*ಸಂಸತ್ತೆಂಬ “ಪ್ರಜಾಪ್ರಭುತ್ವ”ದ ದೇಗುಲದಲ್ಲಿ ಅಡಕವಾಗಿರುವ ಹಿಂದೂ ಮೌಲ್ಯಗಳ ಬಗ್ಗೆ ನಿಮಗೆ ಗೊತ್ತೇ?*
ಹೌದು, ಪ್ರಜಾಪ್ರಭುತ್ವದ ದೇವಸ್ಥಾನ(‘temple of democracy’) ಎಂದು ಕರೆಸಿಕೊಳ್ಳುವ ದೆಹಲಿಯ ಸಂಸತ್ತಿನಲ್ಲಿಯೂ ಹಿಂದುತ್ವದ ಕಂಪು ಎಲ್ಲೆಲ್ಲೂ ಕಾಣಸಿಗುತ್ತದೆ. ಲೋಕಸಭೆಯ ಸಭಾಪತಿಯ ಸ್ಥಾನವೆನ್ನುವುದು ಅತ್ಯಂತ ಗೌರವಾರ್ಹವಾದ ಉನ್ನತ ಸ್ಥಾನ. ಅವರ ಆಸನದ ಮೇಲ್ಗಡೆ ಬರೆದಿರುವುದು ’ಧರ್ಮಚಕ್ರ ಪ್ರವರ್ತನಾಯ’ (ಧರ್ಮದ ಚಕ್ರವನ್ನು ತಿರುಗಿಸುವುದಕ್ಕಾಗಿ). ನಮ್ಮ ಪ್ರಾಚೀನ ಭಾರತದ ರಾಜರೂ ಧರ್ಮದ ಚಕ್ರ ಸದಾ ತಿರುಗುತ್ತಿರುವಂತೆ ಅಂದರೆ ಧರ್ಮ ಸ್ಥಾಪಿಸಿ ಅಂದರೆ ಒಳ್ಳೆಯ ಆಡಳಿತ ನೀಡಲು ಪ್ರಯತ್ನಿಸುವುದೇ ತಮ್ಮ ಕರ್ತವ್ಯ ಎಂದು ಭಾವಿಸಿದ್ದರು.
ಸ್ವತಂತ್ರಭಾರತದ ನಿರ್ಮಾತೃಗಳೂ(creators) ಅದೇ ದಾರಿಯಲ್ಲಿ ನಮ್ಮ ಸರ್ಕಾರಗಳು ಮುನ್ನಡೆಯಬೇಕೆಂದು ಆಶಿಸಿದ್ದರು. ಅದಕ್ಕೇ, ನಮ್ಮ ಧ್ವಜದಲ್ಲೂ, ಸಂಸತ್ತಿನಲ್ಲೂ ಧರ್ಮಚಕ್ರಕ್ಕೆ ಸ್ಥಾನ ನೀಡಿದರು.
ಸಂಸತ್ ಭವನದಲ್ಲೂ ಹಿಂದು ಮೌಲ್ಯಗಳನ್ನು ನೆನಪಿಸುವ ಬರಹಗಳು ಅನೇಕ ಕಡೆಗಳಲ್ಲಿ ಕಾಣಸಿಗುತ್ತವೆ:
ಒಂದನೇ ದ್ವಾರದಲ್ಲಿ
ಲೋಕ ದ್ವಾರಮಪಾತ್ರಾರ್ಣೂ ಪಶ್ಯೇಮ ತ್ವಾಂ ವಯಂ ವೇರಾ (ಛಾಂದೋಗ್ಯ ಉಪನಿಷತ್ತಿನಿಂದ ಆರಿಸಿಕೊಂಡದ್ದು)
ಅರ್ಥ: ಜನರ ಕಲ್ಯಾಣಕ್ಕಾಗಿ ಮತ್ತು ಅವರಿಗೆ ಸಾರ್ವಭೌಮತೆಯ ಹಾದಿಯನ್ನು ತೋರಿಸುವುದಕ್ಕಾಗಿ ಬಾಗಿಲು ತೆರೆ.
