ತುಂಬಾ ಚೆನ್ನಾಗಿದೆ ಓದಿ:
ಒಮ್ಮೆ ಭಕ್ತನೊಬ್ಬ ಗೋಸ್ವಾಮಿ
ತುಳಸೀದಾಸರನ್ನು ಕೇಳುತ್ತಾನೆ...
ತುಳಸೀದಾಸರನ್ನು ಕೇಳುತ್ತಾನೆ...
"ನೀವು ಇಷ್ಟೆಲ್ಲ ರಾಮನಾಮ ಗುಣಗಾನ ಮಾಡಿದ್ದೀರಲ್ವಾ, ನಿಮಗೆ ಒಮ್ಮೆಯಾದರೂ ಶ್ರೀರಾಮನ ದರ್ಶನ ಆಗಿದೆಯೇ?"
ಅದಕ್ಕೆ ತುಳಸೀದಾಸರು, "ಖಂಡಿತವಾಗಿಯೂ ಆಗಿದೆ!" ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಭಕ್ತನು "ಹಾಗಿದ್ದರೆ ನನಗೂ ಶ್ರೀರಾಮದರ್ಶನ ಸಾಧ್ಯವಿದೆಯೇ?" ಎಂದು ಕೇಳುತ್ತಾನೆ. ತುಳಸೀದಾಸರು "ಯಾಕಿಲ್ಲ? ನಿನಗೂ ಶ್ರೀರಾಮದರ್ಶನ ಸಾಧ್ಯವಿದೆ! ಅದು ಬಹಳ ಸುಲಭವಾಗಿಯೂ ಇದೆ. ನೀನು ಈ ಪ್ರಪಂಚದಲ್ಲಿ ಯಾವುದೇ ವ್ಯಕ್ತಿಯನ್ನಾದರೂ ನೋಡು, ಅಲ್ಲಿ ನಿನಗೆ ರಾಮನೇ ಕಾಣುತ್ತಾನೆ!" ಎನ್ನುತ್ತಾರೆ. ಭಕ್ತನಿಗೆ ಅರ್ಥವಾಗಲಿಲ್ಲ. "ಬಿಡಿಸಿ ಹೇಳಿ ಸ್ವಾಮೀ" ಎಂದು ವಿನಂತಿಸಿದ. ತುಳಸೀದಾಸರು ಹೇಳುತ್ತಾರೆ- "ನೋಡು, ಇದಕ್ಕೊಂದು ಸುಲಭಸೂತ್ರ ಇದೆ. ಈ ಪ್ರಪಂಚದಲ್ಲಿ ಯಾರದೇ ಹೆಸರಿಗಾದರೂ ಸರಿ ಈ ಸೂತ್ರವನ್ನು ಅಳವಡಿಸಿದರೆ ಕೊನೆಯಲ್ಲಿ ನಿನಗೆ ರಾಮನ ಹೆಸರೇ ಸಿಗುತ್ತದೆ!"
ಭಕ್ತನಿಗೆ ಮತ್ತಷ್ಟು ಕುತೂಹಲ, ಅಚ್ಚರಿ. ಯಾವುದು ಆ ಸೂತ್ರ? ಎಂದು ಕೇಳಿದ. ಆಗ ತುಳಸೀದಾಸರು ಹೇಳುತ್ತಾರೆ:
ನಾಮ ಚತುರ್ಗುಣ ಪಂಚತತ್ತ್ವ ಮಿಲನ
ತಾಸಾಂ ದ್ವಿಗುಣ ಪ್ರಮಾಣ
ತುಲಸೀ ಅಷ್ಟಸೌಭಾಗ್ಯೇ ಅಂತ ಮೇ
ಶೇಷ ರಾಮ ಹೀ ರಾಮ ||
ತುಲಸೀ ಅಷ್ಟಸೌಭಾಗ್ಯೇ ಅಂತ ಮೇ
ಶೇಷ ರಾಮ ಹೀ ರಾಮ ||
ಇದರ ಪ್ರಕಾರ, ಯಾರದೇ ಹೆಸರಾದರೂ ಸರಿ, ಅದರಲ್ಲಿರುವ ಅಕ್ಷರಗಳನ್ನು ಎಣಿಸು. ಅದನ್ನು ನಾಲ್ಕರಿಂದ ಗುಣಿಸು (ಚತುರ್ಗುಣ). ಅದಕ್ಕೆ ಐದನ್ನು ಕೂಡಿಸು (ಪಂಚತತ್ತ್ವ ಮಿಲನ). ಆಗ ಬಂದ ಸಂಖ್ಯೆಯನ್ನು ದುಪ್ಪಟ್ಟು ಮಾಡು (ದ್ವಿಗುಣ ಪ್ರಮಾಣ). ಬಂದ ಉತ್ತರವನ್ನು ಎಂಟರಿಂದ ಭಾಗಿಸು (ಅಷ್ಟಸೌಭಾಗ್ಯ).
