ಮಂಗಳವಾರ, ನವೆಂಬರ್ 28, 2017

*ಪ್ರಶ್ನೋತ್ತರಮಾಲಿಕಾ*

ಶ್ರೀ ಶಂಕರ ಭಗವತ್ಪಾದರವರಿಂದ ರಚಿತವಾದ   *ಪ್ರಶ್ನೋತ್ತರಮಾಲಿಕಾ* , ಬದುಕಿನಲ್ಲಿ ಏನನ್ನು  ಮಾಡಬೇಕು , ಏನನ್ನು ಮಾಡಬಾರದೆಂದು ಬಹಳ
ಸುಂದರ , ಸರಳವಾಗಿ ತಿಳಿಸುತ್ತದೆ..
ಈ ಲೇಖನವನ್ನು ತಪ್ಪದೇ ಓದಿ..

ಪ್ರಶ್ನೆ- ಭಗವನ್ ಕಿಮ್ ಉಪಾದೇಯಮ್..?
ಪೂಜ್ಯರೇ ಜೀವನದಲ್ಲಿ
ಏನನ್ನು ಅನುಸರಿಸಬೇಕು ?
ಉತ್ತರ - *ಗುರುವಚನಮ್*   ಜೀವನದಲ್ಲಿ ಗುರು-ಹಿರಿಯರ  ಮಾತನ್ನು ಅನುಸರಿಸಬೇಕು.
ಪ್ರಶ್ನೆ - ಕಃ ಪಥ್ಯತರಃ ?  ಪ್ರಪಂಚದಲ್ಲಿ ಹಿತಕರವಾದದ್ದು ಯಾವುದು ?
ಉತ್ತರ - *ಧರ್ಮಃ*  ಧರ್ಮವೇ ಹಿತಕರವಾದದ್ದು.
ಪ್ರಶ್ನೆ - ಕಿಮ್ ವಿಷಮ್ ?
ಯಾವುದು ವಿಷ ?
ಉತ್ತರ - *ಅವಧೀರಣಾ ಗುರುಷು*   ಗುರು-ಹಿರಿಯರಿಗೆ ಮಾಡಿದ ಅವಮಾನ,ಅಗೌರವವೇ ವಿಷ.
ಪ್ರಶ್ನೆ - ಕಿಮ್ ಮನುಜೇಷು ಇಷ್ಟತಮಮ್ ?  ಮನುಷ್ಯರಲ್ಲಿ ಇರಲೇಬೇಕಾದ ಶ್ರೇಷ್ಠ ಗುಣ  ಯಾವುದು ?
ಉತ್ತರ - *ಸ್ವಪರಹಿತಾಯ ಉದ್ಯತಂ ಜನ್ಮ* ಯಾವಾಗಲೂ ತನ್ನ ಮತ್ತು ಇತರರ ಸುಖಕ್ಕಾಗಿ ಜೀವನವನ್ನು ತೊಡಗಿಸಿಕೊಳ್ಳುವುದು.
ಪ್ರಶ್ನೆ - ಕೇ ಚ ದಸ್ಯವಃ ?  ಕಳ್ಳರು ಯಾರು ?
ಉತ್ತರ - *ವಿಷಯಾಃ*  ಸುಖಪಭೋಗ  ವಸ್ತುಗಳೇ ಕಳ್ಳರು (ಅವು ಇಂದ್ರಿಯಗಳ ಮೂಲಕ  ಮನಸನ್ನು  ಅಪಹರಿಸುತ್ತವೆ )
ಪ್ರಶ್ನೆ - ಕೋ ವೈರೀ ?  ನಮ್ಮ ಶತ್ರು ಯಾರು ?
ಉತ್ತರ - *ಯಸ್ತು ಅನುದ್ಯೋಗಃ*  ನಿರುದ್ಯೋಗವೇ ನಮ್ಮ ಶತ್ರು.
ಪ್ರಶ್ನೆ - ಕಿಮ್ ಗುರುತಾಯಾಂ ಮೂಲಮ್ ?  ಶ್ರೇಷ್ಠತೆಯ ಮೂಲ ಯಾವುದು ?
ಉತ್ತರ - *ಯತ್ ಏತತ್ ಅಪ್ರಾರ್ಥನಮ್ ನಾಮ* ಇತರರಲ್ಲಿ ಏನನ್ನೂ ಅಂಗಲಾಚದಿರುವುದೇ ಜೀವನದ ಶ್ರೇಷ್ಠತೆ
ಪ್ರಶ್ನೆ - ಕಿಮ್ ದುಃಖಮ್ ?  ದುಃಖವೆಂದರೇನು..?
