ಮಂಗಳವಾರ, ನವೆಂಬರ್ 28, 2017

*ಕೃಷ್ಣ ಏಕೆ ಮಣ್ಣು ತಿಂದ?*

|| *ಕೃಷ್ಣ ಏಕೆ ಮಣ್ಣು ತಿಂದ?*  ||

೧.ಮಣ್ಣನ್ನು ಬಹಳ ಇಷ್ಟಪಡುವವ.
ನಾವು ಒಂದು ಕೊಟ್ಟರೆ ಮಣ್ಣು (ಭೂಮಿ) ಅದನ್ನು ನೂರು ಪಟ್ಟು ಸಹಸ್ರಪಟ್ಟು ಮಾಡಿ ನಮಗೆ ನೀಡುತ್ತದೆ.ಇದು ಮಣ್ಣನಲ್ಲಿರುವ ಮತ್ತೊಂದು ಗುಣ. ಅರ್ಥಾತ್ ಮಣ್ಣನಲ್ಲಿ ದೇವರು ಇಟ್ಟಿರುವ ಮತ್ತೊಂದು ಗುಣ. ಭೂಮಿಯಲ್ಲಿ ಒಂದು ಭೀಜವನ್ನು ಬಿತ್ತಿದರೆ, ಸಹಸ್ರಾರು ಬೀಜಗಳಿಂದ ಕೂಡಿದ ನೂರಾರು ಫಲಗಳನ್ನು ನೀಡುವ ದೊಡ್ಡ ವೃಕ್ಷವನ್ನೇ ನೀಡುತ್ತದೆ ಒಂದು ಭತ್ತವನ್ನು ಬಿತ್ತಿದರೆ ಅನೇಕಾನೇಕ ಭತ್ತ ಗಳಿಂದ ಕೂಡಿದ ಭತ್ತದ ಬೆಳೆ ಯನ್ನೇ ನೀಡುತ್ತದೆ ಭೂಮಿ.
ಒಂದಕ್ಕೆ ಒಂದೇ ಆದರೆ ಗತಿಯೇನು?
ಆದರೆ ಯೋಚಿಸಿ! ಒಂದಕ್ಕೆ ಒಂದೇ ಕೊಡುವ ಎಂದಾಗಿದ್ದರೆ!  ಭೂಮಿಯಲ್ಲಿ ಒಂದು ಬೀಜ ಬಿತ್ತಿ ದಾಗ ಪುನಃ ನಮಗೆ ಒಂದೇ ಬೀಜ ಕೊಡುವುದಾಗಿದ್ದರೆ, ಭೂಮಿಯಲ್ಲಿ ಬೀಜ ಬಿತ್ತಲು ಯಾರು ಪ್ರವೃತ್ತರಾಗುತ್ತಾರೆ? ಜೊತೆಗೆ, ಬಿತ್ತವುದು ಸಾಧ್ಯವೆ? ಎಂಬ ಪ್ರಶ್ನೆ ಬರುತ್ತದೆ.ಬೆಳಕು ದದ್ದನ್ನು ಪುನಃ ಬಿತ್ತವುದೇ ಆಗಿದ್ದರೆ ತಿನ್ನವುದಕ್ಕೆ ಏನು ಉಳಿಯುತ್ತದೆ? ಒಂದು ಭತ್ತಕ್ಕೆ ಒಂದೇ ಭತ್ತ, ಒಂದು ಬೇಳಗೆ ಒಂದೇ ಬೇಳೆ ಎಂದಾಗಿದ್ದರೆ ಗತಿ ಏನು?
