ಭಾನುವಾರ, ಜನವರಿ 28, 2018

ಉಡುಪಿ ಶ್ರೀಕೃಷ್ಣ ಮಠದ ದೈನಂದಿನ ಚಟುವಟಿಕೆಗಳು ಮತ್ತು ಪೂಜಾ ವಿಧಿ ವಿಧಾನಗಳ ಕಿರು ಪರಿಚಯ

ಉಡುಪಿ ಶ್ರೀಕೃಷ್ಣ ಮಠದ ದೈನಂದಿನ ಚಟುವಟಿಕೆಗಳು ಮತ್ತು ಪೂಜಾ ವಿಧಿ ವಿಧಾನಗಳ ಕಿರು ಪರಿಚಯ
ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ದೈನಂದಿನ ಪೂಜಾ ಕಾರ್ಯಕ್ರಮಗಳು
ನಿರ್ಮಾಲ್ಯ ವಿಸರ್ಜನಾ ಪೂಜಾ: ಶ್ರೀಗಳವರು ಮಧ್ವಸರೋವರದಲ್ಲಿ ಅವಗಾಹನ ಸ್ನಾನ ಮಾಡಿ ನಿತ್ಯ ಜಪತರ್ಪಣಗಳನ್ನು ಪೂರಯಿಸಿ ಪ್ರಾತಃಕಾಲ ಐದು ಘಂಟೆಯೊಳಗೆ ಅಂಭ್ರಣೀಸೂಕ್ತಾದಿಗಳನ್ನು ಪಠಿಸುತ್ತಾ ಶ್ರೀಕೃಷ್ಣದೇವರ ಪುಷ್ಪ ನಿರ್ಮಾಲ್ಯಗಳನ್ನು ಹಾಗೂ ಹಿಂದಿನ ದಿನದ ಅಲಂಕಾರದ ಆಭರಣಗಳನ್ನೂ ತೆಗೆಯುವರು. ಈಗ ಶ್ರೀಕೃಷ್ಣದೇವರ ಮೂಲ ಬಿಂಬದ ದರ್ಶನ. ಇದನ್ನು ವಿಶ್ವರೂಪದರ್ಶನವೆಂದು ಕರೆಯುತ್ತಾರೆ. ಅನಂತರ ಪಂಚೋಪಚಾರ ಪೂಜೆ, ತುಳಸೀ ಗಂಧಗಳಿಂದ ಅರ್ಚನೆ, ಕಡಗೋಲುಶ್ರೀಕೃಷ್ಣದೇವರಿಗೆ ಬೆಳಗ್ಗಿನ ಉಪಹಾರದ ಸಮರ್ಪಣೆ. ಉಪಹಾರದ ದ್ರವ್ಯಗಳೆಂದರೆ ಅವಲಕ್ಕಿ, ಮೊಸರು, ನೆನೆಗಡಲೆ, ಶುಂಠಿ, ಬೆಲ್ಲ, ತೆಂಗಿನಕಾಯಿ, ತಾಂಬೂಲ.
ಉಷಃಕಾಲ ಪೂಜೆ : ಆಮೇಲೆ ಉಷಃಕಾಲಪೂಜೆಗೆ ಸಂಕಲ್ಪಿಸಿ ಬೆಳ್ಳಿಕಲಶದಿಂದ ಅಭಿಷೇಚಿಸಿ ಉರುಳಿ ನೈವೇದ್ಯ, ತೆಂಗಿನಕಾಯಿ ಇತ್ಯಾದಿಗಳನ್ನು ಸಮರ್ಪಿಸಿ ನಗಾರಿವಾದ್ಯಘೋಷಗಳೊಂದಿಗೆ ಉಷಃಕಾಲ ಪೂಜೆಯನ್ನು ಮಾಡುತ್ತಾರೆ.
ಗೋಪೂಜೆ – ಅಕ್ಷಯಪಾತ್ರೆ ಪೂಜೆ: ಅರಳು, ಅಕ್ಕಿ, ಬೆಲ್ಲಗಳನ್ನು ಸಮರ್ಪಿಸಿ ಗೋಪಾಲಕೃಷ್ಣನಿಗೂ ಆಚಾರ್ಯಮಧ್ವರಕಾಲದ ಅಕ್ಷಯಪಾತ್ರೆ ಹಾಗೂ ಸಟ್ಟುಗಕ್ಕೂ ಬಡಗುಬಾಗಿಲಿನಲ್ಲಿ ನಿಂತಿರುವ ಗೋಮಾತೆಗೂ ಆರತಿಯನ್ನು ತೋರಿಸಿ ಆರಳು ಮೊದಲಾದವನ್ನು ಗೋವಿಗೆ ಸಮರ್ಪಿಸುವರು.
ಪಂಚಾಮೃತ ಪೂಜೆ : ದೇವರ ಬಾಲರೂಪಾಲಂಕಾರಗಳನ್ನು ತೆಗೆದಿರಿಸಿ ವಾದ್ಯಘೋಷ ಹಾಗೂ ವೇದತ್ರಯಗಳ ಪಾರಾಯಣವಾಗುತ್ತಿರಲು ಸರ್ವಜ್ಞಾಚಾರ್ಯರ ಕಾಲಾರಭ್ಯ ಬಂದಿರುವ ಸ್ವರ್ಣನಾಣ್ಯಗಳನ್ನು ಅಭಿಷೇಕ ಮಾಡಿತುಪ್ಪ, ಹಾಲು, ಮೊಸರು, ಜೇನು, ಸಕ್ಕರೆ, ಸೀಯಾಳಗಳನ್ನು ಅಭಿಷೇಕಮಾಡಿ ಉರುಳಿ ನೈವೇದ್ಯದಿಗಳನ್ನು ಸಮರ್ಪಿಸಿ ಮಂಗಳಾರತಿ ಮಾಡುವರು. (ಪ್ರತಿನಿತ್ಯವೂ ದೇವರಿಗೆ ಅಭಿಷೇಕ ಮಾಡಿದ ಪಂಚಾಮೃತವನ್ನು ಮುಖ್ಯಪ್ರಾಣದೇವರಿಗೂ ಸುಬ್ರಹ್ಮಣ್ಯದೇವರಿಗೂ ಅಭಿಷೇಕಮಾಡಲಿದೆ.)
ಉದ್ವರ್ತನ ಮತ್ತು ಹಾಲುಬೆಣ್ಣೆ ಪೂಜೆ: ಅರೆದ ಹೆಸರಿನಿಂದ ಶ್ರೀದೇವರ ವಿಗ್ರಹವನ್ನು ಚೆನ್ನಾಗಿ ತೊಳೆದು ಸೀಯಾಳ, ಬಿಸಿನೀರು ಇವುಗಳಿಂದ ಅಭ್ಯಂಜನ ನಡೆಸಿ ಸೀಯಾಳ, ಹಾಲು, ಬೆಣ್ಣೆ ಮೊದಲಾದುವನ್ನು ಸಮರ್ಪಿಸಿ, ಬೆಳ್ಳಿಯ ಕಲಶದಿಂದ ಜಲಾಭಿಶೇಕ ಮಾಡಿ ಉರುಳಿ ನೈವೇದ್ಯ ಸಮರ್ಪಿಸಿ ಉದ್ವರ್ತನ ಪೂಜೆಯನ್ನು ಸಲ್ಲಿಸುವರು.
ಸ್ವರ್ಣ ಕಲಶ ಪೂಜೆ: ಆಚಾರ್ಯ ಮಧ್ವರ ಕಾಲದ ಚಕ್ರಶಂಖಾದಿ ಮುದ್ರಾಂಕಿತಗಳನ್ನೊಳಗೊಂಡ ೨ ಸ್ವರ್ಣ ಕಲಶಗಳಲ್ಲಿ ಪರಿಮಳೋದಕವನ್ನು ತುಂಬಿ, ಅದರಲ್ಲಿ ತಂತ್ರಸಾರೋಕ್ತ ಪ್ರಕಾರ ಕಲಶಾಭಿಮಾನಿ ದೇವತೆಗಳನ್ನಾವಹಿಸಿ ಉರುಳಿನೈವೇದ್ಯವನ್ನರ್ಪಿಸಿ ಆರತಿ ಮಾಡುವರು. ಆ ನೈವೇದ್ಯವನ್ನು ಗರುಡದೇವರಿಗೆ ಆಲ್ಲಿನ ಅರ್ಚಕರು ಸಮರ್ಪಿಸುವರು. ತದನಂತರ ಅದೇ ನೈವೇದ್ಯವನ್ನು ಮಧ್ವಸರೋವರದ ಮೀನುಗಳಿಗೆ ನೀಡುವರು.
ಅಲಂಕಾರ ಪೂಜೆ: ಹೊರಗೆ ಅಲಂಕಾರಪೂಜೆಯ ನಗಾರಿ ಬಾರಿಸುತ್ತಿರಲು ಶ್ರೀಕೃಷ್ಣದೇವರನ್ನು ಅನೇಕ ರತ್ನಾಭರಣ, ಪೀತಾಂಬರ, ಕಿರೀಟ, ಕೇಯೂರಾದಿಗಳಿಂದ ಅಲಂಕರಿಸಿ ಉರುಳಿನೈವೇದ್ಯ ಶಾಕಭಕ್ಷ್ಯಭೋಜ್ಯಾದಿ ಅನೇಕ ಪದಾರ್ಥಗಳನ್ನು ಸಮರ್ಪಿಸಿ ಹಾಡು ಹೇಳುತ್ತಿರುವಾಗ ಆರತಿಗಳನ್ನು ಮಾಡಿ ಅಲಂಕಾರ ಪೂಜೆಯನ್ನು ಮಾಡುತ್ತಾರೆ. ಈ ಪೂಜೆಯನ್ನು ಸಾಕ್ಷಾತ್ ಲಕ್ಷ್ಮೀದೇವಿಯೇ ಮಾಡುವುದೆಂದು ಐತಿಹ್ಯವಿದೆ. ಈ ಅಲಂಕಾರಗಳಲ್ಲಿ ಪ್ರತಿ ಶುಕ್ರವಾರ ಮತ್ತು ನವರಾತ್ರಿಗಳಲ್ಲಿ ಆಯಾಯ ಅವತಾರಗಳನ್ನನುಸರಿಸಿ ಮತ್ಸ್ಯಾದಿ ಭಗವದ್ರೂಪಗಳ ಸ್ಮರಣೆಯು ಭಕ್ತರಿಗೆ ಬರುವಂತೆ ನಾನಾಲಂಕಾರಗಳನ್ನು ಮಾಡುತ್ತಾರೆ. ಇಲ್ಲಿ ಸಮರ್ಪಿತವಾದ ನೈವೇದ್ಯವನ್ನು ಮೃಷ್ಟಾನ್ನದಲ್ಲಿ ಬ್ರಾಹ್ಮಣರ ಸಂತರ್ಪಣೆಗೆ ಬಳಸಲಾಗುವುದು.
ಅವಸರ ಪೂಜೆ: ಉರುಳಿ ನೈವೇದ್ಯಾದಿಗಳನ್ನು ದೇವರಿಗೆ ಸಮರ್ಪಿಸಿ ಆರತಿಗಳನ್ನೆತ್ತಿ ಮಾಡುವ ಪೂಜೆಯು ಅವಸರಪೂಜೆಯು. ಸನಕಾದಿ ಋಷಿಗಳು “ನಮಗೆ ಶ್ರೀಕೃಷ್ಣನ ಪೂಜೆಗೆ ಅವಕಾಶವನ್ನು ಕೊಡಬೇಕು” ಎಂದು ಶ್ರೀಮದಾಚಾರ್ಯರೊಡನೆ ಕೇಳಿಕೊಂಡ ಪ್ರಕಾರ ಆಚಾರ್ಯರು ಅವರಿಗೆ ಅವಕಾಶವನ್ನು ಕೊಡಲು, ಸನಕಾದಿ‌ಋಷಿಗಳು ಮಾಡುವ ಪೂಜೆಗೆ ಅವಸರ ಪೂಜೆ ಎಂದು ಹೆಸರು. ಈ ಪೂಜೆಯ ವೈಶಿಷ್ಟ್ಯವೆಂದರೆ, ಪೂಜೆ ಪ್ರಾರಂಭವಾಗಬೇಕೆನ್ನುವಾಗ ನವಗ್ರಹ ಕಿಟಕಿಯನ್ನು ಮುಚ್ಚುತ್ತಾರೆ. ಯತಿಗಳು ಗರ್ಭಗೃಹದಿಂದ ಹೊರಗಡೆ ಬಂದು ತರ್ಪಣ ಕೋಣೆಯಲ್ಲಿ ಸ್ವಲ್ಪಹೊತ್ತು ಕಾಯುತ್ತಾರೆ. ಏಕಾಂತದಲ್ಲಿ ಸನಕಾದಿ ಋಷಿಗಳು ಬಂದು ತಮ್ಮ ಪೂಜೆಯನ್ನು ಸಲ್ಲಿಸಿ ತೆರಳುವರು ಎಂಬ ನಂಬಿಕೆ. ಪೂಜೆಯಲ್ಲಿ ಸಮರ್ಪಿತವಾದ ನೈವೇದ್ಯಾದಿಗಳನ್ನು ಮಹಾಪೂಜೆ ನಡೆಯುತ್ತಿರುವಾಗ ಅನ್ನಸಂತರ್ಪಣೆಗೆ ಉಪಯೋಗಿಸಲಾಗುವುದು.
ಮಹಾಪೂಜೆ: ಬ್ರಹ್ಮಸೂತ್ರ, ವಿಷ್ಣುಸಹಸ್ರನಾಮ, ಕೃಷ್ಣಾಷ್ಟೋತ್ತರ ಮೊದಲಾದ ನಾಮಾವಳಿಗಳನ್ನು ಪಠಿಸುತ್ತಾ ಭಗವಂತನನ್ನು ತುಳಸೀಪುಷ್ಪಾದಿಗಳಿಂದ ಅರ್ಚಿಸಿ ಮೃಷ್ಟಾನ್ನದಲ್ಲಿ ಬ್ರಾಹ್ಮಣ ಸುವಾಸಿನಿಯರಿಗೆ ಸಂತರ್ಪಣೆಯು ನಡೆಯುತ್ತಿರುವಾಗ, ಆಗ್ನೇಯಭಾಗದಲ್ಲಿರುವ ಯಾಗಶಾಲೆಯಲ್ಲಿ ಅನುಯಾಗವು ನಡೆಯುತ್ತಿರಲು, ಮುಖಮಂಟಪದಲ್ಲಿ ಹಾಡುಗಳನ್ನು ಹಾಡುತ್ತಿರಲು, ವಿಷಪರಿಹಾರಕವಾದ ದ್ವಾದಶಸ್ತೋತ್ರನಾಮಸಂಕೀರ್ತನೆಯಾಗುತ್ತಿರಲು, ನಗಾರಿ ಮೊದಲಾದ ವಾದ್ಯಗಳು ಬಾರಿಸಲ್ಪಡುತ್ತಿರಲು ನಾನಾವಿಧ ಭಕ್ಷ್ಯಭೋಜ್ಯಾದಿ ಶಾಕಪರಮಾನ್ನಾದಿಗಳನ್ನೂ ೧೬ ಸೇರಿಗೆ ಕಡಿಮೆಯಾಗದ ಕಠಾರ ನೈವೇದ್ಯಗಳನ್ನೂ ಪಂಚಕಜ್ಜಾಯ ಮೊದಲಾದವುಗಳನ್ನೂ ಶ್ರೀಮತ್ಪೂರ್ಣಪ್ರಜ್ಞಾಚಾರ್ಯರೇ ಸಮರ್ಪಿಸುತ್ತಿರುವರೆಂದು ಭಾವಿಸುತ್ತಾ ಪರ್ಯಾಯ ಪೀಠಾಧಿಪತಿಗಳು ‘ಎಡನಾಳಿ’ ಎಂಬ ಪ್ರದೇಶದಲ್ಲಿ ಕುಳಿತುಕೊಂಡು ಪ್ರಣವಾದಿ ಮೂಲಮಂತ್ರಗಳನ್ನು ಜಪಿಸುತ್ತಿರುವರು. ಆಮೇಲೆ ದೇವರ ಎದುರು ಬಂದು ಕುಳಿತು ನಾನಾವಿಧ ಮಂಗಳಾರತಿಗಳನ್ನು ಮಾಡುತ್ತಾರೆ.
ಆಮೇಲೆ ಪರ್ಯಾಯ ಶ್ರೀಪಾದಂಗಳವರು ಶ್ರೀಮುಖ್ಯಪ್ರಾಣನಿಗೆ, ಶ್ರೀಕೃಷ್ಣನಿಗೆ ಸಮರ್ಪಿತವಾದ ಎಲ್ಲಾ ಭಕ್ಷ್ಯಭೋಜ್ಯಾದಿಗಳನ್ನು ಸಮರ್ಪಿಸಿ ಪೂಜಿಸುತ್ತಾರೆ. ಆಮೇಲೆ ಶ್ರೀಮಧ್ವಾಚಾರ್ಯರನ್ನೂ, ಸಿಂಹಾಸನಕ್ಕೆ ಬಂದು ಚಿಕ್ಕಪಟ್ಟದ ದೇವರನ್ನೂ ಪೂಜಿಸುತ್ತಾರೆ. ತದನಂತರ ಪ್ರದಕ್ಷಿಣ ನಮಸ್ಕಾರ, ದಂಡೋದಕ, ವೃಂದಾವನ ಪೂಜೆಗಳು ನಡೆಯುತ್ತವೆ. ಆಮೇಲೆ ಸಿಂಹಾಸನದಲ್ಲಿ ಕುಳಿತು ತೀರ್ಥ, ಗಂಧಪ್ರಸಾದ, ಸಂಭಾವನೆಗಳು ನೀಡಲ್ಪಡುತ್ತವೆ. ಅನಂತರ ಚೌಕಿಯಲ್ಲಿ ಮಹಾಸಂತರ್ಪಣೆ ನಡೆಯುವುದು.
ಚಾಮರ ಸೇವೆ: ಸಾಯಂಕಾಲ ೭ ಘಂಟೆ ಸಮಯದಲ್ಲಿ ಪರ್ಯಾಯ ಶ್ರಿಪಾದಂಗಳವರು ಶ್ರೀಕೃಷ್ಣನ ಇದಿರು ಮಂಟಪದ ಮುಂಭಾಗದಲ್ಲಿ ೨ ಚಿನ್ನದ ಚಾಮರಗಳಿಂದ ಚಾಮರಸೇವೆಯನ್ನು ಮಾಡುವರು. ಆಗ ವಾದ್ಯಘೊಷಗಳು ನಡೆಯುತ್ತವೆ. ೬ ಮುಡಿಗಳಿಗೆ ಕಮ್ಮಿಯಾಗದ ಅರಳುರಾಶಿಗಳೂ, ಬೆಲ್ಲ, ತೆಂಗಿನಕಾಯಿ, ಲಡ್ಡಿಗೆ ಮುಂತಾದವುಗಳನ್ನು ಸಮರ್ಪಿಸುತ್ತಾರೆ. ಎರಡೂ ಪಾರ್ಶ್ವಗಳಲ್ಲಿ ೨ ದೀವಟಿಗೆಗಳು ಇರುತ್ತವೆ. ಅಲ್ಲದೇ ತಾಳಗಳೊಂದಿಗೆ ಕೀರ್ತನೆಗಳನ್ನು ಹಾಡುವರು.
ರಾತ್ರಿ ಪೂಜೆ: ಅನಂತರ ಚಿಕ್ಕಪಟ್ಟದ ಶ್ರೀಗಳವರು ರಾತ್ರಿಪೂಜೆ ಮಾಡುವರು. ಆಗಲೂ ಉರುಳಿ ನೈವೇದ್ಯ, ಎಳನೀರು ಇತ್ಯಾದಿಗಳಾನ್ನು ಸಮರ್ಪಿಸುವರು.
ರಂಗ ಪೂಜೆ: ಆಮೇಲೆ ಮುಖ್ಯಪ್ರಾಣದೇವರ ಎದುರು ಪಂಚಕಜ್ಜಾಯವನ್ನು ಸಮರ್ಪಿಸಿ ದೀಪಗಳನ್ನು ಸಾಲುಸಾಲಾಗಿ ಉರಿಸಿ ಪೂಜೆ ಮಾಡಲಾಗುವುದು. ತದನಂತರ ಮಧ್ವಾಚಾರ್ಯರನ್ನು ಪೂಜಿಸುವರು. ಸಿಂಹಾಸನದಲ್ಲಿ ಚಿಕ್ಕಪಟ್ಟದ ದೇವರಿಗೆ ಪೂಜೆ ನಡೆಯುವುದು. ಅನಂತರ ಪಾಲಕ್ಕಿಯಲ್ಲಿ ಉತ್ಸವಮೂರ್ತಿಯನ್ನಿಟ್ಟು ಉತ್ಸವವಿದ್ದಲ್ಲಿಮಾತ್ರ ಉತ್ಸವ ನಡೆಯುತ್ತದೆ. ಇಲ್ಲದಿದ್ದರೆ ಮುಖಮಂಟಪದಲ್ಲಿ ತೊಟ್ಟಿಲಿನಲ್ಲಿ ದೇವರನ್ನಿಟ್ಟು ಮಂಗಳಾರತಿ ಮಾಡುವರು. ಆಗ ಸಂಕೀರ್ತನೆ ಅಷ್ಟಾವಧಾನಾದಿ ಸೇವೆಗಳು ನಡೆಯುತ್ತವೆ. ಇದಕ್ಕೆ ಮಂಟಪ ಪೂಜೆಯೆನ್ನುವರು. ಆಮೇಲೆ ಶ್ರೀಗಳು ಭಕ್ತರಿಗೆ ಮಂತ್ರಾಕ್ಷತೆಯಿತ್ತು ಅನುಗ್ರಹಿಸುವರು. ಅನಂತರ ಕೊಳಲು ಸೇವೆಯಾಗಿ ಗರ್ಭಗುಡಿಯೊಳಗೆ ಏಕಾಂತಸೇವಾಪೂಜೆಯು ನಡೆಯುವುದು. ಆಮೇಲೆ ಭಕ್ತರಿಗೆ ಪುಷ್ಪಪ್ರಸಾದ ಕಷಾಯತೀರ್ಥಗಳನ್ನು ಕೊಡಲಾಗುವುದು. ಅನಂತರ ೩ ಬಾರಿ ಶಂಖವನ್ನೂದಿದ ಮೇಲೆ ಆ ದಿನದ ಕಾರ್ಯಕ್ರಮವು ಮುಕ್ತಾಯಗೊಳ್ಳುವುದು.
ಸಪ್ತೋತ್ಸವಗಳು : ಶ್ರೀಮಧ್ವಾಚಾರ್ಯರು ಮಕರ ಸಂಕ್ರಮಣದಂದು ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರು. ಈ ಸಂಭ್ರಮದ ಆಚರಣೆಗಾಗಿ ೭ ದಿನಗಳ ಕಾಲ ಸತತವಾಗಿ ಉತ್ಸವವನ್ನು ನಡೆಸಲಾಗುವುದು. ಇದಕ್ಕೆ ಸಪ್ತೋತ್ಸವ ಎನ್ನುತ್ತಾರೆ. ಉತ್ಸವಕ್ಕೆ ಮೊದಲು ನವಗ್ರಹ ದಾನಗಳನ್ನು ಸಜ್ಜನರಿಗೆ ನೀಡಲಾಗುವುದು. ಶ್ರೀಕೃಷ್ಣ-ಮುಖ್ಯಪ್ರಾಣರ ಉತ್ಸವಮೂರ್ತಿಗಳನ್ನು ಚಿನ್ನದ ಪಾಲಕಿಯಲ್ಲಿಟ್ಟು ಮಧ್ವಸರೋವರಕ್ಕೆ ತಂದು ಅಲ್ಲಿ ನೌಕಾರಥದಲ್ಲಿಟ್ಟು ತೆಪ್ಪೋತ್ಸವ ನಡೆಸಲಾಗುವುದು. ಪುನಃ ಆ ವಿಗ್ರಹಗಳನ್ನು ಯತಿಗಳು ಚಿನ್ನದ ಪಾಲಕಿಯಲ್ಲಿರಿಸಿ ರಥಬೀದಿಗೆ ಬಂದು ಅಲಂಕೃತ ರಥಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ನಡೆಸುತ್ತಾರೆ. ಮೊದಲ ಐದುದಿನ ಎರಡು ರಥಗಳಲ್ಲಿ ಉತ್ಸವ, ಮಹಾಪೂಜಾ ರಥದಲ್ಲಿ ಚಂದ್ರೇಶ್ವರ, ಅನಂತಾಸನದೇವರು. ಗರುಡರಥದಲ್ಲಿ ಶ್ರೀಕೃಷ್ಣದೇವರು ಮತ್ತು ಮುಖ್ಯಪ್ರಾಣದೇವರು. ಮಕರಸಂಕ್ರಮಣದಂದು ಮೂರೂ ರಥಗಳ ಉತ್ಸವ. ಮಹಾಪೂಜಾ ರಥಗಳಲ್ಲಿ ಪ್ರಾಣದೇವರು, ಗರುಡರಥದಲ್ಲಿ ಚಂದ್ರೇಶ್ವರ, ಅನಂತಾಸನದೇವರು, ಬ್ರಹ್ಮರಥದಲ್ಲಿ ಶ್ರೀಕೃಷ್ಣದೇವರನ್ನಿಟ್ಟು ಪೂಜೆ ನಡೆಸುತ್ತಾರೆ. ನಂತರ ಭಕ್ತರು ಭಕ್ತಿಯಿಂದ ಗೋವಿಂದಾ ಎನ್ನುತ್ತಾ ರಥವನ್ನು ಎಳೆದುಕೊಂಡು ತೆಂಕಣ ಬೀದಿಗೆ ತರುವರು. ಯತಿಗಳು ಅಲ್ಲಿ ನವವಸ್ತ್ರದ ಮೇಲೆ ಕುಳಿತುಕೊಳ್ಳುವರು. ಅಲ್ಲಿ ಪಟಾಕಿಗಳನ್ನು ಸಿಡಿಸಿದ ನಂತರ ಕರ್ಪೂರ ದೀಪಗಳನ್ನು ಬೀದಿಯಲ್ಲಿ ಬೆಳಗಿಸಲಾಗುವುದು. ಅನಂತರ ಎಣ್ಣೆಯಲ್ಲಿ ಅದ್ದಿದ ವಸ್ತ್ರಗಳನ್ನು ಸುಡಲಾಗುವುದು. ಇದನ್ನು ಪಚ್ಚೆಡ ಎನ್ನುವರು. ಎರಡು ಪುರುಷ ಪ್ರಮಾಣ ಉರಿಯುವ ದೀಪದ ಬೆಳಕಿನಿಂದ ರಥದಲ್ಲಿರುವ ದೇವರ ದರ್ಶನ ಮಾಡಿದರೆ ಸಮಸ್ತ ಪಾಪ ಪರಿಹಾರವಾಗುವುದು ಎಂಬ ನಂಬಿಕೆಯಿಂದಾಗಿ ಅನಾದಿಕಾಲದಿಂದಲೂ ಈ ಕ್ರಮ ನಡೆದು ಬಂದಿದೆ. ಅನಂತರ ಕಂಬದಲ್ಲಿ ಅನೇಕ ಸಿಡಿಮದ್ದುಗಳನ್ನಿರಿಸಿ ಕಂಬಬೆಡಿಯನ್ನು ಸಿಡಿಸಿ ರಥವನ್ನು ಎಳೆದು ತಂದು ಶ್ರೀಕೃಷ್ಣ ಮಠದ ಎದುರಿನಲ್ಲಿ ತಂದು ನಿಲ್ಲಿಸಲಾಗುವುದು. ಅಲ್ಲಿಂದ ದೇವರನ್ನು ಪಲ್ಲಕ್ಕಿಯಲ್ಲಿರಿಸಿ, ವಸಂತಮಹಲಿಗೆ ತಂದು ಪೂಜೆ ನಡೆಸಿ ಅಷ್ಟಾವಧಾನ ಸೇವೆಗಳು ನಡೆಯುಯುದು. ಯತಿಗಳು ಭಕ್ತಾಭಿಮಾನಿಗಳಿಗೆ ಮಂತ್ರಾಕ್ಷತೆ ನೀಡುವರು.
ಅಲ್ಲಿಂದ ದೇವರನ್ನು ಪಲ್ಲಕ್ಕಿಯಲ್ಲಿರಿಸಿ ಕೊಳಲು ವಾದನದೊಂದಿಗೆ ಗರ್ಭಗುಡಿಯ ಪ್ರವೇಶದ್ವಾರಕ್ಕೆ ಒಯ್ಯಲಾಗುವುದು. ಅಲ್ಲಿ ಯತಿಗಳು ಉತ್ಸವಮೂರ್ತಿಯನ್ನು ಗರ್ಭಗೃಹದೊಳಗೆ ತೆಗೆದುಕೊಂಡು ಹೋಗಿ, ಪೂಜೆ ಸಲ್ಲಿಸಿ, ಬೆಳ್ಳಿ ತೊಟ್ಟಿಲಲ್ಲಿಟ್ಟು ಪೀತಾಂಬರದ ಹಾಸಿಗೆಯಲ್ಲಿ ದೇವರನ್ನು ಇರಿಸಿ ತೂಗಿ ಹಾಲು ಮೊದಲಾದವನ್ನು ಸಮರ್ಪಿಸಿ, ಆರತಿ ಮಾಡಿ ಜೋಗುಳದ ಹಾಡು ಹಾಡಿ, ರುಕ್ಮಿಣೀ ಸತ್ಯಭಾಮೆಯರೊಡನೆ ಸುಖವಾಗಿರು ಎಂದು ಧ್ಯಾನಿಸುತ್ತಾ ದೇವರನ್ನು ಮಲಗಿಸುತ್ತಾರೆ. ನಂತರ ಪರ್ಯಾಯ ಶ್ರೀಪಾದರು ಇತರ ಮಠಾಧಿಪತಿಗಳಿಗೆ ಗಂಧದೆಣ್ಣೆ ಮೊದಲಾದವುಗಳನ್ನು ಹಚ್ಚಿ ಪುಷ್ಪಪ್ರಸಾದವನ್ನು ನೀಡುವರು. ಭಗವದ್ಭಕ್ತರಿಗೆ ಕಷಾಯತೀರ್ಥವನ್ನು ಹಂಚಲಾಗುವುದು. ನಂತರ ಪೂಜೆಗಳು ಮುಗಿಯುವುವು.
ಮಕರ ಸಂಕ್ರಮಣದ ಮರುದಿನ ಚೂರ್ಣೋತ್ಸವದಂದು ಹಗಲು ತೇರು. ಅಂದು ರಥದಲ್ಲಿ ದೇವರನ್ನಿರಿಸಿದ ನಂತರ ಅಷ್ಟಮಠಾಧೀಶರೂ ಪೂಜೆ ನಡೆಸುತ್ತಾರೆ. ಅನಂತರ ದೇವರ ಪ್ರಸಾದವನ್ನು ಯತಿಗಳು ರಥದ ಮೇಲಿನಿಂದ ಕೆಳಗಿರುವ ಭಕ್ತರಿಗೆ ನೀಡುತ್ತಾರೆ. ಅಲ್ಲದೆ ಪುಷ್ಪಗಳನ್ನು ಸುವರ್ಣಗಳ ಚೂರ್ಣಗಳಿಂದ ದೆವರಿಗೆ ಸಮರ್ಪಿಸಿ, ಭಕ್ತರ ಗುಂಪಿಗೆ ಎಸೆಯುವುದರಿಂದ ಈ ಉತ್ಸವಕ್ಕೆ ಚೂರ್ಣೋತ್ಸವವೆಂದು ಹೆಸರು ಬಂದಿತು. ಅನಂತರ ಉತ್ಸವದಲ್ಲಿ ರಥವು ರಥಬೀದಿಯಲ್ಲಿ ಪ್ರದಕ್ಷಿಣೆ ಬಂದ ಮೇಲೆ ಸ್ವಸ್ಥಾನಕ್ಕೆ ರಥವನ್ನು ತಂದಿರಿಸಿ, ವಸಂತಮಹಲಿನಲ್ಲಿ ವಾಲಗಮಂಟಪ ಪೂಜೆ ನಡೆಯುತ್ತದೆ. ದೇವರಿಗೆ ಸಮರ್ಪಿಸಿದ ಓಕುಳಿಯನ್ನು ಭಕ್ತರಿಗೆ ನೀಡಿ, ಪೂಜಾನಂತರ ಅವಭೃತಸ್ನಾನ ಮಧ್ವಸರೋವರದಲ್ಲಿ ನಡೆಯುತ್ತದೆ. ಅನಂತರ ಪ್ರಾಣದೇವರಿಗೆ ಮಧ್ವಾಚಾರ್ಯರಿಗೆ ಪೂಜೆಯಾದಮೇಲೆ ಅನ್ನಸಂತರ್ಪಣೆ ಪ್ರಾರಂಭಗುವುದು. ಈ ಅನ್ನಸಂತರ್ಪಣೆಗೆ ವಿಶೇಷವಾದ ಮಹತ್ವವಿದೆ. ಈ ದಿನದಂದು ದ್ರೋಣಾಚಾರ್ಯರ ಮಗನಾದ ಅಶ್ವತ್ಥಾಮಾಚಾರ್ಯರು ಶ್ರೀಕೃಷ್ಣನ ಪ್ರಸಾದ ಸ್ವೀಕರಿಸಲು ಬರುವರೆಂದು ಪ್ರತೀತಿ ಇದೆ. ಸಾವಿರಾರು ಭಕ್ತರು ಈ ಪ್ರಸಾದ ಸ್ವೀಕರಿಸಲು ದೇಶದ ಎಲ್ಲೆಡೆಯಿಂದಲೂ ಆಗಮಿಸುವರು. ಸಪ್ತೋತ್ಸವವು ಇಲ್ಲಿಗೆ ಕೊನೆಗೊಳ್ಳುವುದು. “ರಥಸ್ಯ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ” ಎಂಬ ಪುರಾಣೋಕ್ತಿಯಂತೆ ಜಗತ್ತಿನಾದ್ಯಂತ ಎಷ್ಟೋ ಜನ ಕೃಷ್ಣಭಕ್ತರು ರಥದಲ್ಲಿರುವ ಕೇಶವನನ್ನು ಕಂಡು ತಮ್ಮ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳುತ್ತಾರೆ.
ಕಮಲಾತನಯ.(ಕಾಪು ಲಕ್ಷ್ಮೀಕಾಂತ ತಂತ್ರಿ)

ಜೇನುತುಪ್ಪದಲ್ಲಿ ನೆನೆಸಿದ ಒಣ ಖರ್ಜೂರ ತಿಂದರೆ ಏನಾಗುತ್ತದೆ ಅಂತಾ ಗೊತ್ತಾ..?

