ಮಂಗಳವಾರ, ನವೆಂಬರ್ 28, 2017

ಅಪಾಯಕರ ಕಾರಣಗಳು

 ಅಪಾಯಕರ ಕಾರಣಗಳು
1. ನೀರು ಸರಿಯಾಗಿ ಕುಡಿಯದಿರುವುದು
2. ಬೊಜ್ಜು-ಇವರಲ್ಲಿ ಯೂರಿಕ್ ಆಸಿಡ್ ಉಳ್ಳ ಕಲ್ಲು ಹೆಚ್ಚು.
3. ಕೆಲವು ಆಹಾರಗಳು: ಅತಿ ಹೆಚ್ಚು ಪ್ರೋಟೀನ್ ಸೇವನೆ (ವಿಶೇಷತಃ ಮಾಂಸಾಹಾರ), ಉಪ್ಪು ಅಥವಾ ಸೋಡಿಯಂ ಹೆಚ್ಚಿರುವ ಪದಾರ್ಥ, ಫ್ರಕ್ಟೋಸ್ ಹೆಚ್ಚಿರುವ ಪೇಯಗಳ ಸೇವನೆ, ಅತಿಹೆಚ್ಚು ಕಾಫಿ, ಚಹಾ ಸೇವನೆ, ಆಕ್ಸಲೇಟ್ಸ್ ಹೆಚ್ಚಿರುವ ಪಾಲಕ್ ಸೊಪ್ಪು, ರೂಬಾರ್ಬ್ ಮುಂತಾದ ಪದಾರ್ಥಗಳು, ಕೃತಕ ಸಿಹಿಕಾರಕಯುಕ್ತ ದ್ರವ್ಯಗಳು, ಪ್ಯೂರಿನ್ ಹೆಚ್ಚಿರುವ ಪದಾರ್ಥಗಳು,
ಉದಾ: ಮೀನು, ಮಾಂಸ, ಸೋಡಾ, ಕೋಲ ಮುಂತಾದ ದ್ರವ್ಯಗಳು, ಅತಿ ಹೆಚ್ಚು ಕ್ಯಾಲ್ಸಿಯಂ ಅಥವಾ ಕ್ಯಾಲ್ಸಿಯಂ ಇರುವ ಆಹಾರ ಸೇವನೆ ಉದಾ: ಹಾಲು, ಪನ್ನೀರು, ಚೀಸ್ ಇತ್ಯಾದಿಗಳು, ಚಿಪ್ಸ್ ಮುಂತಾದ ಸಂಸ್ಕರಿಸಿದ ಪದಾರ್ಥಗಳು, ಮದ್ಯಪಾನ ಇತ್ಯಾದಿ.
4. ಕೆಲವು ಔಷಧಿಗಳು: ಅತಿ ಹೆಚ್ಚು ಕ್ಯಾಲ್ಸಿಯಂ, ವಿಟಮಿನ್ ‘ಡಿ’ ಸೇವನೆ, ವಿಟಮಿನ್ ‘ಸಿ’ ಹೆಚ್ಚಿನ ಸೇವನೆ.
5. ಕೆಲವು ರೋಗಗಳು: ಹೈಪರ್ ಪ್ಯಾರಾಥೈರಾಯಿಡ್, ಮೂತ್ರವಹ ಡಿಸ್ಟಲ್ ಆಸಿಡೋಸಿಸ್, ದೊಡ್ಡ ಕರುಳಿನ ಹುಣ್ಣು, ಕ್ರಾನ್ಸ್ ರೋಗ, ಇತ್ಯಾದಿ.