ಉತ್ತರ - *ಅಸಂತೋಷಃ*  ಸಂತೋಷವನ್ನು ಕಳೆದುಕೊಂಡಾಗಿನ ಅವಸ್ಥೆ.
ಪ್ರಶ್ನೆ - ಕಿಮ್ ಜಾಡ್ಯಮ್ ?  ಆಲಸ್ಯತನವು ಯಾವುದು ?
ಉತ್ತರ - *ಪಾಠತೋSಪಿ ಅನಭ್ಯಾಸಃ*  ವಿದ್ಯಾವಂತನಾಗಿಬಿಟ್ಟೆನೆಂದು ತಿಳಿದು , ಅಧ್ಯಯನ  ಮಾಡದಿರುವುದು.
ಪ್ರಶ್ನೆ - ನಲಿನೀ-ದಲ-ಗತ-ಜಲವತ್-ತರಲಂ ಕಿಮ್ ?  ಕಮಲದ ಎಲೆಯ ಮೇಲಿನ ನೀರಿನಂತೆ  ಚಂಚಲವಾದದ್ದು ಯಾವುದು ?
ಉತ್ತರ - *ಯೌವ್ವನಂ - ಧನಂ ಚ ಆಯುಃ*  ತಾರುಣ್ಯ,ಸಂಪತ್ತು ಮತ್ತು ಆಯುಷ್ಯ  ಇವು ಕಮಲದ ಎಲೆ ಮೇಲಿನ ನೀರಿನಂತೆ  ಚಂಚಲವಾದವುಗಳು.
ಪ್ರಶ್ನೆ - ಕಿಮ್ ಚ ಅನರ್ಘಮ್ ?  ಬೆಲೆ ಕಟ್ಟಲಾಗದ್ದು ಯಾವುದು ?
ಉತ್ತರ - *ಯದವಸರೇ ದತ್ತಮ್*   ಸರಿಯಾದ ಸಮಯದಲ್ಲಿ ಸತ್ಪಾತ್ರರಿಗೆ ದಾನ ಮಾಡಿದ್ದು.
ಪ್ರಶ್ನೆ - ಆಮರಣಾತ್ ಕಿಮ್ ಶಾಲ್ಯಮ್ ?  ಸಾಯುವವರೆಗೂ ಬಾಣದಂತೆ  ಚುಚ್ಚುತ್ತಲೇ ಇರುವುದು ಯಾವುದು ?
ಉತ್ತರ - *ಪ್ರಚ್ಛನ್ನಂ ಯತ್ ಕೃತಂ ಪಾಪಮ್*  ಬಚ್ಚಿಟ್ಟುಕೊಂಡ ಪಾಪಕಾರ್ಯ  ಸಾಯುವವರೆಗೂ ಬಾಣದಂತೆ  ಚುಚ್ಚತ್ತಲೇ ಇರುತ್ತದೆ .
ಪ್ರಶ್ನೆ - ಕುತ್ರ ವಿಧೇಯೋ ಯತ್ನಃ ?   ಯಾವ ವಿಷಯದಲ್ಲಿ ಪ್ರಯತ್ನವನ್ನು ಮಾಡಬೇಕು ?
ಉತ್ತರ - *ವಿದ್ಯಾಭ್ಯಾಸೇ ಸದೌಷಧೇ ದಾನೇ*  ವಿಧ್ಯಾಭ್ಯಾಸದಲ್ಲಿ ,ಒಳ್ಳೆಯ ಔಷಧೋಪಚಾರದಲ್ಲಿ  ಮತ್ತು ದಾನ ಮಾಡುವಲ್ಲಿ ಪ್ರಯತ್ನ  ಮಾಡಬೇಕು..
ಪ್ರಶ್ನೆ - ಕೇನ ಜಿತಂ ಜಗದೇತತ್ ?  ಈ ಜಗತ್ತನ್ನು ಯಾರು ಗೆಲ್ಲುತ್ತಾರೆ ?
ಉತ್ತರ - *ಸತ್ಯ-ತಿತಿಕ್ಷಾವತಾ ಪುಂಸಾ*  ಸತ್ಯ ಮತ್ತು ಸಹನೆಗಳಿಂದ ಕೂಡಿದ ಮನುಷ್ಯನು ಈ  ಜಗತ್ತನ್ನು ಗೆಲ್ಲುತ್ತಾನೆ.
