ಶಿವಾಯ |'ಇದು ಶಿವಪಂಚಾಕ್ಷರಿ ಮಂತ್ರವಾಗಿದೆ. ಯಜುರ್ವೇದದಲ್ಲಿನ ರುದ್ರಾಧ್ಯಾಯದಲ್ಲಿ 'ನಮಃ ಶಿವಾಯ|'ಈ ಶಬ್ದದಿಂದ ಒಂದು ಅನುವಾಕ (ಒಂದು ಉಪಭಾಗ) ಪ್ರಾರಂಭವಾಗುತ್ತದೆ. ಈ ಮಂತ್ರವನ್ನು ಅಲ್ಲಿಂದಲೇ ತೆಗೆದುಕೊಳ್ಳಲಾಗಿದೆ. ಇದರ ಪ್ರಾರಂಭದಲ್ಲಿ ಪ್ರಣವವನ್ನು ಸೇರಿಸಿದರೆ ಅದು 'ಓಂ ನಮಃ ಶಿವಾಯ|'ಎಂಬ ಷಡಕ್ಷರಿ ಮಂತ್ರವಾಗುತ್ತದೆ.
'ನಮಃ ಶಿವಾಯ |'ಮಂತ್ರದಲ್ಲಿನ ಪ್ರತಿಯೊಂದು ಅಕ್ಷರದ ಆಧ್ಯಾತ್ಮಿಕ ಅರ್ಥ
ನ = ಸಮಸ್ತ ಲೋಕಗಳ ಆದಿದೇವ
ಮಃ = ಪರಮನವನ್ನು ಕೊಡುವವನು ಮತ್ತು ಮಹಾಪಾತಕಗಳನ್ನು ನಾಶಗೊಳಿಸುವವನು
ಶಿ = ಕಲ್ಯಾಣಕಾರಕ, ಶಾಂತ ಮತ್ತು ಶಿವನ ಅನುಗ್ರಹಕ್ಕೆ ಕಾರಣವಾದವನು
ವಾ = ವೃಷಭವಾಹನ, ವಾಸುಕಿ ಮತ್ತು ವಾಮಾಂಗಿ ಶಕ್ತಿಗಳ ಸೂಚಕ
ಯ = ಪರಮಾನಂದರೂಪ ಮತ್ತು ಶಿವನ ಶುಭ ನಿವಾಸಸ್ಥಾನ ಆದುದರಿಂದ ಈ ಐದು ಅಕ್ಷರಗಳಿಗೆ ನಮಸ್ಕಾರ.
ಮಃ = ಪರಮನವನ್ನು ಕೊಡುವವನು ಮತ್ತು ಮಹಾಪಾತಕಗಳನ್ನು ನಾಶಗೊಳಿಸುವವನು
ಶಿ = ಕಲ್ಯಾಣಕಾರಕ, ಶಾಂತ ಮತ್ತು ಶಿವನ ಅನುಗ್ರಹಕ್ಕೆ ಕಾರಣವಾದವನು
ವಾ = ವೃಷಭವಾಹನ, ವಾಸುಕಿ ಮತ್ತು ವಾಮಾಂಗಿ ಶಕ್ತಿಗಳ ಸೂಚಕ
ಯ = ಪರಮಾನಂದರೂಪ ಮತ್ತು ಶಿವನ ಶುಭ ನಿವಾಸಸ್ಥಾನ ಆದುದರಿಂದ ಈ ಐದು ಅಕ್ಷರಗಳಿಗೆ ನಮಸ್ಕಾರ.
ನಟರಾಜ ಶಿವನ ತಾಂಡವ ನೃತ್ಯದೊಂದಿಗಿರುವ ಮೇಲಿನ ಮಂತ್ರದಲ್ಲಿನ ಐದು ಅಕ್ಷರಗಳ ಸಂಬಂಧವು ಕೆಳಗಿನಂತಿದೆ.
ನ = ಅಗ್ನಿಯಿರುವ ಕೈ
ಮಃ = ಮುಯಲಕ ದೈತ್ಯನನ್ನು ಮೆಟ್ಟುವ ಕಾಲು
ಶಿ = ಡಮರುಹಸ್ತ
ವಾ = ಪಸರಿಸಿರುವ ಹಸ್ತ
ಯ = ಅಭಯಹಸ್ತ
ಮಃ = ಮುಯಲಕ ದೈತ್ಯನನ್ನು ಮೆಟ್ಟುವ ಕಾಲು
ಶಿ = ಡಮರುಹಸ್ತ
ವಾ = ಪಸರಿಸಿರುವ ಹಸ್ತ
ಯ = ಅಭಯಹಸ್ತ
ಅನುಕ್ರಮವಾಗಿ ಈ ಐದು ಅಕ್ಷರಗಳ ಅರ್ಥವನ್ನು ಈಶ್ವರ, ಶಕ್ತಿ, ಆತ್ಮ, ಅಂತರ್ಧಾನ ಮತ್ತು ಪಾಪನಿವಾರಣೆ ಎಂದೂ ಹೇಳಲಾಗಿದೆ.
[07/11 11:27 PM] +91 94498 28225: ವಿಪ್ರಮುಖ್ಯೈಸ್ಸದಾ ವೇದವಾದೋನ್ಮುಖೈಃ |
ಸುಪ್ರತಾಪೈಃ ಕ್ಷಿತೀಶೇಶ್ವರೈಶ್ಚಾರ್ಚಿತಮ್ ||
ಅಪ್ರತರ್ಕ್ಯೋರುಸಂವಿದ್ಗುಣಂ ನಿರ್ಮಲಂ |
ಸಪ್ರಕಾಶಾಜರಾನಂದರೂಪಂ ಪರಮ್ ||
[07/11 11:27 PM] +91 94498 28225: ವಿಪ್ರಮುಖ್ಯೈಸ್ಸದಾ ವೇದವಾದೋನ್ಮುಖೈಃ |
ಸುಪ್ರತಾಪೈಃ ಕ್ಷಿತೀಶೇಶ್ವರೈಶ್ಚಾರ್ಚಿತಮ್ ||
ಅಪ್ರತರ್ಕ್ಯೋರುಸಂವಿದ್ಗುಣಂ ನಿರ್ಮಲಂ |
ಸಪ್ರಕಾಶಾಜರಾನಂದರೂಪಂ ಪರಮ್ ||
ಪ್ರೀಣಯಾಮೋ ವಾಸುದೇವಮ್ |
ದೇವತಾಮಂಡಲಾಖಂಡಮಂಡನಮ್ ||
ದೇವತಾಮಂಡಲಾಖಂಡಮಂಡನಮ್ ||
ಪದಚ್ಛೇದ ಮತ್ತು ಪದಪರಿಚಯಶಾಸ್ತ್ರ:-
ವಿಪ್ರಮುಖ್ಯೈಃ - ಅಕಾರಾಂತಪುಲ್ಲಿಂಗ ವಿಪ್ರಮುಖ್ಯ ಎಂಬ ಶಬ್ದದ ತೃತೀಯಾವಿಭಕ್ತಿಯ ಬಹುವಚನ ಶಬ್ದವಿದು.
ವಿಪ್ರಾಣಾಂ ಅಥವಾ ವಿಪ್ರೇಷು ಮುಖ್ಯಾಃ ತೈಃ | ಎಂದು ಷಷ್ಠೀ ಅಥವಾ ಸಪ್ತಮೀ ತತ್ಪುರುಷ ಸಮಾಸ.
ಸದಾ - ಕಾಲವಾಚಕ ಅವ್ಯಯವಿದು
ವೇದವಾದೋನ್ಮುಖೈಃ - ಅಕಾರಾಂತಪುಲ್ಲಿಂಗ ವೇದವಾದೋನ್ಮುಖ ಎಂಬ ಶಬ್ದದ ತೃತೀಯಾವಿಭಕ್ತಿಯ ಬಹುವಚನ ಶಬ್ದವಿದು.
ವೇದಾನಾಂ ವಾದಃ ವೇದವಾದಃ (ಷಷ್ಠೀತತ್ಪುರುಷ)
ವೇದವಾದೇ ಉನ್ಮುಖಾಃ ವೇದವಾದೋನ್ಮುಖಾಃ ತೈಃ | (ಸಪ್ತಮೀ ತತ್ಪುರುಷ)
ವೇದವಾದೇ ಉನ್ಮುಖಾಃ ವೇದವಾದೋನ್ಮುಖಾಃ ತೈಃ | (ಸಪ್ತಮೀ ತತ್ಪುರುಷ)
ಸುಪ್ರತಾಪೈಃ - ಅಕಾರಾಂತಪುಲ್ಲಿಂಗ ಸುಪ್ರತಾಪ ಎಂಬ ಶಬ್ದದ ತೃತೀಯಾವಿಭಕ್ತಿಯ ಬಹುವಚನ ಶಬ್ದವಿದು.
ಸುಷ್ಠು ಪ್ರತಾಪಂ ಏಷಾಂ ತೇ ಸುಪ್ರತಾಪಾಃ ತೈಃ | ಎಂದು ಬಹುವ್ರೀಹಿ ಸಮಾಸ.
ಕ್ಷಿತೀಶೇಶ್ವರೈಃ - ಅಕಾರಾಂತಪುಲ್ಲಿಂಗ ಕ್ಷಿತೀಶೇಶ್ವರ ಎಂಬ ಶಬ್ದದ ತೃತೀಯಾವಿಭಕ್ತಿಯ ಬಹುವಚನ ಶಬ್ದವಿದು.
ಕ್ಷಿತೇಃ ಭೂಮೇಃ ಈಶಃ ರಾಜಾನಃ ಕ್ಷಿತೀಶಃ (ಷಷ್ಠೀ ತತ್ಪುರುಷ) | ಕ್ಷಿತೀಶೇಷು ರಾಜಸು ಈಶ್ವರಾಃ ಶ್ರೇಷ್ಠಾಃ ಕ್ಷಿತೀಶೇಶ್ವರಾಃ ತೈಃ (ಸಪ್ತಮೀತತ್ಪುರುಷ)
ಚ - ಸಮುಚ್ಚಯ ಅವ್ಯಯ |
ಅರ್ಚಿತಮ್ - ಅಕಾರಾಂತಪುಲ್ಲಿಂಗ ಅರ್ಚಿತ ಎಂಬ ಶಬ್ದದ ದ್ವಿತೀಯಾವಿಭಕ್ತಿಯ ಏಕವಚನ ಶಬ್ದವಿದು.
ಅಪ್ರತರ್ಕ್ಯೋರುಸಂವಿದ್ಗುಣಮ್ - ಅಕಾರಾಂತಪುಲ್ಲಿಂಗ ಅಪ್ರತರ್ಕ್ಯೋರುಸಂವಿದ್ಗುಣ ಎಂಬ ಶಬ್ದದ ದ್ವಿತೀಯಾವಿಭಕ್ತಿಯ ಏಕವಚನ ಶಬ್ದವಿದು.
ತರ್ಕಸ್ಯ ಅಯಂ ತರ್ಕ್ಯಃ (ಅವ್ಯಯೀಭಾವ ಸಮಾಸ)
ಪ್ರಕರ್ಷೇಣ ತರ್ಕ್ಯಃ ಪ್ರತರ್ಕ್ಯಃ (ಪ್ರಾದಿ ಸಮಾಸ)
ನ ಪ್ರತರ್ಕ್ಯಃ ಅಪ್ರತರ್ಕ್ಯಃ (ನಞ್ ತತ್ಪುರುಷ)
ಉರು ಚ ತತ್ ಸಂವಿತ್ ಉತ್ತಮಜ್ಞಾನಂ ಚ ಉರುಸಂವಿತ್ (ಕರ್ಮಧಾರಯ ಸಮಾಸ)
ಉರುಸಂವಿತ್ ಏವ ಗುಣಃ (ಕರ್ಮಧಾರಯ ಸಮಾಸ) ಉರುಸಂವಿದ್ಗುಣಃ,
ಅಪ್ರತರ್ಕ್ಯಃ ಚ ಅಸೌ ಉರುಸಂವಿದ್ಗುಣಃ ಚ (ಕರ್ಮಧಾರಯ)
ಅಪ್ರತರ್ಕ್ಯೋರುಸಂವಿದ್ಗುಣಃ | ತಮ್ |
ಪ್ರಕರ್ಷೇಣ ತರ್ಕ್ಯಃ ಪ್ರತರ್ಕ್ಯಃ (ಪ್ರಾದಿ ಸಮಾಸ)
ನ ಪ್ರತರ್ಕ್ಯಃ ಅಪ್ರತರ್ಕ್ಯಃ (ನಞ್ ತತ್ಪುರುಷ)
ಉರು ಚ ತತ್ ಸಂವಿತ್ ಉತ್ತಮಜ್ಞಾನಂ ಚ ಉರುಸಂವಿತ್ (ಕರ್ಮಧಾರಯ ಸಮಾಸ)
ಉರುಸಂವಿತ್ ಏವ ಗುಣಃ (ಕರ್ಮಧಾರಯ ಸಮಾಸ) ಉರುಸಂವಿದ್ಗುಣಃ,
ಅಪ್ರತರ್ಕ್ಯಃ ಚ ಅಸೌ ಉರುಸಂವಿದ್ಗುಣಃ ಚ (ಕರ್ಮಧಾರಯ)
ಅಪ್ರತರ್ಕ್ಯೋರುಸಂವಿದ್ಗುಣಃ | ತಮ್ |
ನಿರ್ಮಲಮ್ - ಅಕಾರಾಂತಪುಲ್ಲಿಂಗ ನಿರ್ಮಲ ಎಂಬ ಶಬ್ದದ ದ್ವಿತೀಯಾವಿಭಕ್ತಿಯ ಏಕವಚನ ಶಬ್ದವಿದು.