ಲಿಂಬೆ, ಕಿತ್ತಲೆ ಮತ್ತು ತರಕಾರಿಗಳಲ್ಲಿ ಹೆಚ್ಚಿರುವ ಸಿಟ್ರೇಟ್ ಅಂಶ ಕಡಿಮೆಯಾದಾಗ ಕಲ್ಲು ಕಾಣಿಸಿಕೊಳ್ಳುವುದು. ಅಂತೆಯೇ ಸೋಡಿಯಂ ಹೆಚ್ಚಿ, ಪೊಟಾಶಿಯಂ ಕಡಿಮೆಯಾದಾಗಲೂ ಕಲ್ಲುಂಟಾಗುತ್ತದೆ. ಹೀಗಾಗಿ ಒಮ್ಮೆ ಮೂತ್ರದಲ್ಲಿ ಕಲ್ಲು ಕಂಡ ನಂತರ ಇದು ಮತ್ತೆ ಮತ್ತೆ ಬಾರದಂತೆ ನೋಡಿಕೊಳ್ಳಲು ಆಹಾರದಲ್ಲಿ ಗಮನ ವಹಿಸಬೇಕಾಗುವುದು ಬಹಳ ಮುಖ್ಈ ಕಲ್ಲುಗಳನ್ನು ಮೂತ್ರವಹ ಸ್ರೋತಸ್ಸಿನಲ್ಲಿ ಇರುವ ಜಾಗದ ಆಧಾರದ ಮೇಲೆ ಅಥವಾ ಅದರ ರಾಸಾಯನಿಕ ಸಂಯೋಜನೆಯ ಮೇಲೆ ವಿಂಗಡಿಸುತ್ತಾರೆ. ಮೂಲಭೂತವಾಗಿ ಎಲ್ಲ ಕಲ್ಲುಗಳೂ ಕ್ಯಾಲ್ಸಿಯಂನಿಂದ ಕೂಡಿರುತ್ತದೆ. ಅವುಗಳಲ್ಲಿ ಸಾಮಾನ್ಯವಾಗಿ ಬರುವ ಕಲ್ಲು ಅಂದರೆ 80% ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲಿರುತ್ತದೆ. ಇದು ದೊರಗಾಗಿದ್ದು ಹರಿಯುವಾಗ ಅತೀವ ನೋವು, ಉರಿಯನ್ನು ತಂದೊಡ್ಡುತ್ತದೆ.
ಹಾಗಾಗಿ 3-6 ಮಿಲಿಮೀಟರ್ ಇರುವಾಗಲೇ ಲಕ್ಷಣ ತೋರಿಸುತ್ತದೆ. ಇದನ್ನು ಔಷಧಿಗಳಿಂದ ಗುಣಪಡಿಸಬಹುದು. ಆದರೆ ಯೂರಿಕ್ ಆಸಿಡ್ ಹೆಚ್ಚಿ ಉಂಟಾಗಿರುವ ಕಲ್ಲು ಬಹಳ ದೊಡ್ಡ ಗಾತ್ರವಾಗುವವರೆಗೂ ಅರಿವಿಗೆ ಬರುವುದು ಕಮ್ಮಿ. ಏಕೆಂದರೆ ಇದರ ರಚನೆ ನುಣುಪಾಗಿರುತ್ತದೆ ಮತ್ತು ಹೆಚ್ಚಾಗಿ ಜಾಗ ಹೆಚ್ಚಿರುವ ಸ್ಥಳದಲ್ಲಿ ಸದ್ದಿಲ್ಲದೇ ಬೆಳೆಯುತ್ತದೆ. ಇದು ಹೆಚ್ಚಾಗಿ ಔಷಧಿಗೆ ಬಗ್ಗದು.
ಶಸ್ತ್ರ ಚಿಕಿತ್ಸೆ ಬೇಕಾಗಿ ಬರುತ್ತದೆ. ಇದು 5-10% ಜನರಲ್ಲಿ ಮಾತ್ರ ಕಾಣುತ್ತದೆ. ಇದು ಸಾಧಾರಣವಾಗಿ ಸ್ಥೂಲಕಾಯರಲ್ಲಿ ಕಾಣುವುದು. ಮತ್ತು ಮೂತ್ರ ಅತಿ ಹೆಚ್ಚು ಆಮ್ಲೀಯವಾದಾಗ ಕಂಡು ಬರುತ್ತದೆ. ಇದನ್ನು ಕ್ಷ-ಕಿರಣದಿಂದ ಪತ್ತೆ ಹಚ್ಚಬಹುದು. ಇನ್ನು ಕೆಲವು (ಸ್ಟ್ರುವೈಟ್, ಸಿಸ್ಟೀನ್) ಕಲ್ಲುಗಳು ಕಿಡ್ನಿಯಲ್ಲಿನ ಸೋಂಕಿನಿಂದ ತಲೆದೋರುತ್ತವೆ.
