*ಶಾಂತಿಗಳು:*🕉
ಪ್ರತ್ಯೇಕ ವ್ಯಕ್ತಿಗಾಗಿ ಮಾಡುವ ವೈದಿಕ ಪೂಜಾ ವಿಧಾನಕ್ಕೆ ಶಾಂತಿ ಎನ್ನುತ್ತಾರೆ. ಯಾವ ಕಾರಣಕ್ಕಾಗಿ ಯಾವ ಶಾಂತಿಯನ್ನು ಮಾಡ ಬೇಕು? ಮಗುವಿನ ಜನನ ಕಾಲದಲ್ಲಿ ನಾನಾ ವಿಧ ದೋಷಾದಿಗಳು ಬರುತ್ತವೆ. ಇದನ್ನು ಗುರುಗಳ ಮುಖೇನ ತಿಳಿದು ಬಂದಿರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿ ಕೊಳ್ಳ ಬೇಕು.
*೧. ಕೃಷ್ಣ ಚತುರ್ದಶಿ ಜನನ ಶಾಂತಿ:*
ಮಗು ಕೃಷ್ಣ ಪಕ್ಷದ ಚತುರ್ದಶಿಯ ದಿನ ಜನನವಾದಲ್ಲಿ ಅನೇಕವಾದ ಅನಿಷ್ಠ ಫಲಗಳು ಬರುತ್ತದೆ. ಚತುರ್ದಶಿ ತಿಥಿಯ ಕಾಲವನ್ನು ಆರು ಭಾಗ ಮಾಡಿ; ಒಂದನೇಯ ಭಾಗವನ್ನು ಶುಭ ಎಂತಲೂ, ಎರಡನೇಯ ಭಾಗವನ್ನು ತಂದೆಗೆ ಅನಿಷ್ಠ ಎಂತಲೂ,ಮೂರನೇಯ ಭಾಗವನ್ನು ತಾಯಿಗೆ ಅನಿಷ್ಠ ಎಂತಲೂ, ನಾಲ್ಕನೇಯ ಭಾಗವನ್ನು ಮಾವನಿಗೆ ಅನಿಷ್ಠ ಎಂದೂ, ಐದನೇಯ ಭಾಗವನ್ನು ವಂಶನಾಶ ಎಂತಲೂ,ಆರನೇಯ ಭಾಗವನ್ನು ಧನಹಾನಿ ಎಂದೂ ಶಾಸ್ತ್ರದಲ್ಲಿ ಹೇಳಿದೆ.
*೨. ಸಿನೀವಾಲೀ- ಕುಹೂ ಜನನ ಶಾಂತಿ:*
ಮಗುವು ಅಮಾವಾಸ್ಯೆಯ ದಿನದಂದು ಜನಿಸಿದಲ್ಲಿ, ಅಮಾವಾಸ್ಯೆಯ ಪರಮ ಘಟಿಯನ್ನು ೮ ಭಾಗವನ್ನು ಮಾಡಿ ಪ್ರಥಮ ಭಾಗ ಜನನಕ್ಕೆ ಸಿನೀವಾಲೀ, ಅಷ್ಟಮ ಭಾಗಕ್ಕೆ ಕುಹೂ ಜನನ ಎಂದೂ ಕರೆಯುತ್ತಾರೆ. ಈ ಜನನದಲ್ಲಿ ಬರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿ ಕೊಳ್ಳ ಬೇಕು.
*೩. ದರ್ಶ ಜನನ ಶಾಂತಿ:*
ಅಮಾವಾಸ್ಯೆ ತಿಥಿಯ ಪರಮ ಘಟಿಯನ್ನು ಭಾಗವನ್ನಾಗಿ ಮಾಡಿದಾಗ ೨ನೇಯ ಭಾಗದಿಂದ ೬ನೇ ಭಾಗದವರೆಗೆ ಹುಟ್ಟಿದ ಮಗುವಿಗೆ ಬರುವ ದೋಷ ನಿವಾರಣೆಗೆ ದರ್ಶ ಜನನ ಶಾಂತಿ ಅಥವಾ ಅಮಾವಾಸ್ಯೆ ಜನನ ಶಾಂತಿ ಮಾಡಿಸಿ ಕೊಳ್ಳ ಬೇಕು.
*೪. ಸೂರ್ಯ ಸಂಕ್ರಾಂತಿ ಜನನ ಶಾಂತಿ ಮತ್ತು ವ್ಯತಿಪಾತ, ವೈದ್ರತಿ, ಅತೀಗಂಡ, ಗಂಡಯೋಗ ಜನನ ಶಾಂತಿ*
*೫. ಆಶ್ಲೇಷಾ ಜನನ ಶಾಂತಿ:*
ಮಗುವು ಆಶ್ಲೇಷಾ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ದೋಷಾದಿಗಳ ನಿವಾರಣೆಗೆ ಶಾಂತಿಗಳನ್ನು ಮಾಡಿಸಿ ಕೊಳ್ಳ ಬೇಕು. ಮೊದಲನೇ ಪಾದ ಜನನಕ್ಕೆ ಶುಭ ಫಲ, ದ್ವಿತೀಯ ಪಾದ ಜನನಕ್ಕೆ ಧನನಾಶ, ತೃತೀಯ ಪಾದ ಜನನಕ್ಕೆ ತಾಯಿಗೆ ಅನಿಷ್ಠ.
*೬. ಜ್ಯೇಷ್ಠ ನಕ್ಷತ್ರ ಜನನ ಶಾಂತಿ:*
ಮಗುವು ಜ್ಯೇಷ್ಠ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ದೋಷಾದಿಗಳ ನಿವಾರಣೆಗೆ ಶಾಂತಿಗಳನ್ನು ಮಾಡಿಸಿ ಕೊಳ್ಳ ಬೇಕು. ವಿಶೇಷತಃ ೪ನೇ ಪಾದದಲ್ಲಿ ಜನಿಸಿದರೆ ತಂದೆ- ತಾಯಿಗೆ ಅನಿಷ್ಠ.
*೭. ಮೂಲಾ ನಕ್ಷತ್ರ ಜನನ ಶಾಂತಿ:*
ಮಗುವು ಮೂಲಾ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ೧ನೇ ಪಾದಕ್ಕೆ ಅತೀ ಅನಿಷ್ಠ. ೨ನೇ ಪಾದಕ್ಕೆ ತಾಯಿಗೆ ಅನಿಷ್ಠ. ೩ನೇ ಪಾದಕ್ಕೆ ಧನನಾಶ. ೪ನೇ ಪಾದಕ್ಕೆ ಕುಲನಾಶ. ಹೆಣ್ಣು ಮಗು ಈ ನಕ್ಷತ್ರದಲ್ಲಿ ಜನಿಸಿದರೆ ಗಂಡನ ತಂದೆಗೆ ಅತೀ ಅನಿಷ್ಠ.
*೮. ಗ್ರಹಣ ಜನನ ಶಾಂತಿ:*
ಮಗುವು ಸೂರ್ಯ ಅಥವಾ ಚಂದ್ರ ಗ್ರಹಣ ಕಾಲದಲ್ಲಿ ಜನಿಸಿದರೆ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿ ಕೊಳ್ಳ ಬೇಕು.
*೯. ಏಕ ನಕ್ಷತ್ರ ಜನನ ಶಾಂತಿ:*
ತಾಯಿ, ತಂದೆ, ಅಣ್ಣ-ತಮ್ಮ ಎಲ್ಲರ ನಕ್ಷತ್ರ ಒಂದೇ ಆದಲ್ಲಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೧೦. ವಿಷ ಘಟಿ ಜನನ ಶಾಂತಿ:* ಮಗುವು ವಿಷ ನಾಡಿಯಲ್ಲಿ ಜನಿಸಿದರೆ ಸರ್ವರಿಷ್ಠ. ಆದ್ದರಿಂದ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೧೧. ತ್ರಿಕ ಪ್ರಸವ ಶಾಂತಿ:*
ತಾಯಿಗೆ ಏಕ ಕಾಲದಲ್ಲಿ ಮೂರು ಮಗುವಿನ ಜನನವಾದರೆ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೧೨. ಭದ್ರಾ ಜನನ ಶಾಂತಿ:*
ಭದ್ರಾ ಯೋಗದಲ್ಲಿ ಜನಿಸಿದ ಮಗುವಿಗೆ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೧೩. ಅಧೋಮುಖ ಜನನ ಶಾಂತಿ:*
ಮಗು ಜನಿಸಿವಾಗ ಕೆಳಮುಖವಾಗಿ ಜನಿಸಿದರೆ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೧೪. ಸದಂತ ಜನನ ಶಾಂತಿ:*
ಮಗು ಹುಟ್ಟಿದಾಗಲೇ ಹಲ್ಲು ಇದ್ದರೆ ಬರುವ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೧೫. ಯಮಳ ಜನನ ಶಾಂತಿ:*
ಏಕ ಕಾಲದಲ್ಲಿ ಎರಡು ಮಗುವಿನ ಜನನವಾದಲ್ಲಿ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೧೬. ಪ್ರಸವ ವೈಕ್ರತಿ ಜನನ ಶಾಂತಿ:*
ಮಗು ಜನಿಸುವಾಗ ಅಂಗ ವಿಕಲವಿದ್ದಲ್ಲಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೧೭. ದಿನ ಕ್ಷಯ, ವ್ಯತಿಪಾತ ಯೋಗಾದಿ ಜನನ ಶಾಂತಿ.*
೧೮. ಬಾಲಾರಿಷ್ಠ ಜನನ ಶಾಂತಿ: ಮಗು ಜನಿಸಿದಾಗ ಜನ್ಮದಲ್ಲಿ ರವಿ, ಕುಜ, ಶನಿ, ರಾಹು, ಕೇತುಗಳು ವಿಷಮ ಸ್ಥಿತವಾದಲ್ಲಿ ವಿಪರೀತ ಕಷ್ಟಗಳನ್ನು ಕೊಡುತ್ತದೆ. ಈ ಕಷ್ಟಗಳ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು. ಈ ಶಾಂತಿಯನ್ನು ಮಗುವಿನ ಜನ್ಮದ ನಂತರದ ೧೨ನೆ ದಿನದ ಮೇಲೆ ಮಗು ಚಿಕ್ಕದಿದ್ದಾಗಲೆ ಮಾಡಿಸಿ ಕೊಳ್ಳುವುದು ಒಳ್ಳೆಯದು.
*೧೯. ಬಾಲಗ್ರಹ ಶಾಂತಿ:*
ಮಗುವು ಪೂರ್ವ ಜನ್ಮಂತರದಲ್ಲಿ ಮಾಡಿದ ದೇವರ, ವೇದಗಳ, ಶಾಸ್ತ್ರಗಳ ಮತ್ತು ಗುರು ಹಿರಿಯರ ನಿಂದನಾದಿ ಸರ್ವ ಪಾತಕಗಳಿಂದ ಬರುವ ಪೀಡಾ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೨೦. ಬಾಲ ಮಾರ್ಕಾಂಡೇಯ ಶಾಂತಿ:*
ಮಗುವಿಗೆ ಮಹತ್ ಬಾಲಾರಿಷ್ಟ ವಶದಿಂದ ಆಯುಷ್ಯಕ್ಕೆ ಕಂಟಕ ಸೂಚಿಸಿದಲ್ಲಿ ಅನಿಷ್ಟ ಪರಿಹಾರಕ್ಕಾಗಿ ಈ ಶಾಂತಿಯನ್ನು ಮಾಡಿಸ ಬೇಕು.