ಜೇನುತುಪ್ಪದಲ್ಲಿ ನೆನೆಸಿದ ಒಣ ಖರ್ಜೂರ ತಿಂದರೆ ಏನಾಗುತ್ತದೆ ಅಂತಾ ಗೊತ್ತಾ..?
ಜೇನು…ನಮ್ಮ ದೇಹಕ್ಕೆ ಬೇಕಾದ ಎಷ್ಟೋ ಪೋಷಕಾಂಶಗಳನ್ನು ಕೊಡುತ್ತದೆ. ಅನೇಕ ಔಷಧೀಯ ಗುಣಗಳು ಇದರಲ್ಲಿವೆ. ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್, ಆಂಟಿ ವೈರಲ್ ಗುಣಗಳು ಜೇನಿನಲ್ಲಿ ಇರುವ ಕಾರಣ ಜೇನು ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶಕ್ತಿಯನ್ನು ನೀಡುತ್ತದೆ. ಅದೇ ರೀತಿ ಒಣ ಖರ್ಜೂರವನ್ನು ಬಹಳಷ್ಟು ಮಂದಿ ಇಷ್ಟಪಟ್ಟು ತಿನ್ನುತ್ತಾರೆ. ಅದರಿಂದಲೂ ನಮಗೆ ಅನೇಕ ಲಾಭಗಳಿವೆ. ಜೇನಿನಲ್ಲಿ ಒಂದು ವಾರ ಕಾಲ ನೆನೆಸಿದ ಒಣ ಖರ್ಜೂರವನ್ನು ನೀವೆಂದಾದರೂ ತಿಂದಿದ್ದೀರಾ? ಆ ರೀತಿ ತಿನ್ನುವುದರಿಂದ ನಮಗೆ ಅನೇಕ ವಿಧದ ಪ್ರಯೋಜನಗಳಿವೆ. ಅದೇನು ಅಂತ ಈಗ ತಿಳಿದುಕೊಳ್ಳೋಣ.
ಒಂದು ಜಾರ್‌ ನಲ್ಲಿ 3/4ರಷ್ಟು ಜೇನು ತೆಗೆದುಕೊಳ್ಳಬೇಕು. ಅದರಲ್ಲಿ ಬೀಜ ತೆಗೆದ ಖರ್ಜೂರ ಹಾಕಬೇಕು. ಆ ಬಳಿಕ ಮುಚ್ಚಳ ಹಾಕಿ ಜಾರನ್ನು ಚೆನ್ನಾಗಿ ಕುಲುಕಬೇಕು. ಆ ಬಳಿಕ ಆ ಜಾರನ್ನು ಒಂದು ವಾರ ಕಾಲ ಹಾಗೆಯೇ ಇಡಬೇಕು. ನಡುನಡುವೆ ಆ ಜಾರನ್ನು ಶೇಕ್ ಮಾಡಬಹುದು. ವಾರದ ಬಳಿಕ ಜಾರನ್ನು ತೆಗೆದು ದಿನಕ್ಕೆ ಒಂದೆರಡು ಖರ್ಜೂರ ತಿನ್ನಬೇಕು. ಇದರಿಂದ ಏನೆಲ್ಲಾ ಲಾಭ ಸಿಗುತ್ತದೆ ಎಂದು ನೋಡೋಣ..!
1. ಮೇಲೆ ಹೇಳಿದ ವಿಧವಾಗಿ ತಯಾರಿಸಿದ ಜೇನು, ಒಣ ಖರ್ಜೂರ ಮಿಶ್ರಣದಿಂದ ಕೆಮ್ಮು, ಜ್ವರದಂತಹ ಶ್ವಾಸಕೋಶ ಸಮಸ್ಯೆಗಳು ಹೋಗುತ್ತವೆ. ಜ್ವರ ಕಡಿಮೆಯಾಗುತ್ತದೆ.
2. ದೇಹದ ರೋಗ ನಿರೋಧಕ ಶಕ್ತಿ ದುಪಟ್ಟಾಗುತ್ತದೆ. ಇದರಿಂದ ಇನ್ಫೆಕ್ಷನ್, ರೋಗಗಳು ಬರುವುದಿಲ್ಲ.
3. ನಿದ್ದೆ ಚೆನ್ನಾಗಿ ಬರುತ್ತದೆ. ನಿದ್ರಾಹೀನತೆಯಿಂದ ನರಳುವವರು ಈ ಮಿಶ್ರಣ ಕುಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಒತ್ತಡ, ಆತಂಕದಂತಹವು ಕಡಿಮೆಯಾಗುತ್ತವೆ.
4. ಗಾಯಗಳು ಶೀಘ್ರ ಗುಣಮುಖವಾಗುತ್ತವೆ. ಆಂಟಿ ಬಯೋಟಿಕ್ ಗುಣಗಳ ಕಾರಣ ಗಾಯಗಳು, ಹುಣ್ಣು ಶೀಘ್ರವಾಗಿ ಗುಣವಾಗುತ್ತವೆ.
5. ಜ್ಞಾಪಕಶಕ್ತಿ ಹೆಚ್ಚಾಗುತ್ತದೆ. ಚಿಕ್ಕಮಕ್ಕಳಿಗೆ ನಿತ್ಯ ತಿನ್ನಿಸುವುದರಿಂದ ಓದಿನಲ್ಲಿ ಮುಂದೆ ಬರುತ್ತಾರೆ. ದೊಡ್ಡವರು ಈ ಮಿಶ್ರಣ ಸೇವಿಸಿದರೆ ಮರೆಗುಳಿತನ ಹೋಗುತ್ತದೆ.
6. ಮಹಿಳೆಯರಿಗೆ ಬೇಕಾದ ಕಬ್ಬಿಣಾಂಶ, ಕ್ಯಾಲ್ಸಿಯಂ ಹೇರಳವಾಗಿ ಲಭ್ಯವಾಗುತ್ತದೆ. ಇದು ರಕ್ತಹೀನತೆಯನ್ನು ನಿವಾರಿಸಿ ಮೂಳೆಗಳನ್ನು ಸದೃಢಗೊಳಿಸುತ್ತದೆ.
7. ಋತುಮಾನಗಳಲ್ಲಿ ಬರುವ ವಿವಿಧ ರೀತಿಯ ಅಲರ್ಜಿಗಳು ನಿವಾರಣೆಯಾಗುತ್ತವೆ. ಇನ್ಫೆಕ್ಷನ್ ಕಡಿಮೆಯಾಗುತ್ತದೆ.
8. ಮಧುಮೇಹ ಇರುವವರಿಗೆ ಉತ್ತಮ ಔಷಧಿ. ಶುಗರ್ ಲೆವೆಲ್ ಕಂಟ್ರೋಲ್ ಮಾಡುತ್ತದೆ.
9ಹಲವು ವಿಧದ ಕ್ಯಾನ್ಸರ್‌ಗಳಿಗೆ ಈ ಮಿಶ್ರಣ ದಿವ್ಯೌಷಧಿ. ಕ್ಯಾನ್ಸರ್ ಕಣಗಳು ವೃದ್ದಿಯಾಗಲ್ಲ.
10. ಜೀರ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಮಲಬದ್ಧತೆ, ಗ್ಯಾಸ್, ಅಸಿಡಿಟಿ, ಅಜೀರ್ಣದಂತಹ ಸಮಸ್ಯೆಗಳು ಬರಲ್ಲ. ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ವೃದ್ಧಿಯಾಗುತ್ತದೆ. ಕೆಟ್ಟ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಹೊಟ್ಟೆಯಲ್ಲಿನ ಜಂತುಹುಳು ನಾಶವಾಗುತ್ತದೆ.
11. ರಕ್ತಸಂಚಲನೆ ಉತ್ತಮಗೊಳ್ಳುತ್ತದೆ. ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ರಕ್ತಹೀನತೆ ಇರುವವರಿಗೆ ಇದರಿಂದ ಉಪಯುಕ್ತ. ಬಿಪಿ ಕಡಿಮೆಯಾಗುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ.
12. ಕೆಟ್ಟ ಕೊಲೆಸ್ಟೋರಾಲ್ ಹೋಗಿ ಒಳ್ಳೆಯ ಕೊಲೆಸ್ಟೋರಾಲ್ ವೃದ್ಧಿಯಾಗುತ್ತದೆ. ತೂಕ ಕಡಿಮೆಗೊಳಿಸುತ್ತದೆ. ಕೊಬ್ಬು ಕರಗುತ್ತದೆ.

ಮನುಸ್ಮೃತಿ : ಪ್ರಗತಿಪರ ಮತ್ತು ಬುದ್ಧಿಜೀವಿಗಳ ಅನ್ನದಾತ

ಮನುಸ್ಮೃತಿ : ಪ್ರಗತಿಪರ ಮತ್ತು ಬುದ್ಧಿಜೀವಿಗಳ ಅನ್ನದಾತ
ಮನು ಸ್ಮೃತಿಒಂದು ವೇಳೆ “ಬೆಳಗಾನ ಎದ್ದು ನಾ ಯಾರ್ಯಾರ ನೆನೆಯಲಿ” ಎನ್ನುವ ಪ್ರಶ್ನೆ ನಮ್ಮ ಪ್ರಗತಿಪರ ಮಿತ್ರರರನ್ನು ಒಮ್ಮೆ ಕಾಡಿದರೆ ಅವರು ಯಾರನ್ನು ನೆನಯಬಹುದು…?
“ಮನುಸ್ಮೃತಿ!”
ಹೌದು! ಅವರು ನೆನೆಯಬೇಕಿರುವುದು ಮನುಸ್ಮೃತಿಯನ್ನು.ಯಾಕೆಂದರೆ ಬಹಳಷ್ಟು ಪ್ರಗತಿಪರರು ತಮ್ಮ ದಿನನಿತ್ಯದ ಭಾಷಣಗಳಲ್ಲಿ,ಬರಹಗಳಲ್ಲಿ ಕಡ್ಡಾಯವೇನೋ ಎಂಬಂತೆ ಬಳಸಿಯೇ ಬಳಸುವ ಪದಗಳಲ್ಲಿ “ಮನು, ಮನುವಾದಿ, ಮನುಸ್ಮೃತಿ, ಮನುವಾದಿ ಸಂವಿಧಾನ” ಇತ್ಯಾದಿಗಳು ಬಂದೇ ಬರುತ್ತವೆ (ಸಿನೆಮಾಕ್ಕೊಬ್ಬ “ಹೀರೋ/ವಿಲನ್”ಅನಿವಾರ್ಯವೆಂಬಂತೆ) ಆ ಪದಗಳನ್ನು ಬಳಸಿ ಬಳಸಿಯೇ ಹೆಸರು,ಹಣ,ಪ್ರಶಸ್ತಿ ಪಡೆದುಕೊಂಡವರ ಪಾಲಿಗೆ “ಮನುಸ್ಮೃತಿ” ಅನ್ನದಾತನೇ ಸರಿ.ಮನುಸ್ಮೃತಿಯ ಅತಿ ದೊಡ್ಡ ಫಲಾನುಭವಿಗಳು ಇವರೇ.
ಮನುವಾದಿ ಸಂವಿಧಾನ,ಮನುಸ್ಮೃತಿಯೇ ಹಿಂದೂಗಳ ಕಾನೂನು ಗ್ರಂಥ ಅಂತೆಲ್ಲ ಈ ಪ್ರಗತಿಪರರು ಮಾತನಾಡುವಾಗ ನನ್ನಂತ ಜನ ಸಾಮಾನ್ಯರಿಗೆ ಯಾರೀತ “ಮನು”?,”ಮನುಸ್ಮೃತಿ” ಎಂದರೇನು? ಎನ್ನುವ ಪ್ರಶ್ನೆಗಳೇಳುತ್ತವೆ.ಈ ಪ್ರಶ್ನೆಗಳು ನಮ್ಮಲ್ಲಿ ಯಾಕೆ ಮೂಡುತ್ತವೆಯೆಂದರೆ,ನನ್ನ ದಿನನಿತ್ಯದ ಜೀವನದಲ್ಲಿ,ನನ್ನ ಅನುಭವ,ಆಚರಣೆಗಳಲ್ಲಿ ನಾನೆಂದಿಗೂ ಈ ಮನುವನ್ನೋ, ಮನುಸ್ಮೃತಿಯನ್ನೋ ಮುಖಾಮುಖಿಯಾಗಿಲ್ಲ.ಹಳ್ಳಿಗಳಲ್ಲಿ ನಡೆಯುತಿದ್ದ/ನಡೆಯುತ್ತಿರುವ ನ್ಯಾಯ ಪಂಚಾಯಿತಿಗಳನ್ನು ನಾನು ನೋಡಿದ್ದೇನೆ ಅಲ್ಲಿ ಎಲ್ಲೂ ಮನುಸ್ಮೃತಿಯ ಆಧಾರದ ಮೇಲೆ ತೀರ್ಮಾನಗಳನ್ನು ನೀಡಿದ್ದನ್ನು ಕಂಡಿಲ್ಲ. ನಿಜವಾಗಿಯೂ “ಮನುಸ್ಮೃತಿ” ಅನ್ನುವುದೊಂದಿದೆ ಎನ್ನುವುದು ನನಗೆ ತಿಳಿದಿದ್ದೇ ಬುದ್ಧಿಜೀವಿಗಳ ಮಾತುಗಳನ್ನು ಕೇಳಲು (ಅದು ನನ್ನ ೨೦ನೇ ವಯಸ್ಸಿನ ನಂತರ) ಆರಂಭಿಸಿದ ಮೇಲೆಯೇ ಹೊರತು,ಅದಕ್ಕೂ ಮೊದಲು ನನ್ನ “ಹಿಂದೂ ಸಂಪ್ರದಾಯ”ಕ್ಕೊಂದು “ಕಾನೂನು ಗ್ರಂಥ”ವಿದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ.ನಮಗೇ ಪರಕೀಯವಾಗಿರುವ ಈ “ಮನು ಮತ್ತು ಮನುಸ್ಮೃತಿ” ಅದೇಗೆ “ಹಿಂದೂ ಕಾನೂನು ಗ್ರಂಥ”ವಾಗುತ್ತದೆ? ಈ ವಾದಗಳು ಹುಟ್ಟಿಕೊಂಡಿದ್ದು ಹೇಗೆ ಅಂತ ನೋಡಲಿಕ್ಕೆ ಹೊರಟರೆ ನಾವು ಹೋಗಿ ನಿಲ್ಲುವುದು ಬ್ರಿಟಿಷರ ಬಳಿ.
ವ್ಯಾಪಾರಕ್ಕೆಂದು ಇಲ್ಲಿಗೆ ಬಂದು ನಮ್ಮ ನೆಲವನ್ನೇ ಕಬಳಿಸಿ ಇಲ್ಲಿ ಕುಳಿತ ಬ್ರಿಟಿಷರಿಗೆ ಇಲ್ಲಿನ ಅಗಾಧ ಸಾಮಾಜಿಕ,ಸಾಂಸ್ಕೃತಿಕ ವೈವಿಧ್ಯಮಯ ಸಮಾಜದ ತಲೆಬುಡ ಅರ್ಥವಾಗಲಿಲ್ಲ.ಇಲ್ಲಿ ಅವರ ಆಳ್ವಿಕೆ ಜಾರಿಗೆ ತರಲಿಕ್ಕಾಗಿ ಅವರಿಗೆ ಅವರ ದೇಶದಲ್ಲಿರುವಂತದ್ದೇ ಒಂದು ವ್ಯವಸ್ಥೆ ಬೇಕು ಎಂದುಕೊಂಡು ಯುರೋಪಿಯನ್ ಸಾಮಾಜಿಕ ವ್ಯವಸ್ಥೆಯನ್ನೇ ನಮ್ಮ ಸಮಾಜಕ್ಕೂ ಸಮೀಕರಿಸಿದರು.ಅವರಿಗೆ ಇಲ್ಲಿ ಮುಖ್ಯವಾಗಿ ತಲೆನೋವು ತರುತಿದ್ದ ವಿಷಯಗಳಲ್ಲಿ “ವ್ಯಾಜ್ಯದ ತೀರ್ಮಾನಗಳು” ಪ್ರಮುಖವಾಗಿದ್ದವು.
ಕೋರ್ಟುಗಳಲ್ಲಿ ಬ್ರಿಟಿಷ್ ನ್ಯಾಯಾಧೀಶರಿಗೆ ಪಂಡಿತರು ಸಹಾಯಕರಾಗಿ ನಿಯೋಜಿತರಾಗಿದ್ದರು.ಈ ಪಂಡಿತರು ನಮ್ಮ ಸಮಾಜದ ಬಹುತ್ವಕ್ಕೆ ತಕ್ಕಂತೆ ಒಂದೇ ವಿಷಯಗಳ ಮೇಲೆ ಭಿನ್ನ ವ್ಯಾಖ್ಯಾನ,ಅಭಿಪ್ರಾಯಗಳನ್ನು ನೀಡುವುದನ್ನು ನೋಡಿದ ಬ್ರಿಟಿಷರು ಈ ಪಂಡಿತರನ್ನು ಬಿಟ್ಟು ತಾವೇ ತಮ್ಮ ರಿಲಿಜನ್ನ್ ಗ್ರಂಥಗಳ ಆಧಾರದ ಮೇಲೆ ನಡೆಯುವ ಯುರೋಪ್ ಸಮಾಜದಂತೆಯೇ ಇಲ್ಲಿಯೂ ಒಂದು ಕಾನೂನು ಗ್ರಂಥವಿರಲೇಬೇಕು ಎಂದು ಹುಡುಕಲು ಹೊರಟವರಿಗೆ ಹಲವು ಸ್ಮೃತಿಗಳು ಸಿಕ್ಕಿದವು.
ಆದರೆ,ಅವರಿಗೆ ಪ್ರಿಯವೆನಿಸಿದ್ದು “ಮನುಸ್ಮೃತಿ” (ಯಾಕೆ ಮನುಸ್ಮೃತಿಯೇ ಪ್ರಿಯವಾಯಿತು? ಬಹುಷಃ ಅದರೊಳಗೆ “ಹಿಂದೂ ರಿಲಿಜನ್ (?)” ಎಂಬುದು ಎಷ್ಟು ಘನಘೋರ ಎಂದು ತೋರಿಸಲಿಕ್ಕೆ ಬ್ರಿಟಿಷರಿಗೆ ಬೇಕಾದಷ್ಟು ಸಾಲುಗಳು ಕಾಣಿಸಿದ್ದರಿಂದ ಇದ್ದಿರಬಹುದು).ವಿಲಿಯಂ ಜೋನ್ಸ್ ಮನುಸ್ಮೃತಿಯನ್ನು ಅನುವಾದಿಸಿದ ನಂತರ ಬ್ರಿಟಿಷರು “ಮನುಸ್ಮೃತಿ”ಯೇ “ಹಿಂದೂಗಳ ಕಾನೂನು ಗ್ರಂಥ” ಎಂದು ದೊಡ್ಡ ದನಿಯಲ್ಲಿ ಪ್ರಚಾರ ಮಾಡಲಿಕ್ಕೆ ಶುರುಮಾಡಿದರು.ಅದರ ಜೊತೆಗೆ ಅದರೊಳಗಿನ ಕೆಲವು ವಾಕ್ಯಗಳನ್ನು ಉಲ್ಲೇಖಿಸಿ,ಇಂತ ಗ್ರಂಥದ ಆಧಾರದ ಮೇಲೆ ನಿಂತಿರುವ ಸಮಾಜ ಭ್ರಷ್ಟವಾಗಿದೆ,ಸ್ತ್ರೀ ವಿರೋಧಿಯಾಗಿದೆ ಎನ್ನಲಾರಂಭಿಸಿದರು.ಬ್ರಿಟಿಷರಿಂದ ಶಿಕ್ಷಣ ಪಡೆದ ಇಲ್ಲಿನ ಜನರೂ ಬ್ರಿಟಿಷರ ಈ ತಪ್ಪು ಅನಿಸಿಕೆಗಳನ್ನು ನಿಜವೆಂದು ನಂಬಿಕೊಂಡರು.ಹಾಗಾಗಿಯೇ ಇವತ್ತಿಗೂ ಪ್ರಗತಿಪರರು ಮಾತಿಗೊಮ್ಮೆ “ಮನುವಾದಿ,ಮನುಸಂವಿಧಾನ,ಮನುಸ್ಮೃತಿ” ಎನ್ನುವುದು.
“ಮನುಸ್ಮೃತಿ”ಯನ್ನು “ಹಿಂದೂಗಳ ಕಾನೂನು ಗ್ರಂಥ” ಎಂದು ಮನುಸ್ಮೃತಿಯನ್ನು ವಿರೋಧಿಸುವವರಿಗೂ ಮತ್ತು ಮನುಸ್ಮೃತಿಯ ಪರವಾಗಿ ವಾದಿಸುವವರಿಗೂ ಒಂದಿಷ್ಟು ಪ್ರಶ್ನೆಗಳಿವೆ.
೧.ಮನುವಿನ ಜೀವಿತಾವಧಿಯ ಕಾಲಘಟ್ಟ ಮತ್ತು ಮನುಸ್ಮೃತಿ ರಚನೆಯಾದ ಕಾಲಮಾನವೇನು?
೨.ಬ್ರಿಟಿಷರು ಬರುವವರೆಗೂ ರಾಜಕೀಯವಾಗಿ ಎಂದಿಗೂ ಒಂದಾಗಿದ್ದಿರದ (ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಇವತ್ತಿಗೂ ವೈವಿಧ್ಯತೆ ಇದ್ದೇ ಇದೆ ಎನ್ನುವುದನ್ನೂ ಒಪ್ಪುತ್ತೀರಿ ಎಂದುಕೊಳ್ಳುತ್ತಾ) ಈ ದೇಶದಲ್ಲಿ ಯಾರ ಆಳ್ವಿಕೆಯ ಕಾಲದಲ್ಲಿ ಮನುಸ್ಮೃತಿಯನ್ನು ಜಾರಿಗೆ ತರಲಾಯಿತು?
೩.ಬ್ರಿಟಿಷರು ಬರುವ ಮೊದಲಿಗೆ ಆ ರೀತಿಯ ಕಾನೂನು ಇಲ್ಲಿ ಪಾಲನೆಯಾಗುತ್ತಿತ್ತು ಅನ್ನುವುದಾದರೆ,ಆಗಿನ ಕಾಲದ ಪಂಡಿತರಿಗೇಕೆ ಈ ಬಗ್ಗೆ ಏಕೆ ಗೊತ್ತಾಗಲಿಲ್ಲ? ಮತ್ತು ಬ್ರಿಟಿಷರಿಗೇಕೆ ನಮಗಾಗಿ ಒಂದು ಕಾನೂನು ಗ್ರಂಥವನ್ನು ಹುಡುಕುವ ಸ್ಥಿತಿ ಬಂತು?
೪.ಮನುಸ್ಮೃತಿ ಎನ್ನುವುದು ಇಡೀ ಭಾರತದಾದ್ಯಂತ ಕಾನೂನಿನ ರೂಪದಲ್ಲಿ ಜಾರಿಯಲ್ಲಿತ್ತು ಎನ್ನುವುದಾದರೆ, ಸಂಸ್ಕೃತ ಕಲಿತ ಯಾವ ಶೂದ್ರನ ಕಿವಿಗೆ ಸೀಸ ಸುರಿಯಲಾಗಿತ್ತು ಅಥವಾ ಅದರಲ್ಲಿ ಉಲ್ಲೇಖಿಸಿರುವ ಇನ್ನಿತರ ಯಾವ ಶಿಕ್ಷೆಗಳನ್ನು ಯಾರ ಮೇಲೆ ಜಾರಿತೆ ತರಲಾಗಿತ್ತು? ಈ ಬಗ್ಗೆ ಸಾಕ್ಷ್ಯಗಳು,ಪುರಾವೆಗಳು ಕನಿಷ್ಟ ಉಲ್ಲೇಖಗಳು ಎಲ್ಲಾದರೂ ಇವೆಯೇ?
೫.ಈಗೀನ ನಮ್ಮ ನ್ಯಾಯಾಲಯಗಳಂತೆ ಅಥವಾ ಬ್ರಿಟಿಷ್ ನ್ಯಾಯಾಲಯಗಳಂತೆ ನಮ್ಮ ಸಮಾಜದಲ್ಲಿ ಆಗಲೂ ಕೇಂದ್ರಿಕೃತ (ದೆಹಲಿಯೋ ಮತ್ತಿನ್ಯಾವುದೋ ದೊಡ್ಡ ನಗರ ಅಂದುಕೊಳ್ಳೋಣ)ನ್ಯಾಯದಾನವಾಗುತಿತ್ತೇ ಅಥವಾ ಗ್ರಾಮೀಣ ಮಟ್ಟದಲ್ಲಿಯೋ ಅಥವಾ ಆಯಾ ಪಂಗಡಗಳಲ್ಲಿ ಇವೆಲ್ಲ ತೀರ್ಮಾನಗಳಾಗುತಿದ್ದವೇ? (ಉದಾ: ಜಿಲ್ಲಾ ಕೋರ್ಟ್,ಹೈಕೋರ್ಟ್,ಸುಪ್ರೀಂ ಕೋರ್ಟ್ ಇತ್ಯಾದಿ).ಆಗುತಿದ್ದರೆ,ಅದು ಜಾರಿಯಾಗುತ್ತಿದೆಯೋ ಇಲ್ಲವೋ ಎಂದು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದವರು ಯಾರು?
೬.ಸಂಸ್ಕೃತ ಕೇವಲ ಬ್ರಾಹ್ಮಣರ ಸ್ವತ್ತು ಎನ್ನುವ ಮತ್ತು ಮನುಸ್ಮೃತಿಯೇ ನಮ್ಮ ಕಾನೂನುಗ್ರಂಥ ಎನ್ನುವ ವಾದವನ್ನು ಒಪ್ಪಿಕೊಂಡು ಮುನ್ನಡೆಯುವುದಾದರೇ, ಮುಂದಿನ ಪ್ರಶ್ನೆ : ಈ ದೇಶದ ಎಲ್ಲಾ ಜಾತಿಗಳ/ಪಂಗಡಗಳ ನ್ಯಾಯ ತೀರ್ಮಾನಿಕೆಯಲ್ಲಿ ಬ್ರಾಹ್ಮಣರು ಪಾತ್ರ ವಹಿಸುತಿದ್ದರೇ? ಇಲ್ಲವೆಂದಾದರೆ, ಸಂಸ್ಕೃತದಲ್ಲಿದ್ದ ಮನುಸ್ಮೃತಿಯು ಭಾರತದ ಇತರ ಜಾತಿಯ ಜನರಿಗೆ ಹೇಗೆ ಅರ್ಥವಾಗುತಿತ್ತು ಮತ್ತು ಅವರೇಗೆ ಅದರಲ್ಲಿ ಬರೆದಿರುವಂತ ಶಿಕ್ಷೆ,ನ್ಯಾಯ ತೀರ್ಮಾನಗಳನ್ನು ಜಾರಿಗೆ ತರುತಿದ್ದರು?
ಪ್ರಶ್ನೆಗಳೂ ಇನ್ನೂ ಒಂದಿಷ್ಟಿವೆ.ಮೊದಲು ಇಷ್ಟಕ್ಕೆ ಉತ್ತರ ಸಿಕ್ಕರೆ,ಆ ನಂತರ ನಮ್ಮ ಸಮಾಜದಲ್ಲಿ ಸ್ಮೃತಿಗಳ ಸ್ಥಾನ,ಮಹತ್ವ,ನ್ಯಾಯ ತೀರ್ಮಾನ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲು ಅನುಕೂಲವಾದೀತು.
ಒಂದು ವೇಳೆ ಮೇಲಿನ ಪ್ರಶ್ನೆಗಳಿಗೆ ಸಾಕ್ಷ್ಯ,ಪುರಾವೆಗಳು,ಉತ್ತರಗಳು ಇಲ್ಲವೆಂದಾದರೇ ಮನುಸ್ಮೃತಿಯ ಕುರಿತು ಈಗ ಇರುವ ವಾದಗಳೇ ಮಹತ್ವ ಕಳೆದುಕೊಳ್ಳುತ್ತವೆ ಮತ್ತು ಅವು ಕೇವಲ ಬ್ರಿಟಿಷರು ಸೃಷ್ಟಿಸಿ ಹೋಗಿರುವ ಸುಳ್ಳಿನ ಸರಮಾಲೆಯ ಮೇಲಿನ ಬೌದ್ಧಿಕತೆಯಾಗುತ್ತದಷ್ಟೆ.
ಯಾಕೆಂದರೆ, ಜಾರಿಯಲ್ಲೇ ಇರದಿದ್ದ “ಗ್ರಂಥ”ವೊಂದರಿಂದ ಯಾರಿಗೆ ತೊಂದರೆಯಾದೀತು? ಮನುವೇನೋ ಮನುಸ್ಮೃತಿಯನ್ನು ಬರೆದ ಸರಿ.ಅದನ್ನು ಯಾರಾದರೊಬ್ಬರು ಜಾರಿಗೆ ತರದೇ ಅದರಿಂದ ಸಮಸ್ಯೆಯಾಗಿದ್ದು ಯಾರಿಗೆ? ಅದು ಒಂದು ವೇಳೆ ಜಾರಿಯಲ್ಲಿ ಇದ್ದಿರಬಹುದಾದರೆ,ಅದೊಂದು ಸೀಮಿತ ಪ್ರದೇಶಕ್ಕೋ,ಪಂಗಡಕ್ಕೋ ಇದ್ದಿರಬಹುದೇ ಹೊರತು ಇಡಿ ಭಾರತದಾದ್ಯಂತ ಇರಲಿಕ್ಕೆ ಸಾಧ್ಯವೇ?, ಉದಾಹರಣೆಗೆ ; ಶಂಕರಾಚಾರ್ಯರು ಹಿಂದೂ ಧರ್ಮದ ಪುನರುತ್ಥಾನ ಮಾಡಿದರು, ಬೌದ್ಧ ಧರ್ಮವನ್ನು ಇಲ್ಲಿಂದ ಕಾಲ್ಕೀಳುವಂತೆ ಮಾಡಿದರು ಎನ್ನುವ ಭ್ರಮೆಯೊಂದಿದೆಯಲ್ಲವೇ?,ಹಾಗಿದ್ದರೆ, ಇವತ್ತಿಗೆ ಭಾರತಾದಾದ್ಯಂತ ಇರುವ “ಬ್ರಾಹ್ಮಣ”ರಲ್ಲಿ ಎಷ್ಟು ಜನ “ಅದ್ವೈತ ಮತ/ಶಂಕರರ” ಅನುಯಾಯಿಗಳಿದ್ದಾರೆ? ಅದು ಬಿಡಿ. ನಮ್ಮ “ಮಧ್ವಾಚಾರ್ಯ”ರ ಉಡುಪಿಯಲ್ಲಿ ಇರುವವರೆಲ್ಲ “ಮಾಧ್ವ”ರೇ? ಅಲ್ಲಿ “ಸ್ಮಾರ್ತ”ರಿಲ್ಲವೇ?. ಇನ್ನೂ ರಾಮಾನುಜಾಚಾರ್ಯರ ಅನುಯಾಯಿಗಳೆಷ್ಟು ಜನ? ಅಥವಾ ಈ “ದ್ವೈತ/ಅದ್ವೈತ/ವಿಶಿಷ್ಟಾದ್ವೈತ” ಮತಕ್ಕೇ ಸೇರದ ಬ್ರಾಹ್ಮಣ ಪಂಗಡಗಳೆಷ್ಟಿವೆ ಭಾರತದಲ್ಲಿ? ಭಾರತದ ವೈವಿಧ್ಯತೆಯ ಅಗಾಧತೆಯ ಮಟ್ಟವೇ ಅಂತದ್ದು.ಇಂತ ವೈವಿಧ್ಯಮಯ ದೇಶದಲ್ಲಿ ಒಂದೇ ಕಾನೂನು ಗ್ರಂಥವಿದ್ದಿರಲಿಕ್ಕೆ ಎಂದಾದರೂ ಸಾಧ್ಯವೇ? ಶಂಕರ,ಮಾಧ್ವ,ರಾಮಾನುಜ,ಬುದ್ಧ (ಹಾಗೇ ಇನ್ನಿತರ ಭಕ್ತಿಪಂಥ ಮತ್ತು ಅನುಭಾವಿಗಳು) ರಂತವರೇ ಈ ನೆಲದ ವೈವಿಧ್ಯತೆಯ ಅಗಾಧತೆಯಲ್ಲಿ ವ್ಯಾಪಿಸಿರಲಿಲ್ಲವಾದರೇ,ಅದೇಗೆ “ಮನುಸ್ಮೃತಿ”ಯೊಂದೇ ಇಡೀ ಭಾರತವನ್ನೂ ಮತ್ತು ಹಿಂದೂಗಳನ್ನೂ ವ್ಯಾಪಿಸಿಕೊಂಡಿತ್ತು
ಸಾಮಾನ್ಯ ಜನರ ಭಾಷೆಯಲ್ಲಿ ಹೇಳುವುದಾದರೆ,ಇದೊಂದು ರೀತಿ ವಿದ್ಯಾರ್ಥಿಯೊಬ್ಬ ಯಾವುದೋ “ದೊಡ್ಡ ಪುಸ್ತಕ”ವನ್ನು ಸಲ್ಪವೂ ಓದಿಕೊಳ್ಳದೇ,’ತಲೆದಿಂಬು’ ಮಾಡಿಕೊಂಡು ಗಡದ್ದಾಗಿ ಮಲಗಿ,ಮರುದಿನ ಪರೀಕ್ಷೆಯಲ್ಲಿ Rank ಪಡೆದಂತೆ ಕನಸು ಕಟ್ಟಿಕೊಳ್ಳುವಂತೆ ಅನ್ನಿಸುತ್ತದೆಯಷ್ಟೇ. (ಈ ರೀತಿಯ ಚಮತ್ಕಾರಿ ಪುಸ್ತಕ ಸಿಕ್ಕರೆ ನಮ್ಮ ವಿದ್ಯಾರ್ಥಿ ಮಿತ್ರರು ಬಿಟ್ಟಾರೆಯೇ!)
ಒಂದು ವಿಷಯ ಸ್ಪಷ್ಟಪಡಿಸುತ್ತ ಲೇಖನ ಮುಗಿಸುತ್ತೇನೆ ; ಮನುಸ್ಮೃತಿಯಿಂದ ಹೆಕ್ಕಿ ಹೇಳಲಾಗುವ ಸಾಲುಗಳನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ.ಸಾಲುಗಳನ್ನು ಬಿಡಿ, ಮೊದಲೇ ಹೇಳಿದಂತೆ ಈ “ಮನುಸ್ಮೃತಿ”ಯೋ ಅಥವಾ ಇನ್ನೊಂದು ಸ್ಮೃತಿಯೋ ಅದ್ಯಾವುದೂ ನನ್ನ ದೈನಂದಿನ ಮತ್ತು ಇದುವರೆಗಿನ ಜೀವನದಲ್ಲಿ ಮುಖಾಮುಖಿಯಾಗಿಲ್ಲ.ಹಾಗಾಗಿ ಅದರ ಮೇಲೆ ನನಗೇನು ವಿಶೇಷ ಮಮಕಾರವೂ ಇಲ್ಲ,ಪ್ರೀತಿಯೂ ಇಲ್ಲ.ಆದ ಕಾರಣ,ಮನುಸ್ಮೃತಿಯಲ್ಲಿ ಬರೆದಿರುವುದು ಸರಿಯೋ/ತಪ್ಪೋ ಅದನ್ನು ನೀವು ಒಪ್ಪುತ್ತೀರೇ ಎನ್ನುವಂತ ಪ್ರಶ್ನೆಗಳು ಈ ಲೇಖನಕ್ಕೆ ಸರಿಹೊಂದುವುದಿಲ್ಲ.ಹಾಗಾಗಿ ಅಂತ ಪ್ರಶ್ನೆಗಳನ್ನು ಬಿಟ್ಟು ಮೇಲೆ ಪಟ್ಟಿಮಾಡಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ ಹಾಗೆಯೇ ನಿಮ್ಮಲ್ಲೇ ಇನ್ನೊಂದಿಷ್ಟು ಪ್ರಶ್ನೆಗಳನ್ನು ಅದನ್ನೂ ಸೇರಿಸಿ.ಲೇಖನದಲ್ಲಿ ಕೇಳಿರುವ ಪ್ರಶ್ನೆಗಳು ಸರಿಯೆನಿಸಿದರೆ,ಇನ್ನುಮುಂದೆ “ಮನುಸ್ಮೃತಿ”ಯ ಬಗ್ಗೆ ಭಾಷಣಬಿಗಿಯುವ ಮಂದಿಯ ಮುಂದೆ ಇದೇ ಪ್ರಶ್ನೆಗಳನ್ನು ಕೇಳಿ.
ಪ್ರಶ್ನೆಗಳು ಮನುಸ್ಮೃತಿಯನ್ನು “ಹಿಂದೂಗಳ ಕಾನೂನು ಗ್ರಂಥ” ಎಂದು ಮನುಸ್ಮೃತಿಯನ್ನು ವಿರೋಧಿಸುವವರಿಗೂ ಮತ್ತು ಮನುಸ್ಮೃತಿಯ ಪರವಾಗಿ ವಾದಿಸುವ ಈ ರಾಜ್ಯದ ಪ್ರಗತಿಪರರು,ಬುದ್ಧಿಜೀವಿಗಳು ಮತ್ತು ಪಂಡಿತರಿಗೆ.ಉತ್ತರ ಸಿಗಬಲ್ಲದೇ?