ನಿರ್ಗತಂ ಮಲಂ ಯಸ್ಮಾತ್ ಸಃ ನಿರ್ಮಲಃ | (ಬಹುವ್ರೀಹಿ ಸಮಾಸ)
ಸಪ್ರಕಾಶಾಜರಾನಂದರೂಪಮ್ - ಅಕಾರಾಂತಪುಲ್ಲಿಂಗ ಸಪ್ರಕಾಶಾಜರಾನಂದರೂಪ ಎಂಬ ಶಬ್ದದ ದ್ವಿತೀಯಾವಿಭಕ್ತಿಯ ಏಕವಚನ ಶಬ್ದವಿದು.
ಪ್ರಕಾಶೇನ ಸಹಿತಃ ಸಪ್ರಕಾಶಃ (ಬಹುವ್ರೀಹಿ)
ನ ವಿದ್ಯತೇ ಜರಾ ಯಸ್ಯ ಸಃ ಅಜರಃ (ಬಹುವ್ರೀಹಿ)
ಆನಂದಂ ರೂಪಂ ಯಸ್ಯ ಸಃ ಆನಂದರೂಪಃ (ಬಹುವ್ರೀಹಿ)
ಸಪ್ರಕಾಶಃ ಚ ಅಸೌ ಅಜರಃ ಚ ಅಸೌ ಆನಂದರೂಪಃ ಚ ಸಪ್ರಕಾಶಾಜರಾನಂದರೂಪಃ | ತಮ್ |
ನ ವಿದ್ಯತೇ ಜರಾ ಯಸ್ಯ ಸಃ ಅಜರಃ (ಬಹುವ್ರೀಹಿ)
ಆನಂದಂ ರೂಪಂ ಯಸ್ಯ ಸಃ ಆನಂದರೂಪಃ (ಬಹುವ್ರೀಹಿ)
ಸಪ್ರಕಾಶಃ ಚ ಅಸೌ ಅಜರಃ ಚ ಅಸೌ ಆನಂದರೂಪಃ ಚ ಸಪ್ರಕಾಶಾಜರಾನಂದರೂಪಃ | ತಮ್ |
ಪರಮ್ - ಅಕಾರಾಂತಪುಲ್ಲಿಂಗ ಪರ ಎಂಬ ಶಬ್ದದ ದ್ವಿತೀಯಾವಿಭಕ್ತಿಯ ಏಕವಚನ ಶಬ್ದವಿದು.
ಪ್ರೀಣಯಾಮಃ - ಪ್ರೀಙ್ ಎಂಬ ಸಕರ್ಮಕಧಾತುವಿನ ಕರ್ತರೀಪ್ರಯೋಗದ, ಪರಸ್ಮೈಪದದ ವರ್ತಮಾನಕಾಲವಾದ ಲಟ್ ಲಕಾರದ ಉತ್ತಮಪುರುಷದ ಬಹುವಚನಾಂತವಾದ ಕ್ರಿಯಾಪದವಿದು.
ವಾಸುದೇವಮ್ - ಅಕಾರಾಂತಪುಲ್ಲಿಂಗ ವಾಸುದೇವ ಎಂಬ ಶಬ್ದದ ದ್ವಿತೀಯಾವಿಭಕ್ತಿಯ ಏಕವಚನ. ಶಬ್ದವಿದು.
ವಸುದೇವಸ್ಯ ಅಪತ್ಯಂ ಪುಮಾನ್ ವಾಸುದೇವಃ (ತದ್ಧಿತವೃತ್ತಿಃ) ತಮ್ |
ದೇವತಾಮಂಡಲಾಖಂಡಮಂಡನಮ್ - ಅಕಾರಾಂತಪುಲ್ಲಿಂಗ ದೇವತಾಮಂಡಲಾಖಂಡಮಂಡನ ಎಂಬ ಶಬ್ದದ ದ್ವಿತೀಯಾವಿಭಕ್ತಿಯ ಏಕವಚನ. ಶಬ್ದವಿದು.
ದೇವತಾನಾಂ ಮಂಡಲಂ - ದೇವತಾಮಂಡಲಮ್ (ಷಷ್ಠೀತತ್ಪುರುಷ)
ನ ಖಂಡಂ ಅಖಂಡಮ್ (ನಞ್ ತತ್ಪುರುಷ)
ಅಖಂಡಃ ಚ ಅಸೌ ಮಂಡನಃ ಚ ಅಖಂಡಮಂಡನಃ (ಕರ್ಮಧಾರಯ)
ದೇವತಾಮಂಡಲಸ್ಯ ಅಖಂಡಮಂಡನಃ (ಷಷ್ಠೀತತ್ಪುರುಷ) ದೇವತಾಮಂಡಲಾಖಂಡಮಂಡನಃ | ತಮ್ |
ನ ಖಂಡಂ ಅಖಂಡಮ್ (ನಞ್ ತತ್ಪುರುಷ)
ಅಖಂಡಃ ಚ ಅಸೌ ಮಂಡನಃ ಚ ಅಖಂಡಮಂಡನಃ (ಕರ್ಮಧಾರಯ)
ದೇವತಾಮಂಡಲಸ್ಯ ಅಖಂಡಮಂಡನಃ (ಷಷ್ಠೀತತ್ಪುರುಷ) ದೇವತಾಮಂಡಲಾಖಂಡಮಂಡನಃ | ತಮ್ |
ಅನ್ವಯ: (ಸಂಸ್ಕೃತವಾಕ್ಯರಚನಾಶಾಸ್ತ್ರ)
ವಯಂ ಸದಾ ವೇದವಾದೋನ್ಮುಖೈಃ ವಿಪ್ರಮುಖ್ಯೈಃ ಚ ಸುಪ್ರತಾಪೈಃ ಕ್ಷಿತೀಶೇಶ್ವರೈಃ ಅರ್ಚಿತಂ ಅಪ್ರತರ್ಕ್ಯೋರುಸಂವಿದ್ಗುಣಂ ನಿರ್ಮಲಂ ಸಪ್ರಕಾಶಾಜರಾನಂದರೂಪಂ ದೇವತಾಮಂಡಲಾಖಂಡಮಂಡನಂ ಪರಂ ವಾಸುದೇವಂ ಪ್ರೀಣಯಾಮಃ |
ವಯಮ್ - ನಾವು
ಸದಾ - ಯಾವಾಗಲೂ
ವೇದವಾದೋನ್ಮುಖೈಃ - ವೇದಾರ್ಥಗಳ ವಾದಗಳಲ್ಲಿ ಉನ್ಮುಖರಾದ
ವಿಪ್ರಮುಖ್ಯೈಃ - ಬ್ರಾಹ್ಮಣಶ್ರೇಷ್ಠರುಗಳಿಂದಲೂ
ಚ - ಮತ್ತು
ಸುಪ್ರತಾಪೈಃ - ಒಳ್ಳೆಯ ಶೌರ್ಯವುಳ್ಳ
ಕ್ಷಿತೀಶೇಶ್ವರೈಃ - ಸಾರ್ವಭೌಮರಾಜರಿಂದ
ಅರ್ಚಿತಂ - ಪೂಜಿಸಲ್ಪಟ್ಟವನಾದ
ಅಪ್ರತರ್ಕ್ಯ - ವಿಶೇಷವಾದ ತರ್ಕಕ್ಕೂ ನಿಲುಕದ
ಉರುಸಂವಿದ್ಗುಣಂ - ಹೆಚ್ಚಿನದಾದ ವಿಶೇಷವಾದ ಉತ್ತಮವಾದ ಜ್ಞಾನಾದಿ ಗುಣಗಳುಳ್ಳ
ನಿರ್ಮಲಂ - ಅತ್ಯಂತಪವಿತ್ರನಾದ
ಸಪ್ರಕಾಶ- ಕಾಂತಿಸಂಪನ್ನನಾದ
ಅಜರ - ಜನನಮರಣರಹಿತನಾದ
ಆನಂದರೂಪಮ್ - ಆನಂದವೇ ದೇಹವಾಗಿ ಉಳ್ಳ
ದೇವತಾಮಂಡಲ- ದೇವತೆಗಳ ಸಮೂಹಕ್ಕೆ
ಅಖಂಡಮಂಡನಮ್ - ಏಕಮೇವ ಅಲಂಕಾರಪ್ರಾಯನಾದ
ಪರಮ್ - ಎಲ್ಲರಿಗಿಂತಲೂ ಶ್ರೇಷ್ಠನಾದ
ವಾಸುದೇವಮ್ - ವಸುದೇವಪುತ್ರನಾದ ಶ್ರೀವಾಸುದೇವಕೃಷ್ಣನನ್ನು
ಪ್ರೀಣಯಾಮಃ - ಪ್ರೀತಿಸುತ್ತೇವೆ.
ವಿವರಣೆ:
ಚತುರ್ದಶಲೋಕಗಳಿಗೂ ಚತುರಪ್ರಾಯರೂ ಭೂಮಂಡಲಕ್ಕೆ ಮಂಡನಪ್ರಾಯರೂ ತಮ್ಮ ಅವತಾರದಿಂದ ಭೂಮಿಯನ್ನು ಹಾಗೂ ಭೂಮಿಯ ದೇವತೆಗಳಾದ ಸಜ್ಜನರನ್ನು ಉದ್ಧರಿಸುತ್ತಿರುವ ಕಲಿವೈರಿಮುನಿಗಳಾದ ಆಚಾರ್ಯಮಧ್ವರ ಕರಕಮಲಗಳಿಂದ ವಿರಚಿತವಾದ ದ್ವಾದಶಸ್ತೋತ್ರಮ್ ಎಂಬ ಭಕ್ತಿಪ್ರಧಾನಗ್ರಂಥದ ಎಂಟನೇ ಅಧ್ಯಾಯದ ೪ ನೇ ಶ್ಲೋಕವಿದು. ಭಗವಂತನನ್ನು ಆರಾಧಿಸಲು ಕೇವಲ ಭಗವಂತನಲ್ಲಿ ಭಕ್ತಿ ಎಷ್ಟು ಮುಖ್ಯವೋ, ಆತನ ವಿಷಯಕವಾದ ಜ್ಞಾನವೂ ಅಷ್ಟೇ ಮುಖ್ಯ. ಆ ಭಗವಮತನ ಬಗ್ಗೆ ತಿಳಿದುಕೊಂಡಮೇಲೆ ಮಾತ್ರವೇ ನಮಗೆ ನಿಜವಾದ ಭಕ್ತಿ ಬರಲು ಸಾಧ್ಯ. ಅಂತಹ ಭಗವಂತನ ಬಗ್ಗೆ ತಿಳಿಯಬೇಕಾದರೆ ಆತನ ವಿಷಯವಾಗಿ ತಿಳಿಸುವ ಜ್ಞಾನಿಗಳ ಅಭಿಪ್ರಾಯವನ್ನು ನಾವು ತಿಳಿಯಬೇಕಾಗುತ್ತದೆ. ಅದೃಷ್ಟವಶಾತ್ ಆಚಾರ್ಯಮಧ್ವರು ಇದನ್ನು ಈಗ್ಗೆ ಸುಮಾರು 800 ವರ್ಷಗಳ ಹಿಂದೆಯೇ ನಮಗೋಸ್ಕರ ಸಾಧಿಸಿ ಇಟ್ಟಿದ್ದಾರೆ. ಬರೀ ಗದ್ಯದಲ್ಲಿಟ್ಟರೆ ಓದುವುದಕ್ಕೆ ಆಗುವುದಿಲ್ಲ. ಆದ್ದರಿಂದ ಸುಂದರವಾದ ಪದ್ಯರೂಪದಲ್ಲಿ ಇಟ್ಟು ಜ್ಞಾನಪಿಪಾಸುಗಳಿಗೆ ಮರಳಿ ಮರಳಿ ಭಗವಂತನ ರೂಪದ ಚಿಂತನೆಯಾಗಿ ತನ್ಮೂಲಕ ಕಲಿಯ ವಿನಾಶಕ್ಕೆ ಅನುಕೂಲವಾಗುವಂತೇ ಈ "ದ್ವಾದಶಸ್ತೋತ್ರ" ವೆಂಬ ದಿವ್ಯವಾದ ಗ್ರಂಥವನ್ನು ದಯಪಾಲಿಸಿದ್ದಾರೆ.