 ಆದರೆ ಹಾಗಾಗಿದಯೇ? ನಾವು ಒಂದು ಭತ್ತ ಬಿತ್ತಿದರೆ ನಮಗೆ ಸಿಗುವ ಭತ್ತಗಳು ಎಷ್ಟು? ನಾವು ಜೋಳ ಬಿತ್ತಿದಾಗ ನಮಗೆ ಸಿಗುವ ಜೋಳದ ರಾಶಿ ಎಷ್ಟು? ನೂರಾರು ಸಾವಿರಾರು ಧಾನ್ಯಗಳು ಸಿಗುತ್ತವೆ.ನಮಗೆ ನಾವು ಒಂದೇ ಒಂದು ಮಾವಿನ ಹಣ್ಣಿನ ಭೀಜ ಬಿತ್ತಿದರೆ, ಅದರಿಂ ದ ಹುಟ್ಟುವ ಮರದಿಂದ ನೂರಾರು ಸಾವಿರಾರು ಮಾವಿನ ಹಣ್ಣುಗಳನ್ನು ಪಡೆಯುತ್ತವೆ.ಹಾಗಾದರೆ ನಾವು ಭೂಮಿಗೆ ಕೊಟ್ಟಿದ್ದು, ಭೂಮಿಯಲ್ಲಿ ಡಿಪಾಸಿಟ್ ಮಾಡಿದ್ದು ಕೇವಲ ಒಂದು ಬೀಜ ಆದರೆ ಭೂಮಿ ನಮಗೆ ನೀಡುವ ಫಲ ಎಷ್ಟು? ಗಿಡವನ್ನು ಚೆನ್ನಾಗಿ ಸಂರಕ್ಷಣೆ ಮಾಡಿದರೆ ಸಾವಿರಾ ರು ಹಣ್ಣುಗಳನ್ನು ನೂರಾರು ವರ್ಷಗಳವರೆಗೆ ನಮಗೆ ನೀಡು ತ್ತದೆ.ಇದು ಭೂಮಿಯ ಗುಣ ಎನ್ನುವುದಕ್ಕಿಂತ ಭೂಮಿಯಲ್ಲಿ ದೇವರಿಟ್ಟಿರುವ ಗುಣ.
ದೇವರು ಇಷ್ಟಪಡುವ ಗುಣ
ಈ ಗುಣ ಭಗವಂತನಿಗೆ ಬಹಳ ಪ್ರಿಕರವಾದ ಗುಣ.ಒಂದನ್ನು ನೀಡಿದರೆ ಅದನ್ನು ಸಾವಿರ ಮಾಡಿ ನೀಡುವ ಈ ಗುಣ ಏನಿದೆ ಅದು ಭಗವಂತನಿಗೆ ಬಹಳ ಇಷ್ಟವಾದ ಗುಣ.ಕೆಲವರಲ್ಲಿ ಇಂತಹ ಗುಣ ಇರುತ್ತದೆ.ಇತರರು ತಮಗೆ ಎಷ್ಟು ಕೊಡುತ್ತಾರೆಯೋ ಅಷ್ಟನ್ನು ಮರಳಿ ಕೊಡುವುದು ಅದು.ಭಗವಂತನಿಗೆ ಇಷ್ಟವಾ ಗುವುದಿಲ್ಲ. ಆದರೆ ಇಂತಹ ಗುಣ ಭಗವಂತನಿಗೆ ಬಹಳ ಇಷ್ಟವಾಗುತ್ತದೆ ತಮಗೆ ಅವರು ಏನನ್ನೂ ಕೊಡದಿದ್ದರೂ ಸಹ ತಾವು ಅವರಿಗೆ ಕೊಡುವುದು, ಒಂದಕ್ಕೆ ಹತ್ತು ನೀಡುವುದ ನೂರಕ್ಕೆ ಸಾವಿರ ಕೊಡುವುದು ಏನಿದೆ ಅದು ದೇವರಿಗೆ ಪ್ರಿಯ ವಾದದ್ದು.ಅಂತಹ ಗುಣವನ್ನು  ಭೂಮಿಯಲ್ಲಿ ಕಂಡ ಭಗವಂತ.