. ನಿಜವಾದ ಪುಷ್ಪಾರ್ಚನೆ!

. ನಿಜವಾದ ಪುಷ್ಪಾರ್ಚನೆ!
ಭಗವಂತನನ್ನು ದೇವಾಲಯಗಳಲ್ಲಿ ಮತ್ತು ಮನೆಗಳಲ್ಲೂ ಸಹ ಸಾಮಾನ್ಯವಾಗಿ ಹೂವಿನಿಂದ ಪೂಜಿಸುತ್ತೇವೆ. ಎಷ್ಟು ತುಟ್ಟಿಯಾದ (ಹೆಚ್ಚು ಬೆಲೆಯುಳ್ಳ) ಹೂವಿನಿಂದ ಪೂಜಿಸುತ್ತೇವೆಯೋ ಅಷ್ಟು ಪುಣ್ಯ ಬರುತ್ತದೆ ಎಂದು ನಮ್ಮಲ್ಲನೇಕರು ಭಾವಿಸುತ್ತೇವೆ. ಎಷ್ಟು ದುಡ್ಡು ಖರ್ಚುಮಾಡಿ ಪೂಜೆ ಮಾಡಿದೆವು ಎಂದು ಹಲವರು ಸಂಭ್ರಮದಿಂದ ಹೇಳಿಕೊಳ್ಳುವುದನ್
ನೂ ಸಹ ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ಗಿಡಗಳಲ್ಲಿ ಬಿಡುವ ಹೂವು ಸಾಲದೆಂದು ಕೆಲವು ಧನವಂತರು ಬಂಗಾರದ ಹೂವುಗಳನ್ನು ಮಾಡಿಸುತ್ತಾರೆ. ಶಿವನಿಗೆ ಬಂಗಾರದ ಬಿಲ್ವಪತ್ರೆಗಳನ್ನೂ, ವಿಷ್ಣುವಿಗೆ ಬಂಗಾರದ ತುಳಸೀ ದಳಗಳನ್ನೂ, ಅಮ್ಮನವರಿಗೆ ಬಂಗಾರದ ಹೂವುಗಳಿಂದ ಅರ್ಚಿಸಿ ಅದು ತಮ್ಮ ಉನ್ನತವಾದ ಭಕ್ತಿಗೆ ನಿದರ್ಶನವೆಂದು ಭಾವಿಸುತ್ತಾರೆ. ಭೋಗಗಳಿಗೆ ನಿಲಯವಾಗಿರುವ ಪಾಶ್ಚಾತ್ಯ ದೇಶಗಳಲ್ಲಿ ನಿವಾಸವಿರುವ ಭಾರತೀಯರಲ್ಲಿ ಈ ಲಕ್ಷಣಗಳು ಸ್ವಲ್ಪ ಹೆಚ್ಚಾಗಿಯೇ ಕಂಡುಬರುತ್ತವೆ. ಆದರೆ ಭಗವಂತನು, ಹೂವುಗಳ ಬೆಲಯನ್ನಾಧರಿಸಿ ವರ್ತಕನಂತೆ ಪುಣ್ಯವನ್ನು ಕರುಣಿಸುವುದಿಲ್ಲ. ಪುಷ್ಪಾರ್ಚನೆಯ ಸಮಯದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಮುಖ್ಯವಾದುದು ಭಕ್ತಿಯಾಗಿದೆ. ಇದೇ ವಿಷಯವನ್ನು ಗೀತೆಯಲ್ಲಿ ಪತ್ರಂ, ಪುಷ್ಪಂ, ಫಲಂ, ತೋಯಂ (ಎಲೆ, ಹೂವು, ಹಣ್ಣು, ನೀರು) ಇವುಗಳಲ್ಲಿ ಯಾವುದನ್ನಾದರೂ ನನಗೆ ಭಕ್ತಿಯಿಂದ ಅರ್ಪಿಸಿದರೆ ಸಾಕು ಎಂದು ಸ್ವಯಂ ಕೃಷ್ಣನೇ ಅಪ್ಪಣೆ ಕೊಡಿಸಿದ್ದಾನೆ. ದೇವರಿಗೆ ಸಮರ್ಪಿಸಬೇಕಾಗಿರುವುದು ಮನಸ್ಸು ಎನ್ನುವ ಪುಷ್ಪ ಎಂದು ಆದಿ ಶಂಕರರು ತಮ್ಮ ಶಿವಾನಂದಲಹರಿಯಲ್ಲಿ ವಿವರಿಸಿದ್ದಾರೆ.
ಹಾಗಾದರೆ ಭಗವಂತನಿಗೆ ಇಷ್ಟವಾದ ಪುಷ್ಪವಾವುದು? ತಾವರೆ, ನೈದಿಲೆ, ಸೇವಂತಿಗೆ, ಮಲ್ಲಿಗೆ, ಸಂಪಿಗೆ, ಕಣಗಿಲೆ, ಇವೆಲ್ಲಾ ಹೂವುಗಳನ್ನೂ ಸಹ ದೇವರ ಪೂಜೆಗೆ ಬಳಸಬಹುದು ನಿಜ, ಆದರೆ ನಿಜವಾಗಿ ಅರ್ಪಿಸ ಬೇಕಾಗಿರುವುದು ಅವನಿಗೆ ಇಷ್ಟವಾದ ಎಂಟು ಪುಷ್ಪಗಳನ್ನು.
ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗ್ರಹಾಃ
ಸರ್ವಭೂತ ದಯಾಪುಷ್ಪಂ ಕ್ಷಮಾಪುಷ್ಪಂ ವಿಶೇಷತಃ l
ಶಾಂತಿಪುಷ್ಪಂ ತಪಃsಪುಷ್ಪಂ ಧ್ಯಾನಪುಷ್ಪಂ ತಥೈವ ಚ
ಸತ್ಯಮಷ್ಟವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ ಭವೇತ್ ll
ಭಗವಂತನಿಗೆ ಪ್ರಿಯವಾದ ಪುಷ್ಪಗಳಲ್ಲಿ ಮೊದಲನೆಯದೆ ಅಹಿಂಸೆ. ಯಾವುದೇ ಜೀವಿಯನ್ನಾಗಲಿ ಯಾವುದೇ ವಿಧವಾಗಿ ಕಷ್ಟಕ್ಕೆ ಗುರಿ ಮಾಡಬಾರದು. ಒಬ್ಬರ ಮನಸ್ಸನ್ನು ಮಾತುಗಳ ಮೂಲಕವೂ ನೋಯಿಸಬಾರದು. ಮನಸ್ಸಿನಲ್ಲಿಯೂ ಸಹ ಯಾರಿಗೂ ಕೇಡೆಣಿಸಬಾರದು.
ಎರಡನೆಯ ಪುಷ್ಟವೆ ಇಂದ್ರಿಯನಿಗ್ರಹ. ಮನಸ್ಸಿನಲ್ಲಿ ಬಯಕೆ ಹುಟ್ಟುವುದೇ ತಡ ನ್ಯಾಯಾನ್ಯಾಯಗಳನ್ನು, ಧರ್ಮಾಧರ್ಮಾಗಳನ್ನು ನೋಡದೆ. ಇತರರಿಗೆ ಅದರಿಂದ ಯಾವ ವಿಧವಾದ ಕೆಡುಕಾಗಡಬಹುದೆನ್
ನುವ ವಿವೇಚನೆಯಿಲ್ಲದೆ ತಮ್ಮ ಆಸೆಗಳನ್ನು ಪೂರೈಸಿಕೊಳ್ಳುವುದು; ಇಂದ್ರಿಯಗಳ ಮೇಲೆ ಯಾವುದೇ ವಿಧವಾದ ಹಿಡಿತವಿಲ್ಲವೆನ್ನ
ುವುದರ ಲಕ್ಷಣಗಳು. ಇಂದ್ರಿಯ ನಿಗ್ರಹವು ದೇವರಿಗೆ ಇಷ್ಟವಾದ ಮತ್ತೊಂದು ಪುಷ್ಪ.
ಸರ್ವಭೂತ ದಯೆ ಮೂರನೆಯ ಪುಷ್ಪ. ಸಹ ಮಾನವರ ಮೇಲೆ ಅಷ್ಟೇ ಅಲ್ಲ ಸಕಲ ಜೀವರಾಶಿಗಳಲ್ಲಿ - ಪ್ರಾಣಿ, ಪಕ್ಷಿ, ಕ್ರಿಮಿ ಕೀಟಾದಿಗಳು, ಸಸ್ಯಗಳ ಮೇಲೆಯೂ ದಯೆ ತೋರಬೇಕೆನ್ನುವುದು ಸನಾತನ ಭಾರತೀಯ ತತ್ತ್ವ.
ನಾಲ್ಕನೇ ಪುಷ್ಪವೇ ಕ್ಷಮಾಗುಣ. ನಮಗೆ ಅಪಕಾರ ಮಾಡಿದವರಿಗೂ ಸಹ ಉಪಕಾರ ಮಾಡಬೇಕು ಅವರ ಮೇಲೆ ಪ್ರತೀಕಾರ ಸಲ್ಲದು ಎನ್ನುವುದೇ ಕ್ಷಮಾಗುಣ.
ಶಾಂತಿ ಐದನೆಯ ಪುಷ್ಪ. ಮನಸ್ಸು ಉದ್ವೇಗಕ್ಕೆ ಒಳಗಾಗಬಾರದು. ಸುಖ ಬಂದಾಗ ಹಿಗ್ಗುವುದು, ದುಃಖ ಬಂದಾಗ ಕುಗ್ಗುವುದು, ಹೊಗಳಿದರೆ ಉಬ್ಬಿ ಹೋಗುವುದು, ತೆಗಳಿದರೆ ಕುಗ್ಗಿ ಹೋಗುವುದು ಒಳ್ಳೆಯದಲ್ಲ, ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಬೇಕು.
ಆರನೆಯ ಪುಷ್ಪವೆ ತಪಸ್ಸು. ತಪಸ್ಸೆಂದರೆ ಸುತ್ತಲೂ ಹುತ್ತ ಬೆಳೆಯುವವರೆಗೆ ಒಂಟಿಕಾಲಿನ ಮೇಲೆ ನಿಲ್ಲುವುದೆಂದಲ್ಲ. ಆ ಮಾತಿಗೆ ಅರ್ಥ ಕೆಟ್ಟ ವಿಷಯಗಳನ್ನು ದೂರವಿರಿಸಿ ಒಳ್ಳೆಯ ಕಾರ್ಯಗಳನ್ನು ಸಾಧಿಸುವ ಚಲವನ್ನು ಹೊಂದಿರುವುದು.
ಏಳನೆಯ ಪುಷ್ಪವೆ ಧ್ಯಾನ. ಶಂಖದಿಂದ ಬಿದ್ದರೇನೆ ತೀರ್ಥ ಎನ್ನುವಂತೆ ಆಧುನಿಕ ವೈದ್ಯರೂ ಸಹ ಧ್ಯಾನವು ಮಾನಸಿಕ ಹಾಗು ಶಾರೀರಿಕ ಆರೋಗ್ಯಕ್ಕೆ ಒಳ್ಳೆಯದೆಂದು ಹೇಳುತ್ತಿದ್ದಾರೆ.
ಕಡೆಯದಾಗಿ ಹೇಳಿದ್ದರೂ ಸಹ ಮೊದಲನೆಯ ಸ್ಥಾನದಲ್ಲಿರಬೇಕಾಗಿರುವುದು ಎಂಟನೆಯ ಪುಷ್ಪವಾದ ಸತ್ಯ. ಯಾವಾಗಲೂ ಸುಳ್ಳನ್ನು ಆಡದೇ ಇರುವುದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ಮೋಸ ಮಾಡದೇ ಇರುವುದು, ಮೊದಲಾದವು ಸತ್ಯಪರಿಪಾಲನೆಯ ಕೆಳಗೆ ಬರುತ್ತವೆ.
ಭಗವಂತನನ್ನು ಸಾಮಾನ್ಯವಾದ ಹೂವುಗಳಿಂದಾಗಲಿ, ಬಂಗಾರದ ಹೂವುಗಳಿಂದಾಗಲಿ ಪೂಜಿಸಬಹುದು ಆದರೆ ಪೂಜಾ ಸಮಯದಲ್ಲಿ ತಪ್ಪದೇ ಅರ್ಪಿಸಬೇಕಾದದ್ದು ಮೇಲೆ ಹೇಳಿದ ಎಂಟು ಪುಷ್ಟಗಳನ್ನೆ. ಭಗವಂತನಿಗೆ ಪ್ರಿಯವಾದ ಎಂಟು ಪುಷ್ಪಗಳು - ಅಹಿಂಸೆ, ಇಂದ್ರಿಯನಿಗ್ರಹ, ಭೂತದಯೆ, ಕ್ಷಮೆ, ಶಾಂತಿ, ತಪಸ್ಸು, ಧ್ಯಾನ ಮತ್ತು ಅತ್ಯಂತ ಪ್ರಮುಖವಾಗಿರುವುದು ಸತ್ಯ ಎನ್ನುವುದನ್ನು ಮರೆಯಬಾರದು.

ತುಳಸಿಯ ಮಹತ್ವ*

ತುಳಸಿಯ ಮಹತ್ವ*
ಹಿಂದೂಗಳ ಮನೆಯಂಗಳದಲ್ಲಿ ತುಳಸಿ ವೃಂದಾವನ ಏಕಿರಬೇಕು?
ಹಿಂದೂಗಳ ಮನೆಗಳನ್ನು ಹಾಗೂ ಮನಸ್ಸುಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳನ್ನು ಆಸ್ತಿಕ ಹಿಂದೂಗಳ ಮನೆಗಳೆಂದು ಸುಲಭವಾಗಿ ಗುರುತಿಸಬಹುದು.
ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ|
ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:||
ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದೂಗಳೂ ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ.
ತುಳಸಿಯ ಸೃಷ್ಟಿ : ದೇವ-ದಾನವರು ಕ್ಷೀರ ಸಮುದ್ರವನ್ನು ಮಥಿಸಿದಾಗ ಹಲವು ವಸ್ತು ವಿಶೇಷಗಳ ಜೊತೆಗೆ ಅಮೃತವೂ ಉದಯಿಸಿತು. ಅದನ್ನು ಪಡೆಯಲೋಸುಗ ದೇವದಾನವರ ಮಧ್ಯೆ ಉಂಟಾದ ತುಮುಲದಲ್ಲಿ ಅಮೃತದ ಕೆಲವು ಬಿಂದುಗಳು ಭೂಮಿಯ ಮೇಲೆ ಬಿದ್ದುದು. ಆ ಸ್ಥಳಗಳಲ್ಲಿ ತುಳಸಿ ಸಸ್ಯಗಳಾಗಿ ಅವು ಬೆಳೆದವು. ಇನ್ನೂ ಕೆಲವರು ಹೇಳುವಂತೆ ಸಮುದ್ರ ಮಥನ ಕಾಲದಲ್ಲಿ ಅಮೃತವು ಉದಯಿಸಿದಾಗ ಶ್ರೀ ವಿಷ್ಣುವಿನ ನೇತ್ರಗಳಿಂದ ಆನಂದಾಶ್ರುಗಳು ಅದರಲ್ಲಿ ಬಿದ್ದಾಗ ತುಳಸಿಯ ಉತ್ಪತ್ತಿ(ಸೃಷ್ಟಿ)ಯಾಯಿತು. ಅದರಿಂದಾಗಿ ತುಳಸಿಯು ಹಿಂದೂಗಳಿಗೆ ಪೂಜನೀಯವಾಯಿತು. ತಾನು ಬೇರೆ ಯಾವುದರ ತುಲನೆಗೂ ಸರಿಸಾಟಿಯಾಗದಿದ್ದುದರಿಂದ ಅದಕ್ಕೆ ತುಳಸಿ ಎಂಬ ಹೆಸರು ಅರ್ಥಪೂರ್ಣವಾಯಿತು.
ತುಳಸಿಯಿಂದಾಗುವ ಆಧ್ಯಾತ್ಮಿಕ ಮತ್ತು ಶಾರೀರಿಕ ಲಾಭಗಳು : ತುಳಸಿಯಲ್ಲಿ ರಾಮ ತುಳಸಿ, ಕೃಷ್ಣ ತುಳಸಿ ಹಾಗೂ ರಾಜ ತುಳಸಿ ಎಂಬ ಅನೇಕ ಪ್ರಭೇದಗಳಿವೆ. ರಾಮ ತುಳಸಿಯ ಬಣ್ಣವು ಬಿಳಿ, ಕೃಷ್ಣ ತುಳಸಿಯು ಸ್ವಲ್ಪ ಕಪ್ಪು. ರಾಮ ತುಳಸಿಯಿಂದ ಶ್ರೀರಾಮನ ತಾರಕ ತತ್ತ್ವದ ಪ್ರಕ್ಷೇಪಣೆಯಾಗುತ್ತದೆ. ಕೃಷ್ಣ ತುಳಸಿಯಿಂದ ಅನಿಷ್ಟಶಕ್ತಿಗಳ ನಾಶಕ್ಕೆ ಪೂರಕವಾದ ಶ್ರೀಕೃಷ್ಣನ ಮಾರಕ ತತ್ತ್ವದ ಪ್ರಕ್ಷೇಪಣೆಯಾಗುತ್ತದೆ. ಅಶ್ವತ್ಥವೃಕ್ಷದಂತೆ ತುಳಸಿಯಿಂದಲೂ ಮಾನವನಿಗೆ ಪ್ರಾಣಶಕ್ತಿಯು (ಆಮ್ಲಜನಕವು) ಹೇರಳವಾಗಿ ದೊರೆಯುವುದರಿಂದ ತುಳಸಿಗೆ ಪ್ರದಕ್ಷಿಣೆಗಳನ್ನು ಹಾಕುವುದು ಲಾಭದಾಯಕವಾಗಿದೆ. ತುಳಸಿಯ ಕಷಾಯವು ಕೆಮ್ಮು, ನೆಗಡಿ, ಶೀತ, ಶ್ಲೇಷ್ಮಾದಿಗಳ ನಿವಾರಕವಾಗಿದೆ. ವೃಂದಾವನದಲ್ಲಿ ಉದುರಿದ ಎಲೆಗಳಿಂದ ಮಣ್ಣುಗೂಡಿದ ಅದರ ಮೃತ್ತಿಕೆಯನ್ನು ಶರೀರದಲ್ಲಿ ಕುಷ್ಠಾದಿ ಚರ್ಮರೋಗಳಿದ್ದಲ್ಲಿಗೆ ಹಚ್ಚಿಕೊಂಡರೆ ರೋಗನಿವಾರಣೆಯಾಗುವುದೆಂದು ಹೇಳಲಾಗಿದೆ.
ತುಳಸಿಕಟ್ಟೆಯಲ್ಲಿ ಎಷ್ಟು ಹೊತ್ತಿಗೆ ದೀಪ ಉರಿಸಿಡಬೇಕು? ಏಕೆ?
ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ಅನಿಷ್ಟ ಶಕ್ತಿಗಳು ಸುಪ್ತವಾಗಿದ್ದು ಸೂರ್ಯಾಸ್ತದ ಬಳಿಕ ಅವುಗಳ ಪ್ರಕಟೀಕರಣದಿಂದ ಜೀವಗಳಿಗೆ ಅಪಾರ ತೊಂದರೆಯಾಗತೊಡಗುತ್ತದೆ. ಇದರಿಂದಾಗಿಯೇ ಸಂಧ್ಯಾಕಾಲದಲ್ಲಿ ದೃಷ್ಟಿ ತಗಲುವುದು, ರಾತ್ರಿ ಕಾಲದಲ್ಲಿ ದುಷ್ಕೃತ್ಯಗಳು ನಡೆಯುವುದು ಸಾಮಾನ್ಯವಾಗಿದೆ. ಇಂತಹ ತೊಂದರೆಗಳಿಂದ ಪಾರಾಗಲು ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಹಚ್ಚುವುದು, ಊದುಬತ್ತಿ ಉರಿಸುವುದು, ಶಂಖಧ್ವನಿ ಮಾಡುವುದು, ಜಾಗಟೆ, ತಾಳ ಬಾರಿಸುವುದು, ಭಜನೆ ಮಾಡುವುದು, ಉಪನಯನವಾದವರು ಸಂಧ್ಯಾವಂದನೆ ಮಾಡುವುದು, ಭಸ್ಮಧಾರಣೆ ಇತ್ಯಾದಿಗಳನ್ನೂ ಮಾಡುವುದು ಅಗತ್ಯವಾಗಿದೆ. ಗೃಹಿಣಿಯರು ಸಂಜೆಯ ಹೊತ್ತು ಶುಚಿರ್ಭೂತರಾಗಿ ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತುಳಸಿಕಟ್ಟೆಯಲ್ಲಿ ತುಳಸಿಯ ಕಡೆಗೆ ದೀಪ ಜ್ವಾಲೆಯು ಮುಖಮಾಡಿರುವಂತೆ ತುಪ್ಪದ ಯಾ ಎಳ್ಳೆಣ್ಣೆಯ ದೀಪವನ್ನು ಸಾತ್ವಿಕ ಊದುಬತ್ತಿಯನ್ನು ಉರಿಸಿಟ್ಟು ತುಳಸಿಗೆ ಪ್ರದಕ್ಷಿಣೆ ಗೈದು ನಮಸ್ಕರಿಸಬೇಕು. ತುಳಸಿಯ ಸ್ತೋತ್ರವನ್ನೂ ಹೇಳಬಹುದು. ಹೀಗೆ ಮಾಡುವುದರಿಂದ ಆ ದೀಪದ ಬೆಳಕಿನಲ್ಲಿ ತುಳಸಿಯು ಬ್ರಹ್ಮಾಂಡದಿಂದ ಶ್ರೀಕೃಷ್ಣನ ಮಾರಕ ತತ್ತ್ವವನ್ನು ಆಕರ್ಷಿಸಿ ತುಳಸಿಕಟ್ಟೆಯ ಹಾಗೂ ಮನೆಯ ಸುತ್ತಲೂ ಅದನ್ನು ಪ್ರಕ್ಷೇಪಿಸಿ ಕಣ್ಣಿಗೆ ಗೋಚರವಾಗದ ಸೂಕ್ಷ್ಮರೂಪದ ಸಂರಕ್ಷಣಾ ಕವಚವನ್ನು ನಿರ್ಮಿಸಿ ಅನಿಷ್ಟ ಶಕ್ತಿಗಳಿಂದ ಜೀವಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುವುದು ದೀಪ ಜ್ಯೋತಿಯ ಸ್ತೋತ್ರವು ಈ ಕೆಳಗೆ ಕಂಡಂತಿರುವುದು
ಶುಭಂ ಕರೋತಿ ಕಲ್ಯಾಣಂ
ಆರೋಗ್ಯಂ ಧನಸಂಪದಃ
ಶತ್ರುಬುದ್ಧಿ ವಿನಾಶಾಯ
ದೀಪಜ್ಯೋತಿರ್ನಮೋಸ್ತುತೆ|
ದೀಪಜ್ಯೋತಿಃ ಪರಬ್ರಹ್ಮಾ
ದೀಪಜ್ಯೋತಿರ್ಜನಾರ್ದನಃ
ದೀಪೋ ಹರತಿ ಪಾಪಾನಿ
ಸಂಧ್ಯಾದೀಪ ನಮೋಸ್ತುತೇ||
ಶ್ರೀ ತುಲಸಿ ಸ್ತೋತ್ರದ ಒಂದು ಶ್ಲೋಕವು ಇಂತಿದೆ:
ಯನ್ಮೂಲೇ ಸರ್ವ ತೀರ್ಥಾನಿ
ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವ ವೇದಾಶ್ಚ
ತುಲಸಿ ತ್ವಾಂ ನಮಾಮ್ಯಹಮ್||
ಮೇಲಿನ ಈ ಎರಡು ಶ್ಲೋಕಗಳನ್ನು ಅರ್ಥೈಸಿಕೊಂಡರೆ ಮನೆಯ ಅಂಗಳದಲ್ಲಿ ತುಳಸಿ ವೃಂದಾವನ ಹಾಗೂ ಸಂಧ್ಯಾಕಾಲದಲ್ಲಿ ಅದಕ್ಕೆ ದೀಪವನ್ನಿರಿಸುವುದರಿಂದ ಅವುಗಳು ಮನೆಮಂದಿಗೂ ಮನೆಗೂ ಸಂರಕ್ಷಕ ದೇವತೆಗಳಂತೆ ಕೆಲಸ ಮಾಡುವುದರ ಮಹತ್ವವು ತಿಳಿಯುತ್ತದೆ. ಹೀಗಾಗಿ ಆಸ್ತಿಕ ಹಿಂದೂಗಳ ಮನೆಯಂಗಳದಲ್ಲಿ ತುಳಸಿ ವೃಂದಾವನವಿರುವುದರ ಅವಶ್ಯಕತೆಯು ಎಷ್ಟಿದೆ ಎಂಬುದರ ಅರಿವಾಗುತ್ತದೆ.
ತುಳಸಿ ಕಟ್ಟೆಯ ನಿರ್ಮಾಣಕ್ಕೆ ಜಾಗ ಗುರುತಿಸುವುದು ಹೇಗೆ?
ನಿಮ್ಮ ಮನೆಯು ಪೂರ್ವಾಭಿಮುಖವಾಗಿದೆಯೆಂದಾದರೆ ನೀವು ನಿಮ್ಮ ಮನೆಯಂಗಳದಲ್ಲಿ ಮನೆಯ ಕಡೆಗೆ ಮುಖಮಾಡಿ ನಿಲ್ಲಬೇಕು. ಮುಖ್ಯದ್ವಾರದಿಂದ ಬಲಗಡೆಗೆ ಅರ್ಧಕೋಲು (ಇನ್ನು ಮುಂದೆ ಒಂದು ಕೋಲು ಅಂದರೆ ೨೮ ಇಂಚು ಎಂದು ತಿಳಿಯಬೇಕು) ದೂರದಲ್ಲಿ ಗೋಡೆಯ ಅಥವಾ ಸಿಟೌಟ್‌ನ ಗೋಡೆಗೆ ಒಂದು ಗುರುತು ಮಾಡಿರಿ. ಅಲ್ಲಿಂದ ಪೂರ್ವದಿಕ್ಕಿನೆಡೆಗೆ ಲಂಬವಾಗಿ ನಿಮ್ಮ ಮನೆಯ ಹಾಗೂ ಅಂಗಳದ ಅಗಲವನ್ನು ಅನುಲಕ್ಷ್ಯಿಸಿ ಅದಕ್ಕೆ ಅನುರೂಪವಾಗುವಂತೆ ೩ ಕೋಲು/ ೫ ಕೋಲು/ ೭ ಕೋಲು ದೂರದಲ್ಲಿ ತುಳಸಿಕಟ್ಟೆಯನ್ನು ನಿರ್ಮಿಸಬಹುದು. ಆಗ ಮನೆ ಬಾಗಿಲಿನಿಂದ ಈಶಾನ್ಯ ದಿಕ್ಕಿನತ್ತ ತುಳಸಿಕಟ್ಟೆಯಿರುವುದು. ಮನೆಯು ಪಶ್ಚಿಮಾಭಿಮುಖವಾಗಿ ಇದ್ದರೆ ಯಾ ಉತ್ತರಾಭಿಮುಖವಾಗಿದ್ದರೆ ಮನೆಯ ಮುಖ್ಯ ದ್ವಾರದೆದುರು ನಿಂತು ಎಡಗಡೆಗೆ ಅರ್ಧಕೋಲು ದೂರದ ಬಿಂದುವಿನಿಂದ ಅನುಕ್ರಮವಾಗಿ (ಪಶ್ಚಿಮಾಭಿಮುಖವಾಗಿ ಯಾ ಉತ್ತರಾಭಿಮುಖವಾಗಿ ೩ ಕೋಲು/ ೫ ಕೋಲು/ ೭ ಕೋಲು ದೂರದಲ್ಲಿ ತುಳಸಿಕಟ್ಟೆಯನ್ನು ನಿರ್ಮಿಸಬಹುದು. ಅಂದರೆ ಅನುಕ್ರಮವಾಗಿ ಮನೆಯ ಮುಖ್ಯದ್ವಾರದಿಂದ ವಾಯುವ್ಯ ಅಥವಾ ಈಶಾನ್ಯ ದಿಕ್ಕಿಗೆ ತುಳಸಿಕಟ್ಟೆಯನ್ನು ನಿರ್ಮಿಸಬಹುದು. ನಿಮ್ಮ ಮನೆಯ ದಿಕ್ಕು ಸ್ವಲ್ಪ ತಿರುಗಿ ಇದ್ದರೂ ತಲೆಕೆಡಿಸಿಕೊಳ್ಳಬೇಕಿಲ್ಲ. ಇದು ಜನ ಸಾಮಾನ್ಯರು ತುಳಸಿಕಟ್ಟೆಯ ನಿರ್ಮಾಣಕ್ಕೆ ಜಾಗ ಗುರುತಿಸಬಹುದಾದ ಸುಲಭ ವಿಧಾನವಾಗಿದೆ.
ತುಳಸಿಕಟ್ಟೆಯ ಉದ್ದಗಲ ಅಳತೆಗಳು ಹೀಗಿದ್ದರೆ ಚೆನ್ನ
ಸಾಮಾನ್ಯವಾಗಿ ತುಳಸಿಕಟ್ಟೆಯ ಉದ್ದ, ಅಗಲ, ಎತ್ತರಗಳು ತಲಾ ೧೯ ಅಂಗುಲ (೧೯) ಆಗಿದ್ದರೆ ಉತ್ತಮ. ತುಳಸಿಕಟ್ಟೆಯ ಎತ್ತರವು ಮನೆಯ ಪಂಚಾಂಗದ ಮಟ್ಟದಿಂದ ಒಂದು ಅಂಗುಲವಾದರೂ ಕಡಿಮೆಯಿರಬೇಕು. ಕೊನೆಯ ಪಕ್ಷ ಪಂಚಾಂಗದ ಮಟ್ಟಕ್ಕೆ ಸಮಾನಾಂತರವಾಗಿರಬಹುದು. ಅದಕ್ಕಿಂತ ಹೆಚ್ಚು ಎತ್ತರವು ಸೂಕ್ತವಲ್ಲ. ಹಾಗೆಂದು ಈಗಾಗಲೇ ಇರುವ ತುಳಸಿಕಟ್ಟೆಯನ್ನು ಹಾಗೆಯೇ ಇರಗೊಡಿಸುವುದು ಒಳ್ಳೆಯದು.
ಯಾವ ದಿನಗಳಂದು ತುಳಸಿ ಗಿಡವನ್ನು ನೆಡಬಹುದು?
ಸಾಮಾನ್ಯವಾಗಿ ಶನಿವಾರ, ಬುಧವಾರ ಯಾ ಗುರುವಾರ ದಿನಗಳಂದು ಬೆಳಗ್ಗಿನ ಹೊತ್ತು ಶ್ರೀಮಹಾವಿಷ್ಣುವಿಗೆ ಪ್ರಾರ್ಥನೆ ಮಾಡಿ ತುಳಸಿ ಗಿಡವನ್ನು ನೆಟ್ಟು ರಕ್ಷಿಸಿಕೊಳ್ಳಬಹುದು.
ತುಳಸಿಕಟ್ಟೆಯಲ್ಲಿ ಯಾವ ಜಾತಿಯ ಗಿಡವನ್ನು ನೆಡಬಹುದು?
ತುಳಸಿಕಟ್ಟೆಯಲ್ಲಿ ತಾರಕತತ್ತ್ವವನ್ನು ಆಕರ್ಷಿಸಿ ಪ್ರಕ್ಷೇಪಿಸುವ ಶ್ರೀರಾಮ ತುಳಸಿ (ಬಿಳಿ ತುಳಸಿ)ಯನ್ನು ಸುತ್ತಮುತ್ತ ಮಾರಕ ಆಕರ್ಷಿಸಿ ಪ್ರಕ್ಷೇಪಿಸುವ ಶ್ರೀಕೃಷ್ಣ ತುಳಸಿ (ನಸುಗಪ್ಪು ಬಣ್ಣದ ತುಳಸಿ)ಯನ್ನೂ ನೆಟ್ಟು ಪೋಷಿಸಿದರೆ ಮನೆಯವರಿಗೆ ಈ ಎರಡೂ ತತ್ತ್ವಗಳ ಲಾಭವಾಗುವುದು.
ಕೊನೆಯ ಮಾತು
ಅನ್ಯ ವಸ್ತು ವಿಶೇಷಗಳೊಂದಿಗೆ ತುಲನೆಯೇ ಮಾಡಲಾಗದ ತುಳಸಿಯ ಬಗೆಗಿನ ಮಹತ್ವದ ಸಂಗತಿಗಳು ಇನ್ನೂ ಬಹಳವಿದೆ. ಆಸಕ್ತರು ಬೇರೆ ಬೇರೆ ಗ್ರಂಥಗಳನ್ನೋದಿ ಅವುಗಳನ್ನು ಅರಿತುಕೊಳ್ಳಬಹುದು ಇದು ಮುಂಬರುವ ಉತ್ಥಾನ ದ್ವಾದಶಿಯ ಸಾಂದರ್ಭಿಕ ಕಿರುಲೇಖನ ಮಾತ್ರ. ಮುಂಬರುವ ಉತ್ಥಾನ ದ್ವಾದಶಿಯಂದು (ನವೆಂಬರ ೧೪, ೨೦೧೩) ಹಾಗೂ ಮುಂದಿನ ವರ್ಷಗಳಲ್ಲಿ ಶ್ರೀ ತುಳಸಿಪೂಜೆಯನ್ನು ಶ್ರೀಕೃಷ್ಣದಾಮೋದರನೊಂದಿಗೆ ವಿವಾಹ ಮಾಡುವ ಮೂಲಕ ಅತ್ಯಂತ ಶ್ರದ್ದಾಭಕ್ತಿಭಾವಗಳಿಂದ ಆಚರಿಸಿ ದೈವಾನುಗ್ರಹ ಪಡೆಯೋಣ. ಆದಿನ ಅನಿವಾರ್ಯವಾಗಿ ಪೂಜೆಮಾಡಲಾಗದಿದ್ದರೆ ಅನಂತರದ ಹುಣ್ಣಿಮೆಯ ತನಕ ಯಾವುದಾದರೊಂದು ದಿನ ಪೂಜೆ ಮಾಡಬಹುದು. ತುಳಸಿಪೂಜೆಯ ಸಂದರ್ಭದಲ್ಲಿ ತಮೋ ಗುಣಿಯಾದ ಮೇಣದ ಬತ್ತಿಗಳನ್ನು ಉರಿಸಿಡದೆ ಸತ್ತ್ವಗುಣೀ ಎಳ್ಳೆಣ್ಣೆಯ ಹಣತೆಗಳನ್ನು ದೇದೀಪ್ಯ ವಾತಾವರಣವನ್ನು ನಿರ್ಮಿಸಿ ಸತ್ತ್ವಗುಣದ ಸಂವರ್ಧನೆ ಮಾಡುವುದು ತೀರಾ ಅವಶ್ಯವಾಗಿದೆ ಎಂಬುದರ ಅರಿವು ನಮಗೆಲ್ಲರಿಗೂ ಇರಲಿ.
ಸಂಗ್ರಹ: ಶ್ರೀ. ಬಿ. ರಾಮ ಭಟ್,

