ಮಂಗಳವಾರ, ನವೆಂಬರ್ 28, 2017

ಮನೆಮದ್ದು

ಬೆನ್ನುಮೂಳೆಯ ಸದೃಢತೆಗೆ
ಫಾಸ್ಟ್‌ಫುಡ್‌ಗಳಿಂದ ದೂರವಿರಿ. 45 ನಿಮಿಷಗಳ ವಾಕಿಂಗ್ ಅತ್ಯಗತ್ಯ.
ಬೊಜ್ಜು ಬೆನ್ನು ಮೂಳೆಯ ಭಾರ ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ. ಬೊಜ್ಜು ಬರದಂತೆ ಎಚ್ಚರ ವಹಿಸಿ.
ಕುರ್ಚಿಯ ಪೂರ್ಣ ಭಾರವನ್ನು ಬಳಸಿ ಕುಳಿತುಕೊಳ್ಳಿ. ಬೆನ್ನು ಮೂಳೆಯ ಎಲ್ಲ ತಿರುವುಗಳಿಗೂ ಹೆಚ್ಚಿನ ಭಾರ ಬೀಳಬಾರದು. ಪಾದಕ್ಕೆ ಬೆಂಬಲವಿರಬೇಕು.
ನಿಲ್ಲುವಾಗ ಕಾಲುಗಳು ಅಗಲವಾಗಿರಬೇಕು. ಮೊಣಕಾಲುಗಳು ಬಿಗಿಯಾಗಿರಬೇಕು. ಭುಜವನ್ನು ಒಳಕ್ಕೆ ಎಳೆದುಕೊಂಡಿರಬಾರದು. ಭುಜದ ಇಳಿಜಾರು ಬೆನ್ನುಮೂಳೆಯ ತಿರುವಿನ ಮೇಲೆ ನೇರ ಪರಿಣಾಮ ಬೀರುತ್ತದೆ.
ಉದ್ಯೋಗಿಗಳು ಹೆಚ್ಚು ಹೊತ್ತು ಬಾಗಿ ಕುಳಿತಿರುವುದರಿಂದ ಬೆನ್ನುಮೂಳೆಗೆ ಹಾನಿಯಾಗುತ್ತದೆ.
, ತಂಬಾಕು, ಧೂಮಪಾನ ಅಥವಾ ಹೊಗೆಸೊಪ್ಪು ಬೆನ್ನು ಮೂಳೆಯನ್ನು ದುರ್ಬಲಗೊಳಿಸುತ್ತದೆ. ಇವುಗಳಿಂದ ದೂರವಿರಿ.
ಆಸನವನ್ನು ಮಾಡಲು ನೀವು ನೆಲದ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ.
*ಬೆನ್ನು ನೇರವಾಗಿರುವಂತೆ ಕುಳಿತು, ಕಾಲುಗಳನ್ನು ಚಾಚಿ.
*ಹಿಮ್ಮಡಿಗಳು ನೆಲದ ಮೇಲೆ ಇರುವಂತೆ ಇರಿಸಿಕೊಳ್ಳಿ. ಆಗ ಒಂದು ಮೊಣಕಾಲನ್ನು ಮಡಿಚಿ, ಆ ಮೊಣಕಾಲು ಎದೆಯ ಭಾಗಕ್ಕೆ ಹತ್ತಿರವಾಗಿ ಬರುವಂತೆ ಮಡಿಚಿ
*ನಿಮ್ಮ ಕಾಲಿನ ಬೆರಳುಗಳು ಮೇಲ್ಮುಖವಾಗಿರಲಿ.
* ಈಗ ಬೆನ್ನನ್ನು ಹಿಗ್ಗಿಸಿ ಮತ್ತು ನಿಮ್ಮ ಸೊಂಟದ ಮತ್ತೊಂದು ಭಾಗವನ್ನು ತಿರುಗಿಸಿ.
*ಕೆಳ ಬೆನ್ನು ಇನ್ನೊಂದು ಕಡೆಗೆ ತಿರುಗಿಸಿ.
*ತದನಂತರ ಮಡಿಚಿದ ಮೊಣಕಾಲನ್ನು ಕೈಗಳಿಂದ ಬಳಸಿಕೊಂಡು ತಬ್ಬಿಕೊಳ್ಳಿ( ಹಿಮ್ಮುಖವಾಗಿ). ಈಗ ದೀರ್ಘವಾಗಿ ಉಸಿರಾಡಿ.
*ನಿಮ್ಮ ಎದೆಯನ್ನು ಹಿಗ್ಗಿಸಿ, ಭುಜಗಳು ಸಹ ಹಿಗ್ಗಲಿ.
*ಇದೇ ಸ್ಥಿತಿಯಲ್ಲಿ ಒಂದು ನಿಮಿಷ ಇರಿ.