*೨೧. ರೋಹಿಣಿ ನಕ್ಷತ್ರ ಜನನ ಶಾಂತಿ:*
ಮಗುವು ರೋಹಿಣಿ ನಕ್ಷತ್ರದಲ್ಲಿ ಜನಿಸಿದರೆ ಮಾವನಿಗೆ ಅರಿಷ್ಟ ಸೂಚನೆ ಆಗುವುದರಿಂದ ಈ ಶಾಂತಿಯನ್ನು ಮಾಡಿಸ ಬೇಕು.
*೨೨. ಕುಜ-ರಾಹು ಸಂಧಿ ಶಾಂತಿ:*
ನವಗ್ರಹದಲ್ಲಿ ಒಂದೊಂದು ಗ್ರಹಕ್ಕೆ ಇಷ್ಟು ವರ್ಷಗಳು ಮನುಷ್ಯನ ಜೀವನದಲ್ಲಿ ಅಧಿಪತ್ಯ (ಅಧಿಕಾರ) ಎಂದಿರುತ್ತದೆ. ಆದರೆ ಪರಸ್ಪರ ಶತ್ರು ಗ್ರಹಗಳ ಅಧಿಕಾರ ಅವಧಿ ಮುಗಿದು ಇನ್ನೊಂದು ಶತ್ರು ಗ್ರಹದ ಅಧಿಕಾರ ಆರಂಭ ಕಾಲದಲ್ಲಿ ೬ ತಿಂಗಳು ಮುಂಚಿತವಾಗಿ ಸಂಧಿ ಶಾಂತಿ ಮಾಡಿಸುತ್ತಾರೆ. ಇಲ್ಲಿ ಕುಜ ದಶಾ ೭ ವರ್ಷಗಳು ಮುಗಿದು ರಾಹು ದಶಾ ೧೮ ವರ್ಷಗಳು ಆರಂಭವಾಗುವ ಸಮಯಕ್ಕೆ ಈ ಶಾಂತಿಯನ್ನು ಮಾಡಿಸ ಬೇಕು. ಈ ಸಂಧಿ ಕಾಲದವಿಶೇಷವಾಗಿ ಗಂಡಸರಿಗಿಗೆ ಹೆಚ್ಚು ಹಾನಿಕಾರಕ ಆಗಿರುತ್ತದೆ. ಆಯುಷ್ಯದಲ್ಲಿ ಒಂದು ಕಂಟಕ ಎನ್ನ ಬಹುದು.
*೨೩. ರಾಹು- ಬೃಹಸ್ಪತಿ ಸಂಧಿ ಶಾಂತಿ:*
ರಾಹುವಿನ ಅಧಿಕಾರ ಅವಧಿ ೧೮ ವರ್ಷಗಳು ಕಳೆದು ಗುರುವಿನ ೧೬ ವರ್ಷದ ಅಧಿಕಾರದ ಅವಧಿ ಆರಂಭವಾಗುವ ೬ ತಿಂಗಳು ಮೊದಲು ಈ ಶಾಂತಿಯನ್ನು ಅಗತ್ಯವಾಗಿ ಮಾಡಿಸಿ ಕೊಳ್ಳ ಬೇಕು. ಈ ಸಂಧಿಕಾಲವು ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಹಾನಿಕಾರಕ ಆಗಿರುತ್ತದೆ.
*೨೪. ಶುಕ್ರಾದಿತ್ಯ ಸಂಧಿ ಶಾಂತಿ:*
ಶುಕ್ರ ಅಧಿಕಾರ ಅವಧಿ ೨೦ ವರ್ಷಗಳು ಕಳೆದು ಸೂರ್ಯನ ೬ ವರ್ಷದ ಅಧಿಕಾರದ ಅವಧಿ ಆರಂಭವಾಗುವ ೬ ತಿಂಗಳು ಮೊದಲು ಈ ಶಾಂತಿಯನ್ನು ಅಗತ್ಯವಾಗಿ ಮಾಡಿಸಿ ಕೊಳ್ಳ ಬೇಕು. ಈ ಸಂಧಿಕಾಲವು ಪುರುಷ ಮತ್ತು ಮಹಿಳೆ ಇಬ್ಬರಿಗೂ ಹಾನಿಕಾರಕ ಆಗಿರುತ್ತದೆ.
*೨೫. ಷಷ್ಟ್ಯಬ್ಧ ಅಥವಾ ಉಗ್ರರಥ ಶಾಂತಿ:*
ಮನುಷ್ಯನು ತನ್ನ ಜೀವನದ ಕಷ್ಟ-ಸುಖಗಳನ್ನು ಅನುಭವಿಸುತ್ತ ಸಕಾಲದಲ್ಲಿ ವಿವಾಹವಾಗಿ ಪತ್ನಿಯನ್ನು ಒಡಗೂಡಿ ಮಕ್ಕಳ ಆಗು ಹೋಗುಗಳನ್ನು ಪೂರೈಸುತ್ತ ತನ್ನ ಜೀವನದ ೬೦ನೇ ಸಂವತ್ಸರವನ್ನು ಪ್ರವೇಶಿಸಿದಾಗ ಜನ್ಮ, ನಕ್ಷತ್ರದಲ್ಲಿ ಈ ಶಾಂತಿಯನ್ನು ಮಾಡ ಬೇಕು.
ಇದನ್ನು ಏಕೆ ಮಾಡ ಬೇಕು?
ಇದನ್ನು ಮುಂದಿನ ಜೀವನದಲ್ಲಿ ಬರುವಂತಹ ಅಪಮೃತ್ಯು, ದುಃಸ್ವಪ್ನ ದರ್ಶನ, ಗೃಹಪೀಡೆ, ವಿವಿಧ ರೋಗಬಾಧೆ, ಛಾಯಾ ವಿಕೃತಿ. ಭೂತ-ಪ್ರೇತಾದಿ ಪೀಡಾ ರೂಪಕವಾದಂತಹ ನಾನಾ
ವಿಧ ಅರಿಷ್ಟ ನಿವಾರಣೆಗಾಗಿ ಮಾಡುವಂತಹ ಶಾಂತಿಯನ್ನು ಉಗ್ರರಥ ಶಾಂತಿ ಎನ್ನುತ್ತೇವೆ.
ಈ ವಿಧಿಯಲ್ಲಿ ಗಣಪತಿ, ನವಗ್ರಹ ದೇವತೆಗಳನ್ನು, ಪೀಡಾ ಪರಿಹಾರಕನಾದ ಮೃತುಂಜಯನನ್ನು ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು, ಮೃತ್ಯುವನ್ನೇ ಜಯಿಸಿದ ಮಾರ್ಕೆಂಡೆಯನನ್ನು, ಆಯುರ್ದೇವತೆ ನಕ್ಷತ್ರ ದೇವತೆಗಳನ್ನು ಆರಾಧಿಸ ಬೇಕು. ಜಪ, ಹೋಮ, ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನವನ್ನಾಚರಿಸಿ ಗುರು-ಹಿರಿಯರ ಆಶೀರ್ವಾದವನ್ನು ಪಡೆಯ ಬೇಕು. ಈ ವಿಧಿಯಲ್ಲಿ ಉಗ್ರನೆಂಬ ಹೆಸರಿನ ಮೃತ್ಯುಂಜಯನು ಪ್ರಧಾನ ದೇವತೆಯಾದ್ದರಿಂದ ಉಗ್ರರಥ ಶಾಂತಿ ಎಂಬ ಹೆಸರು ಬಂತು. ಈ ವಿಧಿಯ ಅಂತ್ಯದಲ್ಲಿ ಕಲಶ ತೀರ್ಥಸ್ನಾನ ಮತ್ತು ಮಂಗಳ ದ್ರವ್ಯ ದರ್ಶನ ಅಲ್ಲದೇ ಪುನಃ ಮಂಗಳ ಸೂತ್ರ ಕಟ್ಟುವುದು ಮುಖ್ಯವಾಗಿರುತ್ತದೆ
*೨೮. ಗ್ರಹ ಶಾಂತಿ:*
ಮನೆಯಲ್ಲಿ ಸಾಲದ ಬಾಧೆ, ಅಶಾಂತಿ, ಕೆಟ್ಟ ಕನಸು ಮತ್ತು ರೋಗ-ರುಜಿನಗಳಿಂದ ತೊಂದರೆ ಅನುಭವಿಸುತ್ತಿದ್ದಲ್ಲಿ ಗ್ರಹ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೨೯. ವಾಸ್ತು ಶಾಂತಿ:*
ಹೊಸದಾಗಿ ತೆಗೆದು ಕೊಂಡ ಮನೆ ಅಥವಾ ವಸತಿ ಸಮುಚ್ಛಯ ನಿರ್ಮಿಸುವಾಗ ಸ್ಥಳದಲ್ಲಿ ಇರುವಂತಹ ನೂನ್ಯತೆಯನ್ನು ಹೊಗಲಾಡಿಸಿ ಸುಖ ಶಾಂತಿ, ಸಮೃದ್ಧಿಯಿಂದ ನೆಲೆಸುವುದಕ್ಕಾಗಿ ವಾಸ್ತು ಶಾಂತಿಯನ್ನು ಮಾಡುವುದು ಅಗತ್ಯ.
*೩೦. ರಾಕ್ಷೋಘ್ನ ಶಾಂತಿ:*
ಹೊಸ ಮನೆಯನ್ನು ನಿರ್ಮಿಸುವಾಗ ಸ್ಥಳದಲ್ಲಿ ಉಪಯೋಗಿಸಿರುವ ಮರದ ಸಲಕರಣೆಗಳಲ್ಲಿ ಇರುವ ಭೂತ, ಪ್ರೇತ, ಪಿಶಾಚಿ ಬಾಧೆ ನಿವಾರಣೆಗಾಗಿ ವಾಸ್ತು ಹೋಮದ ಪೂರ್ವದಲ್ಲಿ ಈ ಹೋಮವನ್ನು ರಾತ್ರಿಯಲ್ಲಿ ಮಾಡ ಬೇಕು.
*೩೧. ಗೇಹಾಭಿವೃದ್ಧಿ ಶಾಂತಿ:*
ದೇವಸ್ಥಾನದಲ್ಲಿ ಸ್ಥಾಪಿಸಿರುವ ವಿಗ್ರಹಕ್ಕೆ ದೇವರ ಸಾನಿಧ್ಯ ಪ್ರಾಪ್ತಿಗಾಗಿ, ದೇವಾಲಯದ ಅಭಿವೃದ್ಧಿಗಾಗಿ ಈ ಶಾಂತಿಯನ್ನು ಮಾಡ ಬೇಕು.