ಈ ಗುಣ ಭೂಮಿಯಲ್ಲಿ ಮಾತ್ರವಲ್ಲ ಭೂದೇವಿ ಅವಳು ಎಲ್ಲ ದೇವತೆಗಳ ಪ್ರತಿನಿಧಿ.ಎಲ್ಲ ದೇವತೆಗಳಲ್ಲಿಯೂ ಈ ಗುಣ ಇದೆ.ಎಲ್ಲ ದೇವತೆಗಳೂ ಮಾಡುವುದು ಇದನನ್ನೇ ವೈಶ್ವದೇವ -ಔಪಾಸನ -ಅಗ್ನಿಹೋತ್ರ-ವಾಜಪೇಯ ಹೀಗೆ ಅನೇಕವಿಧ ಯಜ್ಞಯಾಗದಿ ಗಳಲ್ಲಿ ಜನರು ದೇವತೆಗಳಿಗೆ ಆಹುತಿಯನ್ನು ನೀಡುತ್ತಾರೆ ಎಷ್ಟು ಆಹುತಿ ನೀಡುತ್ತಾರೆ? ಬೇಕಾದಷ್ಟು ಶ್ರೀಮಂತಿಕೆ  ಇದೆ ಎಂದು ಹೇಳಿ.ತಪ್ಪಲೆಗಟ್ಟಲೆ ಚರು ಆಹುತಿ ನೀಡಿದರೆ ಅಗ್ನಿಯೇ ಆರಿಹೋಗುತ್ತದೆ ಅಷ್ಟೇ. ಹಾಗಾದರೆ ದೇವತೆಗಳಿಗೆ ಜನರು ನೀಡುವ ಆಹುತಿ ಎಷ್ಟು?  ಒಂದು ಸಣ್ಣ ಪಾತ್ರೆಯಲ್ಲಿ ಹಿಡಿಯುಷ್ಟು ತುಪ್ಪ ಅಥವಾ ಚರು.ಆದರೆ ಕೊಟ್ಟ ಸ್ವಲ್ಪ ಅಜ್ಯಾಹುತಿಯಿಂದಲೇ ಸಂತುಷ್ಟರಾದ ದೇವತೆಗಳು ಮಳೆಯನ್ನು ಸುರಿಸಿ ಸುಬಿಕ್ಷೆಯನ್ನು ಕೊಟ್ಟು ಜಗತ್ತಿಗೆ ಕೊಡುವಂತಹ ಸೌಭಾಗ್ಯ ಎಂತಹದು?  ಹಾಗಾಗಿ ಅಲ್ಪ ಕೊಟ್ಟಿದ್ದನ್ನೇ ಸಾವಿರ ಪಟ್ಟು  ಮಾಡಿ ನೀಡುವ ಎಲ್ಲ ದೇವತೆ ಗಳೂ ಭಗವಂತನಿಗೆ ಬಹಳ ಪ್ರೀಯರೆ.ಭೂದೇವಿ ಎಲ್ಲ ದೇವತೆಗಳ ಪ್ರತಿನಿಧಿ ಅಷ್ಟೇ  ಭೂಮಿ ಒಬ್ಬಳೇ ಪ್ರೀತಿಪಾತ್ರಳು ಎಂದಲ್ಲ.
  ಅತಂಹ ಎಲ್ಲ ದೇವತೆಗಳನ್ನು ಭಗವಂತ ಪ್ರೀತಿಯಿಂದ ಕಾಣು ತ್ತಾನೆ ಅವರ ಮೇಲೆ ವಿಶೇಷ ಅನುಗ್ರಹ ಮಾಡುತ್ತಾನೆ.ಯಾಕೆಂದರೆ ಇಷ್ಟೆಲ್ಲ ಜೀವರಾಶಿಗಳನ್ನು ಅವರು ಕೊಟ್ಟ ಅಲ್ಪ ಆಹುತಿ ಗಳಿಂದ ಬೀಜಗಳಿಂದ ತೃಪ್ತರಾಗಿ ಅಪಾರ ಮಳೆ-ಬೇಳೆ ಗಳನ್ನು ಕೊಟ್ಟು ಅನುಗ್ರಹ ಮಾಡುತ್ತಾರೆ ದೇವತೆಗಳು.ಇದು ಭಗವಂತನಿಗೆ ಬಹಳ ಪ್ರೀತಿಕರ ವಾದ ಗುಣ.ಆ ಕಾರಣಕ್ಕಾಗಿ  ಭಗವಂತ ಮಣ್ಣನ್ನು ತಿನ್ನುವ ಮೂಲಕ ಮುತ್ತಿಕ್ಕುವ ಮೂಲಕ ದೇವತೆಗಳ ಬಗ್ಗೆ ಭೂದೇವಿಯ ಬಗ್ಗೆ ತನಗಿರುವ ಅಪಾರ ಪ್ರೀತಿಯನ್ನು  ಸೂಚಿಸಿದ.

