ಮಂಗಳವಾರ, ನವೆಂಬರ್ 28, 2017

ನಿಮಗೆ ಮನೆಮದ್ದನ್ನು ಹೇಳ್ತಿವಿ ಬನ್ನಿ

 ಒಣ ತುಟಿಗಳ ಸಮಸ್ಯೆ :
ಒಣ ತುಟಿಗಳ ಸಮಸ್ಯೆ ನಾವುಗಳು ಕೇಳಿ ಬರುವಂತಹ ಸಾಮಾನ್ಯ ಸಮಸ್ಯೆ ಅದರಲ್ಲೂ ಈ ಚಳಿಗಾಲದಲ್ಲಿ ಇದು ಸರ್ವೇ ಸಾಮಾನ್ಯ .
ಈ ಒಣ ತುಟಿಗಳ ಸಮಸ್ಯೆಗೆ ಮೂಲ ಕಾರಣ:
೧.ವಾತಾವರಣ
೨.ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿ ಇಲ್ಲದೆ ಇರುವುದು .
೩.ಸೂರ್ಯನ ಕಿರಣಗಳು
೪.ಸಕ್ಕರೆ ಕಾಯಿಲೆ
೫. ಕಬ್ಬಿಣಂಶದ ಕೊರತೆ
ಒಣ ತುಟಿಗಳ ಬಗ್ಗೆ ಗಮನ ಕೊಡದೆ ಹೋದರೆ ತುಟಿಗಳು ಹೊಡೆದು ರಕ್ತ ಬಂದು ಅದು ಇನ್ನೊಂದು ಸಮಸ್ಯೆಗೆ ಕಾರಣ ವಾಗುತ್ತದೆ.
ಈ ಒಣ ತುಟಿಗಳ ಸಮಸ್ಯೆ ಯಿಂದ ಹೊರಬರಲು ನಾವು ನಿಮಗೆ ಮನೆಮದ್ದನ್ನು ಹೇಳ್ತಿವಿ ಬನ್ನಿ
೧ಸಕ್ಕರೆ ಮತ್ತು ಜೇನು ತುಪ್ಪ :
ಒಂದು ಬಟ್ಟಲಿನಲ್ಲಿ 2 ಚಮಚ ಸಕ್ಕರೆ ಮತ್ತು 1 ಚಮಚ ಜೇನು ತುಪ್ಪ ಸೇರಿಸಿ ನಿಮ್ಮ ತುಟ್ಟಿಗಳ ಮೇಲೆ ಹಾಕಿ ಸ್ವಲ್ಪ ಹೊತ್ತು ಬಿಡಿ ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ತುಟಿಗಳನ್ನು ತೊಳೆದುಕೊಳ್ಳಿ ,ಸಕ್ಕರೆಯಲ್ಲಿರುವ ಅಂಶ ಒಣ ತುಟಿಗಳನ್ನು ಸರಿಪಡಿಸುವುದರ ಜೊತೆ ಸ್ವಾಭಾವಿಕ ವಾಗಿ ನಿಮ್ಮ ತುಟಿಗಳನ್ನು ಮೃದು ವಾಗಿಸುತ್ತದೆ .

೨.ಹಾಲಿನ ಕೆನೆ :
ಸ್ವಲ್ಪ ಹಾಲಿನ ಕೆನೆ ತೆಗೆದುಕೊಂಡು ನಿಮ್ಮ ತುಟಿಯ ಸುತ್ತ ದಿನಕ್ಕೆ 2 ರಿಂದ 3 ಸಲ ಇರಿಸಿಕೊಳ್ಳಿ ಸ್ವಲ್ಪ ಸಮಯದ ನಂತರ ಒಂದು ಹತ್ತಿ ಬಟ್ಟೆಯನ್ನು ಬೆಚ್ಚನೆಯ ನೀರಿನಲ್ಲಿ ಅದ್ದಿ ನಿಮ್ಮ ತುಟಿಯನ್ನು ಸ್ವಚ್ಛ ಮಾಡಿಕೊಳ್ಳಬೇಕು .

