ಸಾಮ ವೇದಾಖ್ಯ ಉಪವೇದಃ : ಗಂಧರ್ವ ವೇದ :
ಶೃಂಗೇರಿ ಜಗದ್ಗುರು ಪರಮ ಹಂಸ, ಪರಿವ್ರಾಜಕಾಚಾರ್ಯವರ್ಯ,ಕರ್ಣಾಟ ಸಿಂಹಾಸನಾಧೀಶ್ವರ , ಸಾಮವೇದೋದ್ಧಾರಕ,ಕರ್ಣಾಟಸಂಗೀತಸಾರ ರಸೋದ್ಧಾರಕ
ಶ್ರೀ ಶ್ರೀ ವಿದ್ಯಾರಣ್ಯಮಹಾಸ್ವಾಮಿನಾಂ ಶೀ ಚರಣಾರವಿಂದಾರ್ಪಣಮಸ್ತು.
ಸಂಗೀತಪರಂಪರೆಯಲ್ಲಿ ಶ್ರೀವಿದ್ಯಾರಣ್ಯರ ಕೊಡುಗೆ ಅಪಾರವಾದದು ಎಂಬುವದು ಯಾರಿಗೂ ತಿಳಿಯದ ವಿಷಯವು. ಅವರ ಕಾಲಕ್ಕೆ ಅರ್ಥಾತ್ ಸುಮಾರು ಹದಿನಾಲ್ಕನೆಯ ಶತಮಾದದಲ್ಲಿ ಸಾಮಗಾನ ಮತ್ತು ಸಂಗೀತವು ಅತ್ಯಂತ ವೈಲಕ್ಷಣ್ಯವಾಗಿದ್ದುಕೊಂಡಿತ್ತು. ಚತುರ ಕಲ್ಲಿನಾಥನು ಶಾರ್ಙ್ಗದೇವನ ಸಂಗೀತರತ್ನಾಕರಕ್ಕೆ ವ್ಯಾಖ್ಯಾನರೂಪವಾದ "ಕಲಾನಿಧಿ" ಎಂಬ ಗ್ರಂಥದಲ್ಲಿ "ಲಕ್ಷ್ಯಲಕ್ಷಣಯೋರ್ಬಹುಧಾ ವಿರೋಧಃ ||" ಶಾಸ್ತ್ರದಲ್ಲಿ ಹೇಳಿರುವಂಥ ಲಕ್ಷಣ ಮತ್ತು ಪ್ರಯೋಗದಲ್ಲಿರುವ ಲಕ್ಷ್ಯ ಇವೆರಡರ ನಡುವೇ ವ್ಯತಿರಿಕ್ತವಾದ ಲಕ್ಶ್ಯ ಭೇದ ಎಂಬ ಸಂದರ್ಭವನ್ನು ವಿವರಿಸುವಾಗ ;
" ಸಂಗೀತ ಸಾರಂ ಸಮವೀಕ್ಷ್ಯವಿದ್ಯಾರಣ್ಯಾಭಿತಶ್ರೀ ಚರಣಪ್ರಣೀತಮ್ || ಸುಗಾನತಾಯಧ್ವನಿಮಭ್ಯುಪೇತಾಹ್ಯಾದ್ಧಾ ರಣ ಶ್ರೀಚರಣೈರ್ನಿರುಕ್ತಾ ||"
ಭಾವಾರ್ಥ:
ಶಾಸ್ತ್ರವಿಹಿತವಾದ ಹಾಡುಗಾರಿಕೆಯನ್ನು (ಗ್ರಾಮೇಗೇಯಗಾನ) ಶಾಸ್ತ್ರಕ್ಕೆ ವಿರುದ್ಧವಾಗಿ,ಅರ್ಥಾತ್ ಸಾಮವೇದವನ್ನು ನಿಸ್ಸಾರತೆಯಿಂದ ಹೇಳುತ್ತಿರುವಂಥಾ ಮತ್ತು ಸಂಗೀತವನ್ನು ತಾಳಮೇಳಗಳಿಲ್ಲದೇ ಶಾಸ್ತ್ರವಿರುದ್ಧವಾಗಿ ಹೇಳುವಂಥಾ ಒಂದು ಆಪತ್ಭರಿತ ಸಂದರ್ಭವನ್ನು ಶ್ರೀವಿದ್ಯಾರಣ್ಯರು ಅತಿ ಸಾಹಸದಿಂದ ತಮ್ಮ ಗ್ರಂಥವಾದ "ಸಂಗೀತ ಸಾರ"(ಇಂದಿಗೆ ಉಪಲಬ್ಧವಿಲ್ಲ) ಎಂಬ ಗ್ರಂಥದ ಮೂಲಕ ಸರಿಪಡಿಸಿದ್ದಾರೆ ಎಂಬುದಾಗಿ ಕೊಂಡಾಡಿದ್ದಾನೆ. ಮತ್ತೂ ಹಲವರು ಅರ್ಥಾತ್ ಜಗದೇಕ ಮಲ್ಲ,ಗೋವಿಂದ ದೀಕ್ಷಿತ,ರಾಮಾಮಾತ್ಯ ,ತುಳಜಾಜಿ ಮಹಾರಾಜರು ಮುಂತಾದ ಸಂಗೀತ ದಿಗ್ಗಜರು ತಮ್ಮ ಗ್ರಂಥದಲ್ಲಿ ಶ್ರೀವಿದ್ಯಾರಣ್ಯರ ಕೊಡುಗೆಯನ್ನು ಹೆಸರಿಸಿದ್ದರೆ. ಆದರೇ ದುರದೃಷ್ಟವಶಾತ್ ಇಂಥ ಒಂದು ಅಮುಲ್ಯ ಗ್ರಂಥವು ನಮಗೆ ಉಪಲಬ್ಧವಿಲ್ಲದೇ ಇರುವದು ವಿಷಾದನೀಯ.