ಭಾಗಲಬ್ಧ ಎಷ್ಟೇ ಇರಲಿ, ಶೇಷ ಉಳಿಯುವುದು ಎರಡೇ. ಆ ಎರಡು ಅಕ್ಷರಗಳೇ "ರಾಮ"!
ಭಾಗಲಬ್ಧ ಎಷ್ಟೇ ಇರಲಿ, ಶೇಷ ಉಳಿಯುವುದು ಎರಡೇ. ಆ ಎರಡು ಅಕ್ಷರಗಳೇ "ರಾಮ"!
ಭಕ್ತನಿಗೆ ಆಶ್ಚರ್ಯವೋ ಆಶ್ಚರ್ಯ. ಮೊದಲು ತನ್ನ ಹೆಸರು "ನಿರಂಜನ" ಎಂದು ನಾಲ್ಕು ಅಕ್ಷರಗಳು ಇದ್ದದ್ದಕ್ಕೆ ಸೂತ್ರವನ್ನು
ಅನ್ವಯಿಸಿದ. 4X4=16; 16+5=21; 21X2=42; 42/8= ಭಾಗಲಬ್ಧ 5. ಶೇಷ 2.
ಅನ್ವಯಿಸಿದ. 4X4=16; 16+5=21; 21X2=42; 42/8= ಭಾಗಲಬ್ಧ 5. ಶೇಷ 2.
ತನ್ನ ಹೆಂಡತಿಯ ಹೆಸರು "ನಿರ್ಮಲಾ" ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ. 3X4=12; 12+5=17; 17X2=34; 34/8 =
ಭಾಗಲಬ್ಧ 4. ಶೇಷ 2.
ಭಾಗಲಬ್ಧ 4. ಶೇಷ 2.
ತನ್ನ ಮಗಳ ಹೆಸರು "ನಿಧಿ" ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ. 2X4=8; 8+5=13; 13X2=26; 26/8 = ಭಾಗಲಬ್ಧ 3. ಶೇಷ2.
ತನ್ನ ಪಕ್ಕದಮನೆಯವನ ಹೆಸರು "ನಿಖಿಲಾನಂದ" ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ. 5X4=20; 20+5=25; 25X2=50; 50/8
= ಭಾಗಲಬ್ಧ 6. ಶೇಷ 2.
= ಭಾಗಲಬ್ಧ 6. ಶೇಷ 2.
ಹೌದಲ್ವಾ! ಹೆಸರು ಯಾವುದೇ ಇದ್ದರೂ, ಎಷ್ಟು ಅಕ್ಷರಗಳೇ ಇದ್ದರೂ ಕೊನೆಯಲ್ಲುಳಿಯುವುದು ಎರಡಕ್ಷರ "ರಾಮ" ಮಾತ್ರ! ಭಕ್ತನಿಗೆ ಬಹಳ
ಖುಷಿಯಾಯ್ತು. ತುಳಸೀದಾಸರ ಕಾಲಿಗೆರಗಿದ. ಇವತ್ತು ನನಗೆ ಶ್ರೀರಾಮದರ್ಶನ ಮಾಡಿಸಿದಿರಿ. ಇನ್ನು ಯಾವಾಗಲೂ ನಾನು ರಾಮನನ್ನೇ ಕಾಣುತ್ತಿರುತ್ತೇನೆ ಎಂದು ಅಲ್ಲಿಂದ ಹೊರಟುಹೋದ.