*೩೨. ಸರ್ವಾದ್ಭುತ ಶಾಂತಿ:*
ಮನೆಯಲ್ಲಿ ಅಮಂಗಲವಾದ ಘಟನೆಗಳು ನಡೆದಾಗ; ಉದಾಹರಣೆಗೆ ಮನೆಗೆ ಬೆಂಕಿ ತಗಲುವುದು, ಮನೆಗೆ ಕಾಗೆ ಪ್ರವೇಶಿಸುವುದು, ಮನೆಯಲ್ಲಿ ಜೇನುಗೂಡು ಕಟ್ಟುವುದು ಮನೆಯ ಒಂದು ಭಾಗ ಕುಸಿಯುವುದು ಇಂತಹ ಅನಿಷ್ಠಗಳಿದ್ದಲ್ಲಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೩೩. ಗ್ರಾಮೊತ್ಪಾತ ಶಾಂತಿ:*
ಗ್ರಾಮದಲ್ಲಿ ಉತ್ಪನ್ನವಾಗಿರುವ ನಾನ ಾವಿಧ ಭಾದೆ ನಿವಾರಣೆಗೆ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೩೪. ರಕ್ತ ವಲ್ಮೀಕ ಶಾಂತಿ:*
ದೇವಾಲಯದಲ್ಲಿ, ಮನೆಯಲ್ಲಿ ಅಥವಾ ಸಭಾಸ್ಥಾನದಲ್ಲಿ ಉತ್ಪತ್ತಿಯಾಗಿರುವ ಹುತ್ತವು ಅಶುಭ ಸೂಚಕ ಆಗಿರುವುದರಿಂದ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೩೫. ವಾನರ ಪ್ರವೇಶ ಶಾಂತಿ:*
ಮನೆಯೊಳಗೆ ವಾನರ ಪ್ರವೇಶವಾದಲ್ಲಿ ಬರುವ ಅಪಮೃತ್ಯು, ಮಹಾರೋಗಾದಿ ಸರ್ವ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡ ಬೇಕು.
*೩೬. ಮರ್ಕಟ ಪ್ರವೇಶ ಶಾಂತಿ:*
ಮನೆಯೊಳಗೆ ಕೃಷ್ಣಮುಖ ವಾನರ ಪ್ರವೇಶ ಆದಲ್ಲಿ ಬರುವ ಅಪಮೃತ್ಯು, ಮಹಾರೋಗಾದಿ ಸರ್ವ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡ ಬೇಕು.
*೩೭. ಮಹಿಷಿ ಪ್ರವೇಶ ಶಾಂತಿ:*
ಮನೆಯೊಳಗೆ ಎಮ್ಮೆ ಅಥವಾ ಕೋಣ ಪ್ರವೇಶಿಸಿದರೆ ಸೂಚಿತ ಅಪಮೃತ್ಯು ಹಾಗೂ ಸರ್ವ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡ ಬೇಕು.
೩೮. ದೀಪ ಪತನ ಶಾಂತಿ: ಮನೆಯಲ್ಲಿ ಪೂಜೆ ಮಾಡುತ್ತಿರುವಾಗ ಉರಿಯುತ್ತಿರುವ ದೀಪ ಆರಿ ಹೋದಲ್ಲಿ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡ ಬೇಕು.
*೩೯. ಭೀತಿಹರ ದಕ್ಷಾಕರ ದುರ್ಗಾ ಶಾಂತಿ:*
ಗ್ರಹ ಪೀಡೆಗಳಿಂದ ಪುನಃ ಪುನಃ ಆಗುತ್ತಿರುವ ತೊಂದರೆಗಳ ನಿವಾರಣೆಗೆ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೪೦. ಅನಾವೃಷ್ಟಾದಿ ಶಾಂತಿ:*
ಇದನ್ನು ಸಾಮೂಹಿಕವಾಗಿ ಉತ್ಪತ್ತಿಯಾಗಿರುವ ಮಹಾಮಾರಿ, ಪಶುರೋಗಾದಿ ನಿವಾರಣೆಗೆ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೪೧. ಕೃತ್ಯಾದ್ರೋಹ ಶಾಂತಿ:*
ವಿರೋಧಿಗಳ ಯಾವುದೇ ಕುಟುಂಬ, ಉದ್ಯಮ, ಕೋಷ್ಠಗಳ ಮೇಲೆ ಮಾಡಿದ ಕೃತ್ರಿಮ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡ ಬೇಕು.
೪೨. ದುಃಸ್ವಪ್ನ ಶಾಂತಿ: ಕೆಲವೊಂದು ಸ್ವಪ್ನಗಳು ಅಮಂಗಲತೆಯ ಮುನ್ಸೂಚನೆ ಆಗಿರುವುದರಿಂದ ಈ ದೋಷ ನಿವಾರಣೆಗಾಗಿ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೪೩. ಪರ್ಜನ್ಯ ಶಾಂತಿ:*
ದೇಶದ ಅಥವಾ ಯಾವುದೇ ಪ್ರಾಂತದಲ್ಲಿ ಸಕಾಲದಲ್ಲಿ ಮಳೆ ಆಗದಿದ್ದಲ್ಲಿ ಜೀವಿಗಳಿಗೆ ಅತಿ ಆತಂಕ ಆಗುವುದು. ಆ ಪರಿಸ್ಥಿತಿ ನಿವಾರಣೆಗೆ ಪ್ರಕೃತಿ ದೇವಿಯನ್ನು ಶಾಂತಿಗೊಳಿಸಿ ಮಳೆ ಪಡೆಯುವುದಕ್ಕೆ ಈ ಶಾಂತಿ ಹೆಸರಿದೆ.
*೪೪. ಸರ್ವ ವ್ಯಾಧಿಹರ ನಾಮತ್ರಯೀ ಶಾಂತಿ:*
ಜನ್ಮ ಜನ್ಮಾಂತರಗಳಿಂದ ಸಂಚಿತ ಪ್ರಾರಾಬ್ಧ ರೂಪ, ಪಾಪ, ನಿವೃತ್ತಿ ಮತ್ತು ವ್ಯಾಧಿ ಬಾಧೆ ನಿವಾರಣೆಗಾಗಿ ಮತ್ತು ಆಯುಃ ಆರೋಗ್ಯ ಪ್ರಾಪ್ತಿಗಾಗಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೪೫. ನಾಳವೇಷ್ಟನ ಶಾಂತಿ:*
ಮಗುವಿನ ಜನನ ಸಮಯದಲ್ಲಿ ತಾಯಿಯಿಂದ ಮಗುವಿಗೆ ಆಹಾರಾದಿಗಳನ್ನು ಕೊಡುವ ನಾಳವು ಕಂಠ, ಕೈ, ಕಾಲುಗಳಿಗೆ ಸುತ್ತಿಕೊಂಡು ಜನಿಸಿದರೆ ತಂದೆ, ತಾಯಿಗೆ ಅನಿಷ್ಟ, ಸಂಪತ್ತು ನಾಶ, ಸರ್ವ ನಾಶ ಎಂದಿರುತ್ತದೆ. ಆದ್ದರಿಂದ ದೋಷ ನಿವಾರಣೆಗೆ ಈ ಶಾಂತಿಯನ್ನು ಮಾಡ ಬೇಕು.
*೪೬. ವಿಶಾಖಾ ನಕ್ಷತ್ರ ಜನನ ಶಾಂತಿ:*
ವಿಶೇಷವಾಗಿ ಮಗುವು ವಿಶಾಖಾ ನಕ್ಷತ್ರದ ೪ನೇ ಚರಣದಲ್ಲಿ ಜನಿಸಿದರೆ ತಂದೆ, ತಾಯಿ, ಬಂಧುಗಳಿಗೆ ವಿವಾಹದ ನಂತರ ವರನ ಸಹೋದರರಿಗೂ ಅನಿಷ್ಟ ಆದ್ದರಿಂದ ಶಾಂತಿಯ ಅಗತ್ಯವಿದೆ. ೧, ೨, ೩ ಚರಣಗಳಿಗೆ ಅಗತ್ಯವಿಲ್ಲ.
*೪೭. ಯೋನಿ ವೈಕೃತಿ ಶಾಂತಿ:*
ಒಂದು ಹೆಣ್ಣು ಮಗಳು ಮೊದಲನೇ ಬಾರಿಗೆ ರಜೋ ದರ್ಶನವಾಗಿ (ಮಾಸಿಕ ರಜೆ) ನಂತರ ೬ ತಿಂಗಳವರೆಗೆ ರಜೋ ದರ್ಶನ ಆಗದಿದ್ದಲ್ಲಿ ಮುಂದೆ ಮದುವೆಯಾದ ಮೇಲೆ ಬರುವಂತಹ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೪೮. ಪ್ರಪೌತ್ರ ದರ್ಶನ ಶಾಂತಿ:*
ಒಂದು ವೇಳೆ ನಮ್ಮ ಮಗನಿಗೆ ಮಗನು ಜನಿಸಿ,ಅವನಿಗೆ ಮಗನು ಜನಿಸಿದಾಗ ನಾವು ಪ್ರಪೌತ್ರವನ್ನು ಪಡೆದಂತೆ.ಈ ಪ್ರಪೌತ್ರ ದರ್ಶನವು ಮುತ್ತಜ್ಜನಿಗೆ ಒಳ್ಳೆಯದಲ್ಲ. ಆದ್ದರಿಂದ ಈ ಶಾಂತಿಯನ್ನು ಮಾಡಿಸಿ ಕೊಳ್ಳ ಬೇಕು.
*೪೯. ಕುಂಭ ವಿವಾಹ ಶಾಂತಿ:*
ಒಂದು ವೇಳೆ ಯುವತಿಯ ಕುಂಡಲಿಯಲ್ಲಿ ವೈಧವ್ಯ ಯೋಗವಿದ್ದಾಗ ಅಥವಾ ಎರಡು ಇಲ್ಲವೇ ಮೂರು ವಿವಾಹ ಯೋಗವಿದ್ದಲ್ಲಿ ದೋಷ ನಿವಾರಣೆಗೆ ಈ ಶಾಂತಿಯನ್ನು ಮಾಡಿಸುವುದು ಉತ್ತಮ.
*೫೦. ಕದಳಿ ವಿವಾಹ ಶಾಂತಿ:*
ಈ ವಿಧಿಯನ್ನು ಸಹ ಮೇಲೆ ಕಾಣಿಸಿದ ದೋಷ ನಿವಾರಣೆಗೆ ಮಾಡಿಸಲಾಗುತ್ತದೆ.
*೫೧. ಅರ್ಕ ವಿವಾಹ ಶಾಂತಿ:*
ಒಂದು ವೇಳೆ ಯುವಕನ ಜಾತಕದಲ್ಲಿ ಮೊದಲನೇಯ ವಿವಾಹವಾಗಿ ಆತನ ಪತ್ನಿಯು ಪತಿಯನ್ನು ತ್ಯಜಿಸಿದಾಗ ಇಲ್ಲವೇ ಮರಣ ಹೊಂದಿದಾಗ ಅದೇ ರೀತಿ ಎರಡನೇಯ ವಿವಾಹವು ಇದೇ ರೀತಿಯಾದಲ್ಲಿ ಮೂರನೇಯ ವಿವಾಹವಾಗುವ ಮುನ್ನ ಈ ಶಾಂತಿಯನ್ನು ಮಾಡಿಸಿ ಕೊಂಡು ವಿವಾಹವಾಗ ಬೇಕು.