ಶಾಸ್ತ್ರೀಯ ಸಂಗಿತದ ಉಗಮ:
ಶಾಸ್ತ್ರವಿಹಿತಂ ಶಾಸ್ತ್ರವಿವಕ್ಷಿತಾ ಸರ್ವ ರಾಗೇಷು ಏಕ ರೂಪತಾ |
ಶಾಸ್ತ್ರವು ಹೇಳುವದೇನೆಂದರೇ ಎಲ್ಲಾ ರಾಗಗಳೂ ಅಯಾ ದೇಶಕಾಲಗಳಲ್ಲಿ (ಗ್ರಾಮೇಗೇಯಗಾನ) ನಿಯೋಜಿಸಲ್ಪಟ್ಟಿದ್ದರೂ ಅವುಗಳಲ್ಲಿ ಒಂದು ಏಕತಾನ ಇದ್ದೇ ಇರುತ್ತದೆ ಮಾತ್ತು ಅವು ಶಾಸ್ತ್ರವಿಹಿತವಾಗಿಯೇ ಇರುತ್ತದೆ.
ಸಾಮವೇದಾದಿದಂ ಗೀತಂ ಸಂಜಗ್ರಾಹ ಪಿತಾಮಹಃ | ಗೀತೇನ ಪ್ರೀಯತೇ ದೇವಃ ಸರ್ವಜ್ಞಃ ಪಾರ್ವತೀಪತಿಃ || ೦೧ ||
ಸಾಮವೇದದಿಂದ ಹೊರಹೊಮ್ಮಿದ ಗಂಧರ್ವ ವೇದ ಅಥವಾ ಸಂಗೀತ ಎಂಬ ಹೆಸರಿನ ಈ ಉಪವೇದವು ಸಾಕ್ಷಾತ್ ಪರಬ್ರಹ್ಮನಿಂದಲೇ ಹುಟ್ಟಿತು. ದೇವದೇವನಾದ ಸರ್ವಜ್ಞನಾದ ಪಾರ್ವತೀಪತಿಯು ಸಂಗೀತಕ್ಕಲ್ಲದೇ ಮತ್ಯಾವ ಸೇವೆಯಿಂದ ಸಂಪ್ರೀತನಾಗುತ್ತಾನೆ.
ಗಾಂಧರ್ವಸ್ವರ ಸಂದರ್ಭೋ ಗೀತಮಿತ್ಯಾಭಿಧೀಯತೇ | ಗಾಂಧರ್ವಂ ಗಾನಮಿತ್ಯಸ್ಯ ಭೇದದ್ವಯಮುದೀರಿತಮ್|| ೦೨||
ಗಾಂಧರ್ವ ಸ್ವರ , ಈ ಸಂದರ್ಭದಲ್ಲಿ ಸ್ವರ ಎಂದರೇ ಸಂಗೀತವೆಂದೇ ಅರ್ಥ. ಈ ಸಂಗೀತವು ಎರಡು ವಿಧವಾದದ್ದು ಮೊದಲನೆಯದು ಗಾಂಧರ್ವಗೀತೆ ಎರಡೆನೆಯದು ಸಂಗೀತ.
ಅನಾದಿಸಂಪ್ರದಾಯಂ ಯದ್ಗಂಧರ್ವೈಃ ಸಂಪ್ರಯುಜ್ಯತೇ || ನಿಯತಂ ಶ್ರೇಯಸೋ ಹೇತುಃ ತದ್ಗಂಧರ್ವ ಪ್ರಚಕ್ಷತೇ ||೦೩||
ಅನಾದಿಕಾಲದಿಂದಲೂ ಸಂಪ್ರದಾಯದಿಂದ ಬಂದಂಥ ಅರ್ಥಾತ್ ಅಪೌರುಷೇಯವಾದ ಈ ಗಾಂಧರ್ವಗೀತೆಯು ನಿಃಶ್ರೇಯಸವಾದದು ಅರ್ಥಾತ್ ಮೋಕ್ಷಕ್ಕೆ ಪ್ರಧಾನವು.