----------------------------------------------------------------
ಭಯ ಪರಿಹರಿಸುವ ಕರ್ಮಗಳೇ ಭಯಪ್ರದವಾಗುವ ನಾಕು ಕರ್ಮಗಳನ್ನು ಈ ಹಿಂದೆ ನೋಡಿದ್ದೆವು... ಅವುಗಳಲ್ಲಿ ಮೊದಲನೆಯದ್ದು ಮಾನ(ಜ್ಞಾನ)ವರಿಯದೆ ಮಾಡಿದ "ಅಗ್ನಿಹೋತ್ರ"
ಅಗ್ನಿಹೋತ್ರವೆಂದರೆ ಅಗ್ನಿಯಲ್ಲಿ ಭಗವಂತನ ಆರಾಧನೆ..ಪಂಚಭೂತಗಳಲ್ಲಿ ದೇವರನ್ನು ಕಾಣಲು ಶಾಸ್ತ್ರಕಾರರು ತಿಳಿದ ಶ್ರೇಷ್ಠ ಪ್ರತೀಕ ಇದಾಗಿದೆ..ಭಗವಂತ ಜ್ಞಾನಾನಂದಮಯನಾದ ಅಪ್ರಾಕೃತ ಬೆಳಕಿನ ಸ್ವರೂಪನು,ದೋಷರಹಿತನು ಎನ್ನುವುದಾಗಿ ಶಾಸ್ತ್ರಕಾರರು ತಿಳಿಸಿರುವರು.ಈ ಬಗೆಯ ಬೆಳಕಿನ ಪರಿಚಯ ನಮಗಿಲ್ಲವಾದ್ದರಿಂದ ಅದನ್ನು ಈ ಕಣ್ಣಿನಿಂದ ಕಾಣುವುದು ಅಸಾಧ್ಯ..ಅದಕ್ಕಾಗಿ ಕಾಣುವ ಒಂದು ಬೆಳಕು ಬೇಕು..
ಆ ಕಾಣುವ ಬೆಳಕಿನಲ್ಲೊಂದು "ಅಗ್ನಿ".
ಈ ಬೆಳಕಿನಲ್ಲಿ ಕಾಣದ ಬೆಳಕಿನ(ಜ್ಞಾನಾನಂದಮಯನ) ಅನುಸಂಧಾನವೇ "ಅಗ್ನಿಹೋತ್ರ"ಎಂದರೆ...
ಈ ಬೆಳಕಿನೊಳಗೆ ಭಗವಂತನನ್ನು ನೆನೆಯುತ್ತಾ ಆಹುತಿಗಳನ್ನು ನೀಡುವಿಕೆಯೇ ಮಾನಪೂರ್ವಕ ಮಾಡಿದ ಅಗ್ನಿಹೋತ್ರವು...