*ಹೀಗೆ ಅನೇಕ ವಿಧವಾದ ಶಾಂತಿ, ಹೋಮ,ಯಜ್ಞಾದಿಗಳು ಇರುತ್ತಿದ್ದು ಅವುಗಳನ್ನು ಜ್ಯೋತಿಷಿಗಳ ಅಥವಾ ಪುರೋಹಿತರ ಸಲಹೆ ಅಗತ್ಯ.*
*ದೇವಸ್ಥಾನಕ್ಕೆ ಹೋಗವಾಗ ಬಾಳೆಹಣ್ಣು ಮತ್ತೆ ತೆಂಗಿನಕಾಯಿ ಯಾಕೆ ತಗೊಂಡ್ ಹೋಗ್ತಿವಿ ಗೊತ್ತಾ ?*
ದೇವರಿಗೆ ಬಾಳೆ ಹಣ್ಣು ಮತ್ತು ತೆಂಗಿನಕಾಯಿಯನ್ನು ನಾವು ದೇವಸ್ಥಾನಕ್ಕೆ ಹೋಗುವಾಗ ಏಕೆ ತೆಗೆದುಕೊಂಡು ಹೋಗುತ್ತೇವೆ ಗೊತ್ತೇ ?
ಬೇರೆ ಯಾವ ಹಣ್ಣನ್ನು ಯಾಕೆ ನಾವು ತೆಗೆದುಕೊಂಡು ಹೋಗುವುದಿಲ್ಲ ಎಂದು ನಿಮಗೆ ಗೊತ್ತೇ.
ಬನ್ನಿ ತಿಳಿದುಕೊಳ್ಳೋಣ.
ಬೇರೆ ಯಾವ ಹಣ್ಣನ್ನು ಯಾಕೆ ನಾವು ತೆಗೆದುಕೊಂಡು ಹೋಗುವುದಿಲ್ಲ ಎಂದು ನಿಮಗೆ ಗೊತ್ತೇ.
ಬನ್ನಿ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ನಾವು ಯಾವುದೇ ಹಣ್ಣು ಅಥವಾ ಕಾಯಿಯನ್ನು ಅದರ ಪ್ರತ್ಯೇಕ ಹೆಸರನ್ನು ಬಳಸಿಯೇ ಹೇಳುತ್ತೇವೆ.
ಆದರೆ ಬರೀ ಕಾಯಿ ಎಂದರೆ ಅದು ತೆಂಗಿನಕಾಯಿ, ಹಣ್ಣು ಎಂದರೆ ಬಾಳೆಹಣ್ಣನ್ನೇ ಸೂಚಿಸುತ್ತದೆ. ಮನೆಯ ಹಿರಿಯರು ದೇವಸ್ಥಾನಕ್ಕೆ ಹೋಗಿ ಹಣ್ಣು-ಕಾಯಿ ಮಾಡಿಸಿಕೊಂಡು ಬಾ ಎನ್ನುತ್ತಾರೆ.
ಪೂಜೆಗಳಲ್ಲಿ ಹೂವು ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೂಡ ಭಿನ್ನತೆಯಿರುವಾಗ ಎಲ್ಲಾ ದೇವರಿಗೂ ಬಾಳೆ ಹಣ್ಣು ನಿವೇದಿಸುತ್ತಾರೆ.
ಆದರೆ ಬರೀ ಕಾಯಿ ಎಂದರೆ ಅದು ತೆಂಗಿನಕಾಯಿ, ಹಣ್ಣು ಎಂದರೆ ಬಾಳೆಹಣ್ಣನ್ನೇ ಸೂಚಿಸುತ್ತದೆ. ಮನೆಯ ಹಿರಿಯರು ದೇವಸ್ಥಾನಕ್ಕೆ ಹೋಗಿ ಹಣ್ಣು-ಕಾಯಿ ಮಾಡಿಸಿಕೊಂಡು ಬಾ ಎನ್ನುತ್ತಾರೆ.
ಪೂಜೆಗಳಲ್ಲಿ ಹೂವು ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೂಡ ಭಿನ್ನತೆಯಿರುವಾಗ ಎಲ್ಲಾ ದೇವರಿಗೂ ಬಾಳೆ ಹಣ್ಣು ನಿವೇದಿಸುತ್ತಾರೆ.
ಹೆಚ್ಚಾಗಿ ನಾವು ಒಂದು ಹಣ್ಣನ್ನೂ ತಿಂದು ಬೀಜವನ್ನು ಎಸೆದಾಗ ಅಥವಾ ಪಕ್ಷಿ, ಮೃಗಗಳ ಮೂಲಕ ಎಲ್ಲಿಯಾದರೂ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತವೆ.
ಆದರೆ ಬಾಳೆಹಣ್ಣನ್ನು ಸುಲಿದು ಸಿಪ್ಪೆಯಾಗಿ ಅಥವಾ ಇಡೀ ಬಾಳೆಹಣ್ಣನ್ನೇ ಹಾಗೆ ಎಸೆದರು ಅದು ಮತ್ತೆ ಬೆಳೆಯುವುದಿಲ್ಲ.
ತೆಂಗಿನಕಾಯಿಯೂ ಅಷ್ಟೆ ಒಮ್ಮೆ ಒಡೆದರೆ ಅದರಿಂದ ಗಿಡ ಹುಟ್ಟುವುದಿಲ್ಲ .
ಆದರೆ ಬಾಳೆಹಣ್ಣನ್ನು ಸುಲಿದು ಸಿಪ್ಪೆಯಾಗಿ ಅಥವಾ ಇಡೀ ಬಾಳೆಹಣ್ಣನ್ನೇ ಹಾಗೆ ಎಸೆದರು ಅದು ಮತ್ತೆ ಬೆಳೆಯುವುದಿಲ್ಲ.
ತೆಂಗಿನಕಾಯಿಯೂ ಅಷ್ಟೆ ಒಮ್ಮೆ ಒಡೆದರೆ ಅದರಿಂದ ಗಿಡ ಹುಟ್ಟುವುದಿಲ್ಲ .
ಹಾಗೆಯೇ ಈ ಜನ್ಮವನ್ನು ಮುಗಿಸಿಬಿಟ್ಟರೆ ಮತ್ತೆ ಜನ್ಮವಿಲ್ಲದ ಮುಕ್ತಿಯನ್ನು ಭಗವಂತನಲ್ಲಿ ಬೇಡುವುದಕ್ಕಾಗಿಯೇ ಇವೆರಡನ್ನೂ ನೈವೇದ್ಯ ಮಾಡುವ ಪದ್ದತಿಯನ್ನು ನಮ್ಮ ಹಿರಿಯರು ಮಾಡಿರುವರು.ನಮ್ಮ ಹಿರಿಯರು ಏನೇ ಮಾಡಲಿ ಅದಕ್ಕೊಂದು ಅರ್ಥವಿರುತ್ತದೆ.
ಅಷ್ಟೇ ಅಲ್ಲ ಬಾಳೆ ಮರದ ಕಂದೇ ಇನ್ನೊಂದು ಮರವಾಗುತ್ತೆ;ಉಪಯೋಗಿಸದ ತೆಂಗು ಇಡೀ ಕಾಯಿಯಿಂದಲೇ ಬೆಳೆಯುತ್ತದೆ. ಅರ್ಥಾತ್ ಎಂಜಲಿನಿಂದ ಬೆಳೆಯುವುದಿಲ್ಲ.
ಅಷ್ಟೇ ಅಲ್ಲ ಬಾಳೆ ಮರದ ಕಂದೇ ಇನ್ನೊಂದು ಮರವಾಗುತ್ತೆ;ಉಪಯೋಗಿಸದ ತೆಂಗು ಇಡೀ ಕಾಯಿಯಿಂದಲೇ ಬೆಳೆಯುತ್ತದೆ. ಅರ್ಥಾತ್ ಎಂಜಲಿನಿಂದ ಬೆಳೆಯುವುದಿಲ್ಲ.
*ಪರಿಶುದ್ಧವಾದ ಪದಾರ್ಥಗಳೇ ದೇವರಿಗೆ ಅರ್ಪಿಸಲು ಯೋಗ್ಯ*
*ಮೈ ಒರೆಸೋ ಸ್ನಾನದ ಟವೆಲ್ ಖತರ್ನಾಕ್ ಸೈಲೆಂಟ್ ಕಿಲ್ಲರ್!*
ದೇಹಕ್ಕೆ ಸ್ನಾನ ಮಾಡುವಾಗ ನಾವು ಅತಿಯಾದ ಕಾಳಜಿ ವಹಿಸುತ್ತೇವೆ. ಸ್ನಾನ ಮಾಡುವುದರಿಂದ ದೇಹವು ಸ್ವಚ್ಛವಾಗುವುದು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಅದೇ ಸ್ನಾನಕ್ಕಾಗಿ ಬಳಸುವ ಟವೆಲ್ನ್ನು ನೀವು ಮರುಬಳಕೆ ಮಾಡಿಕೊಳ್ಳುವುದು ಎಷ್ಟು ಸರಿ ಎಂದು ತಿಳಿದುಕೊಳ್ಳಬೇಕು. ಏಕೆಂದರೆ ಟವೆಲ್ನಲ್ಲಿ ಹೆಚ್ಚಾಗಿ ಬ್ಯಾಕ್ಟೀರಿಯಾಗಳು ಅಂಟಿಕೊಂಡಿರುವುದು. ಟವೆಲ್ ಯಾವಾಗಲೂ ಒದ್ದೆಯಾಗಿರುವುದರಿಂದ ಬ್ಯಾಕ್ಟೀರಿಯಾಗಳು ಇಲ್ಲಿ ಸುಲಭವಾಗಿ ಬೆಳೆಯುತ್ತದೆ. ಬ್ಯಾಕ್ಟೀರಿಯಾ ಮನೆಯಲ್ಲಿರುವ ಯಾರಿಗಾದರೂ ಸೋಂಕು ಹರಡಿದರೆ ಅದು ಉಳಿದವರಿಗೂ ಹಬ್ಬಬಹುದು. ಇದರ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಿ... *ಅಧ್ಯಯನಗಳು ಏನು ಹೇಳುತ್ತವೆ?* ಸ್ನಾನ ಮಾಡುವ ಟವೆಲ್ಗಳಲ್ಲಿ ಬಳಸುವಂತಹ ಶೇ.90ರಷ್ಟು ಟವೆಲ್ಗಳಲ್ಲಿ ತುಂಬಾ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರುತ್ತವೆಯಂತೆ. ಕೋಲಿಫಾರ್ಮ್ ಸಾಮಾನ್ಯವಾಗಿ ಅಮೇಧ್ಯವು ಕಂಡುಬರುವ ಬ್ಯಾಕ್ಟೀರಿಯಾ ಆಗಿದೆ. ಈ ಬ್ಯಾಕ್ಟೀರಿಯಾವು ಮನೆಯ ಸ್ನಾನಗೃಹದ ಟವೆಲ್ಗಳ ಕಂಡುಬರುವುದು. *ಪ್ರಯೋಗಾಲಯದ ಪರೀಕ್ಷೆಗಳು ಏನು ಹೇಳಿವೆ?