ಪ್ರಶ್ನೆ - ಕಸ್ಯ ವಶೇ ಪ್ರಾಣಿಗಣಃ ?  ಪ್ರಾಣಿ ಸಮೂಹವು ಯಾರ ಅಧೀನದಲ್ಲಿರುತ್ತದೆ ?
ಉತ್ತರ - *ಸತ್ಯ-ಪ್ರಿಯಭಾಷಿಣೋ ವಿನೀತಸ್ಯ*  ಪ್ರಾಣಿ  ಸಮೂಹವು ಸತ್ಯವದುದನ್ನು ಮತ್ತು ಪ್ರಿಯವಾದುದನ್ನು ಮಾತನಾಡುವ ವಿನಯಶಾಲಿಯ ವಶದಲ್ಲಿ ಇರುತ್ತದೆ.
ಪ್ರಶ್ನೆ - ಕ್ವ ಸ್ಥಾತವ್ಯಮ್ ?  ಎಲ್ಲಿ ಸ್ಥಿರವಾಗಿ ನಿಲ್ಲಬೇಕು ?
ಉತ್ತರ - *ನ್ಯಾಯ್ಯೇ ಪಥಿ ದೃಷ್ಟ - ಅದೃಷ್ಟ -*  *ಲಾಭಾಢ್ಯೇ* ದೃಷ್ಟ ಮತ್ತು ಅದೃಷ್ಟ  (ಕಂಡು ಕಾಣದ )ಲಾಭದಿಂದ ಸಮೃದ್ಧವಾದ  ನ್ಯಾಯಯುತವಾದ
ಮಾರ್ಗದಲ್ಲಿ ಸದಾ ನಿಲ್ಲಬೇಕು.
ಪ್ರಶ್ನೆ - ಕಿಮ್ ದಾನಮ್ ?  ದಾನವು ಯಾವುದು ?
ಉತ್ತರ - *ಅನಾಕಾಂಕ್ಷಮ್*  ಪ್ರತಿಫಲವನ್ನು ಬಯಸದೇ ಮಾಡಿದ  ದಾನವೇ ನಿಜವಾದ ದಾನವು .
ಪ್ರಶ್ನೆ - ಕಿಮ್ ಮಿತ್ರಮ್ ? ನಿಜವಾದ ಮಿತ್ರನು ಯಾರು ?
ಉತ್ತರ - *ಯೋ ನಿವಾರಯತಿ ಪಾಪಾತ್* ಪಾಪ ಕಾರ್ಯಗಳನ್ನು ಮಾಡದಂತೆ  ತಡೆಯುವನು ನಿಜವಾದ ಮಿತ್ರನು.
ಪ್ರಶ್ನೆ - ಕಿಮ್ ಶೋಚ್ಯಮ್ ?  ದುಃಖಕರವಾದುದು ಯಾವುದು ?
ಉತ್ತರ - *ಕಾರ್ಪಣ್ಯಮ್*  ದಾರಿದ್ರ್ಯವು (ಬಡತನವು) ಕಷ್ಟಕರವಾದದ್ದು..
ಪ್ರಶ್ನೆ - ಕಃ ಪರಿಹರ್ಯೋ ದೇಶಃ ?       ಎಂತಹ ದೇಶದಿಂದ ದೂರ ಇರಬೇಕು ?
ಉತ್ತರ - *ಪಿಶುನಯುತೋ ಲುಬ್ಧಭೂಪಶ್ಚ*
ಕ್ರೂರರಾದ ಪ್ರಜೆಗಳುಳ್ಳ ಮತ್ತು ಲೋಭಿಯಾದ  ರಾಜನುಳ್ಳ ದೇಶವನ್ನು ತೊರೆಯಬೇಕು.
ಪ್ರಶ್ನೆ - ಇಹ ಭುವನೇ ಕೋ ಶೋಚ್ಯಃ ?  ವಿಶ್ವದಲ್ಲಿ ಸದಾ ದುಃಖದಲ್ಲಿರುವವನು ಯಾರು ?
ಉತ್ತರ - *ಸತ್ಯಪಿ ಭುವನೇ ಯೋ ನ ದಾತಾ*  ಸಂಪತ್ತಿದ್ದರೂ ದಾನಿಯಾಗಿರದವನೇ ದುಃಖಿ.
ಪ್ರಶ್ನೆ - ಕಿಮಹರ್ನಿಶಂ ಅನುಚಿಂತ್ಯಮ್ ?  ಹಗಲಿರುಳು (ಸದಾಕಾಲವೂ )ಯಾವುದನ್ನು ಕುರಿತು ಚಿಂತಿಸಬೇಕು ?