ಈ ಅಧ್ಯಾಯದಲ್ಲಿ ಭಗವಂತನನ್ನು ನಾವೇಕೆ ಪ್ರೀತಿಸಬೇಕು ಎಂಬುವುದನ್ನು ವಿಶಾಲಮತಿಗಳಾದ ಆಚಾರ್ಯರು ವಿಶಾಲವಾಗಿ ವಿವರಿಸಿದ್ದಾರೆ. ಕೇವಲ ತಾವು ಒಬ್ಬರೇ ಆ ಭಗವಂತನನ್ನು ಪ್ರೀತಿಸದೇ, ಸಕಲ ಸಜ್ಜನರೂ ಕೂಡ ಪ್ರೀತಿಸುವಂತೇ ಹಾಗೂ ಆ ಪ್ರೀತಿಗೆ ಪೂರಕವಾಗುವಂತೇ ಈ ಗ್ರಂಥದ ರಚನೆಯಾಗಿದೆ.
ಪ್ರಕೃತ ಶ್ಲೋಕದಲ್ಲಿ ಯಾವ ಭಗವಂತನನ್ನು ನಾವು ಪ್ರೀತಿಸುತ್ತಿದ್ದೇವೆ ಎಂಬುವುದನ್ನು ವಿವರಿಸುತ್ತಾ ಆಚಾರ್ಯರು ಹೀಗೆ ಹೇಳಿದ್ದಾರೆ....
ಯಾವಾಗಲೂ ವೇದ ಮತ್ತು ವೇದಾರ್ಥಗಳ ಬಗ್ಗೆ ಚರ್ಚಿಸುವ ಬ್ರಾಹ್ಮಣಶ್ರೇಷ್ಠರುಗಳಿಂದಲೂ, ಉತ್ತಮವಾದ ಪರಾಕ್ರಮವುಳ್ಳ ರಾಜಾಧಿರಾಜರಿಂದಲೂ ಪೂಜಿತನಾದ, ತರ್ಕ ಅಥವಾ ವಿಚಾರಕ್ಕೂ ನಿಲುಕದ ಹೆಚ್ಚಿನ ಉತ್ತಮವಾದ ಜ್ಞಾನವನ್ನು ಅಥವಾ ಸಜ್ಞಾನವೆಂಬ ಗುಣವನ್ನು ಹೊಂದಿದವನಾದ, ಹಾಗೂ ಈ ಸದ್ಗುಣಗಣಗಳಿರುವುದರಿಂದಲೇ ಸದಾ ಶುದ್ಧನಾದ ಪವಿತ್ರನಾದ, ಈ ರೀತಿ ಪಾವಿತ್ರ್ಯವಿರುವುದರಿಂದಲೇ ಕೋಟಿಸೂರ್ಯರ ಮೀರಿದ ಪ್ರಕಾಶವನ್ನು ಉಳ್ಳ, ಜನನ ಮರಣ ರಹಿತನಾದ,ಆನಂದವೇ ದೇಹವಾಗಿ ಉಳ್ಳ, ಸಕಲ ದೇವತೆಗಳಿಗೂ ಸುಂದರನೂ ಶ್ರೇಷ್ಠನೂ ಆದ ವಸುದೇವನ ಮಗನಾದ ಶ್ರೀವಾಸುದೇವಕೃಷ್ಣನನ್ನು ನಾವು ಪ್ರೀತಿಸುತ್ತೇವೆ.
ಹೀಗೇ ಪ್ರತಿಯೊಂದು ಶ್ಲೋಕದಲ್ಲೂ ಶ್ರೀಹರಿಯ ಅನಂತಾನಂತ ಸದ್ಗುಣಗಳನ್ನು ವಿವರಿಸುತ್ತಾ ಭಗವಂತನ ಶ್ರೇಷ್ಠತೆಯನ್ವು ಓತಪ್ರೋತವಾಗಿ ಶ್ರೀಮದಾಚಾರ್ಯರು ಈ ಗ್ರಂಥದಲ್ಲಿ ತುಂಬಿಸಿ ಅತ್ಯಂತ ಸರಳವಾದ ಶ್ಲೋಕಗಳಿಂದ ಸಜ್ಜನರಿಗೆ ಅರ್ಥವಾಗುವಂತೇ ರಚಿಸಿದ್ದಾರೆ.
ಈ ಶ್ಲೋಕದ ಪ್ರತಿಪದಾರ್ಥವಿವರಣೆಯಲ್ಲಿ ಏನಾದರೂ ನ್ಯೂನತೆಗಳಿದ್ದಲ್ಲಿ ದಯವಿಟ್ಟು ಸೂಚಿಸಿ ಈ ಅಲ್ಪನಿಗೆ ತಿದ್ದಿಕೊಳ್ಳುವ ಅವಕಾಶವನ್ನು ಕೊಡಬೇಕೆಂದು ಸವಿನಯ ಪ್ರಾರ್ಥನೆ.
ಓಂ ನಮೋ ಭಗವತೇ ಹಯಾನನಾಯ ||
ಧರ್ಮವೊಂದೆ ಭಾರತದ ಜೀವ ಸತ್ವ , ಅದಿಲ್ಲದೆ ಬದಲಿಗೆ ಎಷ್ಟೇ ರಾಜಕೀಯವಿರಲಿ ಸಾಮಾಜಿಕ ಸುಧಾರಣೆಗಳಾಗಲಿ, ಕುಬೇರನ ಬಂಡವಾಳವನ್ನೇ ಪ್ರತಿಯೊಂದು ಮಗುವಿನ ಮೇಲೆ ಸುರಿದರೂ ಭಾರತ ನಾಶ ಹೊಂದುವುದು ಖಚಿತ . ಹೀಗೆಂದವರು ಸ್ವಾಮಿ ವಿವೇಕಾನಂದನವರು .ಆದುದರಿಂದ ಹಿಂದೂ ಬಾಂಧವರೇ ನನ್ನ ತಿಳುವಳಿಕೆಗೆ ಅನುಸಾರವಾಗಿ "ಹಿಂದೂ ಧರ್ಮದ ಸಾರ" ಎನ್ನುವ ಶಿರ್ಷಿಕೆಯಡಿ ಚುಟುಕುರೂಪದಲ್ಲಿ ಕೊಡುತ್ತಿದ್ದೇನೆ .
೧. ಓಂ :- ಬ್ರಹ್ಮಾಂಡದ ಮೂಲಾಧಾರವಾದ ಪರತತ್ವದ ಸೂಚಕವಾಗಿದೆ . "ಓಂ" ಕಾರದಿಂದಲೇ ತ್ರಿಮೂರ್ತಿಗಳ ಸೃಷ್ಟಿಯಾಯಿತು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ
೨. ಯೋಗ :- ಭಗವಂತನನ್ನು ಸೇರಲು ಇರುವ ದಾರಿಯೇ ಯೋಗ .
ಯೋಗದಲ್ಲಿ ನಾಲ್ಕು ವಿಧ
೧ ಭಕ್ತಿ ಯೋಗ ೨ ರಾಜ ಯೋಗ ೩ ಕರ್ಮ ಯೋಗ ೪ ಜ್ಞಾನ ಯೋಗ .
ಒಂದನೆಯದಕ್ಕೆ ದೇಗುಲ , ಎರಡನೆಯದಕ್ಕೆ ಅಶ್ವತ್ಥ ಮರದ ಕೆಳಗೆ ಕುಳಿತ ಋಷಿ , ಮೂರನೆಯದು ಉಳುತ್ತಿರುವ ರೈತ , ನಾಲ್ಕನೆಯದು ಉದಯಿಸುವ ಸೂರ್ಯ ಪ್ರತೀಕವಾಗಿದ್ದಾರೆ ( ಉದಾಹರಣೆಯಾಗಿದೆ )
ಯೋಗದಲ್ಲಿ ನಾಲ್ಕು ವಿಧ
೧ ಭಕ್ತಿ ಯೋಗ ೨ ರಾಜ ಯೋಗ ೩ ಕರ್ಮ ಯೋಗ ೪ ಜ್ಞಾನ ಯೋಗ .
ಒಂದನೆಯದಕ್ಕೆ ದೇಗುಲ , ಎರಡನೆಯದಕ್ಕೆ ಅಶ್ವತ್ಥ ಮರದ ಕೆಳಗೆ ಕುಳಿತ ಋಷಿ , ಮೂರನೆಯದು ಉಳುತ್ತಿರುವ ರೈತ , ನಾಲ್ಕನೆಯದು ಉದಯಿಸುವ ಸೂರ್ಯ ಪ್ರತೀಕವಾಗಿದ್ದಾರೆ ( ಉದಾಹರಣೆಯಾಗಿದೆ )
ಮುಂದುವರಿದುದು.......
||ಹನುಮಾನ್ ಚಾಲೀಸಾ ||
||ದೋಹಾ||
ಶ್ರೀ ಗುರು ಚರನ ಸರೋಜ ರಜ ನಿಜ ಮನು ಮುಕುರು ಸುಧಾರಿ |
ಬರನವು° ರಘುಬರ್ ಬಿಮಲ್ ಜಸು ಜೋ ದಾಯಕು ಫಲಚಾರಿ ||
ಬರನವು° ರಘುಬರ್ ಬಿಮಲ್ ಜಸು ಜೋ ದಾಯಕು ಫಲಚಾರಿ ||
ಶ್ರೀ ಗುರುದೇವರ ಚರಣ ಕಮಲಂಗಳ ಪಾದ ಧೂಳಿಲಿ ಎನ್ನ ಮನಸ್ಸಿನ ಕನ್ನಟಿಯ ಶುದ್ಧೀಕರಿಸಿಗೊಂಡು, ರಘು ವಂಶಜನ ಪ್ರೀತಿ ಪಾತ್ರನಾದ, ಧರ್ಮ, ಅರ್ಥ,ಕಾಮ ಮೋಕ್ಷ ಪ್ರದನಾದ ಶ್ರೀ ಹನುಮಾನನ ಅಸೀಮ ಪರಾಕ್ರಮದ ಗಾಥೆಯ ಇದೀಗ ವಿವರ್ಸುತ್ತೆ ಹೇಳಿ ಗೋಸ್ವಾಮಿ ಶ್ರೀ ತುಳಸೀದಾಸರು ಕೇಳಿಗೋಳ್ತಾ ಇದ್ದವು.
ಬುದ್ಧಿಹೀನ್ ತನು ಜಾನಿಕೇ ಸುಮಿರೌ° ಪವನ್ ಕುಮಾರ್ |
ಬಲಬುದ್ಧಿ ಬಿದ್ಯಾ ದೇಹು° ಮೋಹಿ° ಹರಹು ಕಲೇಸ್ ಬಿಕಾರ್ ||
ಬಲಬುದ್ಧಿ ಬಿದ್ಯಾ ದೇಹು° ಮೋಹಿ° ಹರಹು ಕಲೇಸ್ ಬಿಕಾರ್ ||
ಎನ್ನ ಅಜ್ಞಾನಿ ಹೇಳಿ ಗ್ರೇಶಿಗೊಂಡು, ನಿನ್ನ ಸ್ಮರಣೆ ಮಾಡುತ್ತಾ ಇದ್ದೆ, ಹೇ ಪವನ ಪುತ್ರ! ಎನ್ನ ಮನಸ್ಸಿನ ಎಲ್ಲ ಕ್ಲೇಶವ, ವಿಕಾರಂಗಳ ದೂರ ಮಾಡಿ, ಎನಗೆ ಬಲ, (ಶಾರೀರಿಕ, ಮಾನಸಿಕ, ಚಾರಿತ್ರಿಕ ಬಲ), ಸುಬುದ್ಧಿ, ಎನ್ನ ಬುದ್ಧಿಯ ಹೆಚ್ಚುಸುವಂಥ ವಿದ್ಯೆ ಎಲ್ಲ ಅನುಗ್ರಹಿಸು.
||ಚೌಪಾಯೀ||
ಜಯ್ ಹನುಮಾನ್ ಗ್ಯಾನ್ ಗುನ್ ಸಾಗರ್ |
ಜಯ್ ಕಪೀಸ್ ತಿಹು° ಲೋಕ್ ಉಜಾಗರ್ ||1||
ಜಯ್ ಕಪೀಸ್ ತಿಹು° ಲೋಕ್ ಉಜಾಗರ್ ||1||
ಜ್ಞಾನ, ಗುಣಗಳ ಸಾಗರನಾಗಿಪ್ಪ ಹನುಮಂತಂಗೆ ಜಯವಾಗಲಿ. ಮೂರು ಲೋಕಂಗಳ ಬೆಳಗುಸುವ ಕಪಿಗಳ ರಾಜಂಗೆ ಜಯವಾಗಲಿ.