*ಇದನ್ನು ದೇಹದ ಎರಡು ಕಡೆ ಪ್ರಯತ್ನಿಸಿ. ಸುಮಾರು 4-5 ಬಾರಿ ಮಾಡಿದರೆ ಒಳ್ಳೆಯದು.
ಮರೀಚ್ಯಾಸನ ಪ್ರಯೋಜನಗಳು
*ಬೆನ್ನು ಮತ್ತು ದೇಹದ ಹಿಂಭಾಗದ ಸ್ನಾಯುಗಳನ್ನು ಹಿಗ್ಗಿಸಲು ನೆರವಾಗುತ್ತದೆ.
*ಭುಜದ ಸ್ನಾಯುಗಳನ್ನು ಹಿಗ್ಗಿಸಲು ನೆರವಾಗುತ್ತದೆ.
*ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
*ಮಲಬದ್ಧತೆಯನ್ನು ನಿವಾರಿಸುತ್ತದೆ.
*ಋತುಚಕ್ರದ ನೋವನ್ನು ನಿವಾರಿಸುತ್ತದೆ.
*ಆಯಾಸದಿಂದ ಮುಕ್ತಿಯನ್ನು ನೀಡುತ್ತದೆ.
*ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ ಮತ್ತು ಒತ್ತಡದಿಂದ ಪರಿಹಾರ ನೀಡುತ್ತದೆ. ಕುತ್ತಿಗೆ, ಭುಜಗಳಲ್ಲಿ ನೋವೇ? ಮತ್ಸ್ಯಾಸನ ಅನುಸರಿಸಿ ಸಾಕು
ಎಚ್ಚರ.   ಬೆನ್ನು ನೋವು, ತಲೆ ನೋವು, ಮೈಗ್ರೇನ್, ಅಧಿಕ ರಕ್ತದೊತ್ತಡ ಇರುವವರು ಈ ಆಸನ ಮಾಡಬೇಡಿ. ಇದನ್ನು ಮಾಡುವ ಮೊದಲು ತಜ್ಞ ಯೋಗ ಶಿಕ್ಷಕರ ಸಲಹೆ ಪಡೆಯಿರಿ
ಬೆಳ್ಳುಳ್ಳಿಯಲ್ಲಿ ನೋವು ನಿವಾರಕ ಶಕ್ತಿ ಅಪಾರ ಪ್ರಮಾಣದಲ್ಲಿದೆ. ಬೆಳ್ಳುಳ್ಳಿಯನ್ನು ತೆಂಗಿನ ಎಣ್ಣೆಯಲ್ಲಿ ಬಿಸಿ ಮಾಡಿ ಅದನ್ನು ನೋವಿರುವ ಜಾಗಕ್ಕೆ ಹಚ್ಚುವುದರಿಂದ ನೋವು ಕಡಿಮೆಯಾಗುವ ಜೊತೆಗೆ ಮಾಂಸಖಂಡಗಳ ಬಿಗಿತ ಕಡಿಮೆಯಾಗುತ್ತದೆ.
ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು *ಶುಂಠಿ ರಸ 3-4 ಚಮಚ *ತುಳಸಿ 10 ಎಲೆಗಳು
ಈ ಮನೆಮದ್ದು ತುಂಬಾ ಪರಿಣಾಮಕಾರಿ ಮತ್ತು ಕೆಲವೊಂದು ಸಂಶೋಧನೆಗಳು ಕೂಡ ಈ ಮನೆಮದ್ದು ತುಂಬಾ ಪರಿಣಾಮಕಾರಿ ಎಂದು ಸಾಬೀತು ಮಾಡಿದೆ.
*ಈ ಮನೆಮದ್ದಿನೊಂದಿಗೆ ಕೆಲವೊಂದು ಆರೋಗ್ಯಕರ ವ್ಯಾಯಾಮವನ್ನು ಪಾಲಿಸಿಕೊಂಡು ಹೋದರೆ ನಿಮಗೆ ಬೆನ್ನು ನೋವಿನ ಸಮಸ್ಯೆಯೇ ಇರದು.
ಶುಂಠಿ ಹಾಗೂ ತುಳಸಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಮಾಂಸಖಂಡ ಮತ್ತು ಸಮಸ್ಯೆ ಉಂಟಾಗುವ ಜಾಗದಲ್ಲಿರುವ ಉರಿಯೂತವನ್ನು ಇದು ಕಡಿಮೆ ಮಾಡುವುದು.
ತಯಾರಿಸುವ ಹಾಗೂ ಸೇವಿಸುವ ವಿಧಾನ
*ಹೇಳಿದಷ್ಟು ಪ್ರಮಾಣದ ತುಳಸಿ ಎಲೆಗಳನ್ನು ಸರಿಯಾಗಿ ಜಜ್ಜಿಕೊಂಡು ಅದನ್ನು ಶುಂಠಿ ರಸಕ್ಕೆ ಹಾಕಿ.