* ಸ್ನಾನಗೃಹದ ಕೆಲವು ಟವೆಲ್ಗ ಳನ್ನು ಹೆಚ್ಚಾಗಿ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ಇದರಲ್ಲಿ ಶೇ.14ರಷ್ಟು ಇಕೋಲಿ ಬ್ಯಾಕ್ಟೀರಿಯಾ ಕಂಡುಬಂದಿದೆ. ಇಕೋಲಿ ಬ್ಯಾಕ್ಟೀರಿಯಾವು ಸೋಂಕು ಉಂಟು ಮಾಡುವುದು. ಉಂಟು. *ಇದರಿಂದ ಹಾನಿಯಿದೆಯಾ?* ಸ್ನಾನಗೃಹದಲ್ಲಿರುವ ಟವೆಲ್ ಗಳಲ್ಲಿ ಅಡಗಿರುವಂತಹ ಬ್ಯಾಕ್ಟೀರಿಯಾದಿಂದ ಹೆಚ್ಚಿನ ಸಮಯ ನಾವು ಪಾರಾಗಬಹುದು. ಆದರೆ ರೋಗನಿರೋಧಕ ಶಕ್ತಿ ಕಡಿಮೆಯಿದ್ದರೆ ಇಂತಹ ಬ್ಯಾಕ್ಟೀರಿಯಾಗಳು ಕೂಡ ಸೋಂಕು ಉಂಟು ಮಾಡಬಹುದು. *ಟವೆಲ್ ಹಂಚಿಕೊಳ್ಳಬಹುದೇ?* ಖಂಡಿತವಾಗಿಯೂ ಇಲ್ಲ, ಮೊದಲು ಟವೆಲ್ ಉಪಯೋಗಿಸಿದವರ ದೇಹದಲ್ಲಿ ಗಾಯವಿದ್ದರೆ ಅದರಲ್ಲಿನ ಬ್ಯಾಕ್ಟೀರಿಯಾ ನಿಮ್ಮ ದೇಹ ಪ್ರವೇಶಿಸಬಹುದು. *ಸುರಕ್ಷಿತವಾಗಿರುವುದು ಹೇಗೆ?* ನಿಯಮಿತವಾಗಿ ಟವೆಲ್ ತೊಳೆಯಿರಿ. ಟವೆಲ್ನಲ್ಲಿ ಬ್ಯಾಕ್ಟೀರಿಯಾ ಕಡಿಮೆ ಮಾಡಲು ಇದು ಮಾತ್ರ ಸರಿಯಾದ ವಿಧಾನ. ಟವೆಲ್ ಒದ್ದೆಯಾಗಿದ್ದರೆ ಅದನ್ನು ಬಿಸಿಲಿನಲ್ಲಿ ಒಣಗಲು ಹಾಕಿ. *ಎಷ್ಟು ಸಲ ಒಗೆಯಬೇಕು?* ಎರಡು ದಿನಕ್ಕೊಮ್ಮೆ ಸ್ನಾನದ ಟವೆಲ್ ಅನ್ನು ತೊಳೆಯಿರಿ. ಪ್ರತೀ ಸಲ ಬಳಸಿದ ಬಳಿಕ ತೊಳೆದರೆ ತುಂಬಾ ಒಳ್ಳೆಯದು. ನೀವು ಬಳಸುವಾಗ ಟವೆಲ್ ಸಂಪೂರ್ಣವಾಗಿ ಒಣಗಿದ್ದರೆ ಆಗ ಬ್ಯಾಕ್ಟೀರಿಯಾ ಸೋಂಕು ಉಂಟು ಮಾಡುವ ಸಾಧ್ಯತೆ ತುಂಬಾ ಕಡಿಮೆಯಿರುತ್ತದೆ. *ಟವೆಲ್ ಯಾವಾಗ ಬಳಸಬಾರದು?* ಟವೆಲ್ ತುಂಬಾ ವಾಸನೆ ಉಂಟು ಮಾಡುತ್ತಾ ಇದ್ದರೆ ಅದನ್ನು ಬಳಸಬೇಡಿ. ವಾಸನೆಯು ಬ್ಯಾಕ್ಟೀರಿಯಾ ಬೆಳವಣಿಗೆಯ ಸುಳಿವು. ಸಾರ್ವಜನಿಕ ಸ್ನಾನಗೃಹ ಅಥವಾ ಹೋಟೆಲ್ ಗಳಲ್ಲಿ ಇಟ್ಟಿರುವಂತಹ ಟವೆಲ್ ಬಳಸದೇ ಇದ್ದರೆ ತುಂಬಾ ಒಳ್ಳೆಯದು.
ಧನ, ಮಧ್ಯ ಮತ್ತು ರುಣಾತ್ಮಕ ಆಹಾರ
ಧನಾತ್ಮಕ ಆಹಾರ
ಧನಾತ್ಮಕ, ಸತ್ವಯುತ, ಅಮೃತಾನ್ನ, ಸಾತ್ವಿಕ(ಪ್ರೈಮರಿ, ಪಾಸಿಟೀವ್)
೧. ಹಣ್ಣುಗಳು
೧. (ಅ) ಸಿಹಿ/ಖಂಡಭರಿತ : ಬಾಳೆ, ಪಪಾಯಿ, ಮಾವು, ಸೀಬೆ, ಹಲಸು, ಕರಬೂಜ, ಸಪೋಟ(ಚಿಕ್ಕು), ಸೇಬು, ರಾಮಫಲ, ಸೀತಾಫಲ, ಕಲ್ಲಂಗಡಿ, ಬೆಟ್ಟನೆಲ್ಲೀಕಾಯಿ ಇತ್ಯಾದಿ.
(ಆ) ಹುಳಿಹಣ್ಣುಗಳು : ಕಿತ್ತಲೆ, ದ್ರಾಕ್ಷಿ, ಮೂಸಂಬಿ, ನೇರಳೆ, ದಾಳಿಂಬೆ, ಚಕ್ಕೋತ, ನಿಂಬೆ, ಟೊಮೇಟೋ ಇತ್ಯಾದ.
(ಇ) ಒಣಹಣ್ಣುಗಳು : ಒಣದ್ರಾಕ್ಷಿ, ಖರ್ಜೂರ, ಅಂಜೂರ ಇತ್ಯಾದಿ
ಧನಾತ್ಮಕ ಆಹಾರ
ಧನಾತ್ಮಕ, ಸತ್ವಯುತ, ಅಮೃತಾನ್ನ, ಸಾತ್ವಿಕ(ಪ್ರೈಮರಿ, ಪಾಸಿಟೀವ್)
೧. ಹಣ್ಣುಗಳು
೧. (ಅ) ಸಿಹಿ/ಖಂಡಭರಿತ : ಬಾಳೆ, ಪಪಾಯಿ, ಮಾವು, ಸೀಬೆ, ಹಲಸು, ಕರಬೂಜ, ಸಪೋಟ(ಚಿಕ್ಕು), ಸೇಬು, ರಾಮಫಲ, ಸೀತಾಫಲ, ಕಲ್ಲಂಗಡಿ, ಬೆಟ್ಟನೆಲ್ಲೀಕಾಯಿ ಇತ್ಯಾದಿ.
(ಆ) ಹುಳಿಹಣ್ಣುಗಳು : ಕಿತ್ತಲೆ, ದ್ರಾಕ್ಷಿ, ಮೂಸಂಬಿ, ನೇರಳೆ, ದಾಳಿಂಬೆ, ಚಕ್ಕೋತ, ನಿಂಬೆ, ಟೊಮೇಟೋ ಇತ್ಯಾದ.
(ಇ) ಒಣಹಣ್ಣುಗಳು : ಒಣದ್ರಾಕ್ಷಿ, ಖರ್ಜೂರ, ಅಂಜೂರ ಇತ್ಯಾದಿ
೨. ತರಕಾರಿಗಳು
(ಅ) ಸೊಪ್ಪುಗಳು : ಬಸಳೆ, ಮೆಂಥ್ಯ, ಕೊತ್ತಂಬರಿ, ಪುದೀನ, ಲೆಟ್ಯೂಸ್, ಪಾಲಕ್, ಸಬ್ಬಸಿಗೆ, ಕರಿಬೇವು, ದೊಡ್ಡಪತ್ರೆ, ಒಂದೆಲಗ, ಗರಗ ಇತ್ಯಾದಿ.
(ಆ) ಹಸಿರು ತರಕಾರಿಗಳು : ಪಡ್ವಲ, ಹೀರೇಕಾಯಿ, ಎಲೆಕೋಸು, ಸೌತೇಕಾಯಿ, ಟೊಮೇಟೋ, ಬುದುಗುಂಬಳ, ಸಿಹಿಗುಂಬಳ ಇತ್ಯಾದಿ.
(ಇ) ಗೆಡ್ಡೆಗೆಣಸುಗಳು : ಕ್ಯಾರಟ್, ಗೆಡ್ಡೆಕೋಸು, ಬೀಟ್ ರೂಟ್, ಮರಗೆಣಸು, ಸಿಹಿ ಗೆಣಸು, ಮೂಲಂಗಿ.
(ಅ) ಸೊಪ್ಪುಗಳು : ಬಸಳೆ, ಮೆಂಥ್ಯ, ಕೊತ್ತಂಬರಿ, ಪುದೀನ, ಲೆಟ್ಯೂಸ್, ಪಾಲಕ್, ಸಬ್ಬಸಿಗೆ, ಕರಿಬೇವು, ದೊಡ್ಡಪತ್ರೆ, ಒಂದೆಲಗ, ಗರಗ ಇತ್ಯಾದಿ.
(ಆ) ಹಸಿರು ತರಕಾರಿಗಳು : ಪಡ್ವಲ, ಹೀರೇಕಾಯಿ, ಎಲೆಕೋಸು, ಸೌತೇಕಾಯಿ, ಟೊಮೇಟೋ, ಬುದುಗುಂಬಳ, ಸಿಹಿಗುಂಬಳ ಇತ್ಯಾದಿ.
(ಇ) ಗೆಡ್ಡೆಗೆಣಸುಗಳು : ಕ್ಯಾರಟ್, ಗೆಡ್ಡೆಕೋಸು, ಬೀಟ್ ರೂಟ್, ಮರಗೆಣಸು, ಸಿಹಿ ಗೆಣಸು, ಮೂಲಂಗಿ.
೩. ಕಾಯಿಗಳು(ನಟ್ಸ್) : ತೆಂಗಿನಕಾಯಿ, ಕಡ್ಲೇಕಾಯಿಬೀಜ, ಬಾದಾಮಿ, ಗೋಡಂಬಿ, ಪಿಸ್ತ, ವಾಲ್ ನಟ್ ಇತ್ಯಾದಿ.
೪. ರಸಗಳು : ಎಳೆನೀರು, ಹಣ್ಣಿನ ರಸಗಳು, ತರಕಾರಿ ರಸಗಳು, ದೊಡ್ಡಪತ್ರೆ ರಸ, ಒಂದೆಲಗದ ರಸ, ಗರಗದ ರಸ, ತುಳಸೀ ರಸ, ಬಿಲ್ಪತ್ರೇ ರಸ, ಗರಿಕೆಹುಲ್ಲಿನ ರಸ, ಗೋಧೀಹುಲ್ಲಿನ ರಸ, ಕಬ್ಬಿನ ರಸ ಇತ್ಯಾದಿ.
೫) ಮೊಳಕೆ ಕಾಳುಗಳು : ಗೋಧಿ, ಹೆಸರುಕಾಳು, ಕಡಲೆಕಾಳು, ಬಟಾಣಿ, ಮೆಂಥ್ಯ, ಎಳ್ಳು, ರಾಗಿ, ಕಡ್ಲೇಕಾಯಿಬೀಜ, ಆಲ್ಫಾಲ್ಪಾ ಇತ್ಯಾದಿ.