ಚಿಕಿತ್ಸೆ: ಕಲ್ಲನ್ನು ಹೊರಹಾಕುವುದರೊಂದಿಗೆ ಮತ್ತೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಹೇರಳ ನೀರಿನೊಂದಿಗೆ ಮೂತ್ರ ಹೆಚ್ಚಿಸುವ ಔಷಧಿಗಳನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಇದರೊಂದಿಗೆ ಕಲ್ಲು ಹೊರಹೋಗುವಾಗ ಆಗಬಹುದಾದ ನೋವಿಗೆ ಶಾಮಕ ಔಷಧಿಗಳನ್ನು ಸೇರಿಸಬಹುದು. 6 ಮಿಲಿಮೀಟರಿಗಿಂತ ಚಿಕ್ಕ ಕಲ್ಲು ಹರಿದು ಬರುತ್ತದೆ.ಬರುವಾಗ ರಕ್ತ ಮೂತ್ರ, ಉರಿಮೂತ್ರ, ಬೆನ್ನು, ಪಕ್ಕೆ ಅಥವಾ ಕೆಳಹೊಟ್ಟೆಯಲ್ಲಿ ಅತೀವ ನೋವು ಕಾಣಿಸಬಹುದು. ಈ ಚಿಕಿತ್ಸೆಯ ಸಮಯ ಆದಷ್ಟು ಮಲಗಿರುವುದು ಉತ್ತಮ.
ಮಲಗಿದ ನಿಲುವಿನಲ್ಲಿ ಮೂತ್ರೋತ್ಪತ್ತಿ ಹೆಚ್ಚಿರುತ್ತದೆ. ಆಯುರ್ವೇದದಲ್ಲಿ ಇದೇ ಕಾರ್ಯ ಮಾಡುವಂತಹ ಹಾಗೂ ಕಲ್ಲನ್ನು ಕರಗಿಸಿ, ಹರಳಾಗಿಸಿ ಹೊರಹಾಕುವಂಥ ಅನೇಕ ಔಷಧಿಗಳಿವೆ. ಉದಾ: ಚಂದ್ರಪ್ರಭಾ, ಗೋಕ್ಷುರಾದಿ ಕಷಾಯ, ಬ್ರಹತ್ಯಾದಿ ಕಷಾಯ, ಪುನರ್ನವಾದಿ ಕಷಾಯ, ಪುನರ್ನವಾಸವ ಇತ್ಯಾದಿ.
ಇದರೊಂದಿಗೆ ಹೇರಳ ನೀರು, ಎಳನೀರು ಅತ್ಯಗತ್ಯ. ದೊಡ್ಡ ಕಲ್ಲುಗಳಿಗೆ ಲಿಥೋಟ್ರಿಪ್ಸಿ ಮುಂತಾದ ಚಿಕಿತ್ಸೆಯ ಮೊರೆ ಹೋಗಬೇಕಾಗುತ್ತದೆ. ತದನಂತರವೂ ಬಾರದಂತೆ ತಡೆಗಟ್ಟಲು ಆಯುರ್ವೇದೀಯ ಔಷಧಿಗಳು, ಆಹಾರದಲ್ಲಿ ಜಾಗ್ರತೆ ಮುಖ್ಯ.  