ಇತರರ ಅನುಸರಣೆ

ವಿಚಾರವಿಲ್ಲದ ಇತರರ ಅನುಸರಣೆ ಈ ಕಾಲದ ಒಂದು ಭಯಂಕರ ರೋಗ*
ಮನುಷ್ಯನಿಗೇ ರೋಗಗಳು ಅನೇಕ. ಪ್ರಾಣಿ ಪಶು ಪಕ್ಷಿಗಳಕ್ಕಿಂತಲೂ ಅಧಿಕ ಮಟ್ಟದಲ್ಲಿ ರೋಗಿಷ್ಠ ಮನುಷ್ಯ. ದೈಹಿಕ ರೋಗಗಳು ಒಂದಾದರೆ ಮನಸ್ಸಿನ ರೋಗಳೂ ತುಂಬ,  ಇವುಗಳ ಮಧ್ಯದಲ್ಲಿ  *ಇನ್ನೊಬ್ಬರ ಅನುಕರಣೆಯಿಂದ* ಬರುವ ರೋಗಗಳೂ ಅತಿ ಭಯಂಕರ ವಾದದ್ದು.
ಪುರುಷ/ಸ್ತ್ರೀ ಗೋಪಿಚಂದನವೋ ಅಥವಾ ಕುಂಕುಮವೋ ಧರಿಸುವದು ಬಿಟ್ಟಿರುತ್ತಾರೆ. ಬಿಡುವದಕ್ಕೆ ಮೂಲವೇನು... ?? ಪರರ ಅನುಕರುಣೆಯೇ... ಹೊರತು ಇನ್ನೇನು ಬೇರೆ ಕಾರಣವೇ  ಇರುವದಿಲ್ಲ.
ಧರ್ಮ ಬಿಡಲು ಮನುಷ್ಯನಿಗೆ ಧೈರ್ವಿಲ್ಲ. ಅದರೂ ಧರ್ಮವನ್ನು ಬಿಡುತ್ತಾನೆ ಅದಕ್ಕೆ ಒಂದೇ ಕಾರಣ *ಪರರ ಅನುಕರಣೆ.*  ಧರ್ಮ ಮಾಡದ ಅವನು ಚೆನ್ಬಾಗಿ ಇದ್ದಾನೆ, ಹಾಗಿರುವಾಗ ನಾನೇಕೆ ಧರ್ಮವನ್ನು ಮಾಡಬೇಕು..? ಎಂದು ಯೋಚಿಸಿಯೇ ಬಿಟ್ಟಿರುತ್ತಾನೆ.
ಹೀಗಾಗುವದು ಏಕೆ..??
ಸ್ವಂತ ವಿಚಾರವಿಲ್ಲದ, ಸ್ವಂತಿಕೆಯೇ ಇಲ್ಲದ ಮನುಷ್ಯ, ಇನ್ನೊಬ್ವರನ್ನು ಅನುಕರಣೆ ಮಾಡುವದನ್ನುಳಿದು ಬೇರೆ ಮಾರ್ಗವಂತೂ ಇರಲಾರದು.
ಒಂದು ಬಾರಿ ಒಬ್ಬರ ಅನುಕರಣೆಯ ರುಚಿ ಹತ್ತಿತೋ ಮತ್ತೊಮ್ಮೆ ಇನ್ನೊಬ್ಬ ಸಿಗುವ, ಅವನ ಅನುಕರಣೆ ಆರಂಭ. ಮುಗುದೊಮ್ಮೆ ಇನ್ನೊಬ್ಬನ ಅನುಕರಣೆ. ಕೊನೆಗೆ ಇನ್ನೊಬ್ವರ ಅನುಕರಿಸುವದರಲ್ಕೇ ಜೀವನದ ಕೊನೆ.
ಅಂತೆಯೇ ಇಂದು ನಮ್ಮ ಸ್ವಂತಿಕೆ ಹೋಗಿದೆ, ಏಳುವದರಿಂದಾರಂಭಿಸಿ ಮಲಗುವವರೆಗೆ ಪರರ ಅನುಕರಣೆರೋಗವೇ ಹೆಮ್ಮರವಾಗಿ ಬೆಳೆದು ನಿಂತಿದೆ.
ಏಳುತ್ತಿರುವಾಗಲೇ bed cofy, ನಮ್ಮದೆ ಆದ ದೇವ ನಾಮಸ್ಮರಣೆ ಇಲ್ಲ. ಬಹಿರ್ದೇಶಕ್ಕೆ ಹೋಗುವದು ಪರರ ಅನುಕರಣೆ. ದಂತ ಧಾವನ ಸ್ನಾನ ಪರರ ಅನುಕರಣೆ. ಮನೆಯಲ್ಲೆಲ್ಲ ಬೂಟು ಹಾಕ್ಕೊಂಡು ಓಡಾಡುತ್ತಾ class / office ಗೆ ತಯಾರಾಗಿ ಹೊರಡಲು ಸಿದ್ಧವಾಗುವದು ಪರರ ಅನುಕರಣೆ. Table ಮೇಲೆ ಊಟ, ಪೂಜೆ ನೈವೆದ್ಯರೂಪ ದೆವರಿಗರ್ಪಿಸದ ಊಟ, ಕೈಲಿ ತೊಡೆಮೆಲೆ ಇಟ್ಟುಕೊಂಡು ಮಾಡುವ ಊಟ ಎಲ್ಲವೂ ಪರರ ಅನುಕರಣೆಯೇ.  Hi hello ಹೇಳ್ತಾ ಪ್ರೀತಿ ಅಂತಹಕರಣವಿಲ್ಲದ, ಕೇವಲ ತುಟಿಯ ಮಾತುಗಳೂ ಪರರ ಅನುಕರಣೆಯಿಂ ಬಂದದ್ದು. ಕೊನೆಗೆ mobail TV ನೋಡುತ್ತಾ ಮಲಗುವದೂ ಪರರ ಅನುಕರಣೆಯಿಂದಲೇ... ಹೀಗೆ ಎಲ್ಲವೂ ಪರರನ್ನು ಅನುಕರಿಸುವಂತಹ ದೊಡ್ಡ ರೋಗಕ್ಕೆ ತುತ್ತು ಆಗಿದ್ದೇವೆ.
ಪರರ ಅನುಕರಣೆಯೆಂಬ ರೋಗಕ್ಕೆ *ಸ್ವಂತದ ವಿಚಾರವೇ* ದೊಡ್ಡ ಔಷಧಿ. ಸ್ವಂತ ವಿಚಾರ ಕಳೆದುಕೊಂಡದ್ದಕ್ಕೆಯೇ ಈ *ಪರರ ಅನುಕರಣೆಯ ರೋಗ ಗ್ರಸ್ತ* ಆಗಿರುವ ಮಾನವ.  ಆದ್ದರಿಂದ ನಮ್ಮ ಶಾಸ್ತ್ರ, ನಮ್ಮ ಸಿದ್ಧಾಂತ, ನಮ್ಮ ಭವ್ಯಪರಂಪರೆ, ನಮ್ಮ  ಅನಾದಿ ಸಂಸ್ಕಾರ, ನಮ್ಮ ಅಗಾಧ ಬುದ್ಧಿ ಇವುಗಳಿಂದ ನಮ್ಮದೇ ಆದ ಶಾಸ್ತ್ರ ದೇವ ಸಮ್ಮತವಾದ, ಇಂದಿಗೂ ಎಂದೆಂದಿಗೂ ಅತ್ಯಂತ ಹಿತಕಾರಿಯಾದ ವಿಚಾರಗಳನ್ನು ಮಾಡಿ, ನಿರ್ಣಯ ಮಾಡಿಕೊಂಡು ಕನಿಷ್ಠಮಟ್ಟದಲ್ಲಿ ಆದರೂ *ಪರರನ್ನು ಅನುಕರಿಸುವ ರೋಗದಿಂದ*  ಮುಕ್ತರಾಗುವತ್ತ ಹೆಜ್ಜೆ ಇಡೋಣ.
ಇನ್ನೊಬ್ಬರನ್ಬೇ ಅನುಕರಿಸುವದು ಎಂದಾದರೆ  *ನಮ್ಮವರು  ಮುಂದಿಟ್ಟ ಒಂದು ಹೆಜ್ಹೆ, ಹತ್ತುಜನರ ಹಜ್ಜೆಗೆ ಕಾರಣವಾಗುತ್ತದೆ.* ಈ ಕ್ರಮ ನಮ್ಮವರನ್ನಾದರೂ ನಾವು ಅನುಕರಿಸೋಣ.

ಬ್ರಾಹ್ಮಣ ಎಂದರೆ ಯಾರು? ವಜ್ರಸೂಚಿಕಾ ಉಪನಿಷತ್

ಬ್ರಾಹ್ಮಣ ಎಂದರೆ ಯಾರು?   ವಜ್ರಸೂಚಿಕಾ ಉಪನಿಷತ್
ಉಪನಿಷತ್ :- ಮಂಗಲಮ್-- ಓಂ ಆಪ್ಯಾಯಯಂತು ಮಮಾಂಗಾನಿ | ವಾಕ್ ಪ್ರಾಣಃ ಚಕ್ಷುಃ ಶ್ರೋತ್ರಮ್ | ಅಥೋ ಬಲಮ್ ಇಂದ್ರಿಯಾಣಿ ಚ ಸರ್ವಾಣಿ | ಸರ್ವಮ್ ಬ್ರಹ್ಮ ಉಪನಿಷದಮ್ | ಮಾ ಅಹಮ್ ಬ್ರಹ್ಮ ನಿರಾಕುರ್ಯಾಮ್ |ಮಾ ಮಾ ಬ್ರಹ್ಮ ನಿರಾಕರೋತ್| ಅನಿರಾಕರಣಮಸ್ತು ಅನಿರಾಕರಣಮ್ ಮೇ ಅಸ್ತು | ತತ್ ಆತ್ಮನಿ ನಿರತೇ ಯ ಉಪನಿಷತ್ಸು ಧರ್ಮಾಃ ತೇ ಮಯಿ ಸಂತು ತೇ ಮಯಿ ಸಂತು | ಓಂ ಶಾಂತಿಃ ಶಾಂತಿಃ ಶಾಂತಿಃ ||
ಅರ್ಥ:- ನನ್ನ ಎಲ್ಲ ಬಾಯಿ ಮೊದಲಾದ ಕರ್ಮೇಂದ್ರಿಯಗಳು, ಕಣ್ಣು ಮೊದಲಾದ ಜ್ಞಾನೇಂದ್ರಿಯಗಳು,ಪಂಚಪ್ರಾಣಗಳು, ಬಲವನ್ನು ಹೊಂದಲಿ. ಇವೆಲ್ಲವೂ ಉಪನಿಷತ್ತಿನಲ್ಲಿ ನಿರೂಪಿಸಿದ ಬ್ರಹ್ಮವೇ ಆಗಿದೆ. ನಾನು ಬ್ರಹ್ಮವನ್ನು ನಿರಾಕರಿಸುವುದಿಲ್ಲ. ಆ ಬ್ರಹ್ಮವೂ ನನ್ನನ್ನು ನಿರಾಕರಿಸದಿರಲಿ. ನನ್ನಿಂದ ಬ್ರಹ್ಮ, ಬ್ರಹ್ಮದಿಂದ ನಾನು ಪರಸ್ಪರ ತಿರಸ್ಕೃತವಾಗದಿರಲಿ. ತತ್ವಜ್ಞಾನಿಯಲ್ಲಿ ಕಾಣುವುದೆಂದು , ಉಪನಿಷತ್ತುಗಳಲ್ಲಿ ನಿರೂಪಿಸಿರುವ ಧರ್ಮವು, ನನ್ನಲ್ಲೂ ಉಂಟಾಗಲಿ . ತಾಪತ್ರಯಗಳು ಶಾಂತವಾಗಲಿ.
ಉಪನಿಷತ್ :- ಓಂ ವಜ್ರಸೂಚೀಮ್ ಪ್ರವಕ್ಷ್ಯಾಮಿ ಶಾಸ್ತ್ರಮ್ ಅಜ್ಞಾನಭೇದನಮ್ | ದೂಷಣಮ್ ಜ್ಞಾನಹೀನಾನಾಮ್ ಭೂಷಣಮ್ ಜ್ಞಾನಚಕ್ಷುಷಾಮ್ |೧|
ಅರ್ಥ:- ಓಮ್ ಕಾರವು ಆದಿಯಲ್ಲಿ ಹೇಳಲ್ಪಟ್ಟಿದೆ. ಅಜ್ಞಾನವನ್ನು ನಾಶಗೊಳಿಸುವ ಅಜ್ಞಾನಿಗಳನ್ನು ತಿರಸ್ಕರಿಸುವ ,ಜ್ಞಾನವೇ ಕಣ್ಣಗಿರುವವರಿಗೆ ಭೂಷಣವಾದ ವಜ್ರಸೂಚಿ ಎನ್ನುವ ವಿದ್ಯೆಯನ್ನು ಹೇಳುತ್ತೇನೆ
ಉಪನಿಷತ್ :- ಬ್ರಹ್ಮಕ್ಷತ್ರಿಯವೈಶ್ಯಶೂದ್ರಾಃ ಇತಿ ಚತ್ವಾರಃ ವರ್ಣಾಃ ತೇಷಾಮ್ ವರ್ಣಾನಾಮ್ ಬ್ರಾಹ್ಮಣ ಏವ ಪ್ರಧಾನಃ ಇತಿ ವೇದವಚನಾನುರೂಪಮ್ ಸ್ಮೃತಿಭಿಃ ಅಪಿ ಉಕ್ತಮ್ | ತತ್ರ ಚೋದ್ಯಮ್ ಅಸ್ತಿ ಕಃ ವಾ ಬ್ರಾಹ್ಮಣಃ ನಾಮ ಕಿಮ್ ಜೀವಃ ಕಿಮ್ ದೇಹಃ ಕಿಮ್ ಜಾತಿಃ ಕಿಮ್ ಜ್ಞಾನಮ್ ಕಿಮ್ ಕರ್ಮ ಕಿಮ್ ಧಾರ್ಮಿಕಃ ಇತಿ |
ಅರ್ಥ:- ಈ ಲೋಕದಲ್ಲಿ ಬ್ರಾಹ್ಮಣ , ಕ್ಷತ್ರಿಯ, ವೈಶ್ಯ, ಶೂದ್ರ ಎನ್ನುವ ನಾಲ್ಕು ವರ್ಣಗಳು ಪ್ರಸಿದ್ಧವಾಗಿವೆ. ಅವುಗಳಲ್ಲಿ ಬ್ರಾಹ್ಮಣ ವರ್ಣವು ಶ್ರೇಷ್ಠವೆಂದು ವೇದಗಳು ಮತ್ತು ಸ್ಮೃತಿಗಳು ಹೇಳುತ್ತಿವೆ. ಇಲ್ಲಿ ವಿಚಾರಕ್ಕೆ ಯೋಗ್ಯವಾದ ವಿಷಯವಿದೆ.ಬ್ರಾಹ್ಮಣ ಎಂದರೆ ಯಾರು? ಜೀವ ಚೈತನ್ಯವು ಬ್ರಾಹ್ಮಣನೇ? ಶರೀರವು ಬ್ರಾಹ್ಮಣನೇ? ಜಾತಿಯು (ಹುಟ್ಟುವುದು ) ಬ್ರಾಹ್ಮಣನೇ? ಜ್ಞಾನವು ಬ್ರಾಹ್ಮಣನೇ? ಕರ್ಮವು ಬ್ರಾಹ್ಮಣನೇ? ದಾನ ಮಾಡುವವನು ಬ್ರಾಹ್ಮಣನೇ?
ಉಪನಿಷತ್ :- ತತ್ರ ಪ್ರಥಮಃ ಜೀವಃ ಬ್ರಾಹ್ಮಣಃ ಇತಿ ಚೇತ್ ತತ್ ನ | ಅತೀತಾನಾಗತಾನೇಕದೇಹಾನಾಮ್ ಜೀವಸ್ಯ ಏಕರೂಪತ್ವಾತ್ ಏಕಸ್ಯ ಅಪಿ ಕರ್ಮ ವಶಾತ್ ಅನೇಕದೇಹಸಂಭವಾತ್ ಸರ್ವ ಶರೀರಾಣಾಮ್ ಜೀವಸ್ಯ ಏಕರೂಪತ್ವಾತ್ | ತಸ್ಮಾತ್ ನ ಜೀವಃ ಬ್ರಾಹ್ಮಣಃ ಇತಿ |
ಅರ್ಥ:- ಜೀವ ಚೈತನ್ಯವು ಬ್ರಾಹ್ಮಣ ಎನ್ನುವುದು ಸರಿಯಲ್ಲ . ಏಕೆಂದರೆ, ಹಿಂದೆ ಕಳೆದಿರುವ ಮತ್ತು ಮುಂದೆ ಬರಲಿರುವ ಅನೇಕ ದೇಹಗಳಲ್ಲಿ ಚೈತನ್ಯವು ಒಂದೇ ರೀತಿಯಾಗಿರುತ್ತದೆ. ಆದ್ದರಿಂದ ಚೈತನ್ಯವು ಬ್ರಾಹ್ಮಣನಲ್ಲ.
ಉಪನಿಷತ್ :- ತರ್ಹಿ ದೇಹಃ ಬ್ರಾಹ್ಮಣಃ ಇತಿ ಚೇತ್ ತತ್ ನ | ಆಚಾಂಡಾಲಾದಿ ಪರ್ಯಂತಾನಾಮ್ ಮನುಷ್ಯಾಣಾಮ್ ಪಾಂಚಭೌತಿಕತ್ವೇನ ದೇಹಸ್ಯ ಏಕರೂಪತ್ವಾತ್ ಜರಾಮರಣಧರ್ಮಾಧರ್ಮಾದಿ ಸಾಮ್ಯದರ್ಶನಾತ್ ಬ್ರಾಹ್ಮಣಃ ಶ್ವೇತವರ್ಣಃ ಕ್ಷತ್ರಿಯಃ ರಕ್ತವರ್ಣಃ ವೈಷ್ಯಃ ಪೀತವರ್ಣಃ ಶೂದ್ರಃ ಕೃಷ್ಣ ವರ್ಣಃ ಇತಿ ನಿಯಮ ಅಭಾವಾತ್ | ಪಿತ್ರಾದಿ ಶರೀರದಹನೆ ಪುತ್ರಾದೀನಾಮ್ ಬ್ರಹ್ಮಹತ್ಯಾದೋಷ ಪ್ರಸಂಗಾತ್ | ತಸ್ಮಾತ್ ನ ದೇಹಃ ಬ್ರಾಹ್ಮಣಃ ಇತಿ |
ಅರ್ಥ:- ಈ ಶರೀರವು ಬ್ರಾಹ್ಮಣ ಎನ್ನುವುದು ಸರಿಯಲ್ಲ . ಏಕೆಂದರೆ, ಚಾಂಡಾಲನ ವರೆಗೆ ಎಲ್ಲ ಮನುಷ್ಯರ ಶರೀರವು ಭೂಮಿ ಮೊದಲಾದ ಐದುಭೂತಗಳಿಂದ ಉಂಟಾಗಿದೆ. ಅಲ್ಲದೆ ಎಲ್ಲ ಶರೀರದಲ್ಲಿ , ಮುಪ್ಪು, ಮರಣ, ಪಾಪಮತ್ತು ಪಣ್ಯಗಳ ಫಲಗಳು ಒಂದೇ ರೀತಿಯಾಗಿರುತ್ತದೆ. ಬೆಳ್ಳಗಿರುವವನು ಬ್ರಾಹ್ಮಣ , ಕೆಂಪು ಬಣ್ಣವನ್ನು ಹೊಂದಿದವನು ಕ್ಷತ್ರಿಯ, ಅರಿಷಿಣ ಬಣ್ಣವನ್ನು ಹೊಂದಿದವನು ವೈಶ್ಯ , ಕಪ್ಪು ಬಣ್ಣವನ್ನು ಹೊಂದಿದವನು ಶೂದ್ರ ಎನ್ನುವ ನಿಯಮ ಕಾಣಿಸುವುದಿಲ್ಲ. ಹೀಗೆ ಒಪ್ಪಿದರೆ ತಂದೆ ಮೊದಲಾದವರ ಶರೀರವನ್ನು ಸುಟ್ಟಾಗ ಮಗ ಮೊದಲಾದವರಿಗೆ ಬ್ರಹ್ಮಹತ್ಯೆ ದೋಷವು ಬರುತ್ತದೆ. ಆದ್ದರಿಂದ ದೇಹವು ಬ್ರಾಹ್ಮಣನಲ್ಲ.
ಉಪನಿಷತ್ :- ತರ್ಹಿ ಜಾತಿಃ ಬ್ರಾಹ್ಮಣಃ ಇತಿ ಚೇತ್ ತತ್ ನ | ತತ್ರ ಜಾತ್ಯಂತರಜಂತುಷು ಅನೇಕಜಾತಿಸಂಭವಾಃ ಮಹರ್ಷಯಃ ಬಹವಃ ಸಂತಿ | ಋಷ್ಯಶೃಂಗಃ ಮೃಗ್ಯಾಃ ಕೌಶಿಕಃ ಕುಶಾತ್ ಜಾಂಬೂಕಃ ಜಂಬೂಕಾತ್ ವಾಲ್ಮೀಕಃ ವಲ್ಮೀಕಾತ್ ವ್ಯಾಸಃ ಕೈವರ್ತಕಕನ್ಯಾಯಾಮ್ ಶಶಪೃಷ್ಠಾತ್ ಗೌತಮಃ ವಸಿಷ್ಠಃ ಉರ್ವಶ್ಯಾಮ್ ಅಗಸ್ತ್ಯಃ ಕಲಶೆ ಜಾತಃ ಇತಿ ಶ್ರುತತ್ವಾತ್ | ಏತೇಷಾಮ್ ಜಾತಿಮ್ ವಿನಾ ಅಪಿ ಅಗ್ರೆ ಜ್ಞಾನಪ್ರತಿಪಾದಿತಾಃ ಋಷಯಃ ಬಹವಃ ಸಂತಿ | ತಸ್ಮಾತ್ ನ ಜಾತಿಃ ಬ್ರಾಹ್ಮಣಃ ಇತಿ | 
ಅರ್ಥ:- ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವನು ಬ್ರಾಹ್ಮಣ ಎನ್ನುವುದು ಸರಿಯಲ್ಲ. ಬೇರೆ ಬೇರೆ ಜಾತಿ ಪ್ರಾಣಿಗಳಲ್ಲಿ ಅನೇಕ ಮಹರ್ಷಿಗಳು ಹುಟ್ಟಿರುವುದು ತಿಳಿದು ಬರುತ್ತದೆ. ಋಷ್ಯಶೃಂಗ ಮಹರ್ಷಿಗಳು ಹೆಣ್ಣು ಜಿಂಕೆಯಲ್ಲಿ , ಕೌಶಿಕ ಮಹರ್ಷಿಗಳು ದರ್ಭೆ ಹುಲ್ಲಿನಲ್ಲಿ, ಜಾಂಬೂಕ ಮಹರ್ಷಿಗಳು ನರಿಯಲ್ಲಿ ,ವಾಲ್ಮೀಕಿ ಮಹರ್ಷಿಗಳು ಹುತ್ತದಲ್ಲಿ, ವ್ಯಾಸ ಮಹರ್ಷಿಗಳು ಬೆಸ್ತರ ಕನ್ಯೆಯಲ್ಲಿ,ಗೌತಮ ಮಹರ್ಷಿಗಳು ಮೊಲದ ಅಂಡಿನಲ್ಲಿ , ವಸಿಷ್ಠ ಮಹರ್ಷಿಗಳು ಉರ್ವಶಿಯಲ್ಲಿ, ಅಗಸ್ತ್ಯ ಮಹರ್ಷಿಗಳು ಕಲಶದಲ್ಲಿ ಹುಟ್ಟಿದ್ದಾರೆಂದು ವೇದವು ಪ್ರತಿಪಾದಿಸುತ್ತದೆ. ಹೀಗೆ ಜಾತಿಯಲ್ಲಿ ಹುಟ್ಟದಿದ್ದರೂ,ಮೊಂದೆ ಜ್ಞಾನವನ್ನು ನಿರೂಪಿಸಿದ ಋಷಿಗಳು ಅನೇಕರು ಇದ್ದಾರೆ. ಆದ್ದರಿಂದ ಒಂದು ವರ್ಣದಲ್ಲಿ ಹುಟ್ಟುವವನು ಬ್ರಾಹ್ಮಣನಲ್ಲ.
ಉಪನಿಷತ್ :- ತರ್ಹಿ ಜ್ಞಾನಮ್ ಬ್ರಾಹ್ಮಣಃ ಇತಿ ಚೇತ್ ತತ್ ನ | ಕ್ಷತ್ರಿಯಾದಯಃ ಅಪಿ ಪರಮಾರ್ಥದರ್ಶಿನಃ ಅಭಿಜ್ಞಾಃ ಬಹವಃ ಸಂತಿ | ತಸ್ಮಾತ್ ನ ಜ್ಞಾನಮ್ ಬ್ರಾಹ್ಮಣಃ ಇತಿ |
ಅರ್ಥ:- ಜ್ಞಾನವು ಬ್ರಾಹ್ಮಣ ಎನ್ನುವುದು ಸರಿಯಲ್ಲ. ಕ್ಷತ್ರಿಯ ಮೊದಲಾದ ವರ್ಣದವರು ತತ್ವ ಜಾನಿಗಳದವರು ಬಹಳ ಇದ್ದಾರೆ. ಜ್ಞಾನವು ಬ್ರಾಹ್ಮಣ ಅಲ್ಲ.
ಉಪನಿಷತ್ :- ತರ್ಹಿ ಕರ್ಮ ಬ್ರಾಹ್ಮಣಃ ಇತಿ ಚೇತ್ ತತ್ ನ | ಸರ್ವೇಷಾಮ್ ಪ್ರಾಣಿನಾಮ್ ಪ್ರಾರಬ್ಧಸಂಚಿತಾಗಾಮಿಕರ್ಮಸಾಧರ್ಮ್ಯದರ್ಶನಾತ್ ಕರ್ಮಾಭಿಪ್ರೇರಿತಾಃ ಸಂತಃ ಜನಾಃ ಕ್ರಿಯಾಮ್ ಕುರ್ವಂತಿ ಇತಿ | ತಸ್ಮಾತ್ ನ ಕರ್ಮ ಬ್ರಾಹ್ಮಣಃ ಇತಿ | 
ಅರ್ಥ:- ಕರ್ಮವು ಬ್ರಾಹ್ಮಣ ಎನ್ನುವುದು ಸರಿಯಲ್ಲ, ಎಲ್ಲ ಪ್ರಾಣಿಗಳಿಗೆ ಪ್ರಾರಬ್ಧ,ಸಂಚಿತ,ಆಗಾಮಿ ಕರ್ಮಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಕರ್ಮವು ಬ್ರಾಹ್ಮಣ ಅಲ್ಲ.
ಉಪನಿಷತ್ :- ತರ್ಹಿ ಧಾರ್ಮಿಕಃ ಬ್ರಾಹ್ಮಣಃ ಇತಿ ಚೇತ್ ತತ್ ನ | ಕ್ಷತ್ರಿಯಾದಯಃ ಹಿರಣ್ಯದಾತಾರಃ ಬಹವಃ ಸಂತಿ | ತಸ್ಮಾತ್ ನ ಧಾರ್ಮಿಕಃ ಬ್ರಾಹ್ಮಣಃ ಇತಿ |
ಅರ್ಥ:- ದಾನ ಮಾಡುವವನು ಬ್ರಾಹ್ಮಣ ಎನ್ನುವುದು ಸರಿಯಲ್ಲ. ಕ್ಷತ್ರಿಯ ಮೊದಲಾದ ವರ್ಣದವರು , ಸುವರ್ಣ ಮೊದಲಾದವ್ಯ್ಗಳನ್ನು ದಾನಮಾಡಿದವರು ಅನೇಕರು ಇದ್ದಾರೆ.ದಾನವು ಬ್ರಾಹ್ಮಣ ಅಲ್ಲ.
ಉಪನಿಷತ್ :- ತರ್ಹಿ ಕಃ ವಾ ಬ್ರಾಹ್ಮಣಃ ನಾಮ | ಯಃ ಕಶ್ಚಿತ್ ಆತ್ಮಾನಮ್ ಅದ್ವಿತೀಯಮ್ಜಾತಿಗುಣಕ್ರಿಯಾಹೀನಮ್ ಷಡೂರ್ಮಿಷಡ್ಭಾವ ಇತಿ ಆದಿ ಸರ್ವ ದೋಷರಹಿತಮ್ ಸತ್ಯಜ್ಞಾನಾನಂದಾನಂತಸ್ವರೂಪಮ್ ಸ್ವಯಮ್ ನಿರ್ವಿಕಲ್ಪಮ್ ಅಶೇಷಕಲ್ಪಾಧಾರಮ್ ಅಶೇಷಭೂತಾಂತರ್ಯಾಮಿತ್ವೇನ ವರ್ತಮಾನಮ್ ಅಂತಃ ಬಹಿಃ ಚ ಆಕಾಶವತ್ ಅನುಸ್ಯೂತಮ್ ಅಖಂಡಾನಂದಸ್ವಭಾವಮ್ ಅಪ್ರಮೇಯಮ್ ಅನುಭವೈಕವೇದ್ಯಮ್ ಅಪರೋಕ್ಷತಯಾ ಭಾಸಮಾನಮ್ ಕರತಲಾಮಲಕವತ್ ಸಾಕ್ಷಾತ್ ಅಪರೋಕ್ಷೀಕೃತ್ಯ ಕೃತಾರ್ಥತಯಾ ಕಾಮರಾಗಾದಿ ದೋಷರಹಿತಃ ದಂಬಾಹಂಕಾರಾದಿಭಿಃ ಅಸಂಸ್ಪೃಷ್ಟಚೇತಾ ವರ್ತತೆ ಏವಮ್ ಉಕ್ತಲಕ್ಷಣಃ ಯಃ ಸಃ ಏವ ಬ್ರಾಹ್ಮಣಃ ಇತಿ ಶ್ರುತಿಸ್ಮೃತಿಪುರಾಣೇತಿಹಾಸಾನಾಮ್ ಅಭಿಪ್ರಾಯಃ | ಅನ್ಯಥಾ ಹಿ ಬ್ರಾಹ್ಮಣತ್ವಸಿದ್ಧಿಃ ನಾಸ್ತಿ ಏವ | ಸಚ್ಚಿದಾನಂದಾತ್ಮಾನಮ್ ಅದ್ವಿತೀಯಮ್ಬ್ರಹ್ಮ ಭಾವಯೇತ್ ಆತ್ಮಾನಮ್ ಸಚ್ಚಿದಾನಂದಮ್ ಬ್ರಹ್ಮ ಭಾವಯೇತ್ ಇತಿ ಉಪನಿಷತ್ ||
ಅರ್ಥ:- ಹಾಗಾದರೆ ಬ್ರಾಹ್ಮಣನೆಂದಯಾರು? ಯಾರು ,ತನ್ನ ಆತ್ಮವನ್ನು, ಒಬ್ಬನೇ ಆದ, ಜಾತಿ, ಗುಣ , ಕ್ರಿಯೆ ಇವುಗಳಿಂದ ರಹಿತವಾದ, ಹಸಿವು , ನೀರಡಿಕೆ, ಶೋಕ, ಮೋಹ, ಮುಪ್ಪು, ಮರಣ ಈ ಆರರಿಂದ ಮತ್ತು ಹುಟ್ಟುವದು,ಇರುವದು,ಬೆಳೆಯುವದು,ಪರಿಣಾಮವನ್ನು ಹೊಂದುವದು, ಸಡಿಲಗೊಳ್ಳುವದು , ನಾಶವಾಗುವದು ಎನ್ನುವ ವಿಕಾರಗಳಿಲ್ಲದ, ಎಲ್ಲ ದೋಷಗಳಿಂದ ಮುಕ್ತವಾದ, ಸತ್ಯ,ಜ್ಞಾನ,ಆನಂದ,ಅನಂತ,ಸ್ವರೂಪವಾದ, ಸ್ವತಃ ವಿಕಲ್ಪವಿಲ್ಲದ, ಎಲ್ಲ ಕಾರ್ಯಗಳಿಗೆ ಆಧಾರವಾದ,ಎಲ್ಲ ಜೀವಿಗಳಲ್ಲಿ ಅಂತರ್ಯಾಮಿಯಾದ, ಒಳಗೆ ಹೊರಗೆ, ಆಕಾಶದಂತೆ ವ್ಯಾಪಿಸಿರುವ , ಅಖಂಡಾನಂದಸ್ವಭಾವದ, ತಿಳಿದುಕೊಳ್ಳಲು ಸಾದ್ಯವಿಲ್ಲದ, ಕೇವಲ ಅನುಭವ ಮಾತ್ರದಿಂದ ತಿಳಿಯಲು ಸಾಧ್ಯವಾದ,ಪ್ರತ್ಯಕ್ಷವಾಗಿ ಗೋಚರಿಸುವ, ಅಂಗೈ ಮೇಲಿರುವ ನೆಲ್ಲಿ ಕಾಯಿಯಂತೆ, ಪ್ರತ್ಯಕ್ಷವಾಗಿ ತಿಳಿದು, ಧನ್ಯತೆಯನ್ನು ಹೊಂದಿ, ಕಾಮವೇ ಮೊದಲಾದ ದೋಷಗಳಿಲ್ಲದೆ, ಆಡಂಬರ, ಅಹಂಕಾರ ಮೊದಲಾದ ದೋಷಗಳಿಲ್ಲದೆ ಶುದ್ಧ ಮನಸ್ಸಿನವನಾಗಿ,ಇರುತ್ತಾನೋ ಅವನು ಬ್ರಾಹ್ಮಣನು. ಹೀಗೆ ವೇದಗಳಲ್ಲಿ, ಸ್ಮಿತಿಗಳಲ್ಲಿ, ಇತಿಹಾಸಗಳಲ್ಲಿ, ಪ್ರತಿಪಾದಿಸಲ್ಪಟ್ಟಿದೆ. ಮತ್ತೊಂದು ರೀತಿಯಲ್ಲಿ ಬ್ರಾಹ್ಮಣ್ಯದ ಸಿದ್ಧಿಯು ಆಗುವದಿಲ್ಲ.  ಇಲ್ಲಿಗೆ ಉಪನಿಷತ್ತು ಮುಗಿದಿದೆ.