೪. ರಸಗಳು : ಎಳೆನೀರು, ಹಣ್ಣಿನ ರಸಗಳು, ತರಕಾರಿ ರಸಗಳು, ದೊಡ್ಡಪತ್ರೆ ರಸ, ಒಂದೆಲಗದ ರಸ, ಗರಗದ ರಸ, ತುಳಸೀ ರಸ, ಬಿಲ್ಪತ್ರೇ ರಸ, ಗರಿಕೆಹುಲ್ಲಿನ ರಸ, ಗೋಧೀಹುಲ್ಲಿನ ರಸ, ಕಬ್ಬಿನ ರಸ ಇತ್ಯಾದಿ.
೫) ಮೊಳಕೆ ಕಾಳುಗಳು : ಗೋಧಿ, ಹೆಸರುಕಾಳು, ಕಡಲೆಕಾಳು, ಬಟಾಣಿ, ಮೆಂಥ್ಯ, ಎಳ್ಳು, ರಾಗಿ, ಕಡ್ಲೇಕಾಯಿಬೀಜ, ಆಲ್ಫಾಲ್ಪಾ ಇತ್ಯಾದಿ.
ಮಧ್ಯಸ್ಥ ಆಹಾರ
ಮಧ್ಯಸ್ಠ,ನಿಗದಿತ ಸತ್ವ, ಮಧ್ಯಮಾನ್ನ, ರಾಜಸ(ಸೆಕೆಂಡರಿ,ನೂಟ್ರಲ್)
೧. ಸೊಪ್ಪುಗಳು : ದಂಟು, ಚಕ್ಕೋತ, ಕಿರುಕುಸಾಲೆ, ಬೆರಕೆ ಸೊಪ್ಪು, ನುಗ್ಗೆ, ಅಗಸೆ, ಹೊನಗೊನೆ, ಗೋಣಿ, ವಿಷ್ಣುಕ್ರಾಂತಿ ಇತ್ಯಾದಿ.
೨. ಹಸಿರು ತರಕಾರಿಗಳು : ಹುರುಳೀಕಾಯಿ, ಜವಳಿಕಾಯಿ, ಕೆಸವಿನ ದಂಟು, ಬಾಳೇಕಾಯಿ, ಹಲಸಿನಕಾಯಿ, ಬದನೆಕಾಯಿ, ಪರಂಗಿಕಾಯಿ, ಸೀಮೇಬದನೆ, ಹಾಗಲಕಾಯಿ, ಸೋರೇಕಾಯಿ, ಸಿಹಿಗುಂಬಳ ಇತ್ಯಾದಿ.
೩. ಈರುಳ್ಳಿ, ಬೆಳ್ಳುಳ್ಳಿ, ಆಲೂಗೆಡ್ಡೆ ಇತ್ಯಾದಿ.
೪. ಕೊಟ್ಟಣದ ಅಕ್ಕಿ, ಹೊಟ್ಟು ತೆಗೆಯದ ಹಿಟ್ಟು, ಹೊಟ್ಟು ತೆಗೆಯದ ಬೇಳೆಗಳು, ನೆನೆಸಿದ ಕಾಳುಗಳು.
೫. ಬೆಲ್ಲ, ವೀಳೇದೆಲೆ.
೬. ಹಾಲು, ಮಸರು, ಬೆಣ್ಣೆ, ತುಪ್ಪ, ಜೇನುತುಪ್ಪ.
೭. ಹಬೆಯಲ್ಲಿ ಬೇಯಿಸಿದ ಆಹಾರ, ಕಡಿಮೆ ಉಪ್ಪು, ಹುಳಿ, ಕಾರದಿಂದ ಕೂಡಿದ ಆಹಾರ, ಹುದುಗಿಸಲ್ಪಟ್ಟ ಆಹಾರ(ಇಡ್ಲಿ, ದೋಸೆ), ಕಂದು ಬ್ರೆಡ್(ಬ್ರೌನ್ ಬ್ರೆಡ್) ಇತ್ಯಾದಿ.
೮. ಕೆಂಡದಲ್ಲಾಗಲಿ, ಓವನ್ನಿನಲ್ಲಾಗಲಿ ಸುಟ್ಟ ಆಲೂಗೆಡ್ಡೆ, ಕಡ್ಲೇಕಾಯಿ, ಕ್ಯಾರಟ್, ಇತ್ಯಾದಿಗಳು.
೯. ಗಾಣದಿಂದ ತೆಗೆದ ಎಣ್ಣೆ.
೧. ಸೊಪ್ಪುಗಳು : ದಂಟು, ಚಕ್ಕೋತ, ಕಿರುಕುಸಾಲೆ, ಬೆರಕೆ ಸೊಪ್ಪು, ನುಗ್ಗೆ, ಅಗಸೆ, ಹೊನಗೊನೆ, ಗೋಣಿ, ವಿಷ್ಣುಕ್ರಾಂತಿ ಇತ್ಯಾದಿ.
೨. ಹಸಿರು ತರಕಾರಿಗಳು : ಹುರುಳೀಕಾಯಿ, ಜವಳಿಕಾಯಿ, ಕೆಸವಿನ ದಂಟು, ಬಾಳೇಕಾಯಿ, ಹಲಸಿನಕಾಯಿ, ಬದನೆಕಾಯಿ, ಪರಂಗಿಕಾಯಿ, ಸೀಮೇಬದನೆ, ಹಾಗಲಕಾಯಿ, ಸೋರೇಕಾಯಿ, ಸಿಹಿಗುಂಬಳ ಇತ್ಯಾದಿ.
೩. ಈರುಳ್ಳಿ, ಬೆಳ್ಳುಳ್ಳಿ, ಆಲೂಗೆಡ್ಡೆ ಇತ್ಯಾದಿ.
೪. ಕೊಟ್ಟಣದ ಅಕ್ಕಿ, ಹೊಟ್ಟು ತೆಗೆಯದ ಹಿಟ್ಟು, ಹೊಟ್ಟು ತೆಗೆಯದ ಬೇಳೆಗಳು, ನೆನೆಸಿದ ಕಾಳುಗಳು.
೫. ಬೆಲ್ಲ, ವೀಳೇದೆಲೆ.
೬. ಹಾಲು, ಮಸರು, ಬೆಣ್ಣೆ, ತುಪ್ಪ, ಜೇನುತುಪ್ಪ.
೭. ಹಬೆಯಲ್ಲಿ ಬೇಯಿಸಿದ ಆಹಾರ, ಕಡಿಮೆ ಉಪ್ಪು, ಹುಳಿ, ಕಾರದಿಂದ ಕೂಡಿದ ಆಹಾರ, ಹುದುಗಿಸಲ್ಪಟ್ಟ ಆಹಾರ(ಇಡ್ಲಿ, ದೋಸೆ), ಕಂದು ಬ್ರೆಡ್(ಬ್ರೌನ್ ಬ್ರೆಡ್) ಇತ್ಯಾದಿ.
೮. ಕೆಂಡದಲ್ಲಾಗಲಿ, ಓವನ್ನಿನಲ್ಲಾಗಲಿ ಸುಟ್ಟ ಆಲೂಗೆಡ್ಡೆ, ಕಡ್ಲೇಕಾಯಿ, ಕ್ಯಾರಟ್, ಇತ್ಯಾದಿಗಳು.
೯. ಗಾಣದಿಂದ ತೆಗೆದ ಎಣ್ಣೆ.
ಋಣಾತ್ಮಕ ಆಹಾರ
ಋಣಾತ್ಮಕ, ನಿಸ್ಸತ್ವ, ಮೃತಾನ್ನ, ತಾಮಸ(ನೆಗೆಟೀವ್)
೧. ಕಾಫಿ, ಟೀ, ಸಾರಾಯಿ, ನಿಕೋಟಿನ್ ಇತ್ಯಾದಿ
೨. ಮಾಂಸ, ಮೊಟ್ಟೆ ಇತ್ಯಾದಿ.
೩. ಪಾಲೀಶ್ ಅಕ್ಕಿ, ಮೈದಾ, ಪಾಲೀಶ್ ಮಾಡಿದ ಬೇಳೆ.
೪. ಬಿಳಿಯ ಬ್ರೆಡ್, ಬೇಕರಿಯ ಇತರ ತಿಂಡಿಗಳು.
೫. ಸಕ್ಕರೆ, ಮೈದಾ, ಅದರಿಂದ ತಯಾರಿಸಲ್ಪಟ್ಟ ಆಹಾರ ಪದಾರ್ಥಗಳು.
೬. ಅತಿ ಉಪ್ಪು, ಹುಳಿ, ಖಾರಗಳಿಂದ ಪದಾರ್ಥಗಳು.
೭. ಹುರಿದ, ಕರಿದ ತಿಂಡಿಗಳು.
೮. ಐಸ್ ಕ್ರೀಮ್, ಚಾಕೋಲೇಟ್, ಬಿಸ್ಕತ್ ಇತ್ಯಾದಿಗಳು.
೯. ಪಾಶ್ಚರೈಸ್ ಮಾಡಿದ ಹಾಲು, ಕೆನೆ, ಕೆನೆಯಿಂದ ತಯಾರಿಸಿದ ಆಹಾರಗಳು.
೧೦. ರೀಫೈನ್ ಮಾಡಿದ ಎಣ್ಣೆ, ಡಾಲ್ಡ.
೧೧. ರೆಫ್ರಿಜಿರೇಟರ್ನಲ್ಲಿಟ್ಟ ಆಹಾರ.
೧೨. ಹಿಂದಿನ ದಿನ ಮಾಡಿ ಕುದಿಸಿಟ್ಟ ಆಹಾರ.
೧೩. ಡಬ್ಬದ ಆಹಾರಗಳು, ಫಾಸ್ಟ್ ಫ಼ುಡ್, ಇತ್ಯಾದಿಗಳು.
೧. ಕಾಫಿ, ಟೀ, ಸಾರಾಯಿ, ನಿಕೋಟಿನ್ ಇತ್ಯಾದಿ
೨. ಮಾಂಸ, ಮೊಟ್ಟೆ ಇತ್ಯಾದಿ.
೩. ಪಾಲೀಶ್ ಅಕ್ಕಿ, ಮೈದಾ, ಪಾಲೀಶ್ ಮಾಡಿದ ಬೇಳೆ.
೪. ಬಿಳಿಯ ಬ್ರೆಡ್, ಬೇಕರಿಯ ಇತರ ತಿಂಡಿಗಳು.
೫. ಸಕ್ಕರೆ, ಮೈದಾ, ಅದರಿಂದ ತಯಾರಿಸಲ್ಪಟ್ಟ ಆಹಾರ ಪದಾರ್ಥಗಳು.
೬. ಅತಿ ಉಪ್ಪು, ಹುಳಿ, ಖಾರಗಳಿಂದ ಪದಾರ್ಥಗಳು.
೭. ಹುರಿದ, ಕರಿದ ತಿಂಡಿಗಳು.
೮. ಐಸ್ ಕ್ರೀಮ್, ಚಾಕೋಲೇಟ್, ಬಿಸ್ಕತ್ ಇತ್ಯಾದಿಗಳು.
೯. ಪಾಶ್ಚರೈಸ್ ಮಾಡಿದ ಹಾಲು, ಕೆನೆ, ಕೆನೆಯಿಂದ ತಯಾರಿಸಿದ ಆಹಾರಗಳು.