2. ಕೇಂದ್ರ ಸಭಾಭವನದ ದ್ವಾರದಲ್ಲಿ:
ಅಯಂ ನಿಜಃ ಪರೋವೇತಿ ಗಣನಾ ಲಘುಚೇತಸಾಂ
ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್॥ (ಪಂಚತಂತ್ರದಿಂದ ಆರಿಸಿಕೊಂಡದ್ದು)
ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್॥ (ಪಂಚತಂತ್ರದಿಂದ ಆರಿಸಿಕೊಂಡದ್ದು)
ಅರ್ಥ: ನಾನು, ಅವರು ಎಂದೆಲ್ಲ ಯೋಚಿಸುವುವವರದ್ದು ಸಂಕುಚಿತ ಮನಸ್ಸು. ಇಡೀ ಪ್ರಪಂಚವೇ ನಮ್ಮ ಕುಟುಂಬ ಎಂದು ಯೋಚಿಸುವುದು ಉದಾರ ಮನಸ್ಸಿನವರ ಲಕ್ಷಣ.
3. ಒಂದನೇ ಲಿಫ್ಟ್ನ ಬಳಿಯ ಗುಮ್ಮಟದಲ್ಲಿ:
ನ ಸಾ ಸಭಾ ಯತ್ರ ನ ಸಂತಿ ವೃದ್ಧಾಃವೃ
ದ್ಧಾಃ ನ ತೇ ಯೋ ನ ವದಂತಿ ಧರ್ಮಂ
ಧರ್ಮಃ ಸ ನೋ ಯತ್ರ ನ ಸತ್ಯಮಸ್ತಿ
ಸತ್ಯಂ ನ ತದ್ಯಚ್ಛಲಮಭ್ಯುಪೈತಿ ॥ (ಮಹಾಭಾರತದಿಂದ ಆರಿಸಿಕೊಂಡದ್ದು)
ಅರ್ಥ: ವೃದ್ಧರಿಲ್ಲದ ಸಭೆ ಒಂದು ಸಭೆಯೇ ಅಲ್ಲ. ಧರ್ಮದ ಅನುಸಾರ ಮಾತನಾಡದ ವೃದ್ಧರು ವೃದ್ಧರೇ ಅಲ್ಲ. ಸತ್ಯವಿಲ್ಲದ ಧರ್ಮ ಧರ್ಮವೆನಿಸಲು ಸಾಧ್ಯವಿಲ್ಲ. ಮೋಸ ಮತ್ತು ಕಾಪಟ್ಯವಿದ್ದಲ್ಲಿ ಅದು ಸತ್ಯವೆನಿಸಿಕೊಳ್ಳಲು ಸಾಧ್ಯವಿಲ್ಲ.
4. ಎರಡನೇ ಲಿಫ್ಟಿನ ಬಳಿಯ ಗುಮ್ಮಟದಲ್ಲಿ:
ಸಭಾ ವಾ ನ ಪ್ರವೇಷ್ಟಯ ವಕ್ತವ್ಯಂ ವಾ ಸಮಂಜಸಂ
ಅಬ್ರುವನ್ವಿಬ್ರುವನ್ವಾಪಿ ನರೋ ಭವತಿ ಕಿಲ್ವಿಷಿ ॥ (ಮನುಸ್ಮೃತಿಯಿಂದ ಆರಿಸಿಕೊಂಡದ್ದು)
ಅಬ್ರುವನ್ವಿಬ್ರುವನ್ವಾಪಿ ನರೋ ಭವತಿ ಕಿಲ್ವಿಷಿ ॥ (ಮನುಸ್ಮೃತಿಯಿಂದ ಆರಿಸಿಕೊಂಡದ್ದು)
ಅರ್ಥ: ಒಂದೋ ಸಭೆಯನ್ನು ಪ್ರವೇಶಿಸಬೇಡ ಅಥವಾ ಸಭೆಯಲ್ಲಿದ್ದ ಮೇಲೆ ಧರ್ಮದ ಅನುಸಾರವೇ ಮಾತನಾಡು. ಮಾತನಾಡದಿರುವುದು ಮತ್ತು ಅಧರ್ಮವನ್ನು ಮಾತನಾಡುವುದು ಎರಡೂ ಪಾಪಕಾರ್ಯಗಳೇ.