ಆಹಾರದಲ್ಲಿ ಈ ಕ್ರಮವಿರಲಿ
ಮೂತ್ರದ ಕಲ್ಲಿನಲ್ಲಿ, ಚಿಕಿತ್ಸೆಯೊಂದಿಗೆ ಆಹಾರದ ಪಾತ್ರ ಬಹಳ ಮಹತ್ವದ್ದು. ಇದರಿಂದ ಮುಂದೆ ಈ ತೊಂದರೆ ತಲೆದೋರದಂತೆಯೂ ನೋಡಿಕೊಳ್ಳಬಹುದು. ಆಹಾರದಲ್ಲಿ ಈ ಕೆಳಗಿನ ಅಂಶವನ್ನು ಪಾಲಿಸುವುದು ಅತ್ಯಗತ್ಯ.
*ದಿನಕ್ಕೆ ಮೂರು ಲೀಟರಿನಷ್ಟು ನೀರು ಕುಡಿಯುವುದು.
*ಸಿಟ್ರಿಕ್ ಆಮ್ಲ ಇರುವ ಆಹಾರವನ್ನು ಹೇರಳವಾಗಿ ಸೇವಿಸುವುದು. ಉದಾ: ಲಿಂಬೆ ಹಣ್ಣು, ಮೂಸಂಬಿ, ಕಿತ್ತಲೆ.
*ಮಾಂಸಾಹಾರವನ್ನು ಬಹಳ ಮಿತಗೊಳಿಸುವುದು.
*ಕಾಫಿ, ಚಹಾ, ಹಸಿರು ಚಹಾ, ಸೋಡಾ, ಮದ್ಯಪಾನದ ಸೇವನೆ ಬೇಡ.
*ಆಹಾರದಲ್ಲಿ ಉಪ್ಪಿನಂಶವನ್ನು ಕಮ್ಮಿ ಮಾಡಬೇಕು.
*ಆಕ್ಸಲೇಟ್ ಹೆಚ್ಚಿರುವ ಆಹಾರಗಳು ಮಿತವಾಗಿರಲಿ. ಉದಾ: ಬೀಟ್ರೂಟ್, ಸ್ಟ್ರಾಬೆರಿ, ಸೆಲೆರಿ, ಚಾಕೋಲೇಟ್ ಇತ್ಯಾದಿ.
*ಹೆಚ್ಚಿನ ಹಣ್ಣು ತರಕಾರಿಗಳಲ್ಲಿ ಪೊಟಾಶಿಯಂ ಅಂಶ ಹೆಚ್ಚಿರುತ್ತದೆ. ಅವುಗಳ ಬಳಕೆ ಯಥೇಚ್ಛವಾಗಿರಲಿ. ಉದಾ: ಎಳನೀರು, ಪೈನಾಪಲ್, ಬಾಳೆಹಣ್ಣು, ಕರ್ಬೂಜ, ಕಲ್ಲಂಗಡಿ, ಒಣದ್ರಾಕ್ಷಿ ಇತ್ಯಾದಿ.
*ಪಾಲಕ್, ದಂಟಿನ ಸೊಪ್ಪು, ಹುಳಿಸೊಪ್ಪು, ಇತ್ಯಾದಿಗಳ ಬಳಕೆ ಬೇಡ.
*ಕ್ಯಾಲ್ಸಿಯಂ ಗುಳಿಗೆ ನಿಲ್ಲಿಸಿ. ಅಲ್ಲದೇ ವಿಟಮಿನ್ ‘ಸಿ’ ಗುಳಿಗೆಯೂ ಹೆಚ್ಚು ಬೇಡ.
*ಎಳನೀರು ಚೆನ್ನಾಗಿ ಕುಡಿಯಿರಿ.
*ಬಾಳೆದಿಂಡಿನ ರಸ ಉಪಯುಕ್ತ.
*ಪ್ಯುರಿನ್ ಮತ್ತು ಯುರಿಕ್ ಆಸಿಡ್ ಹೆಚ್ಚಿರುವ ಅಣಬೆ, ಪಾಲಕ್ ಸೊಪ್ಪು, ಹೂಕೋಸು, ಬ್ರೊಕೊಲಿ, ಮೀನು, ಮಾಂಸ ಇತ್ಯಾದಿಗಳು ಒಳ್ಳೆಯದಲ್ಲ.