ಯಮರಾಜ ಹಾಗೂ ನಚಿಕೇತರ ಸಂವಾದ

ಆತ್ಮಜ್ಞಾನದ ವಿಜ್ಞಾನ.  !
ಯಮರಾಜ ಹಾಗೂ ನಚಿಕೇತರ ಸಂವಾದ. --- ಕಠೋಪನಿಷತ್ತಿನ ಒಂದು ಕಥೆ
(  ಸಂಗ್ರಹಿಸಿದ್ದು   )
1) ನಚಿಕೇತ - ಯಾವ ವಿಧದ ಶರೀರದಿಂದ ಬ್ರಹ್ಮಜ್ಞಾನವನ್ನು ಪಡೆಯಬಹುದು ?
ಯಮರಾಜ - ಮನುಷ್ಯಶರೀರವೆಂಬುದು ಒಂದು ನಗರ.ಆ ನಗರದ ಮಧ್ಯಭಾಗವೇ ಹೃದಯ.ಆ ಹೃದಯದಲ್ಲಿ ವಾಸಿಸುವವನೇ ಬ್ರಹ್ಮ.ಈ ರಹಸ್ಯವನ್ನು ಅರಿತು ಮನುಷ್ಯರು ಯಾವಾಗಲೂ ಭಗವಂತನ ಧ್ಯಾನ ಹಾಗೂ ಚಿಂತನೆಯನ್ನು ಮಾಡುತ್ತಿರಬೇಕು.ಅಂತಹ ಮನುಷ್ಯರು ಯಾವಾಗಲೂ ದುಃಖಿಗಳಾಗಿರಲು
ಸಾಧ್ಯವಿಲ್ಲ.ಸದಾ ಪರಮಾತ್ಮನನ್ನೇ ಭಜಿಸುವ ಜನರು ದೇಹಾವಸಾನದ ನಂತರ ಜನ್ಮ-ಮೃತ್ಯು
ಬಂಧನಗಳಿಂದ ದೂರವಾಗುತ್ತಾರೆ.
2) ನಚಿಕೇತ - ಆತ್ಮಾ ಸಾಯುತ್ತದೆಯೇ ಅಥವಾ ಸಾಯಿಸುತ್ತದೆಯೇ ?
ಯಮರಾಜ - ಯಾರು ಆತ್ಮವನ್ನು ಸಾಯುತ್ತದೆ ಅಥವಾ ಸಾಯಿಸುತ್ತದೆಯೆಂದು ತಿಳಿಯುತ್ತಾರೋ
ಅಂತವರು ಆತ್ಮಜ್ಞಾನಿಗಳಾಗಲು ಸಾಧ್ಯವಿಲ್ಲ.ಅವರು ಪರಮಮೂರ್ಖರು.ಆತ್ಮಕ್ಕೆ
ಸಾವಿಲ್ಲ,ಯಾರನ್ನೂ ಸಾಯಿಸುವುದೂ ಇಲ್ಲ.
3) ನಚಿಕೇತ - ಹೃದಯದಲ್ಲಿರುವ ಪರಮಾತ್ಮನನ್ನು ಅರಿಯುವುದು ಹೇಗೆ ?
ಯಮರಾಜ - ಮನುಷ್ಯನ ಹೃದಯವೇ ಬ್ರಹ್ಮಸ್ಥಾನ.ಬ್ರಹ್ಮನನ್ನು ಅರಿಯುವ ವಿಶೇಷವಾದ
ಅಧಿಕಾರವಿದ್ದರೆ ಅದು ಮನುಷ್ಯನಿಗೆ ಮಾತ್ರ.ಆತ ಮನುಷ್ಯನ ಹೃದಯದಲ್ಲಿ ಅಂಗುಷ್ಟದ
ಗಾತ್ರದಲ್ಲಿ ವಾಸಿಸುತ್ತಾನೆ.ತನ್ನ ಹೃದಯದಲ್ಲಿಯೇ ಪರಮಾತ್ಮನಿರುವುದನ್ನು ಜ್ಞಾನದಿಂದ
ಅರಿಯಬೇಕು.ಹಾಗೇ ಇನ್ನೊಬ್ಬರ ಹೃದಯದಲ್ಲೂ ಭಗವಂತನಿದ್ದಾನೆಂಬ ಆತ್ಮಜ್ಞಾನ
ಹೊಂದಿರಬೇಕು.ಇದನ್ನರಿತಾಗ ಮಾತ್ರ ಮನುಷ್ಯ ದ್ವೇಷ-ಅಸೂಯೆ-ರಾಗ-ಕಾಮ-ಕ್ರೋಧ-ಲೋಭ-ಮೋಹ ಮುಂತಾದ ದುರ್ಗುಣಗಳಿಂದ ವಿಮುಕ್ತಿಯನ್ನು ಹೊಂದಿ ವಸುಧೈವ ಕುಟುಂಬಕಮ್ ಎಂಬ ಭಾವನೆಯನ್ನು ಹೊಂದುತ್ತಾನೆ.
4) ನಚಿಕೇತ - ಆತ್ಮದ ಸ್ವರೂಪವೇನು ?
ಯಮರಾಜ - ಶರೀರ ನಾಶವಾದರೂ ಆತ್ಮಕ್ಕೆ ನಾಶವಿಲ್ಲ.ಭೋಗವಿಲಾಸಗಳನ್ನು
ಬಯಸುವ,ಅನಿತ್ಯವಾಗಿರುವ,ನಾಶವಾಗುವ ಈ ಜಡಶರೀರದೊಂದಿಗೆ ಆತ್ಮಕ್ಕೆ ಯಾವುದೇ
ಸಂಪರ್ಕವಿಲ್ಲ.ಅನಂತ,ಅನಾದಿ ಹಾಗೂ ನಿರ್ದೋಷರೂಪವೇ ಆತ್ಮಾ.ಆತ್ಮಕ್ಕೆ
ಕಾರ್ಯವಿಲ್ಲ,ಕಾರಣವಿಲ್ಲ,ಜನ್ಮವಿಲ್ಲ ಹಾಗೇ ಮರಣವೂ ಇಲ್ಲ.
5) ನಚಿಕೇತ - ಸರಿ.. ಒಬ್ಬ ವ್ಯಕ್ತಿಗೆ ಆತ್ಮಾ ಹಾಗೂ ಪರಮಾತ್ಮರ ಜ್ಞಾನವೇ ಇಲ್ಲ,ಅಂತವರ
ಗತಿ ? ಅವರು ಎಂತಹ ಫಲಗಳನ್ನು ಅನುಸರಿಸುತ್ತಾರೆ ?
ಯಮರಾಜ - ಮಳೆಯ ನೀರಿನ ರುಚಿ ಹಾಗೂ ರೂಪ ಒಂದೇ.ಆದರೆ ಭೂಮಿ ಅಥವಾ ಪರ್ವತದ ಮೇಲೆ
ಬಿದ್ದಾಗ ನೀರಿನ ರುಚಿ ಹಾಗೂ ರೂಪ ವ್ಯತ್ಯಾಸವಾಗುತ್ತದೆ.ಹಾಗೇ ಮನುಷ್ಯನ ಉದ್ದೇಶ
ಮೋಕ್ಷವೊಂದೇ.ಆದರೆ ವ್ಯಕ್ತಿಯ ಜ್ಞಾನದ ಪ್ರಕಾರ ಬದಲಾಗುತ್ತದೆ.ಕೆಲವರು ಆಸ್ತಿಕರಾಗುತ್ತಾರೆ,ಕೆಲವರು ನಾಸ್ತಿಕರಾಗುತ್ತಾರೆ.ಆತ್ಮತತ್ವಜ್ಞಾನವುಳ್ಳವರು
ಮೋಕ್ಷವನ್ನು ಪಡೆದರೆ,ಅಜ್ಞಾನಿಗಳು ಜನ್ಮಮರಣ ಚಕ್ರದಲ್ಲಿ ನಿಲುಕಿ ಜನ್ಮಜನ್ಮಾಂತರದವರೆಗೂ ಯಾತನೆಯನ್ನು ಅನುಭವಿಸುತ್ತಲೇ ಇರುತ್ತಾರೆ.
6) ನಚಿಕೇತ - ಬ್ರಹ್ಮನ ಸ್ವರೂಪ ಹೇಗಿದೆ ? ಆತ ಎಲ್ಲಿ ಪ್ರಕಟನಾಗುತ್ತಾನೆ ?
ಯಮರಾಜ - ಪ್ರಾಕೃತಿಕಗುಣಗಳಿಂದ ಅನ್ಯನಾಗಿರುವವನೇ ಬ್ರಹ್ಮ.ಆತ ಸ್ವಯಂಪ್ರಕಟನಾಗುವ ಸಾಮರ್ಥ್ಯವುಳ್ಳವ. ಆತನ ಇನ್ನೊಂದು ಹೆಸರು ವಸು.ಆತ ಅತಿಥಿಯಾಗಿ ಸರ್ವತ್ರ ಚಲಿಸುತ್ತಲೇ ಇರುತ್ತಾನೆ. ಯಜ್ಞದ ಅಗ್ನಿಯ ರೂಪದಲ್ಲಿ,ಎಲ್ಲ ಮನುಷ್ಯರಲ್ಲಿ,ಶ್ರೇಷ್ಟ
ದೇವತೆಗಳಲ್ಲಿ,ಪಿತೃದೇವತೆಗಳಲ್ಲಿ,ಆಕಾಶದಲ್ಲಿ,ಸತ್ಯ ಧರ್ಮ ,ನ್ಯಾಯ,ನೀತಿಗಳಲ್ಲಿ,ನೀರಿನಲ್ಲಿ,
ಶಂಖದಲ್ಲಿ,ಮರಗಿಡಗಳಲ್ಲಿ,ಬೀಜ-ಧಾನ್ಯಗಳಲ್ಲಿ,ಔಷಧಿಗಳಲ್ಲಿ,ಪರ್ವತದಲ್ಲಿ,ನದಿಗಳಲ್ಲಿ
ಸರ್ವತ್ರ ವ್ಯಾಪಕ ಬ್ರಹ್ಮ.ಅಣುವಿನಲ್ಲಿ ಅಣು,ಮಹತ್ತಿನಲ್ಲಿ ಮಹತ್ತು.’ಅಣೋರಣೀಯಾನ್
ಮಹತೋ ಗರೀಯಾನ್"
7) ನಚಿಕೇತ - ಆತ್ಮ ನಿವೃತ್ತಿಯಾದ ನಂತರ ಶರೀರದಲ್ಲಿ ಏನಿರುತ್ತದೆ ?
ಯಮರಾಜ - ಯಾವಾಗ ಶರೀರದಿಂದ ಆತ್ಮ ನಿವೃತ್ತಿಯಾಗುವುದೋ ಅದರ ಜೊತೆಗೆ ಪ್ರಾಣ ಹಾಗೂ ಇಂದ್ರಿಯಜ್ಞಾನಗಳು ಹೊರಟುಹೋಗುತ್ತವೆ.ಮೃತಶರೀರದಲ್ಲಿ ಯಾವ ಅಂಶವೂ ಇರುವುದಿಲ್ಲ.ಶರೀರ
ಅಚೇತನಾವಸ್ಥೆಯನ್ನು ಹೊಂದುತ್ತದೆ.
8) ನಚಿಕೇತ - ಮರಣದ ನಂತರ ಆತ್ಮಕ್ಕೆ ಯಾವ ಸ್ಥಾನ ಸಿಗುತ್ತದೆ ?
ಯಮರಾಜ - ವ್ಯಕ್ತಿಯ ಕರ್ಮಾನುಸಾರ ಪಾಪ-ಪುಣ್ಯಗಳ ನಿಶ್ಚಯವಾಗುತ್ತದೆ.ಅದರ ಆಧಾರವಾಗಿ
ಆತ್ಮಕ್ಕೆ ಪುನಃ ಮನುಷ್ಯ ಅಥವಾ ಪಶುಗಳ ರೂಪ ಸಿಗುತ್ತದೆ.ಮರುಜನ್ಮ ನಿಶ್ಚಯವಾಗುತ್ತದೆ.ಯಾರು ಅತಿಹೆಚ್ಚು ಪಾಪಗಳನ್ನು ಮಾಡಿದ್ದಾರೋ ಅವರು ಹೀನಯೋನಿಗಳಲ್ಲಿ ಜನಿಸುತ್ತಾರೆ. ಪುಣ್ಯಕಾರ್ಯಗಳು ಅಧಿಕವಾಗಿದ್ದರೆ ಜನ್ಮ-ಮರಣಚಕ್ರದಿಂದ ಮೋಕ್ಷ ಸಿಗುತ್ತದೆ.
9) ನಚಿಕೇತ - ಪರಮಾತ್ಮನ ಸ್ವರೂಪವೇನು ?
ಯಮರಾಜ - ಪರಬ್ರಹ್ಮನ ಸ್ವರೂಪವೇ ಪ್ರಣವ ಅಂದರೆ "ಓಂ".ಇದು ಅವಿನಾಶಿ ಹಾಗೂ ಪರಮಾತ್ಮನ ಸ್ವರೂಪ.ಪರಮಾತ್ಮನನ್ನು ಅರಿಯಲು,ಸಾಕ್ಷಾತ್ಕರಿಸಿಕೊಳ್ಳಲು ಇರುವ ಅಂತಿಮಮಾರ್ಗವೇ "ಓಂ" .ಸರ್ವವೇದಗಳಲ್ಲೂ,ಛಂದೋಯುಕ್ತ ಮಂತ್ರಗಳಲ್ಲೂ ಈ ರಹಸ್ಯವನ್ನು
ತಿಳಿಸಲಾಗಿದೆ.ಜಗತ್ತಿನಲ್ಲಿ ಪರಮಾತ್ಮನ ಸ್ವರೂಪವನ್ನು ತಿಳಿಯಲು ಪ್ರಣವವೇ ಉತ್ತಮ
ಉಪಾಯವಾಗಿದೆ.
ಹೀಗೆ ಯಮ-ನಚಿಕೇತರ ಸಂವಾದ ಸಂಕ್ಷಿಪ್ತವಾಗಿ ಆತ್ಮ-ಪರಮಾತ್ಮರ ರಹಸ್ಯವನ್ನು ತಿಳಿಸುತ್ತದೆ. ಆಧ್ಯಾತ್ಮದ ಬೆಳಕನ್ನು ತೋರಿಸುತ್ತದೆ. ಆತ್ಮತತ್ವಜ್ಞಾನವನ್ನು ಅರಿತಾಗ ಬದುಕು ಪ್ರಕಾಶಮಾನವಾಗಿರುತ್ತದೆ  !

*ಶ್ರೀಹತ್ಯ ಸಂಕರಿಯ ಸಲ್ಪ*

*ಶ್ರೀಹತ್ಯ ಸಂಕರಿಯ ಸಲ್ಪ*

ಓಂದಾನೊಂದು ಕಾಲದಲ್ಲಿ ನರಕಲೋಕಾಧಿಪತಿಯಾದ ಯಮಧರ್ಮರಾಜ ಶ್ರೀಹರಿಯ ದರ್ಶನಾರ್ಥವಾಗಿ ವೈಕುಂಟಕ್ಕೆ ಹೊರಟನು.
ವೈಕುಂಟದ ಮುಖದ್ವಾರದ ಮುಂದೆ ದ್ವಾರಪಾಲಕನು ಯಮಧರ್ಮರಾಜ ಬಂದ ವಿಚಾರವನ್ನು ಗರುಡದೇವರಿಗೆ ತಿಳಿಸಿದ. ಗರುಡದೇವರು ವೈಕುಂಟದೊಳಗೆ ಪ್ರವೇಶಮಾಡಿ ಯಮಧರ್ಮರಾಜನ ಆಗಮನವನ್ನು ತಿಳಿಸಿದ.
ಶ್ರೀಹರಿಯು ದರ್ಶನವು ಕೊಡಲು ಅಪ್ಪಣೆ ಕೊಟ್ಟ. ಗರುಡದೇವರು ಹಿಂತಿರುಗಿ ಬರುವಾಗ ಒಂದು ವಿಶೇಷವಾದ ಸನ್ನಿವೇಶವನ್ನು ಗುರ್ತಿಸಿದ. ಅದೇನಂದರೇ ನರಕಲೋಕಾಧಿಪತಿಯಾದ ಯಮಧರ್ಮರಾಯ ತದೇಕವಾಗಿ ವೈಕುಂಟದ ಮುಖದ್ವಾರಮೇಲೆ ಕುಳಿತಿದ್ದ ಒಂದು ಪಕ್ಷಿಯನ್ನು ನೋಡುತ್ತಿದ್ದ.
ಗರುಡದೇವರು ಶ್ರೀಹರಿಯನ್ನು ಭೇಟಿಯಾಗಲು ಶ್ರೀಹರಿಯ ಸಮ್ಮತಿಯನ್ನು ಯಮಧರ್ಮರಾಯನಿಗೆ ತಿಳಿಸಿದ. ಯಮಧರ್ಮರಾಯ ವೈಕುಂಟುದ್ವಾರದಿಂದ ಶ್ರೀಹರಿಯನ್ನು ದರ್ಶಿಸಲು ಒಳಗೆ ಪ್ರವೇಶಮಾಡಿದ.
ಗರುಡದೇವರು ಕ್ಷಣಕಾಲ ತಾನು ನೋಡಿದ ಸನ್ನಿವೇಶದಬಗ್ಗೆ ಆಲೋಚನೆ ಮಾಡಿದ.
“ಯಮಧರ್ಮರಾಯ ಏಕೆ ಆ ಪಕ್ಷಿಯನ್ನು ತದೇಕ ದೃಷ್ಠಿಯಿಂದ ನೋಡುತ್ತಿದ್ದ?”
ಅಂದರೇ ಅದರ ಪ್ರಾಣವನ್ನು ತೆಗೆದು ಕೊಂಡೊಯ್ಯಲು ಆಲೋಚನೆ ಮಾಡುತ್ತಿದ್ದಾನೆಂದು ಗ್ರಹಿಸಿದ.
ಗರುಡದೇವರು
“ಹೇಗಾದರೂ ಈ ಪಕ್ಷಿಯುನ್ನು ರಕ್ಷಣೆ ಮಾಡಬೇಕೆಂದು ಸಂಕಲ್ಪಿಸಿದ. ವೇಗವಾಗಿ ಆ ಪಕ್ಷಿಯನ್ನು ಹಿಡಿದು ಸಪ್ತ ಸಮುದ್ರಗಳನ್ನು ದಾಟಿ, ಒಂದು ವೃಕ್ಷದಮೇಲೆ ಇಟ್ಟ. ವೇಗವಾಗಿ ಯಾಥಾಸ್ಥಾನಕ್ಕೆ ಸೇರಿದ.
 ಯಮಧರ್ಮರಾಯ ಶ್ರೀಹರಿಯಜೊತೆ ಸಂಭಾಷಣೆ ಮಾಡಿ ಹಿಂತಿರುಗಿ ನರಕಲೋಕಕ್ಕೆ ಪ್ರಯಾಣವಾದ. ವೈಕುಂಠದ ಮುಖ ದ್ವಾರಕ್ಕೆ ಬಂದು ಮುಖದ್ವಾರದಮೇಲಿನ ಭಾಗವನ್ನು ನೋಡಲಾರಂಭಿಸಿದ.
ಗರುಡದೇವರು
“ಏನು ನೋಡುತ್ತಿರುವಿರಿ?” ಅಂತ ಪ್ರಶ್ನೆಮಾಡಿದ.
ಯಮಧರ್ಮರಾಯ ಕ್ಷಣಕಾಲ ಆಲೋಚನೆ ಮಾಡಿ ನಗುನಗುತ್ತಾ ಹೊರಟ. ಗರುಡದೇವರು ಯಮಧರ್ಮರಾಯನ ನಗುತ್ತಿರುವುದು ಅರ್ಥವಾಗದೇ ಮತ್ತೆ ಪ್ರಶ್ನೆ ಮಾಡಿದ.
“ನಿಮ್ಮ ಈ ನಗುವಿಗೆ ಅರ್ಥವೇನು?"
ಆಗ ಯಮಧರ್ಮರಾಯ ವಿಷಯವನ್ನು ವಿವರಿಸಿದ.
“ಜಗದೊಡೆಯನಾದ ಶ್ರೀಹರಿ ಮುಖದ್ವಾರದ ಮೇಲೆ ಕುಳಿತಿದ್ದ ಪಕ್ಷಿ ಸಪ್ತಸಮುದ್ರಗಳ ಆಚೆ ಒಂದು ವೃಕ್ಷದಮೇಲೆ ಕುಳಿತಿದ್ದ ಬೆಕ್ಕಿಗೆ ಆಹಾರವಾಗಬೇಕೆಂದು ಸಂಕಲ್ಪಿಸಿದ್ದ”, ಆದರೆ
ಅದು ಹೇಗೆ ನಡಯುತ್ತೆ ಅಂತ ಆಲೋಚನೆ ಮಾಡಿದ್ದೆ. ಭಗವಂತ ಆ ಕೆಲಸವನ್ನು ನಿನ್ನ ಮುಖಾಂತರವಾಗಿ ಮಾಡಿಸಿದ್ದಾನೆ ಅಂತ ನಗುನಗುತ್ತಾ ಹೇಳಿದ.
ಗರುಡದೇವರು ಭಗವಂತನ ಸಂಕಲ್ಪ ಅರಿಯದೇ ತಾನು ರಕ್ಷಣೆ ಮಾಡಬೇಕೆಂದು ಮಾಡಿದ ಕಾರ್ಯವನ್ನು ಯಮಧರ್ಮರಾಯನಿಗೆ ವಿವರಿಸಿದ.
ಯಮಧರ್ಮರಾಯ: *"ಭಗವಂತನದು ಸತ್ಯ ಸಂಕಲ್ಪ, ನಾವೆಲ್ಲರೂ ನಿಮಿತ್ತ ಮಾತ್ರರು.* *ಕಾಲಧರ್ಮವನ್ನು-ಸೃಷ್ಠಿಧರ್ಮವನ್ನು ನಿಯಂತ್ರಣಮಾಡುವಶಕ್ತಿ ಭಗವಂತನಿಗೆ ಮಾತ್ರ ಇದೆ. ಇದು ತಿಳಿದು ನಮಗೆ ನಿರ್ದೇಶಿಸಿದ ಕಾರ್ಯವನ್ನು ಮಾಡಬೇಕೆಂದು”*
ಗರುಡದೇವರಿಗೆ ಹಿತೋಪದೇಶ ಮಾಡಿ ಹೊರಟ.
         