ಬೆನ್ನಿನ ಭಾಗಕ್ಕೆ ಈ ಮಿಶ್ರಣವನ್ನು ಹಚ್ಚಿಕೊಂಡು ಸುಮಾರು 25 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ಸ್ನಾನ ಮಾಡಿಕೊಳ್ಳಿ.
*ಇನ್ನು ಈ ಮಿಶ್ರಣವನ್ನು ದಿನಾಲೂ ಬೆಳಿಗ್ಗೆ ಉಪಹಾರಕ್ಕೆ ಮೊದಲು ಸೇವಿಸಬಹುದು. ಈ ಮನೆಮದ್ದನ್ನು ಪ್ರಯತ್ನಿಸಿ
ತೂಕವಿಳಿಸಬೇಕೆಂಬ ಇರಾದೆಯುಳ್ಳವರಿಗೆ ಲಿಂಬೆ-ಶುಂಠಿ ಬೆರೆಸಿದ ನೀರು ಒಂದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಈ ನೀರನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಅನಿವಾರ್ಯವಾಗಿ ಸಂಗ್ರಹವಾಗಿರುವ ಕೊಬ್ಬನ್ನು ಬಳಸಿಕೊಳ್ಳಲೇಬೇಕಾಗಿ ಬರುವ ಕಾರಣ ತೂಕ ಇಳಿಯುವುದು ಸುಲಭವಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಮಾತ್ರವಲ್ಲ, ತೂಕವಿಳಿಸುವ ಕ್ರಮಗಳಿಗೆ ಬೆಂಬಲವನ್ನೂ ನೀಡ್ತುತದೆ. ನೈಸರ್ಗಿಕವಾಗಿ, ಯಾವುದೇ ಅಡ್ಡಪರಿಣಾಮವಿಲ್ಲದೇ ತೂಕವನ್ನು ಇಳಿಸಬಯಸುವವರಿಗೆ ಈ ಪಾನೀಯ ಅಮೃತಸಮಾನವಾಗಿದೆ

ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!
ಅಲ್ಲದೇ ಈ ಸಂಯೋಜನೆಯನ್ನು ಇತರ ಪೇಯಗಳಲ್ಲಿ ಬೆರೆಸಿ ಕುಡಿಯುವುದರಿಂದ ದೇಹ ಈ ಪೇಯದ ಎಲ್ಲಾ ಪೋಷಕಾಂಶಗಳನ್ನು ಪಡೆಯಲು ನೆರವಾಗುತ್ತದೆ. ಲಿಂಬೆಯಲ್ಲಿ ವಿಟಮಿನ್ ಸಿ, ಬಿ6, ಪಾಲಿಫೆನಾಲುಗಳು, ಟರ್ಪೀನ್, ನಾರಿಂಜಿನ್, ಹೆಸ್ಪರಿಡಿನ್, ಪೊಟ್ಯಾಶಿಯಂ, ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಸಿಯಂ ಹಾಗೂ ಕರಗುವ ನಾರು ಹೇರಳವಾಗಿದೆ. ಈ ಪಟ್ಟಿಯಲ್ಲಿ ಶುಂಠಿಯೇನೂ ಹಿಂದೆ ಬಿದ್ದಿಲ್ಲ. ಇದರಲ್ಲಿಯೂ ಅವಶ್ಯಕ ತೈಲ, ಬಿಸಾಬೋಲೀನ್, ಜಿಂಜರಾಲ್ ಸಹಿತ ಇನ್ನೂ ಹಲವಾರು ಪೋಷಕಾಂಶಗಳಿವೆ. ಇದರ ಸೇವನೆಯಿಂದ ತೂಕ ಇಳಿಕೆಯ ಜೊತೆಗೇ ಇನ್ನೂ ಕೆಲವಾರು ಪ್ರಯೋಜನಗಳನ್ನು ಪಡೆಯಬಹುದು. ಬನ್ನಿ, ಈ ಪ್ರಯೋಜನಗಳು ಯಾವುವು ಎಂದುದನ್ನು ನೋಡೋಣ...
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶವಾಗಿದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿದ್ದಷ್ಟೂ ಆರೋಗ್ಯವೂ ಉತ್ತಮವಾಗಿರುತ್ತದೆ ಹಾಗೂ ನಿಮ್ಮ ಚಟುವಟಿಕೆಗಳನ್ನು ಪೂರ್ಣ ಕ್ಷಮತೆಯಿಂದ ನಿರ್ವಹಿಸಲು ಸಾಧ್ಯವಾಗುತ್ತದೆ.