ರಾಮ ದೂತ ಅತುಲಿತ್ ಬಲ್ ಧಾಮಾ |
ಅಂಜನಿ ಪುತ್ರ್ ಪವನ್ ಸುತ್ ನಾಮಾ ||2||
ಅಂಜನಿ ಪುತ್ರ್ ಪವನ್ ಸುತ್ ನಾಮಾ ||2||
ನೀನು ಶ್ರೀ ರಾಮ ದೂತನಾಗಿ, ವಾಯು ದೇವನ ಮತ್ತೆ ಅಂಜನೀ ದೇವಿಯ ಸುಪುತ್ರನಾಗಿ ಅತುಲ್ಯ ಬಲಶಾಲಿ ಹೇಳಿ ಹೆಸರು ಮಾಡಿದವ°.
ಮಹಾಬೀರ್ ಬಿಕ್ರಮ್ ಬಜರಂಗೀ |
ಕುಮತಿ ನಿವಾರ್ ಸುಮತಿ ಕೇ ಸಂಗೀ ||3||
ಕುಮತಿ ನಿವಾರ್ ಸುಮತಿ ಕೇ ಸಂಗೀ ||3||
ನೀನು, ತ್ಯಾಗವೀರ, ದಯಾ ವೀರ, ವಿದ್ಯಾ ವೀರ, ದಾನ ವೀರ, ರಣವೀರ.., ಎಲ್ಲವನ್ನೂ ಒಳಗೊಂಡು, ವಜ್ರದೇಹಿಯಾಗಿ ಮಹಾವೀರನಾಗಿ ವಿಕ್ರಮನಾಗಿದ್ದೆ.
ಎಂಗಳ ದುರ್ಬುದ್ಧಿಯ ಹೋಗಲಾಡಿಸಿ ಸುಬುದ್ಧಿಯ ದಯಪಾಲಿಸು.
ಎಂಗಳ ದುರ್ಬುದ್ಧಿಯ ಹೋಗಲಾಡಿಸಿ ಸುಬುದ್ಧಿಯ ದಯಪಾಲಿಸು.
ಕಂಚನ್ ಬರನ್ ಬಿರಾಜ್ ಸುಬೇಸಾ |
ಕಾನನ ಕುಂಡಲ್ ಕುಂಚಿತ ಕೇಸಾ ||4||
ಕಾನನ ಕುಂಡಲ್ ಕುಂಚಿತ ಕೇಸಾ ||4||
ನೀನು ಉದ್ದ ,ಗುಂಗುರು ಕೂದಲು ಹೊಂದಿದ್ದೆ. ಕಾಂಚನದ ಹಾಂಗೆ ಹೊಳೆವ ನಿನ್ನ ದೇಹ ನೀನು ಧರಿಸಿದ ಪೀತಾಂಬರಂದಲೂ, ನಿನ್ನ ಕೆಮಿಯ ಕುಂಡಲಂದಲೂ, ಹೆಚ್ಚು ಹೊಳೆತ್ತು.
ಹಾಥ್ ಬಜ್ರ ಔ ಧ್ವಜಾ ಬಿರಾಜೈ |
ಕಾಂಧೈ ಮೂಂಜ್ ಜನೇಊ° ಸಾಜೈ||5||
ಕಾಂಧೈ ಮೂಂಜ್ ಜನೇಊ° ಸಾಜೈ||5||
ನಿನ್ನ ಒಂದು ಕೈಲಿ ವಜ್ರಾಯುಧವ ಹೋಲುವ ಗದೆ, ಇನ್ನೊಂದು ಕೈಲಿ ರಾಮ ದ್ವಜವ ಹಿಡುದ್ದೆ. ಹೆಗಲಿಲಿ, ಮೂಂಜ್ ಹುಲ್ಲಿಂದ( ಬಹುಷಃ ದರ್ಭೆ) ಮಾಡಿದ ಜನಿವಾರ ಶೋಭಿಸುತ್ತಿದ್ದು.
ಸಂಕರ್ ಸುವನ್ ಕೇಸರೀ ನಂದನ್ |
ತೇಜ್ ಪ್ರತಾಪ್ ಮಹಾ ಜಗ್ ಬಂದನ್ ||6||
ತೇಜ್ ಪ್ರತಾಪ್ ಮಹಾ ಜಗ್ ಬಂದನ್ ||6||
ಎಲ್ಲೋರ ಹರಸುವ ಭಗವಾನ್ ಶಂಕರನ ಅವತಾರ ಆಗಿಪ್ಪ ನೀನು ಕೇಸರಿಯ ಪ್ರೀತಿಯ ಮಗ° ಆಗಿ, ನಿನ್ನ ತೇಜಸ್ಸಿಂದಲೂ, ಪ್ರತಾಪಂಗಳಿಂದಲೂ ಇಡೀ ಜಗತ್ತಿಲಿ ಎಲ್ಲೋರಿಂದಲೂ ಪ್ರಶಂಸನೀಯವಾಗಿದ್ದೆ.
ಬಿದ್ಯಾವಾನ ಗುನೀ ಅತಿ ಚಾತುರ್ |
ರಾಮ್ ಕಾಜ್ ಕರಿಬೇ ಕೋ ಆತುರ್ ||7||
ರಾಮ್ ಕಾಜ್ ಕರಿಬೇ ಕೋ ಆತುರ್ ||7||
ನೀನು ಸರ್ವ ವಿದ್ಯಾ ಪಾರಂಗತ, ಗುಣ ಶಾಲಿ, ಅತಿಯಾದ ಚತುರನಾಗಿದ್ದುಗೊಂಡು, ಶ್ರೀ ರಾಮನ ಯಾವ ಕೆಲಸವನ್ನುದೆ ಮಾಡ್ಲೆ ತಯಾರಾಗಿಪ್ಪವ°.
ಪ್ರಭು ಚರಿತ್ರ್ ಸುನಿಬೇ ಕೋ ರಸಿಯಾ |
ರಾಮ್ ಲಖನ್ ಸೀತಾ ಮನ್ ಬಸಿಯಾ ||8||
ರಾಮ್ ಲಖನ್ ಸೀತಾ ಮನ್ ಬಸಿಯಾ ||8||
ಪ್ರಭು ಶ್ರೀ ರಾಮನ ದಿವ್ಯ ಚರಿತ್ರೆಯ ಕೇಳ್ಲೇ ಯಾವಾಗಲೂ ಕಾತರನಾಗಿಪ್ಪ ನೀನು, ನಿನ್ನ ಹೃದಯಲ್ಲಿ, ಶ್ರೀ ರಾಮ, ಲಕ್ಷ್ಮಣ, ಸೀತೆಯರ ಪ್ರತಿಷ್ಠಾಪಿಸಿಗೊಂಡಿದೆ ಹಾಂಗೆ ಅವರ ಹೃದಯಲ್ಲಿಯೂ ನೀನು ನೆಲೆಸಿದ್ದೆ.
ಸೂಕ್ಷ್ಮ ರೂಪ್ ಧರಿ ಸಿಯಾಹಿ° ದಿಖಾವಾ |
ವಿಕಟ್ ರೂಪ್ ಧರಿ ಲಂಕ ಜರಾವಾ ||9||
ವಿಕಟ್ ರೂಪ್ ಧರಿ ಲಂಕ ಜರಾವಾ ||9||
ನೀನು ಸೂಕ್ಷ್ಮಾತಿ ಸೂಕ್ಷ್ಮ ರೂಪಲ್ಲಿ ಅಶೋಕವನಕ್ಕೆ ಹೋಗಿ ಸೀತೆಯ ಎದುರು ನಿನ್ನ ಪ್ರಸ್ತುತ ಪಡಿಸಿದೆ. ಲಂಕಾ ದಹನ ಸಮಯಲ್ಲಿ ನಿನ್ನ ಭಯಂಕರ ರೂಪ ಧರಿಸಿ ಲಂಕೆಯ ಸುಟ್ಟೆ.
ಭೀಮ್ ರೂಪ್ ಧರಿ ಅಸುರ ಸಂಹಾರೇ |
ರಾಮಚಂದ್ರ ಕೆ ಕಾಜ್ ಸವಾ°ರೆ ||10||
ರಾಮಚಂದ್ರ ಕೆ ಕಾಜ್ ಸವಾ°ರೆ ||10||
ಲಂಕಾದಹನ ಕಾಲಲ್ಲಿ ನೀನು ಭೀಮ ರೂಪ ಧರಿಸಿ ರಾಕ್ಷಸರ ಕೊಂದು, ಶ್ರೀ ರಾಮಚಂದ್ರನ ಕೆಲಸವ ಸಮರ್ಪಕವಾಗಿ ಮಾಡಿ ಮುಗಿಶಿದೆ.
ಲಾಯೆ ಸಂಜೀವನ್ ಲಖನ್ ಜಿಯಾಯೇ |
ಶ್ರೀ ರಘುಬೀರ್ ಹರಷಿ ಉರ್ ಲಾಯೇ ||11||
ಶ್ರೀ ರಘುಬೀರ್ ಹರಷಿ ಉರ್ ಲಾಯೇ ||11||
ನೀನು ಸಂಜೀವಿನಿ ಮೂಲಿಕೆಯ ತಂದು ಲಕ್ಷ್ಮಣನ ಪ್ರಾಣ ಒಳಿಶಿ ಅಪ್ಪಗ ಶ್ರೀ ರಾಮ ಅತೀವ ಸಂತೋಷಂದ ನಿನ್ನ ಬಿಗಿದಪ್ಪಿದ°, ಅವನ ಹೃದಯಲ್ಲಿ ನಿನಗೆ ಜಾಗೆ ಮಾಡಿ ಕೊಟ್ಟ°.
ರಘುಪತಿ ಕೀನ್ಹೀ ಬಹುತ್ ಬಡಾಯೀ |
ತುಮ್ ಮಮ ಪ್ರಿಯ ಭರತ್ ಹೀ ಸಮ್ ಭಾಯೀ||12||
ತುಮ್ ಮಮ ಪ್ರಿಯ ಭರತ್ ಹೀ ಸಮ್ ಭಾಯೀ||12||
ಸಂಜೀವಿನಿ ತಂದು ನೀನು ಲಕ್ಷ್ಮಣನ ಬದುಕಿಸಿದ ಖುಷಿಲಿ ರಾಮ ನಿನ್ನ ಭರತನ ಹಾಂಗೆ ನೀನು ಎನ್ನ ತಮ್ಮ ಹೇಳಿ ಆನಂದಿಸಿದ°.
ಸಹಸ ಬದನ್ ತುಮ್ಹರೋ ಜಸ್ ಗಾವೈ°|
ಅಸ ಕಹಿ ಶ್ರೀಪತಿ ಕಂಠ ಲಗಾವೈ° ||13||
ಅಸ ಕಹಿ ಶ್ರೀಪತಿ ಕಂಠ ಲಗಾವೈ° ||13||
ಸಂತಸದಿಂದ ಬಿಗಿದಪ್ಪಿದ ಶ್ರೀ ರಾಮ, ಸಹಸ್ರ ಶಿರದ ಆದಿಶೇಷನೂ ನಿನ್ನ ಯಶದ ಮಹಿಮೆಯ ಸಹಸ್ರ ಕಂಠಲ್ಲಿ ಹಾಡಲಿ ಹೇಳಿ, ಮುಂದೆ ಸಹಸ್ರಾರು ಜನಂಗ ನಿನ್ನ ಮಹಿಮೆಯ ಹೇಳಲಿ ಹೇಳಿಯೇ ಹೇಳಿದ°.
ಸನಕಾದಿಕ ಬ್ರಹ್ಮಾದಿ ಮುನೀಸಾ |
ನಾರದ್ ಸಾರದ ಸಹಿತ ಅಹೀಸಾ ||14||
ನಾರದ್ ಸಾರದ ಸಹಿತ ಅಹೀಸಾ ||14||
ಸನಕಾದಿ ಮುನಿಗೋ, ಬ್ರಹ್ಮಾದಿ ದೇವ ದೇವತೆಗಾ, ದೇವರ್ಷಿ ನಾರದ ಮುನಿ, ಶಾರದೆಯೂ, ಆದಿಶೇಷನೂ ನಿನ್ನ ಗುಣ ಗಾನ ಮಾಡುತ್ತವು.
ಜಮ ಕುಬೇರ ದಿಗಪಾಲ ಜಹಾ° ತೇ |
ಕಬಿ ಕೋಬಿದ ಕಹಿ° ಸಕೇ ಕಹಾ° ತೇ ||15||
ಕಬಿ ಕೋಬಿದ ಕಹಿ° ಸಕೇ ಕಹಾ° ತೇ ||15||
ಯಮ, ಕುಬೇರ°, ಅಷ್ಟದಿಕ್ಪಾಲಕರು, ಕವಿಗೋ, ವಿದ್ವಾಂಸಂಗ ಆರಿಂಗುದೆ ನಿನ್ನ ಮಹಿಮೆಯ ಸರಿಯಾಗಿ ಬಣ್ಣಿಸುಲೆ ಆಗದ್ದೆ ಅಶಕ್ತರಾಯಿದವು.