೩.ಸೌತೆಕಾಯಿ:
ಸೌತೆಕಾಯಿಯನ್ನು ಕತ್ತರಿಸಿ ದಿನಕ್ಕೆ 2 ರಿಂದ 3 ಸಲ ನಿಮ್ಮ ತುಟಿಗಳನ್ನು ಮೃದುವಾಗಿ ಉಜ್ಜಿಕೊಳ್ಳಬೇಕು,ಸೌತೆಕಾಯಿಯಲ್ಲಿರುವ ನೀರಿನ ಅಂಶ ಒಣ ತುಟಿಗಳ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತದೆ .
೪.ನೀರು:

ಈ ಒಣ ತುಟಿಗಳ ಸಮಸ್ಯೆಗೆ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಇರದಿರುವುದು ಒಂದು ಕಾರಣ,ಅದಕ್ಕೆ ಆದಷ್ಟು ಜಾಸ್ತಿ ಜಾಸ್ತಿ ನೀರು ಕುಡಿಯಿರಿ ,ನೀರು ಒಣ ತುಟಿಗಳನ್ನು ಮಾಯವಾಗುವಂತೆ ಮಾಡುವುದರ ಜೊತೆ ನಿಮ್ಮ ದೇಹದಲ್ಲಿನ ವಿಷಕಾರಿ ವಸ್ತುಗಳನ್ನೂ ಹೊರ ಹಾಕುತ್ತದೆ .