ಫ್ರೀ ರ್‍ಯಾಡಿಕಲ್ ಗಳನ್ನು ದೂರವಾಗಿಸುತ್ತದೆ:
ಈ ಪೇಯದಲ್ಲಿ ವಿಟಮಿನ್ ಸಿ ಸಹಿತ ಇನ್ನೂ ಹಲವಾರು ಆಂಟಿ ಆಕ್ಸಿಡೆಂಟುಗಳಿವೆ. ಇವು ದೇಹದಲ್ಲಿ ಸಂಗ್ರಹವಾಗಿದ್ದ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹೊಡೆದೋಡಿಸಿ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಈ ಕಣಗಳಿಂದ ಎದುರಾಗುವ ಇನ್ನೂ ಹಲವಾರು ತೊಂದರೆಗಳಿಂದ ರಕ್ಷಿಸುತ್ತದೆ.
ಹೊಟ್ಟೆಯುರಿ-ಹುಳಿತೇಗುಗಳಿಂದ ರಕ್ಷಿಸುತ್ತದೆ
ಒಂದು ವೇಳೆ ನಿಮಗೆ ಹೊಟ್ಟೆಯಲ್ಲಿ ನೋವು, ಉರಿ ಅಥವಾ ಹುಳಿತೇಗು ಮೊದಲಾದ ತೊಂದರೆ ಕಾಣಿಸಿಕೊಂಡರೆ ತಕ್ಷಣವೇ ಲಿಂಬೆ-ಶುಂಠಿ ಬೆರೆಸಿದ ನೀರನ್ನು ಕುಡಿದುಬಿಡಬೇಕು. ವಿಶೇಷವಾಗಿ ಶುಂಠಿಯಲ್ಲಿರುವ ಪೋಷಕಾಂಶಗಳು ಕ್ಷಾರೀಯವಾಗಿದ್ದು ಹೊಟ್ಟೆಯ ಆಮ್ಲೀಯತೆಯನ್ನು ಕಡಿಮೆಗೊಳಿಸಿ ಈ ಎಲ್ಲಾ ತೊಂದರೆಗಳಿಂದ ರಕ್ಷಿಸುತ್ತದೆ.
ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ
ನಿಯಮಿತ ಸೇವನೆಯಿಂದ ನಿಮ್ಮ ತ್ವಚೆ ಆರೋಗ್ಯಕರವಾಗಿರುತ್ತದೆ. ಇದರಲ್ಲಿರುವ ವಿಟಮಿನ್ ಸಿ ಚರ್ಮಕ್ಕೆ ಬುಡದಿಂದ ಪೋಷಣೆ ನೀಡುವ ಮೂಲಕ ಚರ್ಮದ ಸೆಳೆತ ಹೆಚ್ಚಿ ನೈಸರ್ಗಿಕ ಕಾಂತಿ ಪಡೆಯುವಂತಾಗುತ್ತದೆ.
ದೇಹವನ್ನು ಬೆಚ್ಚಗಿರಿಸುತ್ತದೆ
ಶುಂಠಿಯಲ್ಲಿರುವ ಖಾರವಾದ ಪೋಷಕಾಂಶ ದೇಹವನ್ನು ಬೆಚ್ಚಗಿರಿಸಲು ನೆರವಾಗುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಹಾಗೂ ಸಂಜೆಯ ಥಂಡಿಯ ಸಮಯದಲ್ಲಿ ದೇಹವನ್ನು ಬೆಚ್ಚಗಿರಿಸಲು ನೆರವಾಗುತ್ತದೆ.
ಮೈಗ್ರೇನ್ ಕಡಿಮೆ ಮಾಡಲು ನೆರವಾಗುತ್ತದೆ
ಮೈಗ್ರೇನ್ ತಲೆನೋವು ಪ್ರಾರಂಭವಾದ ತಕ್ಷಣವೇ ಒಂದು ಲೋಟ ಲಿಂಬೆ ಹಾಗೂ ಶುಂಠಿಯ ನೀರನ್ನು ಕುಡಿಯುವ ಮೂಲಕ ತಲೆನೋವನ್ನು ಉಲ್ಬಣಗೊಳ್ಳದಂತೆ ತಡೆಯಬಹುದು. ಆದ್ದರಿಂದ ಮೈಗ್ರೇನ್ ತಲೆನೋವು ಇರುವ ವ್ಯಕ್ತಿಗಳು ಈ ನೀರನ್ನು ಸದಾ ಸಿದ್ಧವಾಗಿರಿಸುವ ಮೂಲಕ ತಲೆನೋವು ಕಡಿಮೆ ಮಾಡಲು ನೆರವಾಗುತ್ತದೆ.
ಕ್ಯಾನ್ಸರ್ ನಿಂದ ರಕ್ಷಿಸುತ್ತದೆ
ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಕ್ಯಾನ್ಸರ್ ಎದುರಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಉಂಟುಮಾಡುವ ಕಣಗಳನ್ನು ನಿವಾರಿಸುವ ಮೂಲಕ ಕ್ಯಾನ್ಸರ್ ಸಹಿತ ಇನ್ನೂ ಕೆಲವಾರು ಕಾಯಿಲೆಗಳಿಂದ ರಕ್ಷಿಸುತ್ತದೆ.