ತುಮ್ ಉಪಕಾರ ಸುಗ್ರೀವಹಿ° ಕೀನ್ಹಾ° |
ರಾಮ ಮಿಲಾಯ್ ರಾಜಪದ ದೀನ್ಹಾ ||16||
ರಾಮ ಮಿಲಾಯ್ ರಾಜಪದ ದೀನ್ಹಾ ||16||
ರಾಜ್ಯವ ಕಳಕ್ಕೊಂಡು ಸಂಕಟಲ್ಲಿ ಇದ್ದ ಸುಗ್ರೀವಂಗೆ ಶ್ರೀ ರಾಮನ ಪರಿಚಯ ಮಾಡ್ಸಿ, ಪುನಃ ಅವಂಗೆ ರಾಜ್ಯವ ಕೊಡ್ಸಿ ಮಹದುಪಕಾರ ಮಾಡಿದ್ದೆ ನೀನು.
ತುಮ್ಹರೋ ಮಂತ್ರ ಬಿಭೀಷಣ್ ಮಾನಾ |
ಲಂಕೇಸ್ವರ್ ಭಯೇ ಸಬ್ ಜಗ ಜಾನಾ ||17||
ಲಂಕೇಸ್ವರ್ ಭಯೇ ಸಬ್ ಜಗ ಜಾನಾ ||17||
ನಿನ್ನ ಹಿತನುಡಿಗಳ ಕೇಳಿದ ಕಾರಣ ವಿಭೀಷಣ, ರಾಮಂಗೆ ಶರಣಾಗಿ ಲಂಕೆಯ ಅಧಿಪತಿ ಆದ್ದದು ಹೇಳಿ ಜಗತ್ತಿಂಗೆ ಗೊಂತಿದ್ದು.
ಜುಗ್ ಸಹಸ್ರ ಜೋಜನ ಪರ್ ಭಾನು |
ಲೀಲ್ಯೋ ತಾಹಿ ಮಧುರ ಫಲ ಜಾನೂ ||18||
ಲೀಲ್ಯೋ ತಾಹಿ ಮಧುರ ಫಲ ಜಾನೂ ||18||
ಸಹಸ್ರ ಯೋಜನ ದೂರಲ್ಲಿದ್ದ, ಕೆಂಪಾಗಿ ಕಂಡುಗೊಂಡಿದ್ದ ಸೂರ್ಯನ, ಮಧುರ ಹಣ್ಣು ಹೇಳಿ ಗ್ರೇಶಿ, ತಿಂಬಲೆ ಹೇಳಿಗೊಂಡು ಅಷ್ಟು ದೂರವ ಅನಾಯಾಸವಾಗಿ ಬಾಲ್ಯಲ್ಲಿಯೇ ಹಾರಿದ್ದೆ.
ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ° |
ಜಲಧಿ ಲಾಂಘಿ ಗಯೇ ಅಚರಜ ನಾಹಿ° ||19||
ಜಲಧಿ ಲಾಂಘಿ ಗಯೇ ಅಚರಜ ನಾಹಿ° ||19||
ಪ್ರಭು ಶ್ರೀ ರಾಮ ಕೊಟ್ಟ ಮುದ್ರಿಕೆಯ ತೆಕ್ಕೊಂಡು, ಅಗಾಧ ಜಲ ರಾಶಿಯ ಸಮುದ್ರಡಾ ಮೇಲೆ ಹಾರಿದ್ದೆ, ಇದರಲ್ಲಿ ಆಶ್ಚರ್ಯದ ಮಾತೇ ಇಲ್ಲೆ.
(ಹಾಂಗೆಯೇ ನಿನ್ನ ಸ್ಮರಣೆಂದ ಎಂಗಳುದೆ ಈ ಜಗತ್ತಿನ ಸಮುದ್ರವ ದಾಂಟುತ್ತೆಯ°.)
(ಹಾಂಗೆಯೇ ನಿನ್ನ ಸ್ಮರಣೆಂದ ಎಂಗಳುದೆ ಈ ಜಗತ್ತಿನ ಸಮುದ್ರವ ದಾಂಟುತ್ತೆಯ°.)
ದುರ್ಗಮ ಕಾಜ ಜಗತ್ ಕೆ ಜೇತೇ |
ಸುಗಮ ಅನುಗ್ರಹ ತುಮ್ಹರೆ ತೇತೇ ||20||
ಸುಗಮ ಅನುಗ್ರಹ ತುಮ್ಹರೆ ತೇತೇ ||20||
ಈ ಜಗತ್ತಿನ ಎಲ್ಲ ಕಷ್ಟ ಕೆಲಸಂಗಳೂ ನಿನ್ನ ಅನುಗ್ರಹ ಇದ್ದರೆ ಅತಿ ಸುಗಮ ಆಗಿ ಮಾಡ್ಲೆ ಆವುತ್ತು.
ರಾಮ ದುವಾರೇ ತುಮ್ ರಖ್ ವಾರೇ |
ಹೋತ ನ ಆಗ್ಯಾ ಬಿನ್ ಪೈಸಾರೆ ||21||
ಹೋತ ನ ಆಗ್ಯಾ ಬಿನ್ ಪೈಸಾರೆ ||21||
ನೀನು ರಾಮನ ಮಂದಿರದ ದ್ವಾರ ರಕ್ಷಕ°. ನಿನ್ನ ಅನುಮತಿ ಇಲ್ಲದ್ದೆ ಆರಿಂಗುದೆ ರಾಮ ದರ್ಶನ, ರಾಮಾನುಗ್ರಹ ಸಿಕ್ಕುಲೇ ಸಾಧ್ಯ ಇಲ್ಲೆ.
ಸಬ್ ಸುಖ್ ಲಹೈ ತುಮ್ಹಾರೀ ಸರನಾ |
ತುಮ್ ರಚ್ಚಕ್ ಕಾಹೂ° ಕೋ ಡರನಾ ||22||
ತುಮ್ ರಚ್ಚಕ್ ಕಾಹೂ° ಕೋ ಡರನಾ ||22||
ನಿನ್ನಲ್ಲಿ ಶರಣಾದವ°, ನಿನ್ನ ಸಂತೋಷದ ಪ್ರೀತಿಗೆ ಪಾತ್ರ ಆವುತ್ತ°. ನೀನೇ ರಕ್ಷಕನಾಗಿಪ್ಪಗ ಯಾವುದಕ್ಕೆದೆ, ಎಂತ ಬಂದರೆದೆ ಎಂತಕೆ ಹೆದರೆಕ್ಕು?
ಆಪನ ತೇಜ್ ಸಂಹಾರೋ° ಆಪೈ° |
ತೀನೋ° ಲೋಕ ಹಾಂಕ್ ತೇ ಕಾಂಪೈ° ||23||
ತೀನೋ° ಲೋಕ ಹಾಂಕ್ ತೇ ಕಾಂಪೈ° ||23||
ನಿನ್ನ ಘರ್ಜನೆಗೆ ಮೂರು ಲೋಕವೂ ನಡುಗುತ್ತು. ಆ ನಿನ್ನ ಶಕ್ತಿಯ ತೇಜಸ್ಸಿನ ನಿನಗೆ ಅಲ್ಲದ್ದೆ ಬೇರೆ ಆರಿಂಗೂ ಸಮಾಧಾನಿಸುಲೇ ಎಡಿಯ.
ಭೂತ್ ಪಿಸಾಚ ನಿಕಟ ನಹಿ° ಆವೈ |
ಮಹಾಬೀರ್ ಜಬ್ ನಾಮ ಸುನಾವೈ ||24||
ಮಹಾಬೀರ್ ಜಬ್ ನಾಮ ಸುನಾವೈ ||24||
ಮಹಾವೀರನಾದ ನಿನ್ನ ನಾಮ ಸ್ಮರಣೆ ಮಾಡುತ್ತಾ ಇಪ್ಪೋರ ಹತ್ತರೆ ಯಾವುದೇ ಕ್ಷುದ್ರ ಶಕ್ತಿಗ, ಭೂತ ಪಿಶಾಚಿಗ ಬಪ್ಪ ಧೈರ್ಯ ಮಾಡವು.
ನಾಸೈ ರೋಗ್ ಹರೈ ಸಬ್ ಪೀರಾ |
ಜಪತ್ ನಿರಂತರ್ ಹನುಮತ್ ಬೀರಾ ||25||
ಜಪತ್ ನಿರಂತರ್ ಹನುಮತ್ ಬೀರಾ ||25||
ವೀರನಾದ ಹನುಮಂತ, ನಿರಂತರ ನಿನ್ನ ನಾಮಸ್ಮರಣೆ ಮಾಡುದರಿಂದ, ಎಲ್ಲ ರೋಗಂಗ, ದೇಹ ಪೀಡೆಗ, ಬೇನೆಗ ನಾಶ ಆವುತ್ತು.
ಸಂಕಟ ತೇ° ಹನುಮಾನ್ ಚುಡಾವೈ°|
ಮನ್ ಕ್ರಮ ಬಚನ ಧ್ಯಾನ ಜೋ ಲಾವೈ ||26||
ಮನ್ ಕ್ರಮ ಬಚನ ಧ್ಯಾನ ಜೋ ಲಾವೈ ||26||
ತ್ರಿಕರಣ ಶುದ್ಧರಾಗಿ ಆರು ನಿನ್ನ, ಮನಸ್ಸಿಂದ, ಕಾರ್ಯಂಗಳಿಂದ, ವಾಕ್ಯಂಗಳಿಂದ, ಧ್ಯಾನ ಮಾಡ್ತವೋ, ಅವರ ಕಷ್ಟಂಗಳ ನೀನು ನಿವಾರಿಸಿ ಸಲಹುತ್ತೆ.
ಸಬ್ ಪರ್ ರಾಮ್ ತಪಸ್ವೀ ರಾಜಾ |
ತಿನ್ ಕೆ ಕಾಜ್ ಸಕಲ್ ತುಮ್ ಸಾಜಾ ||27||
ತಿನ್ ಕೆ ಕಾಜ್ ಸಕಲ್ ತುಮ್ ಸಾಜಾ ||27||
ರಘು ಕುಲೋತ್ತಮ ಶ್ರೀ ರಾಮಚಂದ್ರ° ಸರ್ವ ಶ್ರೇಷ್ಠ ರಾಜಾನಾಗಿದ್ದುಗೊಂಡು, ಮಹಾ ತಪಸ್ವಿಯೂ ಆಗಿದ್ದ°. ಅವನ ಕೆಲಸಂಗಳ, ಅವನ ಎಲ್ಲಾ ಭಕ್ತರ ಕೆಲಸಂಗಳ ನೀನೇ ಅತಿ ಸುಲಭಲ್ಲಿ ಪೂರೈಸಿದೆ.
ಔರ್ ಮನೋರಥ್ ಜೋ ಕೋಯಿ ಲಾವೈ |
ಸೋಯೀ° ಅಮಿತ್ ಜೀವನ್ ಫಲ್ ಪಾವೈ ||28||
ಸೋಯೀ° ಅಮಿತ್ ಜೀವನ್ ಫಲ್ ಪಾವೈ ||28||
ಭಕ್ತಂಗ ಕೇಳುವ ಅವರ ಮನಸ್ಸಿನ ಎಲ್ಲಾ ಕೋರಿಕೆಗಳ ನೀನು ಚೆಂದಲ್ಲಿ ಪೂರೈಸಿ, ಅವಕ್ಕೆ ಜೀವನಕ್ಕೆ ಪೂರ್ಣ ಫಲ ಸಿಕ್ಕುವ ಹಾಂಗೆ ಮಾಡ್ತೆ.
ಚಾರೋ° ಜುಗ್ ಪರತಾಪ ತುಮ್ಹಾರಾ |
ಹೈ ಪರಸಿದ್ಧ ಜಗತ್ ಉಜಿಯಾರಾ ||29||
ಹೈ ಪರಸಿದ್ಧ ಜಗತ್ ಉಜಿಯಾರಾ ||29||
ನಾಲ್ಕು ಯುಗಲ್ಲಿಯೂ ನಿನ್ನ ಪ್ರತಾಪದ ಮಹಿಮೆ ಕಾಣ್ತು. ಈಗಳೂ ಪ್ರಸಿದ್ಧಿಯ ನಿನ್ನ ತೇಜಸ್ಸು ಜಗತ್ತಿಲಿ ಎಲ್ಲಾ ಕಡೆ ಪ್ರಜ್ವಲಿತಗೊಂಡು ಬೆಳಗುತ್ತಾ ಇದ್ದು.