ಉತ್ತರ - *ಭಗವಚ್ಚರಣಮ್ ನ ಸಂಸಾರಃ*  ಹಗಲಿರುಳು ಪರಮಾತ್ಮನ ಚರಣದ ಚಿಂತೆ  ಮಾಡಬೇಕೇ ವಿನಃ ಸಂಸಾರವನ್ನಲ್ಲ .
ಪ್ರಶ್ನೆ - ಕಿಮ್ ಸಂಪಾದ್ಯಂ ಮನುಜೈಃ ?  ಮಾನವರು ಏನನ್ನು ಸಂಪಾದಿಸಬೇಕು ?
ಉತ್ತರ - *ವಿದ್ಯಾ , ವಿತ್ತಮ್ , ಬಲಂ , ಯಶಃ, ಪುಣ್ಯಮ್*  ಮಾನವರು ವಿದ್ಯೆ ,ಸಂಪತ್ತು ,ಬಲ ,ಕೀರ್ತ  ಮತ್ತು ಪುಣ್ಯಗಳನ್ನು ಸಂಪಾದಿಸಬೇಕು .
ಪ್ರಶ್ನೆ - ಕಃ ಸರ್ವಗುಣವಿನಾಶೀ ?  ಎಲ್ಲ  ಗುಣಗಳನ್ನು ನಾಶಪಡಿಸುವಂಥಹದು ಯಾವುದು ?
ಉತ್ತರ - *ಲೋಭಃ*  ಲೋಭವು ಸರ್ವ ಗುಣಗಳನ್ನು ನಾಶ ಪಡಿಸುವಂತಹದು.
ಪ್ರಶ್ನೆ - ಶತ್ರುಶ್ಚ ಕಃ ? ವೈರಿಯು ಯಾರು ?
ಉತ್ತರ - *ಕಾಮಃ* ಕಾಮವೇ ವೈರಿಯು .
ಪ್ರಶ್ನೆ - ಕಾ ಸುರಕ್ಷ್ಯಾ  ಸಂರಕ್ಷಿ ಸಲ್ಪಡತಕ್ಕಂಥಹದು ಯಾವುದು ?
ಉತ್ತರ - *ಕೀರ್ತಿಃ , ಪತಿವ್ರತಾ , ನೈಜಬುದ್ಧಿಶ್ಚ*  ಕೀರ್ತಿ ,ಪತಿವ್ರತೆ ಮತ್ತು ಸ್ವಂತ ಬುದ್ಧಿ (ಸ್ವಂತ   ವಿಚಾರ ಶಕ್ತಿ ) ಇವು ಸಂರಕ್ಷಿಸಲು ಅರ್ಹ .
ಪ್ರಶ್ನೆ - ಕಾ ಕಲ್ಪವೃಕ್ಷಃ ಲೋಕೇ ?  ಜಗತ್ತಿನ್ನಲ್ಲಿ ಕಲ್ಪವೃಕ್ಷ ಯಾವುದು ?  (ಬೇಡಿದ್ದನ್ನು ,ಬಯಸಿದ್ದನ್ನು ಕೊಡುವ ವೃಕ್ಷ)
ಉತ್ತರ - *ಸಚ್ಛಿಷ್ಯಾರ್ಪಿತ ವಿದ್ಯಾ*  ಒಳ್ಳೆಯ ಶಿಷ್ಯನಿಗೆ ಗುರುವು ನೀಡಿದ ವಿದ್ಯೆಯು  ಜಗತ್ತಿನಲ್ಲಿ ಕಲ್ಪವೃಕ್ಷವಾಗುತ್ತದೆ.
ಪ್ರಶ್ನೆ - ಪಾತಕಂ ಚ ಕಿಮ್ ?  ಪಾತಕವು ಯಾವುದು ?
ಉತ್ತರ - *ಹಿಂಸಾ*  ಹಿಂಸೆಯೇ(ಕ್ರೂರತೆ) ಪಾತಕವು.
ಪ್ರಶ್ನೆ - ಸಂಭಾವಿತಸ್ಯ ಮರಣಾತ್ ಅಧಿಕಂ ಕಿಮ್ ?  ಒಳ್ಳೆಯವನಿಗೆ ಸಾವಿಗಿಂತಲೂ  ಹೆಚ್ಚು ದುಃಖದಾಯಕ ಯಾವುದು ?