ಪ್ರಯಾಣದ ವಾಕರಿಕೆಯನ್ನು ತಡೆಯುತ್ತದೆ
ಶುಂಠಿಯಲ್ಲಿರುವ ಕೊಂಚ ಖಾರವಾದ ಜಿಂಜೆರಾಲ್ ಹಾಗೂ ಲಿಂಬೆಯ ಹುಳಿಯಾದ ರುಚಿ ಪ್ರಯಾಣದಲ್ಲಿ ಎದುರಾಗುವ ವಾಕರಿಕೆಯನ್ನು ಇಲ್ಲವಾಗಿಸುತ್ತದೆ.
ಕೆಮ್ಮು ನಿವಾರಕವಾಗಿದೆ
ಗಂಟಲಿನ ತೇವಭಾಗದಲ್ಲಿ ಬ್ಯಾಕ್ಟೀರಿಯಾಗಳು ಅಭಿವೃದ್ದಿಗೊಂಡು ಕೆರೆತ ಉಂಟುಮಾಡಿದಾ ಇದನ್ನು ಹೊರಹಾಕಲು ದೇಹ ಪ್ರಯೋಗಿಸುವ ವಿಧಾನವೇ ಕೆಮ್ಮು. ಈ ಪೇಯವನ್ನು ಕುಡಿಯುವ ಮೂಲಕ ಗಂಟಲಿನಲ್ಲಿರುವ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತವೆ ಹಾಗೂ ಕೆಮ್ಮಿನ ಅಗತ್ಯವಿಲ್ಲದೇ ಹೋಗುತ್ತದೆ. ಈ ಪೇಯದಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಕೆಮ್ಮು ನಿವಾರಿಸಲು ನೆರವಾಗುತ್ತದೆ.
ಫಲವತ್ತತೆಯನ್ನು ಹೆಚ್ಚಿಸುತ್ತದೆ
ಶುಂಠಿಯಲ್ಲಿರುವ ಕೆಲವು ಪೋಷಕಾಂಶಗಳು ಪುರುಷರಲ್ಲಿ ಫಲವತ್ತತೆಯನು ಹೆಚ್ಚಿಸುವ ಕ್ಷಮತೆ ಹೆಚ್ಚಿಸುತ್ತದೆ. ಶುಂಠಿ ಪುರುಷರಲ್ಲಿ ನಿಮಿರುದೌರ್ಬಲ್ಯ ಕಡಿಮೆಗೊಳಿಸಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
*ಮಜ್ಜಿಗೆ ಮಹಿಮೆ* -ಉಪಯುಕ್ತ ಮಾಹಿತಿ-
(ಮಲಗುವ ಮುನ್ನ) ಹಾಲು ಕುಡಿದರೆ, ಬೆಳಿಗ್ಗೆ (ಎದ್ದ ಮೇಲೆ ಮುಖ ತೊಳೆದುಕೊಂಡು) ನೀರು ಕುಡಿದರೆ, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿದರೆ ವೈದ್ಯನಿಗೇನು ಕೆಲಸ?
ಹಾಲು, ನೀರಿನ ಹಾಗೆಯೇ ಮಜ್ಜಿಗೆ ಕೂಡ ನಮ್ಮ ಆರೋಗ್ಯವನ್ನು ಕಾಪಿಡಲು ನೆರವಾಗುತ್ತದೆ. ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಅರ್ಧದಷ್ಟು ಕಡಿಮೆ ಕ್ಯಾಲರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ. ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡುವುದರಿಂದ ಕ್ಯಾಲರಿ, ಕೊಬ್ಬಿನ ಅಂಶ ತೀರಾ ಕಡಿಮೆ.
ಮಜ್ಜಿಗೆಯು ಕಷಾಯ ಹಾಗೂ ಅಮ್ಲರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣ ಹೊಂದುತ್ತದೆ. ಬೇಸಿಗೆಯಲ್ಲಂತೂ ಮಜ್ಜಿಗೆಯನ್ನು ನೆನೆಸಿಕೊಂಡರೆನೇ ‘ಆಹಾ!’ ಎನ್ನುತ್ತೇವೆ. ಮಜ್ಜಿಗೆ ಕೇವಲ ದಾಹವನ್ನು ತಣಿಸುವುದಷ್ಟೇ ಅಲ್ಲ, ಇದರಿಂದ ಹಲವು ಪ್ರಯೋಜನಗಳೂ ಇವೆ.
*ಮಜ್ಜಿಗೆ ಸೇವನೆಯಿಂದ ತೆರೆದ ಗಾಯ, ಬಾಯಿಹುಣ್ಣು, ರಕ್ತಸ್ರಾವದಂಥ ರೋಗಗಳು ಬಹುಬೇಗ ಗುಣವಾಗುತ್ತವೆ. ಆದ್ದರಿಂದಲೇ ಆಯುರ್ವೇದ ಚಿಕಿತ್ಸೆಗಳಲ್ಲಿ, ಚರ್ಮರೋಗದಿಂದ ಬಳಲುತ್ತಿರುವವರಿಗೆ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆ ಬಳಸಲಾಗುವುದು.
*ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಖನಿಜಾಂಶಗಳು ಅಧಿಕವಾಗಿವೆ. ಅನಿಮಿಯಾ, ಮಾನಸಿಕ ಒತ್ತಡ ಹಾಗೂ ಧಾತುಗಳ ಬೆ
ಳವಣಿಗೆಗೆ ಅಗತ್ಯವಿರುವ ವಿಟಮಿನ್ ಬಿ 12 ಇದರಲ್ಲಿ ಹೇರಳವಾಗಿದೆ.
*ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.
*ಮಜ್ಜಿಗೆಯಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
* ಇದರಲ್ಲಿ ಕ್ಯಾಲ್ಶಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಶಕ್ತಿ ನೀಡುತ್ತದೆ.
*ಮಜ್ಜಿಗೆಯು ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕುತ್ತದೆ.
*ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ. ಹುಳಿತೇಗು, ಹೊಟ್ಟೆಹುರಿ, ಎದೆಯುರಿ ನಿವಾರಿಸುತ್ತದೆ.
*ಜಠರ ವಿಕಾರಗಳಿಗೆ ಮಜ್ಜಿಗೆ ದಿವ್ಯೌಷಧಿ. ಬೇಧಿ, ರಕ್ತಬೇಧಿ ಹಾಗೂ ಕರುಳಿನ ವಿಕಾರಗಳಲ್ಲಿ, ಕರುಳಿನಲ್ಲಾಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಿ ಅಗತ್ಯ ನೀರಿನಾಂಶ ಹಾಗೂ ಖನಿಜಾಂಶವನ್ನು ನೀಡುತ್ತದೆ.
*ಕ್ಷಾರ ಹಾಗೂ ಕಷಾಯ ಗುಣಗಳಿಂದಾಗಿ ಮೂಲವ್ಯಾಧಿಯಲ್ಲಿನ ಗುದಾಂಕುರವನ್ನು ನಿವಾರಿಸುತ್ತದೆ.
*ಲಿವರ್‌ನಲ್ಲಿನ ವಿಷಗುಣಗಳನ್ನು ತೆಗೆದುಹಾಕುವ ಶಕ್ತಿ ಮಜ್ಜಿಗೆಗೆ ಇದೆ.
*ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ರಕ್ತದೊತ್ತಡ ಮತ್ತು ತಲೆನೋವು ಗುಣವಾಗುತ್ತದೆ.
*ಮಜ್ಜಿಗೆಗೆ ಸೈಂಧವ ಉಪ್ಪು ಮತ್ತು ಹಸಿಶುಂಠಿ ರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.
*ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಸಭೆ ಸಮಾರಂಭಗಳಲ್ಲಿ ಅಧಿಕ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ.
*ಅರ್ಧ ಚಮಚ ಶುಂಠಿರಸ ಹಾಗೂ ಜೀರಿಗೆಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಆ್ಯಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ. ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆಯೊಂದಿಗೆ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಬಹಳ ಉತ್ತಮ. ಇದು ಅಗತ್ಯ ನೀರಿನಾಂಶವನ್ನು ನೀಡುತ್ತದೆ ಹಾಗೂ ಅತಿಸಾರವನ್ನು ನಿಯಂತ್ರಿಸುತ್ತದೆ. ತ್ವಚೆಯ ಕಾಂತಿಯನ್ನು ಹೆಚ್ಚಿಸಿ ಮುಪ್ಪನ್ನು ತಡೆಯುತ್ತದೆ.
*ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.
*ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಕೊನೆಯಲ್ಲಿ ಮಜ್ಜಿಗೆ ಸೇರಿಸಿ ಊಟ ಮಾಡಿದರೆ ಹೊಟ್ಟೆಗೂ ಸುಖಕರ, ಊಟವೂ ಪೂರ್ಣವಾಗುತ್ತದೆ.
*ಸಕ್ಕರೆ ಕಾಯಿಲೆ ಇರುವವರಿಗೂ ಮಜ್ಜಿಗೆ ನೀರು ಉತ್ತಮ. ದಿನದಲ್ಲಿ ನಾಲ್ಕೈದು ಲೋಟ ಮಜ್ಜಿಗೆ ನೀರು ಕುಡಿಯುತ್ತಿದ್ದರೆ ದೇಹದ ಸ್ಥಿತಿ ಉತ್ತಮವಾಗಿರುತ್ತದೆ.
*ಡಯಟ್ ಮಾಡುವವರು ಹಣ್ಣು, ತರಕಾರಿಗಳ ಜೊತೆ ಮಜ್ಜಿಗೆಯನ್ನು ಸೇವಿಸಬೇಕು.
*ತಲೆಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಕಳೆದು ಸ್ನಾನ ಮಾಡಬೇಕು. ಹೀಗೆ ನಾಲ್ಕೈದು ಸಲ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
ಕುಡಿಯಿರಿ ಗೊತ್ತಿಲ್ಲಾದವರಿಗೆ ತಿಳಿಸಿಕೊಡಿ.

ವಿಚಾರಸಿದ್ಧವಾದ ಜ್ಞಾನವೇ ವಿಜ್ಞಾನ. ಈ ವಿಜ್ಞಾನಭಾವವು ನಾವು ದಿನನಿತ್ಯ ಬಳಸುವ ಆಹಾರಪದಾರ್ಥಗಳ ಉಪಯೋಗವನ್ನು ವೈಜ್ಞಾನಿಕ ದೃಷ್ಟಿಯಲ್ಲಿ ಸಮಜಾಯಿಷಿ ನೀಡಿ ನಮ್ಮನ್ನು ಆ ಪದಾರ್ಥದ ಬಳಕೆಗಾಗಿ ಪ್ರೇರೇಪಿಸುತ್ತದೆ. ಅಂತಹ ವೈಜ್ಞಾನಿಕ ಭದ್ರ ನೆಲೆಗಟ್ಟನ್ನು ಹೊಂದಿರುವ ಆಹಾರಪದಾರ್ಥಗಳಲ್ಲೊಂದು ನಾವು ದಿನನಿತ್ಯ ಬಳಸುವ ತರಕಾರಿಯಾದ ಬೀಟ್​ರೂಟ್. ಪ್ರೋಟೀನ್, ಫಾಸ್ಪರಸ್, ಜಿಂಕ್, ಮ್ಯಾಂಗನೀಸ್, ಮ್ಯಾಗ್ನೇಷಿಯಂ, ಪೊಟ್ಯಾಷಿಯಂ, ಕಬ್ಬಿಣ, ಜೀವಸತ್ವ ಬಿ6, ತಾಮ್ರ ಹಾಗೂ ಹೇರಳ ನಾರಿನ ಅಂಶ ಹೊಂದಿರುವ ಬೀಟ್​ರೂಟ್ ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡುತ್ತದೆ. ಹಿಮೋಗ್ಲೊಬಿನ್ ಅಂಶವು ಅಧಿಕವಾಗುತ್ತದೆ. ಶುದ್ಧ ರಕ್ತದ ಸಂಚಲನ ಉಂಟಾಗುತ್ತದೆ. ಕ್ಯಾಲ್ಶಿಯಂ ಕೊರತೆ ನೀಗಿಸಿ ಮೂಳೆಗಳನ್ನು ಧೃಡಗೊಳಿಸುತ್ತದೆ. ದೇಹದಲ್ಲಿನ ಕಶ್ಮಲ ಪದಾರ್ಥಗಳನ್ನು ಹೊರಹಾಕಲು ಇದು ಪರಿಣಾಮಕಾರಿ.

ಡಯಾಬಿಟಿಸ್ ಇರುವವರು ಬೀಟ್​ರೂಟ್ ತಿನ್ನಲೇಬಾರದು ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. 100 ಗ್ರಾಂ. ಬೀಟ್​ರೂಟ್​ನಲ್ಲಿ 10 ಗ್ರಾಂ.ನಷ್ಟು ಮಾತ್ರ ಕಾರ್ಬೆಹೈಡ್ರೇಟ್ ಅಂದರೆ ಸಕ್ಕರೆ ಅಂಶ ಇದೆ. ಜೊತೆಗೆ ಮೇಲೆ ತಿಳಿಸಿದ ಪೋಷಕಾಂಶಗಳು ಸಾಕಷ್ಟಿದೆ. ಆದರೆ ನಾವು ಮಧುಮೇಹ ನಿಯಂತ್ರಿಸಲು ಬಳಸುತ್ತಿರುವ 100 ಗ್ರಾಂ ಗೋಧಿ, ರಾಗಿ, ಜೋಳಗಳಲ್ಲಿ 70ರಿಂದ 80 ಗ್ರಾಂ.ನಷ್ಟು ಕಾಬೋಹೈಡ್ರೇಟ್ಸ್ (ಸಕ್ಕರೆ ಅಂಶ) ಇದೆ. ಹೀಗಾಗಿ, ಮಧುಮೇಹ ಹೊಂದಿರುವವರು ಹಸಿ ತರಕಾರಿಗಳ ಸಲಾಡ್, ಪಲ್ಯಗಳು, ನಟ್ಸ್​ಗಳನ್ನು ಜಾಸ್ತಿ ಸೇವಿಸುತ್ತಾ ಕಾರ್ಬೆಹೈಡ್ರೇಟ್ಸ್ ಜಾಸ್ತಿ ಇರುವ ಆಹಾರವನ್ನು ಕಡಿಮೆ ಸೇವಿಸಬೇಕು.