**ಹುರುಳಿ**
ಮೊದಲು ಮೂತ್ರಪಿ೦ಡಗಳಲ್ಲಿನ ಕಲ್ಲುಗಳನ್ನು ಕರಗಿಸಿ, ಬಳಿಕ ಅವುಗಳನ್ನು ಮೂತ್ರದ ಮೂಲಕ ಹೊರಹಾಕುತ್ತವೆ. ಮೂತ್ರಪಿ೦ಡಗಳಲ್ಲಿ ಹರಳುಗಳು ಉ೦ಟಾಗದ೦ತೆ ತಡೆಗಟ್ಟಲು ಹಾಗೂ ಈಗಾಗಲೇ ಉ೦ಟಾಗಿರಬಹುದಾದ ಹರಳುಗಳನ್ನು ಹೊರದಬ್ಬಲು ಪ್ರತಿದಿನವೂ ನೀವು ಮೂತ್ರಪಿ೦ಡಾಕಾರದ ಹುರುಳಿಯನ್ನು ಸೇವಿಸತಕ್ಕದ್ದು. ಮೂತ್ರಪಿ೦ಡಗಳಲ್ಲಿರಬಹುದಾದ ಹರಳುಗಳನ್ನು ತೊಳೆದು ಹೊರದೂಡಲು ಲಭ್ಯವಿರುವ ಅತ್ಯುತ್ತಮವಾದ ಮನೆಮದ್ದುಗಳ ಪೈಕಿ ಒ೦ದಾಗಿದೆ
ಈ ಕೆಳಗಿನ ಕೆಲ ಸಲಹೆಗಳು ಕೋಪವನ್ನು ನಿಯಂತ್ರಿಸಲು ಸಹಾಯಮಾಡುತ್ತದೆ.
1. ಯೋಚನೆ: ತುಂಬಾ ಕೋಪ ಬಂದರೆ ಕೋಪಕ್ಕೆ ಕಾರಣವಾದ ವಿಷಯವನ್ನು ಯೋಚಿಸಬಾರದು. ಅದರ ಬಗ್ಗೆ ಯೋಚಿಸಿದಷ್ಟು ಕೋಪ ಹೆಚ್ಚಾಗುವುದು ಅಲ್ಲದೆ ಕಡಿಮೆಯಾಗುವುದಿಲ್ಲ. ಕೋಪದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಕೋಪ ಸ್ವಲ್ಪ ತಣಿದ ಮೇಲೆ ನಂತರ ಯೋಚಿಸಿ ನಿಮ್ಮ ನಿರ್ಧಾರ, ಇಷ್ಟ-ಕಷ್ಟಗಳ ಬಗ್ಗೆ ಹೇಳುವುದು ಒಳ್ಳೆಯದು.
2. ಉಸಿರಾಟ: ತುಂಬಾ ಕೋಪ ಬಂದು ಅದನ್ನು ನಿಯಂತ್ರಿಸಲು ಸಾಧ್ಯನೆ ಇಲ್ಲ ಎಂದು ಅನಿಸಿದರೆ ಈ ರೀತಿ ಮಾಡಿ. ಈ ಸಲಹೆ ನಿಮಗೆ ಸಿಲ್ಲಿ ಅನಿಸಿದರೂ ಕೋಪ ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ಎಲ್ಲಾ ಯೋಚನೆ ಬಿಟ್ಟು ನಿಮ್ಮ ಉಸಿರಾಟದ ಕಡೆ ಗಮನ ಕೊಡಿ. ಈ ರೀತಿ ಎರಡು ನಿಮಿಷ ಮಾಡಿದರೆ ಸಾಕು ಕೋಪ ತನ್ನಿಂದ ತಾನೆ ಕಡಿಮೆಯಾಗುತ್ತದೆ.
3. ನಿರ್ಧಾರ: ಕೋಪ ತಣ್ಣಗಾದ ಮೇಲೆ ಸರಿ-ತಪ್ಪುಗಳ ಬಗ್ಗೆ ಯೊಚಿಸಿ. ಅಗ ತಪ್ಪು ಅನಿಸಿದ್ದನ್ನು ಹೇಳಿಬಿಡಿ. ಸಾಕಷ್ಟು ಬಾರಿ ನಮ್ಮ ತಪ್ಪು ನಮಗೆ ಗೊತ್ತಾಗುವುದಿಲ್ಲ.
4. ಕ್ಷಮೆ: ಒಂದು ವೇಳೆ ನಿಮ್ಮ ಕಡೆಯಿಂದ ತಪ್ಪು ಇದೆ ಎಂದು ಮನವರಿಕೆಯಾದರೆ ಕ್ಷಮೆ ಕೇಳಲು ಹಿಂಜರಿಕೆ ಬೇಡ. ಈ ರೀತಿಯ ವ್ಯಕ್ತಿತ್ವ ಬೆಳೆಸಿಕೊಂಡರೆ ನಿಮಗೆ ಲಾಭ ಹೊರತು ನಷ್ಟವೇನು ಉಂಟಾಗುವುದಿಲ್ಲ.
ಹೊಕ್ಕಳಿಗೆ ತೆಂಗಿನೆಣ್ಣೆ ಬಿಟ್ಟರೆ ಅನೇಕ ಆರೋಗ್ಯ ಸಮಸ್ಯೆಗಳು ಮಾಯವಾಗುವುದು
ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಅತ್ಯುತ್ತಮ ಎಣ್ಣೆ ತೆಂಗಿನೆಣ್ಣೆ, ಆರೋಗ್ಯದ ಸುಧಾರಣೆಗೆ, ಕುರುಕಲು ಹಾಗೂ ಆಹಾರ ಪದಾರ್ಥಗಳ ತಯಾರಿಸಲು ಅತ್ಯುತ್ತಮ ಸಹಕಾರವನ್ನು ನೀಡುತ್ತದೆ. ಹೆಚ್ಚು ಪೋಷಕಾಂಶದ ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ. ಆಹಾರ ಪದಾರ್ಥಗಳಿಗೆ ಉತ್ತಮ ರುಚಿಯನ್ನು ನೀಡುವ ಈ ಎಣ್ಣೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶ, ಪೌಷ್ಠಿಕಾಂಶ ಹಾಗೂ ಗಾಯಗಳನ್ನು ಬಹುಬೇಗ ಗುಣಪಡಿಸುವ ಶಕ್ತಿಯನ್ನು ಒಳಗೊಂಡಿದೆ.
ಈ ಎಣ್ಣೆಯು ಚರ್ಮದ ಆರೋಗ್ಯ ಹಾಗೂ ಅಂಗವರ್ಧನಕ್ಕೆ ಬಹು ಉಪಕಾರಿ. ಇದರ ಬಳಕೆಯಿಂದ ತ್ವಚೆಯು ಆಕರ್ಷಕ ಹೊಳಪನ್ನು ಪಡೆದುಕೊಳ್ಳಬಹುದು. ಅಲ್ಲದೆ ಸೊಂಟದ ಭಾಗದಲ್ಲಿ ಮತ್ತು ಹೊಕ್ಕಳು ಭಾಗಕ್ಕೆ ಅನ್ವಯಿಸಿಕೊಳ್ಳುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಜೊತೆಗೆ ಸೊಂಟದ ಭಾಗದಲ್ಲಿ ಶೇಖರಣೆಗೊಂಡಿರುವ ಕೊಬ್ಬುಗಳು ಬಹುಬೇಗ ಕರಗುವುದು ಎಂದು ಹೇಳಲಾಗುತ್ತದೆ. ಅಪರೂಪದ ವಿಶೇಷತೆಯನ್ನು ಒಳಗೊಂಡಿರುವ ತೆಂಗಿನೆಣ್ಣೆಯ ಬಳಕೆಯಿಂದ ಇನ್ನೂ ಯಾವೆಲ್ಲಾ ಉಪಯೋಗವನ್ನು ಪಡೆದುಕೊಳ್ಳಬಹುದು? ಎನ್ನುವದರ ವಿವರಣೆ ಇಲ್ಲಿದೆ ನೋಡಿ...
ಫಲವತ್ತತೆಯನ್ನು ಸುಧಾರಿಸುವುದು
ಹೊಕ್ಕಳಿಗೆ ತೆಂಗಿನೆಣ್ಣೆ ಹಾಕುವುದರಿಂದ ಫಲವಂತಿಕೆಯ ಪ್ರಮಾಣ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಇದರಲ್ಲಿ ಟ್ರೈಗ್ಲಿಸರೈಡ್ ಸಮೃದ್ಧವಾಗಿರುವುದರಿಂದ ಫಲವಂತಿಕೆಯ ಸುಧಾರಣೆಗೆ ಸಹಾಯವಾಗುವುದು.
  