ಯತ್ತು ವಾಗ್ಗೇಯಕಾರೇಣ ರಚಿತಂ ಲಕ್ಷಣಾನ್ವಿತಮ್ | ದೇಶೀರಾಗಾದಿಭಿಃ ಪ್ರೋಕ್ತಂ ತದ್ಗಾನಂ ಜನರಂಜನಮ್ ||
ಈ ಅಪೌರುಷೇಯವಾದ ಗಾಂಧರ್ವಗೀತೆಯನ್ನೇ ಆಧಾರವಾಗಿಟ್ಟುಕೊಂಡು ಪಂಡಿತರು ಆಯಾದೇಶೀಭಾಷೆಗಳಲ್ಲಿ ರಚಿಸಿ ಹಾಡುವಂಥದ್ದು ,ಮನರಂಜನೆಯನ್ನು ಕೊಡುವಂಥದ್ದು ಸಂಗೀತವೆನಿಸಿಕೊಳ್ಳೊತ್ತದೆ.
ಇವೆರಡೂ ಹೇಗೆ ಭಿನ್ನವಾಗಿರುತ್ತದೆ ?
ಯತ್ರ ಲಕ್ಷ್ಮಪರಿತ್ಯಾಗೇ ಪ್ರತ್ಯವಾಯೋ ನ ವಿದ್ಯತೇ | ತಸ್ಮಾಲ್ಲಕ್ಷ್ಯಪ್ರಧಾನಂ ತನ್ನತು ಲಕ್ಷ್ಮಪ್ರಧಾನಮ್ |
ಗಾಂಧರ್ವಗೀತೆಯಲ್ಲಿ ಒಂದುಪಕ್ಷ ಶಾಸ್ತ್ರವಿಹಿತವಾದ ಲಕ್ಷಣಗಳನ್ನು ಬಿಟ್ಟರೂ ಪ್ರಯೋಗವೇ ಪ್ರಧಾನವಾಗಿರುವದರಿಂದ ಹಾಡುಗಾರಿಕೆಯಲ್ಲಿ ಯಾವ ದೋಷವೂ ಉಂಟಾಗುವದಿಲ್ಲ.
ಉದಹರಣೆಗೆ ಧ್ರುವಪದಗಳು , ಭಕ್ತಿಭಾವಗೀತೆಗಳು
ಪರಿತ್ಯಾಗೇನ್ನ ಲಕ್ಷ್ಯಸ್ಯ ರಂಜನಂ ನೈವ ಜಾಯತೇ | ತಸ್ಮಾಲ್ಲಕ್ಷ್ಯಾನುರೋಧೇನ ಗಾನಂ ಲೋಕೇ ಪ್ರವರ್ತತೇ ||
ಇನ್ನು ಶಾಸ್ತ್ರೀಯಸಂಗೀತದಲ್ಲಾದರೋ ಶಾಸ್ತ್ರದಲ್ಲಿ ಹೇಳಿರುವಂಥ ಲಕ್ಷಣಗಳನ್ನು ಬಿಟ್ಟುಹಾಡುವದರಿಂದ ಹಾಡುಗಾರಿಕೆಯು ಸೊಗಸುವದೇ ಇಲ್ಲ.ಆದ್ದರಿಂದಲೇ ಶಾಸ್ತ್ರೀಯಸಂಗೀತವು ಶಾಸ್ತ್ರವು ವಿಧಿಸಿದ ಲಕ್ಷಣಗಳನ್ನು ಅನುಸರಿಸಿಯೇ ಪ್ರವರ್ತಿಸುತ್ತದೆ.
ಉದಾಹರಣೆ: ಕರ್ಣಾಟ ಸಂಗೀತ ,ಹಿಂದೂಸ್ಥಾನೀ ಸಂಗೀತ.ಹಾಗಾಗಿ ಸಂಗೀತದಲ್ಲಿ ತಾಳಮೇಳಗಳು ಇಲ್ಲದಿದ್ದರೇ ಸೊಗಸುವದೇ ಇಲ್ಲ.
ಗೀತಂ ವಾದ್ಯಂ ತಥಾ ನೃತ್ತಂ(ನೃತ್ಯಂ) ತ್ರಯಂ ಸಂಗೀತಮುಚ್ಯತೇ || ನೃತ್ಯಂ ವಾದ್ಯಾನುಗಂ ಪ್ರೋಕ್ತಂ ವಾದ್ಯಂ ಗೀತಾನುವೃತ್ತಿ ಚ ||
ಗಾನ , ವಾದ್ಯಗಳು ಮತ್ತು ನೃತ್ಯ ಇವುಮೂರೂ ಕೂಡಿದರೇ ಸಂಗೀತವೆನಿಸಿಕೊಳ್ಳುತ್ತದೆ. ನ್ಯುತವು ತಾಳಕ್ಕನುಗುಣವಾಗಿರುತ್ತದೆ.ತಾಳವು ಹಾಡುವಿಕೆಯನ್ನು ಅನುಸರಿಸುತ್ತದೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