ಸಾಧು ಸಂತ್ ಕೆ ತುಮ್ ರಖ್ ವಾರೆ |
ಅಸುರ್ ನಿಕಂದನ್ ರಾಮ ದುಲಾರೆ||30||
ಅಸುರ್ ನಿಕಂದನ್ ರಾಮ ದುಲಾರೆ||30||
ಸಾಧು ಸಂತರ ರಕ್ಷಕನಾಗಿ, ಅಸುರಾದಿ ದುಷ್ಟರ ಸಂಹಾರಕ° ಆಗಿಪ್ಪ ನೀನು ರಾಮನ ಪ್ರೀತಿಯ ಪಡಕ್ಕೊಂಡವ°.
ಅಷ್ಟ ಸಿದ್ದಿ ನೌನಿಧಿ ಕೆ ದಾತಾ |
ಅಸಬರ ದೀನ್ ಜಾನಕೀ ಮಾತಾ ||31||
ಅಸಬರ ದೀನ್ ಜಾನಕೀ ಮಾತಾ ||31||
ಮಾತೆ ಜಾನಕಿಯ ಅನುಗ್ರಹಲ್ಲಿ, ವರಂಗಳ ಬಲಲ್ಲಿ ನೀನು, ಅಷ್ಟ ಸಿದ್ಧಿಗೋ ಆದ, ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶತ್ವ ಮತ್ತೆ ವಷಿತ್ವ ಅಲ್ಲದ್ದೆ, ನವನಿಧಿಗೋ ಆದ ಮಹಾಪದ್ಮ, ಪದ್ಮ, ಶಂಖ, ಮಕರ, ಕಚ್ಛಪ, ಮುಕುಂದ, ಕುಂದ, ನೀಲ, ಖರ್ವಂಗಳ, ನಿನ್ನಲ್ಲಿ ಶರಣಾದವಕ್ಕೆ ಕರುಣಿಸುಲೇ ಸಮರ್ಥನಾಗಿದ್ದೆ.
ರಾಮ ರಸಾಯನ ತುಮ್ಹರೆ ಪಾಸಾ |
ಸದಾ ರಹೋ ರಘುಪತಿ ಕೆ ದಾಸಾ ||32||
ಸದಾ ರಹೋ ರಘುಪತಿ ಕೆ ದಾಸಾ ||32||
ರಾಮನಾಮ ಜಪಾಸಕ್ತಿಲಿ, ಭಕ್ತಿ ರಸಲ್ಲಿ ಮುಳುಗಿಪ್ಪ ನೀನು ಯಾವಾಗಲೂ ರಾಮನ ದಾಸ° ಆಗಿಯೇ ಇದ್ದುಗೊಂಡು, ರಾಮನ ದಾಸ° ಹೇಳಿ ಹೇಳ್ಸಿಗೊಂಬಲೆ ಇಷ್ಟ ಪಡ್ತೆ.
ತುಮ್ಹರೆ ಭಜನ್ ರಾಮ ಕೋ ಪಾವೈ° |
ಜನಮ್ ಜನಮ್ ಕೆ ದುಃಖ ಬಿಸರಾವೈ° ||33||
ಜನಮ್ ಜನಮ್ ಕೆ ದುಃಖ ಬಿಸರಾವೈ° ||33||
ಸತತ ನಿನ್ನ ಭಜನೆ ಮಾಡುದರಿಂದ ಶ್ರೀ ರಾಮನ ಅನುಗ್ರಹ ಪ್ರಾಪ್ತಿ ಆಗಿ, ಜನ್ಮ ಜನ್ಮಾಂತರದ ದುಃಖ ನಿವಾರಣೆ ಆವುತ್ತು.
ಅಂತ ಕಾಲ್ ರಘುಬರ್ ಪುರ್ ಜಾಯೀ° |
ಜಹಾ° ಜನಮ್ ಹರಿ ಭಕ್ತ ಕಹಾಯೀ ||34||
ಜಹಾ° ಜನಮ್ ಹರಿ ಭಕ್ತ ಕಹಾಯೀ ||34||
ನಿನ್ನ ನಾಮಸ್ಮರಣೆಲಿ ಇದ್ದುಗೊಂಡು, ಜೀವನ ಅಂತ್ಯ ಅಪ್ಪಗ, ಸ್ವರ್ಗಕ್ಕೆ ಹೋಗಿ ಅಪ್ಪಗ ಅಲ್ಲಿ ಹರಿ ಭಕ್ತ° ಹೇಳಿ ಮರಿಯಾದಿ ಸಿಕ್ಕುತ್ತು ಅಲ್ಲದ್ದೆ ಮತ್ತಾಣ ಜನ್ಮಲ್ಲಿ ಇನ್ನುದೇ ಅತೀವ ಭಕ್ತಿ ಮಾರ್ಗದ ದಾರಿ ಕಾಣ್ತು.
ಔರ್ ದೇವತಾ ಚಿತ್ತ್ ನ ಧರಯೀ |
ಹನುಮತ್ ಸೇಯೀ ಸರ್ಬ ಸುಖ ಕರಯೀ ||35||
ಹನುಮತ್ ಸೇಯೀ ಸರ್ಬ ಸುಖ ಕರಯೀ ||35||
ನಿನ್ನ ಮಾತ್ರವೇ ಚಿತ್ತಲ್ಲಿ ಮಡಿಗಿ, ಬೇರೆ ಯಾವ ದೇವರ ಪೂಜೆಯೂ ಮಾಡದ್ದವಕ್ಕೆದೇ, ನೀನು ಸಕಲ ಸುಖ ಭಾಗ್ಯಂಗಳ ಕೊಡ್ತೆ.
ಸಂಕಟ್ ಕಟೈ ಮಿಟೈ ಸಬ್ ಪೀರಾ |
ಜೋ ಸುಮೀರೈ ಹನುಮತ್ ಬಲಬೀರಾ ||36||
ಜೋ ಸುಮೀರೈ ಹನುಮತ್ ಬಲಬೀರಾ ||36||
ಯಾರು ಬಲಶಾಲಿಯಾದ ವೀರನಾದ ಹನುಮಂತನ ಸ್ಮರಣೆ ಮಾಡ್ತವೋ, ಅವರ ಎಲ್ಲಾ ಸಂಕಟಂಗಳೂ, ಸಕಲ ಬಾಧೆಗಳೂ ನಾಶ ಆವುತ್ತು.
ಜೈ ಜೈ ಜೈ ಹನುಮಾನ್ ಗೋಸಾ°ಯೀ |
ಕೃಪಾ ಕರಹು ಗುರುದೇವ ಕೀ ನಾಯೀ°||37||
ಕೃಪಾ ಕರಹು ಗುರುದೇವ ಕೀ ನಾಯೀ°||37||
ಇಂದ್ರಿಯ ನಿಗ್ರಹನಾದ ಹನುಮಂತಂಗೆ ಜಯವಾಗಲಿ. ಎಂಗಳ ಮೇಲೆ ಪ್ರೀತಿಯ ಗುರುವಿನ ಹಾಂಗೆ, ಅದೇ ರೀತಿಲಿ ಕೃಪೆ ಮಾಡು.
ಜೋ ಸತ್ ಬಾರ್ ಪಾಠ ಕರ್ ಕೋಯೀ |
ಛೂಟ್ ಹಿ ಬಂದಿ ಮಹಾ ಸುಖ ಹೋಯೀ||38||
ಛೂಟ್ ಹಿ ಬಂದಿ ಮಹಾ ಸುಖ ಹೋಯೀ||38||
ಆರು ಈ ಹನುಮಾನ್ ಚಾಲೀಸಾವ ನೂರು ಸರ್ತಿ ಪಠಣ ಮಾಡ್ತವೋ, ಅವು ಲೌಕಿಕ ಬಂಧನಂದ ಮುಕ್ತರಾಗಿ ಮಹಾ ಸುಖ ಪಡೆತ್ತವು.
ಜೋ ಯಹ ಪಡೈ ಹನುಮಾನ್ ಚಾಲೀಸಾ |
ಹೋಯ್ ಸಿದ್ಧಿ ಸಾಖೀ ಗೌರೀಸಾ||39||
ಹೋಯ್ ಸಿದ್ಧಿ ಸಾಖೀ ಗೌರೀಸಾ||39||
ಆರು ನಿತ್ಯ ಹನುಮಾನ್ ಚಾಲೀಸಾ ಓದುತ್ತವೋ ಅವು, ಸಕಲ ಸಿದ್ಧಿಗಳ ಎಲ್ಲ, ಗೌರೀಶನಾದ ಶಂಕರನ ಸಾಕ್ಷಿ ಆಗಿ ಪಡೆತ್ತವು.
ತುಲಸೀದಾಸ್ ಸದಾ ಹರಿ ಚೇರಾ|
ಕೀಜೈ ನಾಥ್ ಹೃದಯ ಮಹ° ಡೇರಾ||40||
ಕೀಜೈ ನಾಥ್ ಹೃದಯ ಮಹ° ಡೇರಾ||40||
ಓ ಹನುಮಂತನೇ! ರಾಮನ ದಾಸನಾಗಿ, ಹನುಮಾನ್ ಚಾಲೀಸಾವ ಬರದ, ತುಳಸೀದಾಸ ಆದ ಆನು ಕೇಳಿಗೊಂಬದು ಇಷ್ಟೇ, ನೀನು ಯಾವಾಗಲೂ ಎನ್ನ ಹೃದಯಲ್ಲಿಯೇ ವಾಸವಾಗಿರು ಹೇಳಿ.
||ದೋಹಾ||
ಪವನತನಯ ಸಂಕಟ್ ಹರನ್ ಮಂಗಲ ಮೂರುತಿ ರೂಪ್ |
ರಾಮ ಲಖನ್ ಸೀತಾ ಸಹಿತ್ ಹೃದಯ ಬಸಹು ಸುರ್ ಭೂಪ್ ||
ರಾಮ ಲಖನ್ ಸೀತಾ ಸಹಿತ್ ಹೃದಯ ಬಸಹು ಸುರ್ ಭೂಪ್ ||
ಹೇ ಪವನ ಪುತ್ರ, ಸಂಕಟಂಗಳ ಹರಿಸುವವನೇ, ಮಂಗಳ ಮೂರ್ತಿ ಸ್ವರೂಪನೇ, ನೀನು, ಶ್ರೀ ರಾಮ, ಲಕ್ಷ್ಮಣ ಸೀತಾ ಮಾತೆಯ ಸಹಿತವಾಗಿ ಎನ್ನ ಹೃದಯಲ್ಲಿ ಶಾಶ್ವತವಾಗಿ ನೆಲೆಯಾಗು. ನಿನಗೆ ಅನಂತಾನಂತ ಧನ್ಯವಾದಂಗೋ.
||ಇತಿ ಶ್ರೀಮದ್ಗೋಸ್ವಾಮೀ ತುಳಸೀ ದಾಸ್ ಜೀ ಅವಧೀ ಭಾಷಾಯಾಂ ವಿರಚಿತಂ ಶ್ರೀ ಹನುಮಾನ್ ಚಾಲೀಸಾ ||
ದೇವರ ಸ್ಥಾನದಲ್ಲಿ ಇಡುವ ಶಂಖ, ಗಂಟೆ, ದೀಪದ ಮಹತ್ವ ಏನು?
ನಮ್ಮನ್ನು ಅಜ್ಞಾನವೆಂಬ ಅಂಧಕಾರದಿಂದ ಹೊರ ತಂದು ಜ್ಞಾನದ ದಾರಿಯನ್ನು ತೋರಿಸಲು, ಭಗವತ್ ಶಕ್ತಿಯ ಆಕರ್ಷಣೆಗಾಗಿ, ಲಕ್ಷೀ ಪ್ರಾಪ್ತಿಗಾಗಿ ನಂದಾ ದೀಪವನ್ನು ಇಡಬೇಕು. ಸಮುದ್ರ ಮಥನಕಾಲದಲ್ಲಿ ಉತ್ಪನ್ನವಾದ ಶಂಖವನ್ನು ಮಹಾವಿಷ್ಣುವು ಕರದಲ್ಲಿ ಧರಿಸಿದನು. ಆಗ ಶಂಖವು ಅತಿ ಪಾವನವಾಯಿತು ಮತ್ತು ದೇವತೆಗಳ ರಾಜನಾದ ಇಂದ್ರನು, ವಾಸುದೇವನ ಆಜ್ಞೆಯಂತೆ ಶಂಖದಲ್ಲಿ ನೆಲೆಸಿದನು. ಆದ್ದರಿಂದ ಈ ಶಂಖವು ದೇವರ ಸಾನಿಧ್ಯಮಯವಾಯಿತು. ಹಾಗಾಗಿ ಶಂಖ ಇರುವುದು ಒಳ್ಳೆಯದು. ಪೂಜೆಗೆ ಆರಂಭದಲ್ಲಿ ಗಂಟೆಯನ್ನು ಭಾರಿಸಿ ಆರಂಭ ಮಾಡುವುದರಿಂದ ದುಷ್ಟ ಶಕ್ತಿಯ ಉಚ್ಛಾಟನೆಯಾಗಿ ಭಗವಂತನ ಆಗಮನವಾಗಿತ್ತದೆ. ಇದರಿಂದ ಗಂಟೆ ಇಡುವುದು ಉತ್ತಮ.