ಶೀತವನ್ನು ತಡೆಗಟ್ಟುತ್ತದೆ
ತೆಂಗಿನೆಣ್ಣೆ ತಂಪಿನ ಗುಣವನ್ನು ಹೊಂದಿದೆ. ಆದರೂ ದೇಹದ ಶೀತ ಮತ್ತು ಅನಾರೋಗ್ಯವನ್ನು ತಡೆಗಟ್ಟುತ್ತದೆ. ದೇಹದ ಶಕ್ತಿ ಹೆಚ್ಚಿಸಲು ಹಾಗೂ ಉಷ್ಣವನ್ನು ತಗ್ಗಿಸಲು ಬಹು ಸಹಕಾರಿ ಎಂದು ಹೇಳಲಾಗುವುದು.

ಹೊಟ್ಟೆ ಸೆಳೆತ ಹಾಗೂ ಮುಟ್ಟಿನ ನೋವು ನಿವಾರಕ
ಹೊಕ್ಕಳಿಗೆ ತೆಂಗಿನೆಣ್ಣೆಯನ್ನು ಬಿಡುವುದರಿಂದ ಹೊಟ್ಟೆ ನೋವು ಹಾಗೂ ಮುಟ್ಟಿನಿಂದ ಬಳಲುವ ಹೊಟ್ಟೆ ನೋವನ್ನು ನಿವಾರಿಸಬಹುದು. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗುಣಗಳು ಉದರದ ನೋವು ನಿವಾರಿಸಲು ಸಹಾಯಮಾಡುವುದು. ಅಲ್ಲದೆಹೊಕ್ಕಳಿಗೆ ತೆಂಗಿನೆಣ್ಣೆಯನ್ನು ಹಾಕುವುದರಿಂದ ಉತ್ತಮ ದೃಷ್ಟಿಯನ್ನು ಪಡೆದುಕೊಳ್ಳಬಹುದು.
  
ಹೊಕ್ಕಳಿಗೆ ಎಣ್ಣೆಯನ್ನು ಹಾಕುವ ವಿಧಾನ
ಮೊದಲು ಒಂದು ಹತ್ತಿ ಉಂಡೆಯನ್ನು ತಯಾರಿಸಿಕೊಳ್ಳಿ.
ನಂತರ ಆ ಉಂಡೆಯನ್ನು ತೆಂಗಿನೆಣ್ಣೆಯಲ್ಲಿ ಅದ್ದಿ.
ಎಣ್ಣೆಯಿಂದ ಕೂಡಿದ ಹತ್ತಿ ಉಂಡೆಯನ್ನು ಹೊಕ್ಕಳಿನ ಮೇಲೆ ಇರಿಸಿ.
ನಂತರ 15 ನಿಮಿಷಗಳಕಾಲ ಆ ವಲಯವನ್ನು ಮಸಾಜ್ ಮಾಡಿ.
  