ಖುಷಿಯಾಯ್ತು. ತುಳಸೀದಾಸರ ಕಾಲಿಗೆರಗಿದ. ಇವತ್ತು ನನಗೆ ಶ್ರೀರಾಮದರ್ಶನ ಮಾಡಿಸಿದಿರಿ. ಇನ್ನು ಯಾವಾಗಲೂ ನಾನು ರಾಮನನ್ನೇ ಕಾಣುತ್ತಿರುತ್ತೇನೆ ಎಂದು ಅಲ್ಲಿಂದ ಹೊರಟುಹೋದ.
ಅಷ್ಟಾಗಿ, ತುಳಸೀದಾಸರು ಹೇಳಿದ ಸೂತ್ರದಲ್ಲಿನ ಸಂಖ್ಯೆಗಳ ಮತ್ತು ಗಣಿತಕ್ರಿಯೆಗಳ ಮಹತ್ವ ಏನು ಗೊತ್ತೇ? ಚತುರ್ಗುಣ = ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥ. ಪಂಚತತ್ತ್ವ = ಭೂಮಿ, ನೀರು, ಅಗ್ನಿ, ವಾಯು, ಆಕಾಶ ಎಂಬ ಪಂಚಮಹಾಭೂತ. ದ್ವಿಗುಣ = ಮಾಯೆ ಮತ್ತು ಬ್ರಹ್ಮ. ಅಷ್ಟಸೌಭಾಗ್ಯ = ಅನ್ನ, ಅರ್ಥ, ಪ್ರಭುತ್ವ, ಯೌವನ, ವೈಭವ, ಗೃಹ, ವಸ್ತ್ರ, ಆಭರಣ ಎಂಬ ಎಂಟು ಸೌಭಾಗ್ಯಗಳು.
ಇವೆಲ್ಲದರೊಟ್ಟಿಗೆ ನಾವು ಜೀವನಜಂಜಾಟ ನಡೆಸಿ, ಗುಣಿಸಿ, ಕೂಡಿಸಿ, ಭಾಗಿಸಿ, ಭೋಗಿಸಿ ಕೊನೆಗೂ ಉಳಿಯುವ ಶೇಷ "ರಾಮ"ಮಾತ್ರ!
ಜೈ ಶ್ರೀರಾಮ್
"ಭಗವತ್ ಗೀತೆ ನುಡಿ "
"ಭಗವತ್ ಗೀತೆ ನುಡಿ "
ಹುಟ್ಟಿದಾಗ ನೀ ಅಳುತ್ತಿದ್ದೆ,
ಮಡಿದಾಗ ನಿನ್ನವರು ಅಳುತ್ತಿದ್ದರು.
ಮಡಿದಾಗ ನಿನ್ನವರು ಅಳುತ್ತಿದ್ದರು.
ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.
ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.
ಹುಟ್ಟಿದಾಗ ಹುಡುಕುವರು ನಿನಗೆ
ನೂರೆಂಟು ನಾಮ,
ಮಡಿದಮೇಲೆ ಶವ ಎಂದೇ
ನಿನ್ನ ನಾಮ.
ನೂರೆಂಟು ನಾಮ,
ಮಡಿದಮೇಲೆ ಶವ ಎಂದೇ
ನಿನ್ನ ನಾಮ.
ನೀನೇನನ್ನೂ ಗಳಿಸದೇ ಬಂದೆ,
ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.
ಓ ಮಾನವಾ..
ಮಡಿದಾಗ ಮಣ್ಣಲ್ಲಿ ಮರಳಾಗಿ
ಹೊಗುವ ನೀನು
ನಿನ್ನದು ಎನ್ನಲು ನಿನಗೇನಿದೆ,
ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.
ಓ ಮಾನವಾ..
ಮಡಿದಾಗ ಮಣ್ಣಲ್ಲಿ ಮರಳಾಗಿ
ಹೊಗುವ ನೀನು
ನಿನ್ನದು ಎನ್ನಲು ನಿನಗೇನಿದೆ,
ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,
ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,
ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,
ಕಡೆಗೆ ನಿನ್ನ ಅಂತ್ಯ ಸಂಸ್ಕಾರ
ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.
ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.
ನಾನು ಎಂದು ಅಹಂಕರಿಸಲು
ನಾನು ಯಾರು ?
ಏನಿದೇ ನನ್ನಲ್ಲಿ ?
ನಾನು ಯಾರು ?
ಏನಿದೇ ನನ್ನಲ್ಲಿ ?
ಚಿಂತಿಸುವವನಿಗೆ ದೃಷ್ಟಾಂತವಿದೆ. - One of the best messages I have read
ಸೋಂಪು
♦ ಬಿಸಿ ನೀರಿನೊಂದಿಗೆ ಸೋಂಪು ಮತ್ತು ಜೇನುತುಪ್ಪ ಸೇರಿಸಿ ಕುಡಿದರೆ ಕೆಮ್ಮು ದೂರವಾಗುತ್ತದೆ.
♦ ಊಟದ ಬಳಿಕ ತಿಂದಲ್ಲಿ ಆಹಾರ ಜೀರ್ಣಕ್ಕೆ ಸಹಕಾರಿ.
♦ ಪ್ರತಿದಿನ ತಿಂದಲ್ಲಿ ರಕ್ತ ಶುದ್ದಿ ಖಚಿತ ಅಲ್ಲದೆ ಬಾಯಿಯ ದುರ್ವಾಸನೆ ತಡೆಯಬಹುದು.
♦ ನೀರಿಗೆ ಸೋಂಪು ಹಾಕಿ ಕುದಿಸಿ ಗಟ್ಟಿಯಾಗಿರುವುದನ್ನು ಮುಖಕ್ಕೆ ಹಚ್ಚಿ ತೊಳೆದಲ್ಲಿ ಮುಖದಲ್ಲಿ ಹೊಳಪು ಮೂಡುತ್ತದೆ.
♦ ಜೀರಿಗೆ ಮತ್ತು ಕಲ್ಲು ಸಕ್ಕರೆಯೊಂದಿಗೆ ತಿಂದರೆ ಆಯಾಸ ಕಡಿಮೆಯಾಗುತ್ತದೆ
.
ಮಾಹಿತಿ: ಆರೋಗ್ಯ ಮಾಹಿತಿ
♦ ಬಿಸಿ ನೀರಿನೊಂದಿಗೆ ಸೋಂಪು ಮತ್ತು ಜೇನುತುಪ್ಪ ಸೇರಿಸಿ ಕುಡಿದರೆ ಕೆಮ್ಮು ದೂರವಾಗುತ್ತದೆ.
♦ ಊಟದ ಬಳಿಕ ತಿಂದಲ್ಲಿ ಆಹಾರ ಜೀರ್ಣಕ್ಕೆ ಸಹಕಾರಿ.
♦ ಪ್ರತಿದಿನ ತಿಂದಲ್ಲಿ ರಕ್ತ ಶುದ್ದಿ ಖಚಿತ ಅಲ್ಲದೆ ಬಾಯಿಯ ದುರ್ವಾಸನೆ ತಡೆಯಬಹುದು.
♦ ನೀರಿಗೆ ಸೋಂಪು ಹಾಕಿ ಕುದಿಸಿ ಗಟ್ಟಿಯಾಗಿರುವುದನ್ನು ಮುಖಕ್ಕೆ ಹಚ್ಚಿ ತೊಳೆದಲ್ಲಿ ಮುಖದಲ್ಲಿ ಹೊಳಪು ಮೂಡುತ್ತದೆ.
♦ ಜೀರಿಗೆ ಮತ್ತು ಕಲ್ಲು ಸಕ್ಕರೆಯೊಂದಿಗೆ ತಿಂದರೆ ಆಯಾಸ ಕಡಿಮೆಯಾಗುತ್ತದೆ
.
ಮಾಹಿತಿ: ಆರೋಗ್ಯ ಮಾಹಿತಿ
ಪ್ರವಚನ ಸಾರ 1-11-17
ಗೀತೆಯು ವೇದಕ್ಕಿಂತಲೂ ಶ್ರೇಷ್ಠ.ವೇದಗಳು ಭಗವಂತನ ನಿಃಶ್ವಾಸದಿಂದ ಪ್ರಕಟವಾದರೆ
ಗೀತೆಯು ಅವನ ಬಾಯಿಂದ ಬಂದಿರುತ್ತದೆ.
