ಸೋಮವಾರ, ಜನವರಿ 1, 2018

ಮಹದಾಯಿ ಕಳಸಾ ನಂಡೂರಿ

*ಮಹದಾಯಿ ಕಳಸಾ ನಂಡೂರಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಕಾಂಗ್ರೆಸ್ ಪಕ್ಷದ ಸಾಧನೆ ಶೂನ್ಯವಾಗಿದೆ. ಸಮಸ್ಯೆಗೆ ಪರಿಹಾರ ನೀಡುವುದರ ಬದಲಾಗಿ ಸಮಸ್ಯೆಯನ್ನು ಕಗ್ಗಂಟ್ಟು ಮಾಡಿದ್ದೇ ಅವರ ಸಾಧನೆಯಾಗಿದೆ* .
1. ಮಹದಾಯಿ ಕಳಸಾ ಬಂಡೂರಿ ವಿಷಯವನ್ನು ಟ್ರಿಬುನಲ್‍ಗೆ ತೆಗೆದುಕೊಂಡು ಹೋಗಿ ಸಮಸ್ಯೆಯನ್ನು ಕಗ್ಗಂಟು ಮಾಡಿದೆ. ಅಂದಿನ ಗೋವಾ ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದು ನ್ಯಾಯ ಮಂಡಳಿ ರಚನೆ ಮಾಡಿದ್ದು ಡಾ|| ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ.
2. ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರು ಗೋವಾ ಚುನಾವಣೆಯಲ್ಲಿ ಕರ್ನಾಟಕಕ್ಕೆ ಒಂದು ಹನಿ ಕೂಡಾ ನೀರನ್ನು ನಿಡಲು ಸಾಧ್ಯವಿಲ್ಲ ಎಂದು ಭಾಷಣ ಮಾಡಿದ್ದರು.
3. ಈಗಿನ ಗೋವಾದ ಕಾಂಗ್ರೆಸ್ ಅಧ್ಯಕ್ಷ ಶಾಂತರಾಮ್ ನಾಯ್ಕ್ ಅವರು ಕರ್ನಾಟಕಕ್ಕೆ ನೀರು ಹರಿಸಕೂಡದು ಎಂದು ಪತ್ರಿಕಾಗೋಷ್ಠಿ ಮಾಡಿದ್ದಾರೆ.
4. ಜನವರಿ 6ರಂದು ಗೋವಾ ರಾಜ್ಯವು ಕರ್ನಾಟಕಕ್ಕೆ ನೀರು ಬಿಡುವುದರ ಬಗ್ಗೆ ಹೋರಾಟಕ್ಕೆ ಕರೆ ನೀಡಿದ್ದಾರೆ.
5. ಕನಾಟಕದಲ್ಲಿ ಶ್ರೀ ಯಡಿಯೂರಪ್ಪನವರ ಸರ್ಕಾರ ಮಹದಾಯಿ ಕಳಸಾ ಬಂಡೂರಿ ಕಾಲುವೆ ನಿರ್ಮಾಣ ಮಾಡಿದ್ದಾರೆ. ಶ್ರೀ ಸಿದ್ದರಾಮಯ್ಯ ಸರ್ಕಾರ ಕಾಲುವೆಗಳಿಗೆ ಅಡ್ಡಗೋಡೆ ನಿರ್ಮಿಸಿದೆ.
6. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ಅಮಿತ್ ಶಾ, ಶ್ರೀ ಯಡಿಯೂರಪ್ಪ ಹಾಗೂ ಗೋವಾ ರಾಜ್ಯದ ಮುಖ್ಯಮಂತ್ರಿ ಶ್ರೀ ಮನೋಹರ್ ಪರಿಕ್ಕರ್ ಅವರು ದೆಹಲಿಯಲ್ಲಿ ಸಭೆ ಸೇರಿ ಕರ್ನಾಟಕಕ್ಕೆ ಕುಡಿಯುವ ನೀರು ಕೊಡುವುದರ ಬಗ್ಗೆ ಅಥವಾ ನೀರು ಹರಿಸುವುದರ ಬಗ್ಗೆ ಗೋವಾ ಸರ್ಕಾರ ಒಪ್ಪಿಗೆ ನೀಡಿದೆ. ಇದನ್ನು ಶ್ರೀ ಸಿದ್ದರಾಮಯ್ಯ ಸರ್ಕಾರ ಈ ಪಕ್ರಿಯೆಯನ್ನು ವಿರೋಧಿಸಿದ್ದಾರೆ.
7. 2002ರಲ್ಲಿ ಆಗಿನ ಗೋವಾ ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆರವರು ಆಗಿನ ಪ್ರಧಾನಮಂತ್ರಿ ಶ್ರೀ ವಾಜಪೇಯ ಅವರು ಕಳಸಾ ಬಂಡೂರಿಗೆ ನೀಡಿದ ಅನುಮತಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಒಯ್ದರು.
8. ಈ ವಿಚಾರದ ಬಗ್ಗೆ ಇಷ್ಟು ಬೇಗ ಮಾತುಕತೆ ಬಗೆಹರಿಯುವುದಿಲ್ಲ. ಟ್ರಿಬುನಲ್‍ನಲ್ಲಿಯೇ ವಿವಾದ ಬಗೆಹರಿಯಬೇಕು ಎನ್ನುವ ಕಾಂಗ್ರೆಸ್ ನಿಲುವೇ ಕರ್ನಾಟಕಕ್ಕೆ ಮಾರಕವಾಗಿ ಪರಿಣಮಿಸಿದೆ.
9. ದ್ವಿಮುಖ ನೀತಿ ಮತ್ತು ಈ ಮಹದಾಯಿ ವಿಷಯವನ್ನು ಕಾಂಗ್ರೆಸ್ ಪಕ್ಷವು ರಾಜಕಾರಣ ಮಾಡುತ್ತಿದ್ದಾರೆ.
10. ಬಿಜೆಪಿ ನಾಯಕರ ವಿರುದ್ಧ ಮತ್ತು ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡ ಇದೆ ಎನ್ನುವುದು ಸಾಬೀತು ಕೂಡ ಆಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