ಯಾವುದು ತೀರ್ಥ ? ಸೇವನೆ ಕ್ರಮ ಏನು?
ತಾಮ್ರದ ತಟ್ಟೆ(ಲೋಟ) ದಲ್ಲಿ ಶುದ್ಧವಾದ ನೀರನ್ನು ತೆಗೆದುಕೊಂಡು, ತುಳಸಿ ಮತ್ತು ಚಂದನದಿಂದ ಪೂಜಿಸಿದ ಸಾಲಿಗ್ರಾಮವನ್ನು ಅಥವಾ ದೇವರ ಮೂರ್ತಿಯನ್ನು ಪುರುಷಸೂಕ್ತ ಹೇಳುತ್ತಾ ಗಂಟಾ ನಾದವನ್ನು ಮಾಡುತ್ತಾ ಅಭಿಷೇಕವನ್ನು ಮಾಡುವಾಗ ಅಭಿಷೇಕ ಮಾಡಿದ ಜಲವನ್ನು ಹಿಡಿಯುವುದಕ್ಕೆ ತೀರ್ಥ ಎನ್ನುತ್ತೇವೆ. ತೀರ್ಥವನ್ನು ೩ ಬಾರಿಗೆ ಕುಡಿಯುಬೇಕು. ೧. ಅಕಾಲ ಮೃತ್ಯು ನಿವಾರಣೆಗೆ ೨. ಸರ್ವ ವ್ಯಾಧಿ ನಿವಾರಣೆಗೆ ೩. ಸಕಲ ದುರಿತ ಉಪಶಮನೆಗೆಂದು ಗೋಕರ್ಣ ಆಕೃತಿ ಹಸ್ತದಿಂದ ಕುಡಿಯಬೇಕು (ಬಲಗೈ ಮಧ್ಯ ಬೆರಳಿನ ಮಧ್ಯ ಗಂಟಿನ ಮೇಲೆ ಹೆಬ್ಬೆರಳಿನ ತುದುಯನ್ನು ಇಟ್ಟಾಗ ಗೋಕರ್ಣ ಆಕೃತಿ ಆಗುತ್ತದೆ)
ಪಂಚಗವ್ಯ ಎಂದರೇನು? ಯಾವಾಗ ಕುಡಿಯಬೇಕು?
ಕಪ್ಪು ಬಣ್ಣದ ಆಕಳಿನ -- ಗೋ ಮೂತ್ರ
ಬಿಳಿ ಬಣ್ಣದ ಆಕಳಿನ -- ಗೋ ಮಯ (ಸಗಣಿ)
ಕೆಂಪು ಬಣ್ಣದ ಆಕಳಿನ -- ಗೋವಿನ ಹಾಲು
ಕೆಂಪು ಬಣ್ಣದ ಆಕಳಿನ -- ಹಸುವಿನ ಮೊಸರು
ಕಪಿಲ ಬಣ್ಣದ ಆಕಳಿನ -- ಹಸುವಿನ ತುಪ್ಪ
ಇವುಗಳನ್ನು ಗೋಮೂತ್ರ -- ೧ ತೊಲ
ಗೋಮಯ -- ಅರ್ಧ ಹೆಬ್ಬೆರಳಿನಷ್ಟು
ಹಾಲು -- ೭ ತೊಲ
ಮೊಸರು -- ೩ ತೊಲ
ತುಪ್ಪ -- ೧ ತೊಲ
ಕುಶೋದಕ -- ೧ ತೊಲ
ಇವುಗಳನ್ನು ಸೇರಿಸಿ ಅಭಿಮಂತ್ರಿಸುವುದಕ್ಕೆ ಪಂಚಗವ್ಯ ಎನ್ನುತ್ತಾರೆ.
ದೇಹ ಶುದ್ಧಿ- ಸ್ಥಳ ಶುದ್ಧಿಗಾಗಿ, ಸೂತಕ ನಿವೃತ್ತಿಗಾಗಿ ಪ್ರಾಶನ ಮಾಡಬೇಕು. ಅಲ್ಲದೆ ಎಲ್ಲಾ ವೃತ- ಯಜ್ಞ-ಯಾಗಾದಿ ಆರಂಭದಲ್ಲೂ ಶುದ್ಧಿಗಾಗಿ ಪಂಚಗವ್ಯವನ್ನು ಮಾಡಲಾಗುತ್ತದೆ.
ಬಿಳಿ ಬಣ್ಣದ ಆಕಳಿನ -- ಗೋ ಮಯ (ಸಗಣಿ)
ಕೆಂಪು ಬಣ್ಣದ ಆಕಳಿನ -- ಗೋವಿನ ಹಾಲು
ಕೆಂಪು ಬಣ್ಣದ ಆಕಳಿನ -- ಹಸುವಿನ ಮೊಸರು
ಕಪಿಲ ಬಣ್ಣದ ಆಕಳಿನ -- ಹಸುವಿನ ತುಪ್ಪ
ಇವುಗಳನ್ನು ಗೋಮೂತ್ರ -- ೧ ತೊಲ
ಗೋಮಯ -- ಅರ್ಧ ಹೆಬ್ಬೆರಳಿನಷ್ಟು
ಹಾಲು -- ೭ ತೊಲ
ಮೊಸರು -- ೩ ತೊಲ
ತುಪ್ಪ -- ೧ ತೊಲ
ಕುಶೋದಕ -- ೧ ತೊಲ
ಇವುಗಳನ್ನು ಸೇರಿಸಿ ಅಭಿಮಂತ್ರಿಸುವುದಕ್ಕೆ ಪಂಚಗವ್ಯ ಎನ್ನುತ್ತಾರೆ.
ದೇಹ ಶುದ್ಧಿ- ಸ್ಥಳ ಶುದ್ಧಿಗಾಗಿ, ಸೂತಕ ನಿವೃತ್ತಿಗಾಗಿ ಪ್ರಾಶನ ಮಾಡಬೇಕು. ಅಲ್ಲದೆ ಎಲ್ಲಾ ವೃತ- ಯಜ್ಞ-ಯಾಗಾದಿ ಆರಂಭದಲ್ಲೂ ಶುದ್ಧಿಗಾಗಿ ಪಂಚಗವ್ಯವನ್ನು ಮಾಡಲಾಗುತ್ತದೆ.
ಪಂಚಾಮೃತ ಅಂದರೇನು? ಯಾವುದನ್ನು ಸೇರಿಸಿದಾಗ ಪಂಚಾಮೃತವಾಗುತ್ತದೆ?
ಐದು ಅಮೃತ ಸದೃಶಗಳಾದ ದ್ರವ್ಯಗಳು ಸೇರಿದಾಗ ಪಂಚ + ಅಮೃತವಾಗುತ್ತದೆ. ೧. ಹಾಲು ೨. ಮೊಸರು ೩. ತುಪ್ಪ ೪. ಜೇನು ತುಪ್ಪ ೫. ಸಕ್ಕರೆ ಈ ಐದನ್ನು ಬೇರೆ ಬೇರೆಯಾಗಿ ಶುದ್ಧೋದಕದೊಡನೆ ದೇವರಿಗೆ ಅಭಿಷೇಕ ಮಾಡಿ ತೀರ್ಥವನ್ನು ಪಡೆಯುವುದು ಪಂಚಾಮೃತ. ಇದಕ್ಕೆ ಫಲವನ್ನು ಹಾಕವುದು ಬೇರೆ.
ಇತ್ತೀಚಿಗಷ್ಟೆ ಭಾರತದಲ್ಲಿ ನವರಾತ್ರಿ ದಸರಾ ಆಚರಿಸಲಾಯಿತು. ಈ ಹಬ್ಬಕ್ಕೆ ಪುರಾತನ ತಳಕು ಇದೆ. ರಾಮಾಯಣದಲ್ಲಿ ರಾಮ್, ರಾವಣ್ನ ವಿರುದ್ಧ ಯುದ್ಧ ಗೆದ್ದ ದಿನವೆಂದು, ಭಾರತೀಯರು ಆಚರಿಸುತ್ತಾರೆ. ಆದ್ರೆ ಎಲ್ಲ ಕಥೆಗೂ ಎರಡೂ ರೂಪಗಳಿರುತ್ತವೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅದರಂತೆ ಭಾರತದಲ್ಲಿ ಈ ಹಬ್ಬವನ್ನು ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ.
ಇನ್ನು ಕೇವಲ ಶ್ರೀಲಂಕಾದ ಜನಸಂಖ್ಯೆಯ ೧೨.೬% ಶೇಕಡಾ ರಷ್ಟಿರುವ ಹಿಂದುಗಳ ಪಾಲಿಗೆ ಈ ಕಥೆಯ ಮಹತ್ವವೆ ಬೇರೆಯಾಗಿದೆ. ರಾವಣ್ ಸಪ್ತಋಷಿಗಳಲ್ಲಿ ಒಬ್ಬರಾದ ಮನು ಅವರ ಮಗ. ತಂದೆಯ ಗರಡಿಯಲ್ಲಿ ಬೆಳೆದ ಮಗಹ ಉನ್ನತ ಶಿಕ್ಷಣ ಹಾಗೂ ಯುದ್ಧ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುತ್ತಾನೆ. ಇನ್ನು ರಾವಣನಿಗೆ ದಶಮುಖ ಹೀಗಾಗಿ ಶ್ರೀಲಂಕಾದ ಜನ ಆತನಿಗೆ ವಿಶೇಷ ಸ್ಥಾನಮಾನ ನೀಡಿದ್ದಾರೆ. ಅಂದಹಾಗೆ ರಾವಣ್ನಿಗೆ ಅಪಾರ ಜ್ಞಾನ ಇತ್ತೆಂದು ಅಲ್ಲಿನ ಜನರ ನಂಬಿಕೆ. ಅಲ್ಲದೆ ಉತ್ತಮ ಆಡಳಿತಾತ್ಮಕ ಅಂಶಗಳನ್ನು ಅಳವಡಿಸಿಕೊಂಡ ಮನಷ್ಯ ಎಂದು ಅಲ್ಲಿನವರ ನಂಬಿಕೆ. ಇನ್ನು ರಾವಣನ ಬಗ್ಗೆ ೭ ಆರ್ಯುವೇದಕ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಶ್ರೀಲಂಕಾವಾಸಿಗಳ ಪ್ರಕಾರ ರಾವಣ್ ಹಲವು ಪ್ರಥಮಗಳ ಕರ್ತು ಎಂಬ ನಂಬಿಕೆ. ರಾವಣ್ ಸೀತಾ ಮಾತೆಯನ್ನು ಅಪಹರಿಸುವಾಗ ಪುಷ್ಪಕ ವಿಮಾನವನ್ನು ಮಾಡಿ, ಅದರಲ್ಲಿ ಸೀತೆಯನ್ನು ಕುರಿಸಿಕೊಂಡು ಬರುತ್ತಾನೆ ಎಂಬ ಕಥೆ ಎಲ್ಲರಿಗೂ ಗೊತ್ತೆ ಇದೆ. ಈಡಿ ಭುಮಿಯಲ್ಲಿ ಹಾರಾಡುವ ವಸ್ತುವನ್ನು ಕಂಡು ಹಿಡಿದ ಹೆಗ್ಗಳಿಕೆ ರಾವಣನಿಗೆ ಸಲ್ಲುತ್ತದೆ ಎಂಬ ನಂಬಿಕೆ ಅಲ್ಲಿನ ಜನರದ್ದು. ಇನ್ನು ರಾವಣ್ ಶಿವನ ಪರಾಮಪ್ತ ಭಕ್ತ ಎಂಬುದು ಎಲ್ಲರಿಗೂ ಗೊತ್ತೆ ಇದೆ. ಈತನ ತಪ್ಪಸಿಗೆ ಮೆಚ್ಚಿ ಶಿವ ವರದ ರೂಪದಲ್ಲಿ ಆಯುಧವೊಂದನ್ನು ನೀಡಿದ್ದಾನೆ ಎಂಬ ನಂಬಿಕೆ ಇಲ್ಲಿನ ಜನರದ್ದು.