ಉತ್ತರ - *ದುರ್ಯಶೋ ಭವತಿ* ಅಪಕೀರ್ತಿಯು ಮರಣಕ್ಕಿಂತಲೂ  ಹೆಚ್ಚು ದುಃಖದಾಯಕ.
ಪ್ರಶ್ನೆ - ಕೋ ವರ್ಧತೇ ?  ಯಾರು ಪ್ರಗತಿ ಯನ್ನು ಹೊಂದುತ್ತಾರೆ ?
ಉತ್ತರ - *ವಿನೀತಃ*  ವಿನಮ್ರ ನಾದವನು (ವಿನಯಶಾಲಿಯು ) ಪ್ರಗತಿಯನ್ನು ಹೊಂದುತ್ತಾನೆ .
ಪ್ರಶ್ನೆ - ಕಿಮ್ ಭಾಗ್ಯಂ ದೇಹವತಾಮ್ ?  ದೇಹಿಗಳಿಗೆ (ಮನುಷ್ಯರಿಗೆ) ಭಾಗ್ಯವು ಯಾವುದು ?
ಉತ್ತರ - *ಆರೋಗ್ಯಮ್* ಆರೋಗ್ಯವೇ ಭಾಗ್ಯವು .
ಪ್ರಶ್ನೆ - ಕೋ ಜಗದ್ಭರ್ತಾ ? ಜಗತ್ತಿನ ಸಂರಕ್ಷಕನ್ಯಾರು ?
ಉತ್ತರ - *ಸೂರ್ಯಃ*  ಸೂರ್ಯ.
ಪ್ರಶ್ನೆ - ಸರ್ವೇಷಾಂ ಕೋ ಜೀವನಹೇತುಃ ?  ಎಲ್ಲರ ಬದುಕಿಗೆ ಕಾರಣನು ಯಾರು ?
ಉತ್ತರ - *ಸ ಪರ್ಜನ್ಯಃ*  ಪರ್ಜನ್ಯನು (ಮಳೆ ) ಎಲ್ಲರ ಬದುಕಿಗೆ ಕಾರಣನು .
ಪ್ರಶ್ನೆ - ಕಃ ಶೂರಃ ? ಶೂರನು ಯಾರು ?
ಉತ್ತರ - *ಯೋ ಭೀತತ್ರಾತಾ* ಭೀತನಾದವನನ್ನು ಕಾಪಾಡುವವನು ಶೂರನು .
ಪ್ರಶ್ನೆ - ತ್ರಾತಾ ಚ ಕಃ ? ಮತ್ತೆ ಕಾಪಾಡುವವನು ಯಾರು ?
ಉತ್ತರ - *ಸ ಗುರುಃ*  ಗುರುವೇ ಕಾಪಾಡುವವನು.
ಪ್ರಶ್ನೆ - ಪ್ರತ್ಯಕ್ಷದೇವತಾ ಕಾ ? ಪ್ರತ್ಯಕ್ಷ(ಸಾಕ್ಷಾತ್ ) ದೇವತೆ ಯಾರು ?
ಉತ್ತರ - *ಮಾತಾ*  ತಾಯಿಯೇ ಪ್ರತ್ಯಕ್ಷ ದೇವತೆಯು .
ಪ್ರಶ್ನೆ - ಪೂಜ್ಯೋ ಗುರುಶ್ಚ ಕಃ ?  ಪೂಜ್ಯ ಗುರುವು ಯಾರು ?
ಉತ್ತರ - *ತಾತಃ*  ತಂದೆಯೇ ಪೂಜ್ಯ ಗುರುವು .
ಪ್ರಶ್ನೆ - ಪಾತ್ರಂ ಕಿಮ್ ಅನ್ನದಾನೇ ? ಅನ್ನದಾನಕ್ಕೆ ಅರ್ಹನಾರು ?
ಉತ್ತರ - *ಕ್ಷುಧಿತಮ್*  ಹಸಿದವನು ಅನ್ನದಾನಕ್ಕೆ ಅರ್ಹನು .  *ಲೋಕಾಃ ಸಮಸ್ತಾಃ ಸುಖಿನೋ ಭವಂತು.*  ಜೀವನದಲ್ಲಿ ಇಷ್ಟು ಪ್ರಶ್ನೆಗಳಿಗೆ ಉತ್ತರ
ಕಂಡುಕೊಂಡರೆ ಸಾಕು..  ತತ್ವಜ್ಞಾನವನ್ನರಿಯಲು  ಇನ್ನ್ಯಾವ ಶಾಸ್ತ್ರ-ಪುರಾಣಗಳ ಅಗತ್ಯತೆಯಿಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