ಅವನ ಇಚ್ಛೆಯಂತೆಯೇ ಎಲ್ಲವೂ ನಡೆದಿರುವದು
ಎನ್ನುವದೇ ಗೀತೆಯ ಸಾರ.ತೋಟಿಗನು ಬಿಟ್ಟ
ನೀರು ಯಾವದೇ ತಕರಾರು ಮಾಡದೇ ಅವನು
ಬಿಟ್ಟ ಗಿಡಗಳ ಕಡೆ ಹೋಗುತ್ತದೆಯೋ ಹಾಗೆಯೇ
ಪ್ರಯತ್ನ ಮತ್ತು ಪ್ರಾರಬ್ಧಗಳಿಗನುಸಾರವಾಗಿ
ಯಾವದೇ ತಕರಾರು ಮಾಡದೇ ಅವನಿಟ್ಟ ಪರಿಸ್ಥಿತಿಯಲ್ಲಿ ಸಮಾಧಾನದಿಂದ ಇದ್ದು ಭಗವಂತನ ಅನುಸಂಧಾನದಲ್ಲಿರುವದೇ
ಗೀತೆಯಿಂದ ಸಾಧಕರು ಕಲಿಯುವದಾಗಿರುತ್ತದೆ.
ಜೀವನದಲ್ಲಿ ಒದಗಿಬರುವ ಸುಖ ದುಃಖ ಗಳಲ್ಲಿ
ಭಗವಂತನ ನಾಮದ ಅನುಸಂಧಾನ ಕಾಯ್ದುಕೊಂಡು ಸಮಾಧಾನದಿಂದ ಪರಿಸ್ಥಿತಿಯನ್ನು
ಎದುರಿಸುವದನ್ನು ಅಭ್ಯಾಸ ಮಾಡಬೇಕು.ಉತ್ತಮ
ನಿಷ್ಠೆಯ ನಿತ್ಯ ನಿಯಮಿತ ನಾಮಸ್ಮರಣೆಯಿಂದ
ಇದನ್ನು ಸಾಧಿಸಬಹುದು.ಹಾಗೆಯೇ ಗೀತಾಶ್ರವಣ
ಮಾಡುವಾಗ ಅದರಲ್ಲಿ ವರ್ಣಿಸಿದ ಆತ್ಮನಿವೇದನ
,ಸಾಧಕನಿಗೆ ಬರುವ ವಿವಿಧ ಅವಸ್ಥೆಗಳ ಚಿಂತನ
ಮನನ ಮಾಡಬೇಕು.ಸರಳ ಸಾಧನ ನಾಮದ ಅನುಸಂಧಾನದಲ್ಲಿರಬೇಕು.ಹೀಗೆ ಗೀತೆಯು ಸರ್ವ
ಗ್ರಂಥಗಳ ತಾಯಿ ಆಗಿರುತ್ತದೆ.
ಶ್ರೀ ರಾಮ
ಗೀತೆಯು ವೇದಕ್ಕಿಂತಲೂ ಶ್ರೇಷ್ಠ.ವೇದಗಳು ಭಗವಂತನ ನಿಃಶ್ವಾಸದಿಂದ ಪ್ರಕಟವಾದರೆ
ಗೀತೆಯು ಅವನ ಬಾಯಿಂದ ಬಂದಿರುತ್ತದೆ.