*ಬಾರ್ಲಿ ನೀರು, ಹುರುಳಿ ಬೀಜವನ್ನು ಬೇಯಿಸಿದ ನೀರು ಒಳ್ಳೆಯದು.
ಬೇಸಿಗೆಯ ಬವಣೆಯಲ್ಲಿ ಒಂದಾದ ಮೂತ್ರದಲ್ಲಿನ ಕಲ್ಲಿನ ಬಗ್ಗೆ ಸರಿಯಾಗಿ ತಿಳಿದು ಕೊಂಡು ಸಮರ್ಪಕ ಆಹಾರ ಸೇವಿಸಿದಲ್ಲಿ ಈ ತೊಂದರೆಯಿಂದ ದೂರವಿರಲು ಸಾಧ್ಯವಿದೆ.
*ಸುಖ ಜೀವನಕ್ಕೆ 35 ಆರೋಗ್ಯ ಸೂತ್ರಗಳು...*                                                    ‌     ‌                                 ‌   ‌  ‌   ‌
 ಸಂಪೂರ್ಣವಾಗಿ ಆರೋಗ್ಯಕರವಾದ ಜೀವನವನ್ನು ಹೊಂದ ಬಯಸುವವರು ಈ ಕೆಳಗೆ ತಿಳಿಸಲಾದ 35 ಸೂತ್ರಗಳನ್ನು ಪಾಲಿಸಿ. ಇಂದಿನ ಪೀಳಿಗೆಯ ಜನಾಂಗ ಇದನ್ನು ಮರೆತಿರಬಹುದು. ಅದಕ್ಕೇ ನಿಮಗೆ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ‌     ‌    ‌                                                                   
1. ಬೆಳಿಗ್ಗೆ 4.30 ಕ್ಕೆ ನಿದ್ದೆಯಿಂದ ಏಳಬೇಕು.
2. ನಿದ್ದೆಯಿಂದ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು.
3. ಐಸ್ ಕ್ರೀಂ ತಿನ್ನಲೇ ಬಾರದು.
4. ಫ್ರಿಡ್ಜ್ ನಿಂದ ಹೊರತೆಗೆದ ಆಹಾರ ಪದಾರ್ಥಗಳನ್ನು, ಒಂದು ಗಂಟೆಯ ನಂತರ ಉಪಯೋಗಿಸಬೇಕು.
5. ತಂಪು ಪಾನೀಯವನ್ನು ಸೇವಿಸಲೇ ಬಾರದು.
6. ಮಾಡಿದ ಅಡುಗೆ ಬಿಸಿಯಾಗಿರುವಾಗಲೇ 40 ನಿಮಿಷಗಳ ಒಳಗೆ ತಿನ್ನಬೇಕು.
7.ಊಟವಾದ ನಂತರ 5-10 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.
8. ಬೆಳಿಗ್ಗೆ 8.30 ರ ಒಳಗೆ ಉಪಹಾರವನ್ನು ಸೇವಿಸಬೇಕು.
9. ಬೆಳಗಿನ ಉಪಹಾರದೊಂದಿಗೆ ಹಣ್ಣಿನ ರಸವನ್ನು ಕುಡಿಯಬೇಕು.        
10. ಉಪಹಾರದ ನಂತರ ತಪ್ಪದೇ ಕೆಲಸ ಮಾಡಬೇಕು.
11.ಮಧ್ಯಾನ್ಹದ ಒಳಗೆ 2-3 ಲೋಟ ನೀರು ಕುಡಿಯಬೇಕು.
12. ಊಟ ಮಾಡುವ 48 ನಿಮಿಷಗಳ ಮೊದಲು ನೀರು ಸೇವಿಸಬೇಕು.
13. ಕುಳಿತುಕೊಂಡು ಊಟ ಮಾಡಬೇಕು.
14.ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು.