೧೦. ರೀಫೈನ್ ಮಾಡಿದ ಎಣ್ಣೆ, ಡಾಲ್ಡ.
೧೧. ರೆಫ್ರಿಜಿರೇಟರ್ನಲ್ಲಿಟ್ಟ ಆಹಾರ.
೧೨. ಹಿಂದಿನ ದಿನ ಮಾಡಿ ಕುದಿಸಿಟ್ಟ ಆಹಾರ.
೧೩. ಡಬ್ಬದ ಆಹಾರಗಳು, ಫಾಸ್ಟ್ ಫ಼ುಡ್, ಇತ್ಯಾದಿಗಳು.
ರೋಗ್ಯ ಆರೋಗ್ಯ ಆರೋಗ್ಯ ಹೌದು ಈಗ ಆರೋಗ್ಯ ಕಾಪಾಡಿಕೊಳ್ಳಿ ಎಂದು ಬಾಯಿ ಬಾಯಿ ಬಡಿದುಕೊಳ್ಳುವ ಸ್ಥಿತಿ ಬಂದಿದೆ.. ಪರಿಸರ ಹಾಳಾಗುತ್ತಿರುವ ಸ್ಪೀಡ್ ನೋಡಿದರೆ ನಾವು ಅದ್ಯಾವಾಗ ಸಾಯುತ್ತೀವೋ ನಮಗೆ ಗೊತ್ತಿಲ್ಲ.. ಅಂತಹದರಲ್ಲಿ ಇರುವಷ್ಟು ದಿನ ಹಾಳು ಮೂಳು ತಿಂದು ಆರೋಗ್ಯ ಕೆಡಿಸಿ ಕೊಳ್ಳುವುದು ಬೇರೆ.. ಅದಕ್ಕಾಗಿಯೇ ಕೆವಲ 10 ನಿಮಿಷದಲ್ಲಿ ಮಡಬಹುದಾದ ಪ್ರೋಟಿನ್ ಕಣಜ ರಾಗಿ ಅಮ್ಲಿಯನ್ನು ಮಾಡುವುದು ಹೇಗೆಂದು ನಿಮ್ಮ ಮುಂದೆ ಇಡುತ್ತಿದ್ದೇವೆ..
ಬೇಕಾಗುವ ಸಾಮಾಗ್ರಿಗಳು.
ರಾಗಿ ಹಿಟ್ಟು
ನೀರು
ಮೊಸರು
ಉಪ್ಪು
ಮಾಡುವ ವಿಧಾನ
ಪಾತ್ರೆಯಲ್ಲಿ ಎರೆಡು ಟೇಬಲ್ ಗ್ಲಾಸ್ ಅಷ್ಟು ನೀರನ್ನು ಹಾಕಿ..
ಅಲ್ಲಿಗೆ ಕೇವಲ ಎರೆಡು ಸ್ಪೂನ್ ಅಷ್ಟು ಮಾತ್ರ ರಾಗಿ ಹಿಟ್ಟನ್ನು ಹಾಕಿ.. (ಹೆಚ್ಚಿಗೆ ಹಾಕಿದರೆ ಗಂಜಿ ಹಾಳಾಗುವುದು)
ಸ್ಪೂನ್ ನಲ್ಲಿ ಚನ್ನಾಗಿ ಕದಕಿರಿ.. ಕದಡದಿದ್ದರೆ ಗಂಜಿ ಗನ್ಟಾಗುವುದು..
ಚೆನ್ನಾಗಿ ಕುದಿಯುವವರೆಗು ಕಾಯಿರಿ..
10 ನಿಮಿಷ ಕುದಿಸಿ ಗ್ಯಾಸ್ ಆಫ಼್ ಮಾಡಿ..
ಗಂಜಿ ತೆಳ್ಳಗಿದ್ದರೆ ಅದಕ್ಕೆ ಮೊಸರು ಮತ್ತು ಬೇಕಾದಷ್ಟು ಉಪ್ಪನ್ನು ಹಾಕಿ ಕಡಿಯಿರಿ(ಮಿಕ್ಸ್ ಮಾಡಿ)..
ನೀರು
ಮೊಸರು
ಉಪ್ಪು
ಮಾಡುವ ವಿಧಾನ
ಪಾತ್ರೆಯಲ್ಲಿ ಎರೆಡು ಟೇಬಲ್ ಗ್ಲಾಸ್ ಅಷ್ಟು ನೀರನ್ನು ಹಾಕಿ..
ಅಲ್ಲಿಗೆ ಕೇವಲ ಎರೆಡು ಸ್ಪೂನ್ ಅಷ್ಟು ಮಾತ್ರ ರಾಗಿ ಹಿಟ್ಟನ್ನು ಹಾಕಿ.. (ಹೆಚ್ಚಿಗೆ ಹಾಕಿದರೆ ಗಂಜಿ ಹಾಳಾಗುವುದು)
ಸ್ಪೂನ್ ನಲ್ಲಿ ಚನ್ನಾಗಿ ಕದಕಿರಿ.. ಕದಡದಿದ್ದರೆ ಗಂಜಿ ಗನ್ಟಾಗುವುದು..
ಚೆನ್ನಾಗಿ ಕುದಿಯುವವರೆಗು ಕಾಯಿರಿ..
10 ನಿಮಿಷ ಕುದಿಸಿ ಗ್ಯಾಸ್ ಆಫ಼್ ಮಾಡಿ..
ಗಂಜಿ ತೆಳ್ಳಗಿದ್ದರೆ ಅದಕ್ಕೆ ಮೊಸರು ಮತ್ತು ಬೇಕಾದಷ್ಟು ಉಪ್ಪನ್ನು ಹಾಕಿ ಕಡಿಯಿರಿ(ಮಿಕ್ಸ್ ಮಾಡಿ)..
ಕುದಿಸಿದ ಮೇಲೆ ಗಂಜಿ ಗಟ್ಟಿಯಾಗಿದ್ದರೆ ಅದಕ್ಕೆ ಮಜ್ಜಿಗೆಯನ್ನು ಹಾಗೂ ಬೇಕಾದಷ್ಟು ಉಪ್ಪನ್ನು ಹಾಕಿ ಕಡಿಯಿರಿ(ಮಿಕ್ಸ್ ಮಾಡಿ).
ದಿನಾ ಒತ್ತಡದ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರು ಯಾವುದಾದರೂ ಒಂದು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಡಯಾಬಿಟಿಸ್, ಬೊಜ್ಜು ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ತುಂಬಾ ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದೆ. ಕಚೇರಿಯಲ್ಲಿ ದೀರ್ಘಕಾಲ ಮಾಡದಂತಹ ಕೆಲಸ ಇದಕ್ಕೆ ಕಾರಣವಾಗಿದೆ.
ಮಕ್ಕಳು ಮತ್ತು ವಯಸ್ಕರು ಸ್ವಲ್ಪ ಸಮಯ ತೆಗೆದುಕೊಂಡು ಹೊರಗಡೆ ಆಟವಾಡಬೇಕು ಅಥವಾ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಕೈಯಲ್ಲಿ ಬಟಾಟೆ ಚಿಪ್ಸ್ ಹಿಡಿದುಕೊಂಡು ಗಂಟೆಗಟ್ಟಲೆ ಟಿವಿ ನೋಡುವುದು, ಕಂಪ್ಯೂಟರ್ ನಲ್ಲಿ ಗೇಮ್ಸ್ ಆಡುವುದು ಅಥವಾ ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಂಡಿರುವುದು ಸರಿಯಲ್ಲ. ಹಾಗಿದ್ದರೆ ಕೊಲೆಸ್ಟ್ರಾಲ್ನ್ನು ನಿಯಂತ್ರಿಸುವುದು ಹೇಗೆ ಮತ್ತು ಇದನ್ನು ನಿಯಂತ್ರಿಸುವುದು ಹೇಗೆ?
ಕೆಳಗೆ ಪಟ್ಟಿ ಮಾಡಲಾಗಿರುವ ಕೆಲವೊಂದು ಮಹತ್ವದ ಟಿಪ್ಸ್ಗಳು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹಾಗೂ ಹೃದಯ ರೋಗದ ಸಾಧ್ಯತೆಯನ್ನು ಕೂಡ ಕಡಿಮೆ ಮಾಡಬಹುದು.
ಕೆಳಗೆ ಪಟ್ಟಿ ಮಾಡಲಾಗಿರುವ ಕೆಲವೊಂದು ಮಹತ್ವದ ಟಿಪ್ಸ್ಗಳು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹಾಗೂ ಹೃದಯ ರೋಗದ ಸಾಧ್ಯತೆಯನ್ನು ಕೂಡ ಕಡಿಮೆ ಮಾಡಬಹುದು.
ಕಣ್ತುಂಬ ನಿದ್ದೆಗಾಗಿ ಇಲ್ಲಿದೆ 10 ಸೂಕ್ತ ಸಲಹೆಗಳು!
ತೂಕ ಇಳಿಸಲು ಪ್ರಯತ್ನಿಸಿ.
ತೂಕ ಇಳಿಸಲು ಪ್ರಯತ್ನಿಸಿ.
ಇದು ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಅತ್ಯುತ್ತಮ ವಿಧಾನ. ಆರೋಗ್ಯಕರ ತಿನ್ನುವ ವಾಡಿಕೆ ಅಳವಡಿಸಿ. ಚಾ, ಕಾಫಿ ಮತ್ತು ಫಾಸ್ಟ್ ಫುಡ್ ನಂತಹ ಆಹಾರ ಸೇವನೆ ಕಡಿಮೆ ಮಾಡಿ ಮತ್ತು ನೈಸರ್ಗಿಕ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಆಹಾರಗಳನ್ನು ತಿನ್ನಿ. ತಾಜಾ ಹಣ್ಣುಗಳು, ಬೀನ್ಸ್ ಮತ್ತು ಹಸಿರೆಲೆ ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ. ಇದನ್ನು ಪಾಲಿಸಿದರೆ ಮುಂದಿನ ಕೆಲವೇ ದಿನಗಳಲ್ಲಿ ನಿಮ್ಮ ತೂಕ ಮತ್ತು ಕೊಲೆಸ್ಟ್ರಾಲ್ ಮಟ್ಟದಲ್ಲಿ ವ್ಯತ್ಯಾಸ ಕಾಣಬಹುದು.
ವ್ಯಾಯಮ ಮಾಡಿ:
ಕೊಲೆಸ್ಟ್ರಾಲ್ ಮಟ್ಟವನ್ನು ನೈಸರ್ಗಿಕವಾಗಿ ಕಡಿಮೆಗೊಳಿಸಲು ಮತ್ತೊಂದು ಅಗ್ಗ ಮತ್ತು ಸುಲಭದ ವಿಧಾನವೆಂದರೆ ಅದು ವ್ಯಾಯಾಮ. ದಿನಾಲೂ ಕನಿಷ್ಠ 30 ನಿಮಿಷ ನಡೆಯುವುದರಿಂದ ನೀವು ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಬಹುದು. ದಿನಾ ಆಫೀಸ್ಗೆ ಹೋಗುವಾಗ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಯಾವುದಾದರೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.