ಅವನ ಇಚ್ಛೆಯಂತೆಯೇ ಎಲ್ಲವೂ ನಡೆದಿರುವದು
ಎನ್ನುವದೇ ಗೀತೆಯ ಸಾರ.ತೋಟಿಗನು ಬಿಟ್ಟ
ನೀರು ಯಾವದೇ ತಕರಾರು ಮಾಡದೇ ಅವನು
ಬಿಟ್ಟ ಗಿಡಗಳ ಕಡೆ ಹೋಗುತ್ತದೆಯೋ ಹಾಗೆಯೇ
ಪ್ರಯತ್ನ ಮತ್ತು ಪ್ರಾರಬ್ಧಗಳಿಗನುಸಾರವಾಗಿ
ಯಾವದೇ ತಕರಾರು ಮಾಡದೇ ಅವನಿಟ್ಟ ಪರಿಸ್ಥಿತಿಯಲ್ಲಿ ಸಮಾಧಾನದಿಂದ ಇದ್ದು ಭಗವಂತನ ಅನುಸಂಧಾನದಲ್ಲಿರುವದೇ
ಗೀತೆಯಿಂದ ಸಾಧಕರು ಕಲಿಯುವದಾಗಿರುತ್ತದೆ.
ಜೀವನದಲ್ಲಿ ಒದಗಿಬರುವ ಸುಖ ದುಃಖ ಗಳಲ್ಲಿ
ಭಗವಂತನ ನಾಮದ ಅನುಸಂಧಾನ ಕಾಯ್ದುಕೊಂಡು ಸಮಾಧಾನದಿಂದ ಪರಿಸ್ಥಿತಿಯನ್ನು
ಎದುರಿಸುವದನ್ನು ಅಭ್ಯಾಸ ಮಾಡಬೇಕು.ಉತ್ತಮ
ನಿಷ್ಠೆಯ ನಿತ್ಯ ನಿಯಮಿತ ನಾಮಸ್ಮರಣೆಯಿಂದ
ಇದನ್ನು ಸಾಧಿಸಬಹುದು.ಹಾಗೆಯೇ ಗೀತಾಶ್ರವಣ
ಮಾಡುವಾಗ ಅದರಲ್ಲಿ ವರ್ಣಿಸಿದ ಆತ್ಮನಿವೇದನ
,ಸಾಧಕನಿಗೆ ಬರುವ ವಿವಿಧ ಅವಸ್ಥೆಗಳ ಚಿಂತನ
ಮನನ ಮಾಡಬೇಕು.ಸರಳ ಸಾಧನ ನಾಮದ ಅನುಸಂಧಾನದಲ್ಲಿರಬೇಕು.ಹೀಗೆ ಗೀತೆಯು ಸರ್ವ
ಗ್ರಂಥಗಳ ತಾಯಿ ಆಗಿರುತ್ತದೆ.
ಶ್ರೀ ರಾಮ
*ಚಿತ್ತಜನಯ್ಯನ ಚಿಂತಿಸು ಮನವೆ*
ಸರ್ವಾಂತರ್ಯಾಮಿ, ಸರ್ವ ನಿಯಾಮಕ, ಪ್ರೇರಕ ಶ್ರೀಹರಿ.
ಭೋಗ್ಯವಸ್ತುಗಳಲ್ಲಿ ದೇವರು ಇರುವ. ಭೋಗಿಸುವ ಎನ್ನಲ್ಲಿಯೂ ಇರುವ.
ಭೋಗಮಾಡುವ ಆಯುಷ್ಯವಿರುವಾಗ ಭೋಗ್ಯವಸ್ತುಗಳು ರುಚಿಸುವದೇ ಇಲ್ಲ. ಭೋಗ್ಯವಸ್ತುಗಳು ದೊರೆತಾದಾಗ ಭೋಗಿಸುವ ಜೀವ ಜೀರ್ಣನಾಗಿರುತ್ತಾನೆ.
ಯಾವ ಪದಾರ್ಥ ಅಯೋಗ್ಯವಾಗಿರುತ್ತವೋ ಅದುವೇ ಎನ್ನನು ಆಕರ್ಷಿಸುತ್ತವೆ. ಯಾವದು ಎನಗೆ ಯೋಗ್ಯವಾಗಿದೆ ಅದು ಆಕರ್ಷಿಸುವದೇ ಇಲ್ಲ.
ಮತ್ತೆ ಕೆಲವೊಮ್ಮೆ ಭೋಗ್ಯವಸ್ತುವಿಗೂ ಭೋಗಿ ಜೀವನಿಗೂ ಸಂಪರ್ಕವೇ ಆಗುವದಿಲ್ಲ.