15. ಮಧ್ಯಾನ್ಹದ ಸಾಂಬಾರಿನಲ್ಲಿ ಓಮ ಪುಡಿಯನ್ನು ಉಪಯೋಗಿಸಬೇಕು.
16. ಮಧ್ಯಾನ್ಹ ಹೊಟ್ಟೆ ತುಂಬಾ ಊಟ ಮಾಡಬೇಕು.
17. ಮಧ್ಯಾನ್ಹದ ಊಟದ ನಂತರ ಮಜ್ಜಿಗೆ ಸೇವಿಸಬೇಕು.
18. ಊಟದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು.
19. ಸೂರ್ಯ ಮುಳುಗುವುದಕ್ಕೆ ಮುಂಚೆಯೇ ಊಟ ಮಾಡಬೇಕು.
20. ರಾತ್ರಿಯ ವೇಳೆ ಮಿತವಾಗಿ ಊಟಮಾಡಬೇಕು.
21.ರಾತ್ರಿ ಊಟದ ನಂತರ ಒಂದು ಕಿ.ಮೀ ದೂರ ನಡೆಯಬೇಕು.
22. ರಾತ್ರಿ ಊಟವಾದ ಒಂದು ಗಂಟೆಯ ನಂತರ ಹಾಲು ಕುಡಿಯಬೇಕು.
23. ರಾತ್ರಿ ವೇಳೆ ಲಸ್ಸಿ, ಮಜ್ಜಿಗೆ ಕುಡಿಯಬಾರದು.
24. ರಾತ್ರಿಯ ವೇಳೆ ಹುಳಿ ಹಣ್ಣುಗಳನ್ನು ತಿನ್ನಬಾರದು.
25. ರಾತ್ರಿ 9-10 ಗಂಟೆಯೊಳಗೆ ಮಲಗಬೇಕು.
26. ಸಕ್ಕರೆ, ಮೈದಾ, ಉಪ್ಪು ಕಡಿಮೆ ಉಪಯೋಗಿಸಬೇಕು.
27. ರಾತ್ರಿ ಸಲಾಡ್ ತಿನ್ನಬಾರದು.
28. ವಿದೇಶಿ ಆಹಾರ ಪದಾರ್ಥಗಳನ್ನು ತಿನ್ನಲೇ ಬಾರದು.
29. ಟೀ,ಕಾಫೀ ಕುಡಿಯದಿರಲು ಪ್ರಯತ್ನಿಸಿ.
30. ಹಾಲಿಗೆ ಅರಶಿನ ಬೆರೆಸಿ ಕುಡಿದರೆ, ಕ್ಯಾನ್ಸರ್ ಬರುವುದಿಲ್ಲ.
31. ಆಯುರ್ವೇದ ಚಿಕಿತ್ಸಾ ಪದ್ದತಿ ಒಳ್ಳೆಯದು.
32. ಅಕ್ಟೋಬರ್ ನಿಂದ ಮಾರ್ಚ್ (ಚಳಿಗಾಲ) ಬೆಳ್ಳಿ, ಬಂಗಾರದ ಪಾತ್ರೆಯಲ್ಲಿ ನೀರು ಕುಡಿಯಬೇಕು.
33. ಜೂನ್ ನಿಂದ ಸೆಪ್ಟೆಂಬರ್( ಮಳೆಗಾಲ)ತಿಂಗಳಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬೇಕು.
34. ಮಾರ್ಚ್ ನಿಂದ ಜೂನ್ ( ಬೇಸಿಗೆ ಕಾಲ) ಮಣ್ಣಿನ ಪ್ರಾತ್ರೆಯಲ್ಲಿರಿಸಿದ ನೀರನ್ನು ಕುಡಿಯಬೇಕು.
35. ಊಟ ಮಾಡುವಾಗ ನೀರು ಕುಡಿಯ ಬಾರದು. ಅವಶ್ಯವಿದ್ದಾಗ ಮಾತ್ರ ನೀರು ಕುಡಿಯಬೇಕು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