ನಮ್ಮ ಆಡಳಿತ ಮತ್ತು ಕಾನೂನು ವ್ಯವಸ್ಥೆಯ ಮೇಲೆ ಹಿಂದೂ ಪರಂಪರೆ ಮತ್ತು ಮೌಲ್ಯಗಳ ಪ್ರಭಾವವಿರುವುದು ಹಲವು ಸಂಸ್ಥೆಗಳು ಅಂಗೀಕರಿಸಿರುವ ತಮ್ಮ ಪರಮೋಚ್ಚ ಧ್ಯೇಯವನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ.
1.ಭಾರತ ಸರ್ಕಾರ: ಸತ್ಯಮೇವ ಜಯತೇ
2.ಲೋಕಸಭೆ: ಧರ್ಮಚಕ್ರ ಪ್ರವರ್ತನಾಯ
3.ಸರ್ವೋಚ್ಚ ನ್ಯಾಯಾಲಯ: ಯತೋ ಧರ್ಮಸ್ತತೋ ಜಯಃ
4.ಆಲ್ ಇಂಡಿಯಾ ರೇಡಿಯೋ: ಬಹುಜನಹಿತಾಯ
5.ದೂರದರ್ಶನ: ಸತ್ಯಂ ಶಿವಂ ಸುಂದರಂ
6.ಭಾರತೀಯ ಭೂಸೇನೆ: ಸೇವಾ ಅಸ್ಮಾಕಂ ಧರ್ಮಃ
7.ಭಾರತೀಯ ನೌಕಾಸೇನೆ: ಶಂ ನೋ ವರುಣಃ
8.ಭಾರತೀಯ ವಾಯುಸೇನೆ: ನಭಃ ಸ್ಪೃಶಂ ದೀಪ್ತಂ
9.ದೆಹಲಿ ವಿಶ್ವವಿದ್ಯಾಲಯ: ನಿಷ್ಠ ಧೃತಿ ಸತ್ಯಂ
10.ಭಾರತೀಯ ಜೀವವಿಮಾ ನಿಗಮ: ಯೋಗಕ್ಷೇಮಂ ವಹಾಮ್ಯಹಂ
ಈ ಧ್ಯೇಯವಾಕ್ಯಗಳಾವುವು ಯಾವುದೇ ಮತದ ಸಿದ್ಧಾಂತಗಳನ್ನು ಹೇಳುವಂಥವಲ್ಲ. ಅವು ಜೀವನ ಮೌಲ್ಯಗಳು. ಮಾನವ ಧರ್ಮವನ್ನು ಬೋಧಿಸುವ ನಮ್ಮ ಪ್ರಾಚೀನ ಪರಂಪರೆಯಿಂದ ಬಂದವುಗಳಾಗಿವೆ. ಈ ಹಿಂದೂ ಜೀವನ ಮೌಲ್ಯಗಳು ಪ್ರಜಾಪ್ರಭುತ್ವಾಧಾರಿತವಾದ ನಮ್ಮ ರಾಜ್ಯವ್ಯವಸ್ಥೆಯ ಸುಭದ್ರ ಭವಿಷ್ಯಕ್ಕೆ ಅಗತ್ಯವೆಂದು ನಮ್ಮ ಆಧುನಿಕ ಭಾರತದ ನಿರ್ಮಾತೃಗಳು(creators) ಭಾವಿಸಿದ್ದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