ಏಕೆ ಪ್ರಯೋಜನಕಾರಿ?
ಹೊಕ್ಕಳು ಬಳ್ಳಿಯ ಸಹಾಯದಿಂದಲೇ ತಾಯಿ ಹೊಟ್ಟೆಯಲ್ಲಿರುವ ಮಗು ಆಹಾರವನ್ನು ಪಡೆದುಕೊಳ್ಳುತ್ತದೆ. ಹೊಕ್ಕಳು ಬಳ್ಳಿಯಿಂದ ಸಾವಿರಾರು ನರಗಳ ಸಂಪರ್ಕ ಇರುತ್ತದೆ. ಈ ಸ್ಥಳದಲ್ಲಿ ತೆಂಗಿನೆಣ್ಣೆ ಹಾಕುವುದರಿಂದ ಆಂತರಿಕ ಅಂಗಗಳು ಬಹಳ ಆರೋಗ್ಯಕರವಾಗಿರಲು ಸಹಾಯವಾಗುವುದು.. ಕೇವಲ ತೆಂಗಿನ ಎಣ್ಣೆ ಮಾತ್ರವಲ್ಲ, ಇನ್ನಷ್ಟು ಇತರ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು,, ಅವು ಯಾವುದು ಎಂಬುದನ್ನು ಮುಂದೆ ಓದಿ...
  
ತುಟಿಗಳು ಬಿರಿಬಿಟ್ಟಿದ್ದರೆ ಅಥವಾ ಗಂಟು ನೋವು ಕಾಣಿಸಿಕೊಂಡರೆ
ತುಟಿಗಳು ಬಿರಿಬಿಟ್ಟಿದ್ದರೆ ಅಥವಾ ಗಂಟು ನೋವು ಕಾಣಿಸಿಕೊಂಡರೆ, ಒಂದೆರಡು ಚಮಚ ಹನಿ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಿಕೊಳ್ಳಿ. ಇದು ಕೊಂಚ ವಿಚಿತ್ರವಾಗಿ ಕಂಡರೂ ಈ ಪ್ರಾಚೀನ ವಿಧಾನ ನಿಜವಾಗಿಯೂ ಕೆಲಸ ಮಾಡುತ್ತದೆ.
  
ಫ್ಲೂ ಜ್ವರ ಮತ್ತು ಶೀತವಾಗಿದೆಯೇ?
ಫ್ಲೂ ಜ್ವರ ಮತ್ತು ಶೀತವಾಗಿದೆಯೇ? ಒಂದು ಚಿಕ್ಕ ತುಂಡು ಬಟ್ಟೆಯನ್ನು ಆಲ್ಕೋಹಾಲ್‌ನಲ್ಲಿ ಮುಳುಗಿಸಿ ರಾತ್ರಿ ಮಲಗುವಾಗ ಹೊಕ್ಕಳ ಮೇಲಿಸಿರಿ. ಬೆಳಿಗ್ಗೆದ್ದಾಗ ಜ್ವರ ಮತ್ತು ಶೀತ ಕಡಿಮೆಯಾಗಿರುತ್ತದೆ.
  
ಮುಟ್ಟಿನ ದಿನಗಳಲ್ಲಿ
ಮಾಸಿಕ ದಿನಗಳ ನೋವಿನಿಂದ ಬಳಲುತ್ತಿರುವ ಮಹಿಳೆಯರು ಒಂದು ಚಿಕ್ಕ ತುಂಡು ಬಟ್ಟೆಯನ್ನು ಕೊಂಚ ಬ್ರಾಂದಿಯಲ್ಲಿ ತೋಯಿಸಿ ರಾತ್ರಿ ಮಲಗುವ ಮುನ್ನ ಹೊಕ್ಕುಳ ಮೇಲಿಟ್ಟು ಮಲಗಿಕೊಳ್ಳುವ ಮೂಲಕ ನೋವು ಕಡಿಮೆಯಾಗುತ್ತದೆ
  
ಕೆಲವು ಹನಿ ಬೇವಿನ ಎಣ್ಣೆ
ಕೆಲವು ಹನಿ ಬೇವಿನ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚಿ ನಯವಾಗಿ ಮಸಾಜ್ ಮಾಡುವ ಮೂಲಕ ಕೆಲವೇ ದಿನಗಳಲ್ಲಿ ಮೊಡವೆ ಮಾಯವಾಗುತ್ತವೆ. ಅಲ್ಲದೆ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚಿ ಮಸಾಜ್ ಮಾಡುವ ಮೂಲಕ ಮುಖದ ಕಾಂತಿ ಹೆಚ್ಚುತ್ತದೆ.
  