ನಮ್ಮ ನಿತ್ಯಜೀವನದಲ್ಲಿ ಕೂಡಾ ನಮ್ಮ ಪ್ರಾರಭ್ದಕ್ಕೆ ತಕ್ಕಂತೆ ಭಗವಂತ ಫಲವನ್ನು ಕೊಡುತ್ತಾನೆ. ಅದನ್ನು ನಿಯಂತ್ರಣೆ ಮಾಡುವಶಕ್ತಿ ಭಗವಂತನಿಗೆ ಮಾತ್ರ ಇದೆ ಬೇರೆ ಯಾರಿಗೂ ಇದು ಸಾಧ್ಯವಿಲ್ಲ. ಆದಕಾರಣ ನಡಯುವದೆಲ್ಲಾ ನಮ್ಮ ಕರ್ಮಕ್ಕೆ ತಕ್ಕಂತೆ ಕಾಲಾನುಗುಣವಾಗಿ ಭಗವಂತ ಫಲಕೊಡುತ್ತಾನೆ.
ಭಗವಂತನಿಗೆ ವ್ಯತಿರೇಕವಾಗಿ ಮನಸ್ಸಿನಲ್ಲಿ ಸಂಕಲ್ಪ ಮಾಡುವುದರಿಂದ ಮನಃ ಶಾಂತಿಗೆ ದೂರವಾಗುತ್ತೇವೆ.
*ಹರಿಯಸಂಕಲ್ಪವೇ ಸತ್ಯಸಂಕಲ್ಪ.*
*ಯತೋಧರ್ಮಃ ತತೋಜಯಃ

ಅಶ್ವಗಂಧಾ ಎಂಬುದು ಒಂದು ಔಷಧಿಗಿಡ

ಅಶ್ವಗಂಧಾ ಎಂಬುದು ಒಂದು ಔಷಧಿಗಿಡ. ಹಿರಿಯರಿಂದ 'ಹಿರೇಮದ್ದು' ಎಂದೇ ಕರೆಸಿಕೊಳ್ಳುವ ಈ ಸಸ್ಯ, ನರಸಂಬಂಧಿ, ಕಫ ವಾತ ಸಂಬಂಧಿ ದೋಷಗಳನ್ನು ಕಿತ್ತು ಕಳೆಯಬಲ್ಲ ಗುಣವಿದೆ. ಈ ಗಿಡದ ಬೇರಿಗೆ ಲೈಂಗಿಕ ದೌರ್ಬಲ್ಯ ನಿವಾರಿಸುವ ಅದ್ಬುತ ಸಾಮರ್ಥ್ಯವಿದೆ. ಹಾವು, ಚೇಳು ಕಚ್ಚಿದಾಗ ಇದರ ಬೇರನ್ನು ನಿಂಬೇ ರಸದೊಂದಿಗೆ ಹಚ್ಚಲು ಉಪಯೋಗಿಸುತ್ತಾರೆ. ಆಯುರ್ವೇದ ಪಂಡಿತರು ಸಂಸ್ಕೃತದಲ್ಲಿ ಇದಕ್ಕೆ ನೀಡಿದ ಹೆಸರು ವಾಜೀಗಂಧಾ, ಹಯಗಂಧಾ, ವರಾಹಕರ್ಣೀ ಇತ್ಯಾದಿ. ಈ ಸಸ್ಯದ ಬೇರಿನಿಂದ ಕುದುರೆ ಮೂತ್ರದಂತಹ ವಾಸನೆ ಹೊರಡುತ್ತದೆಯಾದ್ದರಿಂದ ಅಲ್ಲದೆ ಇದರ ಬೇರನ್ನು ಸ್ವಚ್ಚಗೊಳಿಸಿ ಪುಡಿ ಮಾಡಿ ಸೇವಿಸಿದರೆ ಅಶ್ವದಂತೆ ಶಕ್ತಿಬಲ-ಉತ್ಸಾಹ ಬರುತ್ತದೆಯಾದ್ದರಿಂದ ಇದಕ್ಕೆ ಅಶ್ವಗಂಧಾ ಎಂಬ ನಾಮವು ಬಂದಿದೆ. ಇಂಗ್ಲೀಷ್ ನಲ್ಲಿ ಇದಕ್ಕೆ ವಿಂಟರ್ ಚೆರ್ರಿ ಎನ್ನುತ್ತಾರೆ. ಗುಜರಾತ್, ರಾಜಾಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ, ವಾಯವ್ಯ ಭಾರತ, ಕರ್ನಾಟಕ ಮುಂತಾದೆಡೆಯಲ್ಲಿ ಈ ಗಿಡವನ್ನು ಕಾಣಬಹುದು. ಸೊಲನೇಸೀ ಕುಟುಂಬಕ್ಕೆ ಸೇರಿದ, ಔಷಧೀಯ ಮಹತ್ತ್ವವುಳ್ಳ ಸಸ್ಯ (ಪಿಂಟರ್ ಚೆರ್ರಿ). ಕನ್ನಡದಲ್ಲಿ ಹಿರೇಮದ್ದಿನ ಗಿಡ ಎಂಬ ಹೆಸರೂ ಇದಕ್ಕಿದೆ. ಇದರ ವೈಜ್ಞಾನಿಕ ಹೆಸರು ವಿತಾಸಿಯ ಸಾಮ್ನಿಫೆರ. ಸು. 1 ಮೀ ಎತ್ತರಕ್ಕೆ ಬೆಳೆಯುವ ಮೂಲಿಕೆ. ಆಫ್ರಿಕ, ಮೆಡಿಟರೇನಿಯನ್ ಪ್ರದೇಶ ಹಾಗೂ ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಅಶ್ವಗಂಧ ಬೆಳೆಯಿಂದ ದೊರೆಯುವ ಆಲ್ಕಲಾಯ್ಡ್‌ಗಳಲ್ಲಿ ಮಿಥಾನಿನ್ ಮತ್ತು ಸಾಮ್ನಿಫೆರಿನ್ ಸಸ್ಯಕ್ಷಾರ ಮುಖ್ಯವಾದುವು. ಆಯುರ್ವೇದ ಹಾಗೂ ಯುನಾನಿ ಔಷಧಿಗಳ ತಯಾರಿಕೆಯಲ್ಲಿ ಇದರ ಬೇರು, ತೊಗಟೆ, ಎಲೆ, ಹಣ್ಣು ಮತ್ತು ಬೀಜಗಳು ಅನೇಕ ರೋಗಗಳ ನಿವಾರಣೆಗೆ ಉಪಯುಕ್ತವಾಗಿವೆ.
ಇದು ಒಂದರಿಂದ ಮೂರು ಅಡಿ ಎತ್ತರಕ್ಕೆ ಬೆಳೆಯುವ ಸುಂದರ ಪೊದೆ. ಇದರ ಎಲೆಗಳು ಆಡುಸೋಗೆಯ ಎಲೆಗಳನ್ನು ಹೋಲುವವು. ಆದರೆ ಅದಕ್ಕಿಂತ ಚಿಕ್ಕವು ಮತ್ತು ಅಷ್ಟು ಉದ್ದವಿರುವುದಿಲ್ಲ. ಎಲೆಗಳನ್ನು ಕೈಗಳಲ್ಲಿ ಉಜ್ಜಿದರೆ ಕುದುರೆಯ ಮೂತ್ರದ ವಾಸನೆ ಬರುವುದು. ಆದುದರಿಂದ ಈ ಮೂಲಿಕೆಗೆ ಅಶ್ವಗಂಧ ಎನ್ನುವರು. ರುಚಿಯಲ್ಲಿ ಕಹಿ. ಎಲೆಗಳು ಬೂದು ಬಣ್ಣದ ರೋಮಗಳಿಂದ ಕೂಡಿರುವವು. ಹೂಗಳು ಹಸಿರು, ಹಳದಿ ಬಣ್ಣದ ಗೊಂಚಲುಗಳು, ಹಣ್ಣು ಕೆಂಪಾಗಿರುವುದು ಮತ್ತು ಹೊದಿಕೆಯಿಂದ ಕೂಡಿರುವುದು. ಈ ಹೊದಿಕೆಯೊಳಗಡೆಯಿಂದ ಇದರ ಹಣ್ಣು ನೋಡಲು ಮನ ಮೋಹಕವಾಗಿರುವುದು. ಬೇರುಗಳು ಬಿಳಿ ಮತ್ತು ನಸುಹಳದಿ ಬಣ್ಣದಿಂದ ಕೂಡಿರುವುವು.
ಅಶ್ವಗಂಧ
೧)ಇದು ನರ ಮಾಂಸ ಖಂಡಗಳಿಗೆ ಶಕ್ತಿಯನ್ನು ನೀಡುವಂತಹ ದಿವ್ಯ ಔಷಧಿಯಾಗಿದೆ. ಇದರ ಬೇರುಗಳು ಕುದುರೆಯ ವಾಸನೆಯಂತಿರುವುದಕ್ಕೆ ಇದನ್ನು ಅಶ್ವಗಂಧಿಯೆಂದು ಕರೆಯುತ್ತಾರೆ.
೨) ನಪುಂಸಕತೆ ಹಾಗೂ ನಿಶಕ್ತಿಯನ್ನು ಹೋಗಲಾಡಿಸಲು 5 ಗ್ರಾಂ. ಅಶ್ವಗಂಧಿ ಚೂರ್ಣವನ್ನು ದಿನಾಲು ಎರಡು ಬಾರಿ ಬೆಳ್ಳೆಗೆ ,ರಾತ್ರಿ ಹಾಲು ಸಕ್ಕರೆಯೊಡನೆ ತೆಗೆದುಕೊಳ್ಳುಬೇಕು.
೩) ಗರ್ಭಾಶಯ ಬೆಳೆಯದ ಕುಮಾರಿಯರಿಗೆ 3 ತಿಂಗಳಗಳ ಕಾಲ ದಿನಾಲು ಚೂರ್ಣ ಕೊಡಲು ಉಪಯುಕ್ತ.
೪) ಅಶಕ್ತ ಮಕ್ಕಳಿಗೆ ಅಶ್ವಗಂಧಿ ರಸಾಯನ ರಾಮಬಾಣ.
೫) ಗ್ರಾಮ ಭಾಷೆಯಲ್ಲಿ ಇದಕ್ಕೆ ಹಿರೇಮದ್ದಿನ ಬೇರು ಎಂದು ಕರೆಯುತ್ತಾರೆ, ಇದರ ಎಲೆ, ಬೇರು, ಬೀಜ, ಎಲ್ಲದೂ ಔಷಧಿಯ ಗುಣಗಳನ್ನು ಹೊಂದಿದೆ.
೬) ವೀರ್ಯವೃದ್ದಿಗೆ ಅಶ್ವಗಂಧಿ ಚೂರ್ಣವನ್ನು ಹಾಲಿನಲ್ಲಿ ಕಲ್ಲುಸಕ್ಕರೆ ಕಲೆಸಿ ತೆಗೆದುಕೊಳ್ಳುಬೇಕು.
೭) ತಾಯಂದಿರಿಗೆ ಎದೆಯ ಹಾಲು ಬರದಿದ್ದರೆ ಅಶ್ವಗಂಧಿ ಚೂರ್ಣ ಸೇವಿಸಲು ಉಪಯುಕ್ತ.
೮) ನರಗಳ ದೌರ್ಬಲ್ಯವಿರುವವರು ಹಾಲಿನಲ್ಲಿ ಇದರ ಚೂರ್ಣ ಕುದಿಸಿ, ಕಲ್ಲುಸಕ್ಕರೆ ಹಾಗೂ ತುಪ್ಪದೊಡನೆ ಸೇವಿಸಬೇಕು.
೯) ಜ್ಞಾಪಕ ಶಕ್ತಿಯ ವೃದ್ದಿಗೂ ಇದರ ಚೂರ್ಣವನ್ನು ಉಪಯೋಗಿಸುತ್ತಾರೆ.
೧೦) ಅಶ್ವಗಂಧಿ ಬೀಜಗಳಿಗೆ ವಿಷ ನಿರೋಧಕ ಶಕ್ತಿಯಿದೆ ಎಂದು ದೃಢಪಟ್ಟಿದೆ.
೧೧) ಕಣ್ಣುಗಳಿಗೆ ಕತ್ತಲೆ ಆವರಿಸಿದಂತಾಗಿ ಮೇಲಿಂದ ಮೇಲೆ ಕುಸಿದು ಬೀಳುವವರು ಇದರ ಚೂರ್ಣ ಸೇವಿಸಲು ಗುಣಮುಖರಾಗುವರು.

ಬೆಂಡೆಕಾಯಿಯಲ್ಲಿ ಆರೋಗ್ಯ

ಬೆಂಡೆಕಾಯಿಯಲ್ಲಿ  ಆರೋಗ್ಯ
ನಾವು ದಿನವೂ ಉಪಯೋಗಿಸುವ ತರಕಾರಿಗಳಲ್ಲಿ ಬೆಂಡೆಕಾಯಿಯೂ ಒಂದು. ಇದು ಋತುಮಾನಗಳೊಂದಿಗೆ ಸಂಬಂಧವಿಲ್ಲದೆ ಯಾವಾಗಲೂ ದೊರೆಯುತ್ತದೆ. ಇದರಿಂದ ಪಲ್ಯ, ಬೆಂಡೆಕಾಯಿ ಫ್ರೈ, ಗೊಜ್ಜು, ಹುಳಿ ಎಲ್ಲವನ್ನೂ ಮಾಡಿಕೊಂಡು ತಿನ್ನುತ್ತೇವೆ. ಬೆಂಡೆಕಾಯಿಯಿಂದ ಯಾವುದೇ ರೀತಿಯ ಅಡುಗೆ ಮಾಡಿದರೂ ರುಚಿಕರವಾಗಿರುತ್ತದೆ. ನಮ್ಮ ಆರೋಗ್ಯವನ್ನು ರಕ್ಷಿಸುವ ಕೆಲವು ಗುಣಗಳೂ ಸಹ ಬೆಂಡೆಕಾಯಿಯಲ್ಲಿವೆ. ಅದೇರೀತಿ ಕೆಲವು ರೋಗಗಳನ್ನು ಗುಣಪಡಿಸಿಕೊಳ್ಳಬಹುದು. ಬೆಂಡೆಕಾಯಿ ಉಪಯೋಗಿಸುವುದರಿಂದ ನಮಗಾಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಎರಡು ಬೆಂಡೆಕಾಯಿಗಳನ್ನು ಚೆನ್ನಾಗಿತೊಳೆಯಿರಿ. ಎರಡೂ ಕೊನೆಗಳನ್ನು ಕತ್ತರಿಸಿ ತೆಗೆಯಿರಿ. ಆನಂತರ ಉದ್ದಕ್ಕೆ ಸೀಳಿರಿ. ನಂತರ ಒಂದು ಗ್ಲಾಸ್ ನೀರಿನಲ್ಲಿ ಈ ಎರಡೂ ಬೆಂಡೆಕಾಯಿಗಳನ್ನು ಹಾಕಿ ಮುಚ್ಚಳ ಮುಚ್ಚಿ. ರಾತ್ರಿಯೆಲ್ಲಾ ಹಾಗೇ ಬಿಟ್ಟು ಬೆಳಿಗ್ಗೆ ಖಾಲೀ ಹೊಟ್ಟೆಯಲ್ಲಿ ಈ ನೀರನ್ನು ಸೇವಿಸಿ. ಈ ರೀತಿ ತಯಾರಿಸಿದ ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.
1. ಕರುಳು, ಜೀರ್ಣಾಶಯ ಶುಭ್ರವಾಗುತ್ತದೆ. ಒಂದು ವೇಳೆ ಅಲ್ಸರ್ ಇದ್ದಲ್ಲಿ ಕಡಿಮೆಯಾಗುತ್ತದೆ. ಗ್ಯಾಸ್, ಅಸಿಡಿಟಿ, ಮಲಬದ್ಧತೆ ದೂರವಾಗುತ್ತವೆ.
2.ಫೈಬರ್, ವಿಟಮಿನ್  E, C, K, ಮೆಗ್ನೀಷಿಯಂ, ಫಾಸ್ಫರಸ್ ಹೇರಳವಾಗಿ ದೊರೆಯುತ್ತವೆ. ಇದರಿಂದಾಗಿ ದೇಹಕ್ಕೆ ಒಳ್ಳೆಯ ಪೋಷಕಾಂಶಗಳು ದೊರೆಯುತ್ತವೆ.
3. ರಕ್ತ ಪ್ರಸಾರ ಹೆಚ್ಚುತ್ತದೆ. ಹೃದಯದ ಕಾರ್ಯ ವೈಖರಿ ಚೆನ್ನಾಗಿರುತ್ತದೆ. ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ.
4. ಮಧುಮೇಹ ರೋಗ ಗುಣವಾಗುತ್ತದೆ. ರಕ್ತದಲ್ಲಿರುವ ಸಕ್ಕರೆಯ ಅಂಶ ಹತೋಟಿಯಲ್ಲಿರುತ್ತದೆ.
5. ಮೂಳೆಗಳು ಗಟ್ಟಿಗೊಳ್ಳುತ್ತವೆ. ಸ್ತ್ರೀಯರಿಗೆ ಋತು ಸಮಯದಲ್ಲಿ ಉಂಟಾಗುವ ಸಮಸ್ಯೆಗಳು ಕಡಿಮೆಯಾಗುತ್ತವೆ.
6. ಅಧಿಕ ಉಷ್ಣ ಶರೀರವುಳ್ಳವರು ಈ ನೀರನ್ನು ಕುಡಿದರೆ, ಶರೀರದ ಉಷ್ಣತೆ ಕಡಿಮೆಯಾಗುತ್ತದೆ.
7. ದೇಹದಲ್ಲಿರುವ ಅಧಿಕ ಕೊಬ್ಬು ಕರಗಿ, ದೇಹದ ತೂಕ ಕಡಿಮೆಯಾಗುತ್ತದೆ.
8. ಚರ್ಮ ಕಾಂತಿಯುತವಾಗುತ್ತದೆ. ಕೂದಲು ದೃಡವಾಗಿ, ಒತ್ತಾಗಿ ಬೆಳೆಯುತ್ತವೆ.
9. ಶರೀರದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಕಣ್ಣಿನ ಸಮಸ್ಯೆಗಳು ದೂರವಾಗುತ್ತವೆ. ಕಣ್ಣಿನ ದೃಷ್ಟಿ ತಿಕ್ಷ್ಣವಾಗುತ್ತದೆ

ನವಗ್ರಹ ಸ್ತೋತ್ರ :--

ನವಗ್ರಹ ಸ್ತೋತ್ರ :--
ರವಿ:--
ಪದ್ಮಾಸನಃ ಪದ್ಮಕರೋ ದ್ವಿಬಾಹು: |  ಪದ್ಮದ್ಯುತೀಸ್ಸಪ್ತ ತುರಂಗವಾಹನಃ ||
ದಿವಾಕರೋ ಲೋಕವಪುಃ ಕಿರೀಟೀ |  ಮಯಿಪ್ರಸಾದಂ ವಿಧದಾತುದೇವ: ||
ಚಂದ್ರ :--
ಶ್ವೇತಾಂಬರ ಶ್ವೇತವಪುಃ ಕಿರೀಟೀ | ಶ್ವೇತದ್ಯುತೀರ್ದಂಡಧರೋ ದ್ವಿಬಾಹು: ||
ಚಂದ್ರೋಮೃತಾತ್ಮವರದಃ ಪ್ರಸನ್ನಃ | ಶ್ರೇಯಾಂಸೀಮಹ್ಯಂ ವಿದಧಾತುದೇವಃ ||
ಕುಜ:--
ರಕ್ತಾಂಬರೋರಕ್ತವಪುಃ ಕಿರೀಟೀ |
ಚತುರ್ಭುಜೋ ಮೇಷ ಗಮೋಗದಾಭೃತ್ ||
ಧರಾಸುತಶ್ಯಕ್ತಿಧರಶ್ಚಶೂಲೀ ಸದಾಮಮಸ್ಯಾದ್ವರದಃ ಪ್ರಶಾಂತಃ ||
ಬುಧ :--
ಪೀತಾಂಬರಃ ಪೀತವಪುಃ ಕಿರೀಟೀ |
ಚತುರ್ಭುಜೋ ದಂಡಧರಶ್ಚ ಸೌಮ್ಯಃ ||
ಚರ‍್ಮಾಸಿಧೃತ್ಸೋಮಸುತಸ್ಸುಮೇರುಃ | ಸಿಂಹಾದಿ ರೂಢೋವರದೋ ಬುಧಸ್ಸ್ಯಾತ್ ||
ಗುರು:--
ಹೇಮಾಂಬರೋ ಹೇಮವಪುಃ ಕಿರೀಟೀ | ಚತುರ್ಭುಜೋ ದೇವ ಗುರುಃ ಪ್ರಶಾಂತಃ ||
ಧರ್ತಾಸೀದಂಡೌಚಕಮಂಡಲುಂಚ |
ತಥಾಕ್ಷ ಸೂತ್ರಂ ವರದೋಸ್ತುಮಹ್ಯಂ ||
ಶುಕ್ರ:--
ಶ್ವೇತಾಂಬರಃ ಶ್ವೇತವಪುಃ ಕಿರೀಟೀ |  ಚತುರ್ಭುಜೋ ದೈತ್ಯಗುರುಃ ಪ್ರಶಾಂತಃ||
ಧರ್ತಾಸೀದಂಡೌಚಕಮಂಡಲುಂಚ |  ತಥಾಕ್ಷ ಸೂತ್ರಂ ವರದೋಸ್ತುಮಹ್ಯಂ ||
ಶನಿ :--
ನೀಲಾಂಬರೋ ನೀಲವಪುಃ ಕಿರೀಟೀ ಚತುರ್ಭುಜೋ ದೈತ್ಯಗುರುಃ ಪ್ರಶಾಂತಃ ||
ಚತುರ್ಭುಜಃ ಸೂರ್ಯಸುತಃ ಪ್ರಶಾಂತಃ || ಸಚಾಸ್ತುಮಹ್ಯಂ ವರಮಂದಾಗಮೀ ||
ರಾಹು :--
ನೀಲಾಂಬರೋ ನೀಲವಪುಃ ಕಿರೀಟಿ | ಕರಾಳವಕ್ತ್ರಃಕರವಾಳ ಶೂಲಿ ಚತುರ್ಭುಜಶ್ಚರ‍್ಮಧರಶ್ಚರಾಹುಃ ಸಿಂಹಾಧಿರೂಡೋ ವರದೋಸ್ತುಮಹ್ಯಂ||
ಕೇತು:--
ಧೂಮ್ರೋದ್ವಿಬಾಹು ರ್ವರದೋ ಗದಾಭೃತ್ | ಗೃಧ್ರಾಸನಸ್ಥೋ ವಿಕೃತಾನನಶ್ಚ ||
ಕಿರೀಟಕೇಯೂರ ವಿಭೂಷಿತಾಂಗಃ | ಸಚಾಸ್ತುಮೇಕೇತುಗಣಃ ಪ್ರಶಾಂತಃ ||

ಶ್ರೀ ವೆಂಕಟೇಶ ರಹಸ್ಯ

ಶ್ರೀ ವೆಂಕಟೇಶ ರಹಸ್ಯ*🕉
ಸಹಸ್ರಾರ ಚಕ್ರದಮೇಲೆ ನಿಂತು ಅಮೃತವನ್ನು ಸುರಿಸುವವನು
ಈ ಆದಿಶೇಷನನ್ನು ಯೋಗಿಗಳು ನಮ್ಮ ಬೆನ್ನುಮೂಳೆಗೆ ಸಮೀಕರಿಸುವುದುಂಟು. ನಮ್ಮ ದೇಹದ ಭಾರವನ್ನೆಲ್ಲವನ್ನೂ ಸಹಿಸಿ ಆಧಾರ ಭೂತವಾಗಿದ್ದುಕೊಂಡು, ನಮ್ಮ ಭಾರವನ್ನು ವಹಿಸಿರುವ ಈ ಬೆನ್ನುಮೂಳೆಯಲ್ಲಿ ಆರು ಚಕ್ರಗಳ ಕೇಂದ್ರ ಸ್ಥಾನಗಳಿವೆ. ಮೂಲಾಧಾರ (ಗುದ ಪ್ರದೇಶ), ಸ್ವಾಧಿಷ್ಠಾನ (ಗುಹ್ಯೇಂದ್ರಿಯ ಸ್ಥಾನ), ಮಣಿಪುರ (ಹೊಕ್ಕಳಿನ ಪ್ರದೇಶ) ಅನಾಹತ (ಎದೆಯ ಪ್ರದೇಶ), ವಿಶುದ್ಧ (ಕಂಠ ಸ್ಥಾನ), ಆಜ್ಞಾ (ಎರಡು ಹುಬ್ಬುಗಳು ಕೂಡುವ ಸ್ಥಳ), ಮತ್ತು ಸಹಸ್ರಾರ (ನಡು ನೆತ್ತಿಯ ಸ್ಥಳ). ತಪಸ್ಸಿನಿಂದಲೂ, ದೀರ್ಘ ಕಾಲದ ಸಾಧನೆಯಿಂದಲೂ ಯೋಗಿ ತನ್ನಲ್ಲಿರುವ ಈ ಚಕ್ರಗಳ ದರ್ಶನ, ಅನುಭವ ಮುಂತಾದ್ದನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾನೆ. ಸಾಧಕರ ಪರಿಭಾಷೆಯಲ್ಲಿ ನಡುನೆತ್ತಿಯ ಮೇಲಿರುವ ಸೂಕ್ಷ್ಮವಾದ ಪ್ರದೇಶವೇ ಬ್ರಹ್ಮರಂಧ್ರ. ಈ ಬ್ರಹ್ಮರಂಧ್ರದಿಂದಲೇ ಆತ್ಮನ ಪ್ರವೇಶ ಶರೀರದೊಳಗಾಗುವುದು. ಶರೀರದ ಅವಸಾನ ಕಾಲದಲ್ಲಿ ಯೋಗಿಗಳು ತಮ್ಮ ಪ್ರಾಣ ಶಕ್ತಿಯನ್ನು ಊರ್ಧಮುಖವಾಗಿಸಿ ಬ್ರಹ್ಮರಂಧ್ರದಿಂದ ಹೊರಹೋಗುತ್ತಾರೆ.
ಸಾಮಾನ್ಯ ಜೀವರು ತಮ್ಮ ತಮ್ಮ ಪ್ರಾರಭ್ಧ ಕರ್ಮಕ್ಕನುಗುಣವಾಗಿ ಇತರ ಶಕ್ತಿ ಕೇಂದ್ರಗಳಿಂದ ಪ್ರಾಣೋತ್ಕ್ರಮಣ ಮಾಡುತ್ತಾರೆ. ಸಹಸ್ರಾರ ಚಕ್ರವೇ ಆದಿಶೇಷನ ಫಣಾ ಮಂಡಲ ಸ್ಥಾನ. ಇದರ ಮೇಲೆ ನಿವಾಸಿಸುವವನೇ ಶ್ರೀ ವೇಂಕಟೇಶ. ಇಲ್ಲಿ ಒಂದು ಅಂಶವನ್ನು ನಾವು ಗಮನಿಸಬೇಕು. ಪರಮಾತ್ಮನ ಶೇಷಶಯನಕ್ಕೂ (ಶೇಷನ ಮೇಲೆ ಮಲಗುವುದಕ್ಕೂ) ಶೇಷ ಫಣಸ್ಯೋಪರಿ ನಿವಾಸಕ್ಕೂ ವ್ಯತ್ಯಾಸವಿದೆ. ಮಹಾವಿಷ್ಣು ತತ್ವವು ಆದಿಶೇಷನ ಮೇಲೆ ಮಲಗುತ್ತದೆ. ವೇಂಕಟೇಶ ತತ್ವವು ಶೇಷನ ಹೆೆಡೆಯ ಮೇಲೆ ನಿಲ್ಲುತ್ತದೆ. ಆದರೆ ಇದು ಕಾಳಿಯ ಮರ್ಧನದ ಹಾಗಲ್ಲ. ಅಲ್ಲಿ ಆದದ್ದು ಕಾಳಿಯನೆಂಬ ದುಷ್ಟ ಸರ್ಪದ ದಮನ. ಇಲ್ಲಿ ನಡೆಯುತ್ತಿರುವುದು ಮಹಾ ಭಕ್ತನೂ, ಭಾಗವತೋತ್ತಮನೂ, ಅನಂತ ಪ್ರಕೃತಿ ಮಂಡಲಗಳು ತನ್ನಲ್ಲಿ ಲಯವಾದಾಗ ಯಾವ ತತ್ವ ತನ್ನಲ್ಲಿ ಲಯವಾಗದೆ ಶೇಷವಾಗಿ ಉಳಿದುಕೊಂಡು ತನ್ನ ಸೇವೆಗಾಗಿ ನಿಲ್ಲುವುದೋ ಅಂತಹ ತತ್ವಕ್ಕೂ ಉತ್ತಮವಾದ ಸ್ಥಾನವಾದ ಹೆಡೆಯ ಮೇಲೆ ನಿಂತು ಭಕ್ತರನ್ನು ಅಮೃತಮಯರನ್ನಾಗಿಸುವುದು. ತಮ್ಮ ಅಮೃತ ಶಕ್ತಿಯ, ತಮ್ಮ ಅಮೃತತ್ವದ ನಿಜ ಸ್ವರೂಪದ ಆತ್ಮಾನುಭವವನ್ನು ಮಾಡಿಕೊಡುವುದು. ಅದಕ್ಕಾಗಿಯೇ ವೇಂಕಟೇಶನ್ನು ಮಹಾನುಭಾವರು ಸುಧಾ ಸ್ವರೂಪನೆಂದೂ, ಅಮೃತೇಶನೆಂದೂ, ಸುಧಾದಾತನೆಂದೂ ಕರೆದಿರುವುದು. ಅವನು ಅಮೃತ ಪ್ರದಾತ. ಎಂತಹ ಅಮೃತ! ನಾನು ಯಾರು? ಎಂಬ ಬ್ರಹ್ಮಜ್ಞಾನವೆಂಬ ಅಮೃತವನ್ನು ಕೊಟ್ಟು ಧನ್ಯನಾಗಿಸುವವನು

ವಿವಿಧ ರೀತಿಯ ಆರತಿ

*ಭಗವಂತನಿಗೆ ಭಗವದ್ಭಕ್ತರು ವಿವಿಧ ರೀತಿಯ ಆರತಿಯಿಂದ ಸಂತುಷ್ಟನಾಗುತ್ತಾನೆಂದು ಹಿಂದಿನಿಂದಲೂ ನಡೆದು ಬಂದ ಪಧ್ಧತಿ ಎಲ್ಲಕ್ಕಿಂತ ಮಿಗಿಲಾಗಿ ಪರಿಶುದ್ದ ಮನಸ್ಸು ಶ್ರದ್ದಾ ಭಕ್ತಿ ಬಹು ಮುಖ್ಯ ಬನ್ನಿ ಸಂಖ್ಯೆಯ ದೃಷ್ಟಿಯಲ್ಲಿ ಆರತಿಯಲ್ಲಿ ಯಾವ ಫಲ ತಿಳಿಯೋಣ.*
1. *ಏಕಾರತಿ* ( ಒಂದು) ‌‌‌‍- ಮಾಡುವುದರಿಂದ ಪೂಜೆಯ ಪೂರ್ಣ ಫಲ ದೊರೆಯುತ್ತದೆ.
2. *ದ್ವಿ ಆರತಿ*( ಎರಡು)  - ಮಾಡುವುದರಿಂದ ದಾಂಪತ್ಯ ಸಖ್ಯ ಫಲ ದೊರೆಯುತ್ತದೆ.
3. *ತ್ರಯ ಆರತಿ*( ಮೂರು)  - ಮಾಡುವುದರಿಂದ ಕುಟುಂಬ ಅಭಿವೃದ್ಧಿಯುಂಟಾಗುತ್ತದೆ.
4. *ಪಂಚ ಆರತಿ*( ಐದು)  - ಮಾಡುವುದರಿಂದ ಪರಿಸರದಲ್ಲಿ ಸಸ್ಯವೃದ್ದಿ ಆಗುತ್ತದೆ.
5. *ನವ ಆರತಿ* ( ಒಂಬತ್ತು) - ಮಾಡುವುದರಿಂದ ಇಡೀ ವರ್ಷ ವೃದ್ದಿ ಫಲ ದೊರೆಯುತ್ತದೆ.
6. *ಏಕಾದಶ ಆರತಿ*( ಹನ್ನೊಂದು)  - ಮಾಡುವುದರಿಂದ ಮಹಾಲಕ್ಷ್ಮಿ ಸುಪ್ರೀತಳಾಗುತ್ತಾಳೆ.
7. *ದ್ವಾದಶ ಆರತಿ*( ಹನ್ನೆರಡು)  - ಮಾಡುವುದರಿಂದ ಸುಖ ನೆಮ್ಮದಿಯುಂಟಾಗುತ್ತದೆ.
8. *ಷೋಡಶ ಆರತಿ*( ಹದಿನಾರು)  - ಮಾಡುವುದರಿಂದ ವಿಶೇಷ ಧನಲಾಭವುಂಟಾಗುತ್ತದೆ.
9.  *ಏಕವಿಂಶತಿ*( ಇಪ್ಪತ್ತೊಂದು)  ಮಾಡುವುದರಿಂದ ರಾಜ್ಯಲಾಭ ದೊರೆಯುತ್ತದೆ.
10. *ಚತುರ್ವಿಂಶತಿ ಆರತಿ*( ಇಪ್ಪತ್ನಾಲ್ಕು) - ಉತ್ತಮ ಮಳೆ ಬೆಳೆ ಉಂಟಾಗುತ್ತದೆ.
11. *ನಕ್ಷತ್ರ ಆರತಿ*( ಇಪ್ಪತ್ತೇಳು)- ಸಕಲ ದೇವತೆಗಳು ಅನುಗ್ರಹಿಸುತ್ತಾರೆ.
12. *ನಾಗ ಆರತಿ* ಮಾಡುವುದರಿಂದ ಉತ್ತಮ ಸಂತಾನ ವೃದ್ಧಿಯಾಗುತ್ತದೆ.
13. *ಕೂರ್ಮ ಆರತಿ*- ಮಾಡುವುದರಿಂದ ಧೈರ್ಯ ಸ್ತೈರ್ಯ ಧೃಡತೆವುಂಟಾಗಿ ಭಗವಂತನ ಪೂರ್ಣಾನುಗ್ರಹವಾಗುತ್ತದೆ.
14. (ನೂರೆಂಟು) *ಅಷ್ಟೋತ್ತರ ಶತದೀಪ* - ಲಕ್ಷ್ಮೀ ನಾರಾಯಣ ರ ಸಂಪೂರ್ಣ ಕೃಪಾಕಟಾಕ್ಷವುಂಟಾಗುತ್ತದೆ.