ಇನ್ನು ಭಾರತೀಯ ಪ್ರಕಾರ ರಾವಣ್ನ ಸಂಹಾರಕ್ಕೆ ಸೀತಾ ಅಪರಹಣ ಮುಖ್ಯವಾದ್ರೆ, ಶ್ರೀಲಂಕಾ ಜನರಿಗೆ ಮಾತ್ರ ಇದ್ದು ಕೊಂಚ ಭಿನ್ನ. ರಾವಣ್ನ ಸಂಹಾರಕ್ಕಾಗಿ ಲಕ್ಷಣ, ಶೂರ್ಪನಕಿಯ ಮೂಗನ್ನು ಕತ್ತರಿಸಿದ್ದೇ ಕಾರಣ ಎಂದು ಅಲ್ಲಿನ ಜನರ ನಂಬಿಕೆ. ಇನ್ನು ಭಾರತೀಯರ ಪಾಲಿಗೆ ರಾವಣ್ ರಾಕ್ಷಸನಾದ್ರೆ, ಶ್ರೀಲಂಕಾ ಜನರ ಪಾಲಿಗೆ ಆತ ದೇವನಲ್ಲ. ಅಲ್ಲಿಯ ಜನರ ಪಾಲಿಗೆ ರಾವಣ್ ಓರ್ವ ಶ್ರೇಷ್ಠ ರಾಜ. ಹೀಗಾಗಿ ಆತನ ದೇವಾಲಯಗಳು ಶ್ರೀಲಂಕಾದಲ್ಲಿ ಕಾಣಸಿಗುತ್ತವೆ. ಇದರಿಂದ ತಿಳಿಯುವ ಒಂದು ಸಂಗತಿ ಎಂದ್ರೆ ಓರ್ವ ಮನುಷ್ಯ ಒಂದು ಸಮುದಾಯಕ್ಕೆ ವಿಲನ್ ಆದ್ರೆ, ಇನ್ನೊಂದು ಸಮುದಾಯಕ್ಕೆ ಹೀರೋ.
ವ್ಯಕ್ತಿಯಲ್ಲಿ ತ್ರಿಗುಣಗಳ ಅನಾವರಣ
ತ್ರಿಗುಣಗಳಿಗೆ ಆಧಾರವಾಗಿ ಜ್ಯೋತಿಷ್ಯವನ್ನು ಅದರ ಫಲಾಫಲಗಳನ್ನು ಅರ್ಥ ಮಾಡಿಕೊಳ್ಳಬಹುದು. ಜ್ಯೋತಿಷ್ಯದ ಲೆಕ್ಕಾಚಾರಗಳಿಗೆ ಅದುವೇ ಸಾಧನವಾಗಿದೆ. ನಮ್ಮ ಋುಷಿಮುನಿಗಳು ಜ್ಯೋತಿಷ್ಯದಲ್ಲಿ ತ್ರಿಗುಣಗಳು ಹೇಗೆ ಪ್ರಮುಖಪಾತ್ರ ವಹಿಸುವುದು ಹಾಗೂ ಇದನ್ನುಜಾತಕ ವಿಶ್ಲೇಷಣೆಯಲ್ಲಿ ಒಂದು ಸಾಧನವನ್ನಾಗಿ ಹೇಗೆ ಉಪಯೋಗಿಸಬಹುದುಎಂದು ತಿಳಿಸಿದ್ದಾರೆ. ತ್ರಿಗುಣಗಳು ನಮ್ಮ ಜೀವನದಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎಂದು ಸಂಕ್ಷಿಪ್ತವಾಗಿ ತಿಳಿಯೋಣ. ಆತ್ಮವು ಪ್ರಾಪಂಚಿಕವಾಗಿ ವ್ಯವಹರಿಸಲು ಮೂರು ಗುಣಗಳನ್ನು ಮನಸ್ಸಿನ ಮೂಲಕ ಪ್ರಕಟಪಡಿಸುತ್ತದೆ.ಇದನ್ನೇ ತ್ರಿಗುಣಗಳು (ಸತ್ವ, ರಜಸ್ಸು ಮತ್ತು ತಮೋಗುಣ) ಎನ್ನುತ್ತಾರೆ. ಪ್ರತಿಯೊಬ್ಬರಲ್ಲೂ ಈ ಮೂರೂ ಗುಣಗಳು ಪೂರ್ವಜನ್ಮ ಕರ್ಮಾನುಸಾರ ಇರುತ್ತವೆ.ಯಾವ ಗುಣ ಅಧಿಕವಾಗಿರುವುದೋ ಆ ಗುಣದ ಪ್ರಭಾವವನ್ನು ಅವರ ಗುಣ, ನಡತೆಯಲ್ಲಿ ಕಾಣಬಹುದು.
1. ಸಾತ್ವಿಕಗುಣ : ಸಾತ್ವಿಕ ಗುಣದವರು ಬುದ್ಧಿವಂತರಾಗಿ, ನಿರ್ಮಲ ಮನಸ್ಸಿನವರಾಗಿರುತ್ತಾರೆ. ದಯೆ, ಕರುಣೆ, ಇವರ ಸ್ವಭಾವವಾಗಿದ್ದು ಜೀವನದಲ್ಲಿ ತೃಪ್ತ ಭಾವವನ್ನು ಹೊಂದಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ಥಿತಪ್ರಜ್ಞರಾಗಿರುತ್ತಾರೆ.
2. ರಾಜಸಿಕಗುಣ : ಕ್ರಿಯಾಶೀಲತೆಯೇ ಇದರ ಪ್ರಮುಖ ಗುಣ. ಮುಂಗೋಪ, ಅಹಂಕಾರ, ಸ್ವಾರ್ಥ ಬುದ್ಧಿ ಇವರ ಸ್ವಭಾವವಾಗಿರುತ್ತದೆ. ಜೀವನದಲ್ಲಿ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು ತಮ್ಮಲ್ಲಿರುವ ಜ್ಞಾನವನ್ನು ಸರಿಯಾದ ಮಾರ್ಗದಲ್ಲಿ ಬಳಸುವುದಿಲ್ಲ. ಮಧ್ಯಮ ಬುದ್ಧಿವಂತರಾಗಿದ್ದು ನೆನಪಿನ ಶಕ್ತಿಯಲ್ಲಿ ಏರಿಳಿತಗಳಿರುತ್ತವೆ. ನಾಸ್ತಿಕ ಸ್ವಭಾವಇವರದಾಗಿದ್ದು ನಡತೆಯಲ್ಲಿ ಪ್ರಾಮಾಣಿಕತೆಯಿರುವುದಿಲ್ಲ.
3. ತಾಮಸಿಕಗುಣ :ಅಜ್ಞಾನ, ಸೋಮಾರಿತನ, ವಿತಂಡವಾದಗಳೇ ತಾಮಸಿಕ ಗುಣದ ಹೆಗ್ಗುರುತಾಗಿದೆ. ಕೆಟ್ಟ ಹವ್ಯಾಸ, ದುಷ್ಟ ಸಹವಾಸದಲ್ಲಿರುತ್ತಾರೆ. ನೆನಪಿನ ಶಕ್ತಿಯೂ ಇಲ್ಲದೆ ಮಾನಸಿಕ ದೃಢತೆಯಿರುವುದಿಲ್ಲ. ತಮ್ಮ ವ್ಯಕ್ತಿತ್ವವನ್ನು ಸರಿಪಡಿಸಿಕೊಳ್ಳಲು ಮುಂದಾಗುವುದಿಲ್ಲ.
ಈಗ ಒಬ್ಬ ವ್ಯಕ್ತಿಯ ಮನದಾಳವನ್ನು ಅವನು ಹೇಳದೆಯೇ ಜಾತಕದಲ್ಲಿ ಹೇಗೆ ತಿಳಿಯಬಹುದು ಎಂದು ನೋಡೋಣ.
ಜಾತಕದಲ್ಲಿ ಗುಣ ಗುರುತಿಸುವಿಕೆ:
ಗ್ರಹಗಳಿಗೆ ತ್ರಿಗುಣಗಳನ್ನು ಅಳವಡಿಸಿದಾಗ-
ಬುಧ, ಗುರು- ಗ್ರಹಗಳು ಸಾತ್ವಿಕಗುಣವನ್ನು ಪ್ರತಿನಿಧಿಸುವುದು
ರವಿ, ಚಂದ್ರ, ಶುಕ್ರ- ಗ್ರಹಗಳು ರಾಜಸಿಕ ಗುಣವನ್ನು ಸೂಚಿಸುವುದು
ಕುಜ, ಶನಿ, ರಾಹು, ಕೇತು- ಗ್ರಹಗಳು ತಾಮಸಿಕ ಗುಣದ ಪ್ರತೀಕಗಳಾಗಿವೆ.
ಈ ಗ್ರಹಕ್ಕೆ ಸಂಬಂಧಪಟ್ಟ ರಾಶಿಗಳು ಹಾಗೂ ನಕ್ಷ ತ್ರಗಳೂ ಸಹ ಇದೇರೀತಿ ಗುಣಗಳನ್ನು ಪ್ರತಿನಿಧಿಸುವುದು.ಜನ್ಮ ಲಗ್ನವು ಜಾತಕನ ವ್ಯಕ್ತಿತ್ವವನ್ನು ಹೇಳುವುದರಿಂದ ಲಗ್ನಸ್ಥಿತ ರಾಶಿ, ಲಗ್ನಕ್ಕೆ ಪ್ರಭಾವ ಬೀರುವ ಗ್ರಹಗಳು ಹಾಗೂ ಅವುಗಳು ಸ್ಥಿತವಾಗಿರುವ ನಕ್ಷ ತ್ರಗಳನ್ನು ಗಮನಿಸಿದಾಗ ವ್ಯಕ್ತಿಯ ಗುಣವನ್ನು ನಾವು ಸುಲಭವಾಗಿ ತಿಳಿಯಬಹುದಾಗಿದೆ.
ಜೀವನದಲ್ಲಿ ತ್ರಿಗುಣಗಳು:
ಪ್ರತಿಯೊಬ್ಬರಲ್ಲೂ ಮೂರೂ ಗುಣಗಳಿರುತ್ತವೆ. ಒಂದರ ಗುಣ ಅಧಿಕವಾಗಿದ್ದರೆ ಮತ್ತೊಂದು ಗುಣ ಮರೆಯಾಗಿರುವುದು.ಯಾರೂ ಸಹ ಜೀವನದಲ್ಲಿ ಸಂಪೂರ್ಣವಾಗಿ ಒಂದೇ ಗುಣದಲ್ಲಿ ಇರಲು ಸಾಧ್ಯವಿಲ್ಲ. ಸಮಯ, ಸಂದರ್ಭ ಬಂದಾಗ ಮರೆಯಾಗಿರುವ ಗುಣ ಪ್ರಕಟವಾಗುವುದು.ಈ ಸಮಯ ಸಂದರ್ಭವನ್ನೇ ನಾವು ಜ್ಯೋತಿಷ್ಯದಲ್ಲಿ ದಶಾ-ಭುಕ್ತಿ ಎಂದು ಕರೆಯುತ್ತೇವೆ. ತಾಮಸಿಕ ಗುಣದ ವ್ಯಕ್ತಿಗೆ ಸಾತ್ವಿಕ ಗ್ರಹದ ದಶೆ ಪ್ರಾರಂಭವಾದಾಗ ಆ ವ್ಯಕ್ತಿಯಲ್ಲಿ ಪರಿವರ್ತನೆ ಕಾಣಬಹುದು.
ವಿವಾಹ ಸಮಯದಲ್ಲಿ ಹೊಂದಾಣಿಕೆ ಮಾಡುವಾಗ, ಪಾಲುದಾರಿಕೆ ವ್ಯವಹಾರ ಮಾಡುವಾಗ, ಮತ್ತೊಬ್ಬರಿಗೆ ಸಾಲ ನೀಡುವಾಗ ಜಾತಕ ಪರಿಶೀಲಿಸಿ ಗುಣಗಳನ್ನು ಅಭ್ಯಾಸ ಮಾಡಿದರೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುವುದು.ಇದರಿಂದ ಮದುವೆಯಾದ ನಂತರ ಕಷ್ಟಪಡುವುದು, ಪಾಲುದಾರಿಕೆಯಲ್ಲಿ ನಷ್ಟ ಮಾಡಿಕೊಳ್ಳುವುದು, ಸಾಲ ನೀಡಿ ಹಣ ಕಳೆದುಕೊಳ್ಳುವುದು ತಪ್ಪುತ್ತದೆ.
ಪ್ರತಿ ದಿನದಲ್ಲಿ ತ್ರಿಗುಣ :
ಗುಣಗಳ ಇರುವಿಕೆಯನ್ನು ನಮ್ಮ ದೈನಂದಿನ ಚಟುವಟಿಕೆಗಳ ದೃಷ್ಟಿಯಿಂದಲೂ ವಿಶ್ಲೇಷಿಸಬಹುದು.ದಿನದ 24 ಗಂಟೆಗಳನ್ನೂ ಸಹ ಸತ್ವ-ರಜೋ-ತಮೋ ಗುಣಗಳ ಕಾಲಗಳನ್ನಾಗಿ ವಿಭಾಗಿಸಬಹುದು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