ಮೆಗಾ 3 ಮತ್ತು ಒಮೆಗಾ 6 ನಂತಹ ಕೊಬ್ಬಿನಂಶಗಳನ್ನು ಬಳಸಿ:
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಅತ್ಯುತ್ತಮ ರೀತಿಯಲ್ಲಿ ನಿಯಂತ್ರಿಸಲು ಒಮೆಗಾ-3 ಕೊಬ್ಬಿನಾಂಶಗಳು ಅಧಿಕವಿರುವ ಆಹಾರಗಳನ್ನು ಬಳಸಿ. ಕೊಬ್ಬಿನಾಂಶಗಳು ಹೆಚ್ಚಾಗಿರುವ ಮೀನನ್ನು ಸೇವಿಸಲು ಮರೆಯದರಿ. ಇದು ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ, ಹಾಲು ಮತ್ತು ಆಕ್ರೋಟಾದಲ್ಲೂ ಈ ಅಂಶವು ಸಮೃದ್ಧವಾಗಿದೆ.
ಓಟ್ ಮೀಲ್ ನಿಜವಾಗಿಯೂ ತೂಕ ಇಳಿಸುತ್ತದೆಯಾ?
ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಬಳಸಿ:
ಈರುಳ್ಳಿ ಹಾಗೂ ಬೆಳ್ಳುಳ್ಳಿ ನಿಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು. ಇದನ್ನು ನಿಮ್ಮ ಆಹಾರ ಅಥವಾ ಸಲಾಡ್ಗಳಲ್ಲಿ ಬಳಸಿ. ಸಾಧ್ಯವಾದಷ್ಟು ಮಟ್ಟಿಗೆ ಬೆಳ್ಳುಳ್ಳಿ ಬಳಸಿ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನೈಸರ್ಗಿಕವಾಗಿ ನಿಯಂತ್ರಿಸುತ್ತದೆ.
ಆಲೀವ್ ಎಣ್ಣೆ ಬಳಸಿ:
ತರಕಾರಿ ಎಣ್ಣೆ, ಗಿಣ್ಣು, ಬೆಣ್ಣೆಯನ್ನು ಬದಲಾಯಿಸಿ ಮತ್ತು ಇದರ ಬದಲಿಗೆ ಆಲೀವ್ ಎಣ್ಣೆ ಮತ್ತು ಕ್ಯಾನೊಲಾ ಎಣ್ಣೆ ಬಳಸಿ. ಈ ಪದಾರ್ಥಗಳನ್ನು ನಿಮ್ಮ ಆಹಾರದ ತಯಾರಿ ಮತ್ತು ಸಲಾಡ್ಗಳ ಅಲಂಕಾರಕ್ಕೆ ಬಳಸಿ. ಇದರಿಂದ ನಿಮ್ಮ ಹೃದಯಕ್ಕೆ ಅತ್ಯಾದ್ಭುತ ಲಾಭವಿದೆ.
ಧೂಮಪಾನ ತ್ಯಜಿಸಿ.
ಇದು ನಿಮ್ಮ ಹೃದಯ ಮತ್ತು ಶ್ವಾಸಕೋಶಕ್ಕೆ ತುಂಬಾ ಕೆಟ್ಟದ್ದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಉಂಟುಮಾಡುತ್ತದೆ.
ವ್ಯಾಯಮ ಮಾಡಿ:
ಕೊಲೆಸ್ಟ್ರಾಲ್ ಮಟ್ಟವನ್ನು ನೈಸರ್ಗಿಕವಾಗಿ ಕಡಿಮೆಗೊಳಿಸಲು ಮತ್ತೊಂದು ಅಗ್ಗ ಮತ್ತು ಸುಲಭದ ವಿಧಾನವೆಂದರೆ ಅದು ವ್ಯಾಯಾಮ. ದಿನಾಲೂ ಕನಿಷ್ಠ 30 ನಿಮಿಷ ನಡೆಯುವುದರಿಂದ ನೀವು ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಬಹುದು. ದಿನಾ ಆಫೀಸ್ಗೆ ಹೋಗುವಾಗ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಯಾವುದಾದರೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.
ಮೆಗಾ 3 ಮತ್ತು ಒಮೆಗಾ 6 ನಂತಹ ಕೊಬ್ಬಿನಂಶಗಳನ್ನು ಬಳಸಿ:
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಅತ್ಯುತ್ತಮ ರೀತಿಯಲ್ಲಿ ನಿಯಂತ್ರಿಸಲು ಒಮೆಗಾ-3 ಕೊಬ್ಬಿನಾಂಶಗಳು ಅಧಿಕವಿರುವ ಆಹಾರಗಳನ್ನು ಬಳಸಿ. ಕೊಬ್ಬಿನಾಂಶಗಳು ಹೆಚ್ಚಾಗಿರುವ ಮೀನನ್ನು ಸೇವಿಸಲು ಮರೆಯದರಿ. ಇದು ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ, ಹಾಲು ಮತ್ತು ಆಕ್ರೋಟಾದಲ್ಲೂ ಈ ಅಂಶವು ಸಮೃದ್ಧವಾಗಿದೆ.
ಓಟ್ ಮೀಲ್ ನಿಜವಾಗಿಯೂ ತೂಕ ಇಳಿಸುತ್ತದೆಯಾ?
ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಬಳಸಿ:
ಈರುಳ್ಳಿ ಹಾಗೂ ಬೆಳ್ಳುಳ್ಳಿ ನಿಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು. ಇದನ್ನು ನಿಮ್ಮ ಆಹಾರ ಅಥವಾ ಸಲಾಡ್ಗಳಲ್ಲಿ ಬಳಸಿ. ಸಾಧ್ಯವಾದಷ್ಟು ಮಟ್ಟಿಗೆ ಬೆಳ್ಳುಳ್ಳಿ ಬಳಸಿ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನೈಸರ್ಗಿಕವಾಗಿ ನಿಯಂತ್ರಿಸುತ್ತದೆ.
ಆಲೀವ್ ಎಣ್ಣೆ ಬಳಸಿ:
ತರಕಾರಿ ಎಣ್ಣೆ, ಗಿಣ್ಣು, ಬೆಣ್ಣೆಯನ್ನು ಬದಲಾಯಿಸಿ ಮತ್ತು ಇದರ ಬದಲಿಗೆ ಆಲೀವ್ ಎಣ್ಣೆ ಮತ್ತು ಕ್ಯಾನೊಲಾ ಎಣ್ಣೆ ಬಳಸಿ. ಈ ಪದಾರ್ಥಗಳನ್ನು ನಿಮ್ಮ ಆಹಾರದ ತಯಾರಿ ಮತ್ತು ಸಲಾಡ್ಗಳ ಅಲಂಕಾರಕ್ಕೆ ಬಳಸಿ. ಇದರಿಂದ ನಿಮ್ಮ ಹೃದಯಕ್ಕೆ ಅತ್ಯಾದ್ಭುತ ಲಾಭವಿದೆ.
ಧೂಮಪಾನ ತ್ಯಜಿಸಿ.
ಇದು ನಿಮ್ಮ ಹೃದಯ ಮತ್ತು ಶ್ವಾಸಕೋಶಕ್ಕೆ ತುಂಬಾ ಕೆಟ್ಟದ್ದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಉಂಟುಮಾಡುತ್ತದೆ.
ದಣಿದ ದೇಹಕ್ಕೆ ತಂಪನೆ ಪಾನೀಯ
ಸೌತೆಕಾಯಿ ಜ್ಯೂಸ್:-
ಸಾಮಗ್ರಿ: ಒಂದು ಮಂಗಳೂರು ಸೌತೇಕಾಯಿ, ಎರಡು ಲೋಟ ನೀರು, ಒಂದು ಅಚ್ಚು ಬೆಲ್ಲ, ಚಿಟಿಕೆ ಏಲಕ್ಕಿ ಪುಡಿ।
ವಿಧಾನ: ಸೌತೇಕಾಯಿಯ ಸಿಪ್ಪೆ ಹಾಗೂ ತಿರುಳನ್ನು ತೆಗೆದೆಸೆದು ಉಳಿದ ಭಾಗವನ್ನು ಸಣ್ಣದಾಗಿ ಕತ್ತರಿಸಿ ರುಬ್ಬಿ ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರು, ಬೆಲ್ಲ, ಏಲಕ್ಕಿ ಪುಡಿ ಸೇರಿಸಿದರೆ ಜ್ಯೂಸ್ ಸಿದ್ಧ।
ಸೌತೆಕಾಯಿ ಜ್ಯೂಸ್:-
ಸಾಮಗ್ರಿ: ಒಂದು ಮಂಗಳೂರು ಸೌತೇಕಾಯಿ, ಎರಡು ಲೋಟ ನೀರು, ಒಂದು ಅಚ್ಚು ಬೆಲ್ಲ, ಚಿಟಿಕೆ ಏಲಕ್ಕಿ ಪುಡಿ।
ವಿಧಾನ: ಸೌತೇಕಾಯಿಯ ಸಿಪ್ಪೆ ಹಾಗೂ ತಿರುಳನ್ನು ತೆಗೆದೆಸೆದು ಉಳಿದ ಭಾಗವನ್ನು ಸಣ್ಣದಾಗಿ ಕತ್ತರಿಸಿ ರುಬ್ಬಿ ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರು, ಬೆಲ್ಲ, ಏಲಕ್ಕಿ ಪುಡಿ ಸೇರಿಸಿದರೆ ಜ್ಯೂಸ್ ಸಿದ್ಧ।
ಬೀಟ್ ರೂಟ್ ಜ್ಯೂಸ್:-
ಸಾಮಗ್ರಿ: ಒಂದು ಬೀಟ್ ರೂಟ್, ಅರ್ಧ ಅಚ್ಚು ಬೆಲ್ಲ, ನೀರು, ಅರ್ಧ ಚಮಚ ಏಲಕ್ಕಿ ಪುಡಿ।
ವಿಧಾನ: ಸಿಪ್ಪೆ ತೆಗೆದ ಬೀಟ್ ರೂಟನ್ನು ಸಣ್ಣದಾಗಿ ಹೆಚ್ಚಿ, ನುಣ್ಣಗೆ ರುಬ್ಬಿ ಶೋಧಿಸಿ। ಈ ರಸಕ್ಕೆ ಬೆಲ್ಲ ಮತ್ತು ಏಲಕ್ಕಿ ಪುಡಿ ಬೆರೆಸಿದರೆ
ಜ್ಯೂಸ್ ಸಿದ್ಧ
ಸಾಮಗ್ರಿ: ಒಂದು ಬೀಟ್ ರೂಟ್, ಅರ್ಧ ಅಚ್ಚು ಬೆಲ್ಲ, ನೀರು, ಅರ್ಧ ಚಮಚ ಏಲಕ್ಕಿ ಪುಡಿ।
ವಿಧಾನ: ಸಿಪ್ಪೆ ತೆಗೆದ ಬೀಟ್ ರೂಟನ್ನು ಸಣ್ಣದಾಗಿ ಹೆಚ್ಚಿ, ನುಣ್ಣಗೆ ರುಬ್ಬಿ ಶೋಧಿಸಿ। ಈ ರಸಕ್ಕೆ ಬೆಲ್ಲ ಮತ್ತು ಏಲಕ್ಕಿ ಪುಡಿ ಬೆರೆಸಿದರೆ
ಜ್ಯೂಸ್ ಸಿದ್ಧ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