ಅಂಗಾರ ಅಕ್ಷಂತಿಗಳು ಯಾಕೆ ಹಚ್ಚಿಕೋಬೇಕು?*

ಅಂಗಾರ ಅಕ್ಷಂತಿಗಳು ಯಾಕೆ ಹಚ್ಚಿಕೋಬೇಕು?*
ಇದು ಯಾವಾಗನಿಂತ ಬಂದ ಪದ್ಧತಿ?
*ವಿಷ್ಣೋರಂಗಾರಶೇಷೇಣ ಯೋsಂಗಾನಿ ಪರಿಮಾರ್ಜಯೇತ್|*
*ದುರಿತಾನಿ ವಿನಷ್ಯಂತಿ ವ್ಯಾಧಯೋ ಯಾಂತಿ ಖಂಡಶಃ ||*
ಎಂಬ ಉಕ್ತಿಯಂತೆ ಭಗವಂತನಿಗೆ ಮಾಡಿದ ಧೂಪಾರತಿಯ ಅಂಗಾರವನ್ನು ಹಚ್ಚಿಕೊಳ್ಳುವದರಿಂದ ನಮ್ಮ ಸಮಸ್ತ ದುರಿತಗಳು , ವ್ಯಾಧಿಗಳು ,  ಎಷ್ಟೋ ಕಡಿಮೆ ಆಗುತ್ತವೆ
ಅಕ್ಷತೆ ಊಟವಾಗಿದೆಯೆಂಬ ಸಂಕೇತ ಎಂದು ರಾಘವೇಂದ್ರ ವಿಜಯದಲ್ಲಿ ಉಲ್ಲೇಖವಿದೆ
: ನನಗೆ ತಿಳಿದ ಮಟ್ಟಿಗೆ. . ಪರಮಾತ್ಮನಿಗೆ ಮಾಡಿದ ಧೂಪಾರತಿಯ ಶೇಷವನ್ನು ದೇಹಕ್ಕೆ ಹಚ್ಚಿಕಳ್ಳುವುದರಿಂದ ಪಾಪಗಳ ವಿನಾಶವಾಗುತ್ತದೆ... ಹಾಗೂ...ಹಣೆಯಮೇಲೆ ಗದಾ ರೂಪದಲ್ಲಿ ಹಚ್ಚಿಕಳ್ಳುವುದರಿಂದ ಯಮ ಭಟರು ಸಹಾ ಸಮೀಪ ಬರಲು ಅಂಜುತ್ತಾರೆ ಅಂತ.. ಇನ್ನೂ
ಹಾಗಾಗಿ ಏಕಾದಶಿಯ ದಿವಸ ಕೇವಲ ಅಂಗಾರ ಧಾರಣೆ
ಅದು ಗುರ್ತು.. ಮಾತ್ರ. ಆದರೇ ಇದು ಅನಾದಿಕಾಲದಿಂದ ಬಂದ ಪದ್ಧತಿ.. ಶ್ರೀ ವೆಂಕಟೇಶ್ವರ ಕಲ್ಯಾಣದಲ್ಲಿ ವೆಂಕಪ್ಪ ಈ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಭೇಟೆಗೆ ಹೋದರು ಅಂತ ಕೇಳ್ತೇವೆ
Madhwavijaya da vyakhyana dalli angara akshategala ulleka ide
ಇದಲ್ಲದೇ *ರಾ ರಕ್ಷಾಣೋ ಅಗ್ನೆ ತವ ರಕ್ಷಣೇಭಿಃ* ಎಂಬ ವೇದದ ಉಕ್ತಿಯಂತೆ ಭಗವಂತನಿಗೆ ಅರ್ಪಿಸಿದ ಅಂಗಾರವನ್ನು ನಮ್ಮ ದೇಹದಲ್ಲಿ ಹಚ್ಚಿಕೊಳ್ಳುವದರಿಂದ ತಾವು ಹೇಳಿದಂತೆ ಸಮಸ್ತ ಭಯಗಳಿಂದಲೂ ರಕ್ಷಣೆ ದೊರಕುತ್ತದೆ ,  ಗದಾರೂಪದಲ್ಲಿರೋ ಅಂಗಾರ ಅಕ್ಷತೆಯನ್ನು ನೋಡಿದ ಯಮಭಟರು ನಮ್ಮ ಸಮೀಪ ಬರಲೂ ಸಹ ಅಂಜುತ್ತಾರೆ , ಆದರೆ ಯಾವನ ಹಣೆಯಲ್ಲಿ ಅಂಗಾರ ಅಕ್ಷತೆ ಇಲ್ಲವೋ ಅಂತಹವನ ಹಣೆ ಸ್ಮಶಾನ ದರ್ಶನಕ್ಕೆ ಸಮನಾದುದರಿಂದ ಅಂತಹವನ ಬರಿ ಹಣೆಯನ್ನು ನೋಡಿದಾಕ್ಷಣವೇ ಸಚೇಲ ಸ್ನಾನ ಮಾಡಬೇಕು ಅಂತ ಶಾಸ್ತ್ರದಲ್ಲಿ ತಿಳಿಸಲಾಗಿದೆ
ಅಂಗಾರ ಅಕ್ಷಂತೆ...ಹಚ್ಚಿದರೆ ಊಟಾಯ್ತು ಅಂದುಕೊಳ್ತಾರೆ...ಅದು ಹಾಗಲ್ಲ....
ಅಂ+ ಗಾರ = ಅಂಗಾರ ,
    *ಅಂ ಅನಂತಾಯ ನಮಃ* ಎಂಬ ಉಕ್ತಿಯಂತೆ ಅನಂತ ಶಬ್ದವಾಚ್ಯನಾದ ಭಗವಂತನಿಗೆ ಅರ್ಪಿಸಿದ *ಗಾರ* - ಧೂಪಾರತಿಯ ಶೇಷ ಇದನ್ನು ಊರ್ಧ್ವಮುಖವಾಗಿ  ಹಚ್ಚಿಕೊಳ್ಳುವದರಿಂದ  , ನಮ್ಮ ನಾಭಿಪ್ರದೇಶದಿಂದ ಹೊರಟ ಸುಶುಮ್ನಾ ನಾಡಿ ಬ್ರಹ್ಮ ರಂಧ್ರದವರೆಗೂ ಬಂದು ಸೇರುತ್ತದೆ ಅದು ಊರ್ಧ್ವಮುಖವಾಗಿಯೇ ಚಲನೆ ಆಗ್ತಾಯಿರಬೇಕು ಅಂದರೆ ನಮ್ಮ ಪ್ರಾಣ ಬ್ರಹ್ಮರಂಧ್ರದ ಮೂಲಕ ಹೋಗಲು ಸಾಧ್ಯ , ಭಗವಂತನಿಗೆ ಅರ್ಪಿಸಿದ ಈ ಶೇಷವನ್ನು ಊರ್ಧ್ವಮುಖವಾಗಿ ಹೊಟ್ಟೆಮೇಲೆ ಮೂರು ಕಡೆ ಎದೆಯ ಮೇಲೆ ಎರಡು ಕಡೆ , ಕುತ್ತಿಗೆ , ಹಾಗೂ ಹಣೆಯಿಂದ ಬ್ರಹ್ಮರಂಧ್ರ ಇರುವ ಸ್ಥಳದವರೆಗೂ ಹಚ್ಚಿಕೊಳ್ಳುವದರಿಂದ ಆ ಸುಷುಮ್ನಾ ನಾಡಿಯ ಚಲನೆಯು ಸರಿಯಾದ ಕ್ರಮದಲ್ಲಿ ಇರತ್ತೆ . ಅಕ್ಷತೆಯನ್ನು ಭ್ರೂಮಧ್ಯದಲ್ಲಿ ಹಚ್ಚಿಕೊಳ್ಳುವದರಿಂದ ಅಲ್ಲಿ ನಮ್ಮ ಧೀಶಕ್ತಿಯು ಕೇಂದ್ರೀಕರಣಗೊಂಡು ಮೇಧಾ ಶಕ್ತಿಯು ವೃದ್ಧಿ ಆಗುತ್ತದೆ . ಈ ಕಾರಣದಿಂದ  ಅಂಗಾರ ಅಕ್ಷತೆ ಹಚ್ಚಿಕೊಳ್ಳುವ ಸತ್ಸಂಪ್ರದಾಯ ಇದೆ
ಮಧ್ವವಿಜಯದ 10ನೇಸರ್ಗ
ದ 17ನೇ ಶ್ಲೋಕಕ್ಕೆ ಮಧ್ವವಿಜಯದ ವ್ಯಾಖ್ಯಾನ ಭಾವಪ್ರಕಶಿಕದ ಈ ರೀತಿ ವ್ಯಾಖ್ಯಾನ ಇದೆ .
ಶ್ರೀಮದಾಚಾರ್ಯರು ಗಂಗಾನದಿಯನ್ನು ದಾಟಿಬರುವುದನ್ನು ನೋಡಿ ತುರುಷ್ಕ ರಾಜ ಶ್ರೀಮದಾಚಾರ್ಯ ಜೋತೆ ಸಂಭಾಷಣೆ ಮಾಡುವಾಗ ಅವರ ಹಣೆಯಲ್ಲಿರುವ  ಅಂಗಾರ ಅಕ್ಷತೆಗಳನ್ನು ನೋಡಿ ತಮ್ಮ ಹಣೆಯಲ್ಲಿ ಇರುವುದೇನು. ಎಂದು ಕೇಳಲು ಶ್ರೀಮದಾಚಾರ್ಯರು ನೀವು ಕೈಯಲ್ಲಿ ಗದೆ ಹಿಡಿದರೆ ನಾವು ಅದನ್ನು ಹಣೆಯಲ್ಲಿ ಧರಿಸಿರುವೇವು ಎಂದು ಉತ್ತರಿಸಿದರು .
*ಕಿo ಲಲಾಟೇ ಇತಿ  ಪೃಷ್ಟೋ ರಾಜ್ಞಾಕರೇಣ ಗದಾo ಭವo* *ತೋ ಭಿಭ್ರoತಿ ವಯಂ ಲಲಾಟೇ ಇತ್ಯೂಚೇ ಇತ್ಯಾದ್ಯಶಬ್ದಾರ್ಥಃ*
ಶಸ್ತ್ರಪಾಣಿಗಳು ಕೈಯಲ್ಲಿ ಗದೆ ಹಿಡಿದರೆ ಶಾಸ್ತ್ರಪಾಣಿಗಳು ಹಣೆಯಲ್ಲಿ ಗದೆ (ಅಂಗಾರ ಅಕ್ಷತೆ)
ಧರಿಸಬೇಕು ಎಂಬುದು ಇಲ್ಲಿಯ ಮರ್ಮ   ಅಂಗಾರ ಅಕ್ಷತೆಗಳ ಧಾರಣೆಗೆ ಒಂದು ಅಪೂರ್ವ ಆಧಾರವಾಗಿದೆ ಎಂಬುದನ್ನು ಗಮಿನಿಸಬೇಕು

ಮರಣ ಕಾಲದಲ್ಲಿ ಯಾವ ಯೋಚನೆಗಳು ಬರ ಬಹುದು?

ಮರಣ ಕಾಲದಲ್ಲಿ ಯಾವ ಯೋಚನೆಗಳು ಬರ ಬಹುದು?
ಇದೊಂದು ನಂಬಲಾರದಂತಹ ವಿಚಾರ. ಆದರೆ ನಮ್ಮ ಪುರಾತನ ಋಷಿಗಳು ಭೂತ ವರ್ತಮಾನ ಭವಿಷ್ಯಗಳನ್ನು ಬಲ್ಲಂತಹ ತ್ರಿಕಾಲ ಜ್ಞಾನಿಗಳು ಅಲ್ಲವೇ?
ಅವರು ನಡೆಸಿದ ಸಂಶೋಧನೆಗಿಂತ ಮಿಗಿಲು ಯಾವುದೂ ಇಲ್ಲ. ಕೇವಲ ನಾವಿಂದು ಅದನ್ನು ಆ ಸಂಶೋಧನೆಗಳನ್ನು ಹುಡುಕಿ ಇಂದಿನ ವ್ಯಾವಹಾರಿಕತೆಗೆ ಹೊಂದುವಂತೆ ಬರೆಯ ಬಹುದಷ್ಟೆ. ಮನುಷ್ಯನು ತನ್ನ ಕೊನೆಯುಸಿರಿನ ಕಾಲದಲ್ಲಿ ಏನು ಯೋಚಿಸಿರುವನು? ಇದನ್ನು ಹೇಳಲಿಕ್ಕೆ ಆ ಮನುಷ್ಯನು ಇರುವುದಿಲ್ಲ. ಮರಣಕ್ಕೆ ಕೆಲ ಗಳಿಗೆಗೆ ಮುಂಚೆ ಕೆಲವರು ಅವರ ಮನದ ಇಂಗಿತಗಳನ್ನು ಹೇಳಿದ್ದಿದೆ.
ಆದರೆ ಕೊನೆಯ ಉಸಿರಿನಲ್ಲಿ ಇರುವಾಗ ಮನದ ಯೋಚನೆಗಳು ಏನಿರ ಬಹುದು ಎಂದು ಯೋಚಿಸಿದವರಿಲ್ಲ. ಇಲ್ಲಿ ನಾಲ್ಕು ವಿಧಗಳ ಚಿಂತನೆಗಳಿವೆ. ಆರ್ತ, ರೌದ್ರ, ಧನ್ಯ ಮತ್ತು ಶುಕ್ಲ. ಇವುಗಳಲ್ಲಿ ಯಾವುದಾದರೂ ಒಂದು ಚಿಂತನೆ ಬರಲೇ ಬೇಕು ಎಂಬುದು ಮರಣ ಕಾಲದ ಸಿದ್ಧಾಂತ.
ಆರ್ತ-ಹೆಸರೇ ಹೇಳುತ್ತದೆ ಆರ್ತ ನಾದ ಎಂದು. ಅಯ್ಯೋ ನನ್ನ ಮಕ್ಕಳು, ನನ್ನ ಹೆಂಡತಿ, ನನ್ನ ಆಸ್ತಿ ಎಲ್ಲಾ ಬಿಟ್ಟು ಹೋಗ ಬೇಕಲ್ಲಾ ಎಂಬ ದುಃಖ ಬರುತ್ತದೆ. ನೀವು ನೋಡಿರ ಬಹುದು ಕೆಲ ಮನುಷ್ಯರು ಮರಣ ಕಾಲಕ್ಕೆ ಸದಾ ಅಳುವವರನ್ನು. ಅಂದರೆ ಇವರಿಗೆ ಈ ಲೋಕದ ವ್ಯಾಮೋಹವನ್ನು ತುಂಡು ಮಾಡಿ ಹೋಗಲು ಆಗುತ್ತಿಲ್ಲ. ಆ ಕಡೆಯಿಂದ ಯಮ ಪಾಶ ಎಳೆಯುತ್ತದೆ. ಹಾಗಾಗಿ ದುಃಖಿಸುತ್ತಾರೆ. ಆಗ ಅವರ ಮಕ್ಕಳು ‘ಅಪ್ಪಾ, ಅಜ್ಜಾ, ಅಮ್ಮಾ. ನಿನಗೆ ಏನು ಆಸೆ ಇದೆ ಹೇಳು ‘ ಎಂದು ಸಾಂತ್ವನ ಹೇಳುತ್ತಾರೆ. ಅಂತೂ ಕೊನೆಗೆ ಕ್ಷೀಣವಾಗಿ ಆತ ಇಹಲೋಕವನ್ನು ಒತ್ತಾಯ ಪೂರ್ವಕ ತ್ಯಜಿಸ ಬೇಕಾಗುತ್ತದೆ. ಇದನ್ನು ಆರ್ತ ಮರಣ ಎಂದಿದ್ದಾರೆ. ‘ಯಥಾ ಮರಣ ಸ್ವರೂಪಂ ತಥಾ ಪುನರ್ಜಃನ್ಮಃ’ ಅಂದರೆ ಯಾವ ಚಿಂತೆಯಲ್ಲಿ ಸಾಯುತ್ತಾನೋ ಅದೇ ಸ್ವರೂಪದ ಪುನರ್ಜನ್ಮ ಲಭಿಸುತ್ತದೆ. ಈ ರೀತಿಯಲ್ಲಿ ಹುಟ್ಟಿದವರು ಮುಂದಿನ ಜನ್ಮದಲ್ಲಿ ಹೇಗಿರುತ್ತಾನೆ ಎಂಬುದು ನವಜಾತ ಶಿಶುವಿನ ಅಳುವು ಸೂಚಿಸುತ್ತದೆ. ನವಜಾತ ಶಿಶುವು ವಿಪರೀತ ಅಳುವುದು ಈ ಸಂಬಂಧದಿಂದ. ಇದೊಂದು ರೀತಿಯ ಮಾನವನ ಮನಶಾಸ್ತ್ರದ. ಕಲಿಕೆಯಂತೆ. ಈ ವ್ಯಕ್ತಿ ಜೀವನದಲ್ಲಿ ಜಿಪುಣ, ದುಃಖಿತನಾಗಿ ಬಾಳುತ್ತಾನೆ. ಅದರೆ ಉತ್ತಮ ಸಂಯೋಜಕರಿದ್ದರೆ ಇದನ್ನು ಸರಿ ಮಾಡಲು ಸಾಧ್ಯವಿದೆ. ಅದಕ್ಕಾಗಿ ವಿದ್ವಜ್ಜನರ ಸಂಪರ್ಕ ಬೇಕು ಎನ್ನುವುದು.
ರೌದ್ರ: ನೀವು ಕೆಲ ಮನುಷ್ಯರು ಆಡುವ ಮಾತುಗಳನ್ನು ಕೇಳಿರ ಬಹುದು. 'ನಾನು ಸತ್ತರೂ ನನ್ನ ಹೆಣ ಮುಟ್ಟ ಬೇಡ, ನಾನು ಸತ್ತರೂ ದೆವ್ವವಾಗಿ ನಿನ್ನನ್ನು ಬಿಡುವುದಿಲ್ಲ, ನನ್ನ ಚಿತೆಗೆ ಹಿರಿ ಮಗ ಕೊಳ್ಳಿ ಇಡುವುದು ಬೇಡ, ನಾನು ಸತ್ತರೆ ನೀನು ನನ್ನ ಅಂತ್ಯ ವಿಧಿ ಮಾಡ ಬೇಡ', ಇತ್ಯಾದಿ ಮಾತಾಡುವವರಿಗೆ ರೌದ್ರ ಚಿಂತನೆ ಮರಣವಿರುತ್ತದೆ. ಇವರ ಮುಂದಿನ ಜನ್ಮ ಕಲಹ ಸ್ವರೂಪದಲ್ಲಿ ಇರುತ್ತದೆ. ಇಂತವರ ಪುನರ್ಜನ್ಮದಲ್ಲಿ ಶಿಶುವಿನಿಂದಲೇ ಈ ಗುಣ ತಿಳಿಯ ಬಹುದು. ವಿಪರೀತ ಹಟ ಮಾಡುವಿಕೆ, ಕೋಪದಿಂದ ಮಗುವಿನ ಮುಖದ ವರ್ಣವೇ ಬದಲಾಗುವುದು, ಹಾಲಿನ ಬಾಟಲಿಯನ್ನು ಎಳೆದು ಬಿಸಾಡುವಿಕೆ, ಕೆಲ ಜನರನ್ನು ಕಂಡರೆ ಅಳುವುದು ಇತ್ಯಾದಿ ಗುಣಗಳಿರುತ್ತದೆ. ಇಂತಹ ಗುಣವುಳ್ಳ ಮಗುವನ್ನು ಅದರ ಮಾತಾ ಪಿತೃಗಳು ಒಳ್ಳೆಯ ಪೋಲೀಸ್ ಅಧಿಕಾರಿಯೋ, IAS ಅಧಿಕಾರಿಯನ್ನೋ ಮಾಡಿದಾಗ ಈ ಮನ ಪರಿವರ್ತನೆಯಾಗಿ ಆತ ಒಬ್ಬ ನಿಷ್ಟಾವಂತ ಮನುಷ್ಯನಾಗ ಬಹುದು. ಇಲ್ಲವಾದಲ್ಲಿ ಮತ್ತೆ ಪಾಪಿಯೇ ಆಗ ಬಹುದು.
ಧನ್ಯ: ಈ ವ್ಯಕ್ತಿಯು ಜೀವನದಲ್ಲಿ ಸದಾ ಸಜ್ಜನಿಕೆಯುಳ್ಳವನೆ. ಇವನು ತನ್ನ ಕೊನೆಯ ಕಾಲದಲ್ಲಿ, 'ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ಅನೇಕ ಜನರಿಗೆ, ಸಂಘ ಸಂಸ್ಥೆಗಳಿಗೆ ದಾನ ಮಾಡಿದ್ದೇನೆ, ಯಾರನ್ನೂ ದೂಷಿಸಿಲ್ಲ, ಒಟ್ಟಿನಲ್ಲಿ ಸತ್ಯದಲ್ಲೇ ನಡೆದಿದ್ದೇನೆ ಎಂದು ಯೋಚಿಸುತ್ತಾ ಜೀವ ಬಿಡುತ್ತಾನೆ. ಇದು ಧನ್ಯ ಚಿಂತನಾ ಮರಣ. ಮುಂದಿನ ಜನ್ಮದಲ್ಲಿ ಸಾತ್ವಿಕನೂ ಶ್ರೀಮಂತನೂ, ದಾನಿಯೂ ಆಗಿ ಹುಟ್ಟುತ್ತಾನೆ. ಇವನು ಮಗುವಿದ್ದಾಗಲೂ ಯಾರಿಗೂ ಹಿಂಸೆ ನೀಡುವುದಿಲ್ಲ. ನೀವು ಕೆಲ ತಾಯಂದಿರ ಮಾತು ಕೇಳಿರ ಬಹುದು. ನನ್ನ ದೊಡ್ಡ ಮಗ ಶಿಶುವಾಗಿದ್ದಾಗ ರಗಳೆಯೇ ಇಲ್ಲ. ಹಾಲು ಕೊಟ್ಟು ಮಲಗಿಸಿದರೆ ಅವನಷ್ಟಕ್ಕೇ ಆಟವಾಡಿ ಕೊಂಡು ಇರುತ್ತಾನೆ. ಅಳುವುದು ಬಾರೀ ಕಡಿಮೆ. ಅಂತೂ ಇವನ ಬಾಲ್ಯದಲ್ಲಿ ನನಗೇನೂ ರಗಳೆಯಾಗಲಿಲ್ಲಪ್ಪ’ ಎಂದು ಮಗುವಿನ ಬಗ್ಗೆ ಗುಣಗಾನ ಮಾಡುತ್ತಾಳೆ. ಇದು ಧನ್ಯ ಚಿಂತನೆಯಲ್ಲಿ ಮರಣಿಸಿದವನ ಪುನರ್ಜನ್ಮದ ರೂಪ.
ಶುಕ್ಲ : ಈ ಮರಣ ಬರುವುದು ಅಪರೂಪ. ಕಲಿಯುಗದಲ್ಲಂತೂ ಲಕ್ಷಕ್ಕೆ ಒಬ್ಬ ಮಾತ್ರ ಎನ್ನ ಬಹುದು. ಇದು ಹೇಗೆಂದರೆ ಇವರ ಮರಣ ಕಾಲದಲ್ಲಿ ಅವರ ಕ್ರಿಯಾ ಉದ್ದೇಶ ಚಿಂತನೆ, ತಾನು ಏನು ಮಾಡಿದ್ದೇನೆ ಎಂಬುದರ ಮೆಲುಕು ಇವರಲ್ಲಿ ಇಲ್ಲ. ಉದಾ: ಮಾಜಿ ರಾಷ್ಟ್ರಪತಿ ಕಲಾಂ ಮೇಷ್ಟ್ರು, ಯಕ್ಷಗಾನ ವೇಷಧಾರಿಯಾದ ಕೆರೆಮನೆ ಶಂಬು ಹೆಗ್ಗಡೆ, ಯಕ್ಷಗಾನ ಭಾಗವತರಾದ ದಾಮೋದರ ಮಂಡೆಚ್ಚರು, ಮಹಾತ್ಮಾ ಗಾಂಧೀಜಿ, ಹೋರಾಟದಲ್ಲೇ ಮಡಿಯುವ ಯೋಧರು ಇತ್ಯಾದಿ ತನ್ನ ಉದ್ದೇಶಿತ ಕೆಲಸದ ಮಧ್ಯದಲ್ಲೇ ಅಸು ನೀಗುವವರು. ಅವರಿಗೆ ಗತ ಕಾಲದ ಚಿಂತನೆಗಳಿಲ್ಲ. ಆ ಕಾಲದ ವಿಚಾರ ಮಾತ್ರವೇ ಇರುತ್ತದೆ.ಇನ್ನು ಕೆಲ ಜ್ಞಾನಿಗಳೂ ಶುಕ್ಲ ಚಿಂತನೆಯಲ್ಲಿ ಕೊನೆಗೊಳ್ಳುತ್ತಾರೆ. ಇವರು, ನಾನು ಏನೂ ಮಾಡಲಿಲ್ಲವಪ್ಪಾ, ಎಲ್ಲಾ ದೈವ ಪ್ರೇರಣೆಯಂತೆ ನನ್ನ ಮೂಲಕ ನಡೆದಿರ ಬಹುದು ನಾನು ಕೇವಲ ನಿಮಿತ್ತ ಮಾತ್ರ ಎಂದು ಯೋಚಿಸುವವರು. ಇವರು ತಪ್ಪಿಯೂ ನನಗೆ ಮೋಕ್ಷ ಸಿಗಲಿ ಎಂದು ಬಯಸುವವರಲ್ಲ.
ಇಂತವರಿಗೆ ಮೋಕ್ಷ ಯೋಗವಿರುತ್ತದೆ. ಆತ್ಮಕಾರಕ ಶುಭಗ್ರಹ ಮೀನಾಂಶದಲ್ಲಿ ಬಂದವರಿಗೆ ನಿಶ್ಚಿತವಾಗಿಯೂ ಮೋಕ್ಷ ಯೋಗವಿದೆ. ಇಂತವರಿಗೆ ಮರು ಹುಟ್ಟಿಲ್ಲ. ಆದರೆ ಇವರು ಆರ್ತ, ರೌದ್ರ, ಧನ್ಯ ಮರಣಗಳನ್ನು ದಾಟಿಯೇ ಬರ ಬೇಕು. ಇದು ಒಂದು ರೀತಿಯ ವಿಕಾಸ. 'ಅಯೋಗ್ಯ ಪುರುಷಂ ನಾಸ್ತಿ’ ಎಂದು ವೇದಗಳು ಹೇಳಿವೆ. ಆದರೆ ಸಂಯೋಜಕರು ಸರಿ ಇರ ಬೇಕು. ಅದು ಸರಿ ಇಲ್ಲದಿದ್ದಾಗ ಅಯೋಗ್ಯರಾಗ ಬಹುದು. ಅದಕ್ಕಾಗಿಯೇ ಪೂರ್ವ ಶೋಡಶ ಸಂಸ್ಕಾರಗಳಿರುವುದು.ಅದರ ಉದ್ದೇಶ ತಿಳಿಯದೆ ಸಂಸ್ಕಾರ ಪಡೆದರೂ ಪ್ರಯೋಜನವಿಲ್ಲ. ಅರ್ಥ ತಿಳಿದರೆ ಅವನಿಗೆ ಹಂತ ಹಂತಗಳಲ್ಲಿ ಜ್ಞಾನವೃದ್ಧಿ ಆಗುತ್ತದೆ. ಜ್ಞಾನಿಗೆ ದುಃಖ ಸುಳಿಯದು. ದುಃಖ ರಹಿತನಿಗೆ ಶುಕ್ಲ ರೂಪದ ಮರಣವೂ ಮೋಕ್ಷವೂ ಲಭ್ಯವಾಗುತ್ತದೆ.
ಎಲ್ಲರಿಗೂ ಶುಭವಾಗಲಿ

:ಕನಕಧಾರಾ ಸ್ತೋತ್ರ

ಶ್ರೀಮದ್ ಶಂಕರಾಚಾಯ೯ ವಿರಚಿತ:ಕನಕಧಾರಾ ಸ್ತೋತ್ರ
ಅಂಗಂ ಹರೇಃ ಪುಲಕ-ಭೂಷಣಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಂ |
ಅಂಗೀಕೃತಾಖಿಲವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಲದೇವತಾಯಾಃ ||1||
ಮುಗ್ಧಾಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ |
ಮಾಲಾ-ದೃಶೋ-ರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ-ಸಂಭವಾಯಾಃ ||2||
ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ-
ಮಾನಂದಕಂದಮನಿಮೇಷಮನಂಗತಂತ್ರಂ |
ಆಕೇಕರ-ಸ್ಥಿತ-ಕನೀನಿಕ-ಪಕ್ಷ್ಮ ನೇತ್ರಂ
ಭೂತ್ಯೈ ಭವೇನ್ಮಮ ಭುಜಂಗಶಯಾಂಗನಾಯಾಃ ||3||
ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಲೀವ ಹರಿನೀಲಮಯೀ ವಿಭಾತಿ |
ಕಾಮಪ್ರದಾ ಭಗವತೋsಪಿ ಕಟಾಕ್ಷಮಾಲಾ
ಕಲ್ಯಾಣಮಾವಹತು ಮೇ ಕಮಲಾಲಯಾಯಾಃ ||4||
ಕಾಲಾಂಬುದಾಲಿ-ಲಲಿತೋರಸಿಕೈಟಭಾರೇಃ
ಧಾರಾಧರೇ ಸ್ಫುರತಿ ಯಾ ತಟಿದಂಗನೇವ |
ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿಃ
ಭದ್ರಾಣಿ ಮೇ ದಿಶತು ಭಾರ್ಗವ-ನಂದನಾಯಾಃ ||5||
ಪ್ರಾಪ್ತಂ ಪದಂ ಪ್ರಥಮತಃ ಖಲು ಯತ್ ಪ್ರಭಾವಾತ್
ಮಾಂಗಲ್ಯಭಾಜಿ ಮಧು-ಮಾಥಿನಿ ಮನ್ಮಥೇನ |
ಮಯ್ಯಾಪತೇತ್ತದಿಹ ಮಂಥರಮೀಕ್ಷಣಾರ್ಧಂ
ಮಂದಾಲಸಂ ಚ ಮಕರಾಲಯಕನ್ಯಕಾಯಾಃ ||6||
ವಿಶ್ವಾಮರೇಂದ್ರ-ಪದವಿಭ್ರಮ-ದಾನದಕ್ಷಂ
ಆನಂದ-ಹೇತುರಧಿಕಂ ಮಧುವಿದ್ವಿಷೋsಪಿ |
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಧಂ
ಇಂದೀವರೋದರ ಸಹೋದರಮಿಂದಿರಾಯಾಃ ||7||
ಇಷ್ಟಾವಿಶಿಷ್ಟಮತಯೋsಪಿ ಯಯಾ ದಯಾರ್ದ್ರ-
ದೃಷ್ಟ್ಯಾ ತ್ರಿವಿಷ್ಟಪ ಪದಂ ಸುಲಭಂ ಭಜಂತೇ |
ದೃಷ್ಟಿಃಪ್ರಹೃಷ್ಟಕಮಲೋದರದೀಪ್ತಿರಿಷ್ಟಾಂ
ಪುಷ್ಟಿಂ ಕೃಷೀಷ್ಟಮಮ ಪುಷ್ಕರ-ವಿಷ್ಟರಾಯಾಃ ||8||
ದದ್ಯಾದ್ದಯಾನುಪವನೋ ದ್ರವಿಣಾಂಬುಧಾರಾಮ್
ಅಸ್ಮಿನ್ನಕಿಂಚನ-ವಿಹಂಗಶಿಶೌ ವಿಷಣ್ಣೇ |
ದುಷ್ಕರ್ಮ-ಘರ್ಮಮಪನೀಯ ಚಿರಾಯ ದೂರಂ
ನಾರಾಯಣ-ಪ್ರಣಯಿನೀ-ನಯನಾಂಬುವಾಹಃ ||9||
ಗೀರ್ದೇವತೇತಿ ಗರುಡಧ್ವಜ-ಸುಂದರೀತಿ
ಶಾಕಂಭರೀತಿ ಶಶಿಶೇಖರ-ವಲ್ಲಭೇತಿ |
ಸೃಷ್ಟಿ-ಸ್ಥಿತಿ-ಪ್ರಲಯಕೇಲಿಷು ಸಂಸ್ಥಿತಾಯೈ
ತಸ್ಯೈ ನಮಸ್ತ್ರಿಭುವನೈಕ-ಗುರೋಸ್ತರುಣ್ಯೈ ||10||
ಶ್ರುತೈ ನಮೋsಸ್ತು ಶುಭಕರ್ಮ-ಫಲಪ್ರಸೂತ್ಯೈ
ರತ್ಯೈ ನಮೋsಸ್ತು ರಮಣೀಯ-ಗುಣಾಶ್ರಯಾಯೈ |
ಶಕ್ಯೈ ನಮೋsಸ್ತು ಶತಪತ್ರ-ನಿಕೇತನಾಯೈ
ಪುಷ್ಟ್ಯೈ ನಮೋsಸ್ತು ಪುರುಷೋತ್ತಮ-ವಲ್ಲಭಾಯೈ ||11||
ನಮೋsಸ್ತು ನಾಲೀಕ-ನಿಭಾನನಾಯೈ
ನಮೋsಸ್ತು ದುಗ್ಧೋದಧಿ-ಜನ್ಮಭೂತ್ಯೈ |
ನಮೋsಸ್ತು ಸೋಮಾಮೃತ-ಸೋದರಾಯೈ
ನಮೋsಸ್ತು ನಾರಾಯಣ-ವಲ್ಲಭಾಯೈ ||12||
ನಮೋsಸ್ತು ಹೇಮಾಂಬುಜ-ಪೀಠಿಕಾಯೈ
ನಮೋsಸ್ತು ಭೂಮಂಡಲನಾಯಿಕಾಯೈ |
ನಮೋsಸ್ತು ದೇವಾದಿ-ದಯಾಪರಾಯೈ
ನಮೋsಸ್ತು ಶಾರ್ಙ್ಗಾಯುಧ-ವಲ್ಲಭಾಯೈ ||13||
ನಮೋsಸ್ತು ದೇವ್ಯೈ ಭೃಗುನಂದನಾಯೈ
ನಮೋsಸ್ತು ವಿಷ್ಣೋರುರಸಿ ಸ್ಥಿತಾಯೈ |
ನಮೋsಸ್ತು ಲಕ್ಷ್ಮ್ಯೈ ಕಮಲಾಲಯಾಯೈ
ನಮೋsಸ್ತು ದಾಮೋದರ-ವಲ್ಲಭಾಯೈ ||14||
ನಮೋsಸ್ತು ಕಾಂತ್ಯೈ ಕಮಲೇಕ್ಷಣಾಯೈ
ನಮೋsಸ್ತು ಭೂತ್ಯೈ ಭುವನಪ್ರಸೂತ್ಯೈ |
ನಮೋsಸ್ತು ದೇವಾಧಿಭಿರರ್ಚಿತಾಯೈ
ನಮೋsಸ್ತು ನಂದಾತ್ಮಜ-ವಲ್ಲಭಾಯೈ ||15||
ಸಂಪತ್ಕರಾಣಿ ಸಕಲೇಂದ್ರಿಯನಂದನಾನಿ
ಸಾಮ್ರಾಜ್ಯದಾನವಿಭವಾನಿ ಸರೋರುಹಾಕ್ಷಿ |
ತ್ವದ್ವಂದನಾನಿ ದುರಿತಾಹರಣೋದ್ಯತಾನಿ
ಮಾಮೇವ ಮಾತರನಿಶಂ ಕಲಯಂತು ಮಾನ್ಯೇ ||16||
ಯತ್ಕಟಾಕ್ಷಸಮುಪಾಸನಾ ವಿಧಿಃ
ಸೇವಕಸ್ಯ ಸಕಲಾರ್ಥಸಂಪದಃ |
ಸಂತನೋತಿ ವಚನಾಂಗಮಾನಸ್ಯೈ-
ಸ್ತ್ವಾಂ ಮುರಾರಿಹೃದಯೇಶ್ವರೀಂ ಭಜೇ ||17||
ಸರಸಿಜನಿಲಯೇ ಸರೋಜಹಸ್ತೇಃ
ಧವಲತಮಾಂಶುಕಗಂಧಮಾಲ್ಯ ಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೆ
ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್ ||18||
ದಿಗ್ಘಸ್ತಿಭಿಃ ಕನಕಕುಂಭಮುಖಾವಸೃಷ್ಟ
ಸ್ವರ್ವಾಹಿನೀವಿಮಲಚಾರುಜಲಪ್ಲುತಾಂಗೀಮ್ |
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ
ಲೋಕಾಧಿನಾಥಗೃಹಿಣೀಮಮೃತಾಬ್ಧಿ ಪುತ್ರೀಮ್ ||19||
ಕಮಲೇ ಕಮಲಾಕ್ಷವಲ್ಲಭೇ ತ್ವಂ
ಕರುಣಾಪೂರತರಂಗಿತೈರಪಾಂಗೈಃ |
ಅವಲೋಕಯ ಮಾಮಕಿಂಚನಾನಾಂ
ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ ||20||
ದೇವಿ ಪ್ರಸೀದ ಜಗದೀಶ್ವರಿ ಲೋಕಮಾತಃ
ಕಲ್ಯಾಣಗಾತ್ರಿ ಕಮಲೇಕ್ಷಣಜೀವನಾಥೆ |
ದಾರಿದ್ರ್ಯಭೀತಿಹೃದಯಂ ಶರಣಾಗತಂ ಮಾಮ್
ಆಲೋಕಯ ಪ್ರತಿದಿನಂ ಸದಯೈರಪಾಙ್ಗೈಃ ||21||
ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ
ತ್ರಯೀಮಯೀಂ ತ್ರಿಭುವನ-ಮಾತರಂ ರಮಾಂ |
ಗುಣಾಧಿಕಾ ಗುರುತರ-ಭಾಗ್ಯ-ಭಾಗಿನಃ
ಭವಂತಿ ತೇ ಭುವಿ ಬುಧಭಾವಿತಾಶಯಾಃ ||22||
ಸುವರ್ಣಧಾರಾ ಸ್ತೋತ್ರಂ ಯಚ್ಛಂಕರಾಚಾರ್ಯ ನಿರ್ಮಿತಂ
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಸ ಕುಬೇರಸಮೋ ಭವೇತ್ ||