ಕೊಬ್ಬರಿ ಎಣ್ಣೆ
ಕೆಲವು ಹನಿ ಕೊಬ್ಬರಿ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚಿ ಸುತ್ತಲಿನ ಭಾಗವನ್ನು ನಯವಾಗಿ ಮಸಾಜ್ ಮಾಡುವ ಮೂಲಕ ಫಲವತ್ತತೆಯನ್ನು ಹೆಚ್ಚಿಸಬಹುದು. ಇನ್ನು ನಿಮಗೆ ನಿಮ್ಮ ತ್ವಚೆ ಸೌಮ್ಯ ಮತ್ತು ಆರೋಗ್ಯಕರವಾಗಿರಬೇಕೆಂಬ ಬಯಕೆಯೇ? ಹಾಗಾದರೆ ಒಂದು ಹನಿ ಹಸುವಿನ ತುಪ್ಪವನ್ನು ಹೊಕ್ಕಳಿಗೆ ಹಚ್ಚಿ ಮಸಾಜ್ ಮಾಡಿ.
ಸುಖ ಜೀವನಕ್ಕೆ ಕಾಮತ್ ರ ಸಪ್ತ ಸೂತ್ರಗಳು :
೧. ಈಗಿನ ಕಾಲ ಪರಿಸ್ಥಿತಿಯಲ್ಲಿ ಹಣ ಬಹಳ ಮುಖ್ಯ. ಆದರೆ ಹಣವನ್ನೇ ಜೀವನದ ಗುರಿ ಮಾಡಿಕೊಳ್ಳಬೇಡಿ. ಕೋಟ್ಯಾಧೀಶರಾಗುವುದು ಬೇಡ. ಸಾಲ ಸೋಲ ಗಳಿಲ್ಲದ ಕೆಲವು ಲಕ್ಷಗಳಾದರೂ ನಿಮ್ಮಬಳಿ ಇರಲಿ. ಯಾವುದನ್ನೂ ಕಾನೂನು ಕಾಯ್ದೆಯ ಚೌಕಟ್ಟಿನೊಳಗೆ ಸಂಪಾದಿಸಿರಿ.
೨. ಬಾಡಿಗೆ ಮನೆ ಎಂದಿಗೂ ನಿಮಗೆ ಖುಷಿತರಲಾರದು. ಅಲ್ಪ ತೃಪ್ತರಾಗಿ ಚಿಕ್ಕದಾದರೂ ಚೊಕ್ಕದಾದ ನಿಮ್ಮದೇ ಒಂದು ಸಣ್ಣ ಸ್ವಂತ ಮನೆ ಮಾಡಿಕೊಳ್ಳಿರಿ. ಸಾಲಮಾಡಿ ಮನೆ ಮಾಡಿದ್ದರೆ ಆದಷ್ಟು ಶೀಫ್ರ ಸಾಲತೀರಿಸಿ ನೆಮ್ಮದಿಯ ಜೀವನ ನಿಮ್ಮದಾಗಿಸಿಕೊಳ್ಳಿ.
೩. ಎಲ್ಲಕ್ಕಿಂತಾ ಅತಿಮುಖ್ಯ ನಿಮ್ಮ ಆರೋಗ್ಯ. 
ನಿಮ್ಮ ಆಹಾರ -  ನಿಮ್ಮ ಚಿಂತನೆ ನಿಮ್ಮ ಆರೋಗ್ಯ ನಿರ್ಧರಿಸುತ್ತದೆ. ಆದುದರಿಂದ ಹಿತ ಮಿತ ಆರೋಗ್ಯಯುಕ್ತ  ಸಾತ್ವಿಕ ಆಹಾರ , ವ್ಯಾಯಾಮ , ಧ್ಯಾನ ಹಾಗೂ ಮನಸ್ಸಿಗೆ ಸಕಾರಾತ್ಮಕ ಭಾವನೆ ಉಂಟುಮಾಡುವ ಪುಸ್ತಕ ಓದುವ ಅಭ್ಯಾಸ ಮಾಡಿಕೊಳ್ಳಿರಿ. ಅದರ ಜತೆಗೆ ಮೆಡಿಕಲ್ ಪಾಲಿಸಿ ಮಾಡುವುದನ್ನು ಮರೆಯದಿರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