ಒಟ್ಟಾರೆಯಾಗಿ ಜೀವ ಮಾತ್ರ ತಾನು ಕಂಗಾಲಾಗೇ ಇರುತ್ತಾನೆ.
"ಇದುವೇ ಎನಗೆ ಭೋಗ್ಯ ಹಾಗೂ ಯೋಗ್ಯ ಎಂದು ತಿಳಿಯಬೇಕು. ಆ ವಸ್ತು ಎನ್ನನು ಆಕರ್ಷಿಸಬೇಕು. ಅದರಲ್ಲಿ ಅಭಿರುಚಿ ಹುಟ್ಟಬೇಕು. ಸರಿಯಾದ ಸಮಯದಲ್ಲಿ ದೊರೆತಿರಬೇಕು, ಅತ್ಯಂತ ಯೋಗ್ಯರೀತಿಯಲ್ಲಿ ಭೋಗಿಸಿರಬೇಕು." ಇಷ್ಟೆಲ್ಲದಕ್ಕೂ ಒಂದು ಸಂಪರ್ಕ ಕೊಂಡಿ ಇದೆ. ಅದುವೇ ಎಲ್ಲದರಲ್ಲಿಯೂ ಅಂತರ್ಯಾಮಿ ಶ್ರೀಹರಿ.
*ವಿಷಯಸ್ಥಸ್ಸನ್ ಸರ್ವಜೀವೇಂದ್ರಿಯ ಆಕರ್ಷಕಃ*
ಎನಗೆ ಯೋಗ್ಯವಾದ, ನನ್ನಿಂದ ಭೋಗ್ಯವಾದ ವಿಷಯಗಳಲ್ಲಿದ್ದು ಎನ್ನನ್ನು ಯೋಗ್ಯವಾದ ಕಾಲದಲ್ಲಿ ಆಕರ್ಷಿಸುವವನು ದೇವರೆ. ಎಂಬ ಸುಂದರವಾದ ಚಿಂತನೆಯನ್ನು ಆಚಾರ್ಯರು ಎಮಗೆ ತಿಳುಹಿಸಿಕೊಡುತ್ತಾರೆ.
ಎನ್ನಂತರ್ಯಾಮಿಯೇ, ಭೋಗ್ಯವಿಷಯಾಂತರ್ಯಾಮಿ, ಅವನೇ ಮಾನವನಿಗೂ ಭೋಗ್ಯವಿಷಯಕ್ಕೂ ಸಂಪರ್ಕಸಾಧಿಸುವ ಯೋಗ್ಯ ಕಾಲಾಂತರ್ಯಾಮಿಯೂ ಆಗಿದ್ದಾನೆ. ಈ ಹರಿಯ ಚಿಂತನೆಯಿಂದಲೇನೆ *ಯೋಗ್ಯ ಪದಾರ್ಥವನ್ನು, ಯೋಗ್ಯಕಾಲದಲ್ಲಿ ಅತ್ಯಂತ ಯೋಗ್ಯರೀತಿಯಿಂದ ಅನುಭವಿಸಲು ಸಾಧ್ಯ* ಎಂದು ಅರುಹಿಸಿ ಕೊಡುತ್ತಾರೆ.
ಈ ತರಹದ ಚಿಂತನೆಯ ಮಾರ್ಗದಿಂದ ಪರಿಪೂರ್ಣ ವಿಮುಖರಾದದ್ದಾರಿಂದಲೇ *ಹಲ್ಲು ಇರುವಾಗ ಕಡಲೆ ಇಲ್ಲ, ಕಡಲೆ ದೊರೆತಾಗ ಹಲ್ಲಗಳು ಇಲ್ಲ* ಎಂಬವಸ್ಥೆಯನ್ನು ತಂದುಕೊಂಡಾಗಿದೆ.
ಇಂದಿನಿಂದ ಪ್ರಯತ್ನಪಟ್ಟು ಅತ್ಯಂತ ಹಠದಿಂದ ಒಂದು ಬಾರಿಯಾದರೂ ಚಿಂತಿಸೋಣ.
*✍🏼✍🏼✍🏼ನ್ಯಾಸ*
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