ಬೀಟ್​ರೂಟ್, ಕ್ಯಾರೆಟ್ ಹಾಗೂ ಮೂಲಂಗಿಯನ್ನು ಸಮಪ್ರಮಾಣದಲ್ಲಿ ರುಬ್ಬಿ ಅದಕ್ಕೆ ಕೆಂಪುಕಲ್ಲುಸಕ್ಕರೆ ಹಾಕಿ ಜ್ಯೂಸ್ ಮಾಡಿಕೊಂಡು ಪ್ರತಿನಿತ್ಯ ಕುಡಿದರೆ ರಕ್ತಹೀನತೆಯ ಸಮಸ್ಯೆ ನಿವಾರಣೆಯಾಗುತ್ತದೆ. ಚರ್ಮದ ತೊಂದರೆಯೂ ಕಡಿಮೆಯಾಗುತ್ತದೆ. ಇದೇ ಜ್ಯೂಸ್​ಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿದರೆ ಬೊಜ್ಜಿನ ಸಮಸ್ಯೆಯು ಪರಿಹಾರವಾಗುತ್ತದೆ.
ಬೀಟ್​ರೂಟ್​ನ ಪೇಸ್ಟ್​ಗೆ ಮದರಂಗಿ (ಮೆಹಂದಿ) ಸೇರಿಸಿ ತಲೆಗೆ ಲೇಪಿಸಿ ಸ್ವಲ್ಪ ಕಾಲದ ನಂತರ ಸ್ನಾನ ಮಾಡಿದಾಗ ಬೆಳ್ಳಗಾಗಿರುವ ಕೂದಲೂ ಕಪ್ಪಾಗುತ್ತದೆ.
ಅರ್ಧಗ್ಲಾಸ್ ಬೀಟ್​ರೂಟ್ ರಸ, ಅರ್ಧ ನಿಂಬೆಹಣ್ಣಿನ ರಸ ಹಾಗೂ ಒಂದು ಚಮಚ ಜೇನುತುಪ್ಪವನ್ನು ಮಿಶ್ರಣಮಾಡಿ ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ಸೇವಿಸುತ್ತ ಬಂದಲ್ಲಿ ಬೊಜ್ಜು ಕರಗುತ್ತದೆ. ಬಿಸಿ ಮಾಡಿದ ಎಳ್ಳೆಣ್ಣೆಗೆ ಅರ್ಧ ಚಮಚ ಬೀಟ್​ರೂಟ್ ಪೇಸ್ಟ್ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ತಣ್ಣಗಾದ ನಂತರ ಇದನ್ನು ಗಾಯದ ಕಲೆಗಳಿಗೆ ನಿರಂತರವಾಗಿ ಹಚ್ಚಿದರೆ ನಿಧಾನವಾಗಿ ಕಲೆಗಳು ಮಾಯವಾಗುತ್ತವೆ. ಮಲಬದ್ಧತೆ ಹಾಗೂ ಮೂಲವ್ಯಾಧಿಗೆ ಬೀಟ್​ರೂಟ್ ಸೇವನೆ ಪರಿಣಾಮಕಾರಿ. ನೀರನ್ನು ಬಿಸಿಮಾಡಿ ಅದಕ್ಕೆ ಬೀಟ್​ರೂಟ್​ನ್ನು ಸಣ್ಣಸಣ್ಣ ಚೂರುಗಳನ್ನಾಗಿ ಮಾಡಿ ಹಾಕಿ ಕುದಿಸಬೇಕು. ಅದಕ್ಕೆ ಕೆಂಪುಕಲ್ಲುಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣಮಾಡಿ ರಾತ್ರಿ ಮಲಗುವ ಮೊದಲು ಒಂದು ಲೋಟ ಕುಡಿಯುತ್ತ ಬಂದರೆ ಮೂಲವ್ಯಾಧಿ ಹಾಗೂ ಮಲಬದ್ಧತೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹೀಗೆ ಉತ್ತಮ ಆರೋಗ್ಯಕ್ಕಾಗಿ ನಾವು ಬೀಟ್​ರೂಟ್ ಸೇವಿಸಬೇಕು.ಕೊನೇ ಹನಿ
ಹಸಿ ಕ್ಯಾರೆಟ್ ತಿನ್ನುವಾಗ ಸ್ವಲ್ಪ ಎಣ್ಣೆ ಹಾಗೂ ಮೊಸರು ಸೇರಿಸಿಕೊಳ್ಳುವುದು ಉತ್ತಮ. ಏಕೆಂದರೆ ಅದರಲ್ಲಿರುವ ಬೀಟಾಕೆರೋಟಿನ್ ಹೀರಿಕೊಳ್ಳಲು ಇದು ಸಹಕಾರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