ಕಿಡ್ನಿ ಸಮಸ್ಯೆಯಾಗಿ ಡಯಾಲಿಸಿಸ್ ಮಾಡಿಸಲೇಬೇಕಾದ ಪರಿಸ್ಥಿತಿ ಬಂದಿದ್ದರೆ

ಕಿಡ್ನಿ ಸಮಸ್ಯೆಯಾಗಿ ಡಯಾಲಿಸಿಸ್ ಮಾಡಿಸಲೇಬೇಕಾದ ಪರಿಸ್ಥಿತಿ ಬಂದಿದ್ದರೆ, ಒಮ್ಮೆ ಈ ನಾಟಿ ವೈದ್ಯರನ್ನು ಭೇಟಿ ಮಾಡಿ..    ನನ್ನ ಹೆಸರು ರವಿ ಕುಮಾರ್ 42 ವರ್ಷ ವಯಸ್ಸು,ನಾನು ಮೈಸೂರಿನಲ್ಲಿ ವಾಸವಾಗಿದ್ದೇನೆ,2014 ರಲ್ಲಿ ಮೂತ್ರದಲ್ಲಿ ರಕ್ತ ಬಂದು ಉರಿ ಆಗುತ್ತಿತ್ತು ,ಕೊನೆಗೆ ಕೈ ಕಾಲು ಗಳು ಊತ ಬರಲು ಶುರುವಾಯಿತು ನಂತರ ಮೈಸೂರಿನ ಸರ್ಕಾರಿ ಆಸ್ಪೇಟಲ್ ನಲ್ಲಿ ತೋರಿಸಿ ಸ್ಕ್ಯಾನಿಂಗ್ ಬ್ಲೆಡ್ ಟೆಸ್ಟ್ ಮಾಡಿಸಿದೆ ಆಗ ತಿಳಿಯಿತು ನನ್ನ ಎರಡೂ ಕಿಡ್ನಿಗಳೂ ಪೈಲೂರ್ ಆಗಿ ಕ್ರಿಯಾಟೀನ್ ಲೆವಲ್ 28 ಕ್ಕೆ ಬಂದಿತ್ತು, ಬಿ ಪಿ 430 ಇತ್ತು,ವೈದ್ಯರ ಸಲಹೆ ಮೇರೆಗೆ ಕಿಡ್ನಿ ಬೇರೆ ಹಾಕಿಸುವವರೆಗೂ ಡಯಾಲಿಸೀಸ್ ಮಾಡಿಸಬೇಕು,ವಾರಕ್ಕೆ ಎರಡು ಬಾರಿ ಡಯಾಲಿಸೀಸ್ ಮಾಡಿಸುತ್ತಿದ್ದೆ,ನಾನು ಮೈಸೂರಿನ ಖಾಸಗಿ ಶಾಲೆಯಲ್ಲಿ ಕನ್ನಡ ಉಪಾಧ್ಯಾಯನಾಗಿ ಕೆಲಸ ಮಾಡುತ್ತಿದ್ದೇನೆ,ನನಗೆ 15000 ಸಾವಿರ ಸಂಬಳ ಬರುತ್ತಿತ್ತು,ಒಂದು ತಿಂಗಳಿಗೆ ಡಯಾಲಿಸಿಸ್ ಮಾಡಿಸಬೇಕಾದರೆ 4500 ಖರ್ಚು ಬರುತ್ತಿತ್ತು, ಮನೆ ಬಾಡಿಗೆ ಕಟ್ಟಿ ಮಕ್ಕಳನ್ನು ಪೋಷಿಸುವುದು ಕಷ್ಟವಾಗಿತ್ತು.  ಬೆಂಗಳೂರಿನಲ್ಲಿ ನನ್ನ ಹೆಂಡತಿಯ ಸಂಬಂದಿಕರೊಬ್ಬರ ಬಳಿ ವಿಷಯ ತಿಳಿಸಿದೆ,ಅದಕ್ಕವರು ನೀನು ನೇರ ನನ್ನ ಮನೆಗೆ ಬಂದು ಬಿಡು ಇಲ್ಲೇ ನಮ್ಮ ಬೆಂಗಳೂರಿನ ಕೃಷ್ಣರಾಜಪುರದಲ್ಲಿ ನಾಲ್ಕು ತಲೆಮಾರಿನ ವಂಶಪಾರಂಪರ್ಯ ನಾಟಿ ವೈದ್ಯ ಶಿವ ಕುಮಾರ್ ಅಂಥ ಇದ್ದಾರೆ ಅವರು ಗಿಡ ಮೂಲಿಕೆ ಚಿಕಿತ್ಸೆ ಕೊಡುತ್ತಾರೆ,ಮೂರು ವರ್ಷಗಳ ಕೆಳಗೆ ನಮ್ಮ ಸ್ನೇಹಿತರೊಬ್ಬರಿಗೂ ಇದೇ ರೀತಿ ಎರಡೂ ಕಿಡ್ನಿ ಪೈಲೂರ್ ಆಗಿತ್ತು ಒಂದೂವರೆ ವರ್ಷ ಡಯಾಲಿಸೀಸ್ ಮಾಡಿಸಿದ ಮೇಲೆ ಅವರ ಬಳಿ ಚಿಕಿತ್ಸೆ ಕೊಡಿಸಿದ್ದು,ಈಗ ಅವರು ಗುಣ ಮುಖರಾಗಿ ಎಲ್ಲರಂತೆ ಚನ್ನಾಗಿದ್ದಾರೆ,ಎಂದು ತಿಳಿಸಿದರು.ನಾನು ಕೂಡಲೇ ನಮ್ಮ ಸಂಬಂದಿಕರ ಮನೆ ಬೆಂಗಳೂರಿಗೆ ಬಂದು ಅವರ ಚಿಕಿತ್ಸಾಲಕ್ಕೆ ಹೋದೆ ವೈದ್ಯ ಶಿವಕುಮಾರ್ ರವರು ಇದ್ದರು, ರಿಪೋರ್ಟ್ಸ್ ನೋಡಿಸಿದೆ,ರಿಪೋರ್ಟ್ಸ್ ನೋಡಿದ ಮೇಲೆ ನಾಡಿ ಪರೀಕ್ಷೆ ಮಾಡಿ ಅವರ ಚಿಕಿತ್ಸಾ ವಿಧಾನ ಹಾಗೂ ಔಷದಿಯ ಉಪಯೋಗದ ಬಗ್ಗೆ ತಿಳಿಸಿದರು, ನನ್ನ ಎರಡೂ ಕಿಡ್ನಿಗಳಿಗೆ ಉಂಗುರ ಹಾಕಿ, ಔಷಧಿ ಕೊಟ್ಟು ಉಪಯೋಗಿಸುವ ವಿಧಾನ ತಿಳಿಸಿ ಒಂದು ವಾರಕ್ಕೆ ಎರಡು ಬಾರಿ ನೀವು ಡಯಾಲಿಸೀಸ್ ಮಾಡಿಸುತ್ತಿದ್ದೀರಿ,ನಮ್ಮ ಗಿಡ ಮೂಲಿಕೆ ಔಷದಿಯನ್ನು ನೀವು ಸೇವಿಸಿದ 15 ದಿನಗಳ ನಂತರ ವಾರಕ್ಕೂಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ,ಒಂದು ತಿಂಗಳ ನಂತರ 10 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ,ನಂತರ ಎರಡನೇ ತಿಂಗಳು ಔಷಧಿ ಸೇವಿಸಿದ ಮೇಲೆ 15 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ, ಮೂರನೇ ತಿಂಗಳು ಔಷಧಿಯನ್ನು ಸೇವಿಸಿದ ಮೇಲೆ 20 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸುತ್ತೀರಿ, ಕನಿಷ್ಟ ನೀವು ನಮ್ಮ ಔಷದಿಯನ್ನು 13 ತಿಂಗಳು ಅಂದರೆ 2018 ಜನವರಿ ತಿಂಗಳಿ ನಿಂದ ಶುರು ಮಾಡಿ ಮುಂದಿನ ವರ್ಷ 2019 ಫೆಬ್ರವರಿ ನವರೆಗೂ ಸೇವಿಸಬೇಕು ನಮ್ಮ ಔಷದಿ ಸೇವಿಸಿದ ಆರು ತಿಂಗಳಿಗೆ ಡಯಾಲಿಸೀಸ್ ನ ಅವಶ್ಯಕತೆ ಸಂಪೂರ್ಣ ನಿಂತು ಹೋಗಿ ಮಾಮೂಲಿನಂತೆ ಮೂತ್ರ ವಿಸರ್ಜನೆ ಮಾಡಬಹುದು ಎಂದು ತಿಳಿಸಿದರು.ಔಷದಿ ತೆಗೆದುಕೊಂಡು,ನಿಮಗೆ ವಾಸಿಯಾದರೆ ನಾಲ್ಕು ಜನಕ್ಕೆ ಹೇಳಿ ಉಪಯೋಗವಾಗುತ್ತದೆ ಅಂತ ಹೇಳಿದರು, ವೈದ್ಯ ಶಿವಕುಮಾರ್ ರವರು ಹೇಳಿದ ಹಾಗೆ ಮಾರ್ಚ್ ತಿಂಗಳಿನಲ್ಲಿ ಔಷದಿ ಸೇವಿಸಿದ ಎರಡು ವಾರ ಮೂರು ಬಾರಿ ಡಯಾಲಿಸೀಸ್ ಮಾಡಿಸಿದೆ,ಇನ್ನು ಉಳಿದ ಹದಿನೈದು ದಿನಗಳಲ್ಲಿ ವಾರಕ್ಕೂಂದರಂತೆ ಎರಡು ಬಾರಿ ಡಯಾಲಿಸೀಸ್ ಮಾಡಿಸಿದೆ,  ಮತ್ತೆ ಏಪ್ರಿಲ್ ತಿಂಗಳಿನಲ್ಲಿ ಪುನಃ ಅವರ ಚಿಕಿತ್ಸಾಲಯಕ್ಕೆ ಹೋಗಿದ್ದೆ, ಒಂದು ತಿಂಗಳ ಔಷದಿಯನ್ನು ಕೊಟ್ಟು ಅದೇ ರೀತಿ ಚಾಚೂ ತಪ್ಪದೇ ಉಪಯೋಗಿಸಿದರೆ ಈ ತಿಂಗಳಿಲ್ಲಿ 10 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸಬಹುದು ಎಂದು ಹೇಳಿ ಔಷದಿ ಕೊಟ್ಟು ಕಳುಹಿಸಿದರು,ಅವರು ಹೇಳಿದ ಹಾಗೆ ಆ ತಿಂಗಳಿನಲ್ಲಿ 10 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸಿದೆ, ಮತ್ತೆ ಮೂರನೇ ತಿಂಗಳು 15 ದಿನಗಳಿಗೊಮ್ಮೆ ಡಯಾಲಿಸೀಸ್ ಮಾಡಿಸಿ ಒಟ್ಟು ಐದು ತಿಂಗಳಿಗೆ ಡಯಾಲಿಸೀಸ್ ಮಾಡಿಸುವ ಅವಶ್ಯಕತೆ ನಿಂತುಹೋಯಿತು,ಅವರು ಆರು ತಿಂಗಳಿಗೆ ಡಯಾಲಿಸೀಸ್ ನಿಲ್ಲುತ್ತದೆ ಎಂದು ಹೇಳಿದ್ದರು ನನಗೆ ಐದು ತಿಂಗಳಿಗೆ ನನ್ನ ಕ್ರಿಯಾಟಿನ್ ಲೆವೆಲ್ 1.5 ಗೆ ಬಂದಿತ್ತು ,ಅವರು ಹೇಳಿದ ಹಾಗೆ 2016 ಏಪ್ರಿಲ್ ವರೆಗೂ ಗಿಡ ಮೂಲಿಕೆ ಔಷದಿಯನ್ನು ಸೇವಿಸಿದ್ದಕ್ಕೆ ನನ್ನ ಎರಡೂ ಕಿಡ್ನಿಗಳು ಗುಣಮುಖವಾಗಿ ಈಗ ನನ್ನ ಕ್ರಿಯಾಟಿನ್ ಲೆವೆಲ್ 1.2 ಇದೆ ಈಗ ನಾನು ಎಲ್ಲರಂತೆ ಚನ್ನಾಗಿದ್ದೇನೆ.
ಮಿತ್ರರೆ ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ನಮ್ಮಿಂದ ನಾಲ್ಕು ಜನರಿಗೆ ಸಹಾಯವಾಗಲಿಪಾರಂಪರಿಕ ವೈದ್ಯ
ಶಿವ ಕುಮಾರ್ ರವರ ವಿಳಾಸ
ಕಾಮಧೇನು ಚಿಕಿತ್ಸಾಲಯ, ವೆಂಕಟೇಶ್ವರ ಚಿತ್ರ ಮಂದಿರ ರಸ್ತೆ
ದೇವಸಂದ್ರ, ಕೃಷ್ಣರಾಜಪುರ. ಬೆಂಗಳೂರು 560036
ಹಳೆ ಮದ್ರಾಸ್ ರಸ್ತೆ
ಮೊಬೈಲ್ ಸಂಖ್ಯೆ: 8970788888, 8747099983
ಸಮಯ: ಬೆಳಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆಯವರಗೆ

ಹೋಮ-ಹವನಗಳ ಮಹತ್ವ

ಹೋಮ-ಹವನಗಳ ಮಹತ್ವ
ಸನಾತನ ಸಂಸ್ಕೃತಿ
ನಮ್ಮ ಕೆಲವು ಬುಜೀಗಳು  ಹೋಮ-ಹವನ-ಯಜ್ಞಗಳನ್ನು ಮಾಡುವುದು ವ್ಯರ್ಥ,ಆ ಹಣವನ್ನು ಬಡವರಿಗೆ ದಾನಮಾಡಬೇಕೆಂದು  ಹೇಳುತ್ತಾರೆ.ಬಡವರಿಗೆ ದಾನ ಮಾಡುವ ಉದ್ದೇಶವಿದ್ದರೆ ಅದನ್ನು ಮಾಡೋಣ.ಅದಕ್ಕಾಗಿ ಹೋಮ-ಹವನಗಳನ್ನು ನಿಷೇಧಿಸಿ ದಾನ ಮಾಡಬೇಕೆಂಬ ನಿಯಮವೇನಿಲ್ಲ..!! ನಮ್ಮ ಸಂಸ್ಕೃತಿಯಲ್ಲಿ ಹೋಮ-ಹವನಗಳ ಮಹತ್ವವೇನು..?ಏನಕ್ಕಾಗಿ ಅವುಗಳನ್ನು ಮಾಡಬೇಕೆಂದು ಅಗತ್ಯ ದಾಖಲೆಗಳನ್ನು ನೀಡಿ ಸವಿವರವಾಗಿ ತಿಳಿಸುತ್ತಿದ್ದೇನೆ.ಈ ಲೇಖನವನ್ನು ಓದಿ.
ವೇದವೆಂದರೆ ಜ್ಞಾನ.ವೇದಗಳನ್ನು ನಮ್ಮ ಸಂಸ್ಕೃತಿಯ ಆಧಾರವೆಂದು ಪರಿಗಣಿಸಿದವರು ನಾವು.ನಮ್ಮ ಆಚರಣೆ-ವಿಚಾರದಲ್ಲೇನಾದರೂ ಅನುಮಾನ ಬಂದರೆ "ವೇದವಾಕ್ಯಂ ಪ್ರಮಾಣಂ" ಎಂದು ಒಪ್ಪಿಕೊಳ್ಳುವವರು.ವೇದವಾಕ್ಯವೆಂದರೆ ಅದು ಸರ್ವೋಚ್ಛ ನ್ಯಾಯಾಲಯದ ತೀರ್ಪು.ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ.ಆ ವೇದಗಳು ಹೋಮ-ಹವನಗಳ ಮಹತ್ವವನ್ನು ಹೀಗೆ ತಿಳಿಸುತ್ತವೆ. "ಅಗ್ನಿಮೀಳೆ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ ಹೋತಾರಂ ರತ್ನಧಾತಮಮ್" "ಯಜ್ಞೋ ಹಿ ಶ್ರೇಷ್ಟತಮಂ ಕರ್ಮ" "ಅಗ್ನಿಂ ದೂತಂ ಪುರೋ ದಧೇ ಹವ್ಯವಾಹಮುಪ ಬ್ರುಹೇ" "ಪ್ರಾತಃ ಪ್ರಾತಃ ಗೃಹಪತಿರ್ನೋ ಅಗ್ನಿಃ,ಸಾಯಂ ಸಾಯಂ ಸೌಮನಸ್ಯ ದಾತಾ" "ತಂ ಯಜ್ಞಂ ಬರ್ಹಿಷಿಃ ಪ್ರೌಕ್ಷನ್ ಪುರುಷಂ ಜಾತಮಗ್ರತಃ" ನೆನಪಿಡಿ..ಇವು ಕೇವಲ ಉದಾಹರಣೆಗಳು.ಹುಡುಕುತ್ತಾ ಹೋದರೆ ನಮ್ಮ ವೇದಗಳಲ್ಲಿ ಇಂತಹ ಸಾವಿರಾರು ಯಜ್ಞಕ್ಕೆ ಸಂಬಂಧಿಸಿದ ಉದಾಹರಣೆಗಳು ಸಿಗಬಹುದು.
"ಈ ಪ್ರಪಂಚವನ್ನು ಸೃಷ್ಟಿಸಿ ಭಗವಂತ ಯಜ್ಞವನ್ನು ಪ್ರಾರಂಭಿಸಿದನಂತೇ ಹಾಗೇ ನಾನೂ ಸಹ ಯಜ್ಞ ಮಾಡುತ್ತೇನೆ" "ಈ ಯಜ್ಞಗಳಿಂದ ಸಂಪತ್ತು ಸಿಗುತ್ತದೆ,ಹಾಗಾಗಿ ಯಜ್ಞಗಳನ್ನು ತಪ್ಪದೇ ಮಾಡು" "ನಾನು ಯಜ್ಞಕುಂಡದಲ್ಲಿ ನನ್ನೆಲ್ಲಾ ಪಾಪ-ದುಃಖಗಳನ್ನು ಸಮರ್ಪಿಸುತ್ತಿದ್ದೇನೆ" "ಈ ಅಗ್ನಿಯ ಜ್ವಾಲೆಯಂತೇ ನನ್ನ ಯಶಸ್ಸೂ ಉನ್ನತ ಸ್ಥಾನಕ್ಕೇರುತ್ತಿರಲಿ" "ಹೇ ಅಗ್ನಿ ! ಜಗತ್ತಿನಲ್ಲಿರುವ ಎಲ್ಲಾ ರೋಗಗಳನ್ನು ನಿವಾರಿಸು" ಹೀಗೆ ಯಜ್ಞ-ಅಗ್ನಿಗಳನ್ನು ಪ್ರಾರ್ಥಿಸಿಕೊಳ್ಳುವ ಅನೇಕ ಉದಾಹರಣೆಗಳು ವೇದಗಳಲ್ಲಿವೆ.
ಆದ್ದರಿಂದ ಜನ್ಮದಿನ,ವ್ಯವಹಾರ ಪ್ರಾರಂಭದ ದಿನ,ಮದುವೆ,ಮುಂಜಿ,ದುಃಖದಲ್ಲಿ,ಖುಷಿಯಲ್ಲಿ ಆಜೀವನಪರ್ಯಂತ ಹೋಮವನ್ನು ಆಚರಿಸುತ್ತಲೇ ಇರುತ್ತೇವೆ.ಯಜ್ಞವನ್ನು ಮಾಡುವುದರಿಂದ ಭಗವಂತನ ಸನ್ನಿಧಿ ಪ್ರಾಪ್ತಿಯಾಗುತ್ತದೆ.ಪಾಪಕರ್ಮಗಳು ದೂರವಾಗುತ್ತವೆಯೆಂದು ನಂಬಿದ್ದೇವೆ.ಹೋಮ ಮಾಡುವಾಗಿನ ಭಕ್ತಿ,ಶ್ರದ್ಧೆಗಳಿಂದ ಮನುಷ್ಯನ ಮನಸ್ಸು ಶಾಂತವಾಗುತ್ತದೆ.ಪರಮಾತ್ಮನಲ್ಲಿ ವಿಲೀನಗೊಳ್ಳುತ್ತದೆ.ಈ ಮನಶ್ಶಾಂತಿ ಮನಸ್ಸಿನ ಅನೇಕ ಒತ್ತಡಗಳನ್ನು ಕಡಿಮೆಮಾಡುತ್ತದೆ. ಈ ನಂಬಿಕೆಗಳಿಗೆ ವೇದಗಳು ಪುಷ್ಟೀಕರಣ ನೀಡಿವೆ.ವೇದವಾಕ್ಯವನ್ನು ಪಾಲಿಸುವುದು ನಮ್ಮ ಕರ್ತವ್ಯ. ಕೇವಲ ಹೋಮಮಾಡಿಸಿದ ಯಜಮಾನನಿಗಷ್ಟೇ ಹೋಮದ ಫಲ ಸಿಗುವುದಿಲ್ಲ.ಪ್ರಕೃತಿಗೂ ಹೋಮದ ಫಲ ಸಿಗುತ್ತದೆ.ಹೇಗೆಂದು ಕೇಳುತ್ತೀರ..? ಹವನದಲ್ಲಿ ಉಪಯೋಗಿಸುವ ಸಾಮಗ್ರಿಗಳು (ಇವು ಶುದ್ಧವಾಗಿ,ಪ್ರಕೃತಿದತ್ತವಾಗಿರಬೇಕು) ಅಗ್ನಿಯಲ್ಲಿ ಆಹುತಿ ಬಿದ್ದು ಅದರಿಂದ ಬರುವ ಧೂಮ(ಹೊಗೆ) ಸರ್ವತ್ರ ವ್ಯಾಪಕವಾಗುತ್ತದೆ.ಈ ಧೂಮದಲ್ಲಿ ಅನೇಕ ಔಷಧೀಯ ಗುಣಗಳಿರುತ್ತವೆ.ಪ್ರಕೃತಿಯಲ್ಲಿರುವ ರೋಗವನ್ನು ಹಬ್ಬಿಸುವ ವಿಷಾಣುಗಳನ್ನು ಇವು ನಾಶಪಡಿಸುತ್ತವೆ.ಇದು ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತುಪಟ್ಟಿದೆ.
ವಿಶ್ವ ಸ್ವಾಸ್ಥ್ಯ ಸಂಘಟನೆಯ(WHO) ಪ್ರಕಾರ ಪ್ರತಿವರ್ಷ ವಿಶ್ವದಲ್ಲಿ ಸಂಭವಿಸುವ ೫೭ ಮಿಲಿಯನ್ ಸಾವುಗಳಲ್ಲಿ ಶೇಕಡ ೨೫ ಸಾವುಗಳಿಗೆ ಇಂತಹ ಬ್ಯಾಕ್ಟೀರಿಯಾಗಳೇ ಕಾರಣ. ಒಂದು ವಿಷಯ ನೆನಪಿಡಿ.
ಹೋಮದಲ್ಲಿ ಬಳಸುವ ಪ್ರತಿವಸ್ತುವೂ ಪರಿಶುದ್ಧ ಹಾಗೂ ಪ್ರಾಕೃತಿಕವಾಗಿರಬೇಕು.ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸಿರಬಾರದು.ಆಗಲೇ ಹೋಮದ ಪರಿಣಾಮ ಚೆನ್ನಾಗಿರುತ್ತದೆ. ಹೋಮ-ಹವನಗಳಿಂದ ಅನೇಕ ರೋಗರುಜಿನಗಳೂ ನಿಯಂತ್ರಣಕ್ಕೆ ಬರುತ್ತವೆಯೆಂದು ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿವೆ..
೧.ಶೀತ ಹಾಗೂ ತಲೆನೋವು
೨.ಟಿ.ಬಿ (ಕ್ಷಯರೋಗ)
೩.ಮಾನಸಿಕ ಒತ್ತಡ ಹಾಗೂ ಖಿನ್ನತೆ
೪.ಚರ್ಮಸಂಬಂಧಿ ಕಾಯಿಲೆಗಳು ೫.ಮೂತ್ರ ಸಂಬಂಧಿರೋಗಗಳು ೬.ಶ್ವಾಸಸಂಬಂಧಿ ರೋಗಗಳು,ಅಸ್ಥಮಾ ಇತರೆ
೭.ಕೆಲವು ಅಲರ್ಜಿ ಸಮಸ್ಯೆಗಳು ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇನ್ನೂ ಒಂದು ಅಚ್ಚರಿಯೇನೆಂದರೆ ಸುಮಾರು ನೂರಕ್ಕೂ ಹೆಚ್ಚಿನ ರೋಗಗಳನ್ನು "ಯಜ್ಞ ಥೆರಪಿ" ಎಂಬ ವೈದ್ಯಕೀಯ ವಿಧಾನದಿಂದ ಗುಣಪಡಿಸಬಹುದೆಂದು ವೈಜ್ಞಾನಿಕ ಸಂಶೋಧನೆಗಳು ತಿಳಿಸಿವೆ."ಯಜ್ಞ ಥೆರಪಿ" ಎಂಬ ಹೊಸವಿಧಾನ ಪಾಶ್ಚಾತ್ಯ ದೇಶಗಳಲ್ಲಿ ಬೆಳೆಯುತ್ತಿದೆ. ಭಾರತೀಯರಾದ ನಾವು ಹೆಮ್ಮೆ ಪಡುವಂತಹ ವಿಷಯವಿದು.ಇಂತಹ ಚಮತ್ಕಾರಕ,ರೋಗನಾಶಕ,ಬಲವರ್ಧಕ ಅನ್ವೇಷಣೆ ನಮ್ಮ ಪೂರ್ವಜರದು.ಹೋಮಹವನಗಳನ್ನು ಪ್ರತಿಪಾದಿಸಿದ್ದು ನಮ್ಮ ವೇದಗಳು.ಈ ಸಂಸ್ಕೃತಿಯನ್ನು ಉಳಿಸಿ,ಬೆಳೆಸಿಕೊಂಡು ಹೋಗಬೇಕಾದ್ದು ನಮ್ಮ ಪರಮಕರ್ತವ್ಯ.
ಯಜ್ಞ ಹೋಮಗಳು ಪುರೋಹಿತರು ಉದರಪೋಷಣೆಗಾಗಿ ಮಾಡಿಕೊಂಡಿದ್ದು ಎಂಬ ಮನೋಭಾವ ಬದಲಾಗಲಿ.
ನಮ್ಮ ಸಂಸ್ಕೃತಿ,ಆಚರಣೆಯ ಬಗ್ಗೆ ಅಭಿಮಾನವಿರಲಿ.ನಮ್ಮ ಸನಾತನ ಆಚರಣೆಗಳನ್ನು ಪರಿಪಾಲಿಸುವ,ಪೋಷಿಸುವ ಕಾಯಕ ನಮ್ಮದಾಗಲಿ.
ಲೋಕಾಃ ಸಮಸ್ತಾಃ ಸುಖಿನೋ ಭವಂತು

*ಮೆಂತೆ ಕಾಳು ನೆನೆಸಿದ ನೀರು- ಆಯಸ್ಸು ನೂರು!*

*ಮೆಂತೆ ಕಾಳು ನೆನೆಸಿದ ನೀರು- ಆಯಸ್ಸು ನೂರು!*
ಒಂದು ಲೋಟ ನೀರಿಗೆ ಎರಡು ಚಮಚ ಮೆಂತೆ ಕಾಳುಗಳನ್ನು ಹಾಕಿ ರಾತ್ರಿಯಿಡಿ ನೆನೆಸಿಟ್ಟುಙಿ, ಬೆಳಿಗ್ಗೆ ಇದನ್ನು ಸೋಸಿಕೊಂಡು ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ, ಆರೋಗ್ಯ ವೃದ್ಧಿಸುವುದು....
ಭಾರತೀಯ ಆಯುರ್ವೇದ ಔಷಧಿಯಲ್ಲಿ ಹಿಂದಿನಿಂದಲೂ ತನ್ನದೇ ಆದ ಸ್ಥಾನ ಪಡೆದುಕೊಂಡು ಬಂದಿರುವಂತಹ ಮೆಂತೆ ಕಾಳಿನಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಇದು ಕಾಯಿಲೆಗಳನ್ನು ನಿವಾರಿಸುವುದು ಮಾತ್ರವಲ್ಲದೆ ಕೆಲವೊಂದು ರೋಗಗಳು ಬರದಂತೆ ತಡೆಯುವುದು.ಕೂದಲು ಉದುರುವಿಕೆ ತಡೆಯುತ್ತೆ ಮೆಂತೆ ಹೇರ್ ಮಾಸ್ಕ್
ಹೌದು, ಮೆಂತೆ ಕಾಳು ನೆನೆಸಿದ ನೀರಿನ ಉಪಯೋಗವನ್ನು ಪಡೆದುಕೊಳ್ಳಬೇಕಾದರೆ ಈ ಲೇಖನವನ್ನು ಓದಬೇಕು. ಒಂದು ಲೋಟ ನೀರಿಗೆ ಎರಡು ಚಮಚ ಮೆಂತೆ ಕಾಳುಗಳನ್ನು ಹಾಕಿ ರಾತ್ರಿಯಿಡಿ ನೆನೆಸಿಡಬೇಕು. ಬೆಳಿಗ್ಗೆ ಇದನ್ನು ಸೋಸಿಕೊಂಡು ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ವ್ಯಾಯಾಮವಿಲ್ಲದೆ ಬೊಜ್ಜು ಕರಗಿಸುವ ಮೆಂತೆ
ಇದರ ಲಾಭ ಪಡೆಯಬೇಕಾದರೆ ಒಂದು ತಿಂಗಳ ಕಾಲ ಹೀಗೆ ಮುಂದುವರೆಸಿ, ಆರೋಗ್ಯ ವೃದ್ಧಿಸಿಕೊಳ್ಳಿ.... ಬನ್ನಿ ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕೆಳಗಿರುವುದನ್ನು ಒದಿ. 
ತೂಕ ಕಳೆದುಕೊಳ್ಳಲು
ಮೆಂತೆ ನೆನಸಿದ ನೀರನ್ನು ಕುಡಿಯುವುದರಿಂದ ಮತ್ತು ನೆನೆಸಿದ ಮೆಂತೆಯನ್ನು ಸ್ವಲ್ಪ ತಿನ್ನುವುದರಿಂದ ಹಸಿವು ಕಡಿಮೆಯಾಗುವುದು. ಇದರಿಂದ ತೂಕ ಕಳೆದುಕೊಳ್ಳಲು ಸಹಕಾರಿ.
  
ಜೀರ್ಣಕ್ರಿಯೆ
ಮೆಂತೆ ನೀರಿನಲ್ಲಿರುವ ಉರಿಯೂತ ಶಮನಕಾರಿ ಗುಣವು ಜೀರ್ಣಕ್ರಿಯೆಯು ಸರಾಗವಾಗಲು ನೆರವಾಗುವುದು ಮತ್ತು ಹೊಟ್ಟೆ ಉರಿಯನ್ನು ಶಮಗೊಳಿಸುವುದು.
  
ರಕ್ತದೊತ್ತಡ ನಿಯಂತ್ರಿಸುವುದು
ಮೆಂತೆಯಲ್ಲಿ ಗ್ಲಾಕ್ಟೊಮನ್ನನ್ ಮತ್ತು ಪೊಟಾಶಿಯಂ ಇದೆ. ಇವೆರಡು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ.
  
ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದು
ಮೆಂತೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತೆಗೆದುಹಾಕುವುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಇದರೊಂದಿಗೆ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಇದು ಕಾಪಾಡುವುದು.
  
ಸಂಧಿವಾತ
ಆ್ಯಂಟಿಆಕ್ಸಿಡೆಂಟ್ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಮೆಂತ್ಯೆಯು ಸಂಧಿವಾತದ ನೋವನ್ನು ನಿವಾರಿಸುವುದು.
  
ಕ್ಯಾನ್ಸರ್ ತಡೆಗಟ್ಟುವುದು
ಮೆಂತೆಯು ದೇಹದ ಅದರಲ್ಲೂ ಕರುಳಿನಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದರಿಂದ ಕ್ಯಾನ್ಸರ್ ಬರದಂತೆ ತಡೆಯುವುದು.
  
ಮಧುಮೇಹ
ಮೆಂತೆಯಲ್ಲಿ ಗ್ಲಾಕ್ಟೊಮನ್ನನ್ ಎನ್ನುವ ಪ್ರಮುಖ ನಾರಿನಾಂಶವು ರಕ್ತವು ಸಕ್ಕರೆ ಅಂಶವು ಹೀರಿಕೊಳ್ಳುವುದನ್ನು ತಗ್ಗಿಸುವುದು. ಇದರಿಂದ ಮಧುಮೇಹ ತಡೆಯಬಹುದು.
  
ಕಿಡ್ನಿಯ ಕಲ್ಲು
ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳ ಕಾಲ ಮೆಂತೆ ನೆನೆಸಿದ ನೀರನ್ನು ಕುಡಿಯಿರಿ. ಇದು ಕಿಡ್ನಿಯಲ್ಲಿ ಕಲ್ಲನ್ನು ಹೊರಹಾಕಲು ನೆರವಾಗುವುದು.