ಅಗ್ನಿಯಲ್ಲಿ ನೀಡುವ ಪ್ರತಿಯೊಂದು ಆಹುತಿಗಳನ್ನೂ ನೇರ ಸ್ವೀಕರಿಸುವವನು ನಾರಾಯಣನೇ ಎನ್ನುವ ಎಚ್ಚರ ಇರಬೇಕು.ಕೃಷ್ಣ ಈ ಸಂಗತಿಯನ್ನು ಬಹಳ ಸ್ಪಷ್ಟವಾಗಿಯೇ ಗೀತೆಯಲ್ಲಿ ತಿಳಿಸಿರುವನು.."ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ"..ನಾನಲ್ಲವೇ ಎಲ್ಲ ಯಜ್ಞಗಳಲ್ಲೂ ಕೂತು ಆಹುತಿಗಳನ್ನುಣ್ಣುವವ..ಹಾಗೂ ಅದರ ಒಡೆತನ ಪಡೆದವನೆಂದು ಕೃಷ್ಣನ ಮಾತಿನ ಅರ್ಥ..ಕೃಷ್ಣ ಈ ಮಾತನ್ನು ಹೇಳುವಾಗ "ಹಿ"(ಅಹಂ "ಹಿ")ಕಾರವನ್ನು ಹೇಳಿರುವನು..ಹಿ ಎಂದರೆ ನಾನೇ ಸ್ವಿಕರಿಸುವೆನೆನ್ನುವುದು ಶಾಸ್ತ್ರ ಪ್ರಸಿದ್ದ ಎಂದರ್ಥ...ಯಜುರ್ವೇದದ ಆರಂಭದಿಂದ ಕೊನೆಯ ತನಕ ಸುಮಾರು ನೂರೈವತ್ತಕ್ಕಿಂತಲೂ ಹೆಚ್ಚಿಗೆ "ಯಜ್ಞೋ ವೈ ವಿಷ್ಣುಃ"ಎನ್ನುವ ಮಾತು ಪುನರಾವರ್ತನೆಗೊಂಡಿದೆ ಎನ್ನುವುದು ಯಜುರ್ವೇದವನ್ನು ಅಧ್ಯಯನ ಮಾಡಿರುವವರ ಮಾತು..ಹೀಗೆ ಯಾವುದೇ  ದೇವತೆಗಳಿಗೆ ಸಂಬಂಧಿಸಿದ ಯಜ್ಞ ಇರಲಿ ಅದರಲ್ಲಿ ಪ್ರಧಾನಾಹುತಿ ನನಗೆ ಮೀಸಲು ಎನ್ನುತ್ತಾನೆ ಕೃಷ್ಣ..
ಆದರೆ ಶಾಸ್ತ್ರದ ಗಂಧಗಾಳಿಯೇ ಅರಿಯದ ಮಂದಿ ಯಾಜ್ಞಿಕ ಪ್ರಕ್ರಿಯಲ್ಲಿ ತೊಡಗಿ ಅಗ್ನಿಯಲ್ಲಿ ಕೊಡುವ ಆಹುತಿ ಬರೀ ಆಯಾಯ ದೇವತೆಗಳಿಗೆ ಮಾತ್ರ ಮೀಸಲು ಎನ್ನುತ್ತಾ ತಾವೂ ಹೊಂಡಕ್ಕೆ ಬೀಳುವುದಲ್ಲದೆ ಯಜಮಾನನ್ನು ಹೊಂಡಕ್ಕೆ ತಳ್ಳುವರು...ಅದೇ ಅಗ್ನಿಯ ಬಗೆಗೆ ಸರಿಯಾಗಿ ತಿಳಿದ ಜ್ಞಾನಿಗಳು ಅಗ್ನಿಯೊಳಗಿನ ದೇವರನ್ನು ಪೂಜಿಸಿ ತಾವೂ ಎತ್ತರಕ್ಕೇರುವುದಲ್ಲದೆ ಉಳಿದವರನ್ನೂ ಎತ್ತರಕ್ಕೇರಿಸುವರು...
ಆದ್ದರಿಂದ ಅಗ್ನಿಹೋತ್ರವೆಂದರೆ ಬರಿಯ ಅಗ್ನಿ(ಬೆಂಕಿ) ಅಥವಾ ಅಗ್ನಿದೇವ ಎನ್ನುವುದಷ್ಟನೇ ತಿಳಿಯದೆ ದೇವತೆಯ ಒಳಗೆ ಕೂತ ದೇವರನ್ನು ತಿಳಿದು ಆಚರಿಸುವುದೇ ಮಾನಪೂರ್ವಕವಾದ "ಅಗ್ನಿಹೋತ್ರ" ಎನ್ನುವುದು ವಿದುರನ ಅಭಿಪ್ರಾಯವಾಗಿದೆ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